We will send you 4 digit OTP to confirm your number
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಸಂಪೂರ್ಣ ದೇಶ ಭಯೋತ್ಪಾದನೆಯ ವಿರುದ್ಧ ಒಗ್ಗೂಡಿ ನಿಂತಿದೆ. ಆಕ್ರೋಶದಿಂದ ಕೂಡಿದೆ ಮತ್ತು ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲೇಬೇಕು ಎಂಬುದು ಇಂದು ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಿದೆ. ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಸಮಯದಲ್ಲಿ ನಮ್ಮ ಸೇನಾ ಪಡೆಗಳು ಪ್ರದರ್ಶಿಸಿದ ಶೌರ್ಯ ಪ್ರತಿಯೊಬ್ಬ ಹಿಂದೂಸ್ತಾನಿಯನ್ನೂ ಹೆಮ್ಮೆಪಡುವಂತೆ ಮಾಡಿದೆ. ಗಡಿಯಾಚೆಗಿನ ಭಯೋತ್ಪಾದಕ ಅಡಗುತಾಣಗಳನ್ನು ನಮ್ಮ ಪಡೆಗಳು ನಿಖರತೆಯಿಂದ ಕರಾರುವಾಕ್ಕಾಗಿ ನಾಶಪಡಿಸಿರುವುದು ಅದ್ಭುತವಾಗಿದೆ. 'ಆಪರೇಷನ್ ಸಿಂಧೂರ್' ಪ್ರಪಂಚದಾದ್ಯಂತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಹೊಸ ಭರವಸೆ ನೀಡಿದೆ ಮತ್ತು ಉತ್ಸಾಹ ತುಂಬಿದೆ.
ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಇದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ. ಈ ಚಿತ್ರಣ ಇಡೀ ದೇಶವನ್ನು ದೇಶಭಕ್ತಿಯ ಭಾವನೆಯಿಂದ ತುಂಬಿದೆ. ತ್ರಿವರ್ಣದಲ್ಲಿ ರಂಗು ಮೇಳೈಸಿದೆ. ದೇಶದ ವಿವಿಧ ನಗರಗಳು, ಗ್ರಾಮಗಳು ಮತ್ತು ಸಣ್ಣಪುಟ್ಟ ಪಟ್ಟಣಗಳಲ್ಲಿ ತ್ರಿವರ್ಣ ಧ್ವಜ ಯಾತ್ರೆ ಕೈಗೊಳ್ಳಲಾಗುತ್ತಿದ್ದುದನ್ನು ನೀವು ನೋಡಿರಬಹುದು. ಸಾವಿರಾರು ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ದೇಶದ ಸೇನೆಗೆ ಗೌರವ ಸಲ್ಲಿಸಲು ಮುಂದೆ ಬಂದರು. ಅನೇಕ ನಗರಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವಕರು ನಾಗರಿಕ ರಕ್ಷಣಾ ಸ್ವಯಂಸೇವಕರಾಗಲು ಒಗ್ಗೂಡಿದರು ಮತ್ತು ಚಂಡೀಗಢದ ವೀಡಿಯೊಗಳು ಸಾಕಷ್ಟು ವೈರಲ್ ಆಗಿರುವುದನ್ನು ನಾವು ಕಂಡಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕವಿತೆಗಳನ್ನು ಬರೆಯಲಾಗುತ್ತಿತ್ತು, ದೇಶಭಕ್ತಿ ಗೀತೆಗಳನ್ನು ಹಾಡಲಾಗುತ್ತಿತ್ತು. ಪುಟ್ಟ ಪುಟ್ಟ ಮಕ್ಕಳು ಅಗಾಧ ಸಂದೇಶಗಳನ್ನು ಹೊತ್ತ ಚಿತ್ರಗಳನ್ನು ಬಿಡಿಸುತ್ತಿದ್ದರು. ನಾನು ಮೂರು ದಿನಗಳ ಹಿಂದೆಯಷ್ಟೇ ಬಿಕಾನೇರ್ಗೆ ಹೋಗಿದ್ದೆ. ಅಲ್ಲಿನ ಮಕ್ಕಳು ನನಗೆ ಇದೇ ರೀತಿಯ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. 'ಆಪರೇಷನ್ ಸಿಂಧೂರ್' ದೇಶದ ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದೆ ಎಂದರೆ, ಅನೇಕ ಕುಟುಂಬಗಳು ಅದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ. ಬಿಹಾರದ ಕಟಿಹಾರ್, ಉತ್ತರ ಪ್ರದೇಶದ ಕುಶಿನಗರ ಮತ್ತು ಇನ್ನೂ ಹಲವಾರು ನಗರಗಳಲ್ಲಿ, ಆ ಸಮಯದಲ್ಲಿ ಜನಿಸಿದ ಮಕ್ಕಳಿಗೆ 'ಸಿಂಧೂರ್' ಎಂದು ನಾಮಕರಣ ಮಾಡಲಾಗಿದೆ.
ಸ್ನೇಹಿತರೇ, ನಮ್ಮ ಸೈನಿಕರು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದರು, ಅದು ಅವರ ಅದಮ್ಯ ಸಾಹಸವಾಗಿತ್ತು ಮತ್ತು ಅದರಲ್ಲಿ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದ ಶಕ್ತಿಯೂ ಸೇರಿತ್ತು. 'ಸ್ವಾವಲಂಬಿ ಭಾರತ'ದ ಸಂಕಲ್ಪವೂ ಇತ್ತು. ಈ ಗೆಲುವಿನಲ್ಲಿ ನಮ್ಮ ಎಂಜಿನಿಯರ್ಗಳು, ತಂತ್ರಜ್ಞರು ಸೇರಿದಂತೆ ಎಲ್ಲರ ಶ್ರಮವೂ ಸೇರಿದೆ. ಈ ಅಭಿಯಾನದ ನಂತರ, ದೇಶಾದ್ಯಂತ ‘Vocal for Local’ ಕುರಿತು ಹೊಸ ಆಶಾಕಿರಣ ಮೂಡಿದೆ. ಅನೇಕ ವಿಷಯಗಳು ಮನ ಮುಟ್ಟುತ್ತವೆ. "ಇನ್ನು ಮುಂದೆ ನಾವು ನಮ್ಮ ಮಕ್ಕಳಿಗಾಗಿ ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಮಾತ್ರ ಖರೀದಿಸುತ್ತೇವೆ. ದೇಶಪ್ರೇಮ ಬಾಲ್ಯದಿಂದಲೇ ಮೂಡಬೇಕು" ಎಂದು ಪೋಷಕರೊಬ್ಬರು ಹೇಳಿದರು. “ನಾವು ನಮ್ಮ ಮುಂದಿನ ರಜೆಯನ್ನು ದೇಶದ ಯಾವುದಾದರೂ ಸುಂದರ ಸ್ಥಳದಲ್ಲಿ ಕಳೆಯುತ್ತೇವೆ." ಎಂದು ಕೆಲವು ಕುಟುಂಬಗಳು ಪ್ರತಿಜ್ಞೆ ಮಾಡಿವೆ. ಅನೇಕ ಯುವಕರು ‘Wed in India’ ಸಂಕಲ್ಪಗೈದಿದ್ದಾರೆ , ಅವರು ನಮ್ಮ ದೇಶದಲ್ಲೇ ವಿವಾಹವಾಗಲಿದ್ದಾರೆ. "ಈಗ ನೀವು ಯಾವುದೇ ಉಡುಗೊರೆಯನ್ನು ನೀಡಿದರೂ, ಅದು ಕೆಲವು ಭಾರತೀಯ ಕುಶಲಕರ್ಮಿಗಳೇ ತಯಾರಿಸಿದ್ದಾಗಿರುತ್ತದೆ" ಎಂದು ಇನ್ನೂ ಕೆಲವರು ಹೇಳಿದ್ದಾರೆ
ಸ್ನೇಹಿತರೇ, 'ಜನರ ಒಗ್ಗೂಡುವಿಕೆ, ಸಾರ್ವಜನಿಕ ಭಾಗವಹಿಸುವಿಕೆ' - ಇದೇ ಅಲ್ಲವೆ ಭಾರತದ ನಿಜವಾದ ಶಕ್ತಿ. ಬನ್ನಿ ಈ ಸಂದರ್ಭದಲ್ಲಿ ನಾವೆಲ್ಲ “ನಮ್ಮ ಜೀವನದಲ್ಲಿ ಸಾಧ್ಯವಾದಲ್ಲೆಲ್ಲಾ ಸ್ವದೇಶದಲ್ಲಿ ತಯಾರಿಸಿದ ವಸ್ತುಗಳಿಗೆ ಆದ್ಯತೆ ನೀಡುತ್ತೇವೆ ಎಂದು ಸಂಕಲ್ಪಗೈಯೋಣ ಎಂದು ನಿಮ್ಮಲ್ಲಿ ಆಗ್ರಹಿಸುತ್ತೇನೆ. ಇದು ಕೇವಲ ಆರ್ಥಿಕ ಸ್ವಾವಲಂಬನೆಯ ವಿಷಯವಲ್ಲ, ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸುವ ಭಾವನೆಯಾಗಿದೆ. ನಮ್ಮ ಒಂದು ಹೆಜ್ಜೆ ಭಾರತದ ಪ್ರಗತಿಗೆ ದೊಡ್ಡ ಕೊಡುಗೆ ನೀಡಬಹುದಾಗಿದೆ.
ಸ್ನೇಹಿತರೇ, ಬಸ್ಸಿನಲ್ಲಿ ಎಲ್ಲಿಯಾದರೂ ಪ್ರಯಾಣಿಸುವುದು ಬಹಳ ಸಾಮಾನ್ಯ ವಿಷಯ. ಆದರೆ ಮೊದಲ ಬಾರಿಗೆ ಒಂದು ಗ್ರಾಮಕ್ಕೆ ಬಸ್ ತಲುಪಿರುವ ಕುರಿತು ನಾನು ನಿಮಗೆ ಹೇಳಬಯಸುತ್ತೇನೆ. ಅಲ್ಲಿನ ಜನರು ಈ ದಿನಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದರು. ಮತ್ತು ಮೊದಲ ಬಾರಿ ಗ್ರಾಮಕ್ಕೆ ಬಸ್ ತಲುಪಿದಾಗ, ಜನರು ಅದನ್ನು ಢೋಲು ಢಕ್ಕೆ ಬಾರಿಸುವ ಮೂಲಕ ಸ್ವಾಗತಿಸಿದರು. ಬಸ್ ನೋಡಿ ಜನರ ಸಂತೋಷ ತುಂಬಾ ಮೇರೆ ಮೀರಿತ್ತು. ಗ್ರಾಮಕ್ಕೆ ಡಾಂಬರೀಕರಣ ಮಾಡಿದ ರಸ್ತೆ ಇತ್ತು, ಜನರಿಗೆ ಅದರ ಅವಶ್ಯಕತೆಯೂ ಇತ್ತು, ಆದರೆ ಇಲ್ಲಿ ಈ ಹಿಂದೆ ಬಸ್ ಓಡಾಡುತ್ತಿರಲಿಲ್ಲ. ಏಕೆಂದರೆ ಈ ಗ್ರಾಮವು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿತ್ತು. ಈ ಸ್ಥಳವು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿದೆ ಮತ್ತು ಈ ಗ್ರಾಮದ ಹೆಸರು ಕಾಟೇಝರಿ. ಕಾಟೇಝರಿಯಲ್ಲಾದ ಈ ಬದಲಾವಣೆಯ ಅನುಭವ ಸುತ್ತಮುತ್ತಲಿನ ಪ್ರದೇಶದ ಮೇಲೂ ಪ್ರಭಾವ ಬೀರಿರುವುದು ಕಂಡುಬರುತ್ತಿದೆ. ಈಗ ಇಲ್ಲಿನ ಪರಿಸ್ಥಿತಿ ಸಾಮಾನ್ಯಕ್ಕೆ ಮರಳುತ್ತಿದೆ. ಮಾವೋವಾದದ ವಿರುದ್ಧದ ಸಾಮೂಹಿಕ ಹೋರಾಟದಿಂದಾಗಿ, ಮೂಲಭೂತ ಸೌಕರ್ಯಗಳು ಈಗ ಇಂತಹ ಪ್ರದೇಶಗಳಿಗೂ ತಲುಪಲು ಪ್ರಾರಂಭಿಸಿವೆ. ಬಸ್ ಬಂದರೆ ತಮ್ಮ ಜೀವನ ತುಂಬಾ ಸುಲಭವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ
ಸ್ನೇಹಿತರೇ, 'ಮನ್ ಕಿ ಬಾತ್' ನಲ್ಲಿ ನಾವು ಈಗಾಗಲೇ ಛತ್ತೀಸ್ಗಢದಲ್ಲಿ ನಡೆದ ಬಸ್ತರ್ ಒಲಿಂಪಿಕ್ಸ್ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿನ ವಿಜ್ಞಾನ ಪ್ರಯೋಗಾಲಯದ ಬಗ್ಗೆ ಚರ್ಚಿಸಿದ್ದೇವೆ. ಇಲ್ಲಿನ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ಇದೆ. ಅವರು ಕ್ರೀಡೆಯಲ್ಲೂ ಅದ್ಭುತ ಸಾಧನೆಗೈಯುತ್ತಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಎಷ್ಟು ಧೈರ್ಯಶಾಲಿಗಳು ಎಂಬುದನ್ನು ಇಂತಹ ಪ್ರಯತ್ನಗಳು ಎತ್ತಿ ತೋರಿಸುತ್ತವೆ. ಈ ಜನರು ಎಲ್ಲಾ ಸವಾಲುಗಳ ಮಧ್ಯೆಯೂ ತಮ್ಮ ಜೀವನವನ್ನು ಉತ್ತಮಗೊಳಿಸುವ ಮಾರ್ಗವನ್ನು ಆರಿಸಿಕೊಂಡಿದ್ದಾರೆ. 10 ಮತ್ತು 12ನೇ ತರಗತಿಯ ಫಲಿತಾಂಶಗಳಲ್ಲಿಯೂ ದಂತೇವಾಡ ಜಿಲ್ಲೆಯ ಸಾಧನೆ ಅತ್ಯುತ್ತಮವಾಗಿರುವುದನ್ನು ತಿಳಿದು ನನಗೆ ತುಂಬಾ ಸಂತೋಷವಾಯಿತು. ಈ ಜಿಲ್ಲೆ 10 ನೇ ತರಗತಿಯ ಫಲಿತಾಂಶದಲ್ಲಿ ಸುಮಾರು ಶೇಕಡಾ ತೊಂಬತ್ತೈದು ಫಲಿತಾಂಶದೊಂದಿಗೆ ಅಗ್ರಸ್ಥಾನದಲ್ಲಿ ಮೆರೆದಿದೆ. 12ನೇ ತರಗತಿ ಪರೀಕ್ಷೆಯಲ್ಲಿ, ಈ ಜಿಲ್ಲೆ ಛತ್ತೀಸ್ಗಢದಲ್ಲಿ ಆರನೇ ಸ್ಥಾನಗಳಿಸಿದೆ. ಒಂದು ಕಾಲದಲ್ಲಿ ಮಾವೋವಾದ ತೀವ್ರವಾಗಿದ್ದ ದಂತೇವಾಡದಲ್ಲಿ, ಇಂದು ಶಿಕ್ಷಣದ ಪತಾಕೆ ಮುಗಿಲು ಮುಟ್ಟುತ್ತಿದೆ ಎಂಬ ಬಗ್ಗೆ ಆಲೋಚಿಸಿ. ಇಂತಹ ಬದಲಾವಣೆಗಳು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತವೆ.
ನನ್ನ ಪ್ರಿಯ ದೇಶವಾಸಿಗಳೇ, ಈಗ ನಾನು ನಿಮಗೆ ಸಿಂಹಗಳಿಗೆ ಸಂಬಂಧಿಸಿದ ಒಂದೊಳ್ಳೆ ಸುದ್ದಿಯನ್ನು ಹೇಳಬಯಸುತ್ತೇನೆ. ಕಳೆದ ಕೇವಲ ಐದು ವರ್ಷಗಳಲ್ಲಿ, ಗುಜರಾತ್ನ ಗಿರ್ನಲ್ಲಿ ಸಿಂಹಗಳ ಸಂಖ್ಯೆ 674 ರಿಂದ 891 ಕ್ಕೇರಿದೆ . ಆರುನೂರಾ ಎಪ್ಪತ್ತ ನಾಲ್ಕರಿಂದ ಎಂತುನಊರಾ ತೊಂಭತ್ತೊಂದು! ಸಿಂಹಗಳ ಗಣತಿಯ ನಂತರ ತಿಳಿದುಬಂದ ಸಿಂಹಗಳ ಈ ಸಂಖ್ಯೆ ತುಂಬಾ ಉತ್ತೇಜನಕಾರಿಯಾಗಿದೆ. ಸ್ನೇಹಿತರೇ, ನಿಮ್ಮಲ್ಲಿ ಹಲವರು ಈ ಪ್ರಾಣಿಗಳ ಗಣತಿ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಲು ಬಯಸಬಹುದು? ಈ ಕೆಲಸ ಬಹಳ ಸವಾಲಿನದ್ದಾಗಿದೆ. ಸಿಂಹ ಗಣತಿಯನ್ನು ಹನ್ನೊಂದು ಜಿಲ್ಲೆಗಳಲ್ಲಿ, 35 ಸಾವಿರ ಚದರ ಕಿಲೋಮೀಟರ್ ಪ್ರದೇಶದಲ್ಲಿ ನಡೆಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗಣತಿಗಾಗಿ, ತಂಡಗಳು ಈ ಪ್ರದೇಶಗಳನ್ನು ದಿನದ 24 ಗಂಟೆಯೂ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಸಂಪೂರ್ಣ ಅಭಿಯಾನದಲ್ಲಿ ಪರಿಶೀಲನೆ ಮತ್ತು ಮರು ಪರಿಶೀಲನೆ ಎರಡನ್ನೂ ಮಾಡಲಾಯಿತು. ಈ ಮೂಲಕ, ಸಿಂಹಗಳ ಎಣಿಕೆ ಕೆಲಸವನ್ನು ಅತ್ಯಂತ ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು
ಸ್ನೇಹಿತರೇ, ಸಮಾಜದಲ್ಲಿ ಜವಾಬ್ದಾರಿಯ ಭಾವನೆ ಗಾಢವಾಗಿದ್ದಾಗ ಎಷ್ಟು ಅದ್ಭುತ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದನ್ನು ಏಷ್ಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿನ ವೃದ್ಧಿ - ಎತ್ತಿ ತೋರಿಸುತ್ತದೆ. ಕೆಲವು ದಶಕಗಳ ಹಿಂದೆ ಗಿರ್ನಲ್ಲಿ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಆದರೆ ಅಲ್ಲಿನ ಜನರು ಒಗ್ಗೂಡಿ ಬದಲಾವಣೆಗೆ ಟೊಂಕ ಕಟ್ಟಿ ನಿಂತರು. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ, ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಕೂಡ ಅಳವಡಿಸಿಕೊಳ್ಳಲಾಯಿತು. ಇದೇ ಸಮಯದಲ್ಲಿ, ಅರಣ್ಯ ಅಧಿಕಾರಿಗಳ ಹುದ್ದೆಯಲ್ಲಿ ಮಹಿಳೆಯರನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿದ ಮೊದಲ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿತು. ಇಂದು ನಾವು ನೋಡುತ್ತಿರುವ ಫಲಿತಾಂಶಗಳಿಗೆ ಈ ಎಲ್ಲ ಅಂಶಗಳು ಕಾರಣವಾಗಿವೆ. ವನ್ಯಜೀವಿ ರಕ್ಷಣೆಗಾಗಿ, ಇದೆ ರೀತಿ ನಾವು ನಿರಂತರ ಜಾಗೃತರಾಗಿರಬೇಕು ಮತ್ತು ಜಾಗರೂಕರಾಗಿರಬೇಕು.
ನನ್ನ ಪ್ರಿಯ ದೇಶವಾಸಿಗಳೇ, ಎರಡು-ಮೂರು ದಿನಗಳ ಹಿಂದೆ, ನಾನು ಪ್ರಥಮ Rising North East ಶೃಂಗಸಭೆಗೆ ಹೋಗಿದ್ದೆ. ಅದಕ್ಕೂ ಮುನ್ನ ನಾವು ಈಶಾನ್ಯದ ಸಾಮರ್ಥ್ಯಕ್ಕೆ ಸಮರ್ಪಿತವಾದ 'ಅಷ್ಟಲಕ್ಷ್ಮಿ ಮಹೋತ್ಸವ'ವನ್ನು ಆಚರಿಸಿದ್ದೆವು. ಈಶಾನ್ಯ ಪ್ರದೇಶದ ವಿಶೇಷತೆಯೇ ಬೇರೆ; ಅದರ ಸಾಮರ್ಥ್ಯ, ಪ್ರತಿಭೆ ನಿಜಕ್ಕೂ ಅದ್ಭುತ. crafted fibers ಬಗ್ಗೆ ಒಂದು ಆಸಕ್ತಿದಾಯಕ ಕಥೆಯ ಬಗ್ಗೆ ನನಗೆ ತಿಳಿಯಿತು. ಕ್ರಾಫ್ಟೆಡ್ ಫೈಬರ್ಸ್ ಕೇವಲ ಒಂದು ಬ್ರಾಂಡ್ ಅಲ್ಲ, ಬದಲಾಗಿ ಸಿಕ್ಕಿಂನ ಸಂಪ್ರದಾಯ, ನೇಯ್ಗೆ ಕಲೆ ಮತ್ತು ಫ್ಯಾಷನ್ ಕುರಿತ ಇಂದಿನ ಚಿಂತನೆ, ಇ ಮೂರರ ಸುಂದರ ಸಮ್ಮಿಲನವಾಗಿದೆ. ಡಾ. ಚೆವಾಂಗ್ ನೋರ್ಬು ಭೂಟಿಯಾ ಇದನ್ನು ಪ್ರಾರಂಭಿಸಿದರು. ಅವರು ವೃತ್ತಿಯಲ್ಲಿ ಪಶುವೈದ್ಯರು ಆದರೆ ಅಂತಃಕರಣದಿಂದ ಸಿಕ್ಕಿಂ ಸಂಸ್ಕೃತಿಯ ನಿಜವಾದ ರಾಯಭಾರಿಯಾಗಿದ್ದಾರೆ. ನೇಯಿಗೆಗೆ ಹೊಸ ಆಯಾಮವನ್ನು ನೀಡಬಾರದೆ ಎಂಬ ಆಲೋಚನೆ ಅವರಲ್ಲಿ ಮೂಡಿತು! ಈ ಆಲೋಚನೆಯಿಂದ, ಕ್ರಾಫ್ಟೆಡ್ ಫೈಬರ್ಸ್ ಹುಟ್ಟಿಕೊಂಡಿತು. ಅವರು ಸಾಂಪ್ರದಾಯಿಕ ನೇಯ್ಗೆಯನ್ನು ಆಧುನಿಕ ಫ್ಯಾಷನ್ನೊಂದಿಗೆ ಸಂಯೋಜಿಸಿ ಅದನ್ನು ಸಾಮಾಜಿಕ ಉದ್ಯಮವನ್ನಾಗಿ ಮಾರ್ಪಡಿಸಿದರು. ಈಗ ಇಲ್ಲಿ ಕೇವಲ ವಸ್ತ್ರಗಳ ನೇಯ್ಗೆ ಮಾತ್ರವಲ್ಲ, ಜೀವನವನ್ನು ಕೂಡ ರೂಪಿಸಲಾಗುತ್ತಿದೆ. ಅವರು ಸ್ಥಳೀಯ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಾರೆ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಾರೆ. ಡಾ. ಭೂಟಿಯಾ ಗ್ರಾಮದ ನೇಕಾರರು, ಪಶುಪಾಲಕರು ಮತ್ತು ಸ್ವಸಹಾಯ ಗುಂಪುಗಳನ್ನು ಒಗ್ಗೂಡಿಸಿ, ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸಿದ್ದಾರೆ. ಇಂದು, ಸ್ಥಳೀಯ ಮಹಿಳೆಯರು ಮತ್ತು ಕುಶಲಕರ್ಮಿಗಳು ತಮ್ಮ ಕೌಶಲ್ಯದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. crafted fibers ನ ಶಾಲುಗಳು, ಸ್ಟೋಲ್ಗಳು, ಕೈಗವಸುಗಳು, ಸಾಕ್ಸ್ಗಳು, ಎಲ್ಲವೂ ಸ್ಥಳೀಯ ಕೈಮಗ್ಗಗಳಲ್ಲಿ ತಯಾರಿಸಲಾಗಿದ್ದು, ಇದರಲ್ಲಿ ಬಳಸಲಾಗುವ ಉಣ್ಣೆ ಸಿಕ್ಕಿಂನ ಮೊಲಗಳು ಮತ್ತು ಕುರಿಗಳಿಂದ ಪಡೆಯಲಾಗುತ್ತದೆ. ಬಣ್ಣಗಳು ಸಹ ಸಂಪೂರ್ಣವಾಗಿ ನೈಸರ್ಗಿಕವಾಗಿವೆ - ಯಾವುದೇ ರಾಸಾಯನಿಕಗಳಿಲ್ಲ, ಕೇವಲ ಪ್ರಾಕೃತಿಕ ಬಣ್ಣಗಳು. ಸಿಕ್ಕಿಂನ ಸಾಂಪ್ರದಾಯಿಕ ನೇಯ್ಗೆ ಮತ್ತು ಸಂಸ್ಕೃತಿಗೆ ಡಾ. ಭೂಟಿಯಾ ಹೊಸ ಸ್ಥಾನಮಾನ ನೀಡಿದ್ದಾರೆ. ಸಂಪ್ರದಾಯದೊಂದಿಗೆ ಉತ್ಸಾಹವನ್ನು ಸಂಯೋಜಿಸಿದಾಗ ಅದು ಜಗತ್ತನ್ನು ಎಷ್ಟು ಆಕರ್ಷಿಸಬಹುದು ಎಂಬುದನ್ನು ಡಾ. ಭೂಟಿಯಾ ಅವರ ಕೆಲಸ ನಮಗೆ ಕಲಿಸುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾನು ನಿಮಗೆ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಹೇಳಬಯಸುತ್ತೇನೆ, ಅವರು ಒಬ್ಬ ಕಲಾವಿದರು ಮತ್ತು ಸ್ಫೂರ್ತಿಯ ಸೆಲೆ. ಅವರ ಹೆಸರು - ಜೀವನ್ ಜೋಶಿ, ವಯಸ್ಸು 65 ವರ್ಷ. ಯಾರ ಹೆಸರಿನಲ್ಲಿಯೇ ಜೀವ ತುಂಬಿದೆಯೋ ಅವರು ಎಷ್ಟು ಚೈತನ್ಯದಿಂದ ತುಂಬಿರುತ್ತಾರೆ ಎಂಬುದನ್ನು ಊಹಿಸಿ. ಜೀವನ್ ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಲ್ಲಿ ಪೋಲಿಯೊದಿಂದಾಗಿ ಅವರ ಕಾಲುಗಳ ಬಲ ಕುಂದಿಹೋಯಿತು, ಆದರೆ ಪೋಲಿಯೊ ಅವರ ಧೈರ್ಯವನ್ನು ಕುಂದಿಸಲಾಗಲಿಲ್ಲ. ಅವರ ನಡಿಗೆಯ ವೇಗ ಕಡಿಮೆಯಾದರೂ, ಅವರ ಮನಸ್ಸು - ಕಲ್ಪನಾತೀತವಾಗಿ ಹಾರುತ್ತಲೇ ಇತ್ತು. ಈ ಹಾರಾಟದಲ್ಲಿಯೇ, ಜೀವನ್ ಅವರು 'ಬಗೆಟ್' ಎಂಬ ವಿಶಿಷ್ಟ ಕಲೆಗೆ ಜನ್ಮ ನೀಡಿದರು. ಇದರಲ್ಲಿ, ಅವರು ಪೈನ್ ಮರಗಳಿಂದ ಬೀಳುವ ಒಣ ತೊಗಟೆಯಿಂದ ಸುಂದರವಾದ ಕಲಾಕೃತಿಗಳನ್ನು ಮಾಡುತ್ತಾರೆ. ಜನರು ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಪರಿಗಣಿಸುವ ಆ ತೊಗಟೆ - ಜೀವನ್ ಅವರ ಕೈಗೆ ಬಂದ ಕೂಡಲೇ ಪರಂಪರೆಯಾಗಿ ಮಾರ್ಪಾಡಾಗುತ್ತದೆ. ಅವರ ಪ್ರತಿಯೊಂದು ಸೃಷ್ಟಿಯಲ್ಲೂ ಉತ್ತರಾಖಂಡ್ ನ ಮಣ್ಣಿನ ಸೊಬಗಿದೆ. ಕೆಲವೊಮ್ಮೆ ಅದು ಪರ್ವತಗಳ ಜಾನಪದ ವಾದ್ಯಗಳಾಗಿ ರೂಪುಗೊಂಡರೆ, ಮತ್ತು ಕೆಲವೊಮ್ಮೆ ಪರ್ವತಗಳ ಆತ್ಮವೇ ಆ ಕಲಾಕೃತಿಯಲ್ಲಿ ಅವತರಿಸಿದಂತೆ ಭಾಸವಾಗುತ್ತದೆ. ಜೀವನ್ ಅವರ ಕೆಲಸ ಕೇವಲ ಒಂದು ಕಲೆ ಮಾತ್ರವಲ್ಲ, ಅದೊಂದು ಸಾಧನೆಯಾಗಿದೆ. ಅವರು ತಮ್ಮ ಇಡೀ ಜೀವನವನ್ನು ಈ ಕಲೆಗೆ ಮುಡಿಪಾಗಿಟ್ಟಿದ್ದಾರೆ. ಜೀವನ್ ಜೋಶಿಯವರಂತಹ ಕಲಾವಿದರು, ಎಂತಹದೇ ಪರಿಸ್ಥಿತಿಯಿರಲಿ, ಉದ್ದೇಶ ಬಲವಾಗಿದ್ದರೆ, ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಮಗೆ ನೆನಪಿಸುತ್ತಾರೆ. ಅವರ ಹೆಸರು ಜೀವನ್ ಮತ್ತು ಅವರು ಜೀವನ ನಡೆಸುವುದರ ಅರ್ಥವನ್ನು ನಿಜವಾಗಿಯೂ ತೋರಿಸಿಕೊಟ್ಟಿದ್ದಾರೆ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ಹೊಲಗದ್ದೆಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಆಕಾಶದೆತ್ತರದಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರಿದ್ದಾರೆ. ಹೌದು ! ನೀವು ಸರಿಯಾಗಿ ಕೇಳಿದ್ದೀರಿ, ಈಗ ಗ್ರಾಮದ ಮಹಿಳೆಯರು ಡ್ರೋನ್ ದೀದಿಗಳಾಗಿದ್ದಾರೆ ಮತ್ತು ಡ್ರೋನ್ಗಳನ್ನು ಹಾರಿಸುತ್ತಿದ್ದಾರೆ ಮತ್ತು ಕೃಷಿಯಲ್ಲಿ ಹೊಸ ಕ್ರಾಂತಿಯನ್ನು ತರುತ್ತಿದ್ದಾರೆ.
ಸ್ನೇಹಿತರೇ, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ, ಕೆಲ ಸಮಯದ ಹಿಂದೆ ಇತರರನ್ನು ಅವಲಂಬಿಸಬೇಕಾಗಿದ್ದ ಮಹಿಳೆಯರು, ಇಂದು ಡ್ರೋನ್ ಸಹಾಯದಿಂದ 50 ಎಕರೆ ಭೂಮಿಯಲ್ಲಿ ಔಷಧಿ ಸಿಂಪಡಿಸುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ. ಬೆಳಿಗ್ಗೆ ಮೂರು ಗಂಟೆ, ಸಂಜೆ ಎರಡು ಗಂಟೆ ಮತ್ತು ಕೆಲಸ ಮಾಡಿದರೆ ಆಯ್ತು. ಬಿಸಿಲಿಗೆ ಬೇಯಬೇಕಿಲ್ಲ, ವಿಷಕಾರಿ ರಾಸಾಯನಿಕಗಳ ಅಪಾಯವಿಲ್ಲ. ಸ್ನೇಹಿತರೇ, ಗ್ರಾಮಸ್ಥರು ಕೂಡ ಈ ಬದಲಾವಣೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದಾರೆ. ಈಗ ಈ ಮಹಿಳೆಯರನ್ನು 'ಡ್ರೋನ್ ಆಪರೇಟರ್ಗಳು' ಎಂದು ಕರೆಯಲಾಗುವುದಿಲ್ಲ, ಬದಲಿಗೆ ‘sky warriors’ ಎಂದು ಕರೆಯಲಾಗುತ್ತದೆ. ತಂತ್ರಜ್ಞಾನ ಮತ್ತು ದೃಢಸಂಕಲ್ಪ ಒಗ್ಗೂಡಿದಾಗ ಬದಲಾವಣೆ ಸಂಭವಿಸುತ್ತದೆ ಎಂದು ಈ ಮಹಿಳೆಯರು ನಿರೂಪಿಸಿದ್ದಾರೆ.
ನನ್ನ ಪ್ರಿಯ ದೇಶವಾಸಿಗಳೇ, 'ಅಂತಾರಾಷ್ಟ್ರೀಯ ಯೋಗ ದಿನ' ಕ್ಕೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ನೀವು ಇನ್ನೂ ಯೋಗಾಭ್ಯಾಸದಿಂದ ದೂರವಿದ್ದರೆ ಕೂಡಲೇ ಯೋಗಾಭ್ಯಾಸ ಆರಂಭಿಸಿ ಎಂಬುದನ್ನು ಈ ಸಂದರ್ಭ ನಮಗೆ ನೆನಪಿಸುತ್ತದೆ. ಯೋಗಾಭ್ಯಾಸ ನಿಮ್ಮ ಜೀವನದ ವಿಧಾನವನ್ನು ಬದಲಾಯಿಸುತ್ತದೆ. ಸ್ನೇಹಿತರೇ, ಜೂನ್ 21, 2015 ರಂದು 'ಯೋಗ ದಿನ' ಪ್ರಾರಂಭವಾದಾಗಿನಿಂದ, ಅದರ ಆಕರ್ಷಣೆ ನಿರಂತರವಾಗಿ ವೃದ್ಧಿಸುತ್ತಿದೆ. ಈ ವರ್ಷವೂ ಸಹ, 'ಯೋಗ ದಿನ'ದ ಬಗ್ಗೆ ಪ್ರಪಂಚದಾದ್ಯಂತದ ಜನರ ಉತ್ಸಾಹ ಮತ್ತು ಹುಮ್ಮಸ್ಸು ಕಂಡುಬರುತ್ತಿದೆ. ವಿವಿಧ ಸಂಸ್ಥೆಗಳು ತಮ್ಮ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಕಳೆದ ವರ್ಷಗಳ ಫೋಟೋಗಳು ನನಗೆ ತುಂಬಾ ಸ್ಫೂರ್ತಿ ನೀಡಿವೆ. ಕೆಲವು ವರ್ಷಗಳಲ್ಲಿ, ವಿವಿಧ ದೇಶಗಳಲ್ಲಿ, ಜನರು ಯೋಗ ಸರಪಳಿ ಮತ್ತು Yoga Ring ತಯಾರಿಸಿರುವುದನ್ನು ನಾವು ನೋಡಿದ್ದೇವೆ. ನಾಲ್ಕು ತಲೆಮಾರುಗಳು ಒಟ್ಟಿಗೆ ಯೋಗಾಭ್ಯಾಸ ಮಾಡುತ್ತಿರುವ ಇಂತಹ ಅನೇಕ ಚಿತ್ರಗಳಿವೆ. ಅನೇಕ ಜನರು ಯೋಗಾಭ್ಯಾಸಕ್ಕಾಗಿ ತಮ್ಮ ನಗರದ ಪ್ರತಿಷ್ಠಿತ ಸ್ಥಳಗಳನ್ನು ಆರಿಸಿಕೊಂಡರು. ಈ ಬಾರಿ ನೀವು ಕೂಡ ಯೋಗ ದಿನವನ್ನು ಆಸಕ್ತಿದಾಯಕ ರೀತಿಯಲ್ಲಿ ಆಚರಿಸುವ ಬಗ್ಗೆ ಚಿಂತಿಸಬಹುದು.
ಸ್ನೇಹಿತರೇ, ಆಂಧ್ರಪ್ರದೇಶ ಸರ್ಕಾರ ಯೋಗಆಂಧ್ರ (YogAndhra) ಅಭಿಯಾನವನ್ನು ಪ್ರಾರಂಭಿಸಿದೆ. ಇಡೀ ರಾಜ್ಯದಲ್ಲಿ ಯೋಗ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಈ ಅಭಿಯಾನದ ಅಡಿಯಲ್ಲಿ, 10 ಲಕ್ಷ ಯೋಗ ಸಾಧಕರ ಗುಂಪನ್ನು ರಚಿಸಲಾಗುತ್ತಿದೆ. ಈ ವರ್ಷ, ವಿಶಾಖಪಟ್ಟಣದಲ್ಲಿ ನಡೆಯುವ 'ಯೋಗ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ದೊರೆಯಲಿದೆ. ಈ ಬಾರಿಯೂ ನಮ್ಮ ಯುವ ಸ್ನೇಹಿತರು ದೇಶದ ಪರಂಪರೆಗೆ ಸಂಬಂಧಿಸಿದ ಪ್ರತಿಷ್ಠಿತ ಸ್ಥಳಗಳಲ್ಲಿ ಯೋಗಾಭ್ಯಾಸ ಮಾಡಲಿದ್ದಾರೆ ಎಂದು ತಿಳಿದು ನನಗೆ ಬಹಳ ಸಂತೋಷವಾಗಿದೆ. ಅನೇಕ ಯುವಕರು ಹೊಸ ದಾಖಲೆಗಳನ್ನು ಸೃಷ್ಟಿಸಲು ಮತ್ತು ಯೋಗ ಸರಪಳಿಯ ಭಾಗವಾಗುವ ಪ್ರತಿಜ್ಞೆ ಕೈಗೊಂಡಿದ್ದಾರೆ. ನಮ್ಮ ಕಾರ್ಪೋರೇಟ್ ಗಳು ಕೂಡಾ ಈ ವಿಷಯದಲ್ಲಿ ಹಿಂದೆ ಉಳಿದಿಲ್ಲ. ಕೆಲವು ಸಂಸ್ಥೆಗಳು ತಮ್ಮ ಕಚೇರಿಗಳಲ್ಲೇ ಯೋಗಾಭ್ಯಾಸಕ್ಕಾಗಿ ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿವೆ. ಕೆಲವು ನವೋದಯಗಳು 'ಕಚೇರಿ ಯೋಗ ಸಮಯ' ಗಳನ್ನು ನಿಗದಿಪಡಿಸಿವೆ. ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಯೋಗ ಕಲಿಸಲು ತಯಾರಿ ನಡೆಸುತ್ತಿರುವ ಜನರೂ ಇದ್ದಾರೆ. ಆರೋಗ್ಯ ಮತ್ತು ದೇಹದಾರ್ಢ್ಯತೆ ಬಗ್ಗೆ ಜನರ ಈ ತಿಳುವಳಿಕೆ ನನಗೆ ಅತೀವ ಸಂತಸ ನೀಡುತ್ತದೆ.
ಸ್ನೇಹಿತರೆ, ‘ಯೋಗ ದಿವಸ್’ ಜೊತೆಗೇ ಆಯುರ್ವೇದ ಕ್ಷೇತ್ರದಲ್ಲಿ ಬಹಳಷ್ಟು ನಡೆಯುತ್ತಿದ್ದು, ಇವುಗಳ ಕುರಿತು ಅರಿತಾಗ ನಿಮಗೆ ಕೂಡಾ ಬಹಳ ಸಂತೋಷವಾಗುತ್ತದೆ. ನಿನ್ನೆ ಅಂದರೆ ಮೇ 24ರಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರು ಹಾಗೂ ನನ್ನ ಮಿತ್ರ ತುಳಸೀ ಅವರ ಸಮ್ಮುಖದಲ್ಲಿ ಒಂದು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದೊಂದಿಗೇ International Classification of Health Interventions ಅಡಿಯಲ್ಲಿ ಒಂದು ಮೀಸಲಾದ ಸಾಂಪ್ರದಾಯಿಕ ಔಷಧ ಮಾಡ್ಯೂಲ್ ಕುರಿತಂತೆ ಕೂಡಾ ಕೆಲಸ ಆರಂಭವಾಗಿದೆ. ಈ ಉಪಕ್ರಮದಿಂದ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರಿಗೆ ವೈಜ್ಞಾನಿಕ ರೀತಿಯಲ್ಲಿ ಆಯುಷ್ ಗೆ ಅವಕಾಶ ದೊರೆಯಲು ಸಹಾಯವಾಗುತ್ತದೆ.
ಸ್ನೇಹಿತರೆ, ನೀವು ಶಾಲೆಯಲ್ಲಿ ಕಪ್ಪು ಹಲಗೆ ಅಂದರೆ ಬ್ಲ್ಯಾಕ್ ಬೋರ್ಡ್ ನೋಡಿಯೇ ಇರುತ್ತೀರಿ, ಆದರೆ ಈಗ ಕೆಲವು ಶಾಲೆಗಳಲ್ಲಿ ‘sugar board’ ಕೂಡಾ ಹಾಕಲಾಗುತ್ತಿದೆ blackboard ಅಲ್ಲ sugar board ! ಮಕ್ಕಳಿಗೆ ಅವರ ಸಕ್ಕರೆ ಸೇವನೆ ಬಗ್ಗೆ ಜಾಗೃತಿ ಮೂಡಿಸುವುದು CBSE ದ ಈ ವಿಶಿಷ್ಠ ಉಪಕ್ರಮದ ಉದ್ದೇಶವಾಗಿದೆ. ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಲಾಗುತ್ತಿದೆ ಎಂಬುದನ್ನು ಮಕ್ಕಳು ಅರಿತು, ಸ್ವತಃ ಆರೋಗ್ಯಕರ ಆಯ್ಕೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಇದೊಂದು ವಿಶಿಷ್ಠ ಪ್ರಯತ್ನವಾಗಿದೆ ಮತ್ತು ಇದರ ಪ್ರಭಾವ ಕೂಡ ಬಹಳ ಸಕಾರಾತ್ಮಕವಾಗಿರುತ್ತದೆ. ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯ ಅಭ್ಯಾಸ ಮಾಡಿಕೊಳ್ಳವ ನಿಟ್ಟಿನಲ್ಲಿ ಇದು ಅತ್ಯಂತ ಸಹಾಯಕವೆಂದು ಸಾಬೀತಾಗಬಹುದು. ಅನೇಕ ಪೋಷಕರು ಇದನ್ನು ಪ್ರಶಂಸಿಸಿದ್ದಾರೆ ಮತ್ತು ಇಂತಹ ಉಪಕ್ರಮಗಳನ್ನು ಕಚೇರಿಗಳು, ಕ್ಯಾಂಟೀನ್ ಗಳು ಮತ್ತು ಸಂಸ್ಥೆಗಳಲ್ಲಿಯೂ ಕೂಡಾ ಕೈಗೊಳ್ಳಬೇಕು ಎಂದು ನಾನು ನಂಬುತ್ತೇನೆ. ಅಂತಿಮವಾಗಿ ಆರೋಗ್ಯವಿದ್ದರಷ್ಟೇ ಎಲ್ಲವೂ ಇರುತ್ತದೆ. ಫಿಟ್ ಇಂಡಿಯಾ ಬಲಿಷ್ಠ ಭಾರತದ ಅಡಿಪಾಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಚ್ಛ ಭಾರತದ ಬಗ್ಗೆ ಮಾತನಾಡುವಾಗ, ಮನದ ಮಾತಿನ ಶ್ರೋತೃಗಳು ಹಿಂದೆ ಉಳಿಯುವುದು ಹೇಗೆ ಸಾಧ್ಯ? ನೀವೆಲ್ಲರೂ ನಿಮ್ಮ ಸ್ವಂತ ಮಟ್ಟದಲ್ಲಿ ಈ ಅಭಿಯಾನವನ್ನು ಬಲಪಡಿಸುತ್ತಿದ್ದೀರಿ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಆದರೆ ಇಂದು ನಾನು ನಿಮಗೆ ಸ್ವಚ್ಛತೆಯ ಸಂಕಲ್ಪವು ಪರ್ವತದಂತಹ ಸವಾಲುಗಳನ್ನು ಕೂಡಾ ಪರಾಭವಗೊಳಿಸಿದೆ ಎಂಬ ಉದಾಹರಣೆಯ ಕುರಿತು ಹೇಳಲು ಬಯಸುತ್ತೇನೆ. ಉಸಿರಾಡಲು ಕಷ್ಟವಾಗುವ ಹಿಮಭರಿತ ಪರ್ವತಗಳನ್ನು ಹತ್ತುತ್ತಿರುವ ವ್ಯಕ್ತಿಯನ್ನು ಊಹಿಸಿಕೊಳ್ಳಿ, ಪ್ರತಿ ಹೆಜ್ಜೆಯಲ್ಲೂ ಜೀವಕ್ಕೆ ಅಪಾಯವಿರುತ್ತದೆ ಮತ್ತು ಆ ವ್ಯಕ್ತಿ ಅಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತನಾಗಿದ್ದಾನೆ. ನಮ್ಮ ಐಟಿಬಿಪಿ (ITBP) ತಂಡದ ಸದಸ್ಯರು ಇದೇ ರೀತಿಯ ಕೆಲಸವನ್ನು ಮಾಡಿದ್ದಾರೆ. ಈ ತಂಡವು ವಿಶ್ವದ ಅತ್ಯಂತ ಕಷ್ಟಕರವಾದ ಶಿಖರ ಎನಿಸಿದ ಮೌಂಟ್ ಮಕಾಲು ಅನ್ನು ಏರಲು ಹೋಗಿತ್ತು. ಆದರೆ ಸ್ನೇಹಿತರೇ, ಅವರು ಕೇವಲ ಪರ್ವತ ಏರುವುದು ಮಾತ್ರವಲ್ಲ, ತಮ್ಮ ಗುರಿಗೆ 'ಸ್ವಚ್ಛತೆ'ಯ ಮತ್ತೊಂದು ಧ್ಯೇಯವನ್ನೂ ಅವರು ಸೇರಿಸಿದರು. ಶಿಖರದ ಬಳಿ ಬಿದ್ದಿದ್ದ ಕಸವನ್ನು ತೆಗೆದುಹಾಕಲು ಅವರು ಉಪಕ್ರಮವನ್ನು ಕೈಗೊಂಡರು. ಊಹಿಸಿ ನೋಡಿ, ಈ ತಂಡದ ಸದಸ್ಯರು 150 ಕಿಲೋಗಿಂತ ಅಧಿಕ ಪ್ರಮಾಣ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ತಮ್ಮೊಂದಿಗೆ ತಂದರು. ಅಷ್ಟು ಎತ್ತರದಲ್ಲಿ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಆದರೆ ದೃಢನಿಶ್ಚಯ ಇದ್ದಲ್ಲಿ, ಮಾರ್ಗ ತಾನೇ ತಾನಾಗಿ ತೆರೆದುಕೊಳ್ಳುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.
ಸ್ನೇಹಿತರೇ, ಇದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಷಯವೂ ಇದೆ – ಅದೇ ಕಾಗದದ ತ್ಯಾಜ್ಯ ಮತ್ತು ಮರುಬಳಕೆ. ಪ್ರತಿದಿನ ನಮ್ಮ ಮನೆಗಳು ಮತ್ತು ಕಚೇರಿಗಳಲ್ಲಿ ಬಹಳಷ್ಟು ಕಾಗದದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬಹುಶಃ, ಇದನ್ನು ನಾವು ಸರ್ವೇ ಸಾಮಾನ್ಯ ಎಂಬಂತೆ ಪರಿಗಣಿಸುತ್ತೇವೆ, ಆದರೆ ದೇಶದ ಲ್ಯಾಂಡ್ ಫಿಲ್ ತ್ಯಾಜ್ಯದ ಸುಮಾರು ಕಾಲು ಭಾಗ ಕಾಗದಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯವಿದೆ. ಭಾರತದಲ್ಲಿ ಅನೇಕ ನವೋದ್ಯಮಗಳು ಈ ವಲಯದಲ್ಲಿ ಉತ್ತಮ ಕೆಲಸ ಮಾಡುತ್ತಿವೆ ಎಂದು ತಿಳಿದು ನನಗೆ ಸಂತೋಷವಾಗಿದೆ. ವಿಶಾಖಪಟ್ಟಣಂ, ಗುರುಗ್ರಾಮದಂತಹ ಅನೇಕ ನಗರಗಳಲ್ಲಿನ ಅನೇಕ ನವೋದ್ಯಮಗಳು ಕಾಗದ ಮರುಬಳಕೆಯ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಕೆಲವು ಮರುಬಳಕೆಯ ಕಾಗದದಿಂದ ಪ್ಯಾಕೇಜಿಂಗ್ ಬೋರ್ಡ್ ಗಳನ್ನು ತಯಾರಿಸುತ್ತಿವೆ, ಕೆಲವು ಡಿಜಿಟಲ್ ವಿಧಾನಗಳ ಮೂಲಕ ವೃತ್ತಪತ್ರಿಕೆ ಮರುಬಳಕೆಯನ್ನು ಸುಲಭಗೊಳಿಸುತ್ತಿವೆ. ಜಾಲ್ನಾದಂತಹ ನಗರಗಳಲ್ಲಿ ಕೆಲವು ನವೋದ್ಯಮಗಳು 100 ಪ್ರತಿಶತ ಮರುಬಳಕೆಯ ವಸ್ತುಗಳಿಂದ ಪ್ಯಾಕೇಜಿಂಗ್ ರೋಲ್ ಗಳು ಮತ್ತು ಪೇಪರ್ ಕೋರ್ ಗಳನ್ನು ತಯಾರಿಸುತ್ತಿವೆ. ಒಂದು ಟನ್ ಕಾಗದವನ್ನು ಮರುಬಳಕೆ ಮಾಡುವುದರಿಂದ 17 ಮರಗಳನ್ನು ಕಡಿಯುವುದನ್ನು ತಡೆಯಬಹುದು ಮತ್ತು ಸಾವಿರಾರು ಲೀಟರ್ ನೀರು ಉಳಿಸಬಹುದು ಎಂದು ತಿಳಿದರೆ ನಿಮಗೆ ಸ್ಫೂರ್ತಿ ದೊರೆಯುತ್ತದೆ. ಈಗ ಯೋಚಿಸಿ, ಪರ್ವತಾರೋಹಿಗಳು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಕಸವನ್ನು ಮರಳಿ ತರಬಹುದಾದಾದರೆ, ನಾವು ಕೂಡ ನಮ್ಮ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಕಾಗದವನ್ನು ಬೇರ್ಪಡಿಸುವ ಮೂಲಕ ಮರುಬಳಕೆಗೆ ಕೊಡುಗೆ ನೀಡಬಹುದಲ್ಲವೇ. ದೇಶದ ಪ್ರತಿಯೊಬ್ಬ ನಾಗರಿಕನು ದೇಶಕ್ಕೆ ನಾನು ಏನು ಉತ್ತಮವಾಗಿ ಮಾಡಬಹುದು ಎಂದು ಯೋಚಿಸಿದಾಗ ಮಾತ್ರ, ನಾವು ಒಟ್ಟಾಗಿ ದೊಡ್ಡ ಬದಲಾವಣೆಯನ್ನು ತರಬಹುದು.
ಸ್ನೇಹಿತರೇ, ಇತ್ತೀಚೆಗೆ ಖೇಲೋ ಇಂಡಿಯಾ ಕ್ರೀಡಾಕೂಟವು ದೊಡ್ಡ ಯಶಸ್ಸನ್ನು ಕಂಡಿದೆ. ಬಿಹಾರದ ಐದು ನಗರಗಳು ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಆಯೋಜಿಸಿದ್ದವು. ಅಲ್ಲಿ ವಿವಿಧ ವಿಭಾಗಗಳಲ್ಲಿ ಪಂದ್ಯಗಳು ನಡೆದವು. ಭಾರತದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಅಲ್ಲಿಗೆ ತಲುಪಿದ್ದರು. ಈ ಕ್ರೀಡಾಪಟುಗಳು ಬಿಹಾರದ ಕ್ರೀಡಾ ಮನೋಭಾವ ಮತ್ತು ಬಿಹಾರದ ಜನರ ಬಗ್ಗೆ ಅವರು ತೋರಿಸಿದ ಆತ್ಮೀಯತೆಯನ್ನು ಶ್ಲಾಘಿಸಿದ್ದಾರೆ.
ಸ್ನೇಹಿತರೇ, ಬಿಹಾರದ ಭೂಮಿ ತುಂಬಾ ವಿಶೇಷವಾಗಿದೆ, ಈ ಕಾರ್ಯಕ್ರಮದಲ್ಲಿ ಇಲ್ಲಿ ಅನೇಕ ವಿಶಿಷ್ಟ ಘಟನೆಗಳು ನಡೆದವು. ಇದು ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಮೊದಲ ಕಾರ್ಯಕ್ರಮವಾಗಿದ್ದು, ಇದು ಒಲಿಂಪಿಕ್ ಚಾನೆಲ್ ಮೂಲಕ ಇಡೀ ಜಗತ್ತನ್ನು ತಲುಪಿತು. ಪ್ರಪಂಚದಾದ್ಯಂತದ ಜನರು ನಮ್ಮ ಯುವ ಆಟಗಾರರ ಪ್ರತಿಭೆಯನ್ನು ನೋಡಿ ಮೆಚ್ಚಿದರು. ಎಲ್ಲಾ ಪದಕ ವಿಜೇತರನ್ನು, ವಿಶೇಷವಾಗಿ ಅಗ್ರ ಮೂರು ವಿಜೇತ ರಾಜ್ಯಗಳನ್ನು - ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನವನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ, ಈ ಬಾರಿ ಖೇಲೋ ಇಂಡಿಯಾದಲ್ಲಿ ಒಟ್ಟು 26ದಾಖಲೆಗಳು ನಿರ್ಮಾಣವಾಗಿವೆ. ಭಾರ ಎತ್ತುವ ಸ್ಪರ್ಧೆಗಳಲ್ಲಿ, ಮಹಾರಾಷ್ಟ್ರದ ಅಸ್ಮಿತಾ ಧೋನೆ, ಒಡಿಶಾದ ಹರ್ಷವರ್ಧನ್ ಸಾಹು ಮತ್ತು ಉತ್ತರ ಪ್ರದೇಶದ ತುಷಾರ್ ಚೌಧರಿ ಅವರ ಅತ್ಯುತ್ತಮ ಪ್ರದರ್ಶನ ಎಲ್ಲರ ಹೃದಯ ಗೆದ್ದಿತು. ಮಹಾರಾಷ್ಟ್ರದ ಸಾಯಿರಾಜ್ ಪರದೇಸಿ ಮೂರು ದಾಖಲೆಗಳನ್ನು ಬರೆದರು. ಅಥ್ಲೆಟಿಕ್ಸ್ ನಲ್ಲಿ, ಉತ್ತರ ಪ್ರದೇಶದ ಖಾದಿರ್ ಖಾನ್ ಮತ್ತು ಶೇಖ್ ಜೀಶನ್ ಮತ್ತು ರಾಜಸ್ಥಾನದ ಹಂಸರಾಜ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಬಾರಿ ಬಿಹಾರ ಕೂಡ 36 ಪದಕಗಳನ್ನು ಗೆದ್ದಿದೆ. ಸ್ನೇಹಿತರೇ, ಆಡುವವನು ಅರಳುತ್ತಾನೆ. ಪಂದ್ಯಾವಳಿಯು ಯುವ ಕ್ರೀಡಾ ಪ್ರತಿಭೆಗಳಿಗೆ ಬಹಳಷ್ಟು ಅರ್ಥವನ್ನು ನೀಡುತ್ತದೆ. ಇಂತಹ ಘಟನೆಗಳು ಭಾರತೀಯ ಕ್ರೀಡೆಗಳ ಭವಿಷ್ಯವನ್ನು ಮತ್ತಷ್ಟು ಬೆಳಗಿಸುತ್ತವೆ.
ನನ್ನ ಪ್ರೀತಿಯ ದೇಶವಾಸಿಗಳೇ. ಮೇ 20 ಅನ್ನು 'ವಿಶ್ವ ಜೇನುನೊಣ ದಿನ' ಎಂದು ಆಚರಿಸಲಾಯಿತು, ಈ ದಿನ ಜೇನುತುಪ್ಪವು ಕೇವಲ ಸಿಹಿ ಮಾತ್ರವಲ್ಲ, ಆರೋಗ್ಯ, ಸ್ವ-ಉದ್ಯೋಗ ಮತ್ತು ಸ್ವಾವಲಂಬನೆಯ ಉದಾಹರಣೆಯಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಕಳೆದ 11 ವರ್ಷಗಳಲ್ಲಿ, ಭಾರತದಲ್ಲಿ ಜೇನು ಸಾಕಣೆಯಲ್ಲಿ ಒಂದು ಸಿಹಿ ಕ್ರಾಂತಿ ನಡೆದಿದೆ. 10-11 ವರ್ಷಗಳ ಹಿಂದೆ, ಭಾರತದ ಜೇನುತುಪ್ಪದ ಉತ್ಪಾದನೆಯು ಒಂದು ವರ್ಷದಲ್ಲಿ ಸುಮಾರು 70-75 ಸಾವಿರ ಮೆಟ್ರಿಕ್ ಟನ್ ಗಳಷ್ಟಿತ್ತು. ಇಂದು, ಇದು ಸರಿ ಸುಮಾರು ಒಂದೂ ಕಾಲು ಲಕ್ಷ ಮೆಟ್ರಿಕ್ ಟನ್ ಗಳಷ್ಟು ಆಗಿದೆ. ಇದರರ್ಥ ಜೇನುತುಪ್ಪದ ಉತ್ಪಾದನೆಯು ಸುಮಾರು ಶೇಕಡಾ 60ರಷ್ಟು ಹೆಚ್ಚಾಗಿದೆ. ನಾವು ಜೇನುತುಪ್ಪದ ಉತ್ಪಾದನೆ ಮತ್ತು ರಫ್ತಿನಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದೆನಿಸಿದ್ದೇವೆ. ಸ್ನೇಹಿತರೇ, 'ರಾಷ್ಟ್ರೀಯ ಜೇನುಸಾಕಣೆ' ಮತ್ತು 'ಜೇನು ಮಿಷನ್' ಈ ಸಕಾರಾತ್ಮಕ ಪರಿಣಾಮದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಅಡಿಯಲ್ಲಿ, ಜೇನು ಸಾಕಣೆಗೆ ಸಂಬಂಧಿಸಿದ ಸಾವಿರಾರು ರೈತರಿಗೆ ತರಬೇತಿ ಹಾಗೂ, ಉಪಕರಣಗಳನ್ನು ನೀಡಲಾಯಿತು ಮತ್ತು ಅವರಿಗೆ ಮಾರುಕಟ್ಟೆಗೆ ನೇರ ಪ್ರವೇಶವನ್ನು ಸೃಷ್ಟಿಸಲಾಯಿತು.
ಸ್ನೇಹಿತರೇ, ಈ ಬದಲಾವಣೆ ಕೇವಲ ಅಂಕಿಅಂಶಗಳಲ್ಲಿ ಗೋಚರಿಸುವುದು ಮಾತ್ರವಲ್ಲ, ಹಳ್ಳಿಯ ನೆಲದಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಛತ್ತೀಸ್ ಗಢದ ಕೊರಿಯಾ ಜಿಲ್ಲೆಯಲ್ಲಿ ಇಂತಹ ಉದಾಹರಣೆ ಇದೆ, ಅಲ್ಲಿ ಬುಡಕಟ್ಟು ರೈತರು 'ಸೋನ್ ಹನಿ' ಎಂಬ ಶುದ್ಧ ಸಾವಯವ ಜೇನುತುಪ್ಪದ ಬ್ರಾಂಡ್ ಅನ್ನು ರಚಿಸಿದ್ದಾರೆ. ಇಂದು ಆ ಜೇನುತುಪ್ಪವನ್ನು ಜಿಇಎಂ (GEM) ಸೇರಿದಂತೆ ಅನೇಕ ಆನ್ ಲೈನ್ ಪೋರ್ಟಲ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ, ಅಂದರೆ ಹಳ್ಳಿಯ ಕಠಿಣ ಪರಿಶ್ರಮ ಈಗ ಜಾಗತಿಕ ಮಟ್ಟದಲ್ಲಿದೆ. ಅದೇ ರೀತಿ, ಉತ್ತರ ಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದ ಸಾವಿರಾರು ಮಹಿಳೆಯರು ಮತ್ತು ಯುವಕರು ಈಗ ಜೇನುತುಪ್ಪದ ಉದ್ಯಮಿಗಳಾಗಿದ್ದಾರೆ. ಸ್ನೇಹಿತರೇ, ಈಗ ಜೇನುತುಪ್ಪದ ಪ್ರಮಾಣದ ಮೇಲೆ ಮಾತ್ರವಲ್ಲದೆ ಅದರ ಶುದ್ಧತೆಯ ಮೇಲೂ ಕೆಲಸ ಮಾಡಲಾಗುತ್ತಿದೆ. ಕೆಲವು ನವೋದ್ಯಮಗಳು ಈಗ ಜೇನುತುಪ್ಪದ ಗುಣಮಟ್ಟವನ್ನು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನದೊಂದಿಗೆ ಪ್ರಮಾಣೀಕರಿಸುತ್ತಿವೆ. ಮುಂದಿನ ಬಾರಿ ನೀವು ಜೇನುತುಪ್ಪವನ್ನು ಖರೀದಿಸಿದಾಗ, ಈ ಜೇನುತುಪ್ಪದ ಉದ್ಯಮಿಗಳು ತಯಾರಿಸಿದ ಜೇನುತುಪ್ಪವನ್ನು ಪ್ರಯತ್ನಿಸಿ ನೋಡಿ, ಸ್ಥಳೀಯ ರೈತರು, ಮಹಿಳಾ ಉದ್ಯಮಿಗಳಿಂದ ಜೇನುತುಪ್ಪವನ್ನು ಖರೀದಿಸಲು ಪ್ರಯತ್ನಿಸಿ. ಏಕೆಂದರೆ ಅದರ ಪ್ರತಿ ಹನಿಯೂ ರುಚಿಯನ್ನು ಮಾತ್ರವಲ್ಲದೆ ಭಾರತದ ಕಠಿಣ ಪರಿಶ್ರಮ ಮತ್ತು ಭರವಸೆಯನ್ನು ಸಹ ಹೊಂದಿದೆ. ಈ ಜೇನುತುಪ್ಪದ ಮಾಧುರ್ಯವು ಸ್ವಾವಲಂಬಿ ಭಾರತದ ರುಚಿಯಾಗಿದೆ.
ಸ್ನೇಹಿತರೇ, ಜೇನಿಗೆ ಸಂಬಂಧಿಸಿದಂತೆ ದೇಶಗಳ ಪ್ರಯತ್ನಗಳ ಬಗ್ಗೆ ನಾವು ಮಾತನಾಡುವಾಗ, ಮತ್ತೊಂದು ಉಪಕ್ರಮದ ಬಗ್ಗೆ ನಿಮಗೆ ಹೇಳಲು ನಾನು ಬಯಸುತ್ತೇನೆ. ಜೇನ್ನೊಣಗಳನ್ನು ರಕ್ಷಿಸಬೇಕಾಗಿರುವುದು ಕೇವಲ ನಮ್ಮ ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ಹೊಲಗಳು ಭವಿಷ್ಯದ ಪೀಳಿಗೆಯ ಜವಾಬ್ದಾರಿಯೂ ಹೌದು ಎನ್ನುವುದುನ್ನು ಇದು ನಮಗೆ ನೆನಪಿಸುತ್ತದೆ. ಇದು ಪುಣೆ ನಗರದ ಒಂದು ಉದಾಹರಣೆಯಾಗಿದೆ, ಅಲ್ಲಿ ಒಂದು ವಸತಿ ಸಮುಚ್ಛಯದಲ್ಲಿ ಒಂದು ಜೇನುಗೂಡನ್ನು ತೆಗೆದುಹಾಕಲಾಯಿತು. ಬಹುಶಃ ಸುರಕ್ಷತೆ ಅಥವಾ ಭಯ ಇದಕ್ಕೆ ಕಾರಣವಿರಬಹುದು. ಆದರೆ ಈ ಘಟನೆಯು ಕೆಲವರಿಗೆ ಯೋಚಿಸುವಂತೆ ಮಾಡಿತು. ಅಮಿತ್ ಎಂಬ ಹೆಸರಿನ ಯುವಕ, ಜೇನ್ನೊಣಗಳನ್ನು ತೊಲಗಿಸಬಾರದು ಅವುಗಳನ್ನು ರಕ್ಷಿಸಬೇಕೆಂದು ನಿರ್ಧರಿಸಿದರು. ಅವರು ಸ್ವತಃ ಜೇನ್ನೊಣಗಳ ಬಗ್ಗೆ ಅರಿತರು, ಅವುಗಳ ಬಗ್ಗೆ ಸಂಶೋಧನೆ ಮಾಡಿದರು ಮತ್ತು ಇತರರನ್ನೂ ಅದರಲ್ಲಿ ಸೇರಿಸಿಕೊಳ್ಳಲು ಆರಂಭಿಸಿದರು. ಕ್ರಮೇಣ ಅವರು ಒಂದು ತಂಡ ರಚಿಸಿದರು ಮತ್ತು ಆ ತಂಡಕ್ಕೆ Bee Friends ಅಂದರೆ ಜೇನ್ನೊಣ ಮಿತ್ರ ಎಂದು ಹೆಸರಿಟ್ಟರು. ಈಗ ಈ Bee ಸ್ನೇಹಿತರು, ಜೇನ್ನೊಣಗಳಿಂದ ಜನರಿಗೆ ಅಪಾಯವೂ ಆಗಬಾರದು ಹಾಗೆಯೇ ಜೇನ್ನೊಣಗಳು ಜೀವಂತವಾಗಿಯೂ ಇರಬೇಕು ಎಂಬ ಉದ್ದೇಶದಿಂದ ಜೇನ್ನೊಣಗಳ ಗೂಡನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತ ವಿಧಾನದಲ್ಲಿ ವರ್ಗಾವಣೆ ಮಾಡುತ್ತಾರೆ. ಅಮಿತ್ ಅವರ ಈ ಪ್ರಯತ್ನದ ಪರಿಣಾಮ ಕೂಡಾ ಬಹಳ ಅದ್ಭುತವಾಗಿದೆ. ಜೇನ್ನೊಣಗಳ ಸಮುಚ್ಚಯವೂ ರಕ್ಷಿಸಲ್ಪಡುತ್ತಿದೆ. ಜೇನು ಉತ್ಪಾದನೆಯೂ ಹೆಚ್ಚಾಗುತ್ತಿದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಜಾಗೃತಿಯೂ ಹೆಚ್ಚಾಗುತ್ತಿದೆ. ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಿದಾಗ, ಅದರ ಪ್ರಯೋಜನ ಪ್ರತಿಯೊಬ್ಬರಿಗೂ ದೊರೆಯುತ್ತದೆ ಎನ್ನುವುದನ್ನು ಈ ಉಪಕ್ರಮ ನಮಗೆ ತಿಳಿಯಪಡಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ‘ಮನದ ಮಾತಿನ’ ಈ ಸಂಚಿಕೆ ಇಲ್ಲಿಗೆ ಮುಗಿಸುತ್ತಿದ್ದೇನೆ, ದೇಶದ ಜನರ ಸಾಧನೆಗಳ ಕುರಿತು ಮತ್ತು ಸಮಾಜಕ್ಕೆ ಅವರು ಮಾಡುವ ಪ್ರಯತ್ನಗಳ ಕುರಿತು ನನಗೆ ಇದೇ ರೀತಿ ಪತ್ರ ಬರೆಯುತ್ತಿರಿ. ‘ಮನದ ಮಾತಿನ’ ಮುಂದಿನ ಸಂಚಿಕೆಯಲ್ಲಿ ಪುನಃ ಭೇಟಿಯಾಗೋಣ, ಹೊಸ ವಿಷಯಗಳ ಕುರಿತು, ದೇಶವಾಸಿಗಳ ಹೊಸ ಸಾಧನೆಗಳ ಕುರಿತು ಮಾತನಾಡೋಣ.ನಾನು ನಿಮ್ಮ ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಸಂಪೂರ್ಣ ದೇಶ ಭಯೋತ್ಪಾದನೆಯ ವಿರುದ್ಧ ಒಗ್ಗೂಡಿ ನಿಂತಿದೆ. ಆಕ್ರೋಶದಿಂದ ಕೂಡಿದೆ ಮತ್ತು ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲೇಬೇಕು ಎಂಬುದು ಇಂದು ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಿದೆ. ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಸಮಯದಲ್ಲಿ ನಮ್ಮ ಸೇನಾ ಪಡೆಗಳು ಪ್ರದರ್ಶಿಸಿದ ಶೌರ್ಯ ಪ್ರತಿಯೊಬ್ಬ ಹಿಂದೂಸ್ತಾನಿಯನ್ನೂ ಹೆಮ್ಮೆಪಡುವಂತೆ ಮಾಡಿದೆ. ಗಡಿಯಾಚೆಗಿನ ಭಯೋತ್ಪಾದಕ ಅಡಗುತಾಣಗಳನ್ನು ನಮ್ಮ ಪಡೆಗಳು ನಿಖರತೆಯಿಂದ ಕರಾರುವಾಕ್ಕಾಗಿ ನಾಶಪಡಿಸಿರುವುದು ಅದ್ಭುತವಾಗಿದೆ. 'ಆಪರೇಷನ್ ಸಿಂಧೂರ್' ಪ್ರಪಂಚದಾದ್ಯಂತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಹೊಸ ಭರವಸೆ ನೀಡಿದೆ ಮತ್ತು ಉತ್ಸಾಹ ತುಂಬಿದೆ.
ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಇದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ. ಈ ಚಿತ್ರಣ ಇಡೀ ದೇಶವನ್ನು ದೇಶಭಕ್ತಿಯ ಭಾವನೆಯಿಂದ ತುಂಬಿದೆ. ತ್ರಿವರ್ಣದಲ್ಲಿ ರಂಗು ಮೇಳೈಸಿದೆ. ದೇಶದ ವಿವಿಧ ನಗರಗಳು, ಗ್ರಾಮಗಳು ಮತ್ತು ಸಣ್ಣಪುಟ್ಟ ಪಟ್ಟಣಗಳಲ್ಲಿ ತ್ರಿವರ್ಣ ಧ್ವಜ ಯಾತ್ರೆ ಕೈಗೊಳ್ಳಲಾಗುತ್ತಿದ್ದುದನ್ನು ನೀವು ನೋಡಿರಬಹುದು. ಸಾವಿರಾರು ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ದೇಶದ ಸೇನೆಗೆ ಗೌರವ ಸಲ್ಲಿಸಲು ಮುಂದೆ ಬಂದರು. ಅನೇಕ ನಗರಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವಕರು ನಾಗರಿಕ ರಕ್ಷಣಾ ಸ್ವಯಂಸೇವಕರಾಗಲು ಒಗ್ಗೂಡಿದರು ಮತ್ತು ಚಂಡೀಗಢದ ವೀಡಿಯೊಗಳು ಸಾಕಷ್ಟು ವೈರಲ್ ಆಗಿರುವುದನ್ನು ನಾವು ಕಂಡಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕವಿತೆಗಳನ್ನು ಬರೆಯಲಾಗುತ್ತಿತ್ತು, ದೇಶಭಕ್ತಿ ಗೀತೆಗಳನ್ನು ಹಾಡಲಾಗುತ್ತಿತ್ತು. ಪುಟ್ಟ ಪುಟ್ಟ ಮಕ್ಕಳು ಅಗಾಧ ಸಂದೇಶಗಳನ್ನು ಹೊತ್ತ ಚಿತ್ರಗಳನ್ನು ಬಿಡಿಸುತ್ತಿದ್ದರು. ನಾನು ಮೂರು ದಿನಗಳ ಹಿಂದೆಯಷ್ಟೇ ಬಿಕಾನೇರ್ಗೆ ಹೋಗಿದ್ದೆ. ಅಲ್ಲಿನ ಮಕ್ಕಳು ನನಗೆ ಇದೇ ರೀತಿಯ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. 'ಆಪರೇಷನ್ ಸಿಂಧೂರ್' ದೇಶದ ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದೆ ಎಂದರೆ, ಅನೇಕ ಕುಟುಂಬಗಳು ಅದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ. ಬಿಹಾರದ ಕಟಿಹಾರ್, ಉತ್ತರ ಪ್ರದೇಶದ ಕುಶಿನಗರ ಮತ್ತು ಇನ್ನೂ ಹಲವಾರು ನಗರಗಳಲ್ಲಿ, ಆ ಸಮಯದಲ್ಲಿ ಜನಿಸಿದ ಮಕ್ಕಳಿಗೆ 'ಸಿಂಧೂರ್' ಎಂದು ನಾಮಕರಣ ಮಾಡಲಾಗಿದೆ.
ಸ್ನೇಹಿತರೇ, ನಮ್ಮ ಸೈನಿಕರು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದರು, ಅದು ಅವರ ಅದಮ್ಯ ಸಾಹಸವಾಗಿತ್ತು ಮತ್ತು ಅದರಲ್ಲಿ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದ ಶಕ್ತಿಯೂ ಸೇರಿತ್ತು. 'ಸ್ವಾವಲಂಬಿ ಭಾರತ'ದ ಸಂಕಲ್ಪವೂ ಇತ್ತು. ಈ ಗೆಲುವಿನಲ್ಲಿ ನಮ್ಮ ಎಂಜಿನಿಯರ್ಗಳು, ತಂತ್ರಜ್ಞರು ಸೇರಿದಂತೆ ಎಲ್ಲರ ಶ್ರಮವೂ ಸೇರಿದೆ. ಈ ಅಭಿಯಾನದ ನಂತರ, ದೇಶಾದ್ಯಂತ ‘Vocal for Local’ ಕುರಿತು ಹೊಸ ಆಶಾಕಿರಣ ಮೂಡಿದೆ. ಅನೇಕ ವಿಷಯಗಳು ಮನ ಮುಟ್ಟುತ್ತವೆ. "ಇನ್ನು ಮುಂದೆ ನಾವು ನಮ್ಮ ಮಕ್ಕಳಿಗಾಗಿ ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಮಾತ್ರ ಖರೀದಿಸುತ್ತೇವೆ. ದೇಶಪ್ರೇಮ ಬಾಲ್ಯದಿಂದಲೇ ಮೂಡಬೇಕು" ಎಂದು ಪೋಷಕರೊಬ್ಬರು ಹೇಳಿದರು. “ನಾವು ನಮ್ಮ ಮುಂದಿನ ರಜೆಯನ್ನು ದೇಶದ ಯಾವುದಾದರೂ ಸುಂದರ ಸ್ಥಳದಲ್ಲಿ ಕಳೆಯುತ್ತೇವೆ." ಎಂದು ಕೆಲವು ಕುಟುಂಬಗಳು ಪ್ರತಿಜ್ಞೆ ಮಾಡಿವೆ. ಅನೇಕ ಯುವಕರು ‘Wed in India’ ಸಂಕಲ್ಪಗೈದಿದ್ದಾರೆ , ಅವರು ನಮ್ಮ ದೇಶದಲ್ಲೇ ವಿವಾಹವಾಗಲಿದ್ದಾರೆ. "ಈಗ ನೀವು ಯಾವುದೇ ಉಡುಗೊರೆಯನ್ನು ನೀಡಿದರೂ, ಅದು ಕೆಲವು ಭಾರತೀಯ ಕುಶಲಕರ್ಮಿಗಳೇ ತಯಾರಿಸಿದ್ದಾಗಿರುತ್ತದೆ" ಎಂದು ಇನ್ನೂ ಕೆಲವರು ಹೇಳಿದ್ದಾರೆ
ಸ್ನೇಹಿತರೇ, 'ಜನರ ಒಗ್ಗೂಡುವಿಕೆ, ಸಾರ್ವಜನಿಕ ಭಾಗವಹಿಸುವಿಕೆ' - ಇದೇ ಅಲ್ಲವೆ ಭಾರತದ ನಿಜವಾದ ಶಕ್ತಿ. ಬನ್ನಿ ಈ ಸಂದರ್ಭದಲ್ಲಿ ನಾವೆಲ್ಲ “ನಮ್ಮ ಜೀವನದಲ್ಲಿ ಸಾಧ್ಯವಾದಲ್ಲೆಲ್ಲಾ ಸ್ವದೇಶದಲ್ಲಿ ತಯಾರಿಸಿದ ವಸ್ತುಗಳಿಗೆ ಆದ್ಯತೆ ನೀಡುತ್ತೇವೆ ಎಂದು ಸಂಕಲ್ಪಗೈಯೋಣ ಎಂದು ನಿಮ್ಮಲ್ಲಿ ಆಗ್ರಹಿಸುತ್ತೇನೆ. ಇದು ಕೇವಲ ಆರ್ಥಿಕ ಸ್ವಾವಲಂಬನೆಯ ವಿಷಯವಲ್ಲ, ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸುವ ಭಾವನೆಯಾಗಿದೆ. ನಮ್ಮ ಒಂದು ಹೆಜ್ಜೆ ಭಾರತದ ಪ್ರಗತಿಗೆ ದೊಡ್ಡ ಕೊಡುಗೆ ನೀಡಬಹುದಾಗಿದೆ.
ಸ್ನೇಹಿತರೇ, ಬಸ್ಸಿನಲ್ಲಿ ಎಲ್ಲಿಯಾದರೂ ಪ್ರಯಾಣಿಸುವುದು ಬಹಳ ಸಾಮಾನ್ಯ ವಿಷಯ. ಆದರೆ ಮೊದಲ ಬಾರಿಗೆ ಒಂದು ಗ್ರಾಮಕ್ಕೆ ಬಸ್ ತಲುಪಿರುವ ಕುರಿತು ನಾನು ನಿಮಗೆ ಹೇಳಬಯಸುತ್ತೇನೆ. ಅಲ್ಲಿನ ಜನರು ಈ ದಿನಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದರು. ಮತ್ತು ಮೊದಲ ಬಾರಿ ಗ್ರಾಮಕ್ಕೆ ಬಸ್ ತಲುಪಿದಾಗ, ಜನರು ಅದನ್ನು ಢೋಲು ಢಕ್ಕೆ ಬಾರಿಸುವ ಮೂಲಕ ಸ್ವಾಗತಿಸಿದರು. ಬಸ್ ನೋಡಿ ಜನರ ಸಂತೋಷ ತುಂಬಾ ಮೇರೆ ಮೀರಿತ್ತು. ಗ್ರಾಮಕ್ಕೆ ಡಾಂಬರೀಕರಣ ಮಾಡಿದ ರಸ್ತೆ ಇತ್ತು, ಜನರಿಗೆ ಅದರ ಅವಶ್ಯಕತೆಯೂ ಇತ್ತು, ಆದರೆ ಇಲ್ಲಿ ಈ ಹಿಂದೆ ಬಸ್ ಓಡಾಡುತ್ತಿರಲಿಲ್ಲ. ಏಕೆಂದರೆ ಈ ಗ್ರಾಮವು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿತ್ತು. ಈ ಸ್ಥಳವು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿದೆ ಮತ್ತು ಈ ಗ್ರಾಮದ ಹೆಸರು ಕಾಟೇಝರಿ. ಕಾಟೇಝರಿಯಲ್ಲಾದ ಈ ಬದಲಾವಣೆಯ ಅನುಭವ ಸುತ್ತಮುತ್ತಲಿನ ಪ್ರದೇಶದ ಮೇಲೂ ಪ್ರಭಾವ ಬೀರಿರುವುದು ಕಂಡುಬರುತ್ತಿದೆ. ಈಗ ಇಲ್ಲಿನ ಪರಿಸ್ಥಿತಿ ಸಾಮಾನ್ಯಕ್ಕೆ ಮರಳುತ್ತಿದೆ. ಮಾವೋವಾದದ ವಿರುದ್ಧದ ಸಾಮೂಹಿಕ ಹೋರಾಟದಿಂದಾಗಿ, ಮೂಲಭೂತ ಸೌಕರ್ಯಗಳು ಈಗ ಇಂತಹ ಪ್ರದೇಶಗಳಿಗೂ ತಲುಪಲು ಪ್ರಾರಂಭಿಸಿವೆ. ಬಸ್ ಬಂದರೆ ತಮ್ಮ ಜೀವನ ತುಂಬಾ ಸುಲಭವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ
ಸ್ನೇಹಿತರೇ, 'ಮನ್ ಕಿ ಬಾತ್' ನಲ್ಲಿ ನಾವು ಈಗಾಗಲೇ ಛತ್ತೀಸ್ಗಢದಲ್ಲಿ ನಡೆದ ಬಸ್ತರ್ ಒಲಿಂಪಿಕ್ಸ್ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿನ ವಿಜ್ಞಾನ ಪ್ರಯೋಗಾಲಯದ ಬಗ್ಗೆ ಚರ್ಚಿಸಿದ್ದೇವೆ. ಇಲ್ಲಿನ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ಇದೆ. ಅವರು ಕ್ರೀಡೆಯಲ್ಲೂ ಅದ್ಭುತ ಸಾಧನೆಗೈಯುತ್ತಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಎಷ್ಟು ಧೈರ್ಯಶಾಲಿಗಳು ಎಂಬುದನ್ನು ಇಂತಹ ಪ್ರಯತ್ನಗಳು ಎತ್ತಿ ತೋರಿಸುತ್ತವೆ. ಈ ಜನರು ಎಲ್ಲಾ ಸವಾಲುಗಳ ಮಧ್ಯೆಯೂ ತಮ್ಮ ಜೀವನವನ್ನು ಉತ್ತಮಗೊಳಿಸುವ ಮಾರ್ಗವನ್ನು ಆರಿಸಿಕೊಂಡಿದ್ದಾರೆ. 10 ಮತ್ತು 12ನೇ ತರಗತಿಯ ಫಲಿತಾಂಶಗಳಲ್ಲಿಯೂ ದಂತೇವಾಡ ಜಿಲ್ಲೆಯ ಸಾಧನೆ ಅತ್ಯುತ್ತಮವಾಗಿರುವುದನ್ನು ತಿಳಿದು ನನಗೆ ತುಂಬಾ ಸಂತೋಷವಾಯಿತು. ಈ ಜಿಲ್ಲೆ 10 ನೇ ತರಗತಿಯ ಫಲಿತಾಂಶದಲ್ಲಿ ಸುಮಾರು ಶೇಕಡಾ ತೊಂಬತ್ತೈದು ಫಲಿತಾಂಶದೊಂದಿಗೆ ಅಗ್ರಸ್ಥಾನದಲ್ಲಿ ಮೆರೆದಿದೆ. 12ನೇ ತರಗತಿ ಪರೀಕ್ಷೆಯಲ್ಲಿ, ಈ ಜಿಲ್ಲೆ ಛತ್ತೀಸ್ಗಢದಲ್ಲಿ ಆರನೇ ಸ್ಥಾನಗಳಿಸಿದೆ. ಒಂದು ಕಾಲದಲ್ಲಿ ಮಾವೋವಾದ ತೀವ್ರವಾಗಿದ್ದ ದಂತೇವಾಡದಲ್ಲಿ, ಇಂದು ಶಿಕ್ಷಣದ ಪತಾಕೆ ಮುಗಿಲು ಮುಟ್ಟುತ್ತಿದೆ ಎಂಬ ಬಗ್ಗೆ ಆಲೋಚಿಸಿ. ಇಂತಹ ಬದಲಾವಣೆಗಳು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತವೆ.
ನನ್ನ ಪ್ರಿಯ ದೇಶವಾಸಿಗಳೇ, ಈಗ ನಾನು ನಿಮಗೆ ಸಿಂಹಗಳಿಗೆ ಸಂಬಂಧಿಸಿದ ಒಂದೊಳ್ಳೆ ಸುದ್ದಿಯನ್ನು ಹೇಳಬಯಸುತ್ತೇನೆ. ಕಳೆದ ಕೇವಲ ಐದು ವರ್ಷಗಳಲ್ಲಿ, ಗುಜರಾತ್ನ ಗಿರ್ನಲ್ಲಿ ಸಿಂಹಗಳ ಸಂಖ್ಯೆ 674 ರಿಂದ 891 ಕ್ಕೇರಿದೆ . ಆರುನೂರಾ ಎಪ್ಪತ್ತ ನಾಲ್ಕರಿಂದ ಎಂತುನಊರಾ ತೊಂಭತ್ತೊಂದು! ಸಿಂಹಗಳ ಗಣತಿಯ ನಂತರ ತಿಳಿದುಬಂದ ಸಿಂಹಗಳ ಈ ಸಂಖ್ಯೆ ತುಂಬಾ ಉತ್ತೇಜನಕಾರಿಯಾಗಿದೆ. ಸ್ನೇಹಿತರೇ, ನಿಮ್ಮಲ್ಲಿ ಹಲವರು ಈ ಪ್ರಾಣಿಗಳ ಗಣತಿ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಲು ಬಯಸಬಹುದು? ಈ ಕೆಲಸ ಬಹಳ ಸವಾಲಿನದ್ದಾಗಿದೆ. ಸಿಂಹ ಗಣತಿಯನ್ನು ಹನ್ನೊಂದು ಜಿಲ್ಲೆಗಳಲ್ಲಿ, 35 ಸಾವಿರ ಚದರ ಕಿಲೋಮೀಟರ್ ಪ್ರದೇಶದಲ್ಲಿ ನಡೆಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗಣತಿಗಾಗಿ, ತಂಡಗಳು ಈ ಪ್ರದೇಶಗಳನ್ನು ದಿನದ 24 ಗಂಟೆಯೂ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಸಂಪೂರ್ಣ ಅಭಿಯಾನದಲ್ಲಿ ಪರಿಶೀಲನೆ ಮತ್ತು ಮರು ಪರಿಶೀಲನೆ ಎರಡನ್ನೂ ಮಾಡಲಾಯಿತು. ಈ ಮೂಲಕ, ಸಿಂಹಗಳ ಎಣಿಕೆ ಕೆಲಸವನ್ನು ಅತ್ಯಂತ ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು
ಸ್ನೇಹಿತರೇ, ಸಮಾಜದಲ್ಲಿ ಜವಾಬ್ದಾರಿಯ ಭಾವನೆ ಗಾಢವಾಗಿದ್ದಾಗ ಎಷ್ಟು ಅದ್ಭುತ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದನ್ನು ಏಷ್ಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿನ ವೃದ್ಧಿ - ಎತ್ತಿ ತೋರಿಸುತ್ತದೆ. ಕೆಲವು ದಶಕಗಳ ಹಿಂದೆ ಗಿರ್ನಲ್ಲಿ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಆದರೆ ಅಲ್ಲಿನ ಜನರು ಒಗ್ಗೂಡಿ ಬದಲಾವಣೆಗೆ ಟೊಂಕ ಕಟ್ಟಿ ನಿಂತರು. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ, ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಕೂಡ ಅಳವಡಿಸಿಕೊಳ್ಳಲಾಯಿತು. ಇದೇ ಸಮಯದಲ್ಲಿ, ಅರಣ್ಯ ಅಧಿಕಾರಿಗಳ ಹುದ್ದೆಯಲ್ಲಿ ಮಹಿಳೆಯರನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿದ ಮೊದಲ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿತು. ಇಂದು ನಾವು ನೋಡುತ್ತಿರುವ ಫಲಿತಾಂಶಗಳಿಗೆ ಈ ಎಲ್ಲ ಅಂಶಗಳು ಕಾರಣವಾಗಿವೆ. ವನ್ಯಜೀವಿ ರಕ್ಷಣೆಗಾಗಿ, ಇದೆ ರೀತಿ ನಾವು ನಿರಂತರ ಜಾಗೃತರಾಗಿರಬೇಕು ಮತ್ತು ಜಾಗರೂಕರಾಗಿರಬೇಕು.
ನನ್ನ ಪ್ರಿಯ ದೇಶವಾಸಿಗಳೇ, ಎರಡು-ಮೂರು ದಿನಗಳ ಹಿಂದೆ, ನಾನು ಪ್ರಥಮ Rising North East ಶೃಂಗಸಭೆಗೆ ಹೋಗಿದ್ದೆ. ಅದಕ್ಕೂ ಮುನ್ನ ನಾವು ಈಶಾನ್ಯದ ಸಾಮರ್ಥ್ಯಕ್ಕೆ ಸಮರ್ಪಿತವಾದ 'ಅಷ್ಟಲಕ್ಷ್ಮಿ ಮಹೋತ್ಸವ'ವನ್ನು ಆಚರಿಸಿದ್ದೆವು. ಈಶಾನ್ಯ ಪ್ರದೇಶದ ವಿಶೇಷತೆಯೇ ಬೇರೆ; ಅದರ ಸಾಮರ್ಥ್ಯ, ಪ್ರತಿಭೆ ನಿಜಕ್ಕೂ ಅದ್ಭುತ. crafted fibers ಬಗ್ಗೆ ಒಂದು ಆಸಕ್ತಿದಾಯಕ ಕಥೆಯ ಬಗ್ಗೆ ನನಗೆ ತಿಳಿಯಿತು. ಕ್ರಾಫ್ಟೆಡ್ ಫೈಬರ್ಸ್ ಕೇವಲ ಒಂದು ಬ್ರಾಂಡ್ ಅಲ್ಲ, ಬದಲಾಗಿ ಸಿಕ್ಕಿಂನ ಸಂಪ್ರದಾಯ, ನೇಯ್ಗೆ ಕಲೆ ಮತ್ತು ಫ್ಯಾಷನ್ ಕುರಿತ ಇಂದಿನ ಚಿಂತನೆ, ಇ ಮೂರರ ಸುಂದರ ಸಮ್ಮಿಲನವಾಗಿದೆ. ಡಾ. ಚೆವಾಂಗ್ ನೋರ್ಬು ಭೂಟಿಯಾ ಇದನ್ನು ಪ್ರಾರಂಭಿಸಿದರು. ಅವರು ವೃತ್ತಿಯಲ್ಲಿ ಪಶುವೈದ್ಯರು ಆದರೆ ಅಂತಃಕರಣದಿಂದ ಸಿಕ್ಕಿಂ ಸಂಸ್ಕೃತಿಯ ನಿಜವಾದ ರಾಯಭಾರಿಯಾಗಿದ್ದಾರೆ. ನೇಯಿಗೆಗೆ ಹೊಸ ಆಯಾಮವನ್ನು ನೀಡಬಾರದೆ ಎಂಬ ಆಲೋಚನೆ ಅವರಲ್ಲಿ ಮೂಡಿತು! ಈ ಆಲೋಚನೆಯಿಂದ, ಕ್ರಾಫ್ಟೆಡ್ ಫೈಬರ್ಸ್ ಹುಟ್ಟಿಕೊಂಡಿತು. ಅವರು ಸಾಂಪ್ರದಾಯಿಕ ನೇಯ್ಗೆಯನ್ನು ಆಧುನಿಕ ಫ್ಯಾಷನ್ನೊಂದಿಗೆ ಸಂಯೋಜಿಸಿ ಅದನ್ನು ಸಾಮಾಜಿಕ ಉದ್ಯಮವನ್ನಾಗಿ ಮಾರ್ಪಡಿಸಿದರು. ಈಗ ಇಲ್ಲಿ ಕೇವಲ ವಸ್ತ್ರಗಳ ನೇಯ್ಗೆ ಮಾತ್ರವಲ್ಲ, ಜೀವನವನ್ನು ಕೂಡ ರೂಪಿಸಲಾಗುತ್ತಿದೆ. ಅವರು ಸ್ಥಳೀಯ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಾರೆ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಾರೆ. ಡಾ. ಭೂಟಿಯಾ ಗ್ರಾಮದ ನೇಕಾರರು, ಪಶುಪಾಲಕರು ಮತ್ತು ಸ್ವಸಹಾಯ ಗುಂಪುಗಳನ್ನು ಒಗ್ಗೂಡಿಸಿ, ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸಿದ್ದಾರೆ. ಇಂದು, ಸ್ಥಳೀಯ ಮಹಿಳೆಯರು ಮತ್ತು ಕುಶಲಕರ್ಮಿಗಳು ತಮ್ಮ ಕೌಶಲ್ಯದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. crafted fibers ನ ಶಾಲುಗಳು, ಸ್ಟೋಲ್ಗಳು, ಕೈಗವಸುಗಳು, ಸಾಕ್ಸ್ಗಳು, ಎಲ್ಲವೂ ಸ್ಥಳೀಯ ಕೈಮಗ್ಗಗಳಲ್ಲಿ ತಯಾರಿಸಲಾಗಿದ್ದು, ಇದರಲ್ಲಿ ಬಳಸಲಾಗುವ ಉಣ್ಣೆ ಸಿಕ್ಕಿಂನ ಮೊಲಗಳು ಮತ್ತು ಕುರಿಗಳಿಂದ ಪಡೆಯಲಾಗುತ್ತದೆ. ಬಣ್ಣಗಳು ಸಹ ಸಂಪೂರ್ಣವಾಗಿ ನೈಸರ್ಗಿಕವಾಗಿವೆ - ಯಾವುದೇ ರಾಸಾಯನಿಕಗಳಿಲ್ಲ, ಕೇವಲ ಪ್ರಾಕೃತಿಕ ಬಣ್ಣಗಳು. ಸಿಕ್ಕಿಂನ ಸಾಂಪ್ರದಾಯಿಕ ನೇಯ್ಗೆ ಮತ್ತು ಸಂಸ್ಕೃತಿಗೆ ಡಾ. ಭೂಟಿಯಾ ಹೊಸ ಸ್ಥಾನಮಾನ ನೀಡಿದ್ದಾರೆ. ಸಂಪ್ರದಾಯದೊಂದಿಗೆ ಉತ್ಸಾಹವನ್ನು ಸಂಯೋಜಿಸಿದಾಗ ಅದು ಜಗತ್ತನ್ನು ಎಷ್ಟು ಆಕರ್ಷಿಸಬಹುದು ಎಂಬುದನ್ನು ಡಾ. ಭೂಟಿಯಾ ಅವರ ಕೆಲಸ ನಮಗೆ ಕಲಿಸುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾನು ನಿಮಗೆ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಹೇಳಬಯಸುತ್ತೇನೆ, ಅವರು ಒಬ್ಬ ಕಲಾವಿದರು ಮತ್ತು ಸ್ಫೂರ್ತಿಯ ಸೆಲೆ. ಅವರ ಹೆಸರು - ಜೀವನ್ ಜೋಶಿ, ವಯಸ್ಸು 65 ವರ್ಷ. ಯಾರ ಹೆಸರಿನಲ್ಲಿಯೇ ಜೀವ ತುಂಬಿದೆಯೋ ಅವರು ಎಷ್ಟು ಚೈತನ್ಯದಿಂದ ತುಂಬಿರುತ್ತಾರೆ ಎಂಬುದನ್ನು ಊಹಿಸಿ. ಜೀವನ್ ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಲ್ಲಿ ಪೋಲಿಯೊದಿಂದಾಗಿ ಅವರ ಕಾಲುಗಳ ಬಲ ಕುಂದಿಹೋಯಿತು, ಆದರೆ ಪೋಲಿಯೊ ಅವರ ಧೈರ್ಯವನ್ನು ಕುಂದಿಸಲಾಗಲಿಲ್ಲ. ಅವರ ನಡಿಗೆಯ ವೇಗ ಕಡಿಮೆಯಾದರೂ, ಅವರ ಮನಸ್ಸು - ಕಲ್ಪನಾತೀತವಾಗಿ ಹಾರುತ್ತಲೇ ಇತ್ತು. ಈ ಹಾರಾಟದಲ್ಲಿಯೇ, ಜೀವನ್ ಅವರು 'ಬಗೆಟ್' ಎಂಬ ವಿಶಿಷ್ಟ ಕಲೆಗೆ ಜನ್ಮ ನೀಡಿದರು. ಇದರಲ್ಲಿ, ಅವರು ಪೈನ್ ಮರಗಳಿಂದ ಬೀಳುವ ಒಣ ತೊಗಟೆಯಿಂದ ಸುಂದರವಾದ ಕಲಾಕೃತಿಗಳನ್ನು ಮಾಡುತ್ತಾರೆ. ಜನರು ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಪರಿಗಣಿಸುವ ಆ ತೊಗಟೆ - ಜೀವನ್ ಅವರ ಕೈಗೆ ಬಂದ ಕೂಡಲೇ ಪರಂಪರೆಯಾಗಿ ಮಾರ್ಪಾಡಾಗುತ್ತದೆ. ಅವರ ಪ್ರತಿಯೊಂದು ಸೃಷ್ಟಿಯಲ್ಲೂ ಉತ್ತರಾಖಂಡ್ ನ ಮಣ್ಣಿನ ಸೊಬಗಿದೆ. ಕೆಲವೊಮ್ಮೆ ಅದು ಪರ್ವತಗಳ ಜಾನಪದ ವಾದ್ಯಗಳಾಗಿ ರೂಪುಗೊಂಡರೆ, ಮತ್ತು ಕೆಲವೊಮ್ಮೆ ಪರ್ವತಗಳ ಆತ್ಮವೇ ಆ ಕಲಾಕೃತಿಯಲ್ಲಿ ಅವತರಿಸಿದಂತೆ ಭಾಸವಾಗುತ್ತದೆ. ಜೀವನ್ ಅವರ ಕೆಲಸ ಕೇವಲ ಒಂದು ಕಲೆ ಮಾತ್ರವಲ್ಲ, ಅದೊಂದು ಸಾಧನೆಯಾಗಿದೆ. ಅವರು ತಮ್ಮ ಇಡೀ ಜೀವನವನ್ನು ಈ ಕಲೆಗೆ ಮುಡಿಪಾಗಿಟ್ಟಿದ್ದಾರೆ. ಜೀವನ್ ಜೋಶಿಯವರಂತಹ ಕಲಾವಿದರು, ಎಂತಹದೇ ಪರಿಸ್ಥಿತಿಯಿರಲಿ, ಉದ್ದೇಶ ಬಲವಾಗಿದ್ದರೆ, ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಮಗೆ ನೆನಪಿಸುತ್ತಾರೆ. ಅವರ ಹೆಸರು ಜೀವನ್ ಮತ್ತು ಅವರು ಜೀವನ ನಡೆಸುವುದರ ಅರ್ಥವನ್ನು ನಿಜವಾಗಿಯೂ ತೋರಿಸಿಕೊಟ್ಟಿದ್ದಾರೆ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ಹೊಲಗದ್ದೆಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಆಕಾಶದೆತ್ತರದಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರಿದ್ದಾರೆ. ಹೌದು ! ನೀವು ಸರಿಯಾಗಿ ಕೇಳಿದ್ದೀರಿ, ಈಗ ಗ್ರಾಮದ ಮಹಿಳೆಯರು ಡ್ರೋನ್ ದೀದಿಗಳಾಗಿದ್ದಾರೆ ಮತ್ತು ಡ್ರೋನ್ಗಳನ್ನು ಹಾರಿಸುತ್ತಿದ್ದಾರೆ ಮತ್ತು ಕೃಷಿಯಲ್ಲಿ ಹೊಸ ಕ್ರಾಂತಿಯನ್ನು ತರುತ್ತಿದ್ದಾರೆ.
ಸ್ನೇಹಿತರೇ, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ, ಕೆಲ ಸಮಯದ ಹಿಂದೆ ಇತರರನ್ನು ಅವಲಂಬಿಸಬೇಕಾಗಿದ್ದ ಮಹಿಳೆಯರು, ಇಂದು ಡ್ರೋನ್ ಸಹಾಯದಿಂದ 50 ಎಕರೆ ಭೂಮಿಯಲ್ಲಿ ಔಷಧಿ ಸಿಂಪಡಿಸುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ. ಬೆಳಿಗ್ಗೆ ಮೂರು ಗಂಟೆ, ಸಂಜೆ ಎರಡು ಗಂಟೆ ಮತ್ತು ಕೆಲಸ ಮಾಡಿದರೆ ಆಯ್ತು. ಬಿಸಿಲಿಗೆ ಬೇಯಬೇಕಿಲ್ಲ, ವಿಷಕಾರಿ ರಾಸಾಯನಿಕಗಳ ಅಪಾಯವಿಲ್ಲ. ಸ್ನೇಹಿತರೇ, ಗ್ರಾಮಸ್ಥರು ಕೂಡ ಈ ಬದಲಾವಣೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದಾರೆ. ಈಗ ಈ ಮಹಿಳೆಯರನ್ನು 'ಡ್ರೋನ್ ಆಪರೇಟರ್ಗಳು' ಎಂದು ಕರೆಯಲಾಗುವುದಿಲ್ಲ, ಬದಲಿಗೆ ‘sky warriors’ ಎಂದು ಕರೆಯಲಾಗುತ್ತದೆ. ತಂತ್ರಜ್ಞಾನ ಮತ್ತು ದೃಢಸಂಕಲ್ಪ ಒಗ್ಗೂಡಿದಾಗ ಬದಲಾವಣೆ ಸಂಭವಿಸುತ್ತದೆ ಎಂದು ಈ ಮಹಿಳೆಯರು ನಿರೂಪಿಸಿದ್ದಾರೆ.
ನನ್ನ ಪ್ರಿಯ ದೇಶವಾಸಿಗಳೇ, 'ಅಂತಾರಾಷ್ಟ್ರೀಯ ಯೋಗ ದಿನ' ಕ್ಕೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ನೀವು ಇನ್ನೂ ಯೋಗಾಭ್ಯಾಸದಿಂದ ದೂರವಿದ್ದರೆ ಕೂಡಲೇ ಯೋಗಾಭ್ಯಾಸ ಆರಂಭಿಸಿ ಎಂಬುದನ್ನು ಈ ಸಂದರ್ಭ ನಮಗೆ ನೆನಪಿಸುತ್ತದೆ. ಯೋಗಾಭ್ಯಾಸ ನಿಮ್ಮ ಜೀವನದ ವಿಧಾನವನ್ನು ಬದಲಾಯಿಸುತ್ತದೆ. ಸ್ನೇಹಿತರೇ, ಜೂನ್ 21, 2015 ರಂದು 'ಯೋಗ ದಿನ' ಪ್ರಾರಂಭವಾದಾಗಿನಿಂದ, ಅದರ ಆಕರ್ಷಣೆ ನಿರಂತರವಾಗಿ ವೃದ್ಧಿಸುತ್ತಿದೆ. ಈ ವರ್ಷವೂ ಸಹ, 'ಯೋಗ ದಿನ'ದ ಬಗ್ಗೆ ಪ್ರಪಂಚದಾದ್ಯಂತದ ಜನರ ಉತ್ಸಾಹ ಮತ್ತು ಹುಮ್ಮಸ್ಸು ಕಂಡುಬರುತ್ತಿದೆ. ವಿವಿಧ ಸಂಸ್ಥೆಗಳು ತಮ್ಮ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಕಳೆದ ವರ್ಷಗಳ ಫೋಟೋಗಳು ನನಗೆ ತುಂಬಾ ಸ್ಫೂರ್ತಿ ನೀಡಿವೆ. ಕೆಲವು ವರ್ಷಗಳಲ್ಲಿ, ವಿವಿಧ ದೇಶಗಳಲ್ಲಿ, ಜನರು ಯೋಗ ಸರಪಳಿ ಮತ್ತು Yoga Ring ತಯಾರಿಸಿರುವುದನ್ನು ನಾವು ನೋಡಿದ್ದೇವೆ. ನಾಲ್ಕು ತಲೆಮಾರುಗಳು ಒಟ್ಟಿಗೆ ಯೋಗಾಭ್ಯಾಸ ಮಾಡುತ್ತಿರುವ ಇಂತಹ ಅನೇಕ ಚಿತ್ರಗಳಿವೆ. ಅನೇಕ ಜನರು ಯೋಗಾಭ್ಯಾಸಕ್ಕಾಗಿ ತಮ್ಮ ನಗರದ ಪ್ರತಿಷ್ಠಿತ ಸ್ಥಳಗಳನ್ನು ಆರಿಸಿಕೊಂಡರು. ಈ ಬಾರಿ ನೀವು ಕೂಡ ಯೋಗ ದಿನವನ್ನು ಆಸಕ್ತಿದಾಯಕ ರೀತಿಯಲ್ಲಿ ಆಚರಿಸುವ ಬಗ್ಗೆ ಚಿಂತಿಸಬಹುದು.
ಸ್ನೇಹಿತರೇ, ಆಂಧ್ರಪ್ರದೇಶ ಸರ್ಕಾರ ಯೋಗಆಂಧ್ರ (YogAndhra) ಅಭಿಯಾನವನ್ನು ಪ್ರಾರಂಭಿಸಿದೆ. ಇಡೀ ರಾಜ್ಯದಲ್ಲಿ ಯೋಗ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಈ ಅಭಿಯಾನದ ಅಡಿಯಲ್ಲಿ, 10 ಲಕ್ಷ ಯೋಗ ಸಾಧಕರ ಗುಂಪನ್ನು ರಚಿಸಲಾಗುತ್ತಿದೆ. ಈ ವರ್ಷ, ವಿಶಾಖಪಟ್ಟಣದಲ್ಲಿ ನಡೆಯುವ 'ಯೋಗ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ದೊರೆಯಲಿದೆ. ಈ ಬಾರಿಯೂ ನಮ್ಮ ಯುವ ಸ್ನೇಹಿತರು ದೇಶದ ಪರಂಪರೆಗೆ ಸಂಬಂಧಿಸಿದ ಪ್ರತಿಷ್ಠಿತ ಸ್ಥಳಗಳಲ್ಲಿ ಯೋಗಾಭ್ಯಾಸ ಮಾಡಲಿದ್ದಾರೆ ಎಂದು ತಿಳಿದು ನನಗೆ ಬಹಳ ಸಂತೋಷವಾಗಿದೆ. ಅನೇಕ ಯುವಕರು ಹೊಸ ದಾಖಲೆಗಳನ್ನು ಸೃಷ್ಟಿಸಲು ಮತ್ತು ಯೋಗ ಸರಪಳಿಯ ಭಾಗವಾಗುವ ಪ್ರತಿಜ್ಞೆ ಕೈಗೊಂಡಿದ್ದಾರೆ. ನಮ್ಮ ಕಾರ್ಪೋರೇಟ್ ಗಳು ಕೂಡಾ ಈ ವಿಷಯದಲ್ಲಿ ಹಿಂದೆ ಉಳಿದಿಲ್ಲ. ಕೆಲವು ಸಂಸ್ಥೆಗಳು ತಮ್ಮ ಕಚೇರಿಗಳಲ್ಲೇ ಯೋಗಾಭ್ಯಾಸಕ್ಕಾಗಿ ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿವೆ. ಕೆಲವು ನವೋದಯಗಳು 'ಕಚೇರಿ ಯೋಗ ಸಮಯ' ಗಳನ್ನು ನಿಗದಿಪಡಿಸಿವೆ. ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಯೋಗ ಕಲಿಸಲು ತಯಾರಿ ನಡೆಸುತ್ತಿರುವ ಜನರೂ ಇದ್ದಾರೆ. ಆರೋಗ್ಯ ಮತ್ತು ದೇಹದಾರ್ಢ್ಯತೆ ಬಗ್ಗೆ ಜನರ ಈ ತಿಳುವಳಿಕೆ ನನಗೆ ಅತೀವ ಸಂತಸ ನೀಡುತ್ತದೆ.
ಸ್ನೇಹಿತರೆ, ‘ಯೋಗ ದಿವಸ್’ ಜೊತೆಗೇ ಆಯುರ್ವೇದ ಕ್ಷೇತ್ರದಲ್ಲಿ ಬಹಳಷ್ಟು ನಡೆಯುತ್ತಿದ್ದು, ಇವುಗಳ ಕುರಿತು ಅರಿತಾಗ ನಿಮಗೆ ಕೂಡಾ ಬಹಳ ಸಂತೋಷವಾಗುತ್ತದೆ. ನಿನ್ನೆ ಅಂದರೆ ಮೇ 24ರಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರು ಹಾಗೂ ನನ್ನ ಮಿತ್ರ ತುಳಸೀ ಅವರ ಸಮ್ಮುಖದಲ್ಲಿ ಒಂದು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದೊಂದಿಗೇ International Classification of Health Interventions ಅಡಿಯಲ್ಲಿ ಒಂದು ಮೀಸಲಾದ ಸಾಂಪ್ರದಾಯಿಕ ಔಷಧ ಮಾಡ್ಯೂಲ್ ಕುರಿತಂತೆ ಕೂಡಾ ಕೆಲಸ ಆರಂಭವಾಗಿದೆ. ಈ ಉಪಕ್ರಮದಿಂದ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರಿಗೆ ವೈಜ್ಞಾನಿಕ ರೀತಿಯಲ್ಲಿ ಆಯುಷ್ ಗೆ ಅವಕಾಶ ದೊರೆಯಲು ಸಹಾಯವಾಗುತ್ತದೆ.
ಸ್ನೇಹಿತರೆ, ನೀವು ಶಾಲೆಯಲ್ಲಿ ಕಪ್ಪು ಹಲಗೆ ಅಂದರೆ ಬ್ಲ್ಯಾಕ್ ಬೋರ್ಡ್ ನೋಡಿಯೇ ಇರುತ್ತೀರಿ, ಆದರೆ ಈಗ ಕೆಲವು ಶಾಲೆಗಳಲ್ಲಿ ‘sugar board’ ಕೂಡಾ ಹಾಕಲಾಗುತ್ತಿದೆ blackboard ಅಲ್ಲ sugar board ! ಮಕ್ಕಳಿಗೆ ಅವರ ಸಕ್ಕರೆ ಸೇವನೆ ಬಗ್ಗೆ ಜಾಗೃತಿ ಮೂಡಿಸುವುದು CBSE ದ ಈ ವಿಶಿಷ್ಠ ಉಪಕ್ರಮದ ಉದ್ದೇಶವಾಗಿದೆ. ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಲಾಗುತ್ತಿದೆ ಎಂಬುದನ್ನು ಮಕ್ಕಳು ಅರಿತು, ಸ್ವತಃ ಆರೋಗ್ಯಕರ ಆಯ್ಕೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಇದೊಂದು ವಿಶಿಷ್ಠ ಪ್ರಯತ್ನವಾಗಿದೆ ಮತ್ತು ಇದರ ಪ್ರಭಾವ ಕೂಡ ಬಹಳ ಸಕಾರಾತ್ಮಕವಾಗಿರುತ್ತದೆ. ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯ ಅಭ್ಯಾಸ ಮಾಡಿಕೊಳ್ಳವ ನಿಟ್ಟಿನಲ್ಲಿ ಇದು ಅತ್ಯಂತ ಸಹಾಯಕವೆಂದು ಸಾಬೀತಾಗಬಹುದು. ಅನೇಕ ಪೋಷಕರು ಇದನ್ನು ಪ್ರಶಂಸಿಸಿದ್ದಾರೆ ಮತ್ತು ಇಂತಹ ಉಪಕ್ರಮಗಳನ್ನು ಕಚೇರಿಗಳು, ಕ್ಯಾಂಟೀನ್ ಗಳು ಮತ್ತು ಸಂಸ್ಥೆಗಳಲ್ಲಿಯೂ ಕೂಡಾ ಕೈಗೊಳ್ಳಬೇಕು ಎಂದು ನಾನು ನಂಬುತ್ತೇನೆ. ಅಂತಿಮವಾಗಿ ಆರೋಗ್ಯವಿದ್ದರಷ್ಟೇ ಎಲ್ಲವೂ ಇರುತ್ತದೆ. ಫಿಟ್ ಇಂಡಿಯಾ ಬಲಿಷ್ಠ ಭಾರತದ ಅಡಿಪಾಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಚ್ಛ ಭಾರತದ ಬಗ್ಗೆ ಮಾತನಾಡುವಾಗ, ಮನದ ಮಾತಿನ ಶ್ರೋತೃಗಳು ಹಿಂದೆ ಉಳಿಯುವುದು ಹೇಗೆ ಸಾಧ್ಯ? ನೀವೆಲ್ಲರೂ ನಿಮ್ಮ ಸ್ವಂತ ಮಟ್ಟದಲ್ಲಿ ಈ ಅಭಿಯಾನವನ್ನು ಬಲಪಡಿಸುತ್ತಿದ್ದೀರಿ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಆದರೆ ಇಂದು ನಾನು ನಿಮಗೆ ಸ್ವಚ್ಛತೆಯ ಸಂಕಲ್ಪವು ಪರ್ವತದಂತಹ ಸವಾಲುಗಳನ್ನು ಕೂಡಾ ಪರಾಭವಗೊಳಿಸಿದೆ ಎಂಬ ಉದಾಹರಣೆಯ ಕುರಿತು ಹೇಳಲು ಬಯಸುತ್ತೇನೆ. ಉಸಿರಾಡಲು ಕಷ್ಟವಾಗುವ ಹಿಮಭರಿತ ಪರ್ವತಗಳನ್ನು ಹತ್ತುತ್ತಿರುವ ವ್ಯಕ್ತಿಯನ್ನು ಊಹಿಸಿಕೊಳ್ಳಿ, ಪ್ರತಿ ಹೆಜ್ಜೆಯಲ್ಲೂ ಜೀವಕ್ಕೆ ಅಪಾಯವಿರುತ್ತದೆ ಮತ್ತು ಆ ವ್ಯಕ್ತಿ ಅಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತನಾಗಿದ್ದಾನೆ. ನಮ್ಮ ಐಟಿಬಿಪಿ (ITBP) ತಂಡದ ಸದಸ್ಯರು ಇದೇ ರೀತಿಯ ಕೆಲಸವನ್ನು ಮಾಡಿದ್ದಾರೆ. ಈ ತಂಡವು ವಿಶ್ವದ ಅತ್ಯಂತ ಕಷ್ಟಕರವಾದ ಶಿಖರ ಎನಿಸಿದ ಮೌಂಟ್ ಮಕಾಲು ಅನ್ನು ಏರಲು ಹೋಗಿತ್ತು. ಆದರೆ ಸ್ನೇಹಿತರೇ, ಅವರು ಕೇವಲ ಪರ್ವತ ಏರುವುದು ಮಾತ್ರವಲ್ಲ, ತಮ್ಮ ಗುರಿಗೆ 'ಸ್ವಚ್ಛತೆ'ಯ ಮತ್ತೊಂದು ಧ್ಯೇಯವನ್ನೂ ಅವರು ಸೇರಿಸಿದರು. ಶಿಖರದ ಬಳಿ ಬಿದ್ದಿದ್ದ ಕಸವನ್ನು ತೆಗೆದುಹಾಕಲು ಅವರು ಉಪಕ್ರಮವನ್ನು ಕೈಗೊಂಡರು. ಊಹಿಸಿ ನೋಡಿ, ಈ ತಂಡದ ಸದಸ್ಯರು 150 ಕಿಲೋಗಿಂತ ಅಧಿಕ ಪ್ರಮಾಣ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ತಮ್ಮೊಂದಿಗೆ ತಂದರು. ಅಷ್ಟು ಎತ್ತರದಲ್ಲಿ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಆದರೆ ದೃಢನಿಶ್ಚಯ ಇದ್ದಲ್ಲಿ, ಮಾರ್ಗ ತಾನೇ ತಾನಾಗಿ ತೆರೆದುಕೊಳ್ಳುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.
ಸ್ನೇಹಿತರೇ, ಇದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಷಯವೂ ಇದೆ – ಅದೇ ಕಾಗದದ ತ್ಯಾಜ್ಯ ಮತ್ತು ಮರುಬಳಕೆ. ಪ್ರತಿದಿನ ನಮ್ಮ ಮನೆಗಳು ಮತ್ತು ಕಚೇರಿಗಳಲ್ಲಿ ಬಹಳಷ್ಟು ಕಾಗದದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬಹುಶಃ, ಇದನ್ನು ನಾವು ಸರ್ವೇ ಸಾಮಾನ್ಯ ಎಂಬಂತೆ ಪರಿಗಣಿಸುತ್ತೇವೆ, ಆದರೆ ದೇಶದ ಲ್ಯಾಂಡ್ ಫಿಲ್ ತ್ಯಾಜ್ಯದ ಸುಮಾರು ಕಾಲು ಭಾಗ ಕಾಗದಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯವಿದೆ. ಭಾರತದಲ್ಲಿ ಅನೇಕ ನವೋದ್ಯಮಗಳು ಈ ವಲಯದಲ್ಲಿ ಉತ್ತಮ ಕೆಲಸ ಮಾಡುತ್ತಿವೆ ಎಂದು ತಿಳಿದು ನನಗೆ ಸಂತೋಷವಾಗಿದೆ. ವಿಶಾಖಪಟ್ಟಣಂ, ಗುರುಗ್ರಾಮದಂತಹ ಅನೇಕ ನಗರಗಳಲ್ಲಿನ ಅನೇಕ ನವೋದ್ಯಮಗಳು ಕಾಗದ ಮರುಬಳಕೆಯ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಕೆಲವು ಮರುಬಳಕೆಯ ಕಾಗದದಿಂದ ಪ್ಯಾಕೇಜಿಂಗ್ ಬೋರ್ಡ್ ಗಳನ್ನು ತಯಾರಿಸುತ್ತಿವೆ, ಕೆಲವು ಡಿಜಿಟಲ್ ವಿಧಾನಗಳ ಮೂಲಕ ವೃತ್ತಪತ್ರಿಕೆ ಮರುಬಳಕೆಯನ್ನು ಸುಲಭಗೊಳಿಸುತ್ತಿವೆ. ಜಾಲ್ನಾದಂತಹ ನಗರಗಳಲ್ಲಿ ಕೆಲವು ನವೋದ್ಯಮಗಳು 100 ಪ್ರತಿಶತ ಮರುಬಳಕೆಯ ವಸ್ತುಗಳಿಂದ ಪ್ಯಾಕೇಜಿಂಗ್ ರೋಲ್ ಗಳು ಮತ್ತು ಪೇಪರ್ ಕೋರ್ ಗಳನ್ನು ತಯಾರಿಸುತ್ತಿವೆ. ಒಂದು ಟನ್ ಕಾಗದವನ್ನು ಮರುಬಳಕೆ ಮಾಡುವುದರಿಂದ 17 ಮರಗಳನ್ನು ಕಡಿಯುವುದನ್ನು ತಡೆಯಬಹುದು ಮತ್ತು ಸಾವಿರಾರು ಲೀಟರ್ ನೀರು ಉಳಿಸಬಹುದು ಎಂದು ತಿಳಿದರೆ ನಿಮಗೆ ಸ್ಫೂರ್ತಿ ದೊರೆಯುತ್ತದೆ. ಈಗ ಯೋಚಿಸಿ, ಪರ್ವತಾರೋಹಿಗಳು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಕಸವನ್ನು ಮರಳಿ ತರಬಹುದಾದಾದರೆ, ನಾವು ಕೂಡ ನಮ್ಮ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಕಾಗದವನ್ನು ಬೇರ್ಪಡಿಸುವ ಮೂಲಕ ಮರುಬಳಕೆಗೆ ಕೊಡುಗೆ ನೀಡಬಹುದಲ್ಲವೇ. ದೇಶದ ಪ್ರತಿಯೊಬ್ಬ ನಾಗರಿಕನು ದೇಶಕ್ಕೆ ನಾನು ಏನು ಉತ್ತಮವಾಗಿ ಮಾಡಬಹುದು ಎಂದು ಯೋಚಿಸಿದಾಗ ಮಾತ್ರ, ನಾವು ಒಟ್ಟಾಗಿ ದೊಡ್ಡ ಬದಲಾವಣೆಯನ್ನು ತರಬಹುದು.
ಸ್ನೇಹಿತರೇ, ಇತ್ತೀಚೆಗೆ ಖೇಲೋ ಇಂಡಿಯಾ ಕ್ರೀಡಾಕೂಟವು ದೊಡ್ಡ ಯಶಸ್ಸನ್ನು ಕಂಡಿದೆ. ಬಿಹಾರದ ಐದು ನಗರಗಳು ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಆಯೋಜಿಸಿದ್ದವು. ಅಲ್ಲಿ ವಿವಿಧ ವಿಭಾಗಗಳಲ್ಲಿ ಪಂದ್ಯಗಳು ನಡೆದವು. ಭಾರತದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಅಲ್ಲಿಗೆ ತಲುಪಿದ್ದರು. ಈ ಕ್ರೀಡಾಪಟುಗಳು ಬಿಹಾರದ ಕ್ರೀಡಾ ಮನೋಭಾವ ಮತ್ತು ಬಿಹಾರದ ಜನರ ಬಗ್ಗೆ ಅವರು ತೋರಿಸಿದ ಆತ್ಮೀಯತೆಯನ್ನು ಶ್ಲಾಘಿಸಿದ್ದಾರೆ.
ಸ್ನೇಹಿತರೇ, ಬಿಹಾರದ ಭೂಮಿ ತುಂಬಾ ವಿಶೇಷವಾಗಿದೆ, ಈ ಕಾರ್ಯಕ್ರಮದಲ್ಲಿ ಇಲ್ಲಿ ಅನೇಕ ವಿಶಿಷ್ಟ ಘಟನೆಗಳು ನಡೆದವು. ಇದು ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಮೊದಲ ಕಾರ್ಯಕ್ರಮವಾಗಿದ್ದು, ಇದು ಒಲಿಂಪಿಕ್ ಚಾನೆಲ್ ಮೂಲಕ ಇಡೀ ಜಗತ್ತನ್ನು ತಲುಪಿತು. ಪ್ರಪಂಚದಾದ್ಯಂತದ ಜನರು ನಮ್ಮ ಯುವ ಆಟಗಾರರ ಪ್ರತಿಭೆಯನ್ನು ನೋಡಿ ಮೆಚ್ಚಿದರು. ಎಲ್ಲಾ ಪದಕ ವಿಜೇತರನ್ನು, ವಿಶೇಷವಾಗಿ ಅಗ್ರ ಮೂರು ವಿಜೇತ ರಾಜ್ಯಗಳನ್ನು - ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನವನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ, ಈ ಬಾರಿ ಖೇಲೋ ಇಂಡಿಯಾದಲ್ಲಿ ಒಟ್ಟು 26ದಾಖಲೆಗಳು ನಿರ್ಮಾಣವಾಗಿವೆ. ಭಾರ ಎತ್ತುವ ಸ್ಪರ್ಧೆಗಳಲ್ಲಿ, ಮಹಾರಾಷ್ಟ್ರದ ಅಸ್ಮಿತಾ ಧೋನೆ, ಒಡಿಶಾದ ಹರ್ಷವರ್ಧನ್ ಸಾಹು ಮತ್ತು ಉತ್ತರ ಪ್ರದೇಶದ ತುಷಾರ್ ಚೌಧರಿ ಅವರ ಅತ್ಯುತ್ತಮ ಪ್ರದರ್ಶನ ಎಲ್ಲರ ಹೃದಯ ಗೆದ್ದಿತು. ಮಹಾರಾಷ್ಟ್ರದ ಸಾಯಿರಾಜ್ ಪರದೇಸಿ ಮೂರು ದಾಖಲೆಗಳನ್ನು ಬರೆದರು. ಅಥ್ಲೆಟಿಕ್ಸ್ ನಲ್ಲಿ, ಉತ್ತರ ಪ್ರದೇಶದ ಖಾದಿರ್ ಖಾನ್ ಮತ್ತು ಶೇಖ್ ಜೀಶನ್ ಮತ್ತು ರಾಜಸ್ಥಾನದ ಹಂಸರಾಜ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಬಾರಿ ಬಿಹಾರ ಕೂಡ 36 ಪದಕಗಳನ್ನು ಗೆದ್ದಿದೆ. ಸ್ನೇಹಿತರೇ, ಆಡುವವನು ಅರಳುತ್ತಾನೆ. ಪಂದ್ಯಾವಳಿಯು ಯುವ ಕ್ರೀಡಾ ಪ್ರತಿಭೆಗಳಿಗೆ ಬಹಳಷ್ಟು ಅರ್ಥವನ್ನು ನೀಡುತ್ತದೆ. ಇಂತಹ ಘಟನೆಗಳು ಭಾರತೀಯ ಕ್ರೀಡೆಗಳ ಭವಿಷ್ಯವನ್ನು ಮತ್ತಷ್ಟು ಬೆಳಗಿಸುತ್ತವೆ.
ನನ್ನ ಪ್ರೀತಿಯ ದೇಶವಾಸಿಗಳೇ. ಮೇ 20 ಅನ್ನು 'ವಿಶ್ವ ಜೇನುನೊಣ ದಿನ' ಎಂದು ಆಚರಿಸಲಾಯಿತು, ಈ ದಿನ ಜೇನುತುಪ್ಪವು ಕೇವಲ ಸಿಹಿ ಮಾತ್ರವಲ್ಲ, ಆರೋಗ್ಯ, ಸ್ವ-ಉದ್ಯೋಗ ಮತ್ತು ಸ್ವಾವಲಂಬನೆಯ ಉದಾಹರಣೆಯಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಕಳೆದ 11 ವರ್ಷಗಳಲ್ಲಿ, ಭಾರತದಲ್ಲಿ ಜೇನು ಸಾಕಣೆಯಲ್ಲಿ ಒಂದು ಸಿಹಿ ಕ್ರಾಂತಿ ನಡೆದಿದೆ. 10-11 ವರ್ಷಗಳ ಹಿಂದೆ, ಭಾರತದ ಜೇನುತುಪ್ಪದ ಉತ್ಪಾದನೆಯು ಒಂದು ವರ್ಷದಲ್ಲಿ ಸುಮಾರು 70-75 ಸಾವಿರ ಮೆಟ್ರಿಕ್ ಟನ್ ಗಳಷ್ಟಿತ್ತು. ಇಂದು, ಇದು ಸರಿ ಸುಮಾರು ಒಂದೂ ಕಾಲು ಲಕ್ಷ ಮೆಟ್ರಿಕ್ ಟನ್ ಗಳಷ್ಟು ಆಗಿದೆ. ಇದರರ್ಥ ಜೇನುತುಪ್ಪದ ಉತ್ಪಾದನೆಯು ಸುಮಾರು ಶೇಕಡಾ 60ರಷ್ಟು ಹೆಚ್ಚಾಗಿದೆ. ನಾವು ಜೇನುತುಪ್ಪದ ಉತ್ಪಾದನೆ ಮತ್ತು ರಫ್ತಿನಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದೆನಿಸಿದ್ದೇವೆ. ಸ್ನೇಹಿತರೇ, 'ರಾಷ್ಟ್ರೀಯ ಜೇನುಸಾಕಣೆ' ಮತ್ತು 'ಜೇನು ಮಿಷನ್' ಈ ಸಕಾರಾತ್ಮಕ ಪರಿಣಾಮದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಅಡಿಯಲ್ಲಿ, ಜೇನು ಸಾಕಣೆಗೆ ಸಂಬಂಧಿಸಿದ ಸಾವಿರಾರು ರೈತರಿಗೆ ತರಬೇತಿ ಹಾಗೂ, ಉಪಕರಣಗಳನ್ನು ನೀಡಲಾಯಿತು ಮತ್ತು ಅವರಿಗೆ ಮಾರುಕಟ್ಟೆಗೆ ನೇರ ಪ್ರವೇಶವನ್ನು ಸೃಷ್ಟಿಸಲಾಯಿತು.
ಸ್ನೇಹಿತರೇ, ಈ ಬದಲಾವಣೆ ಕೇವಲ ಅಂಕಿಅಂಶಗಳಲ್ಲಿ ಗೋಚರಿಸುವುದು ಮಾತ್ರವಲ್ಲ, ಹಳ್ಳಿಯ ನೆಲದಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಛತ್ತೀಸ್ ಗಢದ ಕೊರಿಯಾ ಜಿಲ್ಲೆಯಲ್ಲಿ ಇಂತಹ ಉದಾಹರಣೆ ಇದೆ, ಅಲ್ಲಿ ಬುಡಕಟ್ಟು ರೈತರು 'ಸೋನ್ ಹನಿ' ಎಂಬ ಶುದ್ಧ ಸಾವಯವ ಜೇನುತುಪ್ಪದ ಬ್ರಾಂಡ್ ಅನ್ನು ರಚಿಸಿದ್ದಾರೆ. ಇಂದು ಆ ಜೇನುತುಪ್ಪವನ್ನು ಜಿಇಎಂ (GEM) ಸೇರಿದಂತೆ ಅನೇಕ ಆನ್ ಲೈನ್ ಪೋರ್ಟಲ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ, ಅಂದರೆ ಹಳ್ಳಿಯ ಕಠಿಣ ಪರಿಶ್ರಮ ಈಗ ಜಾಗತಿಕ ಮಟ್ಟದಲ್ಲಿದೆ. ಅದೇ ರೀತಿ, ಉತ್ತರ ಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದ ಸಾವಿರಾರು ಮಹಿಳೆಯರು ಮತ್ತು ಯುವಕರು ಈಗ ಜೇನುತುಪ್ಪದ ಉದ್ಯಮಿಗಳಾಗಿದ್ದಾರೆ. ಸ್ನೇಹಿತರೇ, ಈಗ ಜೇನುತುಪ್ಪದ ಪ್ರಮಾಣದ ಮೇಲೆ ಮಾತ್ರವಲ್ಲದೆ ಅದರ ಶುದ್ಧತೆಯ ಮೇಲೂ ಕೆಲಸ ಮಾಡಲಾಗುತ್ತಿದೆ. ಕೆಲವು ನವೋದ್ಯಮಗಳು ಈಗ ಜೇನುತುಪ್ಪದ ಗುಣಮಟ್ಟವನ್ನು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನದೊಂದಿಗೆ ಪ್ರಮಾಣೀಕರಿಸುತ್ತಿವೆ. ಮುಂದಿನ ಬಾರಿ ನೀವು ಜೇನುತುಪ್ಪವನ್ನು ಖರೀದಿಸಿದಾಗ, ಈ ಜೇನುತುಪ್ಪದ ಉದ್ಯಮಿಗಳು ತಯಾರಿಸಿದ ಜೇನುತುಪ್ಪವನ್ನು ಪ್ರಯತ್ನಿಸಿ ನೋಡಿ, ಸ್ಥಳೀಯ ರೈತರು, ಮಹಿಳಾ ಉದ್ಯಮಿಗಳಿಂದ ಜೇನುತುಪ್ಪವನ್ನು ಖರೀದಿಸಲು ಪ್ರಯತ್ನಿಸಿ. ಏಕೆಂದರೆ ಅದರ ಪ್ರತಿ ಹನಿಯೂ ರುಚಿಯನ್ನು ಮಾತ್ರವಲ್ಲದೆ ಭಾರತದ ಕಠಿಣ ಪರಿಶ್ರಮ ಮತ್ತು ಭರವಸೆಯನ್ನು ಸಹ ಹೊಂದಿದೆ. ಈ ಜೇನುತುಪ್ಪದ ಮಾಧುರ್ಯವು ಸ್ವಾವಲಂಬಿ ಭಾರತದ ರುಚಿಯಾಗಿದೆ.
ಸ್ನೇಹಿತರೇ, ಜೇನಿಗೆ ಸಂಬಂಧಿಸಿದಂತೆ ದೇಶಗಳ ಪ್ರಯತ್ನಗಳ ಬಗ್ಗೆ ನಾವು ಮಾತನಾಡುವಾಗ, ಮತ್ತೊಂದು ಉಪಕ್ರಮದ ಬಗ್ಗೆ ನಿಮಗೆ ಹೇಳಲು ನಾನು ಬಯಸುತ್ತೇನೆ. ಜೇನ್ನೊಣಗಳನ್ನು ರಕ್ಷಿಸಬೇಕಾಗಿರುವುದು ಕೇವಲ ನಮ್ಮ ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ಹೊಲಗಳು ಭವಿಷ್ಯದ ಪೀಳಿಗೆಯ ಜವಾಬ್ದಾರಿಯೂ ಹೌದು ಎನ್ನುವುದುನ್ನು ಇದು ನಮಗೆ ನೆನಪಿಸುತ್ತದೆ. ಇದು ಪುಣೆ ನಗರದ ಒಂದು ಉದಾಹರಣೆಯಾಗಿದೆ, ಅಲ್ಲಿ ಒಂದು ವಸತಿ ಸಮುಚ್ಛಯದಲ್ಲಿ ಒಂದು ಜೇನುಗೂಡನ್ನು ತೆಗೆದುಹಾಕಲಾಯಿತು. ಬಹುಶಃ ಸುರಕ್ಷತೆ ಅಥವಾ ಭಯ ಇದಕ್ಕೆ ಕಾರಣವಿರಬಹುದು. ಆದರೆ ಈ ಘಟನೆಯು ಕೆಲವರಿಗೆ ಯೋಚಿಸುವಂತೆ ಮಾಡಿತು. ಅಮಿತ್ ಎಂಬ ಹೆಸರಿನ ಯುವಕ, ಜೇನ್ನೊಣಗಳನ್ನು ತೊಲಗಿಸಬಾರದು ಅವುಗಳನ್ನು ರಕ್ಷಿಸಬೇಕೆಂದು ನಿರ್ಧರಿಸಿದರು. ಅವರು ಸ್ವತಃ ಜೇನ್ನೊಣಗಳ ಬಗ್ಗೆ ಅರಿತರು, ಅವುಗಳ ಬಗ್ಗೆ ಸಂಶೋಧನೆ ಮಾಡಿದರು ಮತ್ತು ಇತರರನ್ನೂ ಅದರಲ್ಲಿ ಸೇರಿಸಿಕೊಳ್ಳಲು ಆರಂಭಿಸಿದರು. ಕ್ರಮೇಣ ಅವರು ಒಂದು ತಂಡ ರಚಿಸಿದರು ಮತ್ತು ಆ ತಂಡಕ್ಕೆ Bee Friends ಅಂದರೆ ಜೇನ್ನೊಣ ಮಿತ್ರ ಎಂದು ಹೆಸರಿಟ್ಟರು. ಈಗ ಈ Bee ಸ್ನೇಹಿತರು, ಜೇನ್ನೊಣಗಳಿಂದ ಜನರಿಗೆ ಅಪಾಯವೂ ಆಗಬಾರದು ಹಾಗೆಯೇ ಜೇನ್ನೊಣಗಳು ಜೀವಂತವಾಗಿಯೂ ಇರಬೇಕು ಎಂಬ ಉದ್ದೇಶದಿಂದ ಜೇನ್ನೊಣಗಳ ಗೂಡನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತ ವಿಧಾನದಲ್ಲಿ ವರ್ಗಾವಣೆ ಮಾಡುತ್ತಾರೆ. ಅಮಿತ್ ಅವರ ಈ ಪ್ರಯತ್ನದ ಪರಿಣಾಮ ಕೂಡಾ ಬಹಳ ಅದ್ಭುತವಾಗಿದೆ. ಜೇನ್ನೊಣಗಳ ಸಮುಚ್ಚಯವೂ ರಕ್ಷಿಸಲ್ಪಡುತ್ತಿದೆ. ಜೇನು ಉತ್ಪಾದನೆಯೂ ಹೆಚ್ಚಾಗುತ್ತಿದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಜಾಗೃತಿಯೂ ಹೆಚ್ಚಾಗುತ್ತಿದೆ. ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಿದಾಗ, ಅದರ ಪ್ರಯೋಜನ ಪ್ರತಿಯೊಬ್ಬರಿಗೂ ದೊರೆಯುತ್ತದೆ ಎನ್ನುವುದನ್ನು ಈ ಉಪಕ್ರಮ ನಮಗೆ ತಿಳಿಯಪಡಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ‘ಮನದ ಮಾತಿನ’ ಈ ಸಂಚಿಕೆ ಇಲ್ಲಿಗೆ ಮುಗಿಸುತ್ತಿದ್ದೇನೆ, ದೇಶದ ಜನರ ಸಾಧನೆಗಳ ಕುರಿತು ಮತ್ತು ಸಮಾಜಕ್ಕೆ ಅವರು ಮಾಡುವ ಪ್ರಯತ್ನಗಳ ಕುರಿತು ನನಗೆ ಇದೇ ರೀತಿ ಪತ್ರ ಬರೆಯುತ್ತಿರಿ. ‘ಮನದ ಮಾತಿನ’ ಮುಂದಿನ ಸಂಚಿಕೆಯಲ್ಲಿ ಪುನಃ ಭೇಟಿಯಾಗೋಣ, ಹೊಸ ವಿಷಯಗಳ ಕುರಿತು, ದೇಶವಾಸಿಗಳ ಹೊಸ ಸಾಧನೆಗಳ ಕುರಿತು ಮಾತನಾಡೋಣ.ನಾನು ನಿಮ್ಮ ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ನಿಮ್ಮೊಂದಿಗೆ ನಾನು 'ಮನದ ಮಾತು' ಆಡುತ್ತಿರುವಾಗ, ನನ್ನ ಹೃದಯ ನೋವಿನಿಂದ ಭಾರವಾಗಿದೆ. ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ಘಟನೆ ದೇಶದ ಪ್ರತಿಯೊಬ್ಬ ನಾಗರಿಕನನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಸಂತ್ರಸ್ತ ಕುಟುಂಬಗಳ ಬಗ್ಗೆ ಪ್ರತಿ ಭಾರತೀಯನಲ್ಲೂ ಅಪಾರ ಸಹಾನುಭೂತಿಯಿದೆ. ರಾಜ್ಯ, ಭಾಷೆಯನ್ನು ಮೀರಿ ಎಲ್ಲ ಜನರು ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಸ್ವತಃ ಅನುಭವಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ನನಗೆ ಅನಿಸುತ್ತದೆ. ಪಹಲ್ಗಾಮ್ನಲ್ಲಿ ನಡೆದ ಈ ದಾಳಿಯು ಭಯೋತ್ಪಾದನೆಗೆ ಉತ್ತೇಜನ ನೀಡುವವರ ಹತಾಶೆಯನ್ನು ತೋರಿಸುತ್ತದೆ ಮತ್ತು ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಹುರುಪು ತುಂಬಿರುವಂತಹ ಕಾಲದಲ್ಲಿ, ನಿರ್ಮಾಣ ಕಾರ್ಯಗಳು ಅಭೂತಪೂರ್ವ ವೇಗವನ್ನು ಪಡೆದುಕೊಂಡಿರುವಾಗ, ಕಾಶ್ಮೀರದಲ್ಲಿ ಶಾಂತಿ ಮರುಕಳಿಸುತ್ತಿರುವ ಇಂತಹ ಸಮಯದಲ್ಲಿ, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ, ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡುಬರುತ್ತಿರುವಾಗ, ಜನರ ಆದಾಯ ಹೆಚ್ಚುತ್ತಿರುವಾಗ, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದಾಗ, ದೇಶದ ಶತ್ರುಗಳು, ಜಮ್ಮು ಮತ್ತು ಕಾಶ್ಮೀರದ ವೈರಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಭಯೋತ್ಪಾದಕರು ಮತ್ತಷ್ಟು ಭಯೋತ್ಪಾದನೆ ಹೆಚ್ಚಿಸಲು ಬಯಸುತ್ತಿದ್ದಾರೆ. ಕಾಶ್ಮೀರವನ್ನು ಮತ್ತೆ ನಾಶಮಾಡಲು ಹುನ್ನಾರದಿಂದ ಇಷ್ಟು ದೊಡ್ಡ ಘಟನೆ ನಡೆಯುವಂತೆ ಪಿತೂರಿ ನಡೆಸಿದರು. ದೇಶದ ಏಕತೆ, 140 ಕೋಟಿ ಭಾರತೀಯರ ಒಗ್ಗಟ್ಟು, ಭಯೋತ್ಪಾದನೆಯ ವಿರುದ್ಧದ ಈ ಯುದ್ಧದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಒಗ್ಗಟ್ಟೆ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪಾತ್ರವಾಹಿಸಲಿದೆ. ದೇಶ ಎದುರಿಸುತ್ತಿರುವ ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು. ಒಂದು ರಾಷ್ಟ್ರ ರೂಪದಲ್ಲಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಈ ಭಯೋತ್ಪಾದಕ ದಾಳಿಯ ನಂತರ ಸಂಪೂರ್ಣ ದೇಶ ಒಕ್ಕೊರಲಿನಿಂದ ಧ್ವನಿಯೆತ್ತಿರುವುದನ್ನು ಇಂದು ಜಗತ್ತೇ ನೋಡುತ್ತಿದೆ.
ಸ್ನೇಹಿತರೇ, ಭಾರತೀಯರಾಗಿ ನಮ್ಮಲ್ಲಿ ಹುದುಗಿದ ಈ ಆಕ್ರೋಶ ಪ್ರಪಂಚದಾದ್ಯಂತ ವ್ಯಕ್ತವಾಗುತ್ತಿದೆ. ಭಯೋತ್ಪಾದಕ ದಾಳಿಯ ನಂತರ, ಜಗತ್ತಿನ ಮೂಲೆಮೂಲೆಯಿಂದ ಸಂತಾಪ ವ್ಯಕ್ತವಾಗುತ್ತಿದೆ. ಜಾಗತಿಕ ನಾಯಕರು ನನಗೆ ಕರೆ ಮಾಡಿದ್ದಾರೆ, ಪತ್ರ ಬರೆದಿದ್ದಾರೆ ಮತ್ತು ಸಂದೇಶಗಳನ್ನು ಕಳುಹಿಸಿದ್ದಾರೆ. ಈ ಘೋರ ಭಯೋತ್ಪಾದಕ ದಾಳಿಯನ್ನು ಎಲ್ಲರೂ ಬಲವಾಗಿ ಖಂಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದಲ್ಲಿ ಇಡೀ ಜಗತ್ತು 140 ಕೋಟಿ ಭಾರತೀಯರೊಂದಿಗೆ ನಿಂತಿದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ, ಖಂಡಿತವಾಗಿಯೂ ನ್ಯಾಯ ಸಿಕ್ಕೆ ತೀರುತ್ತದೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ,. ಈ ದಾಳಿಯ ಅಪರಾಧಿಗಳು ಮತ್ತು ಸಂಚುಕೋರರಿಗೆ ಕಠಿಣ ಉತ್ತರ ನೀಡಲಾಗುವುದು.
ಸ್ನೇಹಿತರೇ, ಎರಡು ದಿನಗಳ ಹಿಂದೆ ನಮ್ಮ ದೇಶದ ಮಹಾನ್ ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್ ಅವರನ್ನು ನಾವು ಕಳೆದುಕೊಂಡೆವು. ಕಸ್ತೂರಿರಂಗನ್ ಅವರನ್ನು ಭೇಟಿಯಾದಾಗಲೆಲ್ಲಾ, ಭಾರತದ ಯುವಜನರ ಪ್ರತಿಭೆ, ಆಧುನಿಕ ಶಿಕ್ಷಣ, ಬಾಹ್ಯಾಕಾಶ ವಿಜ್ಞಾನ ಮುಂತಾದ ವಿಷಯಗಳ ಕುರಿತು ನಾವು ಸಾಕಷ್ಟು ಚರ್ಚಿಸುತ್ತಿದ್ದೆವು. ವಿಜ್ಞಾನ, ಶಿಕ್ಷಣ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಕೊಡುಗೆ ಸದಾ ಸ್ಮರಣೀಯ. ಅವರ ನೇತೃತ್ವದಲ್ಲಿ ಇಸ್ರೋಗೆ ಹೊಸ ಸ್ಥಾನಮಾನ ದೊರೆಯಿತು. ಅವರ ಮಾರ್ಗದರ್ಶನದಲ್ಲಿ ಮುಂದುವರೆದ ಬಾಹ್ಯಾಕಾಶ ಕಾರ್ಯಕ್ರಮಗಳು ಭಾರತದ ಪ್ರಯತ್ನಗಳಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟವು. ಭಾರತ ಇಂದು ಬಳಸುವ ಅನೇಕ ಉಪಗ್ರಹಗಳನ್ನು ಡಾ. ಕಸ್ತೂರಿರಂಗನ್ ಅವರ ಮೇಲ್ವಿಚಾರಣೆಯಲ್ಲಿ ಉಡಾವಣೆ ಮಾಡಲಾಗಿದೆ. ಅವರ ವ್ಯಕ್ತಿತ್ವದಲ್ಲಿ ಮತ್ತೊಂದು ವಿಶೇಷತೆಯಿತ್ತು, ಯುವ ಪೀಳಿಗೆ ಅವರಿಂದ ಬಹಳಷ್ಟು ಕಲಿಯಬಹುದು. ಅವರು ನಾವೀನ್ಯತೆಗೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು. ಹೊಸದನ್ನು ಕಲಿಯುವ, ತಿಳಿದುಕೊಳ್ಳುವ ಮತ್ತು ಕಾರ್ಯರೂಪಕ್ಕೆ ತರುವ ಅವರ ದೃಷ್ಟಿಕೋನವು ತುಂಬಾ ಸ್ಪೂರ್ತಿದಾಯಕ. ದೇಶದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಿದ್ಧಪಡಿಸುವಲ್ಲಿ ಡಾ. ಕೆ. ಕಸ್ತೂರಿರಂಗನ್ ಅವರು ಬಹು ದೊಡ್ಡ ಪಾತ್ರವಹಿಸಿದ್ದರು. 21 ನೇ ಶತಮಾನದ ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಭವಿಷ್ಯತ್ತನ್ನು ನೋಡುವ ಶಿಕ್ಷಣದ ಕಲ್ಪನೆಯನ್ನು ಡಾ. ಕಸ್ತೂರಿರಂಗನ್ ಮಂಡಿಸಿದರು. ದೇಶಕ್ಕೆ ಅವರ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ನಾನು ಡಾ. ಕೆ. ಕಸ್ತೂರಿರಂಗನ್ ಅವರಿಗೆ ವಿನಮ್ರತೆಯಿಂದ ಗೌರವ ಸಮರ್ಪಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ಈ ಏಪ್ರಿಲ್ ತಿಂಗಳಿಗೆ ಆರ್ಯಭಟ ಉಪಗ್ರಹ ಉಡಾವಣೆಗೊಂಡು 50 ವರ್ಷಗಳು ತುಂಬಿವೆ. ನಾವು ಇಂದು ಹಿಂತಿರುಗಿ ನೋಡಿದಾಗ, 50 ವರ್ಷಗಳ ಈ ಪ್ರಯಾಣವನ್ನು ನೆನಪಿಸಿಕೊಳ್ಳುವಾಗ, ಎಷ್ಟು ಸುದೀರ್ಘ ಮಾರ್ಗ ಕ್ರಮಿಸಿದ್ದೇವೆಂದು ನಮಗೆ ಅರಿವಾಗುತ್ತದೆ. ಭಾರತದ ಬಾಹ್ಯಾಕಾಶ ಕನಸುಗಳ ಈ ಹಾರಾಟವು ಒಮ್ಮೆ ಕೇವಲ ಧೈರ್ಯ ಮಾತ್ರದಿಂದ ಆರಂಭಗೊಂಡಿತ್ತು. ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಉತ್ಸಾಹ ಹೊಂದಿದ್ದ ಕೆಲವು ಯುವ ವಿಜ್ಞಾನಿಗಳ ಸಾಧನೆ ಇದಾಗಿದೆ - ಇಂದಿನಂತೆ ಅವರ ಬಳಿ ಆಧುನಿಕ ಸಂಪನ್ಮೂಲಗಳಿರಲಿಲ್ಲ, ಜಾಗತಿಕ ತಂತ್ರಜ್ಞಾನವೂ ಕೈಗೆಟುಕುವಂತಿರಲಿಲ್ಲ - ಅವರ ಬಳಿ ಏನಾದರೂ ಇಟ್ಟು ಎಂದರೆ, ಅದು ಪ್ರತಿಭೆ, ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲ ಮಾತ್ರ. ನಮ್ಮ ವಿಜ್ಞಾನಿಗಳು ಎತ್ತಿನ ಬಂಡಿಗಳು ಮತ್ತು ಸೈಕಲ್ಗಳ ಮೇಲೆ ಅತ್ಯಂತ ಪ್ರಮುಖ ಉಪಕರಣಗಳನ್ನು ಹೊತ್ತೊಯ್ಯುವ ಚಿತ್ರಗಳನ್ನು ಸಹ ನೀವು ನೋಡಿರಬಹುದು. ಆ ಸಮರ್ಪಣೆ ಮತ್ತು ರಾಷ್ಟ್ರ ಸೇವಾ ಮನೋಭಾವದಿಂದಾಗಿ ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಇಂದು ಭಾರತ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಬೆಳೆದಿದೆ. ನಾವು ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದೇವೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಪ್ರಥಮ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ. ಭಾರತವು ಮಂಗಳ ಕಕ್ಷೆಯ ಮಿಷನ್ ಅನ್ನು ಪ್ರಾರಂಭಿಸಿದೆ, ಅಲ್ಲದೆ ಆದಿತ್ಯ- L1 ಮಿಷನ್ ಮೂಲಕ ನಾವು ಸೂರ್ಯನಿಗೆ ಬಹಳ ಹತ್ತಿರ ತಲುಪಿದ್ದೇವೆ. ಇಂದು ಭಾರತವು ಇಡೀ ವಿಶ್ವದಲ್ಲೇ ಅತ್ಯಂತ ಕಾಸ್ಟ್ ಎಫೆಕ್ಕ್ಟಿವ್ ಆದರೆ ಯಶಸ್ವಿ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುನ್ನಡೆಸುತ್ತಿದೆ. ಪ್ರಪಂಚದ ಅನೇಕ ದೇಶಗಳು ತಮ್ಮ ಉಪಗ್ರಹಗಳು ಮತ್ತು ಬಾಹ್ಯಾಕಾಶ ಯಾತ್ರೆಗಳಿಗೆ ಇಸ್ರೋದಿಂದ ಸಹಾಯ ಪಡೆಯುತ್ತಿವೆ.
ಸ್ನೇಹಿತರೇ, ಇಸ್ರೋ ಮೂಲಕ ಉಪಗ್ರಹ ಉಡಾವಣೆ ಮಾಡುವುದನ್ನು ನೋಡಿದಾಗ ನಮಗೆ ಹೆಮ್ಮೆಯಾಗುತ್ತದೆ. 2014 ರಲ್ಲಿ ಪಿಎಸ್ಎಲ್ವಿ-ಸಿ-23 ಉಡಾವಣೆಯನ್ನು ವೀಕ್ಷಿಸಿದಾಗ ನನಗೂ ಇದೇ ರೀತಿಯ ಅನುಭವವಾಯಿತು. 2019 ರಲ್ಲಿ ಚಂದ್ರಯಾನ-2 ಲ್ಯಾಂಡಿಂಗ್ ಸಮಯದಲ್ಲಿಯೂ, ನಾನು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿದ್ದೆ. ಆಗ ಚಂದ್ರಯಾನ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲ, ವಿಜ್ಞಾನಿಗಳಿಗೆ ಅದು ತುಂಬಾ ಕಠಿಣ ಘಳಿಗೆಯೆನಿಸಿತ್ತು. ಆದರೆ, ವಿಜ್ಞಾನಿಗಳ ಧೈರ್ಯ ಮತ್ತು ಏನನ್ನಾದರೂ ಸಾಧಿಸುವ ಉತ್ಸಾಹವನ್ನು ನಾನು ಸ್ವತಃ ವೀಕ್ಷಿಸುತ್ತಿದ್ದೆ. ಕೆಲವು ವರ್ಷಗಳ ನಂತರ, ಅದೇ ವಿಜ್ಞಾನಿಗಳು ಚಂದ್ರಯಾನ -3 ಅನ್ನು ಹೇಗೆ ಯಶಸ್ವಿಗೊಳಿಸಿದರು ಎಂಬುದನ್ನು ಇಡೀ ಜಗತ್ತು ನೋಡಿತು.
ಸ್ನೇಹಿತರೇ, ಈಗ ಭಾರತ ತನ್ನ ಬಾಹ್ಯಾಕಾಶ ವಲಯವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದೆ. ಇಂದು ಅನೇಕ ಯುವಕರು ಸ್ಪೇಸ್ ಸ್ಟಾರ್ಟ್ಅಪ್ನಲ್ಲಿ ಹೊಸ ಸಾಧನೆಗೆ ಮುನ್ನುಡಿ ಬರೆಯುತ್ತಿದ್ದಾರೆ. 10 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಕೇವಲ ಒಂದೇ ಒಂದು ಕಂಪನಿ ಇತ್ತು, ಆದರೆ ಇಂದು ದೇಶದಲ್ಲಿ ಮುನ್ನೂರ ಇಪ್ಪತ್ತೈದಕ್ಕೂ ಹೆಚ್ಚು ಸ್ಪೇಸ್ ಸ್ಟಾರ್ಟ್ಅಪ್ಗಳು ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರ ಹೊಸ ಹೊಸ ಅವಕಾಶಗಳಿಗೆ ತೆರೆದುಕೊಳ್ಳಲಿದೆ. ಭಾರತ ಹೊಸ ಎತ್ತರಕ್ಕೆ ಏರಲಿದೆ. ದೇಶವು ಗಗನಯಾನ, ಸ್ಪಾಡೆಕ್ಸ್ ಮತ್ತು ಚಂದ್ರಯಾನ -4 ನಂತಹ ಹಲವು ಪ್ರಮುಖ ಯೋಜನೆಗಳ ಸಿದ್ಧತೆಯಲ್ಲಿ ತೊಡಗಿದೆ. ನಾವು ವೀನಸ್ ಆರ್ಬಿಟರ್ ಮಿಷನ್ ಮತ್ತು ಮಾರ್ಸ್ ಲ್ಯಾಂಡರ್ ಮಿಷನ್ನಲ್ಲೂ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ನಾವೀನ್ಯತೆಗಳಿಂದ ದೇಶವಾಸಿಗಳು ಮತ್ತಷ್ಟು ಹೆಮ್ಮೆಪಡುವಂತೆ ಮಾಡಲಿದ್ದಾರೆ.
ಸ್ನೇಹಿತರೇ, ಕಳೆದ ತಿಂಗಳು ಮ್ಯಾನ್ಮಾರ್ನಲ್ಲಿ ಸಂಭವಿಸಿದ ಭೂಕಂಪದ ಭಯಾನಕ ಚಿತ್ರಗಳನ್ನು ನೀವು ನೋಡಿರಬಹುದು. ಭೂಕಂಪದಿಂದಾಗಿ ಅಲ್ಲಿ ಭಾರಿ ವಿನಾಶ ಉಂಟಾಯಿತು; ಅವಶೇಷಗಳಲ್ಲಿ ಸಿಲುಕಿದ್ದ ಜನರಿಗೆ ಪ್ರತಿ ಉಸಿರು, ಪ್ರತಿ ಕ್ಷಣವೂ ಅಮೂಲ್ಯವಾಗಿತ್ತು. ಅದಕ್ಕಾಗಿಯೇ ಭಾರತವು ಮ್ಯಾನ್ಮಾರ್ನಲ್ಲಿರುವ ನಮ್ಮ ಸಹೋದರ ಸಹೋದರಿಯರಿಗಾಗಿ ಆಪರೇಷನ್ ಬ್ರಹ್ಮವನ್ನು ತಕ್ಷಣವೇ ಪ್ರಾರಂಭಿಸಿತು. ವಾಯುಪಡೆಯ ವಿಮಾನಗಳಿಂದ ಹಿಡಿದು ನೌಕಾಪಡೆಯ ಹಡಗುಗಳವರೆಗೆ ಎಲ್ಲವನ್ನೂ ಮ್ಯಾನ್ಮಾರ್ಗೆ ಸಹಾಯ ಮಾಡಲು ಕಳುಹಿಸಲಾಯಿತು. ಅಲ್ಲಿ ಭಾರತೀಯ ತಂಡವು ಒಂದು ಫೀಲ್ಡ್ ಹಾಸ್ಪಿಟಲ್ ಸಿದ್ಧಪಡಿಸಿತು. ಪ್ರಮುಖ ಕಟ್ಟಡಗಳು ಮತ್ತು ಮೂಲಸೌಕರ್ಯಗಳಿಗೆ ಆಗಿರುವ ಹಾನಿಯ ಮೌಲ್ಯಮಾಪನದಲ್ಲಿ ಎಂಜಿನಿಯರ್ಗಳ ತಂಡವು ಸಹಾಯ ಮಾಡಿತು. ಭಾರತೀಯ ತಂಡವು ಅಲ್ಲಿಗೆ ಕಂಬಳಿಗಳು, ಡೇರೆಗಳು, ಹಾಸಿಗೆ, ಔಷಧಿಗಳು, ಆಹಾರ ಪದಾರ್ಥಗಳು ಮತ್ತು ಇತರ ಅನೇಕ ವಸ್ತುಗಳನ್ನು ಪೂರೈಸಿತು. ಈ ಸಮಯದಲ್ಲಿ, ಭಾರತೀಯ ತಂಡಕ್ಕೆ ಅಲ್ಲಿನ ಜನರಿಂದ ಸಾಕಷ್ಟು ಪ್ರಶಂಸೆ ಲಭಿಸಿತು.
ಸ್ನೇಹಿತರೇ, ಈ ಬಿಕ್ಕಟ್ಟಿನಲ್ಲಿ, ಧೈರ್ಯ, ತಾಳ್ಮೆ ಮತ್ತು ಬುದ್ಧಿವಂತಿಕೆಯ ಅನೇಕ ಹೃದಯಸ್ಪರ್ಶಿ ಉದಾಹರಣೆಗಳು ಬೆಳಕಿಗೆ ಬಂದವು. 18 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ ಮಹಿಳೆಯನ್ನು ಭಾರತೀಯ ತಂಡ ರಕ್ಷಿಸಿತು. ಈಗ ಟಿವಿಯಲ್ಲಿ 'ಮನದ ಮಾತು' ನೋಡುತ್ತಿರುವ ವೀಕ್ಷಕರು ಆ ವೃದ್ಧ ಮಹಿಳೆಯ ಮುಖವನ್ನೂ ನೋಡುತ್ತಿರಬೇಕು. ಭಾರತದ ತಂಡವು ಅವರ ಆಮ್ಲಜನಕದ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಹಿಡಿದು ಫ್ರಾಕ್ಚರ್ ಚಿಕಿತ್ಸೆ ಒದಗಿಸುವವರೆಗೆ ಸಾಧ್ಯವಿರುವ ಎಲ್ಲ ಚಿಕಿತ್ಸೆಯನ್ನು ಒದಗಿಸಿತು. ಈ ವೃದ್ಧ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾದಾಗ, ಅವರು ನಮ್ಮ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಭಾರತೀಯ ರಕ್ಷಣಾ ತಂಡದಿಂದಾಗಿ ತನಗೆ ಹೊಸ ಜೀವನ ಲಭಿಸಿತು ಎಂದು ಅವರು ಹೇಳಿದರು. ಈ ತಂಡದ ಸಹಾಯದಿಂದಲೇ ಬಹಳಷ್ಟು ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಹುಡುಕಲು ಸಾಧ್ಯವಾಯಿತು ಎಂದು ನಮ್ಮ ತಂಡಕ್ಕೆ ಹೇಳಿದರು.
ಸ್ನೇಹಿತರೇ, ಭೂಕಂಪದ ನಂತರ, ಮ್ಯಾನ್ಮಾರ್ನ ಮಾಂಡಲೆಯ ಒಂದು ಬೌದ್ಧ ವಿಹಾರದಲ್ಲಿ ಅನೇಕ ಜನರು ಸಿಲುಕಿಕೊಂಡಿರುವ ಅನುಮಾನವಿತ್ತು. ನಮ್ಮ ಸ್ನೇಹಿತರು ಇಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡರು, ಇದರಿಂದಾಗಿ ಅವರಿಗೆ ಬೌದ್ಧ ಸನ್ಯಾಸಿಗಳಿಂದ ಸಾಕಷ್ಟು ಆಶೀರ್ವಾದ ಲಭಿಸಿತು. ಆಪರೇಷನ್ ಬ್ರಹ್ಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮಗೆ ನಮ್ಮದೇ ಆದ ಸಂಪ್ರದಾಯವಿದೆ, ನಮ್ಮದೇ ಆದ ಮೌಲ್ಯಗಳಿವೆ, 'ವಸುಧೈವ ಕುಟುಂಬಕಂ' ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬ ಭಾವನೆ ನಮ್ಮಲ್ಲಿದೆ. ಬಿಕ್ಕಟ್ಟಿನ ಸಮಯದಲ್ಲಿ ವಿಶ್ವ ಸ್ನೇಹಿತನಾಗಿ ಭಾರತದ ಸಿದ್ಧತೆ ಮತ್ತು ಮಾನವೀಯತೆಗೆ ಭಾರತದ ಬದ್ಧತೆ ನಮ್ಮ ಹೆಗ್ಗುರುತಾಗಿದೆ.
ಸ್ನೇಹಿತರೇ, ಆಫ್ರಿಕಾದ ಇಥಿಯೋಪಿಯಾದಲ್ಲಿ ಭಾರತೀಯ ವಲಸಿಗರ ಒಂದು ನವೀನ ಪ್ರಯತ್ನದ ಬಗ್ಗೆ ನನಗೆ ತಿಳಿದುಬಂದಿದೆ. ಇಥಿಯೋಪಿಯಾದಲ್ಲಿ ವಾಸಿಸುವ ಭಾರತೀಯರು ಜನ್ಮತಃ ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕಳುಹಿಸಲು ಮುಂದಾಗಿದ್ದಾರೆ. ಅಂತಹ ಅನೇಕ ಮಕ್ಕಳಿಗೆ ಭಾರತೀಯ ಕುಟುಂಬಗಳು ಆರ್ಥಿಕ ಸಹಾಯವನ್ನು ನೀಡುತ್ತಿವೆ. ಒಂದು ವೇಳೆ ಮಗುವಿನ ಕುಟುಂಬವು ಹಣದ ಕೊರತೆಯಿಂದಾಗಿ ಭಾರತಕ್ಕೆ ಬರಲು ಸಾಧ್ಯವಾಗದಿದ್ದರೆ, ನಮ್ಮ ಭಾರತೀಯ ಸಹೋದರ ಸಹೋದರಿಯರು ಅದಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಇಥಿಯೋಪಿಯಾದಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪ್ರತಿಯೊಂದು ನಿರ್ಗತಿಕ ಮಗುವಿಗೂ ಉತ್ತಮ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸಿಕೊಳ್ಳುವುದು ಈ ಪ್ರಯತ್ನದ ಉದ್ದೇಶವಾಗಿದೆ. ಭಾರತೀಯ ವಲಸಿಗರ ಈ ಉದಾತ್ತ ಕಾರ್ಯವು ಇಥಿಯೋಪಿಯಾದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಭಾರತದಲ್ಲಿ ವೈದ್ಯಕೀಯ ಸೌಲಭ್ಯಗಳು ನಿರಂತರವಾಗಿ ಸುಧಾರಿಸುತ್ತಿವೆ ಎಂದು ನಿಮಗೆ ತಿಳಿದಿದೆ. ಇತರ ದೇಶಗಳ ನಾಗರಿಕರು ಸಹ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.
ಸ್ನೇಹಿತರೇ, ಕೆಲವೇ ದಿನಗಳ ಹಿಂದೆ, ಭಾರತವು ಅಫ್ಘಾನಿಸ್ತಾನದ ಜನರಿಗಾಗಿ ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ಕಳುಹಿಸಿದೆ. ಈ ಲಸಿಕೆಯು Rabies, Tetanus, Hepatitis B ಮತ್ತು Influenza ದಂತಹ ಅಪಾಯಕಾರಿ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಉಪಯುಕ್ತವಾಗಿರುತ್ತದೆ. ಈ ವಾರ, ನೇಪಾಳದ ಕೋರಿಕೆಯ ಮೇರೆಗೆ, ಭಾರತವು ನೇಪಾಳಕ್ಕೆ ದೊಡ್ಡ ಪ್ರಮಾಣದಲ್ಲಿ ಔಷಧಗಳು ಮತ್ತು ಲಸಿಕೆಗಳನ್ನು ಸಾರಬರಾಜು ಮಾಡಿದೆ. ಇದು ಥಲಸ್ಸೆಮಿಯಾ ಮತ್ತು sickle cell ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸಲಿದೆ. ಮಾನವ ಸೇವೆಯ ಪ್ರಸಂಗ ಬಂದಾಗಲೆಲ್ಲಾ, ಭಾರತ ಎಂದಿಗೂ ಮುಂಚೂಣಿಯಲ್ಲಿರುತ್ತದೆ ಮತ್ತು ಭವಿಷ್ಯದಲ್ಲಿಯೂ ಅಂತಹ ಪ್ರತಿಯೊಂದು ಅಗತ್ಯದಲ್ಲೂ ಮುಂಚೂಣಿಯಲ್ಲಿರಲಿದೆ
ಸ್ನೇಹಿತರೇ, ಈಗ ನಾವು ವಿಪತ್ತು ನಿರ್ವಹಣೆ ಬಗ್ಗೆ ಮಾತನಾಡುತ್ತಿದ್ದೆವು. ಯಾವುದೇ ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ನಿಮಗೆ ಮುಖ್ಯವಾಗಿ ಅಗತ್ಯವಿರುವುದು - ನಿಮ್ಮ ಜಾಗರೂಕತೆ. ಈ ಜಾಗರೂಕತೆಯಲ್ಲಿ ನಿಮ್ಮ ಮೊಬೈಲ್ ನಲ್ಲಿರುವ ಒಂದು ವಿಶೇಷ APP ನಿಂದ ನಿಮಗೆ ಸಹಾಯ ದೊರೆಯಬಹುದು. ಈ APP ನಿಮಗೆ ಯಾವುದೇ ನೈಸರ್ಗಿಕ ವಿಕೋಪದಲ್ಲಿ ಸಿಲುಕಿಬೀಳದಂತೆ ರಕ್ಷಿಸಬಹುದಾಗಿದ್ದು, ಇದರ ಹೆಸರು ಕೂಡಾ ‘ಸಚೇತ್’ ಎಂಬುದಾಗಿದೆ. ‘ಸಚೇತ್ APP’, ಅನ್ನು ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ - National Disaster Management Authority (NDMA) ತಯಾರಿಸಿದೆ. ಪ್ರವಾಹ, ಚಂಡಮಾರುತ, ಭೂಕುಸಿತ, ಸುನಾಮಿ, ಕಾಡ್ಗಿಚ್ಚು, ಹಿಮ-ಪಾತ, ಚಂಡಮಾರುತ, ಬಿರುಗಾಳಿ ಅಥವಾ ಸಿಡಿಲು ಬೀಳುವಂತಹ ಆಪತ್ತುಗಳ ಸಂದರ್ಭದಲ್ಲಿ ‘ಸಚೇತ್ APP’ ನಿಮಗೆ ಎಲ್ಲಾ ವಿಧದಲ್ಲೂ ಮಾಹಿತಿ ತಲುಪಿಸುವ ಮತ್ತು ನಿಮ್ಮನ್ನು ಸುರಕ್ಷಿತವಾಗಿ ಇರಿಸುವ ಪ್ರಯತ್ನ ಮಾಡುತ್ತದೆ. ವಿಶೇಷವೆಂದರೆ 'ಸಚೇತ್ APP' ಪ್ರಾದೇಶಿಕ ಭಾಷೆಗಳಲ್ಲಿಯೂ ಸಹ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ನೀವು ಈ ಆನ್ವಯಿಕದ ಲಾಭ ಪಡೆದುಕೊಳ್ಳಿ ಮತ್ತು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಇಡೀ ಪ್ರಪಂಚವೇ ಭಾರತದ ಪ್ರತಿಭೆಯನ್ನು ಪ್ರಶಂಸಿಸುತ್ತಿರುವುದನ್ನು ನೋಡುತ್ತಿದ್ದೇವೆ. ಭಾರತದ ಯುವಜನತೆ ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಮತ್ತು ಯಾವುದೇ ದೇಶದ ಯುವಜನತೆಯ ಆಸಕ್ತಿ ಎನ್ನುವುದು ಆ ದೇಶದ ಭವಿಷ್ಯ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇಂದು ಭಾರತದ ಯುವಜನತೆ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಈ ಮೊದಲು ಹಿಂದುಳಿದಿರುವಿಕೆ ಮತ್ತು ಇತರೆ ಕಾರಣಗಳಿಗಾಗಿ ಹೆಸರಾಗಿದ್ದ ಪ್ರದೇಶಗಳಲ್ಲಿ ಕೂಡಾ ಯುವಜನತೆ ನಮಗೆ ಹೊಸ ಆತ್ಮ ವಿಶ್ವಾಸ ತುಂಬುವ ಉದಾಹರಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ಛತ್ತೀಸ್ ಗಢದ ದಂತೇವಾಡಾದ ವಿಜ್ಞಾನ ಕೇಂದ್ರವು ಇತ್ತೀಚಿನ ದಿನಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಕೆಲ ಕಾಲದ ಹಿಂದೆ, ದಂತೇವಾಡಾದ ಹೆಸರು ಕೇವಲ ಹಿಂಸಾಚಾರ ಮತ್ತು ಅಶಾಂತಿಯ ಪರಿಸ್ಥಿತಿಗಾಗಿ ಕೇಳಿಬರುತ್ತಿತ್ತು, ಆದರೆ ಈಗ ಅಲ್ಲಿ, ಒಂದು ವಿಜ್ಞಾನ ಕೇಂದ್ರ, ಮಕ್ಕಳು ಮತ್ತು ಅವರ ತಾಯ್ತಂದೆಯರಿಗೆ ಭರವಸೆಯ ಹೊಸ ಕಿರಣವಾಗಿ ಮೂಡಿ ಬಂದಿದೆ. ಈ ವಿಜ್ಞಾನ ಕೇಂದ್ರಕ್ಕೆ ಹೋಗುವುದೆಂದರೆ ಮಕ್ಕಳಿಗೆ ಬಹಳ ಇಷ್ಟವಾಗುತ್ತಿದೆ. ಈಗ ಅವರು ಹೊಸ-ಹೊಸ ಯಂತ್ರಗಳನ್ನು ತಯಾರಿಸುವುದರಿಂದ ಹಿಡಿದು, ತಂತ್ರಜ್ಞಾನವನ್ನು ಉಪಯೋಗಿಸಿ, ಹೊಸ ಉತ್ಪನ್ನಗಳನ್ನು ತಯಾರಿಸಲು ಕೂಡಾ ಕಲಿಯುತ್ತಿದ್ದಾರೆ. ಅವರಿಗೆ 3D printers ಮತ್ತು robotic ಕಾರುಗಳೊಂದಿಗೆ ಇತರೆ ಆವಿಷ್ಕಾರಕ ವಸ್ತುಗಳ ಬಗ್ಗೆ ಅರಿಯುವ ಅವಕಾಶ ಕೂಡಾ ದೊರೆಯುತ್ತಿದೆ. ಈಗ ಕೆಲವೇ ದಿನಗಳ ಹಿಂದೆ ನಾನು ಗುಜರಾತ್ ನ ಸೈನ್ಸ್ ಸಿಟಿಯಲ್ಲಿ ಕೂಡಾ ಸೈನ್ಸ್ ಗ್ಯಾಲರಿಗಳನ್ನು ಉದ್ಘಾಟಿಸಿದೆ. ಆಧುನಿಕ ವಿಜ್ಞಾನದ ಸಾಮರ್ಥ್ಯವೇನು, ವಿಜ್ಞಾನ ನಮಗೆ ಏನೆಲ್ಲಾ ಮಾಡಲು ಸಾಧ್ಯ ಎಂಬುದರ ಕುರಿತ ಒಂದು ನೋಟವನ್ನು ಈ ಗ್ಯಾಲರಿಗಳು ನಮಗೆ ನೀಡುತ್ತವೆ. ಈ ಗ್ಯಾಲರಿಗಳೆಂದರೆ ಮಕ್ಕಳಿಗೆ ಬಹಳ ಉತ್ಸಾಹ ಎಂಬ ಮಾಹಿತಿ ನನಗೆ ದೊರೆತಿದೆ. ವಿಜ್ಞಾನ ಮತ್ತು ಆವಿಷ್ಕಾರದ ಬಗ್ಗೆ ಹೆಚ್ಚಾಗುತ್ತಿರುವ ಈ ಆಕರ್ಷಣೆ, ಖಂಡಿತವಾಗಿಯೂ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದ ಅತಿ ದೊಡ್ಡ ಬಲವೆಂದರೆ ಅದು ನಮ್ಮ 140 ಕೋಟಿ ನಾಗರಿಕರು, ಅವರ ಸಾಮರ್ಥ್ಯ, ಅವರ ಇಚ್ಛಾ ಶಕ್ತಿ. ಕೋಟ್ಯಾಂತರ ಜನರು ಯಾವುದಾದರೊಂದು ಅಭಿಯಾನದಲ್ಲಿ ಒಟ್ಟಾಗಿ ಸೇರಿದಾಗ, ಅದರ ಪರಿಣಾಮ ಕೂಡಾ ಬಹಳ ದೊಡ್ಡದಾಗಿರುತ್ತದೆ. ಇದರ ಒಂದು ಉದಾಹರಣೆಯೆಂದರೆ ‘ತಾಯಿಯ ಹೆಸರಿನಲ್ಲಿ ಒಂದು ಸಸಿ’ – ಈ ಅಭಿಯಾನ ನಮಗೆ ಜನ್ಮ ನೀಡಿದ ತಾಯಿಯ ಹೆಸರಿನಲ್ಲಿ ಹಾಗೆಯೇ ನಮ್ಮನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡಿರುವ ನಮ್ಮ ಭೂಮಿ ತಾಯಿಗಾಗಿ. ಸ್ನೇಹಿತರೇ, ಜೂನ್ ತಿಂಗಳ 5 ರಂದು ‘ವಿಶ್ವ ಪರಿಸರ ದಿನ’ ಈ ವರ್ಷ ಈ ದಿನದಂದು ನಮ್ಮ ಅಭಿಯಾನಕ್ಕೆ ಒಂದು ವರ್ಷ ಪೂರ್ಣವಾಗಲಿದೆ. ಈ ಒಂದು ವರ್ಷದಲ್ಲಿ ಈ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ತಾಯಿಯ ಹೆಸರಿನಲ್ಲಿ 140 ಕೋಟಿಗಿಂತಲೂ ಅಧಿಕ ಸಸಿಗಳನ್ನು ನೆಡಲಾಗಿದೆ. ಭಾರತದ ಈ ಉಪಕ್ರಮವನ್ನು ನೋಡಿ, ವಿದೇಶಗಳಲ್ಲಿ ಕೂಡಾ ಜನರು ತಮ್ಮ ತಾಯಂದಿರ ಹೆಸರಿನಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ನೀವು ಕೂಡ ಈ ಅಭಿಯಾನದ ಭಾಗವಾಗಬೇಕು, ಇದರಿಂದ ಒಂದು ವರ್ಷ ಪೂರ್ಣಗೊಂಡಾಗ, ನಿಮ್ಮ ಭಾಗವಹಿಸುವಿಕೆಯ ಬಗ್ಗೆ ನೀವು ಹೆಮ್ಮೆಪಡಬಹುದು.
ಸ್ನೇಹಿತರೇ, ಮರಗಳಿಂದ ತಂಪು ದೊರೆಯುತ್ತದೆ, ಮರಗಳ ನೆರಳಿನಲ್ಲಿ ಬಿಸಿಲಿನಿಂದ ಉಪಶಮನ ದೊರೆಯುತ್ತದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಆದರೆ ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಇನ್ನೊಂದು ಸುದ್ದಿಯನ್ನು ನಾನು ನೋಡಿದೆ, ಅದು ನನ್ನ ಗಮನ ಸೆಳೆಯಿತು. ಕಳೆದ ಕೆಲವು ವರ್ಷಗಳಲ್ಲಿ ಗುಜರಾತ್ ನ ಅಹಮದಾಬಾದ್ ನಗರದಲ್ಲಿ 70 ಲಕ್ಷಕ್ಕೂ ಅಧಿಕ ಮರಗಳನ್ನು ನೆಡಲಾಗಿದೆ. ಈ ಮರಗಳು ಅಹಮದಾಬಾದ್ ನಲ್ಲಿ ಹಸಿರು ಪ್ರದೇಶವನ್ನು ಗಣನೀಯವಾಗಿ ಹೆಚ್ಚಿಸಿವೆ. ಇದರೊಂದಿಗೆ, ಸಬರಮತಿ ನದಿಗೆ ಅಡ್ಡಲಾಗಿ ದಂಡೆಯ ನಿರ್ಮಾಣ ಮತ್ತು ಕಂಕರಿಯಾ ಸರೋವರದಂತಹ ಕೆಲವು ಸರೋವರಗಳ ಪುನರ್ನಿರ್ಮಾಣದಿಂದಾಗಿ ಇಲ್ಲಿ ಜಲಮೂಲಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಅಹಮದಾಬಾದ್ ನಗರ ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡುವ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂಬುದನ್ನು ಸುದ್ದಿ ವರದಿಗಳು ಹೇಳುತ್ತವೆ. ಅಲ್ಲಿನ ಜನರು ಕೂಡ ಈ ಬದಲಾವಣೆಯನ್ನು, ವಾತಾವರಣದಲ್ಲಿನ ಈ ತಂಪನ್ನು ಅನುಭವಿಸುತ್ತಿದ್ದಾರೆ. ಅಹಮದಾಬಾದ್ ನಲ್ಲಿ ನೆಡಲಾದ ಮರಗಳು ಅಲ್ಲಿ ಹೊಸ ಸಮೃದ್ಧಿಗೆ ಕಾರಣವಾಗುತ್ತಿವೆ. ಭೂಮಿತಾಯಿಯ ಆರೋಗ್ಯವನ್ನು ಸರಿಯಾಗಿ ಇರಿಸಬೇಕೆಂದರೆ, ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಸಲು, ‘ತಾಯಿಯ ಹೆಸರಿನಲ್ಲಿ ಒಂದು ಸಸಿ‘ ಖಂಡಿತವಾಗಿಯೂ ನೆಡಿ ಎಂದು ನಾನು ನಿಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ.
ಸ್ನೇಹಿತರೇ, ‘ಮನಸ್ಸಿದ್ದರೆ ಮಾರ್ಗ’ ಎಂಬ ಒಂದು ಹಳೆಯ ಗಾದೆ ಮಾತೊಂದಿದೆ. ನಾವು ಹೊಸದೇನಾದರೂ ಮಾಡಬೇಕೆಂದು ನಿರ್ಧಾರ ಮಾಡಿದರೆ, ಅದರ ಗುರಿ ಖಂಡಿತವಾಗಿಯೂ ತಲುಪಿಯೇ ತೀರುತ್ತೇವೆ. ಬೆಟ್ಟಗುಡ್ಡಗಳಲ್ಲಿ ಬೆಳೆಯುವ ಸೇಬು ಹಣ್ಣನ್ನು ನೀವೆಲ್ಲರೂ ಸಾಕಷ್ಟು ತಿಂದೇ ಇರುತ್ತೀರಿ. ಆದರೆ, ನೀವು ಕರ್ನಾಟಕದ ಸೇಬಿನ ರುಚಿ ಆಸ್ವಾದಿಸಿದ್ದೀರಾ ಎಂದು ಕೇಳಿದರೆ? ನೀವು ಆಶ್ಚರ್ಯಚಕಿತರಾಗುತ್ತೀರಿ. ಸಾಧಾರಣವಾಗಿ ಸೇಬಿನ ಕೃಷಿಯನ್ನು ಬೆಟ್ಟ ಗುಡ್ಡಗಳ ಮೇಲೆ ಮಾಡಲಾಗುತ್ತದೆ ಎಂದು ನಾವು ತಿಳಿದಿದ್ದೇವೆ. ಆದರೆ ಕರ್ನಾಟಕದ ಬಾಗಲಕೋಟೆಯ ನಿವಾಸಿ ಶ್ರೀ ಶೈಲ್ ತೆಲೀ ಅವರು ಬಯಲು ಪ್ರದೇಶದಲ್ಲಿ ಸೇಬು ಬೆಳೆದಿದ್ದಾರೆ. ಅವರ ಕುಲಾಲೀ ಗ್ರಾಮದಲ್ಲಿ 35 ಡಿಗ್ರಿಗಿಂತ ಅಧಿಕ ತಾಪಮಾನವಿರುತ್ತದೆ ಆದರೂ ಸೇಬಿನ ಮರಗಳು ಫಲ ನೀಡಲಾರಂಭಿಸಿವೆ. ವಾಸ್ತವದಲ್ಲಿ ಶ್ರೀ ಶೈಲ್ ತೇಲಿ ಅವರಿಗೆ ಕೃಷಿಯ ಬಗ್ಗೆ ಒಲವು ಇತ್ತು, ಆದ್ದರಿಂದ ಅವರು ಸೇಬು ಕೃಷಿಯನ್ನೂ ಪ್ರಯತ್ನಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ಇಂದು ಅವರು ನೆಟ್ಟ ಸೇಬು ಮರಗಳಲ್ಲಿ ಹೆಚ್ಚಿನ ಸಂಖ್ಯೆಯ ಸೇಬುಗಳು ಬೆಳೆಯುತ್ತಿವೆ ಮತ್ತು ಅವುಗಳನ್ನು ಮಾರಾಟ ಮಾಡುವ ಮೂಲಕ ಅವರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ಸ್ನೇಹಿತರೇ, ಸೇಬಿನ ವಿಷಯ ಮಾತನಾಡುತ್ತಿರುವಾಗ, ನಮ್ಮ ಕಿನ್ನೌರಿ ಸೇಬಿನ ಹೆಸರನ್ನು ನೀವು ಖಂಡಿತವಾಗಿಯೇ ಕೇಳಿಯೇ ಇರುತ್ತೀರಿ. ಸೇಬುಗಳಿಗೆ ಹೆಸರಾಗಿರುವ ಕಿನ್ನೌರ್ ನಲ್ಲಿ ಕೇಸರಿಯ ಉತ್ಪಾದನೆ ಆರಂಭವಾಗಿದೆ. ಸಾಧಾರಣವಾಗಿ ಹಿಮಾಚಲ ಪ್ರದೇಶಧಲ್ಲಿ ಕೇಸರಿಯ ಕೃಷಿ ಕಡಿಮೆಯೇ ಇರುತ್ತದೆ, ಆದರೆ ಈಗ ಕಿನ್ನೌರ್ ನ ಅತಿಸುಂದರ ಸಂಗಲಾ ಕಣಿವೆಯಲ್ಲಿ ಕೂಡಾ ಕೇಸರಿಯ ಕೃಷಿ ಆರಂಭವಾಗಿದೆ. ಇಂತಹದ್ದೇ ಒಂದು ಉದಾಹರಣೆ ಕೇರಳದ ವೈನಾಡ್ ನಲ್ಲಿ ಕಂಡುಬಂದಿದೆ. ಇಲ್ಲಿ ಕೂಡಾ ಕೇಸರಿ ಕೃಷಿಯಲ್ಲಿ ಯಶಸ್ಸು ದೊರೆತಿದೆ. ವೈನಾಡಿನಲ್ಲಿ ಈ ಕೇಸರಿ ಕೃಷಿಯು ಯಾವುದೇ ಹೊಲ ಅಥವಾ ಮಣ್ಣಿನಲ್ಲಿ ಅಲ್ಲದೇ Aeroponics ತಂತ್ರ ಉಪಯೋಗಿಸಿ ಬೆಳೆಯಲಾಗುತ್ತಿದೆ. ಇಂತಹದ್ದೇ ಅಚ್ಚರಿಯ ಸಂಗತಿ ಲಿಚಿ ಇಳುವರಿಯಲ್ಲಿ ಕೂಡಾ ನಡೆದಿದೆ. ಬಿಹಾರ, ಪಶ್ಚಿಮ ಬಂಗಾಳ ಅಥವಾ ಜಾರ್ಖಂಡ್ ನಲ್ಲಿ ಲಿಚಿ ಬೆಳೆಯುತ್ತಾರೆಂದು ನಾವು ಕೇಳಿದ್ದೇವೆ. ಆದರೆ ಈಗ ದಕ್ಷಿಣ ಭಾರತ ಹಾಗೂ ರಾಜಸ್ತಾನದಲ್ಲಿ ಕೂಡಾ ಲಿಚಿ ಬೆಳೆ ಬೆಳೆಯಲಾಗುತ್ತಿದೆ. ತಮಿಳುನಾಡಿನ ಥಿರು ವೀರಾ ಅರಸು ಅವರು ಕಾಫಿ ಕೃಷಿ ಮಾಡುತ್ತಾರೆ. ಕೊಡೈಕೆನಾಲ್ ನಲ್ಲಿ ಅವರು ಲಿಚಿ ಸಸಿಗಳನ್ನು ನೆಟ್ಟರು ಮತ್ತು ಅವರ 7 ವರ್ಷಗಳ ಪರಿಶ್ರಮದ ನಂತರ ಈಗ ಆ ಮರಗಳಲ್ಲಿ ಹಣ್ಣು ಬರಲಾರಂಭಿಸಿದೆ. ಲಿಚಿ ಕೃಷಿಯಲ್ಲಿ ದೊರೆತ ಯಶಸ್ಸು ಸುತ್ತಮುತ್ತಲಿನ ಇತರ ರೈತರಿಗೆ ಕೂಡಾ ಪ್ರೇರೇಪಣೆ ನೀಡಿತು. ರಾಜಾಸ್ತಾನದಲ್ಲಿ ಜಿತೇಂದ್ರ ಸಿಂಗ್ ರಾಣವತ್ ಅವರಿಗೆ ಲಿಚಿ ಕೃಷಿಯಲ್ಲಿ ಯಶಸ್ಸು ದೊರೆತಿದೆ. ಈ ಎಲ್ಲಾ ಉದಾಹರಣೆಗಳು ಬಹಳ ಪ್ರೇರಣಾದಾಯಕವಾಗಿವೆ. ನಾವು ಏನಾದರೂ ಹೊಸದನ್ನು ಮಾಡಬೇಕೆಂದು ಸಂಕಲ್ಪ ಮಾಡಿದರೇ, ಕಷ್ಟಗಳ ಹೊರತಾಗಿಯೂ ಎದೆಗುಂದದೇ ಇದ್ದರೆ, ಖಂಡಿತವಾಗಿಯೂ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಏಪ್ರಿಲ್ ತಿಂಗಳ ಕೊನೆಯ ಭಾನುವಾರವಾಗಿದೆ. ಕೆಲವೇ ದಿನಗಳಲ್ಲಿ ಮೇ ತಿಂಗಳು ಆರಂಭವಾಗಲಿದೆ. ನಾನು ನಿಮ್ಮನ್ನು ಇಂದು ಸುಮಾರು 108 ವರ್ಷಗಳಷ್ಟು ಹಿಂದಿನ ವರ್ಷಕ್ಕೆ ಕರೆದೊಯ್ಯುತ್ತೇನೆ. 1917ಸ ಏಪ್ರಿಲ್ ಮತ್ತು ಮೇ ಇದೇ ಎರಡು ತಿಂಗಳು – ದೇಶದಲ್ಲಿ ಸ್ವಾತಂತ್ರ್ಯದ ವಿಶಿಷ್ಠ ಯುದ್ಧ ಮಾಡಲಾಗುತ್ತಿತ್ತು. ಬ್ರಿಟಿಷರ ಅತ್ಯಾಚಾರ ಮುಗಿಲು ಮುಟ್ಟಿತ್ತು. ಬಡವರು, ವಂಚಿತರು, ಮತ್ತು ರೈತರ ಮೇಲಿನ ಶೋಷಣೆಯು ಅಮಾನವೀಯ ಹಂತವನ್ನು ಕೂಡಾ ಮೀರಿತ್ತು. ಬಿಹಾರದ ಫಲವತ್ತಾದ ಭೂಮಿಯಲ್ಲಿ ಇಂಡಿಗೋ ಬೆಳೆಯುವಂತೆ ಈ ಬ್ರಿಟಿಷರು ರೈತರನ್ನು ಒತ್ತಾಯಿಸುತ್ತಿದ್ದರು. ಇಂಡಿಗೋ ಬೆಳೆಯ ಕೃಷಿಯಿಂದಾಗಿ ರೈತರ ಹೊಲಗದ್ದೆಗಳು ಬಂಜರು ಭೂಮಿಗಳಾಗುತ್ತಿದ್ದವು. ಆದರೆ ಬ್ರಿಟಿಷ್ ಸರ್ಕಾರಕ್ಕೆ ಈ ಕುರಿತು ಯಾವುದೇ ಕಾಳಜಿ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, 1917 ರಲ್ಲಿ ಗಾಂಧೀಜಿಯವರು ಬಿಹಾರದ ಚಂಪಾರಣ್ ಗೆ ತಲುಪಿದರು. ನಮ್ಮ ಭೂಮಿ ಸಾಯುತ್ತಿದೆ, ತಿನ್ನಲು ಆಹಾರ ಧಾನ್ಯ ದೊರೆಯುತ್ತಿಲ್ಲವೆಂದು ರೈತರು ಗಾಂಧೀಜಿಯವರಿಗೆ ಹೇಳಿದರು. ಲಕ್ಷಾಂತರ ರೈತರ ಈ ನೋವು ಅರಿತ ಗಾಂಧೀಜಿಯವರ ಮನಸ್ಸಿನಲ್ಲಿ ಒಂದು ಸಂಕಲ್ಪ ಮೂಡಿತು. ಅಲ್ಲಿಂದಲೇ ಚಂಪಾರಣ್ ನ ಐತಿಹಾಸಿಕ ಸತ್ಯಾಗ್ರಹ ಆರಂಭವಾಯಿತು. ‘ಚಂಪಾರಣ್ ಸತ್ಯಾಗ್ರಹ’ ಇದು ಬಾಪೂ ಅವರಿಂದ ಭಾರತದಲ್ಲಿ ಆರಂಭವಾದ ಪ್ರಥಮ ದೊಡ್ಡ ಪ್ರಮಾಣದ ಪ್ರಯೋಗವಾಗಿತ್ತು. ಬಾಪೂ ಅವರ ಸತ್ಯಾಗ್ರಹದಿಂದ ಇಡೀ ಬ್ರಿಟಿಷ್ ಸರ್ಕಾರ ನಡುಗಿ ಬಿಟ್ಟಿತು. ಇಂಡಿಗೋ ಕೃಷಿ ಮಾಡಬೇಕೆಂದು ರೈತರನ್ನು ಒತ್ತಾಯಿಸುವ ಕಾನೂನನ್ನು ಸ್ಥಗಿತಗೊಳಿಸಬೇಕಾಗಿ ಬಂದಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸ ವಿಶ್ವಾಸ ತುಂಬಿದಂತಹ ಒಂದು ಗೆಲುವುದು ಇದಾಗಿತ್ತು. ಇದರಲ್ಲಿ ಸ್ವಾತಂತ್ರ್ಯಾನಂತರ ದೇಶದ ಪ್ರಥಮ ರಾಷ್ಟ್ರಪತಿ ಹುದ್ದೆಗೇರಿದ ಬಿಹಾರದ ಮತ್ತೊರ್ವ ಸುಪುತ್ರನ ಕೊಡುಗೆ ಕೂಡಾ ಈ ಸತ್ಯಾಗ್ರಹಕ್ಕೆ ದೊರೆತಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಆ ಮಹಾನ್ ವ್ಯಕ್ತಿಯೇ – ಡಾ. ರಾಜೇಂದ್ರ ಪ್ರಸಾದ್. ಅವರು ‘ಚಂಪಾರಣ್ ಸತ್ಯಾಗ್ರಹ’ ಕುರಿತಂತೆ ‘Satyagraha in Champaran’ ಎಂಬ ಪುಸ್ತಕವನ್ನು ಕೂಡಾ ಬರೆದಿದ್ದಾರೆ, ದೇಶದ ಯುನಜನತೆ ಓದಲೇ ಬೇಕಾದ ಪುಸ್ತಕ ಇದಾಗಿದೆ. ಸೋದರ-ಸೋದರಿಯರೇ, ಏಪ್ರಿಲ್ ತಿಂಗಳಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದ ಇನ್ನೂ ಅನೇಕ ಅದ್ಭುತ ಅಧ್ಯಾಯಗಳು ಬೆಸೆದುಕೊಂಡಿವೆ. ಏಪ್ರಿಲ್ ತಿಂಗಳ 6 ರಂದು ಗಾಂದೀಜಿಯವರ ದಂಡಿ ಯಾತ್ರೆ ಪೂರ್ಣಗೊಂಡಿತು. ಮಾರ್ಚ್ 12 ರಂದು ಆರಂಭವಾಗಿ 24 ದಿನಗಳ ಕಾಲ ಮುಂದುವರಿದ ಈ ಯಾತ್ರೆಯು ಬ್ರಿಟಿಷರನ್ನು ಬೆಚ್ಚಿ ಬೀಳಿಸಿತು. ಏಪ್ರಿಲ್ ತಿಂಗಳಿನಲ್ಲಿಯೇ ಜಲಿಯನ್ ವಾಲಾಬಾಗ್ ನರಮೇಧ- ಹತ್ಯಾಕಾಂಡವೂ ನಡೆಯಿತು. ಪಂಜಾಬ್ ನೆಲದಲ್ಲಿ ಈ ರಕ್ತಸಿಕ್ತ ಇತಿಹಾಸದ ಗುರುತು ಇಂದಿಗೂ ಹಾಗೆಯೇ ಉಳಿದಿದೆ.
ಸ್ನೇಹಿತರೇ ಕೆಲವೇ ದಿನಗಳಲ್ಲಿ ಮೇ 10ರಂದು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಾರ್ಷಿಕೋತ್ಸವ ಕೂಡಾ ಬರಲಿದೆ. ಸ್ವಾತಂತ್ರ್ಯದ ಆ ಮೊದಲ ಯುದ್ಧದಲ್ಲಿ ಹೊತ್ತಿಕೊಂಡ ಕಿಡಿಯು, ಮುಂದೆ ಲಕ್ಷಾಂತರ ಸೈನಿಕರಿಗೆ ಜ್ಯೋತಿಯಾಯಿತು. ಇದೀಗ ಏಪ್ರಿಲ್ 26ರಂದು ನಾವು 1857 ರ ಕ್ರಾಂತಿಯ ಮಹಾನ್ ನಾಯಕ ಬಾಬೂ ವೀರ್ ಕುವರ್ ಸಿಂಹ ಅವರ ಪುಣ್ಯ ತಿಥಿಯನ್ನು ಕೂಡಾ ಆಚರಿಸಿದ್ದೇವೆ. ಬಿಹಾರದ ಮಹಾನ್ ಯೋಧನಿಂದ ಇಡೀ ದೇಶಕ್ಕೆ ಸ್ಫೂರ್ತಿ ದೊರೆಯುತ್ತದೆ. ಇಂತಹ ಲಕ್ಷಾಂತರ ಸ್ವಾತಂತ್ರ್ಯ ಯೋಧರ ಅಮರ ಪ್ರೇರೇಪಣೆಯನ್ನು ನಾವು ಜೀವಂತವಾಗಿ ಇರಿಸಬೇಕು. ನಮಗೆ ಅದರಿಂದ ದೊರೆಯುವ ಶಕ್ತಿಯು ಅಮೃತಕಾಲದ ನಮ್ಮ ಸಂಕಲ್ಪಗಳಿಗೆ ಹೊಸ ಶಕ್ತಿ, ಬಲ ತುಂಬುತ್ತದೆ.
ಸ್ನೇಹಿತರೆ, ‘ಮನದ ಮಾತಿನ’ ಈ ದೀರ್ಘ ಪ್ರಯಾಣದಲ್ಲಿ ನೀವು ಈ ಕಾರ್ಯಕ್ರಮದೊಂದಿಗೆ ಒಂದು ಆತ್ಮೀಯ ಬಾಂಧವ್ಯ ಬೆಸೆದುಕೊಂಡಿದ್ದೀರಿ. ದೇಶವಾಸಿಗಳು ಇತರರೊಂದಿಗೆ ಹಂಚಿಕೊಳ್ಳುವ ಸಾಧನೆಗಳನ್ನು ಮನದ ಮಾತಿನ ಮೂಲಕ ಜನರಿಗೆ ತಲುಪಿಸುತ್ತಾರೆ. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ, ದೇಶದ ವೈವಿಧ್ಯತೆ, ಗೌರವಪೂರ್ಣ ಪರಂಪರೆ ಮತ್ತು ಹೊಸ ಸಾಧನೆಗಳ ಬಗ್ಗೆ ಮಾತನಾಡೋಣ. ಸಮರ್ಪಣೆ ಮತ್ತು ಸೇವಾ ಮನೋಭಾವನೆಯಿಂದ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಇಂತಹ ಜನರ ಕುರಿತು ಹೀಗೆಯೇ ತಿಳಿದುಕೊಳ್ಳುತ್ತಿರೋಣ. ಎಂದಿನಂತೆಯೇ ನೀವೆಲ್ಲರೂ ನಿಮ್ಮ ಚಿಂತನೆಗಳು, ಸಲಹೆ ಸೂಚನೆಗಳನ್ನು ಕಳುಹಿಸುತ್ತಿರಿ. ಧನ್ಯವಾದ, ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಈ ಶುಭ ದಿನದಂದು, ನಿಮ್ಮೊಂದಿಗೆ 'ಮನದ ಮಾತು' ಹಂಚಿಕೊಳ್ಳುವ ಅವಕಾಶ ನನಗೆ ಲಭಿಸಿದೆ. ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿ. ಇಂದಿನಿಂದ ಚೈತ್ರ ನವರಾತ್ರಿ ಪ್ರಾರಂಭವಾಗಲಿದೆ. ಇಂದಿನಿಂದ ಭಾರತೀಯ ನವ ವರ್ಷವೂ ಆರಂಭವಾಗುತ್ತದೆ. ಈ ಬಾರಿ ವಿಕ್ರಮ ಸಂವತ್ಸರ ಅಂದರೆ ೨೦೮೨ (ಎರಡು ಸಾವಿರದ ಎಂಬತ್ತೆರಡು) ಶುರುವಾಗಲಿದೆ. ನನ್ನ ಮುಂದೆ ನೀವು ಬರೆದ ಬಹಳಷ್ಟು ಪತ್ರಗಳಿವೆ. ಬಿಹಾರದವರು, ಬಂಗಾಳದವರು, ಕೆಲವರು ತಮಿಳುನಾಡಿನವರು, ಕೆಲವರು ಗುಜರಾತ್ನವರು ಪತ್ರ ಬರೆದಿದ್ದಾರೆ. ಬಹಳ ಆಸಕ್ತಿಕರವಾಗಿ ಜನರು ತಮ್ಮ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಪತ್ರಗಳು ಶುಭ ಹಾರೈಕೆಗಳು ಮತ್ತು ಅಭಿನಂದನಾ ಸಂದೇಶಗಳನ್ನು ಹೊತ್ತು ತಂದಿವೆ. ಆದರೆ ಇಂದು ನಿಮ್ಮೊಂದಿಗೆ ಕೆಲವು ಸಂದೇಶಗಳನ್ನು ಹಂಚಿಕೊಳ್ಳಬಯಸುತ್ತೇನೆ -
ಪ್ರಧಾನಮಂತ್ರಿ (ತೆಲುಗು ಭಾಷೆಯಲ್ಲಿ) – ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಇನ್ನೊಂದು ಪತ್ರದಲ್ಲಿ ಹೀಗೆ ಬರೆಯಲಾಗಿದೆ -
ಪ್ರಧಾನಮಂತ್ರಿ (ಕೊಂಕಣಿಯಲ್ಲಿ) - ಸಂಸಾರ್ ಪಾಡ್ವ ಶುಭಾಶಯಗಳು
ಸಂಸಾರ್ ಪಾಡ್ಯಮಿಯ ಶುಭಾಶಯಗಳು
ಮುಂದಿನ ಪತ್ರದಲ್ಲಿ ಬರೆಯಲಾಗಿದೆ –
ಪ್ರಧಾನಮಂತ್ರಿ (ಮರಾಠಿಯಲ್ಲಿ) - ಗುಡಿ ಪಾಡ್ವಾ ಸಂದರ್ಭದಲ್ಲಿ ಮನಃಪೂರ್ವಕ ಶುಭಾಶಯಗಳು
ನಮ್ಮ ಸ್ನೇಹಿತರೊಬ್ಬರು ಬರೆದಿದ್ದಾರೆ:
ಪ್ರಧಾನಮಂತ್ರಿ (ಮಲಯಾಳಂನಲ್ಲಿ) – ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು.
ಇನ್ನೊಂದು ಸಂದೇಶವಿದೆ-
ಪ್ರಧಾನಮಂತ್ರಿ (ತಮಿಳಿನಲ್ಲಿ) - ಸರ್ವರಿಗೂ ನವ ವರ್ಷದ ಶುಭಾಶಯಗಳು (ಪುಥಾಂಡು) ಶುಭಾಶಯಗಳು
ಸ್ನೇಹಿತರೇ, ಬೇರೆ ಬೇರೆ ಭಾಷೆಗಳಲ್ಲಿ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ನಿಮಗೆ ತಿಳಿಯಿತಲ್ಲವೇ. ಆದರೆ ಇದರ ಹಿಂದಿರುವ ಕಾರಣ ನಿಮಗೆ ತಿಳಿದಿದೆಯೇ? ಅದೇ ವಿಶೇಷ ವಿಷಯವನ್ನು ಇಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಮತ್ತು ಮುಂದಿನ ಕೆಲವು ದಿನಗಳಲ್ಲಿ ನವ ವರ್ಷಾರಂಭವಾಗುತ್ತಿದೆ ಮತ್ತು ಈ ಎಲ್ಲಾ ಸಂದೇಶಗಳು ಹೊಸ ವರ್ಷ ಮತ್ತು ವಿವಿಧ ಹಬ್ಬಗಳ ಶುಭಾಶಯಗಳು. ಅದಕ್ಕೆಂದೇ ಜನರು ವಿವಿಧ ಭಾಷೆಗಳಲ್ಲಿ ಶುಭ ಹಾರೈಕೆಗಳನ್ನು ಕಳುಹಿಸಿದ್ದಾರೆ.
ಸ್ನೇಹಿತರೇ, ಇಂದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಇಂದು ಗುಡಿಪಾಡ್ವ ಆಚರಿಸಲಾಗುತ್ತಿದೆ. ವೈವಿಧ್ಯಮಯವಾದ ನಮ್ಮ ದೇಶದಲ್ಲಿ, ಮುಂದಿನ ಕೆಲವು ದಿನಗಳಲ್ಲಿ, ವಿವಿಧ ರಾಜ್ಯಗಳು ಅಂದರೆ ಅಸ್ಸಾಂನಲ್ಲಿ 'ರೊಂಗಾಲಿ ಬಿಹು', ಬಂಗಾಳದಲ್ಲಿ 'ಪೊಯಿಲಾ ಬೋಯಿಶಾಖ್', ಕಾಶ್ಮೀರದಲ್ಲಿ 'ನವ್ರೇಹ್' ಹೆಸರಿನಲ್ಲಿ ನವ ವರ್ಷ ಆಚರಿಸಲಾಗುತ್ತದೆ. ಅದೇ ರೀತಿ, ಏಪ್ರಿಲ್ 13 ರಿಂದ 15 ರವರೆಗೆ, ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳ ಸಂಭ್ರಮಾಚರಣೆ ಮನೆ ಮಾಡಿರಲಿದೆ. ಈ ಸಂಭ್ರಮದ ವಾತಾವರಣದಲ್ಲಿಯೇ, ಈದ್ ಹಬ್ಬವೂ ಮೇಳಯಿಸಿದೆ. ಅಂದರೆ ಈ ತಿಂಗಳು ಪೂರ್ತಿ ಹಬ್ಬಗಳು ಮತ್ತು ಆಚರಣೆಗಳಿಂದ ತುಂಬಿರುತ್ತದೆ. ಈ ಹಬ್ಬಗಳ ಸಂದರ್ಭದಲ್ಲಿ ದೇಶದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಈ ಹಬ್ಬಗಳು ಬೇರೆ ಬೇರೆ ಪ್ರದೇಶಗಳಲ್ಲಿ ಆಚರಿಸಲ್ಪಡಬಹುದು ಆದರೆ ಭಾರತದ ವೈವಿಧ್ಯತೆಯಲ್ಲಿಯೂ ಏಕತೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಅವು ತೋರ್ಪಡಿಸುತ್ತವೆ. ಈ ಏಕತೆಯ ಭಾವನೆಯನ್ನು ನಿರಂತರವಾಗಿ ಬಲಪಡಿಸುತ್ತಾ ಸಾಗಬೇಕು.
ಸ್ನೇಹಿತರೇ, ಪರೀಕ್ಷೆಗಳು ಸಮೀಪಿಸಿದಾಗ, ನಾನು ನನ್ನ ಯುವ ಸ್ನೇಹಿತರೊಂದಿಗೆ ಪರೀಕ್ಷೆಗಳ ಕುರಿತು ಚರ್ಚಿಸುತ್ತೇನೆ. ಈಗ ಪರೀಕ್ಷೆಗಳು ಮುಗಿದಿವೆ. ಅನೇಕ ಶಾಲೆಗಳಲ್ಲಿ, ಮತ್ತೆ ತರಗತಿಗಳನ್ನು ಪ್ರಾರಂಭಿಸುವ ಸಿದ್ಧತೆಗಳು ನಡೆಯುತ್ತಿವೆ. ಇದಾದ ನಂತರ, ಬೇಸಿಗೆ ರಜೆ ಬರಲಿದೆ. ವರ್ಷದ ಈ ಅವಧಿಗಾಗಿ ಮಕ್ಕಳು ಕಾತುರದಿಂದ ಕಾಯುತ್ತಿರುತ್ತಾರೆ . ನಾನು ಮತ್ತು ನನ್ನ ಸ್ನೇಹಿತರು ದಿನವಿಡೀ ಏನಾದರೂ ಕಿಡಿಗೇಡಿತನ ಮಾಡುತ್ತಿದ್ದಂತಹ ನನ್ನ ಬಾಲ್ಯದ ದಿನಗಳು ನೆನಪಾದವು. ಆದರೆ ಅದೇ ಸಮಯದಲ್ಲಿ, ನಾವು ಏನಾದರೂ ರಚನಾತ್ಮಕವಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೆವು ಮತ್ತು ಕಲಿಯುತ್ತಿದ್ದೆವು. ಬೇಸಿಗೆಯ ದಿನಗಳು ಸುದೀರ್ಘವಾಗಿರುತ್ತವೆ ಮತ್ತು ಮಕ್ಕಳಿಗೆ ಏನನ್ನಾದರೂ ಮಾಡಲು ಬಹಳ ಅವಕಾಶವಿರುತ್ತದೆ. ಹೊಸ ಹವ್ಯಾಸವನ್ನು ಮೈಗೂಡಿಸಿಕೊಳ್ಳಲು ಮತ್ತು ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಇದು ಸಕಾಲವಾಗಿದೆ. ಮಕ್ಕಳು ಬಹಳಷ್ಟು ಕಲಿಯಬಹುದಾದ ವೇದಿಕೆಗಳಿಗೆ ಇಂದು ಕೊರತೆಯಿಲ್ಲ. ಉದಾಹರಣೆಗೆ, ಯಾವುದೇ ಸಂಸ್ಥೆ ತಂತ್ರಜ್ಞಾನ ಶಿಬಿರವನ್ನು ನಡೆಸುತ್ತಿದ್ದರೆ, ಮಕ್ಕಳು ಅಲ್ಲಿ ಅಪ್ಲಿಕೇಶನ್ಗಳನ್ನು ತಯಾರಿಸುವುದರ ಜೊತೆಗೆ ಓಪನ್ ಸೋರ್ಸ್ ಸಾಫ್ಟ್ವೇರ್ ಬಗ್ಗೆ ಅರಿಯಬಹುದು. ಪರಿಸರ, ರಂಗಭೂಮಿ ಅಥವಾ ನಾಯಕತ್ವದಂತಹ ವಿವಿಧ ವಿಷಯಗಳ ಕುರಿತು ಕೋರ್ಸ್ಗಳಿರುತ್ತವೆ, ತಾವು ಅವುಗಳಿಗೂ ಸೇರಿಕೊಳ್ಳಬಹುದು. ಭಾಷಣ ಅಥವಾ ನಾಟಕವನ್ನು ಕಲಿಸುವ ಅನೇಕ ಶಾಲೆಗಳಿವೆ, ಇವು ಮಕ್ಕಳಿಗೆ ತುಂಬಾ ಉಪಯುಕ್ತವಾಗಿವೆ. ಇಷ್ಟೇ ಅಲ್ಲದೆ, ಈ ರಜಾದಿನಗಳಲ್ಲಿ ವಿವಿಧೆಡೆ ನಡೆಯುತ್ತಿರುವ ಸ್ವಯಂಸೇವಕ ಚಟುವಟಿಕೆಗಳು ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿಮಗೆ ಅವಕಾಶವಿದೆ. ಅಂತಹ ಕಾರ್ಯಕ್ರಮಗಳ ಬಗ್ಗೆ ಒಂದು ವಿಶೇಷ ವಿನಂತಿ ಇದೆ. ಯಾವುದೇ ಸಂಸ್ಥೆ, ಶಾಲೆ, ಸಾಮಾಜಿಕ ಸಂಸ್ಥೆ ಅಥವಾ ವಿಜ್ಞಾನ ಕೇಂದ್ರಗಳು ಇಂತಹ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿದ್ದರೆ, ಅದನ್ನು #MyHolidays ನೊಂದಿಗೆ ಹಂಚಿಕೊಳ್ಳಿ. ಇದರಿಂದಾಗಿ, ದೇಶಾದ್ಯಂತ ಮಕ್ಕಳು ಮತ್ತು ಅವರ ಪೋಷಕರಿಗೆ ಇವುಗಳ ಬಗ್ಗೆ ಸುಲಭವಾಗಿ ಮಾಹಿತಿ ಲಭ್ಯವಾಗುತ್ತದೆ.
ನನ್ನ ಯುವ ಸ್ನೇಹಿತರೇ, ಇಂದು ನಿಮ್ಮೊಂದಿಗೆ ಈ ಬೇಸಿಗೆ ರಜೆಗಾಗಿ ಸಿದ್ಧಪಡಿಸಲಾಗಿರುವ MY-Bharat ವಿಶೇಷ ಕ್ಯಾಲೆಂಡರ್ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಈ ಕ್ಯಾಲೆಂಡರ್ನ ಒಂದು ಪ್ರತಿಯನ್ನು ಈಗ ನನ್ನ ಮುಂದೆ ಇರಿಸಲಾಗಿದೆ. ಈ ಕ್ಯಾಲೆಂಡರ್ ಮೂಲಕ ಕೆಲವು ವಿಶಿಷ್ಟ ಪ್ರಯತ್ನಗಳ ಕುರಿತು ಪ್ರಸ್ತುತಪಡಿಸಬಯಸುತ್ತೇನೆ. ಅವುಗಳೇನೆಂದರೆ MY-Bharat ಅಧ್ಯಯನ ಪ್ರವಾಸದಲ್ಲಿ, ನಮ್ಮ 'ಜನೌಷಧಿ ಕೇಂದ್ರಗಳು' ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ವೈಬ್ರಂಟ್ ವಿಲೇಜ್ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಗಡಿ ಗ್ರಾಮಗಳಲ್ಲಿ ವಿಶಿಷ್ಟ ಅನುಭವವನ್ನು ಪಡೆಯಬಹುದು. ಇದರೊಂದಿಗೆ, ಅಲ್ಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಕೂಡಾ ನೀವು ಭಾಗವಹಿಸಬಹುದು. ಜೊತೆಗೆ ಅಂಬೇಡ್ಕರ್ ಪುಣ್ಯತಿಥಿಯಂದು ನಡೆಯುವ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ನೀವು ಸಂವಿಧಾನದ ಮೌಲ್ಯಗಳ ಬಗ್ಗೆ ನೀವು ಜಾಗೃತಿ ಮೂಡಿಸುವ ಕೆಲಸ ಕೂಡಾ ಮಾಡಬಹುದು. ಮಕ್ಕಳು ಮತ್ತು ಅವರ ಪೋಷಕರಲ್ಲಿ ತಮ್ಮ ರಜಾದಿನದ ಅನುಭವಗಳನ್ನು #HolidayMemories ನೊಂದಿಗೆ ಹಂಚಿಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಮುಂಬರುವ 'ಮನದ ಮಾತಿ' ನಲ್ಲಿ ನಿಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ, ಪ್ರತಿ ನಗರ ಮತ್ತು ಗ್ರಾಮಗಳಲ್ಲಿ ನೀರಿನ ಉಳಿತಾಯದ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಅನೇಕ ರಾಜ್ಯಗಳಲ್ಲಿ, ನೀರು ಕೊಯ್ಲು ಮತ್ತು ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಕೆಲಸಗಳು ಹೊಸ ಆವೇಗ ಪಡೆದುಕೊಂಡಿವೆ. ಜಲಶಕ್ತಿ ಸಚಿವಾಲಯ ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.
ದೇಶದಲ್ಲಿ ಸಾವಿರಾರು ಕೃತಕ ಕೊಳಗಳು, ಚೆಕ್ ಡ್ಯಾಮ್ಗಳು, ಬೋರ್ವೆಲ್ ರೀಚಾರ್ಜ್, ಕಮ್ಯೂನಿಟಿ ಸೋಕ್ ಪಿಟ್ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ‘catch the rain’ ಅಭಿಯಾನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಅಭಿಯಾನ ಸರ್ಕಾರದದ್ದಲ್ಲ, ಬದಲಾಗಿ ಸಮಾಜದ್ದು, ಜನಮಾನಸದ್ದು. ಜಲ ಸಂರಕ್ಷಣೆ ಕಾರ್ಯದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುವಂತೆ ಮಾಡಲು, ಜಲ್ ಸಂಚಯ್ ಜನ ಭಾಗಿದಾರಿ ಅಭಿಯಾನ ಸಹ ನಡೆಸಲಾಗುತ್ತಿದೆ. ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ವರ್ಗಾಯಿಸುವುದು ನಮ್ಮ ಪ್ರಯತ್ನ.
ಸ್ನೇಹಿತರೇ, ಮಳೆಹನಿಗಳನ್ನು ಸಂರಕ್ಷಿಸುವ ಮೂಲಕ ನಾವು ವ್ಯರ್ಥವಾಗುತ್ತಿರುವ ನೀರಿನ ಪ್ರಮಾಣವನ್ನು ತಗ್ಗಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ, ಈ ಅಭಿಯಾನದಡಿ ದೇಶದ ಹಲವಾರು ಭಾಗಗಳಲ್ಲಿ ಜಲ ಸಂರಕ್ಷಣೆಯ ಅಭೂತಪೂರ್ವ ಕೆಲಸ ನಡೆದಿದೆ. ನಿಮಗೆ ಒಂದು ಕುತೂಹಲಕಾರಿ ಅಂಕಿಅಂಶದ ಬಗ್ಗೆ ಹೇಳುತ್ತೇನೆ. ಕಳೆದ 7-8 ವರ್ಷಗಳಲ್ಲಿ, ಹೊಸದಾಗಿ ನಿರ್ಮಿಸಲಾದ ಟ್ಯಾಂಕ್ಗಳು, ಕೊಳಗಳು ಮತ್ತು ಇತರ ನೀರಿನ ಮರುಪೂರಣ ರಚನೆಗಳ ಮೂಲಕ 11 ಶತಕೋಟಿ ಘನ ಮೀಟರ್ಗಳಿಗಿಂತ ಹೆಚ್ಚು ನೀರನ್ನು ಸಂರಕ್ಷಿಸಲಾಗಿದೆ. ಈಗ ನೀವು 11 ಬಿಲಿಯನ್ ಕ್ಯೂಬಿಕ್ ಮೀಟರ್ ಅಂದರೆ ಎಷ್ಟು ನೀರು ಎಂದು ಆಶ್ಚರ್ಯಪಡುತ್ತಿರಬೇಕು?
ಸ್ನೇಹಿತರೇ, ನೀವು ಭಾಕ್ರಾ ನಂಗಲ್ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಚಿತ್ರಗಳನ್ನು ನೋಡಿರಬಹುದು. ಈ ನೀರು ಗೋವಿಂದ ಸಾಗರ್ ಸರೋವರವನ್ನು ರೂಪಿಸುತ್ತದೆ. ಈ ಸರೋವರದ ಉದ್ದವು 90 ಕಿಲೋಮೀಟರ್ಗಳಿಗಿಂತ ಹೆಚ್ಚು. ಈ ಸರೋವರದಲ್ಲಿಯೂ ಸಹ 9-10 ಶತಕೋಟಿ ಘನ ಮೀಟರ್ಗಳಿಗಿಂತ ಹೆಚ್ಚಿನ ನೀರನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಕೇವಲ 9-10 ಬಿಲಿಯನ್ ಘನ ಮೀಟರ್! ಆದರೆ ತಮ್ಮ ಸಣ್ಣಪುಟ್ಟ ಪ್ರಯತ್ನಗಳ ಮೂಲಕ, ದೇಶವಾಸಿಗಳು ದೇಶದ ವಿವಿಧ ಭಾಗಗಳಲ್ಲಿ 11 ಬಿಲಿಯನ್ ಘನ ಮೀಟರ್ ನೀರನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ - ಇದು ಒಂದು ಅದ್ಭುತ ಪ್ರಯತ್ನವಲ್ಲವೇ!
ಸ್ನೇಹಿತರೇ, ಈ ನಿಟ್ಟಿನಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಜನರು ಒಂದು ಮಾದರಿಯನ್ನು ರೂಪಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಇಲ್ಲಿನ ಎರಡು ಹಳ್ಳಿಗಳ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿದ್ದವು. ಪ್ರಾಣಿಗಳಿಗೂ ಕುಡಿಯಲು ನೀರು ಇಲ್ಲದ ಕಾಲ ಬಂದೊದಗಿತು. ಕ್ರಮೇಣ ಆ ಕೆರೆ ಹುಲ್ಲು ಮತ್ತು ಕಸಕಡ್ಡಿಗಳಿಂದ ತುಂಬಿಹೋಯಿತು. ಆದರೆ ಕೆಲವು ಗ್ರಾಮಸ್ಥರು ಕೆರೆ ಪುನರುಜ್ಜೀವನಗೊಳಿಸಲು ನಿರ್ಧರಿಸಿ ಕಾರ್ಯನಿರತರಾದರು. ಗಾದೆ ಮಾತಿನಂತೆ 'ಮನಸ್ಸಿದ್ದಲ್ಲಿ ಮಾರ್ಗ'. ಗ್ರಾಮಸ್ಥರ ಈ ಪ್ರಯತ್ನವನ್ನು ನೋಡಿ, ಸುತ್ತಮುತ್ತಲ ಸಾಮಾಜಿಕ ಸಂಸ್ಥೆಗಳು ಸಹ ಅವರೊಂದಿಗೆ ಕೈಜೋಡಿಸಿದವು. ಎಲ್ಲರೂ ಒಗ್ಗೂಡಿ ಕಸಕಡ್ಡಿ ಸ್ವಚ್ಛಗೊಳಿಸಿ, ಹೂಳೆತ್ತುವ ಕೆಲಸ ಮಾಡಿದರು. ಕೆಲ ಸಮಯದ ನಂತರ ಕೆರೆ ಪ್ರದೇಶವು ಸಂಪೂರ್ಣವಾಗಿ ಸ್ವಚ್ಛವಾಯಿತು. ಈಗ ಜನ ಮಳೆಗಾಲಕ್ಕಾಗಿ ಕಾಯುತ್ತಿದ್ದಾರೆ. ನಿಜಕ್ಕೂ, ಇದು ‘catch the rain’ ಅಭಿಯಾನದ ಒಂದು ಉತ್ತಮ ಉದಾಹರಣೆಯಾಗಿದೆ. ಸ್ನೇಹಿತರೇ, ನೀವು ಕೂಡ ಸಮುದಾಯ ಮಟ್ಟದಲ್ಲಿ ಇಂತಹ ಪ್ರಯತ್ನಗಳಿಗೆ ಕೈಜೋಡಿಸಬಹುದು. ಈ ಜನಾಂದೋಲನವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಈಗಲೇ ಯೋಜನೆ ಆರಂಭಿಸಬೇಕು, ಮತ್ತು ನೀವು ಇನ್ನೊಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು - ಸಾಧ್ಯವಾದರೆ, ಬೇಸಿಗೆಯಲ್ಲಿ ನಿಮ್ಮ ಮನೆಯ ಮುಂದೆ ಒಂದು ಪಾತ್ರೆಯಲ್ಲಿ ತಣ್ಣೀರನ್ನು ಇರಿಸಿ. ನಿಮ್ಮ ಮನೆಯ ಛಾವಣಿ ಅಥವಾ ಅಂಗಳದಲ್ಲಿ ಪಕ್ಷಿಗಳಿಗೆ ನೀರನ್ನು ಇರಿಸಿ. ಈ ಪುಣ್ಯದ ಕೆಲಸ ಮಾಡಿದ ನಂತರ ನಿಮಗೆ ಎಷ್ಟು ಒಳ್ಳೆಯ ಅನುಭೂತಿಯಾಗುತ್ತದೆ ಎಂದು ನೀವೇ ಅನುಭವಿಸಿ ನೋಡಿ.
ಸ್ನೇಹಿತರೇ, ಈಗ 'ಮನದ ಮಾತಿನಲ್ಲಿ' ಧೈರ್ಯ ಸಾಹಸದ ಬಗ್ಗೆ, ಸವಾಲುಗಳ ಮಧ್ಯೆಯೂ ಉತ್ಸಾಹ ಮೆರೆದ ವಿಷಯಗಳ ಬಗ್ಗೆ ಮಾತನಾಡೋಣ! ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ, ಮತ್ತೊಮ್ಮೆ ತಮ್ಮ ಸಮರ್ಪಣೆ ಮತ್ತು ಪ್ರತಿಭೆಯ ಮೂಲಕ ನಮ್ಮ ಕ್ರೀಡಾಳುಗಳು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಬಾರಿ ಈ ಕ್ರೀಡೆಗಳಲ್ಲಿ ಮೊದಲಿಗಿಂತ ಹೆಚ್ಚಿನ ಕ್ರೀಡಾಳುಗಳು ಭಾಗವಹಿಸಿದ್ದರು. ಪ್ಯಾರಾ ಸ್ಪೋರ್ಟ್ಸ್ ಎಷ್ಟು ಜನಪ್ರಿಯವಾಗುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ. ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರ ಅದ್ಭುತ ಪ್ರಯತ್ನಗಳಿಗಾಗಿ ನಾನು ಅಭಿನಂದಿಸುತ್ತೇನೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದ ಹರಿಯಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶದ ಕ್ರೀಡಾಳುಗಳನ್ನು ನಾನು ಅಭಿನಂದಿಸುತ್ತೇನೆ. ಈ ಪಂದ್ಯಗಳಲ್ಲಿ, ನಮ್ಮ ವಿಕಲಚೇತನ ಆಟಗಾರರು 18 ರಾಷ್ಟ್ರೀಯ ದಾಖಲೆಗಳನ್ನು ಮಾಡಿದರು. ಅವುಗಳಲ್ಲಿ 12 ನಮ್ಮ ಮಹಿಳಾ ಆಟಗಾರ್ತಿಯರ ಸಾಧನೆಯಾಗಿವೆ. ಈ ವರ್ಷದ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ Arm Wrestler ಜಾಬಿ ಮ್ಯಾಥ್ಯೂ ನನಗೆ ಪತ್ರ ಬರೆದಿದ್ದಾರೆ. ಅವರ ಪತ್ರದ ಕೆಲವು ಭಾಗವನ್ನು ನಾನು ಓದಲು ಬಯಸುತ್ತೇನೆ. ಅವರು ಹೀಗೆ ಬರೆದಿದ್ದಾರೆ-
"ಪದಕ ಗೆಲ್ಲುವುದು ಬಹಳ ವಿಶೇಷ ಅನುಭವ, ಆದರೆ ನಮ್ಮ ಹೋರಾಟ ಕೇವಲ ವೇದಿಕೆಯ ಮೇಲೆ ಸ್ಥಾನ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮದು ನಿತ್ಯ ಹೋರಾಟ. ಹಲವು ವಿಧಗಳಲ್ಲಿ ಜೀವನವು ನಮಗೆ ಪರೀಕ್ಷೆಯನ್ನೊಡ್ಡುತ್ತದೆ, ನಮ್ಮ ಈ ಹೋರಾಟವನ್ನು ಕೆಲವರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ಇದರ ಹೊರತಾಗಿಯೂ, ನಾವು ಧೈರ್ಯದಿಂದ ಮುಂದುವರಿಯುತ್ತೇವೆ. ನಮ್ಮ ಕನಸುಗಳನ್ನು ನನಸಾಗಿಸಲು ನಾವು ಶ್ರಮಿಸುತ್ತೇವೆ. ನಾವು ಯಾರಿಗೇನೂ ಕಡಿಮೆಯಿಲ್ಲ ಎಂದು ನಮ್ಮಲ್ಲಿ ಅಚಲ ವಿಶ್ವಾಸವಿರುತ್ತದೆ."
ಅದ್ಭುತ! ಜಾಬಿ ಮ್ಯಾಥ್ಯೂ ಅವರೇ, ನೀವು ಅದ್ಭುತವಾಗಿ ಬರೆದಿದ್ದೀರಿ. ಈ ಪತ್ರಕ್ಕಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಾಬಿ ಮ್ಯಾಥ್ಯೂ ಮತ್ತು ನಮ್ಮ ಎಲ್ಲಾ ವಿಕಲಚೇತನ ಸ್ನೇಹಿತರಿಗೆ ನಾನು ಹೇಳಲು ಬಯಸುವುದೇನೆಂದರೆ, ನಿಮ್ಮ ಪ್ರಯತ್ನಗಳು ನಮಗೆ ದೊಡ್ಡ ಸ್ಫೂರ್ತಿಯಾಗಿದೆ.ಸ್ನೇಹಿತರೇ, ದೆಹಲಿಯಲ್ಲಿ ಮತ್ತೊಂದು ಬೃಹತ್ ಆಯೋಜನೆಯು ಜನರಿಗೆ ಬಹಳ ಪ್ರೇರಣಾದಾಯಕವಾಗಿತ್ತು, ಜನರಲ್ಲಿ ಉತ್ಸಾಹ ತುಂಬಿತು. ಒಂದು ಆವಿಷ್ಕಾರಕ ಆಲೋಚನೆಯ ರೂಪದಲ್ಲಿ ಮೊಟ್ಟಮೊದಲ ಬಾರಿಗೆ Fit India Carnival ಆಯೋಜಿಸಲಾಯಿತು. ಇದರಲ್ಲಿ ಬೇರೆ ಬೇರೆ ಕ್ಷೇತ್ರಗಳ ಸರಿಸುಮಾರು 25 ಸಾವಿರ ಮಂದಿ ಪಾಲ್ಗೊಂಡಿದ್ದರು. ಇವರೆಲ್ಲರ ಲಕ್ಷ್ಯ-ಗುರಿ ಒಂದೇ ಆಗಿತ್ತು ಅದೆಂದರೆ – ಆರೋಗ್ಯವಾಗಿ ಸದೃಢರಾಗಿರುವುದು ಮತ್ತು ಸದೃಡರಾಗಿರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ತಮ್ಮ ಆರೋಗ್ಯ ಮಾತ್ರವಲ್ಲದೇ ಪೋಷಣೆ ಸಂಬಂಧಿತ ಅರಿವನ್ನು ಕೂಡಾ ಪಡೆದುಕೊಂಡರು. ನೀವು ವಾಸಿಸುವ ಪ್ರದೇಶಗಳಲ್ಲಿ ಕೂಡಾ ಇಂತಹ ಕಾರ್ನಿವಾಲ್ ಗಳನ್ನು ಆಯೋಜಿಸಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಉಪಕ್ರಮದಲ್ಲಿ ನಿಮಗೆ MY-Bharat ಬಹಳ ಉಪಯುಕ್ತವಾಗಬಹುದು.
ಸ್ನೇಹಿತರೆ, ನಮ್ಮ ದೇಶೀಯ ಆಟ ಈಗ ಜನಪ್ರಿಯ ಸಂಸ್ಕೃತಿಯ ಭಾಗವಾಗುತ್ತಿದೆ. ನಿಮ್ಮೆಲ್ಲರಿಗೂ ಪ್ರಸಿದ್ಧ ರಾಪ್ಪರ್ ಹನುಮಾನ್ ಕೈಂಡ್ ಬಗ್ಗೆ ತಿಳಿದೇ ಇದೆ. ಇತ್ತೀಚೆಗೆ ಇವರ ಹೊಸ ಹಾಡು “Run It Up” ಬಹಳ ಜನಪ್ರಿಯವಾಗುತ್ತಿದೆ. ಇದರಲ್ಲಿ ಕಲಾರಿಪಯುಟ್ಟು, ಗತಕಾದಂತಹ ನಮ್ಮ ಸಾಂಪ್ರದಾಯಿಕ ಸಮರ ಕಲೆಗಳನ್ನು ಕೂಡಾ ಸೇರಿಸಲಾಗಿದೆ. Hanumankind (हनुमान काइन्ड) ಅವರ ಪ್ರಯತ್ನಗಳಿಂದಾಗಿ ನಮ್ಮ ಸಾಂಪ್ರದಾಯಿಕ ಸಮರ ಕಲೆಗಳ ಬಗ್ಗೆ ವಿಶ್ವಾದ್ಯಂತ ಜನರು ತಿಳಿದುಕೊಳ್ಳಲು ಸಾಧ್ಯವಾಗುತ್ತಿರುವುದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ತಿಂಗಳೂ ನನಗೆ MyGov ಮತ್ತು NaMo App ನಲ್ಲಿ ನಿಮ್ಮ ಅನೇಕ ಸಂದೇಶಗಳು ದೊರೆಯುತ್ತವೆ. ಕೆಲವು ಸಂದೇಶಗಳು ನನ್ನ ಮನ ಮುಟ್ಟಿದರೆ ಇನ್ನು ಕೆಲವು ಸಂದೇಶಗಳು ನನ್ನ ಮನಸ್ಸಿನಲ್ಲಿ ಹೆಮ್ಮೆ ತುಂಬುತ್ತವೆ. ಹಲವು ಬಾರಿ ಈ ಸಂದೇಶಗಳಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ವಿಶೇಷ ಮಾಹಿತಿ ದೊರೆಯುತ್ತದೆ. ಈ ಬಾರಿ ನನ್ನ ಗಮನ ಸೆಳೆದ ಅಂತಹ ಒಂದು ಸಂದೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ವಾರಾಣಸಿಯ ಅಥರ್ವ್ ಕಪೂರ್, ಮುಂಬಯಿನ ಆರ್ಯಶ್ ಲೀಖಾ ಮತ್ತು ಅತ್ರೇಯ ಮಾನ್ ಅವರು ನನ್ನ ಇತ್ತೀಚಿನ ಮಾರಿಷಸ್ ಪ್ರವಾಸದ ಬಗ್ಗೆ ತಮ್ಮ ಭಾವನೆಗಳನ್ನು ಬರೆದು ಕಳುಹಿಸಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಗೀತ್ ಗವಯೀ ಅವರ ಪ್ರದರ್ಶನ ಅವರಿಗೆ ಬಹಳ ಸಂತಸ ತಂದಿತೆಂದು ಅವರು ಬರೆದಿದ್ದಾರೆ. ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದ ಅನೇಕ ಪತ್ರಗಳಲ್ಲಿ ನಾನು ಇದೇ ರೀತಿಯ ಭಾವುಕತೆಯನ್ನು ನೋಡಿದ್ದೇನೆ. ಮಾರಿಷಸ್ ನಲ್ಲಿ ಗೀತ್ ಗವಾಯಿ ಅವರ ಅದ್ಭುತ ಪ್ರದರ್ಶನದ ಸಮಯದಲ್ಲಿ ನನಗೆ ನಿಜಕ್ಕೂ ಅದ್ಭುತ ಅನಿಸಿಕೆಯಾಗಿತ್ತು.
ಸ್ನೇಹಿತರೇ, ನಾವು ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರುವಾಗ, ಎಷ್ಟೇ ದೊಡ್ಡ ಬಿರುಗಾಳಿ ಬಂದರೂ, ಅದು ನಮ್ಮನ್ನು ಬೇರು ಸಹಿತ ಕಿತ್ತುಹಾಕಲು ಸಾಧ್ಯವಿಲ್ಲ. ಊಹಿಸಿಕೊಳ್ಳಿ, ಸುಮಾರು 200 ವರ್ಷಗಳ ಹಿಂದೆ ಭಾರತದಿಂದ ಅನೇಕರು ಗುತ್ತಿಗೆ ಕಾರ್ಮಿಕರಾಗಿ ಮಾರಿಷಸ್ ಗೆ ಹೋಗಿದ್ದರು. ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಕಾಲಕ್ರಮೇಣ ಅವರು ಅಲ್ಲಿಯೇ ನೆಲೆಸಿದರು. ಅವರು ಮಾರಿಷಸ್ ನಲ್ಲಿ ಹೆಸರು ಗಳಿಸಿದರು. ತಮ್ಮ ಪರಂಪರೆಯನ್ನು ಸಂರಕ್ಷಿಸಿಕೊಂಡರು ಮತ್ತು ತಮ್ಮ ಬೇರುಗಳೊಂದಿಗೆ ಸಂಪರ್ಕ ಕಡಿದುಕೊಳ್ಳಲಿಲ್ಲ, ಹಾಗೆಯೇ ಉಳಿಸಿಕೊಂಡು ಬಂದರು. ಇಂತಹ ವಿಷಯಗಳಿಗೆ ಕೇವಲ ಮಾರಿಷಸ್ ಮಾತ್ರಾ ಒಂದು ಉದಾಹರಣೆಯಲ್ಲ. ಕಳೆದ ವರ್ಷ ನಾನು ಗಯಾನಾಗೆ ಹೋದಾಗ, ಅಲ್ಲಿನ ಚೌತಾಲ್ ಪ್ರದರ್ಶನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ.
ಸ್ನೇಹಿತರೇ, ನಾನು ಈಗ ನಿಮಗೆ ಒಂದು ಆಡಿಯೋ ಕೇಳಿಸುತ್ತೇನೆ
#(Audio clip Fiji)#
ಇದು ನಮ್ಮದೇ ದೇಶದ ಯಾವುದೋ ಭಾಗದ ಮಾತುಕತೆ ಎಂದು ನೀವು ಖಂಡಿತವಾಗಿಯೂ ಯೋಚಿಸುತ್ತಿದ್ದೀರಿ ಅಲ್ಲವೇ. ಆದರೆ ಇದು ಫಿಜಿ ದೇಶಕ್ಕೆ ಸಂಬಂಧಿಸಿದ್ದು ಎಂದು ತಿಳಿದು ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇದು ಫಿಜಿ ದೇಶದ ಬಹಳ ಜನಪ್ರಿಯ ‘ಫಾಗವಾ ಚೌತಾಲ್‘ ಆಗಿದೆ. ಈ ಹಾಡು ಮತ್ತು ಸಂಗೀತ ಪ್ರತಿಯೊಬ್ಬರಲ್ಲೂ ಉತ್ಸಾಹ ತುಂಬುತ್ತದೆ. ನಾನು ನಿಮಗೆ ಮತ್ತೊಂದು ಆಡಿಯೋ ಕೇಳಿಸುತ್ತೇನೆ.
#(Audio clip Surinam)#
ಇದು ಸೂರಿನಾಮ್ ನ ‘ಚೌತಾಲ್’ ಆಡಿಯೋ. ಈ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ದೇಶವಾಸಿಗಳು, ಸೂರಿನಾಮ್ ನ ಅಧ್ಯಕ್ಷರು ಮತ್ತು ನನ್ನ ಪ್ರಿಯ ಸ್ನೇಹಿತರಾಗಿರುವ ಚಾನ್ ಸಂತೋಖೀ ಅವರು ಇದರ ಆನಂದ ಆಸ್ವಾದಿಸುತ್ತಿರುವುದನ್ನು ಕಾಣಬಹುದು. ಬೈಠಕ್ ಮತ್ತು ಹಾಡುಗಳ ಈ ಸಂಪ್ರದಾಯವು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೂಡಾ ಬಹಳ ಜನಪ್ರಿಯವೆನಿಸಿದೆ. ಈ ಎಲ್ಲಾ ದೇಶಗಳಲ್ಲಿ ಜನರು ರಾಮಾಯಣವನ್ನು ಬಹಳ ಓದುತ್ತಾರೆ. ಈ ಫಗವಾ ಬಹಳ ಜನಪ್ರಿಯವಾಗಿದೆ ಮತ್ತು ಇಲ್ಲಿನ ಜನರು ಎಲ್ಲಾ ಭಾರತೀಯ ಹಬ್ಬಗಳನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಅವರ ಅನೇಕ ಹಾಡುಗಳು ಭೋಜಪುರಿ, ಅವಧಿ ಅಥವಾ ಮಿಶ್ರ ಭಾಷೆಯಲ್ಲಿರುತ್ತವೆ, ಕೆಲವೊಮ್ಮೆ ಬ್ರಜ್ ಮತ್ತು ಮೈಥಿಲಿ ಭಾಷೆಗಳ ಕೂಡಾ ಬಳಕೆಯಾಗುತ್ತವೆ. ಈ ದೇಶಗಳಲ್ಲಿ ನಮ್ಮ ಸಂಪ್ರದಾಯಗಳನ್ನು ರಕ್ಷಿಸುವವರೆಲ್ಲರೂ ಪ್ರಶಂಸಾರ್ಹರು.
ಸ್ನೇಹಿತರೇ, ಜಗತ್ತಿನಲ್ಲಿ ಇಂತಹ ಅನೇಕ ಸಂಸ್ಥೆಗಳು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿವೆ. ಅಂತಹ ಒಂದು ಸಂಸ್ಥೆಯೇ - 'ಸಿಂಗಾಪುರ್ ಭಾರತೀಯ ಲಲಿತಾ ಕಲಾ ಸಂಘ ಅಥವಾ ಸಿಂಗಾಪುರ್ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ'. ಭಾರತೀಯ ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು ಈಗ ವೈಭವಯುತ 75 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸಿಂಗಾಪುರದ ಅಧ್ಯಕ್ಷ ಶ್ರೀ ಥರ್ಮನ್ ಷಣ್ಮುಗರತ್ನಂ ಅವರು ಗೌರವಾನ್ವಿತ ಅತಿಥಿಯಾಗಿದ್ದರು. ಅವರು ಈ ಸಂಸ್ಥೆಯ ಪ್ರಯತ್ನಗಳನ್ನು ಬಹಳವಾಗಿ ಶ್ಲಾಘಿಸಿದರು. ನಾನು ಈ ತಂಡಕ್ಕೆ ನನ್ನ ಅನೇಕಾನೇಕ ಶುಭ ಹಾರೈಕೆಗಳನ್ನು ಕೋರುತ್ತೇನೆ.
ಸ್ನೇಹಿತರೇ, ‘ಮನದ ಮಾತಿನಲ್ಲಿ’ ನಾವು ದೇಶವಾಸಿಗಳ ಸಾಧನೆಯೊಂದಿಗೆ ಆಗಾಗ್ಗೆ ಸಾಮಾಜಿಕ ವಿಷಯಗಳ ಕುರಿತು ಮಾತನಾಡುತ್ತೇವೆ. ಅನೇಕ ಬಾರಿ ಸವಾಲುಗಳ ಬಗ್ಗೆ ಕೂಡಾ ಚರ್ಚಿಸಲಾಗುತ್ತದೆ. ಈ ಬಾರಿ ‘ಮನದ ಮಾತಿನಲ್ಲಿ’ ನಾನು, ನೇರವಾಗಿ ನಮ್ಮೆಲ್ಲರಿಗೂ ಸಂಬಂಧಿಸಿದಂತಹ ಒಂದು ಸವಾಲಿನ ಬಗ್ಗೆ ಮಾತನಾಡಲು ಬಯಸುತ್ತೇನೆ. ಈ ಸವಾಲೆಂದರೆ ಅದು ‘ಜವಳಿ ತ್ಯಾಜ್ಯ’. ಈ ಜವಳಿ ತ್ಯಾಜ್ಯ ಯಾವ ಹೊಸ ಸವಾಲು ಒಡ್ಡಿದೆ ಎಂದು ನೀವು ಯೋಚಿಸುತ್ತಿರಬಹುದಲ್ಲವೇ? ವಾಸ್ತವದಲ್ಲಿ ಜವಳಿ ತ್ಯಾಜ್ಯ ಇಡೀ ವಿಶ್ವಕ್ಕೆ ಒಂದು ಹೊಸ ಚಿಂತೆಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹಳೆಯ ಉಡುಪುಗಳನ್ನು ಬೇಗ ಬೇಗ ಎಸೆದು ಹೊಸ ಉಡುಪುಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನೀವು ಧರಿಸದೇ ಬಿಟ್ಟ ಹಳೆಯ ಬಟ್ಟೆಗಳು ಏನಾಗುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದೇ ಜವಳಿ ತ್ಯಾಜ್ಯವಾಗುತ್ತದೆ. ಈ ವಿಷಯದ ಬಗ್ಗೆ ಅನೇಕ ಜಾಗತಿಕ ಸಂಶೋಧನೆಗಳು ನಡೆಯುತ್ತಿವೆ. ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಪ್ರಮಾಣದ ಜವಳಿ ತ್ಯಾಜ್ಯ ಮಾತ್ರ ಹೊಸ ಬಟ್ಟೆಗಳಲ್ಲಿ ರೀಸೈಕಲ್ ಆಗುತ್ತದೆ – ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಮಾತ್ರಾ ಎಂಬ ವಿಷಯ ಒಂದು ಸಂಶೋಧನೆಯಿಂದ ಹೊರಬಿದ್ದಿದೆ! ವಿಶ್ವದಲ್ಲಿ ಅತ್ಯಂತ ಹೆಚ್ಚು ಜವಳಿ ತ್ಯಾಜ್ಯ ಹೊರಬೀಳುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಅಂದರೆ ನಮ್ಮ ಮುಂದಿರುವ ಸವಾಲು ಬಹಳ ದೊಡ್ಡದು ಎಂದು ಇದರ ಅರ್ಥ. ಆದರೆ ನಮ್ಮ ದೇಶದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು ಅನೇಕ ಶ್ಲಾಘನೀಯ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ನನಗೆ ಸಂತಸ ತರುವ ವಿಷಯವಾಗಿದೆ. ಅನೇಕ ಭಾರತೀಯ ನವೋದ್ಯಮಗಳು textile recovery facilities ಕುರಿತು ಕೆಲಸ ಆರಂಭಿಸಿವೆ. ತ್ಯಾಜ್ಯ ಆಯುವ ನಮ್ಮ ಸೋದರ - ಸೋದರಿಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವ ಇಂತಹ ಅನೇಕ ತಂಡಗಳಿವೆ. ಸುಸ್ಥಿರ ಫ್ಯಾಷನ್ ನಿಟ್ಟಿನಲ್ಲಿ ಅನೇಕ ಯುವಜನರು ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹಳೆಯ ಬಟ್ಟೆ ಮತ್ತು ಬೂಟುಗಳನ್ನು ಮರುಬಳಕೆ ಮಾಡಿ ಅಗತ್ಯವಿರುವವರಿಗೆ ತಲುಪಿಸುತ್ತಾರೆ. ಅಲಂಕಾರಿಕ ವಸ್ತುಗಳು, ಕೈಚೀಲಗಳು, ಲೇಖನ ಸಾಮಗ್ರಿಗಳು ಮತ್ತು ಆಟಿಕೆಗಳಂತಹ ಅನೇಕ ವಸ್ತುಗಳನ್ನು ಜವಳಿ ತ್ಯಾಜ್ಯದಿಂದ ತಯಾರಿಸಲಾಗುತ್ತಿದೆ. ಅನೇಕ ಸಂಸ್ಥೆಗಳು ಇತ್ತೀಚೆಗೆ ‘circular fashion brand’ ಅನ್ನು ಜನಪ್ರಿಯಗೊಳಿಸುವಲ್ಲಿ ತೊಡಗಿಕೊಂಡಿವೆ. ಹೊಸ ಹೊಸ rental ವೇದಿಕೆಗಳೂ ತೆರೆದುಕೊಂಡಿದ್ದು, ಇಲ್ಲಿ designer ಉಡುಪುಗಳು ಬಾಡಿಗೆ ಆಧಾರದಲ್ಲಿ ದೊರೆಯುತ್ತವೆ. ಕೆಲವು ಸಂಸ್ಥೆಗಳು ಹಳೆಯ ಬಟ್ಟೆಗಳನ್ನು ತೆಗೆದುಕೊಂಡು ಅವುಗಳನ್ನು ಪುನಃ ಬಳಕೆಮಾಡುವಂತೆ ಸಿದ್ಧಪಡಿಸಿ, ಅವುಗಳನ್ನು ಬಡವರಿಗೆ ತಲುಪಿಸುತ್ತವೆ.
ಸ್ನೇಹಿತರೇ, ಕೆಲವು ನಗರಗಳು ಜವಳಿ ತ್ಯಾಜ್ಯವನ್ನು ನಿರ್ವಹಿಸುವಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿವೆ. ಹರಿಯಾಣಾದ ಪಾನಿಪತ್ textile recycling ನ ಜಾಗತಿಕ hub ನ ರೂಪದಲ್ಲಿ ಹೊರಹೊಮ್ಮುತ್ತಿದೆ. ಬೆಂಗಳೂರು ಕೂಡಾ ಆವಿಷ್ಕಾರಕ ತಂತ್ರಜ್ಞಾನ ಪರಿಹಾರಗಳಿಂದ ತನ್ನದೇ ಆದ ಗುರುತು ಮೂಡಿಸುತ್ತಿದೆ. ಇಲ್ಲಿ ಅರ್ಧಕ್ಕಿಂತ ಹೆಚ್ಚು ಜವಳಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ನಮ್ಮ ಇತರ ನಗರಗಳಿಗೂ ಇದು ಒಂದು ಉದಾಹರಣೆಯಾಗಿದೆ. ಇದೇ ರೀತಿ ತಮಿಳುನಾಡಿನ ತಿರುಪ್ಪೂರ್, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ನವೀಕರಿಸಬಹುದಾದ ಇಂಧನದ ಮೂಲಕ ಜವಳಿ ತ್ಯಾಜ್ಯ ನಿರ್ವಹಣೆಯಲ್ಲಿಯೂ ತೊಡಗಿಸಿಕೊಂಡಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಸದೃಢತೆಯಲ್ಲಿ count ಅಥವಾ ಎಣಿಕೆಯ ಪಾತ್ರ ಬಹಳ ದೊಡ್ಡದಾಗಿದೆ. ಒಂದು ದಿನದಲ್ಲಿ ಎಷ್ಟು ಹೆಜ್ಜೆ ನಡೆದಿದ್ದೀರಿ ಎನ್ನುವುದರ ಎಣಿಕೆ, ಒಂದು ದಿನದಲ್ಲಿ ಎಷ್ಟು ಕ್ಯಾಲೊರಿ ಸೇವಿಸಿದ್ದೀರಿ ಎನ್ನುವುದರ ಎಣಿಕೆ, ಎಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡಿದ್ದೀರಿ ಎನ್ನುವುದರ ಎಣಿಕೆ, ಇಷ್ಟೊಂದು ಎಣಿಕೆಗಳ ನಡುವೆ ಮತ್ತೊಂದು ಇಳಿಎಣಿಕೆ ಆರಂಭವಾಗಲಿದೆ. ಅದೇ ಅಂತಾರಾಷ್ಟ್ರೀಯ ಯೋಗ ದಿನದ ಇಳಿಎಣಿಕೆ. ಯೋಗ ದಿನಕ್ಕೆ ಈಗ 100 ದಿನಗಳಿಗಿಂತ ಕಡಿಮೆ ಸಮಯ ಉಳಿದಿದೆ. ನೀವು ಇದುವರೆಗೂ ನಿಮ್ಮ ಜೀವನದಲ್ಲಿ ಯೋಗಾಭ್ಯಾಸ ಸೇರಿಸಿಕೊಂಡಿಲ್ಲವೆಂದಾದಲ್ಲಿ, ಇನ್ನೂ ವಿಳಂಬವಾಗಿಲ್ಲ, ಈಗ ಖಂಡಿತವಾಗಿಯೂ ನಿಮ್ಮ ದಿನಚರಿಯಲ್ಲಿ ಯೋಗ ಸೇರಿಸಿಕೊಳ್ಳಿ. 10 ವರ್ಷಗಳ ಹಿಂದೆ 2015 ರ ಜೂನ್ 21 ರಂದು ಪ್ರಥಮ ಯೋಗ ದಿನ ಆಚರಿಸಲಾಯಿತು. ಈಗಂತೂ ಈ ದಿನವು ಯೋಗದ ಬೃಹತ್ ಉತ್ಸವದ ರೂಪವನ್ನು ಪಡೆದುಕೊಂಡಿದೆ. ಇದು ಭಾರತದಿಂದ ಮನುಕುಲಕ್ಕೆ ದೊರೆತ ಅಮೂಲ್ಯ ಕೊಡುಗೆಯಾಗಿದ್ದು, ಭವಿಷ್ಯದ ಪೀಳಿಗೆಗೆ ಇದು ತುಂಬಾ ಉಪಯುಕ್ತವಾಗಲಿದೆ. 2025 ರ ಯೋಗ ದಿನದ ಘೋಷವಾಕ್ಯವೆಂದರೆ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಎನ್ನುವುದಾಗಿದೆ. ಅಂದರೆ ನಾವು ಯೋಗದ ಮುಖಾಂತರ ಇಡೀ ವಿಶ್ವವನ್ನು ಆರೋಗ್ಯಪೂರ್ಣವನ್ನಾಗಿ ಮಾಡಬೇಕೆಂದು ಬಯಸುತ್ತೇವೆ.
ಸ್ನೇಹಿತರೇ, ಇಂದು ಪ್ರಪಂಚದಾದ್ಯಂತ ನಮ್ಮ ಯೋಗ ಮತ್ತು ಸಾಂಪ್ರದಾಯಿಕ ಔಷಧದ ಬಗ್ಗೆ ಕುತೂಹಲ ಹೆಚ್ಚುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಹೆಚ್ಚಿನ ಸಂಖ್ಯೆಯ ಯುವಜನತೆ ಯೋಗ ಮತ್ತು ಆಯುರ್ವೇದವನ್ನು ಅತ್ಯುತ್ತಮ ಆರೋಗ್ಯ ಮಾಧ್ಯಮವೆಂದು ಪರಿಗಣಿಸಿ ಅಳವಡಿಸಿಕೊಳ್ಳುತ್ತಿದ್ದಾರೆ. ಈಗ ದಕ್ಷಿಣ ಅಮೆರಿಕಾದ ದೇಶ ಚಿಲಿಯ ಬಗ್ಗೆ ನೋಡೋಣ. ಇಲ್ಲಿ ಆಯುರ್ವೇದ ಬಹಳ ಬೇಗ ಜನಪ್ರಿಯವಾಗುತ್ತಿದೆ. ಕಳೆದ ವರ್ಷ, ನಾನು ಬ್ರೆಜಿಲ್ ಗೆ ಭೇಟಿ ನೀಡಿದ್ದಾಗ ಚಿಲಿಯ ಅಧ್ಯಕ್ಷರನ್ನು ಭೇಟಿಯಾಗಿದ್ದೆ. ಆಯುರ್ವೇದದ ಜನಪ್ರಿಯತೆಯ ಬಗ್ಗೆ ನಮ್ಮ ನಡುವೆ ಸಾಕಷ್ಟು ವಿಚಾರ ವಿನಿಮಯ ನಡೆದವು. ನನಗೆ ಸೊಮೋಸ್ ಇಂಡಿಯಾ ಎಂಬ ತಂಡದ ಬಗ್ಗೆ ತಿಳಿಯಿತು. ಸ್ಪ್ಯಾನಿಷ್ ಭಾಷೆಯಲ್ಲಿ ಇದರ ಅರ್ಥ – “ನಾವು ಭಾರತ” ಎಂಬುದಾಗಿದೆ. ಈ ತಂಡವು ಸುಮಾರು ಒಂದು ದಶಕದಿಂದ ಯೋಗ ಮತ್ತು ಆಯುರ್ವೇದವನ್ನು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದೆ. ಯೋಗ ಚಿಕಿತ್ಸೆ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮೇಲೆ ಅದು ಗಮನ ಕೇಂದ್ರೀಕರಿಸುತ್ತದೆ. ಈ ತಂಡ ಆಯುರ್ವೇದ ಮತ್ತು ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದಿಸುತ್ತಿದೆ. ಹಿಂದಿನ ವರ್ಷದ ಬಗ್ಗೆ ಮಾತನಾಡುವುದಾದರೆ, ಸುಮಾರು 9 ಸಾವಿರ ಜನರು ಅವರ ವಿವಿಧ ಕಾರ್ಯಕ್ರಮಗಳು ಮತ್ತು ಕೋರ್ಸ್ ಗಳಲ್ಲಿ ಭಾಗವಹಿಸಿದ್ದರು. ಈ ತಂಡದೊಂದಿಗೆ ಸಂಬಂಧ ಹೊಂದಿದ್ದ ಪ್ರತಿಯೊಬ್ಬರ ಪ್ರಯತ್ನಗಳನ್ನೂ ನಾನು ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿ’ ಈಗ ಒಂದು ಚಮತ್ಕಾರಿ, ಕುತೂಹಲಕಾರಿ ಪ್ರಶ್ನೆ! ನೀವು ಎಂದಾದರೂ ಹೂವುಗಳ ಪ್ರಯಾಣದ ಬಗ್ಗೆ ಯೋಚಿಸಿರುವಿರಾ? ಗಿಡ, ಮರಗಳಿಂದ ಹೊರಟ ಹೂವುಗಳ ಪ್ರಯಾಣ ದೇವಾಲಯಗಳವರೆಗೂ ಸಾಗುತ್ತದೆ. ಕೆಲವು ಹೂವುಗಳು ಮನೆಗಳನ್ನು ಸುಂದರವಾಗಿಸುತ್ತವೇ, ಕೆಲವು ಸುಗಂಧ ದ್ರವ್ಯದಲ್ಲಿ ಕರಗಿ ನಾಲ್ಕೂ ದಿಕ್ಕಿನಲ್ಲಿ ಪರಿಮಳ ಹರಡುತ್ತವೆ. ಆದರೆ ನಾನು ಇಂದು ನಿಮಗೆ ಹೂವುಗಳ ಮತ್ತೊಂದು ಪಯಣದ ಬಗ್ಗೆ ಹೇಳುತ್ತೇನೆ. ನೀವು ಮಹುವಾ (ಇಪ್ಪೆ) ಹೂವುಗಳ ಬಗ್ಗೆ ಖಂಡಿತವಾಗಿಯೂ ಕೇಳಿರುತ್ತೀರಿ. ನಮ್ಮ ಹಳ್ಳಿಗಳು ಮತ್ತು ವಿಶೇಷವಾಗಿ ಬುಡಕಟ್ಟು ಸಮುದಾಯದ ಜನರು ಇದರ ಮಹತ್ವದ ಬಗ್ಗೆ ಬಹಳ ಚೆನ್ನಾಗಿ ಅರಿತಿರುತ್ತಾರೆ. ದೇಶದ ಹಲವು ಭಾಗಗಳಲ್ಲಿ ಮಹುವಾ ಹೂವುಗಳ ಪ್ರಯಾಣ ಈಗ ಹೊಸ ಹಾದಿಯಲ್ಲಿ ಆರಂಭವಾಗಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಮಹುವಾ ಹೂವುಗಳಿಂದ ಕುಕೀಗಳನ್ನು ತಯಾರಿಸಲಾಗುತ್ತಿದೆ. ರಾಜಾಖೋಹ್ ಗ್ರಾಮದ ನಾಲ್ವರು ಸೋದರಿಯರ ಪ್ರಯತ್ನದಿಂದಾಗಿ ಈ ಕುಕೀಗಳು ಬಹಳ ಜನಪ್ರಿಯವಾಗುತ್ತಿವೆ. ಈ ಮಹಿಳೆಯರ ಉತ್ಸಾಹವನ್ನು ನೋಡಿ, ಒಂದು ದೊಡ್ಡ ಕಂಪನಿಯವರು ಅವರಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ತರಬೇತಿ ನೀಡಿದರು. ಇದರಿಂದ ಪ್ರೇರಿತರಾದ ಗ್ರಾಮದ ಹಲವು ಮಹಿಳೆಯರು ಇವರೊಂದಿಗೆ ಸೇರಿಕೊಂಡರು. ಇವರು ತಯಾರಿಸುವ ಮಹುವಾ ಕುಕೀಗಳಿಗೆ ಬೇಡಿಕೆ ವೇಗವಾಗಿ ಏರಿಕೆಯಾಗುತ್ತಿದೆ. ತೆಲಂಗಾಣಾದ ಅದಿಲಾಬಾದ್ ಜಿಲ್ಲೆಯಲ್ಲಿ ಕೂಡಾ ಇಬ್ಬರು ಸೋದರಿಯರು ಮಹುವಾ ಹೂವುಗಳಿಂದ ಹೊಸದೊಂದು ಪ್ರಯೋಗವನ್ನು ಮಾಡಿದ್ದಾರೆ. ಅವರು ಇದರಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತಾರೆ, ಇದನ್ನು ಜನರು ಬಹಳವಾಗಿ ಇಷ್ಟಪಡುತ್ತಾರೆ. ಇವರ ಭಕ್ಷ್ಯಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಸ್ವಾದ, ಮಾಧುರ್ಯವೂ ತುಂಬಿರುತ್ತದೆ.
ಸ್ನೇಹಿತರೇ, ನಾನು ನಿಮಗೆ ಮತ್ತೊಂದು ಅದ್ಭುತ ಹೂವಿನ ಬಗ್ಗೆ ಹೇಳಲು ಇಷ್ಟಪಡುತ್ತೇನೆ, ಅದರ ಹೆಸರು ‘ಕೃಷ್ಣ ಕಮಲ’ ಎಂಬುದಾಗಿದೆ. ನೀವು ಗುಜರಾತ್ ನ ಏಕತಾ ನಗರದಲ್ಲಿ ಏಕತಾ ಪ್ರತಿಮೆ ನೋಡಲು ಹೋಗಿರುವಿರಾ? ಏಕತಾ ಪ್ರತಿಮೆಯ ಸುತಮುತ್ತ ನಿಮಗೆ ಬಹಳಷ್ಟು ಸಂಖ್ಯೆಯಲ್ಲಿ ಈ ಕೃಷ್ಣ ಕಮಲ ಕಾಣಬರುತ್ತದೆ. ಈ ಹೂವು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಈ ಕೃಷ್ಣ ಕಮಲಗಳು ಏಕತಾ ನಗರದ ಆರೋಗ್ಯ ವನ, ಏಕತಾ ನರ್ಸರಿ, ವಿಶ್ವ ವನ ಮತ್ತು ಮಿಯಾವಾಕಿ ಅರಣ್ಯದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಇಲ್ಲಿ ಲಕ್ಷಗಟ್ಟಲೆ ಕೃಷ್ಣ ಕಮಲ ಗಿಡಗಳನ್ನು ಯೋಜಿತ ರೀತಿಯಲ್ಲಿ ನೆಡಲಾಗಿದೆ. ನೀವು ಸುತ್ತಲೂ ನೋಡಿದರೆ. ಸಾಕಷ್ಟು ಪ್ರಮಾಣದಲ್ಲಿ ಹೂವುಗಳ ಆಸಕ್ತಿದಾಯಕ ಪ್ರಯಾಣಗಳು ಕಾಣಬರುತ್ತವೆ. ನೀವು ವಾಸವಾಗಿರುವ ಪ್ರದೇಶದಲ್ಲಿ ಹೂವುಗಳ ಇಂತಹ ವಿಶಿಷ್ಠ ಪ್ರಯಾಣದ ಬಗ್ಗೆ ನನಗೆ ಕೂಡಾ ಬರೆದು ತಿಳಿಸಿರಿ.
ನನ್ನ ಪ್ರೀತಿಯ ಬಾಂಧವರೆ, ನೀವು ಎಂದಿನಂತೆಯೇ ನಿಮ್ಮ ಚಿಂತನೆಗಳು, ಅನುಭವಗಳು ಮತ್ತು ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರಿ, ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಯಾವುದಾದರೂ ವಿಷಯ ನಿಮಗೆ ಸಾಮಾನ್ಯವಾಗಿ ತೋರಬಹುದು ಆದರೆ ಇತರರಿಗೆ ಆ ವಿಷಯವು ತುಂಬಾ ಆಸಕ್ತಿದಾಯಕ ಮತ್ತು ಹೊಸದಾಗಿ ತೋರಬಹುದು. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ, ನಮ್ಮಲ್ಲಿ ಪ್ರೇರಣೆ ತುಂಬುವಂತಹ ದೇಶವಾಸಿಗಳ ವಿಷಯದ ಬಗ್ಗೆ ಮಾತನಾಡೋಣ. ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ ‘ಮನದ ಮಾತಿಗೆ’ ನಿಮೆಲ್ಲರಿಗೂ ಸ್ವಾಗತ. ಇತ್ತೀಚಿನ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ ಮತ್ತು ಎಲ್ಲೆಡೆ ಕ್ರಿಕೆಟ್ ವಾತಾವರಣವಿದೆ. ಕ್ರಿಕೆಟ್ ನಲ್ಲಿ ಶತಕದ ರೋಮಾಂಚನ ಏನೆಂದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದಿದೆ, ಆದರೆ ಇಂದು ನಾನು ನಿಮ್ಮೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ, ಆದರೆ ಭಾರತ ಬಾಹ್ಯಾಕಾಶದಲ್ಲಿ ಮಾಡಿದ ಅದ್ಭುತ ಶತಕದ ಬಗ್ಗೆ ಮಾತನಾಡುತ್ತೇನೆ. ಕಳೆದ ತಿಂಗಳು, ದೇಶವು ಇಸ್ರೋ 100 ನೇ ರಾಕೆಟ್ ಉಡಾವಣೆಗೆ ಸಾಕ್ಷಿಯಾಯಿತು. ಇದು ಕೇವಲ ಒಂದು ಸಂಖ್ಯೆಯಲ್ಲ, ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಎತ್ತರವನ್ನು ಮುಟ್ಟುವ ನಮ್ಮ ಸಂಕಲ್ಪವನ್ನೂ ಪ್ರತಿಬಿಂಬಿಸುತ್ತದೆ. ನಮ್ಮ ಬಾಹ್ಯಾಕಾಶ ಪ್ರಯಾಣವು ತುಂಬಾ ಸಾಮಾನ್ಯ ರೀತಿಯಲ್ಲಿ ಆರಂಭವಾಯಿತು. ಪ್ರತಿ ಹಂತದಲ್ಲೂ ಸವಾಲುಗಳಿದ್ದವು ಆದರೆ ನಮ್ಮ ವಿಜ್ಞಾನಿಗಳು ಪ್ರತಿಯೊಂದರಲ್ಲೂ ವಿಜಯಶಾಲಿಗಳಾಗಿ ಹೊರಹೊಮ್ಮುತ್ತಾ ಮುಂದುವರಿಯುತ್ತಿದ್ದರು. ಕಾಲಕ್ರಮೇಣ ಬಾಹ್ಯಾಕಾಶ ಹಾರಾಟದಲ್ಲಿ ನಮ್ಮ ಯಶಸ್ಸಿನ ಪಟ್ಟಿ ಸಾಕಷ್ಟು ಉದ್ದವಾಗುತ್ತಾ ಹೋಯಿತು. ಅದು ಉಡಾವಣಾ ವಾಹನಗಳ ತಯಾರಿಕೆಯಾಗಿರಲಿ, ಚಂದ್ರಯಾನ, ಮಂಗಳಯಾನ, ಆದಿತ್ಯ ಎಲ್ -1 ರ ಯಶಸ್ಸು ಆಗಿರಲಿ ಅಥವಾ ಒಂದೇ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಒಂದೇ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸುವ ಅಭೂತಪೂರ್ವ ಧ್ಯೇಯವಾಗಲಿ - ಇಸ್ರೋ ಯಶಸ್ಸಿನ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಕಳೆದ 10 ವರ್ಷಗಳಲ್ಲೇ ಸುಮಾರು 460 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದರಲ್ಲಿ ಇತರ ದೇಶಗಳ ಹಲವಾರು ಉಪಗ್ರಹಗಳೂ ಸೇರಿವೆ. ಇತ್ತೀಚಿನ ವರ್ಷಗಳ ಒಂದು ದೊಡ್ಡ ವಿಷಯವೆಂದರೆ ಬಾಹ್ಯಾಕಾಶ ವಿಜ್ಞಾನಿಗಳ ನಮ್ಮ ತಂಡದಲ್ಲಿ ನಾರೀ ಶಕ್ತಿಯ ಪಾಲ್ಗೊಳ್ಳುವಿಕೆ ನಿರಂತರವಾಗಿ ಅಧಿಕವಾಗುತ್ತಿದೆ. ಇಂದು ಬಾಹ್ಯಾಕಾಶ ವಲಯ ನಮ್ಮ ಯುವಪೀಳಿಗೆಯ ಬಹಳ ಅಚ್ಚುಮೆಚ್ಚಿನ ಕ್ಷೇತ್ರವಾಗುತ್ತಿರುವುದನ್ನು ನೋಡಿ ಕೂಡಾ ಬಹಳ ಸಂತೋಷವಾಗುತ್ತದೆ. ಈ ಕ್ಷೇತ್ರದಲ್ಲಿ ನೂರಾರು ಸಂಖ್ಯೆಯಲ್ಲಿ ನವೋದ್ಯಮಗಳು ಮತ್ತು ಖಾಸಗಿ ವಲಯದ ಬಾಹ್ಯಾಕಾಶ ಕಂಪೆನಿಗಳು ಪಾಲ್ಗೊಳ್ಳುತ್ತವೆ ಎಂಬುದನ್ನು ಕಳೆದ ಕೆಲವು ವರ್ಷಗಳ ಹಿಂದೆ ಯಾರು ತಾನೇ ಯೋಚಿಸಿದ್ದರು. ಜೀವನದಲ್ಲಿ ಅದ್ಭುತ ಮತ್ತು ರೋಮಾಂಚಕಾರಿಯಾಗಿರುವ ಏನನ್ನಾದರೂ ಮಾಡಲು ಬಯಸುವ ನಮ್ಮ ಯುವಜನತೆಗೆ ಬಾಹ್ಯಾಕಾಶ ಕ್ಷೇತ್ರ ಅತ್ಯುತ್ತಮ ಆಯ್ಕೆಯಾಗುತ್ತಿದೆ.
ಸ್ನೇಹಿತರೇ, ಮುಂದಿನ ಕೆಲವೇ ದಿನಗಳಲ್ಲಿ ನಾವು ‘ರಾಷ್ಟ್ರೀಯ ವಿಜ್ಞಾನ ದಿನ‘ ಆಚರಿಸಲಿದ್ದೇವೆ. ನಮ್ಮ ಮಕ್ಕಳು ಮತ್ತು ಯುವಕರು ವಿಜ್ಞಾನದಲ್ಲಿ ಆಸಕ್ತಿ ಮತ್ತು ಅಭಿರುಚಿ ಹೊಂದುವುದು ಬಹಳ ಮುಖ್ಯ. ಇದಕ್ಕಾಗಿ ನನ್ನಲ್ಲಿ ಒಂದು ಉಪಾಯವಿದೆ. ಇದನ್ನು ನೀವು 'ವಿಜ್ಞಾನಿಯಾಗಿ ಒಂದು ದಿನ' ಎಂದು ಕರೆಯಬಹುದು, ಅಂದರೆ, ನೀವು ಒಂದು ದಿನವನ್ನು ವಿಜ್ಞಾನಿಯಾಗಿ, ವೈಜ್ಞಾನಿಕವಾಗಿ ಕಳೆದು ನೋಡಿ. ನೀವು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ, ನಿಮ್ಮ ಇಚ್ಛೆಗೆ ಅನುಗುಣವಾಗಿ, ಯಾವುದೇ ದಿನವನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ದಿನದಂದು ನೀವು ಯಾವುದೇ ಸಂಶೋಧನಾ ಪ್ರಯೋಗಾಲಯ, ತಾರಾಲಯ ಅಥವಾ ಬಾಹ್ಯಾಕಾಶ ಕೇಂದ್ರದಂತಹ ಪ್ರದೇಶಗಳಿಗೆ ಖಂಡಿತವಾಗಿಯೂ ಹೋಗಿ. ಇದರಿಂದ ವಿಜ್ಞಾನದ ಬಗೆಗಿನ ನಿಮ್ಮ ಜಿಜ್ಞಾಸೆ ಮತ್ತಷ್ಟು ಹೆಚ್ಚಾಗುತ್ತದೆ. ಬಾಹ್ಯಾಕಾಶ ಮತ್ತು ವಿಜ್ಞಾನದಂತಹ, ಭಾರತ ಕ್ಷಿಪ್ರ ಗತಿಯಲ್ಲಿ ತನ್ನ ಗುರುತನ್ನು ಸಾಧಿಸುತ್ತಿರುವ ಮತ್ತೊಂದು ಕ್ಷೇತ್ರವೂ ಇದೆ- ಅದೇ ಎಐ ಅಂದರೆ ಕೃತಕ ಬುದ್ಧಿಮತ್ತೆ. ಇತ್ತೀಚೆಗಷ್ಟೇ, ನಾನು ಎಐ ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್ ಗೆ ತೆರಳಿದ್ದೆ. ಅಲ್ಲಿ ಈ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಜಗತ್ತು ಬಹಳವಾಗಿ ಪ್ರಶಂಸಿಸಿತು. ನಮ್ಮ ದೇಶದಲ್ಲಿ ಇಂದು ಜನರು ಎಐ ಅನ್ನು ವಿವಿಧ ರೀತಿಯಲ್ಲಿ ಬಳಸುತ್ತಿರುವ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಉದಾಹರಣೆಗೆ, ತೆಲಂಗಾಣದ ಅದಿಲಾಬಾದ್ ನ ಸರ್ಕಾರಿ ಶಾಲೆಯಲ್ಲಿ ತೋಡಸಮ್ ಕೈಲಾಶ್ ಜಿ ಎಂಬ ಶಿಕ್ಷಕರಿದ್ದಾರೆ. ಡಿಜಿಟಲ್ ಹಾಡುಗಳು ಮತ್ತು ಸಂಗೀತದಲ್ಲಿ ಅವರಿಗಿರುವ ಅಪಾರ ಆಸಕ್ತಿಯು ನಮ್ಮ ಅನೇಕ ಬುಡಕಟ್ಟು ಭಾಷೆಗಳನ್ನು ಉಳಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಅವರು ಎಐ ಪರಿಕರಗಳ ಸಹಾಯದಿಂದ ಕೊಲಾಮಿ ಭಾಷೆಯಲ್ಲಿ ಹಾಡು ಸಂಯೋಜಿಸುವ ಮೂಲಕ ಅಚ್ಚರಿಯ ಕೆಲಸ ಮಾಡಿದ್ದಾರೆ. ಅವರು ಕೊಲಾಮಿ ಮಾತ್ರವಲ್ಲದೇ ಇತರ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ಸಂಯೋಜಿಸಲು ಎಐ ಬಳಸುತ್ತಿದ್ದಾರೆ. ನಮ್ಮ ಬುಡಕಟ್ಟು ಸೋದರ ಸೋದರಿಯರು ಸಾಮಾಜಿಕ ಮಾಧ್ಯಮದಲ್ಲಿ ಅವರ ಹಾಡುಗಳನ್ನು ಬಹಳ ಇಷ್ಟಪಡುತ್ತಿದ್ದಾರೆ. ಅದು ಬಾಹ್ಯಾಕಾಶ ಕ್ಷೇತ್ರವೇ ಆಗಲಿ ಅಥವಾ ಕೃತಕ ಬುದ್ಧಿಮತ್ತೆಯೇ ಆಗಿರಲಿ, ಹೆಚ್ಚುತ್ತಿರುವ ನಮ್ಮ ಯುವಪೀಳಿಗೆಯ ಪಾಲ್ಗೊಳ್ಳುವಿಕೆಯು ಹೊಸ ಕ್ರಾಂತಿಯನ್ನೇ ಹುಟ್ಟು ಹಾಕುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಪ್ರಯತ್ನಿಸುವಲ್ಲಿ ಭಾರತೀಯರು ಯಾರಿಗೂ ಕಡಿಮೆಯಿಲ್ಲ.
ನನ್ನ ಪ್ರೀತಿಯ ದೇಶಬಾಂಧವರೇ, ಮುಂದಿನ ತಿಂಗಳು ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದೆ. ಇದು ನಮ್ಮ ನಾರಿ ಶಕ್ತಿಗೆ ನಮಿಸುವ ಒಂದು ವಿಶೇಷ ಸಂದರ್ಭವಾಗಿದೆ. ದೇವೀ ಮಹಾತ್ಮೆಯಲ್ಲಿ ಈ ರೀತಿ ಹೇಳಲಾಗಿದೆ –
ವಿದ್ಯಾಯಾಃ ಸಮಸ್ತಾಃ ತವ ದೇವೀ ಭೇದಾಃ
ಸ್ತ್ರೀಯಃ ಸಮಸ್ತಾಃ ಸಕಲಾ ಜಗತ್ಸು
ಎಂದರೆ ಎಲ್ಲಾ ವಿದ್ಯೆಗಳೂ, ದೇವಿಯ ವಿವಿಧ ಸ್ವರೂಪಗಳ ಅಭಿವ್ಯಕ್ತಿಯಾಗಿದೆ ಮತ್ತು ಸಮಸ್ತ ಜಗತ್ತಿನ ನಾರಿ ಶಕ್ತಿಯಲ್ಲಿಯೂ ಕೂಡಾ ಅದರದ್ದೇ ಪ್ರತಿರೂಪವಿದೆ. ನಮ್ಮ ಸಂಸ್ಕೃತಿಯಲ್ಲಿ, ಹೆಣ್ಣು ಮಕ್ಕಳಿಗೆ ಗೌರವ ನೀಡುವುದು ಅತ್ಯಂತ ಮುಖ್ಯವಾಗಿದೆ. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಯಲ್ಲಿ ದೇಶದ ಮಾತೃ ಶಕ್ತಿಯು ಅತಿ ದೊಡ್ಡ ಪಾತ್ರ ವಹಿಸಿದೆ. ಸಂವಿಧಾನ ಸಭೆಯಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಪ್ರಸ್ತುತ ಪಡಿಸುವಾಗ ಹಂಸಾ ಮೆಹ್ತಾ ಅವರು ಹೇಳಿದ್ದನ್ನು ನಾನು ನಿಮ್ಮೆಲ್ಲರೊಂದಿಗೆ ಅವರದೇ ಧ್ವನಿಯಲ್ಲಿ ಹಂಚಿಕೊಳ್ಳುತ್ತಿದ್ದೇನೆ.
# ಆಡಿಯೋ
ಈ ಉನ್ನತ ಕಟ್ಟಡದ ಮೇಲೆ ಹಾರುವ ಈ ಮೊದಲ ಧ್ವಜವು ಭಾರತದ ಮಹಿಳೆಯರ ಕೊಡುಗೆಯಾಗಿರಬೇಕು. ನಾವು ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಿದ್ದೇವೆ, ನರಳಿದ್ದೇವೆ ಮತ್ತು ತ್ಯಾಗ ಮಾಡಿದ್ದೇವೆ. ಇಂದು ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ. ನಮ್ಮ ಸ್ವಾತಂತ್ರ್ಯದ ಈ ಸಂಕೇತವನ್ನು ಪ್ರಸ್ತುತಪಡಿಸುವ ಮೂಲಕ, ನಾವು ಮತ್ತೊಮ್ಮೆ ರಾಷ್ಟ್ರಕ್ಕೆ ನಮ್ಮ ಸೇವೆಗಳನ್ನು ನೀಡುತ್ತೇವೆ. ಮಹಾನ್ ರಾಷ್ಟ್ರಕ್ಕಾಗಿ ಕೆಲಸ ಮಾಡಲು, ಶ್ರೇಷ್ಠ ಭಾರತವನ್ನು ನಿರ್ಮಿಸಲು ಮತ್ತು ರಾಷ್ಟ್ರಗಳ ನಡುವೆ ಒಂದು ಹೆಮ್ಮೆಯ ರಾಷ್ಟವನ್ನು ನಿರ್ಮಿಸುತ್ತೇವೆಂದು ನಾವು ಪ್ರತಿಜ್ಞೆ ಮಾಡುತ್ತೇವೆ. ನಾವು ಸಾಧಿಸಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಉದ್ದೇಶಕ್ಕಾಗಿ ಕೆಲಸ ಮಾಡಲು ನಾವು ಪ್ರತಿಜ್ಞೆ ಮಾಡುತ್ತೇವೆ.
ಸ್ನೇಹಿತರೆ, ಹಂಸಾ ಮೆಹತಾ ಅವರು ನಮ್ಮ ರಾಷ್ಟ್ರ ಧ್ವಜದ ನಿರ್ಮಾಣದಿಂದ ಹಿಡಿದು ಅದಕ್ಕಾಗಿ ಬಲಿದಾನಗೈದ ದೇಶಾದ್ಯಂತದ ಮಹಿಳೆಯರ ಕೊಡುಗೆಯನ್ನು ಎತ್ತಿ ತೋರಿಸಿದರು. ನಮ್ಮ ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣದಲ್ಲೂ ಈ ಭಾವನೆ ಪ್ರತಿ ಫಲಿಸುತ್ತದೆ ಎನ್ನುವುದು ಅವರ ಅನಿಸಿಕೆಯಾಗಿತ್ತು. ನಮ್ಮ ನಾರಿ ಶಕ್ತಿಯು ಭಾರತವನ್ನು ಸಶಕ್ತ ಮತ್ತು ಸಮೃದ್ಧವಾಗಿಸಲು ತನ್ನ ಅಮೂಲ್ಯ ಕೊಡುಗೆ ನೀಡುತ್ತದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದ್ದರು. ಇಂದು ಅವರ ಮಾತುಗಳು ನಿಜವೆಂದು ಸಾಬೀತಾಗುತ್ತಿವೆ. ನೀವು ಯಾವುದೇ ಕ್ಷೇತ್ರದತ್ತ ನೋಡಿದರೂ, ಮಹಿಳೆಯರ ಕೊಡುಗೆ ಎಷ್ಟು ವಿಸ್ತಾರವಾಗಿದೆ ಎನ್ನುವುದು ಗೋಚರವಾಗುತ್ತದೆ. ಸ್ನೇಹಿತರೇ ಈ ಬಾರಿ ಮಹಿಳಾ ದಿನದಂದು ನಮ್ಮ ಮಹಿಳಾ ಶಕ್ತಿಗೆ ಸಮರ್ಪಣೆ ಮಾಡುವಂತಹ ಉಪಕ್ರಮವೊಂದನ್ನು ಕೈಗೊಳ್ಳಲಿದ್ದೇನೆ. ಈ ವಿಶೇಷ ಸಂದರ್ಭದಲ್ಲಿ, ನಾನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಾದ ಎಕ್ಸ್, ಇನ್ ಸ್ಟಾಗ್ರಾಮ್ ಅನ್ನು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದಂತಹ, ಆವಿಷ್ಕಾರ ಮಾಡಿರುವಂತಹ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವಂತಹ ದೇಶದ ಕೆಲವು ಸ್ಪೂರ್ತಿದಾಯಕ ಮಹಿಳೆಯರಿಗೆ ಒಂದು ದಿನದ ಮಟ್ಟಿಗೆ ಹಸ್ತಾಂತರಿಸಲಿದ್ದೇನೆ. ಮಾರ್ಚ್ 8 ರಂದು ಈ ಮಹಿಳೆಯರು, ತಮ್ಮ ಕಾರ್ಯ ಮತ್ತು ಅನುಭವಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಪ್ಲಾಟ್ ಫಾಂ ನನ್ನದಾಗಿರಬಹುದು, ಆದರೆ ಅಲ್ಲಿ ಈ ಮಹಿಳೆಯರ ಅನುಭವ, ಅವರು ಎದುರಿಸಿದ್ದ ಸವಾಲುಗಳು ಮತ್ತು ಅವರ ಯಶಸ್ಸಿನ ಕುರಿತ ಮಾತುಕತೆಗಳಿರುತ್ತವೆ. ಈ ಅವಕಾಶ ನಿಮ್ಮದೂ ಆಗಬೇಕೆಂದು ನೀವು ಬಯಸಿದಲ್ಲಿ, NamoApp ನಲ್ಲಿ ಸಿದ್ಧಪಡಿಸಿರುವ ವಿಶೇಷ ವೇದಿಕೆಯ ಮೂಲಕ, ಈ ಪ್ರಯೋಗದ ಭಾಗವಾಗಿ ಮತ್ತು ನನ್ನ X ಮತ್ತು Instagram ಖಾತೆಯಿಂದ ಇಡೀ ವಿಶ್ವಕ್ಕೆ ನಿಮ್ಮ ಮಾತುಗಳನ್ನು ತಲುಪಿಸಿ, ಹಾಗಾದರೆ ಬನ್ನಿ ಈ ಮಹಿಳಾ ದಿನದಂದು, ನಾವೆಲ್ಲರೂ ಸೇರಿ ಅದಮ್ಯ ಮಹಿಳಾ ಶಕ್ತಿಯನ್ನು ಆಚರಿಸೋಣ, ಗೌರವಿಸೋಣ. ನಮಸ್ಕರಿಸೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ರೋಮಾಂಚನವನ್ನು ನಿಮ್ಮಲ್ಲಿ ಬಹಳಷ್ಟು ಜನರು ಆನಂದಿಸಿಯೇ ಇದ್ದೀರಿ. ಈ ಕ್ರೀಡಾಕೂಟದಲ್ಲಿ ದೇಶಾದ್ಯಂತದ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದರು. ಈ ಕ್ರೀಡಾಕೂಟವು ದೇವಭೂಮಿಯ ಹೊಸ ರೂಪವನ್ನು ಪ್ರಸ್ತುತಪಡಿಸಿತು. ಉತ್ತರಾಖಂಡ್ ಈಗ ದೇಶದಲ್ಲಿ ಬಲಿಷ್ಠ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಉತ್ತರಾಖಂಡದ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿದರು. ಈ ಬಾರಿ ಉತ್ತರಾಖಂಡ್ 7 ನೇ ಸ್ಥಾನ ಪಡೆದಿದ್ದು, ಇದೇ ಕ್ರೀಡೆಯ ಶಕ್ತಿಯಾಗಿದೆ, ಇದು ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಪರಿವರ್ತಿಸುತ್ತದೆ. ಇದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದರ ಜೊತೆಗೆ, ಉತ್ಕೃಷ್ಟ ಸಂಸ್ಕೃತಿಗೆ ಉತ್ತೇಜನ ನೀಡುತ್ತದೆ.
ಸ್ನೇಹಿತರೇ, ಇಂದು ಈ ಕ್ರೀಡೆಗಳ ಕೆಲವು ಸ್ಮರಣೀಯ ಪ್ರದರ್ಶನಗಳ ಬಗ್ಗೆ ದೇಶಾದ್ಯಂತ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಪಂದ್ಯಗಳಲ್ಲಿ ಅತ್ಯಂತ ಅಧಿಕ ಚಿನ್ನದ ಪದಕಗಳನ್ನು ಗೆದ್ದ ಸರ್ವೀಸಸ್ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟುವನ್ನೂ ನಾನು ಪ್ರಶಂಸಿಸುತ್ತಿದ್ದೇನೆ. ನಮ್ಮಲ್ಲಿನ ಬಹಳಷ್ಟು ಕ್ರೀಡಾಪಟುಗಳು ಖೇಲೋ ಇಂಡಿಯಾದ ಕೊಡುಗೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಸಾವನ್ ಬರವಾಲ್, ಮಹಾರಾಷ್ಟ್ರದ ಕಿರಣ್ ಮಾತ್ರೇ, ತೇಜಸ್ ಶಿರಸೇ ಅಥವಾ ಆಂಧ್ರ ಪ್ರದೇಶದ ಜ್ಯೋತಿ ಯಾರಾಜಿ, ಇವರೆಲ್ಲರೂ ದೇಶಕ್ಕೆ ಹೊಸ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಜಾವಲಿನ್ ಎಸೆತಗಾರ ಸಚಿನ್ ಯಾದವ್ ಮತ್ತು ಹರಿಯಾಣದ ಹೈ ಜಂಪರ್ ಪೂಜಾ ಮತ್ತು ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಧು ಅವರಂತೂ ದೇಶವಾಸಿಗಳ ಹೃದಯ ಗೆದ್ದಿದ್ದಾರೆ. ಇವರು ಮೂರು ಹೊಸ ರಾಷ್ಟ್ರೀಯ ದಾಖಲೆಯನ್ನೇ ಬರೆದು ಅಚ್ಚರಿ ಮೂಡಿಸಿದ್ದಾರೆ. ಈ ಬಾರಿಯ ರಾಷ್ಟ್ರೀಯ ಕ್ರೀಡೆಗಳಲ್ಲಿ ಹದಿ ಹರೆಯದ ಚಾಂಪಿಯನ್ ಗಳ ಸಂಖ್ಯೆಯಂತೂ ಆಶ್ಚರ್ಯ ಮೂಡಿಸುವಂತಿದೆ. 15 ವರ್ಷದ ಶೂಟರ್ ಗೆವಿನ ಆಂಟನೀ, ಉತ್ತರ ಪ್ರದೇಶದ ಹ್ಯಾಮರ್ ಎಸೆತದ ಆಟಗಾರ್ತಿ 16 ವರ್ಷ ವಯಸ್ಸಿನ ಅನುಷ್ಕಾ ಯಾದವ್, ಮಧ್ಯ ಪ್ರದೇಶದ 19 ವರ್ಷದ ಪೋಲ್ ವಾಲ್ಟರ್ ದೇವ್ ಕುಮಾರ್ ಮೀಣಾ ಅವರುಗಳು ಭಾರತದ ಕ್ರೀಡಾ ಭವಿಷ್ಯವು ಅತ್ಯಂತ ಪ್ರತಿಭಾವಂತ ಯುವ ಪೀಳಿಗೆಯ ಕೈಯಲ್ಲಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟವು ಸೋಲನ್ನು ಎಂದಿಗೂ ಒಪ್ಪಿಕೊಳ್ಳದವರು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದೆ. ಆರಾಮವಾಗಿ ಎಲ್ಲಾ ಸೌಕರ್ಯಗಳೊಂದಿಗೆ ಯಾರೂ ಚಾಂಪಿಯನ್ ಆಗುವುದಿಲ್ಲ. ನಮ್ಮ ಯುವ ಕ್ರೀಡಾಪಟುಗಳ ದೃಢನಿಶ್ಚಯ ಮತ್ತು ಶಿಸ್ತಿನಿಂದ ಭಾರತ ಇಂದು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗುವ ನಿಟ್ಟಿನಲ್ಲಿ ಕ್ಷಿಪ್ರಗತಿಯಿಂದ ಸಾಗುತ್ತಿದೆ ಎಂಬುದು ನನಗೆ ಸಂತೋಷ ತರುವ ವಿಷಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಡೆಹರಾಡೂನ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನೆಯ ಸಂದರ್ಭದಲ್ಲಿ ನಾನು ಒಂದು ಮುಖ್ಯವಾದ ವಿಷಯ ಕುರಿತು ಮಾತನಾಡಿದೆ, ಮತ್ತು ಅದು ದೇಶದಲ್ಲಿ ಒಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಆ ವಿಷಯವೇ ಬೊಜ್ಜು ಅಥವಾ ಸ್ಥೂಲಕಾಯತೆ. ಒಂದು ಆರೋಗ್ಯಪೂರ್ಣ ಮತ್ತು ಸದೃಢ ದೇಶದ ನಿರ್ಮಾಣಕ್ಕಾಗಿ ನಾವು ಸ್ಥೂಲಕಾಯತೆಯ ಸಮಸ್ಯೆಯನ್ನು ಎದುರಿಸಬೇಕು. ಒಂದು ಅಧ್ಯಯನದ ಪ್ರಕಾರ ಇಂದು ಪ್ರತಿ ಎಂಟು ಮಂದಿಯಲ್ಲಿ ಓರ್ವ ವ್ಯಕ್ತಿ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಸ್ಥೂಲಕಾಯದ ಸಮಸ್ಯೆ ಎರಡುಪಟ್ಟು ಹೆಚ್ಚಾಗಿದೆ, ಆದರೆ, ಇದಕ್ಕಿಂತ ಹೆಚ್ಚು ಚಿಂತಿಸಬೇಕಾದ ವಿಷಯವೆಂದರೆ ಈ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯು ನಾಲ್ಕುಪಟ್ಟು ಅಧಿಕವಾಗಿದೆ. 2022 ರಲ್ಲಿ ವಿಶ್ವಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕ ಹೊಂದಿದವರಾಗಿದ್ದರು ಅಂದರೆ ಅಗತ್ಯಕ್ಕಿಂತ ಅತಿ ಹೆಚ್ಚು ದೇಹದ ತೂಕ ಹೊಂದಿದ್ದರು ಎಂದು ವಿಶ್ವ ಆರೋಗ್ಯ ಸಂಘಟನೆ- ಡಬ್ಲ್ಯುಎಚ್ ಒ ದ ದತ್ತಾಂಶ ಹೇಳುತ್ತದೆ. ಈ ಸಂಖ್ಯೆಯು ನಿಜಕ್ಕೂ ಬಹಳ ಗಂಭೀರ ವಿಷಯವಾಗಿದೆ ಮತ್ತು ಈ ರೀತಿ ಏಕಾಯಿತೆಂದು ನಮ್ಮೆಲ್ಲರನ್ನೂ ಯೋಚಿಸುವಂತೆ ಮಾಡುತ್ತದೆ.ಅಧಿಕ ತೂಕ ಅಥವಾ ಸ್ಥೂಲಕಾಯ ಅನೇಕ ಸಮಸ್ಯೆಗಳಿಗೆ, ತೊಂದರೆಗಳಿಗೆ ಕಾರಣವಾಗುತ್ತದೆ. ನಾವೆಲ್ಲರೂ ಒಟ್ಟಾಗಿ, ಸಣ್ಣ ಸಣ್ಣ ಪ್ರಯತ್ನಗಳಿಂದ ಈ ಸವಾಲನ್ನು ಎದುರಿಸಬಹುದು, ಇದಕ್ಕಾಗಿ ನಾನು ಸೂಚಿಸಿದ ಒಂದು ವಿಧಾನವೆಂದರೆ “ಅಡಿಗೆಗೆ ಎಣ್ಣೆಯ ಬಳಕೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವುದು” ಪ್ರತಿ ತಿಂಗಳೂ ಅಡಿಗೆಗಾಗಿ ಬಳಸುವ ಎಣ್ಣೆಯಲ್ಲಿ ಶೇಕಡಾ 10 ರಷ್ಟು ಕಡಿಮೆ ಮಾಡುತ್ತೇವೆಂದು ನೀವೆಲ್ಲರೂ ನಿರ್ಧಾರ ಮಾಡಿ. ಅಡಿಗೆಗಾಗಿ ಖರೀದಿಸುವ ಎಣ್ಣೆಯನ್ನು ಖರೀದಿಸುವ ಸಮಯದಲ್ಲಿಯೇ ಶೇಕಡಾ ಹತ್ತರಷ್ಟು ಕಡಿಮೆ ಖರೀದಿಸುತ್ತೇವೆಂದು ನಿರ್ಧರಿಸಬಹುದು. ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಲಿದೆ. ನಾನು ಇಂದು ಮನ್ ಕಿ ಬಾತ್ ನಲ್ಲಿ ಈ ವಿಷಯ ಕುರಿತಂತೆ ಕೆಲವು ವಿಶೇಷ ಸಂದೇಶಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುತ್ತೇನೆ. ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ಡಾ ಅವರಿಂದಲೇ ಆರಂಭಿಸೋಣ. ಇವರು ಸ್ವತಃ ಸ್ಥೂಲಕಾಯವನ್ನು ಯಶಸ್ವಿಯಾಗಿ ನಿಯಂತ್ರಿಸಿ ತೋರಿಸಿದ್ದಾರೆ:
# ಆಡಿಯೋ
ಎಲ್ಲರಿಗೂ ನಮಸ್ಕಾರ, ನಾನು ನೀರಜ್ ಚೋಪ್ರಾ, ಇಂದು ನಾನು ತಮಗೆ ಹೇಳಬಯಸುವುದೇನಂದರೆ, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಬಾರಿ ಸ್ಥೂಲಕಾಯ ಅಂದರೆ ಒಬೆಸಿಟಿ ಬಗ್ಗೆ 'ಮನ್ ಕಿ ಬಾತ್' ನಲ್ಲಿ ಚರ್ಚಿಸಿದ್ದಾರೆ, ಇದು ನಮ್ಮ ದೇಶಕ್ಕೆ ಬಹಳ ಮುಖ್ಯವಾದ ವಿಷಯವಾಗಿದೆ, ಮತ್ತು ನಾನು ಇದನ್ನು ನನಗೂ ಹೋಲಿಸಬಯಸುತ್ತೇನೆ, ಏಕೆಂದರೆ ನಾನು ಮೈದಾನಕ್ಕೆ ಹೋಗಲು ಪ್ರಾರಂಭಿಸಿದಾಗ ಆ ಸಮಯದಲ್ಲಿ ನಾನು ತುಂಬಾ ಸ್ಥೂಲಕಾಯನಾಗಿದ್ದೆ. ಯಾವಾಗ ನಾನು ತರಬೇತಿ ಪಡೆಯಲಾರಂಭಿಸಿದೆ ಮತ್ತು ಒಳ್ಳೆಯ ಆಹಾರ ಸೇವಿಸಲು ಪ್ರಾರಂಭಿಸಿದೆ, ಆರೋಗ್ಯದಲ್ಲಿ ಬಹಳ ಸುಧಾರಣೆ ಆಯಿತು ಮತ್ತು ನಾನು ವೃತ್ತಿಪರ ಅಥ್ಲೀಟ್ ಆದಾಗ, ಅದರಲ್ಲಿ ನನಗೆ ಸಾಕಷ್ಟು ಸಹಾಯ ಸಿಕ್ಕಿತು ಮತ್ತು ಪೋಷಕರು ಸಹ ಕೆಲವು ಹೊರಾಂಗಣ ಕ್ರೀಡೆಗಳನ್ನು ಆಡಬೇಕು ಅಥವಾ ತಮ್ಮ ಮಕ್ಕಳನ್ನು ಕರೆದುಕೊಂಡು ಉತ್ತಮ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಚೆನ್ನಾಗಿ ಊಟ ಮಾಡಬೇಕು ಮತ್ತು ವ್ಯಾಯಾಮಕ್ಕಾಗಿ ದಿನಕ್ಕೆ ಒಂದು ಗಂಟೆ ಅಥವಾ ನಿಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಸಮಯವನ್ನು ನೀಡಬೇಕು. ನಾನು ಇನ್ನೂ ಒಂದು ವಿಷಯ ಹೇಳ ಬಯಸುತ್ತೇನೆ, ಇತ್ತೀಚೆಗೆ ನಮ್ಮ ಪ್ರಧಾನಿಯವರು ಆಹಾರದಲ್ಲಿ ಬಳಸುವ ಎಣ್ಣೆಯನ್ನು ಶೇಕಡಾ 10 ರಷ್ಟು (10%) ಕಡಿಮೆಗೊಳಿಸಬೇಕು ಎಂದು ಹೇಳಿದ್ದರು, ಏಕೆಂದರೆ ನಾವು ಅನೇಕ ಬಾರಿ ಕರಿದ ಪದಾರ್ಥಗಳನ್ನು ತಿನ್ನುತ್ತೇವೆ, ಇದು ಸ್ಥೂಲಕಾಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ವಸ್ತುಗಳನ್ನು ಉಪಯೋಗಿಸದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ನಾನು ಎಲ್ಲರಿಗೂ ಹೇಳಬಯಸುತ್ತೇನೆ. ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದು ಇಷ್ಟೇ ಮತ್ತು ಒಟ್ಟಾಗಿ ನಾವು ನಮ್ಮ ದೇಶವನ್ನು ಕಟ್ಟೋಣ, ಧನ್ಯವಾದಗಳು.
ನೀರಜ್ ಅವರೇ, ತಮಗೆ ತುಂಬಾ ಧನ್ಯವಾದಗಳು. ಖ್ಯಾತ ಅಥ್ಲೀಟ್ ನಿಖತ್ ಜರೀನ್ ಅವರು ಕೂಡ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ:
# ಆಡಿಯೋ
ಹಾಯ್, ನನ್ನ ಹೆಸರು ನಿಖತ್ ಜರೀನ್ ಮತ್ತು ನಾನು ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿದ್ದೇನೆ. ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 'ಮನ್ ಕಿ ಬಾತ್' ನಲ್ಲಿ ಸ್ಥೂಲಕಾಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಇದು ರಾಷ್ಟ್ರೀಯ ಕಾಳಜಿ ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಆರೋಗ್ಯದ ಬಗ್ಗೆ ಗಂಭೀರವಾಗಿರಬೇಕು, ಏಕೆಂದರೆ ಭಾರತದಲ್ಲಿ ಸ್ಥೂಲಕಾಯವು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನರಿತು ನಾವು ಅದನ್ನು ನಿಲ್ಲಿಸಬೇಕು ಮತ್ತು ಸಾಧ್ಯವಾದಷ್ಟು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಪ್ರಯತ್ನಿಸಬೇಕು. ನಾನೊಬ್ಬ ಅಥ್ಲೀಟ್ ಆಗಿ ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಲು ಪ್ರಯತ್ನಿಸುತ್ತೇನೆ ಏಕೆಂದರೆ ನಾನು ತಪ್ಪಿಯೂ ಅನಾರೋಗ್ಯಕರ ಆಹಾರವನ್ನು ತೆಗೆದುಕೊಂಡರೆ ಅಥವಾ ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸಿದರೆ ಅದು ನನ್ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಾನು ರಿಂಗ್ನಲ್ಲಿ ಬೇಗನೆ ಸುಸ್ತಾಗುತ್ತೇನೆ ಅಲ್ಲದೆ, ನಾನು ಖಾದ್ಯತೈಲದಂತಹ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಲು ಪ್ರಯತ್ನಿಸುತ್ತೇನೆ. ಅದರ ಬದಲಿಗೆ ಆರೋಗ್ಯಕರ ಆಹಾರ ಮತ್ತು ದೈನಂದಿನ ದೈಹಿಕ ಚಟುವಟಿಕೆಯನ್ನು ಮಾಡಲು ಪ್ರಯತ್ನಿಸುತ್ತೇನೆ. ಇದರಿಂದಾಗಿ ನಾನು ಯಾವಾಗಲೂ ಫಿಟ್ ಆಗಿರುತ್ತೇನೆ. ನಮ್ಮಂತಹ ಸಾಮಾನ್ಯ ಜನರು ದಿನಾಲು ನೌಕರಿ ಮುಂತಾದ ಕೆಲಸಕ್ಕೆ ಹೋಗುತ್ತೇವೆ. ನನ್ನ ಪ್ರಕಾರ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಗಂಭೀರವಾಗಿರಬೇಕು ಮತ್ತು ಪ್ರತಿ ದಿನ ಯಾವುದಾದರೊಂದು ದೈಹಿಕ ಚಟುವಟಿಕೆಯನ್ನು ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಇದರಿಂದ ನಾವು ಹೃದಯಾಘಾತ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಂದ ದೂರವಿರಬಹುದು. ನಮ್ಮನ್ನು ನಾವು ಫಿಟ್ ಆಗಿ ಇರಿಸಿಕೊಳ್ಳಬೇಕು. ಏಕೆಂದರೆ ನಾವು ಫಿಟ್ ಆಗಿದ್ದರೆ 'ಭಾರತವು ಫಿಟ್' ಆಗಿರುತ್ತದೆ.
ನಿಖತ್ ಅವರು ನಿಜವಾಗಿಯೂ ಕೆಲವು ಉತ್ತಮ ಅಂಶಗಳನ್ನು ನೀಡಿದ್ದಾರೆ. ಈಗ ಡಾ.ದೇವಿ ಶೆಟ್ಟಿಯವರು ಏನು ಹೇಳುತ್ತಾರೆಂಬುದನ್ನು ಕೇಳೋಣ. ಅವರು ಬಹಳ ಗೌರವಾನ್ವಿತ ಹೆಸರಾಂತ ವೈದ್ಯರೆಂಬುದು ತಮಗೆ ತಿಳಿದಿದೆ. ಅವರು ನಿರಂತರವಾಗಿ ಈ ವಿಷಯದ ಮೇಲೆ ಕೆಲಸ ಮಾಡುತ್ತಿದ್ದಾರೆ:
# ಆಡಿಯೋ
ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಅವರ ಅತ್ಯಂತ ಜನಪ್ರಿಯವಾದ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಸ್ಥೂಲಕಾಯದ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಸ್ಥೂಲಕಾಯತೆ ಇಂದು ಸೌಂದರ್ಯವರ್ಧಕ ಸಮಸ್ಯೆಯಲ್ಲ; ಇದೊಂದು ತುಂಬಾ ಗಂಭೀರವಾದ ವೈದ್ಯಕೀಯ ಸಮಸ್ಯೆಯಾಗಿದೆ. ಇಂದು ಭಾರತದಲ್ಲಿ ಹೆಚ್ಚಿನ ಯುವಕರು ಬೊಜ್ಜು ಹೊಂದಿದ್ದಾರೆ. ಇಂದು ಸ್ಥೂಲಕಾಯಕ್ಕೆ ಮುಖ್ಯ ಕಾರಣವೆಂದರೆ ಕಳಪೆ ಗುಣಮಟ್ಟದ ಆಹಾರ ಸೇವನೆ, ಅದರಲ್ಲೂ ವಿಶೇಷವಾಗಿ ಅಕ್ಕಿ, ಚಪಾತಿ ಮತ್ತು ಸಕ್ಕರೆಯಂತಹ ಕಾರ್ಬೋಹೈಡ್ರೇಟ್ಗಳ ಹೆಚ್ಚಿನ ಸೇವನೆ ಮತ್ತು ಎಣ್ಣೆಯ ಹೆಚ್ಚಿನ ಬಳಕೆ. ಸ್ಥೂಲಕಾಯವು ಹೃದ್ರೋಗ, ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು ಮತ್ತು ಇತರ ಅನೇಕ ಸಮಸ್ಯೆಗಳಂತಹ ಪ್ರಮುಖ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ಯುವಕರಿಗೆ ನನ್ನ ಸಲಹೆಯೆಂದರೆ; ವ್ಯಾಯಾಮವನ್ನು ಪ್ರಾರಂಭಿಸಿ ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ ಮತ್ತು ಇದರ ಬಗ್ಗೆ ತುಂಬಾ ಸಕ್ರಿಯರಾಗಿದ್ದು ನಿಮ್ಮ ತೂಕವನ್ನು ಗಮನಿಸುತ್ತಿರಿ. ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ತುಂಬಾ ಸಂತೋಷದ ಆರೋಗ್ಯಕರ ಭವಿಷ್ಯವನ್ನು ಬಯಸುತ್ತೇನೆ, ಶುಭವಾಗಲಿ ಮತ್ತು ದೇವರು ಆಶೀರ್ವದಿಸಲಿ.
ಸ್ನೇಹಿತರೇ, ಆಹಾರದಲ್ಲಿ ಕಡಿಮೆ ಎಣ್ಣೆಯನ್ನು ಬಳಸುವುದು ಮತ್ತು ಸ್ಥೂಲಕಾಯತೆಯನ್ನು ನಿಭಾಯಿಸುವುದು ವೈಯಕ್ತಿಕ ಆಯ್ಕೆ ಮಾತ್ರವಲ್ಲ, ಕುಟುಂಬದ ಬಗ್ಗೆ ನಮ್ಮ ಜವಾಬ್ದಾರಿಯೂ ಆಗಿದೆ. ಆಹಾರದಲ್ಲಿ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಹೃದ್ರೋಗ, ಮಧುಮೇಹ ಮತ್ತು ಹೈಪರ್ ಟೆನ್ಶನ್ನಂತಹ ಅನೇಕ ಕಾಯಿಲೆಗಳು ಉಂಟಾಗಬಹುದು. ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡುವುದರಿಂದ, ನಾವು ನಮ್ಮ ಭವಿಷ್ಯವನ್ನು ಸಬಲ, ಸದೃಢವಾಗಿ ಮತ್ತು ರೋಗಮುಕ್ತವಾಗಿ ಮಾಡಬಹುದು. ಆದ್ದರಿಂದ, ನಾವು ಯಾವುದೇ ವಿಳಂಬವಿಲ್ಲದೆ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಹೆಚ್ಚಿಸಬೇಕು ಮತ್ತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಟ್ಟಾಗಿ ನಾವು ಇದನ್ನು ಕ್ರೀಡೆಗಳ ರೂಪದಲ್ಲಿ ಬಹಳ ಪರಿಣಾಮಕಾರಿಯಾಗಿ ಮಾಡಬಹುದು. ಉದಾಹರಣೆಗೆ, ಇಂದು 'ಮನ್ ಕಿ ಬಾತ್' ಸಂಚಿಕೆಯ ನಂತರ, ನಾನು 10 ಜನರನ್ನು ಒತ್ತಾಯಿಸುತ್ತೇನೆ ಮತ್ತು ಪ್ರಶ್ನಿಸುತ್ತೇನೆ, ಅವರು ತಮ್ಮ ಆಹಾರದಲ್ಲಿನ ಎಣ್ಣೆಯನ್ನು 10% ರಷ್ಟು ಕಡಿಮೆ ಮಾಡಲು ಸಾಧ್ಯವೇ? ಮತ್ತು ಅವರಿಂದ ಕೂಡ ಭವಿಷ್ಯದಲ್ಲಿ 10 ಹೊಸ ಜನ ಹೊಸಬರಿಗೆ ಇದೇ ರೀತಿಯ ಸವಾಲನ್ನು ನೀಡಬೇಕೆಂದು ನಾನು ವಿನಂತಿಸುತ್ತೇನೆ. ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಇದು ಬಹಳಷ್ಟು ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ.
ಸ್ನೇಹಿತರೇ, ಏಷ್ಯಾಟಿಕ್ ಸಿಂಹ, ಹಂಗುಲ್, ಪಿಗ್ಮಿ ಹಾಗ್ ಗಳು ಮತ್ತು ಸಿಂಹ-ಬಾಲದ ಮಕಾಕ್ಗಳು ಇವುಗಳಲ್ಲಿ ಏನು ಸಮಾನತೆಯಿದೆ ಎಂಬುದು ನಿಮಗೆ ತಿಳಿದಿದೆಯೇ? ಇವೆಲ್ಲವೂ ಜಗತ್ತಿನ ಬೇರೆಲ್ಲೂ ಸಿಗುವುದಿಲ್ಲ, ನಮ್ಮ ದೇಶದಲ್ಲಿ ಮಾತ್ರ ಸಿಗುತ್ತವೆ ಎಂಬುದು ಉತ್ತರ. ವಾಸ್ತವವಾಗಿ, ನಾವು ಸಸ್ಯ ಮತ್ತು ಪ್ರಾಣಿಗಳ ಅತ್ಯಂತ ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ಈ ವನ್ಯಜೀವಿಗಳು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅಂತರ್ಗತವಾಗಿವೆ. ಅನೇಕ ಜೀವಿಗಳನ್ನು ನಮ್ಮ ದೇವಾನುದೇವತೆಗಳ ವಾಹನಗಳಾಗಿಯೂ ನೋಡಲಾಗುತ್ತದೆ. ಮಧ್ಯ ಭಾರತದಲ್ಲಿನ ಅನೇಕ ಬುಡಕಟ್ಟು ಜನಗಳು ಬಾಘೇಶ್ವರನನ್ನು ಪೂಜಿಸುತ್ತಾರೆ. ಮಹಾರಾಷ್ಟ್ರದಲ್ಲಿ ವಾಘೋಬಾ ನನ್ನು ಪೂಜಿಸುವ ಸಂಪ್ರದಾಯವಿದೆ. ಅಯ್ಯಪ್ಪ ದೇವರಿಗೂ ಹುಲಿಗೂ ಬಹಳ ಆಳವಾದ ಸಂಬಂಧವಿದೆ. ಸುಂದರಬನ್ನಲ್ಲಿ ಬೊನ್-ಬೀಬಿಯನ್ನು ಪೂಜಿಸಲಾಗುತ್ತದೆ, ಅವಳ ಸವಾರಿ ಹುಲಿಯಾಗಿದೆ. ನಮ್ಮ ಕರ್ನಾಟಕದಲ್ಲಿ ಹುಲಿವೇಶ, ತಮಿಳುನಾಡಿನ ಪುಲಿ ಮತ್ತು ಕೇರಳದ ಪುಲಿಕಲಿ ಯಂತಹ ಅನೇಕ ಸಾಂಸ್ಕೃತಿಕ ನೃತ್ಯಗಳಿವೆ, ಅವು ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಂಬಂಧ ಹೊಂದಿವೆ. ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಕಾರಣ ನಾನು ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಕರ್ನಾಟಕದ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಹುಲಿಯನ್ನು ಪೂಜಿಸುವ ಸೋಲಿಗ ಬುಡಕಟ್ಟು ಜನಾಂಗದವರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ. ಇವುಗಳಿಂದಾಗಿ ಈ ಪ್ರದೇಶದಲ್ಲಿ ಮನುಷ್ಯ-ಪ್ರಾಣಿ ಸಂಘರ್ಷ ಇಲ್ಲವೆಂದೇ ಹೇಳಬಹುದು. ಗುಜರಾತ್ನಲ್ಲಿಯೂ ಜನರು ಗಿರ್ ನಲ್ಲಿ ಏಷ್ಯಾಟಿಕ್ ಸಿಂಹಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಅವರು ಪ್ರಕೃತಿಯೊಂದಿಗೆ ಸಹಬಾಳ್ವೆ ಎಂದರೆ ಏನೆಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಸ್ನೇಹಿತರೇ, ಈ ಪ್ರಯತ್ನಗಳಿಂದಾಗಿ, ಹುಲಿ, ಚಿರತೆ, ಏಷ್ಯಾಟಿಕ್ ಸಿಂಹಗಳು, ಘೇಂಡಾಮೃಗ ಮತ್ತು ಬಾರಾಶಿಂಗ್ ಗಳ ಸಂಖ್ಯೆಯು ಕಳೆದ ಹಲವಾರು ವರ್ಷಗಳಿಂದ ವೇಗವಾಗಿ ಹೆಚ್ಚುತ್ತಿದೆ ಮತ್ತು ಕಾಡು ಪ್ರಾಣಿಗಳ ಸಂಖ್ಯೆಯು ಹೆಚ್ಚಾಗಿದೆ. ಭಾರತದಲ್ಲಿ ಜೀವವೈವಿಧ್ಯತೆಯು ಎಷ್ಟು ಸುಂದರವಾಗಿದೆ ಎಂಬುದನ್ನು ಸಹ ಗಮನಿಸಬೇಕು. ಏಷ್ಯಾಟಿಕ್ ಸಿಂಹಗಳು ದೇಶದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತವೆ, ಆದರೆ ಹುಲಿಯ ಶ್ರೇಣಿಯು ಪೂರ್ವ, ಮಧ್ಯ ಮತ್ತು ದಕ್ಷಿಣ ಭಾರತದಲ್ಲಿದ್ದರೆ, ರೈನೋ ಈಶಾನ್ಯದಲ್ಲಿ ಕಂಡುಬರುತ್ತವೆ. ಭಾರತದ ಪ್ರತಿಯೊಂದು ಭಾಗವೂ ಕೇವಲ ಪ್ರಕೃತಿಗೆ ಸಂವೇದನಶೀಲವಾಗಿರದೆ, ವನ್ಯಜೀವಿ ರಕ್ಷಣೆಗೂ ಬದ್ಧವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೊಂದಿಗೆ ಅನೇಕ ತಲೆಮಾರುಗಳ ಸಂಬಂಧ ಹೊಂದಿರುವ ಅನುರಾಧಾ ರಾವ್ ಅವರ ಬಗ್ಗೆ ನನಗೆ ಹೇಳಲಾಗಿದೆ. ಅನುರಾಧಾ ಜೀ ಚಿಕ್ಕ ವಯಸ್ಸಿನಲ್ಲೇ ಪ್ರಾಣಿ ಕಲ್ಯಾಣಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದರು. ಮೂರು ದಶಕಗಳ ಕಾಲ ಅವರು ಜಿಂಕೆ ಮತ್ತು ನವಿಲುಗಳ ರಕ್ಷಣೆಯನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡರು. ಇಲ್ಲಿನ ಜನರು ಅವರನ್ನು ‘ಜಿಂಕೆ ಮಹಿಳೆ’ ಎಂದು ಕರೆಯುತ್ತಾರೆ. ಮುಂದಿನ ತಿಂಗಳ ಆರಂಭದಲ್ಲಿ ನಾವು ವಿಶ್ವ ವನ್ಯಜೀವಿ ದಿನವನ್ನು ಆಚರಿಸುತ್ತೇವೆ. ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಜನರನ್ನು ಪ್ರೋತ್ಸಾಹಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಈ ಕ್ಷೇತ್ರದಲ್ಲಿ ಈಗ ಅನೇಕ ಸ್ಟಾರ್ಟ್ಅಪ್ಗಳು ಹುಟ್ಟಿಕೊಂಡಿರುವುದು ನನಗೆ ತುಂಬಾ ತೃಪ್ತಿ ತಂದಿದೆ.
ಸ್ನೇಹಿತರೇ, ಇದು ಬೋರ್ಡ್ ಎಕ್ಸಾಮ್ ಸೀಸನ್. ನನ್ನ ಯುವ ಸ್ನೇಹಿತರಿಗೆ ಅಂದರೆ ಪರೀಕ್ಷಾ ಯೋಧರಿಗೆ ಅವರ ಪರೀಕ್ಷೆಗಳಿಗೆ ಶುಭ ಹಾರೈಸುತ್ತೇನೆ. ಯಾವುದೇ ಒತ್ತಡವಿಲ್ಲದೆ ಪೂರ್ಣ ಧನಾತ್ಮಕ ಮನೋಭಾವದಿಂದ ನಿಮ್ಮ ಪೇಪರ್ಗಳನ್ನು ಬರೆಯಿರಿ. ಪ್ರತಿ ವರ್ಷ 'ಪರೀಕ್ಷಾ ಪೇ ಚರ್ಚಾ' ದಲ್ಲಿ ನಾವು ಪರೀಕ್ಷೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ನಮ್ಮ ಪರೀಕ್ಷಾ ಯೋಧರೊಂದಿಗೆ ಮಾತನಾಡುತ್ತೇವೆ. ಈಗ ಈ ಕಾರ್ಯಕ್ರಮ ಸಾಂಸ್ಥಿಕ ರೂಪ ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ಅದಕ್ಕೆ ಹೊಸ ತಜ್ಞರನ್ನೂ ಸೇರಿಸಲಾಗುತ್ತಿದೆ. ಈ ವರ್ಷ ನಾವು 'ಪರೀಕ್ಷಾ ಪೇ ಚರ್ಚಾ' ಅನ್ನು ಹೊಸ ರೂಪದಲ್ಲಿ ಚರ್ಚಿಸಲು ಪ್ರಯತ್ನಿಸಿದ್ದೇವೆ. ಪರಿಣಿತರ ಜೊತೆಗೆ ಎಂಟು ವಿಭಿನ್ನ ಸಂಚಿಕೆಗಳನ್ನೂ ಸೇರಿಸಲಾಯಿತು. ಆಹಾರ ಮತ್ತು ಪಾನೀಯದ ಜೊತೆಗೆ ಒಟ್ಟಾರೆ ಪರೀಕ್ಷೆಗಳಿಂದ ಆರೋಗ್ಯ ರಕ್ಷಣೆ ಮತ್ತು ಮಾನಸಿಕ ಆರೋಗ್ಯದವರೆಗಿನ ವಿಷಯಗಳನ್ನು ಸಹ ನಾವು ಚರ್ಚಿಸಿದ್ದೇವೆ. ಅಲ್ಲಿ ಕೊನೆಯದಾಗಿ ಕಳೆದ ವರ್ಷದ ಟಾಪರ್ಗಳು ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಈ ಬಗ್ಗೆ ಅನೇಕ ಯುವಕರು, ಅವರ ಪೋಷಕರು ಮತ್ತು ಶಿಕ್ಷಕರು ನನಗೆ ಪತ್ರ ಬರೆದಿದ್ದಾರೆ. ಅವರು ಈ ಸ್ವರೂಪವನ್ನು ತುಂಬಾ ಇಷ್ಟಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ, ಏಕೆಂದರೆ ಪ್ರತಿಯೊಂದು ವಿಷಯವನ್ನು ಅದರಲ್ಲಿ ವಿವರವಾಗಿ ಚರ್ಚಿಸಲಾಗಿದೆ. ನಮ್ಮ ಯುವ ಸ್ನೇಹಿತರು ಸಹ ಇನ್ಸ್ಟಾಗ್ರಾಮ್ ನಲ್ಲಿ ಈ ಸಂಚಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ದೆಹಲಿಯ ಸುಂದರ್ ನರ್ಸರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಮ್ಮಲ್ಲಿ ಹಲವರು ಇಷ್ಟಪಟ್ಟಿದ್ದಾರೆ. ಇದುವರೆಗೆ 'ಪರೀಕ್ಷಾ ಪೇ ಚರ್ಚಾ'ದ ಈ ಸಂಚಿಕೆಗಳನ್ನು ನೋಡಲು ಸಾಧ್ಯವಾಗದ ನಮ್ಮ ಯುವ ಗೆಳೆಯರು ಇದನ್ನು ಅವಶ್ಯವಾಗಿ ನೋಡಿರಿ. ಈ ಎಲ್ಲಾ ಸಂಚಿಕೆಗಳನ್ನು ನಮೋ ಯ್ಯಾಪ್ ನಲ್ಲಿ ಇರಿಸಲಾಗಿದೆ. ಮತ್ತೊಮ್ಮೆ ನನ್ನ ಪರೀಕ್ಷಾ ಯೋಧರಿಗೆ ನನ್ನ ಸಂದೇಶವೆಂದರೆ "ಸಂತೋಷದಿಂದಿರಿ ಮತ್ತು ಒತ್ತಡದಿಂದ ಮುಕ್ತರಾಗಿರಿ".
ನನ್ನ ಆತ್ಮೀಯ ಸ್ನೇಹಿತರೇ, ಈ 'ಮನ್ ಕಿ ಬಾತ್' ಅನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ಮುಂದಿನ ತಿಂಗಳು ಮತ್ತೊಮ್ಮೆ ನಾವು ಹೊಸ ವಿಷಯಗಳೊಂದಿಗೆ 'ಮನ್ ಕಿ ಬಾತ್' ನಲ್ಲಿ ಚರ್ಚಿಸೋಣ. ನಿಮ್ಮ ಪತ್ರಗಳನ್ನು, ನಿಮ್ಮ ಸಂದೇಶಗಳನ್ನು ನೀವು ನನಗೆ ಕಳುಹಿಸುತ್ತಾ ಇರಿ. ಆರೋಗ್ಯವಾಗಿರಿ, ಸಂತೋಷವಾಗಿರಿ. ಅನಂತಾನಂತ ಧನ್ಯವಾದಗಳು. ನಮಸ್ಕಾರ .
ನನ್ನ ಪ್ರಿಯ ದೇಶವಾಸಿಗಳಿಗೆ ನಮಸ್ಕಾರ. ಇಂದು 2025ರ ಮೊದಲ 'ಮನದ ಮಾತು' ಮಾತನಾಡಲಾಗುತ್ತಿದೆ. ನೀವು ಖಂಡಿತ ಈ ವಿಷಯವನ್ನು ಗಮನಿಸಿರಬಹುದು. ಪ್ರತಿ ಬಾರಿ ತಿಂಗಳ ಕೊನೆಯ ಭಾನುವಾರದಂದು 'ಮನದ ಮಾತು' ಪ್ರಸಾರವಾಗುತ್ತದೆ, ಆದರೆ ಈ ಬಾರಿ ನಾವು ನಾಲ್ಕನೇ ಭಾನುವಾರದ ಬದಲು ಮೂರನೇ ಭಾನುವಾರದಂದು ಒಂದು ವಾರ ಮುಂಚಿತವಾಗಿ ಭೇಟಿಯಾಗುತ್ತಿದ್ದೇವೆ. ಏಕೆಂದರೆ ಮುಂದಿನ ಭಾನುವಾರದಂದೇ ಗಣರಾಜ್ಯೋತ್ಸವವಿದೆ. ಮುಂಚಿತವಾಗಿಯೇ ಎಲ್ಲಾ ದೇಶವಾಸಿಗಳಿಗೆ ನಾನು ಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೇ, ಈ ಬಾರಿಯ 'ಗಣರಾಜ್ಯೋತ್ಸವ' ಬಹಳ ವಿಶೇಷವಾಗಿದೆ. ಇದು ಭಾರತೀಯ ಗಣರಾಜ್ಯೋತ್ಸವದ ೭೫ ನೇ ವರ್ಷಾಚರಣೆ ಆಗಿದೆ. ಈ ಬಾರಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತವೆ. ನಮ್ಮ ಪವಿತ್ರ ಸಂವಿಧಾನವನ್ನು ನಮಗೆ ನೀಡಿದ ಸಂವಿಧಾನ ರಚನಾ ಸಭೆಯ ಎಲ್ಲ ಮಹನೀಯರಿಗೆ ನಾನು ವಂದಿಸುತ್ತೇನೆ. ಸಂವಿಧಾನ ರಚನಾ ಸಭೆಯಲ್ಲಿ ಹಲವಾರು ವಿಷಯಗಳ ಮೇಲೆ ಸುದೀರ್ಘ ಚರ್ಚೆಗಳು ನಡೆದಿದ್ದವು. ಆ ಚರ್ಚೆಗಳು, ಸಂವಿಧಾನ ಸಭೆಯ ಸದಸ್ಯರ ಚಿಂತನೆಗಳು, ಅವರ ಅನಿಸಿಕೆಗಳು ನಮ್ಮ ಶ್ರೇಷ್ಠ ಪರಂಪರೆಯಾಗಿದೆ. ಇಂದು ಮನದ ಮಾತಿನಲ್ಲಿ ಕೆಲವು ಮಹಾನ್ ನಾಯಕರ ಮೂಲ ಧ್ವನಿಯನ್ನು ನಿಮಗೆ ಕೇಳಿಸುವ ಪ್ರಯತ್ನ ನನ್ನದು.
ಸ್ನೇಹಿತರೇ, ಸಂವಿಧಾನ ರಚನಾ ಸಭೆಯು ತನ್ನ ಕೆಲಸವನ್ನು ಆರಂಭಿಸಿದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಸ್ಪರ ಸಹಕಾರದ ಕುರಿತು ಬಹು ಮುಖ್ಯವಾದ ವಿಷಯವನ್ನು ಹೇಳಿದ್ದರು. ಅವರ ಈ ಸಂಬೋಧನೆ ಇಂಗ್ಲಿಷ್ನಲ್ಲಿದೆ. ಅದರ ಆಯ್ದ ಒಂದು ಭಾಗವನ್ನುನಿಮಗೆ ಕೇಳಿಸುತ್ತೇನೆ -
"ಅಂತಿಮ ಗುರಿಗೆ ಸಂಬಂಧಿಸಿದಂತೆ, ಇಲ್ಲಿಯವರೆಗೆ ನಮ್ಮಲ್ಲಿ ಯಾರಿಗೂ ಯಾವುದೇ ಆತಂಕಗಳಾಗಲಿ, ಸಂದೇಹವಾಗಲಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನನಗಿರುವ ಆತಂಕವನ್ನು ನಾನು ಇಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಬೇಕಾಗಿದೆ. ಅದೇನೆಂದರೆ ಅಂತಿಮ ಭವಿಷ್ಯವೆಂಬುದು ನಮ್ಮ ಸಮಸ್ಯೆಯಲ್ಲ ಆದರೆ ಇಂದು ನಮ್ಮಲ್ಲಿರುವ ವೈವಿಧ್ಯಮಯ ಸಮೂಹವನ್ನು ಹೇಗೆ ಒಂದು ಗೂಡಿಸುವುದು, ಒಕ್ಕೊರಲಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಮತ್ತು ನಮ್ಮನ್ನು ಒಗ್ಗಟ್ಟಿನತ್ತ ಕೊಂಡೊಯ್ಯುವ ಹಾದಿಯಲ್ಲಿ ಸಹಕಾರಿ ಮಾರ್ಗದಲ್ಲಿ ಸಾಗುವುದು ಹೇಗೆ ಎಂಬುದಾಗಿದೆ. ಅಂತಿಮ ಗಮ್ಯ ನಮ್ಮ ಸಮಸ್ಯೆಯಲ್ಲ ಆದರೆ ಸಮಸ್ಯೆ ಆರಂಭಕ್ಕೆ ಸಂಬಂಧಿಸಿದ್ದಾಗಿದೆ. ”
ಸ್ನೇಹಿತರೇ, ಸಂವಿಧಾನ ರಚನಾ ಸಭೆಯು ಒಗ್ಗಟ್ಟಿನಿಂದಿರಬೇಕು, ಒಕ್ಕೊರಲಿನಿಂದ ಮತ್ತು ಎಲ್ಲರ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂಬುದರ ಕುರಿತು ಬಾಬಾ ಸಾಹೇಬರು ಒತ್ತಿ ಹೇಳಿದರು. ಸಂವಿಧಾನ ಸಭೆಯ ಇನ್ನೊಂದು ಆಡಿಯೋ ತುಣುಕುಗಳನ್ನು ನಿಮಗಾಗಿ ಕೇಳಿಸುತ್ತೇನೆ. ಈ ಆಡಿಯೋ ನಮ್ಮ ಸಂವಿಧಾನ ರಚನಾ ಸಭೆಯ ಮುಖ್ಯಸ್ಥರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರದ್ದು. ಬನ್ನಿ ಡಾ.ರಾಜೇಂದ್ರ ಪ್ರಸಾದ್ ಅವರ ಮಾತುಗಳನ್ನು ಕೇಳೋಣ -
"ನಾವು ಶಾಂತಿ ಪ್ರಿಯರಾಗಿದ್ದೇವೆ ಮತ್ತು ಶಾಂತಿ ಪ್ರಿಯರಾಗಿದ್ದೆವು ಎಂದು ನಮ್ಮ ಇತಿಹಾಸವು ನಮಗೆ ಹೇಳುತ್ತದೆ ಮತ್ತು ನಮ್ಮ ಸಂಸ್ಕೃತಿ ನಮಗೆ ಕಲಿಸುತ್ತದೆ. ನಮ್ಮ ಸಾಮ್ರಾಜ್ಯ ವಿಸ್ತರಣೆ ಮತ್ತು ನಮ್ಮ ವಿಜಯಗಳು ವಿಭಿನ್ನ ರೀತಿಯದ್ದಾಗಿದ್ದವು, ನಾವು ಎಂದಿಗೂ ಯಾರನ್ನು ಕಬ್ಬಿಣ ಅಥವಾ ಚಿನ್ನದ ಸರಪಳಿಗಳಿಂದ ಬಂಧಿಸಲು ಪ್ರಯತ್ನಿಸಿದವರಲ್ಲ. ಕಬ್ಬಿಣದ ಸರಪಳಿಗಿಂತ ಗಟ್ಟಿಯಾದ ಆದರೆ ಸುಂದರ ಮತ್ತು ಹಿತಕರವಾದ ರೇಷ್ಮೆ ದಾರದಿಂದ ನಾವು ಇತರರನ್ನು ಬಾಂಧವ್ಯದಲ್ಲಿ ಬಂಧಿಸಿದ್ದೇವೆ. ಅದು ಧರ್ಮ, ಸಂಸ್ಕೃತಿ ಮತ್ತು ಜ್ಞಾನದ ಬಂಧವಾಗಿದೆ. ನಾವು ಇಂದು ಕೂಡಾ ಅದೇ ಮಾರ್ಗದಲ್ಲಿ ಮುಂದುವರಿಯುತ್ತೇವೆ ಮತ್ತು ನಮ್ಮದು ಒಂದೇ ಒಂದು ಆಸೆ ಮತ್ತು ಅಪೇಕ್ಷೆಯಾಗಿದೆ. ಅದೇನೆಂದರೆ ನಾವು ಜಗತ್ತಿನಲ್ಲಿ ಸಂತೋಷ ಮತ್ತು ಶಾಂತಿಯನ್ನು ಸ್ಥಾಪಿಸಲು ಸಹಾಯ ಮಾಡುವಂಥದ್ದು ಮತ್ತು ನಮ್ಮನ್ನು ಸ್ವಾತಂತ್ರ್ಯದವರೆಗೆ ಕೊಂಡೊಯ್ದ ಸತ್ಯ ಮತ್ತು ಅಹಿಂಸೆ ಎಂಬ ಗುರಿ ತಪ್ಪದ ಅಸ್ತ್ರಗಳನ್ನು ವಿಶ್ವಕ್ಕೆ ನೀಡುವುದು. ಕಾಲನ ಹೊಡೆತಗಳ ಮಧ್ಯೆಯಿ ಬದುಕುವ ಶಕ್ತಿಯನ್ನು ನೀಡುವಂತಹ ಶಕ್ತಿ ನಮ್ಮ ಜೀವನ ಮತ್ತು ಸಂಸ್ಕೃತಿಯಲ್ಲಿದೆ. ನಮ್ಮ ಆದರ್ಶಗಳನ್ನು ನಾವು ಮುಂದಿಟ್ಟುಕೊಂಡು ಸಾಗಿದರೆ ಜಗತ್ತಿಗೆ ಮಹತ್ತರವಾದ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.”
ಸ್ನೇಹಿತರೇ, ಡಾ.ರಾಜೇಂದ್ರ ಪ್ರಸಾದ್ ಅವರು ಮಾನವೀಯ ಮೌಲ್ಯಗಳತ್ತ ದೇಶದ ಬದ್ಧತೆಯ ಕುರಿತು ಮಾತನಾಡಿದ್ದರು. ಈಗ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಧ್ವನಿಯನ್ನು ಕೇಳಿಸುತ್ತೇನೆ. ಅವರು ಅವಕಾಶಗಳಲ್ಲಿ ಸಮಾನತೆ ಬಗ್ಗೆ ಮಾತನಾಡಿದ್ದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಹೀಗೆ ಹೇಳಿದ್ದರು –
"ಸರ್ ಎಲ್ಲಾ ಸಂಕಷ್ಟಗಳ ಮಧ್ಯೆಯೂ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಮತ್ತು ತನ್ಮೂಲಕ ಮಹಾನ್ ಭಾರತ ರಚನೆಗೆ ಸಹಾಯ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ. ಈ ಮಾತೃಭೂಮಿ, ಈ ಸಮುದಾಯ, ಆ ಸಮುದಾಯ, ಈ ವರ್ಗ ಆ ವರ್ಗಕ್ಕೆ ಮಾತ್ರ ಸೀಮಿತವಾಗಿರದೆ, ಪ್ರತಿಯೊಬ್ಬ ವ್ಯಕ್ತಿ, ಮನುಷ್ಯ, ಜನಾಂಗ, ಜಾತಿ, ಮತ ಅಥವಾ ಸಮುದಾಯವನ್ನು ಲೆಕ್ಕಿಸದೆ ಈ ಮಹಾನ್ ರಾಷ್ಟ್ರದಲ್ಲಿ ವಾಸಿಸುವ ಪ್ರತಿ ಪುರುಷ, ಮಹಿಳೆ ಮತ್ತು ಮಗುವಿಗೆ ಹೀಗೆ . ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಇದರಿಂದ ಮಹಿಳೆ ಅಥವಾ ಪುರುಷ ತನ್ನನ್ನು ತಾನು ಅತ್ಯುತ್ತಮ ಪ್ರತಿಭೆಗನುಸಾರ ಅಭಿವೃದ್ಧಿ ಹೊಂದಿ ಮಹಾನ್ ಮಾತೃಭೂಮಿ ಭಾರತಕ್ಕೆ ಸೇವೆ ಸಲ್ಲಿಸಬಹುದು.
ಸ್ನೇಹಿತರೇ, ಸಂವಿಧಾನ ರಚನಾ ಸಭೆಯ ಚರ್ಚೆಯ ಈ ಮೂಲ ಆಡಿಯೋವನ್ನು ಕೇಳಿ ನಿಮಗೂ ಆನಂದವಾಗಿದೆ ಎಂದು ನಾನು ಭಾವಿಸುತ್ತೇನೆ. ದೇಶವಾಸಿಗಳಾದ ನಮಗೆ, ಈ ಚಿಂತನೆಗಳಿಂದ ಸ್ಫೂರ್ತಿ ಪಡೆದು, ನಮ್ಮ ಸಂವಿಧಾನವನ್ನು ರಚಿಸಿದವರೂ ಹೆಮ್ಮೆಪಡುವಂತಹ ಭಾರತವನ್ನು ನಿರ್ಮಿಸುವತ್ತ ಕೆಲಸ ಮಾಡಬೇಕಾಗಿದೆ.
ಸ್ನೇಹಿತರೇ, 'ಗಣರಾಜ್ಯೋತ್ಸವ'ದ ಒಂದು ದಿನ ಮುಂಚೆ. ಅಂದರೆ ಜನವರಿ 25 ರಾಷ್ಟ್ರೀಯ ಮತದಾರರ ದಿನವಾಗಿದೆ. ಈ ದಿನದಂದು 'ಭಾರತೀಯ ಚುನಾವಣಾ ಆಯೋಗ' ಸ್ಥಾಪನೆಯಾಗಿತ್ತು ಆದ್ದರಿಂದ ಈ ದಿನವು ಮಹತ್ವದ್ದಾಗಿದೆ. ನಮ್ಮ ಸಂವಿಧಾನದ ನಿರ್ಮಾಪಕರು ಸಂವಿಧಾನದಲ್ಲಿ, ನಮ್ಮ ಚುನಾವಣಾ ಆಯೋಗಕ್ಕೆ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ಭಾಗವಹಿಸುವಿಕೆಗೆ ಬಹು ದೊಡ್ಡ ಸ್ಥಾನವನ್ನು ನೀಡಿದ್ದಾರೆ. 1951-52ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆದಾಗ ದೇಶದ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂಬ ಅನುಮಾನ ಕೆಲವರಿಗಿತ್ತು. ಆದರೆ, ನಮ್ಮ ಪ್ರಜಾಪ್ರಭುತ್ವವು ಎಲ್ಲಾ ಆತಂಕಗಳನ್ನು ತೊಡೆದುಹಾಕಿತು - ಎಷ್ಟೇ ಆಗಲಿ ಭಾರತ ಪ್ರಜಾಪ್ರಭುತ್ವದ ತಾಯಿಯಲ್ಲವೇ. ಕಳೆದ ದಶಕಗಳಲ್ಲಿಯೂ ದೇಶದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ ಮತ್ತು ಸಮೃದ್ಧವಾಗಿದೆ. ಕಾಲಕಾಲಕ್ಕೆ, ನಮ್ಮ ಮತದಾನ ಪ್ರಕ್ರಿಯೆಯನ್ನು ಆಧುನೀಕರಿಸಿದ ಮತ್ತು ಬಲಪಡಿಸಿದ ಚುನಾವಣಾ ಆಯೋಗಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಆಯೋಗವು ಜನಶಕ್ತಿಗೆ ಹೆಚ್ಚಿನ ಬಲವನ್ನು ನೀಡಲು ತಂತ್ರಜ್ಞಾನದ ಸದುಪಯೋಗ ಮಾಡಿಕೊಂಡಿತು. ನ್ಯಾಯಸಮ್ಮತ ಚುನಾವಣೆಯ ಬದ್ಧತೆಗಾಗಿ ಚುನಾವಣಾ ಆಯೋಗವನ್ನು ನಾನು ಅಭಿನಂದಿಸುತ್ತೇನೆ. ದೇಶವಾಸಿಗಳು ತಮ್ಮ ಮತದಾನದ ಹಕ್ಕನ್ನು ಯಾವಾಗಲೂ ಗರಿಷ್ಠ ಸಂಖ್ಯೆಯಲ್ಲಿ ಬಳಸಲು ಮತ್ತು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಮತ್ತು ಈ ಪ್ರಕ್ರಿಯೆಯನ್ನು ಬಲಪಡಿಸಲು ನಾನು ಕೋರುತ್ತೇನೆ
ನನ್ನ ಪ್ರಿಯ ದೇಶವಾಸಿಗಳೇ, ಪ್ರಯಾಗರಾಜ್ನಲ್ಲಿ ಮಹಾಕುಂಭ ಆರಂಭವಾಗಿದೆ. ಚಿರಸ್ಮರಣೀಯ ಜನಸಾಗರ , ಊಹಿಸಲಾಗದಂತಹ ನೋಟ ಮತ್ತು ಸಮಾನತೆ ಮತ್ತು ಸಾಮರಸ್ಯದ ಅಸಾಧಾರಣ ಸಂಗಮ! ಈ ಬಾರಿ ಕುಂಭದಲ್ಲಿ ಹಲವು ವಿಶಿಷ್ಟತೆಗಳು ಸಾಕಾರಗೊಳ್ಳುತ್ತಿವೆ. ಮಹಾಕುಂಭದ ಈ ಉತ್ಸವ ವಿವಿಧತೆಯಲ್ಲಿ ಏಕತೆಯನ್ನು ಆಚರಿಸುತ್ತಿದೆ. ಸಂಗಮದ ತಟದಲ್ಲಿ ಭಾರತದಾದ್ಯಂತದ ಮತ್ತು ಪ್ರಪಂಚದಾದ್ಯಂತದ ಜನರು ಸೇರುತ್ತಾರೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ ಯಾವುದೇ ತಾರತಮ್ಯ, ಜಾತಿಭೇದ ಇಲ್ಲ. ಭಾರತದ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಿಂದ ಜನರು ಇಲ್ಲಿಗೆ ಬರುತ್ತಾರೆ. ಶ್ರೀಮಂತರು ಮತ್ತು ಬಡವರು ಕುಂಭದಲ್ಲಿ ಒಂದಾಗುತ್ತಾರೆ. ಎಲ್ಲರೂ ಸಂಗಮದಲ್ಲಿ ಸ್ನಾನ ಮಾಡುತ್ತಾರೆ, ಅಂಗಡಿಗಳಲ್ಲಿ ಒಟ್ಟಿಗೆ ಊಟ ಮಾಡುತ್ತಾರೆ, ಪ್ರಸಾದವನ್ನು ತೆಗೆದುಕೊಳ್ಳುತ್ತಾರೆ - ಅದಕ್ಕಾಗಿಯೇ 'ಕುಂಭ' ಏಕತೆಯ ಮಹಾಕುಂಭವಾಗಿದೆ. ನಮ್ಮ ಸಂಪ್ರದಾಯಗಳು ಹೇಗೆ ಸಂಪೂರ್ಣ ಭಾರತವನ್ನು ಒಗ್ಗೂಡಿಸುತ್ತದೆ ಎಂಬುದನ್ನುಕುಂಭದ ಆಯೋಜನೆ ನಮಗೆ ತಿಳಿಸುತ್ತದೆ. ಉತ್ತರದಿಂದ ದಕ್ಷಿಣದವರೆಗೆ ಆಚಾರ ವಿಚಾರ ನಂಬಿಕೆಗಳನ್ನು ಅನುಸರಿಸುವ ವಿಧಾನಗಳು ಒಂದೇ ರೀತಿಯೇ ಆಗಿರುತ್ತವೆ. ಒಂದೆಡೆ, ಪ್ರಯಾಗರಾಜ್, ಉಜ್ಜಯಿನಿ, ನಾಸಿಕ್ ಮತ್ತು ಹರಿದ್ವಾರದಲ್ಲಿ ಕುಂಭವನ್ನು ಆಯೋಜಿಸಲಾಗುತ್ತದೆ, ಅದೇ ರೀತಿ, ದಕ್ಷಿಣ ಭಾಗದಲ್ಲಿ, ಗೋದಾವರಿ, ಕೃಷ್ಣ, ನರ್ಮದಾ ಮತ್ತು ಕಾವೇರಿ ನದಿಗಳ ದಡದಲ್ಲಿ ಪುಷ್ಕರಂಗಳನ್ನು ಆಯೋಜಿಸಲಾಗುತ್ತದೆ. ಈ ಎರಡೂ ಉತ್ಸವಗಳು ನಮ್ಮ ಪವಿತ್ರ ನದಿಗಳು ಮತ್ತು ಅವುಗಳ ಆಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ. ಅಂತೆಯೇ, ಕುಂಭಕೋಣಂನಿಂದ ತಿರುಕ್ಕಡಯೂರ್, ಕೂಡವಾಸಲ್ನಿಂದ ತಿರುಚೆರೈಯಲ್ಲಿರುವ ಅನೇಕ ದೇವಾಲಯಗಳ ಪರಂಪರೆಯು ಕುಂಭದೊಂದಿಗೆ ಮೇಳೈಸಿದೆ.
ಸ್ನೇಹಿತರೇ, ಈ ಬಾರಿ ಕುಂಭದಲ್ಲಿ ಯುವಕರ ಪಾಲ್ಗೊಳ್ಳುವಿಕೆ ಬಹಳ ವ್ಯಾಪಕವಾಗಿದೆ ಎಂಬುದನ್ನು ನೀವೆಲ್ಲರೂ ಗಮನಿಸಿರಬಹುದು. ಯಾವಾಗ ಯುವ ಪೀಳಿಗೆಯು ತಮ್ಮ ನಾಗರಿಕತೆಯ ಮೂಲದೊಂದಿಗೆ ಹೆಮ್ಮೆಯಿಂದ ಪಾಲ್ಗೊಳ್ಳುತ್ತದೆಯೋ ಆಗ ಅದರ ಬೇರುಗಳು ಗಟ್ಟಿಗೊಳ್ಳುತ್ತವೆ ಮತ್ತು ಅದರ ಸುವರ್ಣ ಭವಿಷ್ಯವೂ ಸಹ ರೂಪುಗೊಳ್ಳುವುದು ಖಚಿತವಾಗುತ್ತದೆ. ಈ ಬಾರಿ ನಾವು ಕುಂಭದ ಡಿಜಿಟಲ್ ಪುಟ್ ಪ್ರಿಂಟ್ಸ್ ಕೂಡಾ ಬಹು ದೊಡ್ಡ ಪ್ರಮಾಣದಲ್ಲಿ ಕಾಣುತಿದ್ದೇವೆ. ಕುಂಭದ ಈ ಜಾಗತಿಕ ಜನಪ್ರಿಯತೆಯು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ.
ಸ್ನೇಹಿತರೇ, ಕೆಲವೇ ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಅದ್ಭುತವಾದ 'ಗಂಗಾ ಸಾಗರ' ಜಾತ್ರೆಯನ್ನು ಆಯೋಜಿಸಲಾಗಿತ್ತು. ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ‘ಕುಂಭ’, ‘ಪುಷ್ಕರಂ’ ಮತ್ತು ‘ಗಂಗಾ ಸಾಗರ ಮೇಳ’ ದಂತಹ ನಮ್ಮ ಈ ಉತ್ಸವಗಳು ನಮ್ಮ ಸಾಮಾಜಿಕ ಸಂವಹನ, ಸಾಮರಸ್ಯ ಮತ್ತು ಏಕತೆಯನ್ನು ಹೆಚ್ಚಿಸುವ ಹಬ್ಬಗಳಾಗಿವೆ. ಈ ಉತ್ಸವಗಳು ಭಾರತದ ಜನರನ್ನು ಭಾರತದ ಸಂಪ್ರದಾಯಗಳೊಂದಿಗೆ ಬೆರೆಯುವಂತೆ ಮಾಡುತ್ತವೆ. ನಮ್ಮ ಶಾಸ್ತ್ರಗಳು ವಿಶ್ವದಲ್ಲಿ - ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಪ್ರಪಂಚದ ಎಲ್ಲ ನಾಲ್ಕಕ್ಕೂ ಹೇಗೆ ಒತ್ತು ನೀಡಿವೆಯೋ ಹಾಗೆ ನಮ್ಮ ಹಬ್ಬಗಳು ಮತ್ತು ಸಂಪ್ರದಾಯಗಳು ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕತೆಯ ಪ್ರತಿಯೊಂದು ಅಂಶವನ್ನು ಬಲಪಡಿಸುತ್ತವೆ.
ಸ್ನೇಹಿತರೇ, ಈ ತಿಂಗಳು ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ನಾವು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪಣಾ ಉತ್ಸವದ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ. ಈ ವರ್ಷ ಜನವರಿ 11 ರಂದು ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ಇತ್ತು. ಈ ದಿನದಂದು ಲಕ್ಷಾಂತರ ರಾಮ ಭಕ್ತರು ಅಯೋಧ್ಯೆಯಲ್ಲಿ ರಾಮಲಲ್ಲಾ ಅವರ ಪ್ರತ್ಯಕ್ಷ ದರ್ಶನ ಮಾಡಿ ಆಶೀರ್ವಾದ ಪಡೆದರು. ಪ್ರಾಣ ಪ್ರತಿಷ್ಠೆಯ ಈ ದ್ವಾದಶಿಯು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಪುನಃಸ್ಥಾಪನೆಯ ದ್ವಾದಶಿಯಾಗಿದೆ. ಆದುದರಿಂದ ಒಂದು ರೀತಿಯಲ್ಲಿ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ಪ್ರತಿಷ್ಠಾ ದ್ವಾದಶಿಯ ದಿನವೂ ಆಗಿದೆ. ಈ ರೀತಿ ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ನಮ್ಮ ಪರಂಪರೆಯನ್ನು ಉಳಿಸಿಕೊಂಡು ಅದರಿಂದ ಸ್ಫೂರ್ತಿ ಪಡೆದು ಮುನ್ನಡೆಯಬೇಕು.
ನನ್ನ ಪ್ರಿಯ ದೇಶವಾಸಿಗಳೇ, 2025 ರ ಪ್ರಾರಂಭದಲ್ಲಿಯೇ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಇಂದು, ಬೆಂಗಳೂರು ಮೂಲದ Pixxel, ಭಾರತೀಯ ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟ್-ಅಪ್, ಭಾರತದ ಮೊದಲ ಖಾಸಗಿ ಉಪಗ್ರಹ ಸಮೂಹ - ‘ಫೈರ್ಫ್ಲೈ’ ಅನ್ನು ಯಶಸ್ವಿಯಾಗಿ ಉಡಾಯಿಸಿತ್ತು ಎಂಬ ವಿಷಯ ಹಂಚಿಕೊಳ್ಳಲು ಹೆಮ್ಮೆಪಡುತ್ತೇನೆ. ಈ ಉಪಗ್ರಹ ಸಮೂಹವು ವಿಶ್ವದ ಅತಿ ಹೆಚ್ಚು ರೆಸಲ್ಯೂಶನ್ ಹೊಂದಿರುವ ಹೈಪರ್ ಸ್ಪೆಕ್ಟ್ರಲ್ ಉಪಗ್ರಹ ಸಮೂಹವಾಗಿದೆ. ಈ ಸಾಧನೆಯು ಭಾರತವನ್ನು ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರಿಸಿದ್ದಲ್ಲದೆ, ಸ್ವಾವಲಂಬಿ ಭಾರತದತ್ತ ಒಂದು ದಾಪುಗಾಲಾಗಿದೆ. ಈ ಯಶಸ್ಸು ನಮ್ಮ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ವೃದ್ಧಿಸುತ್ತಿರುವ ಶಕ್ತಿ ಮತ್ತು ನಾವೀನ್ಯತೆಯ ಸಂಕೇತವಾಗಿದೆ. ಈ ಸಾಧನೆಗಾಗಿ ಸಂಪೂರ್ಣ ರಾಷ್ಟ್ರದ ಪರವಾಗಿ ನಾನು Pixxel ತಂಡ, ISRO ಮತ್ತು IN-SPAce ಅನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ನಮ್ಮ ವಿಜ್ಞಾನಿಗಳು ಉಪಗ್ರಹಗಳ ಸ್ಪೇಸ್ಫ್ ಡಾಕಿಂಗ್ ಮಾಡಿದ್ದಾರೆ. ಎರಡು ಬಾಹ್ಯಾಕಾಶ ನೌಕೆಗಳಿಗೆ ಬಾಹ್ಯಾಕಾಶದಲ್ಲಿ ಸಂಪರ್ಕ ಕಲ್ಪಿಸುವ, ಪ್ರಕ್ರಿಯೆಯನ್ನು ಸ್ಪೇಸ್ ಡಾಕಿಂಗ್ ಎಂದು ಕರೆಯುತ್ತಾರೆ. ಈ ತಂತ್ರಜ್ಞಾನವು ಬಾಹ್ಯಾಕಾಶ ನಿಲ್ದಾಣಕ್ಕೆ ಅವಶ್ಯಕ ವಸ್ತುಗಳ ಸರಬರಾಜಿಗೆ ಮತ್ತು ಸಿಬ್ಬಂದಿ ಕಾರ್ಯಾಚರಣೆಗಳಿಗೆ ಪ್ರಮುಖವಾಗಿದೆ. ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತಕ್ಕೆ ಲಭಿಸಿದೆ .
ಸ್ನೇಹಿತರೇ, ನಮ್ಮ ವಿಜ್ಞಾನಿಗಳು ಸಹ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಮತ್ತು ಅವುಗಳನ್ನು ಜೀವಂತವಾಗಿಡುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಅಲಸಂದೆ ಬೀಜಗಳನ್ನು ಆಯ್ದುಕೊಂಡರು. ಡಿಸೆಂಬರ್ 30 ರಂದು ಕಳುಹಿಸಲಾದ ಈ ಬೀಜಗಳು ಬಾಹ್ಯಾಕಾಶದಲ್ಲಿಯೇ ಮೊಳಕೆಯೊಡೆದವು. ಇದು ಅತ್ಯಂತ ಸ್ಪೂರ್ತಿದಾಯಕ ಪ್ರಯೋಗವಾಗಿದ್ದು, ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ತರಕಾರಿಗಳನ್ನು ಬೆಳೆಯಲು ಅವಕಾಶ ಕಲ್ಪಿಸಲಿದೆ. ಇದು ನಮ್ಮ ವಿಜ್ಞಾನಿಗಳ ದೂರದೃಷ್ಟಿಯನ್ನು ತೋರಿಸುತ್ತದೆ.
ಸ್ನೇಹಿತರೇ, ನಾನು ನಿಮಗೆ ಮತ್ತೊಂದು ಸ್ಪೂರ್ತಿದಾಯಕ ಉಪಕ್ರಮದ ಬಗ್ಗೆ ಹೇಳಬಯಸುತ್ತೇನೆ. ಐಐಟಿ ಮದ್ರಾಸ್ ನಲ್ಲಿರುವ ಎಕ್ಸ್ ಟೆಮ್ ಕೇಂದ್ರವು ಬಾಹ್ಯಾಕಾಶ ಉತ್ಪಾದನೆಗಾಗಿ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರವು 3D–Printed buildings, metal foams ಮತ್ತು ಬಾಹ್ಯಾಕಾಶದಲ್ಲಿ ಆಪ್ಟಿಕಲ್ ಫೈಬರ್ ಗಳಂತಹ ತಂತ್ರಜ್ಞಾನಗಳ ಸಂಶೋಧನೆ ನಡೆಸುತ್ತಿದೆ. ಈ ಕೇಂದ್ರವು ನೀರಿಲ್ಲದೆ ಕಾಂಕ್ರೀಟ್ ತಯಾರಿಸುವಂತಹ ಕ್ರಾಂತಿಕಾರಿ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ExTeM ನ ಈ ಸಂಶೋಧನೆಯು ಭಾರತದ ಗಗನಯಾನ ಮಿಷನ್ ಮತ್ತು ಭವಿಷ್ಯದ ಬಾಹ್ಯಾಕಾಶ ನಿಲ್ದಾಣವನ್ನು ಬಲಪಡಿಸುತ್ತದೆ. ಇದು ಉತ್ಪಾದನಾ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಹೊಸ ದ್ವಾರಗಳನ್ನು ತೆರೆಯುತ್ತದೆ.
ಸ್ನೇಹಿತರೇ, ಈ ಎಲ್ಲಾ ಸಾಧನೆಗಳು ಭಾರತದ ವಿಜ್ಞಾನಿಗಳು ಮತ್ತು ಆವಿಷ್ಕಾರಕರು ಭವಿಷ್ಯದ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಎಷ್ಟು ದೂರದೃಷ್ಟಿಯುಳ್ಳವರಾಗಿದ್ದಾರೆ ಎನ್ನುವುದಕ್ಕೆ ಪುರಾವೆಯಾಗಿದೆ. ಇಂದು ನಮ್ಮ ದೇಶ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇಡೀ ದೇಶದ ಪರವಾಗಿ, ಭಾರತದ ವಿಜ್ಞಾನಿಗಳು, ಆವಿಷ್ಕಾರಕರು ಮತ್ತು ಯುವ ಉದ್ಯಮಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಅನೇಕ ಸಲ ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಅದ್ಭುತ ಸ್ನೇಹದ ಚಿತ್ರಗಳನ್ನು ನೋಡಿರುತ್ತೀರಿ; ಪ್ರಾಣಿಗಳ ನಿಷ್ಠೆಯ ಕಥೆಗಳನ್ನು ಸಹ ನೀವು ಕೇಳಿರುತ್ತೀರಿ. ಸಾಕುಪ್ರಾಣಿಗಳೇ ಆಗಲಿ ಅಥವಾ ಕಾಡು ಪ್ರಾಣಿಗಳೇ ಆಗಲಿ ಮನುಷ್ಯರೊಂದಿಗಿನ ಅವುಗಳ ಬಾಂಧವ್ಯ ಕೆಲವೊಮ್ಮೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಪ್ರಾಣಿಗಳಿಗೆ ಮಾತನಾಡಲು ಸಾಧ್ಯವಾಗದಿದ್ದರೂ, ಅವು ಮನುಷ್ಯರನ್ನು, ಅವರ ಭಾವನೆಗಳನ್ನು ಮತ್ತು ಸಂಜ್ಞೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲವು. ಪ್ರಾಣಿಗಳು ಸಹ ಪ್ರೀತಿಯ ಭಾಷೆಯನ್ನು ಅನುಸರಿಸುತ್ತವೆ ಮತ್ತು ಅರ್ಥ ಮಾಡಿಕೊಳ್ಳುತ್ತವೆ. ನಾನು ನಿಮಗೆ ಅಸ್ಸಾಂನ ಒಂದು ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅಸ್ಸಾಂನಲ್ಲಿ ನೌಗಾಂವ್ ಎಂಬ ಸ್ಥಳವೊಂದಿದೆ. ‘ನೌಗಾಂವ್’ ನಮ್ಮ ದೇಶದ ಮಹಾನ್ ವ್ಯಕ್ತಿ ಶ್ರೀಮಂತ್ ಶಂಕರ್ ದೇವ್ ಅವರ ಜನ್ಮಸ್ಥಳವಾಗಿದೆ. ಈ ಸ್ಥಳ ಬಹಳ ಸುಂದರವಾಗಿದೆ. ಇಲ್ಲಿ ಆನೆಗಳ ಒಂದು ದೊಡ್ಡ ವಾಸಸ್ಥಾನವೂ ಇದೆ. ಆನೆಗಳ ಹಿಂಡು ಬೆಳೆಗಳನ್ನು ಹಾಳುಮಾಡಿದ್ದ ಹಲವಾರು ಘಟನೆಗಳು ನಡೆದಿವೆ, ರೈತರು ಬಹಳ ಚಿಂತೆಗೊಳಗಾಗುತ್ತಿದ್ದರು, ಸುತ್ತಮುತ್ತಲಿನ ಸುಮಾರು 100 ಗ್ರಾಮಗಳ ಜನರು ಅಸಮಾಧಾನಗೊಂಡಿದ್ದರು, ಆದರೆ ಗ್ರಾಮಸ್ಥರು ಆನೆಗಳ ಆಸಹಾಯಕತೆಯನ್ನು ಕೂಡಾ ಅರ್ಥ ಮಾಡಿಕೊಂಡಿದ್ದರು. ಆನೆಗಳು ತಮ್ಮ ಹಸಿವನ್ನು ನೀಗಿಸಲು ಹೊಲಗಳಿಗೆ ನುಗ್ಗುತ್ತಿದ್ದವು, ಹೀಗಾಗಿ ಗ್ರಾಮಸ್ಥರು ಇದಕ್ಕೆ ಒಂದು ಪರಿಹಾರ ಹುಡುಕಬೇಕೆಂದು ಆಲೋಚಿಸಿದರು. ಗ್ರಾಮಸ್ಥರು ಒಂದು ತಂಡವನ್ನು ರಚಿಸಿದರು, ಆ ತಂಡದ ಹೆಸರು ‘ಹಾಥಿ ಬಂಧು‘ ಅಥವಾ ‘ಆನೆಯ ಬಂಧು‘ ಎಂಬುದಾಗಿತ್ತು. ಆನೆಯ ಬಂಧುಗಳು ತಮ್ಮ ಬುದ್ಧಿಮತ್ತೆ ಪ್ರದರ್ಶಿಸುತ್ತಾ, ಸುಮಾರು 800 ಬಿಘಾ ಬಂಜರು ಪ್ರದೇಶದಲ್ಲಿ ಒಂದು ವಿಶಿಷ್ಠ ಪ್ರಯತ್ನ ಮಾಡಿದರು. ಇಲ್ಲಿ ಗ್ರಾಮಸ್ಥರು ಪರಸ್ಪರ ಒಗ್ಗೂಡಿ, ನೇಪಿಯರ್ ಹುಲ್ಲು ಬಿತ್ತಿದರು. ಈ ಹುಲ್ಲು ಆನೆಗಳಿಗೆ ಬಹಳ ಪ್ರಿಯವಾದುದು. ಇದರಿಂದಾಗಿ ಆನೆಗಳು ಹೊಲದ ಕಡೆ ಬರುವುದನ್ನು ಕಡಿಮೆ ಮಾಡಿದವು. ಇದರಿಂದ ಸಾವಿರಾರು ಗ್ರಾಮಸ್ಥರಿಗೆ ಬಹಳ ನಿರಾಳವಾಯಿತು. ಆನೆಗಳೂ ಈ ಪ್ರಯತ್ನದಿಂದ ಸಂತಸಪಟ್ಟಂತಾಯಿತು.
ಸ್ನೇಹಿತರೇ, ನಮ್ಮ ಸಂಸ್ಕೃತಿ ಮತ್ತು ಪರಂಪರೆ ನಮಗೆ ಸುತ್ತ ಮುತ್ತಲಿನ ಪಶು-ಪಕ್ಷಿಗಳೊಡನೆ ಪ್ರೀತಿಯಿಂದ ಬಾಳುವುದನ್ನು ಕಲಿಸುತ್ತದೆ. ಕಳೆದ ಎರಡು ತಿಂಗಳುಗಳಲ್ಲಿ ನಮ್ಮ ದೇಶದಲ್ಲಿ ಎರಡು ಹೊಸ ಹುಲಿ ಅಭಯಾರಣ್ಯಗಳು (ಮೀಸಲು ಪ್ರದೇಶಗಳು) ಸೇರ್ಪಡೆಯಾಗಿವೆ ಎನ್ನುವುದು ನಮ್ಮೆಲ್ಲರಿಗೂ ಬಹಳ ಸಂತಸದ ವಿಷಯವಾಗಿದೆ. ಇವುಗಳ ಪೈಕಿ ಒಂದು ಛತ್ತೀಸ್ ಗಢದಲ್ಲಿರುವ ಗುರು ಘಾಸೀದಾಸ್-ಕಮೋರ್ ಪಿಂಗಲಾ ಹುಲಿ ಅಭಯಾರಾಣ್ಯ ಮತ್ತು ಎರಡನೆಯದು ಮಧ್ಯಪ್ರದೇಶದ ರಾತಾಪಾನಿ ಹುಲಿ ಅಭಯಾರಣ್ಯ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದಾರೆ-ಯಾವ ವ್ಯಕ್ತಿ ತನ್ನ ಚಿಂತನೆಗಳ ಬಗ್ಗೆ ಉತ್ಸುಕನಾಗಿರುತ್ತಾನೋ ಅವರೇ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಸಫಲರಾಗುತ್ತಾರೆ. ಯಾವುದೇ ಆಲೋಚನೆಯನ್ನು ಸಾಕಾರಗೊಳಿಸಲು ನಮ್ಮ ಉತ್ಸಾಹ ಹಾಗೂ ಸಮರ್ಪಣಾ ಭಾವ ಬಹಳ ಅಗತ್ಯವಾಗಿರುತ್ತದೆ. ಸಂಪೂರ್ಣ ಶ್ರದ್ಧೆ ಮತ್ತು ಉತ್ಸಾಹದಿಂದಲೇ ಆವಿಷ್ಕಾರ, ಸೃಜನಾತ್ಮಕತೆ, ಮತ್ತು ಸಫಲತೆಯ ಮಾರ್ಗ ಖಂಡಿತವಾಗಿಯೂ ತೆರೆದುಕೊಳ್ಳುತ್ತದೆ. ಕೆಲವು ದಿನಗಳ ಹಿಂದಷ್ಟೇ, ಸ್ವಾಮಿ ವಿವೇಕಾನಂದರ ಜಯಂತಿಯಂದು, ನನಗೆ ‘ವಿಕಸಿತ ಭಾರತ ಯುವ ಮುಖಂಡರ ಸಂವಾದ’ದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ದೊರೆತಿತ್ತು. ಅಲ್ಲಿ ನಾನು ದೇಶದ ಮೂಲೆ ಮೂಲೆಗಳಿಂದ ಬಂದಂತಹ ಹಲವು ಯುವ-ಸ್ನೇಹಿತರೊಂದಿಗೆ ಇಡೀ ದಿನವನ್ನು ಕಳೆದೆ. ಯುವಜನತೆ ನವೋದ್ಯಮಗಳು, ಸಂಸ್ಕೃತಿ, ಮಹಿಳೆ, ಯುವಜನತೆ ಮತ್ತು ಮೂಲಸೌಕರ್ಯದಂತಹ ಹಲವಾರು ಕ್ಷೇತ್ರಗಳ ಕುರಿತಂತೆ ತಮ್ಮ ಯೋಜನೆಗಳನ್ನು ನನ್ನೊಂದಿಗೆ ಹಂಚಿಕೊಂಡರು. ಈ ಕಾರ್ಯಕ್ರಮ ನನಗೆ ಸ್ಮರಣೀಯವಾಯಿತು.
ಸ್ನೇಹಿತರೇ, ಕೆಲವು ದಿನಗಳ ಹಿಂದಷ್ಟೇ ಸ್ಟಾರ್ಟಪ್ ಇಂಡಿಯಾಗೆ 9 ವರ್ಷಗಳು ಪೂರ್ಣಗೊಂಡಿತು. ನಮ್ಮ ದೇಶದಲ್ಲಿ ಈ 9 ವರ್ಷಗಳಲ್ಲಿ ಎಷ್ಟು ನವೋದ್ಯಮಗಳು ಸ್ಥಾಪನೆಯಾಗಿದೆಯೋ, ಅವುಗಳ ಪೈಕಿ ಅರ್ಧಕ್ಕಿಂತ ಹೆಚ್ಚು ನವೋದ್ಯಮಗಳು 2 ಮತ್ತು 3ನೇ ಸ್ತರದ ನಗರಗಳಲ್ಲಿವೆ ಮತ್ತು ನಮ್ಮ ನವೋದ್ಯಮಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರಾ ಸೀಮಿತವಾಗಿಲ್ಲ ಎಂಬುದನ್ನು ಕೇಳಿ ಪ್ರತಿಯೊಬ್ಬ ಭಾರತೀಯನ ಹೃದಯವೂ ಸಂತಸದಿಂದ ತುಂಬುತ್ತದೆ. ಸಣ್ಣ ನಗರಗಳ ನವೋದ್ಯಮಗಳ ಪೈಕಿ ಅರ್ಧಕ್ಕಿಂತ ಹೆಚ್ಚು ನವೋದ್ಯಮಗಳ ನೇತೃತ್ವ ನಮ್ಮ ಹೆಣ್ಣುಮಕ್ಕಳು ವಹಿಸಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಅಂಬಾಲ, ಹಿಸಾರ್, ಕಾಂಗ್ರಾ, ಚೆಂಗಲ್ಪಟ್ಟು, ಬಿಲಾಸ್ಪುರ್, ಗ್ವಾಲಿಯರ್ ಮತ್ತು ವಾಶಿಮ್ ನಂತಹ ನಗರಗಳು ನವೋದ್ಯಮಗಳ ಕೇಂದ್ರಗಳಾಗುತ್ತಿವೆ ಎಂದು ತಿಳಿದಾಗ, ನಮ್ಮ ಮನಸ್ಸು ಸಂತೋಷದಿಂದ ತುಂಬಿ ಬರುತ್ತದೆ. ನಾಗಾಲ್ಯಾಂಡ್ ನಂತಹ ರಾಜ್ಯದಲ್ಲಿ, ಕಳೆದ ವರ್ಷ ನವೋದ್ಯಮಗಳ ನೋಂದಣಿ ಶೇಕಡಾ 200 ಕ್ಕಿಂತ ಹೆಚ್ಚಾಗಿದೆ. ತ್ಯಾಜ್ಯ ನಿರ್ವಹಣೆ, ನವೀಕರಿಸಲಾಗದ ಇಂಧನ, ಜೈವಿಕ ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ಸ್ ನಂತಹ ಕ್ಷೇತ್ರಗಳಲ್ಲಿ ನವೋದ್ಯಮಗಳು ಹೆಚ್ಚಾಗಿ ಕಂಡುಬರುತ್ತಿವೆ. ಇವು ಸಾಂಪ್ರದಾಯಿಕ ವಲಯಗಳಲ್ಲ, ಆದರೆ ನಮ್ಮ ಯುವಜನತೆ ಸಾಂಪ್ರದಾಯಿಕತೆಯನ್ನು ಮೀರಿ ಯೋಚಿಸುತ್ತಾರೆ, ಆದ್ದರಿಂದಲೇ ಅವರಿಗೆ ಯಶಸ್ಸು ಕೂಡಾ ದೊರೆಯುತ್ತಿದೆ.
ಸ್ನೇಹಿತರೇ, 10 ವರ್ಷಗಳ ಹಿಂದೆ ಯಾರಾದರೂ ನವೋದ್ಯಮ ಕ್ಷೇತ್ರದಲ್ಲಿ ತೊಡಗಬೇಕೆಂಬ ಕುರಿತು ಮಾತನಾಡಿದ್ದರೆ, ಅವರು ಬೇರೆಯವರಿಂದ ಅಪಹಾಸ್ಯದ, ವ್ಯಂಗ್ಯದ ಮಾತುಗಳನ್ನು ಕೇಳಬೇಕಾಗುತ್ತಿತ್ತು. ಕೆಲವರಂತೂ ನವೋದ್ಯಮ ಎಂದರೇನು? ಎಂದು ಕೂಡಾ ಕೇಳುತ್ತಿದ್ದರೆ ಕೆಲವರು ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂದೇ ಹೇಳುತ್ತಿದ್ದರು. ಆದರೆ ಈಗ ನೋಡಿ, ಒಂದು ದಶಕದಲ್ಲಿ ಎಷ್ಟು ದೊಡ್ಡ ಪರಿವರ್ತನೆಯಾಗಿದೆ. ನೀವು ಕೂಡಾ ಭಾರತದಲ್ಲಿ ತಯಾರಾಗುತ್ತಿರುವ ಹೊಸ ಅಗತ್ಯತೆಗಳ ಸಂಪೂರ್ಣ ಲಾಭ ಪಡೆದುಕೊಳ್ಳಿ. ನಿಮ್ಮ ಮೇಲೆ ನಿಮಗೆ ಸಂಪೂರ್ಣ ಭರವಸೆ ಇದ್ದಲ್ಲಿ, ನಿಮ್ಮ ಕನಸುಗಳಿಗೆ ಹೊಸ ರೆಕ್ಕೆಗಳು ದೊರೆಯುತ್ತವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಒಳ್ಳೆಯ ಉದ್ದೇಶ ಮತ್ತು ನಿಸ್ವಾರ್ಥ ಮನೋಭಾವದಿಂದ ಮಾಡಿದ ಕೆಲಸವು ದೂರದೂರದವರೆಗೆ ತಲುಪುತ್ತದೆ. ಮತ್ತು ನಮ್ಮ 'ಮನದ ಮಾತು' ಇದಕ್ಕೆ ಬಹಳ ದೊಡ್ಡ ವೇದಿಕೆಯಾಗಿದೆ. ನಮ್ಮಂತಹ ವಿಶಾಲವಾದ ದೇಶದಲ್ಲಿ, ಯಾರಾದರೂ ದೂರದ ಪ್ರದೇಶಗಳಲ್ಲಿಯೂ ಸಹ ಉತ್ತಮ ಕೆಲಸ ಮಾಡುತ್ತಿದ್ದರೆ ಮತ್ತು ಕರ್ತವ್ಯ ಪ್ರಜ್ಞೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರೆ, ಅವರ ಪ್ರಯತ್ನಗಳನ್ನು ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಅರುಣಾಚಲ ಪ್ರದೇಶದಲ್ಲಿ ದೀಪಕ್ ನಾಬಾಮ್ ಅವರು ಸೇವೆಗೆ ಒಂದು ವಿಶಿಷ್ಠ ಉದಾಹರಣೆ ನೀಡಿದ್ದಾರೆ. ದೀಪಕ್ ಅವರು ಇಲ್ಲಿ ಒಂದು Living-Home ನಡೆಸುತ್ತಾರೆ. ಇಲ್ಲಿ ಮಾನಸಿಕ ಅಸ್ವಸ್ಥರಿಗೆ, ಶಾರೀರಿಕವಾಗಿ ಅಸಮರ್ಥರಾಗಿರುವವರಿಗೆ ಮತ್ತು ವೃದ್ಧರಿಗೆ ಸೇವೆ ಮಾಡಲಾಗುತ್ತದೆ, ಇಲ್ಲಿ ಮಾದಕ ಪದಾರ್ಥ ವ್ಯಸನಗಳಿಗೆ ಬಲಿಯಾದವರನ್ನು ಕೂಡಾ ನೋಡಿಕೊಂಡು ಆರೈಕೆ ಮಾಡಲಾಗುತ್ತದೆ. ದೀಪಕ್ ನಾಬಾಮ್ ಅವರು ಸಮಾಜದಿಂದ ವಂಚಿತರಾದವರಿಗೆ, ಹಿಂಸಾಚಾರ ಪೀಡಿತ ಕುಟುಂಬಗಳಿಗೆ, ಮತ್ತು ವಸತಿಹೀನರಿಗೆ ಆಶ್ರಯ ಕಲ್ಪಿಸುವ ಅಭಿಯಾನ ಆರಂಭಿಸಿದ್ದಾರೆ. ಇಂದು ಅವರ ಸೇವೆಯು ಒಂದು ಸಂಸ್ಥೆಯ ರೂಪ ತಾಳಿದೆ. ಅವರ ಸಂಸ್ಥೆಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಲಕ್ಷದ್ವೀಪದ ಕವರತ್ತೀ ದ್ವೀಪದಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಹಿಂಡುಂಬಿ ಅವರ ಕೆಲಸ ಕೂಡಾ ಬಹಳ ಪ್ರೇರಣಾದಾಯಕವಾಗಿದೆ. ಅವರು 18 ವರ್ಷಗಳಿಗೆ ಮುನ್ನವೇ ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಅವರು ಈಗಲೂ ಹಿಂದಿನಂತೆಯೇ ಅದೇ ಕರುಣೆ, ಸ್ನೇಹ, ಸಹಾನುಭೂತಿಯ ಮನೋಭಾವದಿಂದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿಯೇ ಇರುವ ಕೆಜೀ ಮೊಹಮ್ಮದ್ ಅವರ ಪ್ರಯತ್ನವೂ ಕೂಡಾ ಬಹಳ ಅದ್ಭುತವಾಗಿದೆ. ಅವರ ಶ್ರಮದಿಂದಾಗಿ ಮಿನೀಕಾಂಯ್ ದ್ವೀಪದ ಸಾಗರ ಪರಿಸರ ವ್ಯವಸ್ಥೆಯು ಬಲಿಷ್ಟವಾಗುತ್ತಿದೆ. ಅವರು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಹಲವಾರು ಗೀತೆಗಳನ್ನು ರಚಿಸಿದ್ದಾರೆ. ಅವರಿಗೆ ಲಕ್ಷದ್ವೀಪದ ಸಾಹಿತ್ಯ ಕಲಾ ಅಕಾಡೆಮಿ ಕಡೆಯಿಂದ ಅತ್ಯುತ್ತಮ ಜಾನಪದ ಗೀತೆ ಪ್ರಶಸ್ತಿ ಕೂಡಾ ದೊರೆತಿದೆ. ಕೇಜಿ ಮೊಹಮ್ಮದ್ ಅವರು ನಿವೃತ್ತಿಯ ನಂತರ ಅಲ್ಲಿನ ಸಂಗ್ರಹಾಲಯದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ.
ಸ್ನೇಹಿತರೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಸಂಬಂಧಿಸಿದ ದೊಡ್ಡ ಉತ್ತಮ ಸಮಾಚಾರವೊಂದಿದೆ. ನಿಕೋಬಾರ್ ಜಿಲ್ಲೆಯಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆಗೆ ಇತ್ತೀಚೆಗೆ ಜಿಐ ಟ್ಯಾಗ್ ದೊರೆತಿದೆ. ಈ ತೈಲದ ಉತ್ಪಾದನೆಯಲ್ಲಿ ತೊಡಗಿರುವ ಮಹಿಳೆಯರನ್ನು ಒಂದುಗೂಡಿಸಿ ಸ್ವ ಸಹಾಯ ಗುಂಪು ರಚಿಸಲಾಗುತ್ತಿದ್ದು, ಅವರಿಗೆ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕುರಿತಂತೆ ವಿಶೇಷ ತರಬೇತಿಯನ್ನು ಕೂಡಾ ನೀಡಲಾಗುತ್ತಿದೆ. ಇದು ನಮ್ಮ ಬುಡಕಟ್ಟು ಸಮುದಾಯದವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ನಿಕೋಬಾರ್ ನ ವರ್ಜಿನ್ ಕೊಬ್ಬರಿ ಎಣ್ಣೆ ವಿಶ್ವದಲ್ಲಿ ಸಂಚಲನ ಸೃಷ್ಟಿಸಲಿದೆ ಮತ್ತು ಇದರಲ್ಲಿ ಬಹುದೊಡ್ಡ ಕೊಡುಗೆ ಅಂಡಮಾನ್ ಮತ್ತು ನಿಕೋಬಾರ್ ನ ಮಹಿಳಾ ಸ್ವ ಸಹಾಯ ಗುಂಪಿನದ್ದಾಗಿರುತ್ತದೆ ಎಂಬ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಒಂದು ಕ್ಷಣ ನೀವು ಒಂದು ದೃಶ್ಯವನ್ನು ಕಲ್ಪಿಸಿಕೊಳ್ಳಿ – ಕೊಲ್ಕತ್ತಾದಲ್ಲಿ, ಜನವರಿ ತಿಂಗಳ ಕಾಲ. ಎರಡನೇ ಮಹಾಯುದ್ಧ ಉತ್ತುಂಗದಲ್ಲಿದೆ ಅಂತೆಯೇ ಭಾರತದಲ್ಲಿ ಬ್ರಿಟಿಷರ ವಿರುದ್ಧದ ಕೋಪವೂ ಪರಾಕಾಷ್ಠೆ ತಲುಪಿದೆ. ಹೀಗಾಗಿ ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಪೋಲೀಸರನ್ನು ನಿಯೋಜಿಸಲಾಗಿದೆ. ಕೋಲ್ಕತ್ತಾದ ಮಧ್ಯಭಾಗದಲ್ಲಿ ಒಂದು ಮನೆಯ ಸುತ್ತಮುತ್ತ ಪೋಲೀಸರ ಕಣ್ಗಾವಲು ಹೆಚ್ಚಿದೆ. ಈ ನಡುವೆ, ಉದ್ದದ ಕಂದುಬಣ್ಣದ ಕೋಟ್, ಪ್ಯಾಂಟ್ ಹಾಗೂ ಕಪ್ಪು ಟೋಪಿ ಧರಿಸಿದ ವ್ಯಕ್ತಿಯೊಬ್ಬರು ರಾತ್ರಿಯ ಕತ್ತಲಿನಲ್ಲಿ ಒಂದು ಬಂಗಲೆಯಿಂದ ಕಾರ್ ನಲ್ಲಿ ಮನೆಯಿಂದ ಹೊರಗೆ ಹೊರಡುತ್ತಾರೆ. ಬಲಿಷ್ಠ ಸುರಕ್ಷತೆಯಿರುವ ಹಲವಾರು ಚೆಕ್ ಪೋಸ್ಟ್ ಗಳನ್ನು ದಾಟಿದ ನಂತರ ಅವರು ಗೋಮೋ ಎಂಬ ರೈಲು ನಿಲ್ದಾಣವನ್ನು ತಲುಪುತ್ತಾರೆ. ಈ ಸ್ಟೇಷನ್ ಈಗ ಝಾರ್ಖಂಡ್ ನಲ್ಲಿದೆ. ಇಲ್ಲಿಂದ ಒಂದು ರೈಲಿನಲ್ಲಿ ಅವರು ಮುಂದಿನ ಪಯಣ ಕೈಗೊಳ್ಳುತ್ತಾರೆ. ಆ ನಂತರ ಆಫ್ಘಾನಿಸ್ತಾನ್ ತಲುಪಿ, ಅಲ್ಲಿಂದ ಯೂರೋಪ್ ತಲುಪುತ್ತಾರೆ - ಬ್ರಿಟಿಷ್ ಆಳ್ವಿಕೆಯ ತೂರಲಾಗದ ಅಭೇದ ಕೋಟೆಗಳ ಹೊರತಾಗಿಯೂ ಇದೆಲ್ಲವೂ ಸಂಭವಿಸುತ್ತದೆ.
ಸ್ನೇಹಿತರೇ, ಈ ಕತೆ ನಿಮಗೆ ಚಲನಚಿತ್ರವೊಂದರ ದೃಶ್ಯದಂತೆ ತೋರಬಹುದು. ಇಷ್ಟೊಂದು ಧೈರ್ಯ ತೋರಿದ ವ್ಯಕ್ತಿ ಯಾರಾಗಿರಬಹುದು ಎಂದು ನೀವು ಯೋಚಿಸಬಹುದು. ವಾಸ್ತವದಲ್ಲಿ ಈ ವ್ಯಕ್ತಿ ಬೇರಾರೂ ಅಲ್ಲ, ಅವರೇ ನಮ್ಮ ದೇಶದ ಮಹಾನ್ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್. ಜನವರಿ 23 ಅಂದರೆ ಬೋಸ್ ಅವರ ಜಯಂತಿಯನ್ನು ನಾವು ‘ಪರಾಕ್ರಮ ದಿನ’ವಾಗಿ ಆಚರಿಸುತ್ತೇವೆ. ಅವರ ಶೌರ್ಯಕ್ಕೆ ಸಂಬಂಧಿಸಿದ ಈ ಕಥೆಯು ಅವರ ಶೌರ್ಯದ ಒಂದು ನೋಟವನ್ನು ನೀಡುತ್ತದೆ. ಕೆಲವು ವರ್ಷಗಳ ಹಿಂದೆ, ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರಿಂದ ತಪ್ಪಿಸಿಕೊಂಡು ಬಂದಿದ್ದ ಅದೇ ಮನೆಗೆ ನಾನು ಭೇಟಿ ನೀಡಿದ್ದೆ. ಅವರ ಆ ಕಾರು ಇನ್ನೂ ಅಲ್ಲೇ ಇದೆ. ಆ ಅನುಭವ ನನಗೆ ತುಂಬಾ ವಿಶೇಷವಾಗಿತ್ತು. ಸುಭಾಷ್ ಅವರು ಒಬ್ಬ ದಾರ್ಶನಿಕರಾಗಿದ್ದರು. ಅವರ ಸ್ವಭಾವದಲ್ಲೇ ಧೈರ್ಯ ಎನ್ನುವುದು ಆಳವಾಗಿ ಬೇರೂರಿತ್ತು. ಇಷ್ಟೇ ಅಲ್ಲ, ಅವರು ಬಹಳ ದಕ್ಷ ಆಡಳಿತಗಾರರೂ ಆಗಿದ್ದರು. ಕೇವಲ ತಮ್ಮ 27ನೇ ವಯಸ್ಸಿನಲ್ಲಿ, ಅವರು ಕೋಲ್ಕತ್ತಾ ನಗರ ನಿಗಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದರು ಮತ್ತು ನಂತರ ಅವರು ಮೇಯರ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡರು. ಅವರು ಆಡಳಿತಗಾರರಾಗಿಯೂ ಅನೇಕ ಉತ್ತಮ ಕೆಲಸಗಳನ್ನು ಮಾಡಿದರು. ಮಕ್ಕಳಿಗೆ ಶಾಲೆಗಳು, ಬಡ ಮಕ್ಕಳಿಗೆ ಹಾಲು ಮತ್ತು ಸ್ವಚ್ಛತೆಯನ್ನು ಒದಗಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿದ್ದ ಪ್ರಯತ್ನಗಳು ಇಂದಿಗೂ ಪ್ರಸ್ತುತವಾಗಿವೆ, ಸ್ಮರಣೀಯವಾಗಿವೆ. ನೇತಾಜಿ ಸುಭಾಷ್ ಅವರಿಗೆ ರೇಡಿಯೋ ಜೊತೆಯಲ್ಲಿಯೂ ಅತ್ಯಂತ ಗಹನವಾದ ಬಾಂಧವ್ಯವಿತ್ತು. ಅವರು ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿದ್ದರು, ಇದರಲ್ಲಿ ಅವರ ಮಾತುಗಳನ್ನು ಆಲಿಸಲು ಜನರು ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದರು. ಅವರ ಭಾಷಣಗಳಿಂದ ವಿದೇಶೀ ಆಡಳಿತದ ವಿರುದ್ಧ, ಸಮರಕ್ಕೆ ಹೊಸ ಶಕ್ತಿ ದೊರೆಯುತ್ತಿತ್ತು. ‘ಆಜಾದ್ ಹಿಂದ್ ರೇಡಿಯೋ’ ದಲ್ಲಿ ಇಂಗ್ಲೀಷ್, ಹಿಂದೀ, ತಮಿಳು, ಬಂಗಾಳಿ, ಮರಾಠಿ, ಪಂಜಾಬಿ, ಪಾಷ್ಟೋ ಮತ್ತು ಉರ್ದು ಭಾಷೆಯಲ್ಲಿ ವಾರ್ತಾ ಸಂಚಿಕೆಗಳು ಪ್ರಸಾರವಾಗುತ್ತಿದ್ದವು. ನಾನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಹೆಚ್ಚು ಹೆಚ್ಚು ಓದಿ ಮತ್ತು ಅವರ ಜೀವನದಿಂದ ಸದಾ ಪ್ರೇರಣೆ ಹೊಂದಿ ಎಂದು ನಾನು ದೇಶಾದ ಯುವಜನರಲ್ಲಿ ಮನವಿ ಮಾಡುತ್ತೇನೆ.
ಸ್ನೇಹಿತರೆ, ‘ಮನದ ಮಾತು’ ಎಂಬ ಈ ಕಾರ್ಯಕ್ರಮ, ನನಗೆ ಪ್ರತಿಬಾರಿಯೂ ದೇಶದ ಸಾಮೂಹಿಕ ಪ್ರಯತ್ನಗಳೊಂದಿಗೆ, ನಿಮ್ಮೆಲ್ಲರ ಸಾಮೂಹಿಕ ಇಚ್ಛಾಶಕ್ತಿಯೊಂದಿಗೆ ನನ್ನನ್ನು ಜೋಡಿಸುತ್ತದೆ. ಪ್ರತಿ ತಿಂಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಸಲಹೆ, ಸೂಚನೆ, ನಿಮ್ಮ ಚಿಂತನೆಗಳು ದೊರೆಯುತ್ತವೆ ಮತ್ತು ಪ್ರತಿಬಾರಿಯೂ ಇವುಗಳನ್ನು ನೋಡಿದಾಗ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದಲ್ಲಿ ನನ್ನ ನಂಬಿಕೆ ಮತ್ತಷ್ಟು ವೃದ್ಧಿಯಾಗುತ್ತದೆ. ನೀವೆಲ್ಲರೂ ಇದೇ ರೀತಿ ನಿಮ್ಮ ನಿಮ್ಮ ಕೆಲಸ ಕಾರ್ಯದಿಂದ ಭಾರತವನ್ನು ಸರ್ವಶ್ರೇಷ್ಠ ರಾಷ್ಟ್ರವನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಿರಿ, ಈ ಬಾರಿಯ ಮನ್ ಕಿ ಬಾತ್ ಅನ್ನು ಇಲ್ಲಿಗೆ ಮುಗಿಸೋಣ. ಮುಂದಿನ ತಿಂಗಳು ಭಾರತೀಯರ ಸಾಧನೆಗಳು, ಸಂಕಲ್ಪಗಳು ಮತ್ತು ಯಶಸ್ಸುಗಳ ಹೊಸ ಗಾಥೆಗಳೊಂದಿಗೆ ಪುನಃ ಭೇಟಿಯಾಗೋಣ. ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳಿಗೆ ನಮಸ್ಕಾರ. 2025 ಇನ್ನೇನು ಬಂದೆ ಬಿಟ್ಟಿತು, ನವ ಸಂವತ್ಸರ ಬಾಗಿಲು ತಟ್ಟುತ್ತಿದೆ. 2025ರ ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ತುಂಬುತ್ತವೆ. ನಮಗೆಲ್ಲರಿಗೂ ಇದು ಹೆಮ್ಮೆಯ ವಿಷಯ. ನಮ್ಮ ಸಂವಿಧಾನ ನಿರ್ಮಾತೃಗಳು ನಮಗೆ ಒಪ್ಪಿಸಿದ ಸಂವಿಧಾನವು ಎಲ್ಲಾ ಕಾಲದಲ್ಲು ಪ್ರಸ್ತುತವಾಗಿದೆ. ಸಂವಿಧಾನ ನಮಗೆ ದಿಕ್ಸೂಚಿಯಾಗಿದೆ, ಮಾರ್ಗದರ್ಶಕನಾಗಿದೆ. ಭಾರತದ ಸಂವಿಧಾನದಿಂದಾಗಿಯೇ ಇಂದು ನಾನು ಇಲ್ಲಿದ್ದೇನೆ, ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಈ ವರ್ಷ, ನವೆಂಬರ್ 26 ರ ಸಂವಿಧಾನ ದಿನದಿಂದ ಒಂದು ವರ್ಷದ ಅವಧಿಯವರೆಗೆ ಜರುಗುವ ಅನೇಕ ಚಟುವಟಿಕೆಗಳು ಪ್ರಾರಂಭವಾಗಿವೆ. ದೇಶದ ನಾಗರಿಕರನ್ನು ಸಂವಿಧಾನದ ಪರಂಪರೆಯೊಂದಿಗೆ ಜೋಡಿಸಲು, constitution75.com ಎಂಬ ವಿಶೇಷ ವೆಬ್ಸೈಟ್ ಅನ್ನು ಸಹ ರಚಿಸಲಾಗಿದೆ. ಇದರಲ್ಲಿ ನೀವು ಸಂವಿಧಾನದ ಪೀಠಿಕೆಯನ್ನು ಓದಿ ನಿಮ್ಮ ವೀಡಿಯೊವನ್ನು ಅಪ್ಲೋಡ್ ಮಾಡಬಹುದು. ನೀವು ವಿವಿಧ ಭಾಷೆಗಳಲ್ಲಿ ಸಂವಿಧಾನವನ್ನು ಓದಬಹುದು ಮತ್ತು ಸಂವಿಧಾನದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ‘ಮನದ ಮಾತಿನ’ ಕೇಳುಗರು, ಶಾಲಾ ವಿದ್ಯಾರ್ಥಿಗಳು, ಕಾಲೇಜಿಗೆ ಹೋಗುವ ಯುವಕರು, ಈ ವೆಬ್ಸೈಟ್ಗೆ ಖಂಡಿತಾ ಭೇಟಿ ನೀಡಿ ಮತ್ತು ಇದರಲ್ಲಿ ಪಾಲ್ಗೊಳ್ಳಿ ಎಂದು ನಾನು ಆಗ್ರಹಿಸುತ್ತೇನೆ.
ಸ್ನೇಹಿತರೇ, ಮುಂದಿನ ತಿಂಗಳು 13 ರಿಂದ ಪ್ರಯಾಗರಾಜ್ನಲ್ಲಿ ಮಹಾಕುಂಭವೂ ನಡೆಯಲಿದೆ. ಸದ್ಯ ಸಂಗಮದ ದಡದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ನನಗೆ ನೆನಪಿದೆ, ಕೆಲವೇ ದಿನಗಳ ಹಿಂದೆ, ನಾನು ಪ್ರಯಾಗರಾಜ್ಗೆ ಭೇಟಿ ನೀಡಿದಾಗ, ಹೆಲಿಕಾಪ್ಟರ್ನಿಂದ ಇಡೀ ಕುಂಭ ಜರುಗುವ ಪ್ರದೇಶವನ್ನು ವೀಕ್ಷಿಸಿ ನನಗೆ ತುಂಬಾ ಸಂತೋಷವಾಯಿತು. ಎಷ್ಟು ಬೃಹದಾದುದು! ಎಷ್ಟು ಸುಂದರ! ಎಂತಹ ಭವ್ಯತೆ!
ಸ್ನೇಹಿತರೇ, ಮಹಾಕುಂಭದ ವಿಶೇಷತೆ ಅದರ ಅಗಾಧತೆಯಲ್ಲಿ ಮಾತ್ರ ಅಡಗಿಲ್ಲ. ಅದರ ವೈವಿಧ್ಯತೆಯೂ ಕುಂಭದ ವಿಶೇಷತೆಯಾಗಿದೆ. ಈ ಕಾರ್ಯಕ್ರಮದಲ್ಲಿ ಕೋಟಿಗಟ್ಟಲೆ ಜನ ಒಗ್ಗೂಡುತ್ತಾರೆ. ಲಕ್ಷಗಟ್ಟಲೆ ಸಂತರು, ಸಾವಿರಾರು ಸಂಪ್ರದಾಯಗಳು, ನೂರಾರು ಪಂಥಗಳು, ಹಲವು ಅಖಾಡಗಳು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಮೇಳೈಸುತ್ತಾರೆ. ಯಾವುದೇ ತಾರತಮ್ಯವಿಲ್ಲ, ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಅನೇಕತೆಯಲ್ಲಿ ಏಕತೆಯ ಇಂತಹ ದೃಶ್ಯ ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ನಮ್ಮ ಕುಂಭ ಏಕತೆಯ ಮಹಾಕುಂಭವಾಗಿದೆ. ಈ ಬಾರಿಯ ಮಹಾಕುಂಭವು ಏಕತೆಯ ಮಹಾಕುಂಭದ ಮಂತ್ರಕ್ಕೆ ಪುಷ್ಟಿ ನೀಡಲಿದೆ. ನಾವು ಕುಂಭದಲ್ಲಿ ಭಾಗವಹಿಸಿದಾಗ, ಏಕತೆಯ ಸಂಕಲ್ಪದೊಂದಿಗೆ ಹಿಂತಿರುಗೋಣ ಎಂದು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಸಮಾಜದಲ್ಲಿನ ಒಡಕು ಮತ್ತು ದ್ವೇಷ ಭಾವನೆಯನ್ನು ತೊಡೆದುಹಾಕುವ ಪ್ರತಿಜ್ಞೆಯನ್ನೂ ತೆಗೆದುಕೊಳ್ಳೋಣ. ಕೆಲವೇ ಪದಗಳಲ್ಲಿ ಹೇಳುವುದಾದರೆ ನಾನು ಹೇಳಬಯಸುವುದು …
ಮಹಾಕುಂಭದ ಸಂದೇಶ, ಒಂದಾಗಲಿ ಸಂಪೂರ್ಣ ದೇಶ.
ಮಹಾಕುಂಭದ ಸಂದೇಶ, ಒಂದಾಗಲಿ ಸಂಪೂರ್ಣ ದೇಶ.
ಮತ್ತು ನಾನು ಅದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ನಾನು ಹೀಗೆ ಹೇಳುತ್ತೇನೆ ...
ಗಂಗೆಯ ನಿರಂತರ ಪ್ರವಾಹದಂತೆ ಇರಲಿ ಒಗ್ಗೂಡಿ ನಮ್ಮ ಸಮಾಜ ಇಬ್ಭಾಗವಾಗದಂತೆ.
ಗಂಗೆಯ ನಿರಂತರ ಪ್ರವಾಹದಂತೆ ಇರಲಿ ಒಗ್ಗೂಡಿ ನಮ್ಮ ಸಮಾಜ ಇಬ್ಭಾಗವಾಗದಂತೆ.
ಸ್ನೇಹಿತರೇ, ಈ ಬಾರಿ ದೇಶ ಮತ್ತು ಪ್ರಪಂಚದಾದ್ಯಂತದ ಭಕ್ತರು ಪ್ರಯಾಗರಾಜ್ನಲ್ಲಿ ಡಿಜಿಟಲ್ ಮಹಾಕುಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಡಿಜಿಟಲ್ ನ್ಯಾವಿಗೇಷನ್ ಸಹಾಯದಿಂದ, ನೀವು ವಿವಿಧ ಘಾಟ್ಗಳು, ದೇವಾಲಯಗಳು, ಸಾಧುಗಳ ಅಖಾಡಾಗಳನ್ನು ತಲುಪುವ ಮಾರ್ಗವು ಲಭಿಸಲಿದೆ. ಈ ನ್ಯಾವಿಗೇಷನ್ ಸಿಸ್ಟಮ್ ನಿಮಗೆ ಪಾರ್ಕಿಂಗ್ ತಲುಪಲು ಸಹಾಯ ಮಾಡುತ್ತದೆ. ಮೊದಲ ಬಾರಿಗೆ, ಮಹಾಕುಂಭ ಆಯೋಜನೆಯಲ್ಲಿ ಕೃತಕ ಬುದ್ಧಿಮತ್ತೆಯ ಚಾಟ್ಬಾಟ್ ಅನ್ನು ಬಳಸಲಾಗುವುದು. AI ಚಾಟ್ಬಾಟ್ ಮೂಲಕ, ಕುಂಭಕ್ಕೆ ಸಂಬಂಧಿಸಿದ ಪ್ರತಿಯೊಂದು ರೀತಿಯ ಮಾಹಿತಿಯನ್ನು 11 ಭಾರತೀಯ ಭಾಷೆಗಳಲ್ಲಿ ಪಡೆಯಬಹುದು. ಈ ಚಾಟ್ಬಾಟ್ ಗೆ text ಟೈಪ್ ಮಾಡುವ ಮೂಲಕ ಅಥವಾ ಧ್ವನಿ ಮೂಲಕ ಯಾವುದೇ ರೀತಿಯ ಸಹಾಯವನ್ನು ಯಾಚಿಸಬಹುದು. ಕಾರ್ಯಕ್ರಮ ನಡೆಯುವ ಸಂಪೂರ್ಣ ಪ್ರದೇಶವನ್ನು AI ಚಾಲಿತ ಕ್ಯಾಮೆರಾಗಳಿಂದ ಅವರಿಸಲಾಗಿದೆ. ಕುಂಭದಲ್ಲಿ ಯಾರಾದರೂ ತಮ್ಮ ಬಂಧು ಬಳಗದಿಂದ ಬೇರ್ಪಟ್ಟರೆ, ಅವರನ್ನು ಹುಡುಕಲು ಈ ಕ್ಯಾಮೆರಾಗಳು ಸಹಾಯ ಮಾಡುತ್ತವೆ. ಭಕ್ತರು ಡಿಜಿಟಲ್ ಲಾಸ್ಟ್ & ಫೌಂಡ್ ಸೆಂಟರ್ ಸೌಲಭ್ಯವನ್ನೂ ಪಡೆಯಲಿದ್ದಾರೆ. ಸರ್ಕಾರದಿಂದ ಅನುಮೋದಿತ ಪ್ರವಾಸ ಪ್ಯಾಕೇಜ್ಗಳು, ವಸತಿ ಮತ್ತು ಹೋಂಸ್ಟೇಗಳ ಬಗ್ಗೆಯೂ ಭಕ್ತರಿಗೆ ಮೊಬೈಲ್ನಲ್ಲಿ ಮಾಹಿತಿ ನೀಡಲಾಗುವುದು. ನೀವೂ ಸಹ ಮಹಾಕುಂಭಕ್ಕೆ ತೆರಳಿದರೆ, ಈ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಸೆಲ್ಫಿಯನ್ನು #EktaKaMahaKumbh ಜೊತೆಗೆ ಅಪ್ಲೋಡ್ ಮಾಡಿ.
ಸ್ನೇಹಿತರೇ, ‘ಮನ್ ಕಿ ಬಾತ್’ ಅಂದರೆ ಎಂಕೆಬಿಯಲ್ಲಿ ಈಗ ನಾವು ಕೆಟಿಬಿಯ ಬಗ್ಗೆ ಮಾತನಾಡೋಣ, ಹಿರಿಯರಲ್ಲಿ, ಅನೇಕರಿಗೆ ಕೆಟಿಬಿ ಬಗ್ಗೆ ತಿಳಿದಿಲ್ಲ. ಆದರೆ ಮಕ್ಕಳನ್ನು ಕೇಳಿ, ಕೆಟಿಬಿ ಅವರಲ್ಲಿ ಬಹಳ ಸೂಪರ್ಹಿಟ್ ಆಗಿದೆ. ಕೆಟಿಬಿ ಎಂದರೆ ಕ್ರಿಶ್, ತ್ರಿಶ್ ಮತ್ತು ಬಾಲ್ಟಿಬಾಯ್. ಮಕ್ಕಳ ಮೆಚ್ಚಿನ ಅನಿಮೇಷನ್ ಸರಣಿಯ ಬಗ್ಗೆ ನಿಮಗೆ ತಿಳಿದಿರಬಹುದು, ಅದರ ಹೆಸರು ಕೆಟಿಬಿ – ಭಾರತ್ ಹೈ ಹಮ್ ಮತ್ತು ಈಗ ಅದರ ಎರಡನೇ ಸೀಸನ್ ಕೂಡ ಬಂದಿದೆ. ಈ ಮೂರು ಅನಿಮೇಷನ್ ಪಾತ್ರಗಳು ಬೆಳಕಿಗೆ ಬಾರದ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕರು ಮತ್ತು ನಾಯಕಿಯರ ಬಗ್ಗೆ ನಮಗೆ ಹೇಳುತ್ತವೆ. ಇತ್ತೀಚಿಗೆ ಗೋವಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ವಿಶೇಷ ಶೈಲಿಯಲ್ಲಿ ಅದರ ಸೀಸನ್-2 ನ್ನು ಪ್ರಾರಂಭಿಸಲಾಯಿತು. ಈ ಸರಣಿಯು ಹಲವು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿದೇಶಿ ಭಾಷೆಗಳಲ್ಲಿಯೂ ಪ್ರಸಾರವಾಗುತ್ತದೆ ಎಂಬುದು ಅತ್ಯಂತ ಅದ್ಭುತ ಸಂಗತಿ. ಇದನ್ನು ದೂರದರ್ಶನ ಮತ್ತು ಇತರ OTT ಪ್ಲಾಟ್ಫಾರ್ಮ್ಗಳಲ್ಲಿ ನೋಡಬಹುದು.
ಸ್ನೇಹಿತರೇ, ನಮ್ಮ ಅನಿಮೇಷನ್ ಚಲನಚಿತ್ರಗಳು, ಸಾಮಾನ್ಯ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳ ಜನಪ್ರಿಯತೆಯು ಸೃಜನಶೀಲ ಉದ್ಯಮದಲ್ಲಿ ಭಾರತದ ಅದೆಷ್ಟು ಸಾಮರ್ಥ್ಯ ಹೊಂದಿದೆ ಎಂಬುದನ್ನು ತೋರಿಸುತ್ತದೆ. ಈ ಉದ್ಯಮವು ದೇಶದ ಪ್ರಗತಿಯಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಅಲ್ಲದೆ ನಮ್ಮ ಆರ್ಥಿಕತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ. ನಮ್ಮ ಚಲನಚಿತ್ರ ಮತ್ತು ಮನರಂಜನಾ ಉದ್ಯಮವು ತುಂಬಾ ದೊಡ್ಡದಾಗಿದೆ. ದೇಶದ ಹಲವು ಭಾಷೆಗಳಲ್ಲಿ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ ಮತ್ತು creative content ಸಿದ್ಧಗೊಳಿಸಲಾಗುತ್ತದೆ. ನಾನು ನಮ್ಮ ಚಲನಚಿತ್ರ ಮತ್ತು ಮನರಂಜನಾ ಉದ್ಯಮವನ್ನು ಅಭಿನಂದಿಸುತ್ತೇನೆ ಏಕೆಂದರೆ ಅದು ‘ಏಕ್ ಭಾರತ್ – ಶ್ರೇಷ್ಠ ಭಾರತ’ ಎಂಬ ಭಾವನೆಗೆ ಪುಷ್ಟಿ ನೀಡುತ್ತದೆ.
ಸ್ನೇಹಿತರೇ, 2024ರಲ್ಲಿ ನಾವು ಚಿತ್ರರಂಗದ ಅನೇಕ ಮಹಾನ್ ವ್ಯಕ್ತಿಗಳ 100 ನೇ ಜನ್ಮ ಜಯಂತಿಯನ್ನು ಆಚರಿಸುತ್ತಿದ್ದೇವೆ. ಈ ವ್ಯಕ್ತಿಗಳು ಭಾರತೀಯ ಚಿತ್ರರಂಗಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ತಂದು ಕೊಟ್ಟರು. ರಾಜ್ ಕಪೂರ್ ಅವರು ಭಾರತದ ಸಾಫ್ಟ್ ಪವರ್ ಅನ್ನು ಚಲನಚಿತ್ರಗಳ ಮೂಲಕ ಜಗತ್ತಿಗೆ ಪರಿಚಯಿಸಿದರು. ರಫಿ ಸಾಹಬ್ ಅವರ ಧ್ವನಿಯಲ್ಲಿ ಎಂಥ ಮಾಂತ್ರಿಕತೆ ಇತ್ತೆಂದರೆ, ಎಲ್ಲರ ಹೃದಯವನ್ನು ಮುಟ್ಟುತ್ತಿತ್ತು. ಅವರ ಧ್ವನಿ ಅದ್ಭುತವಾಗಿತ್ತು. ಭಕ್ತಿಗೀತೆಗಳಾಗಲಿ, ಪ್ರಣಯ ಗೀತೆಗಳಾಗಲಿ, ನೋವಿನ ಗೀತೆಗಳಾಗಲಿ, ಪ್ರತಿಯೊಂದು ಭಾವಕ್ಕೆ ತಮ್ಮ ಕಂಠದಿಂದ ಅವರು ಜೀವ ತುಂಬುತ್ತಿದ್ದರು. ಇಂದಿಗೂ ಯುವ ಪೀಳಿಗೆ ಅವರ ಹಾಡುಗಳನ್ನು ಅಷ್ಟೇ ಪ್ರೀತಿಯಿಂದ ಕೇಳುತ್ತಾರೆ ಎಂದರೆ ಈ ಮೂಲಕ ಆ ಕಲಾವಿದನ ಹಿರಿಮೆಯನ್ನು ಅಳೆಯಬಹುದಾಗಿದೆ. ಇದೆ ಅಲ್ಲವೇ ಕಾಲಾತೀತವಾದ ಕಲೆಯಾ ಗುರುತು. ಅಕ್ಕಿನೇನಿ ನಾಗೇಶ್ವರ ರಾವ್ ಅವರು ತೆಲುಗು ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ ಚಲನಚಿತ್ರಗಳು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಚೆನ್ನಾಗಿ ಪ್ರಸ್ತುತಪಡಿವೆ. ತಪನ್ ಸಿನ್ಹಾ ಅವರ ಚಿತ್ರಗಳು ಸಮಾಜಕ್ಕೆ ಹೊಸ ದೃಷ್ಟಿಕೋನ ನೀಡಿದವು. ಅವರ ಚಲನಚಿತ್ರಗಳು ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಒಳಗೊಂಡಿದ್ದವು. ಈ ಸೆಲೆಬ್ರಿಟಿಗಳ ಜೀವನ ನಮ್ಮ ಇಡೀ ಚಿತ್ರರಂಗಕ್ಕೆ ಸ್ಪೂರ್ತಿದಾಯಕ.
ಸ್ನೇಹಿತರೇ, ನಾನು ನಿಮಗೆ ಇನ್ನೊಂದು ಸಂತಸದಾ ಸುದ್ದಿಯನ್ನು ನೀಡಲು ಬಯಸುತ್ತೇನೆ. ಭಾರತದ ಸೃಜನಶೀಲ ಪ್ರತಿಭೆಯನ್ನು ವಿಶ್ವದೆದುರು ಪ್ರದರ್ಶಿಸಲು ಒಂದು ದೊಡ್ಡ ಅವಕಾಶ ಒದಗಿ ಬಂದಿದೆ. ಮುಂದಿನ ವರ್ಷ, ವಿಶ್ವ ಆಡಿಯೋ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ ಅಂದರೆ ವೇವ್ಸ್ ಶೃಂಗಸಭೆಯನ್ನು ನಮ್ಮ ದೇಶದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುವುದು. ವಿಶ್ವದ ಆರ್ಥಿಕ ಕ್ಷೇತ್ರದ ದಿಗ್ಗಜರು ಒಗ್ಗೂಡುವ ದಾವೋಸ್ ಬಗ್ಗೆ ನೀವೆಲ್ಲರೂ ಕೇಳಿರಬಹುದು. ಅದೇ ರೀತಿ, ವೇವ್ಸ್ ಶೃಂಗಸಭೆಯಲ್ಲಿ, ವಿಶ್ವದ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ದಿಗ್ಗಜರು ಮತ್ತು ಸೃಜನಶೀಲ ಪ್ರಪಂಚದ ಜನರು ಭಾರತಕ್ಕೆ ಬರುತ್ತಾರೆ. ಭಾರತವನ್ನು ಜಾಗತಿಕ content creation ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಶೃಂಗಸಭೆಯು ಪ್ರಮುಖ ಹೆಜ್ಜೆಯಾಗಿದೆ. ಈ ಶೃಂಗಸಭೆಯ ತಯಾರಿಯಲ್ಲಿ ನಮ್ಮ ದೇಶದ ಯುವ creator ಗಳು ಕೂಡಾ ಸಂಪೂರ್ಣ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿರುವಾಗ, ನಮ್ಮ creator economy ಹೊಸ ಶಕ್ತಿಯನ್ನು ತುಂಬುತ್ತಿದೆ. ನೀವು ಯುವ creators ಆಗಿರಬಹುದು ಅಥವಾ ಪ್ರಸಿದ್ಧ ಕಲಾವಿದರಾಗಿರಬಹುದು, ಬಾಲಿವುಡ್ ಅಥವಾ ಪ್ರಾದೇಶಿಕ ಸಿನಿಮಾ ಕ್ಷೇತ್ರದವರಾಗಿರಬಹುದು, ಟಿವಿ ಉದ್ಯಮದಲ್ಲಿ ವೃತ್ತಿಪರರು ಅಥವಾ ಅನಿಮೇಷನ್, ಗೇಮಿಂಗ್ ಅಥವಾ ಮನರಂಜನಾ ತಂತ್ರಜ್ಞಾನದಲ್ಲಿ ಪರಿಣಿತರಾಗಿರಬಹುದು , ನೀವೆಲ್ಲರೂ ವೇವ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಎಂದು ನಾನು ಭಾರತದ ಸಂಪೂರ್ಣ ಮನರಂಜನೆ ಮತ್ತು ಸೃಜನಶೀಲ ಉದ್ಯಮವನ್ನು ಆಗ್ರಹಿಸುತ್ತೇನೆ .
ನನ್ನ ಪ್ರಿಯ ದೇಶವಾಸಿಗಳೇ, ಭಾರತೀಯ ಸಂಸ್ಕೃತಿಯ ಪ್ರಕಾಶ ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿ ಹೇಗೆ ಹರಡುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಜಾಗತಿಕ ವಿಸ್ತರಣೆಗೆ ಸಾಕ್ಷಿಯಾಗಿರುವ ಮೂರು ಖಂಡಗಳಿಂದ ಅಂತಹ ಪ್ರಯತ್ನಗಳ ಬಗ್ಗೆ ಇಂದು ನಾನು ನಿಮಗೆ ಹೇಳಬಯಸುತ್ತೇನೆ. ಇವೆಲ್ಲವೂ ಒಂದಕ್ಕೊಂದು ಮೈಲುಗಟ್ಟಲೆ ದೂರದಲ್ಲಿದ್ದರೂ ಭಾರತದ ಬಗ್ಗೆ ತಿಳಿದುಕೊಳ್ಳುವ ಮತ್ತು ನಮ್ಮ ಸಂಸ್ಕೃತಿಯಿಂದ ಕಲಿಯುವ ಅವರ ಬಯಕೆ ಒಂದೇ ರೀತಿಯದ್ದಾಗಿದೆ.
ಸ್ನೇಹಿತರೇ, ವರ್ಣಚಿತ್ರಗಳ ಪ್ರಪಂಚ ಎಷ್ಟು ಬಣ್ಣಗಳಿಂದ ತುಂಬಿರುತ್ತದೆಯೋ ಅಷ್ಟೇ ಸುಂದರವಾಗಿರುತ್ತದೆ. ಟಿವಿ ಮೂಲಕ ‘ಮನದ ಮಾತು’ ವೀಕ್ಷಿಸುತ್ತಿರುವ ಸ್ನೇಹಿತರು ಈಗ ಟಿವಿಯಲ್ಲಿ ಕೆಲವು ವರ್ಣಚಿತ್ರಗಳನ್ನು ವೀಕ್ಷಿಸಬಹುದು. ಈ ವರ್ಣಚಿತ್ರಗಳಲ್ಲಿ ನಮ್ಮ ದೇವ ದೇವತೆಗಳು, ನೃತ್ಯ ಕಲೆಗಳು ಮತ್ತು ಶ್ರೇಷ್ಠ ವ್ಯಕ್ತಿಗಳನ್ನು ನೋಡಿ ನಿಮಗೆ ತುಂಬಾ ಸಂತೋಷವಾಗಬಹುದು. ಇವುಗಳಲ್ಲಿ ನೀವು ಭಾರತದಲ್ಲಿ ಕಂಡುಬರುವ ಪ್ರಾಣಿ ಪಕ್ಷಿಗಳಲ್ಲದೆ ಇನ್ನು ಬಹಳಷ್ಟು ವಿಷಯಗಳನ್ನು ನೋಡಬಹುದು. ಇವುಗಳಲ್ಲಿ ತಾಜ್ ಮಹಲ್ನ ಭವ್ಯವಾದ ವರ್ಣಚಿತ್ರವೂ ಸೇರಿದೆ, ಇದನ್ನು 13 ವರ್ಷದ ಬಾಲಕಿ ರಚಿಸಿದ್ದಾಳೆ. ಈ ಅಂಗವಿಕಲ ಬಾಲಕಿ ತನ್ನ ಬಾಯಿಯಿಂದಲೇ ಈ ಪ್ಯಾಟಿಂಗ್ ಅನ್ನು ಸಿದ್ಧಪಡಿಸಿದ್ದಾಳೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಈ ಚಿತ್ರಗಳನ್ನು ನಿರ್ಮಿಸಿದವರು ಭಾರತದವರಲ್ಲ ಹೊರತು ಈಜಿಪ್ಟ್ನ ವಿದ್ಯಾರ್ಥಿಗಳು. ಕೆಲವೇ ವಾರಗಳ ಹಿಂದೆ ಈಜಿಪ್ಟ್ ನ ಸುಮಾರು 23 ಸಾವಿರ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಭಾರತದ ಸಂಸ್ಕೃತಿ ಮತ್ತು ಉಭಯ ದೇಶಗಳ ಐತಿಹಾಸಿಕ ಸಂಬಂಧಗಳನ್ನು ಬಿಂಬಿಸುವ ಚಿತ್ರಗಳನ್ನು ಬರೆಯಬೇಕಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಯುವಕರನ್ನು ನಾನು ಅಭಿನಂದಿಸುತ್ತೇನೆ. ಅವರ ಸೃಜನಶೀಲತೆ ಬಗ್ಗೆ ಎಷ್ಟು ಹೊಗಳಿದರೂ ಸಾಲದು.
ಸ್ನೇಹಿತರೇ, ಪರಾಗ್ವೆ, ದಕ್ಷಿಣ ಅಮೆರಿಕಾದಲ್ಲಿರುವ ಒಂದು ದೇಶ. ಅಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ಸಾವಿರದಷ್ಟಿರಬಹುದು. ಪರಾಗ್ವೆಯಲ್ಲಿ ಒಂದು ಅದ್ಭುತ ಪ್ರಯತ್ನ ಮಾಡಲಾಗುತ್ತಿದೆ. ಎರಿಕಾ ಹ್ಯೂಬರ್, ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಉಚಿತವಾಗಿ ಆಯುರ್ವೇದ ಸಮಾಲೋಚನೆ ಕೈಗೊಳ್ಳುತ್ತಿದ್ದಾರೆ. ಆಯುರ್ವೇದ ಸಲಹೆ ಪಡೆಯಲು ಅವರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಆಗಮಿಸುತ್ತಿದ್ದಾರೆ. ಎರಿಕಾ ಹ್ಯೂಬರ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರೂ, ಅವರಿಗೆ ಆಯುರ್ವೇದದತ್ತ ಹೆಚ್ಚು ಒಲವು. ಆಯುರ್ವೇದಕ್ಕೆ ಸಂಬಂಧಿಸಿದ ಕೋರ್ಸ್ಗಳನ್ನು ಮಾಡಿದ್ದ ಅವರು ಕಾಲಕ್ರಮೇಣ ಅದರಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ.
ಸ್ನೇಹಿತರೇ, ಪ್ರಪಂಚದ ಅತ್ಯಂತ ಪುರಾತನ ಭಾಷೆ ತಮಿಳು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ವಿಷಯವಾಗಿದೆ. ಪ್ರಪಂಚದಾದ್ಯಂತದ ದೇಶಗಳಲ್ಲಿ ಇದನ್ನು ಕಲಿಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ತಿಂಗಳ ಕೊನೆಯಲ್ಲಿ, ಫಿಜಿಯಲ್ಲಿ ಭಾರತ ಸರ್ಕಾರದ ಸಹಾಯದಿಂದ ತಮಿಳು ಬೋಧನಾ ಕಾರ್ಯಕ್ರಮ ಪ್ರಾರಂಭವಾಯಿತು. ಕಳೆದ 80 ವರ್ಷಗಳಲ್ಲಿ ತಮಿಳು ಭಾಷೆಯಲ್ಲಿ ತರಬೇತಿ ಪಡೆದ ಶಿಕ್ಷಕರು ಫಿಜಿಯಲ್ಲಿ ಈ ಭಾಷೆಯನ್ನು ಕಲಿಸುತ್ತಿರುವುದು ಪ್ರಥಮ ಬಾರಿಯಾಗಿದೆ. ಇಂದು ಫಿಜಿಯನ್ ವಿದ್ಯಾರ್ಥಿಗಳು ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಯಲು ಉತ್ಸುಕರಾಗಿರುವುದ್ದನ್ನು ಅರಿತು ನನಗೆ ಸಂತೋಷವಾಯಿತು.
ಸ್ನೇಹಿತರೇ, ಈ ವಿಷಯಗಳು, ಈ ಘಟನೆಗಳು ಕೇವಲ ಯಶಸ್ಸಿನ ಕಥೆಗಳು ಮಾತ್ರವಲ್ಲ, ನಮ್ಮ ಸಾಂಸ್ಕೃತಿಕ ಪರಂಪರೆಯ ಗಾಥೆಗಳೂ ಆಗಿವೆ . ಈ ಉದಾಹರಣೆಗಳು ನಾವು ಹೆಮ್ಮೆ ಪಡುವಂತೆ ಮಾಡುತ್ತವೆ. ಕಲೆಯಿಂದ ಆಯುರ್ವೇದದವರೆಗೆ ಮತ್ತು ಭಾಷೆಯಿಂದ ಸಂಗೀತದವರೆಗೆ, ಭಾರತದಲ್ಲಿಯಾ ಅದೆಷ್ಟೋ ವಿಷಯಗಳು ವಿಶ್ವಾದ್ಯಂತ ಪ್ರಭಾವ ಬೀರುತ್ತಿವೆ. ಸ್ನೇಹಿತರೇ, ಚಳಿಗಾಲದ ಈ ಋತುವಿನಲ್ಲಿ ದೇಶಾದ್ಯಂತ ಕ್ರೀಡೆ ಮತ್ತು ಸದೃಢತೆ ಕುರಿತಂತೆ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಜನರು ಫಿಟ್ನೆಸ್ ಅನ್ನು ತಮ್ಮ ದಿನಚರಿಯ ಭಾಗವನ್ನಾಗಿಸಿಕೊಂಡಿರುವುದು ನನಗೆ ಸಂತಸ ತಂದಿದೆ. ಕಾಶ್ಮೀರದಲ್ಲಿ ಸ್ಕೀಯಿಂಗ್ ನಿಂದ ಹಿಡಿದು ಗುಜರಾತ್ ನಲ್ಲಿ ಗಾಳಿಪಟ ಸ್ಪರ್ಧೆಯವರೆಗೂ ಪ್ರತಿಯೊಂದು ವಿಧದ ಕ್ರೀಡೆಯಲ್ಲಿ ಉತ್ಸಾಹ ಕಂಡು ಬರುತ್ತಿದೆ. #SundayOnCycle ಮತ್ತು #CyclingTuesday ನಂತಹ ಅಭಿಯಾನಗಳಿಂದ ಸೈಕ್ಲಿಂಗ್ ಗೆ ಸಾಕಷ್ಟು ಪ್ರಚಾರ ದೊರೆಯುತ್ತಿದೆ.
ಸ್ನೇಹಿತರೇ, ನಾನು ಈಗ ನಿಮಗೆ ವಿಶೇಷವಾದ ವಿಷಯವೊಂದನ್ನು ಹೇಳಲು ಬಯಸುತ್ತೇನೆ. ಇದು ನಮ್ಮ ದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆ ಮತ್ತು ಯುವಜನತೆಯ ಉತ್ಸಾಹದ ಸಂಕೇತವಾಗಿದೆ. ನಮ್ಮ ಬಸ್ತರ್ ನಲ್ಲಿ ಒಂದು ವಿಶಿಷ್ಠ ಒಲಿಂಪಿಕ್ ಆರಂಭವಾಗಿದೆ ಎಂಬುದು ನಿಮಗೆ ಗೊತ್ತೇ! ಹೌದು, ಮೊದಲ ಬಾರಿಗೆ ಬಸ್ತರ್ ನಲ್ಲಿ ನಡೆದಿರುವ ಒಲಿಂಪಿಕ್ ನಿಂದ ಅಲ್ಲಿ ಹೊಸ ಕ್ರಾಂತಿ ಉದಯವಾಗುತ್ತಿದೆ. ಬಸ್ತರ್ ಒಲಿಂಪಿಕ್ಸ್ ನ ಕನಸು ನನಸಾಗುತ್ತಿರುವುದು ನನಗಂತೂ ಬಹಳ ಸಂತಸದ ವಿಷಯವಾಗಿದೆ. ಒಂದು ಕಾಲದಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಈ ಪ್ರದೇಶದಲ್ಲಿ ಈಗ ಒಲಿಂಪಿಕ್ಸ್ ನಡೆದಿರುವುದು ನಿಮಗೆ ಕೂಡಾ ಸಂತಸವೆನಿಸುತ್ತದೆ. ಬಸ್ತರ್ ಒಲಿಂಪಿಕ್ಸ್ ನ ಅದೃಷ್ಟರೂಪಿ ಬೊಂಬೆ – ‘ಕಾಡೆಮ್ಮೆ’ ಮತ್ತು ‘ಗುಡ್ಡಗಾಡಿನ ಮೈನಾ’ ಆಗಿದೆ. ಇದರಲ್ಲಿ ಬಸ್ತರ್ ನ ಶ್ರೀಮಂತ ಸಂಸ್ಕೃತಿಯ ನೋಟ ಕಂಡುಬರುತ್ತದೆ. ಈ ಬಸ್ತರ್ ಕ್ರೀಡಾ ಮಹಾಕುಂಭದ ಘೋಷ ವಾಕ್ಯ ಇದಾಗಿದೆ–
‘ಕರಸಾಯ ತಾ ಬಸ್ತರ್ ಬರಸಾಯೇ ತಾ ಬಸ್ತರ್’
ಅಂದರೆ‘ಆಡುತ್ತದೆ ಬಸ್ತರ್ – ಗೆಲ್ಲುತ್ತದೆ ಬಸ್ತರ್’ |
ಮೊದಲ ಬಾರಿಗೆ ಬಸ್ತರ್ ಒಲಿಂಪಿಕ್ ನಲ್ಲಿ 7 ಜಿಲ್ಲೆಗಳ ಒಂದು ಲಕ್ಷ 65 ಸಾವಿರ ಆಟಗಾರರು ಪಾಲ್ಗೊಂಡಿದ್ದಾರೆ. ಇದು ಕೇವಲ ಅಂಕಿ-ಅಂಶ ಮಾತ್ರವಲ್ಲ – ಇದು ನಮ್ಮ ಯುವಜನತೆಯ ಸಂಕಲ್ಪದ – ಬದ್ಧತೆಯ ಕಥೆಯಾಗಿದೆ. ಅಥ್ಲೆಟಿಕ್ಸ್, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಫುಟ್ಬಾಲ್, ಹಾಕಿ, ವೈಟ್ ಲಿಫ್ಟಿಂಗ್, ಕರಾಟೆ, ಕಬಡ್ಡಿ, ಖೋ-ಖೋ, ಮತ್ತು ವಾಲೀಬಾಲ್ – ಹೀಗೆ ಪ್ರತಿಯೊಂದು ಆಟದಲ್ಲಿ ನಮ್ಮ ಯುವಜನತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಾರಿ ಕಶ್ಯಪ್ ಅವರ ಕತೆಯು ನನ್ನಲ್ಲಿ ಬಹಳ ಸ್ಫೂರ್ತಿ ತುಂಬುತ್ತದೆ. ಒಂದು ಸಣ್ಣ ಗ್ರಾಮದಿಂದ ಬಂದಿರುವ ಕಾರೀ ಅವರು ಬಿಲ್ಲುಗಾರಿಕೆಯಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಅವರು ಹೀಗೆ ಹೇಳುತ್ತಾರೆ – “ಬಸ್ತರ್ ಒಲಿಂಪಿಕ್ ನಮಗೆ ಕೇವಲ ಆಟದ ಮೈದಾನ ಮಾತ್ರವಲ್ಲದೇ ಜೀವನದಲ್ಲಿ ಮುಂದೆ ಸಾಗುವ ಅವಕಾಶವನ್ನೂ ನೀಡಿದೆ” ಸುಕ್ಮಾ ದ ಪಾಯಲ್ ಕವಾಸೀ ಅವರ ಮಾತುಗಳು ಕೂಡಾ ಬಹಳ ಸ್ಫೂರ್ತಿದಾಯಕವಾಗಿದೆ. Javelin ಎಸೆತದಲ್ಲಿ ಚಿನ್ನದ ಪದಕ ವಿಜೇತೆ ಪಾಯಲ್ ಹೀಗೆನ್ನುತ್ತಾರೆ – “ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಯಾವುದೇ ಗುರಿ ಸಾಧನೆ ಅಸಂಭವವಲ್ಲ” ಸುಕ್ಮಾದ ದೋರನ್ ಪಾಲ್ ನ ಪುನೆಮ್ ಸನ್ನಾ ಅವರ ಕತೆಯಂತೂ ನವಭಾರತದ ಪ್ರೇರಣಾದಾಯಕ ಕತೆಯಾಗಿದೆ. ಒಂದೊಮ್ಮೆ ನಕ್ಸಲರ ಪ್ರಭಾವಕ್ಕೆ ಒಳಗಾಗಿದ್ದ ಪುನೇಮ್ ಅವರು ಇಂದು ಗಾಲಿಕುರ್ಚಿಯಲ್ಲಿ ಓಡಿ ಪದಕ ಗೆಲ್ಲುತ್ತಿದ್ದಾರೆ. ಅವರ ಧೈರ್ಯ ಮತ್ತು ಸಾಹಸ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಕೋಡ್ ಗಾಂವ್ ನ ಬಿಲ್ಲುಗಾರ್ತಿ ರಂಜು ಸೋರಿ ಅವರನ್ನು ಬಸ್ತರ್ ಯೂತ್ ಐಕಾನ್ ಎಂದು ಆಯ್ಕೆ ಮಾಡಲಾಯಿತು. ಬಸ್ತರ್ ಒಲಿಂಪಿಕ್ ದೂರ ದೂರದ ಪ್ರದೇಶಗಳ ಯುವಜನತೆಗೆ ರಾಷ್ಟ್ರೀಯ ವೇದಿಕೆ ತಲುಪುವ ಅವಕಾಶವನ್ನು ನೀಡುತ್ತಿದೆ ಎನ್ನುವುದು ಅವರು ಭಾವಿಸುತ್ತಾರೆ.
ಸ್ನೇಹಿತರೇ, ಒಲಿಂಪಿಕ್ ಕೇವಲ ಒಂದು ಕ್ರೀಡಾ ಆಯೋಜನೆ ಮಾತ್ರವಲ್ಲ. ಇದು ಅಭಿವೃದ್ಧಿ ಮತ್ತು ಕ್ರೀಡೆಯ ಸಂಗಮದ ವೇದಿಕೆಯಾಗಿದೆ. ಇಲ್ಲಿ ನಮ್ಮ ಯುವಜನತೆ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ ಮತ್ತು ಒಂದು ನವ ಭಾರತ ನಿರ್ಮಾಣ ಮಾಡುತ್ತಿದ್ದಾರೆ.
ನೀವಿರುವ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟಗಳಿಗೆ ಪ್ರೋತ್ಸಾಹಿಸಿ.
ಆಡುತ್ತದೆ ಭಾರತ – ಗೆಲ್ಲುತ್ತದೆ ಭಾರತದೊಂದಿಗೆ ನಿಮ್ಮ ಪ್ರದೇಶದ ಕ್ರೀಡಾ ಪ್ರತಿಭೆಗಳ ಗಾಥೆಗಳನ್ನು ಹಂಚಿಕೊಳ್ಳಿ.
ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಮುನ್ನಡೆಯುವ ಅವಕಾಶ ನೀಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ.
ನೆನಪಿಡಿ, ಕ್ರೀಡೆಗಳಿಂದ ಕೇವಲ ದೈಹಿಕ ಬೆಳವಣಿಗೆ ಮಾತ್ರವಲ್ಲದೇ, ಇದು ಕ್ರೀಡಾಕಾರ ಮನೋಭಾವದೊಂದಿಗೆ ಸಮಾಜವನ್ನು ಜೋಡಿಸುವ ಒಂದು ಪ್ರಬಲ ಮಾಧ್ಯಮವೂ ಆಗಿದೆ. ಚೆನ್ನಾಗಿ ಆಟವಾಗಿ – ಚೆನ್ನಾಗಿ ಆಟವಾಡಿ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಎರಡು ದೊಡ್ಡ ಸಾಧನೆಗಳು ಇಂದು ವಿಶ್ವದ ಗಮನವನ್ನು ಸೆಳೆಯುತ್ತಿವೆ. ಇದನ್ನು ಕೇಳಿದರೆ ನೀವು ಕೂಡಾ ಹೆಮ್ಮೆ ಪಡುತ್ತೀರಿ - ಈ ಎರಡೂ ಯಶಸ್ಸುಗಳು ಸಾಧನೆಯಾಗಿರುವುದು ಆರೋಗ್ಯ ಕ್ಷೇತ್ರದಲ್ಲಿ. ಮೊದಲ ಯಶಸ್ತು ದೊರೆತಿರುವುದು ಮಲೇರಿಯಾ ವಿರುದ್ಧದ ಹೋರಾಟದಲ್ಲಿ. ಮಲೇರಿಯಾ ರೋಗವು ನಾಲ್ಕು ಸಾವಿರ ವರ್ಷಗಳಿಂದ ಮಾನವಕುಲಕ್ಕೆ ಒಂದು ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯದ ಸಮಯದಲ್ಲಿ ಕೂಡಾ ಇದು ನಮ್ಮ ಆರೋಗ್ಯ ಸಂಬಂಧಿತ ಸವಾಲುಗಳ ಪೈಕಿ ಒಂದೆನಿಸಿತ್ತು. ಒಂದು ತಿಂಗಳ ಶಿಶುವಿನಿಂದ ಹಿಡಿದು ಐದು ವರ್ಷ ವಯಸ್ಸಿನ ಮಕ್ಕಳ ಪ್ರಾಣ ಹರಣ ಮಾಡುವ ಎಲ್ಲಾ ಸಾಂಕ್ರಾಮಿಕ ರೋಗಗಳ ಪೈಕಿ ಮಲೇರಿಯಾ ರೋಗಕ್ಕೆ ಮೂರನೇ ಸ್ಥಾನ. ಇಂದು, ದೇಶವಾಸಿಗಳೆಲ್ಲಾ ಒಗ್ಗಟ್ಟಾಗಿ ಈ ಸವಾಲನ್ನು ಎದುರಿಸಿದ್ದಾರೆಂದು ನಾನು ಸಂತೋಷದಿಂದ ಹೇಳಬಲ್ಲೆ. ವಿಶ್ವ ಆರೋಗ್ಯ ಸಂಘಟನೆ -WHO ವರದಿ ಹೀಗೆನ್ನುತ್ತದೆ “ಭಾರತದಲ್ಲಿ 2015 ರಿಂದ 2023 ರ ಮಧ್ಯೆ ಮಲೇರಿಯಾ ರೋಗ ಮತ್ತು ಅದರಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಶೇಕಡಾ 80 ರಷ್ಟು ಕಡಿಮೆಯಾಗಿದೆ” ಇದು ಒಂದು ಸಣ್ಣ ಸಾಧನೆಯಲ್ಲ. ಅತ್ಯಂತ ಸಂತಸದ ವಿಷಯವೆಂದರೆ, ಈ ಯಶಸ್ಸು ಜನರ ಭಾಗೀದಾರಿಯಿಂದ ದೊರೆತಿದೆ. ಭಾರತ ಮೂಲೆ ಮೂಲೆಯಿಂದ, ಪ್ರತಿ ಜಿಲ್ಲೆಯಿಂದ, ಪ್ರತಿಯೊಬ್ಬರೂ ಆ ಅಭಿಯಾನದ ಭಾಗವಾಗಿದ್ದಾರೆ. ಅಸ್ಸಾಂನಲ್ಲಿ ಜೋರ್ ಹಾಟ್ ನ ಚಹಾ ತೋಟಗಳಲ್ಲಿ ನಾಲ್ಕು ವರ್ಷಗಳ ಹಿಂದಿನವರೆಗೂ ಮಲೇರಿಯಾ ರೋಗ ಜನರ ಚಿಂತೆಯ ಬಹು ದೊಡ್ಡ ಕಾರಣವಾಗಿತ್ತು. ಆದರೆ ಅದನ್ನು ನಿರ್ಮೂಲಸಲು ಚಹಾ ತೋಟದಲ್ಲಿ ವಾಸಿಸುವ ಜನರು ಒಗ್ಗಟ್ಟಿನಿಂದ ಮುಂದೆ ಬಂದಾಗ, ಇದರಲ್ಲಿ ಸಾಕಷ್ಟು ಯಶಸ್ಸು ದೊರೆಯಲಾರಂಭಿಸಿತು. ಅವರು ತಮ್ಮ ಈ ಪ್ರಯತ್ನದಲ್ಲಿ ತಂತ್ರಜ್ಞಾನದ ಜೊತೆಗೆ ಸಾಮಾಜಿಕ ಮಾಧ್ಯಮವನ್ನು ಬಹಳಷ್ಟು ಉಪಯೋಗಿಸಿದ್ದಾರೆ. ಇದೇ ರೀತಿ ಹರಿಯಾಣಾದ ಕುರುಕ್ಷೇತ್ರ ಜಿಲ್ಲೆಯು ಮಲೇರಿಯಾ ರೋಗದ ನಿಯಂತ್ರಣಕ್ಕಾಗಿ ಉತ್ತಮ ಮಾದರಿಯನ್ನು ಪ್ರಸ್ತುತಪಡಿಸಿದೆ. ಇಲ್ಲಿ ಮಲೇರಿಯಾ ರೋಗದ ಮೇಲೆ ನಿಗಾ ಇರಿಸುವುದಕ್ಕೆ ಜನರ ಸಹಭಾಗಿತ್ವ ಸಾಕಷ್ಟು ಯಶಸ್ವಿಯಾಗಿದೆ. ಬೀದಿ ನಾಟಕಗಳು ಮತ್ತು ರೇಡಿಯೋ ಮೂಲಕ ಇಂತಹ ಸಂದೇಶಗಳಿಗೆ ಒತ್ತು ನೀಡಲಾಯಿತು. ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆ ಮಾಡುವಲ್ಲಿ ಇವು ಸಾಕಷ್ಟು ಸಹಾಯಕವಾಯಿತು. ದೇಶಾದ್ಯಂತ ಇಂತಹ ಪ್ರಯತ್ನಗಳಿಂದಲೇ ನಾವು ಮಲೇರಿಯಾ ವಿರುದ್ಧದ ಹೋರಾಟವನ್ನು ಮತ್ತಷ್ಟು ವೇಗವಾಗಿ ಮುನ್ನಡೆಸಲು ಸಾಧ್ಯವಾಯಿತು.
ಸ್ನೇಹಿತರೇ, ನಾವು ನಮ್ಮ ತಿಳುವಳಿಕೆ ಮತ್ತು ಸಂಕಲ್ಪ ಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಅದು ಕ್ಯಾನ್ಸರ್ ವಿರುದ್ಧದ ಹೋರಾಟ. ವಿಶ್ವದ ಪ್ರಸಿದ್ಧ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ನ ಅಧ್ಯಯನ ನಿಜಕ್ಕೂ ಬಹಳ ಭರವಸೆದಾಯಕವಾಗಿದೆ. ಈ ಪತ್ರಿಕೆಯ ಅನುಸಾರ ಈಗ ಭಾರತದಲ್ಲಿ ಸಕಾಲದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಆರಂಭಿಸುವ ಸಾಧ್ಯತೆ ಬಹಳಷ್ಟು ಹೆಚ್ಚಾಗಿದೆ. ಸಕಾಲದಲ್ಲಿ ಚಿಕಿತ್ಸೆ ಎಂದರೆ– ಕ್ಯಾನ್ಸರ್ ರೋಗಿಯ ಚಿಕಿತ್ಸೆ 30 ದಿನಗಳೊಳಗಾಗಿ ಆರಂಭವಾಗುವುದು ಎಂದರ್ಥ ಹಾಗೂ ಇದರಲ್ಲಿ ‘ಆಯುಷ್ಮಾನ್ ಭಾರತ್ ಯೋಜನೆ‘ ಬಹು ದೊಡ್ಡ ಪಾತ್ರ ನಿರ್ವಹಿಸಿದೆ. ಈ ಯೋಜನೆಯಿಂದಾಗಿ ಶೇಕಡಾ 90 ರಷ್ಟು ಕ್ಯಾನ್ಸರ್ ರೋಗಿಗಳು ಸಕಾಲದಲ್ಲಿ ತಮ್ಮ ಚಿಕಿತ್ಸೆ ಆರಂಭಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಈ ಮೊದಲು ಹಣದ ಕೊರತೆಯಿಂದಾಗಿ ಬಡ ರೋಗಿಗಳು ಕ್ಯಾನ್ಸರ್ ರೋಗಕ್ಕಾಗಿ ತಪಾಸಣೆ ಮತ್ತು ಅದರ ಚಿಕಿತ್ಸೆಗೆ ಹಿಂಜರಿಯುತ್ತಿದ್ದರು. ಈಗ ‘ಆಯುಷ್ಮಾನ್ ಭಾರತ್ ಯೋಜನೆ’ ಅವರಿಗೆ ಬಹು ದೊಡ್ಡ ಆಸರೆಯಾಗಿದೆ. ಈಗ ಅವರು ತಮ್ಮ ರೋಗಕ್ಕೆ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯು ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಉಂಟಾಗುವ ಖರ್ಚಿನ ಆತಂಕವನ್ನು ಸಾಕಷ್ಟು ಕಡಿಮೆ ಮಾಡಿದೆ. ಇಂದು ಸಕಾಲದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಕುರಿತು ಜನರು ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿದ್ದಾರೆ ಎನ್ನುವುದು ಉತ್ತಮ ವಿಚಾರವಾಗಿದೆ. ಈ ಸಾಧನೆಯು ನಮ್ಮ ಆರೋಗ್ಯರಕ್ಷಣೆ ವ್ಯವಸ್ಥೆಯಷ್ಟೇ, ನಮ್ಮ ವೈದ್ಯರು, ದಾದಿಯರು ಮತ್ತು ತಾಂತ್ರಿಕ ಸಿಬ್ಬಂದಿಯದ್ದೂ ಆಗಿದೆ, ಅಷ್ಟೇ ಅಲ್ಲ ನಿಮ್ಮೆಲ್ಲರದ್ದೂ, ನನ್ನ ನಾಗರಿಕ ಸೋದರ ಸೋದರಿಯರದ್ದೂ ಆಗಿದೆ. ಎಲ್ಲರ ಪ್ರಯತ್ನದಿಂದ ಕ್ಯಾನ್ಸರ್ ರೋಗವನ್ನು ಹಿಮ್ಮೆಟ್ಟಿಸುವ ಸಂಕಲ್ಪ ಮತ್ತಷ್ಟು ಬಲವಾಗಿದೆ. ಅರಿವು ಮೂಡಿಸಲು ಪ್ರಮುಖ ಕೊಡುಗೆ ನೀಡಿದ ಎಲ್ಲರಿಗೂ ಆ ಯಶಸ್ಸಿನ ಶ್ರೇಯ ಸಲ್ಲುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡಲು ಒಂದೇ ಒಂದು ಮಂತ್ರವಿದೆ – ಅದೆಂದರೆ ಅರಿವು, ಕ್ರಮ ಮತ್ತು ಭರವಸೆ – ಅವೇರ್ನೆಸ್, ಆಕ್ಷನ್ ಮತ್ತು ಅಶ್ಯೂರೆನ್ಸ್. ಅವೇರ್ನೆಸ್ ಎಂದರೆ ಕ್ಯಾನ್ಸರ್ ಮತ್ತು ಅದರ ಲಕ್ಷಣಗಳ ಕುರಿತ ಅರಿವು, ಆಕ್ಷನ್ ಎಂದರೆ ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ, ಅಶ್ಯೂರೆನ್ಸ್ ಎಂದರೆ ರೋಗಿಗೆ ಪ್ರತಿಯೊಂದು ಸಹಾಯವೂ ಲಭ್ಯವಿದೆ ಎನ್ನುವ ಭರವಸೆ. ಬನ್ನಿ, ನಾವೆಲ್ಲರೂ ಒಗ್ಗಟ್ಟಾಗಿ ಕ್ಯಾನ್ಸರ್ ವಿರುದ್ಧದ ಈ ಹೋರಾಟವನ್ನು ವೇಗದಿಂದ ಮುನ್ನಡೋಸೋಣ ಮತ್ತು ಹೆಚ್ಚು ಹೆಚ್ಚು ರೋಗಿಗಳಿಗೆ ಸಹಾಯ ಮಾಡೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಇಂದು ನಿಮಗೆ ಒಡಿಶಾದ ಕಾಲಾಹಾಂಡಿಯಲ್ಲಿ ಅತ್ಯಂತ ಕಡಿಮೆ ನೀರು ಮತ್ತು ಕಡಿಮೆ ಸಂಪನ್ಮೂಲಗಳಿದ್ದರೂ ಕೂಡಾ ಅವಿರತ ಪ್ರಯತ್ನದಿಂದ ಸಾಧಿಸಿರುವ ಯಶಸ್ಸಿನ ಕತೆಯೊಂದನ್ನು ನಿಮಗೆ ಹೇಳಲು ಬಯಸುತ್ತೇನೆ. ಇದು ಕಾಲಾಹಾಂಡಿಯ ತರಕಾರಿ ಕ್ರಾಂತಿ. ಒಂದು ಕಾಲದಲ್ಲಿ ರೈತರು ಜಾಗ ತೊರೆದು ಬೇರೆಡೆಗೆ ಹೋಗಬೇಕಾಗಿತ್ತೋ ಅದೇ ಜಾಗ ಇಂದು, ಕಾಲಾಹಾಂಡಿಯ ಗೋಲಾ ಮುಂಡಾ ಬ್ಲಾಕ್ ನ ಒಂದು ತರಕಾರಿ ಹಬ್ ಆಗಿ ಪರಿವರ್ತನೆಯಾಗಿದೆ. ಈ ಪರಿವರ್ತನೆಯಾದದ್ದು ಹೇಗೆ? ಇದು ಕೇವಲ 10 ಮಂದಿ ರೈತರ ಒಂದು ಸಣ್ಣ ಗುಂಪಿನಿಂದ ಆರಂಭವಾಯಿತು. ಈ ಗುಂಪು ಒಂದುಗೂಡಿ ಒಂದು FPO - ‘ರೈತ ಉತ್ಪನ್ನ ಸಂಘ’ ಸ್ಥಾಪಿಸಿತು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಶುರು ಮಾಡಿತು, ಮತ್ತು ಇಂದು ಅವರ ಈ FPO ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದೆ. ಇಂದು 200 ಕ್ಕೂ ಅಧಿಕ ರೈತರು FPO ನೊಂದಿಗೆ ಜೋಡಣೆಯಾಗಿದ್ದಾರೆ, ಇದರಲ್ಲಿ 45 ಮಂದಿ ಮಹಿಳಾ ರೈತರೂ ಇದ್ದಾರೆ. ಇವರೆಲ್ಲರೂ ಸೇರಿ 200 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಕೃಷಿ ಮಾಡುತ್ತಿದ್ದಾರೆ, 150 ಎಕರೆ ಜಾಗದಲ್ಲಿ ಹಾಗಲಕಾಯಿ ಬೆಳೆಯುತ್ತಿದ್ದಾರೆ. ಈಗ ಈ FPO ದ ವಾರ್ಷಿಕ ವಹಿವಾಟು ಕೂಡಾ ಅಧಿಕವಾಗಿ, ಒಂದೂವರೆ ಕೋಟಿಗೆ ತಲುಪಿದೆ. ಇಂದು ಕಾಲಾಹಾಂಡಿಯ ತರಕಾರಿಗಳು ಕೇವಲ ಒಡಿಶಾದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರವಲ್ಲದೇ, ಬೇರೆ ರಾಜ್ಯಗಳಿಗೂ ತಲುಪುತ್ತಿವೆ, ಮತ್ತು ಅಲ್ಲಿನ ರೈತ ಈಗ ಆಲೂಗಡ್ಡೆ ಮತ್ತು ಈರುಳ್ಳಿಯ ಕೃಷಿಯ ಹೊಸ ತಂತ್ರಗಳನ್ನು ಕೂಡಾ ಕಲಿಯುತ್ತಿದ್ದಾನೆ.
ಸ್ನೇಹಿತರೇ, ಸಂಕಲ್ಪ ಶಕ್ತಿ ಮತ್ತು ಸಾಮೂಹಿಕ ಪ್ರಯತ್ನದಿಂದ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಕಾಲಾಹಾಂಡಿಯ ಈ ಯಶಸ್ಸು ನಮಗೆ ಕಲಿಸುತ್ತದೆ. ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುವುದೇನೆಂದರೆ :-
ನೆನಪಿಡಿ – ಸಣ್ಣ ಆರಂಭದಿಂದಲೇ ಭಾರೀ ಪರಿವರ್ತನೆಗಳು ಸಾಧ್ಯವಾಗುತ್ತವೆ. ಅದಕ್ಕಾಗಿ ನಮಗೆ ದೃಢ ಸಂಕಲ್ಪ ಮತ್ತು ಒಗ್ಗಟ್ಟಿನ ಭಾವನೆಯ ಅಗತ್ಯವಿರುತ್ತದೆ.
ಸ್ನೇಹಿತರೇ, ಇಂದು ‘ಮನದ ಮಾತಿನಲ್ಲಿ’ ನಮ್ಮ ಭಾರತ ವಿವಿಧತೆಯಲ್ಲಿ ಏಕತೆ ಎಂಬ ಭಾವನೆಯಿಂದ ಯಾವರೀತಿ ಮುಂದೆ ಸಾಗುತ್ತಿದೆ ಎಂಬುದನ್ನು ಆಲಿಸಿದೆವು. ಅದು ಆಟದ ಮೈದಾನವಿರಲಿ, ಅಥವಾ ವಿಜ್ಞಾನ ಕ್ಷೇತ್ರವೇ ಆಗಲಿ, ಆರೋಗ್ಯ ಅಥವಾ ಶಿಕ್ಷಣ ಕ್ಷೇತ್ರವೇ ಆಗಲಿ, ಪ್ರತಿಯೊಂದು ಕ್ಷೇತ್ರದಲ್ಲಿ ಭಾರತ ಉನ್ನತ ಶಿಖರಗಳನ್ನು ತಲುಪುತ್ತಿದೆ. ನಾವು ಒಂದು ಕುಟುಂಬದಂತೆ ಒಂದುಗೂಡಿ ಪ್ರತಿಯೊಂದು ಸವಾಲನ್ನೂ ಎದುರಿಸಿದ್ದೇವೆ ಮತ್ತು ಹೊಸ ಸಾಧನೆಗಳನ್ನು ನಮ್ಮದಾಗಿಸಿಕೊಂಡಿದ್ದೇವೆ. 2014 ರಲ್ಲಿ ಆರಂಭವಾದ ‘ಮನದ ಮಾತಿನ’ 116 ಸಂಚಿಕೆಗಳಲ್ಲಿ ‘ಮನದ ಮಾತು’ ದೇಶದ ಸಾಮೂಹಿಕ ಶಕ್ತಿಯು ಜೀವಂತ ದಾಖಲೆಯಾಗಿರುವುದನ್ನು ನಾನು ನೋಡಿದ್ದೇನೆ. ತಾವೆಲ್ಲರೂ ಈ ಕಾರ್ಯಕ್ರಮವನ್ನು ತಮ್ಮದಾಗಿಸಿಕೊಂಡಿರುವಿರಿ. ಪ್ರತಿ ತಿಂಗಳೂ ನಿಮ್ಮ ನಿಮ್ಮ ಚಿಂತನೆಗಳು ಮತ್ತು ಪ್ರಯತ್ನಗಳನ್ನು ಹಂಚಿಕೊಳ್ಳುತ್ತಿದ್ದೀರಿ. ಕೆಲವೊಮ್ಮೆ ಯುವ ಆವಿಷ್ಕಾರಕನ ಚಿಂತನೆಯಿಂದ ಪ್ರಭಾವಿತನಾದರೆ, ಮತ್ತೊಮ್ಮೆ ಹೆಣ್ಣು ಮಗಳೊಬ್ಬಳ ಸಾಧನೆ ನನಗೆ ಹೆಮ್ಮೆ ತಂದಿದೆ. ನಿಮ್ಮೆಲ್ಲರ ಸಹಭಾಗಿತ್ವವೇ ದೇಶದ ಮೂಲೆ ಮೂಲೆಯಿಂದ ಸಕಾರಾತ್ಮಕ ಶಕ್ತಿಯನ್ನು ಒಟ್ಟುಗೂಡಿಸುತ್ತದೆ. 'ಮನದ ಮಾತು' ಈ ಸಕಾರಾತ್ಮಕ ಶಕ್ತಿ ವರ್ಧನೆಯ ವೇದಿಕೆಯಾಗಿ ಮಾರ್ಪಟ್ಟಿದೆ ಮತ್ತು ಈಗ, 2025 ಬಾಗಿಲು ತಟ್ಟುತ್ತಿದೆ. ಮುಂಬರುವ ವರ್ಷದಲ್ಲಿ ‘ಮನದ ಮಾತಿನ’ ಮೂಲಕ ನಾವೆಲ್ಲರೂ ಮತ್ತಷ್ಟು ಪ್ರೇರಣಾದಾಯಕ ಪ್ರಯತ್ನಗಳನ್ನು ಹಂಚಿಕೊಳ್ಳೋಣ. ದೇಶವಾಸಿಗಳ ಸಕಾರಾತ್ಮಕ ಚಿಂತನೆ ಮತ್ತು ಆವಿಷ್ಕಾರದ ಭಾವನೆಯಿಂದ ಭಾರತ ಹೊಸ ಶಿಖರಗಳನ್ನು ತಲುಪುತ್ತದೆ ಎಂಬ ವಿಶ್ವಾಸ ನನಗಿದೆ. ನೀವೆಲ್ಲರೂ ನಿಮ್ಮ ಸುತ್ತಮುತ್ತಲಿನ ವಿಶಿಷ್ಠ ಪ್ರಯತ್ನಗಳ ಬಗ್ಗೆ #Mannkibaat ನಲ್ಲಿ ಹಂಚಿಕೊಳ್ಳುತ್ತಿರಿ. ಮುಂದಿನ ವರ್ಷದ ಪ್ರತಿಯೊಂದು ಮನದ ಮಾತಿನಲ್ಲಿ ನಮ್ಮಲ್ಲಿ ಪರಸ್ಪರ ಹಂಚಿಕೊಳ್ಳಲು ಬಹಳಷ್ಟು ವಿಷಯಗಳಿರುತ್ತವೆ ಎಂದು ನನಗೆ ಗೊತ್ತು. ನಿಮ್ಮೆಲ್ಲರಿಗೂ 2025 ನೂತನ ವರ್ಷಕ್ಕಾಗಿ ಅನೇಕಾನೇಕ ಶುಭಾಕಾಂಕ್ಷೆಗಳು. ಆರೋಗ್ಯದಿಂದಿರಿ, ಸಂತೋಷದಿಂದಿರಿ. Fit India Movement ನೊಂದಿಗೆ ನೀವೆಲ್ಲರೂ ಸೇರಿಕೊಳ್ಳಿ, ನೀವೆಲ್ಲರೂ ಸದೃಢರಾಗಿರಿ. ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಿರಿ. ಅನೇಕಾನೇಕ ಧನ್ಯವಾದ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. 'ಮನದ ಮಾತು' ಎಂದರೆ ದೇಶದ ಸಾಮೂಹಿಕ ಪ್ರಯತ್ನಗಳ ಮಾತು, ದೇಶದ ಸಾಧನೆಗಳ ಬಗ್ಗೆ, ಜನರ ಸಾಮರ್ಥ್ಯಗಳ ಮಾತು, 'ಮನದ ಮಾತು' ಎಂದರೆ ದೇಶದ ಯುವಕರ, ದೇಶದ ಪ್ರಜೆಗಳ ಕನಸುಗಳು ಮತ್ತು ಆಕಾಂಕ್ಷೆಗಳ ಬಗ್ಗೆ ಮಾತನಾಡುವುದಾಗಿದೆ. ನಾನು ನಿಮ್ಮೊಂದಿಗೆ ನೇರವಾಗಿ ಮಾತನಾಡಲು ತಿಂಗಳಪೂರ್ತಿ 'ಮನದ ಮಾತಿಗಾಗಿ' ಕಾಯುತ್ತಿರುತ್ತೇನೆ. ಎಷ್ಟೊಂದು ಸಂದೇಶಗಳು, ಎಷ್ಟೊಂದು ಮೆಸೇಜ್ ಗಳು! ಸಾಧ್ಯವಾದಷ್ಟು ಸಂದೇಶಗಳನ್ನು ಓದಲು ಮತ್ತು ನಿಮ್ಮ ಸಲಹೆಗಳ ಬಗ್ಗೆ ಯೋಚಿಸಲು ನಾನು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.
ಸ್ನೇಹಿತರೇ, ಇಂದು ಬಹಳ ವಿಶೇಷವಾದ ದಿನವಾಗಿದೆ. ಇಂದು NCC ದಿನ. ಎನ್.ಸಿ.ಸಿ.ಯ ಹೆಸರು ಕೇಳಿದ ತಕ್ಷಣ ನಮಗೆ ನಮ್ಮ ಶಾಲಾ-ಕಾಲೇಜು ದಿನಗಳು ನೆನಪಾಗುತ್ತವೆ. ನಾನು ಸ್ವತಃ ಎನ್ಸಿಸಿ ಕೆಡೆಟ್ ಆಗಿದ್ದೆ, ಆದ್ದರಿಂದ, ಅದರಿಂದ ಪಡೆದ ಅನುಭವವು ನನಗೆ ಅಮೂಲ್ಯವಾದುದು ಎಂದು ನಾನು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. 'ಎನ್ಸಿಸಿ' ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ಸೇವಾ ಮನೋಭಾವವನ್ನು ಮೂಡಿಸುತ್ತದೆ. ಯಾವುದೇ ಅವಘಡ ಸಂಭವಿಸಿದಾಗ, ಅದು ಪ್ರವಾಹವಾಗಲಿ, ಭೂಕಂಪವಾಗಲಿ, ಅಥವಾ ಯಾವುದೇ ಆಪತ್ತು ಬಂದೊದಗಿರಲಿ, ಸಹಾಯ ಮಾಡಲು ಎನ್ಸಿಸಿ ಕೆಡೆಟ್ಗಳು ಖಂಡಿತ ಹಾಜರಾಗುತ್ತಾರೆ. ಇಂದು ದೇಶದಲ್ಲಿ ಎನ್ಸಿಸಿಯ ಬಲವೃದ್ಧಿಗೆ ನಿರಂತರ ಕೆಲಸ ಮಾಡಲಾಗುತ್ತಿದೆ. 2014ರಲ್ಲಿ ಸುಮಾರು 14 ಲಕ್ಷ ಯುವಕರು ಎನ್ಸಿಸಿ ಸೇರಿದ್ದರು. ಈಗ 2024ರಲ್ಲಿ 20 ಲಕ್ಷಕ್ಕೂ ಹೆಚ್ಚು ಯುವಕರು ಎನ್ಸಿಸಿಗೆ ಸೇರ್ಪಡೆಗೊಂಡಿದ್ದಾರೆ. ಈ ಹಿಂದಿನ ಸ್ಥಿತಿಗೆ ಹೋಲಿಸಿದಲ್ಲಿ ಈಗ ಐದು ಸಾವಿರ ಹೊಸ ಶಾಲೆಗಳು ಮತ್ತು ಕಾಲೇಜುಗಳು ಎನ್ಸಿಸಿ ಸೌಲಭ್ಯವನ್ನು ಹೊಂದಿವೆ, ಮತ್ತು ಅದಕ್ಕಿಂತ ದೊಡ್ಡ ವಿಷಯವೆಂದರೆ ಹಿಂದೆ ಎನ್ಸಿಸಿಯಲ್ಲಿ ಮಹಿಳಾ ಕೆಡೆಟ್ಗಳ ಸಂಖ್ಯೆ ಕೇವಲ 25% ಆಗಿತ್ತು. ಈಗ ಎನ್ಸಿಸಿಯಲ್ಲಿ ಮಹಿಳಾ ಕೆಡೆಟ್ಗಳ ಸಂಖ್ಯೆ ಸುಮಾರು 40% ಕ್ಕೆ ಏರಿದೆ. ಗಡಿಭಾಗದಲ್ಲಿ ವಾಸಿಸುವ ಹೆಚ್ಚೆಚ್ಚು ಯುವಕರನ್ನು ಎನ್ಸಿಸಿಗೆ ಸೇರ್ಪಡೆಗೊಳಿಸುವ ಅಭಿಯಾನವೂ ನಿರಂತರವಾಗಿ ನಡೆಯುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಎನ್ಸಿಸಿಗೆ ಸೇರಬೇಕೆಂದು ನಾನು ಆಗ್ರಹಿಸುತ್ತೇನೆ. ನೀವು ಯಾವುದೇ ವೃತ್ತಿಯನ್ನು ಆಯ್ದುಕೊಂಡರೂ, ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ NCC ಬಹಳ ಸಹಾಯಕಾರಿ ಎಂಬುದನ್ನು ನೀವು ಕಾಣುತ್ತೀರಿ.
ಸ್ನೇಹಿತರೇ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ದೊಡ್ಡದು. ಯುವ ಮನಸ್ಸುಗಳು ಒಗ್ಗೂಡಿ ದೇಶದ ಭವಿಷ್ಯದ ಕುರಿತು ಯೋಚಿಸಿದಾಗ, ವಿಚಾರ ವಿನಿಮಯ ಮಾಡಿಕೊಂಡಾಗ ಖಂಡಿತವಾಗಿಯೂ ಸೂಕ್ತ ಮಾರ್ಗಗಳು ಹೊರಹೊಮ್ಮುತ್ತವೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ದೇಶವು 'ಯುವ ದಿನ'ವನ್ನು ಆಚರಿಸುತ್ತದೆ ಎಂದು ನಿಮಗೆ ತಿಳಿದಿದೆ. ಮುಂದಿನ ವರ್ಷ ಸ್ವಾಮಿ ವಿವೇಕಾನಂದರ 162ನೇ ಜಯಂತಿ. ಈ ಬಾರಿ ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ, ಜನವರಿ 11-12 ರಂದು ದೆಹಲಿಯ ಭಾರತ ಮಂಟಪದಲ್ಲಿ ಯುವ ವಿಚಾರಗಳ ಮಹಾಕುಂಭ ನಡೆಯಲಿದ್ದು, ಈ ಉಪಕ್ರಮದ ಹೆಸರು 'ವಿಕಸಿತ ಭಾರತ Young Leaders Dialogue' ಎಂಬುದಾಗಿದೆ. ಭಾರತದಾದ್ಯಂತ ಕೋಟ್ಯಾಂತರ ಯುವಕರು ಇದರಲ್ಲಿ ಭಾಗವಹಿಸಲಿದ್ದಾರೆ. ಗ್ರಾಮ, ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ಅಲ್ಲಿಂದ ಆಯ್ಕೆಯಾದ ಎರಡು ಸಾವಿರ ಯುವಕರು ಭಾರತ ಮಂಟಪದಲ್ಲಿ 'ವಿಕಸಿತ ಭಾರತ Young Leaders Dialogue' ನಲ್ಲಿ ಪಾಲ್ಗೊಳ್ಳಲು ಒಗ್ಗೂದಲಿದ್ದಾರೆ. ಯಾರ ಕುಟುಂಬ ಸದಸ್ಯರು ಅಥವಾ ಇಡೀ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿಲ್ಲವೋ ಅಂತಹ ಯುವಕರು ರಾಜಕೀಯಕ್ಕೆ ಸೇರುವಂತೆ ನಾನು ಕೆಂಪು ಕೋಟೆಯ ಪ್ರಾಂಗಣದಿಂದ ಕರೆ ನೀಡಿದ್ದು ನಿಮಗೆ ನೆನಪಿರಬಹುದು. ಅಂತಹ ಒಂದು ಲಕ್ಷ ಯುವಕರನ್ನು, ನವ ಯುವಕರನ್ನು ರಾಜಕೀಯ ಸೇರ್ಪಡೆಗೊಳಿಸಲು ದೇಶಾದ್ಯಂತ ವಿವಿಧ ಬಗೆಯ ವಿಶೇಷ ಅಭಿಯಾನಗಳನ್ನು ನಡೆಸಲಾಗುವುದು. 'ವಿಕಸಿತ ಭಾರತ Young Leaders Dialogue' ಕೂಡ ಅಂತಹ ಒಂದು ಪ್ರಯತ್ನ. ಭಾರತ ಮತ್ತು ವಿದೇಶಗಳ ತಜ್ಞರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಣ್ಯರು ಸಹ ಉಪಸ್ಥಿತರಿರುತ್ತಾರೆ. ಸಾಕಷ್ಟು ಸಮಯ ಅದರಲ್ಲಿ ಭಾಗವಹಿಸಲು ನಾನೂ ಕೂಡ ಪ್ರಯತ್ನಿಸುತ್ತೇನೆ. ಯುವಕರು ತಮ್ಮ ವಿಚಾರಗಳನ್ನು ನೇರವಾಗಿ ನಮ್ಮ ಮುಂದಿಡಲು ಅವಕಾಶ ಲಭಿಸುತ್ತದೆ. ದೇಶವು ಈ ಆಲೋಚನೆಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು, ಮುಂದಕ್ಕೆ ಕೊಂಡೊಯ್ಯಬಹುದು? ಸೂಕ್ತ ಮಾರ್ಗಸೂಚಿಯನ್ನು ಹೇಗೆ ರಚಿಸಬಹುದು? ಎಂಬುದಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗುವುದು. ಆದ್ದರಿಂದ ನೀವೂ ಸಿದ್ಧರಾಗಿ, ಭವಿಷ್ಯದ ಭಾರತವನ್ನು ನಿರ್ಮಿಸಲು ಹೊರಟಿರುವವರಿಗೆ, ದೇಶದ ಮುಂಬರುವ ಪೀಳಿಗೆಗೆ ಇದು ಒಂದು ಸುವರ್ಣ ಅವಕಾಶವಾಗಿದೆ. ಬನ್ನಿ ಒಗ್ಗೂಡಿ ದೇಶವನ್ನು ಕಟ್ಟೋಣ ಮತ್ತು ದೇಶವನ್ನು ಅಭಿವೃದ್ಧಿ ಪಡಿಸೋಣ.
ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿ’ ನಾವು ಆಗಾಗ್ಗೆ ನಿಸ್ವಾರ್ಥದಿಂದ ಸಮಾಜಕ್ಕಾಗಿ ದುಡಿಯುತ್ತಿರುವ, ಜನರ ಚಿಕ್ಕಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಇಂತಹ ಯುವಕರ ಬಗ್ಗೆ ಮಾತನಾಡುತ್ತೇವೆ. ನಮ್ಮ ಸುತ್ತಮುತ್ತ ನೋಡಿದರೆ, ಕೆಲವು ರೀತಿಯ ಸಹಾಯ ಅಥವಾ ಕೆಲವು ಮಾಹಿತಿಯ ಅಗತ್ಯವಿರುವ ಅನೇಕ ಜನರನ್ನು ನಾವು ಕಾಣುತ್ತೇವೆ. ಕೆಲವು ಯುವಕರು ಈ ರೀತಿಯ ಸಮಸ್ಯೆಯನ್ನು ಪರಿಹರಿಸಿದ್ದಾರೆಂದು ತಿಳಿದು ನನಗೆ ಸಂತೋಷವಾಗಿದೆ. ಉದಾಹರಣೆಗೆ ಲಕ್ನೋ ನಿವಾಸಿ ವೀರೇಂದ್ರ ಅವರು ವೃದ್ಧರು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಲು ಸಹಾಯ ಮಾಡುತ್ತಾರೆ. ನಿಯಮಾನುಸಾರ ಎಲ್ಲಾ ಪಿಂಚಣಿದಾರರು ವರ್ಷಕ್ಕೊಮ್ಮೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು ಎಂಬುದು ನಿಮಗೆ ಗೊತ್ತೇ ಇದೆ. 2014ರ ತನಕ ಹಿರಿಯರು ಖುದ್ದಾಗಿ ಬ್ಯಾಂಕ್ ಗೆ ಹೋಗಿ ಅದನ್ನು ಸಲ್ಲಿಸಬೇಕಾಗಿತ್ತು. ಇದರಿಂದ ನಮ್ಮ ಹಿರಿಯರಿಗೆ ಎಷ್ಟು ಅನಾನುಕೂಲವಾಗುತ್ತಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಈಗ ಈ ವ್ಯವಸ್ಥೆ ಬದಲಾಗಿದೆ. ಈಗ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡುವ ಮೂಲಕ ಇದು ಸುಲಭಗೊಂಡಿದೆ, ಹಿರಿಯರು ಬ್ಯಾಂಕ್ಗೆ ಹೋಗಬೇಕಾಗಿಲ್ಲ. ತಂತ್ರಜ್ಞಾನದಿಂದಾಗಿ ಹಿರಿಯರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ವೀರೇಂದ್ರ ಅವರಂತಹ ಯುವಕರ ಪಾತ್ರ ಬಹು ದೊಡ್ಡದಾಗಿದೆ. ಅವರು ತಮ್ಮ ಕ್ಷೇತ್ರದ ಹಿರಿಯರಿಗೆ ಈ ಕುರಿತು ಅರಿವು ಮೂಡಿಸುತ್ತಿರುತ್ತಾರೆ. ಅಲ್ಲದೆ ಅವರು ಹಿರಿಯರನ್ನು ಟೆಕ್ ಸ್ಯಾವಿ ಕೂಡಾ ಮಾಡುತ್ತಿದ್ದಾರೆ. ಹಾಗಾಗಿ ಇಂದು ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಪಡೆಯುವವರ ಸಂಖ್ಯೆ 80 ಲಕ್ಷಕ್ಕೂ ಹೆಚ್ಚಾಗಿದೆ. ಇವರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಯೋವೃದ್ಧರು 80 ವರ್ಷ ಮೀರಿದವರಾಗಿದ್ದಾರೆ.
ಸ್ನೇಹಿತರೇ, ಹಲವಾರು ನಗರಗಳಲ್ಲಿ ಹಿರಿಯರನ್ನು ಡಿಜಿಟಲ್ ಕ್ರಾಂತಿಯ ಪಾಲುದಾರರನ್ನಾಗಿ ಮಾಡಲು 'ಯುವಕರು' ಮುಂದೆ ಬರುತ್ತಿದ್ದಾರೆ. ಭೋಪಾಲ್ ನ ಮಹೇಶ್ ತಮ್ಮ ಬಡಾವಣೆಯ ಬಹಳಷ್ಟು ಹಿರಿಯರಿಗೆ ಮೊಬೈಲ್ ಮೂಲಕ ಪಾವತಿ ಮಾಡುವುದನ್ನು ಕಲಿಸಿದ್ದಾರೆ. ಈ ಹಿರಿಯರ ಬಳಿ smart phone ಏನೋ ಇತ್ತು. ಆದರೆ ಅದರ ಸೂಕ್ತ ಉಪಯೋಗದ ಬಗ್ಗೆ ತಿಳಿಸಿಕೊಡುವವರು ಯಾರೂ ಇರಲಿಲ್ಲ. ಹಿರಿಯರನ್ನು digital arrest ನಂತಹ ಅಪಾಯದಿಂದ ರಕ್ಷಿಸಲು ಕೂಡಾ ಯುವಕರು ಮುಂದೆ ಬಂದಿದ್ದಾರೆ. ಅಹ್ಮದಾಬಾದ್ ನ ರಾಜೀವ್ ಜನರಿಗೆ digital arrest ಅಪಾಯದ ಬಗ್ಗೆ ಅರಿವು ಮೂಡಿಸುತ್ತಾರೆ. 'ಮನದ ಮಾತಿನ ಹಿಂದಿನ ಕಾಂತಿನಲ್ಲಿ ನಾನು digital arrest ಬಗ್ಗೆ ಚರ್ಚಿಸಿದ್ದೆ. ಇಂತಹ ಅಪರಾಧಗಳಿಗೆ ಹೆಚ್ಚಾಗಿ ಹಿರಿಯರೆ ಬಲಿಯಾಗುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಅರಿವು ಮೂಡಿಸಿ ಸೈಬರ್ ವಂಚನೆಯಿಂದ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸರ್ಕಾರದಲ್ಲಿ digital arrest ಎಂಬ ಯಾವುದೇ ನಿಯಮಾನುಸಾರಣೆ ಇಲ್ಲ ಎಂಬುದನ್ನು ನಾವು ಪದೇ ಪದೇ ಜನರಿಗೆ ತಿಳಿಸಬೇಕಾಗುತ್ತದೆ - ಇದು ಸಂಪೂರ್ಣ ಸುಳ್ಳು, ಜನರನ್ನು ವಂಚಿಸುವಂತಹ ಒಂದು ಕುತಂತ್ರವಾಗಿದೆ. ನಮ್ಮ ಯುವ ಸ್ನೇಹಿತರು ಪೂರ್ಣ ಸೂಕ್ಷ್ಮತೆಯಿಂದ ಈ ಒಳ್ಳೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಇತರರಿಗೂ ಸ್ಫೂರ್ತಿ ನೀಡುತ್ತಿದ್ದಾರೆ ಎಂಬುದು ನನಗೆ ಸಂತೋಷ ನೀಡಿದೆ.
ನನ್ನ ಪ್ರಿಯ ದೇಶವಾಸಿಗಳೇ, ಈ ಮಧ್ಯೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಪ್ರಯೋಗಗಳು ನಡೆಯುತ್ತಿವೆ. ನಮ್ಮ ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವ ಮತ್ತು ಪುಸ್ತಕದ ಮೇಲಿನ ಪ್ರೀತಿಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ - 'ಪುಸ್ತಕಗಳು' ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಹೇಳಲಾಗುತ್ತದೆ ಮತ್ತು ಈಗ ಈ ಸ್ನೇಹವನ್ನು ಗಟ್ಟಿಗೊಳಿಸಲು, ಗ್ರಂಥಾಲಯಕ್ಕಿಂತ ಉತ್ತಮವಾದ ಸ್ಥಳ ಯಾವುದಿದೆ? ನಾನು ಚೆನ್ನೈನ ಒಂದು ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇಲ್ಲಿ ಮಕ್ಕಳಿಗಾಗಿ ಸೃಜನಶೀಲತೆ ಮತ್ತು ಕಲಿಕೆಯ ಕೇಂದ್ರವಾಗಿರುವಂತಹ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಇದನ್ನು ಪ್ರಾಕೃತ ಅರಿವಗಮ್ ಎಂದು ಕರೆಯಲಾಗುತ್ತದೆ. ಈ ಗ್ರಂಥಾಲಯದ ಪರಿಕಲ್ಪನೆ ತಂತ್ರಜ್ಞಾನದ ವಿಶ್ವದೊಂದಿಗೆ ಸಂಬಂಧ ಹೊಂದಿರುವ ಶ್ರೀ ರಾಮ ಗೋಪಾಲನ್ ಅವರ ಕೊಡುಗೆಯಾಗಿದೆ. ವಿದೇಶದಲ್ಲಿ ತಮ್ಮ ಉದ್ಯೋಗದಲ್ಲಿ ಅವರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಮಕ್ಕಳಲ್ಲಿ ಓದುವ ಮತ್ತು ಕಲಿಯುವ ಹವ್ಯಾಸವನ್ನು ಬೆಳೆಸುವ ಬಗ್ಗೆ ಅವರು ಯೋಚಿಸುತ್ತಿದ್ದರು. ಭಾರತಕ್ಕೆ ಹಿಂದಿರುಗಿದ ನಂತರ ಅವರು ಪ್ರಾಕೃತ ಅರಿವಗಮ್ ಅನ್ನು ಸ್ಥಾಪಿಸಿದರು. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, ಮಕ್ಕಳು ಓದಲು ಪೈಪೋಟಿ ನಡೆಸುತ್ತಿದ್ದಾರೆ. ಪುಸ್ತಕಗಳ ಹೊರತಾಗಿ ಈ ಗ್ರಂಥಾಲಯದಲ್ಲಿ ನಡೆಯುವ ಹಲವಾರು ರೀತಿಯ ಚಟುವಟಿಕೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಕಥೆ ಹೇಳುವ ಅವಧಿಗಳಾಗಲಿ, ಕಲಾ ಕಾರ್ಯಾಗಾರಗಳಾಗಲಿ, ಜ್ಞಾಪಕ ಶಕ್ತಿ ವೃದ್ಧಿಯ ತರಬೇತಿ ತರಗತಿಗಳಾಗಲಿ, ರೊಬೊಟಿಕ್ಸ್ ಪಾಠಗಳಿರಲಿ ಅಥವಾ ಸಾರ್ವಜನಿಕ ಭಾಷಣಗಳೆ ಆಗಿರಲಿ, ಇಲ್ಲಿ ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಒಂದಲ್ಲ ಒಂದು ಚಟುವಟಿಕೆ ಇದ್ದೇ ಇದೆ.
ಸ್ನೇಹಿತರೇ, ಹೈದರಾಬಾದ್ನಲ್ಲಿ ಸಹ ‘food for thought’ ಫೌಂಡೇಶನ್ ಅನೇಕ ಅದ್ಭುತ ಗ್ರಂಥಾಲಯಗಳನ್ನು ರಚಿಸಿದೆ. ಮಕ್ಕಳಿಗೆ ಹೆಚ್ಚೆಚ್ಚು ವಿಷಯಗಳ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಓದಲು ಪುಸ್ತಕಗಳು ಸಿಗುವಂತೆ ಮಾಡುವುದು ಇವರ ಪ್ರಯತ್ನವಾಗಿದೆ. ಬಿಹಾರದಲ್ಲಿ, ಗೋಪಾಲ್ಗಂಜ್ನ 'ಪ್ರಯೋಗ್ ಲೈಬ್ರರಿ' ಬಗ್ಗೆ ಸುತ್ತಮುತ್ತಲ ಅನೇಕ ನಗರಗಳಲ್ಲಿ ಚರ್ಚಿಸಲಾಗುತ್ತಿದೆ. ಈ ಗ್ರಂಥಾಲಯದಿಂದ ಸುಮಾರು 12 ಗ್ರಾಮಗಳ ಯುವಕರು ಪುಸ್ತಕಗಳನ್ನು ಓದುವ ಸೌಲಭ್ಯವನ್ನು ಪಡೆಯಲಾರಂಭಿಸಿದ್ದು, ಇದರೊಂದಿಗೆ ಗ್ರಂಥಾಲಯವು ಅಧ್ಯಯನಕ್ಕೆ ನೆರವಾಗುವ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಕೆಲವು ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿವೆ. ಇಂದು ಗ್ರಂಥಾಲಯವು ಸಮಾಜವನ್ನು ಸಬಲೀಕರಣಗೊಳಿಸುವಲ್ಲಿ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿರುವುದು ನಿಜಕ್ಕೂ ಬಹಳ ಸಂತಸದ ಸಂಗತಿ. ನೀವೂ ಪುಸ್ತಕಗಳೊಂದಿಗೆ ಸ್ನೇಹವನ್ನು ಬೆಳೆಸಿ ಮತ್ತು ನಿಮ್ಮ ಜೀವನವು ಹೇಗೆ ಬದಲಾವಣೆಗಳಾಗುತ್ತವೆ ಎಂಬುದನ್ನು ಗಮನಿಸಿ.
ನನ್ನ ಪ್ರಿಯ ದೇಶವಾಸಿಗಳೇ, ನಾನು ಮೊನ್ನೆ ರಾತ್ರಿಯಷ್ಟೆ ದಕ್ಷಿಣ ಅಮೆರಿಕಾದ ಗಯಾನಾದಿಂದ ಹಿಂದಿರುಗಿದ್ದೇನೆ. ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಗಯಾನಾದಲ್ಲಿಯೂ 'ಮಿನಿ ಇಂಡಿಯಾ' ಇದೆ. ಸುಮಾರು 180 ವರ್ಷಗಳ ಹಿಂದೆ, ಹೊಲಗಳಲ್ಲಿ ಕೆಲಸ ಮಾಡಲು ಮತ್ತು ಇತರ ಕೆಲಸಗಳಿಗಾಗಿ ಭಾರತದಿಂದ ಜನರನ್ನು ಗಯಾನಾಕ್ಕೆ ಕರೆದೊಯ್ಯಲಾಗಿತ್ತು. ಇಂದು, ಗಯಾನಾದಲ್ಲಿರುವ ಭಾರತೀಯ ಮೂಲದ ಜನರು ರಾಜಕೀಯ, ವ್ಯಾಪಾರ, ಶಿಕ್ಷಣ ಮತ್ತು ಸಂಸ್ಕೃತಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗಯಾನಾದ ನೇತೃತ್ವವಹಿಸಿದ್ದಾರೆ. ಗಯಾನಾ ರಾಷ್ಟ್ರಪತಿಗಳಾದ ಡಾ. ಇರ್ಫಾನ್ ಅಲಿ ಕೂಡ ಭಾರತೀಯ ಮೂಲದವರಾಗಿದ್ದು, ತಮ್ಮ ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ನಾನು ಗಯಾನಾದಲ್ಲಿದ್ದಾಗ, ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಬಂದಿತು - ಅದನ್ನು ನಾನು ನಿಮ್ಮೊಂದಿಗೆ 'ಮನದ ಮಾತಿನಲ್ಲಿ' ಹಂಚಿಕೊಳ್ಳುತ್ತಿದ್ದೇನೆ. ಗಯಾನಾದಂತೆ, ಪ್ರಪಂಚದ ಹಲವಾರು ದೇಶಗಳಲ್ಲಿ ಲಕ್ಷಾಂತರ ಭಾರತೀಯರಿದ್ದಾರೆ. ದಶಕಗಳ ಹಿಂದೆ, 200-300 ವರ್ಷಗಳ ಹಿಂದೆ ಅವರ ಪೂರ್ವಜರು ತಮ್ಮದೇ ಆದ ಕಥೆಗಳನ್ನು ಹೊಂದಿದ್ದಾರೆ. ಭಾರತೀಯ ವಲಸಿಗರು ವಿವಿಧ ದೇಶಗಳಲ್ಲಿ ತಮ್ಮ ಛಾಪು ಮೂಡಿಸಿದ ಕಥೆಗಳನ್ನು ನೀವು ಹುಡುಕಬಹುದೇ? ಅಲ್ಲಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಹೇಗೆ ಭಾಗವಹಿಸಿದ್ದರು? ಅವರು ತಮ್ಮ ಭಾರತೀಯ ಪರಂಪರೆಯನ್ನು ಹೇಗೆ ಜೀವಂತವಾಗಿಟ್ಟರು? ನೀವು ಅಂತಹ ನೈಜ ಕಥೆಗಳನ್ನು ಶೋಧಿಸಬೇಕು ಮತ್ತು ಅವುಗಳನ್ನು ನನ್ನೊಂದಿಗೆ ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನೀವು ಈ ಕಥೆಗಳನ್ನು NaMo ಅಪ್ಲಿಕೇಶನ್ನಲ್ಲಿ ಅಥವಾ MyGov ನಲ್ಲಿ #IndianDiasporaStories ನಲ್ಲೂ ಹಂಚಿಕೊಳ್ಳಬಹುದು.
ಸ್ನೇಹಿತರೇ, ಒಮನ್ನಲ್ಲಿ ನಡೆಯುತ್ತಿರುವ ಅಸಾಧಾರಣ ಯೋಜನೆಯೊಂದು ನಿಮಗೆ ಬಹಳ ಆಸಕ್ತಿಕರವೆನಿಸಬಹುದು. ಶತಮಾನಗಳಿಂದ ಅನೇಕ ಭಾರತೀಯ ಕುಟುಂಬಗಳು ಓಮನ್ನಲ್ಲಿ ವಾಸಿಸುತ್ತಿವೆ. ಅವರಲ್ಲಿ ಹೆಚ್ಚಿನವರು ಗುಜರಾತ್ನ ಕಚ್ ಮೂಲದವರಾಗಿದ್ದಾರೆ. ಈ ಜನರು ವ್ಯಾಪಾರದ ಪ್ರಮುಖ link ಗಳನ್ನು ರಚಿಸಿದ್ದರು. ಇಂದಿಗೂ ಅವರು ಒಮಾನಿ ಪೌರತ್ವವನ್ನು ಹೊಂದಿದ್ದಾರೆ. ಆದರೆ ಅವರ ರೋಮ ರೋಮಗಳಲ್ಲಿ ಭಾರತೀಯತೆ ತುಂಬಿದೆ. ಒಮನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತೀಯ ರಾಷ್ಟ್ರೀಯ ದಾಖಲೆಗಳ ಸಹಯೋಗದಲ್ಲಿ ಒಂದು ತಂಡವು ಈ ಕುಟುಂಬಗಳ ಇತಿಹಾಸವನ್ನು ಸಂರಕ್ಷಿಸುವ ಕೆಲಸವನ್ನು ಆರಂಭಿಸಿದೆ. ಈ ಅಭಿಯಾನದಡಿ ಇದುವರೆಗೆ ಸಾವಿರಾರು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇವುಗಳಲ್ಲಿ ಡೈರಿ, ಖಾತೆ ಪುಸ್ತಕ, ಲೆಡ್ಜರ್ಗಳು, ಪತ್ರಗಳು ಮತ್ತು ಟೆಲಿಗ್ರಾಮ್ಗಳು ಒಳಗೊಂಡಿವೆ. ಇವುಗಳಲ್ಲಿ ಕೆಲವು ದಾಖಲೆಗಳು 1838 ರ ವರ್ಷದ್ದು ಕೂಡಾ ಇವೆ. ಈ ದಾಖಲೆಗಳು ಭಾವನೆಗಳಿಂದ ಕೂಡಿವೆ. ವರ್ಷಗಳ ಹಿಂದೆ ಅವರು ಓಮನ್ ತಲುಪಿದಾಗ, ಯಾವ ರೀತಿಯ ಜೀವನ ನಡೆಸಿದರು, ಯಾವ ರೀತಿಯ ಸುಖ ದುಃಖಗಳನ್ನು ಎದುರಿಸಿದರು, ಮತ್ತು ಓಮನ್ ಜನರೊಂದಿಗೆ ಅವರ ಸಂಬಂಧಗಳು ಹೇಗೆ ಮುಂದುವರಿದವು - ಇವೆಲ್ಲವೂ ಈ ದಾಖಲೆಗಳಲ್ಲಿವೆ. ‘Oral history project’ ಕೂಡ ಈ ಅಭಿಯಾನದ ಪ್ರಮುಖ ಆಧಾರವಾಗಿದೆ. ಅಲ್ಲಿನ ಹಿರಿಯರು ಈ ಅಭಿಯಾನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಜನರು ತಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ತಿಳಿಸಿದ್ದಾರೆ.
ಸ್ನೇಹಿತರೆ ಇಂತಹದ್ದೆ ಒಂದು ‘Oral History Project’ ಭಾರತದಲ್ಲೂ ನಡೆಯುತ್ತಿದೆ. ಈ ಯೋಜನೆಯಡಿ ಇತಿಹಾಸದ ಬಗ್ಗೆ ಒಲವುಳ್ಳವರು ದೇಶದ ವಿಭಜನೆಯ ಕಾಲಘಟ್ಟದಲ್ಲಿ ಪೀಡಿತರ ಅನುಭವಗಳನ್ನು ಸಂಗ್ರಹಿಸುತ್ತಿದ್ದಾರೆ. ವಿಭಜನೆಯ ಭೀಕರತೆಯನ್ನು ಕಂಡಂತಹ ಜನರು ಇಂದು ದೇಶದಲ್ಲಿ ಕೆಲವರು ಮಾತ್ರ ಉಳಿದಿದ್ದಾರೆ. ಇಂತಹ ಸಮಯದಲ್ಲಿ ಈ ಪ್ರಯತ್ನ ಮತ್ತಷ್ಟು ಮಹತ್ವಪೂರ್ಣವಾಗಿದೆ.
ಸ್ನೇಹಿತರೇ, ಯಾವ ದೇಶ, ಯಾವ ಸ್ಥಳ, ತನ್ನ ಇತಿಹಾಸವನ್ನು ಉಳಿಸಿಕೊಳ್ಳುತ್ತದೆಯೋ, ಅದರ ಭವಿಷ್ಯ ಕೂಡಾ ಸುರಕ್ಷಿತವಾಗಿ ಇರುತ್ತದೆ. ಇದೇ ಚಿಂತನೆಯೊಂದಿಗೆ ಒಂದು ಪ್ರಯತ್ನ ನಡೆದಿದ್ದು, ಇದರಲ್ಲಿ ಗ್ರಾಮದ ಇತಿಹಾಸವನ್ನು ಸಂರಕ್ಷಿಸುವುದಕ್ಕಾಗಿ ಒಂದು ಡೈರೆಕ್ಟರಿ ಸಿದ್ಧಪಡಿಸಲಾಗಿದೆ. ಭಾರತದ ಪ್ರಾಚೀನ ಸಾಗರ ಪಯಣದ ಸಾಮರ್ಥ್ಯಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂರಕ್ಷಿಸುವ ಅಭಿಯಾನ ಕೂಡಾ ದೇಶದಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ, ಲೋಥಲ್ ನಲ್ಲಿ ಒಂದು ಬಹಳ ದೊಡ್ಡ ಸಂಗ್ರಹಾಲಯವನ್ನು ಕೂಡಾ ನಿರ್ಮಿಸಲಾಗುತ್ತಿದೆ, ಇದಲ್ಲದೇ ನಿಮ್ಮ ಬಳಿ ಯಾವುದೇ ಹಸ್ತಪ್ರತಿ, ಯಾವುದೇ ಐತಿಹಾಸಿಕ ಕಾಗದಪತ್ರ, ಯಾವುದೇ ಲಿಖಿತ ಪ್ರತಿಯಿದ್ದರೆ, ನೀವು ಕೂಡಾ National Archives of India ನ ಸಹಾಯದಿಂದ ಅವುಗಳನ್ನು ಸಂರಕ್ಷಿಸಬಹುದು.
ಸ್ನೇಹಿತರೇ, ನನಗೆ ಸ್ಲೋವೇಕಿಯಾದಲ್ಲಿ ನಡೆಯುತ್ತಿರುವ ಇಂತಹುದೇ ಮತ್ತೊಂದು ಪ್ರಯತ್ನದ ಬಗ್ಗೆ ತಿಳಿದುಬಂದಿದ್ದು, ಇದು ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವ ಕಾರ್ಯವಾಗಿದೆ. ಇಲ್ಲಿ ಮೊದಲಬಾರಿಗೆ ನಮ್ಮ ಉಪನಿಷತ್ ಗಳನ್ನು ಸ್ಲೋವಾಕ್ ಭಾಷೆಗೆ ಅನುವಾದ ಮಾಡಲಾಗಿದೆ. ಇಂತಹ ಪ್ರಯತ್ನಗಳಿಂದ ಭಾರತೀಯ ಸಂಸ್ಕೃತಿ ಜಾಗತಿಕವಾಗಿ ಬೀರುವ ಪ್ರಭಾವ ಎಂತಹದ್ದೆಂದು ತಿಳಿದುಬರುತ್ತದೆ. ವಿಶ್ವಾದ್ಯಂತ ಕೋಟ್ಯಂತರ ಜನರ ಮನಮಾನಸದಲ್ಲಿ ಭಾರತ ನೆಲೆಸಿದೆ ಎನ್ನುವುದು ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ವಿಷಯವಾಗಿದೆ.
ನನ್ನ ಪ್ರೀತಿಯ ದೇಶಬಾಂಧವರೇ, ಈಗ ನಾನು ದೇಶದ ಅಂತಹ ಸಾಧನೆಯ ಕುರಿತಂತೆ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ, ಈ ವಿಷಯ ಕೇಳಿ ನೀವು ಸಂತೋಷಪಡುವುದು ಮಾತ್ರವಲ್ಲದೇ ಹೆಮ್ಮೆ ಕೂಡಾ ಪಡುತ್ತೀರಿ, ಹಾಗೊಮ್ಮೆ ನೀವು ಮಾಡದೇ ಇದ್ದಲ್ಲಿ ಬಹುಶಃ ಪಶ್ಚಾತ್ತಾಪ ಕೂಡಾ ಪಡುತ್ತೀರಿ. ಕೆಲವು ತಿಂಗಳ ಹಿಂದೆ ನಾವು ಒಂದು ಸಸಿ ತಾಯಿಯ ಹೆಸರಿನಲ್ಲಿ ಎಂಬ ಅಭಿಯಾನ ಆರಂಭಿಸಿದ್ದೆವು. ಈ ಅಭಿಯಾನದಲ್ಲಿ ದೇಶದೆಲ್ಲೆಡೆಯಿಂದ ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಅಭಿಯಾನವು 100 ಕೋಟಿ ಗಿಡಗಳನ್ನು ನೆಡುವ ಮಹತ್ವದ ಮೈಲಿಗಲ್ಲನ್ನು ಮೀರಿದೆ ಎಂದು ಹೇಳಲು ನನಗೆ ಬಹಳ ಹರ್ಷವೆನಿಸುತ್ತದೆ. ನೂರು ಕೋಟಿ ಗಿಡಗಳು, ಅದೂ ಕೇವಲ ಐದು ತಿಂಗಳುಗಳಲ್ಲಿ, ನಿಜಕ್ಕೂ ಇದು ಸಾಧ್ಯವಾಗಿದ್ದು ನಮ್ಮ ದೇಶವಾಸಿಗಳ ಅವಿರತ ಪ್ರಯತ್ನದಿಂದ. ಇದಕ್ಕೆ ಸಂಬಂಧಿಸಿದ ಮತ್ತೊಂದು ವಿಷಯವಿದೆ, ನೀವು ಅದನ್ನು ಕೇಳಿದರೆ ಮತ್ತಷ್ಟು ಹೆಮ್ಮೆ ಪಡುತ್ತೀರಿ. ‘ಒಂದು ಸಸಿ ತಾಯಿಯ ಹೆಸರಿನಲ್ಲಿ’ ಅಭಿಯಾನ ಈಗ ಜಗತ್ತಿನ ಇತರ ದೇಶಗಳಲ್ಲೂ ಹಬ್ಬುತ್ತಿದೆ. ನಾನು ಗಯಾನಾಗೆ ಹೋಗಿದ್ದಾಗ ಅಲ್ಲಿಯೂ ಈ ಅಭಿಯಾನಕ್ಕೆ ನಾನು ಸಾಕ್ಷಿಯಾದೆ. ಅಲ್ಲಿ ನಾನು ಗಯಾನಾ ಅಧ್ಯಕ್ಷ ಡಾ. ಇರ್ಫಾನ್ ಅಲಿ, ಅವರ ಪತ್ನಿಯ ತಾಯಿ ಮತ್ತು ಕುಟುಂಬದ ಇತರ ಸದಸ್ಯರು ಒಂದು ಸಸಿ ತಾಯಿಯ ಹೆಸರಿನಲ್ಲಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಸ್ನೇಹಿತರೇ, ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಅಭಿಯಾನ ನಿರಂತರವಾಗಿ ನಡೆಯುತ್ತಿದೆ. ಮಧ್ಯಪ್ರದೇಶದ ಇಂದೌರ್ ನಲ್ಲಿ ಒಂದು ಸಸಿ ತಾಯಿಯ ಹೆಸರಿನಲ್ಲಿ ಅಭಿಯಾನದ ಅಡಿಯಲ್ಲಿ ಗಿಡ ನೆಡುವ ದಾಖಲೆ ನಿರ್ಮಾಣವಾಗಿದೆ – ಇಲ್ಲಿ 24 ಗಂಟೆಗಳಲ್ಲಿ 12 ಲಕ್ಷಕ್ಕಿಂತ ಅಧಿಕ ಗಿಡಗಳನ್ನು ನೆಡಲಾಯಿತು. ಈ ಅಭಿಯಾನದ ಕಾರಣದಿಂದಾಗಿ, ಇಂದೌರ್ ನ ರೇವತಿ ಹಿಲ್ಸ್ ನ ಬಂಜರು ಭೂಮಿಯು ಈಗ ಹಸಿರು ವಲಯವಾಗಿ ಪರಿವರ್ತನೆಯಾಗುತ್ತದೆ. ರಾಜಸ್ತಾನದ ಜೈಸಲ್ಮೇರ್ ನಲ್ಲಿ ಈ ಅಭಿಯಾನದ ಮೂಲಕ ಒಂದು ವಿಶಿಷ್ಟ ದಾಖಲೆ ಸೃಷ್ಟಿಯಾಗಿದೆ – ಇಲ್ಲಿ ಮಹಿಳೆಯರ ತಂಡವೊಂದು ಒಂದು ಗಂಟೆಯಲ್ಲಿ 25 ಸಾವಿರ ಗಿಡಗಳನ್ನು ನೆಟ್ಟಿದೆ. ತಾಯಂದಿರು ತಾಯಿಯ ಹೆಸರಿನಲ್ಲಿ ಗಿಡ ನೆಟ್ಟರು ಮತ್ತು ಇತರರಿಗೆ ಕೂಡಾ ಪ್ರೇರಣೆಯಾದರು. ಇಲ್ಲಿ ಒಂದೇ ಸ್ಥಳದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಒಂದುಗೂಡಿ ಗಿಡಗಳನ್ನು ನೆಟ್ಟರು ಇದು ಕೂಡಾ ಒಂದು ದಾಖಲೆಯೇ ಆಗಿದೆ. ‘ಒಂದು ಸಸಿ ತಾಯಿಯ ಹೆಸರಿನಲ್ಲಿ’ ಅಭಿಯಾನದ ಅಡಿಯಲ್ಲಿ ಹಲವು ಸಾಮಾಜಿಕ ಸಂಸ್ಥೆಗಳು ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಗಿಡ ನೆಡುತ್ತಿವೆ. ಮರಗಳನ್ನು ಎಲ್ಲಿಯೇ ನೆಡಲಿ, ಆ ಸಂಪೂರ್ಣ ಪರಿಸರ ವ್ಯವಸ್ಥೆಯು ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಹೊಂದಬೇಕು ಎಂಬುದೇ ಅವುಗಳ ಪ್ರಯತ್ನವಾಗಿದೆ. ಅದಕ್ಕಾಗಿಯೇ ಈ ಸಂಸ್ಥೆಗಳು ಕೆಲವೆಡೆ ಔಷಧೀಯ ಗಿಡಗಳನ್ನು ನೆಟ್ಟರೆ, ಮತ್ತೆ ಕೆಲವೆಡೆ ಪಕ್ಷಿಗಳಿಗೆ ಗೂಡು ನಿರ್ಮಿಸಲು ಗಿಡಗಳನ್ನು ನೆಡುತ್ತಿವೆ. ಬಿಹಾರದಲ್ಲಿ 'ಜೀವಿಕಾ ಸ್ವಸಹಾಯ ಸಂಘದ' ಮಹಿಳೆಯರು 75 ಲಕ್ಷ ಗಿಡಗಳನ್ನು ನೆಡುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಆದಾಯ ಗಳಿಸಬಹುದಾದ ಹಣ್ಣಿನ ಮರಗಳನ್ನು ನೆಡುವುದರ ಮೇಲೆ ಈ ಮಹಿಳೆಯರ ಗಮನ ಕೇಂದ್ರೀಕೃತವಾಗಿದೆ.
ಸ್ನೇಹಿತರೇ, ಈ ಅಭಿಯಾನಕ್ಕೆ ಸೇರಿಕೊಳ್ಳುವ ಮೂಲಕ ಯಾವುದೇ ವ್ಯಕ್ತಿ ತನ್ನ ತಾಯಿಯ ಹೆಸರಿನಲ್ಲಿ ಗಿಡ ನೆಡಬಹುದು. ನಿಮ್ಮ ತಾಯಿ ನಿಮ್ಮೊಂದಿಗಿದ್ದರೆ ನೀವು ಆಕೆಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಗಿಡ ನೆಡಬಹುದು ಅಥವಾ ಆಕೆಯ ಭಾವಚಿತ್ರ ಇರಿಸಿಕೊಂಡು ಗಿಡ ನೆಟ್ಟು ಈ ಅಭಿಯಾನದ ಭಾಗವಾಗಬಹುದು. ನೀವು mygov.in ನಲ್ಲಿ ನೀವು ನೆಟ್ಟ ಗಿಡದೊಂದಿಗೆ ನಿಮ್ಮ ಸೆಲ್ಫಿಯನ್ನು ಪೋಸ್ಟ್ ಮಾಡಬಹುದು. ತಾಯಿಯ ಋಣವನ್ನು ತೀರಿಸಲು ನಮಗೆ ಎಂದಿಗೂ ಸಾಧ್ಯವಿಲ್ಲ, ಆದರೆ ಆಕೆಯ ಹೆಸರಿನಲ್ಲಿ ಗಿಡವೊಂದನ್ನು ನೆಡುವ ಮೂಲಕ ನಾವು ಅವರ ಅಸ್ತಿತ್ವವನ್ನು ಸದಾ ಜೀವಂತವಾಗಿ ಇರಿಸಬಹುದು.
ನನ್ನ ಪ್ರೀತಿಯ ದೇಶಬಾಂಧವರೇ, ನೀವೆಲ್ಲರೂ ನಿಮ್ಮ ಬಾಲ್ಯದಲ್ಲಿ ಗುಬ್ಬಚ್ಚಿಯನ್ನು ನಿಮ್ಮ ಮನೆಗಳ ತಾರಸಿಯ ಮೇಲೆ, ಮರಗಿಡಗಳ ಮೇಲೆ, ಚಿಲಿಪಿಲಿಗುಟ್ಟತ್ತಾ ಹಾರಾಡುತ್ತಿದ್ದುದನ್ನು ನೋಡಿಯೇ ಇರುತ್ತೀರಿ. ಗುಬ್ಬಚ್ಚಿಯನ್ನು ತಮಿಳು ಮತ್ತು ಮಲೆಯಾಳಂ ಭಾಷೆಯಲ್ಲಿ ಕುರುವಿ, ತೆಲುಗಿನಲ್ಲಿ ಪಿಚ್ಚುಕ ಮತ್ತು ಕನ್ನಡದಲ್ಲಿ ಗುಬ್ಬಿ ಎಂದು ಕರೆಯುತ್ತಾರೆ. ಪ್ರತಿಯೊಂದು ಭಾಷೆ, ಸಂಸ್ಕೃತಿಯಲ್ಲಿ ಗುಬ್ಬಿಯ ಕುರಿತ ಅನೇಕ ಕತೆಗಳನ್ನು ಕೇಳಿದ್ದೇವೆ. ನಮ್ಮ ಸುತ್ತಮುತ್ತ ಜೀವವೈವಿಧ್ಯತೆಯನ್ನು ಉಳಿಸುವಲ್ಲಿ ಗುಬ್ಬಿಯ ಕೊಡುಗೆ ಮಹತ್ವಪೂರ್ಣವಾಗಿರುತ್ತಿತ್ತು. ಆದರೆ ಇಂದು ನಗರಗಳಲ್ಲಿ ಈ ಗುಬ್ಬಚ್ಚಿಗಳು ಬಹಳ ವಿರಳವಾಗಿವೆ. ಹೆಚ್ಚುತ್ತಿರುವ ನಗರೀಕರಣದಿಂದಾಗಿ, ಗುಬ್ಬಿಗಳು ನಮ್ಮಿಂದ ದೂರ ಹೋಗಿಬಿಟ್ಟಿವೆ. ಇಂದಿನ ಪೀಳಿಗೆಯ ಬಹಳಷ್ಟು ಮಕ್ಕಳು ಕೇವಲ ಚಿತ್ರಗಳಲ್ಲಿ ಅಥವಾ ವಿಡಿಯೋಗಳಲ್ಲಿ ಗುಬ್ಬಿಯನ್ನು ನೋಡಿದ್ದಾರೆ. ಮಕ್ಕಳ ಜೀವನದಲ್ಲಿ ಈ ಮುದ್ದಾದ ಪಕ್ಷಿಯನ್ನು ಹಿಂದಕ್ಕೆ ತರಲು ಕೆಲವು ವಿಶಿಷ್ಟ ಪ್ರಯತ್ನಗಳು ನಡೆಯುತ್ತಿವೆ. ಚೆನ್ನೈನ ಕೂಡುಗಲ್ ಟ್ರಸ್ಟ್ ಗುಬ್ಬಿಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಶಾಲೆಯ ಮಕ್ಕಳನ್ನು ತಮ್ಮ ಅಭಿಯಾನದಲ್ಲಿ ಸೇರಿಸಿಕೊಂಡಿದೆ. ಸಂಸ್ಥೆಯ ಜನರು ಶಾಲೆಗಳಿಗೆ ಹೋಗಿ ದೈನಂದಿನ ಜೀವನದಲ್ಲಿ ಗುಬ್ಬಿಯ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಮನಗಾಣಿಸುತ್ತಾರೆ. ಈ ಸಂಸ್ಥೆ ಮಕ್ಕಳಿಗೆ ಗುಬ್ಬಿಗಳ ಗೂಡು ಕಟ್ಟುವ ವಿಧಾನದ ತರಬೇತಿ ನೀಡುತ್ತದೆ. ಇದಕ್ಕಾಗಿ ಸಂಸ್ಥೆಯ ಸದಸ್ಯರು ಮಕ್ಕಳಿಗೆ ಮರದಿಂದ ಒಂದು ಪುಟ್ಟದಾದ ಮನೆ ನಿರ್ಮಿಸುವುದನ್ನು ಕಲಿಸಿದರು. ಇದರಲ್ಲಿ ಗುಬ್ಬಚ್ಚಿ ವಾಸಕ್ಕೆ ಮತ್ತು ಆಹಾರಕ್ಕೆ ವ್ಯವಸ್ಥೆ ಮಾಡಲಾಯಿತು. ಇವು ಯಾವುದೇ ಕಟ್ಟಡದ ಹೊರಗೋಡೆಯ ಮೇಲೆ ಅಥವಾ ಮರದ ಮೇಲೆ ನೆಲೆಗೊಳಿಸಬಹುದಾದ ಮನೆಗಳಾಗಿರುತ್ತವೆ. ಮಕ್ಕಳು ಈ ಅಭಿಯಾನದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು ಮತ್ತು ಗುಬ್ಬಿಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗೂಡು ಸಿದ್ಧಪಡಿಸುವ ಕೆಲಸ ಆರಂಭಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಸಂಸ್ಥೆಯು ಗುಬ್ಬಿಗಳಿಗಾಗಿ ಇಂತಹ ಹತ್ತು ಸಾವಿರ ಗೂಡುಗಳನ್ನು ಸಿದ್ಧಪಡಿಸಿದೆ. ಕೂಡುಗಲ್ ಟ್ರಸ್ಟ್ ನ ಈ ಉಪಕ್ರಮದಿಂದಾಗಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಬ್ಬಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ನೀವು ಕೂಡಾ ನಿಮ್ಮ ಸುತ್ತಮುತ್ತಲೂ ಇಂತಹ ಪ್ರಯತ್ನಗಳನ್ನು ಕೈಗೊಂಡಲ್ಲಿ, ಖಂಡಿತವಾಗಿಯೂ ಗುಬ್ಬಚ್ಚಿಗಳು ಪುನಃ ನಮ್ಮ ಜೀವನದ ಭಾಗವಾಗುತ್ತವೆ.
ಸ್ನೇಹಿತರೆ, ಕರ್ನಾಟಕದ ಮೈಸೂರಿನಲ್ಲಿ ಒಂದು ಸಂಸ್ಥೆಯು ಮಕ್ಕಳಿಗಾಗಿ ‘ಅರ್ಲಿ ಬರ್ಡ್’ ಎಂಬ ಹೆಸರಿನ ಅಭಿಯಾನ ಆರಂಭಿಸಿದೆ. ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿಗಳ ಕುರಿತು ಅರಿವು ಮೂಡಿಸುವುದಕ್ಕಾಗಿ ವಿಶೇಷ ರೀತಿಯ ಗ್ರಂಥಾಲಯ ನಡೆಸುತ್ತದೆ. ಅಷ್ಟೇ ಅಲ್ಲದೇ, ಮಕ್ಕಳಿಗೆ ಪ್ರಕೃತಿಯ ಬಗ್ಗೆ ಜವಾಬ್ದಾರಿಯ ಭಾವನೆ ಮೂಡಿಸುವುದಕ್ಕಾಗಿ ‘Nature Education Kit’ ಸಿದ್ಧಪಡಿಸಿದೆ. ಈ ಕಿಟ್ ನಲ್ಲಿ ಮಕ್ಕಳಿಗಾಗಿ ಕತೆ ಪುಸ್ತಕ, ಆಟಗಳು, ಆಕ್ಟಿವಿಟಿ ಹಾಳೆಗಳು ಮತ್ತು ಜಿಗ್ ಸಾ ಒಗಟುಗಳು ಇರುತ್ತವೆ. ಈ ಸಂಸ್ಥೆ ನಗರದ ಮಕ್ಕಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗುತ್ತದೆ ಮತ್ತು ಆ ಮಕ್ಕಳಿಗೆ ಪಕ್ಷಿಗಳ ಕುರಿತು ತಿಳಿಸಿಹೇಳುತ್ತದೆ. ಈ ಸಂಸ್ಥೆಯ ಪ್ರಯತ್ನಗಳ ಕಾರಣದಿಂದಾಗಿ ಮಕ್ಕಳು ಪಕ್ಷಿಗಳ ಅನೇಕ ಪ್ರಭೇದಗಳನ್ನು ಗುರುತಿಸಲು ಶಕ್ತರಾಗುತ್ತಿದ್ದಾರೆ. ‘ಮನದ ಮಾತಿನ’ ಶ್ರೋತೃಗಳು ಕೂಡಾ ಇಂತಹ ಪ್ರಯತ್ನಗಳಿಂದ ಮಕ್ಕಳಲ್ಲಿ ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ನೋಡುವ, ಅರಿತುಕೊಳ್ಳುವ ವಿವಿಧ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುವಂತೆ ಮಾಡಬಹುದಾಗಿದೆ.
ನನ್ನ ಪ್ರೀತಿಯ ದೇಶಬಾಂಧವರೇ, ಸರ್ಕಾರದ ಕಚೇರಿ ಎಂದಾಕ್ಷಣ ನಿಮ್ಮ ಮನಸ್ಸಿನಲ್ಲಿ ಕಡತಗಳ ರಾಶಿಯ ಚಿತ್ರ ಕಂಡುಬರಬಹುದು. ನೀವು ಚಲನಚಿತ್ರಗಳಲ್ಲಿ ಕೂಡಾ ಇಂತಹದ್ದೇ ದೃಶ್ಯಗಳನ್ನು ನೋಡಿರುತ್ತೀರಿ. ಸರ್ಕಾರಿ ಕಚೇರಿಗಳಲ್ಲಿ ಇಂತಹ ಕಡತಗಳ ರಾಶಿಯ ಬಗ್ಗೆ ಅದೆಷ್ಟೋ ಹಾಸ್ಯ ಚಟಾಕಿಗಳು ಹುಟ್ಟಿವೆ, ಅದೆಷ್ಟೋ ಕತೆಗಳನ್ನೂ ಬರೆಯಲಾಗಿದೆ. ಹಲವಾರು ವರ್ಷಗಳ ಕಾಲ ಈ ಕಡತಗಳು ಕಚೇರಿಯಲ್ಲಿ ಧೂಳು ತುಂಬಿಕೊಂಡು ಬಿದ್ದಿರುತ್ತಿದ್ದವು, ಕೊಳಕು ತುಂಬಲು ಕಾರಣವಾಗುತ್ತಿದ್ದವು, ಇಂತಹ ದಶಕಗಳಷ್ಟು ಹಳೆಯದಾದ ಕಡತಗಳು ಮತ್ತು ಸ್ಕ್ರಾಪ್ ಗಳನ್ನು ತೊಲಗಿಸುವುದಕ್ಕಾಗಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಸರ್ಕಾರದ ಇಲಾಖೆಗಳಲ್ಲಿ ಈ ಅಭಿಯಾನದ ಅದ್ಭುತ ಪರಿಣಾಮ ಕಂಡುಬಂದಿರುವುದು ತಿಳಿದು ನಿಮಗೆ ಸಂತೋಷವಾಗಬಹುದು. ಸ್ವಚ್ಛಗೊಳಿಸಿದ ಕಾರಣದಿಂದಾಗಿ ಕಚೇರಿಗಳಲ್ಲಿ ಸಾಕಷ್ಟು ಸ್ಥಳಾವಕಾಶವಾಗಿದೆ. ಇದರಿಂದಾಗಿ ಕಚೇರಿಗಳಲ್ಲಿ ಕೆಲಸ ಮಾಡುವವರಲ್ಲಿ ಒಂದು ಮಾಲೀಕತ್ವದ ಭಾವನೆ ಕೂಡಾ ಮೂಡಿದೆ. ತಾವು ಕೆಲಸ ಮಾಡುವ ಸ್ಥಳವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಅರಿವು ಅವರಲ್ಲಿ ಮೂಡಿದೆ.
ಸ್ನೇಹಿತರೆ, ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂದು ಹಿರಿಯರು ಹೇಳುವುದನ್ನು ನೀವು ಆಗಾಗ್ಗೆ ಕೇಳಿಸಿಕೊಂಡಿರಬಹುದು. ನಮ್ಮಲ್ಲಿ ಕಸದಿಂದ ರಸ ಎಂಬ ವಿಷಯ ಬಹಳ ಹಳೆಯದ್ದು. ದೇಶದ ಅನೇಕ ಭಾಗಗಳಲ್ಲಿ ಯುವಜನತೆ ಬೇಡವೆಂದು ಬಿಸಾಡಿದ ವಸ್ತುಗಳನ್ನು ಉಪಯೋಗಿಸಿ ಕಸದಿಂದ ರಸ ಮಾಡುತ್ತಿದ್ದಾರೆ. ವಿವಿಧ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇದರಿಂದ ಅವರು ಹಣ ಗಳಿಸುತ್ತಿದ್ದಾರೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದ್ದಾರೆ. ಈ ಯುವಜನತೆ ತಮ್ಮ ಪ್ರಯತ್ನಗಳಿಂದ ಸುಸ್ಥಿರ ಜೀವನಶೈಲಿಗೆ ಕೂಡಾ ಉತ್ತೇಜನ ನೀಡುತ್ತಿದ್ದಾರೆ. ಮುಂಬೈನ ಇಬ್ಬರು ಹೆಣ್ಣುಮಕ್ಕಳ ಇಂತಹ ಪ್ರಯತ್ನ, ನಿಜಕ್ಕೂ ಬಹಳ ಪ್ರೇರಣಾದಾಯಕವಾಗಿದೆ. ಅಕ್ಷರಾ ಮತ್ತು ಪ್ರಕೃತಿ ಎಂಬ ಹೆಸರಿನ ಈ ಇಬ್ಬರು ಹೆಣ್ಣುಮಕ್ಕಳು, ಕತ್ತರಿಸಿ ಎಸೆದ ಬಟ್ಟೆಯ ಚೂರುಗಳಿಂದ ಫ್ಯಾಶನ್ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಬಟ್ಟೆಗಳನ್ನು ಹೊಲಿದು ಸಿದ್ಧಪಡಿಸುವಾಗ ಕತ್ತರಿಸಿದ ಕೆಲವು ಚೂರುಗಳನ್ನು ಎಸೆಯಲಾಗುತ್ತದೆಂದು ನಿಮಗೆ ತಿಳಿದಿದೆ. ಅಕ್ಷರಾ ಮತ್ತು ಪ್ರಕೃತಿಯ ತಂಡ ಅದೇ ಕತ್ತರಿಸಿ ಎಸೆಯಲಾದ ಬಟ್ಟೆಯ ತುಂಡುಗಳನ್ನು Fashion ಉತ್ಪನ್ನವಾಗಿ ಪರಿವರ್ತಿಸುತ್ತದೆ. ಈ ಬಟ್ಟೆಯ ತುಂಡುಗಳಿಂದ ತಯಾರಿಸಲಾದ ಟೋಪಿಗಳು, ಚೀಲಗಳು ಆಗಿಂದಾಗಲೇ ಮಾರಾಟವೂ ಆಗುತ್ತಿವೆ.
ಸ್ನೇಹಿತರೇ, ಸ್ವಚ್ಛತೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೂಡಾ ಉತ್ತಮ ಉಪಕ್ರಮ ನಡೆಯುತ್ತಿದೆ. ಇಲ್ಲಿ ಕೆಲವರು ಪ್ರತಿದಿನ ಬೆಳಿಗ್ಗೆ ಮುಂಜಾನೆಯ ನಡಿಗೆಗಾಗಿ ಹೋಗುತ್ತಾರೆ ಮತ್ತು ಗಂಗೆಯ ತಟದಲ್ಲಿ ಹರಡಿರುವ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕುತ್ತಾರೆ. ಈ ಗುಂಪಿಗೆ ‘Kanpur Ploggers Group’ ಎಂದು ಹೆಸರಿಸಲಾಗಿದೆ. ಈ ಅಭಿಯಾನವನ್ನು ಕೆಲವು ಸ್ನೇಹಿತರು ಒಂದುಗೂಡಿ ಆರಂಭಿಸಿದರು. ಕ್ರಮೇಣ ಇದು ಸಾರ್ವಜನಿಕ ಸಹಭಾಗಿತ್ವದ ದೊಡ್ಡ ಅಭಿಯಾನವಾಗಿಬಿಟ್ಟಿತು. ನಗರದ ಅನೇಕರು ಇದರೊಂದಿಗೆ ಕೈಜೋಡಿಸಿದರು. ಇದರ ಸದಸ್ಯರು ಈಗ ಅಂಗಡಿಗಳು ಮತ್ತು ಮನೆಗಳಿಂದ ಕೂಡಾ ತ್ಯಾಜ್ಯ ಸಂಗ್ರಹಿಸಲು ಆರಂಭಿಸಿದ್ದಾರೆ. ಈ ತ್ಯಾಜ್ಯ ವಸ್ತುಗಳಿಂದ ರೀಸೈಕಲ್ ಘಟಕದಲ್ಲಿ ಟ್ರೀ ಗಾರ್ಡ್ ತಯಾರಿಸಲಾಗುತ್ತದೆ ಅಂದರೆ ಈ ಗುಂಪಿನ ಜನರು ತ್ಯಾಜ್ಯದಿಂದ ತಯಾರಿಸಲಾದ ಟ್ರೀ ಗಾರ್ಡ್ ನಿಂದ ಗಿಡಗಳನ್ನು ಕೂಡಾ ರಕ್ಷಿಸುತ್ತಾರೆ.
ಸ್ನೇಹಿತರೆ, ಸಣ್ಣ ಸಣ್ಣ ಪ್ರಯತ್ನಗಳಿಂದ ಕೂಡಾ ಎಷ್ಟು ದೊಡ್ಡ ಯಶಸ್ಸು ದೊರೆಯುತ್ತದೆ ಎನ್ನುವುದಕ್ಕೆ ಅಸ್ಸಾಂನ ಇತಿಶಾ ಕೂಡಾ ಒಂದು ಉದಾಹರಣೆ. ಇತಿಶಾ ಅವರ ಶಿಕ್ಷಣ ದೆಹಲಿ ಮತ್ತು ಪುಣೆಯಲ್ಲಿ ನಡೆಯಿತು. ಇತಿಶಾ ಕಾರ್ಪೋರೇಟ್ ಜಗತ್ತಿನ ಥಳುಕು ಬಿಟ್ಟು ಅರುಣಾಚಲದ ಸಾಂಗತಿ ಕಣಿವೆಯನ್ನು ಸ್ವಚ್ಛಗೊಳಿಸುವಲ್ಲಿ ತೊಡಗಿಕೊಂಡಿದ್ದಾರೆ. ಪ್ರವಾಸಿಗರಿಂದಾಗಿ ಅಲ್ಲಿ ಬಹಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಒಂದೊಮ್ಮೆ ಸ್ವಚ್ಛವಾಗಿದ್ದ ಅಲ್ಲಿನ ನದಿಯು ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಕಲುಷಿತವಾಗಿಬಿಟ್ಟಿತ್ತು. ಇದನ್ನು ಸ್ವಚ್ಛಗೊಳಿಸುವುದಕ್ಕಾಗಿ ಇತಿಶಾ ಅವರು ಸ್ಥಳೀಯರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ. ಅವರ ಗುಂಪಿನ ಸದಸ್ಯರು ಅಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಜಾಗರೂಕತೆ ಮೂಡಿಸುತ್ತಾರೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕಾಗಿ ಸಂಪೂರ್ಣ ಕಣಿವೆಯಲ್ಲಿ ಬಿದಿರಿನಿಂದ ತಯಾರಿಸಿದ ಕಸದ ಬುಟ್ಟಿಗಳನ್ನು ಇರಿಸುತ್ತಾರೆ.
ಸ್ನೇಹಿತರೇ, ಈ ಪ್ರಯತ್ನಗಳಿಂದ ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತದೆ. ಇದು ನಿರಂತರವಾಗಿ ಸಾಗುತ್ತಲೇ ಇರುವ ಅಭಿಯಾನವಾಗಿದೆ. ನಿಮ್ಮ ಸುತ್ತಮುತ್ತ ಕೂಡಾ ಇಂತಹ ಪ್ರಯತ್ನಗಳು ಖಂಡಿತವಾಗಿಯೂ ನಡೆಯುತ್ತಿರಬಹುದು. ಅಂತಹ ಪ್ರಯತ್ನಗಳ ಬಗ್ಗೆ ನೀವು ನನಗೆ ಖಂಡಿತವಾಗಿಯೂ ಬರೆದು ತಿಳಿಸುತ್ತಿರಿ.
ಸ್ನೇಹಿತರೇ, ಮನದ ಮಾತಿನ ಈ ಸಂಚಿಕೆಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ. ನನಗೆ ಇಡೀ ತಿಂಗಳು ನಿಮ್ಮ ಪ್ರತಿಕ್ರಿಯೆಗಳ, ಕಾಗದಗಳ ಮತ್ತು ಸಲಹೆ ಸೂಚನೆಗಳ ನಿರೀಕ್ಷೆ ಇದ್ದೇ ಇರುತ್ತದೆ. ಪ್ರತಿ ತಿಂಗಳು ಬರುವ ನಿಮ್ಮ ಸಂದೇಶಗಳು ನನಗೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡುವ ಪ್ರೇರಣೆ ನೀಡುತ್ತವೆ. ಮನ್ ಕಿ ಬಾತ್ ನ ಮತ್ತೊಂದು ಸಂಚಿಕೆಯಲ್ಲಿ ದೇಶ ಮತ್ತು ದೇಶವಾಸಿಗಳ ಹೊಸ ಯಶೋಗಾಥೆಗಳೊಂದಿಗೆ, ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ. ಅಲ್ಲಿಯವರೆಗೆ ಎಲ್ಲಾ ದೇಶವಾಸಿಗಳಿಗೆ ನನ್ನ ಅನಂತಾನಂತ ಶುಭ ಹಾರೈಕೆಗಳು. ಅನೇಕಾನೇಕ ಧನ್ಯವಾದ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ' ಮನದ ಮಾತಿಗೆ' ಎಲ್ಲರಿಗೂ ಸ್ವಾಗತ. ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು ಯಾವುವು ಎಂದು ನನ್ನನ್ನು ನೀವು ಕೇಳಿದರೆ, ಬಹಳಷ್ಟು ಘಟನೆಗಳು ನೆನಪಿಗೆ ಬರುತ್ತವೆ, ಅದರಲ್ಲೂ ಒಂದು ವಿಶೇಷವಾದ ಕ್ಷಣವಿದೆ, ಅದೇ ಕಳೆದ ವರ್ಷ ನವೆಂಬರ್ 15 ರಂದು ನಾನು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಜಾರ್ಖಂಡ್ನ ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಹೋಗಿದ್ದು. ನನ್ನ ಮೇಲೆ ಈ ಪ್ರವಾಸದ ಪ್ರಭಾವ ಆಗಾಧವಾಗಿತ್ತು. ಈ ಪುಣ್ಯಭೂಮಿಯ ಮಣ್ಣಿನ ಆಶೀರ್ವಾದ ಪಡೆಯುವ ಭಾಗ್ಯವನ್ನು ಪಡೆದ ದೇಶದ ಮೊದಲ ಪ್ರಧಾನಿ ನಾನಾಗಿದ್ದೇನೆ. ಆ ಕ್ಷಣದಲ್ಲಿ ನನಗೆ ಸ್ವಾತಂತ್ರ್ಯ ಹೋರಾಟದ ಶಕ್ತಿಯ ಅನುಭವವಾದುದಲ್ಲದೆ, ಈ ಭೂಮಿಯ ಶಕ್ತಿಯೊಂದಿಗೆ ಬೆರೆಯುವ ಅವಕಾಶವೂ ಲಭಿಸಿತು. ಒಂದು ನಿರ್ಧಾರವನ್ನು ಪೂರೈಸುವ ಧೈರ್ಯ ಹೇಗೆ ದೇಶದ ಕೋಟ್ಯಾಂತರ ಜನರ ಭವಿಷ್ಯವನ್ನು ಬದಲಾಯಿಸುತ್ತದೆ ಎಂಬುದರ ಅನುಭವವೂ ನನಗಾಯಿತು.
ಸ್ನೇಹಿತರೇ, ಭಾರತದಲ್ಲಿ ಯುಗ ಯುಗದಲ್ಲೂ ಕೆಲವು ಸವಾಲುಗಳು ಎದುರಾಗಿವೆ ಮತ್ತು ಪ್ರತಿ ಯುಗದಲ್ಲೂ ಈ ಸವಾಲುಗಳನ್ನು ಎದುರಿಸಿದಂತಹ ಇಂತಹ ಅಸಾಮಾನ್ಯ ಭಾರತೀಯರು ಜನಿಸಿದ್ದಾರೆ. ಇಂದಿನ 'ಮನದ ಮಾತು' ನಲ್ಲಿ ಧೈರ್ಯ ಮತ್ತು ದೂರದೃಷ್ಟಿ ಹೊಂದಿರುವ ಇಬ್ಬರು ಮಹಾನ್ ವೀರರ ಬಗ್ಗೆ ಚರ್ಚಿಸುತ್ತೇನೆ. ಅವರ 150ನೇ ಜನ್ಮ ಜಯಂತಿಯನ್ನು ಆಚರಿಸಲು ದೇಶ ನಿರ್ಧರಿಸಿದೆ. ಅಕ್ಟೋಬರ್ 31 ರಿಂದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ಜಯಂತಿಯ ವರ್ಷ ಪ್ರಾರಂಭವಾಗಲಿದೆ. ಇದರ ನಂತರ, ನವೆಂಬರ್ 15 ರಿಂದ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ಜಯಂತಿಯ ವರ್ಷ ಪ್ರಾರಂಭವಾಗಲಿದೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳು ವಿಭಿನ್ನ ಸವಾಲುಗಳನ್ನು ಎದುರಿಸಿದ್ದಾರೆ, ಆದರೆ ಇಬ್ಬರೂ ‘ದೇಶದ ಏಕತೆ’ಯ ಒಂದೇ ದೃಷ್ಟಿಕೋನವನ್ನು ಹೊಂದಿದ್ದರು.
ಸ್ನೇಹಿತರೇ, ಕಳೆದ ವರ್ಷಗಳಲ್ಲಿ, ದೇಶವು ಹೊಸ ಶಕ್ತಿಯೊಂದಿಗೆ ಇಂತಹ ಮಹಾನ್ ವೀರರ ಮತ್ತು ನಾಯಕಿಯರ ಜಯಂತಿಯನ್ನು ಆಚರಿಸುವ ಮೂಲಕ ಹೊಸ ಪೀಳಿಗೆಗೆ ಹೊಸ ಸ್ಫೂರ್ತಿಯನ್ನು ನೀಡಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯನ್ನು ಆಚರಿಸಿದಾಗ ಎಷ್ಟು ವಿಶೇಷವಾದ ಘಟನೆ ನಡೆದಿದ್ದವು ಎಂಬುದು ನಿಮಗೆ ನೆನಪಿರಬಹುದು. ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಿಂದ ಆಫ್ರಿಕಾದ ಸಣ್ಣ ಪುಟ್ಟ ಗ್ರಾಮಗಳವರೆಗೆ, ಪ್ರಪಂಚದಾದ್ಯಂತದ ಜನರು ಭಾರತದ ಸತ್ಯ ಮತ್ತು ಅಹಿಂಸೆಯ ಸಂದೇಶದ ಸಾರವನ್ನು ಅರಿತರು, ಅದನ್ನು ಮತ್ತೊಮ್ಮೆ ತಿಳಿದುಕೊಂಡರು ಮತ್ತು ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡರು. ಕಿರಿಯರಿಂದ ಹಿರಿಯರವರೆಗೆ, ಭಾರತೀಯರಿಂದ ಹಿಡಿದು ವಿದೇಶಿಯರವರೆಗೆ ಎಲ್ಲರೂ ಗಾಂಧೀಜಿಯವರ ಬೋಧನೆಗಳನ್ನು ಈ ಹೊಸ ಸಂದರ್ಭದಲ್ಲಿ ಅರ್ಥಮಾಡಿಕೊಂಡರು, ಹೊಸ ಜಾಗತಿಕ ಪರಿಸ್ಥಿತಿಗಳಲ್ಲಿ ಅವುಗಳನ್ನು ತಿಳಿದುಕೊಂಡರು. ನಾವು ಸ್ವಾಮಿ ವಿವೇಕಾನಂದರ 150ನೇ ಜನ್ಮ ಜಯಂತಿಯನ್ನು ಆಚರಿಸಿದಾಗ, ದೇಶದ ಯುವಕರು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಹೊಸ ವ್ಯಾಖ್ಯಾನದ ರೂಪದಲ್ಲಿ ಅರ್ಥಮಾಡಿಕೊಂಡರು. ನಮ್ಮ ಮಹಾನ್ ಪುರುಷರು ಭೂತಕಾಲದಲ್ಲಿ ಕಳೆದುಹೋಗಿಲ್ಲ, ಬದಲಿಗೆ ಅವರ ಜೀವನವು ನಮ್ಮ ವರ್ತಮಾನವನ್ನು ಮುನ್ನಡೆಸುವ ಭವಿಷ್ಯದ ದಾರಿಯನ್ನು ತೋರಿಸುತ್ತದೆ ಎಂದು ಈ ಯೋಜನೆಗಳು ನಮಗೆ ಅರಿವು ಮೂಡಿಸಿದವು.
ಸ್ನೇಹಿತರೇ, ಈ ಮಹಾನ್ ವ್ಯಕ್ತಿತ್ವಗಳ 150 ನೇ ಜನ್ಮ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲು ಸರ್ಕಾರ ನಿರ್ಧರಿಸಿದ್ದರೂ, ನಿಮ್ಮ ಪಾಲ್ಗೊಳ್ಳುವಿಕೆ ಮಾತ್ರ ಈ ಅಭಿಯಾನಕ್ಕೆ ಜೀವ ತುಂಬುತ್ತದೆ ಮತ್ತು ಅದನ್ನು ಯಶಸ್ವಿಗೊಳಿಸುತ್ತದೆ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಸಂಬಂಧಿಸಿದ ನಿಮ್ಮ ವಿಚಾರಗಳು ಮತ್ತು ಕಾರ್ಯಗಳನ್ನು #Sardar150 ಯೊಂದಿಗೆ ಹಂಚಿಕೊಳ್ಳಿ ಮತ್ತು ಧರ್ತಿ-ಆಬಾ ಬಿರ್ಸಾ ಮುಂಡಾ ಅವರ ಪ್ರೇರಣಾದಾಯಕ ವಿಚಾರಗಳನ್ನು #BirsaMunda150 ರೊಂದಿಗೆ ಜಗತ್ತಿಗೆ ಪರಿಚಾಯಿಸಿ. ಬನ್ನಿ ನಾವೆಲ್ಲರೂ ಒಗ್ಗೂಡಿ ಈ ಹಬ್ಬವನ್ನು ಭಾರತದ ವಿವಿಧತೆಯಲ್ಲಿ ಏಕತೆಯ ಆಚರಣೆಯಾಗಿಸೋಣ, ಇದನ್ನು ಪರಂಪರೆಯಿಂದ ಅಭಿವೃದ್ಧಿಯ ಆಚರಣೆಯಾಗಿ ಬದಲಾಯಿಸೋಣ.
ನನ್ನ ಪ್ರಿಯ ದೇಶವಾಸಿಗಳೇ, "ಛೋಟಾ ಭೀಮ್" ಟಿವಿಯಲ್ಲಿ ಪ್ರಸಾರವಾಗಲು ಆರಂಭವಾದ ಆ ದಿನಗಳನ್ನು ನೀವು ನೆನಪಿಸಿಕೊಳ್ಳಬೇಕು. ‘ಛೋಟಾ ಭೀಮ್’ ಬಗ್ಗೆ ಮಕ್ಕಳಲ್ಲಿ ಅದೆಷ್ಟು ಉತ್ಸುಕತೆಯಿತ್ತು ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ. ಇಂದು 'ಢೋಲಕ್ಪುರ್ ಕಾ ಢೋಲ್' ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳ ಮಕ್ಕಳನ್ನು ಕೂಡ ಬಹಳ ಆಕರ್ಷಿಸುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದೇ ರೀತಿ ನಮ್ಮ ಇತರ ಅನಿಮೇಟೆಡ್ ಧಾರಾವಾಹಿಗಳಾದ ‘ಕೃಷ್ಣ’, ‘ಹನುಮಾನ್’, ‘ಮೋಟು-ಪತಲೂ’ ಗಳನ್ನೂ ಇಷ್ಟಪಡುವ ಅಭಿಮಾನಿಗಳು ಜಗತ್ತಿನಾದ್ಯಂತ ಇದ್ದಾರೆ. ಭಾರತೀಯ ಅನಿಮೇಷನ್ ಪಾತ್ರಗಳು: ಇಲ್ಲಿನ ಅನಿಮೇಷನ್ ಚಲನಚಿತ್ರಗಳು ಅವುಗಳ ವಿಷಯ ಮತ್ತು ಸೃಜನಶೀಲತೆಯಿಂದಾಗಿ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆಯುತ್ತಿವೆ. ಸ್ಮಾರ್ಟ್ಫೋನ್ನಿಂದ ಸಿನಿಮಾ ಪರದೆಯವರೆಗೆ, ಗೇಮಿಂಗ್ ಕನ್ಸೋಲ್ನಿಂದ ವರ್ಚುವಲ್ ರಿಯಾಲಿಟಿವರೆಗೆ, ಅನಿಮೇಷನ್ ಎಲ್ಲೆಡೆ ಇರುವುದನ್ನು ನೀವು ನೋಡಿರಬಹುದು. ಅನಿಮೇಷನ್ ಜಗತ್ತಿನಲ್ಲಿ ಭಾರತ ಹೊಸ ಕ್ರಾಂತಿಯನ್ನು ನಿರ್ಮಿಸುವತ್ತ ದಾಪುಗಾಲಿಟ್ಟಿದೆ. ಭಾರತದ ಗೇಮಿಂಗ್ ಸ್ಪೇಸ್ ಕೂಡ ವೇಗವಾಗಿ ವಿಸ್ತರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟಗಳು ಪ್ರಪಂಚದಾದ್ಯಂತ ಜನಪ್ರಿಯಗೊಳ್ಳುತ್ತಿವೆ. ಕೆಲವು ತಿಂಗಳುಗಳ ಹಿಂದೆ, ನಾನು ಭಾರತದ ಪ್ರಮುಖ ಗೇಮರ್ ಗಳನ್ನು ಭೇಟಿಯಾಗಿದ್ದೆ. ಆಗ ನನಗೆ ಭಾರತೀಯ ಗೇಮ್ ಗಳ ಅದ್ಭುತ ಸೃಜನಶೀಲತೆ ಮತ್ತು ಗುಣಮಟ್ಟದ ಬಗ್ಗೆ ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶ ಲಭಿಸಿತು. ವಾಸ್ತವದಲ್ಲಿ, ದೇಶದಲ್ಲಿ ಸೃಜನಶೀಲ ಶಕ್ತಿಯ ಅಲೆ ಎದ್ದಿದೆ. ಅನಿಮೇಷನ್ ಜಗತ್ತಿನಲ್ಲಿ, ‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಡ್ ಬೈ ಇಂಡಿಯನ್ಸ್’ ಪ್ರಚಲಿತದಲ್ಲಿವೆ. ಇಂದು ಭಾರತೀಯ ಪ್ರತಿಭೆಗಳು ವಿದೇಶಿ ನಿರ್ಮಾಣಗಳ ಪ್ರಮುಖ ಭಾಗವಾಗುತ್ತಿವೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಈಗಿನ ಸ್ಪೈಡರ್ ಮ್ಯಾನ್ ಆಗಿರಲಿ ಅಥವಾ ಟ್ರಾನ್ಸ್ಫಾರ್ಮರ್ಸ್ ಆಗಿರಲಿ, ಈ ಎರಡೂ ಸಿನಿಮಾಗಳಲ್ಲಿ ಹರಿನಾರಾಯಣ ರಾಜೀವ್ ಅವರ ಕೊಡುಗೆಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಭಾರತದ ಅನಿಮೇಷನ್ ಸ್ಟುಡಿಯೋಗಳು ಪ್ರಪಂಚದ ಪ್ರಸಿದ್ಧ ನಿರ್ಮಾಣ ಕಂಪನಿಗಳಾದ ಡಿಸ್ನಿ ಮತ್ತು ವಾರ್ನರ್ ಬ್ರದರ್ಸ್ನೊಂದಿಗೆ ಕೆಲಸ ಮಾಡುತ್ತಿವೆ.
ಸ್ನೇಹಿತರೇ, ಇಂದು ನಮ್ಮ ಯುವಜನತೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬೀಸುವ ಶುದ್ಧ ಭಾರತೀಯ ಮೂಲದ ವಿಷಯವಸ್ತುಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಗಳನ್ನು ಪ್ರಪಂಚದಾದ್ಯಂತ ವೀಕ್ಷಿಸಲಾಗುತ್ತಿದೆ. ಅನಿಮೇಷನ್ ಕ್ಷೇತ್ರವು ಇಂದು ಉದ್ಯಮದ ರೂಪವನ್ನು ಪಡೆದುಕೊಂಡಿದ್ದು, ಇತರ ಉದ್ಯಮಗಳಿಗೂ ಪುಷ್ಟಿ ನೀಡುತ್ತಿದೆ. ವಿ ಆರ್ (ವರ್ಚುವಲ್) ಪ್ರವಾಸೋದ್ಯಮವು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ನೀವು ವರ್ಚುವಲ್ ಪ್ರವಾಸದ ಮೂಲಕ ಅಜಂತಾ ಗುಹೆಗಳನ್ನು ನೋಡಬಹುದು, ಕೋನಾರ್ಕ್ ದೇವಾಲಯದ ಕಾರಿಡಾರ್ಗಳ ಮೂಲಕ ಅಡ್ಡಾಡಬಹುದು ಅಥವಾ ವಾರಣಾಸಿಯ ಘಾಟ್ಗಳ ಆನಂದವನ್ನು ಅನುಭವಿಸಬಹುದು. ಈ ಎಲ್ಲಾ ವಿ ಆರ್ ಅನಿಮೇಷನ್ಗಳನ್ನು ಭಾರತದ ಅನಿಮೇಟರ್ ಗಳು ಸಿದ್ಧಪಡಿಸಿದ್ದಾರೆ. ವಿ ಆರ್ ಮೂಲಕ ಈ ಸ್ಥಳಗಳನ್ನು ನೋಡಿದ ನಂತರ, ಅನೇಕ ಜನರು ಈ ಪ್ರವಾಸಿ ಸ್ಥಳಗಳಿಗೆ ವಾಸ್ತವ ಭೇಟಿ ನೀಡಲು ಬಯಸುತ್ತಾರೆ, ಅಂದರೆ ಪ್ರವಾಸಿ ತಾಣದ ವರ್ಚುವಲ್ ಪ್ರವಾಸವು ಜನರ ಮನಸ್ಸಿನಲ್ಲಿ ಕುತೂಹಲವನ್ನು ಮೂಡಿಸುವ ಮಾಧ್ಯಮವಾಗಿದೆ. ಇಂದು, ಈ ವಲಯದಲ್ಲಿ, ಆನಿಮೇಟರ್ಗಳ ಜೊತೆಗೆ ಕಥೆ ಹೇಳುವವರು, ಬರಹಗಾರರು, ಹಿನ್ನೆಲೆ ಧ್ವನಿ ತಜ್ಞರು, ಸಂಗೀತಗಾರರು, ಗೇಮ್ ಡೆವಲಪರ್ಗಳು, ವಿ ಆರ್ ಮತ್ತು ಎ ಆರ್ ತಜ್ಞರ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಆದ್ದರಿಂದ, ನಾನು ಭಾರತದ ಯುವಕರಿಗೆ ಹೇಳುವುದೇನೆಂದರೆ - ನಿಮ್ಮ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳಿ. ಯಾರಿಗೆ ಗೊತ್ತು, ವಿಶ್ವದ ಮುಂದಿನ ಸೂಪರ್ ಹಿಟ್ ಅನಿಮೇಷನ್ ನಿಮ್ಮ ಕಂಪ್ಯೂಟರ್ನಿಂದ ಹೊರಬರಬಹುದು! ಮುಂದಿನ ವೈರಲ್ ಗೇಮ್ ನಿಮ್ಮದೇ ಸೃಷ್ಟಿಯಾಗಿರಬಹುದು! ಶೈಕ್ಷಣಿಕ ಅನಿಮೇಷನ್ಗಳಲ್ಲಿ ನಿಮ್ಮ ನಾವೀನ್ಯತೆ ಉತ್ತಮ ಯಶಸ್ಸನ್ನು ಸಾಧಿಸಬಹುದು. ಇದೇ ಅಕ್ಟೋಬರ್ 28 ರಂದು ಅಂದರೆ ನಾಳೆ 'ವಿಶ್ವ ಅನಿಮೇಷನ್ ದಿನ'ವನ್ನು ಸಹ ಆಚರಿಸಲಾಗುತ್ತದೆ. ಬನ್ನಿ, ಭಾರತವನ್ನು ಜಾಗತಿಕ ಅನಿಮೇಷನ್ ಪವರ್ ಹೌಸ್ ಮಾಡಲು ಸಂಕಲ್ಪಗೈಯೋಣ .
ನನ್ನ ಪ್ರಿಯ ದೇಶವಾಸಿಗಳೇ, ಸ್ವಾಮಿ ವಿವೇಕಾನಂದರು ಒಂದೊಮ್ಮೆ ಯಶಸ್ಸಿನ ಮಂತ್ರವನ್ನು ನೀಡಿದ್ದರು, ಅವರ ಮಂತ್ರ ಹೀಗಿತ್ತು - 'ಒಂದು ವಿಚಾರವನ್ನು ಕೈಗೆತ್ತಿಕೊಳ್ಳಿ, ಅದನ್ನೇ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಯೋಚಿಸಿ, ಅದರ ಬಗ್ಗೆ ಕನಸು ಕಾಣಿರಿ. ಅದನ್ನೇ ಜೀವಿಸಲಾರಂಭಿಸಿ.” ಇಂದು, ಸ್ವಾವಲಂಬಿ ಭಾರತ ಅದೇ ಯಶಸ್ಸಿನ ಮಂತ್ರದ ಮೇಲೆಯೇ ಮುಂದೆ ಸಾಗಿದೆ. ಈ ಅಭಿಯಾನವು ನಮ್ಮ ಸಾಮೂಹಿಕ ಪ್ರಜ್ಞೆಯ ಭಾಗವಾಗಿದೆ. ಪ್ರತಿ ಹಂತದಲ್ಲೂ ನಿರಂತರವಾಗಿ ಸ್ಫೂರ್ತಿಯ ಸೆಲೆಯಾಗಿದೆ. ಸ್ವಾವಲಂಬನೆ ನಮ್ಮ policy ಮಾತ್ರವಲ್ಲ, ನಮ್ಮ passion ಕೂಡಾ ಆಗಿದೆ. ಬಹಳ ವರ್ಷಗಳೇನು ಆಗಿಲ್ಲ, ಕೇವಲ 10 ವರ್ಷಗಳ ಹಿಂದಿನ ಮಾತು. ಭಾರತದಲ್ಲಿ ಯಾವುದೋ ಸಂಕೀರ್ಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಯಾರಾದರೂ ಹೇಳಿದರೆ, ಅನೇಕರು ಅದನ್ನು ನಂಬುತ್ತಿರಲಿಲ್ಲ, ಅನೇಕರು ಅಪಹಾಸ್ಯ ಮಾಡುತ್ತಿದ್ದರು - ಆದರೆ ಇಂದು ಅದೇ ಜನರು ದೇಶದ ಯಶಸ್ಸನ್ನು ನೋಡಿದ ನಂತರ ದಿಗ್ಭ್ರಮೆಗೊಂಡಿದ್ದಾರೆ. ಭಾರತ ಸ್ವಾವಲಂಬಿಯಾಗುತ್ತಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದೆ. ಒಂದು ಕಾಲದಲ್ಲಿ ಮೊಬೈಲ್ ಫೋನ್ಗಳ ಆಮದುದಾರರಾಗಿದ್ದ ಭಾರತ ಇಂದು ವಿಶ್ವದ ಎರಡನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ರಕ್ಷಣಾ ಸಾಧನಗಳನ್ನು ಖರೀದಿಸುವ ದೇಶವಾಗಿದ್ದ ಭಾರತ ಇಂದು 85 ದೇಶಗಳಿಗೆ ರಫ್ತು ಮಾಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ, ಇಂದು ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರವಾಗಿದೆ. ನಾನು ಅತ್ಯಂತ ಇಷ್ಟಪಡುವ ಒಂದು ವಿಷಯವೆಂದರೆ ಈ ಸ್ವಾವಲಂಬನೆಯ ಅಭಿಯಾನವು ಕೇವಲ ಸರ್ಕಾರಿ ಅಭಿಯಾನವಾಗಿ ಉಳಿದಿಲ್ಲ, ಈಗ ಸ್ವಾವಲಂಬಿ ಭಾರತ ಅಭಿಯಾನವು ಸಾಮೂಹಿಕ ಅಭಿಯಾನವಾಗುತ್ತಿದೆ - ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಗೈಯುತ್ತಿದೆ. ಉದಾಹರಣೆಗೆ, ಈ ತಿಂಗಳು ನಾವು ಲಡಾಖ್ನ ಹಾನ್ಲೆಯಲ್ಲಿ ಏಷ್ಯಾದ ಅತಿದೊಡ್ಡ 'ಇಮೇಜಿಂಗ್ ಟೆಲಿಸ್ಕೋಪ್ MACE' ಅನ್ನು ಸಹ ಉದ್ಘಾಟಿಸಿದ್ದೇವೆ. ಇದು 4300 ಮೀಟರ್ ಎತ್ತರದಲ್ಲಿದೆ. ಇದರ ವಿಶೇಷತೆ ಏನೆಂದು ತಿಳಿಯೋಣ! ಇದು ‘ಮೇಡ್ ಇನ್ ಇಂಡಿಯಾ’ ಆಗಿದೆ. ಮೈನಸ್ 30 ಡಿಗ್ರಿಯಷ್ಟು ಚಳಿಯಿರುವ ಸ್ಥಳದಲ್ಲಿ, ಆಮ್ಲಜನಕದ ಕೊರತೆಯಿರುವ ಸ್ಥಳದಲ್ಲಿ, ನಮ್ಮ ವಿಜ್ಞಾನಿಗಳು ಮತ್ತು ಸ್ಥಳೀಯ ಉದ್ಯಮಗಳು ಏಷ್ಯಾದ ಯಾವುದೇ ದೇಶ ಮಾಡದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹ್ಯಾನ್ಲಿಯ ದೂರದರ್ಶಕವು ದೂರದ ಜಗತ್ತನ್ನು ನೋಡುತ್ತಿರಬಹುದು, ಆದರೆ ಅದು ನಮಗೆ ಇನ್ನೂ ಒಂದು ವಿಷಯ ಅಂದರೆ ‘ಸ್ವಾವಲಂಬಿ ಭಾರತದ ಸಾಮರ್ಥ್ಯವನ್ನು’ ತೋರಿಸುತ್ತಿದೆ,
ಸ್ನೇಹಿತರೇ, ನೀವು ಕೂಡ ಒಂದು ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಸ್ವಾವಲಂಬಿಯಾಗುತ್ತಿರುವ ಭಾರತದ ಅಂತಹ ಪ್ರಯತ್ನಗಳ ಉದಾಹರಣೆಗಳನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ. ನಿಮ್ಮ ನೆರೆಹೊರೆಯಲ್ಲಿ ನೀವು ಯಾವ ಹೊಸ ಆವಿಷ್ಕಾರವನ್ನು ನೋಡಿದ್ದೀರಿ, ಯಾವ ಸ್ಥಳೀಯ ಸ್ಟಾರ್ಟ್ ಅಪ್ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದೆ, ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ #AatmanirbharInnovation ಜೊತೆಗೆ ಬರೆಯಿರಿ ಮತ್ತು ಸ್ವಾವಲಂಬಿ ಭಾರತವನ್ನು ಉತ್ಸವವನ್ನು ಆಚರಿಸಿ. ಈ ಹಬ್ಬದ ಋತುವಿನಲ್ಲಿ, ನಾವೆಲ್ಲರೂ ಸ್ವಾವಲಂಬಿ ಭಾರತದ ಅಭಿಯಾನಕ್ಕೆ ಮತ್ತಷ್ಟು ಪುಷ್ಟಿ ನೀಡೋಣ. ನಾವು vocal for local ಸ್ಥಳೀಯ ವಸ್ತುಗಳಿಗೆ ದನಿಯಾಗುವ ಮಂತ್ರದೊಂದಿಗೆ ನಮ್ಮ ಖರೀದಿಗಳನ್ನು ಮಾಡೋಣ. ಇದು ಹೊಸ ಭಾರತ, ಇಲ್ಲಿ ಅಸಾಧ್ಯ ಎಂಬುದು ಕೇವಲ ಒಂದು ಸವಾಲು ಅಷ್ಟೇ, ಈಗ ಮೇಕ್ ಇನ್ ಇಂಡಿಯಾ ಈಗ ಮೇಕ್ ಫಾರ್ ದಿ ವರ್ಲ್ಡ್ ಆಗಿ ಮಾರ್ಪಟ್ಟಿದೆ, ಇಲ್ಲಿ ಪ್ರತಿಯೊಬ್ಬ ನಾಗರಿಕನು ಇನ್ನೋವೇಟರ್ ಆಗಿದ್ದಾನೆ, ಇಲ್ಲಿ ಪ್ರತಿ ಸವಾಲು ಅವಕಾಶವಾಗಿದೆ. ನಾವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮಾತ್ರವಲ್ಲ, ನಮ್ಮ ದೇಶವನ್ನು ನಾವೀನ್ಯತೆಯ ಜಾಗತಿಕ ಶಕ್ತಿಯ ಕೇಂದ್ರವಾಗಿ ಬಲಪಡಿಸಬೇಕಿದೆ.
ನನ್ನ ಪ್ರಿಯ ದೇಶವಾಸಿಗಳೆ, ನಿಮಗೆ ನಾನು ಒಂದು ಆಡಿಯೋ ಕೇಳಿಸುತ್ತೇನೆ.
# ( ಆಡಿಯೋ) #
ಆಡಿಯೋ ಬೈಟ್ನ ಪ್ರತಿಲೇಖನ
ವಂಚಕ 1: ಹಲೋ
ನೋಂದವರು : ಸರ್, ನಮಸ್ಕಾರ ಸರ್.
ವಂಚಕ 1: ಹಲೋ
ನೋಂದವರು: ಸಾರ್ ಹೇಳಿ ಸಾರ್
ವಂಚಕ 1: ನೋಡಿ ನೀವು ನನಗೆ ಎಫ್ಐಆರ್ ಸಂಖ್ಯೆ ಕಳುಹಿಸಿದ್ದೀರಲ್ಲ, ಇದರ ವಿರುದ್ಧ ನಮ್ಮ ಬಳಿ 17 ದೂರುಗಳಿವೆ, ನೀವು ಈ ಸಂಖ್ಯೆಯನ್ನು ಬಳಸುತ್ತಿದ್ದೀರಾ?
ನೋಂದವರು: ನಾನು ಇದನ್ನು ಬಳಸುವುದಿಲ್ಲ ಸರ್.
ವಂಚಕ 1: ಈಗ ನೀವು ಎಲ್ಲಿಂದ ಮಾತನಾಡುತ್ತಿದ್ದೀರಿ?
ನೋಂದವರು: ಸಾರ್ ಕರ್ನಾಟಕ ಸಾರ್, ಮನೆಯಲ್ಲಿದ್ದೇನೆ ಸಾರ್.
ವಂಚಕ 1: ಸರಿ, ತಮ್ಮ ಹೇಳಿಕೆಯನ್ನು ದಾಖಲಿಸಿ, ಇದರಿಂದ ಈ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುವುದು. ಭವಿಷ್ಯದಲ್ಲಿ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಸರಿನಾ
ನೋಂದವರು: ಸರಿ ಸರ್
ವಂಚಕ 1: ನಾನು ಈಗಲೇ ನಿಮ್ಮನ್ನು ಕನೆಕ್ಟ್ ಮಾಡುತ್ತೇನೆ, ಅವರು ನಿಮ್ಮ ತನಿಖಾ ಅಧಿಕಾರಿಗಳು. ದಯವಿಟ್ಟು ನಿಮ್ಮ ಹೇಳಿಕೆಯನ್ನು ರೆಕಾರ್ಡ್ ಮಾಡಿ ಇದರಿಂದ ಈ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುವುದು, ಸರಿನಾ.
ನೋಂದವರು: ಆಯಿತು ಸರ್
ವಂಚಕ1: ಸರಿ, ಹೇಳಿ, ನಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ? ನಿಮ್ಮ ಆಧಾರ್ ಕಾರ್ಡ್ ಅನ್ನು ತೋರಿಸಿ, ಪರಿಶೀಲಿಸಬೇಕಿದೆ.
ನೋಂದವರು: ಸಾರ್, ನನ್ನ ಬಳಿ ಈಗ ಆಧಾರ್ ಕಾರ್ಡ್ ಇಲ್ಲ, ದಯವಿಟ್ಟು ಸಾರ್.
ವಂಚಕ 1: ಫೋನ್ ನಲ್ಲಿ, ನಿಮ್ಮ ಫೋನ್ನಲ್ಲಿದೆಯೇ?
ನೋಂದವರು: ಇಲ್ಲ ಸಾರ್
ವಂಚಕ 1: ನಿಮ್ಮ ಫೋನ್ನಲ್ಲಿ ಆಧಾರ್ ಕಾರ್ಡ್ನ ಚಿತ್ರವಿಲ್ಲವೇ?
ನೋಂದವರು: ಇಲ್ಲ ಸಾರ್
ವಂಚಕ 1: ನಿಮಗೆ ಸಂಖ್ಯೆ ನೆನಪಿದೆಯೇ?
ನೋಂದವರು: ಸಾರ್ ಇಲ್ಲ ಸಾರ್, ನಂಬರ್ ಕೂಡ ನೆನಪಿಲ್ಲ ಸಾರ್.
ವಂಚಕ 1: ನಾವು ಪರಿಶೀಲಿಸಬೇಕಾಗಿದೆ, ಸರಿನಾ, ಪರಿಶೀಲಿಸೋದಿಕ್ಕೆ.
ನೋಂದವರು: ಇಲ್ಲ ಸಾರ್
ವಂಚಕ 1: ಭಯಪಡಬೇಡಿ, ಹೆದರಬೇಡಿ, ನೀವು ಏನೂ ಮಾಡದಿದ್ದರೆ ಹೆದರಬೇಡಿ.
ನೋಂದವರು: ಆಯ್ತು ಸಾರ್, ಆಯ್ತು ಸಾರ್
ವಂಚಕ 1: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಪರಿಶೀಲಿಸಲು ಅದನ್ನು ನನಗೆ ತೋರಿಸಿ.
ನೋಂದವರು: ಇಲ್ಲ, ಇಲ್ಲ ಸಾರ್, ನಾನು ಹಳ್ಳಿಗೆ ಬಂದಿದ್ದೇನೆ ಸಾರ್, ಅಲ್ಲಿ ಸರ್ ಮನೆಯಲ್ಲಿದೆ ಸರ್.
ವಂಚಕ 1: ಸರಿ
ವಂಚಕ 2 : ಮೇ ಐ ಕಮ್ ಇನ್ ಸರ್
ವಂಚಕ 1: ಕಮ್ ಇನ್
ವಂಚಕ 2: ಜೈ ಹಿಂದ್
ವಂಚಕ 1: ಜೈ ಹಿಂದ್
ವಂಚಕ 1: ಪ್ರೋಟೋಕಾಲ್ ಪ್ರಕಾರ ಈ ವ್ಯಕ್ತಿಯ one sided video call record ಮಾಡಿ, ಒ ಕೆ .
ಈ ಆಡಿಯೋ ಕೇವಲ ಮಾಹಿತಿಗಾಗಿ ಅಲ್ಲ, ಇದು ಕೇವಲ ಮನರಂಜನೆಯ ಆಡಿಯೋ ಅಲ್ಲ, ಈ ಆಡಿಯೋ ಆಳವಾದ ಕಾಳಜಿಯೊಂದಿಗೆ, ಚಿಂತನೆಯೊಂದಿಗೆ ಬಂದಿದೆ. ನೀವು ಈಗ ಕೇಳಿದ ಸಂಭಾಷಣೆಯು ಡಿಜಿಟಲ್ ಅರೆಸ್ಟ್ ವಂಚನೆಯ ಕುರಿತಾಗಿದೆ. ಸಂತ್ರಸ್ತೆ ಮತ್ತು ವಂಚಕನ ನಡುವೆ ಈ ಸಂಭಾಷಣೆ ನಡೆದಿದೆ. ಡಿಜಿಟಲ್ ಅರೆಸ್ಟ್ ನ ವಂಚನೆಯ ಪ್ರಕರಣದಲ್ಲಿ ಕರೆ ಮಾಡುವ ವ್ಯಕ್ತಿಗಳು ಕೆಲವೊಮ್ಮೆ ಪೊಲೀಸರು, ಕೆಲವೊಮ್ಮೆ ಸಿಬಿಐ, ಕೆಲವೊಮ್ಮೆ ನಾರ್ಕೋಟಿಕ್ಸ್, ಕೆಲವೊಮ್ಮೆ ಆರ್ ಬಿ ಐ ಹೀಗೆ ವಿವಿಧ ಹೆಸರುಗಳನ್ನು ಹೇಳುತ್ತಾರೆ ಮತ್ತು ಅಧಿಕಾರಿಗಳಂತೆ ಮಾತನಾಡುತ್ತಾರೆ ಮತ್ತು ತುಂಬಾ ವಿಶ್ವಾಸದಿಂದ ಹೀಗೆ ಮಾಡುತ್ತಾರೆ. ಈ ವಿಷಯದ ಬಗ್ಗೆ ಮಾತನಾಡಲೇ ಬೇಕೆಂದು ಮನ್ ಕಿ ಬಾತ್ ನ ಬಹಳಷ್ಟು ಶ್ರೋತೃಗಳು ಹೇಳಿದ್ದಾರೆ. ಬನ್ನಿ, ಈ ವಂಚನೆ ಮಾಡುವ ಗ್ಯಾಂಗ್ ಹೇಗೆ ಕೆಲಸ ಮಾಡುತ್ತದೆ, ಈ ಅಪಾಯಕಾರಿ ಆಟವೇನೆಂದು ನಾನು ನಿಮಗೆ ಹೇಳುತ್ತೇನೆ. ನೀವು ಇದರ ಕುರಿತು ಅರ್ಥಮಾಡಿಕೊಳ್ಳುವುದು ಮತ್ತು ಇದನ್ನು ಇತರರಿಗೂ ತಿಳಿಸಿ ಹೇಳುವುದು ಕೂಡಾ ಅತ್ಯಂತ ಅಗತ್ಯವಾಗಿದೆ. ಅವರ ಮೊದಲನೆಯ ಉಪಾಯ – ನಿಮ್ಮ ವೈಯಕ್ತಿಕ ಮಾಹಿತಿಯೆಲ್ಲವನ್ನೂ ಅವರು ಸಂಗ್ರಹಿಸಿರುತ್ತಾರೆ. “ನೀವು ಕಳೆದ ತಿಂಗಳು ಗೋವಾಗೆ ಹೋಗಿದ್ದಿರಲ್ಲವೇ? ನಿಮ್ಮ ಮಗಳು ದೆಹಲಿಯಲ್ಲಿ ಓದುತ್ತಿದ್ದಾಳಲ್ಲವೇ? ನೀವೇ ಆಶ್ಚರ್ಯಚಕಿತರಾಗುವ ರೀತಿಯಲ್ಲಿ ನಿಮ್ಮೆಲ್ಲಾ ಮಾಹಿತಿಯನ್ನು ಅವರು ಕಲೆ ಹಾಕಿ ಇರಿಸಿಕೊಂಡಿರುತ್ತಾರೆ. ಎರಡನೆಯ ಉಪಾಯ – ಭಯದ ವಾತಾವರಣ ಉಂಟುಮಾಡುವುದು, ಸಮವಸ್ತ್ರ, ಸರ್ಕಾರಿ ಕಛೇರಿಯ ಸೆಟಪ್, ಕಾನೂನಿನ ವಿಭಾಗಗಳು ಹೀಗೆ ದೂರವಾಣಿಯ ಮೂಲಕ ಅವರು ನಿಮ್ಮನ್ನು ಅದೆಷ್ಟು ಹೆದರಿಸುತ್ತಾರೆಂದರೆ ನಿಮಗೆ ಆಲೋಚಿಸಲೂ ಸಾಧ್ಯವಾಗುವುದಿಲ್ಲ. ನಂತರ ಅವರು ಮಾಡುವ ಮೂರನೇ ಕೆಲಸ – ಸಮಯದ ಒತ್ತಡ ಹಾಕುತ್ತಾರೆ, ‘ಈಗಲೇ ನಿರ್ಧಾರಕ್ಕೆ ಬರಬೇಕು, ಇಲ್ಲದಿದ್ದಾರೆ ಬಂಧಿಸಬೇಕಾಗುತ್ತದೆ”, - ಈ ಜನರು ಪೀಡಿತರ ಮೇಲೆ ಅದೆಷ್ಟು ಮಾನಸಿಕವಾಗಿ ಒತ್ತಡ ಹೇರುತ್ತಾರೆಂದರೆ ಅವರು ಹೆದರಿಬಿಡುತ್ತಾರೆ. Digital arrest ವಂಚನೆಗೆ ಬಲಿಯಾದವರ ಪೈಕಿ ಪ್ರತಿಯೊಂದು ವರ್ಗದ, ಪ್ರತಿಯೊಂದು ವಯಸ್ಸಿನ ಜನರು ಸೇರಿದ್ದಾರೆ. ಜನರು ಭಯದ ಕಾರಣದಿಂದಲೇ ತಮ್ಮ ಶ್ರಮದಿಂದ ಗಳಿಸಿದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ನಿಮಗೆ ಎಂದಾದರೂ ಈ ರೀತಿಯ ಕರೆ ಬಂದರೆ ನೀವು ಹೆದರಬಾರದು. ಯಾವುದೇ ತನಿಖಾ ಸಂಸ್ಥೆ, ದೂರವಾಣಿ ಕರೆ ಅಥವಾ ವಿಡಿಯೋ ಕರೆಯ ಮೂಲಕ ಈ ರೀತಿಯ ವಿಚಾರಣೆಯನ್ನು ಕೈಗೊಳ್ಳುವುದಿಲ್ಲ ಎನ್ನುವ ವಿಷಯ ನಿಮಗೆ ತಿಳಿದಿರಬೇಕು. ನಾನು ನಿಮಗೆ ಡಿಜಿಟಲ್ ಭದ್ರತೆಯ ಮೂರು ಹಂತಗಳನ್ನು ಹೇಳುತ್ತೇನೆ. ಈ ಮೂರು ಹಂತಗಳೆಂದರೆ ‘ತಾಳಿ, ಯೋಚಿಸಿ – ಕ್ರಮ ಕೈಗೊಳ್ಳಿ, -( रुको-सोचो-Action लो’) ಕರೆ ಬಂದ ತಕ್ಷಣ, ತಾಳಿ, ಗಾಬರಿಯಾಗಬೇಡಿ, ಶಾಂತವಾಗಿರಿ, ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ, ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ. ಸಾಧ್ಯವಾದರೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ ಮತ್ತು ಖಂಡಿತವಾಗಿಯೂ ಕರೆ ರೆಕಾರ್ಡ್ ಮಾಡಿ. ತಾಳಿ – ಈ ಮೊದಲನೇ ಹಂತದ ನಂತರದ ಎರಡನೇ ಹಂತ- ಆಲೋಚಿಸಿ. ಯಾವುದೇ ಸರ್ಕಾರಿ ಸಂಸ್ಥೆ ದೂರವಾಣಿ ಮೂಲಕ ಇಂತಹ ಬೆದರಿಕೆ ಹಾಕುವುದಿಲ್ಲ, ಅಥವಾ ವಿಡಿಯೋ ಕರೆಯ ಮೂಲಕ ವಿಚಾರಣೆ ಮಾಡುವುದಿಲ್ಲ, ಅಥವಾ ಈ ರೀತಿ ಹಣ ಕೇಳುವುದಿಲ್ಲ – ಹೆದರಿಕೆಯಾದಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಮೊದಲ, ಎರಡನೇ ಹಂತದ ನಂತರ ಈಗ ಹೇಳುತ್ತೇನೆ ಮೂರನೇ ಹಂತದ ಬಗ್ಗೆ. ಮೊದಲ ಹಂತದಲ್ಲಿ ನಾನು ಹೇಳಿದೆ ತಾಳಿ ಎಂದು, ಎರಡನೇ ಹಂತದಲ್ಲಿ ನಾನು ಹೇಳಿದೆ ಆಲೋಚಿಸಿ ಎಂದು, ಮೂರನೇ ಹಂತದಲ್ಲಿ ನಾನು ಹೇಳುತ್ತೇನೆ ಕ್ರಮ ಕೈಗೊಳ್ಳಿ ಎಂದು. ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಸಂಖ್ಯೆ ಡಯಲ್ ಮಾಡಿ, cybercrime.gov.in ನಲ್ಲಿ ವರದಿ ಮಾಡಿ, ಕುಟುಂಬ ಮತ್ತು ಪೊಲೀಸರಿಗೆ ತಿಳಿಯಪಡಿಸಿ, ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಇರಿಸಿ. ‘ತಾಳಿ’, ನಂತರ ‘ಆಲೋಚಿಸಿ’, ಮತ್ತು ನಂತರ ‘ಕ್ರಮ ಕೈಗೊಳ್ಳಿ’ ಈ ಮೂರು ಹಂತಗಳು ನಿಮ್ಮ ಡಿಜಿಟಲ್ ಸುರಕ್ಷತೆಯ ರಕ್ಷಕರಾಗುತ್ತವೆ.
ಸ್ನೇಹಿತರೆ, ನಾನು ಮತ್ತೊಮ್ಮೆ ಹೇಳುತ್ತೇನೆ digital arrest ನಂತಹ ಯಾವುದೇ ವ್ಯವಸ್ಥೆ ಕಾನೂನಿನಲ್ಲಿ ಇಲ್ಲ, ಇದು ಕೇವಲ ವಂಚನೆ, ಸುಳ್ಳು, ಮೋಸ ಮತ್ತು ಕಿಡಿಗೇಡಿಗಳ ಗುಂಪಿನ ಕಿತಾಪತಿಯಾಗಿದೆ ಮತ್ತು ಇದನ್ನು ಯಾರು ಮಾಡುತ್ತಿದ್ದಾರೋ ಅವರು ಸಮಾಜದ ಶತ್ರುಗಳು. digital arrest ನ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಲು, ಎಲ್ಲಾ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಈ ಏಜೆನ್ಸಿಗಳ ನಡುವೆ ಸಮನ್ವಯ ಉಂಟುಮಾಡಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರ (National Cyber Co-ordination Centre) ರಚಿಸಲಾಗಿದೆ. ಇಂತಹ ವಂಚನೆಗಳನ್ನು ಮಾಡುವ ಸಾವಿರಾರು ವಿಡಿಯೋ ಕಾಲಿಂಗ್ ಐಡಿಗಳನ್ನು ಏಜೆನ್ಸಿಗಳ ಮೂಲಕ ನಿರ್ಬಂಧಿಸಲಾಗಿದೆ. ಲಕ್ಷಾಂತರ ಸಿಮ್ ಕಾರ್ಡ್, ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳನ್ನು ಕೂಡಾ ತಡೆಹಿಡಿಯಲಾಗಿದೆ. ಏಜೆನ್ಸಿಗಳು ತಮ್ಮ ಕೆಲಸ ಮಾಡುತ್ತಿವೆ ಆದರೆ, ಡಿಜಿಟಲ್ ಅರೆಸ್ಟ್ ನ ಹೆಸರಿನಲ್ಲಿ ನಡೆಯುತ್ತಿರುವ ಹಗರಣದಿಂದ ತಪ್ಪಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಪ್ರತಿಯೊಬ್ಬ ನಾಗರಿಕ ಜಾಗರೂಕನಾಗಿರುವುದು ಬಹಳ ಮುಖ್ಯ. ಈ ರೀತಿಯ ಸೈಬರ್ ವಂಚನೆಗೆ ಬಲಿಯಾದ ಜನರು ಆ ವಿಷಯವನ್ನು ಹೆಚ್ಚು ಹೆಚ್ಚು ಜನರಿಗೆ ಹೇಳಬೇಕು. ನೀವು ಜಾಗರೂಕತೆಗಾಗಿ #SafeDigitalIndia ದ ಬಳಕೆ ಮಾಡಬಹುದು. ಸೈಬರ್ ಹಗರಣದ ವಿರುದ್ಧದ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಶಾಲೆ ಮತ್ತು ಕಾಲೇಜುಗಳನ್ನು ನಾನು ಮನವಿ ಮಾಡುತ್ತೇನೆ. ಸಮಾಜದ ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ ನಾವು ಈ ಸವಾಲನ್ನು ಎದುರಿಸಲು ಸಾಧ್ಯ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಅನೇಕ ಶಾಲಾ ಮಕ್ಕಳು ಕ್ಯಾಲಿಗ್ರಫಿ ಅಂದರೆ ಸುಲೇಖದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇದರಿಂದ ನಮ್ಮ ಕೈಬರಹ ಸ್ವಚ್ಛ, ಸುಂದರ ಮತ್ತು ಆಕರ್ಷಕವಾಗುತ್ತದೆ. ಇಂದು ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಜನಪ್ರಿಯವಾಗಿಸಲು ಇದರ ಬಳಕೆ ಮಾಡಲಾಗುತ್ತಿದೆ. ಇಲ್ಲಿನ ಅನಂತ್ ನಾಗ್ ನ ಫಿರ್ದೌಸಾ ಬಶೀರ್ ಅವರು calligraphy ನಲ್ಲಿ ಪರಿಣತಿ ಹೊಂದಿದ್ದಾರೆ. ಇದರಿಂದ ಅವರು ಸ್ಥಳೀಯ ಸಂಸ್ಕೃತಿಯ ಹಲವು ಅಂಶಗಳನ್ನು ಮುಂದೆ ತರುತ್ತಿದ್ದಾರೆ. ಫಿರ್ದೌಸಾ ಅವರ calligraphy ಸ್ಥಳೀಯ ಜನರನ್ನು, ವಿಶೇಷವಾಗಿ ಯುವಜನತೆಯನ್ನು ತನ್ನೆಡೆಗೆ ಆಕರ್ಷಿಸಿದೆ. ಇಂತಹದ್ದೇ ಮತ್ತೊಂದು ಪ್ರಯತ್ನ ಉಧಮ್ ಪುರದ ಗೋರೀನಾಥ್ ಅವರು ಕೂಡಾ ಮಾಡುತ್ತಿದ್ದಾರೆ. ಒಂದು ಶತಮಾನಕ್ಕೂ ಹಳೆಯದಾದ ಸಾರಂಗಿಯ ಮೂಲಕ ಅವರು ಡೋಗ್ರಾ ಸಂಸ್ಕೃತಿ ಮತ್ತು ಪರಂಪರೆಯ ವಿಭಿನ್ನ ರೂಪಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸಾರಂಗಿಯ ಸ್ವರದೊಂದಿಗೆ ಅವರು ತಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಪ್ರಾಚೀನ ಕಥೆಗಳು ಮತ್ತು ಐತಿಹಾಸಿಕ ಘಟನೆಗಳನ್ನು ಆಕರ್ಷಕ ರೀತಿಯಲ್ಲಿ ಹೇಳುತ್ತಾರೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಕೂಡಾ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮುಂದಾಗುತ್ತಿರುವ ಇಂತಹ ಅಸಾಮಾನ್ಯ ವ್ಯಕ್ತಿಗಳು ಕಾಣಸಿಗುತ್ತಾರೆ. ಡಿ. ವೈಕುಂಠಮ್ ಅವರು ಸುಮಾರು 50 ವರ್ಷಗಳಿಂದ ಚೆರಿಯಾಲ್ ಜಾನಪದ ಕಲೆಯನ್ನು ಜನಪ್ರಿಯವಾಗಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ತೆಲಂಗಾಣಾದೊಂದಿಗೆ ಬೆಸೆದುಕೊಂಡಿರುವ ಈ ಕಲೆಯನ್ನು ಮುಂದಕ್ಕೆ ಕೊಂಡೊಯ್ಯುವ ಅವರ ಪ್ರಯತ್ನ ಬಹಳ ಉತ್ತಮವಾಗಿದೆ. ಚೆರಿಯಾಲ್ ಪೈಂಟಿಂಗ್ಸ್ ತಯಾರಿಸುವ ಪ್ರಕ್ರಿಯ ಅತ್ಯಂತ ವಿಶಿಷ್ಟವಾಗಿದೆ. ಇದು ಒಂದು scroll ನ ರೂಪದಲ್ಲಿ ಕಥೆಗಳನ್ನು ಮುಂದೆ ತರುತ್ತದೆ. ಇದರಲ್ಲಿ ನಮ್ಮ ಚರಿತ್ರೆ, ಮತ್ತು ಪುರಾಣಗಳ ಸಂಪೂರ್ ನೋಟ ದೊರೆಯುತ್ತದೆ. ಛತ್ತೀಸ್ ಗಢದಲ್ಲಿ ನಾರಾಯಣಪುರದ ಬುಟ್ಲೂರಾಮ್ ಮಾಥ್ರಾ ಅವರು ಅಬೂಜಮಾಡಿಯಾ ಬುಡಕಟ್ಟು ಜನಾಂಗದ ಜಾನಪದ ಕಲೆಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅವರು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಬೇಟಿ ಬಚಾವೋ-ಬೇಟಿ ಪಢಾವೋ‘ ಮತ್ತು ‘ಸ್ವಚ್ಛ ಭಾರತ‘ ದಂತಹ ಅಭಿಯಾನಗಳೊಂದಿಗೆ ಜನರನ್ನು ಸಂಪರ್ಕಿಸುವಲ್ಲಿ ಅವರ ಈ ಕಲೆ ತುಂಬಾ ಪರಿಣಾಮಕಾರಿಯಾಗಿದೆ.
ಸ್ನೇಹಿತರೆ, ಕಾಶ್ಮೀರದ ಕಣಿವೆಗಳಿಂದ ಹಿಡಿದು ಛತ್ತೀಸ್ ಗಢದ ಅರಣ್ಯಗಳವರೆಗೆ ನಮ್ಮ ಕಲೆ ಮತ್ತು ಸಂಸ್ಕೃತಿ ಹೊಸ ಹೊಸ ಬಣ್ಣಗಳನ್ನು ಹರಡುತ್ತಿದೆ ಎಂದು ನಾವು ಈಗ ಮಾತನಾಡುತ್ತಿದ್ದೆವು, ಆದರೆ ಈ ಮಾತು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನಮ್ಮ ಈ ಕಲೆಗಳ ಸುವಾಸನೆ ದೂರ ದೂರದವರೆಗೂ ಹರಡುತ್ತಿದೆ. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಜನರು ಭಾರತೀಯ ಕಲೆ ಮತ್ತು ಸಂಸ್ಕೃತಿಯಿಂದ ಮಂತ್ರಮುಗ್ಧರಾಗುತ್ತಿದ್ದಾರೆ. ನಾನು ನಿಮಗೆ ಉಧಮ್ ಪುರದಲ್ಲಿ ಅನುರಣಿಸುವ ಸಾರಂಗಿಯ ಬಗ್ಗೆ ಹೇಳುತ್ತಿರುವಾಗ, ಸಾವಿರಾರು ಮೈಲಿಗಳ ದೂರದಲ್ಲಿರುವ ರಷ್ಯಾದ ಯಾಕೂತ್ಸಕ್ ನಗರದಲ್ಲಿ ಕೂಡಾ ಭಾರತೀಯ ಕಲೆಯ ಮಧುರ ರಾಗ ಅನುರಣಿಸುತ್ತಿರುವುದು ನನಗೆ ನೆನಪಾಯಿತು. ಚಳಿಗಾಲದ ದಿನ, ಮೈನಸ್ 65 ಡಿಗ್ರಿ ತಾಪಮಾನ, ನಾಲ್ಕೂ ದಿಕ್ಕಿನಲ್ಲಿ ಹಿಮದ ಬಿಳಿ ಹೊದಿಕೆ ಮತ್ತು ಅಲ್ಲಿನ ಒಂದು ಥಿಯೇಟರ್ ನಲ್ಲಿ ಜನರು ಮಂತ್ರಮುಗ್ಧರಾಗಿ ಕಾಳಿದಾಸನ ಅಭಿಜ್ಞಾನ ಶಾಕುಂತಲಂ ವೀಕ್ಷಿಸುತ್ತಿರುವುದನ್ನು ಊಹಿಸಿಕೊಳ್ಳಿ. ವಿಶ್ವದ ಅತ್ಯಂತ ಶೀತಲ ನಗರವಾದ ಯಾಕುಟ್ಸಕ್ ನಲ್ಲಿ ಭಾರತೀಯ ಸಾಹಿತ್ಯದ ಬೆಚ್ಚನೆಯ ಶಾಖವನ್ನು ನೀವು ಊಹಿಸಬಹುದೇ? ಇದು ಕಲ್ಪನೆಯಲ್ಲ ಸತ್ಯ – ನಮ್ಮೆಲ್ಲರ ಮನಸ್ಸನ್ನೂ ಹೆಮ್ಮೆ ಮತ್ತು ಆನಂದದಿಂದ ತುಂಬುವಂತೆ ಮಾಡುವ ಸತ್ಯವಾದ ವಿಷಯ ಇದು.
ಸ್ನೇಹಿತರೇ, ಕೆಲವು ವಾರಗಳ ಹಿಂದೆ, ನಾನು ಲಾವೋಸ್ ಗೆ ಹೋಗಿದ್ದೆ. ಅದು ನವರಾತ್ರಿಯ ಸಮಯವಾಗಿತ್ತು ಮತ್ತು ನಾನು ಅಲ್ಲಿ ಕೆಲವು ಅದ್ಭುತಗಳನ್ನು ಕಂಡೆ. ಸ್ಥಳೀಯ ಕಲಾವಿದರು “ಫಲಕ್ ಫಲಮ್” ‘ಲಾವೋಸ್ ನ ರಾಮಾಯಣ’ ಪ್ರಸ್ತುತ ಪಡಿಸುತ್ತಿದ್ದರು. ಅವರ ಕಣ್ಣುಗಳಲ್ಲಿ ನಮ್ಮ ಮನದಲ್ಲಿ ರಾಮಾಯಣದ ಬಗ್ಗೆ ಇರುವ ಅದೇ ಭಕ್ತಿ, ಅವರ ಧ್ವನಿಯಲ್ಲಿ ಅದೇ ಸಮರ್ಪಣಾ ಭಾವ ಎದ್ದು ಕಾಣುತ್ತಿತ್ತು. ಇದೇ ರೀತಿ ಕುವೈತ್ ನಲ್ಲಿ ಶ್ರೀ ಅಬ್ದುಲ್ಲಾ ಅಲ್ ಬಾರುನ್ ಅವರು ರಾಮಾಯಣ ಮತ್ತು ಮಹಾಭಾರತವನ್ನು ಅರಬ್ ಬಾಷೆಗೆ ಅನುವಾದ ಮಾಡಿದ್ದಾರೆ. ಇದು ಕೇವಲ ಅನುವಾದ ಮಾತ್ರವಲ್ಲ ಎರಡು ಮಹಾನ್ ಸಂಸ್ಕೃತಿಗಳ ನಡುವಿನ ಒಂದು ಸೇತುವೆಯಾಗಿದೆ. ಅವರ ಈ ಪ್ರಯತ್ನ ಅರಬ್ ಜಗತ್ತಿನಲ್ಲಿ ಭಾರತೀಯ ಸಾಹಿತ್ಯದ ಹೊಸ ಅರಿವನ್ನು ಮೂಡಿಸುತ್ತಿದೆ. ಪೆರುವಿನಲ್ಲಿ ಮತ್ತೊಂದು ಪ್ರೇರಣಾದಾಯಕ ಉದಾಹರಣೆಯಿದೆ. ಎರ್ಲಿಂದಾ ಗ್ರಾಸಿಯಾ (Erlinda Garcia) ಅವರು ಅಲ್ಲಿನ ಯುವಜನತೆಗೆ ಭರತನಾಟ್ಯ ಕಲಿಸುತ್ತಿದ್ದಾರೆ ಮತ್ತು ಮಾರಿಯಾ ವಾಲ್ಡೇಜ್ (Maria Valdez) ಒಡಿಶಾ ನೃತ್ಯದ ತರಬೇತಿ ನೀಡುತ್ತಿದ್ದಾರೆ. ಈ ಕಲೆಗಳಿಂದ ಪ್ರಭಾವಿತರಾಗಿ, ದಕ್ಷಿಣ ಅಮೆರಿಕಾದ ಅನೇಕ ದೇಶಗಳಲ್ಲಿ ‘ಭಾರತೀಯ ಶಾಸ್ತ್ರೀಯ ನೃತ್ಯದ’ ಜನಪ್ರಿಯತೆ ಹೆಚ್ಚಾಗುತ್ತಿದೆ.
ಸ್ನೇಹಿತರೇ, ವಿದೇಶೀ ನೆಲದಲ್ಲಿ ಭಾರತದ ಈ ಉದಾಹರಣೆಗಳು ಭಾರತೀಯ ಸಂಸ್ಕೃತಿಯ ಶಕ್ತಿ ಎಷ್ಟೊಂದು ಅದ್ಭುತವೆಂಬುದನ್ನು ಪ್ರದರ್ಶಿಸುತ್ತದೆ. ಇದು ವಿಶ್ವವನ್ನು ನಿರಂತರವಾಗಿ ತನ್ನತ್ತ ಆಕರ್ಷಿಸುತ್ತಿದೆ.
“ಎಲ್ಲೆಲ್ಲಿ ಕಲೆ ಇದೆಯೋ ಅಲ್ಲೆಲ್ಲಾ ಭಾರತವಿದೆ”,
“ಎಲ್ಲೆಲ್ಲಿ ಸಂಸ್ಕೃತಿ ಇದೆಯೋ ಅಲ್ಲೆಲ್ಲಾ ಭಾರತವಿದೆ”
ಇಂದು ವಿಶ್ವಾದ್ಯಂತ ಜನರು ಭಾರತದ ಬಗ್ಗೆ, ಭಾರತದ ಜನತೆಯ ಬಗ್ಗೆ ತಿಳಿಯಲು ಇಷ್ಟಪಡುತ್ತಿದ್ದಾರೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಇಂತಹ ಸಾಂಸ್ಕೃತಿಕ ಉಪಕ್ರಮವನ್ನು #CulturalBridges ನಲ್ಲಿ ಹಂಚಿಕೊಳ್ಳಬೇಕೆನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿ. ‘ಮನದ ಮಾತಿನಲ್ಲಿ’ ನಾವು ಇಂತಹ ಉದಾಹರಣೆಗಳ ಬಗ್ಗೆ ಮುಂದೆಯೂ ಮಾತನಾಡೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಹೆಚ್ಚಿನ ಭಾಗಗಳಲ್ಲಿ ಚಳಿಗಾಲದ ಋತು ಆರಂಭವಾಗಿದೆ, ಆದರೆ ಫಿಟ್ನೆಸ್ ನ ಉತ್ಸಾಹ, ತವಕ, ಫಿಟಿ ಇಂಡಿಯಾದ ಸ್ಫೂರ್ತಿ ಇವುಗಳ ಮೇಲೆ ಯಾವುದೇ ಋತುವಿನಿಂದ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಯಾರು ಆರೋಗ್ಯದಿಂದ ಸದೃಢರಾಗಿರುತ್ತಾರೆ ಅವರಿಗೆ ಚಳಿಗಾಲ, ಬೇಸಿಗೆ ಕಾಲ, ಮಳೆಗಾಲ ಯಾವುದೂ ಗಮನಕ್ಕೆ ಬರುವುದಿಲ್ಲ. ಭಾರತದಲ್ಲಿ ಈಗ ಜನರು ಆರೋಗ್ಯದಿಂದ ಸದೃಢವಾಗಿರುವ ನಿಟ್ಟಿನಲ್ಲಿ ಬಹಳ ಗಮನ ಹರಿಸುತ್ತಿದ್ದಾರೆ ಎನ್ನುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ. ನಿಮ್ಮ ಸುತ್ತಮುತ್ತಲಿನ ಉದ್ಯಾನವನಗಳಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೀವು ಕೂಡಾ ಗಮನಿಸಿಯೇ ಇರುತ್ತೀರಿ. ವಯಸ್ಸಾದ ಹಿರಿಯರು, ನವಯುವಕ-ಯುವತಿಯರು, ಮತ್ತು ಯೋಗಾಭ್ಯಾಸ ಮಾಡುತ್ತಿರುವ ಕುಟುಂಬಗಳನ್ನು ನೋಡಿದಾಗ ನನಗೆ ಬಹಳ ಹರ್ಷವಾಗುತ್ತದೆ. ನಾನು ಯೋಗದಿನದಂದು ಶ್ರೀನಗರದಲ್ಲಿದ್ದಾಗ ಮಳೆ ಸುರಿಯುತ್ತಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಯೋಗಕ್ಕಾಗಿ ಸೇರಿದ್ದರೆಂಬುದು ನನಗೆ ನೆನಪಿದೆ. ಈಗ ಕೆಲವೇ ದಿನಗಳ ಹಿಂದೆ, ಶ್ರೀನಗರದಲ್ಲಿ ನಡೆದ ಮ್ಯಾರಥಾನ್ ನಲ್ಲಿ ಕೂಡಾ ಜನರಲ್ಲಿ ಸದೃಢರಾಗಿ ಇರಬೇಕೆನ್ನುವ ಜನರ ಉತ್ಸಾಹ ನನಗೆ ಕಂಡುಬಂತು. Fit India ದ ಈ ಭಾವನೆ ಈಗ ಒಂದು ಸಮೂಹ ಚಳವಳಿಯ ರೂಪ ತಳೆಯುತ್ತಿದೆ.
ಸ್ನೇಹಿತರೆ, ನಮ್ಮ ಶಾಲೆಗಳು, ಮಕ್ಕಳ ಫಿಟ್ನೆಸ್ ಬಗ್ಗೆ ಈಗ ಮತ್ತಷ್ಟು ಹೆಚ್ಚಿನ ಗಮನ ನೀಡುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವೆನಿಸುತ್ತದೆ. Fit India School Hours ಕೂಡಾ ಒಂದು ವಿಶಿಷ್ಟ ಉಪಕ್ರಮವಾಗಿದೆ. ಶಾಲೆಗಳು ತಮ್ಮ ಮೊದಲ ಪೀರಿಯಡ್ ಅನ್ನು ಬೇರೆ ಬೇರೆ ದೈಹಿಕ ಧಾರ್ಡ್ಯತೆಯ ಚಟುವಟಿಕೆಗಳಿಗಾಗಿ ಉಪಯೋಗಿಸಿ ಕೊಳ್ಳುತ್ತಿವೆ. ಅನೇಕ ಶಾಲೆಗಳಲ್ಲಿ ಒಂದು ದಿನ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುತ್ತಿದ್ದರೆ ಮತ್ತೊಂದು ದಿನ ಏರೋಬಿಕ್ ಸೆಷನ್ ಇರುತ್ತದೆ. ಮತ್ತೊಂದು ದಿನ ಕ್ರೀಡಾ ಕೌಶಲ್ಯಗಳತ್ತ ಗಮನ ಹರಿಸಿದರೆ, ಮತ್ತೊಂದು ದಿನ ಖೋ-ಖೋ, ಕಬಡ್ಡಿಯಂತಹ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗುತ್ತಿದೆ. ಇವುಗಳ ಪರಿಣಾಮ ಬಹಳ ಅದ್ಭುತವಾಗಿದೆ. ಹಾಜರಾತಿ ಪ್ರಮಾಣ ಉತ್ತಮವಾಗುತ್ತಿದೆ, ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತಿದೆ ಮತ್ತು ಮಕ್ಕಳಿಗೆ ಈ ಆಟಗಳಿಂದ ಸಂತೋಷ ಉಂಟಾಗುತ್ತಿದೆ.
ಸ್ನೇಹಿತರೆ, ನಾನು Wellness ನ ಈ ಶಕ್ತಿಯನ್ನು ಎಲ್ಲೆಡೆಯಲ್ಲೂ ನೋಡುತ್ತಿದ್ದೇನೆ. ಮನದ ಮಾತಿನ ಅನೇಕ ಶ್ರೋತೃಗಳು ತಮ್ಮ ಅನುಭವ ಕುರಿತು ನನಗೆ ತಿಳಿಯಪಡಿಸಿದ್ದಾರೆ. ಕೆಲವರಂತೂ ಅತ್ಯಂತ ಆಸಕ್ತಿಕರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗೆ ಹೇಳಬೇಕೆಂದರೆ, Family Fitness Hour ಅಂದರೆ, ಒಂದು ಕುಟುಂಬ, ಪ್ರತಿ ವಾರಾಂತ್ಯದಲ್ಲಿ ಒಂದು ಗಂಟೆ ಕಾಲ Family Fitness ಚಟುವಟಿಕೆಗಾಗಿ ಮೀಸಲಿಡುತ್ತಿದ್ದಾರೆ. ಮತ್ತೊಂದು ಉದಾಹರಣೆಯೆಂದರೆ ದೇಶೀಯ ಆಟಗಳ ಪುನರಾರಂಭ. ಅಂದರೆ ಕೆಲವು ಕುಟುಂಬಗಳು ತಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಆಟಗಳನ್ನು ಕಲಿಸುತ್ತಿದ್ದಾರೆ, ಆಡಿಸುತ್ತಿದ್ದಾರೆ. ನೀವು ಕೂಡಾ ನಿಮ್ಮ Fitness ದಿನಚರಿಯ ಅನುಭವವನ್ನು #fitIndia ಹೆಸರಿನ Social Media ದಲ್ಲಿ ಖಂಡಿತವಾಗಿಯೂ ಶೇರ್ ಮಾಡಿ. ನಾನು ದೇಶವಾಸಿಗಳಿಗೆ ಒಂದು ಮಾಹಿತಿಯನ್ನು ಖಂಡಿತವಾಗಿಯೂ ನೀಡಲು ಬಯಸುತ್ತೇನೆ. ಈ ವರ್ಷ ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ ಅವರ ಜಯಂತಿಯ ದಿನದಂದೇ ದೀಪಾವಳಿ ಹಬ್ಬವೂ ಇದೆ. ನಾವು ಪ್ರತಿ ವರ್ಷ ಅಕ್ಟೋಬರ್ 31 ರಂದು “ರಾಷ್ಟ್ರೀಯ ಏಕತಾ ದಿನದಂದು” ‘ರನ್ ಫಾರ್ ಯುನಿಟಿ - ಏಕತೆಗಾಗಿ ಓಟ’ ಆಯೋಜಿಸುತ್ತೇವೆ. ದೀಪಾವಳಿ ಹಬ್ಬದ ಕಾರಣದಿಂದಾಗಿ ಈ ಬಾರಿ ಅಕ್ಟೋಬರ್ 29 ರಂದು ಅಂದರೆ ಮಂಗಳವಾರದಂದೇ ‘ಏಕತೆಗಾಗಿ ಓಟ’ ಆಯೋಜಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಓಟದಲ್ಲಿ ಪಾಲ್ಗೊಳ್ಳಿ, ದೇಶದ ಏಕತೆಯ ಮಂತ್ರದೊಂದಿಗೆ ಫಿಟ್ನೆಸ್ ನ ಮಂತ್ರವನ್ನು ಕೂಡಾ ಎಲ್ಲೆಡೆ ಪಸರಿಸಿ ಎನ್ನುವುದು ನಿಮ್ಮಲ್ಲೆರಲ್ಲಿ ನನ್ನ ಮನವಿ.
ನನ್ನ ಪ್ರೀತಿಯ ದೇಶಬಾಂಧವರೇ, ಈ ಬಾರಿಯ ‘ಮನದ ಮಾತು’ ಇಲ್ಲಿಗೆ ಮುಗಿಸೋಣ. ನೀವು ನಿಮ್ಮ ಸಲಹೆ-ಸೂಚನೆಗಳನ್ನು ನನಗೆ ಕಳುಹಿಸುತ್ತಿರಿ. ಇದು ಹಬ್ಬಗಳ ಕಾಲ. ಮನದ ಮಾತಿನ ಶ್ರೋತೃ ಬಾಂಧವರಿಗೆಲ್ಲಾ ಧನ್ ತೇರಸ್, ದೀಪಾವಳಿ, ಛಟ್ ಪೂಜಾ, ಗುರುನಾನಕ್ ಜಯಂತಿ ಹಾಗೂ ಎಲ್ಲಾ ಹಬ್ಬಗಳಿಗಾಗಿ ಅನೇಕಾನೇಕ ಶುಭ ಹಾರೈಕೆಗಳು. ನೀವೆಲ್ಲರೂ ಬಹಳ ಸಂತೋಷೋಲ್ಲಾಸಗಳಿಂದ ಹಬ್ಬಗಳನ್ನು ಆಚರಿಸಿ. ವೋಕಲ್ ಫಾರ್ ಲೋಕಲ್ ಮಂತ್ರವನ್ನು ನೆನಪಿಟ್ಟುಕೊಳ್ಳಿ. ಹಬ್ಬಗಳ ಕಾಲದಲ್ಲಿ ಸ್ಥಳೀಯ ಅಂಗಡಿಗಳಿಂದ ಖರೀದಿಸಿದ ವಸ್ತುಗಳು ಖಂಡಿತಾ ನಿಮ್ಮ ಮನೆಗಳಿಗೆ ಬರಲಿ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಮುಂಬರುವ ಹಬ್ಬಗಳಿಗಾಗಿ ಅನೇಕಾನೇಕ ಶುಭ ಹಾರೈಕೆಗಳು. ಧನ್ಯವಾದ.
ನನ್ನ ಪ್ರೀತಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ ನಾವೆಲ್ಲರೂ 'ಮನದ ಮಾತಿನ' ಮೂಲಕ ಒಗ್ಗೂಡುವ ಅವಕಾಶ ಲಭಿಸಿದೆ. ಇಂದಿನ ಈ ಕಂತು ನನ್ನನ್ನು ಬಹಳ ಭಾವುಕನನ್ನಾಗಿಸಲಿದೆ, ಅನೇಕ ಹಳೆಯ ನೆನಪುಗಳು ನನ್ನನ್ನು ಮುತ್ತಿವೆ - ಕಾರಣ ಏನೆಂದರೆ 'ಮನದ ಮಾತಿನ' ನಮ್ಮ ಈ ಪಯಣಕ್ಕೆ 10 ವರ್ಷಗಳು ತುಂಬುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿಯ ದಿನದಂದು 'ಮನದ ಮಾತು’ ಪ್ರಾರಂಭವಾಗಿತ್ತು ಮತ್ತು ಈ ವರ್ಷ ಅಕ್ಟೋಬರ್ 3 ರಂದು 'ಮನದ ಮಾತಿಗೆ ' 10 ವರ್ಷತುಂಬುವ ಸಂದರ್ಭ ನವರಾತ್ರಿಯ ಮೊದಲ ದಿನವಾಗಿದೆ. 'ಮನದ ಮಾತಿನ’ ಈ ಸುದೀರ್ಘ ಪಯಣದಲ್ಲಿ ನಾನು ಎಂದೂ ಮರೆಯಲಾಗದ ಇಂತಹ ಹಲವಾರು ಮೈಲಿಗಲ್ಲುಗಳಿವೆ, ನಮ್ಮ ಈ ಪಯಣದಲ್ಲಿ ನಿರಂತರ ಸಹಯೋಗವನ್ನು ನೀಡಿದಂತಹ ' ಮನದ ಮಾತಿನ' ಕೋಟ್ಯಂತರ ಶ್ರೋತೃ ಬಾಂಧವರಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಅವರು ಮಾಹಿತಿಯನ್ನು ಒದಗಿಸಿದರು. ಮನದ ಮಾತಿನ ಶ್ರೋತೃಗಳೇ ಈ ಕಾರ್ಯಕ್ರಮದ ನಿಜವಾದ ರೂವಾರಿಗಳು. ಸಾಮಾನ್ಯವಾಗಿ ಎಲ್ಲಿಯವರೆಗೆ ರೋಚಕ ವಿಷಯಗಳನ್ನು ಮಾತನಾಡುವುದಿಲ್ಲವೋ, ನಕಾರಾತ್ಮಕ ವಿಷಯಗಳನ್ನು ಮಾತನಾಡುವುದಿಲ್ಲವೋ ಅಲ್ಲಿವರೆಗೆ ಅದು ಹೆಚ್ಚಿನ ಗಮನ ಸೆಳೆಯುವುದಿಲ್ಲ ಎನ್ನಲಾಗುತ್ತದೆ. ಆದರೆ ಮನದ ಮಾತು ದೇಶದ ಜನರು ಸಕಾರಾತ್ಮಕ ಮಾಹಿತಿಗಾಗಿ , ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಸಕಾರಾತ್ಮಕ ಮಾತು, ಪ್ರೇರಣಾತ್ಮಕ ಉದಾಹರಣೆಗಳು, ಸ್ಫೂರ್ತಿದಾಯಕ ಕಥೆಗಳು ಜನರಿಗೆ ಬಹಳ ಇಷ್ಟವಾಗುತ್ತವೆ. ಕೇವಲ ಮಳೆಹನಿಗಳನ್ನು ಮಾತ್ರ ಕುಡಿಯುವಂತಹ ಚಾತಕ ಪಕ್ಷಿಯಂತೆ ಜನರು ದೇಶದ ಸೌಲಭ್ಯಗಳ ಬಗ್ಗೆ, ಜನರ ಸಾಮೂಹಿಕ ಸಾಧನೆಗಳ ಬಗ್ಗೆ ಮನದ ಮಾತಿನ ಮೂಲಕ ಎಷ್ಟು ಹೆಮ್ಮೆಯಿಂದ ಕೇಳುತ್ತಾರೆ. ಮನದ ಮಾತಿನ 10 ವರ್ಷಗಳ ಪಯಣ ಎಷ್ಟು ಅದ್ಭುತವಾದ ಹಾರವನ್ನು ಸಿದ್ಧಗೊಳಿಸಿದೆ ಎಂದರೆ ಪ್ರತಿ ಸಂಚಿಕೆಯೊಂದಿಗೆ ಹೊಸ ಯಶೋಗಾಥೆಗಳು, ಹೊಸ ಕೀರ್ತಿವಂತರು ಮತ್ತು ಹೊಸ ವ್ಯಕ್ತಿತ್ವಗಳನ್ನು ಸೇರಿಸುತ್ತಾ ಸಾಗಿದೆ. ನಮ್ಮ ಸಮಾಜದಲ್ಲಿ ಸಾಮಾಜಿಕ ಹಿತದೃಷ್ಟಿಯ ಭಾವನೆಯಿಂದ ಯಾವುದೇ ಕೆಲಸ ಮಾಡಿದರೂ ಅವರಿಗೆ 'ಮನದ ಮಾತಿನ' ಮೂಲಕ ಗೌರವ ಲಭಿಸುತ್ತದೆ. 'ಮನದ ಮಾತಿ'ಗೆ ಬಂದ ಪತ್ರಗಳನ್ನು ನಾನು ಓದಿದಾಗ ನನ್ನ ಮನವೂ ಹೆಮ್ಮೆಯಿಂದ ಬೀಗುತ್ತದೆ. ನಮ್ಮ ದೇಶದಲ್ಲಿ ಅದೆಷ್ಟೋ ಪ್ರತಿಭಾವಂತರಿದ್ದಾರೆ, ಅವರು ತಮ್ಮ ಇಡೀ ಜೀವನವನ್ನು ಜನರ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಬಗ್ಗೆ ತಿಳಿಯುವುದು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. 'ಮನದ ಮಾತಿನ' ಈ ಸಂಪೂರ್ಣ ಪ್ರಕ್ರಿಯೆಯು ನನಗೆ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುವಂತಿದೆ. ಮನದ ಮಾತಿನ ಪ್ರತಿ ವಿಷಯ, ಪ್ರತಿ ಘಟನೆ, ಪ್ರತಿ ಪತ್ರವನ್ನು ನೆನಪಿಸಿಕೊಂಡಾಗ, ನನಗೆ ಭಗವಂತನ ರೂಪದಲ್ಲಿರುವ ಜನತಾ ಜನಾರ್ದನನ ದರ್ಶನ ಪಡೆದಂತೆ ಭಾಸವಾಗುತ್ತದೆ.
ಸ್ನೇಹಿತರೇ, ಇಂದು ನಾನು ದೂರದರ್ಶನ, ಪ್ರಸಾರ ಭಾರತಿ ಮತ್ತು ಆಲ್ ಇಂಡಿಯಾ ರೇಡಿಯೊಗೆ ಸಂಬಂಧಿಸಿದ ಎಲ್ಲ ಜನರನ್ನು ಶ್ಲಾಘಿಸಲು ಬಯಸುತ್ತೇನೆ, ಅವರ ಅವಿರತ ಪ್ರಯತ್ನದಿಂದಾಗಿ, 'ಮನದ ಮಾತು' ಈ ಪ್ರಮುಖ ಘಟ್ಟವನ್ನು ತಲುಪಿದೆ. ನಿರಂತರ ಇದರ ಪ್ರಸಾರವನ್ನು ಬಿತ್ತರಗೊಳಿಸಿದ ವಿವಿಧ ಟಿವಿ ಚಾನೆಲ್ಗಳು, ಪ್ರಾದೇಶಿಕ ಟಿವಿ ಚಾನೆಲ್ಗಳಿಗೂ ನಾನು ಆಭಾರಿಯಾಗಿದ್ದೇನೆ. 'ಮನ ಮಾತಿನ' ಮೂಲಕ ನಾವು ಎತ್ತಿದ ಸಮಸ್ಯೆಗಳ ಕುರಿತು ವಿವಿಧ ಟಿವಿ ಚಾನೆಲ್ಗಳು ಪ್ರಚಾರವನ್ನು ಮಾಡಿವೆ. 'ಮನ ಮಾತನ್ನು ಮನೆ ಮನೆಗೂ ತಲುಪಿಸಿದ ಮುದ್ರಣ ಮಾಧ್ಯಮಕ್ಕೂ ನಾನು ಕೃತಜ್ಞನಾಗಿದ್ದೇನೆ. 'ಮನ ಮಾತಿನ ಕುರಿತು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ ಯುಟ್ಯೂಬರ್ಸ್ ಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಕಾರ್ಯಕ್ರಮವನ್ನು ದೇಶದ 22 ಭಾಷೆಗಳಲ್ಲಿ ಮತ್ತು 12 ವಿದೇಶಿ ಭಾಷೆಗಳಲ್ಲಿ ಕೇಳಬಹುದು. ಜನರು 'ಮನದ ಮಾತನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಕೇಳಿರುವುದಾಗಿ ತಿಳಿಸಿದಾಗ ನನಗೆ ಸಂತೋಷವಾಗುತ್ತದೆ. 'ಮನದ ಮಾತು' ಕಾರ್ಯಕ್ರಮವನ್ನು ಆಧರಿಸಿ ರಸಪ್ರಶ್ನೆ ಸ್ಪರ್ಧೆ ನಡೆಯುತ್ತಿದೆ ಎಂದು ನಿಮ್ಮಲ್ಲಿ ಹಲವರಿಗೆ ತಿಳಿದಿರಬಹುದು, ಇದರಲ್ಲಿ ಯಾರಾದರೂ ಭಾಗವಹಿಸಬಹುದು. Mygov.in ಗೆ ಭೇಟಿ ನೀಡುವ ಮೂಲಕ ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಮತ್ತು ಬಹುಮಾನಗಳನ್ನು ಗೆಲ್ಲಬಹುದು. ಇಂದು ಈ ಮಹತ್ವಪೂರ್ಣ ಘಟ್ಟವನ್ನು ತಲುಪಿದ ಸಂದರ್ಭದಲ್ಲಿ ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ. ಶುದ್ಧ ಹೃದಯ ಮತ್ತು ಸಂಪೂರ್ಣ ಸಮರ್ಪಣೆಯೊಂದಿಗೆ, ನಾನು ಭಾರತದ ಜನರ ಶ್ರೇಷ್ಠತೆಯ ಗೀತೆಯನ್ನು ಮುಂದುವರಿಸಬಯಸುತ್ತೇನೆ. ದೇಶದ ಸಂಘಟನಾ ಶಕ್ತಿಯನ್ನು ನಾವೆಲ್ಲರೂ ಸೇರಿ ಹೀಗೆ, ಇದೇ ರೀತಿ, ಆಚರಿಸುತ್ತಲೇ ಇರೋಣ – ಇದೇ ಭಗವಂತನಲ್ಲಿ ಮತ್ತು ಜನತಾ ಜನಾರ್ಧನರಲ್ಲಿ ನನ್ನ ಪ್ರಾರ್ಥನೆಯಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಗಾಲದ ಈ ಋತು ಜಲಸಂರಕ್ಷಣೆ ಮತ್ತು ನೀರಿನ ಉಳಿತಾಯ ಎಷ್ಟು ಮಹತ್ವಪೂರ್ಣವಾದುದು ಎಂದು ನಮಗೆ ನೆನಪಿಸುತ್ತದೆ. ಮಳೆಗಾಲದಲ್ಲಿ ಸಂರಕ್ಷಣೆ ಮಾಡಿದ ನೀರು ಬಿಕ್ಕಟ್ಟಿನ ಸ್ಥಿತಿಯಲ್ಲಿ ಬಹಳ ಸಹಾಯಕಾರಿಯಾಗುತ್ತದೆ, ಮತ್ತು ಇದೇ 'Catch the Rain' ನಂತಹ ಅಭಿಯಾನಕ್ಕೆ ಉತ್ತೇಜನವಾಗುತ್ತದೆ. ಜಲಸಂರಕ್ಷಣೆ ಕುರಿತು ಕೆಲವು ಜನರು ಮುಂದಡಿಯಿಡುತ್ತಿರುವುದನ್ನು ಕಂಡು ನನಗೆ ಸಂತೋಷವಾಗುತ್ತದೆ. ಅಂತಹ ಒಂದು ಪ್ರಯತ್ನವು ಉತ್ತರಪ್ರದೇಶದ ಝಾನ್ಸಿಯಲ್ಲಿ ಕಂಡುಬಂದಿದೆ. 'ಝಾನ್ಸಿ' ಬುಂದೇಲ್ಖಂಡ್ನಲ್ಲಿದ್ದು, ನೀರಿನ ಕೊರತೆಯಿಂದಲೇ ಗುರುತಿಸಲ್ಪಡುತ್ತದೆ ಎಂದು ನಿಮಗೆ ತಿಳಿದಿದೆ. ಝಾನ್ಸಿಯಲ್ಲಿ, ಕೆಲವು ಮಹಿಳೆಯರು ಘುರಾರಿ ನದಿಗೆ ಮರು ಜೀವ ನೀಡಿದ್ದಾರೆ. ಈ ಮಹಿಳೆಯರು ಸ್ವಸಹಾಯ ಗುಂಪಿಗೆ ಸೇರಿದವರಾಗಿದ್ದಾರೆ. ಅಲ್ಲದೆ ಜಲ ಸ್ನೇಹಿತೆಯರಾಗುವ ಮೂಲಕ ಈ ಅಭಿಯಾನವನ್ನು ಮುನ್ನಡೆಸಿದ್ದಾರೆ. ಬತ್ತಿ ಹೋಗುತ್ತಿದ್ದ ಘುರಾರಿ ನದಿಯನ್ನು ಈ ಮಹಿಳೆಯರು ಸಂರಕ್ಷಿಸಿದ ರೀತಿಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಈ ನೀರಿನ ಗೆಳತಿಯರು ಗೋಣಿ ಚೀಲಗಳಲ್ಲಿ ಮರಳನ್ನು ತುಂಬಿ ಚೆಕ್ ಡ್ಯಾಂ ಸಿದ್ಧಪಡಿಸಿದರು. ಮಳೆ ನೀರು ಪೋಲಾಗದಂತೆ ತಡೆದರು. ನದಿಯನ್ನು ನೀರಿನಿಂದ ತುಂಬಿ ತುಳುಕುವಂತೆ ಮಾಡಿದರು. ಈ ಮಹಿಳೆಯರು ನೂರಾರು ಜಲಾಶಯಗಳ ನಿರ್ಮಾಣ ಮತ್ತು ಪುನರುಜ್ಜೀವನ ಕಾರ್ಯದಲ್ಲಿಯೂ ಸಹಾಯ ಹಸ್ತ ಚಾಚಿದ್ದಾರೆ. ಇದರಿಂದ ಈ ಭಾಗದ ಜನರ ನೀರಿನ ಸಮಸ್ಯೆ ನೀಗಿತು ಮಾತ್ರವಲ್ಲ, ಅವರ ಮುಖದಲ್ಲಿ ಸಂತೋಷವೂ ಅರಳಿತು.
ಸ್ನೇಹಿತರೇ, ಕೆಲವು ಸ್ಥಳಗಳಲ್ಲಿ ಮಹಿಳಾ ಶಕ್ತಿ ಜಲ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜಲಶಕ್ತಿ - ನಾರಿಶಕ್ತಿಗೆ ಪುಷ್ಟಿ ನೀಡುತ್ತದೆ. ಮಧ್ಯಪ್ರದೇಶದ 2 ಬಹುದೊಡ್ಡ ಪ್ರೇರಣಾದಾಯಕ ಪ್ರಯತ್ನಗಳ ಬಗ್ಗೆ ತಿಳಿದುಬಂದಿದೆ. ಡಿಂಡೌರಿಯ ರಾಯಪುರಾ ಗ್ರಾಮದಲ್ಲಿ ಒಂದು ದೊಡ್ಡ ಕೊಳದ ನಿರ್ಮಾಣದಿಂದ ಅಂತರ್ಜಲದ ಮಟ್ಟವು ಗಣನೀಯವಾಗಿ ಹೆಚ್ಚಿದೆ. ಇದರ ಲಾಭ ಈ ಗ್ರಾಮದ ಮಹಿಳೆಯರಿಗೆ ಲಭಿಸಿದೆ. ಇಲ್ಲಿಯ “ಶಾರದಾ ಆಜೀವಿಕಾ ಸ್ವಯಂ ಸಹಾಯತಾ ಸಮೂಹ”ದ ಮಹಿಳೆಯರಿಗೆ ಮೀನು ಸಾಕಣೆಯ ಹೊಸ ಉದ್ಯೋಗವೂ ಲಭಿಸಿದೆ. ಈ ಮಹಿಳೆಯರು ಫಿಶ್ ಪಾರ್ಲರ್ ಕೂಡಾ ಆರಂಭಿಸಿದ್ದಾರೆ. ಇಲ್ಲಿ ಆಗುವ ಮೀನು ಮಾರಾಟದಿಂದ ಅವರ ಆದಾಯವೂ ಹೆಚ್ಚುತ್ತಿದೆ. ಮಧ್ಯಪ್ರದೇಶದ ಛತ್ತರ್ಪುರದ ಮಹಿಳೆಯರ ಪ್ರಯತ್ನವೂ ಬಹಳ ಶ್ಲಾಘನೀಯ. ಇಲ್ಲಿನ ಖೋಪ್ ಗ್ರಾಮದ ದೊಡ್ಡ ಕೊಳ ಬತ್ತಲು ಆರಂಭಿಸಿದಾಗ ಅದನ್ನು ಪುನಶ್ಚೇತನಗೊಳಿಸಲು ನಿರ್ಧರಿಸಿದರು. ‘ಹರಿ ಬಗಿಯಾ ಸ್ವಸಹಾಯ ಸಂಘದ’ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಹೂಳು ತೆಗೆದರು. ಈ ಹೂಳು ಮಣ್ಣನ್ನು ಬಂಜರು ಭೂಮಿಯಲ್ಲಿ ಹಣ್ಣಿನ ವನವನ್ನು ಸಿದ್ಧಗೊಳಿಸಲು ಬಳಸಿದರು. ಈ ಮಹಿಳೆಯರ ಪರಿಶ್ರಮದಿಂದ ಕೆರೆಯಲ್ಲಿ ಸಾಕಷ್ಟು ನೀರು ತುಂಬಿದ್ದು ಮಾತ್ರವಲ್ಲದೆ ಬೆಳೆ ಇಳುವರಿಯೂ ಗಣನೀಯವಾಗಿ ಹೆಚ್ಚಿದೆ. ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಇಂತಹ 'ಜಲ ಸಂರಕ್ಷಣೆ' ಪ್ರಯತ್ನಗಳು ನೀರಿನ ಬಿಕ್ಕಟ್ಟನ್ನು ಎದುರಿಸಲು ಬಹಳ ಸಹಾಯಕವಾಗಲಿವೆ. ನಿಮ್ಮ ಸುತ್ತಮುತ್ತ ನಡೆಯುವ ಇಂತಹ ಪ್ರಯತ್ನಗಳಿಗೆ ನೀವೂ ಖಂಡಿತಾ ಕೈಜೋಡಿಸುತ್ತೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
ನನ್ನ ಪ್ರಿಯ ದೇಶವಾಸಿಗಳೇ, ಉತ್ತರಾಖಂಡದ ಉತ್ತರಕಾಶಿಯಲ್ಲಿ ಗಡಿಭಾಗದಲ್ಲಿ ‘ಝಾಲಾ’ ಎಂಬ ಗ್ರಾಮವಿದೆ. ಇಲ್ಲಿನ ಯುವಕರು ತಮ್ಮ ಗ್ರಾಮವನ್ನು ಸ್ವಚ್ಛವಾಗಿಡಲು ವಿಶೇಷ ಉಪಕ್ರಮ ಆರಂಭಿಸಿದ್ದಾರೆ. ಅವರು ತಮ್ಮ ಗ್ರಾಮದಲ್ಲಿ ಪ್ರಕೃತಿಗೆ ಧನ್ಯವಾದ ಹೇಳುವ ‘ಥ್ಯಾಂಕ್ಯೂ ನೇಚರ್’ ಅಭಿಯಾನ ನಡೆಸುತ್ತಿದ್ದಾರೆ. ಇದರ ಅಡಿಯಲ್ಲಿ ಪ್ರತಿ ದಿನ ಎರಡು ಗಂಟೆಗಳ ಕಾಲ ಗ್ರಾಮದಲ್ಲಿ ಸ್ವಚ್ಛತೆ ಮಾಡಲಾಗುತ್ತದೆ. ಗ್ರಾಮದ ಬೀದಿಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸಿ ಗ್ರಾಮದ ಹೊರಗೆ ನಿಗದಿತ ಸ್ಥಳದಲ್ಲಿ ಸುರಿಯಲಾಗುತ್ತದೆ. ಇದರಿಂದ ಝಾಲಾ ಗ್ರಾಮವೂ ಸ್ವಚ್ಛವಾಗುತ್ತಿದೆ, ಜನರಲ್ಲಿ ಜಾಗೃತಿಯೂ ಮೂಡುತ್ತಿದೆ. ಪ್ರತಿ ಹಳ್ಳಿ, ಪ್ರತಿ ಬೀದಿ, ಪ್ರತಿ ಪ್ರದೇಶವು ಇದೇ ರೀತಿಯ ಧನ್ಯವಾದ ಅಭಿಯಾನವನ್ನು ಪ್ರಾರಂಭಿಸಿದರೆ, ಆಗ ಎಷ್ಟು ದೊಡ್ಡ ಬದಲಾವಣೆಯಾಗಬಹುದು ಎಂದು ಯೋಚಿಸಿ.
ಸ್ನೇಹಿತರೇ, ಪುದುಚೇರಿಯ ಕಡಲತೀರಗಳಲ್ಲಿ ಸ್ವಚ್ಛತೆಯ ಬಗ್ಗೆ ಭಾರೀ ಪ್ರಚಾರವನ್ನು ನಡೆಸಲಾಗುತ್ತಿದೆ. ಇಲ್ಲಿ ರಮ್ಯಾ ಎಂಬ ಮಹಿಳೆ ಮಾಹೆ ಪುರಸಭೆ ಮತ್ತು ಅದರ ಸುತ್ತಮುತ್ತಲಿನ ಯುವಕರ ತಂಡದ ನೇತೃತ್ವ ವಹಿಸಿದ್ದಾರೆ. ಈ ತಂಡದ ಜನರು ತಮ್ಮ ಪ್ರಯತ್ನದಿಂದ ಮಾಹೆ ಪ್ರದೇಶವನ್ನು ಮತ್ತು ವಿಶೇಷವಾಗಿ ಅಲ್ಲಿನ ಬೀಚ್ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಿದ್ದಾರೆ.
ಸ್ನೇಹಿತರೇ, ನಾನು ಇಲ್ಲಿ ಕೇವಲ ಎರಡು ಪ್ರಯತ್ನಗಳ ಬಗ್ಗೆ ಮಾತ್ರ ಚರ್ಚಿಸಿದ್ದೇನೆ, ಆದರೆ ನಾವು ನಮ್ಮಸುತ್ತ ಮುತ್ತ ನೋಡಿದರೆ, ದೇಶದ ಪ್ರತಿಯೊಂದು ಭಾಗದಲ್ಲೂ 'ಸ್ವಚ್ಛತೆ'ಗೆ ಸಂಬಂಧಿಸಿದಂತೆ ಕೆಲವು ವಿಶಿಷ್ಟ ಪ್ರಯತ್ನಗಳು ನಡೆಯುತ್ತಲೇ ಇವೆ. ಇನ್ನು ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ 2 ರಂದು 'ಸ್ವಚ್ಛ ಭಾರತ್ ಮಿಷನ್' 10 ವರ್ಷಗಳನ್ನು ಪೂರೈಸುತ್ತಿದೆ. ಭಾರತೀಯ ಇತಿಹಾಸದಲ್ಲಿ ಇದನ್ನು ಇಷ್ಟು ದೊಡ್ಡ ಜನಾಂದೋಲನವನ್ನಾಗಿ ಮಾಡಿದ ಜನರನ್ನು ಅಭಿನಂದಿಸುವ ಸಂದರ್ಭವಿದು. ತಮ್ಮ ಜೀವನದುದ್ದಕ್ಕೂ ಈ ಉದ್ದೇಶಕ್ಕಾಗಿಯೇ ಸಮರ್ಪಿಸಿಕೊಂಡ ಮಹಾತ್ಮ ಗಾಂಧೀಜಿಯವರಿಗೆ ಇದು ನಿಜವಾದ ಗೌರವವಾಗಿದೆ.
ಸ್ನೇಹಿತರೇ, ಇಂದು 'ಸ್ವಚ್ಛ ಭಾರತ್ ಮಿಷನ್' ಯಶಸ್ಸಿನಿಂದಾಗಿ 'ವೇಸ್ಟ್ ಟು ವೆಲ್ತ್' ಎಂಬ ಮಂತ್ರವು ಜನಪ್ರಿಯವಾಗುತ್ತಿದೆ. ಜನರು ‘Reduce, Reuse ಮತ್ತು Recycle’ ಕುರಿತು ಮಾತನಾಡಲು ಪ್ರಾರಂಭಿಸಿದ್ದಾರೆ ಮತ್ತು ಅದೇ ಉದಾಹರಣೆಗಳನ್ನು ನೀಡುತ್ತಿದ್ದಾರೆ. ಕೇರಳದ ಕೋಝಿಕ್ಕೋಡ್ನಲ್ಲಿ ಒಂದು ಅದ್ಭುತವಾದ ಪ್ರಯತ್ನದ ಬಗ್ಗೆ ನನಗೆ ಇದೀಗ ತಿಳಿಯಿತು. ಇಲ್ಲಿ, ಎಪ್ಪತ್ನಾಲ್ಕು (74) ವರ್ಷದ ಸುಬ್ರಹ್ಮಣ್ಯನ್ ಅವರು 23 ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನು ದುರಸ್ತಿ ಮಾಡಿ ಮತ್ತೆ ಬಳಸುವಂತೆ ಮಾಡಿದ್ದಾರೆ. ಜನರು ಅವರನ್ನು ‘Reduce, Reuse ಮತ್ತು Recycle’, ಅಂದರೆ, RRR (ಟ್ರಿಪಲ್ R) ಚಾಂಪಿಯನ್ ಎಂದೂ ಕರೆಯುತ್ತಾರೆ. ಅವರ ಈ ವಿಶಿಷ್ಟ ಪ್ರಯತ್ನಗಳ ಫಲಶೃತಿಯನ್ನು ಕೋಝಿಕ್ಕೋಡ್ ಸಿವಿಲ್ ಸ್ಟೇಷನ್, PWD ಮತ್ತು LIC ಕಚೇರಿಗಳಲ್ಲಿ ಕಾಣಬಹುದು.
ಸ್ನೇಹಿತರೇ, ಸ್ವಚ್ಛತೆಯ ಅಭಿಯಾನದಲ್ಲಿ ಸಾಧ್ಯವಾದಷ್ಟು ಜನರನ್ನು ನಾವು ತೊಡಗಿಸಬೇಕಿದೆ ಮತ್ತು ಈ ಅಭಿಯಾನವು ಒಂದು ದಿನ ಅಥವಾ ಒಂದು ವರ್ಷವಲ್ಲ, ಇದು ಯುಗಯುಗಾಂತರಗಳವರೆಗೆ ನಿರಂತರವಾಗಿ ಮಾಡುವ ಕೆಲಸವಾಗಿದೆ. ಇದು ‘ಸ್ವಚ್ಛತೆ’ ನಮ್ಮ ಸ್ವಭಾವವಾಗುವವರೆಗೂ ಮಾಡಲೇಬೇಕಾದ ಕೆಲಸವಾಗಿದೆ. ನಿಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆಯವರು ಅಥವಾ ಸಹೋದ್ಯೋಗಿಗಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತೇನೆ. ‘ಸ್ವಚ್ಛ ಭಾರತ್ ಮಿಷನ್’ ಯಶಸ್ಸಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ನಾವೆಲ್ಲರೂ ನಮ್ಮ ಪರಂಪರೆಯ ಬಗ್ಗೆ ಬಹಳ ಹೆಮ್ಮೆಪಡುತ್ತೇವೆ. ಮತ್ತು ನಾನು ಯಾವಾಗಲೂ, 'ಅಭಿವೃದ್ಧಿ ಮತ್ತು ಪರಂಪರೆ' ಜೊತೆಯಾಗಿ ಸಾಗಬೇಕು ಎಂದು ಹೇಳುತ್ತೇನೆ. ಅದಕ್ಕಾಗಿಯೇ ನನ್ನ ಇತ್ತೀಚಿನ ಅಮೆರಿಕ ಪ್ರವಾಸದ ನಿರ್ದಿಷ್ಟ ಅಂಶದ ಕುರಿತು ಬಹಳಷ್ಟು ಸಂದೇಶಗಳು ಬರುತ್ತಿವೆ. ಮತ್ತೊಮ್ಮೆ ನಮ್ಮ ಪುರಾತನ ಕಲಾಕೃತಿಗಳ ಹಿಂಪಡೆಯುವಿಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ನಿಮ್ಮೆಲ್ಲರ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಮತ್ತು ಈ ಬಗ್ಗೆ 'ಮನದ ಮಾತಿನ' ಕೇಳುಗರಿಗೂ ಕುರಿತು ಹೇಳಬಯಸುತ್ತೇನೆ.
ಸ್ನೇಹಿತರೇ, ನನ್ನ ಅಮೆರಿಕ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಸರ್ಕಾರವು ಸುಮಾರು 300 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿತು. ಅಮೆರಿಕಾ ಅಧ್ಯಕ್ಷ ಬೈಡೆನ್ ಅವರು, ಬಹಳ ಆತ್ಮೀಯತೆಯನ್ನು ತೋರುತ್ತಾ ಡೆಲವೇರ್ ನಲ್ಲಿರುವ ತಮ್ಮ ಖಾಸಗಿ ನಿವಾಸದಲ್ಲಿ ಈ ಕಲಾಕೃತಿಗಳ ಪೈಕಿ ಕೆಲವನ್ನು ನನಗೆ ತೋರಿಸಿದರು. ಹಿಂದಿರುಗಿಸಲಾದ ಕಲಾಕೃತಿಗಳು ಟೆರ್ರ ಕೋಟಾ, ಕಲ್ಲು, ಆನೆಯ ದಂತ, ಮರ, ತಾಮ್ರ, ಕಂಚು ಇತ್ಯಾದಿ ವಸ್ತುಗಳಿಂದ ತಯಾರಿಸಲ್ಪಟ್ಟಿವೆ. ಇವುಗಳಲ್ಲಿ ಹಲವು ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯವು. ಅಮೆರಿಕ ದೇಶವು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದಾದ ಕಲಾಕೃತಿಗಳಿಂದ ಹಿಡಿದು 19ನೇ ಶತಮಾನದವರೆಗಿನ ಕಲಾಕೃತಿಗಳನ್ನು ಹಿಂದಿರುಗಿಸಿದೆ - ಇವುಗಳಲ್ಲಿ ಹೂದಾನಿಗಳು, ದೇವರು ಮತ್ತು ದೇವತೆಗಳ ಟೆರ್ರಕೋಟಾ ಫಲಕಗಳು, ಜೈನ ತೀರ್ಥಂಕರರ ಪ್ರತಿಮೆಗಳು, ಹಾಗೆಯೇ ಭಗವಾನ್ ಬುದ್ಧ ಮತ್ತು ಶ್ರೀ ಕೃಷ್ಣನ ಪ್ರತಿಮೆಗಳೂ ಸೇರಿವೆ.ಹಿಂತಿರುಗಿಸಲಾದ ವಸ್ತುಗಳ ಪೈಕಿ ಪ್ರಾಣಿಗಳ ಅನೇಕ ಕಲಾಕೃತಿಗಳಿವೆ. ಪುರುಷರು ಮತ್ತು ಮಹಿಳೆಯರ ಚಿತ್ರಗಳಿರುವ ಜಮ್ಮು ಮತ್ತು ಕಾಶ್ಮೀರದ ಟೆರ್ರಕೋಟಾ ಟೈಲ್ಸ್ ತುಂಬಾ ಆಸಕ್ತಿದಾಯಕವಾಗಿದೆ. ಇವುಗಳಲ್ಲಿ, ದಕ್ಷಿಣ ಭಾರತದ ಕಂಚಿನ ಶ್ರೀ ಗಣೇಶನ ಪ್ರತಿಮೆಗಳೂ ಇವೆ. ಹಿಂತಿರುಗಿದ ವಸ್ತುಗಳಲ್ಲಿ ವಿಷ್ಣುವಿನ ಚಿತ್ರಗಳು ಅಧಿಕ ಸಂಖ್ಯೆಯಲ್ಲಿವೆ. ಇವು ಮುಖ್ಯವಾಗಿ ಉತ್ತರ ಮತ್ತು ದಕ್ಷಿಣ ಭಾರತಕ್ಕೆ ಸಂಬಂಧಿಸಿದ್ದಾಗಿವೆ. ಈ ಕಲಾಕೃತಿಗಳನ್ನು ನೋಡಿದಾಗ, ನಮ್ಮ ಪೂರ್ವಜರು ಇಂತಹವುಗಳಿಗೆ ಎಷ್ಟು ಗಮನ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರು ಕಲೆಯ ಬಗ್ಗೆ ಅದ್ಭುತವಾದತಿಳುವಳಿಕೆಯನ್ನು ಹೊಂದಿದ್ದರು. ಇವುಗಳಲ್ಲಿ ಹಲವು ಕಲಾಕೃತಿಗಳನ್ನು ಕಳ್ಳಸಾಗಾಣಿಕೆ ಮತ್ತು ಇತರ ಕಾನೂನು ಬಾಹಿರ ವಿಧಾನಗಳ ಮೂಲಕ ದೇಶದಿಂದ ಹೊರಕ್ಕೆ ಕೊಂಡೊಯ್ಯಲಾಗಿದೆ - ಇದು ಗಂಭೀರ ಅಪರಾಧವಾಗಿದೆ, ಒಂದು ರೀತಿಯಲ್ಲಿ ಇದು ಪರಂಪರೆಯನ್ನು ನಾಶಪಡಿಸುತ್ತಿದೆ, ಆದರೆ ಕಳೆದ ದಶಕದಲ್ಲಿ ಇಂತಹ ಹಲವಾರು ಕಲಾಕೃತಿಗಳು ಮತ್ತು ನಮ್ಮ ಹಲವು ಪ್ರಾಚೀನ ಪರಂಪರೆಗಳು ನಮ್ಮ ದೇಶಕ್ಕೆ ಮರಳಿ ಬಂದಿವೆ ಎಂಬ ವಿಷಯ ನನಗೆ ಬಹಳ ಸಂತೋಷ ತಂದಿದೆ. ಈ ನಿಟ್ಟಿನಲ್ಲಿ ಇಂದು ಭಾರತವೂ ಹಲವು ದೇಶಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಟ್ಟಾಗ, ಜಗತ್ತು ಅದನ್ನು ಗೌರವಿಸುತ್ತದೆ ಎಂದು ನಾನು ನಂಬುತ್ತೇನೆ ಮತ್ತು ಅದರ ಪರಿಣಾಮವೇ ಇಂದು ಪ್ರಪಂಚದ ಅನೇಕ ದೇಶಗಳು ನಮ್ಮ ದೇಶದಿಂದ ಹೋದ ಹಲವಾರು ಇಂತಹ ಕಲಾಕೃತಿಗಳನ್ನು ನಮಗೆ ಮರಳಿ ನೀಡುತ್ತಿವೆ.
ನನ್ನ ಪ್ರೀತಿಯ ಸ್ನೇಹಿತರೇ, ಮಗು ಯಾವ ಭಾಷೆಯನ್ನು ಹೆಚ್ಚು ಸುಲಭವಾಗಿ ಮತ್ತು ತ್ವರಿತವಾಗಿ ಕಲಿಯುತ್ತದೆ ಎಂದು ನಾನು ಕೇಳಿದರೆ - ನಿಮ್ಮ ಉತ್ತರ 'ಮಾತೃಭಾಷೆ' ಎಂದಾಗಿರುತ್ತದೆ. ನಮ್ಮ ದೇಶದಲ್ಲಿ ಸುಮಾರು ಇಪ್ಪತ್ತು ಸಾವಿರ ಭಾಷೆಗಳು ಮತ್ತು ಉಪಭಾಷೆಗಳಿವೆ ಮತ್ತು ಅವೆಲ್ಲವೂ ಖಂಡಿತವಾಗಿಯೂ ಯಾರಾದರೊಬ್ಬರ ಮಾತೃ ಭಾಷೆಯಾಗಿರುತ್ತವೆ. ಕೆಲವು ಭಾಷೆಗಳನ್ನು ಮಾತನಾಡುವ ಜನಸಂಖ್ಯೆ ಬಹಳ ಕಡಿಮೆಯೂ ಇರಬಹುದು. ಆದರೆ ಇಂದು,ಆ ಭಾಷೆಗಳನ್ನು ಸಂರಕ್ಷಿಸಲು ಹಲವು ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಅಂತಹ ಒಂದು ಭಾಷೆಯೇ ನಮ್ಮ ‘ಸಂತಲಿ’ ಭಾಷೆ. ಡಿಜಿಟಲ್ ಆವಿಷ್ಕಾರದ ಸಹಾಯದಿಂದ ‘ಸಂತಲಿ’ಗೆ ಹೊಸ ಗುರುತನ್ನು ನೀಡುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ನಮ್ಮ ದೇಶದ ಹಲವು ರಾಜ್ಯಗಳಲ್ಲಿ ವಾಸಿಸುವ ಸಂತಾಲ್ ಬುಡಕಟ್ಟು ಸಮುದಾಯದ ಜನರು 'ಸಂತಾಲಿ' ಭಾಷೆ ಮಾತನಾಡುತ್ತಾರೆ. ಭಾರತವಲ್ಲದೆ, ಸಂತಾಲಿ ಭಾಷೆ ಮಾತನಾಡುವ ಬುಡಕಟ್ಟು ಸಮುದಾಯಗಳು ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ನಲ್ಲಿಯೂ ಇವೆ. ಒಡಿಶಾದ ಮಯೂರ್ ಭಂಜ್ ನಿವಾಸಿಯಾಗಿರುವ ಶ್ರೀ ರಾಮ್ಜಿತ್ ತುಡು ಅವರು ಸಂತಾಲಿ ಭಾಷೆಯ ಆನ್ಲೈನ್ ಗುರುತನ್ನು ರಚಿಸಲು ಅಭಿಯಾನವೊಂದನ್ನು ನಡೆಸುತ್ತಿದ್ದಾರೆ. ಸಂತಾಲಿ ಭಾಷೆಗೆ ಸಂಬಂಧಿಸಿದ ಸಾಹಿತ್ಯವನ್ನು ಸಂತಾಲಿ ಭಾಷೆಯಲ್ಲಿ ಓದಲು ಮತ್ತು ಬರೆಯಲು ರಾಮ್ಜಿತ್ ಅವರು ಡಿಜಿಟಲ್ ವೇದಿಕೆಯನ್ನು ರಚಿಸಿದ್ದಾರೆ. ವಾಸ್ತವದಲ್ಲಿ, ಕೆಲವು ವರ್ಷಗಳ ಹಿಂದೆ, ರಾಮ್ಜಿತ್ ಅವರು ಮೊಬೈಲ್ ಫೋನ್ ಬಳಸಲು ಪ್ರಾರಂಭಿಸಿದಾಗ, ಅವರು ತಮ್ಮ ಮಾತೃಭಾಷೆಯಲ್ಲಿ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದ ಕುರಿತಂತೆ ಬೇಸರಗೊಂಡಿದ್ದರು. ಇದಾದ ನಂತರ ‘ಸಂತಾಲಿ ಭಾಷೆಯ ‘ಓಲ್ಚಿಕಿ’ ಲಿಪಿಯನ್ನು ಟೈಪ್ ಮಾಡುವ ಸಾಧ್ಯತೆಗಳನ್ನು ಅನ್ವೇಷಿಸಲು ಆರಂಭಿಸಿದರು. ಅವರ ಕೆಲವು ಸಹೋದ್ಯೋಗಿಗಳ ಸಹಾಯದಿಂದ ಅವರು 'ಓಲ್ ಚಿಕ್' ಟೈಪ್ ಮಾಡುವ ತಂತ್ರವನ್ನು ಅಭಿವೃದ್ಧಿಪಡಿಸಿದರು. ಇಂದು ಅವರ ಈ ಪ್ರಯತ್ನದಿಂದ ಸಂತಾಲಿ ಭಾಷೆಯಲ್ಲಿ ಬರೆದ ಲೇಖನಗಳು ಲಕ್ಷಾಂತರ ಜನರನ್ನು ತಲುಪುತ್ತಿವೆ.
ಸ್ನೇಹಿತರೇ, ನಮ್ಮ ಸಂಕಲ್ಪದೊಂದಿಗೆ ಸಾಮೂಹಿಕ ಸಹಭಾಗಿತ್ವವನ್ನು ಸಂಯೋಜಿಸಿದಾಗ, ಇಡೀ ಸಮಾಜಕ್ಕೆ ಅದ್ಭುತ ಫಲಿತಾಂಶಗಳು ಹೊರಹೊಮ್ಮುತ್ತವೆ. ಇದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ ‘ಒಂದು ಸಸ್ಯ ತಾಯಿಯ ಹೆಸರಿನಲ್ಲಿ’ ಎಂಬ ಅಭಿಯಾನ. ಇದೊಂದು ಅದ್ಭುತ ಅಭಿಯಾನವಾಗಿತ್ತು, ಸಾರ್ವಜನಿಕ ಸಹಭಾಗಿತ್ವದಇಂತಹ ಉದಾಹರಣೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. ಪರಿಸರ ಸಂರಕ್ಷಣೆಗಾಗಿ ಆರಂಭಿಸಿದ ಈ ಅಭಿಯಾನದಲ್ಲಿ ದೇಶದ ಮೂಲೆ ಮೂಲೆಯ ಜನರು ಅದ್ಭುತಗಳನ್ನು ಮಾಡಿ ತೋರಿದ್ದಾರೆ. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳು ಗುರಿಗಿಂತ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಹೊಸ ದಾಖಲೆ ಸೃಷ್ಟಿಸಿವೆ. ಈ ಅಭಿಯಾನದ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ 26ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಗುಜರಾತ್ನ ಜನರು 15 ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟರು. ಆಗಸ್ಟ್ ತಿಂಗಳೊಂದರಲ್ಲೇ ರಾಜಸ್ಥಾನದಲ್ಲಿ 6 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಯಿತು. ದೇಶದ ಸಾವಿರಾರು ಶಾಲೆಗಳು ಕೂಡ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ.
ಸ್ನೇಹಿತರೇ, ಸಸಿ ನೆಡುವ ಅಭಿಯಾನಕ್ಕೆ ಸಂಬಂಧಿಸಿದ ಅನೇಕ ಉದಾಹರಣೆಗಳು ನಮ್ಮ ದೇಶದಲ್ಲಿ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹ ಒಂದು ಉದಾಹರಣೆಯೆಂದರೆ ತೆಲಂಗಾಣದ ಕೆ.ಎನ್.ರಾಜಶೇಖರ್ ಅವರು. ಸಸಿಗಳನ್ನು ನೆಡುವ ಕುರಿತ ಅವರ ಬದ್ಧತೆ ನಮ್ಮೆಲ್ಲರನ್ನು ಬೆರಗುಗೊಳಿಸುತ್ತದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಸಸಿ ನೆಡುವ ಅಭಿಯಾನವನ್ನು ಅವರು ಆರಂಭಿಸಿದ್ದರು. ಪ್ರತಿ ದಿನವೂ ಒಂದೊಂದು ಸಸಿ ನೆಡಬೇಕು ಎಂದು ನಿರ್ಧರಿಸಿದರು. ಅವರು ಈ ಅಭಿಯಾನವನ್ನು ಕಟ್ಟುನಿಟ್ಟಾದ ಉಪವಾಸದಂತೆ ಅನುಸರಿಸಿದರು. ಇದುವರೆಗೂ ಅವರು 1500 ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಈ ವರ್ಷ ಅಪಘಾತಕ್ಕೆ ತುತ್ತಾದ ನಂತರವೂ ಅವರು ತಮ್ಮ ಸಂಕಲ್ಪವನ್ನು ಸಡಿಲಿಸಲಿಲ್ಲ. ಅಂತಹ ಎಲ್ಲಾ ಪ್ರಯತ್ನಗಳನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಈ ಪವಿತ್ರ ಅಭಿಯಾನ ‘ಒಂದು ಸಸಿ ತಾಯಿಯ ಹೆಸರಿನಲ್ಲಿಗೆ ಸೇರಲು ನಾನು ನಿಮ್ಮಲ್ಲಿಯೂ ಮನವಿ ಮಾಡುತ್ತಿದ್ದೇನೆ.
ನನ್ನ ಪ್ರೀತಿಯ ಸ್ನೇಹಿತರೇ, ಆಪತ್ಕಾಲದಲ್ಲಿ ತಾಳ್ಮೆ, ಸಹನೆ ಕಳೆದುಕೊಳ್ಳದೇ, ದೈರ್ಯಗೆಡದೆ, ಅಂತಹ ಸಮಯದಿಂದ ಏನನ್ನಾದರೂ ಕಲಿತುಕೊಳ್ಳುವ ಕೆಲವರು ನಮ್ಮ ನಡುವೆ ಇದ್ದಾರೆ ಎಂಬುದನ್ನು ನೀವು ಗಮನಿಸಿರಬೇಕು. ಅಂತಹ ಜನರ ಪೈಕಿ ಸುಭಶ್ರೀ ಎಂಬ ಮಹಿಳೆಯೂ ಒಬ್ಬರು. ಸುಭಶ್ರೀ ಅವರು ತಮ್ಮ ಶ್ರಮ ಹಾಗೂ ಪ್ರಯತ್ನದಿಂದ ಅಪರೂಪದ ಮತ್ತು ಅತ್ಯಂತ ಉಪಯುಕ್ತವಾದ ಗಿಡಮೂಲಿಕೆಗಳ ಅದ್ಭುತ ಉದ್ಯಾನವನ ರಚಿಸಿದ್ದಾರೆ. ಆಕೆ ತಮಿಳುನಾಡಿನ ಮಧುರೈ ನಿವಾಸಿಯಾಗಿದ್ದಾರೆ. ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ, ಔಷಧೀಯ ಸಸ್ಯಗಳು ಮತ್ತು ವೈದ್ಯಕೀಯ ಗಿಡಮೂಲಿಕೆಗಳ ಬಗ್ಗೆ ಆಳವಾದ ಆಸಕ್ತಿಯನ್ನು ಹೊಂದಿದ್ದಾರೆ. 80 ರ ದಶಕದಲ್ಲಿ ಅವರ ತಂದೆಯನ್ನು ಒಮ್ಮೆ ವಿಷಪೂರಿತ ಹಾವೊಂದು ಕಚ್ಚಿದ ಸಂದರ್ಭದಲ್ಲಿ ಸುಭಶ್ರೀ ಅವರಿಗೆ ಔಷಧೀಯ ಸಸ್ಯಗಳ ಬಗ್ಗೆ ಒಲವು ಪ್ರಾರಂಭವಾಯಿತು. ಆ ಸಮಯದಲ್ಲಿ ಅವರ ತಂದೆಯ ಆರೋಗ್ಯವನ್ನು ಸುಧಾರಿಸುವಲ್ಲಿ ಸಾಂಪ್ರದಾಯಿಕ ಗಿಡಮೂಲಿಕೆಗಳು ಬಹಳಷ್ಟು ಉಪಯೋಗಕ್ಕೆ ಬಂದಿತು. ಈ ಘಟನೆಯ ನಂತರ ಅವರು ಸಾಂಪ್ರದಾಯಿಕ ಔಷಧಗಳು ಮತ್ತು ಗಿಡಮೂಲಿಕೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು. ಇಂದು, ಅವರು ಮಧುರೈನ ವೆರಿಚಿಯೂರ್ ಗ್ರಾಮದಲ್ಲಿ ವಿಶಿಷ್ಟವಾದ ಗಿಡಮೂಲಿಕೆಗಳ ಉದ್ಯಾನವನವನ್ನು ಹೊಂದಿದ್ದಾರೆ, ಇದು ಈ ವನದಲ್ಲಿ 500 ಕ್ಕೂ ಹೆಚ್ಚು ಅಪರೂಪದ ಔಷಧೀಯ ಸಸ್ಯಗಳು ಬೆಳೆದಿವೆ. ಈ ಉದ್ಯಾನವನ ಬೆಳೆಸಲು ಅವರು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಂದು ಸಸ್ಯದ ಅನ್ವೇಷಣೆಗೆ ಅವರು ದೂರ ದೂರದವರೆಗೂ ಪ್ರಯಾಣಿಸಿದ್ದಾರೆ. ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಮತ್ತು ಅನೇಕ ಬಾರಿ ಇತರರಲ್ಲಿ ಸಹಾಯಕ್ಕಾಗಿ ಕೂಡಾ ಕೇಳಿದ್ದಾರೆ. ಕೋವಿಡ್ ಸಮಯದಲ್ಲಿ, ಅವರು ಜನರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗಿಡಮೂಲಿಕೆಗಳನ್ನು ವಿತರಿಸಿದರು.ಇಂದು ಅವರ ಗಿಡಮೂಲಿಕೆಗಳ ತೋಟವನ್ನು ನೋಡಲು ದೂರ ದೂರದ ಪ್ರದೇಶಗಳಿಂದ ಜನರು ಬರುತ್ತಾರೆ. ಅವರೆಲ್ಲರಿಗೂ ಗಿಡಮೂಲಿಕೆ ಸಸ್ಯಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಅವರು ತಿಳಿಸುತ್ತಾರೆ. ನೂರಾರು ವರ್ಷಗಳಿಂದ ನಮ್ಮ ಸಂಸ್ಕೃತಿಯ ಭಾಗವಾಗಿರುವ ನಮ್ಮ ಪರಂಪರೆಯನ್ನು ಸುಭಶ್ರೀ ಮುನ್ನಡೆಸುತ್ತಿದ್ದಾರೆ. ಅವರ ಗಿಡಮೂಲಿಕೆಗಳ ತೋಟ ನಮ್ಮ ಭೂತಕಾಲವನ್ನು ಭವಿಷ್ಯದೊಂದಿಗೆ ಸಂಪರ್ಕಿಸುತ್ತದೆ. ಅವರಿಗೆ ನನ್ನ ಶುಭಾಶಯಗಳು.
ಸ್ನೇಹಿತರೇ, ಬದಲಾಗುತ್ತಿರುವ ಈ ಕಾಲದಲ್ಲಿ ಉದ್ಯೋಗಗಳ ಸ್ವರೂಪವೂ ಬದಲಾಗುತ್ತಿದೆ ಮತ್ತು ಹೊಸ ಕ್ಷೇತ್ರಗಳು ಹೊರಹೊಮ್ಮುತ್ತಿವೆ. ಗೇಮಿಂಗ್, ಅನಿಮೇಷನ್, ರೀಲ್ ಮೇಕಿಂಗ್, ಫಿಲ್ಮ್ ಮೇಕಿಂಗ್ ಅಥವಾ ಪೋಸ್ಟರ್ ಮೇಕಿಂಗ್ ಇತ್ಯಾದಿ. ಈ ಯಾವುದೇ ಕೌಶಲ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮಗೆ ಸಾಧ್ಯವಾದಲ್ಲಿ, ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ದೊಡ್ಡದೊಂದು ವೇದಿಕೆ ದೊರೆಯಬಹುದು ಅಥವಾ ನೀವು ಯಾವುದೇ ಬ್ಯಾಂಡ್ ಗಳಲ್ಲಿ ಅಥವಾ ಸಮುದಾಯ ರೇಡಿಯೊದಲ್ಲಿ ಕೆಲಸ ಮಾಡುತ್ತಿದ್ದಲ್ಲಿ, ನಿಮಗೆ ಬೃಹತ್ ಅವಕಾಶಗಳಿವೆ. ನಿಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸಲು, ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ಭಾರತದಲ್ಲೇ ರಚಿಸಿ' ಎಂಬ ಶೀರ್ಷಿಕೆಯಡಿಯಲ್ಲಿ 25 ಸವಾಲುಗಳನ್ನು ಪ್ರಾರಂಭಿಸಿದೆ. ಖಂಡಿತವಾಗಿಯೂ ಈ ಸವಾಲುಗಳು ನಿಮಗೆ ಆಸಕ್ತಿದಾಯಕವಾಗಿರುತ್ತವೆ. ಕೆಲವು ಸವಾಲುಗಳು ಸಂಗೀತ, ಶಿಕ್ಷಣ ಮತ್ತು ಆಂಟಿ-ಪೈರಸಿ ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಈ ಸವಾಲುಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿರುವ ಅನೇಕ ವೃತ್ತಿಪರ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿವೆ. ಇವುಗಳಲ್ಲಿ ಭಾಗವಹಿಸಲು ನೀವು wavesindia.org ಗೆ ಲಾಗಿನ್ ಮಾಡಬಹುದು. ದೇಶಾದ್ಯಂತ ಇರುವ ಸೃಜನಶೀಲ ಜನತೆ ಇದರಲ್ಲಿ ಪಾಲ್ಗೊಂಡು ತಮ್ಮ ಸೃಜನಶೀಲತೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕು ಎನ್ನುವುದು ನನ್ನ ವಿಶೇಷ ಮನವಿಯಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ತಿಂಗಳು ಮತ್ತೊಂದು ಮಹತ್ವಪೂರ್ಣ ಅಭಿಯಾನಕ್ಕೆ 10 ವರ್ಷಗಳು ಪೂರ್ಣವಾಗಿದೆ. ಈ ಅಭಿಯಾನದ ಯಶಸ್ಸಿನಲ್ಲಿ, ದೊಡ್ಡ ಉದ್ಯಮಗಳಿಂದ ಹಿಡಿದು ಸಣ್ಣ ಸಣ್ಣ ವ್ಯಾಪಾರಿಗಳವರೆಗೆ ಪ್ರತಿಯೊಬ್ಬರ ಕೊಡುಗೆಯೂ ಸೇರಿದೆ. ನಾನು ಈಗ ಮಾತನಾಡುತ್ತಿರುವುದು 'ಮೇಕ್ ಇನ್ ಇಂಡಿಯಾ' ಅಭಿಯಾನದ ಬಗ್ಗೆ. ಇಂದು ಬಡವರು,ಮಧ್ಯಮ ವರ್ಗದವರು ಮತ್ತು ಎಂಎಸ್ಎಂಇಗಳು ಈ ಅಭಿಯಾನದಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಈ ಅಭಿಯಾನವು ಪ್ರತಿಯೊಂದು ವರ್ಗದ ಜನರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿದೆ. ಇಂದು,ಭಾರತವು ಉತ್ಪಾದನೆಯ ಶಕ್ತಿ ಕೇಂದ್ರವೆನಿಸಿದೆ ಮತ್ತು ದೇಶದ ಯುವ ಶಕ್ತಿಯಿಂದಾಗಿ, ಇಡೀ ಪ್ರಪಂಚ ನಮ್ಮ ಕಡೆಗೆ ನೋಡುವಂತಾಗಿದೆ. ವಾಹನೋದ್ಯಮ, ಜವಳಿ, ವಿಮಾನಯಾನ, ಎಲೆಕ್ಟ್ರಾನಿಕ್ಸ್ ಅಥವಾ ರಕ್ಷಣಾ ಕ್ಷೇತ್ರ ಯಾವುದೇ ಆಗಿರಲಿ, ಪ್ರತಿಯೊಂದು ಕ್ಷೇತ್ರದಲ್ಲೂ ದೇಶದ ರಫ್ತು ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಿದೆ. ದೇಶದಲ್ಲಿ ವಿದೇಶೀ ನೇರ ಹೂಡಿಕೆ ಪ್ರಮಾಣ ಸತತವಾಗಿ ಹೆಚ್ಚಾಗುತ್ತಿರುವುದು ನಮ್ಮ 'ಮೇಕ್ ಇನ್ ಇಂಡಿಯಾ'ದ ಯಶೋಗಾಥೆಯನ್ನೂ ಹೇಳುತ್ತಿದೆ. ಈಗ ನಾವು ಮುಖ್ಯವಾಗಿ ಎರಡು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಮೊದಲನೆಯದು 'ಗುಣಮಟ್ಟ' ಅಂದರೆ ನಮ್ಮ ದೇಶದಲ್ಲಿ ತಯಾರಾಗುವ ಉತ್ಪನ್ನಗಳು ಜಾಗತಿಕ ಗುಣಮಟ್ಟ ಹೊಂದಿರಬೇಕು. ಎರಡನೆಯದು 'ವೋಕಲ್ ಫಾರ್ ಲೋಕಲ್' ಅಂದರೆ ಸ್ಥಳೀಯ ಉತ್ಪನ್ನಗಳಿಗೆಸಾಧ್ಯವಾದಷ್ಟೂ ಉತ್ತೇಜನ ನೀಡಬೇಕು, ಪ್ರಚಾರ ಮಾಡಬೇಕು. 'ಮನದ ಮಾತಿನಲ್ಲಿ' ನಾವು #MyProductMyPride ಕುರಿತಂತೆ ಕೂಡಾ ಮಾತನಾಡಿದ್ದೇವೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದರಿಂದ ದೇಶದ ಜನರಿಗೆ ಯಾವರೀತಿ ಲಾಭವಾಗುತ್ತದೆ ಎಂಬುದನ್ನು ಒಂದು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳಬಹುದು.
ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ಜವಳಿಗೆ ಸಂಬಂಧಿಸಿದಂತೆ ಒಂದು ಹಳೆಯ ಸಂಪ್ರದಾಯವಿದೆ - 'ಭಂಡಾರ ಟಸ್ಸರ್ ಸಿಲ್ಕ್ ಹ್ಯಾಂಡ್ಲೂಮ್'. ಟಸ್ಸರ್ ಸಿಲ್ಕ್ ತನ್ನ ವಿನ್ಯಾಸ, ಬಣ್ಣ ಮತ್ತು ದೃಢತೆಗೆ ಹೆಸರುವಾಸಿಯಾಗಿದೆ. ಭಂಡಾರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ 50ಕ್ಕೂ ಅಧಿಕ 'ಸ್ವಸಹಾಯ ಸಂಘ'ಗಳು ಇದನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇವುಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅಧಿಕ ಪ್ರಮಾಣದಲ್ಲಿದೆ. ಈ ರೇಷ್ಮೆ ವೇಗವಾಗಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ ಮತ್ತು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಿದೆ ಮತ್ತು ಇದು 'ಮೇಕ್ ಇನ್ ಇಂಡಿಯಾ'ದ ಸ್ಫೂರ್ತಿಯೆನಿಸಿದೆ.
ಸ್ನೇಹಿತರೇ, ಹಬ್ಬಗಳ ಈ ಕಾಲದಲ್ಲಿ ನೀವು ನಿಮ್ಮ ಹಳೆಯ ನಿರ್ಣಯವನ್ನು ಮತ್ತೊಮ್ಮೆ ಪುನರ್ ಮನನ ಮಾಡಿಕೊಳ್ಳಿ. ನೀವು ಏನನ್ನು ಖರೀದಿಸಿದರೂ ಅದು 'ಭಾರತದಲ್ಲಿ ತಯಾರಾಗಿರಬೇಕು' ಅಂದರೆ 'ಮೇಡ್ ಇನ್ ಇಂಡಿಯಾ' ಆಗಿರಬೇಕು, ನೀವು ಬೇರೆಯವರಿಗೆ ಏನೇ ಉಡುಗೊರೆ ನೀಡಿದರೂ ಅದು 'ಮೇಡ್ ಇನ್ ಇಂಡಿಯಾ' ಆಗಿರಬೇಕು. ಕೇವಲ ಮಣ್ಣಿನ ದೀಪಗಳನ್ನು ಖರೀದಿಸುವುದು 'ಲೋಕಲ್ ಫಾರ್ ವೋಕಲ್' ಅಲ್ಲ. ನೀವು ವಾಸವಾಗಿರುವ ಪ್ರದೇಶದಲ್ಲಿ ತಯಾರಿಸಿದ ಸ್ಥಳೀಯ ಉತ್ಪನ್ನಗಳಿಗೆ ನೀವು ಸಾಧ್ಯವಾದಷ್ಟೂ ಉತ್ತೇಜನ, ಪ್ರೋತ್ಸಾಹ ನೀಡಬೇಕು. ನಮ್ಮ ಕುಶಲಕರ್ಮಿಗಳು ತಮ್ಮ ಶ್ರಮದಿಂದ ಬೆವರು ಹರಿಸಿ, ಭಾರತದ ನೆಲದಲ್ಲಿ ತಯಾರಿಸಿದ ಯಾವುದೇ ಉತ್ಪನ್ನ ನಮ್ಮ ಹೆಮ್ಮೆಯಾಗಿರುತ್ತದೆ– ಈ ಹೆಮ್ಮೆಯನ್ನು ನಾವು ನಮ್ಮ ಪ್ರಯತ್ನದಿಂದಲೂ ನಾಲ್ಕು ಪಟ್ಟು ಹೆಚ್ಚಿಸಬೇಕು.
ಸ್ನೇಹಿತರೇ, ‘ಮನದ ಮಾತಿನ’ ಈ ಸಂಚಿಕೆಯಲ್ಲಿ ನಿಮ್ಮೊಂದಿಗೆ ಬೆರೆತು ನನಗೆ ಬಹಳ ಸಂತೋಷವಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಖಂಡಿತವಾಗಿಯೂ ನನಗೆ ಕಳುಹಿಸಿಕೊಡಿ. ನಾನು ನಿಮ್ಮ ಪತ್ರಗಳು ಮತ್ತು ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ಕೆಲವೇ ದಿನಗಳ ನಂತರ ಹಬ್ಬಗಳ ಕಾಲ ಆರಂಭವಾಗಲಿದೆ. ನವರಾತ್ರಿಯಿಂದ ಈ ಹಬ್ಬಗಳ ಸಾಲು ಆರಂಭವಾಗುತ್ತದೆ ಮತ್ತು ಆ ನಂತರದ ಎರಡು ತಿಂಗಳುಗಳವರೆಗೂ ಪೂಜೆ-ಪುನಸ್ಕಾರ, ವ್ರತ-ಹಬ್ಬ, ಉಲ್ಲಾಸ-ಉತ್ಸಾಹ, ನಾಲ್ಕೂ ದಿಕ್ಕಿನಲ್ಲಿ ಇದೇ ಸಂತಸದ ವಾತಾವರಣ ಆವರಿಸಿಕೊಂಡಿರುತ್ತದೆ. ಮುಂಬರುವ ಹಬ್ಬಗಳಿಗಾಗಿ ನಾನು ನಿಮ್ಮೆಲ್ಲರಿಗೂ ಅನೇಕಾನೇಕ ಶುಭಾಶಯ ಕೋರುತ್ತೇನೆ. ನೀವೆಲ್ಲರೂ, ನಿಮ್ಮ ಕುಟುಂಬದವರ ಮತ್ತು ನಿಮ್ಮ ಆತ್ಮೀಯ ಬಂಧು ಬಾಂಧವರೊಂದಿಗೆ ಹಬ್ಬದ ಆನಂದವನ್ನು ಸಂಪೂರ್ಣವಾಗಿ ಸವಿಯಿರಿ. ಇತರರನ್ನೂ ನಿಮ್ಮ ಸಂತೋಷದಲ್ಲಿ ಭಾಗಿಯಾಗಿಸಿಕೊಳ್ಳಿ. ಮುಂದಿನ ತಿಂಗಳು ಮನದ ಮಾತಿನಲ್ಲಿ ಮತ್ತಷ್ಟು ಹೊಸ ವಿಷಯಗಳೊಂದಿಗೆ ನಿಮ್ಮೊಂದಿಗೆ ಇರಲಿದ್ದೇನೆ. ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದ.
ನನ್ನ ಪ್ರಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ಸ್ವಾಗತ. ಇಂದು ಮತ್ತೊಮ್ಮೆ ನಾವು ದೇಶದ ಸಾಧನೆಗಳು ಮತ್ತು ದೇಶದ ಜನತೆಯ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡಲಿದ್ದೇವೆ. 21 ನೇ ಶತಮಾನದ ಭಾರತದಲ್ಲಿ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ, ಇದೇ ಆಗಸ್ಟ್ 23 ರಂದು, ನಾವೆಲ್ಲರೂ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದೆವು. ನೀವೆಲ್ಲರೂ ಈ ದಿನವನ್ನು ಆಚರಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಮತ್ತೊಮ್ಮೆ ಚಂದ್ರಯಾನ-3 ರ ಯಶಸ್ಸನ್ನು ಆಚರಿಸಿರಬಹುದು. ಕಳೆದ ವರ್ಷ, ಇದೇ ದಿನದಂದು, ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿರುವ ಶಿವ-ಶಕ್ತಿ ಪಾಯಿಂಟ್ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು. ಭಾರತ ಈ ಅಮೋಘ ಸಾಧನೆ ಮಾಡಿದ ವಿಶ್ವದ ಮೊದಲ ದೇಶವಾಯಿತು.
ಸ್ನೇಹಿತರೇ, ದೇಶದ ಯುವಕರಿಗೆ ಸಹ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಂದ ಸಾಕಷ್ಟು ಪ್ರಯೋಜನವಾಗಿದೆ, ಹಾಗಾಗಿ ಇಂದು 'ಮನದ ಮಾತಿನಲ್ಲಿ' ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನನ್ನ ಕೆಲವು ಯುವ ಸ್ನೇಹಿತರೊಂದಿಗೆ ಮಾತನಾಡಲು ಯೋಚಿಸಿದ್ದೇನೆ. Spacetech Start-Up ನ ಸಂಸ್ಥೆಯಾದ GalaxEye ತಂಡವು ನನ್ನೊಂದಿಗೆ ಮಾತನಾಡಲು ಸಿದ್ಧವಿದೆ. ಈ ಸ್ಟಾರ್ಟ್-ಅಪ್ ಅನ್ನು ಐಐಟಿ-ಮದ್ರಾಸ್ನ ಹಳೆಯ ವಿದ್ಯಾರ್ಥಿಗಳು ಪ್ರಾರಂಭಿಸಿದ್ದರು. ಈ ಎಲ್ಲಾ ಯುವಕರು ಇಂದು ನಮ್ಮೊಂದಿಗೆ ಫೋನ್ ಲೈನ್ನಲ್ಲಿ ಇದ್ದಾರೆ - ಸುಯಶ್, ಡೇನಿಲ್, ರಕ್ಷಿತ್, ಕಿಶನ್ ಮತ್ತು ಪ್ರಣೀತ್. ಬನ್ನಿ, ಈ ಯುವಕರ ಅನುಭವಗಳನ್ನು ತಿಳಿಯೋಣ.
ಪ್ರಧಾನಮಂತ್ರಿ: ಹಲೋ!
ಎಲ್ಲಾ ಯುವಕರು: ಹಲೋ!
ಪ್ರಧಾನಮಂತ್ರಿ: ನಮಸ್ಕಾರ!
ಎಲ್ಲಾ ಯುವಕರು (ಒಟ್ಟಿಗೆ): ನಮಸ್ಕಾರ ಸಾರ್!
ಪ್ರಧಾನಮಂತ್ರಿ: ಸ್ನೇಹಿತರೇ, ಐಐಟಿ – ಮದ್ರಾಸ್ ನಿಂದ ಆರಂಭವಾದ ನಿಮ್ಮ ಅಚಲ ಸ್ನೇಹವು ಇಂದಿಗೂ ಗಟ್ಟಿಯಾಗಿ ಉಳಿದಿದೆ ಎಂಬುದನ್ನು ನೋಡಿ ನನಗೆ ಸಂತೋಷವಾಗಿದೆ. ಆದ್ದರಿಂದಲೇ ನೀವೆಲ್ಲ ಸೇರಿ GalaxEye ಅನ್ನು ಪ್ರಾರಂಭಿಸಲು ನಿರ್ಧರಿಸಿದ್ದೀರಿ. ಮತ್ತು ಇಂದು ನಾನು ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ. ಇದರ ಬಗ್ಗೆ ತಿಳಿಸಿ. ಜೊತೆಗೆ ನಿಮ್ಮ ತಂತ್ರಜ್ಞಾನದಿಂದ ದೇಶಕ್ಕೆ ಎಷ್ಟು ಲಾಭವಾಗಲಿದೆ ಎಂಬುದನ್ನು ಸಹ ತಿಳಿಸಿ.
ಸುಯಶ್: ಸರ್, ನನ್ನ ಹೆಸರು ಸುಯಶ್. ನೀವು ಹೇಳಿದಂತೆ ನಾವೆಲ್ಲ ಒಟ್ಟಿಗೆ ಇದ್ದೇವೆ. ಐಐಟಿ-ಮದ್ರಾಸ್ನಲ್ಲಿ ಎಲ್ಲರೂ ಭೇಟಿಯಾದೆವು. ಅಲ್ಲಿ ನಾವೆಲ್ಲರೂ ಇಂಜಿನಿಯರಿಂಗ್ ಪದವಿಯ ಬೇರೆ ಬೇರೆ ವರ್ಷದ ವಿಭಾಗಗಳಲ್ಲಿ ಓದುತ್ತಿದ್ದೆವು. ಮತ್ತು ಅದೇ ಸಮಯದಲ್ಲಿ ಹೈಪರ್ಲೂಪ್ ಎಂಬ ಪ್ರಾಜೆಕ್ಟ್ ಇದೆ ಎಂದು ನಮಗೆ ತಿಳಿಯಿತು ಅದನ್ನು ನಾವು ಒಟ್ಟಿಗೆ ಮಾಡಬಯಸಿದ್ದೆವು. ಅದೇ ಸಮಯದಲ್ಲಿ, ನಾವು ಒಂದು ತಂಡವನ್ನು ರಚಿಸಿದೆವು, ಅದರ ಹೆಸರು 'ಆವಿಷ್ಕಾರ್ ಹೈಪರ್ಲೂಪ್', ಅದೇ ತಂಡದೊಂದಿಗೆ ನಾವು ಅಮೇರಿಕಾಕ್ಕೆ ಕೂಡ ಭೇಟಿ ನೀಡಿದೆವು. ಆ ವರ್ಷ ಅಲ್ಲಿಗೆ ಹೋಗಿ ನಮ್ಮ ದೇಶದ ಧ್ವಜವನ್ನು ಹಾರಿಸಿದ ಏಷ್ಯಾದ ಏಕೈಕ ತಂಡ ನಮ್ಮದಾಗಿತ್ತು . ಅಲ್ಲದೆ ಪ್ರಪಂಚದಾದ್ಯಂತದ ಸುಮಾರು 1500 ತಂಡಗಳ ಪೈಕಿ ನಾವು ಅಗ್ರ 20 ತಂಡಗಳಲ್ಲಿ ಒಂದಾಗಿದ್ದೆವು.
ಪ್ರಧಾನಮಂತ್ರಿ: ಬನ್ನಿ! ಮತ್ತಷ್ಟು ನಿಮ್ಮಿಂದ ಕೇಳುವ ಮೊದಲು, ನಿಮ್ಮ ಸಾಧನೆಗೆ ನಿಮ್ಮನ್ನು ಅಭಿನಂದಿಸಬಯಸುತ್ತೇನೆ.
ಸುಯಶ್: ತುಂಬಾ ಧನ್ಯವಾದಗಳು. ಈ ಸಾಧನೆಯ ಅವಧಿಯಲ್ಲಿ ನಮ್ಮ ಸ್ನೇಹ ಗಾಢವಾಯಿತು ಮತ್ತು ಈ ರೀತಿಯಲ್ಲಿ ಕ್ಲಿಷ್ಟ ಮತ್ತು ಕಠಿಣ ಪ್ರಾಜೆಕ್ಟ್ ಗಳನ್ನು ಮಾಡುವ ಆತ್ಮವಿಶ್ವಾಸವೂ ಬೆಳೆಯಿತು. ಅದೇ ಸಮಯದಲ್ಲಿ, SpaceX ನೋಡಿ ಅಂದರೆ ನೀವು 2020 ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿನ ಖಾಸಗೀಕರಣ ಮಾಡಿದ್ದು, ನನ್ನ ಒಂದು ಮಹತ್ತರ ನಿರ್ಧಾರವಾಗಿತ್ತು. ಅದನ್ನು ಕಂಡು ನಾವು ತುಂಬಾ ಉತ್ಸುಕರಾಗಿದ್ದೆವು. ನಾವು ಏನನ್ನು ನಿರ್ಮಿಸುತ್ತಿದ್ದೇವೆ ಎಂಬುದರ ಬಗ್ಗೆ ಮಾತನಾಡಲು ಮತ್ತು ಅದರ ಪ್ರಯೋಜನವೇನು ಎಂದು ತಿಳಿಸಲು ನಾನು ರಕ್ಷಿತ್ ಅವರನ್ನು ಆಹ್ವಾನಿಸಲು ಬಯಸುತ್ತೇನೆ? ಧನ್ಯವಾದ.
ರಕ್ಷಿತ್: ಸರ್, ನನ್ನ ಹೆಸರು ರಕ್ಷಿತ್. ಈ ತಂತ್ರಜ್ಞಾನದಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು ಎಂಬುದಕ್ಕೆ ನಾನು ಉತ್ತರಿಸುತ್ತನೆ.
ಪ್ರಧಾನಮಂತ್ರಿ: ರಕ್ಷಿತ್, ನೀವು ಉತ್ತರಾಖಂಡದಲ್ಲಿ ಯಾವ ಪ್ರಾಂತ್ಯದವರು?
ರಕ್ಷಿತ್: ಸರ್, ನಾನು ಅಲ್ಮೋರಾ ನಿವಾಸಿ.
ಪ್ರಧಾನಮಂತ್ರಿ: ಹಾಗಾದರೆ ನೀವು ಬಾಲ್ ಮಿಠಾಯಿ ಪ್ರೇಮಿಯೇ?
ರಕ್ಷಿತ್: ಹೌದು ಸರ್. ಹೌದು ಸರ್. ಬಾಲ್ ಮಿಠಾಯಿ ನನಗೆ ಅಚ್ಚುಮೆಚ್ಚು.
ಪ್ರಧಾನಮಂತ್ರಿ: ನಮ್ಮ ಲಕ್ಷಸೇನ್ ಇದ್ದಾರಲ್ಲಾ, ನನಗೆ ಅವರು ನಿಯಮಿತವಾಗಿ ಬಾಲ್ ಮಿಠಾಯಿ ತಂದುಕೊಡುತ್ತಾರೆ
ಹಾಂ ರಕ್ಷಿತ್ ಹೇಳಿ
ರಕ್ಷಿತ್: ನಮ್ಮ ಈ ತಂತ್ರಜ್ಞಾನವು ಬಾಹ್ಯಾಕಾಶದಿಂದ ಮೋಡಗಳನ್ನು ಎರಡೂ ಬದಿಯಿಂದ ಮತ್ತು ರಾತ್ರಿಯಲ್ಲಿಯೂ ಸಹ ನೋಡಬಲ್ಲದು. ಆದ್ದರಿಂದ ನಾವು ದೇಶದ ಯಾವುದೇ ಮೂಲೆಯಲ್ಲಿ ಪ್ರತಿ ದಿನವೂ ಸ್ಪಷ್ಟವಾದ ಚಿತ್ರವನ್ನು ತೆಗೆಯಬಹುದು.ಮತ್ತು ನಾವು ಈ ದತ್ತಾಂಶವನ್ನು ಎರಡು ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಬಳಸುತ್ತೇವೆ. ಮೊದಲನೆಯದು ಭಾರತವನ್ನು ಅತ್ಯಂತ ಸುರಕ್ಷಿತಗೊಳಿಸುವುದಾಗಿದೆ. ನಮ್ಮ ಗಡಿಗಳು, ನಮ್ಮ ಸಾಗರಗಳು ಮತ್ತು ಸಮುದ್ರಗಳ ಮೇಲೆ ನಾವು ಪ್ರತಿದಿನ ನಿಗಾವಹಿಸಬಹುದು. ಜೊತೆಗೆ ಶತ್ರುಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತೇವೆ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಗುಪ್ತಚರ ಮಾಹಿತಿಯನ್ನು ನೀಡುತ್ತದೆ. ಎರಡನೆಯದು - ಭಾರತದ ರೈತರ ಸಬಲೀಕರಣ. ನಾವು ಈಗಾಗಲೇ ಭಾರತದ ಸೀಗಡಿ ಕೃಷಿಕರಿಗಾಗಿ ತಮ್ಮ ಕೊಳಗಳ ನೀರಿನ ಗುಣಮಟ್ಟವನ್ನು ಪ್ರಸ್ತುತ ವೆಚ್ಚದ 1/10 ರಷ್ಟು ಕಡಿಮೆ ವೆಚ್ಚದಲ್ಲಿ ಅಳೆಯುವ ಉತ್ಪನ್ನವನ್ನು ಸಿದ್ಧಪಡಿಸಿದ್ದೇವೆ. ಮುಂದುವರಿದಂತೆ ವಿಶ್ವಕ್ಕಾಗಿ ಉತ್ತಮ ಗುಣಮಟ್ಟದ ಉಪಗ್ರಹ ಚಿತ್ರಗಳನ್ನು ಲಭ್ಯವಾಗಿಸಬಯಸುತ್ತೇವೆ ಮತ್ತು ಜಾಗತಿಕ ತಾಪಮಾನದಂತಹ ಜಾಗತಿಕ ಸಮಸ್ಯೆಗಳ ವಿರುದ್ಧ ಹೋರಾಡಲು, ನಾವು ಜಗತ್ತಿಗೆ ಉತ್ತಮ ಗುಣಮಟ್ಟದ ಉಪಗ್ರಹ ದತ್ತಾಂಶವನ್ನು ಒದಗಿಸಲು ಇಚ್ಛಿಸುತ್ತೇವೆ.
ಪ್ರಧಾನಮಂತ್ರಿ: ಅಂದರೆ ನಿಮ್ಮ ತಂಡ ಜೈ ಜವಾನ್, ಜೈ ಕಿಸಾನ್ ಎರಡನ್ನೂ ಸಾಧಿಸುತ್ತದೆ.
ರಕ್ಷಿತ್: ಹೌದು ಸಾರ್, ಖಂಡಿತಾ.
ಪ್ರಧಾನಮಂತ್ರಿ: ಸ್ನೇಹಿತರೇ, ನೀವು ಇಂತಹ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ, ನಿಮ್ಮ ತಂತ್ರಜ್ಞಾನ ಎಷ್ಟು ನಿಖರವಾದದ್ದು ಎಂದು ಸಹ ನಾನು ತಿಳಿದುಕೊಳ್ಳಲು ಬಯಸುತ್ತೇನೆ?
ರಕ್ಷಿತ್: ಸರ್, ನಾವು 50 ಸೆಂಟಿಮೀಟರ್ಗಿಂತ ಕಡಿಮೆ ರೆಸಲ್ಯೂಶನ್ ವರೆಗೂ ಹೋಗಲು ಸಾಧ್ಯ. ಮತ್ತು ನಾವು ಒಂದು ಸಮಯದಲ್ಲಿ ಸರಿಸುಮಾರು 300 ಚದರ ಕಿಲೋಮೀಟರ್ ಪ್ರದೇಶದ ವ್ಯಾಪ್ತಿಯನ್ನು ಚಿತ್ರದಲ್ಲಿ ಸೆರೆ ಹಿಡಿಯಲು ಸಾಧ್ಯ.
ಪ್ರಧಾನಮಂತ್ರಿ: ಇದನ್ನು ಕೇಳಿದಾಗ ದೇಶವಾಸಿಗಳು ತುಂಬಾ ಹೆಮ್ಮೆಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಇನ್ನೊಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ.
ರಕ್ಷಿತ್: ಆಗಲಿ ಸರ್.
ಪ್ರಧಾನಮಂತ್ರಿ: ಬಾಹ್ಯಾಕಾಶ ಪರಿಸರ ವ್ಯವಸ್ಥೆಯು ಅತ್ಯಂತ ರೋಮಾಂಚಕಾರಿಯಾಗುತ್ತಿದೆ. ನಿಮ್ಮ ತಂಡ ಇದರಲ್ಲಿ ಯಾವ ಬದಲಾವಣೆಗಳನ್ನು ಕಂಡಿದೆ?
ಕಿಶನ್: ನನ್ನ ಹೆಸರು ಕಿಶನ್, ನಾವು GalaxEye ಪ್ರಾರಂಭವಾದಾಗಿನಿಂದ IN-SPAce ಯೋಜನೆಯ ಅಭಿವೃದ್ಧಿಯನ್ನು ನೋಡಿದ್ದೇವೆ ಜೊತೆಗೆ ಹಲವಾರು ನೀತಿಗಳು ಜಾರಿಗೊಳ್ಳುವುದನ್ನು ಕಂಡಿದ್ದೇವೆ. ಅಂದರೆ 'ಜಿಯೋ-ಸ್ಪೇಷಿಯಲ್ ಡೇಟಾ ಪಾಲಿಸಿ' ಮತ್ತು ಇಂಡಿಯಾ ಸ್ಪೇಸ್ ಪಾಲಿಸಿ' ನಂತಹ ನೀತಿಗಳು ಜಾರಿಗೊಳ್ಳುತ್ತಿರುವುದನ್ನು ನಾವು ಕಂಡಿದ್ದೇವೆ. ಕಳೆದ 3 ವರ್ಷಗಳಲ್ಲಿ ನಾವು ಬಹಳಷ್ಟು ಬದಲಾವಣೆಗಳನ್ನು ನೋಡಿದ್ದೇವೆ, ಮತ್ತು ಬಹಳಷ್ಟು ಪ್ರಕ್ರಿಯೆಗಳು, ಬಹಳಷ್ಟು ಮೂಲಸೌಕರ್ಯಗಳು ಮತ್ತು ಸಾಕಷ್ಟು ಸೌಲಭ್ಯಗಳನ್ನು ಕೂಡ ಕಂಡಿದ್ದೇವೆ. ಇಸ್ರೋದ ಲಭ್ಯತೆ, ಹೀಗೆ ಇನ್ನೂ ಹಲವಾರು ಬದಲಾವಣೆಗಳಾಗಿವೆ. ಉದಾಹರಣೆಗೆ ನಮ್ಮ ಹಾರ್ಡ್ವೇರ್ ಅನ್ನು ಇಸ್ರೋನಲ್ಲಿ ನಾವು ಪರೀಕ್ಷಿಸಬಹುದು, ಇದನ್ನು ಈಗ ತುಂಬಾ ಸುಲಭವಾಗಿ ಮಾಡಬಹುದಾಗಿದೆ. 3 ವರ್ಷಗಳ ಹಿಂದೆ, ಆ ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ ಮತ್ತು ಈಗ ಇದು ನಮಗೆ ಮತ್ತು ಇತರ ಅನೇಕ ಸ್ಟಾರ್ಟ್-ಅಪ್ಗಳಿಗೆ ತುಂಬಾ ಸಹಾಯಕರವಾಗಿದೆ. ಇತ್ತೀಚಿನ ಎಫ್ಡಿಐ ನೀತಿಗಳಿಂದಾಗಿ ಮತ್ತು ಸೌಲಭ್ಯಗಳ ಲಭ್ಯತೆಯಿಂದಾಗಿ, ಸ್ಟಾರ್ಟ್-ಅಪ್ಗಳಿಗೆ ಸಾಕಷ್ಟು ಪ್ರೋತ್ಸಾಹವಿದೆ. ಸಾಮಾನ್ಯವಾಗಿ ಅಂತಹ ಸ್ಟಾರ್ಟ್-ಅಪ್ಗಳು ಅಭಿವೃದ್ಧಿ ಹೊಂದಲು ಬಹಳ ದುಬಾರಿ ಮತ್ತು ಸಮಯ ತೆಗೆದುಕೊಳ್ಳುವಂತಹ ಕ್ಷೇತ್ರದಲ್ಲಿ ಬಹಳ ಸುಲಭವಾಗಿ ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಬಹುದು. ಆದರೆ ಪ್ರಸ್ತುತ ನೀತಿಗಳು ಮತ್ತು ಇನ್-ಸ್ಪೇಸ್ ಆಗಮನದ ನಂತರ, ಸ್ಟಾರ್ಟ್-ಅಪ್ಗಳಿಗೆ ಅನೇಕ ವಿಷಯಗಳು ಸುಲಭವಾಗಿವೆ. ನನ್ನ ಸ್ನೇಹಿತ ಡೇನಿಲ್ ಚಾವ್ಡಾ ಕೂಡ ಈ ಬಗ್ಗೆ ವಿಷಯ ಹಂಚಿಕೊಳ್ಳಬಯಸುತ್ತಾರೆ.
ಪ್ರಧಾನಿ: ಡೇನಿಲ್, ಹೇಳಿ
ಡೇನಿಲ್: ಸರ್, ನಾವು ಇನ್ನೂ ಒಂದು ವಿಷಯವನ್ನು ಗಮನಿಸಿದ್ದೇವೆ, ನಾವು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಆಲೋಚನೆಯಲ್ಲಿ ಬದಲಾವಣೆಯನ್ನು ಕಂಡಿದ್ದೇವೆ. ಮೊದಲು ಅವರು ಹೊರದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಲು ಬಯಸುತ್ತಿದ್ದರು ಮತ್ತು ಅಲ್ಲಿ ಬಾಹ್ಯಾಕಾಶ ಕ್ಷೆತ್ರದಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿದ್ದರು, ಆದರೆ ಈಗ ಭಾರತದಲ್ಲಿ ಬಾಹ್ಯಾಕಾಶ ಪರಿಸರ ವ್ಯವಸ್ಥೆ ಉತ್ತಮವಾಗಿದೆ, ಹಾಗಾಗಿ ಅವರು ಭಾರತಕ್ಕೆ ಹಿಂತಿರುಗಿ ಈ ಪರಿಸರದಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ. ಈ ವ್ಯವಸ್ಥೆಯ ಭಾಗವಾಗಲು ಇಚ್ಛಿಸುತ್ತಿದ್ದಾರೆ. ಆದ್ದರಿಂದ ನಮಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಮತ್ತು ಇದೇ ಕಾರಣದಿಂದ ನಮ್ಮ ಕಂಪನಿಯ ಕೆಲವರು ಹಿಂತಿರುಗಿ ಬಂದು ಕೆಲಸ ಮಾಡುತ್ತಿದ್ದಾರೆ.
ಪ್ರಧಾನಿ: ಕಿಶನ್ ಮತ್ತು ಡೇನಿಯಲ್ ಪ್ರಸ್ತಾಪಿಸಿದ ಅಂಶಗಳನ್ನು ಗಮನಿಸಿದಾಗ, ಒಂದು ಕ್ಷೇತ್ರದಲ್ಲಿ ಸುಧಾರಣೆಯಾದಾಗ, ಅದರ ಪರಿಣಾಮಗಳ ವ್ಯಾಪ್ತಿ ಎಷ್ಟು ವಿಶಾಲವಾಗಿರುತ್ತದೆ, ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ ಎಂಬುದರ ಬಗ್ಗೆ ಬಹಳಷ್ಟು ಜನರ ಗಮನ ಹರಿದಿರಲಿಕ್ಕಿಲ್ಲ ಎಂದು ನಾನು ಖಂಡಿತವಾಗಿ ನಂಬುತ್ತೇನೆ. ನೀವು ಈ ಕ್ಷೇತ್ರದಲ್ಲಿಯೇ ಇರುವುದರಿಂದ ದೇಶದ ಯುವಕರು ಈಗ ಈ ಕ್ಷೇತ್ರದಲ್ಲಿ ನಮ್ಮ ದೇಶದಲ್ಲೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಲು ಬಯಸುತ್ತಾರೆ ಎಂಬುದನ್ನು ನೀವು ಗಮನಿಸಿದ್ದೀರಿ ಎಂಬುದು ನಿಮ್ಮ ವಿವರಣೆಯಿಂದ ತಿಳಿದುಬರುತ್ತದೆ. ನಿಮ್ಮ ವೀಕ್ಷಣೆ ತುಂಬಾ ಚೆನ್ನಾಗಿದೆ. ಇನ್ನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ, ಸ್ಟಾರ್ಟ್ಅಪ್ಗಳು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವ ಯುವಕರಿಗೆ ನೀವು ಯಾವ ಸಂದೇಶವನ್ನು ನೀಡಬಯಸುತ್ತೀರಿ?
ಪ್ರಣಿತ್: ನಾನು ಪ್ರಣಿತ್ ಮಾತನಾಡುತ್ತಿದ್ದೇನೆ ಮತ್ತು ನಾನು ಉತ್ತರಿಸುತ್ತೇನೆ.
ಪ್ರಧಾನಮಂತ್ರಿ: ಹಾಂ ಪ್ರಣಿತ್, ಹೇಳಿ.
ಪ್ರಣೀತ್: ಸಾರ್, ನನ್ನ ಕೆಲವು ವರ್ಷಗಳ ಅನುಭವದಿಂದ ಎರಡು ವಿಷಯಗಳನ್ನು ಹೇಳಬಯಸುತ್ತೇನೆ. ಮೊದಲನೆಯದಾಗಿ ನೀವು start up ಆರಂಭಿಸಬಯಸಿದಲ್ಲಿ, ಇದು ಉತ್ತಮ ಅವಕಾಶವಾಗಿದೆ. ಏಕೆಂದರೆ ಇಡೀ ಜಗತ್ತಿನಲ್ಲಿ, ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿದೆ. ಇದರರ್ಥ ನಿಮಗೆ ಸಾಕಷ್ಟು ಅವಕಾಶಗಳಿವೆ. ನಾನು ನನ್ನ 24 ನೇ ವಯಸ್ಸಿನಲ್ಲಿ, ಮುಂದಿನ ವರ್ಷ ನಾವು ಉಪಗ್ರಹ ಉಡಾವಣೆ ಮಾಡಲಿದ್ದೇವೆ, ಇದರ ಆಧಾರದ ಮೇಲೆ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಅದರಲ್ಲಿ ನಮ್ಮದು ಒಂದು ಚಿಕ್ಕ ಕೊಡುಗೆಯಿದೆ ಎಂದು ಯೋಚಿಸಿ ಹೆಮ್ಮೆ ಅನಿಸುತ್ತದೆ. ಅಂತಹ ಕೆಲವು ರಾಷ್ಟ್ರ ಮಟ್ಟದ ಪರಿಣಾಮ ಬೀರುವ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದೆ. ಇದು ಎಂತಹ ಉದ್ಯಮ ಮತ್ತು ಇದು ಎಂತಹ ಸಮಯವೆಂದರೆ, ಈ ಬಾಹ್ಯಾಕಾಶ ಉದ್ಯಮ ಇಂದು ಪ್ರಾರಂಭವಾಗುತ್ತಿದೆ. ಹಾಗಾಗಿ ಇದು ರಾಷ್ಟ್ರವ್ಯಾಪಿ ಪ್ರಭಾವ ಬೀರುವುದು ಮಾತ್ರವಲ್ಲ, ಅವರ ಸ್ವಂತ ಆರ್ಥಿಕ ಬೆಳವಣಿಗೆಗೆ ಮತ್ತು ಜಾಗತಿಕ ಸಮಸ್ಯೆಯನ್ನು ಪರಿಹರಿಸಲು ಒಂದು ಅವಕಾಶ ಎಂದು ನನ್ನ ಯುವ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ. ಹಾಗಾಗಿ ನಾವು ಬಾಲ್ಯದಲ್ಲಿ ದೊಡ್ಡವರಾದ ನಂತರ ನಾವು ನಟರಾಗುತ್ತೇವೆ, ಕ್ರೀಡಾಪಟುಗಳಾಗುತ್ತೇವೆ ಎಂದು ನಮ್ಮೊಳಗೆ ಮಾತನಾಡಿಕೊಳ್ಳವ ಕಾಲವಿತ್ತು, ಆದರೆ ಇಂದು ಮಕ್ಕಳು ನಾವು ದೊಡ್ಡವರಾದ ಮೇಲೆ, ಉದ್ಯಮಿಯಾಗಬಯಸುತ್ತೇವೆ, ಬಾಹ್ಯಾಕಾಶ ಉದ್ಯಮದಲ್ಲಿ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳುತ್ತಾರೆ. ಈ ಸಂಪೂರ್ಣ ಪರಿವರ್ತನೆಯಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸುತ್ತಿದ್ದೇವೆ ಎಂಬುದು ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
ಪ್ರಧಾನಮಂತ್ರಿ: ಸ್ನೇಹಿತರೇ, ಒಂದು ರೀತಿಯಲ್ಲಿ ಹೇಳಬೇಕೆಂದರೆ, ಪ್ರಣೀತ್, ಕಿಶನ್, ಡ್ಯಾನಿಲ್, ರಕ್ಷಿತ್, ಸುಯಶ್, ನಿಮ್ಮ ನಡುವಿನ ಸ್ನೇಹ ಎಷ್ಟು ಗಾಢವಾಗಿದೆಯೋ ನಿಮ್ಮ ನವೋದ್ಯಮ ಕೂಡಾ ಅಷ್ಟೇ ದೃಢವಾಗಿದೆ. ಹೀಗಾಗಿಯೇ ನೀವು ಇಂತಹ ಅದ್ಭುತ ಕೆಲಸ ಮಾಡುತ್ತಿದ್ದೀರಿ. ಕೆಲವು ವರ್ಷಗಳ ಹಿಂದೆ ಐಐಟಿ- ಮದ್ರಾಸ್ ಗೆ ಭೇಟಿ ನೀಡುವ ಅವಕಾಶ ನನಗೆ ದೊರೆತಿತ್ತು, ಆ ಸಂಸ್ಥೆಯ ಉತ್ಕೃಷ್ಠತೆಯ ಪ್ರತ್ಯಕ್ಷ ಅನುಭವ ನನಗಾಯಿತು. ಅಂತೆಯೇ ಇಡೀ ಜಗತ್ತಿನಲ್ಲೇ ಐಐಟಿಗಳ ಬಗ್ಗೆ ಗೌರವದ ಭಾವನೆ ಇದೆ ಮತ್ತು ಇವುಗಳಿಂದ ಹೊರಹೊಮ್ಮುವ ನಮ್ಮ ಜನರು ಭಾರತಕ್ಕಾಗಿ ಕೆಲಸ ಮಾಡುವಾಗ, ಅವರು ಖಂಡಿತವಾಗಿಯೂ ದೇಶಕ್ಕೆ ಉತ್ತಮ ಕೊಡುಗೆಯನ್ನೇ ನೀಡುತ್ತಾರೆ. ನಿಮ್ಮೆಲ್ಲರಿಗೂ ಹಾಗೂ ಬಾಹ್ಯಾಕಾಶ ವಲಯದಲ್ಲಿ ಕೆಲಸ ಮಾಡುತ್ತಿರುವ ಇತರ ಎಲ್ಲಾ ನವೋದ್ಯಮಗಳಿಗೂ ನನ್ನ ಅನೇಕಾನೇಕ ಶುಭಾಶಯಗಳು. ಸ್ನೇಹಿತರಾಗಿರುವ ನಿಮ್ಮ ಐವರೊಂದಿಗೆ ಮಾತನಾಡಿ ನನಗೆ ಬಹಳ ಸಂತೋಷವಾಗಿದೆ. ಅನೇಕಾನೇಕ ಧನ್ಯವಾದ ಗೆಳೆಯರೇ.
ಸುಯಶ್ : ಧನ್ಯವಾದ.!
ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಈ ಬಾರಿ ಕೆಂಪು ಕೋಟೆಯಿಂದ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಒಂದು ಲಕ್ಷ ಯುವಜನರಿಗೆ ರಾಜಕೀಯ ವ್ಯವಸ್ಥೆಯೊಂದಿಗೆ ತೊಡಗಿಕೊಳ್ಳಬೇಕೆಂದು ಕರೆ ನೀಡಿದೆ. ನನ್ನ ಈ ಮಾತಿಗೆ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಭಾರೀ ಸಂಖ್ಯೆಯ ನಮ್ಮ ಯುವಜನತೆ ರಾಜಕೀಯಕ್ಕೆ ಬರಲು ಸಿದ್ಧರಾಗಿದ್ದಾರೆಂದು ಇದರಿಂದ ತಿಳಿದುಬರುತ್ತದೆ. ಅವರು ಸರಿಯಾದ ಅವಕಾಶ ಮತ್ತು ಸರಿಯಾದ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ವಿಷಯ ಕುರಿತಂತೆ ನನಗೆ ದೇಶಾದ್ಯಂತ ಯುವಜನರಿಂದ ಪತ್ರಗಳು ಕೂಡಾ ಬಂದಿವೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಸಾಕಷ್ಟು ಪ್ರತಿಕ್ರಿಯೆಗಳು ದೊರೆಯುತ್ತಿವೆ. ಜನರು ನನಗೆ ಹಲವು ರೀತಿಯ ಸಲಹೆಗಳನ್ನು ಕೂಡಾ ನೀಡಿದ್ದಾರೆ. ಇದು ನಿಜಕ್ಕೂ ತಮ್ಮ ಊಹೆಗೂ ನಿಲುಕದ ಸಂಗತಿ ಎಂದು ಕೆಲವು ಯುವಕರು ಪತ್ರ ಬರೆದಿದ್ದಾರೆ. ಅಜ್ಜ, ಅಥವಾ ತಾಯಿ-ತಂದೆಯ ಯಾವುದೇ ರಾಜಕೀಯ ಪರಂಪರೆ ಇಲ್ಲದ ಕಾರಣದಿಂದಾಗಿ, ರಾಜಕೀಯಕ್ಕೆ ಬರಲು ಇಚ್ಛೆಯಿದ್ದರೂ ಬರಲು ಸಾಧ್ಯವಾಗುತ್ತಿಲ್ಲವೆಂದು ಬರೆದಿದ್ದಾರೆ. ತಳಮಟ್ಟದಲ್ಲಿ ಕೆಲಸ ಮಾಡುವ ಉತ್ತಮ ಅನುಭವ ಇರುವುದಾಗಿ, ಆದ್ದರಿಂದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾವು ಸಹಾಯ ಮಾಡಬಹುದೆಂದು ಕೆಲವು ಯುವಕರು ಬರೆದಿದ್ದಾರೆ. ಕುಟುಂಬ ರಾಜಕೀಯವು ಹೊಸ ಪ್ರತಿಭೆಗಳನ್ನು ಬೆಳಕಿಗೆ ಬರದಂತೆ ತಡೆಯುತ್ತಿದೆ ಎಂದು ಕೂಡಾ ಕೆಲ ಯುವಜನರು ಬರೆದಿದ್ದಾರೆ. ಇಂತಹ ಪ್ರಯತ್ನಗಳು ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಕೆಲವರು ಹೇಳಿದ್ದಾರೆ. ಈ ವಿಷಯ ಕುರಿತಂತೆ ಸಲಹೆಗಳನ್ನು ಕಳುಹಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ಧನ್ಯವಾದಗಳು. ಈಗ ನಮ್ಮ ಸಾಮೂಹಿಕ ಪ್ರಯತ್ನದಿಂದ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಇಂತಹ ಯುವಕರು ಕೂಡ ರಾಜಕೀಯದಲ್ಲಿ ಮುಂದೆ ಬರುವಂತಾಗುತ್ತದೆ, ಅವರ ಅನುಭವ ಮತ್ತು ಅವರ ಉತ್ಸಾಹ ದೇಶಕ್ಕೆ ಉಪಯುಕ್ತವಾಗುತ್ತದೆ ಎಂಬ ಭರವಸೆ ನನಗಿದೆ.
ಸ್ನೇಹಿತರೇ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೂಡಾ ರಾಜಕೀಯ ಹಿನ್ನೆಲೆಯಿಲ್ಲದ ಸಮಾಜದ ಎಲ್ಲಾ ವರ್ಗದ ಜನರು ಮುಂದೆ ಬಂದಿದ್ದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಇಂದು ನಮಗೆ ಮತ್ತೊಮ್ಮೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಅದೇ ಮನೋಭಾವದ ಅಗತ್ಯವಿದೆ. ನನ್ನ ಎಲ್ಲಾ ಯುವ ಸ್ನೇಹಿತರಿಗೆ ಖಂಡಿತವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಈ ಹೆಜ್ಜೆ ನಿಮ್ಮ ಮತ್ತು ದೇಶದ ಭವಿಷ್ಯವನ್ನು ಬದಲಾಯಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ‘ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಮತ್ತು ಇಡೀ ದೇಶ ತ್ರಿವರ್ಣ ಧ್ವಜ’ ಎಂಬ ಅಭಿಯಾನವು ಈ ಬಾರಿ ಉತ್ತುಂಗವನ್ನು ಮುಟ್ಟಿತು. ದೇಶಧ ಮೂಲೆ ಮೂಲೆಯಿಂದ ಈ ಅಭಿಯಾನಕ್ಕೆ ಕೈಜೋಡಿಸಿದ್ದ ಅದ್ಭುತ ದೃಶ್ಯಗಳು ಕಂಡುಬಂದವು. ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡುವುದನ್ನು ಕಂಡೆವು, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಮೇಲೂ ತ್ರಿವರ್ಣ ಧ್ವಜ ಹಾರಾಡಿದ್ದನ್ನು ನೋಡಿದೆವು. ಜನರು ತಮ್ಮ ಅಂಗಡಿಗಳು, ಕಛೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಜನರು ತಮ್ಮ ಡೆಸ್ಕ್ ಟಾಪ್, ಮೊಬೈಲ್ ಮತ್ತು ವಾಹನಗಳ ಮೇಲೆ ಕೂಡಾ ತ್ರಿವರ್ಣ ಧ್ವಜ ನೆಲೆಗೊಳಿಸಿದ್ದರು. ಜನರು ಒಗ್ಗಟ್ಟಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದಾಗ, ಇಂತಹ ಅಭಿಯಾನಕ್ಕೆ ಮತ್ತಷ್ಟು ಮೆರುಗು ಬರುತ್ತದೆ. ಈಗ ನೀವು ನಿಮ್ಮ ಟಿವಿ ಪರದೆಯ ಮೇಲೆ ನೋಡುತ್ತಿರುವುದು ಜಮ್ಮು-ಕಾಶ್ಮೀರದ ರಿಯಾಸಿಯ ಚಿತ್ರವಾಗಿದೆ. ಇಲ್ಲಿ ವಿಶ್ವದಲ್ಲೇ ಅತ್ಯಂತ ಎತ್ತರದ ಚಿನಾಬ್ ರೈಲು ಸೇತುವೆಯ ಮೇಲೆ 750 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ರಾಲಿ ನಡೆಸಲಾಯಿತು. ಈ ದೃಶ್ಯವನ್ನು ನೋಡಿದವರೆಲ್ಲರ ಮನದಲ್ಲಿ ಅತೀವ ಸಂತೋಷ ಮನೆಮಾಡಿತು. ಶ್ರೀನಗರದ ಡಾಲ್ ಸರೋವರದಲ್ಲಿ ಕೂಡಾ ತ್ರಿವರ್ಣ ಧ್ವಜದ ಆಕರ್ಷಕ ಯಾತ್ರೆಯನ್ನು ನಾವೆಲ್ಲರೂ ನೋಡಿದೆವು. ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿ ಕೂಡಾ 600 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ರಾಲಿ ನಡೆಸಲಾಯಿತು. ದೇಶದ ಇತರ ರಾಜ್ಯಗಳಲ್ಲಿ ಕೂಡಾ ಇದೇ ರೀತಿಯಲ್ಲಿ, ಎಲ್ಲಾ ವಯೋಮಾನದ ಜನರು ಇಂತಹ ತ್ರಿವರ್ಣ ಧ್ವಜ ಯಾತ್ರೆಯಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ದಿನಾಚರಣೆ ಎನ್ನುವುದು ಈಗ ಸಾರ್ವಜನಿಕ ಹಬ್ಬವಾಗುತ್ತಿದೆ. ಇದರ ಅನುಭವ ತಮಗೆಲ್ಲರಿಗೂ ಕೂಡಾ ಆಗಿರಬಹುದು. ಜನರು ತಮ್ಮ ಮನೆಗಳನ್ನು ತ್ರಿವರ್ಣ ಧ್ವಜದ ಹಾರಗಳಿಂದ ಅಲಂಕರಿಸುತ್ತಾರೆ. ‘ಸ್ವ ಸಹಾಯ ಗುಂಪು’ ಗಳೊಂದಿಗೆ ತೊಡಗಿಸಿಕೊಂಡಿರುವ ಮಹಿಳೆಯರು ಲಕ್ಷಾಂತರ ಧ್ವಜಗಳನ್ನು ಸಿದ್ಧಪಡಿಸುತ್ತಾರೆ. ಇ-ವಾಣಿಜ್ಯ ವೇದಿಕೆಯಲ್ಲಿ ಬಣ್ಣದ ಸಾಮಾಗ್ರಿಗಳ ಮಾರಾಟ ಹೆಚ್ಚಾಗುತ್ತದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೇಶದ ಪ್ರತಿಯೊಂದು ಮೂಲೆಯಲ್ಲೂ, ಸಾಗರ, ಭೂಮಿ, ಆಕಾಶ ಎಲ್ಲೆಡೆಯಲ್ಲೂ ನಮ್ಮ ಧ್ವಜದ ತ್ರಿವರ್ಣಗಳು ಕಂಡು ಬಂದವು. ಹರ್ ಘರ್ ತಿರಂಗಾ ಜಾಲತಾಣದಲ್ಲಿ ಐದು ಕೋಟಿಗೂ ಅಧಿಕ ಸೆಲ್ಫಿ ಪೋಸ್ಟ್ ಮಾಡಲಾಯಿತು. ಈ ಅಭಿಯಾನವು ಇಡೀ ದೇಶವನ್ನು ಒಂದು ಎಳೆಯಲ್ಲಿ ಬಂಧಿಸಿತು. ಇದೇ ಅಲ್ಲವೇ ‘ಒಂದು ಭಾರತ-ಶ್ರೇಷ್ಠ ಭಾರತ’ |
ನನ್ನ ಪ್ರೀತಿಯ ದೇಶವಾಸಿಗಳೇ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಪ್ರೀತಿಯ ಬಗ್ಗೆ ನಾವು ಎಷ್ಟೊಂದು ಚಲನಚಿತ್ರಗಳನ್ನು ನೋಡಿದ್ದೇವೆ ಅಲ್ಲವೇ.! ಆದರೆ ಇತ್ತೀಚಿನ ದಿನಗಳಲ್ಲಿ ಅಸ್ಸಾಂನಲ್ಲಿ ಇಂತಹ ನೈಜ ಕಥೆಯೊಂದು ನಡೆಯುತ್ತಿದೆ. ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಬಾರೆಕುರಿ ಎಂಬ ಸಣ್ಣ ಹಳ್ಳಿಯಲ್ಲಿ, ಮೊರಾನ್ ಸಮುದಾಯದ ಜನರು ವಾಸ ಮಾಡುತ್ತಿದ್ದು, ಇದೇ ಗ್ರಾಮದಲ್ಲಿ 'ಹೂಲಾಕ್ ಗಿಬ್ಬನ್' ಕೂಡಾ ವಾಸಿಸುತ್ತದೆ, ಇಲ್ಲಿನ ಜನರು ಇವುಗಳನ್ನು ಹೋಲೋ ಮಂಗಗಳು ಎಂದು ಕರೆಯುತ್ತಾರೆ. ಹೂಲಾಕ್ ಗಿಬ್ಬನ್ ಗಳು ಈ ಗ್ರಾಮದಲ್ಲಿಯೇ ತಮ್ಮ ವಾಸಸ್ಥಾನ ಮಾಡಿಕೊಂಡಿವೆ. ಹೂಲಾಕ್ ಗಿಬ್ಬನ್ ಗಳೊಂದಿಗೆ ಇಲ್ಲಿನ ಜನರು ನಿಕಟ ಬಾಂಧವ್ಯ ಹೊಂದಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಗ್ರಾಮದ ಜನರು ಇಂದಿಗೂ ತಮ್ಮ ಸಾಂಪ್ರದಾಯಿಕ ಮೌಲ್ಯಗಳನ್ನು ಅನುಸರಿಸುತ್ತಾರೆ. ಆದ್ದರಿಂದಲೇ ಅವರು ಗಿಬ್ಬನ್ ಗಳೊಂದಿಗೆ ತಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಎಲ್ಲ ಕೆಲಸವನ್ನೂ ಮಾಡಿದರು. ಗಿಬ್ಬನ್ ಗಳಿಗೆ ಬಾಳೆಹಣ್ಣು ಬಹಳ ಇಷ್ಟವೆಂದು ಅವರಿಗೆ ಮನದಟ್ಟಾದಾಗ, ಅವರು ಬಾಳೇ ಕೃಷಿ ಕೂಡಾ ಆರಂಭಿಸಿದರು. ಇಷ್ಟೇ ಅಲ್ಲದೆ, ತಮ್ಮ ಸ್ವಂತ ಸಮುದಾಯದಲ್ಲಿ ಜನನ ಮತ್ತು ಮರಣ ಸಂಭವಿಸಿದಾಗ ಅನುಸರಿಸುವಂತಹ ಸಂಪ್ರದಾಯಗಳನ್ನೇ ಗಿಬ್ಬನ್ ಗಳ ಜನನ ಮತ್ತು ಮರಣ ಸಂದರ್ಭದಲ್ಲೂ ಮಾಡಬೇಕೆಂದು ಅವರು ನಿರ್ಧರಿಸಿದರು. ಅವರು ಗಿಬ್ಬನ್ ಗಳಿಗೆ ನಾಮಕರಣ ಕೂಡಾ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಮೀಪದಲ್ಲೇ ಹಾದು ಹೋಗುವ ವಿದ್ಯುತ್ ತಂತಿಗಳಿಂದ ಗಿಬ್ಬನ್ ಗಳು ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು. ಈ ಗ್ರಾಮದ ಜನರು ಈ ವಿಷಯವನ್ನು ಸರ್ಕಾರದ ಮುಂದಿಟ್ಟರು ಮತ್ತು ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಕೂಡಾ ದೊರೆಯಿತು. ಈಗ ಈ ಗಿಬ್ಬನ್ ಗಳು ಫೋಟೋಗೆ ಪೋಜ್ ಕೂಡಾ ನೀಡುತ್ತವೆಂದು ನನಗೆ ತಿಳಿದುಬಂದಿದೆ.
ಸ್ನೇಹಿತರೇ, ಅರುಣಾಚಲ ಪ್ರದೇಶದ ನಮ್ಮ ಯುವ ಸ್ನೇಹಿತರು ಕೂಡ ಪ್ರಾಣಿಗಳ ಮೇಲಿನ ಪ್ರೀತಿಯ ವಿಷಯದಲ್ಲಿ ಯಾರಿಗೂ ಕಡಿಮೆಯಿಲ್ಲ. ಅರುಣಾಚಲದಲ್ಲಿರುವ ನಮ್ಮ ಕೆಲವು ಯುವ ಸ್ನೇಹಿತರು 3 -ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಲು ಪ್ರಾರಂಭಿಸಿದ್ದಾರೆ – ಇದಕ್ಕೆ ಕಾರಣವೇನೆಂದು ನಿಮಗೆ ತಿಳಿದಿದೆಯೇ? ಏಕೆಂದರೆ, ಕೊಂಬು ಮತ್ತು ದಂತಗಳ ಆಸೆಗಾಗಿ ಕಾಡುಪ್ರಾಣಿಗಳನ್ನು ಬೇಟೆಯಿಂದ ರಕ್ಷಿಸಬೇಕೆಂದು ಅವರು ಬಯಸುತ್ತಾರೆ. ನಬಮ್ ಬಾಪು ಮತ್ತು ಲಿಖಾ ನಾನಾ ಅವರ ನೇತೃತ್ವದಲ್ಲಿ ಈ ತಂಡವು ಪ್ರಾಣಿಗಳ ವಿವಿಧ ಭಾಗಗಳ 3-ಡಿ ಮುದ್ರಣವನ್ನು ಮಾಡುತ್ತದೆ. ಕೊಂಬುಗಳಿರಲಿ, ಪ್ರಾಣಿಗಳ ದಂತಗಳಿರಲಿ, ಇವೆಲ್ಲವನ್ನೂ3-ಡಿ ಪ್ರಿಂಟಿಂಗ್ ಮೂಲಕ ಸಿದ್ಧಪಡಿಸಲಾಗುತ್ತದೆ. ನಂತರ ಉಡುಪುಗಳು ಮತ್ತು ಟೋಪಿಗಳಂತಹ ವಸ್ತುಗಳನ್ನು ಇದರಿಂದ ತಯಾರಿಸಲಾಗುತ್ತದೆ. ಇದೊಂದು ಅದ್ಭುತ ಪರ್ಯಾಯವಾಗಿದ್ದು, ಇದರಲ್ಲಿ ಜೈವಿಕ ವಿಘಟನೆಯ ವಸ್ತುಗಳನ್ನು ಬಳಸಲಾಗುತ್ತದೆ. ಇಂತಹ ಅದ್ಭುತ ಪ್ರಯತ್ನಗಳನ್ನು ಎಷ್ಚು ಪ್ರಶಂಸಿಸಿದರೂ ಕಡಿಮೆಯೇ. ನಮ್ಮ ಪ್ರಾಣಿಗಳನ್ನು ರಕ್ಷಿಸುವಂತಹ ಮತ್ತು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವಂತಹ ಹೆಚ್ಚು ಹೆಚ್ಚು ನವೋದ್ಯಮಗಳು ಈ ಕ್ಷೇತ್ರದಲ್ಲಿ ತಲೆ ಎತ್ತಬೇಕೆಂದು ನಾನು ಹೇಳುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮಧ್ಯಪ್ರದೇಶದ ಝಬುವಾದಲ್ಲಿ ಅದ್ಭುತವಾದ ಸಂಗತಿಯೊಂದು ನಡೆಯುತ್ತಿದ್ದು, ಈ ಕುರಿತು ನೀವು ತಿಳಿದುಕೊಳ್ಳಲೇಬೇಕು. ನೈರ್ಮಲ್ಯೀಕರಣದ ಕಾರ್ಮಿಕ ಸೋದರ-ಸೋದರಿಯರು ಅಲ್ಲಿ ಅದ್ಭುತವನ್ನೇ ಮಾಡಿದ್ದಾರೆ. ‘ಕಸದಿಂದ ರಸ’ ಎಂಬ ಸಂದೇಶವನ್ನು ಈ ಸೋದರ-ಸೋದರಿಯರು ನಿಜ ಮಾಡಿ ತೋರಿಸಿದ್ದಾರೆ. ಈ ತಂಡವು ಜಬುವಾದ ಉದ್ಯಾನವನದಲ್ಲಿ ಕಸದಿಂದ ಅದ್ಭುತ ಕಲಾಕೃತಿಗಳನ್ನು ರಚಿಸಿದೆ. ತಮ್ಮ ಈ ಕೆಲಸಕ್ಕಾಗಿ ಅವರು ಸುತ್ತಮುತ್ತಲಿನ ಪ್ರದೇಶಗಳಿಂದ ಪ್ಲಾಸ್ಟಿಕ್ ತ್ಯಾಜ್ಯ, ಬಳಸಿ ಬಿಸಾಡಿದ ಬಾಟಲಿಗಳು, ವಾಹನದ ಚಕ್ರಗಳು, ಮತ್ತು ಕೊಳವೆಗಳನ್ನು ಸಂಗ್ರಹಿಸಿದರು. ಈ ಕಲಾಕೃತಿಗಳಲ್ಲಿ ಹೆಲಿಕಾಪ್ಟರ್, ಕಾರ್ ಮತ್ತು ಫಿರಂಗಿಗಳು ಕೂಡಾ ಸೇರಿವೆ. ಆಕರ್ಷಕ ತೂಗು ಹೂ ಕುಂಡಗಳನ್ನು ಕೂಡಾ ತಯಾರಿಸಲಾಗಿದೆ. ಬಳಸಿ ಬಿಸಾಡಲಾಗಿದ್ದ ಟೈರ್ ಗಳನ್ನು ಆರಾಮದಾಯಕ ಬೆಂಚ್ ತಯಾರಿಸಲು ಬಳಸಲಾಗಿದೆ. ನೈರ್ಮಲ್ಯ ಕಾರ್ಮಿಕರ ಈ ತಂಡವು ರೆಡ್ಯೂಸ್, ರೀಯೂಸ್, ಮತ್ತು ರೀಸೈಕಲ್ ಮಂತ್ರವನ್ನು ತಮ್ಮದಾಗಿಸಿಕೊಂಡಿದೆ. ಇವರ ಪ್ರಯತ್ನಗಳಿಂದ ಉದ್ಯಾನವನ ಈಗ ಬಹಳ ಸುಂದರವಾಗಿ ಕಂಗೊಳಿಸುತ್ತಿದೆ. ಇದನ್ನು ನೋಡಲು ಕೇವಲ ಸ್ಥಳೀಯರು ಮಾತ್ರವಲ್ಲದೇ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ವಾಸವಿರುವ ಜನರು ಕೂಡಾ ಬರುತ್ತಿದ್ದಾರೆ.
ಸ್ನೇಹಿತರೇ, ಇಂದು ನಮ್ಮ ದೇಶದ ಹಲವಾರು ನವೋದ್ಯಮ ತಂಡಗಳು ಪರಿಸರ ರಕ್ಷಣೆಯನ್ನು ಉತ್ತೇಜಿಸುವ ಇಂತಹ ಪ್ರಯತ್ನಗಳಿಗೆ ಕೈಜೋಡಿಸುತ್ತಿರುವುದು ನನಗೆ ಸಂತಸ ತಂದಿದೆ. ಇ-ಕಾನ್ಷಿಯಸ್ ಎಂಬ ಹೆಸರಿನ ತಂಡವೊಂದಿದೆ, ಇದು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತದೆ. ನಮ್ಮ ಪ್ರವಾಸಿ ಸ್ಥಳಗಳಲ್ಲಿ ಅದರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ಹರಡಿರುವ ಕಸವನ್ನು ನೋಡಿ ಅವರಲ್ಲಿ ಈ ಆಲೋಚನೆ ಮೂಡಿತು. ಇಂತಹದ್ದೇ ಇನ್ನೊಂದು ತಂಡ ಇಕೋಕಾರಿ ಹೆಸರಿನ ನವೋದ್ಯಮ ಆರಂಭಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿವಿಧ ಸುಂದರ ವಸ್ತುಗಳನ್ನು ತಯಾರಿಸಲಾಗುತ್ತದೆ.
ಸ್ನೇಹಿತರೇ, ಆಟಿಕೆಗಳ Recycling ಎನ್ನುವುದು ಕೂಡಾ ಇಂತಹದ್ದೇ ಕ್ಷೇತ್ರವಾಗಿದ್ದು, ಇಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬಹುದಾಗಿದೆ. ಎಷ್ಟೋ ಮಕ್ಕಳು ಬಹಳ ಬೇಗ ತಮ್ಮ ಬಳಿ ಇರುವ ಆಟಿಕೆಗಳ ಬಗ್ಗೆ ಬೇಸರ ತಳೆಯುತ್ತಾರೆಂದು ನಿಮಗೂ ಗೊತ್ತು. ಅಂತೆಯೇ ಆಟಿಕೆಗಳ ಬಗ್ಗೆ ಕನಸು ಕಾಣುವ ಮಕ್ಕಳೂ ಇರುತ್ತಾರೆ. ನಿಮ್ಮ ಮಕ್ಕಳು ಈಗ ಆಟವಾಡಲು ಬಳಸದೇ ಇರುವ ಆಟಿಕೆಗಳನ್ನು ನೀವು ಈಗ ಬಳಸುವಂತಹವರಿಗೆ ಅವುಗಳನ್ನು ನೀಡಬಹುದು. ಇದು ಕೂಡಾ ಪರಿಸರದ ರಕ್ಷಣೆಯ ಒಂದು ಮಾರ್ಗವೇ ಆಗಿದೆ. ನಾವೆಲ್ಲರೂ ಸೇರಿ ಪ್ರಯತ್ನ ಮಾಡಿದಾಗ, ಪರಿಸರವೂ ಸದೃಢವಾಗುತ್ತದೆ ಅಂತೆಯೇ ನಮ್ಮ ದೇಶ ಕೂಡಾ ಪ್ರಗತಿಯಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದಷ್ಟೇ ಇದೇ 19 ರಂದು ನಾವು ರಕ್ಷಾಬಂಧನ ಹಬ್ಬ ಆಚರಿಸಿದೆವು. ಅದೇ ದಿನದಂದು ಇಡೀ ವಿಶ್ವದಲ್ಲಿ ‘ವಿಶ್ವ ಸಂಸ್ಕೃತ ದಿನ’ ಆಚರಿಸಲಾಯಿತು. ಇಂದು ಕೂಡಾ ದೇಶ - ವಿದೇಶಗಳಲ್ಲಿ ಜನರು ಸಂಸ್ಕೃತ ಭಾಷೆಯ ಬಗ್ಗೆ ವಿಶೇಷ ಒಲವು ತೋರುವುದು ಕಂಡುಬರುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಹಲವು ಸಂಶೋಧನೆಗಳು ಮತ್ತು ಪ್ರಯೋಗಗಳು ನಡೆಯುತ್ತಿವೆ. ಮಾತು ಮುಂದುವರಿಸುವುದಕ್ಕೆ ಮುನ್ನ ನಾನು ನಿಮಗೆ ಚಿಕ್ಕದೊಂದು ಧ್ವನಿ ಸುರುಳಿ – ಆಡಿಯೋ ಕ್ಲಿಪ್ ಕೇಳಿಸುತ್ತಿದ್ದೇನೆ.:
### Audio Clip#####
ಸ್ನೇಹಿತರೇ, ಈ ಆಡಿಯೋ ಯೂರೋಪ್ ನ ದೇಶವಾದ ಲಿಥುಯೇನಿಯಾಗೆ ಸಂಬಂಧಿಸಿದ್ದಾಗಿದೆ. ಅಲ್ಲಿನ ಓರ್ವ ಪ್ರೊಫೆಸರ್ Vytis Vidūnas ಅವರು ಒಂದು ವಿಶಿಷ್ಟ ಪ್ರಯತ್ನ ಮಾಡಿದ್ದು, ಅದಕ್ಕೆ – ‘ಸಂಸ್ಕೃತ್- On the Rivers’ ಎಂದು ಹೆಸರಿಸಲಾಗಿದೆ. ನೆರಿಸ್ ನದಿಯ ದಡದಲ್ಲಿ ಕೆಲ ಜನರು ಸೇರಿ, ವೇದಗಳನ್ನು ಮತ್ತು ಗೀತೆ ಪಠಿಸಿತು. ಇಲ್ಲಿ ಕಳೆದ ಕೆಲವು ವರ್ಷಗಳಿಂದ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಸಂಸ್ಕೃತ ಭಾಷೆಗೆ ಉತ್ತೇಜನ ನೀಡುವ ಇಂತಹ ಪ್ರಯತ್ನಗಳನ್ನು ನೀವೂ ಮಾಡುತ್ತಿರಿ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮೆಲ್ಲರ ಜೀವನದಲ್ಲಿ ಫಿಟ್ನೆಸ್ ಎನ್ನುವುದು ಬಹಳ ಮಹತ್ವದ್ದಾಗಿದೆ. ಸದೃಢರಾಗಿರಲು ನಾವು ನಮ್ಮ ಆಹಾರ ಸೇವನೆ, ಜೀವನ ಶೈಲಿ ಎಲ್ಲದರ ಬಗ್ಗೆ ಸಾಕಷ್ಟು ನಿಗಾ ವಹಿಸಬೇಕು. ಜನರಲ್ಲಿ fitness ಬಗ್ಗೆ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ “ಫಿಟ್ ಇಂಡಿಯಾ ಅಭಿಯಾನ” ಆರಂಭಿಸಲಾಗಿದೆ. ಆರೋಗ್ಯವಾಗಿರಲು ಇಂದು ಎಲ್ಲ ವಯೋಮಾನದ, ಎಲ್ಲ ವರ್ಗದ ಜನರೂ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಜನರು ಈಗ ತಮ್ಮ ಊಟದ ತಟ್ಟೆಯಲ್ಲಿ ಸೂಪರ್ ಫುಡ್ ಸಿರಿಧಾನ್ಯಗಳು ಅಂದರೆ ಶ್ರೀಅನ್ನಕ್ಕೆ ಜಾಗ ಕಲ್ಪಿಸುತ್ತಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಉದ್ದೇಶ ಪ್ರತಿಯೊಂದು ಕುಟುಂಬವೂ ಆರೋಗ್ಯವಾಗಿ ಇರಬೇಕು ಎನ್ನುವುದಾಗಿದೆ.
ಸ್ನೇಹಿತರೇ, ನಮ್ಮ ಕುಟುಂಬ, ನಮ್ಮ ಸಮಾಜ, ಮತ್ತು ನಮ್ಮ ದೇಶ ಮತ್ತು ಇವುಗಳೆಲ್ಲದರ ಭವಿಷ್ಯವು, ನಮ್ಮ ಮಕ್ಕಳ ಆರೋಗ್ಯದ ಮೇಲೆ ಅವಲಂಬಿತವಾಗಿದೆ, ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಅವರಿಗೆ ಸರಿಯಾದ ಪೋಷಣೆ ದೊರೆಯುವುದು ಅತ್ಯಗತ್ಯವಾಗಿದೆ. ಮಕ್ಕಳ ಪೌಷ್ಠಿಕತೆ ದೇಶದ ಪ್ರಥಮ ಆದ್ಯತೆಯಾಗಿದೆ. ಅವರ ಪೋಷಣೆಯತ್ತ ಇಡೀ ವರ್ಷ ನಮ್ಮ ಗಮನ ಇದ್ದೇ ಇರುತ್ತದೆ ಆದರೆ ಒಂದು ತಿಂಗಳು ದೇಶ ಈ ಕುರಿತಂತೆ ವಿಶೇಷ ಗಮನ ಹರಿಸುತ್ತದೆ. ಇದಕ್ಕಾಗಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಒಂದರಿಂದ 30 ರ ನಡುವೆ ಪೌಷ್ಠಿಕಾಂಶ ಮಾಸ ಆಚರಿಸಲಾಗುತ್ತದೆ. ಪೌಷ್ಠಿಕಾಂಶದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪೌಷ್ಠಿಕಾಂಶ ಮೇಳ, ರಕ್ತಹೀನತೆ ಶಿಬಿರ, ನವಜಾತ ಶಿಶುಗಳಿರುವ ಮನೆಗೆ ಭೇಟಿ, ವಿಚಾರ ಸಂಕಿರಣ, ವೆಬಿನಾರ್ ಹೀಗೆ ಹಲವು ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅನೇಕ ಸ್ಥಳಗಳಲ್ಲಿ ಅಂಗನವಾಡಿ ಯೋಜನೆ ಅಡಿಯಲ್ಲಿ ತಾಯಿ ಮತ್ತು ಮಕ್ಕಳ ಸಮಿತಿಗಳನ್ನು ಕೂಡಾ ಸ್ಥಾಪಿಸಲಾಗಿದೆ. ಈ ಸಮಿತಿಯು ಅಪೌಷ್ಟಿಕ ಮಕ್ಕಳು, ಗರ್ಭಿಣಿಯರು ಮತ್ತು ನವಜಾತ ಶಿಶುಗಳ ತಾಯಂದಿರನ್ನು ಗುರುತಿಸುತ್ತದೆ. ನಿರಂತರವಾಗಿ ಅವರ ಮೇಲೆ ಗಮನ ಹರಿಸುತ್ತದೆ ಮತ್ತು ಅವರ ಪೋಷಣೆಗೆ ಸೂಕ್ತ ವ್ಯವಸ್ಥೆ ಮಾಡುತ್ತದೆ. ಕಳೆದ ವರ್ಷ ಪೋಷಣ್ ಅಭಿಯಾನವನ್ನು ನೂತನ ಶಿಕ್ಷಣ ನೀತಿಯೊಂದಿಗೆ ಜೋಡಿಸಲಾಯಿತು. ‘ಪೋಷಣೆಯೂ, ಶಿಕ್ಷಣವೂ’ ಎಂಬ ಈ ಅಭಿಯಾನದ ಮೂಲಕ ಮಕ್ಕಳಿಗೆ ಮಕ್ಕಳ ಸಮತೋಲಿತ ಬೆಳವಣಿಗೆಗೆ ಒತ್ತು ನೀಡಲಾಗಿದೆ. ನೀವು ವಾಸಿಸುವ ಪ್ರದೇಶದಲ್ಲಿ ಪೌಷ್ಠಿಕಾಂಶ ಜಾಗೃತಿ ಅಭಿಯಾನದಲ್ಲಿ ನೀವೂ ಕೈಜೋಡಿಸಬೇಕು. ಅಪೌಷ್ಟಿಕತೆಯ ವಿರುದ್ಧದ ಈ ಹೋರಾಟದಲ್ಲಿ ನಿಮ್ಮ ಸಣ್ಣ ಪ್ರಯತ್ನವು ಬಹಳ ಸಹಾಯಕವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನ್ ಕಿ ಬಾತ್ ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ‘ಮನದ ಮಾತಿನಲ್ಲಿ’ ನಿಮ್ಮೊಂದಿಗೆ ಮಾತನಾಡುವುದು ನನಗೆ ಸದಾ ಸಂತೋಷದ ವಿಷಯವಾಗಿರುತ್ತದೆ. ನಾನು ನನ್ನ ಕುಟುಂಬದವರೊಡನೆ ಕುಳಿತು ತಿಳಿ ಮನಸ್ಸಿನ ವಾತಾವರಣದಲ್ಲಿ ನನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ನನಗೆ ಭಾಸವಾಗುತ್ತದೆ. ಮನಃಪೂರ್ವಕವಾಗಿ ನಿಮ್ಮೊಂದಿಗೆ ಬೆರೆಯುತ್ತಿದ್ದೇನೆ ಎನಿಸುತ್ತದೆ. ನಿಮ್ಮ ಸಲಹೆ-ಸೂಚನೆ, ನಿಮ್ಮ ಸಲಹೆ, ನನಗೆ ಅತ್ಯಮೂಲ್ಯವಾಗಿವೆ. ಮುಂಬರುವ ದಿನಗಳಲ್ಲಿ ಹಲವಾರು ಹಬ್ಬಗಳು ಬರಲಿವೆ. ನಾನು ನಿಮ್ಮೆಲ್ಲರಿಗೂ ಹಬ್ಬಗಳಿಗಾಗಿ ಶುಭಾಶಯ ಕೋರುತ್ತಿದ್ದೇನೆ. ಜನ್ಮಾಷ್ಠಮಿ ಹಬ್ಬವೂ ಬರಲಿದೆ. ಮುಂದಿನ ತಿಂಗಳ ಆರಂಭದಲ್ಲಿಯೇ ಗಣೇಶ ಚತುರ್ಥಿ ಹಬ್ಬವೂ ಇದೆ. ಓಣಂ ಹಬ್ಬವೂ ಸಮೀಪಿಸುತ್ತಿದೆ. ಮಿಲಾದ್-ಉನ್-ನಬೀ ಗಾಗಿ ಕೂಡಾ ಅಭಿನಂದಿಸುತ್ತಿದ್ದೇನೆ.
ಸ್ನೇಹಿತರೇ, ಈ ತಿಂಗಳ 29 ರಂದು ‘ತೆಲುಗು ಭಾಷಾ ದಿನ‘ ಆಚರಿಸಲಾಗುತ್ತದೆ. ತೆಲುಗು ನಿಜಕ್ಕೂ ಅದ್ಭುತವಾದ ಭಾಷೆಯಾಗಿದೆ. ನಾನು ವಿಶ್ವಾದ್ಯಂತ ಇರುವ ಎಲ್ಲಾ ತೆಲುಗು ಭಾಷಿಗರಿಗೂ ತೆಲುಗು ದಿನದ ಶುಭಾಶಯ ಕೋರುತ್ತೇನೆ.
ಪ್ರಪಂಚ ವ್ಯಾಪ್ತಂಗಾ ಉನ್ನ,
ತೆಲುಗು ವಾರಿಕಿ,
ತೆಲುಗು ಭಾಷಾ ದಿನೋತ್ಸವ ಶುಭಾಕಾಂಕ್ಷಲು.
ಸ್ನೇಹಿತರೇ, ಮಳೆಗಾಲದ ಈ ಋತುವಿನಲ್ಲಿ ಮುಂಜಾಗೃತೆ ವಹಿಸುವುದರೊಂದಿಗೆ, ‘Catch the Rain Movement’ ನ ಭಾಗವಾಗಬೇಕೆಂದು ನಿಮ್ಮಲ್ಲರಲ್ಲಿ ಪುನಃ ಮನವಿ ಮಾಡುತ್ತಿದ್ದೇನೆ. ‘ಒಂದು ಸಸಿ ತಾಯಿ ಹೆಸರಿನಲ್ಲಿ’ ಅಭಿಯಾನವನ್ನು ನಿಮ್ಮೆಲ್ಲರಿಗೂ ನೆನಪಿಸಲು ಬಯಸುತ್ತೇನೆ. ಹೆಚ್ಚು ಹೆಚ್ಚು ಸಸಿಗಳನ್ನು ನೆಡಿ ಮತ್ತು ಸಸಿ ನೆಡಲು ಇತರರನ್ನೂ ಪ್ರೋತ್ಸಾಹಿಸಿ. ಮುಂಬರುವ ದಿನಗಳಲ್ಲಿ ಪ್ಯಾರಿಸ್ ನಲ್ಲಿ ಪ್ಯಾರಾಲಂಪಿಕ್ಸ್ ಆರಂಭವಾಗಲಿದೆ. ನಮ್ಮ ವಿಶೇಷ ಚೇತನ ಸೋದರ-ಸೋದರಿಯರು ಅಲ್ಲಿಗೆ ತಲುಪಿದ್ದಾರೆ. 140 ಕೋಟಿ ಭಾರತೀಯರು ತಮ್ಮ ಕ್ರೀಡಾಪಟುಗಳಿಗೆ ಶುಭಾಶಯ ಕೋರುತ್ತಿದ್ದಾರೆ. ನೀವು ಕೂಡಾ #cheer4bharat ಮೂಲಕ ನಮ್ಮ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ. ಮುಂದಿನ ತಿಂಗಳು ನಾವು ಮತ್ತೊಮ್ಮೆ ಭೇಟಿಯಾಗೋಣ ಮತ್ತು ಸಾಕಷ್ಟು ವಿಷಯಗಳ ಕುರಿತು ಮಾತನಾಡೋಣ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ.
ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರೀತಿಯ ದೇಶವಾಸಿಗಳೆ, 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ, ಆತ್ಮೀಯ ಶುಭಾಶಯಗಳು. ಈ ಕ್ಷಣದಲ್ಲಿ ಜರುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಇಡೀ ವಿಶ್ವದ ಗಮನ ಸೆಳೆದಿದೆ, ಈ ಋತುವಿನ ಫ್ಲೇವರ್ ಆಗಿದೆ. ಒಲಿಂಪಿಕ್ಸ್ ನಮ್ಮ ಆಟಗಾರರಿಗೆ ವಿಶ್ವ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕಾಗಿ ಏನನ್ನಾದರೂ ಮಾಡಲು ಅವರಿಗೆ ಅವಕಾಶ ನೀಡಿದೆ. ನಮ್ಮ ಆಟಗಾರರನ್ನು ಪ್ರೋತ್ಸಾಹಿಸೋಣ... ಭಾರತ ತಂಡಕ್ಕೆ ಚಿಯರ್!!
ಸ್ನೇಹಿತರೆ, ಕ್ರೀಡಾ ಜಗತ್ತಿನಲ್ಲಿ ಈ ಒಲಿಂಪಿಕ್ಸ್ನ ಜತೆಗೆ ಕೆಲವು ದಿನಗಳ ಹಿಂದೆ, ಗಣಿತ ಜಗತ್ತಿನ ಒಲಿಂಪಿಕ್ಸ್ ಕೂಡ ನಡೆದಿದೆ. ಅದು ಅಂತಾರಾಷ್ಟ್ರೀಯ ಗಣಿತ ಒಲಂಪಿಯಾಡ್. ಈ ಒಲಿಂಪಿಯಾಡ್ನಲ್ಲಿ ಭಾರತದ ವಿದ್ಯಾರ್ಥಿಗಳು ಅಸಾಧಾರಣ ಸಾಧನೆ ಮಾಡಿದ್ದಾರೆ. ನಮ್ಮ ತಂಡ ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 4 ಚಿನ್ನ ಮತ್ತು 1 ಬೆಳ್ಳಿ ಪದಕ ಗೆದ್ದಿದೆ. 100ಕ್ಕೂ ಹೆಚ್ಚು ದೇಶಗಳ ಯುವಕರು ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ನಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಲೆಕ್ಕಾಚಾರದಲ್ಲಿ ನಮ್ಮ ತಂಡವು ಅಗ್ರ 5 ಸ್ಥಾನಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ದೇಶಕ್ಕೆ ಕೀರ್ತಿ ತಂದ ಈ ವಿದ್ಯಾರ್ಥಿಗಳ ಹೆಸರು –
ಪುಣೆಯ ಆದಿತ್ಯ ವೆಂಕಟ್ ಗಣೇಶ್, ಪುಣೆಯಿಂದಲೇ ಸಿದ್ಧಾರ್ಥ್ ಚೋಪ್ರಾ, ದೆಹಲಿಯ ಅರ್ಜುನ್ ಗುಪ್ತಾ, ಗ್ರೇಟರ್ ನೋಯ್ಡಾದಿಂದ ಕನವ್ ತಲ್ವಾರ್, ಮುಂಬೈನಿಂದ ರುಶಿಲ್ ಮಾಥುರ್ ಮತ್ತು ಗುವಾಹಟಿಯಿಂದ ಆನಂದೋ ಭಾದುರಿ.
ಸ್ನೇಹಿತರೆ, ಇಂದು ನಾನು ಈ ಯುವ ವಿಜೇತರನ್ನು 'ಮನ್ ಕಿ ಬಾತ್'ಗೆ ವಿಶೇಷವಾಗಿ ಆಹ್ವಾನಿಸಿದ್ದೇನೆ. ಅವರೆಲ್ಲರೂ ಸದ್ಯಕ್ಕೆ ನಮ್ಮೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದಾರೆ.
ಪ್ರಧಾನ ಮಂತ್ರಿ: ನಮಸ್ತೆ ಸ್ನೇಹಿತರೆ. 'ಮನ್ ಕಿ ಬಾತ್'ನಲ್ಲಿ ನಾನು ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ. ನೀವೆಲ್ಲರೂ ಹೇಗಿದ್ದೀರಿ?
ವಿದ್ಯಾರ್ಥಿಗಳು: ನಾವು ಚೆನ್ನಾಗಿದ್ದೇವೆ ಸರ್.
ಪ್ರಧಾನಮಂತ್ರಿ: ಸ್ನೇಹಿತರೆ, ‘ಮನ್ ಕಿ ಬಾತ್’ ಮೂಲಕ ದೇಶವಾಸಿಗಳು ನಿಮ್ಮೆಲ್ಲರ ಅನುಭವಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ನಾನು ಆದಿತ್ಯ ಮತ್ತು ಸಿದ್ಧಾರ್ಥ್ ಅವರೊಂದಿಗೆ ಸಂವಾದ ಪ್ರಾರಂಭಿಸುತ್ತೇನೆ. ನೀವು ಪುಣೆಯಲ್ಲಿ ಇದ್ದೀರಿ... ಮೊದಲು ನಾನು ನಿಮ್ಮೊಂದಿಗೆ ಪ್ರಾರಂಭಿಸುತ್ತೇನೆ. ಒಲಿಂಪಿಯಾಡ್ನಲ್ಲಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಆದಿತ್ಯ: ನನಗೆ ಬಾಲ್ಯದಿಂದಲೂ ಗಣಿತದಲ್ಲಿ ಆಸಕ್ತಿ ಇತ್ತು. ನನ್ನ ಗುರುಗಳಾದ ಓಂ ಪ್ರಕಾಶ್ ಸರ್ ನನಗೆ 6ನೇ ತರಗತಿಯ ಗಣಿತ ಕಲಿಸಿದರು, ಅವರು ಗಣಿತದಲ್ಲಿ ನನ್ನ ಆಸಕ್ತಿ ಹೆಚ್ಚಿಸಿದರು, ಇದರಿಂದ ನನಗೆ ಕಲಿಯಲು ಅವಕಾಶ ಸಿಕ್ಕಿತು.
ಪ್ರಧಾನ ಮಂತ್ರಿ: ನಿಮ್ಮ ಸ್ನೇಹಿತ ಏನು ಹೇಳುತ್ತಾರೆ?
ಸಿದ್ಧಾರ್ಥ್: ಸರ್, ನಾನು ಸಿದ್ಧಾರ್ಥ್, ನಾನು ಪುಣೆ. ಈಗಷ್ಟೇ 12ನೇ ತರಗತಿ ಪಾಸಾಗಿದ್ದೇನೆ. ಐಎಂಒನಲ್ಲಿ ಇದು 2ನೇ ಬಾರಿಗೆ ಸ್ಪರ್ಧಿಸಿದ್ದೆ. ನನಗೂ ಬಾಲ್ಯದಿಂದಲೇ ಗಣಿತದಲ್ಲಿ ಆಸಕ್ತಿ ಇತ್ತು. ನಾನು ಆದಿತ್ಯನೊಂದಿಗೆ 6ನೇ ತರಗತಿಯಲ್ಲಿದ್ದಾಗ, ಓಂ ಪ್ರಕಾಶ್ ಸರ್ ನಮ್ಮಿಬ್ಬರಿಗೂ ತರಬೇತಿ ನೀಡಿ ನಮಗೆ ಸಾಕಷ್ಟು ಸಹಾಯ ಮಾಡಿದರು. ಈಗ ನಾನು ಚಾರ್ಟರ್ಡ್ ಮ್ಯಾನೇಜ್|ಮೆಂಟ್ ಇನ್|ಸ್ಟಿಟ್ಯೂಟ್(ಸಿಎಂಐ) ಕಾಲೇಜಿಗೆ ಹೋಗುತ್ತಿದ್ದೇನೆ, ಅಲ್ಲಿ ಗಣಿತ & ಸಿಎಸ್ ಕಲಿಕೆ ಮುಂದುವರಿಸುತ್ತಿದ್ದೇನೆ.
ಪ್ರಧಾನ ಮಂತ್ರಿ: ಸರಿ, ಅರ್ಜುನ್ ಈಗ ಗಾಂಧಿನಗರದಲ್ಲಿದ್ದಾರೆ, ಕನವ್ ಗ್ರೇಟರ್ ನೋಯ್ಡಾದವರು ಎಂದು ನನಗೆ ತಿಳಿದುಬಂದಿದೆ. ಅರ್ಜುನ್ ಮತ್ತು ಕನವ್, ನಾವು ಒಲಿಂಪಿಯಾಡ್ ಕುರಿತು ಚರ್ಚಿಸಿದ್ದೇವೆ. ಆದರೆ ನೀವಿಬ್ಬರೂ ನಿಮ್ಮ ತಯಾರಿ ಮತ್ತು ಯಾವುದೇ ವಿಶೇಷ ಅನುಭವ ಹೇಳಿದರೆ, ನಮ್ಮ ಕೇಳುಗರು ಅದನ್ನು ಇಷ್ಟಪಡುತ್ತಾರೆ.
ಅರ್ಜುನ್: ನಮಸ್ತೆ ಸರ್, ಜೈ ಹಿಂದ್, ನಾನು ಅರ್ಜುನ್.
ಪ್ರಧಾನ ಮಂತ್ರಿ: ಜೈ ಹಿಂದ್ ಅರ್ಜುನ್.
ಅರ್ಜುನ್: ನಾನು ದೆಹಲಿಯಲ್ಲಿ ನೆಲೆಸಿದ್ದೇನೆ, ನನ್ನ ತಾಯಿ ಆಶಾ ಗುಪ್ತಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ನನ್ನ ತಂದೆ ಅಮಿತ್ ಗುಪ್ತಾ ಚಾರ್ಟರ್ಡ್ ಅಕೌಂಟೆಂಟ್. ನಾನು ನನ್ನ ದೇಶದ ಪ್ರಧಾನ ಮಂತ್ರಿ ಜತೆ ಮಾತನಾಡುತ್ತಿದ್ದೇನೆ ಎಂಬುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ಮೊದಲನೆಯದಾಗಿ ನನ್ನ ಯಶಸ್ಸಿನ ಶ್ರೇಯಸ್ಸನ್ನು ನನ್ನ ಹೆತ್ತವರಿಗೆ ಸಲ್ಲಿಸಲು ಬಯಸುತ್ತೇನೆ. ಕುಟುಂಬ ಸದಸ್ಯರೊಬ್ಬರು ಇಂತಹ ಸ್ಪರ್ಧೆಗೆ ತಯಾರಿ ನಡೆಸಿದಾಗ, ಅದು ಆ ಸದಸ್ಯರ ಹೋರಾಟ ಮಾತ್ರವಲ್ಲ, ಇಡೀ ಕುಟುಂಬದ ಹೋರಾಟ ಎಂದು ನನಗನಿಸುತ್ತಿದೆ.
ಮೂಲಭೂತವಾಗಿ ನಮ್ಮ ಪ್ರಶ್ನೆಪತ್ರಿಕೆಯಲ್ಲಿ ನಾವು 3 ಸಮಸ್ಯೆ ಪರಿಹರಿಸಲು ನಾಲ್ಕೂವರೆ ತಾಸು ಇರುತ್ತದೆ. 1 ಸಮಸ್ಯೆ ಪರಿಹಾರಕ್ಕೆ ಒಂದೂವರೆ ತಾಸು - ಆದ್ದರಿಂದ ನಾವು ಸಮಸ್ಯೆಯನ್ನು ಪರಿಹರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತೇವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ, ನಾವು ಮನೆಯಲ್ಲಿ ನಿಜವಾಗಿಯೂ ಕಷ್ಟಪಟ್ಟು ಕಲಿಕೆ ಮಾಡಬೇಕು. ನಾವು ಸಮಸ್ಯೆಗಳಿಗೆ ಹಲವು ಗಂಟೆಗಳನ್ನು ವ್ಯಯಿಸಬೇಕಾಗುತ್ತದೆ, ಕೆಲವೊಮ್ಮೆ ಸಮಸ್ಯೆ ಪರಿಹರಿಸಲು 1 ದಿನ ಅಥವಾ 3 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ, ಅದಕ್ಕಾಗಿ, ನಾವು ಆನ್ಲೈನ್ನಲ್ಲಿ ಸಮಸ್ಯೆಗಳನ್ನು ಹುಡುಕಬೇಕಾಗುತ್ತದೆ.
ನಾವು ಹಿಂದಿನ ವರ್ಷದ ಹಳೆಯ ಸಮಸ್ಯೆಗಳನ್ನು ಪ್ರಯತ್ನಿಸುತ್ತೇವೆ. ನಾವು ಕಷ್ಟಪಟ್ಟು ಕೆಲಸ ಮಾಡಿದಾಗ, ನಮ್ಮ ಅನುಭವ ಹೆಚ್ಚಾಗುತ್ತದೆ, ಪ್ರಮುಖ ವಿಷಯವೆಂದರೆ, ನಮ್ಮ ಸಮಸ್ಯೆ ಪರಿಹರಿಸುವ ಸಾಮರ್ಥ್ಯವೂ ಹೆಚ್ಚಾಗುತ್ತದೆ, ಇದು ಗಣಿತಶಾಸ್ತ್ರದಲ್ಲಿ ಮಾತ್ರವಲ್ಲದೆ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಮಗೆ ಸಹಾಯ ಮಾಡುತ್ತದೆ.
ಪ್ರಧಾನ ಮಂತ್ರಿ: ಸರಿ ಕನವ್. ಈ ಎಲ್ಲಾ ತಯಾರಿಯಲ್ಲಿ ನಮ್ಮ ಯುವ ಸ್ನೇಹಿತರು ನಿಜವಾಗಿಯೂ ತಿಳಿದುಕೊಳ್ಳಲು ಬಯಸುವ ಯಾವುದೇ ವಿಶೇಷ ಅನುಭವ, ಯಾವುದೇ ವಿಶೇಷ ವಿಷಯ ಇದ್ದರೆ ಹೇಳುವಿರಾ?
ಕನವ್ ತಲ್ವಾರ್: ನನ್ನ ಹೆಸರು ಕನವ್ ತಲ್ವಾರ್. ನಾನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದೇನೆ, ನಾನು 11ನೇ ತರಗತಿಯ ವಿದ್ಯಾರ್ಥಿಯಾಗಿದ್ದೇನೆ. ಗಣಿತ ನನ್ನ ನೆಚ್ಚಿನ ವಿಷಯ. ನನಗೆ ಬಾಲ್ಯದಿಂದಲೂ ಗಣಿತ ಎಂದರೆ ತುಂಬಾ ಇಷ್ಟ. ನನ್ನ ಬಾಲ್ಯದಲ್ಲಿ, ನನ್ನ ತಂದೆ ನನಗೆ ಪಝಲ್ ಗಳನ್ನು ಬಿಡಿಸುವಂತೆ ಹೇಳುತ್ತಿದ್ದರು. ಇದು ನನ್ನ ಆಸಕ್ತಿ ಹೆಚ್ಚಿಸಿತು. 7ನೇ ತರಗತಿಯಿಂದ ಒಲಿಂಪಿಯಾಡ್ಗೆ ತಯಾರಿ ಆರಂಭಿಸಿದ್ದೆ. ಇದರಲ್ಲಿ ನನ್ನ ಸಹೋದರಿ ಅಪಾರ ಕೊಡುಗೆ ನೀಡಿದ್ದಾರೆ. ನನ್ನ ಹೆತ್ತವರು ಸಹ ನನಗೆ ಯಾವಾಗಲೂ ಬೆಂಬಲ ನೀಡುತ್ತಿದ್ದಾರೆ. ಈ ಒಲಿಂಪಿಯಾಡ್ ಅನ್ನು ಎಚ್|ಬಿಸಿಎಸ್ಇ ನಡೆಸುತ್ತದೆ. ಇದು 5 ಹಂತಗಳ ಪ್ರಕ್ರಿಯೆ. ಕಳೆದ ವರ್ಷ ನಾನು ತಂಡಕ್ಕೆ ಬರಲಾಗಲಿಲ್ಲ, ಆದರೂ ನಾನು ಅದಕ್ಕೆ ತುಂಬಾ ಹತ್ತಿರದಲ್ಲಿದ್ದೆ. ಅದನ್ನು ಮಾಡಲು ಸಾಧ್ಯವಾಗದ ಬಗ್ಗೆ ತುಂಬಾ ದುಃಖಿತನಾಗಿದ್ದೆ. ಆಗ ನನ್ನ ಹೆತ್ತವರು ನನಗೆ ಹೇಳಿದ್ದರು - ನಾವು ಗೆಲ್ಲಬೇಕು, ಇಲ್ಲವೇ ಕಲಿಯಬೇಕು ಎಂದು.
ಪ್ರಯಾಣ ಮುಖ್ಯ, ಯಶಸ್ಸಲ್ಲ. ಆದ್ದರಿಂದ ನಾನು ಇದನ್ನು ಹೇಳಲು ಬಯಸುತ್ತೇನೆ - ‘ನೀವು ಮಾಡುವುದನ್ನು ಇಷ್ಟಪಡಿ ಅಥವಾ ಪ್ರೀತಿಸಿ ಮತ್ತು ನೀವು ಇಷ್ಟಪಡುವುದನ್ನೇ ಮಾಡಿ’. ಪ್ರಯಾಣ ಮುಖ್ಯ, ಯಶಸ್ಸು ಅಲ್ಲ. ನಾವು ನಮ್ಮ ವಿಷಯವನ್ನು ಪ್ರೀತಿಸಿದರೆ ಮತ್ತು ಪ್ರಯಾಣವನ್ನು ಆನಂದಿಸಿದರೆ ನಾವು ಖಂಡಿತಾ ಯಶಸ್ವಿಯಾಗುತ್ತೇವೆ.
ಪ್ರಧಾನ ಮಂತ್ರಿ: ಹಾಗಾದರೆ ಕನವ್, ನಿಮಗೆ ಗಣಿತದಲ್ಲಿ ಆಸಕ್ತಿ ಇದೆ, ಸಾಹಿತ್ಯದಲ್ಲಿಯೂ ಆಸಕ್ತಿ ಇರುವಂತೆ ಮಾತನಾಡುತ್ತಿದ್ದೀರಾ!
ಕನವ್ ತಲ್ವಾರ್: ಹೌದು ಸರ್! ನಾನು ಬಾಲ್ಯದಲ್ಲಿ ಚರ್ಚಾ ಸ್ಪರ್ಧೆ ಮತ್ತು ಭಾಷಣಗಳನ್ನು ಮಾಡುತ್ತಿದ್ದೆ.
ಪ್ರಧಾನ ಮಂತ್ರಿ: ಸರಿ, ಈಗ ನಾವು ಆನಂದೊ ಜತೆ ಮಾತನಾಡೋಣ. ಆನಂದೊ, ನೀವು ಇದೀಗ ಗುವಾಹತಿಯಲ್ಲಿದ್ದೀರಿ, ನಿಮ್ಮ ಸ್ನೇಹಿತ ರುಶಿಲ್ ಮುಂಬೈನಲ್ಲಿದ್ದಾರೆ. ನಿಮ್ಮಿಬ್ಬರಿಗೂ ನನ್ನದೊಂದು ಪ್ರಶ್ನೆ. ನೋಡಿ, ನಾನು “ಪರೀಕ್ಷಾ ಪೇ ಚರ್ಚಾ” ಮಾಡುತ್ತಲೇ ಇರುತ್ತೇನೆ. ಪರೀಕ್ಷೆಗಳ ಬಗ್ಗೆ ಚರ್ಚಿಸುವ ಹೊರತಾಗಿ, ನಾನು ಇತರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತೇನೆ. ಅನೇಕ ವಿದ್ಯಾರ್ಥಿಗಳು ಗಣಿತದ ಬಗ್ಗೆ ತುಂಬಾ ಹೆದರುತ್ತಾರೆ, ಗಣಿತದ ಪದ ಕೇಳಿದರೆ ಸಾಕು, ಅವರು ಉದ್ವೇಗಕ್ಕೆ ಒಳಗಾಗುತ್ತಾರೆ, ಗಣಿತದೊಂದಿಗೆ ಸ್ನೇಹಿತರಾಗುವುದು ಹೇಗೆ ಎಂದು ಹೇಳಿ?
ರುಶಿಲ್ ಮಾಥುರ್: ಸರ್, ನಾನು ರುಶಿಲ್ ಮಾಥುರ್. ನಾವು ಚಿಕ್ಕವರಿದ್ದಾಗ ಅಥವಾ ಮಕ್ಕಳಾಗಿದ್ದಾಗ ನಾವು ಮೊದಲ ಬಾರಿಗೆ ಸಂಕಲನ ಕಲಿತಾಗ, ಅದು ಮುಂದೆ ಸಾಗಲು ಅಥವಾ ಕ್ಯಾರಿ ಫಾರ್ವರ್ಡ್ ಮಾಡಲು ಕಲಿಸುತ್ತದೆ. ಆದರೆ ಕ್ಯಾರಿ ಫಾರ್ವರ್ಡ್ ಏಕೆ ಮಾಡಬೇಕು ಎಂದು ನಮಗೆ ಹೇಳಿರುವುದಿಲ್ಲ. ನಾವು ಸಂಯುಕ್ತ ಬಡ್ಡಿಯನ್ನು ಅಧ್ಯಯನ ಮಾಡುವಾಗ, ಚಕ್ರಬಡ್ಡಿಯ ಸೂತ್ರ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯನ್ನು ನಾವು ಎಂದಿಗೂ ಕೇಳುವುದಿಲ್ಲ? ಗಣಿತವು ನಿಜವಾಗಿಯೂ ಯೋಚಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕಲೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾವೆಲ್ಲರೂ ಗಣಿತಕ್ಕೆ ಹೊಸ ಪ್ರಶ್ನೆಯನ್ನು ಸೇರಿಸಿದರೆ, ನಾವು ಇದನ್ನು ಏಕೆ ಮಾಡುತ್ತಿದ್ದೇವೆ ಎಂಬುದು ಪ್ರಶ್ನೆ ಎಂದು ನಾನು ಭಾವಿಸುತ್ತೇನೆ. ಯಾಕೆ ಹೀಗಾಗುತ್ತದೆ? ಹಾಗಾಗಿ ಇದು ಗಣಿತದಲ್ಲಿ ಜನರ ಆಸಕ್ತಿ ಹೆಚ್ಚಿಸಬಹುದು ಎಂದು ನಾನು ಭಾವಿಸುತ್ತೇನೆ! ಏಕೆಂದರೆ ನಾವು ಏನನ್ನಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ನಾವು ಅದರ ಬಗ್ಗೆ ಭಯಪಡಲು ಪ್ರಾರಂಭಿಸುತ್ತೇವೆ. ಇದರ ಹೊರತಾಗಿ, ಗಣಿತವು ತುಂಬಾ ತಾರ್ಕಿಕ ವಿಷಯ ಎಂದು ಎಲ್ಲರೂ ಭಾವಿಸುತ್ತಾರೆ ಎಂದು ನನಗೆ ಅನಿಸುತ್ತದೆ. ಆದರೆ ಅದರ ಹೊರತಾಗಿ, ಗಣಿತದಲ್ಲಿ ಸೃಜನಶೀಲತೆ ಕೂಡ ಬಹಳ ಮುಖ್ಯ. ಏಕೆಂದರೆ ಕಲಿತಿದ್ದರ ಹೊರತಾಗಿ ಸೃಜನಶೀಲತೆಯ ಮೂಲಕ ಮಾತ್ರ ನಾವು ಒಲಿಂಪಿಯಾಡ್ನಲ್ಲಿ ತುಂಬಾ ಉಪಯುಕ್ತವಾದ ಪರಿಹಾರಗಳ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಗಣಿತ ಒಲಿಂಪಿಯಾಡ್ ಗಣಿತದಲ್ಲಿ ಆಸಕ್ತಿ ಹೆಚ್ಚಿಸಲು ಹೆಚ್ಚಿನ ಪ್ರಸ್ತುತತೆ ಹೊಂದಿದೆ.
ಪ್ರಧಾನ ಮಂತ್ರಿ: ಆನಂದೋ, ನೀವು ಏನಾದರೂ ಹೇಳಲು ಬಯಸುವಿರಾ?
ಆನಂದೋ ಭಾದುರಿ: ನಮಸ್ತೆ ಪಿಎಂ ಜಿ, ನಾನು ಗುವಾಹತಿಯ ಆನಂದೋ ಭಾದುರಿ. ನಾನು ಈಗಷ್ಟೇ 12ನೇ ತರಗತಿ ಪಾಸಾಗಿದ್ದೇನೆ. ನಾನು 6 ಮತ್ತು 7ನೇ ತರಗತಿಯಲ್ಲಿ ಸ್ಥಳೀಯ ಒಲಿಂಪಿಯಾಡ್ನಲ್ಲಿ ಭಾಗವಹಿಸುತ್ತಿದ್ದೆ. ಆಗ ನನ್ನ ಆಸಕ್ತಿ ಬೆಳೆಯಿತು. ಇದು ನನ್ನ ಎರಡನೇ ಐಎಂಒ. ನಾನು ಎರಡೂ ಐಎಂಒಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ರುಶಿಲ್ ಹೇಳಿದ ಮಾತನ್ನು ನಾನು ಒಪ್ಪುತ್ತೇನೆ. ಗಣಿತದ ಬಗ್ಗೆ ಭಯಪಡುವವರಿಗೆ ತುಂಬಾ ತಾಳ್ಮೆ ಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಏಕೆಂದರೆ ನಮಗೆ ಗಣಿತ ಕಲಿಸುವ ವಿಧಾನ ಏನಾಗುತ್ತದೆ ಎಂದರೆ, ಒಂದು ಸೂತ್ರ ನೀಡಲಾಗುತ್ತದೆ. ನಾವುಅದನ್ನು ನೆನಪಿಟ್ಟುಕೊಳ್ಳುತ್ತೇವೆ. ನಂತರ ಆ ಸೂತ್ರ ಆಧರಿಸಿ ನೂರಾರು ಪ್ರಶ್ನೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಆದರೆ ಸೂತ್ರ ಅರ್ಥವಾಗಿದೆಯೋ ಇಲ್ಲವೋ ಎಂದು ನೋಡಲಾಗುವುದಿಲ್ಲ, ಸಮಸ್ಯೆಗಳನ್ನು ಪರಿಹರಿಸುತ್ತಲೇ ಇರುತ್ತೀರಿ. ಸೂತ್ರವನ್ನು ಕಂಠಪಾಠ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ನೀವು ಸೂತ್ರ ಮರೆತರೆ ನೀವು ಏನು ಮಾಡುತ್ತೀರಿ? ಆದ್ದರಿಂದ ನಾನು ಹೇಳುವುದೇನೆಂದರೆ, ಸೂತ್ರವನ್ನು ಅರ್ಥ ಮಾಡಿಕೊಳ್ಳಿ. ರುಶಿಲ್ ಹೇಳಿದಂತೆ, ನಂತರ ತಾಳ್ಮೆಯಿಂದ ಅಧ್ಯಯನ ಮಾಡಿ. ನೀವು ಸೂತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನೀವು 100 ಪ್ರಶ್ನೆಗಳನ್ನು ಪರಿಹರಿಸಬೇಕಾಗಿಲ್ಲ. ನೀವು ಇದನ್ನು ಕೇವಲ 1 ಅಥವಾ 2 ಪ್ರಶ್ನೆಗಳೊಂದಿಗೆ ಮಾಡಬಹುದು. ಹಾಗಾಗಿ, ಗಣಿತಕ್ಕೆ ಯಾರೂ ಹೆದರಬೇಕಿಲ್ಲ.
ಪ್ರಧಾನ ಮಂತ್ರಿ: ಆದಿತ್ಯ ಮತ್ತು ಸಿದ್ಧಾರ್ಥ್, ನೀವು ಆರಂಭದಲ್ಲಿ ಮಾತನಾಡುವಾಗ, ಸಂಭಾಷಣೆ ಸರಿಯಾಗಿ ಆಗಲಿಲ್ಲ, ಈಗ ಈ ಸ್ನೇಹಿತರೆಲ್ಲರ ಮಾತುಗಳನ್ನು ಕೇಳಿದ ನಂತರ ನೀವು ಖಂಡಿತವಾಗಿಯೂ ಏನನ್ನಾದರೂ ಹೇಳಬೇಕು ಎಂದು ಅನಿಸುತ್ತಿದೆಯಾ. ನಿಮ್ಮ ಅನುಭವಗಳನ್ನು ಉತ್ತಮ ರೀತಿಯಲ್ಲಿ ಹಂಚಿಕೊಳ್ಳಬಹುದೇ?
ಸಿದ್ಧಾರ್ಥ್: ನಾವು ಅನೇಕ ಇತರ ದೇಶಗಳ ಜನರೊಂದಿಗೆ ಸಂವಾದ ನಡೆಸಿದ್ದೇವೆ, ಅಲ್ಲಿ ಅನೇಕ ಸಂಸ್ಕೃತಿಗಳಿವೆ, ಇತರೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಮತ್ತು ಅವರನ್ನು ಸಂಪರ್ಕಿಸುವುದು ತುಂಬಾ ಒಳ್ಳೆಯದು. ಅನೇಕ ಖ್ಯಾತ ಗಣಿತ ಶಾಸ್ತ್ರಜ್ಞರು ಇದ್ದರು.
ಪ್ರಧಾನ ಮಂತ್ರಿ: ಹೌದು ಆದಿತ್ಯ.
ಆದಿತ್ಯ: ಇದು ತುಂಬಾ ಒಳ್ಳೆಯ ಅನುಭವ, ಅವರು ನಮಗೆ ಬಾತ್ ಸಿಟಿಯ ಸುತ್ತಲೂ ತೋರಿಸಿದರು. ನಮಗೆ ಬಹಳ ಸುಂದರವಾದ ನೋಟಗಳನ್ನು ತೋರಿಸಿದರು, ನಮ್ಮನ್ನು ಉದ್ಯಾನವನಗಳಿಗೆ ಕರೆದೊಯ್ದರು. ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೂ ನಮ್ಮನ್ನು ಕರೆದೊಯ್ದರು. ಹಾಗಾಗಿ ಅದು ತುಂಬಾ ಒಳ್ಳೆಯ ಅನುಭವವಾಗಿತ್ತು.
ಪ್ರಧಾನಮಂತ್ರಿ: ಸರಿ ಸ್ನೇಹಿತರೆ, ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ನಾನು ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ, ಏಕೆಂದರೆ ಈ ರೀತಿಯ ಸ್ಪರ್ಧೆಗಳಿಗೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಚಟುವಟಿಕೆಯ ಅಗತ್ಯವಿದೆ ಎಂಬುದು ನನಗೆ ತಿಳಿದಿದೆ, ನೀವು ನಿಮ್ಮ ಮೆದುಳಿಗೆ ಕೆಲಸ ನೀಡಬೇಕು, ಕೆಲವೊಮ್ಮೆ ನಿಮ್ಮ ಕುಟುಂಬ ಸದಸ್ಯರು ಸಹ ಕಿರಿಕಿರಿಗೊಳ್ಳುತ್ತಾರೆ - ಈ ವ್ಯಕ್ತಿ ಅಂತ್ಯವಿಲ್ಲದಂತೆ ಏನು ಮಾಡುತ್ತಿದ್ದಾನೆ... ಗುಣಾಕಾರ, ಭಾಗಾಕಾರ ಇತ್ಯಾದಿ. ಆದರೆ ನಾನು ನಿಮಗೆ ಶುಭ ಹಾರೈಸುತ್ತೇನೆ. ನೀವು ದೇಶದ ಕೀರ್ತಿ ಮತ್ತು ಹೆಸರನ್ನು ಹೆಚ್ಚಿಸಿದ್ದೀರಿ. ಧನ್ಯವಾದಗಳು ಸ್ನೇಹಿತರೆ.
ವಿದ್ಯಾರ್ಥಿಗಳು: ಧನ್ಯವಾದಗಳು ಸರ್.
ಪ್ರಧಾನ ಮಂತ್ರಿ: ತುಂಬು ಧನ್ಯವಾದಗಳು.
ವಿದ್ಯಾರ್ಥಿಗಳು: ಧನ್ಯವಾದಗಳು ಸರ್, ಜೈ ಹಿಂದ್.
ಪ್ರಧಾನ ಮಂತ್ರಿ: ಜೈ ಹಿಂದ್ - ಜೈ ಹಿಂದ್.
ನಿಮ್ಮೆಲ್ಲರ ಜತೆ ಮಾತನಾಡಿದ್ದು ಖುಷಿ ತಂದಿದೆ. 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು. ಗಣಿತದ ಈ ಯುವ ದಿಗ್ಗಜರ ಸಂಭಾಷಣೆ ಕೇಳಿದ ನಂತರ, ಇತರ ಯುವಕರು ಗಣಿತವನ್ನು ಆನಂದಿಸಲು ಸ್ಫೂರ್ತಿ ಪಡೆಯುತ್ತಾರೆ ಎಂಬುದು ನನಗೆ ಖಾತ್ರಿಯಿದೆ.
ನನ್ನ ಪ್ರೀತಿಯ ದೇಶವಾಸಿಗಳೆ, 'ಮನ್ ಕಿ ಬಾತ್'ನಲ್ಲಿ, ನಾನು ಈಗ ಒಂದು ವಿಷಯ ಹಂಚಿಕೊಳ್ಳಲು ಬಯಸುತ್ತೇನೆ, ಅದನ್ನು ಕೇಳಿದ ನಂತರ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ಆದರೆ ಅದರ ಬಗ್ಗೆ ನಿಮಗೆ ಹೇಳುವ ಮೊದಲು, ನಾನು ನಿಮಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಚರೈಡಿಯೊ ಮೈದಾಮ್ ಹೆಸರನ್ನು ನೀವು ಕೇಳಿದ್ದೀರಾ? ಇಲ್ಲದಿದ್ದರೆ, ನೀವು ಈಗ ಈ ಹೆಸರನ್ನು ಮತ್ತೆ ಮತ್ತೆ ಕೇಳುತ್ತೀರಿ, ಇತರರಿಗೆ ಬಹಳ ಉತ್ಸಾಹದಿಂದ ಹೇಳುತ್ತೀರಿ. ಅಸ್ಸಾಂನ ಚರೈಡಿಯೊ ಮೈದಾಮ್ ಅನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ, ಇದು ಭಾರತದ 43ನೇ ತಾಣವಾಗಿದೆ. ವಿಶೇಷವಾಗಿ, ಈಶಾನ್ಯದ ಮೊದಲ ತಾಣವಾಗಿದೆ.
ಸ್ನೇಹಿತರೆ, ನಿಮ್ಮ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ, ಚರೈಡಿಯೊ ಮೈದಾಮ್ ಎಂದರೇನು? ಅದು ಏಕೆ ತುಂಬಾ ವಿಶೇಷವಾಗಿದೆ? ಚರೈಡಿಯೊ ಎಂದರೆ ಬೆಟ್ಟಗಳ ಮೇಲೆ ಹೊಳೆಯುವ ನಗರ. ಇದು ಅಹೋಮ್ ರಾಜವಂಶದ ಮೊದಲ ರಾಜಧಾನಿಯಾಗಿತ್ತು. ಅಹೋಮ್ ರಾಜವಂಶಸ್ಥರು ಸಾಂಪ್ರದಾಯಿಕವಾಗಿ ತಮ್ಮ ಪೂರ್ವಜರ ಅವಶೇಷಗಳನ್ನು ಮತ್ತು ಅವರ ಅಮೂಲ್ಯ ವಸ್ತುಗಳನ್ನು ಮೈದಾಮ್ನಲ್ಲಿ ಇರಿಸುತ್ತಿದ್ದರು.
ಮೈದಾಮ್ ಒಂದು ದಿಬ್ಬ ಅಥವಾ ಗುಡ್ಡೆಯಂತಹ ರಚನೆಯಾಗಿದ್ದು, ಮೇಲ್ಭಾಗದಲ್ಲಿ ಮಣ್ಣಿನಿಂದ ಮುಚ್ಚಲ್ಪಟ್ಟಿದೆ, ಕೆಳಗೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕೊಠಡಿಗಳನ್ನು ಹೊಂದಿದೆ. ಈ ಮೈದಾಮ್ ಅಹೋಮ್ ಸಾಮ್ರಾಜ್ಯದ ಅಗಲಿದ ರಾಜರು ಮತ್ತು ಗಣ್ಯರಿಗೆ ಗೌರವ ಸೂಚಿಸುವ ಸಂಕೇತವಾಗಿದೆ. ಪೂರ್ವಜರಿಗೆ ಗೌರವ ತೋರಿಸುವ ಈ ವಿಧಾನವು ತುಂಬಾ ವಿಶಿಷ್ಟವಾಗಿದೆ. ಈ ಸ್ಥಳದಲ್ಲಿ ಸಮುದಾಯ ಪೂಜೆಯೂ ನಡೆಯುತ್ತಿತ್ತು.
ಸ್ನೇಹಿತರೆ, ಅಹೋಮ್ ಸಾಮ್ರಾಜ್ಯದ ಇತರೆ ಮಾಹಿತಿಯು ನಿಮ್ಮನ್ನು ಇನ್ನಷ್ಟು ಆಶ್ಚರ್ಯಗೊಳಿಸುತ್ತದೆ. 13ನೇ ಶತಮಾನದಲ್ಲಿ ಪ್ರಾರಂಭವಾದ ಈ ಸಾಮ್ರಾಜ್ಯವು 19ನೇ ಶತಮಾನದ ಆರಂಭದ ತನಕ ಅಸ್ತಿತ್ವದಲ್ಲಿತ್ತು. ಒಂದು ಸಾಮ್ರಾಜ್ಯವು ಇಷ್ಟು ದೀರ್ಘಾವಧಿಯವರೆಗೆ ಉಳಿಯುವುದು ಒಂದು ದೊಡ್ಡ ಸಾಧನೆಯಾಗಿದೆ. ಪ್ರಾಯಶಃ ಅಹೋಮ್ ಸಾಮ್ರಾಜ್ಯದ ತತ್ವಗಳು ಮತ್ತು ನಂಬಿಕೆಗಳು ಎಷ್ಟು ಪ್ರಬಲವಾಗಿದ್ದವೆಂದರೆ, ಅದು ಈ ರಾಜವಂಶವನ್ನು ದೀರ್ಘಕಾಲ ಜೀವಂತವಾಗಿರಿಸಿತು. ಈ ವರ್ಷದ ಮಾರ್ಚ್ 9ರಂದು, ಅದಮ್ಯ ಧೈರ್ಯ ಮತ್ತು ಶೌರ್ಯದ ಸಂಕೇತವಾದ ಮಹಾನ್ ಅಹೋಮ್ ಯೋಧ ಲಸಿತ್ ಬೊರ್ಫುಕನ್ ಅವರ ಅತಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ನನಗೆ ಸಿಕ್ಕಿತು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಈ ಕಾರ್ಯಕ್ರಮ ಸಮಯದಲ್ಲಿ, ಅಹೋಮ್ ಸಮುದಾಯದ ಆಧ್ಯಾತ್ಮಿಕ ಸಂಪ್ರದಾಯ ಅನುಸರಿಸುವಾಗ ನನಗೆ ಒಂದು ವಿಶಿಷ್ಟವಾದ ಅನುಭವವಾಯಿತು. ಲಸಿತ್ ಮೈದಾನದಲ್ಲಿ ಅಹೋಮ್ ಸಮುದಾಯದ ಪೂರ್ವಜರಿಗೆ ಗೌರವ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿರುವುದು ನಿಜಕ್ಕೂ ದೊಡ್ಡ ಭಾವನೆ. ಚರೈಡಿಯೊ ಮೈದಾಮ್ ಈಗ ವಿಶ್ವ ಪಾರಂಪರಿಕ ತಾಣವಾಗಿರುವುದರಿಂದ ಹೆಚ್ಚಿನ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ನಿಮ್ಮ ಭವಿಷ್ಯದ ಪ್ರಯಾಣ ಯೋಜನೆಗಳ ಪಟ್ಟಿಗೆ ನೀವು ಸಹ ಈ ತಾಣವನ್ನು ಸೇರಿಸಬೇಕು.
ಸ್ನೇಹಿತರೆ, ಒಂದು ದೇಶವು ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದರಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಭಾರತದಲ್ಲೂ ಇಂತಹ ಹಲವು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಒಂದು ಪ್ರಯತ್ನವೆಂದರೆ - ಪ್ರಾಜೆಕ್ಟ್ ಪರಿ. ಪರಿ ಪದ ಕೇಳಿ ಗೊಂದಲಕ್ಕೀಡಾಗಬೇಡಿ. ಈ ಪರಿಯು ಸ್ವರ್ಗದ ಕಲ್ಪನೆಗೆ ಸಂಬಂಧಿಸಿಲ್ಲ ಆದರೆ ಭೂಮಿಯನ್ನು ಸ್ವರ್ಗವನ್ನಾಗಿ ಮಾಡುತ್ತಿದೆ. ಪರಿ(PARI) ಎಂದರೆ ಭಾರತದ ಸಾರ್ವಜನಿಕ ಕಲೆ - ಪ್ರಾಜೆಕ್ಟ್ ಪರಿ, ಸಾರ್ವಜನಿಕ ಕಲೆಯನ್ನು ಜನಪ್ರಿಯಗೊಳಿಸಲು ಉದಯೋನ್ಮುಖ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತರಲು ಇದು ಉತ್ತಮ ಮಾಧ್ಯಮವಾಗುತ್ತಿದೆ. ರಸ್ತೆ ಬದಿಗಳಲ್ಲಿ, ಗೋಡೆಗಳಲ್ಲಿ, ಅಂಡರ್ಪಾಸ್ಗಳಲ್ಲಿ ಸುಂದರವಾದ ವರ್ಣಚಿತ್ರಗಳನ್ನು ರಚಿಸುವುದನ್ನು ನೀವು ನೋಡಿರಬೇಕು. ಈ ವರ್ಣಚಿತ್ರಗಳು ಮತ್ತು ಈ ಕಲಾಕೃತಿಗಳು ಪರಿ(PARI)ಯೊಂದಿಗೆ ಸಂಬಂಧ ಹೊಂದಿರುವ ಅದೇ ಕಲಾವಿದರಿಂದ ರೂಪುಗೊಂಡಿವೆ. ಇದು ನಮ್ಮ ಸಾರ್ವಜನಿಕ ಸ್ಥಳಗಳ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ನಮ್ಮ ಸಂಸ್ಕೃತಿಯನ್ನು ಹೆಚ್ಚು ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ ದೆಹಲಿಯಲ್ಲಿರುವ ಭಾರತ ಮಂಟಪವನ್ನೇ ತೆಗೆದುಕೊಳ್ಳಿ. ಇಲ್ಲಿ ನೀವು ದೇಶಾದ್ಯಂತದ ಅದ್ಭುತ ಕಲಾಕೃತಿಗಳನ್ನು ಕಾಣಬಹುದು. ದೆಹಲಿಯ ಕೆಲವು ಅಂಡರ್ಪಾಸ್ಗಳು ಮತ್ತು ಫ್ಲೈಓವರ್ಗಳಲ್ಲಿ ನೀವು ಅಂತಹ ಸುಂದರವಾದ ಸಾರ್ವಜನಿಕ ಕಲೆಯನ್ನು ಸಹ ನೋಡಬಹುದು. ಕಲೆ ಮತ್ತು ಸಂಸ್ಕೃತಿ ಪ್ರೇಮಿಗಳು ಸಾರ್ವಜನಿಕ ಕಲೆಯಲ್ಲಿ ಹೆಚ್ಚು ಕೆಲಸ ಮಾಡುವಂತೆ ನಾನು ವಿನಂತಿಸುತ್ತೇನೆ. ಇದು ನಮ್ಮ ಬೇರುಗಳ ಬಗ್ಗೆ ಹೆಮ್ಮೆಪಡುವ ಆಹ್ಲಾದಕರ ಭಾವನೆ ನೀಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೆ, 'ಮನ್ ಕಿ ಬಾತ್'ನಲ್ಲಿ, ನಾವು ಈಗ 'ಬಣ್ಣ'ಗಳ ಬಗ್ಗೆ ಮಾತನಾಡುತ್ತೇವೆ - ಹರಿಯಾಣದ ರೋಹ್ಟಕ್ ಜಿಲ್ಲೆಯ 250ಕ್ಕೂ ಹೆಚ್ಚು ಮಹಿಳೆಯರ ಜೀವನದಲ್ಲಿ ಸಮೃದ್ಧಿಯ ವರ್ಣಗಳನ್ನು ತುಂಬಿದ ಬಣ್ಣಗಳು. ಕೈಮಗ್ಗ ಉದ್ಯಮಕ್ಕೆ ಸಂಬಂಧಿಸಿದ ಈ ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಸಣ್ಣ ಅಂಗಡಿಗಳನ್ನು ನಡೆಸುತ್ತಿದ್ದರು, ಕೂಲಿ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಪ್ರತಿಯೊಬ್ಬರಿಗೂ ಮುಂದೆ ಸಾಗುವ ಆಸೆ ಇರುತ್ತದೆ. ಆದ್ದರಿಂದ ಅವರು ಉನ್ನತಿ ಸ್ವಸಹಾಯ ಸಂಘಕ್ಕೆ ಸೇರಲು ನಿರ್ಧರಿಸಿದರು. ಈ ಗುಂಪಿಗೆ ಸೇರುವ ಮೂಲಕ ಅವರು ಬ್ಲಾಕ್ ಪ್ರಿಂಟಿಂಗ್ ಮತ್ತು ಡೈಯಿಂಗ್ ತರಬೇತಿ ಪಡೆದರು. ಬಟ್ಟೆಯ ಮೇಲೆ ಬಣ್ಣಗಳ ಮಾಯಾಜಾಲ ಹರಡುವ ಈ ಮಹಿಳೆಯರು, ಇಂದು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಇವರು ತಯಾರಿಸುವ ಬೆಡ್ ಕವರ್, ಸೀರೆ, ದುಪಟ್ಟಾಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.
ಸ್ನೇಹಿತರೆ, ರೋಹ್ಟಕ್ನ ಈ ಮಹಿಳೆಯರಂತೆ, ದೇಶದ ವಿವಿಧ ಭಾಗಗಳ ಕುಶಲಕರ್ಮಿಗಳು ಕೈಮಗ್ಗ ಜನಪ್ರಿಯಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ಒಡಿಶಾದ ಸಂಬಲ್ಪುರಿ ಸೀರೆಯಾಗಿರಲಿ, ಸಂಸದರ ಮಹೇಶ್ವರಿ ಸೀರೆಯಾಗಿರಲಿ, ಮಹಾರಾಷ್ಟ್ರದ ಪೈಥಾನಿಯಾಗಿರಲಿ ಅಥವಾ ವಿದರ್ಭದ ಹ್ಯಾಂಡ್ ಬ್ಲಾಕ್ ಪ್ರಿಂಟ್ಗಳು, ಹಿಮಾಚಲದ ಭುಟಿಕೊ ಶಾಲುಗಳು ಮತ್ತು ಉಣ್ಣೆಯ ಬಟ್ಟೆಗಳು ಅಥವಾ ಜಮ್ಮು-ಕಾಶ್ಮೀರದ ಕಣಿ ಶಾಲುಗಳೇ ಇರಬಹುದು... ಕೈಮಗ್ಗ ಕುಶಲಕರ್ಮಿಗಳ ಕೆಲಸ ದೇಶದ ಮೂಲೆ ಮೂಲೆಗಳಲ್ಲಿ ಹರಡಿದೆ. ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್ 7ರಂದು ನಾವು ರಾಷ್ಟ್ರೀಯ ಕೈಮಗ್ಗ ದಿನ ಆಚರಿಸುತ್ತೇವೆ ಎಂಬುದನ್ನು ನೀವು ತಿಳಿದಿರಬೇಕು. ಇತ್ತೀಚಿನ ದಿನಗಳಲ್ಲಿ, ಕೈಮಗ್ಗ ಉತ್ಪನ್ನಗಳು ಜನರ ಹೃದಯದಲ್ಲಿ ಸ್ಥಾನ ಪಡೆದಿರುವ ರೀತಿ ನಿಜವಾಗಿಯೂ ಅತ್ಯಂತ ಯಶಸ್ವಿಯಾಗಿದೆ, ಅದ್ಭುತವಾಗಿದೆ. ಈಗ ಅನೇಕ ಖಾಸಗಿ ಕಂಪನಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಕೈಮಗ್ಗ ಉತ್ಪನ್ನಗಳು ಮತ್ತು ಸುಸ್ಥಿರ ಫ್ಯಾಷನ್ ಗಳಿಗೆ ಉತ್ತೇಜನ ನೀಡಿ, ಪ್ರಚಾರ ಮಾಡುತ್ತಿವೆ.
ಕೋಶಾ ಎಐ, ಹ್ಯಾಂಡ್|ಲೂಮ್ ಇಂಡಿಯಾ, ಡಿ-ಜಂಕ್, ನೊವಾಟ್ಯಾಕ್ಸ್, ಬ್ರಹ್ಮಪುತ್ರ ಫೇಬಲ್ಸ್ ಇಂತಹ ಹಲವು ಸ್ಟಾರ್ಟಪ್ಗಳು ಕೈಮಗ್ಗ ಉತ್ಪನ್ನಗಳನ್ನು ಜನಪ್ರಿಯಗೊಳಿಸುವಲ್ಲಿ ನಿರತವಾಗಿವೆ. ಅನೇಕ ಜನರು ತಮ್ಮ ಸ್ಥಳದ ಅಂತಹ ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನೀವು ಕೂಡ ನಿಮ್ಮ ಸ್ಥಳೀಯ ಉತ್ಪನ್ನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ 'ಹ್ಯಾಶ್ಟ್ಯಾಗ್ ಮೈ ಪ್ರಾಡಕ್ಟ್ ಮೈ ಪ್ರೈಡ್' ಎಂಬ ಹೆಸರಿನೊಂದಿಗೆ ಅಪ್ಲೋಡ್ ಮಾಡಬಹುದು. ನಿಮ್ಮ ಈ ಸಣ್ಣ ಪ್ರಯತ್ನವು ಅನೇಕ ಜನರ ಜೀವನವನ್ನು ಬದಲಾಯಿಸುತ್ತದೆ.
ಸ್ನೇಹಿತರೆ, ಕೈಮಗ್ಗದ ಜತೆಗೆ ನಾನು ಖಾದಿ ಬಗ್ಗೆಯೂ ಮಾತನಾಡಲು ಬಯಸುತ್ತೇನೆ. ಖಾದಿ ಉತ್ಪನ್ನಗಳನ್ನು ಹಿಂದೆಂದೂ ಬಳಸದ ನಿಮ್ಮಲ್ಲಿ ಅನೇಕರು ಇದ್ದಿರಬಹುದು. ಆದರೆ ಇಂದು ಬಹಳ ಹೆಮ್ಮೆಯಿಂದ ಖಾದಿ ಧರಿಸುತ್ತಾರೆ. ಖಾದಿ ಗ್ರಾಮೋದ್ಯೋಗದ ವಹಿವಾಟು ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಒಂದೂವರೆ ಲಕ್ಷ ಕೋಟಿ ರೂಪಾಯಿಯ ಬಗ್ಗೆ ಯೋಚಿಸಿದರೆ ಖಾದಿ ಮಾರಾಟ ಎಷ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗುತ್ತದೆ. ಅದು 400% ಹೆಚ್ಚಳವಾಗಿದೆ. ಖಾದಿ, ಕೈಮಗ್ಗದ ಈ ಹೆಚ್ಚುತ್ತಿರುವ ಮಾರಾಟವು ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತಿದೆ. ಹೆಚ್ಚಾಗಿ, ಮಹಿಳೆಯರು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ನಾನು ಮತ್ತೊಮ್ಮೆ ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು ಹಲವು ಬಗೆಯ ಬಟ್ಟೆಗಳನ್ನು ಹೊಂದಿರಬೇಕು. ನೀವು ಇಲ್ಲಿಯವರೆಗೆ ಖಾದಿ ಬಟ್ಟೆಗಳನ್ನು ಖರೀದಿಸಿಲ್ಲದಿದ್ದರೆ, ಈ ವರ್ಷದಿಂದ ಪ್ರಾರಂಭಿಸಿ.
ಆಗಸ್ಟ್ ತಿಂಗಳು ಸಮೀಪಿಸುತ್ತಿದೆ. ಇದು ಸ್ವಾತಂತ್ರ್ಯ ಗಳಿಸಿದ ತಿಂಗಳು, ಇದು ಕ್ರಾಂತಿಯ ತಿಂಗಳು. ಖಾದಿ ಖರೀದಿಸಲು ಅದಕ್ಕಿಂತ ಉತ್ತಮ ಅವಕಾಶ ಬೇರೇನಿದೆ! ನನ್ನ ಪ್ರೀತಿಯ ದೇಶವಾಸಿಗಳೆ, 'ಮನ್ ಕಿ ಬಾತ್'ನಲ್ಲಿ ನಾನು ನಿಮ್ಮೊಂದಿಗೆ ಡ್ರಗ್ಸ್ ಹಾವಳಿಯ ಸವಾಲುಗಳನ್ನು ಆಗಾಗ್ಗೆ ಚರ್ಚಿಸಿದ್ದೇನೆ. ಪ್ರತಿಯೊಂದು ಕುಟುಂಬವೂ ತಮ್ಮ ಮಗು ಡ್ರಗ್ಸ್ ಹಿಡಿತಕ್ಕೆ ಸಿಲುಕಬಹುದೆಂಬ ಆತಂಕದಲ್ಲಿದೆ. ಈಗ ಅಂತಹ ಜನರಿಗೆ ಸಹಾಯ ಮಾಡಲು, ಸರ್ಕಾರವು ವಿಶೇಷ ಕೇಂದ್ರ ತೆರೆದಿದೆ - 'ಮಾನಸ್'. ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಇದು ಬಹುದೊಡ್ಡ ಹೆಜ್ಜೆಯಾಗಿದೆ. ಕೆಲವು ದಿನಗಳ ಹಿಂದೆ, 'ಮಾನಸ್'ನ ಸಹಾಯವಾಣಿ ಮತ್ತು ಪೋರ್ಟಲ್ ಆರಂಭಿಸಲಾಯಿತು. ಸರ್ಕಾರವು ಟೋಲ್ ಫ್ರೀ ಸಂಖ್ಯೆ '1933' ಬಿಡುಗಡೆ ಮಾಡಿದೆ. ಪುನರ್ವಸತಿಗೆ ಸಂಬಂಧಿಸಿದ ಅಗತ್ಯ ಸಲಹೆ ಅಥವಾ ಮಾಹಿತಿ ಪಡೆಯಲು ಯಾರಾದರೂ ಈ ಸಂಖ್ಯೆಗೆ ಕರೆ ಮಾಡಬಹುದು. ಯಾರಿಗಾದರೂ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೆ, ಅವರು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು. ಮಾನಸ್ ಜತೆಗೆ ಹಂಚಿಕೊಳ್ಳಲಾದ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ.
ಎಲ್ಲಾ ಜನರು, ಎಲ್ಲಾ ಕುಟುಂಬಗಳು, ಭಾರತವನ್ನು 'ಡ್ರಗ್ಸ್ ಮುಕ್ತ' ಮಾಡುವಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಮಾನಸ್ ಸಹಾಯವಾಣಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೆ, ನಾಳೆ ವಿಶ್ವಾದ್ಯಂತ ಹುಲಿ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ, ಹುಲಿಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಾವೆಲ್ಲರೂ ಹುಲಿಗಳಿಗೆ ಸಂಬಂಧಿಸಿದ ಘಟನೆಗಳ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಕಾಡಿನ ಸುತ್ತಲಿನ ಹಳ್ಳಿಗಳಲ್ಲಿ ಹುಲಿಯೊಂದಿಗೆ ಹೇಗೆ ಸಾಮರಸ್ಯದಿಂದ ಬದುಕಬೇಕು ಎಂದು ಎಲ್ಲರಿಗೂ ತಿಳಿದಿದೆ. ನಮ್ಮ ದೇಶದಲ್ಲಿ ಮನುಷ್ಯರು ಮತ್ತು ಹುಲಿಗಳ ನಡುವೆ ಸಂಘರ್ಷವಿಲ್ಲದ ಅನೇಕ ಹಳ್ಳಿಗಳಿವೆ. ಆದರೆ ಅಂತಹ ಸಂದರ್ಭ ಬಂದಾಗ ಅಲ್ಲಿಯೂ ಹುಲಿಗಳ ರಕ್ಷಣೆಗೆ ಅಭೂತಪೂರ್ವ ಪ್ರಯತ್ನಗಳು ನಡೆಯುತ್ತಿವೆ. ಸಾರ್ವಜನಿಕ ಸಹಭಾಗಿತ್ವದ ಅಂತಹ ಒಂದು ಪ್ರಯತ್ನವೆಂದರೆ "ಕುಲ್ಹಾಡಿ ಬ್ಯಾಂಡ್ ಪಂಚಾಯತ್". ರಾಜಸ್ಥಾನದ ರಣಥಂಬೋರ್ನಿಂದ ಪ್ರಾರಂಭವಾದ "ಕುಲ್ಹಾಡಿ ಬ್ಯಾಂಡ್ ಪಂಚಾಯತ್" ಅಭಿಯಾನವು ತುಂಬಾ ಆಸಕ್ತಿದಾಯಕವಾಗಿದೆ. ಕೊಡಲಿ ಹಿಡಿದು ಕಾಡಿಗೆ ಹೋಗುವುದಿಲ್ಲ, ಮರ ಕಡಿಯುವುದಿಲ್ಲ ಎಂದು ಸ್ಥಳೀಯ ಸಮುದಾಯಗಳೇ ಸಂಕಲ್ಪ ಮಾಡಿವೆ. ಈ ಒಂದು ನಿರ್ಧಾರದಿಂದ ಇಲ್ಲಿನ ಕಾಡುಗಳು ಮತ್ತೊಮ್ಮೆ ಹಸಿರಿನಿಂದ ಕಂಗೊಳಿಸುತ್ತಿದ್ದು, ಹುಲಿಗಳಿಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ.
ಸ್ನೇಹಿತರೆ, ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶವು ಹುಲಿಗಳ ಪ್ರಮುಖ ಆವಾಸಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯ ಸಮುದಾಯಗಳು, ವಿಶೇಷವಾಗಿ ಗೊಂಡ ಮತ್ತು ಮನ ಬುಡಕಟ್ಟು ಜನಾಂಗದ ನಮ್ಮ ಸಹೋದರ ಸಹೋದರಿಯರು ಪರಿಸರ ಪ್ರವಾಸೋದ್ಯಮದತ್ತ ಕ್ಷಿಪ್ರ ದಾಪುಗಾಲು ಹಾಕಿದ್ದಾರೆ.
ಇಲ್ಲಿ ಹುಲಿಗಳ ಚಟುವಟಿಕೆ ಹೆಚ್ಚಲಿ ಎಂದು ಅರಣ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದಾರೆ. ಆಂಧ್ರ ಪ್ರದೇಶದ ನಲ್ಲಮಲೈ ಬೆಟ್ಟಗಳಲ್ಲಿ ವಾಸಿಸುವ ‘ಚೆಂಚು’ ಬುಡಕಟ್ಟು ಜನಾಂಗದ ಪ್ರಯತ್ನವನ್ನು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ. ಹುಲಿ ಟ್ರ್ಯಾಕರ್ಗಳಾಗಿರುವ ಅವರು, ಕಾಡಿನಲ್ಲಿ ಕಾಡು ಪ್ರಾಣಿಗಳ ಚಲನವಲನದ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಜತೆಗೆ ಆ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರೆ. ಅದೇ ರೀತಿ, ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನಡೆಯುತ್ತಿರುವ ‘ಬಾಗ್ ಮಿತ್ರ್ ಕಾರ್ಯಕ್ರಮ್’ ಕೂಡ ಸದ್ದು ಮಾಡುತ್ತಿದೆ. ಇದರ ಅಡಿ, ಸ್ಥಳೀಯ ಜನರಿಗೆ 'ಟೈಗರ್ ಫ್ರೆಂಡ್ಸ್' ಆಗಿ ಕೆಲಸ ಮಾಡಲು ತರಬೇತಿ ನೀಡಲಾಗುತ್ತದೆ. ಈ 'ಟೈಗರ್ ಫ್ರೆಂಡ್ಸ್' ಹುಲಿಗಳು ಮತ್ತು ಮನುಷ್ಯರ ನಡುವೆ ಯಾವುದೇ ಸಂಘರ್ಷವಿಲ್ಲ ಎಂಬುದನ್ನು ಕಟ್ಟುನಿಟ್ಟಾಗಿ ಖಚಿತಪಡಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಇಂತಹ ಹಲವು ಪ್ರಯತ್ನಗಳು ನಡೆಯುತ್ತಿವೆ. ನಾನು ಇಲ್ಲಿ ಕೆಲವು ಪ್ರಯತ್ನಗಳನ್ನು ಮಾತ್ರ ಚರ್ಚಿಸಿದ್ದೇನೆ, ಆದರೆ ಹುಲಿ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ತುಂಬಾ ಉಪಯುಕ್ತವಾಗಿದೆ ಎಂಬುದು ಸಂತೋಷವಾಗಿದೆ. ಇಂತಹ ಪ್ರಯತ್ನಗಳಿಂದಲೇ ಭಾರತದಲ್ಲಿ ಪ್ರತಿ ವರ್ಷ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಜಗತ್ತಿನಲ್ಲಿರುವ 70 ಪ್ರತಿಶತ ಹುಲಿಗಳು ನಮ್ಮ ದೇಶದಲ್ಲಿವೆ ಎಂದು ತಿಳಿದರೆ ನಿಮಗೆ ಸಂತೋಷ ಮತ್ತು ಹೆಮ್ಮೆ ಅನಿಸುತ್ತದೆ. ಊಹಿಸಿಕೊಳ್ಳಿ! ಭಾರತದಲ್ಲಿವೆ 70ರಷ್ಟು ಹುಲಿಗಳು! ಅದಕ್ಕಾಗಿಯೇ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಅನೇಕ ಹುಲಿ ಅಭಯಾರಣ್ಯಗಳಿವೆ.
ಸ್ನೇಹಿತರೆ, ಹುಲಿಗಳ ಸಂಖ್ಯೆ ಹೆಚ್ಚಳದ ಜತೆಗೆ ನಮ್ಮ ದೇಶದಲ್ಲಿ ಅರಣ್ಯ ಪ್ರದೇಶವೂ ವೇಗವಾಗಿ ಹೆಚ್ಚುತ್ತಿದೆ. ಅದರಲ್ಲಿಯೂ ಸಮುದಾಯದ ಪ್ರಯತ್ನದಿಂದ ದೊಡ್ಡ ಯಶಸ್ಸು ಸಿಗುತ್ತಿದೆ. ಕಳೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಏಕ್ ಪೆಡ್ ಮಾ ಕೆ ನಾಮ್’ ಕಾರ್ಯಕ್ರಮ ಕುರಿತು ನಿಮ್ಮೊಂದಿಗೆ ಚರ್ಚಿಸಿದ್ದೆ. ದೇಶದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಅಭಿಯಾನದೊಂದಿಗೆ ಸಂಪರ್ಕ ಸಾಧಿಸುತ್ತಿರುವುದು ನನಗೆ ಖುಷಿ ತಂದಿದೆ. ಕೆಲ ದಿನಗಳ ಹಿಂದೆ ಸ್ವಚ್ಛತೆಗೆ ಹೆಸರಾದ ಇಂದೋರ್ನಲ್ಲಿ ಅದ್ದೂರಿ ಕಾರ್ಯಕ್ರಮವೊಂದು ನಡೆಯಿತು. ‘ಏಕ್ ಪೆದ್ ಮಾ ಕೆ ನಾಮ್’ ಕಾರ್ಯಕ್ರಮದಲ್ಲಿ ಒಂದೇ ದಿನ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ನಿಮ್ಮ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಈ ಅಭಿಯಾನದಲ್ಲಿ ನೀವೂ ಕೈಜೋಡಿಸಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಕು. ಈ ಅಭಿಯಾನಕ್ಕೆ ಸೇರುವ ಮೂಲಕ, ನನ್ನ ತಾಯಿ ಮತ್ತು ನನ್ನ ಭೂಮಿತಾಯಿಗಾಗಿ ಏನನ್ನಾದರೂ ಮಾಡಿದ್ದೀನಿ ಎಂಬ ಭಾವನೆ ನಿಮ್ಮದಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೆ, ಆಗಸ್ಟ್ 15 ದೂರವಿಲ್ಲ, ಈಗ ಆಗಸ್ಟ್ 15ಕ್ಕೆ ಮತ್ತೊಂದು ಅಭಿಯಾನ ಸೇರಿಸಲಾಗಿದೆ, 'ಹರ್ ಘರ್ ತಿರಂಗ ಅಭಿಯಾನ'. ಕಳೆದ ಕೆಲವು ವರ್ಷಗಳಿಂದ ಇಡೀ ದೇಶದಲ್ಲಿ 'ಹರ್ ಘರ್ ತಿರಂಗ ಅಭಿಯಾನ'ಕ್ಕಾಗಿ ಎಲ್ಲರ ಉತ್ಸಾಹವು ಹೆಚ್ಚಾಗಿದೆ. ಬಡವರಿರಲಿ, ಶ್ರೀಮಂತರಿರಲಿ, ಸಣ್ಣ ಮನೆಗಳಿರಲಿ, ದೊಡ್ಡ ಮನೆಯವರಿರಲಿ, ಪ್ರತಿಯೊಬ್ಬರೂ ತ್ರಿವರ್ಣ ಧ್ವಜ ಹಾರಿಸಲು ಹೆಮ್ಮೆ ಪಡುತ್ತಾರೆ.
ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಕ್ರೇಜ್ ಸಹ ಇದೆ. ಕಾಲೋನಿ ಅಥವಾ ಸೊಸೈಟಿಯ ಪ್ರತಿಯೊಂದು ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿದಾಗ, ಸ್ವಲ್ಪ ಸಮಯದೊಳಗೆ ತ್ರಿವರ್ಣವು ಇತರ ಮನೆಗಳ ಮೇಲೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಎಂಬುದನ್ನು ನೀವು ಗಮನಿಸಿರಬೇಕು. ಅದೇನೆಂದರೆ, 'ಹರ್ ಘರ್ ತಿರಂಗ ಅಭಿಯಾನ' - ತ್ರಿವರ್ಣ ಧ್ವಜದ ವೈಭವ ಎತ್ತಿ ಹಿಡಿಯುವ ವಿಶಿಷ್ಟವಾದ ಹಬ್ಬ ಇದಾಗಿದೆ. ಈಗ ಅದಕ್ಕೆ ಸಂಬಂಧಿಸಿದ ನಾನಾ ರೀತಿಯ ಆವಿಷ್ಕಾರಗಳೂ ನಡೆಯುತ್ತಿವೆ. ಆಗಸ್ಟ್ 15 ಸಮೀಪಿಸುತ್ತಿದ್ದಂತೆ, ಮನೆಗಳು, ಕಚೇರಿಗಳು, ಕಾರುಗಳಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಲು ವಿವಿಧ ರೀತಿಯ ಉತ್ಪನ್ನಗಳು ಕಂಡುಬರುತ್ತವೆ. ಕೆಲವರು ತ್ರಿವರ್ಣ ಧ್ವಜವನ್ನು ತಮ್ಮ ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಹಂಚುತ್ತಾರೆ. ಈ ಸಂತೋಷ, ತ್ರಿವರ್ಣದೊಂದಿಗೆ ಈ ಉತ್ಸಾಹವು ನಮ್ಮನ್ನು ಪರಸ್ಪರ ಸಂಪರ್ಕಿಸುತ್ತದೆ.
ಸ್ನೇಹಿತರೆ, ಮೊದಲಿನಂತೆಯೇ ಈ ವರ್ಷವೂ ನೀವು ತ್ರಿವರ್ಣ ಧ್ವಜದೊಂದಿಗೆ ನಿಮ್ಮ ಸೆಲ್ಫಿಯನ್ನು 'harghartiranga.com' ನಲ್ಲಿ ಅಪ್ಲೋಡ್ ಮಾಡಬೇಕು. ನಾನು ನಿಮಗೆ ಇನ್ನೂ ಹೆಚ್ಚಿನದನ್ನು ನೆನಪಿಸಲು ಬಯಸುತ್ತೇನೆ. ಪ್ರತಿ ವರ್ಷ ಆಗಸ್ಟ್ 15ರ ಮೊದಲು, ನೀವು ನನಗೆ ಬಹಳಷ್ಟು ಸಲಹೆಗಳನ್ನು ಕಳುಹಿಸುತ್ತೀರಿ. ಈ ವರ್ಷವೂ ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಬೇಕು. ನೀವು MyGov ಅಥವಾ NaMo ಅಪ್ಲಿಕೇಶನ್ನಲ್ಲಿ ನಿಮ್ಮ ಸಲಹೆಗಳನ್ನು ಕಳುಹಿಸಬಹುದು. ನಾನು ಆಗಸ್ಟ್ 15ರ ಭಾಷಣದಲ್ಲಿ ಸಾಧ್ಯವಾದಷ್ಟು ಸಲಹೆಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೆ, ಈ 'ಮನ್ ಕಿ ಬಾತ್' ಸಂಚಿಕೆಯಲ್ಲಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನನಗೆ ತುಂಬಾ ಸಂತೋಷವಾಯಿತು. ದೇಶದ ಹೊಸ ಸಾಧನೆಗಳೊಂದಿಗೆ, ಸಾರ್ವಜನಿಕ ಸಹಭಾಗಿತ್ವದ ಹೊಸ ಪ್ರಯತ್ನಗಳೊಂದಿಗೆ ನಾವು ಮುಂದಿನ ಬಾರಿ ಮತ್ತೆ ಭೇಟಿಯಾಗುತ್ತೇವೆ. ನೀವು 'ಮನ್ ಕಿ ಬಾತ್'ಗಾಗಿ ನಿಮ್ಮ ಸಲಹೆಗಳನ್ನು ಕಳುಹಿಸುತ್ತಲೇ ಇರಬೇಕು. ಮುಂದಿನ ದಿನಗಳಲ್ಲಿ ಅನೇಕ ಹಬ್ಬಗಳು ಸಹ ಬರಲಿವೆ. ನಿಮಗೆ ಈ ಎಲ್ಲಾ ಹಬ್ಬಗಳ ಶುಭಾಶಯಗಳು. ನಿಮ್ಮ ಕುಟುಂಬದೊಂದಿಗೆ ಹಬ್ಬ ಆನಂದಿಸಿ. ದೇಶಕ್ಕಾಗಿ ಏನಾದರೂ ಹೊಸದನ್ನು ಮಾಡುವ ಶಕ್ತಿಯನ್ನು ಇಟ್ಟುಕೊಳ್ಳಿ.
ತುಂಬು ಧನ್ಯವಾದಗಳು. ನಮಸ್ಕಾರ.
ನನ್ನ ಪ್ರೀತಿಯ ದೇಶವಾಸಿಗಳೆ, ನಮಸ್ಕಾರ. ಫೆಬ್ರವರಿಯಿಂದ ನಾವೆಲ್ಲರೂ ಬಹಳ ಕಾತರದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದೇ ಬಿಟ್ಟಿತು. ಇಂದು ಮತ್ತೊಮ್ಮೆ ‘ಮನ್ ಕಿ ಬಾತ್’ ಮೂಲಕ ನನ್ನ ಕುಟುಂಬ ಸದಸ್ಯರಾದ ನಿಮ್ಮೆಲ್ಲರ ನಡುವೆ ಬಂದಿದ್ದೇನೆ. ಬಹಳ ಸುಂದರವಾದ ಮಾತಿದೆ - 'ಇತಿ ವಿದಾ ಪುನರ್ಮಿಳನಾಯ', ಅದರ ಅರ್ಥವೂ ಅಷ್ಟೇ ಸುಂದರವಾಗಿದೆ, ಮತ್ತೊಮ್ಮೆ ಭೇಟಿಯಾಗಲು ನಾನು ನಿಮ್ಮಿಂದ ರಜೆ ತೆಗೆದುಕೊಂಡಿದ್ದೆ. ಇದೇ ಭಾವನೆಯಿಂದ ಫೆಬ್ರವರಿಯಲ್ಲಿ ಚುನಾವಣಾ ಫಲಿತಾಂಶದ ನಂತರ ಮತ್ತೆ ಭೇಟಿಯಾಗುತ್ತೇನೆ ಎಂದು ಹೇಳಿದ್ದೆ. ಇಂದು, 'ಮನ್ ಕಿ ಬಾತ್' ನೊಂದಿಗೆ, ನಾನು ಮತ್ತೆ ನಿಮ್ಮ ನಡುವೆ ಇದ್ದೇನೆ. ನೀವೆಲ್ಲರೂ ಕ್ಷೇಮವಾಗಿದ್ದೀರಿ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದೀರಿ ಎಂದು ನಾನು ಭಾವಿಸುತ್ತೇ. ಈಗ ಮುಂಗಾರು ಮಳೆಯೂ ಬಂದಿದೆ. ಮುಂಗಾರು ಮಳೆ ಬಂದರೆ ಮನಸ್ಸಿಗೂ ಮುದವಾಗುತ್ತದೆ. ಇಂದಿನಿಂದ ಮತ್ತೊಮ್ಮೆ ‘ಮನ್ ಕಿ ಬಾತ್’ ನಲ್ಲಿ ಸಮಾಜದಲ್ಲಿ ಬದಲಾವಣೆ ತರುತ್ತಿರುವ ದೇಶವಾಸಿಗಳ ಬಗ್ಗೆ ಮಾತನಾಡುತ್ತೇವೆ. ದೇಶದಲ್ಲಿ ಅವರ ಪ್ರಯತ್ನದ ಮೂಲಕ. ನಾವು ನಮ್ಮ ಶ್ರೀಮಂತ ಸಂಸ್ಕೃತಿ, ನಮ್ಮ ವೈಭವದ ಇತಿಹಾಸ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡುವ ನಮ್ಮ ಪ್ರಯತ್ನಗಳ ಬಗ್ಗೆ ಚರ್ಚಿಸುತ್ತೇವೆ.
ಸ್ನೇಹಿತರೆ, ಫೆಬ್ರವರಿಯಿಂದ ಇಲ್ಲಿಯ ತನಕ, ತಿಂಗಳ ಕೊನೆಯ ಭಾನುವಾರ ಬಂದಾಗ, ನಾನು ನಿಮ್ಮೊಂದಿಗೆ ಈ ಸಂಭಾಷಣೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ ಇಷ್ಟು ತಿಂಗಳುಗಳಲ್ಲಿ ನೀವು ನನಗೆ ಲಕ್ಷಗಟ್ಟಲೆ ಸಂದೇಶಗಳನ್ನು ಕಳುಹಿಸಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು.
'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.
ಸ್ನೇಹಿತರೆ, ನಮ್ಮ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ್ದಕ್ಕಾಗಿ ನಾನು ಇಂದು ದೇಶವಾಸಿಗಳಿಗೆ ಧನ್ಯವಾದ ಹೇಳುತ್ತೇನೆ. 2024ರ ಚುನಾವಣೆ ವಿಶ್ವದ ಅತಿದೊಡ್ಡ ಚುನಾವಣೆಯಾಗಿದೆ. 65 ಕೋಟಿ ಜನರು ಮತ ಚಲಾಯಿಸಿದ ಇಷ್ಟು ಬಹುದೊಡ್ಡ ಚುನಾವಣೆ ಜಗತ್ತಿನ ಯಾವ ದೇಶದಲ್ಲೂ ನಡೆದಿಲ್ಲ. ಇದಕ್ಕಾಗಿ ನಾನು ಚುನಾವಣಾ ಆಯೋಗವನ್ನು ಮತ್ತು ಮತದಾನ ಪ್ರಕ್ರಿಯೆಯಲ್ಲಿ ತೊಡಗಿರುವ ದೇಶದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ. ನನ್ನ ಪ್ರೀತಿಯ ದೇಶವಾಸಿಗಳೆ, ಇಂದು ಜೂನ್ 30, ಬಹಳ ಮುಖ್ಯವಾದ ದಿನ. ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಈ ದಿನವನ್ನು 'ಹೂಲ್ ದಿವಸ್' ಆಗಿ ಆಚರಿಸುತ್ತಾರೆ. ಈ ದಿನವು ವಿದೇಶಿ ದೊರೆಗಳ ದೌರ್ಜನ್ಯವನ್ನು ಬಲವಾಗಿ ವಿರೋಧಿಸಿದ ವೀರ ಸಿಧು-ಕನ್ಹು ಅವರ ಕೆಚ್ಚೆದೆಯ ಧೈರ್ಯಕ್ಕೆ ಸಂಬಂಧಿಸಿದೆ. ವೀರ್ ಸಿಧು-ಕನ್ಹು ಸಹಸ್ರಾರು ಸಂತಾಲ್ ದೇಶಬಾಂಧವರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ತಮ್ಮೆಲ್ಲ ಶಕ್ತಿಯಿಂದ ಹೋರಾಡಿದರು. ಇದು ಯಾವಾಗ ನಡೆಯಿತು ಎಂದು ನಿಮಗೆ ತಿಳಿದಿದೆಯೇ? ಇದು 1855ರಲ್ಲಿ ಜರುಗಿತು, ಅಂದರೆ 1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ 2 ವರ್ಷಗಳ ಮೊದಲು ಇದು ಸಂಭವಿಸಿತು. ನಂತರ, ಜಾರ್ಖಂಡ್ನ ಸಂತಾಲ್ ಪರಗಣದಲ್ಲಿ, ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ವಿದೇಶಿ ಆಡಳಿತಗಾರರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದರು.
ಬ್ರಿಟಿಷರು ನಮ್ಮ ಸಂತಾಲ್ ಸಹೋದರ ಸಹೋದರಿಯರ ಮೇಲೆ ಅನೇಕ ದೌರ್ಜನ್ಯಗಳನ್ನು ನಡೆಸಿದರು, ಅವರ ಮೇಲೆ ಅನೇಕ ರೀತಿಯ ನಿರ್ಬಂಧಗಳನ್ನು ವಿಧಿಸಿದರು. ವೀರ್ ಸಿಧು ಮತ್ತು ಕನ್ಹು ಈ ಹೋರಾಟದಲ್ಲಿ ಅದ್ಭುತ ಶೌರ್ಯ ಪ್ರದರ್ಶಿಸಿ ಹುತಾತ್ಮರಾದರು. ಜಾರ್ಖಂಡ್ ನೆಲದ ಈ ಅಮರ ಪುತ್ರರ ಅತ್ಯುನ್ನತ ತ್ಯಾಗ ಇಂದಿಗೂ ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತದೆ. ಸಂತಾಲಿ ಭಾಷೆಯಲ್ಲಿ ಅವರಿಗೆ ಸಮರ್ಪಿತವಾದ ಹಾಡಿನ ಆಯ್ದ ಭಾಗವನ್ನು ನಾವು ಕೇಳೋಣ –
#ಧ್ವನಿ ಸುರುಳಿ(ಆಡಿಯೋ ಕ್ಲಿಪ್)#
ನನ್ನ ಆತ್ಮೀಯ ಸ್ನೇಹಿತರೆ, ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದ ಸಂಬಂಧ ಯಾವುದು ಎಂದು ನಾನು ನಿಮ್ಮನ್ನು ಕೇಳಿದರೆ, ನೀವು ಖಂಡಿತವಾಗಿಯೂ ಹೇಳುವಿರಿ - “ಮಾತೆ”, ತಾಯಿ. ನಮ್ಮೆಲ್ಲರ ಜೀವನದಲ್ಲಿ ತಾಯಿಯು ಅತ್ಯುನ್ನತ ಸ್ಥಾನ ಹೊಂದಿದ್ದಾಳೆ. ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಿದ ನಂತರವೂ ತಾಯಿ ತನ್ನ ಮಗುವನ್ನು ಪೋಷಿಸುತ್ತಾಳೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನ ಮೇಲೆ ಮಿತಿಯಿಲ್ಲದ ಪ್ರೀತಿಯನ್ನು ತೋರಿಸುತ್ತಾಳೆ. ಜನ್ಮ ನೀಡಿದ ತಾಯಿಯ ಈ ಪ್ರೀತಿ ನಮ್ಮೆಲ್ಲರ ಋಣದಂತೆ ಯಾರಿಂದಲೂ ತೀರಿಸಲಾಗದು. ನಾನು ಯೋಚಿಸುತ್ತಿದ್ದೆ... ನಾವು ನಮ್ಮ ತಾಯಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ, ಆದರೆ, ನಾವು ಬೇರೆ ಏನಾದರೂ ಮಾಡಬಹುದೇ? ಈ ಚಿಂತನೆಯ ಮೂಲಕ ಈ ವರ್ಷ ವಿಶ್ವ ಪರಿಸರ ದಿನದಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಹೆಸರು - 'ಏಕ್ ಪೆಡ್ ಮಾ ಕೆ ನಾಮ್'. ಅಮ್ಮನ ಹೆಸರಲ್ಲಿ ಗಿಡವನ್ನೂ ನೆಟ್ಟಿದ್ದೇನೆ. ನಾನು ಎಲ್ಲಾ ದೇಶವಾಸಿಗಳಿಗೆ ಮನವಿ ಮಾಡಿದ್ದೇನೆ, ವಿಶ್ವದ ಎಲ್ಲಾ ದೇಶಗಳ ಜನರು ತಮ್ಮ ತಾಯಿಯೊಂದಿಗೆ ಅಥವಾ ಅವರ ಹೆಸರಿನಲ್ಲಿ ಸಸಿ ನೆಡಬೇಕು.
ತಾಯಿಯ ನೆನಪಿಗಾಗಿ ಅಥವಾ ಅವಳ ಗೌರವಾರ್ಥವಾಗಿ ಸಸಿಗಳನ್ನು ನೆಡುವ ಅಭಿಯಾನವು ವೇಗವಾಗಿ ಸಾಗುತ್ತಿರುವುದನ್ನು ನೋಡಿ ನನಗೆ ಅಪಾರ ಸಂತೋಷವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ತಾಯಂದಿರೊಂದಿಗೆ ಅಥವಾ ಅವರ ಫೋಟೊಗಳೊಂದಿಗೆ ಸಸಿಗಳನ್ನು ನೆಡುವ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಒಬ್ಬರ ತಾಯಿಗಾಗಿ ಸಸಿಗಳನ್ನು ನೆಡುತ್ತಾರೆ - ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಕೆಲಸ ಮಾಡುವ ಮಹಿಳೆಯಾಗಿರಲಿ ಅಥವಾ ಗೃಹಿಣಿಯಾಗಿರಲಿ. ಈ ಅಭಿಯಾನವು ತಾಯಂದಿರ ಬಗ್ಗೆ ನೈಜ ಪ್ರೀತಿ ವ್ಯಕ್ತಪಡಿಸಲು ನಮಗೆ ಎಲ್ಲರಿಗೂ ಸಮಾನ ಅವಕಾಶ ಒದಗಿಸಿದೆ. ಅವರು ತಮ್ಮ ಚಿತ್ರಗಳನ್ನು #Plant4Mother ಮತ್ತು #Ek_Ped_Maa_Ke_Naamನಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಸ್ನೇಹಿತರೆ, ಈ ಅಭಿಯಾನವು ನಮಗೆ ಇನ್ನೊಂದು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಭೂಮಿಯೂ ನಮಗೆ ತಾಯಿ ಇದ್ದಂತೆ. ಭೂಮಿ ತಾಯಿ ನಮ್ಮೆಲ್ಲರ ಜೀವನಕ್ಕೆ ಆಧಾರ. ಹಾಗಾಗಿ ಭೂಮಿ ತಾಯಿಯ ಬಗ್ಗೆಯೂ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ತಾಯಿಯ ಹೆಸರಿನಲ್ಲಿ ಸಸಿಗಳನ್ನು ನೆಡುವ ಅಭಿಯಾನವು ನಮ್ಮ ತಾಯಿಯನ್ನು ಗೌರವಿಸುವುದಲ್ಲದೆ, ಭೂಮಿ ತಾಯಿಯನ್ನು ರಕ್ಷಿಸುತ್ತದೆ. ಕಳೆದ ದಶಕದಲ್ಲಿ, ಸಾಮೂಹಿಕ ಪ್ರಯತ್ನಗಳ ಮೂಲಕ, ಭಾರತದಲ್ಲಿ ಅಭೂತಪೂರ್ವವಾಗಿ ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ. ಅಮೃತ ಮಹೋತ್ಸವ ಸಮಯದಲ್ಲಿ, ದೇಶಾದ್ಯಂತ 60 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಈಗ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ವೇಗ ನೀಡಬೇಕಿದೆ.
ನನ್ನ ಪ್ರೀತಿಯ ದೇಶವಾಸಿಗಳೆ, ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ತನ್ನ ವರ್ಣಗಳನ್ನು ವೇಗವಾಗಿ ಹರಡುತ್ತಿದೆ. ಅಲ್ಲದೆ, ಈ ಮಳೆಗಾಲದಲ್ಲಿ ಪ್ರತಿ ಮನೆಯಲ್ಲೂ ‘ಛತ್ರಿ’ಗಾಗಿ ಹುಡುಕಾಟ ಶುರುವಾಗಿದೆ. ಇಂದು 'ಮನ್ ಕಿ ಬಾತ್' ನಲ್ಲಿ ನಾನು ನಿಮಗೆ ಒಂದು ವಿಶೇಷ ರೀತಿಯ ಛತ್ರಿಯ ಬಗ್ಗೆ ಹೇಳಲು ಬಯಸುತ್ತೇನೆ. ಈ ಕೊಡೆಗಳನ್ನು ನಮ್ಮ ಕೇರಳದಲ್ಲಿ ತಯಾರಿಸಲಾಗುತ್ತದೆ.
ಒಂದು ರೀತಿಯಲ್ಲಿ ಕೇರಳದ ಸಂಸ್ಕೃತಿಯಲ್ಲಿ ಕೊಡೆಗಳಿಗೆ ವಿಶೇಷವಾದ ಮಹತ್ವವಿದೆ. ಛತ್ರಿಗಳು ಅಲ್ಲಿನ ಅನೇಕ ಸಂಪ್ರದಾಯಗಳು ಮತ್ತು ಆಚರಣೆಗಳ ಪ್ರಮುಖ ಭಾಗವಾಗಿವೆ. ಆದರೆ ನಾನು ಹೇಳುತ್ತಿರುವ ಛತ್ರಿ 'ಕರ್ತುಂಬಿ ಅಂಬ್ರೆಲಾ' ಮತ್ತು ಇದನ್ನು ಕೇರಳದ ಅಟ್ಟಪ್ಪಾಡಿಯಲ್ಲಿ ತಯಾರಿಸುಲಾಗುತ್ತದೆ. ಈ ವರ್ಣರಂಜಿತ ಛತ್ರಿಗಳು ಅದ್ಭುತವಾಗಿವೆ. ವಿಶೇಷವೆಂದರೆ, ಈ ಕೊಡೆಗಳನ್ನು ನಮ್ಮ ಕೇರಳದ ಬುಡಕಟ್ಟು ಸಹೋದರಿಯರು ತಯಾರಿಸುತ್ತಾರೆ. ಇಂದು ದೇಶಾದ್ಯಂತ ಈ ಛತ್ರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅವುಗಳನ್ನು ಆನ್ಲೈನ್ನಲ್ಲೂ ಮಾರಾಟ ಮಾಡಲಾಗುತ್ತಿದೆ. ಈ ಛತ್ರಿಗಳನ್ನು 'ವಟ್ಟಲಕ್ಕಿ ಸಹಕಾರಿ ಫಾರ್ಮಿಂಗ್ ಸೊಸೈಟಿ' ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಈ ಸಮಾಜವನ್ನು ನಮ್ಮ ಮಹಿಳಾ ಶಕ್ತಿಯೇ ಮುನ್ನಡೆಸುತ್ತಿದೆ. ಮಹಿಳೆಯರ ನೇತೃತ್ವದಲ್ಲಿ ಅಟ್ಟಪ್ಪಾಡಿಯ ಬುಡಕಟ್ಟು ಸಮುದಾಯವು ಉದ್ಯಮಶೀಲತೆಯ ಅದ್ಭುತ ಉದಾಹರಣೆ ಪ್ರದರ್ಶಿಸಿದೆ. ಈ ಸೊಸೈಟಿಯು ಬಿದಿರು-ಕರಕುಶಲ ಘಟಕವನ್ನೂ ಸ್ಥಾಪಿಸಿದೆ. ಈ ಜನರು ಈಗ ಚಿಲ್ಲರೆ ಮಾರಾಟ ಮಳಿಗೆ ಮತ್ತು ಸಾಂಪ್ರದಾಯಿಕ ಕೆಫೆ ತೆರೆಯಲು ತಯಾರಿ ನಡೆಸುತ್ತಿದ್ದಾರೆ. ತಮ್ಮ ಛತ್ರಿ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುವುದು ಮಾತ್ರ ಅವರ ಉದ್ದೇಶವಲ್ಲ, ಜತೆಗೆ ಅವರು ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಇಂದು ಕಾರ್ತುಂಬಿ ಛತ್ರಿಗಳು ಕೇರಳದ ಒಂದು ಸಣ್ಣ ಹಳ್ಳಿಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಪ್ರಯಾಣ ಪೂರ್ಣಗೊಳಿಸಿವೆ. ಸ್ಥಳೀಯರಿಗೆ ಧ್ವನಿಯಾಗುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?
ನನ್ನ ಪ್ರೀತಿಯ ದೇಶವಾಸಿಗಳೆ, ಮುಂದಿನ ತಿಂಗಳು ಈ ಹೊತ್ತಿಗೆ ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿದೆ. ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸಲು ನೀವೆಲ್ಲರೂ ಕಾಯುತ್ತಿರುವಿರಿ ಎಂದು ನನಗೆ ಖಾತ್ರಿಯಿದೆ. ಭಾರತ ತಂಡಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಶುಭ ಹಾರೈಸುತ್ತೇನೆ. ಟೋಕಿಯೊ ಒಲಿಂಪಿಕ್ಸ್ನ ನೆನಪುಗಳು ನಮ್ಮ ಮನಸ್ಸಿನಲ್ಲಿ ಇನ್ನೂ ಹಚ್ಚ ಹಸಿರಾಗಿ ಉಳಿದಿದೆ.
ಟೋಕಿಯೊದಲ್ಲಿ ನಮ್ಮ ಆಟಗಾರರ ಪ್ರದರ್ಶನವು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಗೆದ್ದಿದೆ. ಟೋಕಿಯೊ ಒಲಿಂಪಿಕ್ಸ್ನ ನಂತರ, ನಮ್ಮ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ನ ತಯಾರಿಯಲ್ಲಿ ಪೂರ್ಣ ಹೃದಯದಿಂದ ತೊಡಗಿಸಿಕೊಂಡಿದ್ದಾರೆ. ನಾವು ಎಲ್ಲಾ ಆಟಗಾರರನ್ನು ಒಟ್ಟಿಗೆ ತೆಗೆದುಕೊಂಡರೆ, ಅವರೆಲ್ಲರೂ ಸುಮಾರು 900 ಮಂದಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ಬಹಳ ದೊಡ್ಡ ಸಂಖ್ಯೆ.
ಸ್ನೇಹಿತರೆ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೀವು ಮೊದಲ ಬಾರಿಗೆ ಕೆಲವು ವಿಷಯಗಳಿಗೆ ಸಾಕ್ಷಿಯಾಗುತ್ತೀರಿ. ಶೂಟಿಂಗ್ ನಲ್ಲಿ ನಮ್ಮ ಆಟಗಾರರ ಪ್ರತಿಭೆ ಬೆಳಕಿಗೆ ಬರುತ್ತಿದೆ. ಟೇಬಲ್ ಟೆನಿಸ್ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಅರ್ಹತೆ ಪಡೆದಿವೆ. ನಮ್ಮ ಶೂಟರ್ ಹೆಣ್ಣುಮಕ್ಕಳೂ ಭಾರತೀಯ ಶಾಟ್ಗನ್ ತಂಡದ ಭಾಗವಾಗಿದ್ದಾರೆ. ಈ ಬಾರಿ, ನಮ್ಮ ತಂಡದ ಸದಸ್ಯರು ಆ ವಿಭಾಗಗಳಲ್ಲಿ ಕುಸ್ತಿ ಮತ್ತು ಕುದುರೆ ಸವಾರಿಯಲ್ಲಿ ಸ್ಪರ್ಧಿಸಲಿದ್ದಾರೆ, ಅವರು ಹಿಂದೆಂದೂ ಭಾಗವಹಿಸಿರಲಿಲ್ಲ. ಇದರಿಂದ, ಈ ಬಾರಿ ನಾವು ಕ್ರೀಡೆಯಲ್ಲಿ ವಿಭಿನ್ನ ಮಟ್ಟದ ಉತ್ಸಾಹ ನೋಡುತ್ತೇವೆ. ನಿಮಗೆ ನೆನಪಿರಬಹುದು... ಕೆಲವು ತಿಂಗಳ ಹಿಂದೆ, ನಾವು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ನಮ್ಮ ಆಟಗಾರರು ಚೆಸ್ ಮತ್ತು ಬ್ಯಾಡ್ಮಿಂಟನ್ನಲ್ಲಿ ಅದ್ಭುತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈಗ ನಮ್ಮ ಆಟಗಾರರು ಒಲಿಂಪಿಕ್ಸ್ನಲ್ಲೂ ಉತ್ತಮ ಪ್ರದರ್ಶನ ನೀಡಲಿ ಎಂದು ಇಡೀ ದೇಶವೇ ಹಾರೈಸುತ್ತಿದೆ. ಈ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ದೇಶವಾಸಿಗಳ ಹೃದಯವನ್ನೂ ಗೆಲ್ಲಬೇಕು. ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಭೇಟಿಯಾಗುವ ಅವಕಾಶವೂ ಸಿಗಲಿದೆ. ನಿಮ್ಮ ಪರವಾಗಿ ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ. ಹೌದು, ಈ ಬಾರಿ ನಮ್ಮ ಹ್ಯಾಶ್ಟ್ಯಾಗ್ #Cheer4Bharat.
ಈ ಹ್ಯಾಶ್ಟ್ಯಾಗ್ ಮೂಲಕ ನಾವು ನಮ್ಮ ಆಟಗಾರರನ್ನು ಹುರಿದುಂಬಿಸಬೇಕು. ಅವರನ್ನು ಪ್ರೋತ್ಸಾಹಿಸುತ್ತಲೇ ಇರುತ್ತೇವೆ. ಆದ್ದರಿಂದ ಆವೇಗವನ್ನು ಮುಂದುವರಿಸಿ. ನಿಮ್ಮ ಈ ಆವೇಗವು ಭಾರತದ ಮಾಂತ್ರಿಕತೆಯನ್ನು ಜಗತ್ತಿಗೆ ತೋರಿಸಲು ಸಹಾಯ ಮಾಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೆ, ನಾನು ನಿಮ್ಮೆಲ್ಲರಿಗೂ ಒಂದು ಸಣ್ಣ ಆಡಿಯೋ ಕ್ಲಿಪ್ ಪ್ಲೇ ಮಾಡುತ್ತಿದ್ದೇನೆ.
#ಆಡಿಯೋ ಕ್ಲಿಪ್#
ಈ ರೇಡಿಯೊ ಕಾರ್ಯಕ್ರಮವನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು ಅಲ್ಲವೇ? ಹಾಗಾದರೆ ಬನ್ನಿ, ಅದರ ಹಿಂದಿನ ಕಥೆಯನ್ನು ನಾನು ನಿಮಗೆ ಹೇಳುತ್ತೇನೆ. ವಾಸ್ತವವಾಗಿ, ಇದು ಕುವೈತ್ ರೇಡಿಯೊ ಪ್ರಸಾರದ ಕ್ಲಿಪ್ ಆಗಿದೆ. ಈಗ ನಾವು ಕುವೈತ್ ಬಗ್ಗೆ ಮಾತನಾಡುತ್ತಿರುವುದರಿಂದ ಹಿಂದಿ ಹೇಗೆ ಬಂತು ಎಂದು ನಿಮಗೆ ಅನಿಸಬಹುದು. ವಾಸ್ತವವಾಗಿ, ಕುವೈತ್ ಸರ್ಕಾರವು ತನ್ನ ರಾಷ್ಟ್ರೀಯ ರೇಡಿಯೊದಲ್ಲಿ ವಿಶೇಷ ಕಾರ್ಯಕ್ರಮ ಪ್ರಾರಂಭಿಸಿದೆ, ಅದೂ ಹಿಂದಿಯಲ್ಲಿ. ಕುವೈತ್ ರೇಡಿಯೊದಲ್ಲಿ ಪ್ರತಿ ಭಾನುವಾರ ಅರ್ಧ ಗಂಟೆ ಪ್ರಸಾರವಾಗುತ್ತದೆ. ಇದು ಭಾರತೀಯ ಸಂಸ್ಕೃತಿಯ ಅಸಂಖ್ಯಾತ ಛಾಯೆಗಳನ್ನು ಒಳಗೊಂಡಿದೆ. ನಮ್ಮ ಚಲನಚಿತ್ರಗಳು ಮತ್ತು ಕಲಾ ಜಗತ್ತಿಗೆ ಸಂಬಂಧಿಸಿದ ಚರ್ಚೆಗಳು ಅಲ್ಲಿನ ಭಾರತೀಯ ಸಮುದಾಯದಲ್ಲಿ ಬಹಳ ಜನಪ್ರಿಯವಾಗಿವೆ. ಕುವೈತ್ನ ಸ್ಥಳೀಯ ಜನರು ಸಹ ಅದರಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಈ ಅದ್ಭುತ ಉಪಕ್ರಮ ಜಾರಿಗೆ ತಂದಿರುವ ಕುವೈತ್ ಸರ್ಕಾರಕ್ಕೆ ಮತ್ತು ಅಲ್ಲಿನ ಜನರಿಗೆ ನನ್ನ ಹೃದಯದಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸ್ನೇಹಿತರೆ, ಇಂದು ವಿಶ್ವಾದ್ಯಂತ ನಮ್ಮ ಸಂಸ್ಕೃತಿಯು ವೈಭವ ಗಳಿಸುತ್ತಿರುವ ರೀತಿ ನೋಡಿದ, ಯಾವ ಭಾರತೀಯ ಸಂತೋಷಪಡುವುದಿಲ್ಲ ಹೇಳಿ! ಉದಾಹರಣೆಗೆ, ತುರ್ಕಮೆನಿಸ್ತಾನ್ನಲ್ಲಿ ಅಲ್ಲಿನ ರಾಷ್ಟ್ರೀಯ ಕವಿಯ 300ನೇ ಜನ್ಮ ವಾರ್ಷಿಕೋತ್ಸವವನ್ನು ಈ ವರ್ಷ ಮೇ ತಿಂಗಳಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತುರ್ಕಮೆನಿಸ್ತಾನದ ಅಧ್ಯಕ್ಷರು ವಿಶ್ವದ 24 ಪ್ರಸಿದ್ಧ ಕವಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಿದರು. ಈ ಪ್ರತಿಮೆಗಳಲ್ಲಿ ಒಂದು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರದ್ದು.
ಇದು ಗುರುದೇವನಿಗೆ ಸಿಕ್ಕ ಗೌರವವಾಗಿದೆ. ಭಾರತಕ್ಕೆ ಸಿಕ್ಕ ಅತಿದೊಡ್ಡ ಗೌರವ. ಅಂತೆಯೇ, ಜೂನ್ ತಿಂಗಳಲ್ಲಿ, 2 ಕೆರಿಬಿಯನ್ ದೇಶಗಳಾದ ಸುರಿನಾಮ್ ಮತ್ತು ಸೇಂಟ್ ವಿನ್ಸೆಂಟ್ ಅಂಡ್ ಗ್ರೆನಡೈನ್ಸ್ ತಮ್ಮ ಭಾರತೀಯ ಪರಂಪರೆಯನ್ನು ಪೂರ್ಣ ಉತ್ಸಾಹದಿಂದ ಆಚರಿಸಿದರು. ಸುರಿನಾಮ್ನಲ್ಲಿರುವ ಭಾರತೀಯ ಸಮುದಾಯವು ಪ್ರತಿ ವರ್ಷ ಜೂನ್ 5 ಅನ್ನು ಭಾರತೀಯ ಆಗಮನ ದಿನ ಮತ್ತು ಪ್ರವಾಸಿ ದಿನ ಎಂದು ಆಚರಿಸುತ್ತಾರೆ. ಇಲ್ಲಿ ಹಿಂದಿ ಜತೆಗೆ ಭೋಜ್ಪುರಿಯನ್ನೂ ವ್ಯಾಪಕವಾಗಿ ಮಾತನಾಡುತ್ತಾರೆ. ಸೇಂಟ್ ವಿನ್ಸೆಂಟ್ ಅಂಡ್ ಗ್ರೆನಡೈನ್ಸ್ನಲ್ಲಿ ವಾಸಿಸುವ ಭಾರತೀಯ ಮೂಲದ ನಮ್ಮ ಸಹೋದರ ಸಹೋದರಿಯರ ಸಂಖ್ಯೆಯೂ ಸುಮಾರು 6 ಸಾವಿರ ಇದೆ. ಇವರೆಲ್ಲರಿಗೂ ತಮ್ಮ ಶ್ರೀಮಂತ ಪರಂಪರೆಯ ಬಗ್ಗೆ ಅಪಾರ ಅಭಿಮಾನವಿದೆ. ಅವರು ಜೂನ್ 1ರಂದು ಭಾರತೀಯ ಪರಂಪರೆಯ ದಿನವನ್ನು ಸಂಭ್ರಮದಿಂದ ಆಚರಿಸಿದ ರೀತಿಯೇ ಈ ಭಾವನೆಯನ್ನು ಪ್ರತಿಬಿಂಬಿಸುತ್ತಿದೆ. ಅಂತಹ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಹರಡುವಿಕೆಯನ್ನು ವಿಶ್ವಾದ್ಯಂತ ನೋಡಿದಾಗ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ.
ಸ್ನೇಹಿತರೆ, ಈ ತಿಂಗಳು ಇಡೀ ವಿಶ್ವವು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಿತು. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಕಾಶ್ಮೀರದಲ್ಲಿ ಯುವಕರ ಜತೆಗೆ ಸಹೋದರಿಯರು, ಪುತ್ರಿಯರು ಸಹ ಯೋಗ ದಿನದಂದು ಉತ್ಸಾಹದಿಂದ ಪಾಲ್ಗೊಂಡಿದ್ದರು. ಯೋಗ ದಿನಾಚರಣೆ ನಡೆಯುತ್ತಿದ್ದಂತೆ ಹೊಸ ದಾಖಲೆಗಳೂ ಸೃಷ್ಟಿಯಾಗುತ್ತಿವೆ. ಯೋಗ ದಿನವು ವಿಶ್ವಾದ್ಯಂತ ಹಲವಾರು ಮಹತ್ತರವಾದ ಸಾಧನೆಗಳನ್ನು ಮಾಡಿದೆ. ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ, ಅಲ್ ಹನೂಫ್ ಸಾದ್ ಜಿ ಎಂಬ ಮಹಿಳೆ ಸಾಮಾನ್ಯ ಯೋಗ ಸಂಪ್ರದಾಯವನ್ನು ಮುನ್ನಡೆಸಿದರು. ಸೌದಿ ಮಹಿಳೆಯೊಬ್ಬರು ಮುಖ್ಯ ಯೋಗಾಸನಕ್ಕೆ ಸೂಚನೆ ನೀಡಿರುವುದು ಇದೇ ಮೊದಲು. ಈಜಿಪ್ಟ್ ನಲ್ಲಿ ಈ ಬಾರಿ ಯೋಗ ದಿನದಂದು ಫೋಟೊ ಸ್ಪರ್ಧೆ ಏರ್ಪಡಿಸಲಾಗಿತ್ತು. ನೈಲ್ ನದಿಯ ತಟದಲ್ಲಿ, ಕೆಂಪು ಸಮುದ್ರದ ಕಡಲತೀರಗಳಲ್ಲಿ ಮತ್ತು ಪಿರಮಿಡ್ಗಳ ಮುಂದೆ ಲಕ್ಷಾಂತರ ಜನರು ಯೋಗ ಮಾಡುವ ಚಿತ್ರಗಳು ಬಹಳ ಜನಪ್ರಿಯವಾದವು. ಅಮೃತಶಿಲೆಯ ಬುದ್ಧನ ಪ್ರತಿಮೆಗೆ ಹೆಸರುವಾಸಿಯಾದ ಮ್ಯಾನ್ಮಾರ್ನ ಮಾರವಿಜಯ ಪಗೋಡಾ ಕಾಂಪ್ಲೆಕ್ಸ್ ಜಗತ್ಪ್ರಸಿದ್ಧವಾಗಿದೆ. ಇಲ್ಲಿಯೂ ಜೂನ್ 21ರಂದು ವೈಭವದ ಯೋಗಾಭ್ಯಾಸ ಆಯೋಜಿಸಲಾಗಿತ್ತು. ಬಹ್ರೇನ್ನಲ್ಲಿ ದಿವ್ಯಾಂಗ ಮಕ್ಕಳಿಗಾಗಿ ವಿಶೇಷ ಶಿಬಿರ ಆಯೋಜಿಸಲಾಗಿತ್ತು. ಶ್ರೀಲಂಕಾದ ಯುನೆಸ್ಕೊ ಪಾರಂಪರಿಕ ತಾಣಕ್ಕೆ ಹೆಸರುವಾಸಿಯಾದ ಗಾಲೆ ಕೋಟೆಯಲ್ಲಿ ಸ್ಮರಣೀಯ ಯೋಗ ಕಲಾಪ ನಡೆಯಿತು. ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಅಬ್ಸರ್ವೇಶನ್ ಡೆಕ್ನಲ್ಲಿಯೂ ಜನರು ಯೋಗ ಮಾಡಿದರು. ಅಲ್ಲಿ ಮೊಟ್ಟಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾರ್ಷಲ್ ಐಲ್ಯಾಂಡ್ಸ್ ಅಧ್ಯಕ್ಷರೂ ಭಾಗವಹಿಸಿದ್ದರು. ಭೂತಾನ್ನ ಥಿಂಪುವಿನಲ್ಲೂ ಯೋಗ ದಿನಾಚರಣೆಯ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು, ಇದರಲ್ಲಿ ನನ್ನ ಸ್ನೇಹಿತ ಪ್ರಧಾನಿ ತೊಬ್ಗೆ ಭಾಗವಹಿಸಿದ್ದರು. ಅಂದರೆ, ವಿಶ್ವದ ಮೂಲೆ ಮೂಲೆಯಲ್ಲಿ ಯೋಗ ಮಾಡುವ ಜನರ ವಿಹಂಗಮ ನೋಟಗಳನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ಯೋಗ ದಿನದಂದು ಭಾಗವಹಿಸಿದ ಎಲ್ಲ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ತದನಂತರ ನನ್ನ ಈ ಬಹುಕಾಲದ ಕೋರಿಕೆ ಇದೆ. ನಾವು ಯೋಗವನ್ನು ಕೇವಲ ಒಂದು ದಿನದ ಅಭ್ಯಾಸವನ್ನಾಗಿ ಮಾಡಬೇಕಾಗಿಲ್ಲ. ನೀವು ನಿಯಮಿತವಾಗಿ ಯೋಗ ಮಾಡಬೇಕು. ಇದನ್ನು ಮಾಡುವುದರಿಂದ ನೀವು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವಿರಿ.
ಸ್ನೇಹಿತರೆ, ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಲ್ಲಿರುವ ಭಾರತದ ಹಲವಾರು ಉತ್ಪನ್ನಗಳಿವೆ. ಭಾರತದ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಟ್ಟಕ್ಕೆ ಹೋಗುವುದನ್ನು ನೋಡಿದಾಗ, ಹೆಮ್ಮೆ ಪಡುವುದು ಸಹಜ. ಅಂತಹ ಒಂದು ಉತ್ಪನ್ನವೆಂದರೆ ಅರಕು ಕಾಫಿ. ಆಂಧ್ರ ಪ್ರದೇಶದ ಅಲ್ಲೂರಿ ಸೀತಾ ರಾಮರಾಜು ಜಿಲ್ಲೆಯಲ್ಲಿ ಅರಕು ಕಾಫಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದು ಶ್ರೀಮಂತ ಸುವಾಸನೆ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸುಮಾರು 1.5 ಲಕ್ಷ ಬುಡಕಟ್ಟು ಕುಟುಂಬಗಳು ಅರಕು ಕಾಫಿ ಕೃಷಿಯೊಂದಿಗೆ ಸಂಬಂಧ ಹೊಂದಿವೆ. ಅರಕು ಕಾಫಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಗಿರಿಜನ ಸಹಕಾರಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದು ಇಲ್ಲಿನ ರೈತ ಬಂಧುಗಳನ್ನು ಒಗ್ಗೂಡಿಸಿ ಅರಕು ಕಾಫಿ ಬೆಳೆಯಲು ಪ್ರೇರೇಪಿಸಿತು.
ಇದರಿಂದ ಈ ರೈತರ ಆದಾಯವೂ ಸಾಕಷ್ಟು ಹೆಚ್ಚಿದೆ. ಕೊಂಡ ದೊರ ಬುಡಕಟ್ಟು ಸಮುದಾಯಕ್ಕೂ ಇದರಿಂದ ಸಾಕಷ್ಟು ಅನುಕೂಲವಾಗಿದೆ. ಆದಾಯದ ಜತೆಗೆ ಗೌರವದ ಬದುಕನ್ನೂ ಪಡೆಯುತ್ತಿದ್ದಾರೆ. ಒಮ್ಮೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ವಿಶಾಖಪಟ್ಟಣದಲ್ಲಿ ಈ ಕಾಫಿ ಸವಿಯುವ ಅವಕಾಶ ಸಿಕ್ಕಿದ್ದು ನನಗೆ ನೆನಪಿದೆ. ಇದು ನಿಜಕ್ಕೂ ರುಚಿಯಾಗಿದೆ! ಈ ಕಾಫಿ ಅದ್ಭುತವಾಗಿದೆ! ಅರಕು ಕಾಫಿಗೆ ಅನೇಕ ಜಾಗತಿಕ ಪ್ರಶಸ್ತಿಗಳು ಬಂದಿವೆ. ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲೂ ಕಾಫಿ ಜನಪ್ರಿಯತೆ ಪಡೆಯಿತು. ನಿಮಗೆ ಅವಕಾಶ ಸಿಕ್ಕಾಗ ಅರಕು ಕಾಫಿಯನ್ನು ಸವಿಯಲೇಬೇಕು.
ಸ್ನೇಹಿತರೆ, ಜಮ್ಮು-ಕಾಶ್ಮೀರದ ಜನರು ಸಹ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕವಾಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ತಿಂಗಳು ಜಮ್ಮ-ಕಾಶ್ಮೀರ ಸಾಧಿಸಿರುವುದು ದೇಶಾದ್ಯಂತ ಜನರಿಗೆ ಉದಾಹರಣೆಯಾಗಿದೆ. ಇಲ್ಲಿನ ಪುಲ್ವಾಮಾದಿಂದ ಲಂಡನ್ಗೆ ಹಿಮದ ಬಟಾಣಿಗಳ ಚೊಚ್ಚಲ ರವಾನೆಯಾಗಿದೆ. ಕೆಲವರಿಗೆ ಐಡಿಯಾ ಬಂತು, ಕಾಶ್ಮೀರದಲ್ಲಿ ಬೆಳೆಯುವ ವಿದೇಶಿ ತರಕಾರಿಗಳನ್ನು ವಿಶ್ವ ಭೂಪಟಕ್ಕೆ ಏಕೆ ತರಬಾರದು ಅಂತಾ! ಹಾಗಾಗಿ, ಚಾಕುರಾ ಗ್ರಾಮದ ಅಬ್ದುಲ್ ರಶೀದ್ ಮಿರ್ ಇದಕ್ಕೆ ಮೊದಲು ಮುಂದಾದರು. ಹಳ್ಳಿಯ ಇತರ ರೈತರ ಜಮೀನನ್ನು ಒಗ್ಗೂಡಿಸಿ ಹಿಮ ಅವರೆಕಾಳು ಬೆಳೆಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದೊಳಗೆ, ಹಿಮ ಅವರೆಕಾಳು ಕಾಶ್ಮೀರದಿಂದ ಲಂಡನ್ ತಲುಪಲು ಪ್ರಾರಂಭಿಸಿತು. ಈ ಯಶಸ್ಸು ಜಮ್ಮು-ಕಾಶ್ಮೀರದ ಜನರ ಏಳಿಗೆಗೆ ಹೊಸ ಬಾಗಿಲು ತೆರೆದಿದೆ. ನಮ್ಮ ದೇಶದಲ್ಲಿ ಇಂತಹ ವಿಶಿಷ್ಟ ಉತ್ಪನ್ನಗಳಿಗೆ ಕೊರತೆಯಿಲ್ಲ. ನೀವು ಅಂತಹ ಉತ್ಪನ್ನಗಳನ್ನು #myproductsmypride ನಲ್ಲಿ ಹಂಚಿಕೊಳ್ಳಬೇಕು. ಮುಂಬರುವ 'ಮನ್ ಕಿ ಬಾತ್' ನಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇನೆ.
ಮಾಮ್ ಪ್ರಿಯಾ: ದೇಶವಾಸಿನ್:
ಅದ್ಯಾ ಅಹಮ್ ಕಿಂಚಿತ್ ಚರ್ಚಾ ಸಂಸ್ಕೃತ ಭಾಷಾಯಾಮ್ ಆರಭೇ ।
'ಮನ್ ಕಿ ಬಾತ್'ನಲ್ಲಿ ನಾನು ಇದ್ದಕ್ಕಿದ್ದಂತೆ ಸಂಸ್ಕೃತದಲ್ಲಿ ಏಕೆ ಮಾತನಾಡುತ್ತಿದ್ದೇನೆ ಎಂದು ನೀವು ಯೋಚಿಸುತ್ತಿರಬಹುದು? ಇದಕ್ಕೆ ಕಾರಣ ಇಂದಿನ ಸಂಸ್ಕೃತಕ್ಕೆ ಸಂಬಂಧಿಸಿದ ವಿಶೇಷ ಸಂದರ್ಭ! ಇಂದು ಜೂನ್ 30ರಂದು ಆಕಾಶವಾಣಿಯ ಸಂಸ್ಕೃತ ವಾರ್ತಾ ಪ್ರಸಾರವು 50 ವರ್ಷಗಳನ್ನು ಪೂರೈಸುತ್ತಿದೆ. 50 ವರ್ಷಗಳಿಂದ, ಈ ವಾರ್ತಾ ಪ್ರಸಾರವು ಅನೇಕ ಜನರನ್ನು ಸಂಸ್ಕೃತ ಭಾಷೆಗೆ ಸಂಪರ್ಕಿಸಿದೆ. ಆದ್ದರಿಂದ ನಾನು ಆಲ್ ಇಂಡಿಯಾ ರೇಡಿಯೊ ಕುಟುಂಬವನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ, ಪ್ರಾಚೀನ ಭಾರತೀಯ ಜ್ಞಾನ ಮತ್ತು ವಿಜ್ಞಾನದ ಪ್ರಗತಿಯಲ್ಲಿ ಸಂಸ್ಕೃತವು ಬಹುದೊಡ್ಡ ಪಾತ್ರ ವಹಿಸಿದೆ. ನಾವು ಸಂಸ್ಕೃತವನ್ನು ಗೌರವಿಸಬೇಕು ಮತ್ತು ಅದನ್ನು ನಮ್ಮ ದೈನಂದಿನ ಜೀವನದೊಂದಿಗೆ ಸಂಪರ್ಕಿಸಬೇಕು ಎಂಬುದು ಇಂದಿನ ಕಾಲದ ಬೇಡಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇಂತಹ ಪ್ರಯತ್ನವನ್ನು ಅನೇಕರು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ಯಾನವನವಿದೆ - ಕಬ್ಬನ್ ಪಾರ್ಕ್! ಈ ಪಾರ್ಕ್ ನಲ್ಲಿ ಅಲ್ಲಿನ ಜನರು ಹೊಸ ಸತ್ಸಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇಲ್ಲಿ ವಾರಕ್ಕೊಮ್ಮೆ, ಪ್ರತಿ ಭಾನುವಾರ ಮಕ್ಕಳು, ಯುವಕರು ಮತ್ತು ಹಿರಿಯರು ಪರಸ್ಪರ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಅಷ್ಟೇ ಅಲ್ಲ, ಸಂಸ್ಕೃತದಲ್ಲಿ ಅನೇಕ ಚರ್ಚಾ ಕಲಾಪಗಳನ್ನು ಆಯೋಜಿಸುತ್ತಿದ್ದಾರೆ. ಈ ಉಪಕ್ರಮದ ಹೆಸರು ಸಂಸ್ಕೃತ ವಾರಾಂತ್ಯ! ಇದನ್ನು ಸಮಷ್ಟಿ ಗುಬ್ಬಿ ಜಿಯವರು ವೆಬ್ಸೈಟ್ ಮೂಲಕ ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಾರಂಭವಾದ ಈ ಉಪಕ್ರಮವು ಬೆಂಗಳೂರಿನ ಜನರಲ್ಲಿ ಬಹಳ ಜನಪ್ರಿಯವಾಗಿದೆ.
ನಾವೆಲ್ಲರೂ ಇಂತಹ ಪ್ರಯತ್ನಗಳಿಗೆ ಕೈಜೋಡಿಸಿದರೆ, ಪ್ರಪಂಚದ ಇಂತಹ ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಿಂದ ನಾವು ಬಹಳಷ್ಟು ಕಲಿಯುತ್ತೇವೆ.
ನನ್ನ ಪ್ರೀತಿಯ ದೇಶವಾಸಿಗಳೆ, ಮನ್ ಕಿ ಬಾತ್ನ ಈ ಸಂಚಿಕೆಯಲ್ಲಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಿದ್ದಕ್ಕೆ ಸಂತೋಷವಾಯಿತು. ಈಗ ಈ ಸರಣಿ ಮತ್ತೆ ಮೊದಲಿನಂತೆಯೇ ಮುಂದುವರಿಯಲಿದೆ. ಇನ್ನು ಒಂದು ವಾರದ ನಂತರ ಪವಿತ್ರ ರಥಯಾತ್ರೆ ಆರಂಭವಾಗಲಿದೆ. ಮಹಾಪ್ರಭು ಜಗನ್ನಾಥರ ಆಶೀರ್ವಾದ ಸದಾ ದೇಶವಾಸಿಗಳ ಮೇಲಿರಲಿ ಎಂಬುದು ನನ್ನ ಹಾರೈಕೆ. ಅಮರನಾಥ ಯಾತ್ರೆಯೂ ಆರಂಭವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪಂಢರಪುರ ವಾರಿ ಕೂಡ ಆರಂಭವಾಗಲಿದೆ. ಈ ಯಾತ್ರೆಗಳಲ್ಲಿ ಭಾಗವಹಿಸುವ ಎಲ್ಲಾ ಭಕ್ತಾದಿಗಳಿಗೆ ಶುಭ ಹಾರೈಸುತ್ತೇನೆ. ಇನ್ನು ಮುಂದೆ ಕಚ್ಚಿ ಹೊಸ ವರ್ಷದ ಹಬ್ಬ - ಆಷಾಧಿ ಬೀಜ... ಈ ಎಲ್ಲಾ ಹಬ್ಬಗಳಿಗೂ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ. ಸಕಾರಾತ್ಮಕತೆಗೆ ಸಂಬಂಧಿಸಿದ ಸಾರ್ವಜನಿಕ ಸಹಭಾಗಿತ್ವದ ಇಂತಹ ಪ್ರಯತ್ನಗಳನ್ನು ನೀವು ನನ್ನೊಂದಿಗೆ ಹಂಚಿಕೊಳ್ಳುತ್ತಿರುತ್ತೀರಿ ಎಂಬ ಸದೃಢ ನಂಬಿಕೆ ನನಗಿದೆ. ಮುಂದಿನ ತಿಂಗಳು ನಿಮ್ಮೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ನಾನು ಕಾಯುತ್ತಿದ್ದೇನೆ. ಅಲ್ಲಿಯವರೆಗೆ ದಯವಿಟ್ಟು ನಿಮ್ಮ ಮತ್ತು ನಿಮ್ಮ ಕುಟುಂಬದವರ ಬಗ್ಗೆಯೂ ಕಾಳಜಿ ವಹಿಸಿ.
ತುಂಬು ಧನ್ಯವಾದಗಳು. ನಮಸ್ಕಾರ.
ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ. ‘ಮನದ ಮಾತು’ ೧೧೦ನೇ ಸಂಚಿಕೆಗೆ ಸುಸ್ವಾಗತ. ಎಂದಿನಂತೆ, ಈ ಬಾರಿಯೂ ನಿಮ್ಮ ಸಾಕಷ್ಟು ಸಲಹೆಗಳು, ಮಾಹಿತಿ ಮತ್ತು ಟೀಕೆ ಟಿಪ್ಪಣಿಗಳನ್ನು ನಾವು ಸ್ವೀಕರಿಸಿದ್ದೇವೆ. ಮತ್ತು ಎಂದಿನಂತೆ, ಈ ಬಾರಿಯೂ ಸಹ ಸಂಚಿಕೆಯಲ್ಲಿ ಯಾವ ವಿಷಯಗಳನ್ನು ಸೇರಿಸಬೇಕು ಎಂಬುದು ಸವಾಲಾಗಿದೆ. ನನಗೆ ಧನಾತ್ಮಕತೆಯ ಬಹಳಷ್ಟು ಮಾಹಿತಿ ದೊರೆತಿವೆ. ಇವುಗಳಲ್ಲಿ ಇತರರಿಗೆ ಭರವಸೆಯ ಆಶಾ ಕಿರಣವನ್ನು ಮೂಡಿಸುವ ಮೂಲಕ ಅವರ ಜೀವನ ಸುಧಾರಿಸುವಲ್ಲಿ ಶ್ರಮಿಸುತ್ತಿರುವ ಅನೇಕ ದೇಶವಾಸಿಗಳ ಉಲ್ಲೇಖವಿದೆ.
ಸ್ನೇಹಿತರೇ, ಇನ್ನೇನು ಕೆಲ ದಿನಗಳ ನಂತರ ಮಾರ್ಚ್ 8 ರಂದು ನಾವು 'ಮಹಿಳಾ ದಿನ'ವನ್ನು ಆಚರಿಸಲಿದ್ದೇವೆ. ಈ ವಿಶೇಷ ದಿನ ದೇಶದ ಅಭಿವೃದ್ಧಿ ಪಯಣದಲ್ಲಿ ಮಹಿಳಾ ಶಕ್ತಿಯ ಕೊಡುಗೆಗೆ ವಂದನೆ ಸಲ್ಲಿಸಲು ಒಂದು ಅವಕಾಶವಾಗಿದೆ. ಮಹಿಳೆಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಜಗತ್ತು ಅಭ್ಯುದಯವಾಗುತ್ತದೆ ಎಂದು ಮಹಾಕವಿ ಭಾರತಿಯಾರ್ ಅವರು ಹೇಳಿದ್ದಾರೆ. ಇಂದು ಭಾರತದ ಮಹಿಳಾ ಶಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯ ಹೊಸ ಎತ್ತರಕ್ಕೆ ಏರುತ್ತಿದೆ. ನಮ್ಮ ದೇಶದಲ್ಲಿ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರೂ ಡ್ರೋನ್ಗಳನ್ನು ಹಾರಿಸುತ್ತಾರೆ ಎಂದು ಕೆಲವು ವರ್ಷಗಳ ಹಿಂದೆ ಯಾರು ಭಾವಿಸಿದ್ದರು? ಆದರೆ ಇಂದು ಇದು ಕಾರ್ಯರೂಪಕ್ಕೆ ಬರುತ್ತಿದೆ. ಇಂದು ಪ್ರತಿ ಹಳ್ಳಿಯಲ್ಲೂ ಡ್ರೋಣ್ ದೀದಿಯ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ, ಇಂದು ಎಲ್ಲರ ಬಾಯಲ್ಲೂ ನಮೋ ಡ್ರೋಣ್ ದೀದಿ, ನಮೋ ಡ್ರೋಣ್ ದೀದಿ ಎಂಬ ಮಾತು ಕೇಳಿಬರುತ್ತಿದೆ. ಎಲ್ಲರೂ ಅವರ ಬಗ್ಗೆ ಚರ್ಚಿಸುತ್ತಿದ್ದಾರೆ. ಭಾರೀ ಕುತೂಹಲ ಹುಟ್ಟಿಕೊಂಡಿದೆ ಮತ್ತು ಅದಕ್ಕಾಗಿಯೇ, ಈ ಬಾರಿಯ 'ಮನದ ಮಾತಿನಲ್ಲಿ ನಮೋ ಡ್ರೋನ್ ದೀದಿಯೊಂದಿಗೆ ಏಕೆ ಮಾತನಾಡಬಾರದು ಎಂದು ನಾನು ಯೋಚಿಸಿದೆ. ಉತ್ತರ ಪ್ರದೇಶದ ಸೀತಾಪುರದವರಾದ ನಮೋ ಡ್ರೋನ್ ದೀದಿ ಸುನೀತಾ ಅವರು ಈಗ ನಮ್ಮೊಂದಿಗೆ ಇದ್ದಾರೆ ಬನ್ನಿ, ಅವರ ಜೊತೆ ಮಾತನಾಡೋಣ.
ಮೋದಿಜಿ: ಸುನೀತಾ ದೇವಿಯವರೆ ನಮಸ್ಕಾರ.
ಸುನಿತಾ ದೇವಿ: ನಮಸ್ಕಾರ ಸರ್.
ಮೋದಿಜೀ: ಸರಿ ಸುನೀತಾ ಅವರೆ, ಮೊದಲು ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ, ನಿಮ್ಮ ಕುಟುಂಬದ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ. ನಮ್ಮೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳುವಿರಾ?
ಸುನೀತಾದೇವಿ: ಸರ್, ನಮ್ಮ ಕುಟುಂಬದಲ್ಲಿ ಇಬ್ಬರು ಮಕ್ಕಳಿದ್ದಾರೆ, ನಾನಿದ್ದೇನೆ, ನನ್ನ ಪತಿ ಇದ್ದಾರೆ, ತಾಯಿ ಇದ್ದಾರೆ.
ಮೋದಿಜೀ: ಸುನೀತಾ ಅವರೆ ನಿಮ್ಮ ಶಿಕ್ಷಣ ಎಲ್ಲಿವರೆಗೆ ಆಗಿದೆ?
ಸುನಿತಾ ದೇವಿ: ಸರ್, ನಾನು ಬಿಎ (ಫೈನಲ್) ವರೆಗೆ ಓದಿದ್ದೇನೆ.
ಮೋದಿ ಜೀ: ಮತ್ತು ಮನೆಯಲ್ಲಿ ವ್ಯಾಪಾರ ಇತ್ಯಾದಿ ಯಾವ ತರಹದ್ದಿದೆ?
ಸುನೀತಾ ದೇವಿ: ಕೃಷಿ ಮತ್ತು ಕೃಷಿ ಸಂಬಂಧಿತ ವ್ಯಾಪಾರ ಇತ್ಯಾದಿ ಮಾಡುತ್ತೇವೆ.
ಮೋದಿ ಜಿ: ಸರಿ ಸುನೀತಾ ಅವರೆ, ಈ ಡ್ರೋನ್ ದೀದಿ ಆಗುವ ನಿಮ್ಮ ಪ್ರಯಾಣ ಹೇಗೆ ಪ್ರಾರಂಭವಾಯಿತು? ನೀವು ಎಲ್ಲಿ ತರಬೇತಿ ಪಡೆದಿದ್ದೀರಿ? ಯಾವ ರೀತಿಯ ಬದಲಾವಣೆಗಳು ಸಂಭವಿಸಿದವು, ಏನಾಯಿತು, ಆರಂಭದಿಂದ ಎಲ್ಲವನ್ನೂ ನಾನು ತಿಳಿಯಬಯಸುತ್ತೇನೆ.
ಸುನಿತಾ ದೇವಿ: ಹೌದು ಸರ್, ನಮ್ಮ ತರಬೇತಿ ಅಲಹಾಬಾದ್ನಲ್ಲಿರುವ ಫುಲ್ಪುರ್ ಇಫ್ಕೋ ಕಂಪನಿಯಲ್ಲಿ ಆಯಿತು ಮತ್ತು ನಾವು ಅಲ್ಲಿಂದಲೇ ಸಂಪೂರ್ಣ ತರಬೇತಿ ಪಡೆದಿದ್ದೇವೆ.
ಮೋದಿಜಿ: ಹಾಗಾದರೆ ಅಲ್ಲಿಯವರೆಗೆ ನೀವು ಡ್ರೋನ್ಗಳ ಬಗ್ಗೆ ಎಂದಾದರೂ ಕೇಳಿದ್ದೀರಾ?
ಸುನೀತಾ ದೇವಿ: ಸರ್, ನಾವು ಎಂದೂ ಕೇಳಿರಲಿಲ್ಲ, ಆದರೆ ಒಮ್ಮೆ ಅಂತಹದನ್ನು ನೋಡಿದ್ದೆ, ಸೀತಾಪುರದ ಕೃಷಿ ವಿಜ್ಞಾನ ಕೇಂದ್ರದಲ್ಲಿ, ನಾವು ಮೊದಲ ಬಾರಿಗೆ ಡ್ರೋನ್ ನೋಡಿದ್ದೆವು.
ಮೋದಿ ಜಿ: ಸುನೀತಾ ಅವರೆ, ನಿಮ್ಮ ಮೊದಲ ದಿನದ ಅನುಭವ ಹೇಗಿತ್ತು ಎಂದು ನಾನು ತಿಳಿಯಬಯಸುತ್ತೇನೆ.
ಸುನೀತಾದೇವಿ: ಸರಿ ಸರ್.
ಮೋದಿ ಜೀ: ನಿಮಗೆ ಮೊದಲ ದಿನ ಡ್ರೋನ್ ಅನ್ನು ತೋರಿಸಿರಬೇಕು, ನಂತರ ಬೋರ್ಡ್ ಮೇಲೆ ಏನನ್ನಾದರೂ ಬರೆದು ಕಲಿಸಿರಬೇಕು, ಪೇಪರ್ ಮೂಲಕ ಕಲಿಸಿರಬೇಕು, ನಂತರ ಮೈದಾನಕ್ಕೆ ಕರೆದೊಯ್ದು ಅಭ್ಯಾಸ ಮಾಡಿಸಿರಬಹುದು, ಏನೇನು ನಡೆಯಿತು. ನೀವು ನನಗೆ ಸಂಪೂರ್ಣವಾಗಿ ವಿವರಿಸುವಿರಾ?
ಸುನೀತಾ ದೇವಿ: ಹೌದು ಸರ್, ಮೊದಲ ದಿನ ನಾವು ಅಲ್ಲಿಗೆ ಹೋದೆವು. ಎರಡನೇ ದಿನದಿಂದ ನಮ್ಮ ತರಬೇತಿ ಆರಂಭವಾಯಿತು. ಮೊದಲು ಥಿಯರಿ ಕಲಿಸಿ ನಂತರ ಎರಡು ದಿನ ತರಗತಿ ಅಭ್ಯಾಸ ನಡೆಯಿತು. ತರಗತಿಯಲ್ಲಿ, ಡ್ರೋನ್ನ ಭಾಗಗಳು ಯಾವುವು, ನೀವು ಹೇಗೆ ಮತ್ತು ಏನೇನು ಮಾಡಬೇಕು - ಈ ಎಲ್ಲಾ ವಿಷಯಗಳನ್ನು ಥಿಯರಿಯಲ್ಲಿ ಕಲಿಸಲಾಯಿತು. ಮೂರನೆ ದಿನ ಸರ್ ನಮ್ಮ ಪರೀಕ್ಷೆ ಇತ್ತು ಸರ್. ಆಮೇಲೆ ಕಂಪ್ಯೂಟರಿನಲ್ಲಿ ಕೂಡ ಪರೀಕ್ಷೆ ಬರೆಯುವುದಿತ್ತು. ಅಂದರೆ ಮೊದಲು ಕ್ಲಾಸ್ ನಡೀತು ಆಮೇಲೆ ಪರೀಕ್ಷೆ ತೆಗೆದುಕೊಳ್ಳಲಾಯಿತು. ನಂತರ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು, ನಾವು ಡ್ರೋನ್ ಅನ್ನು ಹೇಗೆ ಹಾರಿಸಬೇಕು, ನಿಯಂತ್ರಣ ಹೇಗೆ ನಿರ್ವಹಿಸಬೇಕು, ಎಲ್ಲವನ್ನೂ ಪ್ರಾಯೋಗಿಕ ರೂಪದಲ್ಲಿ ಕಲಿಸಲಾಯಿತು.
ಮೋದಿಜಿ: ಹಾಗಾದರೆ ಡ್ರೋನ್ ಯಾವ ಕೆಲಸ ಮಾಡುತ್ತದೆ, ಎಂಬುದನ್ನು ಹೇಗೆ ಕಲಿಸಲಾಯಿತು?
ಸುನೀತಾದೇವಿ: ಸರ್, ಡ್ರೋನ್ ಹೇಗೆ ಕೆಲಸ ಮಾಡುತ್ತದೆ ಎಂದರೆ ಉದಾಹರಣೆಗಾಗಿ ಈಗ ಬೆಳೆ ಬೆಳೆದು ದೊಡ್ಡದಾಗುತ್ತಿದೆ. ಮಳೆಗಾಲ ಅಥವಾ ಇನ್ನೇನಾದರೂ ಮಳೆಗಾಲದಲ್ಲಿ ಸಮಸ್ಯೆ ಉಂಟಾಗಿ ಬೆಳೆ ಕಟಾವು ಮಾಡಲು ಗದ್ದೆಗೆ ಹೋಗಲು ಆಗುತ್ತಿಲ್ಲ ಎಂದಾದರೆ, ಕೂಲಿಕಾರರು ಹೇಗೆ ಒಳಗೆ ಹೋಗುತ್ತಾರೆ, ಆಗ ಇದರ ಮೂಲಕ ರೈತರಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೆ ಹೊಲದೊಳಗೂ ಹೋಗುವ ಅವಶ್ಯಕತೆಯಿರುವುದಿಲ್ಲ. ನಮ್ಮ ಡ್ರೋನ್ ಬಳಸಿ ಗದ್ದೆಯ ಬದುಚಿನ ಮೇಲೆ ನಿಂತು ಕೂಲಿಕಾರರಿಂದ ಕೆಲಸ ಮಾಡಿಸಿಕೊಳ್ಳಬಹುದು, ಹೊಲದೊಳಗೆ ಕ್ರಿಮಿ ಕೀಟಗಳ ಬಾಧೆ ಕಂಡುಬಂದರೆ ಡ್ರೋನ್ ಬಳಸಿ ಜಾಗ್ರತೆ ವಹಿಸಬಹುದು, ಯಾವುದೇ ತೊಂದರೆ ಇಲ್ಲ, ರೈತರಿಗೂ ತುಂಬಾ ಸಹಾಯಕಾರಿಯಾಗಿದೆ. ಸರ್, ಇಲ್ಲಿಯವರೆಗೆ 35 ಎಕರೆಗೆ ಔಷಧಿ ಸಿಂಪಡಿಸಿದ್ದೇವೆ.
ಮೋದಿಜಿ: ಹಾಗಾದರೆ ರೈತರಿಗೆ ಲಾಭವಿದೆ ಎಂದರ್ಥ?
ಸುನೀತಾದೇವಿ: ಹೌದು ಸರ್, ರೈತರು ತುಂಬಾ ಸಂತೃಪ್ತರಾಗಿದ್ದಾರೆ ಮತ್ತು ಇದು ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಸಮಯವೂ ಉಳಿತಾಯವಾಗುತ್ತದೆ, ಅವರು ಬಂದು ಜಮೀನು ತೋರಿಸಬೇಕಷ್ಟೆ, ಎಲ್ಲಿಂದ ಎಲ್ಲಿವರೆಗೆ ತಮ್ಮ ತೋಟವಿದೆ ಎಂದು ಹೇಳಿದರೆ ಸಾಕು. ನೀರು, ಔಷಧಿ, ಎಲ್ಲವನ್ನು ಒಟ್ಟಿಗೇ ಇಟ್ಟುಕೊಂಡು ನಾನೇ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇನೆ, ಮತ್ತು ಅರ್ಧ ಗಂಟೆಯೊಳಗೆ ಇಡೀ ಕೆಲಸ ಮುಗಿಸಿಕೊಡುತ್ತೇನೆ.
ಮೋದಿ ಜಿ: ಹಾಗಾದರೆ ಈ ಡ್ರೋನ್ ನೋಡಲು ಬೇರೆಯವರು ಕೂಡ ಬರುತ್ತಿರಬಹುದಲ್ಲವೇ?
ಸುನಿತಾ ದೇವಿ: ಸರ್, ದೊಡ್ಡ ಜನಸಂದಣಿ ಸೇರುತ್ತಿದೆ, ಡ್ರೋನ್ ನೋಡಲು ಅನೇಕ ಜನರು ಬರುತ್ತಾರೆ. ದೊಡ್ಡ ದೊಡ್ಡ ರೈತರು, ನಾವೂ ಸಿಂಪಡಣೆಗೆ ಕರೆಯುತ್ತೇವೆ ಎಂದು ನಂಬರ್ ತೆಗೆದುಕೊಳ್ಳುತ್ತಾರೆ.
ಮೋದಿಜಿ: ಸರಿ. ನಾನು ಲಖ್ಪತಿ ದೀದಿಯನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ, ಇಂದು ದೇಶಾದ್ಯಂತ ಸಹೋದರಿಯರು ಮನದ ಮಾತು ಕೇಳುತ್ತಿದ್ದರೆ, ಡ್ರೋನ್ ದೀದಿ ನನ್ನೊಂದಿಗೆ ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ, ನೀವು ಏನು ಹೇಳಲು ಬಯಸುತ್ತೀರಿ?
ಸುನೀತಾ ದೇವಿ: ಇಂದು ನಾನು ಒಬ್ಬಳೇ ಡ್ರೋನ್ ದೀದಿ ಇದ್ದೀನಿ, ಸಾವಿರಾರು ಸಹೋದರಿಯರು ನನ್ನಂತೆ ಡ್ರೋನ್ ದೀದಿಯಾಗಲು ಮುಂದೆ ಬಂದರೆ ಮತ್ತು ನಾನು ಒಬ್ಬಂಟಿಯಾಗಿರುವಾಗ ಇನ್ನೂ ಸಾವಿರಾರು ಜನರು ನನ್ನೊಂದಿಗೆ ನಿಲ್ಲುತ್ತಾರೆ ಎಂದಾದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಾನು ಒಬ್ಬಂಟಿಯಾಗಿಲ್ಲ, ಅನೇಕ ಜನರು ನನ್ನೊಂದಿಗೆ ಡ್ರೋನ್ ದೀದಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಬಹಳ ಆನಂದವಾಗುತ್ತದೆ.
ಮೋದಿಜೀ: ಸುನೀತಾ ಅವರೆ, ನಿಮಗೆ ಅನಂತ ಅಭಿನಂದನೆಗಳು. ನಮೋ ಡ್ರೋನ್ ದೀದಿ, ಇಂದು ದೇಶದಲ್ಲಿ ಕೃಷಿಯನ್ನು ಆಧುನೀಕರಿಸಲು ಉತ್ತಮ ಮಾಧ್ಯಮವಾಗುತ್ತಿದ್ದಾರೆ. ಅನಂತ ಶುಭಾಶಯಗಳು.
ಸುನೀತಾ ದೇವಿ: ಧನ್ಯವಾದಗಳು, ಧನ್ಯವಾದಗಳು ಸರ್.
ಮೋದಿಜಿ: ಧನ್ಯವಾದಗಳು!
ಸ್ನೇಹಿತರೇ, ಇಂದು ದೇಶದ ಮಹಿಳಾ ಶಕ್ತಿ ಹಿಂದೆ ಬಿದ್ದ ಯಾವುದೇ ಕ್ಷೇತ್ರವೇ ಇಲ್ಲ. ನೈಸರ್ಗಿಕ ಕೃಷಿ, ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಮಹಿಳೆಯರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ ಮತ್ತೊಂದು ಕ್ಷೇತ್ರವಾಗಿದೆ. ರಾಸಾಯನಿಕಗಳಿಂದಾಗಿ ನಮ್ಮ ಭೂಮಿ ತಾಯಿ ಎದುರಿಸುತ್ತಿರುವ ನೋವು ಮತ್ತು ಸಂಕಟಗಳಿಂದ - ನಮ್ಮ ಭೂ ತಾಯಿಯನ್ನು ಉಳಿಸುವಲ್ಲಿ ದೇಶದ ಮಾತೃಶಕ್ತಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಮಹಿಳೆಯರು ಈಗ ದೇಶದ ಮೂಲೆ ಮೂಲೆಗಳಲ್ಲಿ ನೈಸರ್ಗಿಕ ಕೃಷಿಯನ್ನು ಪಸರಿಸುತ್ತಿದ್ದಾರೆ. ಇಂದು ‘ಜಲ ಜೀವನ್ ಮಿಷನ್’ ಅಡಿಯಲ್ಲಿ ದೇಶದಲ್ಲಿ ಇಷ್ಟೊಂದು ಕೆಲಸಗಳು ನಡೆಯುತ್ತಿದ್ದರೆ ಅದರಲ್ಲಿ ಜಲ ಸಮಿತಿಗಳ ಪಾತ್ರ ದೊಡ್ಡದಿದೆ. ಈ ಜಲಸಮಿತಿಯ ನಾಯಕತ್ವ ಮಹಿಳೆಯರದ್ದೇ ಆಗಿದೆ. ಇದರ ಹೊರತಾಗಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಜಲ ಸಂರಕ್ಷಣೆಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಂತಹ ಓರ್ವ ಮಹಿಳೆ ಕಲ್ಯಾಣಿ ಪ್ರಫುಲ್ಲ ಪಾಟೀಲ್ ಅವರು ನನ್ನೊಂದಿಗೆ ಫೋನ್ ಲೈನ್ನಲ್ಲಿದ್ದಾರೆ. ಅವರು ಮಹಾರಾಷ್ಟ್ರದ ನಿವಾಸಿ. ಬನ್ನಿ, ಕಲ್ಯಾಣಿ ಪ್ರಫುಲ್ಲ ಪಾಟೀಲರೊಂದಿಗೆ ಮಾತನಾಡಿ ಅವರ ಅನುಭವವನ್ನು ತಿಳಿದುಕೊಳ್ಳೋಣ.
ಪ್ರಧಾನ ಮಂತ್ರಿ - ಹಲೋ ಕಲ್ಯಾಣಿ ಅವರೆ.
ಕಲ್ಯಾಣಿ - ನಮಸ್ಕಾರ ಸರ್,
ಪ್ರಧಾನ ಮಂತ್ರಿ - ಕಲ್ಯಾಣಿ ಅವರೆ, ಮೊದಲು ನಿಮ್ಮ ಬಗ್ಗೆ, ನಿಮ್ಮ ಕುಟುಂಬದ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ತಿಳಿಸಿ.
ಕಲ್ಯಾಣಿ - ಸರ್, ನಾನು MSc ಮೈಕ್ರೋಬಯಾಲಜಿ ಓದಿದ್ದೇನೆ ಮತ್ತು ನನ್ನ ಮನೆಯಲ್ಲಿ ನನ್ನ ಪತಿ, ನನ್ನ ಅತ್ತೆ ಮತ್ತು ನನ್ನ ಇಬ್ಬರು ಮಕ್ಕಳಿದ್ದಾರೆ ಮತ್ತು ನಾನು ಮೂರು ವರ್ಷಗಳಿಂದ ಗ್ರಾಮ ಪಂಚಾಯತ್ನಲ್ಲಿ ಕೆಲಸ ಮಾಡುತ್ತಿದ್ದೇನೆ.
ಪ್ರಧಾನ ಮಂತ್ರಿ - ಮತ್ತು ನಂತರ ನೀವು ಹಳ್ಳಿಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೀರಿ? ಏಕೆಂದರೆ ನೀವು ಮೂಲ ಜ್ಞಾನವನ್ನೂ ಹೊಂದಿದ್ದೀರಿ, ನೀವೂ ಇದೇ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದೀರಿ. ಈಗ ಕೃಷಿ ಕೈಗೊಂಡಿದ್ದೀರಿ ಹಾಗಾದರೆ ಏನು ಹೊಸ ಪ್ರಯೋಗ ಮಾಡಿದ್ದೀರಿ?
ಕಲ್ಯಾಣಿ ಜೀ – ಸರ್, ನಮ್ಮಲ್ಲಿರುವ ಹತ್ತು ವಿಧದ ವನಸ್ಪತಿಗಳನ್ನುಅಂದರೆ ಔಷಧೀಯ ಸಸ್ಯಗಳನ್ನು ಸಂಗ್ರಹಿಸಿ, ಅದರಿಂದ ಸಾವಯವ ಸಿಂಪರಣೆ ತಯಾರು ಮಾಡಿದ್ದೇನೆ, ನಾವು ಕೀಟನಾಶಕಗಳನ್ನು ಸಿಂಪಡಿಸಿದಾಗ, ಇತರ ಕೀಟಗಳ ಜೊತೆಗೆ ನಮ್ಮ ಮಿತ್ರ ಕೀಟಗಳು ಸಹ ನಾಶವಾಗುತ್ತವೆ ಮತ್ತು ನಮ್ಮ ಮಣ್ಣಿನ ಮಾಲಿನ್ಯತೆ ಹೆಚ್ಚುತ್ತದೆ, ನೀರಿನಲ್ಲಿ ರಾಸಾಯನಿಕಗಳು ಮಿಶ್ರಣವಾಗುವುದರಿಂದ ನಮ್ಮ ದೇಹದ ಮೇಲೆ ಕೂಡ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಹಾಗಾಗಿ ಪರಿಸ್ಥಿತಿಗೆ ಅನುಗುಣವಾಗಿ, ನಾವು ಕನಿಷ್ಟ ಕೀಟನಾಶಕಗಳನ್ನು ಬಳಸಿದ್ದೇವೆ.
ಪ್ರಧಾನಮಂತ್ರಿ - ಹಾಗಾದರೆ ನೀವು ಒಂದು ರೀತಿಯಲ್ಲಿ ಸಂಪೂರ್ಣವಾಗಿ ನೈಸರ್ಗಿಕ ಕೃಷಿಯತ್ತ ಸಾಗುತ್ತಿದ್ದೀರಿ.
ಕಲ್ಯಾಣಿ - ಹೌದು, ನಾವು ಕಳೆದ ವರ್ಷದಿಂದ ಸಾಂಪ್ರದಾಯಿಕ ಕೃಷಿಯನ್ನೇ, ಕೈಗೊಂಡಿದ್ದೇವೆ.
ಪ್ರಧಾನಮಂತ್ರಿ - ನೈಸರ್ಗಿಕ ಕೃಷಿಯಲ್ಲಿ ನಿಮಗೆ ಯಾವ ಬಗೆಯ ಅನುಭವವಾಯಿತು?
ಕಲ್ಯಾಣಿ – ಸರ್, ನಮ್ಮ ಮಹಿಳೆಯರು ಮಾಡುವ ಖರ್ಚು ಕಡಿಮೆ ಆಯಿತು, ಉತ್ಪನ್ನಗಳೂ ಉತ್ತಮವಾಗಿದ್ದವು ಸರ್, ಆ ಪರಿಹಾರ ಸಿಕ್ಕ ಮೇಲೆ ಕೀಟಬಾಧೆ ಇಲ್ಲದೇ ಕೃಷಿ ಕೈಗೊಂಡೆವು ಯಾಕೆಂದರೆ ಈಗ ನಗರ ಪ್ರದೇಶಗಳಲ್ಲಿ ಕ್ಯಾನ್ಸರ್ನ ಪುರಾವೆಗಳು ಹೆಚ್ಚಾಗುತ್ತಿವೆ. ಆದರೆ ನಮ್ಮ ಹಳ್ಳಿಗಳಲ್ಲಿಯೂ ಈ ಪ್ರಕರಣಗಳು ಹೆಚ್ಚುತ್ತಿವೆ, ಆದ್ದರಿಂದ ನಾವು ನಮ್ಮ ಭವಿಷ್ಯದ ಕುಟುಂಬವನ್ನು ರಕ್ಷಿಸಲು ಬಯಸಿದರೆ, ಈ ಮಾರ್ಗವನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ, ಅದರಂತೆ, ಆ ಮಹಿಳೆಯರೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಪ್ರಧಾನಮಂತ್ರಿ - ಸರಿ ಕಲ್ಯಾಣಿ ಅವರೆ, ನೀವೂ ಜಲ ಸಂರಕ್ಷಣೆಯಲ್ಲಿ ಏನಾದರೂ ಕೆಲಸ ಮಾಡಿದ್ದೀರಾ? ಅದರಲ್ಲಿ ನೀವು ಯಾವ ರೀತಿ ಕೆಲಸ ಮಾಡಿದ್ದೀರಿ?
ಕಲ್ಯಾಣಿ – ಸರ್, ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ, ನಮ್ಮ ಗ್ರಾಮ ಪಂಚಾಯ್ತಿ ಕಟ್ಟಡ, ಅಲ್ಲಿದ್ದ ಮಳೆ ನೀರನ್ನೆಲ್ಲ ಒಂದೇ ಕಡೆ ಸಂಗ್ರಹಿಸಿದ್ದೇವೆ, ಬೀಳುವ ಮಳೆ ನೀರು ನೆಲದೊಳಗೆ ಇಂಗಬೇಕು, ಅದರ ಪ್ರಕಾರ ನಾವು ನಮ್ಮ ಗ್ರಾಮದಲ್ಲಿ 20 ರೀಚಾರ್ಜ್ ಶಾಫ್ಟ್ ಗಳನ್ನು ಅಳವಡಿಸಿದ್ದೇವೆ ಮತ್ತು 50 ರೀಚಾರ್ಜ್ ಶಾಫ್ಟ್ ಗಳಿಗೆ ಮಂಜೂರಾತಿ ದೊರೆತಿದೆ. ಈಗ ಆ ಕೆಲಸವೂ ಶೀಘ್ರವೇ ಆರಂಭವಾಗಲಿದೆ.
ಪ್ರಧಾನ ಮಂತ್ರಿ - ಕಲ್ಯಾಣಿ ಅವರೆ, ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವಾಯಿತು. ನಿಮಗೆ ಅನಂತ ಶುಭಾಶಯಗಳು.
ಕಲ್ಯಾಣಿ - ಧನ್ಯವಾದಗಳು ಸರ್, ಧನ್ಯವಾದಗಳು ಸರ್. ನಿಮ್ಮೊಂದಿಗೆ ಮಾತನಾಡಿ ನನಗೂ ತುಂಬಾ ಸಂತೋಷವಾಯಿತು. ನನ್ನ ಜೀವನವು ಸಂಪೂರ್ಣ ಸಾರ್ಥಕವಾಯಿತು ಎಂದು ನಾನು ಭಾವಿಸುತ್ತೇನೆ.
ಪ್ರಧಾನಮಂತ್ರಿ - ಸೇವೆ ಮಾಡುತ್ತಾ ಸಾಗಿ.
ಪ್ರಧಾನಮಂತ್ರಿ - ನಿಮ್ಮ ಹೆಸರು ಕಲ್ಯಾಣಿ, ಆದ್ದರಿಂದ ನೀವು ಕಲ್ಯಾಣ ಮಾಡಲೇಬೇಕು. ಧನ್ಯವಾದಗಳು. ನಮಸ್ಕಾರ
ಕಲ್ಯಾಣಿ - ಧನ್ಯವಾದಗಳು ಸರ್. ಧನ್ಯವಾದ
ಸ್ನೇಹಿತರೇ, ಅದು ಸುನೀತಾ ಅವರಾಗಿರಲಿ ಅಥವಾ ಕಲ್ಯಾಣಿಯವರಾಗಿರಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಶಕ್ತಿಯ ಯಶಸ್ಸು ತುಂಬಾ ಸ್ಪೂರ್ತಿದಾಯಕವಾಗಿದೆ. ನಮ್ಮ ಮಹಿಳಾ ಶಕ್ತಿಯ ಈ ಸ್ಫೂರ್ತಿಯನ್ನು ನಾನು ಮತ್ತೊಮ್ಮೆ ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಮ್ಮೆಲ್ಲರ ಜೀವನದಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆ ಬಹಳಷ್ಟು ಹೆಚ್ಚಾಗಿದೆ. ಮೊಬೈಲ್ ಫೋನ್, ಡಿಜಿಟಲ್ ಗ್ಯಾಜೆಟ್ ಗಳು ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿವೆ. ಆದರೆ ಡಿಜಿಟಲ್ ಗ್ಯಾಜೆಟ್ ಗಳ ನೆರವಿನಿಂದ ಈಗ ವನ್ಯ ಜೀವಿಗಳೊಂದಿಗೆ ಸಾಮರಸ್ಯ ಸಾಧಿಸಲು ಕೂಡಾ ಸಹಾಯವಾಗುತ್ತಿದೆಯೆಂದು ನೀವು ಊಹಿಸಬಹುದೇ. ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 3 ರಂದು ವಿಶ್ವ ವನ್ಯ ಜೀವಿ ದಿನ ಆಚರಿಸಲಿದ್ದೇವೆ. ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ವನ್ಯ ಜೀವಿ ದಿನದ ಘೋಷವಾಕ್ಯದಲ್ಲಿ ಡಿಜಿಟಲ್ ಆವಿಷ್ಕಾರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ದೇಶದಲ್ಲಿ ವಿಭಿನ್ನ ಭಾಗಗಳಲ್ಲಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ತಂತ್ರಜ್ಞಾನದ ವ್ಯಾಪಕ ಬಳಕೆಯಾಗುತ್ತಿದೆಯೆಂದು ತಿಳಿದು ನಿಮಗೆ ಸಂತೋಷವಾಗಬಹುದು. ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳಿಂದ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಚಂದ್ರಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಇನ್ನೂರೈವತ್ತಕ್ಕಿಂತಲೂ ಅಧಿಕವಾಗಿದೆ. ಚಂದ್ರಪುರ್ ಜಿಲ್ಲೆಯಲ್ಲಿ ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವುದಕ್ಕಾಗಿ ಕೃತಕ ಬುದ್ಧಿಮತ್ತೆಯ ನೆರವು ಪಡೆಯಲಾಗುತ್ತಿದೆ. ಇಲ್ಲಿ ಗ್ರಾಮ ಮತ್ತು ಕಾಡಿನ ಗಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗ್ರಾಮದ ಸಮೀಪ ಯಾವುದಾದರೊಂದು ಹುಲಿ ಬಂದಲ್ಲಿ, ಕೃತಕ ಬುದ್ಧಿಮತ್ತೆಯ ನೆರವಿನಿಂದ ಸ್ಥಳೀಯರಿಗೆ ಮೊಬೈಲ್ ನಲ್ಲಿ ಎಚ್ಚರಿಕೆ ಸಂದೇಶ ದೊರೆಯುತ್ತದೆ. ಇಂದು ಈ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಮುತ್ತಲಿನ 13 ಗ್ರಾಮಗಳಲ್ಲಿ ಇಂತಹ ವ್ಯವಸ್ಥೆಯಿಂದ ಜನರಿಗೆ ಬಹಳ ಅನುಕೂಲವಾಗಿದೆ ಮತ್ತು ಹುಲಿಗಳ ದಾಳಿಯ ಭಯವಿಲ್ಲದಂತೆ ರಕ್ಷಣೆಯೂ ದೊರೆತಿದೆ.
ಸ್ನೇಹಿತರೇ, ಇಂದು ಯುವ ಉದ್ಯಮಿಗಳು ಕೂಡಾ ವನ್ಯ ಜೀವಿ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುತ್ತಿದ್ದಾರೆ. ಉತ್ತರಾಖಂಡದ ರೂರ್ಕಿಯಲ್ಲಿ, ರೋಟರ್ ಪ್ರೆಸಿಷನ್ ಗ್ರೂಪ್ಸ್ ಭಾರತೀಯ ವನ್ಯಜೀವಿ ಸಂಸ್ಥೆಯ ಸಹಯೋಗದೊಂದಿಗೆ ಕೆನ್ ನದಿಯಲ್ಲಿ ಮೊಸಳೆಗಳ ಮೇಲೆ ಕಣ್ಗಾವಲು ಇರಿಸಲು ಸಹಾಯ ಮಾಡುವ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ. ಇದೇ ರೀತಿ ಬೆಂಗಳೂರಿನ ಒಂದು ಕಂಪೆನಿಯು ‘ಬಘೀರಾ’ ಮತ್ತು ‘ಗರುಡ’ ಹೆಸರಿನ ಆಪ್ (App) ತಯಾರಿಸಿದೆ. ಬಘೀರಾ ಆಪ್ (App)ನಿಂದ ಜಂಗಲ್ ಸಫಾರಿಯ ಸಮಯದಲ್ಲಿ ವಾಹನದ ವೇಗ ಮತ್ತು ಇತರ ಚಟುವಟಿಕೆಗಳನ್ನು ಗಮನಿಸಬಹುದು. ದೇಶದ ಅನೇಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇದರ ಬಳಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು Internet of things ಆಧಾರಿತ ಗರುಡ ಆಪ್ (App) ಅನ್ನು ಯಾವುದೇ ಸಿಸಿಟಿವಿಗೆ ಜೋಡಣೆ ಮಾಡುವುದರಿಂದ ರಿಯಲ್ ಟೈಮ್ ಅಲರ್ಟ್ ದೊರೆಯಲಾರಂಭಿಸುತ್ತದೆ. ವನ್ಯ ಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಈ ರೀತಿಯ ಪ್ರತಿಯೊಂದು ಪ್ರಯತ್ನದಿಂದ ನಮ್ಮ ದೇಶದ ಜೀವ ವೈವಿಧ್ಯತೆ ಮತ್ತಷ್ಟು ಸಮೃದ್ಧವಾಗುತ್ತಿದೆ.
ಸ್ನೇಹಿತರೇ, ಭಾರತದಲ್ಲಿ ಪ್ರಕೃತಿಯೊಂದಿಗೆ ಸಾಮರಸ್ಯ ಎನ್ನುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಾವು ಸಾವಿರಾರು ವರ್ಷಗಳಿಂದ ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಹ-ಅಸ್ತಿತ್ವದ ಭಾವನೆಯೊಂದಿಗೆ ಬಾಳುತ್ತಾ ಬಂದಿದ್ದೇವೆ. ನೀವು ಎಂದಾದರೂ ಮಹಾರಾಷ್ಟ್ರದ ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೋದರೆ, ಅದರ ಆನಂದವನ್ನು ಅನುಭವಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಹುಲಿ ಸಂರಕ್ಷಿತ ಪ್ರದೇಶದ ಸಮೀಪದ ಖಟ್ಕಲಿ ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳು ಸರ್ಕಾರದ ನೆರವಿನೊಂದಿಗೆ ತಮ್ಮ ಮನೆಗಳನ್ನು ಹೋಮ್ ಸ್ಟೇಗಳಾಗಿ ಪರಿವರ್ತಿಸಿವೆ. ಇದು ಅವರಿಗೆ ಆದಾಯದ ಬಹು ದೊಡ್ಡ ಮೂಲವಾಗಿವೆ. ಇದೇ ಗ್ರಾಮದಲ್ಲಿ ವಾಸವಾಗಿರುವ ಕೊರ್ಕು ಬುಡಕಟ್ಟು ಜನಾಂಗದ ಪ್ರಕಾಶ್ ಜಾಮಕರ್ ಅವರು ತಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಏಳು ಕೊಠಡಿಗಳ ಹೋಂ ಸ್ಟೇ ಸಿದ್ಧಪಡಿಸಿದ್ದಾರೆ. ಅಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಪ್ರಕಾಶ್ ಅವರ ಕುಟುಂಬವೇ ಆಹಾರ ಮತ್ತು ಪಾನೀಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ತಮ್ಮ ಮನೆಯ ಸುತ್ತ ಮುತ್ತ ಅವರು ಔಷಧೀಯ ಸಸ್ಯಗಳೊಂದಿಗೆ ಮಾವು ಮತ್ತು ಕಾಫಿ ಗಿಡಗಳನ್ನು ಕೂಡಾ ನೆಟ್ಟಿದ್ದಾರೆ. ಇದು ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಇತರರಿಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪಶುಪಾಲನೆಯ ಬಗ್ಗೆ ಮಾತನಾಡುವಾಗ, ನಾವು ಹೆಚ್ಚಾಗಿ ಹಸು ಮತ್ತು ಎಮ್ಮೆಗಳನ್ನು ಮಾತ್ರಾ ಪರಿಗಣಿಸುತ್ತೇವೆ. ಆದರೆ ಮೇಕೆ ಕೂಡ ಒಂದು ಪ್ರಮುಖ ಪ್ರಾಣಿಯಾಗಿದ್ದು, ಇದರ ಬಗ್ಗೆ ಅಷ್ಟೊಂದು ಮಾತುಕತೆ ನಡೆಯುವುದಿಲ್ಲ. ದೇಶದ ವಿಭಿನ್ನ ಪ್ರದೇಶಗಳಲ್ಲಿ ಹಲವರು ಮೇಕೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಒಡಿಶಾದ ಕಾಲಾಹಾಂಡಿಯಲ್ಲಿ ಮೇಕೆ ಪಾಲನೆ ಎನ್ನುವುದು ಗ್ರಾಮದ ಜನರ ಜೀವನೋಪಾಯ ಮಾತ್ರವಲ್ಲ, ಅವರ ಜೀವನ ಮಟ್ಟವನ್ನು ಸುಧಾರಣೆ ಮಾಡುವ ಪ್ರಮುಖ ಸಾಧನವೂ ಆಗುತ್ತಿದೆ. ಈ ಪ್ರಯತ್ನದ ಹಿಂದೆ ಜಯಂತಿ ಮಹಾಪಾತ್ರಾ ಮತ್ತು ಅವರ ಪತಿ ಬೀರೇನ್ ಸಾಹೂ ಅವರ ಬಹುದೊಡ್ಡ ನಿರ್ಧಾರವಿದೆ. ಇವರಿಬ್ಬರೂ ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ವೃತ್ತಿಪರರಾಗಿದ್ದರು. ಆದರೆ ಅವರು ಆ ಕೆಲಸದಿಂದ ವಿರಾಮ ಪಡೆದು, ಕಾಲಾಹಾಂಡಿಯ ಸಾಲೇಭಾಟಾ ಗ್ರಾಮಕ್ಕೆ ಬರಲು ನಿರ್ಧರಿಸಿದರು. ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರನ್ನು ಸಶಕ್ತಗೊಳಿಸುವ ಏನಾದರೂ ಮಾಡಬೇಕೆಂದು ಇವರಿಬ್ಬರೂ ಬಯಸಿದರು. ಸೇವೆ ಮತ್ತು ಸಮರ್ಪಣಾ ಭಾವದ ಈ ಚಿಂತನೆಯೊಂದಿಗೆ, ಅವರು ಮಾಣಿಕಸ್ತು ಆಗ್ರೋವನ್ನು ಸ್ಥಾಪಿಸಿದರು ಮತ್ತು ರೈತರೊಂದಿಗೆ ಕೆಲಸ ಮಾಡಲಾರಂಭಿಸಿದರು. ಜಯಂತಿ ಮತ್ತು ಬೀರೇನ್ ಅವರು ಇಲ್ಲಿ ಒಂದು ಆಕರ್ಷಕ ಮಾಣಿಕಾಸ್ತು ಮೇಕೆ ಬ್ಯಾಂಕ್ ಕೂಡಾ ತೆರೆದರು. ಸಮುದಾಯ ಮಟ್ಟದಲ್ಲಿ ಮೇಕೆ ಸಾಕಾಣಿಕೆಗೆ ಇವರು ಉತ್ತೇಜನ ನೀಡುತ್ತಿದ್ದಾರೆ. ಅವರ ಮೇಕೆ ಫಾರಂನಲ್ಲಿ ಡಜನ್ ಗಟ್ಟಲೆ ಮೇಕೆಗಳಿವೆ. ಮಾಣಿಕಸ್ತು ಮೇಕೆ ಬ್ಯಾಂಕ್, ರೈತರಿಗೆ ಸಂಪೂರ್ಣ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಈ ಮೂಲಕ ರೈತರಿಗೆ 24 ತಿಂಗಳುಗಳಿಗಾಗಿ ಎರಡು ಮೇಕೆಗಳನ್ನು ನೀಡಲಾಗುತ್ತದೆ. 2 ವರ್ಷಗಳಲ್ಲಿ ಮೇಕೆಗಳು 9 ರಿಂದ 10 ಮರಿಗಳಿಗೆ ಜನ್ಮ ನೀಡುತ್ತವೆ, ಇವುಗಳ ಪೈಕಿ ಆರು ಮರಿಗಳನ್ನು ಬ್ಯಾಂಕ್ ಇರಿಸಿಕೊಳ್ಳುತ್ತದೆ, ಉಳಿದ ಮರಿಗಳನ್ನು ಮೇಕೆಗಳನ್ನು ಸಾಕುವ ಅದೇ ಕುಟುಂಬಕ್ಕೆ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ಮೇಕೆಗಳ ಪಾಲನೆ ಪೋಷಣೆಗಾಗಿ ಅಗತ್ಯ ಸೇವೆಗಳನ್ನು ಕೂಡಾ ಒದಗಿಸಲಾಗುತ್ತದೆ. ಇಂದು 50 ಗ್ರಾಮಗಳ 1000 ಕ್ಕೂ ಅಧಿಕ ರೈತರು ಈ ದಂಪತಿಗಳೊಂದಿಗೆ ಸೇರಿಕೊಂಡಿದ್ದಾರೆ. ಅವರ ಸಹಾಯದಿಂದ ಗ್ರಾಮದ ಜನತೆ ಪಶು ಪಾಲನೆ ಕ್ಷೇತ್ರದಲ್ಲಿ ಸ್ವಾವಲಂಬನೆಯ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿನ ಸಫಲ ವೃತ್ತಿಪರರು ರೈತರನ್ನು ಸಶಕ್ತರನ್ನಾಗಿಸಲು ಮತ್ತು ಸ್ವಾವಲಂಬಿಗಳನ್ನಾಗಿಸಲು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ. ಅವರುಗಳ ಇಂತಹ ಪ್ರಯತ್ನಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತಿಯ ಪಾಠ - ‘ಪರಮಾರ್ಥ ಪರಮೋ ಧರ್ಮಃ ’ ಎಂಬುದಾಗಿದೆ ಅಂದರೆ ಇತರರಿಗೆ ಸಹಾಯ ಮಾಡುವುದೇ ಬಹಳ ದೊಡ್ಡ ಕರ್ತವ್ಯ ಎಂದರ್ಥ. ಇದೇ ಭಾವನೆಯೊಂದಿಗೆ ನಮ್ಮ ದೇಶದಲ್ಲಿ ಅಸಂಖ್ಯಾತ ಮಂದಿ ನಿಸ್ವಾರ್ಥವಾಗಿ ಇತರರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು - ಬಿಹಾರದ ಭೋಜ್ ಪುರದ ಭೀಮ್ ಸಿಂಗ್ ಭವೇಶ್ ಅವರು. ಅವರು ವಾಸವಾಗಿರುವ ಪ್ರದೇಶದ ಮುಸಾಹರ್ ಜಾತಿಯ ಜನರಲ್ಲಿ ಅವರ ಕೆಲಸದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ ಇಂದು ಇವುಗಳ ಕುರಿತಂತೆ ಕೂಡಾ ನಿಮ್ಮೊಂದಿಗೆ ಮಾತನಾಡಬಾರದೇಕೆ ಎಂದು ನಾನು ಯೋಚಿಸಿದೆ. ಮುಸಾಹರ್ ಎನ್ನುವುದು ಬಿಹಾರದಲ್ಲಿ ಬಹಳ ಹಿಂದುಳಿದ ಮತ್ತು ಅತ್ಯಂತ ಬಡ ಸಮುದಾಯವಾಗಿದೆ. ಭೀಮ್ ಸಿಂಗ್ ಭವೇಶ್ ಅವರು ಈ ಸಮುದಾಯದ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂಬ ಉದ್ದೇಶದಿಂದ ಈ ಮಕ್ಕಳ ಶಿಕ್ಷಣದತ್ತ ಗಮನಹರಿಸಿದ್ದಾರೆ. ಮುಸಾಹರ್ ಜಾತಿಯ ಸುಮಾರು 8 ಸಾವಿರ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಅವರು ದೊಡ್ಡ ಗ್ರಂಥಾಲಯವನ್ನು ಸಹ ನಿರ್ಮಿಸಿದ್ದಾರೆ, ಇದರಿಂದಾಗಿ ಮಕ್ಕಳಿಗೆ ಶಿಕ್ಷಣಕ್ಕಾಗಿ ಉತ್ತಮ ಸೌಲಭ್ಯಗಳು ಸಿಗುತ್ತಿವೆ. ಭೀಮ್ ಸಿಂಗ್ ಅವರು ತಮ್ಮ ಸಮುದಾಯದ ಸದಸ್ಯರ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದಕ್ಕೆ, ಅವರುಗಳ ಅರ್ಜಿ ತುಂಬುವುದಕ್ಕೆ ಕೂಡಾ ಸಹಾಯ ಮಾಡುತ್ತಾರೆ. ಇದರಿಂದ ಹಳ್ಳಿಯ ಜನರು ಅಗತ್ಯ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಅವಕಾಶ ಕೂಡಾ ಹೆಚ್ಚಾಗಿದೆ. ಜನರ ಆರೋಗ್ಯ ಸುಧಾರಣೆಗಾಗಿ 100ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಕರೋನಾ ಬಿಕ್ಕಟ್ಟು ಗಂಭೀರವಾಗಿದ್ದಾಗ, ಭೀಮ್ ಸಿಂಗ್ ಅವರು ತಮ್ಮ ಪ್ರದೇಶದ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಬಹಳ ಪ್ರೋತ್ಸಾಹಿಸಿದ್ದರು. ದೇಶದ ವಿಭಿನ್ನ ಪ್ರದೇಶಗಳಲ್ಲಿ ಭೀಮ್ ಸಿಂಗ್ ಭವೇಶ್ ಅವರಂತಹ ಸಮಾಜದಲ್ಲಿ ಅನೇಕ ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಂತಹ ಅನೇಕರಿದ್ದಾರೆ. ಜವಾಬ್ದಾರಿಯುತ ನಾಗರಿಕರಾಗಿರುವ ನಾವು ಇದೇ ರೀತಿ ನಮ್ಮ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಿದರೆ, ಒಂದು ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಬಹಳ ಸಹಾಯವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಸೌಂದರ್ಯವು ಅದರ ವೈವಿಧ್ಯತೆ ಮತ್ತು ನಮ್ಮ ಸಂಸ್ಕೃತಿಯ ವಿವಿಧ ಬಣ್ಣಗಳಲ್ಲಿ ಅಡಗಿದೆ. ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸಲು ಎಷ್ಟೊಂದು ಜನರು ನಿಸ್ವಾರ್ಥವಾಗಿ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನೋಡಲು ನನಗೆ ಸಂತೋಷವಾಗುತ್ತದೆ. ಭಾರತದ ಪ್ರತಿಯೊಂದು ಭಾಗದಲ್ಲೂ ನಿಮಗೆ ಅಂತಹ ಜನರು ಕಾಣಸಿಗುತ್ತಾರೆ. ಈ ಪೈಕಿ ಭಾಷಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಸಂಖ್ಯೆ ಹೆಚ್ಚು. ಜಮ್ಮು ಕಾಶ್ಮೀರದಲ್ಲಿ ಗಾಂದರ್ಬಲ್ ನ ಮೊಹಮ್ಮದ್ ಮಾನ್ ಶಾಹ್ ಅವರು ಕಳೆದ ಮೂರು ದಶಕಗಳಿಂದ ಗೋಜರೀ ಭಾಷೆಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರು ಗುಜ್ಜರ್ ಬಕರ್ವಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದೊಂದು ಬುಡಕಟ್ಟು ಸಮುದಾಯವಾಗಿದೆ. ಬಾಲ್ಯದಲ್ಲಿ ಓದಲು ಬಹಳ ಕಷ್ಟಪಟ್ಟಿದ್ದ ಅವರು ಪ್ರತಿದಿನ 20 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದರು. ಅಂತಹ ಸವಾಲುಗಳ ನಡುವೆ ಅವರು ಸ್ನಾತಕೋತ್ತರ ಪದವಿ ಗಳಿಸಿದರು ಮತ್ತು ಇವುಗಳ ನಡುವೆಯೇ ಭಾಷೆಯನ್ನು ಉಳಿಸಿಕೊಳ್ಳುವ ಅವರ ಸಂಕಲ್ಪ ಬಲವಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಮಾನ್ ಶಾಹ್ ಅವರ ಕಾರ್ಯ ವ್ಯಾಪ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ಸುಮಾರು 50 ಸಂಪುಟಗಳಲ್ಲಿ ಸಂಯೋಜಿಸಲಾಗಿದೆ. ಇವುಗಳಲ್ಲಿ ಕವಿತೆಗಳು ಮತ್ತು ಜಾನಪದ ಹಾಡುಗಳೂ ಸೇರಿವೆ. ಅವರು ಅನೇಕ ಪುಸ್ತಕಗಳನ್ನು ಗೋಜರಿ ಭಾಷೆಗೆ ಅನುವಾದಿಸಿದ್ದಾರೆ.
ಸ್ನೇಹಿತರೇ, ಅರುಣಾಚಲ ಪ್ರದೇಶದ ತಿರಪ್ ನಲ್ಲಿ ಬನ್ವಾಂಗ್ ಲೋಸು ಎಂಬ ಓರ್ವ ಶಿಕ್ಷಕರಿದ್ದಾರೆ. ವಾಂಚೋ ಭಾಷೆ ಕುರಿತಂತೆ ಪ್ರಸಾರ ಮಾಡುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ಭಾಷೆಯನ್ನು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಮಾತನಾಡುತ್ತಾರೆ. ಒಂದು ಭಾಷಾ ಶಾಲೆ ನಿರ್ಮಿಸುವ ಕೆಲಸವನ್ನೂ ಇವರು ಮಾಡಿದ್ದಾರೆ. ಇವರು ವಾಂಚೋ ಭಾಷೆಯ ಲಿಪಿಯನ್ನೂ ಸಿದ್ಧಪಡಿಸಿದ್ದಾರೆ. ವಾಂಚೋ ಭಾಷೆಯನ್ನು ಅಳಿವಿನಿಂದ ರಕ್ಷಿಸುವ ಸಲುವಾಗಿ ಇವರು ಮುಂದಿನ ಪೀಳಿಗೆಗೆ ಕೂಡಾ ವಾಂಚೋ ಭಾಷೆ ಕಲಿಸುತ್ತಿದ್ದಾರೆ.
ಸ್ನೇಹಿತರೇ, ಹಾಡು, ನೃತ್ಯಗಳ ಮೂಲಕ ತಮ್ಮ ಸಂಸ್ಕೃತಿ, ಭಾಷೆ ಉಳಿಸುವ ಕಾರ್ಯದಲ್ಲಿ ತೊಡಗಿರುವ ಬಹಳಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಕರ್ನಾಟಕದ ವೆಂಕಪ್ಪ ಅಂಬಾಜಿ ಸುಗೇಟಕರ ಅವರ ಜೀವನವೂ ಈ ವಿಚಾರದಲ್ಲಿ ತುಂಬ ಸ್ಪೂರ್ತಿದಾಯಕವಾಗಿದೆ. ಇಲ್ಲಿನ ಬಾಗಲಕೋಟೆಯ ನಿವಾಸಿ ಸುಗೇತಕರ್ ಅವರು ಓರ್ವ ಜಾನಪದ ಗಾಯಕ. ಅವರು 1000 ಕ್ಕೂ ಹೆಚ್ಚು ಗೋಂಧಳಿ ಹಾಡುಗಳನ್ನು ಹಾಡಿದ್ದಾರೆ ಮತ್ತು ಈ ಭಾಷೆಯಲ್ಲಿ ಕಥೆಗಳನ್ನು ಸಾಕಷ್ಟು ಪ್ರಚಾರ-ಪ್ರಸಾರ ಮಾಡಿದ್ದಾರೆ. ಅವರು ಯಾವುದೇ ಶುಲ್ಕ ಪಡೆಯದೇ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ಕೂಡಾ ನೀಡಿದ್ದಾರೆ. ನಿರಂತರವಾಗಿ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿರುವ ಉತ್ಸಾಹ ಮತ್ತು ಭರವಸೆಯಿಂದ ಕೂಡಿದ ಜನರಿಗೆ ಭಾರತದಲ್ಲಿ ಕೊರತೆಯಿಲ್ಲ. ನೀವೂ ಅವರಿಂದ ಸ್ಫೂರ್ತಿ ಪಡೆದು, ನಿಮ್ಮದೇನಾದರೂ ಮಾಡಲು ಪ್ರಯತ್ನಿಸಿ. ಇಧರಿಂದ ನಿಮಗೆ ಬಹಳ ಸಂತೃಪ್ತಿ ದೊರೆಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಎರಡು ದಿನಗಳ ಹಿಂದೆ ನಾನು ವಾರಣಾಸಿಯಲ್ಲಿದ್ದೆ ಮತ್ತು ಅಲ್ಲಿ ನಾನು ಅದ್ಭುತವಾದ ಫೋಟೋ ಪ್ರದರ್ಶನವನ್ನು ನೋಡಿದೆ. ಕಾಶಿ ಹಾಗೂ ಸುತ್ತಮುತ್ತಲಿನ ಯುವಕರು ಕ್ಯಾಮರಾದಲ್ಲಿ ಸೆರೆ ಹಿಡಿದ ಕ್ಷಣಗಳು ಅದ್ಭುತ. ಅದರಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಹಲವು ಛಾಯಾಚಿತ್ರಗಳಿದ್ದವು. ನಿಜವಾಗಿಯೂ ಈಗ ಮೊಬೈಲ್ ಯಾರ ಬಳಿ ಇದೆಯೋ ಅವರು content creator ಆಗಿಬಿಟ್ಟಿದ್ದಾರೆ. ಜನರಿಗೆ ಅವರ ಕೌಶಲ್ಯ ಮತ್ತು ಪ್ರತಿಭೆಯನ್ನು ತೋರಿಸಲು ಸಾಮಾಜಿಕ ಮಾಧ್ಯಮ ಸಾಕಷ್ಟು ಸಹಾಯ ಮಾಡಿದೆ. ಭಾರತದ ನಮ್ಮ ಯುವ ಸ್ನೇಹಿತರು ಕಂಟೆಂಟ್ ಕ್ರಿಯೇಷನ್ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡುತ್ತಿದ್ದಾರೆ. ಅದು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರಲಿ, ನಮ್ಮ ಯುವ ಸ್ನೇಹಿತರು ವಿಭಿನ್ನ ವಿಷಯಗಳ ಕುರಿತು ವಿಭಿನ್ನ ವಿಷಯವನ್ನು ಹಂಚಿಕೊಳ್ಳುವುದನ್ನು ನೀವು ಖಂಡಿತವಾಗಿ ಕಾಣಬಹುದು.ಪ್ರವಾಸೋದ್ಯಮ ಇರಬಹುದು, social cause ಇರಬಹುದು, ಸಾರ್ವಜನಿಕ ಪಾಲುದಾರಿಕೆ ಇರಬಹುದು ಅಥವಾ ಒಂದು ಪ್ರೇರಣಾತ್ಮಕ ಜೀವನ ಪಯಣವಿರಬಹುದು, ಇವುಗಳಿಗೆ ಸಂಬಂಧಿಸಿದ ವಿಧ ವಿಧ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುತ್ತವೆ. Content create ಮಾಡುತ್ತಿರುವ ದೇಶದ ಯುವಪೀಳಿಗೆಯ ಧ್ವನಿ ಇಂದು ಬಹಳ ಪರಿಣಾಮಕಾರಿಯಾಗಿದೆ. ಇವರ ಪ್ರತಿಭೆಯನ್ನು ಗೌರವಿಸಲು, ದೇಶದಲ್ಲಿ National Creators Award ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ, ಸಾಮಾಜಿಕ ಬದಲಾವಣೆಯ ಪರಿಣಾಮಕಾರಿ ಧ್ವನಿಯಾಗಲು ತಂತ್ರಜ್ಞಾನವನ್ನು ಬಳಸುತ್ತಿರುವ ವಿವಿಧ ವರ್ಗಗಳ ಚೇಂಜ್ ಮೇಕರ್ ಗಳನ್ನು ಗೌರವಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಸ್ಪರ್ಧೆಯು MyGov ನಲ್ಲಿ ಚಾಲನೆಯಲ್ಲಿದೆ ಮತ್ತು ನಾನು ಕಂಟೆಂಟ್ ಕ್ರಿಯೇಟರ್ ಗಳನ್ನು ಇದರಲ್ಲಿ ಸೇರಬೇಕೆಂದು ನಾನು ಮನವಿ ಮಾಡುತ್ತೇನೆ. ನಿಮಗೆ ಇಂತಹ ಆಸಕ್ತಿದಾಯ ಕಂಟೆಂಟ್ ಕ್ರಿಯೇಟರ್ ಗಳ ಬಗ್ಗೆ ತಿಳಿದಿದ್ದರೆ, ಅವರನ್ನು ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಗಾಗಿ ಅವರನ್ನು ಖಂಡಿತವಾಗಿಯೂ ನಾಮನಿರ್ದೇಶನ ಮಾಡಿ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ಚುನಾವಣಾ ಆಯೋಗವು ‘ನನ್ನ ಮೊದಲ ಮತ - ದೇಶಕ್ಕಾಗಿ‘ ಎಂಬ ಮತ್ತೊಂದು ಅಭಿಯಾನವನ್ನು ಪ್ರಾರಂಭಿಸಿರುವುದು ನನಗೆ ಸಂತೋಷ ತಂದಿದೆ. ಈ ಮೂಲಕ, ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ವಿಶೇಷವಾಗಿ ವಿನಂತಿಸಲಾಗಿದೆ. ಉತ್ಸಾಹ ಮತ್ತು ಸಾಮರ್ಥ್ಯದಿಂದ ತುಂಬಿರುವ ತನ್ನ ಯುವ ಶಕ್ತಿಯ ಬಗ್ಗೆ ಭಾರತಕ್ಕೆ ಬಹಳ ಹೆಮ್ಮೆಯಿದೆ. ನಮ್ಮ ಯುವಕರು ಚುನಾವಣಾ ಪ್ರಕ್ರಿಯೆಯಲ್ಲಿ ಎಷ್ಟು ಹೆಚ್ಚು ಭಾಗವಹಿಸುತ್ತಾರೆಯೋ, ಅದರ ಫಲಿತಾಂಶವು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ನಾನು ಕೂಡಾ First time voters ಗಳಲ್ಲಿ ಮನವಿ ಮಾಡುತ್ತೇನೆ. 18 ವರ್ಷಗಳು ತುಂಬಿದ ನಂತರ ನಿಮಗೆ 18ನೇ ಲೋಕಸಭೆಗಾಗಿ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ದೊರೆಯುತ್ತಿದೆ. ಅಂದರೆ, 18ನೇ ಲೋಕಸಭೆ ಕೂಡಾ ಯುವ ಆಕಾಂಕ್ಷೆಯ ಪ್ರತೀಕವಾಗಲಿದೆ. ಆದ್ದರಿಂದ ನಿಮ್ಮ ಮತದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗಿದೆ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ನೀವು, ಯುವಜನತೆ ಕೇವಲ ರಾಜಕೀಯ ಚಟುವಟಿಕೆಗಳ ಭಾಗವಾಗವಹಿಸುವುದು ಮಾತ್ರವಲ್ಲದೇ ಈ ಸಮಯದಲ್ಲಿ ಚರ್ಚೆ ಮತ್ತು ವಾಗ್ವಾದಗಳ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕು. ಮತ್ತು ನೆನಪಿಡಿ – ‘ನನ್ನ ಮೊದಲ ಮತ - ದೇಶಕ್ಕಾಗಿ’ . influencers ಅವರು ಕ್ರೀಡಾ ಕ್ಷೇತ್ರದವರಿರಲಿ, ಚಲನಚಿತ್ರ ಜಗತ್ತಿನವರಿರಲಿ, ಸಾಹಿತ್ಯ ಕ್ಷೇತ್ರದವರಿರಲಿ, ಅಥವಾ ಬೇರೆ ವೃತ್ತಿಪರರಿರಲಿ, ಅಥವಾ ನಮ್ಮ instagram ಮತ್ತು youtube ನ influencer ಗಳಿರಲಿ, ಎಲ್ಲರೂ ಮುಂದೆ ಬಂದು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದೂ ಮತ್ತು ನಮ್ಮ first time voters ಗಳನ್ನು ಪ್ರೇರೇಪಿಸಬೇಕೆಂದು ಎಲ್ಲಾ influencers ಗಳಲ್ಲಿ ನಾನು ಮನವಿ ಮಾಡುತ್ತೇನೆ.
ಈ ಬಾರಿಯ ಮನ್ ಕಿ ಬಾತ್ ಸಂಚಿಕೆಯನ್ನು ಇವಿಷ್ಟು ಮಾತುಕತೆಯೊಂದಿಗೆ ನಾನು ಮುಗಿಸುತ್ತಿದ್ದೇನೆ. ದೇಶದಲ್ಲಿ ಲೋಕಸಭೆ ಚುನಾವಣೆಯ ವಾತಾವರಣವಿದ್ದ, ಕಳೆದ ಬಾರಿಯಂತೆ ಮಾರ್ಚ್ ತಿಂಗಳಿನಲ್ಲಿಯೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. 110 ಸಂಚಿಕೆಗಳಲ್ಲಿ ನಾವು ಇದನ್ನು ಸರ್ಕಾರದ ನೆರಳಿನಿಂದ ದೂರವಿಟ್ಟಿರುವುದು ‘ಮನ್ ಕಿ ಬಾತ್’ನ ದೊಡ್ಡ ಯಶಸ್ಸಾಗಿದೆ. ‘ಮನ್ ಕಿ ಬಾತ್’ ನಲ್ಲಿ, ದೇಶದ ಸಾಮೂಹಿಕ ಶಕ್ತಿಯ ಮಾತುಕತೆ ನಡೆಯುತ್ತದೆ, ದೇಶದ ಸಾಧನೆಗಳ ಕುರಿತು ಮಾತುಕತೆ ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಜನರ, ಜನರಿಗಾಗಿ, ಜನರಿಂದ ಸಿದ್ಧವಾಗುವ ಕಾರ್ಯಕ್ರಮವಾಗಿದೆ. ಆದರೂ ರಾಜಕೀಯಕ್ಕೆ ಗೌರವ ತೋರಿಸುತ್ತಾ, ಲೋಕಸಭೆ ಚುನಾವಣೆಯ ಈ ದಿನಗಳಲ್ಲಿ ಮುಂದಿನ ಮೂರು ತಿಂಗಳವರೆಗೆ 'ಮನ್ ಕಿ ಬಾತ್' ಪ್ರಸಾರವಾಗುವುದಿಲ್ಲ. ನಾವು ನಿಮ್ಮೊಂದಿಗೆ ಸಂವಾದ ನಡೆಸುವ ಮುಂದಿನ 'ಮನ್ ಕಿ ಬಾತ್' ಅದು 'ಮನ್ ಕಿ ಬಾತ್' ನ 111 ನೇ ಸಂಚಿಕೆಯಾಗಲಿದೆ. ಮುಂದಿನ ಬಾರಿಯ 'ಮನ್ ಕಿ ಬಾತ್' ಶುಭಸಂಖ್ಯೆ 111ರೊಂದಿಗೆ ಆರಂಭವಾಗುತ್ತದೆ, ಇದಕ್ಕಿಂತ ಉತ್ತಮವಾದುದು ಇನ್ನೇನಿರುತ್ತದೆ. ಆದರೆ ಸ್ನೇಹಿತರೇ, ನೀವು ನನ್ನದೊಂದು ಕೆಲಸ ಮಾಡುತ್ತಿರಬೇಕು. ‘ಮನ್ ಕಿ ಬಾತ್’ ಮೂರು ತಿಂಗಳುಗಳ ಕಾಲ ನಿಲ್ಲಬಹುದು, ಆದರೆ ದೇಶದಲ್ಲಿ ಸಾಧನೆಗಳು ನಿಲ್ಲಲು ಸಾಧ್ಯವೇ. ಆದ್ದರಿಂದ ‘ಮನ್ ಕಿ ಬಾತ್‘ ಎಂಬ ಹ್ಯಾಷ್ ಟ್ಯಾಗ್ (#) ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸಾಧನೆ, ದೇಶದ ಸಾಧನೆಗಳನ್ನು ಪೋಸ್ಟ್ ಮಾಡಿ. ಕೆಲ ಸಮಯದ ಹಿಂದೆ ಓರ್ವ ಯುವಕ ನನಗೆ ಉತ್ತಮ ಸಲಹೆಯೊಂದನ್ನು ನೀಡಿದ್ದರು. 'ಮನ್ ಕಿ ಬಾತ್' ನ ಇದುವರೆಗಿನ ಸಂಚಿಕೆಗಳ ಸಣ್ಣ ವೀಡಿಯೊಗಳನ್ನು ಯೂಟ್ಯೂಬ್ ಕಿರುಚಿತ್ರಗಳ ರೂಪದಲ್ಲಿ ಹಂಚಿಕೊಳ್ಳಬೇಕು ಎಂಬುದು ಸಲಹೆಯಾಗಿತ್ತು. ಆದ್ದರಿಂದ, 'ಮನ್ ಕಿ ಬಾತ್' ಕೇಳುಗರು ಇಂತಹ ಕಿರುಚಿತ್ರಗಳನ್ನು ಸಾಕಷ್ಟು ಹಂಚಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ.
ಸ್ನೇಹಿತರೇ, ಮುಂದಿನ ಸಲ ನಿಮ್ಮೊಂದಿಗೆ ಮಾತನಾಡುವಾಗ, ಹೊಸ ಶಕ್ತಿ ಮತ್ತು ಹೊಸ ಮಾಹಿತಿಯೊಂದಿಗೆ ನಾನು ನಿಮ್ಮನ್ನು ಭೇಟಿಯಾಗುತ್ತೇನೆ. ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ, ಅನೇಕಾನೇಕ ಧನ್ಯವಾದಗಳು. ನಮಸ್ಕಾರ.
ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಇದು 2024 ರ ಮೊದಲ 'ಮನದ ಮಾತು' ಕಾರ್ಯಕ್ರಮವಾಗಿದೆ. ಅಮೃತಕಾಲದಲ್ಲಿ ಹೊಸ ಉತ್ಸಾಹ, ಹೊಸ ಅಲೆ ಉಕ್ಕುತ್ತಿದೆ. ಎರಡು ದಿನಗಳ ಹಿಂದೆ ನಾವೆಲ್ಲ ದೇಶವಾಸಿಗಳು 75ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ. ಈ ವರ್ಷ ನಮ್ಮ ಸಂವಿಧಾನವೂ 75 ವರ್ಷಗಳನ್ನು ಪೂರೈಸುತ್ತಿದೆ ಮತ್ತು ಸರ್ವೋಚ್ಚ ನ್ಯಾಯಾಲಯ ಕೂಡ 75 ವರ್ಷಗಳನ್ನು ಪೂರೈಸುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಈ ಹಬ್ಬಗಳು ಭಾರತವನ್ನು mother of democracy ಯ ರೂಪದಲ್ಲಿ ಮತ್ತಷ್ಟು ಬಲಪಡಿಸುತ್ತವೆ. ಭಾರತದ ಸಂವಿಧಾನವನ್ನು ಅದೆಷ್ಟು ಗಹನವಾದ ಚಿಂತನೆಯ ನಂತರ ಸಿದ್ಧಪಡಿಸಲಾಗಿದೆ ಎಂದರೆ ಅದನ್ನು ಜೀವಂತ ದಾಖಲೆ ಎಂದು ಕರೆಯಲಾಗುತ್ತದೆ. ಈ ಸಂವಿಧಾನದ ಮೂಲ ಪ್ರತಿಯ ಮೂರನೇ ಅಧ್ಯಾಯದಲ್ಲಿ, ಭಾರತದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕೂಡಾ ವಿವರಿಸಲಾಗಿದೆ ಮತ್ತು ಮೂರನೇ ಅಧ್ಯಾಯದ ಆರಂಭದಲ್ಲಿ, ನಮ್ಮ ಸಂವಿಧಾನದ ನಿರ್ಮಾತೃಗಳು ಭಗವಂತ ರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರ ಚಿತ್ರಗಳಿಗೆ ಸ್ಥಾನ ನೀಡಿರುವುದು ಬಹಳ ಕುತೂಹಲಕಾರಿಯಾಗಿದೆ. ಪ್ರಭು ಶ್ರೀರಾಮನ ಆಳ್ವಿಕೆಯು ನಮ್ಮ ಸಂವಿಧಾನವನ್ನು ರಚಿಸಿದವರಿಗೆ ಸ್ಫೂರ್ತಿಯ ಮೂಲವಾಗಿದೆ ಮತ್ತು ಅದಕ್ಕಾಗಿಯೇ ಜನವರಿ 22 ರಂದು ಅಯೋಧ್ಯೆಯಲ್ಲಿ ನಾನು 'ದೇವನಿಂದ ದೇಶ', 'ರಾಮನಿಂದ ರಾಷ್ಟ್ರ’ ದ ಕುರಿತು ಮಾತನಾಡಿದ್ದೆ.
ಸ್ನೇಹಿತರೇ, ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಸಂದರ್ಭವು ದೇಶದ ಕೋಟಿಗಟ್ಟಲೆ ಜನರನ್ನು ಒಂದುಗೂಡಿಸಿದಂತೆ ತೋರುತ್ತಿತ್ತು. ಎಲ್ಲರ ಭಾವನೆಗಳು ಒಂದೇ, ಎಲ್ಲರ ಭಕ್ತಿ ಒಂದೇ ಆಗಿತ್ತು, ಎಲ್ಲರ ಮಾತಿನಲ್ಲೂ ರಾಮ, ಎಲ್ಲರ ಹೃದಯದಲ್ಲೂ ರಾಮ ನೆಲೆಸಿದ್ದ. ಈ ಸಂದರ್ಭದಲ್ಲಿ ದೇಶದ ಅನೇಕ ಜನರು ರಾಮ ಭಜನೆಯನ್ನು ಹಾಡಿ, ಅದನ್ನು ಶ್ರೀರಾಮನ ಪಾದಕ್ಕೆ ಸಮರ್ಪಿಸಿದರು. ಜನವರಿ 22 ರ ಸಂಜೆ ಇಡೀ ದೇಶವು ರಾಮಜ್ಯೋತಿಯನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸಿತು. ಈ ಸಮಯದಲ್ಲಿ, ದೇಶವು ಸಾಮೂಹಿಕತೆಯ ಶಕ್ತಿಯನ್ನು ಮೆರೆಯಿತು. ಇದು ವಿಕಸಿತ ಭಾರತಕ್ಕಾಗಿ ನಾವು ಕೈಗೊಂಡ ಸಂಕಲ್ಪಗಳಿಗೆ ಆಧಾರವಾಗಿದೆ. ಮಕರ ಸಂಕ್ರಾಂತಿಯಿಂದ ಜನವರಿ 22ರವರೆಗೆ ಸ್ವಚ್ಛತಾ ಅಭಿಯಾನ ನಡೆಸುವಂತೆ ದೇಶದ ಜನತೆಗೆ ಮನವಿ ಮಾಡಿದ್ದೆ. ಲಕ್ಷಗಟ್ಟಲೆ ಜನರು ಭಕ್ತಿಯಿಂದ ಸೇರಿ ತಮ್ಮ ಪ್ರದೇಶದ ಧಾರ್ಮಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದ್ದು ನನಗೆ ಅತೀವ ಸಂತಸ ತಂದಿದೆ. ಬಹಳಷ್ಟು ಜನರು ನನಗೆ ಇದಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾರೆ - ಈ ಭಾವನೆ ನಿಲ್ಲಬಾರದು, ಈ ಅಭಿಯಾನ ಮುಂದುವರಿಯಬೇಕು. ಸಾಮೂಹಿಕತೆಯ ಈ ಶಕ್ತಿಯು ನಮ್ಮ ದೇಶವನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.
ನನ್ನ ಪ್ರಿಯ ದೇಶವಾಸಿಗಳೇ, ಈ ಬಾರಿ ಜನವರಿ 26 ರ ಪರೇಡ್ ತುಂಬಾ ಅದ್ಭುತವಾಗಿತ್ತು, ಆದರೆ ಕವಾಯತಿನಲ್ಲಿ ಮಹಿಳಾ ಶಕ್ತಿಯನ್ನು ನೋಡುವುದು ಹೆಚ್ಚು ಚರ್ಚೆಯ ವಿಷಯವಾಗಿತ್ತು, ಕರ್ತವ್ಯ ಪಥದಲ್ಲಿ ಕೇಂದ್ರ ಭದ್ರತಾ ಪಡೆ ಮತ್ತು ದೆಹಲಿ ಪೊಲೀಸ್ ಮಹಿಳಾ ತುಕಡಿಗಳು ಕವಾಯತು ಆರಂಭಿಸಿದಾಗ, ಎಲ್ಲರೂ ಹೆಮ್ಮೆಯಿಂದ ಬೀಗಿದರು. ಮಹಿಳಾ ವಾದ್ಯಮೇಳದ ಕವಾಯತು ನೋಡಿ, ಅವರ ಅಮೋಘ ಸಮನ್ವಯತೆ ಕಂಡು ದೇಶ-ವಿದೇಶದ ಜನರು ಪುಳಕಿತರಾದರು. ಈ ಬಾರಿ ಪರೇಡ್ನಲ್ಲಿ ಸಾಗಿದ 20 ಸ್ಕ್ವಾಡ್ಗಳಲ್ಲಿ 11 ಸ್ಕ್ವಾಡ್ಗಳು ಮಹಿಳೆಯರದ್ದೇ ಆಗಿದ್ದವು. ಸಾಗಿಬಂದ ಸ್ಥಬ್ಧ ಚಿತ್ರಗಳಲ್ಲಿಯೂ, ಎಲ್ಲಾ ವೇಷಧಾರಿಗಳು ಮಹಿಳೆಯರೇ ಆಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು ಒಂದೂವರೆ ಸಾವಿರ ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಅನೇಕ ಮಹಿಳಾ ಕಲಾವಿದರು ಶಂಖ, ನಾದಸ್ವರ ಮತ್ತು ನಾಗದಾ ದಂತಹ ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಡಿಆರ್ಡಿಒ ಬಿಡುಗಡೆ ಮಾಡಿದ ಟ್ಯಾಬ್ಲೋ ಕೂಡ ಎಲ್ಲರ ಗಮನ ಸೆಳೆಯಿತು. ನೀರು, ಭೂಮಿ, ಆಕಾಶ, ಸೈಬರ್ ಮತ್ತು ಬಾಹ್ಯಾಕಾಶ - ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ಶಕ್ತಿಯು ದೇಶವನ್ನು ಹೇಗೆ ರಕ್ಷಿಸುತ್ತಿದೆ ಎಂಬುದನ್ನು ಇದು ತೋರಿಸಿತ್ತು. 21ನೇ ಶತಮಾನದ ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ.
ಸ್ನೇಹಿತರೇ, ನೀವು ಕೆಲವು ದಿನಗಳ ಹಿಂದೆ ಅರ್ಜುನ್ ಪ್ರಶಸ್ತಿ ಸಮಾರಂಭವನ್ನು ನೋಡಿರಬಹುದು. ಇದರಲ್ಲಿ ದೇಶದ ಹಲವು ಭರವಸೆಯ ಕ್ರೀಡಾಪಟುಗಳನ್ನು ಹಾಗೂ ಅಥ್ಲೀಟ್ ಗಳನ್ನು ರಾಷ್ಟ್ರಪತಿ ಭವನದಲ್ಲಿ ಸನ್ಮಾನಿಸಲಾಯಿತು. ಇಲ್ಲಿಯೂ ಜನರ ಗಮನ ಸೆಳೆದದ್ದು ಅರ್ಜುನ್ ಪ್ರಶಸ್ತಿ ಪಡೆದ ಹೆಣ್ಣು ಮಕ್ಕಳು ಮತ್ತು ಅವರ ಜೀವನ ಪಯಣ. ಈ ಬಾರಿ 13 ಮಹಿಳಾ ಕ್ರೀಡಾಪಟುಗಳಿಗೆ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮಹಿಳಾ ಕ್ರೀಡಾಪಟುಗಳು ಅನೇಕ ದೊಡ್ಡ ಟೂರ್ನಿಗಳಲ್ಲಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ದೈಹಿಕ ಸವಾಲುಗಳು ಮತ್ತು ಆರ್ಥಿಕ ಸವಾಲುಗಳು ಈ ಧೈರ್ಯಶಾಲಿ ಮತ್ತು ಪ್ರತಿಭಾವಂತ ಆಟಗಾರರ ಮುಂದೆ ಸೋತು ಹೋದವು. ಬದಲಾಗುತ್ತಿರುವ ಭಾರತದಲ್ಲಿ, ನಮ್ಮ ಹೆಣ್ಣುಮಕ್ಕಳು ಮತ್ತು ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತಗಳನ್ನು ಸಾಧಿಸುತ್ತಿದ್ದಾರೆ. ಮಹಿಳೆಯರು ತಮ್ಮ ಛಾಪು ಮೂಡಿಸಿದ ಇನ್ನೊಂದು ಕ್ಷೇತ್ರವಿದೆ, ಅದೇ ಸ್ವಸಹಾಯ ಗುಂಪುಗಳು. ಇಂದು ದೇಶದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಂಖ್ಯೆಯೂ ಹೆಚ್ಚಿದ್ದು, ಅವರ ಕಾರ್ಯವ್ಯಾಪ್ತಿಯೂ ಸಾಕಷ್ಟು ವಿಸ್ತಾರಗೊಂಡಿದೆ. ಪ್ರತಿ ಹಳ್ಳಿಯ ಹೊಲಗಳಲ್ಲಿ ಡ್ರೋನ್ಗಳ ನೆರವಿನಿಂದ ಕೃಷಿಗೆ ಸಹಾಯ ಮಾಡುವ ನಮೋ ಡ್ರೋನ್ ದೀದಿಗಳನ್ನು ನೀವು ನೋಡುವ ದಿನ ದೂರವಿಲ್ಲ. ಉತ್ತರಪ್ರದೇಶದ ಬಹರಾಯಿಚ್ನಲ್ಲಿ ಸ್ಥಳೀಯ ಪದಾರ್ಥಗಳನ್ನು ಬಳಸಿ ಮಹಿಳೆಯರು ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ತಯಾರಿಸುತ್ತಿರುವುದರ ಬಗ್ಗೆ ನನಗೆ ತಿಳಿದು ಬಂದಿದೆ. ನಿಬಿಯಾ ಬೇಗಂಪುರ ಗ್ರಾಮದ ಸ್ವಸಹಾಯ ಸಂಘಗಳ ಜೊತೆಗೂಡಿದ ಮಹಿಳೆಯರು ಹಸುವಿನ ಸಗಣಿ, ಬೇವಿನ ಸೊಪ್ಪು ಹಾಗೂ ಹಲವು ಬಗೆಯ ಔಷಧೀಯ ಸಸ್ಯಗಳನ್ನು ಬೆರೆಸಿ ಜೈವಿಕ ಗೊಬ್ಬರ ತಯಾರಿಸುತ್ತಿದ್ದಾರೆ. ಅದೇ ರೀತಿ ಈ ಮಹಿಳೆಯರು ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಪೇಸ್ಟ್ ನಿಂದ ಸಾವಯವ ಕೀಟನಾಶಕವನ್ನು ಸಿದ್ಧಪಡಿಸುತ್ತಾರೆ. ಈ ಮಹಿಳೆಯರು ಒಗ್ಗೂಡಿ ‘ಉನ್ನತಿ ಜೈವಿಕ ಘಟಕ’ ಎಂಬ ಸಂಸ್ಥೆಯನ್ನು ರಚಿಸಿದ್ದಾರೆ. ಈ ಸಂಸ್ಥೆಯು ಈ ಮಹಿಳೆಯರಿಗೆ ಜೈವಿಕ ಉತ್ಪನ್ನಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಇವರು ತಯಾರಿಸುವ ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಇಂದು ಸಮೀಪದ ಗ್ರಾಮಗಳ 6 ಸಾವಿರಕ್ಕೂ ಹೆಚ್ಚು ರೈತರು ಇವರಿಂದ ಜೈವಿಕ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಸ್ವಸಹಾಯ ಸಂಘಗಳಿಗೆ ಸೇರಿದ ಈ ಮಹಿಳೆಯರ ಆದಾಯ ವೃದ್ಧಿಸಿದ್ದು, ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ.
ನನ್ನ ಪ್ರಿಯ ದೇಶವಾಸಿಗಳೇ, ಸಮಾಜ ಮತ್ತು ದೇಶವನ್ನು ಬಲಪಡಿಸಲು ನಿಸ್ವಾರ್ಥವಾಗಿ ದುಡಿಯುತ್ತಿರುವ ಇಂತಹ ದೇಶವಾಸಿಗಳ ಪ್ರಯತ್ನಗಳನ್ನು 'ಮನದ ಮಾತಿನಲ್ಲಿ' ನಾವು ಬೆಳಕಿಗೆ ತರುತ್ತೇವೆ. ಹೀಗೆ ಮೂರು ದಿನಗಳ ಹಿಂದೆ ದೇಶದ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದಾಗ ‘ಮನದ ಮಾತಿನಲ್ಲಿ’ ಇಂಥವರ ಬಗ್ಗೆ ಚರ್ಚೆ ಮಾಡುವುದು ಸಹಜ. ಮೂಲ ಹಂತದಿಂದ ಜನರೊಂದಿಗೆ ಬೆರೆಯುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಶ್ರಮಿಸಿದ ಹಲವಾರು ದೇಶವಾಸಿಗಳಿಗೆ ಈ ಬಾರಿಯೂ ಪದ್ಮ ಪ್ರಶಸ್ತಿ ನೀಡಲಾಗಿದೆ. ಈ ಸ್ಪೂರ್ತಿದಾಯಕ ಜನರ ಜೀವನ ಪಯಣದ ಬಗ್ಗೆ ತಿಳಿದುಕೊಳ್ಳಲು ದೇಶಾದ್ಯಂತ ಸಾಕಷ್ಟು ಕುತೂಹಲ ಕಂಡು ಬಂದಿದೆ. ಮಾಧ್ಯಮದ ಮುಖ್ಯಾಂಶಗಳಿಂದ ದೂರವಿದ್ದು, ಪತ್ರಿಕೆಗಳ ಮುಖಪುಟಗಳಿಂದ ದೂರ ಉಳಿದ ಈ ಜನ ಯಾವುದೇ ಆಡಂಬರವಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಾವು ಈ ಹಿಂದೆ ಈ ಜನರ ಬಗ್ಗೆ ಏನನ್ನೂ ನೋಡಿಲ್ಲ ಅಥವಾ ಕೇಳಿಲ್ಲ, ಆದರೆ ಈಗ ಪದ್ಮ ಪ್ರಶಸ್ತಿ ಘೋಷಣೆಯಾದ ನಂತರ ಎಲ್ಲೆಡೆ ಇಂಥವರ ಬಗ್ಗೆ ಚರ್ಚೆಯಾಗುತ್ತಿದ್ದು, ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನ ಕಾತರರಾಗಿರುವುದು ನನಗೆ ಸಂತೋಷ ತಂದಿದೆ. ಈ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಹೆಚ್ಚಿನವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಿಷ್ಟ ಕೆಲಸ ಮಾಡುತ್ತಿದ್ದಾರೆ. ಯಾರೋ ಆಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಿದ್ದರೆ, ಮತ್ತಾರೋ ನಿರ್ಗತಿಕರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಕೆಲವರು ಸಾವಿರಾರು ಗಿಡಗಳನ್ನು ನೆಟ್ಟು ಪ್ರಕೃತಿ ಸಂರಕ್ಷಣೆಯ ಪ್ರಯತ್ನದಲ್ಲಿ ತೊಡಗಿದ್ದಾರೆ. 650ಕ್ಕೂ ಹೆಚ್ಚು ಭತ್ತದ ತಳಿಗಳ ಸಂರಕ್ಷಣೆಗೆ ಶ್ರಮಿಸಿದವರೂ ಇದ್ದಾರೆ. ಮಾದಕ ವ್ಯಸನ, ಮದ್ಯ ಸೇವನೆಯ ತಡೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವವರೂ ಇದ್ದಾರೆ. ಅನೇಕ ಜನರು ಸ್ವಸಹಾಯ ಗುಂಪುಗಳೊಂದಿಗೆ, ವಿಶೇಷವಾಗಿ ನಾರಿ ಶಕ್ತಿ ಅಭಿಯಾನದೊಂದಿಗೆ ಜನರನ್ನು ಒಗ್ಗೂಡಿಸುವಲ್ಲಿ ತೊಡಗಿದ್ದಾರೆ. ಈ ಗೌರವಕ್ಕೆ ಪಾತ್ರರಾದವರಲ್ಲಿ 30 ಮಂದಿ ಮಹಿಳೆಯರೇ ಆಗಿರುವ ಬಗ್ಗೆ ದೇಶವಾಸಿಗಳೂ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮಹಿಳೆಯರು ಮೂಲ ಹಂತದಿಂದ ತಮ್ಮ ಕೆಲಸ ಮಾಡುವ ಮೂಲಕ ಸಮಾಜ ಮತ್ತು ದೇಶವನ್ನು ಮುನ್ನಡೆಸುತ್ತಿದ್ದಾರೆ.
ಸ್ನೇಹಿತರೇ, ಪದ್ಮ ಪ್ರಶಸ್ತಿ ಪುರಸ್ಕೃತ ಪ್ರತಿಯೊಬ್ಬರ ಕೊಡುಗೆಯು ದೇಶವಾಸಿಗಳಿಗೆ ಸ್ಪೂರ್ತಿದಾಯಕವಾಗಿದೆ. ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ, ರಂಗಭೂಮಿ, ಭಜನೆ ಲೋಕದಲ್ಲಿ ದೇಶಕ್ಕೆ ಕೀರ್ತಿ ತರುತ್ತಿರುವವರು ಈ ಬಾರಿ ಸನ್ಮಾನ ಸ್ವೀಕರಿಸಿದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಾಕೃತ, ಮಾಳವಿ, ಲಂಬಾಡಿ ಭಾಷೆಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದವರಿಗೂ ಈ ಗೌರವ ನೀಡಲಾಗಿದೆ. ಅನೇಕ ವಿದೇಶೀಯರೂ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಕಾರ್ಯಗಳಿಂದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಹೊಸ ಉತ್ತುಂಗಕ್ಕೇರಿದೆ. ಇವರಲ್ಲಿ ಫ್ರಾನ್ಸ್, ತೈವಾನ್, ಮೆಕ್ಸಿಕೋ ಮತ್ತು ಬಾಂಗ್ಲಾದೇಶದ ನಾಗರಿಕರೂ ಸೇರಿದ್ದಾರೆ.
ಸ್ನೇಹಿತರೇ, ಕಳೆದ ದಶಕದಲ್ಲಿ ಪದ್ಮ ಪ್ರಶಸ್ತಿಗಳ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿರುವುದು ನನಗೆ ತುಂಬಾ ಸಂತಸ ತಂದಿದೆ. ಈಗ ಇದು ಪೀಪಲ್ಸ್ ಪದ್ಮವಾಗಿ ಮಾರ್ಪಡಾಗಿದೆ.ಪದ್ಮ ಪ್ರಶಸ್ತಿ ನೀಡುವ ವ್ಯವಸ್ಥೆಯಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಈಗ ಜನರು ಸ್ವತಃ ನಾಮನಿರ್ದೇಶನ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ 2014ಕ್ಕೆ ಹೋಲಿಸಿದಲ್ಲಿ ಈ ಬಾರಿ 28 ಪಟ್ಟು ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಪದ್ಮ ಪ್ರಶಸ್ತಿಯ ಘನತೆ, ಅದರ ವಿಶ್ವಾಸಾರ್ಹತೆ ಮತ್ತು ಗೌರವವು ಪ್ರತಿ ವರ್ಷವೂ ಹೆಚ್ಚುತ್ತಿದೆ ಎಂಬುದನ್ನು ಇದರಿಂದ ತಿಳಿಯುತ್ತದೆ. ಪದ್ಮ ಪ್ರಶಸ್ತಿ ಪಡೆದ ಎಲ್ಲರಿಗೂ ಮತ್ತೊಮ್ಮೆ ನನ್ನ ಶುಭಾಶಯ ಕೋರುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ಪ್ರತಿ ಜೀವನಕ್ಕೂ ಒಂದು ಗುರಿ ಇರುತ್ತದೆ, ಪ್ರತಿಯೊಬ್ಬರೂ ಗುರಿಯನ್ನು ಪೂರೈಸಲು ಹುಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಜನರು ಸಂಪೂರ್ಣ ನಿಷ್ಠೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಕೆಲವರು ಸಮಾಜ ಸೇವೆಯ ಮೂಲಕ, ಕೆಲವರು ಸೈನ್ಯಕ್ಕೆ ಸೇರುವ ಮೂಲಕ, ಕೆಲವರು ಮುಂದಿನ ಪೀಳಿಗೆಗೆ ವಿದ್ಯಾದಾನ ಮಾಡುವ ಮೂಲಕ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಾವು ಕಂಡಿದ್ದೇವೆ. ಆದರೆ ಸ್ನೇಹಿತರೇ, ಕೆಲವು ಜನರು ಜೀವನದ ಅಂತ್ಯದ ನಂತರವೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವವರು ನಮ್ಮ ಮಧ್ಯೆ ಇದ್ದಾರೆ. ಅಂಗಾಂಗ ದಾನದ ಮೂಲಕ ಅವರು ಈ ಕೆಲಸ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನರು ತಮ್ಮ ಸಾವಿನ ನಂತರ ತಮ್ಮ ಅಂಗಗಳನ್ನು ದಾನ ಮಾಡಿದರಿದ್ದಾರೆ. ಈ ನಿರ್ಧಾರವು ಸುಲಭವಲ್ಲ, ಆದರೆ ಈ ನಿರ್ಧಾರವು ಅನೇಕ ಜೀವಗಳನ್ನು ಉಳಿಸಲಿದೆ. ತಮ್ಮ ಪ್ರೀತಿಪಾತ್ರರ ಕೊನೆಯ ಆಸೆಗಳನ್ನು ಗೌರವಿಸಿದ ಕುಟುಂಬಗಳನ್ನು ಕೂಡ ನಾನು ಪ್ರಶಂಸಿಸುತ್ತೇನೆ. ಇಂದು, ದೇಶದ ಅನೇಕ ಸಂಸ್ಥೆಗಳು ಸಹ ಈ ದಿಸೆಯಲ್ಲಿ ಬಹಳ ಸ್ಪೂರ್ತಿದಾಯಕ ಪ್ರಯತ್ನಗಳನ್ನು ಮಾಡುತ್ತಿವೆ. ಕೆಲವು ಸಂಸ್ಥೆಗಳು ಅಂಗಾಂಗ ದಾನದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿವೆ, ಕೆಲವು ಸಂಸ್ಥೆಗಳು ಅಂಗಾಂಗ ದಾನ ಮಾಡಲು ಇಚ್ಛಿಸುವವರು ನೋಂದಾಯಿಸಿಕೊಳ್ಳಲು ಸಹಾಯ ಮಾಡುತ್ತಿವೆ. ಇಂತಹ ಪ್ರಯತ್ನಗಳಿಂದಾಗಿ ದೇಶದಲ್ಲಿ ಅಂಗಾಂಗ ದಾನದತ್ತ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದ್ದು, ಜನರ ಪ್ರಾಣರಕ್ಷಣೆಯೂ ಆಗುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ರೋಗಿಗಳ ಜೀವನವನ್ನು ಸುಲಭವಾಗಿಸುವ, ಅವರ ತೊಂದರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವಂತಹ ಭಾರತದ ಸಾಧನೆಯೊಂದನ್ನು ಈಗ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಚಿಕಿತ್ಸೆಗಾಗಿ ಆಯುರ್ವೇದ, ಸಿದ್ಧ, ಅಥವಾ ಯುನಾನಿ ವೈದ್ಯಪದ್ಧತಿಯಿಂದ ಸಹಾಯ ದೊರೆಯುತ್ತಿರುವ ಹಲವರು ನಮ್ಮ ನಡುವೆ ಇರಬಹುದು. ಆದರೆ, ಇಂತಹ ರೋಗಿಗಳು ಇದೇ ಪದ್ಧತಿಯ ಬೇರೊಂದು ವೈದ್ಯರ ಬಳಿಗೆ ಹೋದಾಗ ಅವರಿಗೆ ಸಮಸ್ಯೆ ಎದುರಾಗುತ್ತದೆ. ಈ ಚಿಕಿತ್ಸಾ ಪದ್ಧತಿಗಳಲ್ಲಿ ರೋಗದ ಹೆಸರು, ಚಿಕಿತ್ಸೆ ಮತ್ತು ಔಷಧಗಳಿಗಾಗಿ ಒಂದೇ ರೀತಿಯ ಭಾಷೆಯ ಉಪಯೋಗ ಇರುವುದಿಲ್ಲ. ಪ್ರತಿ ಚಿಕಿತ್ಸಕರು ತಮ್ಮದೇ ರೀತಿಯಲ್ಲಿ ರೋಗದ ಹೆಸರು ಮತ್ತು ಚಿಕಿತ್ಸೆಯ ವಿಧಿ-ವಿಧಾನಗಳನ್ನು ಬರೆಯುತ್ತಾರೆ. ಇದರಿಂದಾಗಿ ಬೇರೊಬ್ಬ ಚಿಕಿತ್ಸಕರಿಗೆ ಅರ್ಥ ಮಾಡಿಕೊಳ್ಳಲು ಕೆಲವೊಮ್ಮೆ ಕಷ್ಟವಾಗುತ್ತದೆ. ದಶಕಗಳಿಂದ ನಡೆಯುತ್ತಲೇ ಬಂದಿರುವ ಈ ಸಮಸ್ಯೆಗೆ ಕೂಡಾ ಈಗ ಪರಿಹಾರ ಅನ್ವೇಷಿಸಲಾಗಿದೆ. ಆಯುಷ್ ಸಚಿವಾಲಯವು ಆಯುರ್ವೇದ, ಸಿದ್ಧ ಮತ್ತು ಯುನಾನಿ ಚಿಕಿತ್ಸೆಗೆ ಸಂಬಂಧಿಸಿದ ದತ್ತಾಂಶ ಮತ್ತು ಪರಿಭಾಷೆಯನ್ನು ವರ್ಗೀಕರಿಸಿದ್ದು, ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಸಹಾಯ ಮಾಡಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಇವರಿಬ್ಬರ ಪ್ರಯತ್ನದಿಂದಾಗಿ, ಆಯುರ್ವೇದ, ಯುನಾನಿ ಮತ್ತು ಸಿದ್ಧ್ ಚಿಕಿತ್ಸೆಗಳಲ್ಲಿ ರೋಗ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಪರಿಭಾಷೆಯನ್ನು ಕೋಡಿಂಗ್ ಮಾಡಲಾಗಿದೆ. ಈ ಕೋಡಿಂಗ್ ನೆರವಿನಿಂದ ಈಗ ಎಲ್ಲಾ ವೈದ್ಯರು ಪ್ರಿಸ್ಕ್ರಿಪ್ಷನ್ ಅಥವಾ ತಮ್ಮ ಸೂಚನಾ ಚೀಟಿಯಲ್ಲಿ ಒಂದೇ ರೀತಿಯ ಭಾಷೆ ಬರೆಯುತ್ತಾರೆ. ಇದರಿಂದ ಒಂದು ಪ್ರಯೋಜನವೆಂದರೆ, ನೀವು ಆ ಚೀಟಿಯನ್ನು ತೆಗೆದುಕೊಂಡು ಬೇರೊಬ್ಬ ವೈದ್ಯರ ಬಳಿಗೆ ಹೋದಲ್ಲಿ, ವೈದ್ಯರಿಗೆ ಇದರ ಸಂಪೂರ್ಣ ಮಾಹಿತಿ ಆ ಚೀಟಿಯಲ್ಲಿಯೇ ದೊರೆಯುತ್ತದೆ. ನಿಮ್ಮ ಕಾಯಿಲೆ, ಚಿಕಿತ್ಸೆ, ಯಾವ ಯಾವ ಔಷಧವನ್ನು ನಿಮಗೆ ನೀಡಲಾಗುತ್ತಿದೆ, ಎಂದಿನಿಂದ ನಿಮಗೆ ಚಿಕಿತ್ಸೆ ನೀಡಲಾಗುತ್ತಿದೆ, ನಿಮಗೆ ಯಾವ ಪದಾರ್ಥಗಳಿಂದ ಅಲರ್ಜಿಯಾಗುತ್ತದೆ, ಇತ್ಯಾದಿಗಳನ್ನೆಲ್ಲಾ ತಿಳಿದುಕೊಳ್ಳಲು ಆ ಚೀಟಿಯಿಂದ ಸಹಾಯ ದೊರೆಯುತ್ತದೆ. ಇದರ ಮತ್ತೊಂದು ಪ್ರಯೋಜನವು ಸಂಶೋಧನೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಿಗೆ ದೊರೆಯುತ್ತದೆ. ಇತರ ದೇಶಗಳ ವಿಜ್ಞಾನಿಗಳಿಗೆ ಕೂಡಾ ರೋಗ, ಔಷಧ ಮತ್ತು ಅದರ ಪ್ರಭಾವದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಸಂಶೋಧನೆ ಹೆಚ್ಚಾದಂತೆಲ್ಲಾ ಮತ್ತು ಹಲವು ವಿಜ್ಞಾನಿಗಳೊಂದಿಗೆ ಕೈಜೋಡಿಸುವುದರಿಂದ ಈ ಚಿಕಿತ್ಸಾ ಪದ್ಧತಿ ಮತ್ತಷ್ಟು ಉತ್ತಮ ಫಲಿತಾಂಶ ನೀಡುತ್ತದೆ ಮತ್ತು ಜನರಿಗೆ ಇವುಗಳ ಬಗ್ಗೆ ಒಲವು ಹೆಚ್ಚಾಗುತ್ತದೆ. ಈ ಆಯುಷ್ ಪದ್ಧತಿಗಳಲ್ಲಿ ತೊಡಗಿಕೊಂಡಿರುವ ನಮ್ಮ ಚಿಕಿತ್ಸಕರು, ಈ ಕೋಡಿಂಗ್ ಅನ್ನು ಶೀಘ್ರದಲ್ಲೇ ಅಳವಡಿಸಿಕೊಳ್ಳುತ್ತಾರೆಂಬ ನಂಬಿಕೆ ನನಗಿದೆ.
ನನ್ನ ಸ್ನೇಹಿತರೇ, ನಾನು ಆಯುಷ್ ಚಿಕಿತ್ಸಾ ಪದ್ಧತಿಯ ಬಗ್ಗೆ ಮಾತನಾಡುತ್ತಿರುವಾಗ, ಯಾನುಂಗ್ ಜಾಮೋಹ್ ಲೈಂಗೋ ಅವರ ಚಿತ್ರ ನನ್ನ ಕಣ್ಣಮುಂದೆ ಬರುತ್ತಿದೆ. ಶ್ರೀಮತಿ ಯಾನುಂಗ್ ಅವರು ಅರುಣಾಚಲ ಪ್ರದೇಶದ ನಿವಾಸಿಯಾಗಿದ್ದಾರೆ ಮತ್ತು ಗಿಡಮೂಲಿಕೆಗಳ ಔಷಧೀಯ ತಜ್ಞೆಯಾಗಿದ್ದಾರೆ. ಇವರು ಆದಿವಾಸಿ ಬುಡಕಟ್ಟಿನ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಕೊಡುಗೆಗಾಗಿ ಅವರಿಗೆ ಈ ಬಾರಿ ಪದ್ಮ ಪ್ರಶಸ್ತಿಯನ್ನು ಕೂಡಾ ಪ್ರದಾನ ಮಾಡಲಾಗಿದೆ. ಅದೇ ರೀತಿ ಈ ಬಾರಿ ಚತ್ತೀಸ್ ಗಢದ ಹೇಮಚಂದ್ ಮಾಂಜೀ ಅವರಿಗೆ ಕೂಡಾ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ವೈದ್ಯರಾಜ್ ಹೇಮಚಂದ್ ಮಾಂಜೀ ಅವರೂ ಕೂಡಾ ಆಯುಶ್ ಚಿಕಿತ್ಸಾ ಪದ್ಧತಿಯ ಸಹಾಯದಿಂದ ಜನರಿಗೆ ಚಿಕಿತ್ಸೆ ನೀಡುತ್ತಾರೆ. ಛತ್ತೀಸ್ ಗಢ್ ನ ನಾರಾಯಣಪುರದಲ್ಲಿ ಬಡ ರೋಗಿಗಳಿಗೆ ಅವರು ಸುಮಾರು ಐದು ದಶಕಗಳಿಗಿಂತ ಹೆಚ್ಚು ಕಾಲದಿಂದ ಚಿಕಿತ್ಸೆ ಸೇವೆ ಒದಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಆಯುರ್ವೇದ ಮತ್ತು ಗಿಡಮೂಲಿಕೆಗಳ ಔಷಧಗಳ ಖಜಾನೆಯೇ ಅಡಗಿದೆ, ಅವುಗಳ ಸಂರಕ್ಷಣೆಯಲ್ಲಿ ಶ್ರೀಮತಿ ಯಾನುಂಗ್ ಮತ್ತು ಹೇಮಚಂದ್ ಅವರುಗಳಂತಹ ಜನರ ಬಹು ದೊಡ್ಡ ಪಾತ್ರವಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತಿನ’ ಮೂಲಕ ನಮ್ಮ ನಿಮ್ಮ ನಡುವೆ ಏರ್ಪಟ್ಟಿರುವ ಈ ಬಾಂಧವ್ಯ ಒಂದು ದಶಕದಷ್ಟು ಹಳೆಯದಾಗಿದೆ. ಸೋಷಿಯಲ್ ಮೀಡಿಯಾ ಮತ್ತು ಅಂತರ್ಜಾಲದ ಈ ಯುಗದಲ್ಲಿ ಕೂಡಾ ಇಡೀ ದೇಶವನ್ನು ಸಂಪರ್ಕಿಸುವ ಒಂದು ಪ್ರಬಲ ಮಾಧ್ಯಮ ರೇಡಿಯೋ ಆಗಿದೆ. ರೇಡಿಯೋದ ಈ ಶಕ್ತಿ ಎಷ್ಟು ಬದಲಾವಣೆ ತರಲು ಸಾಧ್ಯ ಎನ್ನುವುದಕ್ಕೆ ಒಂದು ವಿಶಿಷ್ಠ ಉದಾಹರಣೆ ಛತ್ತೀಸ್ ಗಢ್ ನಲ್ಲಿ ಕಾಣಸಿಗುತ್ತಿದೆ. ಕಳೆದ ಸುಮಾರು 7 ವರ್ಷಗಳಿಂದ ಇಲ್ಲಿನ ರೇಡಿಯೋದಲ್ಲಿ ಒಂದು ಜನಪ್ರಿಯ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಇದರ ಹೆಸರು ‘ಹಮರ್ ಹಾಥೀ – ಹಮರ್ ಗೋಠ್’ ಎಂಬುದಾಗಿದೆ. ಹೆಸರು ಕೇಳುತ್ತಿದ್ದಂತೆಯೇ ರೇಡಿಯೋ ಮತ್ತು ಆನೆಯ ನಡುವೆ ಇದೆಂತಹ ಕನೆಕ್ಷನ್ ಎಂದು ನಿಮಗೆ ಅನಿಸಬಹುದು. ಆದರೆ ರೇಡಿಯೋದ ವಿಶೇಷತೆ. ಛತ್ತೀಸ್ ಗಡ್ ನಲ್ಲಿ ಆಕಾಶವಾಣಿಯ ಅಂಬಿಕಾಪುರ, ರಾಯ್ ಪುರ, ಬಿಲಾಸ್ ಪುರ, ಮತ್ತು ರಾಯಗಢ್ ಈ ನಾಲ್ಕು ಕೇಂದ್ರಗಳಿಂದ ಪ್ರತಿದಿನ ಸಂಜೆ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ ಮತ್ತು ಛತ್ತೀಸ್ ಗಢ್ ನ ಅರಣ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಿರುವ ಜನರು ಬಹಳ ಗಮನವಿಟ್ಟು ಈ ಕಾರ್ಯಕ್ರಮ ಆಲಿಸುತ್ತಾರೆಂದು ತಿಳಿದರೆ ನಿಮಗೆ ಆಶ್ಚರ್ಯವೆನಿಸಬಹುದು. ಆನೆಗಳ ಹಿಂಡು ಅರಣ್ಯದ ಯಾವ ಪ್ರದೇಶದಲ್ಲಿ ಓಡಾಡುತ್ತಿದೆ ಎಂಬ ಮಾಹಿತಿಯನ್ನು ‘ಹಮರ್ ಹಾಥೀ – ಹಮರ್ ಗೋಠ್’ ಕಾರ್ಯಕ್ರಮದಲ್ಲಿ ಹೇಳಲಾಗುತ್ತದೆ. ಈ ಮಾಹಿತಿಯಿಂದ ಇಲ್ಲಿನ ಜನರಿಗೆ ಬಹಳ ಉಪಯೋಗವಾಗುತ್ತದೆ. ರೇಡಿಯೋದಿಂದ ಆನೆಗಳ ಹಿಂಡು ಬರುತ್ತಿರುವ ಮಾಹಿತಿ ದೊರೆಯುತ್ತಿದ್ದಂತೆಯೇ ಅವರು ಜಾಗರೂಕರಾಗುತ್ತಾರೆ. ಯಾವ ಮಾರ್ಗದಲ್ಲಿ ಆನೆಗಳು ಸಂಚರಿಸುತ್ತವೆಯೋ, ಆ ಮಾರ್ಗದಲ್ಲಿ ಹೋಗುವ ಅಪಾಯ ತಪ್ಪುತ್ತದೆ. ಒಂದೆಡೆ ಇದು ಆನೆಗಳ ಹಿಂಡಿನಿಂದ ಸಂಭವಿಸಬಹುದಾದ ನಷ್ಟದ ಸಾಧ್ಯತೆಯನ್ನು ಕಡಿಮೆ ಮಾಡಿದರೆ ಮತ್ತೊಂದೆಡೆ ಆನೆಗಳ ಕುರಿತ ದತ್ತಾಂಶ ಸಂಗ್ರಹಣೆಗೆ ಸಹಾಯ ದೊರೆಯುತ್ತದೆ. ಈ ದತ್ತಾಂಶದ ಉಪಯೋಗದಿಂದ ಭವಿಷ್ಯದಲ್ಲಿ ಆನೆಗಳ ಸಂರಕ್ಷಣೆಯಲ್ಲಿ ಕೂಡಾ ನೆರವು ದೊರೆಯುತ್ತದೆ. ಇಲ್ಲಿ ಆನೆಗಳ ಹಿಂಡಿನ ಕುರಿತ ಮಾಹಿತಿಯು ಸೋಷಿಯಲ್ ಮೀಡಿಯಾದ ಮೂಲಕ ಕೂಡಾ ಜನರಿಗೆ ತಲುಪಿಸಲಾಗುತ್ತಿದೆ. ಇದರಿಂದಾಗಿ ಅರಣ್ಯದ ಸುತ್ತಮುತ್ತ ವಾಸಿಸುವ ಜನರಿಗೆ ಆನೆಗಳೊಂದಿಗೆ ಸಾಮರಸ್ಯದಿಂದ ಇರುವುದು ಕೂಡಾ ಸುಲಭವಾಗಿದೆ. ಛತ್ತೀಸ್ ಗಢದ ಈ ವಿಶಿಷ್ಠ ಉಪಕ್ರಮ ಮತ್ತು ಇದರ ಅನುಭವಗಳ ಪ್ರಯೋಜನವು ದೇಶದ ಇತರ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ಕೂಡಾ ಪಡೆದುಕೊಳ್ಳಬಹುದಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇದೇ ಜನವರಿ 25 ರಂದು ನಾವೆಲ್ಲರೂ ರಾಷ್ಟ್ರೀಯ ಮತದಾನ ದಿನವನ್ನು ಆಚರಿಸಿದ್ದೇವೆ. ಇದು ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಒಂದು ಮಹತ್ವದ ದಿನವಾಗಿದೆ. ಇಂದು ದೇಶದಲ್ಲಿ ಸುಮಾರು 96 ಕೋಟಿ ಮತದಾರರಿದ್ದಾರೆ. ಈ ಅಂಕಿಅಂಶ ಎಷ್ಟು ದೊಡ್ಡದೆಂದು ನಿಮಗೆ ತಿಳಿದಿದೆಯೇ? ಇದು ಅಮೆರಿಕಾ ದೇಶದ ಒಟ್ಟು ಜನಸಂಖ್ಯೆಗಿಂತಲೂ ಸುಮಾರು ಮೂರು ಪಟ್ಟು ಹೆಚ್ಚು. ಇದು ಇಡೀ ಯೂರೋಪ್ ನ ಒಟ್ಟು ಜನಸಂಖ್ಯೆಗಿಂತಲೂ ಸುಮಾರು ಒಂದೂವರೆ ಪಟ್ಟು ಹೆಚ್ಚು. ಮತದಾನ ಕೇಂದ್ರಗಳ ಬಗ್ಗೆ ಹೇಳುವುದಾದರೆ, ದೇಶದಲ್ಲಿ ಇಂದು ಇವುಗಳ ಸಂಖ್ಯೆ ಸುಮಾರು ಹತ್ತೂವರೆ ಲಕ್ಷ. ಭಾರತದ ಪ್ರತಿಯೊಬ್ಬ ನಾಗರಿಕನೂ ಪ್ರಜಾಪ್ರಭುತ್ವದ ತಮ್ಮ ಹಕ್ಕಿನ ಪ್ರಯೋಜನ ಪಡೆಯುವಂತಾಗಬೇಕು, ಇದಕ್ಕಾಗಿ ನಮ್ಮ ಚುನಾವಣಾ ಆಯೋಗವು ಕೇವಲ ಓರ್ವ ಮತದಾನ ಇರುವಂತಹ ಸ್ಥಳಗಳಲ್ಲಿ ಕೂಡಾ ಮತಕೇಂದ್ರಗಳನ್ನು ಸ್ಥಾಪಿಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವ ಚುನಾವಣಾ ಆಯೋಗವನ್ನು ನಾನು ಪ್ರಶಂಸಿಸುತ್ತೇನೆ.
ಸ್ನೇಹಿತರೇ, ಇಂದು ಜಗತ್ತಿನ ಹಲವು ದೇಶಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕಡಿಮೆಯಾಗುತ್ತಿದ್ದರೆ, ಭಾರತದಲ್ಲಿ ಮತದಾನದ ಶೇಕಡಾವಾರು ಹೆಚ್ಚಾಗುತ್ತಿರುವುದು ದೇಶಕ್ಕೆ ಸಂತಸದ ಸಂಗತಿಯೂ ಹೌದು. 1951-52 ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆದಾಗ, ಸುಮಾರು ಶೇಕಡಾ 45 ರಷ್ಟು ಮತದಾರರು ಮಾತ್ರಾ ಮತ ಚಲಾಯಿಸಿದ್ದರು. ಈಗ ಈ ಅಂಕಿ ಅಂಶ ಸಾಕಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ಕೇವಲ ಮತದಾರರ ಸಂಖ್ಯೆಯಲ್ಲಿ ಮಾತ್ರವೇ ಹೆಚ್ಚಳವಾಗಿಲ್ಲ, ಮತ ಚಲಾಯಿಸುವವರ ಸಂಖ್ಯೆಯಲ್ಲಿ ಕೂಡಾ ಹೆಚ್ಚಳವಾಗಿದೆ. ನಮ್ಮ ಯುವ ಮತದಾರರಿಗೆ ನೋಂದಾಯಿಸಿಕೊಳ್ಳಲು ಹೆಚ್ಚಿನ ಅವಕಾಶ ದೊರೆಯಬೇಕೆಂದು ಸರ್ಕಾರವು ಕಾನೂನಿನಲ್ಲಿ ಕೂಡಾ ಬದಲಾವಣೆ ತಂದಿದೆ. ಮತದಾರರಲ್ಲಿ ಜಾಗೃತಿ ಹೆಚ್ಚಿಸುವುದಕ್ಕಾಗಿ ಸಮುದಾಯ ಹಂತದಲ್ಲಿ ಕೂಡಾ ಪ್ರಯತ್ನಗಳು ನಡೆಯುತ್ತಿರುವುದನ್ನು ನೋಡಿ ಹರ್ಷವೆನಿಸುತ್ತದೆ. ಅನೇಕರು ಮನೆ ಮನೆಗಳಿಗೆ ತೆರಳಿ ಮತದಾರರಿಗೆ ಮತದಾನ ಕುರಿತು ಹೇಳುತ್ತಿದ್ದಾರೆ, ಕೆಲವು ಕಡೆ ಪೈಂಟಿಂಗ್ ಗಳನ್ನು ಸಿದ್ಧಪಡಿಸಿ, ಕೆಲವು ಬೀದಿ ನಾಟಕಗಳ ಮೂಲಕ ಯುವಜನತೆಯನ್ನು ಆಕರ್ಷಿಸುತ್ತಿದ್ದಾರೆ. ಇಂತಹ ಪ್ರತಿ ಪ್ರಯತ್ನ, ನಮ್ಮ ಪ್ರಜಾಪ್ರಭುತ್ವದ ಹಬ್ಬದಲ್ಲಿ, ಹಲವು ಬಣ್ಣಗಳನ್ನು ತುಂಬುತ್ತಿದೆ. ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಖಂಡಿತವಾಗಿಯೂ ಸೇರಿಸಿ ಎಂದು ನಾನು ‘ಮನದ ಮಾತಿನ’ ಮೂಲಕ, ನಮ್ಮ ಫಸ್ಟ್ ಟೈಮ್ ವೋಟರ್ಸ್ ಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಹೇಳಲು ಬಯಸುತ್ತೇನೆ. ರಾಷ್ಟ್ರೀಯ ಮತದಾರ ಸೇವಾ ಪೋರ್ಟಲ್ (National voter service portal) ಮತ್ತು voter Helpline app ಮೂಲಕ ಇದನ್ನು ಸುಲಭವಾಗಿ ಆನ್ಲೈನ್ ನಲ್ಲಿ ಪೂರ್ಣಗೊಳಿಸಬಹುದು. ನಿಮ್ಮ ಒಂದು ಮತ, ದೇಶದ ಭಾಗ್ಯವನ್ನೇ ಬದಲಾಯಿಸಬಹುದು, ದೇಶದ ಭಾಗ್ಯವಾಗಬಹುದು ಎಂಬುದನ್ನು ನೀವು ಸದಾ ನೆನಪಿನಲ್ಲಿಟ್ಟುಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಜನವರಿ 28 ರಂದು, ವಿವಿಧ ಕಾಲಘಟ್ಟಗಳಲ್ಲಿ ದೇಶಪ್ರೇಮಕ್ಕೆ ಉದಾಹರಣೆಯಾಗಿ ನಿಂತಿರುವ ಭಾರತದ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮಜಯಂತಿಯನ್ನು ಕೂಡಾ ಆಚರಿಸಲಾಗುತ್ತಿದೆ. ಇಂದು ದೇಶ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ. ಲಾಲಾ ಜಿ ಅವರು ಸ್ವಾತಂತ್ರ್ಯ ಹೋರಾಟದ ಹೋರಾಟಗಾರರಾಗಿದ್ದರು, ಅವರು ಪರಕೀಯರ ಆಳ್ವಿಕೆಯಿಂದ ನಮ್ಮನ್ನು ಮುಕ್ತಗೊಳಿಸಲು ತಮ್ಮ ಜೀವನವನ್ನು ತ್ಯಾಗ ಮಾಡಿದರು. ಲಾಲಾ ಜಿ ಅವರ ವ್ಯಕ್ತಿತ್ವವನ್ನು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರಾ ಸೀಮಿತವಾಗಿಸಲು ಸಾಧ್ಯವಿಲ್ಲ. ಅವರು ಬಹಳ ದೂರದೃಷ್ಟಿಯುಳ್ಳವರಾಗಿದ್ದರು. ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಹಲವು ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿದೇಶಿಯರನ್ನು ದೇಶದಿಂದ ಹೊರಹಾಕುವುದು ಮಾತ್ರಾ ಅವರ ಉದ್ದೇಶವಾಗಿರಲಿಲ್ಲ, ದೇಶಕ್ಕೆ ಆರ್ಥಿಕ ಬಲವನ್ನು ನೀಡುವ ಉದ್ದೇಶ ಅವರ ಚಿಂತನೆಯ ಪ್ರಮುಖ ಭಾಗವಾಗಿತ್ತು. ಅವರ ಚಿಂತನೆಗಳು ಮತ್ತು ತ್ಯಾಗವು ಭಗತ್ ಸಿಂಗ್ ಅವರ ಮೇಲೆ ಬಹಳ ಪ್ರಭಾವ ಬೀರಿತು. ಇಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಗೌರವಪೂರ್ವಕವಾಗಿ ನಮಸ್ಕಾರಗಳನ್ನು ಸಲ್ಲಿಸುವ ದಿನವೂ ಹೌದು. ಇತಿಹಾಸದ ಮಹತ್ವದ ಕಾಲದಲ್ಲಿ ನಮ್ಮ ಸೈನ್ಯವನ್ನು ಮುನ್ನಡೆಸುವ ಮೂಲಕ ಅವರು ಧೈರ್ಯ ಮತ್ತು ಶೌರ್ಯಕ್ಕೆ ಉದಾಹರಣೆಯಾಗಿದ್ದಾರೆ. ನಮ್ಮ ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಕ್ರೀಡಾ ಜಗತ್ತಿನಲ್ಲಿಯೂ ಭಾರತ ಹೊಸ ಎತ್ತರವನ್ನು ಮುಟ್ಟುತ್ತಿದೆ. ಕ್ರೀಡಾ ಜಗತ್ತಿನಲ್ಲಿ ಪ್ರಗತಿ ಸಾಧಿಸಲು, ಆಟಗಾರರಿಗೆ ಹೆಚ್ಚು ಹೆಚ್ಚು ಕ್ರೀಡೆಗಳನ್ನಾಡಲು ಅವಕಾಶಗಳು ದೊರೆಯುವುದು ಮತ್ತು ದೇಶದಲ್ಲಿ ಉತ್ತಮ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವುದು ಕೂಡಾ ಅಗತ್ಯವಾಗಿದೆ. ಇದೇ ಚಿಂತನೆಯೊಂದಿಗೆ ಇಂದು ಭಾರತದಲ್ಲಿ ಹೊಸ ಹೊಸ ಕ್ರೀಡಾ ಕೂಟಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈನಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಉದ್ಘಾಟಿಸಲಾಯಿತು. ಇದರಲ್ಲಿ ದೇಶದ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇಂದು ಭಾರತದಲ್ಲಿ ಇಂತಹ ಹೊಸ ವೇದಿಕೆಗಳು ಸತತವಾಗಿ ಸೃಷ್ಟಿಯಾಗುತ್ತಿದ್ದು, ಇದರಲ್ಲಿ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅವಕಾಶ ದೊರೆಯುತ್ತಿರುವುದು ನನಗೆ ಸಂತಸವೆನಿಸುತ್ತಿದೆ. ಇಂತಹ ಒಂದು ವೇದಿಕೆಯೇ –Beach Games. ಇದನ್ನು ದಿಯುವಿನಲ್ಲಿ ಆಯೋಜಿಸಲಾಗಿತ್ತು. ‘ದಿಯು‘ ಕೇಂದ್ರಾಡಳಿತ ಪ್ರದೇಶವೆಂದೂ, ಇದು ಸೋಮನಾಥ್ ಗೆ ಬಹಳ ಸಮೀಪವಿದೆಯೆಂದೂ ನಿಮಗೆ ತಿಳಿದೇ ಇದೆ. ಈ ವರ್ಷದ ಆರಂಭದಲ್ಲಿಯೇ ದಿಯುನಲ್ಲಿ ಈ Beach Games ಆಯೋಜಿಸಲಾಗಿತ್ತು. ಇದು ಭಾರತದ ಪ್ರಥಮ multi-sports beach games ಆಗಿತ್ತು. ಇದರಲ್ಲಿ Tug of war, Sea swimming, pencaksilat, ಮಲ್ಲಕಂಬ, Beach volleyball, Beach ಕಬಡ್ಡಿ, Beach soccer ಮತ್ತು Beach Boxing ಇತ್ಯಾದಿ ಸ್ಪರ್ಧೆಗಳು ನಡೆದವು. ಇದರಲ್ಲಿ ಪ್ರತಿಯೊಬ್ಬ ಸ್ಪರ್ಧಿಗೂ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಾಕಷ್ಟು ಅವಕಾಶ ದೊರೆಯಿತು ಮತ್ತು ಈ ಪಂದ್ಯಾವಳಿಯಲ್ಲಿ ಸಮುದ್ರದೊಂದಿಗೆ ಯಾವುದೇ ಸಂಬಂಧವಿಲ್ಲದ ದೂರ ದೂರದ ರಾಜ್ಯಗಳಿಂದ ಕೂಡಾ ಬಹಳಷ್ಟು ಕ್ರೀಡಾಪಟುಗಳು ಬಂದಿದ್ದರೆಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಯಾವುದೇ ಸಮುದ್ರ ತೀರವಿಲ್ಲದ ಮಧ್ಯಪ್ರದೇಶ ಈ ಪಂದ್ಯಾವಳಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದುಕೊಂಡಿತು. ಕ್ರೀಡೆಗಳಿಗಾಗಿನ ಈ ಒಲವು ಯಾವುದೇ ದೇಶವನ್ನು ಕ್ರೀಡಾ ಪ್ರಪಂಚದಲ್ಲಿ ಅಗ್ರಗಣ್ಯನನ್ನಾಗಿಸಬಹುದು.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ‘ಮನದ ಮಾತು’ ಇಲ್ಲಿಗೆ ಮುಗಿಸುತ್ತಿದ್ದೇನೆ. ಫೆಬ್ರವರಿಯಲ್ಲಿ ನಿಮ್ಮೊಂದಿಗೆ ಮತ್ತೊಮ್ಮೆ ಮಾತನಾಡುತ್ತೇನೆ. ದೇಶದ ಜನರ ಸಾಮೂಹಿಕ ಪ್ರಯತ್ನಗಳಿಂದ, ವೈಯಕ್ತಿಕ ಪ್ರಯತ್ನಗಳಿಂದ, ದೇಶ ಯಾವರೀತಿ ಪ್ರಗತಿ ಸಾಗುತ್ತಿದೆ ಎಂಬ ಬಗ್ಗೆ ನಮ್ಮ ಗಮನ ಕೇಂದ್ರೀಕೃತವಾಗಿರುತ್ತದೆ. ಸ್ನೇಹಿತರೇ ನಾಳೆ 29 ರಂದು ಬೆಳಿಗ್ಗೆ 11 ಗಂಟೆಗೆ ನಾವು ‘ಪರೀಕ್ಷಾ ಪೆ ಚರ್ಚಾ‘ ಕೂಡ ಮಾಡುತ್ತೇವೆ. ಇದು ‘ಪರೀಕ್ಷಾ ಪೇ ಚರ್ಚಾ’ ದ 7 ನೇ ಆವೃತ್ತಿಯಾಗಿದೆ. ನಾನು ಯಾವಾಗಲೂ ನಿರೀಕ್ಷಿಸುತ್ತಿರುವ ಕಾರ್ಯಕ್ರಮ ಇದಾಗಿದೆ. ಇದರಿಂದ ನನಗೆ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ಅವಕಾಶ ದೊರೆಯುತ್ತದೆ ಮತ್ತು ಅವರುಗಳ ಪರೀಕ್ಷೆ ಸಂಬಂಧಿತ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನವನ್ನೂ ಮಾಡುತ್ತೇನೆ. ಕಳೆದ 7 ವರ್ಷಗಳಲ್ಲಿ, ‘ಪರೀಕ್ಷಾ ಪೇ ಚರ್ಚಾ’ ಶಿಕ್ಷಣ ಮತ್ತು ಪರೀಕ್ಷೆ ಸಂಬಂಧಿತ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಒಂದು ಬಹಳ ಉತ್ತಮ ಮಾಧ್ಯಮವಾಗಿ ಹೊರಹೊಮ್ಮಿದೆ. ಈ ಬಾರಿ ಎರಡು ಕೋಟಿ ಐವತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ ಮತ್ತು ತಮ್ಮ ಇನ್ಪುಟ್ ಕೂಡಾ ನೀಡಿದ್ದಾರೆಂದು ನನಗೆ ಹರ್ಷವೆನಿಸುತ್ತದೆ. ನಾವು 2018 ರಲ್ಲಿ ಮೊದಲ ಬಾರಿ ಈ ಕಾರ್ಯಕ್ರಮ ಆರಂಭಿಸಿದಾಗ, ಈ ಸಂಖ್ಯೆ ಕೇವಲ 22 ಸಾವಿರದಷ್ಟಿತ್ತು. ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮತ್ತು ಪರೀಕ್ಷೆಯ ಒತ್ತಡದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಲವು ವಿನೂತನ ಪ್ರಯತ್ನಗಳನ್ನು ಮಾಡಲಾಗಿದೆಯೆಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾಳೆ ಈ ಕಾರ್ಯಕ್ರಮದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ನಾನು ನಿಮ್ಮೆಲ್ಲರಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಮಾತನಾಡುವುದು ನನಗೆ ಬಹಳ ಇಷ್ಟವಾಗುತ್ತದೆ. ಇದರೊಂದಿಗೆ ನಾನು ‘ಮನದ ಮಾತಿನ’ ಈ ಸಂಚಿಕೆಯಲ್ಲಿ ನಿಮಗೆ ವಿದಾಯ ಕೋರುತ್ತಿದ್ದೇನೆ. ಶೀಘ್ರದಲ್ಲೇ ಮತ್ತೆ ಭೇಟಿಯಾಗೋಣ. ಧನ್ಯವಾದ.
My dear countrymen. Namaskar. ‘Mann Ki Baat’ means an auspicious opportunity to meet you, and when you meet your family members, it is so pleasing… so satisfying. This is exactly what I feel after meeting you through ‘Mann Ki Baat’. And of course today, this is the 108th episode of our shared journey. For us the importance of the number 108 and its sanctity is a subject of deep study. 108 beads in a rosary, chanting 108 times, 108 divine sites, 108 stairs in temples, 108 bells, this number 108 is associated with immense faith. That's why the 108th episode of 'Mann Ki Baat' has become all the more special for me. In these 108 episodes, we have seen many examples of public participation and derived inspiration from them. Now after reaching this milestone, we have to resolve to move forward afresh, with new energy and at a faster pace. And what a joyous coincidence it is that tomorrow's sunrise will be the first sunrise of 2024 - we would have entered the year 2024. Best wishes to all of you for 2024.
Friends, many people who listened to ‘Mann Ki Baat’ have written letters to me and shared their memorable moments. It is on account of the strength of 140 crore Indians that this year, our country has attained many special achievements. In this very year, 'Nari Shakti Vandan Act', which has been awaited for years was passed.
Many people wrote letters expressing joy on India becoming the 5th largest economy. Many people reminded me of the success of the G20 Summit.
Friends, today every corner of India is brimming with self-confidence, imbued with the spirit of a developed India; the spirit of self-reliance. We have to maintain the same spirit and momentum in 2024 as well. The record business on Diwali proved that every Indian is giving importance to the mantra of 'Vocal For Local'.
Friends, even today many people are sending me messages pertaining to the success of Chandrayaan-3. I am sure that, like me, you too feel proud of our scientists and especially women scientists.
Friends, when Natu-Natu won the Oscar, the whole country rejoiced with fervour. Who would not have been happy on hearing about the honour accorded to the ‘The Elephant Whisperers’? Through them the world saw the creativity of India and understood our bonding with the environment. This year our athletes also performed marvellously in sports. Our players won 107 medals in Asian Games and 111 medals in Asian Para Games. Indian players won everyone’s heart with their performance in the Cricket World Cup. The victory of our women's cricket team in the Under-19 T-20 World Cup is very inspiring. The achievements of players in many other sports added to the glory of the country. Now Paris Olympics will be held in 2024, for which the whole country is encouraging her players.
Friends, whenever we made efforts together, it has had a very positive impact on the development journey of our country. We experienced successful campaigns such as ‘Azadi Ka Amrit Mahotsav’ and ‘Meri Mati Mera Desh’. We are all witness to the participation of crores of people in them. Construction of 70 thousand Amrit Sarovars is also our collective achievement.
Friends, I have always believed that the development of a country which does not give importance to innovation, stops. India, becoming an Innovation Hub is a symbol of the fact that we are not going to stop. In 2015 we were ranked 81st in the Global Innovation Index – today our rank is 40th. This year, the number of patents filed in India was high, of which about 60% were from domestic funds. This time the highest number of Indian universities have been included in the QS Asia University Rankings. If we start making a list of these achievements, it can never be completed. This is just a glimpse of how effective India's potential is - we have to take inspiration from these successes of the country; these achievements of the people of the country; take pride in them, make new resolves. Once again, I wish you all a very happy 2024.
My family members, we just discussed the hope and enthusiasm about India that pervades everywhere - this hope and expectation is very good. When India turns developed, the youth will benefit the most. But the youth will benefit more, when they are fit.
Nowadays we see how much talk there is about Lifestyle related Diseases, it is a matter of great concern for all of us, especially the youth. For this ‘Mann Ki Baat’, I had requested all of you to send inputs related to Fit India. The response you people have given has filled me with enthusiasm. A large number of Startups have also sent me their suggestions on NaMo App; they have discussed many of their unique efforts.
Friends, through India’s efforts, 2023 was celebrated as International Year of Millets. This has given a lot of opportunities to the startups working in this field; these include many start-ups like ‘Keeros Foods’ started from Lucknow, ‘Grand-Maa Millets’ of Prayagraj and ‘Nutraceutical Rich Organic India’. The youth associated with Alpino Health Foods, Arboreal and Keeros Foods are also making new innovations regarding healthy food options. The youth associated with Unbox Health of Bengaluru have also expressed how they are helping people in choosing the diet of their liking. The way interest in physical health is increasing, the demand for coaches and trainers related to this field is also rising. Start-ups like Jogo Technologies are helping to meet this demand.
Friends, today there is a lot of discussion about physical health and well-being, but another important aspect related to it is that of mental health. I am very happy to know that Mumbai-based startups like Infi-Heal and YOUR-Dost are working to improve mental health and well-being. Not only that, today a technology like Artificial Intelligence is also being used for this. Friends, I can mention the names of only a few Startups here, because the list is very long. I would urge all of you to keep writing to me about innovative health care startups towards realizing the dream of Fit India. I also want to share with you the experiences of well-known people who talk about physical and mental health.
The first message is from Sadhguru Jaggi Vasudev ji.
He will share his views regarding Fitness, especially Fitness of the Mind, i.e., mental health.
It is our privilege to talk about mental health in this Mann Ki Baat. Mental illnesses and how we keep our neurological system are very directly related. How alert static free and disturbance free we keep neurological system will decide how pleasant we feel within ourselves? What we call as peace, love, joy, blissfulness, agony, depression, ecstasies all have a chemical and neurological basis. Pharmacology is essentially trying to fix the chemical imbalance within the body by adding chemicals from outside. Mental illnesses are being managed this way but we must realize that taking chemicals from outside in the form of medications is necessary when one is in extreme situation. Working for an internal mental health situation or working for an equanimous chemistry within ourselves, a chemistry of peacefulness, joyfulness, blissfulness is something that has to be brought into every individual's life; into the cultural life of a society and the Nations around the world and the entire humanity. It’s very important we understand our mental health, our sanity is a fragile privilege; we must protect it; we must nurture it. For this, there are many levels of practices in the Yogik system - completely internalized processes that people can do as simple practices with which they can bring a certain equanimity to the chemistry and certain calmness to their neurological system. The technologies of inner well-being are what we call as the yogik sciences. Let's make it happen.
Generally, Sadhguru ji is known for presenting his views in such a remarkable way.
Come, now let us listen to the famous cricket player Harmanpreet Kaur ji.
Namaskar I want to say something to my countrymen through ‘Mann Ki Baat’. Honorable Prime Minister Shri Narendra Modi Ji's Fit India initiative has encouraged me to share my fitness mantra with all of you. My first suggestion to all of you is ‘one cannot out train a bad diet’. This means that you have to be very careful about when you eat and what you eat. Recently, Honorable Prime Minister Modi ji has encouraged everyone to eat pearl millet. Which increases immunity and helps in sustainable farming and is also easy to digest. Regular exercise and full sleep of 7 hours is very important for the body and helps in staying fit. This will require a lot of discipline and consistency. When you start getting results, you will start exercising yourself daily. Many thanks to the Honorable Prime Minister for giving me the opportunity to talk to you all and share my fitness mantra.
The words of a talented player like Harmanpreet ji will definitely inspire you all.
Come, listen to Grandmaster Vishwanathan Anand ji. We all know how important mental fitness is for our game of ‘Chess’.
Namaste, I am Vishwanathan Anand you have seen me play Chess and very often I am asked, what is your fitness routine? Now Chess requires a lot of focus and patience, so I do the following which keeps me fit and agile. I do yoga two times a week, I do cardio two times a week and two times a week, I focus on flexibility, stretching, weight training and I tend to take one day off per week. All of these are very important for chess. You need to have the stamina to last 6 or 7 hours of intense mental effort, but you also need to be flexible to able to sit comfortably and the ability to regulate your breath to calm down is helpful when you want to focus on some problem, which is usually a Chess game. My fitness tip to all ‘Mann Ki Baat’ listeners would be to keep calm and focus on the task ahead.
The best fitness tip for me absolutely the most important fitness tip is to get a good night sleep. Do not start sleeping for four and five hours a night, I think seven or eight is a absolute minimum so we should try as hard as possible to get good night sleep, because that is when the next day you are able to get through the day in calm fashion. You don’t make impulsive decisions; you are in control of your emotions. For me sleep is the most important fitness tip.
Come, now let's listen to Akshay Kumar ji.
Hello, I am Akshay Kumar. First of all, I would like to thank our respected Prime Minister for getting me a little chance to share my thoughts with you in his 'Mann Ki Baat'. You guys know that much as I am passionate about fitness, I am even more passionate about staying fit in a natural way. What I like more than a fancy gym, is swimming outside, playing badminton, climbing stairs, exercising with a mudgar club bell, eating good healthy food… like I believe that pure ghee if eaten in right quantity is beneficial for us. But I see that many young boys and girls do not eat ghee because they fear that they might become fat. It is very important that we understand what is good and what is bad for our fitness. You should change your lifestyle on the advice of doctors and not by looking at the body of a film star. Actors are often not what they look like on screen. Many types of filters and special effects are used and after seeing them, we start using wrong shortcuts to change our body. Nowadays, so many people take steroids and go for this six pack or eight pack. Friend, with such shortcuts the body swells from outside but remains hollow from inside. You guys remember that shortcut can cut your life short. You don't need a shortcut, you need long lasting fitness. Friends, fitness is a kind of penance. It is not instant coffee or two-minute noodles. In this New Year, promise yourself… no chemicals, no shortcut exercise, yoga, good food, sleeping on time, some meditation and most importantly, happily accept the way you look. After today, don't live a filter life, live a fitter life. Take care. Jai Mahakal.
There are many other start-ups in this sector, so I thought of discussing it with a young start-up founder who is doing excellent work in this field.
Hello, my name is Rishabh Malhotra and I am from Bengaluru. I am very happy to know that fitness is being discussed in ‘Mann Ki Baat’. I myself belong to the world of fitness and we have a start-up in Bengaluru named ‘Tagda Raho’. Our start-up has been created to bring forward the traditional exercises of India. There is a very amazing exercise in the traditional exercises of India which is 'Gada Exercise' and our entire focus is on Mace and Mugdar exercise only. People are surprised to know how you do all the training with a mace. I would like to tell you that mace exercise is thousands of years old and it has been practiced in India for thousands of years. You must have seen it in big and small akhadas and through our start-up we have brought it back in a modern form. We have received a lot of affection from the entire country and a very good response. Through ‘Mann Ki Baat’ I would like to tell you that apart from this, there are many ancient exercises in India and methods related to health and fitness, which we should adopt and teach further in the world. I am from the world of fitness, so I would like to give you a personal tip. With mace exercise you can improve your strength, power, posture and even your breathing, so adopt mace exercise and take it forward. Jai Hind.
Friends, everyone has expressed one’s own views but everyone has the same mantra – ‘Stay Healthy, Stay Fit’. What could be a bigger resolve than your own fitness to start 2024?
My family members, a few days ago an experiment took place in Kashi, which I want to share with the listeners of 'Mann Ki Baat'. You know that thousands of people had reached Kashi from Tamil Nadu to participate in the Kashi-Tamil Sangamam. There I publicly used the Artificial Intelligence AI tool Bhashini for the first time to communicate with them. I was addressing from the stage in Hindi but through the AI tool Bhashini, the people of Tamil Nadu present there were listening to my address in Tamil language simultaneously. People who came to the Kashi-Tamil Sangamam seemed very excited about this experiment. The day is not far when an address will be delivered in one language and the public will listen to the same speech in their own language in real time. The same will happen with films also when the public will listen to Real Time Translation with the help of AI in the cinema hall. You can imagine how big a change would take place when this technology starts being widely used in our schools, our hospitals, our courts. I would urge today's young generation to further explore AI tools related to Real Time Translation and make them 100% fool proof.
Friends, in the changing times we have to save our languages and also promote them. I now want to tell you about a tribal village in Jharkhand. This village has taken a unique initiative to provide education to its children in their mother tongue. Children are being imparted education in Kudukh language in Manglo village of Garhwa district. The name of this school is, 'Karthik Oraon Aadivasi Kudukh School'. 300 tribal children study in this school. Kudukh language is the mother tongue of the Oraon tribal community. Kudukh language also has its own script, which is known as Tolang Siki.
This language was gradually becoming extinct; to save it, this community has decided to educate children in their own language. Arvind Oraon, who started this school, says that the tribal children had difficulty in English language, so he started teaching the village children in their mother tongue. When his efforts started yielding better results, the villagers also joined him. On account of studies in their own language, the pace of children's learning also increased. In our country, many children used to leave studies midway due to language difficulties. The new National Education Policy is also helping in eliminating such hardships. It is our endeavour that language should not become a hindrance in the education and progress of any child.
Friends, the extraordinary daughters have filled our Bharat Bhoomi with pride in every era. Savitribai Phule ji and Rani Velu Nachiyar ji are two such luminaries of the country. Their personality is like a lighthouse, which will continue to show the way to further woman power in every era. Just a few days from now, on January 3, we will all celebrate the birth anniversaries of the two. As soon as the name of Savitribai Phule ji is mentioned, the first thing that strikes us is her contribution in the field of education and social reform. She always raised her voice strongly for the education of women and the underprivileged. She was far ahead of her time and always remained vocal in opposing wrong practices.
She had deep faith in the empowerment of society through education. Along with Mahatma Phule ji, she started many schools for daughters. Her poems used to raise awareness and fill self-confidence amongst people. She always urged people to help each other in need and also live in harmony with nature. The magnitude of her kindness cannot be summed up in words. When a famine struck in Maharashtra, Savitribai and Mahatma Phule opened the doors of their homes to help the needy. Such an example of social justice is rarely seen. When the dreadful plague had spread there, she threw herself into the service of the people. During all this, she herself fell prey to this disease. Her life dedicated to humanity is still inspiring all of us.
Friends, the name of Rani Velu Nachiyar is also one among the many great personalities of the country who fought against foreign rule. My brothers and sisters of Tamil Nadu still remember her by the name of Veera Mangai i.e. brave woman. The bravery with which Rani Velu Nachiyar fought against the British and the valour she displayed is very inspiring. Her husband, was killed by the British during their attack on the Sivagangai kingdom, who was the king there. Queen Velu Nachiyar and her daughter somehow escaped from the enemies. She relentlessly remained busy for many years in building an organization and raising an army with the Marudu Brothers i.e. her commanders. She started the war against the British with full preparation and fought with great courage and determination. The name of Rani Velu Nachiyar is included among those who formed an All-Women Group for the first time in their army. I offer my tributes to these two brave women.
My family members, there is a tradition of Dairo in Gujarat. Throughout the night, thousands of people join Dairo and acquire knowledge along with entertainment. In this Dairo, the trinity of folk music, folk literature and humour fills everyone's mind with joy. Bhai Jagdish Trivedi ji is a famous artist of this Dairo. As a comedian, Bhai Jagdish Trivedi ji has maintained his influence for more than 30 years. Recently I received a letter from Bhai Jagdish Trivedi ji and along with it he has also sent one of his books. The name of the book is – Social Audit of Social Service. This book is very unique. With accounts in it, this book is a kind of balance sheet. The complete account of how much income Bhai Jagdish Trivedi ji received from particular programs in the last 6 years and where it was spent is given in the book. This Balance Sheet is unique because he spent his entire income, every single rupee, for the society – School, Hospital, Library, institutions related to disabled people, social service – the entire 6 years are accounted for. As it is written at one place in the book, in 2022, he earned two crore thirty five lakh eighty nine thousand six hundred seventy four rupees from his programs. And he spent two crore thirty five lakh eighty nine thousand six hundred seventy four rupees on School, Hospital, Library. He did not keep even a single rupee with himself. Actually, there is an interesting incident behind this also. It so happened that once Bhai Jagdish Trivedi ji said that when he turns 50 in 2017, he will not take home the income from his programs but will spend it on society. Since 2017, he has spent approximately Rs 8.75 crores on myriad social work. A comedian, with his words, compelles everyone to laugh. But how many emotions he lives within, this can be seen from the life of Bhai Jagdish Trivedi ji. You will be surprised to know that he also has three PhD degrees. He has written 75 books, many of which have received acclaims. He has also been honoured with many awards for social work. I wish Bhai Jagdish Trivedi ji all the best for his social work.
My family members, there is excitement and enthusiasm in the entire country in connection with the Ram Mandir in Ayodhya. People are expressing their feelings in a multitude of ways. You must have noticed that during the last few days, many new songs and new bhajans have been composed on Shri Ram and Ayodhya. Many people are also writing new poems. There are many experienced artists in it and new emerging young artists have also composed heart-warming bhajans. I have also shared some songs and bhajans on my social media. It seems that the art world is becoming a participant in this historic moment in its own unique style. One thing comes to my mind… could we all share all such creations with a common hash tag? I request you to share your creations on social media with the hashtag Shri Ram Bhajan (#shriRamBhajan). This compilation will turn into a flow of emotions and devotion in which everyone will be immersively imbued with the ethos of Ram.
My dear countrymen, that's all with me today in 'Mann Ki Baat'. 2024 is just a few hours away. India's achievements are the achievements of every Indian. We have to continuously work for the development of India keeping in mind the Panch Pran. Whatever work we do, whatever decision we make, our first criterion should be… what the country will get from it; what benefit it will bring to the country. Rashtra Pratham - Nation First - There is no greater mantra than this. Adhering to this mantra, we Indians will make our country developed and self-reliant. May you all reach new heights of success in 2024, may you all stay healthy, stay fit, stay immensely happy - this is my prayer. In 2024 we will once again discuss the new achievements of the people of the country. Thank you very much.
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ 'ಮನದ ಮಾತಿ' ಗೆ ನಿಮಗೆ ಸ್ವಾಗತ. ಆದರೆ ನವೆಂಬರ್ 26 ಇಂದಿನ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನವೇ ದೇಶದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಆದರೆ ಆ ದಾಳಿಯಿಂದ ಚೇತರಿಸಿಕೊಂಡು ಈಗ ಸಂಪೂರ್ಣ ಧೈರ್ಯದಿಂದ ಭಯೋತ್ಪಾದನೆಯನ್ನು ಹತ್ತಿಕ್ಕುತ್ತಿರುವುದು ಭಾರತದ ಶಕ್ತಿಯಾಗಿದೆ. ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಪುರುಷರನ್ನು ಇಂದು ದೇಶ ಸ್ಮರಿಸಿಕೊಳ್ಳುತ್ತಿದೆ.
ನನ್ನ ಪರಿವಾರದ ಸದಸ್ಯರೇ, ನವೆಂಬರ್ 26 ರ ಈ ದಿನವು ಮತ್ತೊಂದು ಕಾರಣಕ್ಕೆ ತುಂಬಾ ಮುಖ್ಯವಾಗಿದೆ. 1949 ರಲ್ಲಿ ಈ ದಿನದಂದೇ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತ್ತು. ನನಗೆ ನೆನಪಿದೆ, 2015ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದಾಗ ಅದೇ ಸಮಯದಲ್ಲಿ ನವೆಂಬರ್ 26ನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಬೇಕು ಎಂಬ ಆಲೋಚನೆ ಮೂಡಿತ್ತು. ಅಂದಿನಿಂದ ಪ್ರತಿ ವರ್ಷ ನಾವು ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದ್ದೇವೆ. ನಾನು ಎಲ್ಲಾ ದೇಶವಾಸಿಗಳಿಗೆ ಸಂವಿಧಾನ ದಿನದ ಶುಭಾಶಯಗಳನ್ನು ಕೋರುತ್ತೇನೆ. ಮತ್ತು ನಾವೆಲ್ಲರೂ ಒಗ್ಗೂಡಿ, ನಾಗರಿಕರ ಕರ್ತವ್ಯಗಳಿಗೆ ಆದ್ಯತೆ ನೀಡುತ್ತಾ, ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸುತ್ತೇವೆ.
ಸ್ನೇಹಿತರೇ, ಸಂವಿಧಾನವನ್ನು ರಚಿಸಲು 2 ವರ್ಷ, 11 ತಿಂಗಳು ಮತ್ತು 18 ದಿನಗಳು ಬೇಕಾಯಿತು ಎಂಬುದು ನಮಗೆಲ್ಲ ತಿಳಿದ ವಿಷಯ. ಶ್ರೀ ಸಚ್ಚಿದಾನಂದ ಸಿನ್ಹಾ ಅವರು ಸಂವಿಧಾನ ಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರು. 60ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳ ವಿವರವಾದ ಅಧ್ಯಯನ ಮತ್ತು ಸುದೀರ್ಘ ಚರ್ಚೆ ನಂತರ ನಮ್ಮ ಸಂವಿಧಾನದ ಕರಡು ಸಿದ್ಧಪಡಿಸಲಾಗಿದೆ. ಕರಡು ಸಿದ್ಧಪಡಿಸಿದ ನಂತರ, ಅಂತಿಮಗೊಳಿಸುವ ಮುನ್ನ ಅದರಲ್ಲಿ 2 ಸಾವಿರಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಲಾಗಿದೆ. 1950ರಲ್ಲಿ ಸಂವಿಧಾನ ಜಾರಿಗೆ ಬಂದ ನಂತರವೂ ಸಂವಿಧಾನಕ್ಕೆ ಒಟ್ಟು 106 ಬಾರಿ ತಿದ್ದುಪಡಿ ಮಾಡಲಾಗಿದೆ. ಸಮಯ, ಪರಿಸ್ಥಿತಿ ಮತ್ತು ದೇಶದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸರ್ಕಾರಗಳು ವಿವಿಧ ಸಮಯಗಳಲ್ಲಿ ತಿದ್ದುಪಡಿಗಳನ್ನು ಮಾಡಿವೆ. ಆದರೆ ಸಂವಿಧಾನದ ಮೊದಲ ತಿದ್ದುಪಡಿಯು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶದಿಂದ ಕೂಡಿತ್ತು ಎಂಬುದು ದುರದೃಷ್ಟಕರ. ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ತುರ್ತುಪರಿಸ್ಥಿತಿಯಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಲಾಗಿದೆ. ಸ್ನೇಹಿತರೇ, ಸಂವಿಧಾನ ಸಭೆಯ ಕೆಲವು ಸದಸ್ಯರು ನಾಮನಿರ್ದೇಶನಗೊಂಡಿದ್ದು, ಅದರಲ್ಲಿ 15 ಮಹಿಳೆಯರು ನಾಮನಿರ್ದೇಶನಗೊಂಡಿರುವುದು ತುಂಬಾ ಸ್ಫೂರ್ತಿದಾಯಕವಾಗಿದೆ. ಅಂತಹ ಓರ್ವ ಸದಸ್ಯರಾದ ಹಂಸಾ ಮೆಹ್ತಾ ಅವರು ಮಹಿಳಾ ಹಕ್ಕುಗಳು ಮತ್ತು ನ್ಯಾಯದ ಕುರಿತು ಧ್ವನಿಯನ್ನು ಬಲಪಡಿಸಿದ್ದರು. ಆ ಸಮಯದಲ್ಲಿ, ಸಂವಿಧಾನದ ಮೂಲಕ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಪಾಲ್ಗೊಂಡಾಗ ಮಾತ್ರ ಎಲ್ಲರ ಅಭಿವೃದ್ಧಿ ಸಾಧ್ಯ. ಸಂವಿಧಾನ ರಚನೆಕಾರರ ಅದೇ ದೃಷ್ಟಿಕೋನವನ್ನು ಅನುಸರಿಸಿ, ಭಾರತದ ಸಂಸತ್ತು ಈಗ 'ನಾರಿ ಶಕ್ತಿ ವಂದನ್ ಕಾಯ್ದೆ'ಯನ್ನು ಅಂಗೀಕರಿಸಿದೆ ಎಂಬುದು ನನಗೆ ಸಂತೋಷ ತಂದಿದೆ. ‘ನಾರಿ ಶಕ್ತಿ ವಂದನ ಕಾಯ್ದೆ’ ನಮ್ಮ ಪ್ರಜಾಪ್ರಭುತ್ವದ ನಿರ್ಣಯ ಶಕ್ತಿಗೆ ಉದಾಹರಣೆಯಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಸಂಕಲ್ಪದ ವೇಗವನ್ನು ಹೆಚ್ಚಿಸಲೂ ಇದು ಸಹಾಯಕರವಾಗಲಿದೆ.
ನನ್ನ ಪರಿವಾರ ಸದಸ್ಯರೇ, ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ಜನರು ವಹಿಸಿಕೊಂಡಾಗ ಜಗತ್ತಿನ ಯಾವ ಶಕ್ತಿಯೂ ಆ ದೇಶ ಅಭಿವೃದ್ಧಿ ಹೊಂದುವುದನ್ನು ತಡೆಯಲು ಸಾಧ್ಯವಿಲ್ಲ. ಇಂದು, ದೇಶದ 140 ಕೋಟಿ ಜನರೇ ಅನೇಕ ಬದಲಾವಣೆಗಳ ನೇತೃತ್ವ ವಹಿಸಿಕೊಂಡಿದ್ದಾರೆ ಎಂಬುದು ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರ ಒಂದು ಜ್ವಲಂತ ಉದಾಹರಣೆಯನ್ನು ಈ ಹಬ್ಬ ಹರಿದಿನಗಳಲ್ಲಿ ನಾವು ಕಂಡಿದ್ದೇವೆ. ಕಳೆದ ತಿಂಗಳು 'ಮನದ ಮಾತಿನಲ್ಲಿ' ನಾನು ವೋಕಲ್ ಫಾರ್ ಲೋಕಲ್ ಅಂದರೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಕುರಿತು ಒತ್ತು ನೀಡಿದ್ದೆ. ಕಳೆದ ಕೆಲವು ದಿನಗಳಲ್ಲಿ, ದೀಪಾವಳಿ, ಭಾಯಿ ದೂಜ್ ಮತ್ತು ಛಟ್ ಹಬ್ಬಗಳಲ್ಲಿ ದೇಶದಲ್ಲಿ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ನಡೆದಿದೆ. ಮತ್ತು ಈ ಅವಧಿಯಲ್ಲಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಜನರಲ್ಲಿ ಅಪಾರ ಉತ್ಸಾಹ ಕಂಡುಬಂದಿದೆ. ಈಗ ಮನೆಯಲ್ಲಿರುವ ಮಕ್ಕಳೂ ಅಂಗಡಿಯಲ್ಲಿ ಏನಾದ್ರೂ ಕೊಳ್ಳುವಾಗ ಮೇಡ್ ಇನ್ ಇಂಡಿಯಾ ಎಂದು ಬರೆದಿದ್ದಾರೋ ಇಲ್ಲವೋ ಎಂದು ಪರೀಕ್ಷಿಸತೊಡಗಿದ್ದಾರೆ. ಇಷ್ಟೇ ಅಲ್ಲ, ಈಗ ಜನರು ಆನ್ಲೈನ್ನಲ್ಲಿ ಸರಕುಗಳನ್ನು ಖರೀದಿಸುವಾಗಲೂ ಮೂಲ ದೇಶವನ್ನು ಪರಿಶೀಲಿಸುವುದನ್ನು ಮರೆಯುವುದಿಲ್ಲ.
ಸ್ನೇಹಿತರೇ, 'ಸ್ವಚ್ಛ ಭಾರತ್ ಅಭಿಯಾನ'ದ ಯಶಸ್ಸು ಹೇಗೆ ಸ್ಫೂರ್ತಿದಾಯಕವಾಗಿದೆಯೋ ಅದೇ ರೀತಿ ವೋಕಲ್ ಫಾರ್ ಲೋಕಲ್ನ ಯಶಸ್ಸು ಅಭಿವೃದ್ಧಿ ಹೊಂದಿದ ಭಾರತ - ಸಮೃದ್ಧ ಭಾರತದ ದ್ವಾರಗಳನ್ನು ತೆರೆಯುತ್ತಿದೆ. ವೋಕಲ್ ಫಾರ್ ಲೋಕಲ್ನ ಈ ಅಭಿಯಾನವು ಇಡೀ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ವೋಕಲ್ ಫಾರ್ ಲೋಕಲ್ನ ಈ ಅಭಿಯಾನವು ಸ್ಥಳೀಯ ಉದ್ಯೋಗದ ಖಾತರಿ ಒದಗಿಸುತ್ತದೆ. ಇದು ಅಭಿವೃದ್ಧಿಯ ಭರವಸೆಯಾಗಿದೆ, ಇದು ದೇಶದ ಸಮತೋಲಿತ ಅಭಿವೃದ್ಧಿಯ ಭರವಸೆಯೂ ಆಗಿದೆ. ಇದು ನಗರ ಮತ್ತು ಗ್ರಾಮೀಣ ಜನರಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತದೆ. ಇದು ಸ್ಥಳೀಯ ಉತ್ಪನ್ನಗಳಲ್ಲಿ ಮೌಲ್ಯವರ್ಧನೆಗೂ ದಾರಿ ಕಲ್ಪಿಸುತ್ತದೆ, ಮತ್ತು ಎಂದಾದರೂ ಜಾಗತಿಕ ಆರ್ಥಿಕತೆಯಲ್ಲಿ ಏರಿಳಿತಗಳು ಕಂಡುಬಂದಲ್ಲಿ, ವೋಕಲ್ ಫಾರ್ ಲೋಕಲ್ ಮಂತ್ರವು ನಮ್ಮ ಅರ್ಥವ್ಯವಸ್ಥೆಗೆ ಸಂರಕ್ಷಣೆಯನ್ನೂ ನೀಡುತ್ತದೆ.
ಸ್ನೇಹಿತರೇ, ಭಾರತೀಯ ಉತ್ಪನ್ನಗಳ ಕುರಿತಾದ ಈ ಭಾವನೆ ಕೇವಲ ಹಬ್ಬಗಳಿಗೆ ಮಾತ್ರ ಸೀಮಿತವಾಗಬಾರದು. ಇದೀಗ ಮದುವೆ ಸೀಸನ್ ಕೂಡ ಆರಂಭವಾಗಿದೆ. ಈ ಮದುವೆ ಸೀಸನ್ ನಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸುತ್ತಿವೆ. ಮದುವೆಗಳಿಗೆ ಶಾಪಿಂಗ್ ಮಾಡುವಾಗ, ನೀವೆಲ್ಲರೂ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡ. ಹಾಂ, ಮದುವೆಯ ವಿಷಯ ಬಂದಾಗ, ಒಂದು ವಿಷಯವು ಬಹಳ ಸಮಯದಿಂದ ನನ್ನನ್ನು ಆಗಾಗ ಚಿಂತೆಗೊಳಪಡಿಸುತ್ತದೆ ಮತ್ತು ನನ್ನ ಮನದ ನೋವನ್ನು, ನಾನು ನನ್ನ ಕುಟುಂಬ ಸದಸ್ಯರಿಗೆ ಹೇಳದಿದ್ದರೆ, ಬೇರೆ ಯಾರಿಗೆ ಹೇಳಬಲ್ಲೆ? ಸ್ವಲ್ಪ ಯೋಚಿಸಿ, ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ವಿದೇಶಕ್ಕೆ ಹೋಗಿ ಮದುವೆ ಸಮಾರಂಭ ನಡೆಸುವ ಹೊಸ ಪದ್ಧತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ, ಇದರ ಅಗತ್ಯವಿದೆಯೇ? ಭಾರತದ ಮಣ್ಣಿನಲ್ಲಿ, ಭಾರತೀಯರ ಮಧ್ಯೆ ನಾವು ಮದುವೆಗಳನ್ನು ಆಚರಿಸಿದರೆ, ದೇಶದ ಹಣವು ದೇಶದಲ್ಲಿ ಉಳಿಯುತ್ತದೆ. ದೇಶದ ಜನತೆಗೆ ನಿಮ್ಮ ವಿವಾಹದಲ್ಲಿ ಏನಾದರೂ ಸೇವೆ ಮಾಡುವ ಅವಕಾಶ ಲಭಿಸುತ್ತದೆ, ಕಡು ಬಡವರು ಕೂಡ ತಮ್ಮ ಮಕ್ಕಳಿಗೆ ನಿಮ್ಮ ಮದುವೆಯ ಬಗ್ಗೆ ಹೇಳುತ್ತಾರೆ. ವೋಕಲ್ ಫಾರ್ ಲೋಕಲ್ ನ ಈ ಅಭಿಯಾನವನ್ನು ನೀವು ಮತ್ತಷ್ಟು ವಿಸ್ತರಿಸಬಹುದೇ? ಇಂತಹ ವಿವಾಹ ಸಮಾರಂಭಗಳನ್ನು ನಮ್ಮ ದೇಶದಲ್ಲಿ ಏಕೆ ಮಾಡಬಾರದು? ನೀವು ಬಯಸುವ ರೀತಿಯ ವ್ಯವಸ್ಥೆ ಇಂದು ಇಲ್ಲದಿರಬಹುದು, ಆದರೆ ನಾವು ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವ್ಯವಸ್ಥೆಯೂ ಅಭಿವೃದ್ಧಿಗೊಳ್ಳುತ್ತದೆ. ಇದು ಬಹಳಷ್ಟು ದೊಡ್ಡ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಈ ನನ್ನ ನೋವಿನ ಸಂದೇಶ ಆ ದೊಡ್ಡ ಕುಟುಂಬಗಳಿಗೆ ಖಂಡಿತಾ ತಲುಪುತ್ತದೆ ಎಂಬುದು ನನ್ನ ಭರವಸೆ.
ನನ್ನ ಪರಿವಾರ ಸದಸ್ಯರೇ, ಈ ಹಬ್ಬದ ಋತುವಿನಲ್ಲಿ ಮತ್ತೊಂದು ಬಹುದೊಡ್ಡ ಟ್ರೆಂಡ್ ಚಾಲನೆಗೆ ಬಂದಿದೆ. ದೀಪಾವಳಿ ಸಂದರ್ಭದಲ್ಲಿ ನಗದು ನೀಡಿ ವಸ್ತುಗಳನ್ನು ಖರೀದಿಸುವ ಪ್ರವೃತ್ತಿ ಕ್ರಮೇಣ ಕಡಿಮೆಯಾಗುತ್ತಾ ಸಾಗಿರುವುದು ಇದು ಸತತ ಎರಡನೇ ವರ್ಷ. ಅಂದರೆ, ಈಗ ಜನರು ಹೆಚ್ಚೆಚ್ಚು ಡಿಜಿಟಲ್ ಪಾವತಿಗಳನ್ನು ಮಾಡುತ್ತಿದ್ದಾರೆ. ಇದು ಕೂಡಾ ತುಂಬಾ ಉತ್ತೇಜನಕಾರಿಯಾಗಿದೆ. ನೀವು ಇನ್ನೂ ಒಂದು ಕೆಲಸವನ್ನು ಮಾಡಬಹುದು. ಒಂದು ತಿಂಗಳ ಕಾಲ ನೀವು UPI ಅಥವಾ ಯಾವುದೇ ಡಿಜಿಟಲ್ ಮಾಧ್ಯಮದ ಮೂಲಕ ಮಾತ್ರ ಪಾವತಿ ಮಾಡುತ್ತೀರಿ ಮತ್ತು ನಗದು ಪಾವತಿ ಮಾಡುವುದಿಲ್ಲ ಎಂದು ನೀವು ನಿರ್ಧರಿಸಿ. ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಯಶಸ್ಸು ಇದನ್ನು ಸಂಪೂರ್ಣವಾಗಿ ಸಾಧ್ಯವಾಗಿಸಿದೆ. ಇಷ್ಟೇ ಅಲ್ಲ ಒಂದು ತಿಂಗಳು ಮುಗಿದ ನಂತರ, ದಯವಿಟ್ಟು ನಿಮ್ಮ ಅನುಭವಗಳನ್ನು ಮತ್ತು ನಿಮ್ಮ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ಇದಕ್ಕಾಗಿ ಮುಂಚಿತವಾಗಿಯೇ ನಿಮಗೆ ಶುಭ ಹಾರೈಸುತ್ತೇನೆ.
ನನ್ನ ಪರಿವಾರ ಸದಸ್ಯರೇ, ನಮ್ಮ ಯುವ ಸ್ನೇಹಿತರು ದೇಶಕ್ಕೆ ಮತ್ತೊಂದು ದೊಡ್ಡ ಸುವಾರ್ತೆಯನ್ನು ನೀಡಿದ್ದಾರೆ, ಇದು ನಮ್ಮೆಲ್ಲರಲ್ಲಿ ಹೆಮ್ಮೆಯನ್ನು ತುಂಬಲಿದೆ. ಇಂಟೆಲಿಜೆನ್ಸ್, ಐಡಿಯಾ ಮತ್ತು ಇನ್ನೋವೇಶನ್ - ಇಂದಿನ ಭಾರತೀಯ ಯುವಕರ ಗುರುತಾಗಿದೆ. ಇದರಲ್ಲಿ ತಂತ್ರಜ್ಞಾನದ ಸಂಯೋಜನೆಯ ಮೂಲಕ ಅವರ ಬೌದ್ಧಿಕ ಮಟ್ಟದಲ್ಲಿಯೂ ನಿರಂತರ ವೃದ್ಧಿಯಾಗಲಿ, ಇದು ಸ್ವತಃ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವಪೂರ್ಣವಾದ ಪ್ರಗತಿಯಾಗಿದೆ. 2022 ರಲ್ಲಿ ಭಾರತೀಯರಿಂದ ಪೇಟೆಂಟ್ ಅರ್ಜಿಗಳಲ್ಲಿ ಶೇಕಡಾ 31 ಕ್ಕಿಂತ ಹೆಚ್ಚು ವೃದ್ಧಿಯಾಗಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ವಿಶ್ವ ಬೌದ್ಧಿಕ ಸ್ವತ್ತು ಸಂಸ್ಥೆ ಒಂದು ಕುತೂಹಲಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಪೇಟೆಂಟ್ಗಳನ್ನು ಸಲ್ಲಿಸುವಲ್ಲಿ ಮುಂಚೂಣಿಯಲ್ಲಿರುವ ಅಗ್ರಮಾನ್ಯ-10 ದೇಶಗಳಲ್ಲಿ ಕೂಡಾ ಹಿಂದೆಂದೂ ಈ ರೀತಿ ಸಂಭವಿಸಿಲ್ಲ ಎಂದು ಈ ವರದಿ ತೋರಿಸುತ್ತದೆ. ಈ ಅದ್ಭುತ ಸಾಧನೆಗಾಗಿ ನಾನು ನನ್ನ ಯುವ ಸ್ನೇಹಿತರನ್ನು ಅಪಾರವಾಗಿ ಅಭಿನಂದಿಸುತ್ತೇನೆ. ಪ್ರತಿ ಹಂತದಲ್ಲೂ ದೇಶವು ತಮ್ಮೊಂದಿಗಿದೆ ಎಂದು ನನ್ನ ಯುವ ಸ್ನೇಹಿತರಿಗೆ ಭರವಸೆ ನೀಡಲು ನಾನು ಬಯಸುತ್ತೇನೆ. ಸರ್ಕಾರವು ಮಾಡಿದ ಆಡಳಿತಾತ್ಮಕ ಮತ್ತು ಕಾನೂನು ಸುಧಾರಣೆಗಳ ನಂತರ, ಇಂದು ನಮ್ಮ ಯುವಕರು ಹೊಸ ಶಕ್ತಿಯೊಂದಿಗೆ ಬೃಹತ್ ಮಟ್ಟದಲ್ಲಿ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. 10 ವರ್ಷಗಳ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ, ಇಂದು ನಮ್ಮ ಪೇಟೆಂಟ್ಗಳು 10 ಪಟ್ಟು ಹೆಚ್ಚು ಅನುಮೋದನೆ ಪಡೆಯುತ್ತಿವೆ. ಪೇಟೆಂಟ್ ನಿಂದಾಗಿ ದೇಶದ ಬೌದ್ಧಿಕ ಸ್ವತ್ತು ವೃದ್ಧಿಸುವುದು ಮಾತ್ರವಲ್ಲದೆ, ಹೊಸ ಅವಕಾಶಗಳಿಗೆ ದ್ವಾರವೂ ತೆರೆದುಕೊಳ್ಳುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲ, ಇದು ನಮ್ಮ ಸ್ಟಾರ್ಟ್ಅಪ್ಗಳ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಂದು ನಮ್ಮ ಶಾಲಾ ಮಕ್ಕಳಲ್ಲೂ ಆವಿಷ್ಕಾರದ ಮನೋಭಾವವನ್ನು ಉತ್ತೇಜಿಸಲಾಗುತ್ತಿದೆ. ಅಟಲ್ ಟಿಂಕರಿಂಗ್ ಲ್ಯಾಬ್, ಅಟಲ್ ಇನ್ನೋವೇಶನ್ ಮಿಷನ್, ಕಾಲೇಜುಗಳಲ್ಲಿ ಇನ್ಕ್ಯುಬೇಶನ್ ಸೆಂಟರ್ಗಳು, ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನ, ಇಂತಹ ನಿರಂತರ ಪ್ರಯತ್ನದ ಫಲ ದೇಶವಾಸಿಗಳ ಮುಂದಿದೆ. ಇದು ಭಾರತದ ಯುವ ಶಕ್ತಿ, ಭಾರತದ ಆವಿಷ್ಕಾರ ಶಕ್ತಿಗೆ ಜ್ವಲಂತ ಸಾಕ್ಷಿಯಾಗಿದೆ. ಈ ಉತ್ಸಾಹದಿಂದ ಮುನ್ನಡೆಯುವ ಮೂಲಕ ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಕೂಡಾ ಸಾಧಿಸಿ ತೋರಲಿದ್ದೇವೆ ಮತ್ತು ಅದಕ್ಕಾಗಿಯೇ ನಾನು ಪದೇ ಪದೇ ಹೇಳುತ್ತೇನೆ, 'ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅನುಸಂಧಾನ' ಎಂದು.
ನನ್ನ ಪ್ರಿಯ ದೇಶವಾಸಿಗಳೇ, ಕೆಲ ಸಮಯದ ಹಿಂದೆ 'ಮನದ ಮಾತಿನಲ್ಲಿ' ನಾನು ಭಾರತದಲ್ಲಿ ಆಯೋಜಿಸಲಾಗುವ ಹೆಚ್ಚಿನ ಸಂಖ್ಯೆಯ ಜಾತ್ರೆಗಳ ಬಗ್ಗೆ ಚರ್ಚಿಸಿದ್ದು ನಿಮಗೆ ನೆನಪಿರಬಹುದು. ಆಗ ಜನರು ಜಾತ್ರೆಗಳಿಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಳ್ಳುವ ಸ್ಪರ್ಧೆಯ ಕಲ್ಪನೆಯೂ ಮೂಡಿತ್ತು. ಈ ನಿಟ್ಟಿನಲ್ಲಿ ಸಂಸ್ಕೃತಿ ಸಚಿವಾಲಯ ಜಾತ್ರೆ ಕ್ಷಣಗಳ ಸ್ಪರ್ಧೆಯನ್ನು ಆಯೋಜಿಸಿತ್ತು. ಸಾವಿರಾರು ಜನರು ಇದರಲ್ಲಿ ಭಾಗವಹಿಸಿದ್ದರು ಮತ್ತು ಅನೇಕ ಜನರು ಬಹುಮಾನಗಳನ್ನು ಗೆದ್ದಿದ್ದಾರೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದ. ಕೋಲ್ಕತ್ತಾದ ನಿವಾಸಿ ರಾಜೇಶ್ ಧರ್ ಅವರು "ಚರಕ್ ಮೇಳ" ದಲ್ಲಿ ಬಲೂನ್ ಮತ್ತು ಆಟಿಕೆಗಳ ಮಾರಾಟಗಾರರ ಅದ್ಭುತ ಫೋಟೋಗಾಗಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಜಾತ್ರೆಯು ಬಂಗಾಳದ ಗ್ರಾಮೀಣ ಭಾಗದಲ್ಲಿ ಬಹಳ ಜನಪ್ರಿಯವಾಗಿದೆ. ವಾರಣಾಸಿಯ ಹೋಳಿ ಹಬ್ಬವನ್ನು ಪ್ರದರ್ಶಿಸಿದ್ದಕ್ಕಾಗಿ ಅನುಪಮ್ ಸಿಂಗ್ ಅವರಿಗೆ ಮೇಲಾ ಪೊರ್ಟ್ರೇಟ್ಸ್ ಪ್ರಶಸ್ತಿ ಲಭಿಸಿದೆ. 'ಕುಲಸಾಯಿ ದಸರಾ' ಹಬ್ಬಕ್ಕೆ ಸಂಬಂಧಿಸಿದ ಆಕರ್ಷಕ ಮಗ್ಗುಲನ್ನು ಪ್ರದರ್ಶಿಸಿದ್ದಕ್ಕಾಗಿ ಅರುಣ್ ಕುಮಾರ್ ನಲಿಮೇಲ ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಅದೇ ರೀತಿ ಮಹಾರಾಷ್ಟ್ರದ ಶ್ರೀಯುತರಾದ ಶ್ರೀ ರಾಹುಲ್ ಅವರು ಕಳುಹಿಸಿದ ಅತಿ ಹೆಚ್ಚು ಇಷ್ಟವಾದ ಫೋಟೋಗಳ ಪಟ್ಟಿಗೆ ಸೇರಿದ ಪಂಢರಪುರದ ಭಕ್ತಿಯನ್ನು ಪ್ರದರ್ಶಿಸುವ ಫೋಟೋ ಕೂಡಾ ಇದರಲ್ಲಿ ಸೇರಿದೆ. ಈ ಸ್ಪರ್ಧೆಯಲ್ಲಿ, ಜಾತ್ರೆಗಳ ಸಮಯದಲ್ಲಿ ಕಂಡುಬರುವ ಸ್ಥಳೀಯ ಭಕ್ಷ್ಯಗಳ ಅನೇಕ ಚಿತ್ರಗಳು ಇದ್ದವು. ಇದರಲ್ಲಿ ಪುರಲಿಯಾ ನಿವಾಸಿ ಅಲೋಕ್ ಅವಿನಾಶ್ ಅವರ ಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಜಾತ್ರೆಯ ಸಂದರ್ಭದಲ್ಲಿ ಬಂಗಾಳದ ಗ್ರಾಮೀಣ ಪ್ರದೇಶದ ಆಹಾರಗಳ ಚಿತ್ರವನ್ನು ಅವರು ಪ್ರದರ್ಶಿಸಿದ್ದರು. ಭಗೋರಿಯಾ ಹಬ್ಬದಂದು ಮಹಿಳೆಯರು ಕುಲ್ಫಿ ಸವಿಯುತ್ತಿರುವ ಪ್ರಣಬ್ ಬಸಾಕ್ ಅವರ ಚಿತ್ರಕ್ಕೂ ಪ್ರಶಸ್ತಿ ನೀಡಲಾಗಿದೆ. ಛತ್ತೀಸ್ಗಢದ ಜಗದಲ್ಪುರದಲ್ಲಿ ನಡೆದ ಗ್ರಾಮ ಜಾತ್ರೆಯಲ್ಲಿ ಮಹಿಳೆಯರು ಭಜಿ ಸವಿ ಸವಿಯುತ್ತಿರುವ ಚಿತ್ರವನ್ನು ರುಮೇಲಾ ಅವರು ಕಳುಹಿಸಿದ್ದರು - ಅದಕ್ಕೆ ಕೂಡ ಪ್ರಶಸ್ತಿ ಲಭಿಸಿದೆ.
ಸ್ನೇಹಿತರೇ, ‘ಮನದ ಮಾತು’ ಮೂಲಕ ಇಂದು ಪ್ರತಿ ಹಳ್ಳಿ, ಪ್ರತಿ ಶಾಲೆ, ಪ್ರತಿ ಪಂಚಾಯಿತಿಯಲ್ಲಿ ಇಂತಹ ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜಿಸಲು ವಿನಂತಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಶಕ್ತಿ ಅಗಾಧವಾಗಿದೆ, ತಂತ್ರಜ್ಞಾನ ಮತ್ತು ಮೊಬೈಲ್ ಮನೆ ಮನೆಗೂ ತಲುಪಿದೆ. ನಿಮ್ಮ ಸ್ಥಳೀಯ ಹಬ್ಬಗಳಾಗಲಿ ಅಥವಾ ಉತ್ಪನ್ನಗಳೇ ಆಗಿರಲಿ, ಅವನ್ನು ಕೂಡಾ ಈ ರೀತಿ ನೀವು ಜಾಗತಿಕವಾಗಿಸಬಹುದು.
ಸ್ನೇಹಿತರೇ, ಹಳ್ಳಿ ಹಳ್ಳಿಗಳಲ್ಲಿ ಆಯೋಜನೆಯಾಗುವ ಜಾತ್ರೆಗಳ ರೀತಿಯಲ್ಲಿಯೇ ನಮ್ಮಲ್ಲಿ ವಿಭಿನ್ನ ಶೈಲಿಯ ನೃತ್ಯಗಳಿಗೆ ಕೂಡಾ ತನ್ನದೇ ಆದ ಪರಂಪರೆ ಇದೆ. ಜಾರ್ಖಂಡ್, ಒಡಿಶಾ ಮತ್ತು ಬಂಗಾಳದ ಬುಡಕಟ್ಟು ಪ್ರದೇಶಗಳಲ್ಲಿ ಒಂದು ಬಹಳ ಪ್ರಸಿದ್ಧ ನೃತ್ಯ ಪ್ರಕಾರವಿದ್ದು ಅದನ್ನು ನಾವು “ಛವು” ಎಂಬ ಹೆಸರಿನಿಂದ ಕರೆಯುತ್ತೇವೆ. ನವೆಬರ್ 15 ರಿಂದ 17 ರವರೆಗೆ ಏಕ ಭಾರತ್, ಶ್ರೇಷ್ಠ ಭಾರತ್ ಭಾವನೆಯೊಂದಿಗೆ ಶ್ರೀನಗರದಲ್ಲಿ “ಛವು” ಉತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರೆಲ್ಲರೂ “ಛವು” ನೃತ್ಯವನ್ನು ಆನಂದಿಸಿದರು. ಶ್ರೀನಗರದ ಯುವಜನತೆಗೆ ಛವು ನೃತ್ಯದ ತರಬೇತಿ ನೀಡುವುದಕ್ಕಾಗಿ ಒಂದು ಕಾರ್ಯಾಗಾರ ಕೂಡಾ ಆಯೋಜನೆಯಾಗಿತ್ತು. ಇದೇ ರೀತಿ, ಕೆಲವು ವಾರಗಳ ಹಿಂದೆಯಷ್ಟೇ, ಕಠುವಾ ಜಿಲ್ಲೆಯಲ್ಲಿ ‘ಬಸೋಹಲಿ’ ಉತ್ಸವ ಆಯೋಜನೆಯಾಗಿತ್ತು. ಈ ಸ್ಥಳವು ಜಮ್ಮುವಿನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ. ಈ ಉತ್ಸವದಲ್ಲಿ ಸ್ಥಳೀಯ ಕಲೆ, ಜಾನಪದ ನೃತ್ಯ ಮತ್ತು ಪಾರಂಪರಿಕ ರಾಮಲೀಲಾ ಕೂಡಾ ಆಯೋಜಿಸಲಾಗಿತ್ತು.
ಸ್ನೇಹಿತರೇ, ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಸೌದಿ ಅರೇಬಿಯಾದಲ್ಲಿ ಕೂಡಾ ಸವಿಯಲಾಗಿದೆ. ಇದೇ ತಿಂಗಳು ಸೌದಿ ಅರೇಬಿಯಾದಲ್ಲಿ ಸಂಸ್ಕೃತ ಉತ್ಸವ ಎಂಬ ಹೆಸರಿನ ಒಂದು ಉತ್ಸವ ಆಯೋಜಿಸಲಾಗಿತ್ತು. ಇದು ಬಹಳ ವಿಶಿಷ್ಟವಾಗಿತ್ತು ಏಕೆಂದರೆ, ಇಡೀ ಕಾರ್ಯಕ್ರಮ ಸಂಸ್ಕೃತ ಭಾಷೆಯಲ್ಲಿತ್ತು. ಮಾತುಕತೆ, ಸಂಗೀತ, ನೃತ್ಯ ಎಲ್ಲವೂ ಸಂಸ್ಕೃತ ಭಾಷೆಯಿಲ್ಲಿಯೇ ಇತ್ತು, ಇದರಲ್ಲಿ ಸ್ಥಳೀಯ ಜನತೆಯ ಪಾಲ್ಗೊಳ್ಳುವಿಕೆಯೂ ಕಾಣುತ್ತಿತ್ತು.
ನನ್ನ ಕುಟುಂಬ ಬಂಧುಗಳೇ, ‘ಸ್ವಚ್ಛ ಭಾರತ’ ಈಗಂತೂ ಇಡೀ ದೇಶದ ಪ್ರೀತಿಯ ವಿಷಯವಾಗಿದೆ. ಇದು ನನ್ನ ಪ್ರೀತಿಯ ವಿಷಯ ಆಗಿಯೇ ಇದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಸಂಗತಿ ತಿಳಿದುಬರುತ್ತಿದ್ದಂತೆಯೇ, ನನ್ನ ಮನ ಆ ನಿಟ್ಟಿನಲ್ಲಿ ಹೊರಟೇ ಹೋಗುತ್ತದೆ ಮತ್ತು ಹೀಗಾಗಿ ಈ ವಿಷಯಕ್ಕೆ ಮನದ ಮಾತಿನಲ್ಲಿ ಸ್ಥಾನವಂತೂ ಖಂಡಿತವಾಗಿಯೂ ದೊರೆಯುವುದು ಸಹಜವೇ ಆಗಿದೆ. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛತೆ – ನೈರ್ಮಲ್ಯ ಕುರಿತಂತೆ ಸಾರ್ವಜನಿಕರ ಚಿಂತನೆಯನ್ನು ಬದಲಾಯಿಸಿಬಿಟ್ಟಿದೆ. ಈ ಉಪಕ್ರಮ ಈಗ ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ, ಇದು ಕೋಟ್ಯಂತರ ಭಾರತೀಯರ ಜೀವನದಲ್ಲಿ ಸುಧಾರಣೆ ತಂದಿದೆ. ಈ ಅಭಿಯಾನವು ವಿಭಿನ್ನ ಕ್ಷೇತ್ರಗಳ ಜನರನ್ನು, ಅದರಲ್ಲೂ ವಿಶೇಷವಾಗಿ ಯುವಜನತೆನ್ನು ಸಾಮೂಹಿಕ ಪಾಲ್ಗೊಳ್ಳುವಿಕೆಗೆ ಪ್ರೇರೇಪಿಸಿದೆ. ಇಂತಹದ್ದೇ ಒಂದು ಪ್ರಶಂಸನೀಯ ಪ್ರಯತ್ನ ಸೂರತ್ ನಲ್ಲಿ ನೋಡಲು ದೊರೆತಿದೆ. ಯುವಜನರ ತಂಡವೊಂದು ಇಲ್ಲಿ ‘ಪ್ರಾಜೆಕ್ಟ್ ಸೂರತ್’ ಆರಂಭಿಸಿದೆ. ಸೂರತ್ ನಗರವನ್ನು ಸ್ವಚ್ಛ ಮತ್ತು ಸುಸ್ಥಿರ ಅಭಿವೃದ್ಧಿಯ ಅತ್ಯುತ್ತಮ ಉದಾಹರಣೆಯಂತೆ “ಮಾದರಿ ನಗರ”ವನ್ನಾಗಿ ಮಾಡುವುದು ಈ ಯೋಜನೆಯ ಗುರಿಯಾಗಿದೆ. ‘ಸ್ವಚ್ಛತಾ ಭಾನುವಾರ’ ಅಥವಾ ‘ಸಫಾಯಿ ಸಂಡೇ’ ಹೆಸರಿನಿಂದ ಆರಂಭಿಸಲಾದ ಈ ಪ್ರಯತ್ನದ ಅಡಿಯಲ್ಲಿ, ಸೂರತ್ ನ ಯುವಜನತೆ ಮೊದಲು ಸಾರ್ವಜನಿಕ ಸ್ಥಳಗಳನ್ನು ಮತ್ತು Dumas Beach ಅನ್ನು ಸ್ವಚ್ಛಗೊಳಿಸುತ್ತಿತ್ತು. ನಂತರದಲ್ಲಿ ಇವರು ತಾಪಿ ನದಿಯ ತೀರವನ್ನು ಸ್ವಚ್ಛಗೊಳಿಸುವ ಪ್ರಯತ್ನದಲ್ಲಿ ತೊಡಗಿಕೊಂಡರು ಮತ್ತು ಕ್ರಮೇಣ ಇದರಲ್ಲಿ ತೊಡಗಿಕೊಳ್ಳುವವರ ಸಂಖ್ಯೆ 50 ಸಾವಿರಕ್ಕಿಂತ ಅಧಿಕವಾಯಿತು ಎಂಬ ವಿಷಯ ಕೇಳಿ ನಿಮಗೆ ನಿಜಕ್ಕೂ ಸಂತೋಷವಾಗುತ್ತದೆ. ಜನರಿಂದ ದೊರೆತ ಬೆಂಬಲಿಂದ ತಂಡದ ಆತ್ಮವಿಶ್ವಾಸ ಹೆಚ್ಚಾಯಿತು. ನಂತರ ಅವರು ತ್ಯಾಜ್ಯ ಸಂಗ್ರಹಣೆಯ ಕೆಲಸವನ್ನೂ ಕೈಗೆತ್ತಿಕೊಂಡರು. ಈ ತಂಡ ಲಕ್ಷಾಂತರ ಕಿಲೋಗ್ರಾಂ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ತಳ ಮಟ್ಟದಲ್ಲಿ ಆರಂಭಿಸಲಾದ ಈ ಪ್ರಯತ್ನವು ಸಾಕಷ್ಟು ಬದಲಾವಣೆ ತರುವಂತಹದ್ದಾಗಿದೆ.
ಸ್ನೇಹಿತರೇ, ಗುಜರಾತ್ ನಿಂದ ಕೂಡಾ ಮತ್ತೊಂದು ವಿಚಾರ ಕುರಿತು ತಿಳಿದು ಬಂದಿದೆ. ಕೆಲವು ವಾರಗಳ ಹಿಂದೆ ಅಲ್ಲಿ ಅಂಬಾಜಿಯಲ್ಲಿ ‘ಭಾದರವೀ ಪೂನಮ್ ಮೇಳ’ ಆಯೋಜನೆಯಾಗಿತ್ತು. ಈ ಜಾತ್ರೆಗೆ 50 ಲಕ್ಷಕ್ಕಿಂತ ಅಧಿಕ ಮಂದಿ ಬಂದಿದ್ದರು. ಈ ಜಾತ್ರೆ ಪ್ರತಿವರ್ಷ ನಡೆಯುತ್ತದೆ. ಜಾತ್ರೆಗೆ ಬಂದಿದ್ದ ಜನರು ಗಬ್ಬರ್ ಬೆಟ್ಟದ ಒಂದು ದೊಡ್ಡ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು ಎನ್ನುವುದು ಬಹಳ ವಿಶೇಷವಾಗಿತ್ತು. ದೇವಾಲಯದ ಸುತ್ತ ಮುತ್ತಲಿನ ಇಡೀ ಪ್ರದೇಶವನ್ನು ಸ್ವಚ್ಛವಾಗಿ ಇರಿಸುವ ಈ ಅಭಿಯಾನ ಬಹಳ ಸ್ಫೂರ್ತಿದಾಯಕವಾಗಿತ್ತು.
ಸ್ನೇಹಿತರೇ, ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನ ಅಥವಾ ಒಂದು ವಾರಕಾಲ ನಡೆಯುವ ಅಭಿಯಾನವಲ್ಲ, ಇದು ಜೀವನದಲ್ಲಿ ಹಾಸುಹೊಕ್ಕಾಗುವ ಕೆಲಸವಾಗಿದೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ತಮ್ಮ ಇಡೀ ಜೀವನವನ್ನು ಸ್ವಚ್ಛತೆಗೆ ಸಂಬಂಧಿಸಿದ ವಿಷಯಗಳಿಗೆ ಮೀಸಲಾಗಿಟ್ಟ ಜನರನ್ನು ನಾವು ನಮ್ಮ ಸುತ್ತ ಮುತ್ತ ನೋಡುತ್ತಿರುತ್ತೇವೆ. ತಮಿಳುನಾಡಿನ ಕೊಯಮಏತ್ತೂರಿನ ನಿವಾಸಿ ಲೋಕನಾಥನ್ ಅವರು ಇದಕ್ಕೆ ಒಂದು ಉದಾಹರಣೆ. ಬಾಲ್ಯದಲ್ಲಿ ಬಡ ಮಕ್ಕಳ ಹರಿದ ಉಡುಪುಗಳನ್ನು ನೋಡಿ ಅವರು ಬಹಳ ಚಿಂತಿತರಾಗುತ್ತಿದ್ದರು. ಆ ನಂತರ ಅವರು ಅಂತಹ ಮಕ್ಕಳ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದರು ಮತ್ತು ತಮ್ಮ ಆದಾಯದ ಒಂದು ಭಾಗವನ್ನು ದಾನವಾಗಿ ನೀಡಲು ಆರಂಭಿಸಿದರು. ಯಾವಾಗಲಾದರೂ ಹಣದ ಕೊರತೆ ಕಂಡುಬಂದಾಗ, ಬಡ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ಲೋಕನಾಥನ್ ಅವರು ಶೌಚಾಲಯಗಳನ್ನು ಕೂಡಾ ಸ್ವಚ್ಛಗೊಳಿಸುತ್ತಿದ್ದರು. ಅವರು ಕಳೆದ 25 ವರ್ಷಗಳಿಂದ ಸಂಪೂರ್ಣ ಸಮರ್ಪಣಾ ಭಾವನೆಯಿಂದ ತಮ್ಮ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಇಲ್ಲಿಯವರೆಗೂ 1500 ಕ್ಕೂ ಅಧಿಕ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ನಾನು ಮತ್ತೊಮ್ಮೆ ಇಂತಹ ಪ್ರಯತ್ನಗಳನ್ನು ಶ್ಲಾಘಿಸಲು ಬಯಸುತ್ತೇನೆ. ದೇಶಾದ್ಯಂತ ನಡೆಯುತ್ತಿರುವ ಇಂತಹ ಅನೇಕ ಪ್ರಯತ್ನಗಳು ನಮಗೆ ಸ್ಫೂರ್ತಿ ನೀಡುವುದು ಮಾತ್ರವಲ್ಲದೇ, ಏನನ್ನಾದರೂ ಹೊಸದನ್ನು ಮಾಡಿಯೇ ಹೋಗಬೇಕೆನ್ನುವ ಇಚ್ಛಾಶಕ್ತಿಯನ್ನೂ ಉತ್ತೇಜಿಸುತ್ತದೆ.
ನನ್ನ ಕುಟುಂಬ ಬಂಧುಗಳು, 21ನೇ ಶತಮಾನದ ಅತಿ ದೊಡ್ಡ ಸವಾಲುಗಳ ಪೈಕಿ ’ಜಲ ಸಂರಕ್ಷಣೆ ’ ಎನ್ನುವುದೂ ಕೂಡಾ ಒಂದೆನಿಸಿದೆ. ನೀರನ್ನು ಸಂರಕ್ಷಿಸುವುದು ಜೀವ ಉಳಿಸುವ ಕೆಲಸಕ್ಕಿಂತ ಕಡಿಮೆಯದ್ದೇನಲ್ಲ. ನಾವು ಸಾಮೂಹಿಕ ಭಾವನೆಯೊಂದಿಗೆ ಯಾವುದೇ ಕೆಲಸವನ್ನು ಮಾಡಿದರೂ, ಅದರಲ್ಲಿ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ. ಇದಕ್ಕೆ ಒಂದು ಉದಾಹರಣೆಗಳ ಪೈಕಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ನಿರ್ಮಾಣವಾಗುತ್ತಿರುವ ‘ಅಮೃತ ಸರೋವರ’ ಕೂಡಾ ಸೇರಿದೆ. ‘ಅಮೃತ ಮಹೋತ್ಸವ’ ದ ಮೂಲಕ ಭಾರತ ನಿರ್ಮಿಸಿರುವ 65 ಸಾವಿರಕ್ಕೂ ಅಧಿಕ ‘ಅಮೃತ ಸರೋವರಗಳು’ ಭವಿಷ್ಯದ ಪೀಳಿಗೆಗಳಿಗೆ ಪ್ರಯೋಜನ ಉಂಟುಮಾಡುತ್ತವೆ. ಎಲ್ಲೆಲ್ಲಿ ಅಮೃತ ಸರೋವರಗಳ ನಿರ್ಮಾಣವಾಗಿದೆಯೋ ಅಲ್ಲೆಲ್ಲಾ ಅವುಗಳ ಬಗ್ಗೆ ನಿರಂತವಾಗಿ ಕಾಳಜಿ ವಹಿಸುವುದು, ಅವು ಜಲ ಸಂರಕ್ಷಣೆಯ ಪ್ರಮುಖ ಮೂಲವಾಗಿ ಇರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಈಗ ನಮ್ಮೆಲ್ಲರದ್ದಾಗಿದೆ.
ಸ್ನೇಹಿತರೇ, ಜಲ ಸಂರಕ್ಷಣೆ ಕುರಿತ ಈ ಮಾತುಕತೆಯ ನಡುವೆಯೇ, ನನಗೆ ಗುಜರಾತ್ ನ ಅಮರೇಲಿಯಲ್ಲಿ ನಡೆದ ಒಂದು ‘ಜಲ ಉತ್ಸವ’ ಕುರಿತು ಕೂಡಾ ತಿಳಿದುಬಂದಿತು. ಗುಜರಾತಿನಲ್ಲಿ ಹನ್ನೆರಡು ತಿಂಗಳೂ ಹರಿಯುವ ನದಿಗಳ ಕೊರತೆಯೂ ಇದೆ ಆದ್ದರಿಂದ ಜನರು ಬಹುತೇಕ ಮಳೆಯ ನೀರನ್ನೇ ಅವಲಂಬಿಸಬೇಕಾಗುತ್ತದೆ. ಕಳೆದ 20-25 ವರ್ಷಗಳಲ್ಲಿ ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳ ಪ್ರಯತ್ನದ ನಂತರ, ಅಲ್ಲಿನ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಬದಲಾವಣೆ ಬಂದಿದೆ. ಆದ್ದರಿಂದಲೇ ಅಲ್ಲಿ ‘ಜಲ ಉತ್ಸವ’ ದ ಬಹು ದೊಡ್ಡ ಪಾತ್ರವಿದೆ. ಅಮರೇಲಿಯಲ್ಲಿ ನಡೆದ ‘ಜಲ ಉತ್ಸವ’ ದ ಮೂಲಕ ‘ಜಲ ಸಂರಕ್ಷಣೆ’ ಮತ್ತು ಸರೋವರಗಳ ಸಂರಕ್ಷಣೆ ಕುರಿತಂತೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಯಿತು. ಇದರಲ್ಲಿ Water Sports ಗೆ ಕೂಡಾ ಉತ್ತೇಜನ ನೀಡಲಾಯಿತು, ಜಲ ಭದ್ರತೆ ಕುರಿತ ತಜ್ಞರೊಂದಿಗೆ ಚಿಂತನ-ಮಂಥನ ಕೂಡಾ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ತ್ರಿವರ್ಣ ಜಲ ಕಾರಂಜಿ ಕೂಡಾ ಬಹಳ ಇಷ್ಟವಾಯಿತು. ಸೂರತ್ ನಲ್ಲಿ ವಜ್ರಗಳ ವ್ಯಾಪಾರದಲ್ಲಿ ಹೆಸರು ಮಾಡಿರುವ ಸಾವ್ಜಿ ಭಾಯಿ ಧೋಲಾಕಿಯಾ ಅವರ ಪ್ರತಿಷ್ಠಾನದಿಂದ ಈ ಜಲ-ಉತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ, ಜಲಸಂರಕ್ಷಣೆಗಾಗಿ ಇದೇ ರೀತಿಯ ಕೆಲಸಗಳನ್ನು ಮಾಡುವುದಕ್ಕಾಗಿ ಶುಭ ಹಾರೈಸುತ್ತೇನೆ.
ನನ್ನ ಕುಟುಂಬ ಬಾಂಧವರೇ, ಇಂದು ವಿಶ್ವಾದ್ಯಂತ ಕೌಶಲ್ಯಾಭಿವೃದ್ಧಿಯ ಪ್ರಾಮುಖ್ಯತೆಯನ್ನು ಅಂಗೀಕರಿಸಲಾಗುತ್ತಿದೆ. ನಾವು ಯಾರಿಗಾದರೂ ಯಾವುದಾದರೊಂದು ಕೌಶಲ್ಯವನ್ನು ಕಲಿಸಿದಾಗ, ಅದು ಅವರಿಗೆ ಕುಶಲತೆ ಕಲಿಸುವುದು ಮಾತ್ರವಲ್ಲದೇ, ಅವರಿಗೆ ಆದಾಯದ ದಾರಿಯನ್ನು ಕೂಡಾ ಒದಗಿಸುತ್ತೇವೆ. ಸಂಸ್ಥೆಯೊಂದು ಕಳೆದ ನಾಲ್ಕು ದಶಕಗಳಿಂದ ಕೌಶಲ್ಯಾಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. ಈ ಸಂಸ್ಥೆ ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿದೆ ಮತ್ತು ಈ ಸಂಸ್ಥೆಯ ಹೆಸರು ‘ಬೆಲ್ಜಿಪುರಂ ಯೂಥ್ ಕ್ಲಬ್‘ ಎಂಬುದಾಗಿದೆ. ಕೌಶಲ್ಯಾಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತಾ, ‘ಬೆಲ್ಜಿಪುರಂ ಯೂಥ್ ಕ್ಲಬ್‘ ಸುಮಾರು 7000 ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ಇವರಲ್ಲಿ ಹೆಚ್ಚಿನ ಮಹಿಳೆಯರು ಇಂದು ತಮ್ಮ ಸಾಮರ್ಥ್ಯದಿಂದ ಕೆಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯು ಬಾಲಕಾರ್ಮಿಕರಿಗೆ ಕೂಡಾ ಯಾವುದಾದರೊಂದು ಕೌಶಲ್ಯ ಕಲಿಸಿ ಆ ವಿಷವರ್ತುಲದಿಂದ ಹೊರಬರುವುದಕ್ಕೆ ಆ ಮಕ್ಕಳಿಗೆ ಸಹಾಯ ಕೂಡಾ ಮಾಡಿದೆ. ‘ಬೆಲ್ಜಿಪುರಂ ಯೂಥ್ ಕ್ಲಬ್‘ ನ ತಂಡವು ರೈತ ಉತ್ಪಾದಕ ಸಂಘ ಅಂದರೆ FPOs ನೊಂದಿಗೆ ಸಂಪರ್ಕಿತರಾಗಿರುವ ರೈತರಿಗೆ ಕೂಡಾ ಹೊಸ ಕೌಶಲ್ಯ ಕಲಿಸಿದೆ ಮತ್ತು ಇದರಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಸಶಕ್ತರಾಗಿದ್ದಾರೆ. ಸ್ವಚ್ಛತೆ ಕುರಿತಂತೆ ಕೂಡಾ ಈ ಯೂಥ್ ಕ್ಲಬ್ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಕ್ಲಬ್ ಅನೇಕ ಶೌಚಾಲಯಗಳ ನಿರ್ಮಾಣಕ್ಕೆ ಕೂಡಾ ಸಹಾಯ ಮಾಡಿದೆ. ಕೌಶಲ್ಯಾಭಿವೃದ್ಧಿಗಾಗಿ ಈ ಸಂಸ್ಥೆಯೊಂದಿಗೆ ತೊಡಗಿಕೊಂಡಿರುವ ಪ್ರತಿಯೊಬ್ಬರಿಗೂ ನಾನು ಅನೇಕಾನೇಕ ಅಭಿನಂದನೆ ಸಲ್ಲಿಸಲುತ್ತೇನೆ ಮತ್ತು ಅವರುಗಳನ್ನು ಪ್ರಶಂಸಿಸುತ್ತೇನೆ. ಇಂದು ದೇಶದ ಹಳ್ಳಿ ಹಳ್ಳಿಗಳಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಇಂತಹ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ.
ಸ್ನೇಹಿತರೇ, ಯಾವುದಾದರೊಂದು ಗುರಿ ಸಾಧನೆಗಾಗಿ ಸಾಮೂಹಿಕ ಪ್ರಯತ್ನಗಳು ನಡೆದಾಗ ಯಶಸ್ಸಿನ ಎತ್ತರ ಕೂಡಾ ಬಹಳವಾಗುತ್ತದೆ. ನಾನು ನಿಮ್ಮೆಲ್ಲರೊಂದಿಗೆ ಲಡಾಖ್ ನ ಒಂದು ಪ್ರೇರಣಾತ್ಮಕ ಉದಾಹರಣೆ ನೀಡಲು ಬಯಸುತ್ತೇನೆ. ನೀವು ಪಶ್ಮೀನಾ ಶಾಲು ಬಗ್ಗೆ ಖಂಡಿತವಾಗಿಯೂ ಕೇಳಿಯೇ ಇರುತ್ತೀರಿ. ಕಳೆದ ಕೆಲವು ಸಮಯದಿಂದ ಲಡಾಖಿನ ಪಶ್ಮೀನಾ ಕುರಿತಂತೆ ಬಹಳ ಚರ್ಚೆ ನಡೆಯುತ್ತಿದೆ. ಲಡಾಖಿನ ಪಶ್ಮೀನಾ Looms of Laddakh ಹೆಸರಿನಿಂದ ವಿಶ್ವಾದ್ಯಂತ ಮಾರುಕಟ್ಟೆಗಳಿಗೆ ತಲುಪುತ್ತಿದೆ. ಇದನ್ನು ತಯಾರಿಸಲು 15 ಗ್ರಾಮಗಳ 450 ಕ್ಕೂ ಅಧಿಕ ಮಹಿಳೆಯರ ಪಾತ್ರವಿದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಮೊದಲು ಅವರು ಅಲ್ಲಿಗೆ ಬರುವ ಪ್ರವಾಸಿಗರಿಗೆ ಮಾತ್ರಾ ಇವುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ಡಿಜಿಟಲ್ ಭಾರತದ ಈ ಯುಗದಲ್ಲಿ, ಅವರು ತಯಾರಿಸಿದ ವಸ್ತುಗಳು ವಿಶ್ವದ ಬೇರೆ ಬೇರೆ ಮಾರುಕಟ್ಟೆಗಳಿಗೆ ತಲುಪಲಾರಂಭಿಸಿವೆ. ಅಂದರೆ ನಮ್ಮ ಲೋಕಲ್ ಈಗ ಗ್ಲೋಬಲ್ ಆಗುತ್ತಿದೆ ಮತ್ತು ಇದರಿಂದಾಗಿ ಈ ಮಹಿಳೆಯರ ಆದಾಯವೂ ಹೆಚ್ಚಳವಾಗಿದೆ.
ಸ್ನೇಹಿತರೆ, ನಾರಿ ಶಕ್ತಿಯ ಇಂತಹ ಯಶಸ್ಸು ದೇಶದ ಮೂಲೆಮೂಲೆಗಳಲ್ಲಿಯೂ ಇದೆ. ಇಂತಹ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಜನರ ಮುಂದೆ ತರುವುದು ಅಗತ್ಯವಾಗಿದೆ. ಅಂತೆಯೇ ಇಂತಹ ವಿಷಯಗಳನ್ನು ಹೇಳಲು ಮನ್ ಕಿ ಬಾತ್ ಗಿಂತ ಉತ್ತಮ ಮಾಧ್ಯಮ ಮತ್ತೇನಿದೆ? ಹಾಗಾದರೆ ನೀವು ಇಂತಹ ಉದಾಹಣೆಗಳನ್ನು ನನ್ನೊಂದಿಗೆ ಹೆಚ್ಚು ಹೆಚ್ಚು ಹಂಚಿಕೊಳ್ಳಿ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ನಾನು ಕೂಡಾ ಮಾಡುತ್ತೇನೆ.
ನನ್ನ ಕುಟುಂಬ ಬಾಂಧವರೇ, ‘ಮನದ ಮಾತಿನಲ್ಲಿ’ ನಾವು ಸಮಾಜದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾದ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡುತ್ತೇವೆ. ‘ಮನ್ ಕಿ ಬಾತ್’ ನ ಮತ್ತೊಂದು ಸಾಧನೆಯೆಂದರೆ ಇದು ಮನೆ ಮನೆಯಲ್ಲೂ ರೇಡಿಯೋವನ್ನು ಮತ್ತಷ್ಟು ಜನಪ್ರಿಯಗೊಳಿಸಿದೆ. MyGOV ನಲ್ಲಿ ನನಗೆ ಉತ್ತರ ಪ್ರದೇಶದಲ್ಲಿ ಅಮರೋಹಾ ನಿವಾಸಿ ರಾಮ್ ಸಿಂಗ್ ಬೌದ್ಧ್ ಅವರಿಂದ ಪತ್ರವೊಂದು ಬಂದಿದೆ. ರಾಮ್ ಸಿಂಗ್ ಅವರು ಕಳೆದ ಹಲವು ದಶಕಗಳಿಂದ ರೇಡಿಯೋ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ‘ಮನ್ ಕಿ ಬಾತ್’ ನಂತರ ತಮ್ಮ ರೇಡಿಯೋ ಸಂಗ್ರಹಾಲಯದ ಬಗ್ಗೆ ಜನರ ಕುತೂಹಲ ಮತ್ತಷ್ಟು ಹೆಚ್ಚಾಯಿತೆಂದು ಅವರು ಹೇಳುತ್ತಾರೆ. ಅಂತೆಯೇ ‘ಮನದ ಮಾತಿನಿಂದ ಸ್ಫೂರ್ತಿ ಪಡೆದ ಅಹಮದಾಬಾದ್ ಸಮೀಪದ ಪುಣ್ಯಕ್ಷೇತ್ರ ಪ್ರೇರಣಾ ತೀರ್ಥ್, ಒಂದು ಆಕರ್ಷಕ ಪ್ರದರ್ಶನ ಏರ್ಪಡಿಸಿದೆ. ಇದರಲ್ಲಿ ದೇಶ-ವಿದೇಶಗಳ 100 ಕ್ಕೂ ಅಧಿಕ ಹಳೆಯ ರೇಡಿಯೋಗಳನ್ನು ಇರಿಸಲಾಗಿದೆ. ಇಲ್ಲಿ ‘ಮನ್ ಕಿ ಬಾತ್’ ನ ಇಲ್ಲಿಯವರೆಗಿನ ಎಲ್ಲಾ ಸಂಚಿಕೆಗಳನ್ನೂ ಕೇಳಬಹುದಾಗಿದೆ. ‘ಮನ್ ಕಿ ಬಾತ್’ ನಿಂದ ಪ್ರೇರಣೆ ಪಡೆದು ಹಲವರು ತಮ್ಮ ಸ್ವಂತ ಕೆಲಸಕಾರ್ಯಗಳನ್ನು ಆರಂಭಿಸಿದ್ದಾರೆನ್ನುವುದು ಇಂತಹ ಅನೇಕ ಉದಾಹರಣೆಗಳಿಂದ ತಿಳಿದು ಬರುತ್ತದೆ. ಇಂತಹದ್ದೇ ಒಂದು ಉದಾಹರಣೆ ಕರ್ನಾಟಕದ ಚಾಮರಾಜನಗರದ ವರ್ಷಾ ಅವರದ್ದಾಗಿದೆ. ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಲು ‘ಮನ್ ಕಿ ಬಾತ್’ ಪ್ರೇರಣೆ ನೀಡಿದೆ. ಈ ಕಾರ್ಯಕ್ರಮದ ಒಂದು ಸಂಚಿಕೆಯಿಂದ ಸ್ಫೂರ್ತಿ ಪಡೆದ ಅವರು ಬಾಳೆಯಿಂದ ಸಾವಯವ ಗೊಬ್ಬರ ತಯಾರಿಸುವ ಕೆಲಸ ಪ್ರಾರಂಭಿಸಿದರು. ಪ್ರಕೃತಿಯ ಬಗ್ಗೆ ಅಪಾರ ಒಲವು ಹೊಂದಿರುವ ವರ್ಷಾ ಅವರ ಈ ಉಪಕ್ರಮ ಇತರರಿಗೆ ಕೂಡಾ ಉದ್ಯೋಗಾವಕಾಶವನ್ನು ಒದಗಿಸಿದೆ.
ನನ್ನ ಕುಟುಂಬದ ಜನರೇ, ನಾಳೆ ನವೆಂಬರ್ 27 ರಂದು ಕಾರ್ತೀಕ ಹುಣ್ಣಿಮೆಯ ಹಬ್ಬ. ಇದೇ ದಿನದಂದು ‘ದೇವ ದೀಪಾವಳಿ’ ಹಬ್ಬ ಕೂಡಾ ಆಚರಿಸಲಾಗುತ್ತದೆ. ಕಾಶಿ ‘ದೇವ ದೀಪಾವಳಿ’ಯನ್ನು ಖಂಡಿತವಾಗಿಯೂ ನೋಡಬೇಕೆಂದು ನನಗೆ ಬಹಳ ಆಸೆಯಿದೆ. ಈ ಬಾರಿ ನನಗೆ ಕಾಶಿಗೆ ಹೋಗಲಾಗುತ್ತಿಲ್ಲ, ಆದರೆ ಮನದ ಮಾತಿನ ಮೂಲಕ ವಾರಾಣಸಿಯ ಜನತೆಗೆ ನಾನು ನನ್ನ ಶುಭ ಹಾರೈಕೆಗಳನ್ನು ಖಂಡಿತವಾಗಿಯೂ ಕಳುಹಿಸುತ್ತಿದ್ದೇನೆ. ಈ ಬಾರಿ ಕೂಡಾ ಕಾಶಿಯ ಘಾಟ್ ಗಳಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತದೆ, ಭವ್ಯ ಆರತಿಯೂ ನಡೆಯಲಿದೆ, Laser Show ಇರಲಿದೆ, ದೇಶ ವಿದೇಶಗಳಿಂದ ಆಗಮಿಸಿರುವಂತರಹ ಲಕ್ಷಾಂತರ ಜನರು ‘ದೇವ ದೀಪಾವಳಿ’ ಆನಂದ ಸವಿಯಲಿದ್ದಾರೆ.
ಸ್ನೇಹಿತರೇ, ನಾಳೆ ಹುಣ್ಣಿಮೆಯ ದಿನದಂದೇ ಗುರು ನಾನಕ್ ದೇವ್ ಅವರ ಜಯಂತಿಯೂ ಹೌದು. ಗುರುನಾನಕ್ ಅವರ ಅಮೂಲ್ಯ ಸಂದೇಶ ಕೇವಲ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಇಂದಿಗೂ ಕೂಡಾ ಪ್ರೇರಣೆ ಮತ್ತು ಪ್ರಸ್ತುತವಾಗಿದೆ. ಇಂದು ನಮಗೆ ಸರಳತೆ, ಸಾಮರಸ್ಯ, ಮತ್ತು ಇತರರೊಂದಿಗೆ ಪ್ರೀತಿ ಪ್ರೇಮದಿಂದ ಬಾಳಲು ಪ್ರೇರಣೆ ನೀಡುತ್ತದೆ. ಗುರು ನಾನಕ್ ದೇವ್ ಅವರ ಸೇವಾ ಮನೋಭಾವ, ಸೇವಾ ಕಾರ್ಯಗಳನ್ನು ನಮ್ಮ ಸಿಖ್ ಸೋದರ-ಸೋದರಿಯರು ಇಡೀ ವಿಶ್ವದಲ್ಲಿ ಇಂದಿಗೂ ಅನುಸರಣೆ ಮಾಡುತ್ತಿದ್ದಾರೆ. ನಾನು ‘ಮನ್ ಕಿ ಬಾತ್’ ನ ಎಲ್ಲಾ ಶ್ರೋತೃಗಳಿಗೂ ಗುರು ನಾನಕ್ ದೇವ್ ಅವರ ಜನ್ಮದಿನದ ಅನೇಕಾನೇಕ ಶುಭಾಶಯಗಳನ್ನು ಕೋರುತ್ತೇನೆ.
ನನ್ನ ಕುಟುಂಬದ ಬಾಂಧವರೇ, ಇಂದಿನ ‘ಮನದ ಮಾತನ್ನು’ ನಾನು ಇಲ್ಲಿಗೆ ಮುಗಿಸುತ್ತಿದ್ದೇನೆ. ನೋಡುತ್ತಿದ್ದಂತೆಯೇ 2023 ಮುಗಿಯುತ್ತಾ ಬಂದಿದೆ. ಪ್ರತಿ ಬಾರಿಯಂತೆಯೇ ನಾವು, ನೀವು ಎಲ್ಲರೂ ಅರೆ ಈ ವರ್ಷ ಇಷ್ಟು ಬೇಗ ಮುಗಿದುಹೋಯಿತೇ ಎಂದು ಯೋಚಿಸುತ್ತಿದ್ದೇವಲ್ಲವೇ, ಆದರೆ ಈ ವರ್ಷ ಭಾರತಕ್ಕೆ ಅನೇಕ ಸಾಧನೆಗಳ ವರ್ಷವಾಗಿತ್ತು ಮತ್ತು ಭಾರತದ ಸಾಧನೆ ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ. ‘ಮನ್ ಕಿ ಬಾತ್’ ಕಾರ್ಯಕ್ರಮ ಭಾರತೀಯರ ಇಂತಹ ಸಾಧನೆಗಳನ್ನು ಜನತೆಯ ಮುಂದಿರಿಸಲು ಒಂದು ಸಶಕ್ತ ಮಾಧ್ಯಮವಾಗಿದೆ ಎಂದು ನನಗೆ ಸಂತೋಷವೆನಿಸುತ್ತದೆ. ಮುಂದಿನ ಬಾರಿ ದೇಶವಾಸಿಗಳ ಅನೇಕ ಯಶಸ್ಸುಗಳ ಕುರಿತಂತೆ ನಿಮ್ಮೊಂದಿಗೆ ಮಾತನಾಡುತ್ತೇನೆ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ. ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರೀತಿಯ ಪರಿವಾರದವರೆ, ನಮಸ್ಕಾರ. ‘ಮನದ ಮಾತಿಗೆ’ ನಿಮಗೆ ಮತ್ತೊಮ್ಮೆ ಸ್ವಾಗತ. ನಾಡಿನಾದ್ಯಂತ ಹಬ್ಬ ಹರಿದಿನಗಳ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಈ ಕಂತು ಪ್ರಸಾರವಾಗುತ್ತಿದೆ. ಮುಂಬರುವ ಎಲ್ಲಾ ಹಬ್ಬಗಳಿಗೆ ನಿಮ್ಮೆಲ್ಲರಿಗೂ ಅನಂತ ಶುಭ ಹಾರೈಕೆಗಳು.
ಸ್ನೇಹಿತರೇ, ಈ ಹಬ್ಬಗಳ ಸಂಭ್ರಮದ ಮಧ್ಯೆ ದೆಹಲಿಯಿಂದ ಬಂದ ಸುದ್ದಿಯೊಂದಿಗೆ ನಾನು 'ಮನದ ಮಾತನ್ನು' ಆರಂಭಿಸಬಯಸುತ್ತೇನೆ. ಈ ತಿಂಗಳ ಆರಂಭದಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ದೆಹಲಿಯಲ್ಲಿ ಖಾದಿ ವಸ್ತ್ರಗಳ ದಾಖಲೆಯ ಮಾರಾಟವಾಗಿತ್ತು. ಇಲ್ಲಿನ ಕನ್ನಾಟ್ ಪ್ಲೇಸ್ ನಲ್ಲಿ ಒಂದೇ ಖಾದಿ ಅಂಗಡಿಯಿಂದ ಒಂದೇ ದಿನದಲ್ಲಿ 1.5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜನರು ಖರೀದಿಸಿದ್ದರು. ಈ ತಿಂಗಳಿನಲ್ಲಿ ನಡೆಯುತ್ತಿರುವ ಖಾದಿ ಮಹೋತ್ಸವವು ಮತ್ತೊಮ್ಮೆ ತನ್ನ ಹಳೆಯ ಮಾರಾಟದ ದಾಖಲೆಗಳನ್ನೆಲ್ಲ ಮುರಿದಿದೆ. ನಿಮಗೆ ಇನ್ನೊಂದು ವಿಷಯ ಬಗ್ಗೆ ತಿಳಿದು ಸಂತೋಷವಾಗಬಹುದು. ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಖಾದಿ ಉತ್ಪನ್ನಗಳ ಮಾರಾಟಕ್ಕೆ ಸಾಕಷ್ಟು ಶ್ರಮಿಸಿದರೂ 30 ಸಾವಿರ ಕೋಟಿ ರೂಪಾಯಿಗಿಂತ ಕಡಿಮೆಯಾಗುತ್ತಿತ್ತು. ಈಗ ಇದು ವೃದ್ಧಿಗೊಂಡು ಸುಮಾರು 1.25 ಲಕ್ಷ ಕೋಟಿ ರೂಪಾಯಿಗೆ ತಲುಪುತ್ತಿದೆ. ಖಾದಿ ಮಾರಾಟವನ್ನು ಹೆಚ್ಚಿಸುವುದು ಎಂದರೆ ಅದರ ಪ್ರಯೋಜನಗಳು ನಗರದಿಂದ ಹಳ್ಳಿಯವರೆಗೆ ಸಮಾಜದ ವಿವಿಧ ವರ್ಗಗಳಿಗೆ ತಲುಪುತ್ತವೆ. ಈ ಮಾರಾಟದ ಲಾಭ ನಮ್ಮ ನೇಕಾರರು, ಕುಶಲಕರ್ಮಿಗಳು, ನಮ್ಮ ರೈತರು, ಆಯುರ್ವೇದ ಸಸ್ಯಗಳನ್ನು ನೆಡುವ ಗುಡಿ ಕೈಗಾರಿಕೆಗಳು, ಪ್ರತಿಯೊಬ್ಬರಿಗೂ ಲಭಿಸುತ್ತಿದೆ ಮತ್ತು ಇದೇ 'ವೋಕಲ್ ಫಾರ್ ಲೋಕಲ್' ಅಭಿಯಾನದ ಶಕ್ತಿಯಾಗಿದೆ. ಹಾಗೆಯೇ ಕ್ರಮೇಣ ದೇಶಬಾಂಧವರ ಬೆಂಬಲವೂ ವೃದ್ಧಿಸುತ್ತಿದೆ.
ಸ್ನೇಹಿತರೇ, ಇಂದು ನಾನು ಮತ್ತೊಂದು ವಿನಂತಿಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ನಾನು ಆ ಕುರಿತು ಬಹಳಷ್ಟು ವಿನಂತಿಸಬಯಸುತ್ತೇನೆ. ನೀವು ಯಾವಾಗಲಾದರೂ ಪ್ರವಾಸಕ್ಕೆ ತೆರಳಿದರೆ, ತೀರ್ಥಯಾತ್ರೆಗೆ ಹೋದರೆ, ಅಲ್ಲಿನ ಸ್ಥಳೀಯ ಕಲಾವಿದರ ಉತ್ಪನ್ನಗಳನ್ನು ಖಂಡಿತ ಖರೀದಿಸಿ. ನಿಮ್ಮ ಪ್ರವಾಸದ ಒಟ್ಟಾರೆ ಬಜೆಟ್ನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಖಂಡಿತ ಪ್ರಮುಖ ಆದ್ಯತೆ ನೀಡಿ. ಅದು ಶೇಕಡಾ 10 ಆಗಿರಲಿ 20 ಆಗಿರಲಿ, ನಿಮ್ಮ ಬಜೆಟ್ ಅನುಮತಿಸುವಷ್ಟು, ಸ್ಥಳೀಯ ವಸ್ತುಗಳಿಗಾಗಿ ಖರ್ಚು ಮಾಡಿ ಮತ್ತು ಅದನ್ನು ಅಲ್ಲಿಯೇ ಖರ್ಚು ಮಾಡಿ.
ಸ್ನೇಹಿತರೇ, ಪ್ರತಿ ಬಾರಿಯಂತೆ, ಈ ಬಾರಿಯೂ, ನಮ್ಮ ಹಬ್ಬಗಳಲ್ಲಿ, ನಮ್ಮ ಆದ್ಯತೆಯು 'ವೋಕಲ್ ಫಾರ್ ಲೋಕಲ್’ ಗಾಗಿ ಆಗಿರಬೇಕು ಮತ್ತು ನಾವೆಲ್ಲರೂ ಒಗ್ಗೂಡಿ ಆ ಕನಸನ್ನು ನನಸಾಗಿಸೋಣ, ನಮ್ಮ ಕನಸು 'ಸ್ವಾವಲಂಬಿ ಭಾರತ'. ನನ್ನ ದೇಶದ ಪ್ರಜೆಯ ಶ್ರಮದ ಘಮವಿರುವಂತಹ, ನನ್ನ ನಾಡಿನ ಯುವಕರ ಪ್ರತಿಭೆವುಳ್ಳಂತಹ, ನನ್ನ ದೇಶವಾಸಿಗಳಿಗೆ ಉದ್ಯೋಗ ಒದಗಿಸಿದ ಉತ್ಪಾದನೆಯಿಂದಲೇ ಈ ಬಾರಿ ಮನೆಯನ್ನು ಬೆಳಗಿಸಿ. ದೈನಂದಿನ ಜೀವನದ ಯಾವುದೇ ಅವಶ್ಯಕ ವಸ್ತುವಿದ್ದರೂ ಅಂತಹ ಉತ್ಪನ್ನವನ್ನು ಸ್ಥಳೀಯವಾಗಿಯೇ ಖರೀದಿಸೋಣ. ಆದರೆ, ನೀವು ಇನ್ನೊಂದು ವಿಷಯದ ಮೇಲೆ ಗಮನಹರಿಸಬೇಕು. ಈ 'ವೋಕಲ್ ಫಾರ್ ಲೋಕಲ್' ಎಂಬ ಸ್ಪೂರ್ತಿ ಕೇವಲ ಹಬ್ಬದ ಶಾಪಿಂಗ್ಗೆ ಮಾತ್ರ ಸೀಮಿತವಾಗಿಲ್ಲ ಮತ್ತು ನಾನು ಎಲ್ಲೋ ನೋಡಿದ್ದೆ, ಜನರು ದೀಪಾವಳಿ ಹಣತೆಗಳನ್ನು ಖರೀದಿಸುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ 'ವೋಕಲ್ ಫಾರ್ ಲೋಕಲ್' ಎಂದು ಪೋಸ್ಟ್ ಮಾಡುತ್ತಾರೆ - ಇಲ್ಲ, ಇದು ಕೇವಲ ಪ್ರಾರಂಭವಷ್ಟೇ. ನಾವು ಬಹಳಷ್ಟು ಮುಂದೆ ಸಾಗಬೇಕಿದೆ, ಜೀವನದ ಪ್ರತಿಯೊಂದು ಅವಶ್ಯಕತೆ ಪೂರೈಸುವ ವಸ್ತುಗಳು - ನಮ್ಮ ದೇಶದಲ್ಲಿ, ಈಗ ಲಭ್ಯವಿವೆ.
ಈ ಧ್ಯೇಯ ಕೇವಲ ಸಣ್ಣ ವ್ಯಾಪಾರಿಗಳಿಂದ ಮತ್ತು ಬೀದಿಬದಿ ವ್ಯಾಪಾರಿಗಳಿಂದ ಸರಕುಗಳನ್ನು ಖರೀದಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದು ಭಾರತ ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ಅನೇಕ ದೊಡ್ಡ ದೊಡ್ಡ ಬ್ರ್ಯಾಂಡ್ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿವೆ. ನಾವು ಆ ಉತ್ಪನ್ನಗಳನ್ನು ಒಪ್ಪಿಕೊಂಡಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚು ಪ್ರಚಾರ ಲಭಿಸುತ್ತದೆ, ಜೊತೆಗೆ, ಇದು ಕೂಡ ಒಂದು ರೀತಿ ‘ವೋಕಲ್ ಫಾರ್ ಲೋಕಲ್’ ಆಗುತ್ತದೆ. ಅಂತಹ ಉತ್ಪನ್ನಗಳನ್ನು ಖರೀದಿಸುವಾಗ, ನಾವು ನಮ್ಮ ದೇಶದ ಹೆಮ್ಮೆಯಾದ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿ ಮಾಡುವುದನ್ನು ಮರೆಯಬೇಡಿ. ಜೀವನದಲ್ಲಿ ಇದನ್ನು ರೂಢಿಸಿಕೊಳ್ಳಿ. ಆ ಉತ್ಪನ್ನದೊಂದಿಗೆ ಅಥವಾ ಆ ಕುಶಲಕರ್ಮಿಯೊಂದಿಗೆ ಸೆಲ್ಫಿಯನ್ನು ಅದರಲ್ಲೂ ವಿಶೇಷವಾಗಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್ ಫೋನ್ನಿಂದ ತೆಗೆದುಕೊಂಡು NamoApp ನಲ್ಲಿ ನನ್ನೊಂದಿಗೆ ಹಂಚಿಕೊಳ್ಳಿ. ಅವುಗಳಲ್ಲಿ ಕೆಲವು ಪೋಸ್ಟ್ಗಳನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತೇನೆ ಇದರಿಂದ ಇತರರಿಗೂ ‘ವೋಕಲ್ ಫಾರ್ ಲೋಕಲ್’ ಗೆ ಪ್ರೇರಣೆ ಲಭಿಸಬಹುದಾಗಿದೆ.
ಸ್ನೇಹಿತರೇ, ನೀವು ಭಾರತದಲ್ಲಿ ತಯಾರಿಸಿದ, ಭಾರತೀಯರೇ ತಯಾರಿಸಿದ ಉತ್ಪನ್ನಗಳಿಂದ ನಿಮ್ಮ ದೀಪಾವಳಿಯನ್ನು ಬೆಳಗಿಸಿದಾಗ ಮತ್ತು ನಿಮ್ಮ ಕುಟುಂಬದ ಪ್ರತಿಯೊಂದು ಸಣ್ಣ ಅಗತ್ಯವನ್ನು ಸ್ಥಳೀಯ ವಸ್ತುಗಳಿಂದ ಪೂರೈಸಿದಾಗ, ದೀಪಾವಳಿಯ ಹೊಳಪು ಖಂಡಿತ ಮತ್ತಷ್ಟು ವೃದ್ಧಿಸುತ್ತದೆ. ಜೊತೆಗೆ, ಆ ಕುಶಲಕರ್ಮಿಗಳ ಜೀವನದಲ್ಲಿ, ಒಂದು ಹೊಸ ದೀಪಾವಳಿಯ ಆಗಮನವಾಗುತ್ತದೆ, ಜೀವನದಲ್ಲಿ ಹೊಸ ಬೆಳಕು ಮೂಡಿಸುತ್ತದೆ, ಅವರ ಜೀವನ ಸಂತೋಷಭರಿತವಾಗುತ್ತದೆ. ಭಾರತವನ್ನು ಸ್ವಾವಲಂಬಿಯನ್ನಾಗಿಸಿ, 'ಮೇಕ್ ಇನ್ ಇಂಡಿಯಾ' ಆಯ್ಕೆಯನ್ನು ಮುಂದುವರಿಸಿ, ಇದರಿಂದ ನಿಮ್ಮ ಜೊತೆಗೆ ಕೋಟಿಗಟ್ಟಲೆ ದೇಶವಾಸಿಗಳ ದೀಪಾವಳಿ ಆನಂದಮಯವಾಗಲಿ, ಸುಖಕರವಾಗಲಿ, ಪ್ರಕಾಶಮಾನವಾಗಲಿ ಮತ್ತು ಆಸಕ್ತಿದಾಯಕವಾಗಲಿ.
ನನ್ನ ಪ್ರೀತಿಯ ದೇಶವಾಸಿಗಳೇ, ಅಕ್ಟೋಬರ್ 31 ನಮ್ಮೆಲ್ಲರಿಗೂ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ನಾವು ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮಜಯಂತಿಯನ್ನು ಆಚರಿಸುತ್ತೇವೆ. ನಾವು, ಭಾರತೀಯರು ಅವರನ್ನು ಅನೇಕ ಕಾರಣಗಳಿಗಾಗಿ ನೆನಪಿಸಿಕೊಳ್ಳುತ್ತೇವೆ ಮತ್ತು ಶೃದ್ಧೆಯಿಂದ ನಮಿಸುತ್ತೇವೆ. ದೇಶದ 580 ಕ್ಕೂ ಹೆಚ್ಚು ರಾಜಪ್ರಭುತ್ವ ಹೊಂದಿದ ರಾಜ್ಯಗಳನ್ನು ಒಗ್ಗೂಡಿಸುವಲ್ಲಿ ಅವರ ಅನುಪಮ ಪಾತ್ರ ಅವರನ್ನು ನೆನೆಯಲು ಬಹುದೊಡ್ಡ ಕಾರಣವಾಗಿದೆ - ಪ್ರತಿ ವರ್ಷ ಅಕ್ಟೋಬರ್ 31 ರಂದು, ಏಕತಾ ದಿನಕ್ಕೆ ಸಂಬಂಧಿಸಿದ ಮುಖ್ಯ ಕಾರ್ಯಕ್ರಮವು ಗುಜರಾತ್ನ ಏಕತಾ ಪ್ರತಿಮೆಯ ಬಳಿ ನಡೆಯುತ್ತದೆ ಎಂದು ನಮಗೆ ತಿಳಿದಿದೆ. ಇದಲ್ಲದೇ ಈ ಬಾರಿ ದೆಹಲಿಯ ಕರ್ತವ್ಯಪಥದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇತ್ತೀಚಿಗೆ ನಾನು ದೇಶದ ಪ್ರತಿಯೊಂದು ಹಳ್ಳಿ ಮತ್ತು ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲು ವಿನಂತಿಸಿದ್ದು ನಿಮಗೆ ನೆನಪಿರಬಹುದು. ಪ್ರತಿ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ನಂತರ ಕಲಶದಲ್ಲಿ ಇರಿಸಲಾಯಿತು, ನಂತರ ಅಮೃತ ಕಲಶ ಯಾತ್ರೆ ಆರಂಭಿಸಲಾಯಿತು. ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ ಈ ಮಣ್ಣು, ಸಾವಿರಾರು ಅಮೃತ ಕಲಶ ಯಾತ್ರೆಗಳು ಈಗ ದೆಹಲಿ ತಲುಪುತ್ತಿವೆ. ಇಲ್ಲಿ ದೆಹಲಿಯಲ್ಲಿ ಆ ಮಣ್ಣನ್ನು ಬೃಹತ್ ಭಾರತ ಕಲಶದಲ್ಲಿ ಹಾಕಲಾಗುತ್ತದೆ ಮತ್ತು ಈ ಪವಿತ್ರ ಮಣ್ಣಿನಿಂದ ದೆಹಲಿಯಲ್ಲಿ ‘ಅಮೃತ ವಾಟಿಕ’ ನಿರ್ಮಾಣವಾಗಲಿದೆ. ಇದು ದೇಶದ ರಾಜಧಾನಿಯ ಹೃದಯದಲ್ಲಿ ಅಮೃತ್ ಮಹೋತ್ಸವದ ಭವ್ಯ ಪರಂಪರೆಯ ರೂಪದಲ್ಲಿ ಉಳಿಯಲಿದೆ. ದೇಶಾದ್ಯಂತ ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಅಕ್ಟೋಬರ್ 31ರಂದು ಮುಕ್ತಾಯಗೊಳ್ಳಲಿದೆ. ನೀವೆಲ್ಲರೂ ಒಗ್ಗೂಡಿ ಇದನ್ನು ವಿಶ್ವದ ಅತಿ ದೀರ್ಘಾವಧಿಯ ಉತ್ಸವಗಳಲ್ಲಿ ಒಂದನ್ನಾಗಿ ರೂಪಿಸಿದ್ದೀರಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ತಮ್ಮ ಹೋರಾಟಗಾರರಿಗೆ ಗೌರವ ಸೂಚಿಸುವ ಮೂಲಕ ಮತ್ತು ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವುದಾಗಲಿ, ಜನರು ತಮ್ಮ ಸ್ಥಳೀಯ ಇತಿಹಾಸಕ್ಕೆ ಹೊಸ ಮೆರುಗನ್ನು ನೀಡಿದ್ದಾರೆ. ಈ ಅವಧಿಯಲ್ಲಿ, ಸಾಮುದಾಯಿಕ ಸೇವೆಯ ಅದ್ಭುತ ಉದಾಹರಣೆಗಳನ್ನು ಕೂಡ ನೋಡಿದ್ದೇವೆ.
ಸ್ನೇಹಿತರೇ, ಇಂದು ನಿಮ್ಮೊಂದಿಗೆ ಅದರಲ್ಲೂ ವಿಶೇಷವಾಗಿ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಉತ್ಸಾಹ, ಕನಸು ಮತ್ತು ದೃಢಸಂಕಲ್ಪ ಹೊಂದಿರುವ ನನ್ನ ಯುವಜನತೆಯೊಂದಿಗೆ ಇನ್ನೊಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ.
ಇದು ದೇಶದ ಜನತೆಗಂತೂ ಒಳ್ಳೆಯ ಸುದ್ದಿಯೇ, ಆದರೆ ನನ್ನ ಯುವ ಸ್ನೇಹಿತರೇ, ಇದು ನಿಮಗೆ ವಿಶೇಷವಾಗಿದೆ. ಎರಡು ದಿನಗಳ ನಂತರ ಅಕ್ಟೋಬರ್ 31 ರಂದು, ಒಂದು ದೊಡ್ಡ ರಾಷ್ಟ್ರವ್ಯಾಪಿ ಸಂಘಟನೆಗೆ ಅಡಿಪಾಯ ಹಾಕಲಾಗುತ್ತಿದೆ ಮತ್ತು ಅದು ಕೂಡ ಸರ್ದಾರ್ ಸಾಹೇಬ್ ರ ಜನ್ಮಜಯಂತಿಯ ದಿನದಂದು. ಈ ಸಂಘಟನೆಯ ಹೆಸರು – ನನ್ನ ಯುವ ಭಾರತ, ಅಂದರೆ MYBharat. MYBharat ಸಂಘಟನೆಯು ಭಾರತದ ಯುವಕರಿಗೆ ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಭಾರತದ ಯುವ ಶಕ್ತಿಯನ್ನು ಒಗ್ಗೂಡಿಸುವ ವಿಶಿಷ್ಟ ಮಾರ್ಗವಾಗಿದೆ. ನನ್ನ ಯುವ ಭಾರತದ ಜಾಲತಾಣ MYBharat ಕೂಡ ಆರಂಭಗೊಳ್ಳಲಿದೆ. MYBharat.Gov.in ನಲ್ಲಿ ನೋಂದಾಯಿಸಿ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಸೈನ್ ಅಪ್ ಮಾಡಿ ಎಂದು ನಾನು ಯುವಕರನ್ನು ಆಗ್ರಹಿಸುತ್ತೇನೆ, ನನ್ನ ದೇಶದ ಯುವಕರೇ, ನನ್ನ ದೇಶದ ಎಲ್ಲಾ ಪುತ್ರರೇ ಮತ್ತು ಪುತ್ರಿಯರೇ, ನಿಮ್ಮೆಲ್ಲರಿಗೂ ನಾನು ನೋಂದಾಯಿಸಿಕೊಳ್ಳುವಂತೆ ಮತ್ತೆ ಮತ್ತೆ ಆಗ್ರಹಿಸುತ್ತೇನೆ. ಅಕ್ಟೋಬರ್ 31 ರಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯತಿಥಿಯೂ ಇದೆ. ಅವರಿಗೂ ನನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.
ನನ್ನ ಪರಿವಾರ ಜನರೆ, ನಮ್ಮ ಸಾಹಿತ್ಯ, literature, ಏಕ್ ಭಾರತ - ಶ್ರೇಷ್ಠ ಭಾರತ ಭಾವನೆಯನ್ನು ಗಾಢವಾಗಿಸುವ ಅತ್ಯುತ್ತಮ ಮಾಧ್ಯಮಗಳಲ್ಲಿ ಒಂದಾಗಿದೆ. ತಮಿಳುನಾಡಿನ ಭವ್ಯ ಪರಂಪರೆಗೆ ಸಂಬಂಧಿಸಿದ ಎರಡು ಸ್ಪೂರ್ತಿದಾಯಕ ಪ್ರಯತ್ನಗಳ ಕುರಿತು ನಿಮಗೆ ಹೇಳಬಯಸುತ್ತೇನೆ. ತಮಿಳಿನ ಖ್ಯಾತ ಲೇಖಕಿ ಸಹೋದರಿ ಶಿವಶಂಕರಿ ಅವರ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ಲಭಿಸಿದೆ. ಅವರು ಒಂದು Project ಮಾಡಿದ್ದಾರೆ - Knit India, Through Literature, ಅದರ ಅರ್ಥ ಸಾಹಿತ್ಯದ ಮೂಲಕ ದೇಶವನ್ನು ಒಂದು ಸೂತ್ರದಲ್ಲಿ ಹೆಣೆಯುವುದು ಮತ್ತು ಒಗ್ಗೂಡಿಸುವುದು. ಅವರು ಈ ಯೋಜನೆಗಾಗಿ ಕಳೆದ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯ ಮೂಲಕ ಅವರು 18 ಭಾರತೀಯ ಭಾಷೆಗಳಲ್ಲಿ ಬರೆದ ಸಾಹಿತ್ಯವನ್ನು ಅನುವಾದಿಸಿದ್ದಾರೆ.
ಅವರು ವಿವಿಧ ರಾಜ್ಯಗಳ ಬರಹಗಾರರು ಮತ್ತು ಕವಿಗಳನ್ನು ಸಂದರ್ಶಿಸಲೆಂದು ಹಲವಾರು ಬಾರಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಇಂಫಾಲ್ನಿಂದ ಜೈಸಲ್ಮೇರ್ವರೆಗೆ ದೇಶದಾದ್ಯಂತ ಪ್ರಯಾಣಿಸಿದ್ದಾರೆ. ಇದರಿಂದಾಗಿ. ಶಿವಶಂಕರಿ ಅವರು ವಿವಿಧ ಸ್ಥಳಗಳಿಗೆ ಪ್ರವಾಸ ಮಾಡಿದ travel commentary ಜೊತೆಗೆ ಅವನ್ನು ಪ್ರಕಟಿಸಿದ್ದಾರೆ. ಇದು ತಮಿಳು ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿದೆ. ಈ ಯೋಜನೆಯಲ್ಲಿ ನಾಲ್ಕು ದೊಡ್ಡ ಸಂಗ್ರಹಗಳಿವೆ ಮತ್ತು ಪ್ರತಿ ಸಂಗ್ರಹವನ್ನು ಭಾರತದ ಬೇರೆ ಬೇರೆ ಭಾಗಕ್ಕೆ ಸಮರ್ಪಿಸಲಾಗಿದೆ. ಅವರ ಸಂಕಲ್ಪ ಶಕ್ತಿಯ ಬಗ್ಗೆ ನನಗೆ ಹೆಮ್ಮೆ ಇದೆ.
ಸ್ನೇಹಿತರೇ, ಕನ್ಯಾಕುಮಾರಿಯ ತಿರು ಎ. ಕೆ. ಪೆರುಮಾಳ್ ಅವರ ಕೆಲಸವೂ ತುಂಬಾ ಸ್ಪೂರ್ತಿದಾಯಕವಾಗಿದೆ. ತಮಿಳುನಾಡಿನ ಕಥೆ ಹೇಳುವ ಸಂಪ್ರದಾಯವನ್ನು ಉಳಿಸುವ ಅವರ ಕಾರ್ಯ ಅತ್ಯಂತ ಶ್ಲಾಘನೀಯ. ಅವರು ಕಳೆದ 40 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ತಮಿಳುನಾಡಿನ ವಿವಿಧ ಭಾಗಗಳಿಗೆ ತೆರಳಿ ಜಾನಪದ ಕಲಾ ಪ್ರಕಾರಗಳನ್ನು ಹುಡುಕಿ ಅದನ್ನು ತಮ್ಮ ಪುಸ್ತಕದಲ್ಲಿ ಸೇರಿಸುತ್ತಾರೆ. ಅವರು ಇಲ್ಲಿಯವರೆಗೆ ಇಂತಹ ಸುಮಾರು 100 ಪುಸ್ತಕಗಳನ್ನು ಬರೆದಿದ್ದಾರೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಇದಲ್ಲದೇ ಪೆರುಮಾಳ್ ಅವರಿಗೆ ಇನ್ನೊಂದು Passion ಕೂಡ ಇದೆ. ತಮಿಳುನಾಡಿನ ದೇವಾಲಯ ಸಂಸ್ಕೃತಿಯ ಬಗ್ಗೆ ಸಂಶೋಧನೆ ಮಾಡುವುದು ಅವರಿಗೆ ಬಹಳ ಇಷ್ಟವಾದ ಕೆಲಸ. ಅವರು ತೊಗಲು ಬೊಂಬೆಗಳ ಕುರಿತು ಸಾಕಷ್ಟು ಸಂಶೋಧನೆ ನಡೆಸಿದ್ದು, ಅಲ್ಲಿನ ಸ್ಥಳೀಯ ಜನಪದ ಕಲಾವಿದರಿಗೆ ಇದರಿಂದ ಬಹಳ ಅನುಕೂಲವಾಗುತ್ತಿದೆ.
ಶಿವಶಂಕರಿ ಮತ್ತು ಎ. ಕೆ. ಪೆರುಮಾಳ್ ಅವರ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ. ತನ್ನ ಸಂಸ್ಕೃತಿಯನ್ನು ಉಳಿಸುವ ಪ್ರತಿಯೊಂದು ಪ್ರಯತ್ನದ ಬಗ್ಗೆ ಭಾರತ ಹೆಮ್ಮೆಪಡುತ್ತದೆ, ಇಂಥ ಪ್ರಯತ್ನಗಳು ನಮ್ಮ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಅಲ್ಲದೆ ದೇಶದ ಹೆಸರು, ದೇಶದ ಗೌರವ, ಎಲ್ಲವನ್ನೂ ವೃದ್ಧಿಸುತ್ತವೆ.
ಸ್ನೇಹಿತರೇ, ನಾಳೆ ಅಂದರೆ ಅಕ್ಟೋಬರ್ 30 ರಂದು ಗೋವಿಂದ ಗುರು ಅವರ ಪುಣ್ಯತಿಥಿ. ನಮ್ಮ ಗುಜರಾತ್ ಮತ್ತು ರಾಜಸ್ತಾನದ ಬುಡಕಟ್ಟು ಮತ್ತು ವಂಚಿತ ಸಮುದಾಯದವರ ಜೀವನದಲ್ಲಿ ಗೋವಿಂದ ಗುರು ಅವರ ಪ್ರಾಮುಖ್ಯತೆ ಬಹಳವಿದೆ. ನಾನು ಗೋವಿಂದ ಗುರು ಅವರಿಗೆ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ನವೆಂಬರ್ ತಿಂಗಳಿನಲ್ಲಿ ನಾವು ಮಾನಗಢ ಹತ್ಯಾಕಾಂಡದ ವರ್ಷಾಚರಣೆಯನ್ನು ಕೂಡಾ ಮಾಡುತ್ತೇವೆ. ಆ ಹತ್ಯಾಕಾಂಡದಲ್ಲಿ ಹುತಾತ್ಮರಾದ ತಾಯಿ ಭಾರತಿಯ ಎಲ್ಲಾ ಮಕ್ಕಳಿಗೂ ನಾನು ನಮನ ಸಲ್ಲಿಸುತ್ತೇನೆ.
ಸ್ನೇಹಿತರೇ, ನಮ್ಮ ದೇಶದಲ್ಲಿ ಬುಡಕಟ್ಟು ಯೋಧರ ಶ್ರೀಮಂತ ಇತಿಹಾಸವಿದೆ. ಈ ಭಾರತದ ನೆಲದಲ್ಲಿ ಮಹಾನ್ ತಿಲಕಾ ಮಾಂಜಿ ಅವರು ಅನ್ಯಾಯದ ವಿರುದ್ಧ ಸಿಡಿದೆದ್ದು ಕಹಳೆ ಮೊಳಗಿಸಿದ್ದರು. ಈ ನೆಲದಿಂದಲೇ ಸಿದ್ಧೋ-ಕಾನ್ಹೂ ಅವರು ಸಮಾನತೆಯ ಧ್ವನಿ ಎತ್ತಿದ್ದರು. ತಾಂತ್ಯಾ ಭೀಲ್ ಎನ್ನುವ ಜನ ಯೋಧ ಕೂಡಾ ನಮ್ಮ ನೆಲದಲ್ಲಿ ಜನಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಜನರ ಪರವಾಗಿ ನಿಂತ ಹುತಾತ್ಮ ವೀರ ನಾರಾಯಣ್ ಸಿಂಗ್ ಅವರನ್ನು ನಾವು ಬಹಳ ಗೌರವದಿಂದ ಸ್ಮರಿಸುತ್ತೇವೆ. ವೀರ ರಾಮಜೀ ಗೋಂಡ್ ಆಗಿರಲಿ, ವೀರ ಗುಂಡಾಧುರ್ ಆಗಿರಲಿ, ಭೀಮಾ ನಾಯಕ್ ಆಗಿರಲಿ, ಇಂತಹ ವ್ಯಕ್ತಿಗಳ ಶೌರ್ಯ, ಸಾಹಸ ಇಂದಿಗೂ ನಮಗೆ ಪ್ರೇರಣಾದಾಯಕವಾಗಿದೆ. ಅಲ್ಲೂರಿ ಸೀತಾರಾಮರಾಜು ಅವರು ಬುಡಕಟ್ಟು ಸೋದರ ಸೋದರಿಯರಲ್ಲಿ ತುಂಬಿದ ಚೈತನ್ಯವನ್ನು ದೇಶ ಇಂದಿಗೂ ಸ್ಮರಿಸುತ್ತದೆ. ಈಶಾನ್ಯದಲ್ಲಿ ಕಿಯಾಂಗ್ ನೋಬಂಗ್ ಮತ್ತು ರಾಣಿ ಗಾಯ್ದಿಲನ್ಯೂ ಅವರಂತಹ ಸ್ವಾಂತಂತ್ರ್ಯ ಹೋರಾಟಗಾರರಿಂದ ನಮಗೆ ಸಾಕಷ್ಟು ಸ್ಫೂರ್ತಿ ದೊರೆಯುತ್ತದೆ. ಬುಡಕಟ್ಟು ಸಮಾಜದಿಂದಲೇ ನಮ್ಮ ದೇಶಕ್ಕೆ ರಾಜಮೋಹಿನೀ ದೇವಿ ಮತ್ತು ರಾಣಿ ಕಲಮಾಪತಿಯಂತಹ ವೀರಾಂಗನೆಯರು ದೊರೆತಿದ್ದಾರೆ. ಬುಡಕಟ್ಟು ಸಮಾಜಕ್ಕೆ ಸ್ಫೂರ್ತಿ ನೀಡಿದ್ದ ರಾಣಿ ದುರ್ಗಾವತಿ ಅವರ 500 ನೇ ಜಯಂತಿಯನ್ನು ದೇಶ ಈಗ ಆಚರಿಸುತ್ತಿದೆ. ದೇಶದ ಹೆಚ್ಚು ಹೆಚ್ಚು ಯುವಜನತೆ ತಮ್ಮ ತಮ್ಮ ಪ್ರದೇಶದಲ್ಲಿ ಖ್ಯಾತರಾಗಿರುವ ಬುಡಕಟ್ಟು ಜನಾಂಗದ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಮತ್ತು ಅವರಿಂದ ಪ್ರೇರಿತರಾಗುತ್ತಾರೆ ಎಂದು ನಾನು ಆಶಿಸುತ್ತೇನೆ. ರಾಷ್ಟ್ರದ ಸ್ವಾಭಿಮಾನ ಮತ್ತು ಪ್ರಗತಿಗೆ ಸದಾ ಪ್ರಾಮುಖ್ಯತೆ ನೀಡಿದ ನಮ್ಮ ಬುಡಕಟ್ಟು ಸಮುದಾಯಕ್ಕೆ ದೇಶ ಸದಾ ಕೃತಜ್ಞತೆ ತೋರುತ್ತದೆ.
ನನ್ನ ಪ್ರೀತಿಯ ದೇಶಬಾಂಧವರೇ, ಹಬ್ಬಗಳ ಈ ಋತುವಿನಲ್ಲಿ, ದೇಶದಲ್ಲಿ ಕ್ರೀಡೆಗಳ ಪತಾಕೆಯೂ ಹಾರಾಡುತ್ತಿದೆ. ಇತ್ತೀಚಿಗಷ್ಟೇ ಏಷ್ಯನ್ ಗೇಮ್ಸ್ ನಂತರ ಪ್ಯಾರಾ ಏಷ್ಟನ್ ಗೇಮ್ಸ್ ನಲ್ಲಿ ಕೂಡಾ ಭಾರತದ ಕ್ರೀಡಾಪಟುಗಳು ಅದ್ಭುತ ಯಶಸ್ಸನ್ನು ಗಳಿಸಿದ್ದಾರೆ. ಈ ಪಂದ್ಯಾವಳಿಗಳಲ್ಲಿ ಭಾರತ 111 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದೆ. ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕ್ರೀಡಾಪಟುಗಳಿಗೂ ನಾನು ಅನೇಕಾನೇಕ ಅಭಿನಂದನೆ ಸಲ್ಲಿಸುತ್ತೇನೆ.
ಸ್ನೇಹಿತರೇ, ನಿಮ್ಮ ಗಮನವನ್ನು ವಿಶೇಷ ಒಲಿಂಪಿಕ್ಸ್ ವಿಶ್ವ ಬೇಸಿಗೆ ಕ್ರೀಡೆ ಕೂಟದತ್ತ ಕೂಡಾ (Special Olympics World Summer Games) ಕೊಂಡೊಯ್ಯಲು ನಾನು ಬಯಸುತ್ತೇನೆ. ಇದನ್ನು ಬರ್ಲಿನ್ ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯು ನಮ್ಮ ಬೌದ್ಧಿಕವಾಗಿ ವಿಕಲಚೇತನರಾಗಿರುವ ಕ್ರೀಡಾಪಟುಗಳ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಸ್ಪರ್ಧೆಗಳಲ್ಲಿ ಭಾರತೀಯ ತಂಡವು 75 ಚಿನ್ನದ ಪದಕಗಳೂ ಸೇರಿದಂತೆ 200 ಪದಕಗಳನ್ನು ತನ್ನದಾಗಿಸಿಕೊಂಡಿತು. ರೋಲರ್ ಸ್ಕೇಟಿಂಗ್ ಇರಬಹುದು, ಬೀಚ್ ವಾಲಿಬಾಲ್ ಇರಬಹುದು, ಫುಟ್ ಬಾಲ್ ಅಥವಾ ಲಾನ್ ಟೆನ್ನಿಸ್ ಇರಬಹುದು, ಭಾರತೀಯ ಆಟಗಾರರು ಪದಕಗಳ ರಾಶಿಯನ್ನೇ ಸೂರೆಗೈದರು. ಈ ಪದಕ ವಿಜೇತರ ಜೀವನ ಪಯಣ ಬಹಳ ಸ್ಫೂರ್ತಿದಾಯಕವಾಗಿದೆ. ಹರಿಯಾಣದ ನಿವಾಸಿ ರಣವೀರ್ ಸೈನಿ ಅವರು ಗಾಲ್ಫ್ ನಲ್ಲಿ ಚಿನ್ನದ ಪದಕ ಗೆದ್ದರು. ಬಾಲ್ಯದಿಂದಲೇ ಆಟಿಸಂ ತೊಂದರೆಯಿಂದ ಬಳಲುತ್ತಿರುವ ರಣವೀರ್ ಅವರ ಗಾಲ್ಫ್ ಮೇಲಿನ ಆಸಕ್ತಿ, ಉತ್ಸಾಹವನ್ನು ಕಡಿಮೆ ಮಾಡಲು ಯಾವುದೇ ಸವಾಲಿಗೂ ಸಾಧ್ಯವಾಗಲಿಲ್ಲ. ಈಗ ಕುಟುಂಬದವರೆಲ್ಲರೂ ಗಾಲ್ಫ್ ಆಟಗಾರರಾಗಿದ್ದಾರೆಂದು ಆತನ ತಾಯಿ ಹೇಳುತ್ತಾರೆ. ಪುದುಚೆರಿಯ 16 ವರ್ಷದ ಟಿ ವಿಶಾಲ್ ಅವರು ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೋವಾ ನಿವಾಸಿ ಸಿಯಾ ಸರೋದೆ ಅವರು ಪವರ್ ಲಿಫ್ಟಿಂಗ್ ನಲ್ಲಿ 2 ಚಿನ್ನದ ಪದಕಗಳೂ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 9 ವರ್ಷ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡ ನಂತರವೂ ಅವರು ಸ್ವಯಂ ನಿರಾಶೆ ಹೊಂದಲಿಲ್ಲ. ಛತ್ತೀಸ್ ಗಢದ ದುರ್ಗ್ ನಿವಾಸಿ ಅನುರಾಗ್ ಪ್ರಸಾದ್ ಅವರು ಪವರ್ ಲಿಫ್ಟಿಂಗ್ ನಲ್ಲಿ ಮೂರು ಚಿನ್ನದ ಪದಕ ಮತ್ತು ಒಂದು ರಜತ ಪದಕ ಗೆದ್ದಿದ್ದಾರೆ. ಇಂತಹದ್ದೇ ಸ್ಫೂರ್ತಿದಾಯಕ ಕತೆ ಝಾರ್ಖಂಡ್ ನಿವಾಸಿ ಇಂದುಪ್ರಕಾಶ್ ಅವರದ್ದು, ಇವರು ಸೈಕ್ಲಿಂಗ್ ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ. ಅತ್ಯಂತ ಸಾಧಾರಣ ಕುಟುಂಬದಿಂದ ಬಂದಿದ್ದರೂ, ಇಂದು ಅವರು ತಮ್ಮ ಯಶಸ್ಸಿಗೆ ಬಡತನ ಅಡಚಣೆಯಾಗಲು ಬಿಡಲಿಲ್ಲ. ಈ ಕ್ರೀಡೆಗಳಲ್ಲಿ ಭಾರತೀಯ ಆಟಗಾರರ ಯಶಸ್ಸು ಬೌದ್ಧಿಕ ಅಸಮರ್ಥತೆ ಎದುರಿಸುತ್ತಿರುವ ಇತರ ಮಕ್ಕಳು ಮತ್ತು ಕುಟುಂಬಗಳಿಗೆ ಸ್ಫೂರ್ತಿ ನೀಡುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಿಮ್ಮ ಹಳ್ಳಿಯಲ್ಲಿ, ನಿಮ್ಮ ಗ್ರಾಮದ ಸುತ್ತ ಮುತ್ತಲ ಪ್ರದೇಶಗಳಲ್ಲಿ, ಈ ಕ್ರೀಡೆಯಲ್ಲಿ ಭಾಗವಹಿಸಿದ ಅಥವಾ ವಿಜೇತರಾಗಿ ಹೊರಹೊಮ್ಮಿದ ಅಂತಹ ಮಕ್ಕಳ ಬಳಿಗೆ ನೀವು, ನಿಮ್ಮ ಕುಟುಂಬದವರು ಹೋಗಬೇಕೆಂದೂ, ಅವರನ್ನು ಅಭಿನಂದಿಸಬೇಕೆಂದೂ ಮತ್ತು ಆ ಮಕ್ಕಳೊಂದಿಗೆ ಕೆಲವು ಕ್ಷಣಗಳನ್ನು ಕಳೆಯಬೇಕೆಂದೂ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಇದು ನಿಮಗೆ ಹೊಸದಂದು ಅನುಭವ ನೀಡುತ್ತದೆ. ಇಂತಹ ಮಕ್ಕಳಲ್ಲಿ ಆ ಭಗವಂತ ತುಂಬಿರುವ ಅದ್ಭುತ ಶಕ್ತಿಯನ್ನು ಕಾಣುವ ಅವಕಾಶ ನಿಮಗೆ ದೊರೆಯುತ್ತದೆ. ಖಂಡಿತವಾಗಿಯೂ ಭೇಟಿಯಾಗಿ.
ನನ್ನ ಬಾಂಧವರೇ, ಗುಜರಾತ್ ನಲ್ಲಿರುವ ಪುಣ್ಯಕ್ಷೇತ್ರ ಅಂಬಾಜಿ ದೇವಾಲಯದ ಬಗ್ಗೆ ನೀವೆಲ್ಲರೂ ಖಂಡಿತವಾಗಿಯೂ ಕೇಳಿರುತ್ತೀರಿ. ಇದೊಂದು ಪ್ರಮುಖ ಶಕ್ತಿಪೀಠವಾಗಿದ್ದು, ದೇಶ ವಿದೇಶಗಳಿಂದ ಭಕ್ತಾದಿಗಳು ತಾಯಿ ಅಂಬೆಯ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಗಬ್ಬರ್ ಪರ್ವತಕ್ಕೆ ಹೋಗುವ ಹಾದಿಯಲ್ಲಿ ನಿಮಗೆ ವಿಭಿನ್ನ ರೀತಿಯ ಯೋಗ ಮುದ್ರೆಗಳಲ್ಲಿ ಮತ್ತು ಆಸನಗಳಲ್ಲಿ ಇರುವಂತಹ ಪ್ರತಿಮೆಗಳು ಕಂಡುಬರುತ್ತವೆ. ಈ ಪ್ರತಿಮೆಗಳ ವಿಶೇಷತೆಯೇನು ಎಂಬುದು ನಿಮಗೆ ತಿಳಿದಿದೆಯೇ? ವಾಸ್ತವದಲ್ಲಿ ಇವು ಸ್ಕ್ರ್ಯಾಪ್ ನಿಂದ ಮಾಡಿರುವಂತಹ ಶಿಲ್ಪಗಳು, ಒಂದು ರೀತಿಯಲ್ಲಿ ಹೇಳಬೇಕೆಂದರೆ ತ್ಯಾಜ್ಯದಿಂದ ಮಾಡಿರುವಂತಹ ಆದರೆ ಬಹಳ ಅದ್ಭುತವಾದ ಶಿಲ್ಪಗಳಿವು. ಅಂದರೆ ಬಳಸಿ ಬಿಸಾಡಿದ, ಹಳೆಯ ವಸ್ತುಗಳನ್ನು ಬಳಸಿ ಈ ಪ್ರತಿಮೆಗಳನ್ನು ತಯಾರಿಸಲಾಗಿದೆ. ಅಂಬಾಜಿ ಶಕ್ತಿ ಪೀಠದಲ್ಲಿ ದೇವಿ ದರ್ಶನದೊಂದಿಗೆ ಈ ಪ್ರತಿಮೆಗಳು ಕೂಡಾ ಭಕ್ತಾದಿಗಳಿಗೆ ಆಕರ್ಷಣೆಯ ಕೇಂದ್ರವಾಗಿದೆ. ಈ ಪ್ರಯತ್ನದ ಯಶಸ್ಸು ಕಂಡು, ನನ್ನ ಮನಸ್ಸಿನಲ್ಲಿ ಒಂದು ಸಲಹೆಯೂ ಮೂಡುತ್ತಿದೆ. ಕಸದಿಂದ ರಸ ತಯಾರಿಸುವ, ತ್ಯಾಜ್ಯದಿಂದ ಇಂತಹ ಕಲಾಕೃತಿಗಳನ್ನು ರಚಿಸುವಂತಹ ಬಹಳಷ್ಟು ಜನರು ನಮ್ಮ ದೇಶದಲ್ಲಿದ್ದಾರೆ. ಒಂದು ಸ್ಪರ್ಧೆಯನ್ನು ಆಯೋಜಿಸಬೇಕೆಂದೂ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂದು ಇಂತಹ ವ್ಯಕ್ತಿಗಳನ್ನು ಆಹ್ವಾನಿಸಬೇಕೆಂದೂ ನಾನು ಗುಜರಾತ್ ಸರ್ಕಾರವನ್ನು ಕೋರುತ್ತಿದ್ದೇನೆ. ಈ ಪ್ರಯತ್ನ ಗಬ್ಬರ್ ಪರ್ವತದ ಆಕರ್ಷಣೆಯನ್ನು ಹೆಚ್ಚಿಸುವ ಜೊತೆಗೆ, ಇಡೀ ದೇಶದಲ್ಲಿ ‘ಕಸದಿಂದ ರಸ’ - ‘ವೇಸ್ಟ್ ಟು ವೆಲ್ತ್ ’ ಅಭಿಯಾನಕ್ಕಾಗಿ ಜನರಿಗೆ ಪ್ರೇರಣೆ ನೀಡುತ್ತದೆ.
ಸ್ನೇಹಿತರೇ, ಸ್ವಚ್ಛ ಭಾರತ ಮತ್ತು ವೇಸ್ಟ್ ಟು ವೆಲ್ತ್ (Waste to wealth) ವಿಷಯ ಬಂದಾಗಲೆಲ್ಲಾ, ದೇಶದ ಮೂಲೆ ಮೂಲೆಗಳಿಂದ ನಮಗೆ ಅಸಂಖ್ಯಾತ ಉದಾಹರಣೆಗಳು ಕಾಣಸಿಗುತ್ತವೆ. ಅಸ್ಸಾಂ ನ ಕಾಮರೂಪ್ ಮೆಟ್ರೋಪಾಲಿಟನ್ ಜಿಲ್ಲೆಯಲ್ಲಿ ಅಕ್ಷರ್ ಫೋರಮ್ ಹೆಸರಿನ ಒಂದು ಶಾಲೆಯು, ಸುಸ್ಥಿರ ಅಭಿವೃದ್ಧಿ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ತುಂಬುವ, ಅವರಿಗೆ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಪ್ರತಿ ವಾರ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ, ಇವುಗಳನ್ನು ಪರಿಸರ ಸ್ನೇಹಿ ಇಟ್ಟಿಗೆ ಮತ್ತು ಬೀಗದಕೈ ಗೊಂಚಲು ಇತ್ಯಾದಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ರೀಸೈಕ್ಲಿಂಗ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಕೂಡಾ ಕಲಿಸಲಾಗುತ್ತದೆ. ಸಣ್ಣ ವಯಸ್ಸಿನಿಂದಲೇ ಪರಿಸರದ ಬಗ್ಗೆ ಕಾಳಜಿಯು, ಈ ಮಕ್ಕಳನ್ನು ದೇಶದ ಕರ್ತವ್ಯನಿಷ್ಠ ನಾಗರಿಕರನ್ನಾಗಿಸಲು ಸಹಾಯ ಮಾಡುತ್ತದೆ.
ನನ್ನ ಕುಟುಂಬದ ಬಾಂಧವರೇ, ಇಂದು ನಮಗೆ ಮಹಿಳಾ ಶಕ್ತಿ, ಸಾಮರ್ಥ್ಯ ಕಾಣಸಿಗದ ಯಾವುದೇ ಕ್ಷೇತ್ರವಿಲ್ಲ. ಪ್ರಸ್ತುತ, ಎಲ್ಲೆಡೆಯೂ ಆಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಭಕ್ತಿಯ ಶಕ್ತಿಯನ್ನು ತೋರಿಸಿದಂತಹ ಓರ್ವ ಮಹಿಳಾ ಭಕ್ತೆಯನ್ನೂ ನಾವು ಸ್ಮರಿಸಬೇಕು, ಆಕೆಯ ಹೆಸರು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ದೇಶ ಈ ವರ್ಷ ಮಹಾನ್ ಸನ್ಯಾಸಿನಿ ಸಂತ ಮೀರಾಬಾಯಿಯವರ 525ನೇ ಜನ್ಮ ಜಯಂತಿ ಆಚರಿಸುತ್ತಿದೆ. ಅವರು ದೇಶಾದ್ಯಂತ ಜನರಲ್ಲಿ ಅನೇಕ ಕಾರಣಗಳಿಂದ ಪ್ರೇರಣಾ ಶಕ್ತಿಯೆನಿಸಿದ್ದಾರೆ. ಸಂಗೀತದಲ್ಲಿ ಆಸಕ್ತಿಯಿರುವವರಿಗೆ ಆಕೆ ಸಂಗೀತಕ್ಕೆ ಸಮರ್ಪಣಾ ಭಾವದ ಉದಾಹರಣೆಯೆನಿಸಿದ್ದರೆ, ಕವಿತಾ ಪ್ರೇಮಿಗಳಿಗೆ ಭಕ್ತಿರಸದಲ್ಲಿ ಮುಳುಗಿರುವ ಮೀರಾಬಾಯಿಯವರ ಭಜನೆಯು ವಿಶೇಷ ಆನಂದ ನೀಡುತ್ತದೆ. ದೈವಿಕ ಶಕ್ತಿಯಲ್ಲಿ ನಂಬಿಕೆಯಿಟ್ಟಿರುವ ಜನರಿಗೆ ಮೀರಾಬಾಯಿಯ ಕೃಷ್ಣನಲ್ಲಿ ಲೀನವಾಗುವ ಭಕ್ತಿ ಭಾವ ಬಹುದೊಡ್ಡ ಪ್ರೇರಣೆಯಾಗಬಲ್ಲದು. ಮೀರಾಬಾಯಿ ಸಂತ ರವಿದಾಸರನ್ನು ತನ್ನ ಗುರುಗಳೆಂದು ನಂಬಿದ್ದರು. ಅವರು ಹೀಗನ್ನುತ್ತಿದ್ದರು.
ಗುರು ಮಿಲಿಯಾ ರೈದಾಸ್, ದೀನ್ಹೀ ಜ್ಞಾನ್ ಕೀ ಗುಟಕೀ
ದೇಶದ ಮಾತೆಯರು-ಸೋದರಿಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಮೀರಾಬಾಯಿ ಇಂದಿಗೂ ಪ್ರೇರಣೆಯ ಚಿಲುಮೆಯಾಗಿದ್ದಾರೆ. ಆ ಕಾಲದಲ್ಲೇ ಆಕೆ ತನ್ನ ಅಂತರಂಗದ ಧ್ವನಿಯನ್ನು ಆಲಿಸಿದಳು ಮತ್ತು ಸಂಪ್ರದಾಯವಾದಿ ನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ್ದರು. ಓರ್ವ ಸನ್ಯಾಸಿನಿಯ ರೂಪದಲ್ಲಿಯೇ ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಾರೆ. ಭಾರತೀಯ ಸಮಾಜ ಮತ್ತು ಸಂಸ್ಕೃತಿಯನ್ನು ಬಲಪಡಿಸಲು ಆಕೆ ಮುಂದೆ ಬಂದಾಗ ದೇಶ ಅನೇಕ ರೀತಿಯ ದಾಳಿಗಳನ್ನು ಎದುರಿಸುತ್ತಿತ್ತು. ಸರಳತೆಯಲ್ಲಿ ಎಷ್ಟು ಶಕ್ತಿ ಅಡಗಿದೆ ಎನ್ನುವುದು ನಮಗೆ ಮೀರಾಬಾಯಿಯವರ ಜೀವನದಿಂದ ನಮಗೆ ತಿಳಿದುಬರುತ್ತದೆ. ನಾನು ಸಂತ ಮೀರಾಬಾಯಿಗೆ ನಮನ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ಕುಟುಂಬಸ್ಥರೇ, ಇಂದಿನ ಮನದ ಮಾತನ್ನು ನಾನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ನಿಮ್ಮೊಂದಿಗೆ ನಡೆಸುವ ಪ್ರತಿಯೊಂದು ಸಂವಾದವೂ ನನ್ನೊಳಗೆ ಹೊಸ ಚೈತನ್ಯ, ಶಕ್ತಿಯನ್ನು ತುಂಬುತ್ತದೆ. ನಿಮ್ಮ ಸಂದೇಶಗಳಲ್ಲಿ ಭರವಸೆ ಮತ್ತು ಸಕಾರಾತ್ಮಕತೆ ತುಂಬಿದ ನೂರಾರು ವಿಷಯಗಳು ನನ್ನನ್ನು ತಲುಪುತ್ತಿರುತ್ತವೆ. ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಒತ್ತು ನೀಡುವಂತೆ ನಾನು ನಿಮ್ಮಲ್ಲಿ ಪುನಃ ಮನವಿ ಮಾಡುತ್ತಿದ್ದೇನೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಮತ್ತು ಲೋಕಲ್ ಗೆ ವೋಕಲ್ ನೀವಾಗಿ, ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ. ನಿಮ್ಮ ಮನೆಗಳನ್ನು ನೀವು ಯಾವರೀತಿ ಸ್ವಚ್ಛವಾಗಿ ಇರಿಸಿಕೊಳ್ಳುತ್ತೀರೋ ಅದೇ ರೀತಿ ನೀವು ವಾಸಿಸುವ ಪ್ರದೇಶ ಮತ್ತು ನಗರವನ್ನು ಸ್ವಚ್ಛವಾಗಿರಿಸಿ. ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜಯಂತಿಯೆಂದು ನಿಮಗೆಲ್ಲಾ ತಿಳಿದೇ ಇದೆ. ಪಟೇಲ್ ಅವರ ಜನ್ಮದಿನವನ್ನು ದೇಶ ಏಕತಾ ದಿವಸವೆಂದು ಆಚರಿಸುತ್ತದೆ. ದೇಶದಲ್ಲಿ ಹಲವೆಡೆ ಏಕತೆಗಾಗಿ ಓಟ ಕಾರ್ಯಕ್ರಮ ಆಯೋಜಿಸಲಾಗುತ್ತದೆ, ನೀವು ಕೂಡಾ ಅಕ್ಟೋಬರ್ 31 ರಂದು ಏಕತೆಗಾಗಿ ಓಟ ಆಯೋಜಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಸೇರಿಕೊಳ್ಳಿ ಮತ್ತು ಏಕತೆಯ ಸಂಕಲ್ಪವನ್ನು ಬಲಗೊಳಿಸಿ. ಮುಂಬರುವ ಹಬ್ಬಗಳಿಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಶುಭ ಹಾರೈಕೆಗಳು. ನೀವೆಲ್ಲರೂ ಕುಟುಂಬದವರೊಡನೆ ಸಂತೋಷದಿಂದ ಹಬ್ಬಗಳನ್ನು ಆಚರಿಸಿ, ಆರೋಗ್ಯದಿಂದ ಇರಿ, ಸಂತೋಷದಿಂದಿರಿ ಎನ್ನುವುದು ನನ್ನ ಹಾರೈಕೆ. ಅಂತೆಯೇ ದೀಪಾವಳಿ ಹಬ್ಬದ ಸಮಯದಲ್ಲಿ ಅಗ್ನಿ ಅವಘಢಗಳು ಸಂಭವಿಸುವಂತಹ ತಪ್ಪುಗಳು ಆಗದಂತೆ ಎಚ್ಚರಿಕೆಯಿಂದ ಇರಿ. ಯಾರಿಗಾದರೂ ಅಪಾಯ ಸಂಭವಿಸಿದಲ್ಲಿ ಅವರ ಬಗ್ಗೆ ಖಂಡಿತವಾಗಿಯೂ ಕಾಳಜಿ ವಹಿಸಿ ಸಹಾಯ ಮಾಡಿ. ನೀವು ಕೂಡಾ ನಿಮ್ಮ ಬಗ್ಗೆ ಜಾಗರೂಕರಾಗಿರಿ. ಹಾಗೆಯೇ ನಿಮ್ಮ ಸುತ್ತ ಮುತ್ತಲಿನವರ ಬಗ್ಗೆ ಕೂಡಾ ಕಾಳಜಿ ವಹಿಸಿ. ಅನೇಕಾನೇಕ ಹಾರೈಕೆಗಳು, ಅನೇಕಾನೇಕ ಧನ್ಯವಾದ.
ನನ್ನ ಪ್ರೀತಿಯ ಪರಿವಾರ ಸದಸ್ಯರಿಗೆ ನಮಸ್ಕಾರ. ‘ಮನದ ಮಾತಿನ’ ಮತ್ತೊಂದು ಸಂಚಿಕೆಯಲ್ಲಿ, ದೇಶದ ಯಶಸ್ಸು, ದೇಶದ ಜನತೆಯ ಯಶಸ್ಸು, ಅವರ ಸ್ಪೂರ್ತಿದಾಯಕ ಜೀವನ ಪಯಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅವಕಾಶ ದೊರೆತಿದೆ. ಇತ್ತೀಚೆಗೆ, ನನಗೆ ಲಭಿಸಿದ ಹೆಚ್ಚಿನ ಪತ್ರಗಳು ಮತ್ತು ಸಂದೇಶಗಳು ಎರಡು ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಮೊದಲನೆಯದ್ದು ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಮತ್ತು ಎರಡನೇ ವಿಷಯವೆಂದರೆ ದೆಹಲಿಯಲ್ಲಿ ಜಿ-20 ರ ಯಶಸ್ವಿ ಆಯೋಜನೆ. ದೇಶದ ಪ್ರತಿಯೊಂದು ಭಾಗದಿಂದ, ಸಮಾಜದ ಪ್ರತಿಯೊಂದು ವರ್ಗದಿಂದ, ಎಲ್ಲಾ ವಯೋಮಾನದ ಜನರಿಂದ ನನಗೆ ಅಸಂಖ್ಯ ಪತ್ರಗಳು ಬಂದಿವೆ. ಚಂದ್ರಯಾನ-3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದಾಗ, ವಿವಿಧ ಮಾಧ್ಯಮಗಳ ಮೂಲಕ ಕೋಟ್ಯಾಂತರ ಜನರು ಏಕಕಾಲದಲ್ಲಿ ಈ ಘಟನೆಯ ಪ್ರತಿ ಕ್ಷಣವನ್ನು ಸಾಕ್ಷೀಕರಿಸಿದ್ದಾರೆ. ಇಸ್ರೋದ ಯೂಟ್ಯೂಬ್ ಲೈವ್ ಚಾನೆಲ್ನಲ್ಲಿ 80 ಲಕ್ಷಕ್ಕೂ ಹೆಚ್ಚು ಜನರು ಘಟನೆಯನ್ನು ವೀಕ್ಷಿಸಿದ್ದು ಸ್ವತಃ ಒಂದು ದಾಖಲೆಯಾಗಿದೆ. ಇದರಿಂದ ಚಂದ್ರಯಾನ-3 ರ ಕುರಿತು ಕೋಟ್ಯಾಂತರ ಭಾರತೀಯರ ಬಾಂಧವ್ಯ ಎಷ್ಟು ಗಾಢವಾಗಿದೆ ಎಂಬುದರ ಅರಿವಾಗುತ್ತದೆ. ಇತ್ತೀಚೆಗೆ ದೇಶದಲ್ಲಿ ಚಂದ್ರಯಾನದ ಈ ಯಶಸ್ಸಿನ ಕುರಿತು, ಅದ್ಭುತವಾದ ಒಂದು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಮತ್ತು ಅದನ್ನು 'ಚಂದ್ರಯಾನ-3 ಮಹಾಕ್ವಿಜ್' ಎಂದು ಹೆಸರಿಸಲಾಗಿದೆ. MyGov ಪೋರ್ಟಲ್ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. MyGov ವೇದಿಕೆ ಆರಂಭಿಸಿದಂದಿನಿಂದ ಒಂದು ರಸಪ್ರಶ್ನೆಯಲ್ಲಿ ಜನರ ಅತಿ ದೊಡ್ಡ ಭಾಗವಹಿಸುವಿಕೆ ಇದಾಗಿದೆ. ನೀವು ಇನ್ನೂ ಇದರಲ್ಲಿ ಭಾಗವಹಿಸಿಲ್ಲವೆಂದಾದರೆ, ತಡ ಮಾಡಬೇಡಿ, ಇನ್ನೂ ಆರು ದಿನಗಳು ಬಾಕಿ ಇವೆ ಎಂದು ನಿಮಗೆ ಹೇಳಬಯಸುತ್ತೇನೆ. ಈ ರಸಪ್ರಶ್ನೆಯಲ್ಲಿ ಖಂಡಿತ ಭಾಗವಹಿಸಿ.
ನನ್ನ ಪರಿವಾರ ಸದಸ್ಯರೆ, ಚಂದ್ರಯಾನ-3 ರ ಯಶಸ್ಸಿನ ನಂತರ G-20 ರ ಅದ್ಭುತ ಆಯೋಜನೆ ಪ್ರತಿಯೊಬ್ಬ ಭಾರತೀಯನ ಸಂತೋಷವನ್ನು ದುಪ್ಪಟ್ಟುಗೊಳಿಸಿದೆ. ಭಾರತ ಮಂಟಪವು ಸ್ವತಃ ಒಂದು ಸೆಲೆಬ್ರಿಟಿಯಂತಾಗಿದೆ. ಜನರು ಅದರೊಂದಿಗೆ ಸೆಲ್ಫಿ ತೆಗೆದುಕೊಂಡು ಹೆಮ್ಮೆಯಿಂದ ಪೋಸ್ಟ್ ಮಾಡುತ್ತಿದ್ದಾರೆ. ಈ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ-20 ನ ಪೂರ್ಣ ಸದಸ್ಯನಾಗಿ ಮಾಡುವ ಮೂಲಕ ಭಾರತವು ತನ್ನ ನಾಯಕತ್ವ ಮೆರೆದಿದೆ. ನಮ್ಮ ಭಾರತ ದೇಶ ಸಮೃದ್ಧವಾಗಿದ್ದ ಅಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಮತ್ತು ಜಗತ್ತಿನಲ್ಲಿ ರೇಷ್ಮೆ ಮಾರ್ಗದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಈ ರೇಷ್ಮೆ ಮಾರ್ಗವು ವ್ಯಾಪಾರ ವ್ಯವಹಾರದ ಬೃಹತ್ ಮಾಧ್ಯಮವಾಗಿತ್ತು. ಈಗಿನ ಆಧುನಿಕ ಕಾಲಮಾನದಲ್ಲಿ ಭಾರತವು ಜಿ-20 ಶೃಂಗಸಭೆಯಲ್ಲಿ ಮತ್ತೊಂದು ಆರ್ಥಿಕ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿದೆ. ಅದೇ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್. ಈ ಕಾರಿಡಾರ್ ಮುಂಬರುವ ನೂರಾರು ವರ್ಷಗಳವರೆಗೆ ವಿಶ್ವ ವ್ಯಾಪಾರದ ಆಧಾರಸ್ಥಂಭವಾಗಲಿದೆ ಮತ್ತು ಈ ಕಾರಿಡಾರ್ ಗೆ ಭಾರತದಲ್ಲಿ ಮುನ್ನುಡಿ ಬರೆಯಲಾಗಿತ್ತು ಎಂದು ಇತಿಹಾಸವು ಸದಾ ಸ್ಮರಿಸಲಿದೆ.
ಸ್ನೇಹಿತರೇ, ಜಿ-20 ರ ಸಂದರ್ಭದಲ್ಲಿ ಭಾರತದ ಯುವ ಶಕ್ತಿ ಈ ಆಯೋಜನೆಯೊಂದಿಗೆ ಹೇಗೆ ಬೆರೆತುಕೊಂಡಿತ್ತು ಎಂಬುದರ ಕುರಿತು ಇಂದು ವಿಶೇಷವಾಗಿ ಚರ್ಚಿಸುವ ಅಗತ್ಯವಿದೆ. ವರ್ಷವಿಡೀ ದೇಶದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಜಿ-20 ಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮತ್ತು ಈಗ ಅದೇ ನಿಟ್ಟಿನಲ್ಲಿ ದೆಹಲಿಯಲ್ಲಿ 'ಜಿ 20 ಯುನಿವರ್ಸಿಟಿ ಕನೆಕ್ಟ್ ಪ್ರೋಗ್ರಾಂ' ಎಂಬ ಮತ್ತೊಂದು ಅತ್ಯಾಕರ್ಷಕ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತದ ಲಕ್ಷಾಂತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕ ಹೊಂದಲಿದ್ದಾರೆ. ಇದರಲ್ಲಿ ಐಐಟಿ, ಐಐಎಂ, ಎನ್ಐಟಿ ಮತ್ತು ವೈದ್ಯಕೀಯ ಕಾಲೇಜುಗಳಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ಸೆಪ್ಟೆಂಬರ್ 26 ರಂದು ನಡೆಯುವ ಈ ಕಾರ್ಯಕ್ರಮವನ್ನು ಖಂಡಿತ ವೀಕ್ಷಿಸಿ ಮತ್ತು ಖಂಡಿತ ಭಾಗವಹಿಸಿ. ಇದರಲ್ಲಿ ಭಾರತದ ಭವಿಷ್ಯದ ಕುರಿತು, ಯುವಜನತೆಯ ಭವಿಷ್ಯದ ಕುರಿತು ಬಹಳಷ್ಟು ಆಸಕ್ತಿದಾಯಕ ಚರ್ಚೆ ನಡೆಯಲಿದೆ. ನಾನು ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ನನಗೂ ನನ್ನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡುವ ನಿರೀಕ್ಷೆಯಿದೆ.
ನನ್ನ ಪರಿವಾರ ಸದಸ್ಯರೆ, ಎರಡು ದಿನಗಳ ನಂತರ ಅಂದರೆ ಸೆಪ್ಟೆಂಬರ್ 27 ರಂದು 'ವಿಶ್ವ ಪ್ರವಾಸೋದ್ಯಮ ದಿನ'ವಿದೆ. ಕೆಲವರು ಪ್ರವಾಸೋದ್ಯಮವನ್ನು ಕೇವಲ ಪ್ರೇಕ್ಷಣೀಯ ಸ್ಥಳವೆಂದು ಮಾತ್ರ ಪರಿಗಣಿಸುತ್ತಾರೆ, ಆದರೆ ಪ್ರವಾಸೋದ್ಯಮದ ಬಹುದೊಡ್ಡ ಭಾಗ ಅಂಶವು 'ಉದ್ಯೋಗ ಸೃಷ್ಟಿ'ಗೆ ಸಂಬಂಧಿಸಿದೆ. ಕನಿಷ್ಠ ಹೂಡಿಕೆಯೊಂದಿಗೆ ಗರಿಷ್ಠ ಉದ್ಯೋಗವನ್ನು ಸೃಷ್ಟಿಸುವ ಯಾವುದೇ ವಲಯವಿದ್ದರೆ ಅದು ಪ್ರವಾಸೋದ್ಯಮ ಕ್ಷೇತ್ರವಾಗಿದೆ ಎನ್ನಲಾಗುತ್ತದೆ. ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ದಿ ಹೊಂದಲು ಯಾವುದೇ ದೇಶದ ಬಗೆಗೆ ಉತ್ತಮ ಅಭಿಪ್ರಾಯ ಮತ್ತು ಆಕರ್ಷಣೆ ಬಹಳ ಮುಖ್ಯವಾಗಿರುತ್ತದೆ. ಕಳೆದ ಕೆಲವು ವರ್ಷಗಳಿಂದ ಭಾರತದೆಡೆಗೆ ಆಕರ್ಷಣೆ ವೃದ್ಧಿಸಿದೆ. ಜಿ-20 ಯಶಸ್ವಿ ಆಯೋಜನೆಯ ನಂತರ, ವಿಶ್ವಾದ್ಯಂತ ಜನರಲ್ಲಿ ಭಾರತದ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.
ಸ್ನೇಹಿತರೇ, ಜಿ-20 ಯಲ್ಲಿ ಭಾಗವಹಿಸಲು ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾರತಕ್ಕೆ ಬಂದಿದ್ದರು. ನಮ್ಮ ವೈವಿಧ್ಯತೆ, ವಿಭಿನ್ನ ಸಂಪ್ರದಾಯಗಳು, ವಿಭಿನ್ನ ಪಾಕಪದ್ಧತಿಗಳು ಮತ್ತು ನಮ್ಮ ಪರಂಪರೆಯ ಬಗ್ಗೆ ಅವರು ತಿಳಿದುಕೊಂಡರು. ಇಲ್ಲಿಗೆ ಬಂದ ಪ್ರತಿನಿಧಿಗಳು ತಮ್ಮೊಂದಿಗೆ ಅದ್ಭುತ ಅನುಭವಗಳನ್ನು ಕೊಂಡೊಯ್ದಿದ್ದಾರೆ. ಇದು ಪ್ರವಾಸೋದ್ಯಮವನ್ನು ಮತ್ತಷ್ಟು ವಿಸ್ತರಿಸಲಿದೆ. ಏಕೆಂದರೆ ಭಾರತದಲ್ಲಿ ಅನೇಕ ವಿಶ್ವ ಪಾರಂಪರಿಕ ತಾಣಗಳಿವೆ ಮತ್ತು ಅವುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಕೆಲವು ದಿನಗಳ ಹಿಂದೆ, ಶಾಂತಿನಿಕೇತನ ಮತ್ತು ಕರ್ನಾಟಕದ ಪವಿತ್ರ ಹೊಯ್ಸಳ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸಲಾಗಿದೆ. ಈ ಮಹತ್ತರ ಸಾಧನೆಗಾಗಿ ಎಲ್ಲಾ ದೇಶಬಾಂಧವರನ್ನು ನಾನು ಅಭಿನಂದಿಸುತ್ತೇನೆ. 2018 ರಲ್ಲಿ ಶಾಂತಿ ನಿಕೇತನಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಲಭಿಸಿತ್ತು. ಶಾಂತಿನಿಕೇತನದೊಂದಿಗೆ ಗುರುದೇವ ರವೀಂದ್ರನಾಥ ಟ್ಯಾಗೋರರ ನಿಕಟ ಸಂಪರ್ಕವಿತ್ತು. ಸಂಸ್ಕೃತದ ಪ್ರಾಚೀನ ಶ್ಲೋಕವೊಂದರಿಂದ ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನದ ಧ್ಯೇಯವಾಕ್ಯವನ್ನು ಆಯ್ದುಕೊಂಡಿದ್ದರು. ಆ ಶ್ಲೋಕ ಹೀಗಿದೆ
“ಯತ್ರ ವಿಶ್ವಂ ಭವತ್ಯೇಕ ನೀಡಂ”
ಅಂದರೆ ಒಂದು ಪುಟ್ಟ ಗೂಡಿನಲ್ಲಿ ಇಡೀ ಪ್ರಪಂಚವೇ ಸಂಯೋಜನೆಗೊಳ್ಳಬಹುದಾಗಿದೆ ಎಂದು. ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದ ಕರ್ನಾಟಕದ ಹೊಯ್ಸಳ ದೇವಾಲಯಗಳು 13 ನೇ ಶತಮಾನದ ತನ್ನ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದವೆ. ಈ ದೇವಾಲಯಗಳಿಗೆ ಯುನೆಸ್ಕೊದಿಂದ ಮನ್ನಣೆ ದೊರೆತಿರುವುದು ದೇವಾಲಯ ನಿರ್ಮಾಣದ ಭಾರತೀಯ ಸಂಪ್ರದಾಯಕ್ಕೆ ಸಂದ ಗೌರವವಾಗಿದೆ. ಭಾರತದಲ್ಲಿ ಈಗ ವಿಶ್ವ ಪಾರಂಪರಿಕ ತಾಣಗಳ ಒಟ್ಟು ಸಂಖ್ಯೆ 42 ಕ್ಕೇರಿದೆ. ನಮ್ಮಲಿರುವ ಹೆಚ್ಚಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳಿಗೆ ವಿಶ್ವ ಪಾರಂಪರಿಕ ತಾಣಗಳ ಮನ್ನಣೆ ದೊರೆಯಲಿ ಎಂಬುದು ಭಾರತದ ಪ್ರಯತ್ನವಾಗಿದೆ. ನೀವು ಪ್ರವಾಸದ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಭಾರತದ ವೈವಿಧ್ಯತೆಯ ದರ್ಶನ ಮಾಡಿರಿ ಎಂಬುದು ನನ್ನ ಮನವಿ. ಬೇರೆ ಬೇರೆ ರಾಜ್ಯಗಳ ಸಂಸ್ಕೃತಿಯನ್ನು ಅರಿಯಿರಿ. ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ. ಇದರಿಂದ ನಿಮ್ಮ ದೇಶದ ಗೌರವಯುತ ಇತಿಹಾಸವನ್ನಂತೂ ನೀವು ತಿಳಿಯುತ್ತೀರಿ, ಜೊತೆಗೆ ಸ್ಥಳೀಯರ ಆದಾಯ ಹೆಚ್ಚಿಸುವಲ್ಲಿಯೂ ನೀವು ಪ್ರಮುಖ ಮಾಧ್ಯಮದಂತೆ ಕೆಲಸ ಮಾಡುವಿರಿ
ಪ್ರಿಯ ಪರಿವಾರ ಸದಸ್ಯರೆ ಭಾರತೀಯ ಸಂಗೀತ ಮತ್ತು ಭಾರತೀಯ ಸಂಸ್ಕೃತ ಈಗ ಜಾಗತಿಕವಾಗಿದೆ. ದಿನದಿಂದ ದಿನಕ್ಕೆ ಪ್ರಪಂಚದಾದ್ಯಂತ ಜನರ ಒಲವು ಇದರತ್ತ ವೃದ್ಧಿಸುತ್ತಿದೆ. ಮುದ್ದಾದ ನಮ್ಮ ಹೆಣ್ಣು ಮಗಳೊಬ್ಬಳು ಮಾಡಿದ ಪ್ರಸ್ತುತಿಯ ಧ್ವನಿಮುದ್ರಿತ ತುಣುಕೊಂದನ್ನು ನಿಮಗೆ ಕೇಳಿಸುತ್ತೇನೆ..
ಇದನ್ನು ಕೇಳಿ ನಿಮಗೂ ಆಶ್ಚರ್ಯವಾಯಿತು ಅಲ್ಲವೇ? ಅವಳು ಎಂತಹ ಮಧುರವಾದ ಧ್ವನಿಯನ್ನು ಹೊಂದಿದ್ದಾಳೆ ಮತ್ತು ಪ್ರತಿ ಪದದಲ್ಲಿ ಭಾವನೆಗಳನ್ನು ಪ್ರತಿಬಿಂಬಿಸುತ್ತಿದ್ದಾಳೆ. ದೇವರ ಮೇಲಿನ ಅವಳ ಪ್ರೀತಿ, ಭಕ್ತಿಯನ್ನು ನಾವು ಕೂಡ ಅನುಭವಿಸಬಹುದು. ಈ ಸುಮಧುರ ಧ್ವನಿ ಜರ್ಮನಿಯ ಒಬ್ಬ ಹೆಣ್ಣು ಮಗಳದ್ದು ಎಂದು ನಾನು ನಿಮಗೆ ಹೇಳಿದರೆ, ಬಹುಶಃ ನೀವು ಮತ್ತಷ್ಟು ಆಶ್ಚರ್ಯಪಡುತ್ತೀರಿ. ಅವಳ ಹೆಸರು ಕೈಸ್ಮಿ. 21 ವರ್ಷದ ಕೈಸ್ಮಿ ಇತ್ತೀಚೆಗೆ Instagram ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಜರ್ಮನಿಯ ನಿವಾಸಿ ಕೈಸ್ಮಿ ಭಾರತಕ್ಕೆ ಎಂದೂ ಭೇಟಿ ನೀಡಿಲ್ಲ, ಆದರೂ ಆಕೆ ಭಾರತೀಯ ಸಂಗೀತದ ಅಭಿಮಾನಿಯಾಗಿದ್ದಾರೆ, ಭಾರತವನ್ನು ಎಂದೂ ನೋಡಿರದ, ಅವರ ಭಾರತೀಯ ಸಂಗೀತದ ಆಸಕ್ತಿ ತುಂಬಾ ಸ್ಫೂರ್ತಿದಾಯಕವಾಗಿದೆ. ಕೈಸ್ಮಿ ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದಾರೆ, ಆದರೆ ಈ ಕಠಿಣ ಸವಾಲು ಅವರನ್ನು ಅಸಾಮಾನ್ಯ ಸಾಧನೆಗೈಯ್ಯುವುದಕ್ಕೆ ತಡೆಯೊಡ್ಡಲಿಲ್ಲ. ಸಂಗೀತ ಮತ್ತು ಸೃಜನಶೀಲತೆಯ ಬಗ್ಗೆ ಅವರ ಉತ್ಸಾಹ ಎಷ್ಟಿತ್ತೆಂದರೆ ಬಾಲ್ಯದಿಂದಲೇ ಆಕೆ ಹಾಡಲು ಪ್ರಾರಂಭಿಸಿದರು. ಆಕೆ ಕೇವಲ 3 ವರ್ಷದ ವಯಸ್ಸಿನಲ್ಲಿಯೇ ಆಫ್ರಿಕನ್ ಡ್ರಮ್ಮಿಂಗ್ ಅನ್ನು ಪ್ರಾರಂಭಿಸಿದ್ದರು. 5-6 ವರ್ಷಗಳ ಹಿಂದೆಯೇ ಅವರಿಗೆ ಭಾರತೀಯ ಸಂಗೀತದ ಪರಿಚಯವಾಯಿತು. ಭಾರತದ ಸಂಗೀತವು ಅವರನ್ನು ಎಷ್ಟು ಆಕರ್ಷಿಸಿತೆಂದರೆ ಅವರು ಅದರಲ್ಲಿ ಸಂಪೂರ್ಣವಾಗಿ ತಲ್ಲೀನವಾಗಿ ಹೋದರು. ಅವರು ತಬಲಾ ವಾದನವನ್ನೂ ಕಲಿತಿದ್ದಾರೆ. ಅವರು ಅನೇಕ ಭಾರತೀಯ ಭಾಷೆಗಳಲ್ಲಿ ಹಾಡುವುದನ್ನು ಕರಗತ ಮಾಡಿಕೊಂಡಿರುವುದು ಅತ್ಯಂತ ಸ್ಪೂರ್ತಿದಾಯಕ ವಿಷಯವಾಗಿದೆ. ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಕನ್ನಡ ಅಥವಾ ಅಸ್ಸಾಮಿ, ಬೆಂಗಾಲಿ, ಮರಾಠಿ, ಉರ್ದು ಎಲ್ಲ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಅಪರಿಚಿತ ಭಾಷೆಯ ಎರಡು-ಮೂರು ಸಾಲುಗಳನ್ನು ನಾವು ಮಾತನಾಡಬೇಕಾದರೆ ಎಷ್ಟು ಕಷ್ಟವೆನಿಸುತ್ತದೆ ಎಂದು ನೀವು ಊಹಿಸಬಹುದು, ಆದರೆ ಕೈಸ್ಮಿಗೆ ಅದು ಸುಲಭ ಸಾಧ್ಯವಾಗಿದೆ. ನಿಮ್ಮೆಲ್ಲರಿಗಾಗಿ ಅವರು ಕನ್ನಡದಲ್ಲಿ ಹಾಡಿರುವ ಒಂದು ಗೀತೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಭಾರತೀಯ ಸಂಸ್ಕೃತಿ ಮತ್ತು ಸಂಗೀತದ ಕುರಿತು ಜರ್ಮನಿಯ ಕೈಸ್ಮಿ ಅವರ ಉತ್ಸಾಹವನ್ನು ನಾನು ಮನಃಪೂರ್ವಕವಾಗಿ ಪ್ರಶಂಸಿಸುತ್ತೇನೆ. ಅವರ ಪ್ರಯತ್ನಗಳು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣದಾಯಕವಾಗಿವೆ.
ನನ್ನ ಪ್ರೀತಿಯ ಪರಿವಾರ ಸದಸ್ಯರೇ, ನಮ್ಮ ದೇಶದಲ್ಲಿ ಶಿಕ್ಷಣವನ್ನು ಯಾವಾಗಲೂ ಸೇವೆಯಂತೆ ಪರಿಗಣಿಸಲಾಗಿದೆ. ಉತ್ತರಾಖಂಡದ ಕೆಲವು ಯುವಕರು ಇದೇ ಮನೋಭಾವದಿಂದ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಬಗ್ಗೆ ನನಗೆ ತಿಳಿದು ಬಂದಿದೆ. ನೈನಿತಾಲ್ ಜಿಲ್ಲೆಯ ಕೆಲವು ಯುವಕರು ಮಕ್ಕಳಿಗಾಗಿ ಅನೋಖಿ ಘೋಡಾ ಎಂಬ ಗ್ರಂಥಾಲಯವನ್ನು ಪ್ರಾರಂಭಿಸಿದ್ದಾರೆ. ಅತ್ಯಂತ ದೂರದ ಪ್ರದೇಶಗಳಲ್ಲಿಯೂ ಪುಸ್ತಕಗಳು ಮಕ್ಕಳನ್ನು ತಲುಪುತ್ತಿರುವುದು ಈ ಗ್ರಂಥಾಲಯದ ದೊಡ್ಡ ವೈಶಿಷ್ಟ್ಯವಾಗಿದೆ ಅಲ್ಲದೆ ಈ ಸೇವೆಯು ಸಂಪೂರ್ಣ ಉಚಿತವಾಗಿದೆ. ಇಲ್ಲಿಯವರೆಗೆ ನೈನಿತಾಲ್ನ 12 ಹಳ್ಳಿಗಳನ್ನು ಈ ಗ್ರಂಥಾಲಯ ತಲುಪಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಈ ಉದಾತ್ತ ಕಾರ್ಯದಲ್ಲಿ ಸ್ಥಳೀಯ ಜನರು ಕೂಡಾ ಸಹಾಯಕ್ಕೆ ಕೈ ಜೋಡಿಸಿದ್ದಾರೆ. ಈ ಘೋಡಾ ಗ್ರಂಥಾಲಯದ ಮೂಲಕ ದೂರದ ಹಳ್ಳಿಗಳಲ್ಲಿ ವಾಸಿಸುವ ಮಕ್ಕಳಿಗೆ ಶಾಲಾ ಪುಸ್ತಕಗಳ ಹೊರತಾಗಿ 'ಕವನಗಳು', 'ಕಥೆಗಳು' ಮತ್ತು 'ನೈತಿಕ ಶಿಕ್ಷಣ' ಪುಸ್ತಕಗಳನ್ನು ಓದುವ ಸಂಪೂರ್ಣ ಅವಕಾಶವನ್ನು ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ವಿಶಿಷ್ಟ ಗ್ರಂಥಾಲಯವು ಮಕ್ಕಳಿಗೂ ತುಂಬಾ ಇಷ್ಟವಾಗುತ್ತಿದೆ.
ಸ್ನೇಹಿತರೇ, ಹೈದರಾಬಾದ್ನಲ್ಲಿರುವ ಗ್ರಂಥಾಲಯಕ್ಕೆ ಸಂಬಂಧಿಸಿದ ಅಂತಹ ಒಂದು ವಿಶಿಷ್ಟ ಪ್ರಯತ್ನದ ಬಗ್ಗೆ ನನಗೆ ತಿಳಿದುಬಂದಿದೆ. ಇಲ್ಲಿ ಏಳನೇ ತರಗತಿ ಓದುತ್ತಿರುವ ಹೆಣ್ಣು ಮಗಳು ‘ಆಕರ್ಷಣಾ ಸತೀಶ್’ ಅದ್ಭುತ ಸಾಧನೆಯನ್ನು ಮಾಡಿದ್ದಾಳೆ. ಕೇವಲ 11 ವರ್ಷ ವಯಸ್ಸಿನಲ್ಲೇ ಮಕ್ಕಳಿಗಾಗಿ ಒಂದಲ್ಲ ಎರಡಲ್ಲ, ಏಳು ಗ್ರಂಥಾಲಯಗಳನ್ನು ನಡೆಸುತ್ತಿರುವುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಎರಡು ವರ್ಷಗಳ ಹಿಂದೆ ‘ಆಕರ್ಷಣಾ’ ತನ್ನ ತಂದೆ-ತಾಯಿಯೊಂದಿಗೆ ಕ್ಯಾನ್ಸರ್ ಆಸ್ಪತ್ರೆಗೆ ಹೋದಾಗ ಇದರ ಬಗ್ಗೆ ಪ್ರೇರಣೆ ದೊರೆಯಿತು. ಅವರ ತಂದೆ ಅವಶ್ಯಕತೆಯಿರುವವರಿಗೆ ಸಹಾಯ ಮಾಡಲೆಂದು ಅಲ್ಲಿಗೆ ಹೋಗಿದ್ದರು. ಅಲ್ಲಿನ ಮಕ್ಕಳು ಅವಳ ಬಳಿ 'ಕಲರಿಂಗ್ ಬುಕ್ಸ್' ಬಗ್ಗೆ ಕೇಳಿದರು. ಈ ವಿಷಯ ಈ ಮುಗ್ಧ ಮಗುವಿನ ಮನಸ್ಸಿಗೆ ಎಷ್ಟು ನಾಟಿತೆಂದರೆ ಅವಳು ವಿವಿಧ ಬಗೆಯ ಪುಸ್ತಕಗಳನ್ನು ಸಂಗ್ರಹಿಸಲು ನಿರ್ಧರಿಸಿದಳು. ಅವಳು ತಮ್ಮ ನೆರೆಹೊರೆಯ ಮನೆಗಳು, ಸಂಬಂಧಿಕರು ಮತ್ತು ಸ್ನೇಹಿತರಿಂದ ಪುಸ್ತಕಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಳು ಮತ್ತು ಅದೇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಮೊದಲ ಗ್ರಂಥಾಲಯವನ್ನು ತೆರೆದಳು ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಅವಶ್ಯಕತೆಯಿರುವ ಮಕ್ಕಳಿಗಾಗಿ ಈ ಹೆಣ್ಣು ಮಗಳು ವಿವಿಧೆಡೆ ತೆರೆದಿರುವ ಏಳು ಗ್ರಂಥಾಲಯಗಳಲ್ಲಿ ಈಗ ಸುಮಾರು 6 ಸಾವಿರ ಪುಸ್ತಕಗಳು ಲಭ್ಯವಿವೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪುಟ್ಟ 'ಆಕರ್ಷಣಾ' ಕಾರ್ಯ ನಿರ್ವಹಿಸುತ್ತಿರುವ ರೀತಿ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
ಸ್ನೇಹಿತರೇ, ಇಂದಿನ ಯುಗ ಡಿಜಿಟಲ್ ತಂತ್ರಜ್ಞಾನ ಮತ್ತು ಇ-ಪುಸ್ತಕದ್ದಾಗಿದೆ ಎನ್ನುವ ಮಾತು ನಿಜ. ಆದರೂ ಪುಸ್ತಕ ಯಾವಾಗಲೂ ನಮ್ಮ ಜೀವನದಲ್ಲಿ ಓರ್ವ ಉತ್ತಮ ಸ್ನೇಹಿತನ ಪಾತ್ರ ನಿರ್ವಹಿಸುತ್ತದೆ. ಆದ್ದರಿಂದ ನಾವು ಮಕ್ಕಳನ್ನು ಪುಸ್ತಕ ಓದುವಂತೆ ಉತ್ತೇಜಿಸಬೇಕಾಗಿದೆ.
ನನ್ನ ಕುಟುಂಬ ಬಾಂಧವರೇ, ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆಂದು ಹೇಳಲಾಗಿದೆ–
ಜೀವೇಷು ಕರುಣಾಚಾಪಿ, ಮೈತ್ರೀತೇಷು ವಿಧೀಯತಾಮ್
ಅಂದರೆ, ಜೀವಿಗಳಲ್ಲಿ ಕರುಣೆ ತೋರಿಸಿ ಮತ್ತು ಅವುಗಳನ್ನು ನಿಮ್ಮ ಮಿತ್ರರನ್ನಾಗಿಸಿಕೊಳ್ಳಿ. ನಮ್ಮಲ್ಲಿ ಹೆಚ್ಚಿನ ದೇವತೆ-ದೇವರುಗಳು ಸವಾರಿ ಮಾಡುವುದು ಪಶು-ಪಕ್ಷಿಗಳ ಮೇಲೇ ಅಲ್ಲವೇ. ಬಹಳಷ್ಟು ಜನರು ದೇವಾಲಯಗಳಿಗೆ ಹೋಗುತ್ತಾರೆ, ದೇವರ ದರ್ಶನ ಮಾಡುತ್ತಾರೆ ಆದರೆ, ಯಾವ ಪಶು ಪಕ್ಷಿಯ ಮೇಲೆ ಆ ದೇವರು ಕುಳಿತಿರುತ್ತಾರೋ ಅದರ ಕಡೆಗೆ ಅವರು ಗಮನ ನೀಡುವುದಿಲ್ಲ. ಈ ಪಶು ಪಕ್ಷಿಗಳು ಕೇವಲ ನಮ್ಮ ನಂಬಿಕೆಯ ಕೇಂದ್ರವಾಗಿಮಾತ್ರಾ ಉಳಿಯಬಾರದು, ನಾವು ಅವುಗಳನ್ನು ಸಾಧ್ಯವಾದಷ್ಟೂ ರಕ್ಷಿಸಬೇಕು. ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ, ಸಿಂಹಗಳು, ಹುಲಿಗಳು, ಚಿರತೆಗಳು ಮತ್ತು ಆನೆಗಳ ಸಂಖ್ಯೆಯಲ್ಲಿ ಉತ್ತೇಜನಕಾರಿ ಹೆಚ್ಚಳ ಕಂಡುಬಂದಿದೆ. ಈ ಭೂಮಿಯ ಮೇಲೆ ವಾಸಿಸುವ ಇತರೆ ಜೀವ ಜಂತುಗಳನ್ನು ಕೂಡಾ ರಕ್ಷಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹದ್ದೇ ಒಂದು ವಿಶಿಷ್ಠ ಪ್ರಯತ್ನ ರಾಜಸ್ತಾನದ ಪುಷ್ಕರದಲ್ಲಿ ಕೂಡಾ ನಡೆಯುತ್ತಿದೆ. ಇಲ್ಲಿ ಸುಖದೇವ್ ಭಟ್ ಮತ್ತು ಅವರ ತಂಡ ಒಗ್ಗೂಡಿ, ವನ್ಯಜೀವಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅವರ ತಂಡದ ಹೆಸರೇನು ಎಂದು ನಿಮಗೆ ಗೊತ್ತೇ? ಅವರ ತಂಡದ ಹೆಸರು–ಕೋಬ್ರಾ. ಈ ಅಪಾಯಕಾರಿ ಹೆಸರು ಏತಕ್ಕಾಗಿ ಇಡಲಾಗಿದೆ ಎಂದರೇ, ಅವರ ತಂಡವು ಈ ಕ್ಷೇತ್ರದಲ್ಲಿ ಅಪಾಯಕಾರಿ ಹಾವುಗಳನ್ನು ರಕ್ಷಿಸುವ ಕೆಲಸ ಕೂಡಾ ಮಾಡುತ್ತದೆ. ಈ ತಂಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ತೊಡಗಿಕೊಂಡಿದ್ದಾರೆ, ಕೇವಲ ಒಂದು ಕರೆ ಮಾಡಿದರೆ ಸಾಕು ಅವರು ಸಮಯಕ್ಕೆ ಸರಿಯಾಗಿ ಬಂದು ಅಭಿಯಾನದಲ್ಲಿ ತೊಡಗಿಕೊಳ್ಳುತ್ತಾರೆ. ಸುಖ್ ದೇವ್ ಅವರ ಈ ತಂಡವು ಈವರೆಗೂ 30 ಸಾವಿರಕ್ಕೂ ಅಧಿಕ ವಿಷಕಾರಿ ಹಾವುಗಳ ಜೀವ ರಕ್ಷಿಸಿದ್ದಾರೆ. ಈ ಪ್ರಯತ್ನದಿಂದಾಗಿ ಜನರಿಗೆ ಅಪಾಯ ದೂರವಾಗಿರುವುದು ಮಾತ್ರವಲ್ಲದೇ, ಪ್ರಕೃತಿಯ ರಕ್ಷಣೆ ಕೂಡಾ ಆಗುತ್ತಿದೆ. ಈ ತಂಡವು ರೋಗದಿಂದ ಬಳಲುತ್ತಿರುವ ಇತರ ಪ್ರಾಣಿಗಳ ಶುಶ್ರೂಷೆ ಕಾರ್ಯದಲ್ಲಿ ಕೂಡಾ ತೊಡಗಿಕೊಂಡಿದೆ.ಸ್ನೇ
ಹಿತರೇ, ತಮಿಳುನಾಡಿನ ಚೆನ್ನೈನಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಎಂ. ರಾಜೇಂದ್ರ ಪ್ರಸಾದ್ ಅವರು ಕೂಡಾ ಒಂದು ವಿಶಿಷ್ಠ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ 25-30 ವರ್ಷಗಳಲ್ಲಿ ಪಾರಿವಾಳಗಳ ಸೇವೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ಮನೆಯಲ್ಲಿ 200 ಕ್ಕೂ ಅಧಿಕ ಪಾರಿವಾಳಗಳಿವೆ. ಪಕ್ಷಿಗಳ ಆಹಾರ, ನೀರು, ಆರೋಗ್ಯದಂತಹ ಮುಖ್ಯ ವಿಷಯಗಳ ಬಗ್ಗೆ ಅವರು ಕಾಳಜಿ ವಹಿಸುತ್ತಾರೆ. ಇವುಗಳಿಗಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಆದರೂ ಅವರು ತಮ್ಮ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸ್ನೇಹಿತರೇ, ಸದುದ್ದೇಶದಿಂದ ಇಂತಹ ಕೆಲಸ ಕಾರ್ಯಗಳನ್ನು ಮಾಡುವ ಜನರನ್ನು ನೋಡಿದಾಗ ನಿಜಕ್ಕೂ ಮನಕ್ಕೆ ನೆಮ್ಮದಿ, ಸಂತೋಷ ದೊರೆಯುತ್ತದೆ. ನಿಮಗೇನಾದರೂ ಇಂತಹ ವಿಶೇಷ, ವಿಶಿಷ್ಠ ಪ್ರಯತ್ನಗಳ ಬಗ್ಗೆ ತಿಳಿದುಬಂದರೆ ಅದನ್ನು ಖಂಡಿತವಾಗಿಯೂ ಹಂಚಿಕೊಳ್ಳಿ.
ನನ್ನ ಪ್ರೀತಿಯ ಕುಟುಂಬವಾಸಿಗಳೇ, ಸ್ವಾತಂತ್ರ್ಯದ ಈ ಅಮೃತ ಕಾಲವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕರ್ತವ್ಯ ಕಾಲವೂ ಆಗಿದೆ. ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ನಮ್ಮ ಧ್ಯೇಯಗಳನ್ನು ಸಾಧಿಸಬಹುದಾಗಿದೆ, ನಮ್ಮ ಗುರಿಯನ್ನು ಮುಟ್ಟಬಹುದಾಗಿದೆ. ಕರ್ತವ್ಯದ ಈ ಭಾವನೆ ನಮ್ಮೆಲ್ಲರನ್ನೂ ಒಂದು ಸೂತ್ರದಲ್ಲಿ ಬಂಧಿಸುತ್ತದೆ. ಉತ್ತರ ಪ್ರದೇಶದ ಸಂಭಲ್ ನಲ್ಲಿ ದೇಶವು ಕರ್ತವ್ಯ ಭಾವನೆಯ ಇಂತಹದ್ದೇ ಒಂದು ಉದಾಹರಣೆಯನ್ನು ಕಂಡಿದೆ. ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಯೋಚಿಸಿನೋಡಿ, 70 ಕ್ಕಿಂತ ಹೆಚ್ಚು ಗ್ರಾಮಗಳಿದ್ದು, ಸಾವಿರಾರು ಜನಸಂಖ್ಯೆಯಿದ್ದು, ಎಲ್ಲರೂ ಸೇರಿ, ಒಂದು ಗುರಿ, ಒಂದು ಧ್ಯೇಯ ಸಾಧನೆಗಾಗಿ ಒಗ್ಗಟ್ಟಾಗಿ ಮುಂದೆ ಬರುವುದು ಬಹಳ ಅಪರೂಪಕ್ಕೆ ಕಾಣಸಿಗುತ್ತದೆ. ಆದರೆ, ಸಂಭಲ್ ನ ಜನರು ಇದನ್ನು ಮಾಡಿ ತೋರಿಸಿದ್ದಾರೆ. ಈ ಜನರೆಲ್ಲರೂ ಒಂದುಗೂಡಿ, ಜನಭಾಗಿದಾರಿ ಮತ್ತು ಸಾಮೂಹಿಕತೆಯ ಬಹು ದೊಡ್ಡ ಅದ್ಭುತ ಉದಾಹರಣೆ ತೋರಿಸಿದ್ದಾರೆ. ವಾಸ್ತವದಲ್ಲಿ, ಈ ಕ್ಷೇತ್ರದಲ್ಲಿ ದಶಕಗಳಿಗೆ ಮುನ್ನ, ಸೋತ್ ಎಂಬ ಹೆಸರಿನ ನದಿ ಹರಿಯುತ್ತಿತ್ತು. ಅಮರೋಹಾದಿಂದ ಆರಂಭವಾಗಿ ಸಂಭಲ್ ಮೂಲಕ ಹರಿಯುತ್ತಾ ಬದಾಯುವರೆಗೂ ಪ್ರವಹಿಸುತ್ತಿದ್ದ ಈ ನದಿ ಒಂದು ಕಾಲದಲ್ಲಿ ಈ ಕ್ಷೇತ್ರದಲ್ಲಿ ಜೀವನದಿಯ ರೂಪದಲ್ಲಿ ಹೆಸರಾಗಿತ್ತು. ಈ ನದಿಯಲ್ಲಿ ಸದಾಕಾಲವು ನೀರು ತುಂಬಿ ಪ್ರವಹಿಸುತ್ತಿತ್ತು, ಇದು ಇಲ್ಲಿನ ರೈತರಿಗೆ ಬೇಸಾಯಕ್ಕೆ ಮುಖ್ಯ ಆಧಾರವಾಗಿತ್ತು. ಕಾಲ ಕ್ರಮೇಣ ನದಿಯಲ್ಲಿ ನೀರು ಕಡಿಮೆಯಾಯಿತು, ನದಿ ಹರಿಯುತ್ತಿದ್ದ ಜಾಗಗಳ ಅತಿಕ್ರಮಣವಾಯಿತು ಮತ್ತು ಈ ನದಿ ಬರಿದಾಯಿತು. ನದಿಯನ್ನು ತಾಯಿಯೆಂದು ನಂಬುವ ನಮ್ಮ ದೇಶದಲ್ಲಿ, ಸಂಭಲ್ ನ ಜನರು ಈ ಸೋತ್ ನದಿಯನ್ನು ಕೂಡಾ ಪುನಶ್ಚೇತನಗೊಳಿಸುವ ಸಂಕಲ್ಪ ಕೈಗೊಂಡರು. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಸೋತ್ ನದಿಯ ಕಾಯಕಲ್ಪದ ಕೆಲಸವನ್ನು 70 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಒಂದುಗೂಡಿ ಆರಂಭಸಿದವು. ಗ್ರಾಮ ಪಂಚಾಯಿತಿಯ ಜನರು ಸರ್ಕಾರದ ಇಲಾಖೆಗಳನ್ನು ಕೂಡಾ ತಮ್ಮೊಂದಿಗೆ ಸೇರಿಸಿಕೊಂಡರು. ಒಂದು ವರ್ಷಕ್ಕಿಂತ ಮೊದಲು ಕೇವಲ ಆರು ತಿಂಗಳಿನಲ್ಲಿಯೇ ಈ ಜನರು ನದಿಯ 100 ಕಿಲೋಮೀಟರ್ ಗಿಂತ ಹೆಚ್ಚು ಹಾದಿಯನ್ನು ಮರುನಿರ್ಮಾಣ ಮಾಡಿದರೆಂದು ತಿಳಿದು ನಿಮಗೆ ಸಂತೋಷವೆನಿಸಬಹುದು. ಮಳೆಗಾಲ ಆರಂಭವಾದಾಗ, ಇಲ್ಲಿನ ಜನರ ಶ್ರಮಕ್ಕೆ ಫಲ ದೊರೆಯಿತು, ಮತ್ತು ಸೋತ್ ನದಿ ನೀರಿನಿಂದ ಬಹುತೇಕ ತುಂಬಿಬಿಟ್ಟಿತು. ಇಲ್ಲಿನ ರೈತರಿಗೆ ಇದು ಸಂತೋಷದ ಬಹುದೊಡ್ಡ ಅವಕಾಶ ತಂದಿತು. ಜನರು ನದಿಯ ತೀರದಲ್ಲಿ 10 ಸಾವಿರಕ್ಕೂ ಅಧಿಕ ಬಿದಿರಿನ ಸಸಿಗಳನ್ನು ಕೂಡಾ ನೆಟ್ಟಿದ್ದಾರೆ, ಇದರಿಂದಾಗಿ ನದಿಯ ತೀರ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ನದಿಯ ನೀರಿನಲ್ಲಿ ಮೂವತ್ತು ಸಾವಿರಕ್ಕಿಂತಲೂ ಅಧಿಕ ಗಾಂಬೂಸಿಯಾ ಮೀನುಗಳನ್ನು ಬಿಡಲಾಗಿದ್ದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಲಾಗಿದೆ. ಸ್ನೇಹಿತರೇ, ನಾವು ಸಂಕಲ್ಪ ಮಾಡಿದರೆ ದೊಡ್ಡ ದೊಡ್ಡ ಸವಾಲುಗಳನ್ನು ಕೂಡಾ ಎದುರಿಸಿ, ದಾಟಿ, ದೊಡ್ಡ ಬದಲಾವಣೆಗಳನ್ನು ತರಬಹುದು ಎಂಬುದನ್ನು ಸೋತ್ ನದಿಯ ಉದಾಹರಣೆ ನಮಗೆ ತಿಳಿಸುತ್ತದೆ. ನೀವು ಕೂಡಾ ಕರ್ತವ್ಯದ ಮಾರ್ಗದಲ್ಲಿ ಮುಂದೆ ಸಾಗುತ್ತಾ, ನಿಮ್ಮ ಸುತ್ತಮುತ್ತಲಿನ ಇಂತಹ ಅನೇಕ ಬದಲಾವಣೆಗಳಿಗೆ ಮಾಧ್ಯಮವಾಗಬಹುದು.
ನನ್ನ ಪ್ರೀತಿಯ ಕುಟುಂಬಸ್ಥರೇ, ಉದ್ದೇಶಗಳು ದೃಢವಾಗಿದ್ದಾಗ ಮತ್ತು ಏನನ್ನಾದರೂ ಕಲಿಯುವ ಸಂಕಲ್ಪವಿದ್ದಾಗ ಯಾವುದೇ ಕೆಲಸ ಕಷ್ಟ ಎನಿಸುವುದಿಲ್ಲ. ಪಶ್ಚಿಮ ಬಂಗಾಳದ ಶ್ರೀಮತಿ ಶಕುಂತಲಾ ಸರದಾರ್ ಅವರು ಈ ಅಂಶವನ್ನು ನಿಜವಾಗಿಯೂ ಸಾಬೀತು ಮಾಡಿ ತೋರಿಸಿದ್ದಾರೆ. ಇಂದು ಅವರು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಶಕುಂತಲಾ ಅವರು ಜಂಗಲ್ ಮಹಲ್ ನ ಶಾತನಾಲಾ ಗ್ರಾಮದ ನಿವಾಸಿಯಾಗಿದ್ದಾರೆ. ಬಹಳ ಕಾಲದವರೆಗೆ ಅವರ ಕುಟುಂಬ ಪ್ರತಿ ದಿನ ಕೂಲಿ ನಾಲಿ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಅವರ ಕುಟುಂಬಕ್ಕೆ ಜೀವನೋಪಾಯ ಬಹಳ ಕಷ್ಟವಾಗಿತ್ತು. ಅವರು ಆಗ ಹೊಸದೊಂದು ಮಾರ್ಗ ಆರಿಸಿಕೊಳ್ಳಲು ನಿರ್ಧರಿಸಿದರು ಮತ್ತು ಆ ಹಾದಿಯಲ್ಲಿ ಯಶಸ್ಸು ಗಳಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದರು. ಅವರು ಈ ಅದ್ಭುತವನ್ನು ಹೇಗೆ ಮಾಡಿದರೆಂದು ನೀವು ಖಂಡಿತವಾಗಿಯೂ ತಿಳಿದುಕೊಳ್ಳಬಯುಸುತ್ತೀರೆಂದು ನನಗೆ ಗೊತ್ತು. ಇದಕ್ಕೆ ಉತ್ತರ – ಒಂದು ಬಟ್ಟೆ ಹೊಲಿಯುವ ಯಂತ್ರ. ಒಂದು ಬಟ್ಟೆ ಹೊಲಿಯುವ ಯಂತ್ರದ ಸಹಾಯದಿಂದ ಅವರು ‘ಸಾಲ್‘ ಮರದ ಎಲೆಗಳ ಮೇಲೆ ಸುಂದರ ಆಕರ್ಷಕ ವಿನ್ಯಾಸ ಮೂಡಿಸಲು ಪ್ರಾರಂಭಿಸಿದರು. ಅವರ ಈ ಕೌಶಲ್ಯ ಇಡೀ ಕುಟುಂಬದ ಜೀವನವನ್ನೇ ಬದಲಾಯಿಸಿಬಿಟ್ಟಿತು. ಅವರು ತಯಾರಿಸಿದ ಈ ಅದ್ಭುತ ಕಲೆಗೆ ಬೇಡಿಕೆಗೆ ಕ್ರಮೇಣ ಹೆಚ್ಚುತ್ತಲೇ ಇದೆ. ಶಕುಂತಲಾ ಅವರ ಈ ಕೌಶಲ್ಯವು ಕೇವಲ ಅವರ ಜೀವನವನ್ನು ಮಾತ್ರವಲ್ಲದೇ, ‘ಸಾಲ್‘ ಎಲೆಗಳನ್ನು ಸಂಗ್ರಹಿಸುವ ಅನೇಕರ ಜೀವನವನ್ನು ಕೂಡಾ ಬದಲಾಯಿಸಿಬಿಟ್ಟಿತು. ಅವರು ಈಗ, ಅನೇಕ ಮಹಿಳೆಯರಿಗೆ ತರಬೇತಿ ನೀಡುವ ಕೆಲಸ ಕೂಡಾ ಮಾಡುತ್ತಿದ್ದಾರೆ. ಕೂಲಿ ನಾಲಿಯ ಮೇಲೆ ಆಧಾರಪಟ್ಟಿದ್ದ ಕುಟುಂಬವೊಂದು ಈಗ ಸ್ವತಃ ಮತ್ತೊಬ್ಬರಿಗೆ ಉದ್ಯೋಗ ನೀಡುವಂತಾಗಿರುವುದನ್ನು ನೀವು ಊಹಿಸಬಹುದು. ದೈನಂದಿನ ಕೂಲಿಯ ಮೇಲೆ ಆಧಾರಪಟ್ಟಿದ್ದ ತಮ್ಮ ಕುಟುಂಬ ಈಗ ತನ್ನ ಕಾಲಿನ ಮೇಲೆ ತಾನು ನಿಲ್ಲುವಂತೆ ಅವರು ಮಾಡಿದ್ದಾರೆ. ಇದು ಅವರ ಕುಟುಂಬಕ್ಕೆ ಇತರ ವಿಷಯಗಳ ಬಗ್ಗೆ ಗಮನ ಹರಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಮತ್ತೊಂದು ವಿಷಯವಿದೆ, ಅದೆಂದರೆ ಶಕುಂತಲಾ ಅವರು ತಮ್ಮ ಜೀವನ ಸ್ವಲ್ಪ ಉತ್ತಮವಾದ ನಂತರ ಹಣ ಉಳಿಸಲು ಕೂಡಾ ಆರಂಭಿಸಿದ್ದಾರೆ. ತನ್ನ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂದು ಆಕೆ ಈಗ ಜೀವ ವಿಮೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಶಕುಂತಲಾ ಅವರ ಈ ಉತ್ಸಾಹವನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ. ಭಾರತ ಜನರಲ್ಲಿ ಇಂತಹ ಅನೇಕ ಪ್ರತಿಭೆಗಳು ತುಂಬಿವೆ. – ನೀವು ಅವರಿಗೆ ಅವಕಾಶ ಕೊಟ್ಟು ನೋಡಿ ಮತ್ತು ಅವರು ಎಂತೆಂತಹ ಅದ್ಭುತಗಳನ್ನು ಮಾಡಿ ತೋರಿಸುತ್ತಾರೆ ಎಂಬುದನ್ನು ನೋಡಿ.
ನನ್ನ ಕುಟುಂಬ ಸದಸ್ಯರೇ, ದೆಹಲಿಯಲ್ಲಿ ಜಿ-20 ಶೃಂಗಸಭೆಯ ಸಮಯದಲ್ಲಿ ಅನೇಕ ವಿಶ್ವ ನಾಯಕರು ಬಾಪೂಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಜಘಾಟ್ ಗೆ ಬೇಟಿ ನೀಡಿದ್ದನ್ನು ಯಾರು ತಾನೇ ಮರೆಯಲು ಸಾಧ್ಯ. ಪ್ರಪಂಚದಾದ್ಯಂತ ಬಾಪೂ ಅವರ ಚಿಂತನೆ-ವಿಚಾರಗಳು ಇಂದಿಗೂ ಪ್ರಸ್ತುತ ಎನ್ನುವುದಕ್ಕೆ ಇದು ಅತಿ ದೊಡ್ಡ ರುಜುವಾತಾಗಿದೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎನ್ನುವುದು ನನಗೆ ಬಹಳ ಸಂತೋಷ ತರುವ ವಿಷಯವಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ‘ಸ್ವಚ್ಛತೆಯೇ ಸೇವೆ –ಸ್ವಚ್ಛತಾ ಹೀ ಸೇವಾ’ ಅಭಿಯಾನ ಸಾಕಷ್ಟು ಉತ್ಸಾಹದಿಂದ ನಡೆಯುತ್ತಿದೆ. Indian Swachhata League ನಲ್ಲಿ ಕೂಡಾ ಸಾಕಷ್ಟು ಉತ್ತಮ ಭಾಗಿದಾರಿ ಕಂಡುಬರುತ್ತಿದೆ. ಅಕ್ಟೋಬರ್ 1 ರಂದು ಅಂದರೆ ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಒಂದು ದೊಡ್ಡ ಕಾರ್ಯಕ್ರಮ ಆಯೋಜನೆಯಾಗಲಿದೆ. ನೀವು ಅದಕ್ಕಾಗಿ ನಿಮ್ಮ ಸಮಯ ಮೀಸಲಿಟ್ಟು, ಸ್ವಚ್ಛತೆಗಾಗಿ ಮೀಸಲಿಟ್ಟ ಈ ಕಾರ್ಯಕ್ರಮದಲ್ಲಿ ನಿಮ್ಮ ಕೈ ಜೋಡಿಸಿ ಎಂದು ನಾನು ಇಂದು ‘ಮನದ ಮಾತಿನ’ ಮೂಲಕ ದೇಶವಾಸಿಗಳೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ. ನೀವು ನಿಮ್ಮ ರಸ್ತೆಗಳು, ಸುತ್ತ ಮುತ್ತಲಿನ ಪ್ರದೇಶ, ಉದ್ಯಾನವನ, ನದಿ, ಸರೋವರ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸ್ವಚ್ಛತಾ ಅಭಿಯಾನಗಳಲ್ಲಿ ಕೈ ಜೋಡಿಸಬಹುದು. ಮತ್ತು ಎಲ್ಲೆಲ್ಲಿ ಅಮೃತ ಸರೋವರಗಳು ನಿರ್ಮಾಣವಾಗಿದೆಯೋ ಅಲ್ಲೆಲ್ಲಾ ಖಂಡಿತವಾಗಿಯೂ ಸ್ವಚ್ಛ ಮಾಡಲೇಬೇಕು. ಸ್ವಚ್ಛತೆಯ ಈ ಕಾರ್ಯಾಂಜಲಿಯೇ ಗಾಂಧೀಜಿಯವರಿಗೆ ನಾವು ಸಲ್ಲಿಸುವ ನಿಜವಾಗ ಶ್ರದ್ಧಾಂಜಲಿ. ಈ ಗಾಂಧಿ ಜಯಂತಿಯ ಸಂದರ್ಭದಲ್ಲಿ ಖಾದಿಯ ಯಾವುದಾದರೊಂದು ಉತ್ಪನ್ನವನ್ನು ಖಂಡಿತವಾಗಿಯೂ ಖರೀದಿಸಬೇಕೆಂದು ನಾನು ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ.
ನನ್ನ ಕುಟುಂಬ ಸದಸ್ಯರೇ, ನಮ್ಮ ದೇಶದಲ್ಲಿ ಹಬ್ಬಗಳ ಋತು ಕೂಡಾ ಆರಂಭವಾಗಿದೆ. ನಿಮ್ಮ ಮನೆಗಳಲ್ಲಿ ಕೂಡಾ ಏನನ್ನೂದರೂ ಹೊಸದನ್ನು ಖರೀದಿಸುವ ಯೋಜನೆ ಸಿದ್ಧವಾಗುತ್ತಿರಬಹುದಲ್ಲವೇ. ನವರಾತ್ರಿಯಲ್ಲಿ ತಮ್ಮ ಕೆಲಸದ ಶುಭಾರಂಭ ಮಾಡಬೇಕೆಂದು ಕೆಲವು ನಿರೀಕ್ಷಿಸುತ್ತಿರಬಹುದಲ್ಲವೇ? ಸಂತೋಷ, ಉತ್ಸಾಹದ ಈ ವಾತಾವರಣದಲ್ಲಿ ನೀವು ವೋಕಲ್ ಫಾರ್ ಲೋಕಲ್ ಮಂತ್ರವನ್ನು ಖಂಡಿತವಾಗಿಯೂ ನೆನಪಿಸಿಟ್ಟುಕೊಳ್ಳಿ. ಸಾಧ್ಯವಾದಷ್ಟು ನೀವು ಭಾರತದಲ್ಲೇ ತಯಾರಿಸಿದ ಸಾಮಾನುಗಳನ್ನು ಖರೀದಿಸಿ, ಭಾರತದ ಉತ್ಪನ್ನಗಳನ್ನು ಉಪಯೋಗಿಸಿ ಮತ್ತು ಮೇಡ್ ಇನ್ ಇಂಡಿಯಾ ವಸ್ತುಗಳನ್ನೇ ಉಡುಗೊರೆಯಾಗಿ ನೀಡಿ. ನಿಮ್ಮ ಒಂದು ಸಣ್ಣ ಸಂತೋಷ ದೂರದಲ್ಲಿರುವ ಮತ್ತಾವುದೋ ಒಂದು ಕುಟುಂಬಕ್ಕೆ ದೊಡ್ಡ ಸಂತೋಷದ ಕಾರಣವಾಗುತ್ತದೆ. ನೀವು ಖರೀದಿ ಮಾಡುವ ಭಾರತೀಯ ವಸ್ತುವಿನ ನೇರ ಲಾಭ, ನಮ್ಮ ಶ್ರಮಿಕರಿಗೆ, ಕೆಲಸಗಾರರಿಗೆ, ಕಲಾವಿದರಿಗೆ, ಮತ್ತು ಇತರ ಕುಶಲಕರ್ಮಿ ಸೋದರ ಸೋದರಿಯರಿಗೆ ತಲುಪುತ್ತದೆ. ಈಗ ಬಹಳಷ್ಟು ಸ್ಮಾರ್ಟ್ ಆಪ್ ಗಳು ಕೂಡಾ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿವೆ. ನೀವು ಸ್ಥಳೀಯ ವಸ್ತುಗಳನ್ನು ಖರೀದಿಸಿದಾಗ, ಸ್ಮಾರ್ಟ್ ಆಪ್ ಗಳು ಈ ಯುವಜನತೆಗೆ ಕೂಡಾ ಇದರ ಪ್ರಯೋಜನ ದೊರೆಯುತ್ತದೆ.
ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ಇಂದಿನ ‘ಮನದ ಮಾತು’ ನಾನು ಇಲ್ಲಿಗೆ ಮುಗಿಸುತ್ತಿದ್ದೇನೆ. ಮುಂದಿನ ಬಾರಿ ನಾನು ಮನದ ಮಾತಿನಲ್ಲಿ ನಿಮ್ಮನ್ನು ಭೇಟಿಯಾಗುವಾಗ ನವರಾತ್ರಿ ಮತ್ತು ದಸರಾ ಹಬ್ಬಗಳು ಮುಗಿದಿರುತ್ತವೆ. ಹಬ್ಬಗಳ ಈ ಋತುವಿನಲ್ಲಿ ನೀವು ಸಂಪೂರ್ಣ ಉತ್ಸಾಹದಿಂದ ಎಲ್ಲಾ ಹಬ್ಬಗಳನ್ನೂ ಆಚರಿಸಿ. ನಿಮ್ಮ ಕುಟುಂಬಗಳಲ್ಲಿ ಸಂತೋಷ ತುಂಬಿರಲಿ ಎನ್ನುವುದು ನನ್ನ ಪ್ರೀತಿಯ ಹಾರೈಕೆಯಾಗಿದೆ. ಈ ಹಬ್ಬಗಳಿಗಾಗಿ ನಿಮಗೆ ಅನೇಕಾನೇಕ ಶುಭ ಹಾರೈಕೆಗಳು. ನಿಮ್ಮೊಂದಿಗೆ ಹೊಸ ಹೊಸ ವಿಷಯಗಳೊಂದಿಗೆ, ದೇಶವಾಸಿಗಳ ಹೊಸ ಯಶಸ್ಸಿನ ಗಾಥೆಗಳೊಂದಿಗೆ ಮತ್ತೆ ಭೇಟಿಯಾಗುತ್ತೇನೆ. ನೀವು ನಿಮ್ಮ ಸಂದೇಶಗಳನ್ನು ನನಗೆ ಖಂಡಿತವಾಗಿಯೂ ಕಳುಹಿಸುತ್ತಿರಿ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮರೆಯದಿರಿ. ಅವುಗಳಿಗಾಗಿ ನಾನು ನಿರೀಕ್ಷಿಸುತ್ತಿರುತ್ತೇನೆ.
ಅನೇಕಾನೇಕ ಧನ್ಯವಾದ.
ನಮಸ್ಕಾರ.
My dear family members, Namaskar. A very warm welcome to you once again in the August episode of Mann Ki Baat. I don't recall if it has ever happened that in the month of Sawan, 'Mann Ki Baat' program was held twice, but, this time, the same is happening. Sawan means the month of Mahashiv, the month of festivities and fervour. The success of Chandrayaan has enhanced this atmosphere of celebration manifold. It has been more than three days that Chandrayaan has reached the moon. This success is so grand that any amount of discussion about it would be inadequate. When I am talking to you today, I am reminded of a few lines of an old poem of mine...
Raise your head high
To slice the densest of clouds
It’s time to devote ourselves
To the resolve of spreading radiance
Well, the sun has just risen
Treading ahead with a firm resolve,
Crossing every deterrent; nay barrier
To dispel the scourge of utter darkness
Well, the sun has just risen.
And then one realises…
Even the sun has just risen…
Albeit…shining across many a dense cloud
Yet….holding the head sky high!
My family members, on the 23rd of August, India and India's Chandrayaan have proved that some suns of resolve rise on the moon as well. Mission Chandrayaan has become a symbol of the spirit of New India, which wants to ensure victory, and also knows how to win in any situation.
Friends, there has been one aspect of this mission which I specially want to discuss with all of you today. You might remember this time I have expressed from Red Fort that we have to strengthen Women Led Development as a national character. Where the might of women power is added, the impossible can also be made possible. India's Mission Chandrayaan is also a live example of woman power. Many women scientists and engineers have been directly involved in this entire mission. They have handled many important responsibilities like project director, project manager of different systems. The daughters of India are now challenging even the Space which is considered infinite. When the daughters of a country become so ambitious, who can stop that country from becoming developed!
Friends, we have accomplished such a lofty flight since today our dreams are big and our efforts are also big. Along with our scientists, other sectors have also played an important role in the success of Chandrayaan-3. Many countrymen have contributed in ensuring all the parts and meeting technical requirements. When everyone's efforts converged, success was also achieved. This is the biggest success of Chandrayaan-3. I wish that in future too our space sector will achieve innumerable successes like this with collective efforts.
My family members, the month of September is going to be witness to the potential of India. India is fully prepared for the G-20 Leaders Summit to be held next month. Heads of 40 countries and many Global Organizations are coming to the capital Delhi to participate in this event. This will be the biggest participation ever in the history of the G-20 Summit. During her presidency, India has made G-20 a more inclusive forum. The African Union also joined the G-20 on India’s invitation and the voice of the people of Africa reached this important platform of the world. Friends, since India took over the presidency of the G-20 in Bali last year, so much has happened that it fills us with pride. Moving away from the tradition of holding big events in Delhi, we took them to different cities of the country. About 200 meetings related to this were organized in 60 cities across the country. Wherever the G-20 Delegates went, people warmly welcomed them. These delegates were very impressed, seeing the diversity of our country and our vibrant democracy. They also realized that there are so many possibilities in India.
Friends, Our Presidency of the G-20 is a People's Presidency, in which the spirit of public participation is at the forefront. Among the eleven Engagement Groups of G-20, Academia, Civil Society, Youth, Women, our Parliamentarians, Entrepreneurs and people associated with Urban Administration played an important role. In one way or the other, more than 1.5 crore people are associated with the events being organized across the country regarding this. In this effort of ours for public participation, not just one, but two world records have also been created. The participation of 1.25 lakh students from 800 schools in the G-20 Quiz held in Varanasi became a new world record. At the same time, the Lambani artisans also did wonders. 450 artisans have showcased their skill and craftsmanship by creating an amazing collection of around 1800 Unique Patches. Every representative who came to the G-20 was amazed to see the artistic diversity of our country. One such grand program was organized in Surat. 15,000 women from 15 states participated in the 'Saree Walkathon' held there. This program not only gave a boost to Surat's Textile Industry, 'Vocal for Local' also got a fillip and also paved the way for Local to become Global. After the G-20 meeting in Srinagar, a huge increase in the number of tourists to Kashmir is being seen. I urge all countrymen to come together to make the G-20 summit successful and bring glory to the country.
My family members, in episodes of 'Mann Ki Baat', we often discuss the potential of our young generation. Today, sports is one area where our youth are continuously achieving new successes. Today in 'Mann Ki Baat', I will talk about a tournament where recently our players have raised the national flag. A few days ago the World University Games were held in China. India displayed her best ever performance in these games this time. Our players won 26 medals in all, out of which 11 were Gold Medals. You will be pleased to know that even if we add all the medals won in all the World University Games that have been held since 1959, this number reaches only 18. In all these decades just 18 whereas this time our players won 26 medals. Hence, some young sportspersons, students who have won medals in the World University Games are currently connected with me on the phone line. Let me first tell you about them. Pragati, a resident of UP, has won a medal in Archery. Amlan, a resident of Assam, has won a medal in Athletics. Priyanka, a resident of UP, has won a medal in Race Walk. Abhidanya, a resident of Maharashtra, has won a medal in Shooting.
Modi ji :- Namaskar my dear young players.
Young player :- Namaste Sir.
Modi ji :- It’s a nice feeling taking to you. First of all, I congratulate the team selected from the universities of India… you people have brought glory to the name of India. You have made every countryman proud through your performance in the World University Games. So first of all I congratulate you heartily.
Pragati, I am starting this conversation with you. First of all, tell me what had you thought when you left after winning two medals? And having achieved such a big victory, what are you feeling?
Pragati :- Sir, I was feeling very proud, I was feeling so good that I had returned with my country's flag hoisted so high… it is okay that once I had reached the Gold Fight, I had lost it and was regretting it. But the second time it was in my mind that if something happens now, I will not let it lower down. It has to flutter the highest in any situation. When we won the fight at the end, we celebrated very well on the same podium. That moment was very good. I was feeling so proud that I could not measure the feeling.
Modi ji :- Pragati, you were facing a big problem physically. You emerged out of that. This in itself is a great inspiration for the youth of the country. What had happened to you?
Pragati:- Sir, on the 5th of May, 2020, I had brain haemorrhage. I was on the ventilator. There was no surety whether I would survive or not and if at all, how would I survive? But certainly… yes, I had the inner courage that I have to go back to stand on the ground. I have to shoot the Arrow. If my life has been saved then the biggest role is of God, then doctor, then Archery.
Modi ji :- Amlan is also with us. Amlan, tell me how you developed so much of interest in athletics!
Amlan :- Ji Namaskar Sir.
Modi ji :- Namaskar, Namaskar
Amlan :- Sir, earlier there was not much interest towards Athletics. Earlier we were more into Football. But as my brother’s friend told me that Amlan you should go for athletics competitions. So I thought okay, so the first time I played the State Meet, I lost in it. I didn't like the defeat. So gradually, I got into athletics. Then slowly, now it is starting to be fun. So just like that my interest grew.
Modi ji :- Amlan just tell me where did you practice mostly!
Amlan :- Mostly I have practiced in Hyderabad, Under Sai Reddy sir. Then after that there was a shift to Bhubaneswar and from there I started professionally sir.
Ok, Priyanka is also with us. Priyanka, you were part of the 20 kilometer Race Walk Team. The whole country is listening to you today, and they want to know about this sport. Tell us what kind of skills are required for this. And what has been the trajectory of your career?
Priyanka :- In an event like mine it is very tough because there are five judges present. Even if we run, they will expel us or even if we get off the road a little, they will declare us out even if there is a jump. Or even if we bend our knees, they expel us and I was even given a warning twice. After that, I controlled my speed so much since somehow I had to win the team medal, at least from here. Because we have come here for the country and we do not want to leave empty handed.
Modi ji :- Yes, and are father, brother and others all fine?
Priyanka :- Yes sir, everything is fine, I tell everyone that you motivate us so much, really sir, I am feeling very good, because there is not even a lot of demand for a game like World University in India. It goes, but now we are getting so much support in this game also… we are seeing tweets…everyone is tweeting that we have won so many medals, so it is feeling very good that like Olympics, this too, is getting so much of encouragement.
Modi ji: Well, Priyanka, congratulations from my side. You have made a big name, let us talk to Abhidanya.
Abhidanya :- Namaste Sir.
Modi ji: Tell me about yourself.
Abhidanya :- Sir I am from Kolhapur proper, Maharashtra, I do both 25 metres sports pistol and 10 metres air pistol events in shooting. Both my parents are high school teachers and I started shooting in 2015. When I started shooting, there were not that many facilities available in Kolhapur. It takes one and a half hour to travel from Vadgaon to Kolhapur by bus, then one and a half hour to come back, and four hours of training, so like that, 6-7 hours for travelling and training, so I used to miss my school too, then Mummy-Papa said that beta, do one thing, we will take you to the shooting range on Saturday-Sunday, and the rest of the time you do other games. So I used to play a lot of games in my childhood, because both my parents were very much interested in sports, but they could not do anything, financial support was not that much and there was not that much of information available. Hence my mother had a big dream…wanted me to represent the country and then win a medal for the country. So to fulfil her dream, I used to take a lot of interest in sports since childhood and then I have also done Taekwondo, in that too, I am a black belt, and after doing many games like Boxing, Judo, fencing and discus throw, I came to shooting. Then I struggled a lot for 2-3 years and for the first time I got selected in Malaysia for the University Championship and I got Bronze Medal in that, so I actually got a push from there. Then my school made a shooting range for me…I used to train there and then they sent me to Pune for training. So there’s Gagan Narang Sports Foundation, Gun for Glory… I am training under it now… Gagan sir has supported me a lot and encouraged me for my game.
Modi ji :- Well, if all four of you want to say something to me, I would like to hear it. There should be Pragati, Amlan, Priyanka and Abhidanya. All of you are connected with me, so if you want to say something, I will definitely listen.
Amlan :- Sir, I have a question sir.
Modi ji :- Ji.
Amlan :- Which sport do you like best sir?
Modi ji :- India should bloom a lot in the world of sports and that is why I am promoting these things a lot, but hockey, football, kabaddi, kho-kho, these are games rooted to our land, in these, we should never lag behind. And I’m observing that our people, are doing well in archery, they are doing well in shooting. And secondly, I am seeing that our youth and even in our families also do not have that feeling towards sports which was there earlier. Earlier, when a child used to go to play, they used to stop, and now, times have changed and the success that you people have been achieving, motivates all the families. In every game, wherever our children are going, they return after accomplishing something or the other for the country. And such news is shown prominently in the country today…is also conveyed and also discussed in schools and colleges. Well! I felt very nice. Many many congratulations to all of you from my side. Many good wishes.
Young player :- Thank you very much! Thank you Sir! Thank you
Modi ji :- Thank you! Namaskar.
My family members, this time on 15th August, the country saw the power of 'Sabka Prayas'. The efforts of all the countrymen turned the 'Har Ghar Tiranga Abhiyan' into a 'Har Man Tiranga Abhiyan'. Many records were also made during this campaign. The countrymen purchased tricolors in crores. Around 1.5 crore tricolors were sold through 1.5 lakh post offices. Through that, our workers, weavers, and especially women have also earned hundreds of crores of rupees. This time the countrymen have created a new record in posting Selfie with the tricolor. Last year till August 15, about 5 crore countrymen had posted Selfiewith the tricolor. This year this number has also crossed 10 crores.
Friends, At present, the campaign to evoke the spirit of patriotism 'Meri Mati, Mera Desh' is in full swing in the country. In the month of September, there will be a campaign to collect soil from every house in every village of the country. The holy soil of the country will be deposited in thousands of Amrit Kalash urns. At the end of October, thousands will reach the country's capital Delhi with the Amrit Kalash Yatra. Amrit Vatika will be built in Delhi from this soil only. I am sure, the efforts of every countryman will make this campaign successful.
My family members, this time I have received many letters in Sanskrit language. The reason for this is that the Poornima of the month of Sawan, World Sanskrit Day is celebrated.
Sarvebhyah Vishwa Sanskrit Disasasya Haardayaha Shubhkamanah
Many felicitations to all of you on World Sanskrit Day. We all know that Sanskrit is one of the oldest languages in the world. It is also called the mother of many modern languages. Sanskrit is known for its antiquity as well as its scientificity and grammar. Much ancient knowledge of India has been preserved in Sanskrit language for thousands of years. People doing research on subjects like Yoga, Ayurveda and philosophy are now learning Sanskrit more and more. Many institutes are also doing very good work in this direction. Such as Sanskrit Promotion foundation runs many courses like Sanskrit for Yog, Sanskrit for Ayurveda and Sanskrit for Buddhism. 'Sanskrit Bharti' runs a campaign to teach Sanskrit to people. In this you can participate in a 10 day 'Sanskrit Conversation Camp'. I am happy that today awareness and pride in Sanskrit has increased among people. There is also a special contribution of the country in the past years behind this. For example, three Sanskrit Deemed Universities were made Central Universities in 2020. Many colleges and institutes of Sanskrit universities are also being run in different cities. Sanskrit centers are becoming very popular in institutes like IITs and IIMs.
Friends, you must have often experienced one thing, in order to connect with the roots, to connect with our culture, our tradition, there’s is a very powerful medium – our mother tongue. When we connect with our mother tongue, we naturally connect with our culture. We get connected with our Sanskars, we get connected with our tradition, we get connected with our ancient splendor. Similarly, India has another mother tongue, the glorious Telugu language. 29 August will be celebrated as Telugu Day.
Andariki Telugu Bhasha Dinotsava Shubhakankshalu |
Many many congratulations to all of you on Telugu Day. Many priceless gems of Indian culture are hidden in the literature and heritage of Telugu language. Many efforts are also being made to ensure that the whole country gets the benefit of this heritage of Telugu.
My family members, we have talked about tourism in many episodes of 'Mann Ki Baat'. Seeing things or places in person, understanding and living them for a few moments, offers a different experience.
No matter how much someone describes the ocean, we cannot feel its vastness without seeing the ocean. No matter how much one talks about the Himalayas, we cannot assess its beauty without seeing the Himalayas. That's why I often urge all of you that whenever we get a chance, we must go to see the beauty and diversity of our country. Often we also see one more thing…despite having searched every corner of the world, we are unaware of many best places and things in our own city or state.
Many times it happens that people do not know much about the historical places of their own city. Something similar happened with Dhanpal ji. Dhanapal ji used to work as a driver in the Transport Office of Bangalore. About 17 years ago, he was given a responsibility in the Sightseeing wing. Now people know it by the name of Bengaluru Darshini. Dhanpal ji used to take tourists to various tourist places of the city. On one such trip, a tourist asked him why the tank in Bangalore is called Senki Tank. He felt very bad that he did not know the answer. In such a situation, he focused on enhancing his own knowledge. In his passion to know his heritage, he found many stones and inscriptions. Dhanpal ji's mind was so absorbed in this task that he also did a Diploma in epigraphy i.e. the subject related to inscriptions. Though he is now retired, his passion to explore the history of Bengaluru is still alive.
Friends, I am very happy to tell you about Brian D. Kharpran. He is a resident of Meghalaya and has a great interest in speleology. In simple language, it means – study of caves. Years ago, this interest arose in him when he read several story books. In 1964, he did his first exploration as a schoolboy. In 1990, he along with his friend established an association and through this he started to find out about the unknown caves of Meghalaya. Within no time, he along with his team discovered more than 1700 caves in Meghalaya and put the state on the World Cave Map. Some of the longest and deepest caves in India are present in Meghalaya. Brian Ji and his team have also documented the Cave Fauna ie those creatures of the cave, which are not found anywhere else in the world. I appreciate the efforts of this entire team, as well as I urge you to make a plan to visit the caves of Meghalaya.
My family members, you all know that the Dairy Sector is one of the most important sectors of our country. It has played a very important role in bringing a big change in the lives of our mothers and sisters. Just a few days ago, I came to know about an interesting initiative of Banas Dairy of Gujarat. Banas Dairy is considered to be the biggest Dairy in Asia. On an average, 75 lakh liters of milk is processed here everyday. After this it is also sent to other states. For the timely delivery of milk here to other states, until now the support of tankers or milk trains was availed of. But there were no less challenges in that too. Firstly, loading and unloading used to take a lot of time and often the milk also used to get spoilt. To overcome this problem, Indian Railways did a new experiment. Railways started a Truck-on-Track facility from Palanpur to New Rewari. In this, milk trucks are directly loaded onto the train. That is, the major problem of transportation has been overcome by this. The results of the Truck-on-Track facility have been very satisfactory. Earlier the milk which used to take 30 hours to reach is now reaching in less than half the time. Due to this, whereas the pollution caused by fuel has stopped, the cost of fuel is also saved. Drivers of trucks have also benefited a lot from this, their life has become easier.
Friends, with collective efforts today, our dairies are also moving forward with modern thinking. How Banas Dairy has also taken a step forward in the direction of environmental protection is evident through the Seedball tree plantation campaign. Varanasi Milk Union is working on manure management to increase the income of our dairy farmers. The effort of Malabar Milk Union Dairy of Kerala is also very unique. It is engaged in developing Ayurvedic Medicines for the treatment of animal diseases.
Friends, today there are many people who are diversifying by adopting dairy. You must also know about Amanpreet Singh, who is running a dairy farm in Kota, Rajasthan. Along with dairy, he also focused on Biogas and set up two biogas plants. Due to this, their expenditure on electricity has reduced by about 70 percent. This effort of his is going to inspire dairy farmers across the country. Today many big dairies are focusing on biogas. This type of Community Driven Value addition is very exciting. I am sure that such trends will continue throughout the country.
My family members, that's all today in Mann Ki Baat. The season of festivals has also arrived. Happy Raksha Bandhan as well to all of you in advance. At the time of celebration, we also have to remember the mantra of Vocal for Local. This campaign of ‘Atmanirbhar Bharat' is the every countryman’s own campaign. And during the festive atmosphere, we have to keep holy places and their vicinity clean; albeit for all times. Next time we will again have 'Mann Ki Baat', shall meet with some new topics. We will discuss to our heart’s content, some of the new efforts of the countrymen and their success. Till then I take leave of you. Thank you very much. Namaskar.
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರಗಳು.
'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಜುಲೈ ತಿಂಗಳು ಎಂದರೆ ಮುಂಗಾರಿನ ತಿಂಗಳು, ಮಳೆಯ ಋತುಮಾನ. ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪದಿಂದ ಚಿಂತೆ ಮತ್ತು ಆತಂಕ ಕವಿದಿತ್ತು. ಯಮುನೆ ಸೇರಿದಂತೆ ಹಲವು ನದಿಗಳ ಪ್ರವಾಹದಿಂದಾಗಿ ಹಲವು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿದೆ. ಇದೇ ಸಮಯದಲ್ಲಿ, ದೇಶದ ಪಶ್ಚಿಮ ಭಾಗ ಮತ್ತು ಕೆಲವು ದಿನಗಳ ಹಿಂದೆ ಗುಜರಾತ್ ನ ಕೆಲ ಪ್ರದೇಶಗಳಿಗೆ ಬಿಪರ್ಜೋಯ್ ಚಂಡಮಾರುತವು ಸಹ ಅಪ್ಪಳಿಸಿತ್ತು. ಆದರೆ ಸ್ನೇಹಿತರೇ, ಈ ವಿಪತ್ತುಗಳ ಮಧ್ಯೆ, ನಾವು ದೇಶವಾಸಿಗಳೆಲ್ಲರೂ ಮತ್ತೊಮ್ಮೆ ಸಾಮೂಹಿಕ ಪ್ರಯತ್ನದ ಶಕ್ತಿಯನ್ನು ತೋರಿಸಿದ್ದೇವೆ. ಸ್ಥಳೀಯ ಜನತೆ, ನಮ್ಮ ಎನ್ಡಿಆರ್ಎಫ್ ಯೋಧರು, ಸ್ಥಳೀಯ ಆಡಳಿತ ಇಂತಹ ವಿಪತ್ತುಗಳನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದಾರೆ. ಯಾವುದೇ ವಿಪತ್ತನ್ನು ಎದುರಿಸುವಲ್ಲಿ ನಮ್ಮ ಸಾಮರ್ಥ್ಯ ಮತ್ತು ಸಂಪನ್ಮೂಲಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ - ಆದರೆ ಅದೇ ವೇಳೆ, ನಾವು ತೋರುವ ಸಂವೇದನಶೀಲತೆ ಮತ್ತು ಪರಸ್ಪರರಿಗೆ ಆಸರೆಯಾಗಿ ನಿಲ್ಲುವ ಮನೋಭಾವವು ಮಹತ್ವಪೂರ್ಣವಾಗಿರುತ್ತದೆ. ಸರ್ವಜನ ಹಿತ ಎಂಬ ಭಾವನೆಯೇ ಭಾರತದ ಹೆಗ್ಗುರುತಾಗಿದೆ ಮತ್ತು ಭಾರತದ ಶಕ್ತಿಯಾಗಿದೆ.
ಸ್ನೇಹಿತರೇ, ಮಳೆಗಾಲದ ಇದೇ ಸಮಯ 'ವೃಕ್ಷಾರೋಪನೆ' ಮತ್ತು 'ಜಲ ಸಂರಕ್ಷಣೆ' ಗೂ ಅಷ್ಟೇ ಮಹತ್ವಪೂರ್ಣವಾಗಿದೆ, ಸ್ವಾತಂತ್ರ್ಯದ 'ಅಮೃತ ಮಹೋತ್ಸವ'ದ ಸಂದರ್ಭದಲ್ಲಿ ಸಿದ್ಧಪಡಿಸಲಾದ 60 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳ ಶೋಭೆಯೂ ಹೆಚ್ಚಿದೆ. ಇದೀಗ 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ನಮ್ಮ ದೇಶಬಾಂಧವರು ಸಂಪೂರ್ಣ ಅರಿವು ಮತ್ತು ಜವಾಬ್ದಾರಿಯೊಂದಿಗೆ 'ಜಲ ಸಂರಕ್ಷಣೆ'ಗಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಾನು, ಮಧ್ಯಪ್ರದೇಶದ ಶಹದೋಲ್ ಗೆ ಭೇಟಿ ನೀಡಿದ್ದು ನಿಮಗೆ ನೆನಪಿರಬಹುದು. ಅಲ್ಲಿ ನಾನು ಪಕಾರಿಯಾ ಗ್ರಾಮದ ಬುಡಕಟ್ಟು ಸಹೋದರ ಸಹೋದರಿಯರನ್ನು ಭೇಟಿಯಾದೆ. ಇದೇ ವೇಳೆ ಪ್ರಕೃತಿ, ಜಲ ಸಂಪನ್ಮೂಲ ರಕ್ಷಿಸುವ ಕುರಿತು ಅವರೊಂದಿಗೆ ಚರ್ಚಿಸಿದೆ. ಇದೀಗ ಪಕರಿಯಾ ಗ್ರಾಮದ ಆದಿವಾಸಿ ಸಹೋದರ ಸಹೋದರಿಯರು ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ, ಸ್ಥಳೀಯ ಆಡಳಿತದ ಸಹಾಯದಿಂದ, ಜನರು ಸುಮಾರು 100 ಬಾವಿಗಳನ್ನು ಜಲ ಮರುಪೂರಣ ವ್ಯವಸ್ಥೆಯಂತೆ ಪರಿವರ್ತಿಸಿದ್ದಾರೆ. ಮಳೆಯ ನೀರು ಈಗ ಈ ಬಾವಿಗಳನ್ನು ಸೇರುತ್ತದೆ ಮತ್ತು ಬಾವಿಗಳ ನೀರು ಭೂಮಿಯನ್ನು ಸೇರುತ್ತದೆ. ಇದರಿಂದ ಕ್ರಮೇಣ ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಎಲ್ಲ ಗ್ರಾಮಸ್ಥರು ಈಗ ಸಂಪೂರ್ಣ ಪ್ರದೇಶದಲ್ಲಿ ಸುಮಾರು 800 ಬಾವಿಗಳನ್ನು ಜಲ ಮರುಪೂರಣಕ್ಕೆ ಬಳಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ. ಉತ್ತರಪ್ರದೇಶದಿಂದ ಇಂತಹದ್ದೇ ಒಂದು ಪ್ರೋತ್ಸಾಹದಾಯಕ ಸುದ್ದಿ ಬಂದಿದೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಒಂದೇ ದಿನದಲ್ಲಿ 30 ಕೋಟಿ ಮರಗಳನ್ನು ನೆಟ್ಟು ದಾಖಲೆ ನಿರ್ಮಿಸಲಾಗಿತ್ತು. ಈ ಅಭಿಯಾನವನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದರೆ, ಅದನ್ನು ಅಲ್ಲಿನ ಜನತೆ ಪೂರ್ಣಗೊಳಿಸಿದರು. ಇಂತಹ ಪ್ರಯತ್ನಗಳು ಸಾರ್ವಜನಿಕ ಸಹಭಾಗಿತ್ವದ ಜೊತೆಗೆ ಸಾರ್ವಜನಿಕ ಜಾಗೃತಿಗೆ ಉತ್ತಮ ಉದಾಹರಣೆಗಳಾಗಿವೆ. ಮರಗಳನ್ನು ನೆಡುವ ಮತ್ತು ನೀರನ್ನು ಉಳಿಸುವ ಈ ಪ್ರಯತ್ನಗಳಲ್ಲಿ ನಾವೆಲ್ಲರೂ ಭಾಗಿಯಾಗಬೇಕೆಂದು ನಾನು ಬಯಸುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೆ, ಪ್ರಸ್ತುತ ಶ್ರಾವಣ ಮಾಸದ ಪವಿತ್ರ ತಿಂಗಳು. ಮಹಾದೇವ ಸದಾಶಿವನನ್ನು ಪೂಜಿಸುವುದರ ಜೊತೆಗೆ, 'ಶ್ರಾವಣ' ಹಚ್ಚ ಹಸಿರಿನೊಂದಿಗೆ ಸಂತೋಷ ಸಂಭ್ರಮದೊಂದಿಗೆ ನಂಟು ಹೊಂದಿದೆ. ಅದಕ್ಕಾಗಿಯೇ 'ಶ್ರಾವಣ' ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಲ್ಲಿ ಬಹಳ ಮಹತ್ವದ್ದಾಗಿದೆ. 'ಶ್ರಾವಣದ ಜೋಕಾಲಿ, ಶ್ರಾವಣದ ಗೋರಂಟಿ , ಶ್ರಾವಣದ ಆಚರಣೆಗಳು ಹೀಗೆ 'ಶ್ರಾವಣ' ಅಂದರೇನೆ ಸಂತೋಷ ಮತ್ತು ಸಂಭ್ರಮ.
ಸ್ನೇಹಿತರೇ, ಈ ನಂಬಿಕೆ ಮತ್ತು ನಮ್ಮ ಈ ಸಂಪ್ರದಾಯಗಳ ಇನ್ನೊಂದು ಆಯಾಮವಿದೆ. ನಮ್ಮ ಈ ಹಬ್ಬಗಳು ಮತ್ತು ಸಂಪ್ರದಾಯಗಳು ನಮ್ಮನ್ನು ಚಟುವಟಿಕೆಯಿಂದ ಇರಿಸುತ್ತವೆ. 'ಶ್ರಾವಣ' ದಲ್ಲಿರುವ ಶಿವನನ್ನು ಆರಾಧಿಸುವ ಅನೇಕ ಭಕ್ತರು ಕಾವಡಿ ಯಾತ್ರೆಗೆ ತೆರಳುತ್ತಾರೆ. 'ಶ್ರಾವಣ'ದ ಈ ದಿನಗಳಲ್ಲಿ ಅನೇಕ ಭಕ್ತರು 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ತೆರಳುತ್ತಿದ್ದಾರೆ. ಬನಾರಸ್ ತಲುಪುವ ಜನರ ಸಂಖ್ಯೆಯೂ ಹೊಸ ದಾಖಲೆ ಬರೆಯುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಈಗ ಪ್ರತಿ ವರ್ಷ 10 ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶಿಗೆ ಆಗಮಿಸುತ್ತಿದ್ದಾರೆ. ಅಯೋಧ್ಯೆ, ಮಥುರಾ, ಉಜ್ಜಯಿನಿಯಂತಹ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ವೇಗವಾಗಿ ವೃದ್ಧಿಸುತ್ತಿದೆ. ಇದರಿಂದ ಲಕ್ಷಾಂತರ ಬಡವರು ಉದ್ಯೋಗ ಪಡೆದು ಜೀವನ ನಿರ್ವಹಿಸುತ್ತಿದ್ದಾರೆ. ಇದೆಲ್ಲವೂ ನಮ್ಮ ಸಾಮೂಹಿಕ ಸಾಂಸ್ಕೃತಿಕ ಜಾಗೃತಿಯ ಫಲಿತಾಂಶವಾಗಿದೆ. ಅದರ ದರ್ಶನಕ್ಕಾಗಿ ಈಗ ಪ್ರಪಂಚದಾದ್ಯಂತದಿಂದ ಜನರು ನಮ್ಮ ತೀರ್ಥಕ್ಷೇತ್ರಗಳಿಗೆ ಬರುತ್ತಿದ್ದಾರೆ. ಅಮರನಾಥ ಯಾತ್ರೆ ಮಾಡಲು ಕ್ಯಾಲಿಫೋರ್ನಿಯಾದಿಂದ ಇಲ್ಲಿಗೆ ಬಂದಿದ್ದ ಇಬ್ಬರು ಅಮೇರಿಕನ್ ಸ್ನೇಹಿತರ ಬಗ್ಗೆ ನನಗೆ ತಿಳಿದು ಬಂದಿದೆ. ಈ ವಿದೇಶಿ ಅತಿಥಿಗಳು ಅಮರನಾಥ ಯಾತ್ರೆಗೆ ಸಂಬಂಧಿಸಿದ ಸ್ವಾಮಿ ವಿವೇಕಾನಂದರ ಅನುಭವಗಳನ್ನು ಎಲ್ಲೋ ಕೇಳಿದ್ದರು. ಅದರಿಂದ ಅವರು ಎಷ್ಟು ಪ್ರೇರಿತರಾದರೆಂದರೆ ಸ್ವತಃ ಅವರೇ ಅಮರನಾಥ ಯಾತ್ರೆಗೆ ಆಗಮಿಸಿದರು. ಇದನ್ನು ಅವರು ಭಗವಾನ್ ಭೋಲೆನಾಥನ ಆಶೀರ್ವಾದ ಎಂದು ಅವರು ಪರಿಗಣಿಸುತ್ತಾರೆ. ಪ್ರತಿಯೊಬ್ಬರನ್ನು ಸ್ವೀಕರಿಸುವದು, ಎಲ್ಲರಿಗೂ ಏನನ್ನಾದರೂ ನೀಡುವುದೇ ಭಾರತದ ವಿಶೇಷತೆಯಾಗಿದೆ. ಷಾರ್ಲೆಟ್ ಶೋಪಾ ಎಂಬ ಫ್ರೆಂಚ್ ಮಹಿಳೆಯೊಬ್ಬರಿದ್ದಾರೆ. ಹಿಂದೆ ನಾನು ಫ್ರಾನ್ಸ್ ಗೆ ಹೋಗಿದ್ದಾಗ ಅವರನ್ನು ಭೇಟಿಯಾಗಿದ್ದೆ. ಷಾರ್ಲೆಟ್ ಶೋಪಾ (ಷಾರ್ಲೆಟ್ ಶೋಪಾ) ಯೋಗಾಪಟು, ಯೋಗ ಶಿಕ್ಷಕಿವಾಗಿದ್ದಾರೆ, ಅಲ್ಲದೆ ಅವರು 100 ಸಂವತ್ಸರಗಳಿಗಿಂತ ಹೆಚ್ಚಿನ ವಯೋಮಾನದವರಾಗಿದ್ದು, ಶತಕ ದಾಟಿದ್ದಾರೆ.
ಕಳೆದ 40 ವರ್ಷಗಳಿಂದ ಅವರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಅವರು ತಮ್ಮ ಆರೋಗ್ಯ ಮತ್ತು 100 ವರ್ಷಗಳ ಆಯಸ್ಸಿನ ಶ್ರೇಯಸ್ಸನ್ನು ಯೋಗಕ್ಕೆ ಸಲ್ಲಿಸುತ್ತಾರೆ. ಅವರು ಭಾರತದ ಯೋಗ ವಿಜ್ಞಾನ ಮತ್ತು ಅದರ ಶಕ್ತಿಯ ಪ್ರಮುಖ ಪ್ರತಿಬಿಂಬವಾಗಿದ್ದಾರೆ. ಪ್ರತಿಯೊಬ್ಬರೂ ಇವರಿಂದ ಕಲಿಯಬೇಕಿದೆ. ನಾವು ನಮ್ಮ ಪರಂಪರೆಯನ್ನು ಒಪ್ಪಿಕೊಳ್ಳುವುದು ಮಾತ್ರವಲ್ಲದೇ, ಅದನ್ನು ವಿಶ್ವದೆದುರು ಜವಾಬ್ದಾರಿಯುತವಾಗಿ ಪ್ರಸ್ತುತಪಡಿಸಬೇಕಿದೆ. ಇತ್ತೀಚೆಗೆ ಇಂತಹ ಒಂದು ಪ್ರಯತ್ನ ಉಜ್ಜಯಿನಿಯಲ್ಲಿ ನಡೆಯುತ್ತಿರುವುದು ನನಗೆ ಸಂತಸ ತಂದಿದೆ. ಇಲ್ಲಿ ದೇಶದ 18 ಚಿತ್ರಕಲಾವಿದರು ಪುರಾಣಗಳನ್ನು ಆಧರಿಸಿ ಆಕರ್ಷಕ ಕಥಾಚಿತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ವರ್ಣಚಿತ್ರಗಳನ್ನು ಬುಂದಿ ಶೈಲಿ, ನಾಥದ್ವಾರ ಶೈಲಿ, ಪಹಾಡಿ ಶೈಲಿ ಮತ್ತು ಅಪಭ್ರಂಶ ಶೈಲಿಯಂತಹ ಹಲವು ವಿಶಿಷ್ಟ ಶೈಲಿಗಳಲ್ಲಿ ನಿರ್ಮಿಸಲಾಗುವುದು. ಇವುಗಳನ್ನು ಉಜ್ಜಯಿನಿಯ ತ್ರಿವೇಣಿ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುತ್ತದೆ, ಅಂದರೆ ಕೆಲ ದಿನಗಳ ನಂತರ ನೀವು ಉಜ್ಜಯಿನಿಗೆ ಹೋದಾಗ, ಮಹಾಕಾಲ್ ಮಹಾಲೋಕದ ಜೊತೆಗೆ ಮತ್ತೊಂದು ದಿವ್ಯ ಸ್ಥಳವನ್ನು ನೋಡಲು ಸಾಧ್ಯವಾಗುತ್ತದೆ.
ಸ್ನೇಹಿತರೇ, ಉಜ್ಜಯಿನಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಗಳ ಬಗ್ಗೆ ಹೇಳುವಾಗ ನನಗೆ ಮತ್ತೊಂದು ವಿಶಿಷ್ಟವಾದ ಚಿತ್ರಕಲೆ ನೆನಪಿಗೆ ಬರುತ್ತದೆ. ಈ ವರ್ಣಚಿತ್ರವನ್ನು ರಾಜ್ಕೋಟ್ನ ಕಲಾವಿದ ಪ್ರಭಾತ್ ಸಿಂಗ್ ಮೋಡಭಾಯಿ ಬರ್ಹಾಟ್ ಅವರು ರಚಿಸಿದ್ದಾರೆ. ಈ ಚಿತ್ರವು ಛತ್ರಪತಿ ವೀರ ಶಿವಾಜಿ ಮಹಾರಾಜರ ಜೀವನದ ಒಂದು ಘಟನೆಯ ಮೇಲೆ ಆಧಾರಿತವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಪಟ್ಟಾಭಿಷೇಕದ ನಂತರ ತಮ್ಮ ಕುಲದೇವಿ 'ತುಳಜಾ ಮಾತೆಯ' ದರ್ಶನಕ್ಕೆ ಹೋಗುತ್ತಿದ್ದಾಗ, ಅಂದಿನ ಅಲ್ಲಿಯ ವಾತಾವರಣ ಹೇಗಿತ್ತು ಎಂಬುದನ್ನು ಕುರಿತು ಕಲಾವಿದ ಪ್ರಭಾತ್ ಭಾಯಿ ಚಿತ್ರಿಸಿದ್ದಾರೆ. ನಮ್ಮ ಸಂಪ್ರದಾಯಗಳನ್ನು, ನಮ್ಮ ಪರಂಪರೆಯನ್ನು ಜೀವಂತವಾಗಿಡಲು, ನಾವು ಅವುಗಳನ್ನು ಉಳಿಸಬೇಕು, ಬಾಳಬೇಕು, ಮುಂದಿನ ಪೀಳಿಗೆಗೆ ಅದನ್ನು ಕಲಿಸಬೇಕು. ಈ ನಿಟ್ಟಿನಲ್ಲಿ ಇಂದು ಹಲವಾರು ಪ್ರಯತ್ನಗಳು ನಡೆಯುತ್ತಿರುವುದು ಸಂತಸ ತಂದಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪರಿಸರ, ಸಸ್ಯಗಳು, ಪ್ರಾಣಿಗಳು, ಜೈವಿಕ ವೈವಿಧ್ಯತೆಯಂತಹ ಪದಗಳನ್ನು ನಾವು ಅನೇಕ ಬಾರಿ ಕೇಳಿದಾಗ, ಕೆಲವರಿಗೆ ಇವು ವಿಶೇಷ ವಿಷಯಗಳು, ತಜ್ಞರಿಗೆ ಸಂಬಂಧಿಸಿದ ವಿಷಯಗಳು ಎಂದು ಭಾಸವಾಗುತ್ತದೆ. ಆದರೆ ಅದು ಹಾಗಲ್ಲ. ನಾವು ನಿಜವಾಗಿಯೂ ಪ್ರಕೃತಿ ಪ್ರಿಯರಾಗಿದ್ದರೆ ನಾವು ಏನೆಲ್ಲ ಮಾಡಬಹುದು. ನಮ್ಮ ಸಣ್ಣಪುಟ್ಟ ಪ್ರಯತ್ನಗಳಿಂದಲೂ ನಾವು ಬಹಳಷ್ಟು ಕೆಲಸ ಮಾಡಬಹುದು. ಸುರೇಶ್ ರಾಘವನ್ ಜಿ ತಮಿಳುನಾಡಿನ ವಡವಳ್ಳಿಯ ಒಬ್ಬ ಸ್ನೇಹಿತರು. ರಾಘವನ್ ಅವರಿಗೆ ಚಿತ್ರಕಲೆ ಹವ್ಯಾಸವಿದೆ. ಚಿತ್ರಕಲೆ ಎಂಬುದು ಕಲೆ ಮತ್ತು ಕ್ಯಾನ್ವಾಸ್ಗೆ ಸಂಬಂಧಿಸಿದ ಕೆಲಸವೆಂದು ನಿಮಗೆ ತಿಳಿದಿದೆ, ಆದರೆ ರಾಘವನ್ ಅವರು ತಮ್ಮ ಚಿತ್ರಗಳ ಮೂಲಕ ಸಸ್ಯಗಳು ಮತ್ತು ಪ್ರಾಣಿಗಳ ಮಾಹಿತಿಯನ್ನು ಸಂರಕ್ಷಿಸಲು ನಿರ್ಧರಿಸಿದರು. ಅವರು ವಿವಿಧ ಸಸ್ಯ ಮತ್ತು ಪ್ರಾಣಿಗಳ ವರ್ಣಚಿತ್ರಗಳನ್ನು ಮಾಡುವ ಮೂಲಕ ಅವುಗಳ ಮಾಹಿತಿಯ ಜೊತೆಗೆ ದಾಖಲಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರು ಅಳಿವಿನ ಅಂಚಿನಲ್ಲಿರುವ ಇಂತಹ ಹತ್ತಾರು ಪಕ್ಷಿಗಳು, ಪ್ರಾಣಿಗಳು, ಆರ್ಕಿಡ್ಗಳ ವರ್ಣಚಿತ್ರಗಳನ್ನು ರಚಿಸಿದ್ದಾರೆ. ಕಲೆಯ ಮೂಲಕ ಪ್ರಕೃತಿ ಸೇವೆ ಮಾಡುವ ಈ ಉದಾಹರಣೆ ನಿಜಕ್ಕೂ ಅದ್ಭುತವಾಗಿದೆ.
ನನ್ನ ಪ್ರೀತಿಯ ದೇಶಬಾಂಧವರೆ ಇಂದು ನಾನು ಮತ್ತೊಂದು ಆಸಕ್ತಿಕರ ವಿಷಯ ಹೇಳಲು ಬಯಸುತ್ತೇನೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅದ್ಭುತ ಕ್ರೇಜ್ ಕಾಣಿಸಿಕೊಂಡಿತ್ತು. ಅಮೇರಿಕಾ ನಮಗೆ ನೂರಕ್ಕೂ ಹೆಚ್ಚು ಅಪರೂಪದ ಮತ್ತು ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಿದೆ. ಈ ಸುದ್ದಿ ಬೆಳಕಿಗೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಕಲಾಕೃತಿಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಯುವಕರಲ್ಲಿ ತಮ್ಮ ಪರಂಪರೆಯ ಬಗ್ಗೆ ಗೌರವದ ಭಾವನೆ ಕಂಡುಬಂದಿತು. ಭಾರತಕ್ಕೆ ಹಿಂದಿರುಗಿಸಲಾದ ಈ ಕಲಾಕೃತಿಗಳು 250 ರಿಂದ 2500 ವರ್ಷಗಳಷ್ಟು ಪುರಾತಣವಾದದ್ದಾಗಿವೆ. ಈ ಅಪರೂಪದ ಕಲಾಕೃತಿಗಳ ನಂಟು ದೇಶದ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದೆ ಎಂದು ತಿಳಿದರೆ ನಿಮಗೂ ಸಂತೋಷವಾಗುತ್ತದೆ. ಇವುಗಳನ್ನು ಟೆರಾಕೋಟಾ, ಕಲ್ಲು, ಲೋಹ ಮತ್ತು ಮರವನ್ನು ಬಳಸಿ ತಯಾರಿಸಲಾಗಿವೆ. ಇವುಗಳಲ್ಲಿ ಕೆಲವು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತವೆ. ಅವನ್ನು ಕಣ್ಣರಳಿಸಿ ನೋಡುತ್ತಲೇ ಇದ್ದುಬಿಡುವಿರಿ. ಇವುಗಳಲ್ಲಿ 11 ನೇ ಶತಮಾನದ ಸುಂದರವಾದ ಮರಳುಗಲ್ಲಿನ ಶಿಲ್ಪವನ್ನು ಸಹ ನೀವು ನೋಡಬಹುದು. ಇದು ಮಧ್ಯಪ್ರದೇಶಕ್ಕೆ ಸೇರಿದ ನೃತ್ಯ ಮಾಡುತ್ತಿರುವ 'ಅಪ್ಸರೆ' ಯ ಕಲಾಕೃತಿಯಾಗಿದೆ. ಇವುಗಳಲ್ಲಿ ಚೋಳರ ಕಾಲದ ಅನೇಕ ವಿಗ್ರಹಗಳೂ ಸೇರಿವೆ. ದೇವಿ ಮತ್ತು ಮುರುಗನ್ ದೇವರ ವಿಗ್ರಹಗಳು 12 ನೇ ಶತಮಾನದಷ್ಟು ಹಿಂದಿನವು ಮತ್ತು ತಮಿಳುನಾಡಿನ ಶ್ರೀಮಂತ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿವೆ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ ಗಣೇಶನ ಕಂಚಿನ ಪ್ರತಿಮೆಯನ್ನು ಸಹ ಭಾರತಕ್ಕೆ ಹಿಂತಿರುಗಿಸಲಾಗಿದೆ. ಲಲಿತಾಸನದಲ್ಲಿ ಕುಳಿತಿರುವ ಉಮಾ-ಮಹೇಶ್ವರರ ವಿಗ್ರಹವನ್ನು 11 ನೇ ಶತಮಾನದ್ದು ಎನ್ನಲಾಗಿದೆ, ಇದರಲ್ಲಿ ಉಮಾ-ಮಹೇಶ್ವರರಿಬ್ಬರೂ ನಂದಿಯ ಮೇಲೆ ಆಸೀನರಾಗಿದ್ದಾರೆ. ಜೈನ ತೀರ್ಥಂಕರರ ಎರಡು ಕಲ್ಲಿನ ವಿಗ್ರಹಗಳು ಕೂಡ ಭಾರತಕ್ಕೆ ಮರಳಿ ಬಂದಿವೆ. ಸೂರ್ಯ ಸೂರ್ಯದೇವನ ಎರಡು ವಿಗ್ರಹಗಳು ಸಹ ನಿಮ್ಮನ್ನು ಆಕರ್ಷಿಸುತ್ತವೆ. ಇವುಗಳಲ್ಲಿ ಒಂದು ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ. ಹಿಂದಿರುಗಿಸಿದ ವಸ್ತುಗಳಲ್ಲಿ ಮರದಿಂದ ಮಾಡಿದ ಫಲಕವು ಸಮುದ್ರ ಮಂಥನದ ಕಥೆಯನ್ನು ಬೆಳಕಿಗೆ ತರುತ್ತದೆ. 16-17 ನೇ ಶತಮಾನದ ಈ ಫಲಕವು ದಕ್ಷಿಣ ಭಾರತಕ್ಕೆ ಸೇರಿದ್ದು.
ಸ್ನೇಹಿತರೇ, ನಾನು ಇಲ್ಲಿ ಕೆಲವನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. ಆದರೆ, ಈ ಪಟ್ಟಿ ತುಂಬಾ ದೊಡ್ಡದಾಗಿದೆ. ನಮ್ಮ ಈ ಅಮೂಲ್ಯವಾದ ಪರಂಪರೆಯನ್ನು ಹಿಂದಿರುಗಿಸಿದ ಅಮೆರಿಕನ್ ಸರ್ಕಾರಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ. 2016 ಮತ್ತು 2021ರಲ್ಲಿ ಅಮೆರಿಕಕ್ಕೆ ನಾನು ಭೇಟಿ ನೀಡಿದಾಗಲೂ ಹಲವಾರು ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿತ್ತು. ಇಂತಹ ಪ್ರಯತ್ನಗಳಿಂದ ನಮ್ಮ ಸಾಂಸ್ಕೃತಿಕ ಪರಂಪರಾಗತ ನಿಧಿಯ ಕಳ್ಳತನವನ್ನು ತಡೆಗಟ್ಟಲು ದೇಶದಾದ್ಯಂತ ಜಾಗೃತಿ ಮೂಡುತ್ತದೆ ಎಂಬ ಭರವಸೆ ನನಗಿದೆ. ಇದರಿಂದ ನಮ್ಮ ಸಮೃದ್ಧ ಪರಂಪರೆ ಬಗ್ಗೆ ದೇಶಬಾಂಧವರ ಒಲವು ಮತ್ತಷ್ಟು ಹೆಚ್ಚುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇವಭೂಮಿ ಉತ್ತರಾಖಂಡದ ಕೆಲವು ತಾಯಂದಿರು ಮತ್ತು ಸಹೋದರಿಯರು ನನಗೆ ಬರೆದ ಪತ್ರಗಳು ಹೃದಯಸ್ಪರ್ಶಿಯಾಗಿವೆ. ಅವರು ತಮ್ಮ ಈ ಮಗ, ಸಹೋದರನಿಗೆ ಅನಂತ ಆಶೀರ್ವಾದಗಳನ್ನು ನೀಡಿದ್ದಾರೆ. ಅವರು ಹೀಗೆ ಬರೆದಿದ್ದಾರೆ - 'ನಮ್ಮ ಸಾಂಸ್ಕೃತಿಕ ಪರಂಪರೆಯಾದ 'ಭೋಜಪತ್ರ' ತನ್ನ ಜೀವನೋಪಾಯದ ಸಾಧನವಾಗಬಹುದೆಂದು ಅವರು ಎಂದಿಗೂ ಊಹಿಸಿರಲಿಲ್ಲ. ಇದು ಯಾವ ವಿಚಾರಕ್ಕೆ ಸಂಬಂಧಿಸಿದ್ದು ಎಂದು ನೀವು ಆಶ್ಚರ್ಯಪಡುತ್ತಿದ್ದೀರಾ?
ಸ್ನೇಹಿತರೇ, ನನಗೆ ಈ ಪತ್ರವನ್ನು ಚಮೋಲಿ ಜಿಲ್ಲೆಯ ನೀತಿ-ಮಾಣ ಕಣಿವೆಯ ಮಹಿಳೆಯರು ಬರೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಭೋಜಪತ್ರದಲ್ಲಿ (ಭೂಯಪಾತ್ರ) ನನಗೆ ಒಂದು ವಿಶಿಷ್ಟ ಕಲಾಕೃತಿಯನ್ನು ಉಡುಗೊರೆ ನೀಡಿದ್ದ ಮಹಿಳೆಯರೇ ಇವರು. ಈ ಉಡುಗೊರೆಯನ್ನು ಸ್ವೀಕರಿಸಿದ ನಂತರ ನಾನು ತುಂಬಾ ಸಂತೋಷಗೊಂಡಿದ್ದೆ. ಪ್ರಾಚೀನ ಕಾಲದಿಂದಲೂ, ನಮ್ಮ ಧರ್ಮಗ್ರಂಥಗಳು ಮತ್ತು ಪುರಾಣ ಕಥೆಗಳನ್ನು ಇದೇ ಭೂಯಪಾತ್ರದ ಮೇಲೆ ಮೇಲೆ ಬರೆದು ಉಳಿಸಲಾಗಿದೆ. ಮಹಾಭಾರತವನ್ನೂ ಈ ಭೂಯಪಾತ್ರದ ಮೇಲೆಯೇ ಬರೆಯಲಾಗಿದೆ. ಇಂದು, ದೇವಭೂಮಿಯ ಈ ಮಹಿಳೆಯರು ಈ ಭೂಯಪಾತ್ರದಿಂದ ಅತ್ಯಂತ ಸುಂದರ ಕಲಾಕೃತಿಗಳು ಮತ್ತು ಸ್ಮಾರಕ ಚಿಹ್ನೆಗಳನ್ನು ತಯಾರಿಸುತ್ತಿದ್ದಾರೆ. ನಾನು ಮಾಣಾ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ವಿಶಿಷ್ಟ ಪ್ರಯತ್ನವನ್ನು ಶ್ಲಾಘಿಸಿದ್ದೆ. ಪ್ರವಾಸದ ಸಮಯದಲ್ಲಿ ಹೆಚ್ಚು ಹೆಚ್ಚು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ನಾನು ದೇವಭೂಮಿಗೆ ಆಗಮಿಸುವ ಪ್ರವಾಸಿಗರಲ್ಲಿ ಮನವಿ ಮಾಡಿದ್ದೆ. ಇದು ಅಲ್ಲಿ ಸಾಕಷ್ಟು ಪ್ರಭಾವ ಬೀರಿತು. ಇಂದು ಭೋಜಪತ್ರದ ಉತ್ಪನ್ನಗಳನ್ನು ಇಲ್ಲಿಗೆ ಆಗಮಿಸುವ ತೀರ್ಥಯಾತ್ರಾರ್ಥಿಗಳು ಬಹಳ ಇಷ್ಟಪಡುತ್ತಿದ್ದಾರೆ ಮತ್ತು ಇದನ್ನು ಉತ್ತಮ ದರಕ್ಕೆ ಖರೀದಿಸುತ್ತಿದ್ದಾರೆ. ಭೋಜಪತ್ರದ ಈ ಪ್ರಾಚೀನ ಪರಂಪರೆ, ಉತ್ತರಾಖಂಡದ ಮಹಿಳೆಯರ ಜೀವನದಲ್ಲಿ ಸಂತೋಷದ ಹೊಸ ರಂಗು ತುಂಬುತ್ತಿದೆ. ಭೋಜಪತ್ರದಿಂದ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಲು ರಾಜ್ಯ ಸರ್ಕಾರ ಮಹಿಳೆಯರಿಗೆ ತರಬೇತಿ ಕೂಡಾ ನೀಡುತ್ತಿದೆ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು.
ರಾಜ್ಯ ಸರ್ಕಾರವ ಭೋಜಪತ್ರದ ಅಪರೂಪದ ಪ್ರಬೇಧಗಳನ್ನು ಸಂರಕ್ಷಿಸುವುದಕ್ಕಾಗಿ ಕೂಡಾ ಅಭಿಯಾನ ಆರಂಭಿಸಿದೆ. ಯಾವ ಪ್ರದೇಶಗಳನ್ನು ಹಿಂದೆ ದೇಶದ ಕೊನೆಯ ಹಿಂದುಳಿದ ಭಾಗಗಳೆಂದು ಪರಿಗಣಿಸಲ್ಪಟ್ಟಿತ್ತೋ, ಈಗ ಅದನ್ನು ದೇಶದ ಪ್ರಥಮ ಗ್ರಾಮವೆಂದು ಪರಿಗಣಿಸಿ, ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಪ್ರಯತ್ನ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸುವುದರೊಂದಿಗೆ ಆರ್ಥಿಕ ಪ್ರಗತಿಗೆ ಸಾಧನವೂ ಆಗುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ‘ಮನದ ಮಾತಿನಲ್ಲಿ’ ನನ್ನ ಮನಸ್ಸಿಗೆ ಹೆಚ್ಚಿನ ಸಂತೋಷ ನೀಡುವಂತಹ ಇಂತಹ ಬಹಳಷ್ಟು ಪತ್ರಗಳು ಬಂದಿವೆ. ಇತ್ತೀಚೆಗಷ್ಟೇ ‘ಹಜ್’ ಯಾತ್ರೆ ಪೂರ್ಣಗೊಳಿಸಿ ಹಿಂದಿರುಗಿ ಬಂದಿರುವ ಮುಸ್ಲಿಂ ಮಹಿಳೆಯರು ಈ ಪತ್ರವನ್ನು ನನಗೆ ಬರೆದಿದ್ದಾರೆ. ಈ ಯಾತ್ರೆ ಅವರಿಗೆ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಯಾವುದೇ ಪುರುಷರ ಜೊತೆ ಇಲ್ಲದಂತೆ ಅಥವಾ ಮೆಹರಮ್ ಇಲ್ಲದಂತೆಯೇ ‘ಹಜ್’ ಯಾತ್ರೆ ಮಾಡಿದ ಇಂತಹ ಮಹಿಳೆಯರ ಸಂಖ್ಯೆ ಐವತ್ತು-ನೂರು ಅಲ್ಲ, ನಾಲ್ಕು ಸಾವಿರಕ್ಕಿಂತಲೂ ಅಧಿಕ. ಇದೊಂದು ನಿಜಕ್ಕೂ ಅತಿ ದೊಡ್ಡ ಬದಲಾವಣೆ. ಈ ಮೊದಲು ಮುಸ್ಲಿಂ ಮಹಿಳೆಯರಿಗೆ ಮೆಹರಮ್ ಇಲ್ಲದಂತೆ ‘ಹಜ್’ ಯಾತ್ರೆ ಮಾಡಲು ಅವಕಾಶ, ಅನುಮತಿ ಇರಲಿಲ್ಲ. ನಾನು ಮನದ ಮಾತಿನ ಮೂಲಕ ಸೌದಿ ಅರೇಬಿಯಾ ಸರ್ಕಾರಕ್ಕೆ ಕೂಡಾ ಹೃದಯಪೂರ್ವಕ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ. ಮೆಹರಮ್ ಇಲ್ಲದಂತೆ ‘ಹಜ್’ ಯಾತ್ರೆಗೆ ಹೊರಟಿದ್ದ ಮಹಿಳೆಯರಿಗಾಗಿ, ವಿಶೇಷವಾಗಿ ಮಹಿಳಾ ಸಮನ್ವಯಕಾರರನ್ನು ನಿಯೋಜಿಸಲಾಗಿತ್ತು.
ಸ್ನೇಹಿತರೇ, ಕಳೆದ ಕೆಲವು ವರ್ಷಗಳಲ್ಲಿ Haj ನೀತಿಯಲ್ಲಿ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಸಾಕಷ್ಟು ಪ್ರಶಂಸೆಗಳು ದೊರೆತಿವೆ. ನಮ್ಮ ಮುಸ್ಲಿಂ ಮಾತೆಯರು ಮತ್ತು ಸೋದರಿಯರು ನನಗೆ ಈ ಕುರಿತು ಸಾಕಷ್ಟು ಬರೆದು ಕಳಿಸಿದ್ದಾರೆ. ಈಗ, ಹೆಚ್ಚು ಹೆಚ್ಚು ಜನರಿಗೆ ‘ಹಜ್’ ಯಾತ್ರೆಗೆ ಹೋಗುವುದಕ್ಕೆ ಅವಕಾಶ ದೊರೆಯುತ್ತಿದೆ. ‘ಹಜ್’ ಯಾತ್ರೆಯಿಂದ ಹಿಂದಿರುಗಿದ ಜನರು, ವಿಶೇಷವಾಗಿ ನಮ್ಮ ಮಾತೃಸಮಾನ ಮಹಿಳೆಯರು -ಸೋದರಿಯರು, ಕಾಗದ ಬರೆದು ನನಗೆ ನೀಡಿರುವ ಆಶೀರ್ವಾದ ಬಹಳ ಪ್ರೇರಣಾದಾಯಕವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಗೀತ ರಸಸಂಜೆಗಳಿರಲಿ, ಎತ್ತರದ ಪ್ರದೇಶಗಳಲ್ಲಿ ಬೈಕ್ ರಾಲಿಗಳಿರಲಿ, ಚಂಡೀಗಢದ ಸ್ಥಳೀಯ ಕ್ಲಬ್ ಗಳಿರಲಿ, ಮತ್ತು ಪಂಜಾಬ್ ನ ಹಲವಾರು ಕ್ರೀಡಾ ಸಮೂಹಗಳಿರಲಿ, ಅವುಗಳ ಬಗ್ಗೆ ಕೇಳಿಸಿಕೊಂಡಾಗ, ಮನರಂಜನೆಯ ಕುರಿತು, ಸಾಹಸ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅರ್ಥವಾಗಿಬಿಡುತ್ತದೆ. ಆದರೆ ವಿಷಯ ಬೇರೆಯೇ ಇದೆ. ಈ ಆಯೋಜನೆಯು ‘ಒಂದೇ ರೀತಿಯ ಉದ್ದೇಶಕ್ಕಾಗಿದೆ’. ಈ ಏಕ ಉದ್ದೇಶವೆಂದರೆ ಮಾದಕ ಪದಾರ್ಥಗಳ ವಿರುದ್ಧ ಜಾಗರೂಕತೆ ಮೂಡಿಸುವ ಅಭಿಯಾನ. ಜಮ್ಮು-ಕಾಶ್ಮೀರದ ಯುವಜನರನ್ನು ಮಾದಕ ವಸ್ತುಗಳಿಂದ ರಕ್ಷಿಸುವುದಕ್ಕಾಗಿ ಹಲವು ವಿನೂತನ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ಸಂಗೀತ ರಸಸಂಜೆ, ಬೈಕ್ ರಾಲಿಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಚಂಡೀಗಢದಲ್ಲಿ ಈ ಸಂದೇಶವನ್ನು ಪ್ರಸಾರ ಮಾಡುವುದಕ್ಕಾಗಿ ಸ್ಥಳೀಯ ಕ್ಲಬ್ ಗಳನ್ನು ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಅವರು ಇದನ್ನು ವಾದಾ (वादा) ಕ್ಲಬ್ ಗಳೆಂದು ಕರೆಯುತ್ತಾರೆ. VADA ಅಂದರೆ, Victory Against Drugs Abuse. ಪಂಜಾಬ್ ನಲ್ಲಿ ಹಲವು ಕ್ರೀಡಾ ಸಮೂಹಗಳನ್ನು ಮಾಡಲಾಗಿದೆ, ಇವು ದೇಹದಾರ್ಢ್ಯತೆಗೆ ಗಮನ ನೀಡುತ್ತಾ, ಯುವಜನರನ್ನು ಮಾದಕ ವಸ್ತು ಮುಕ್ತಗೊಳಿಸುವುದಕ್ಕಾಗಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಮಾದಕ ವಸ್ತುಗಳ ವಿರುದ್ಧದ ಅಭಿಯಾನದಲ್ಲಿ ಯುವಜನತೆಯ ಹೆಚ್ಚಿನ ಪಾಲ್ಗೊಳ್ಳುವಿಕೆಯು ಉತ್ಸಾಹವನ್ನು ಹೆಚ್ಚಿಸುವಂತದ್ದಾಗಿದೆ. ಈ ಪ್ರಯತ್ನವು, ಭಾರತದಲ್ಲಿ ಮಾದಕ ವಸ್ತುಗಳ ವಿರುದ್ಧದ ಅಭಿಯಾನಕ್ಕೆ ಬಹಳ ಬಲ ತುಂಬುತ್ತದೆ. ನಾವು ದೇಶದ ಭವಿಷ್ಯದ ಪೀಳಿಗೆಯನ್ನು ರಕ್ಷಿಸಬೇಕೆಂದರೆ ಅವರನ್ನು ಮಾದಕ ವಸ್ತುಗಳಿಂದ ದೂರವಿರಿಸಬೇಕು. ಇದೇ ಚಿಂತನೆಯೊಂದಿಗೆ, 2020, ಆಗಸ್ಟ್ 15 ರಂದು ಮಾದಕವಸ್ತು ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನದೊಂದಿಗೆ 11 ಕೋಟಿಗೂ ಹೆಚ್ಚು ಜನ ಕೈಜೋಡಿಸಿದ್ದಾರೆ. ಎರಡು ವಾರಗಳ ಹಿಂದಷ್ಟೇ ಭಾರತ ಮಾದಕ ವಸ್ತುಗಳ ವಿರುದ್ಧ ಬಹು ದೊಡ್ಡ ಕಾರ್ಯಾಚರಣೆ ನಡೆಸಿತ್ತು. ಸುಮಾರು ಒಂದೂವರೆ ಲಕ್ಷ ಕಿಲೋ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ನಂತರ ಅವುಗಳನ್ನು ನಾಶಪಡಿಸಲಾಯಿತು. 10 ಲಕ್ಷ ಕಿಲೋ ಮಾದಕ ವಸ್ತುಗಳನ್ನು ನಾಶಪಡಿಸುವ ವಿಶಿಷ್ಠ ದಾಖಲೆಯನ್ನು ಕೂಡಾ ಭಾರತ ಮಾಡಿದೆ. ಈ ಮಾದಕ ವಸ್ತುಗಳ ಮೌಲ್ಯ ಸುಮಾರು 12,000 ಕೋಟಿ ರೂಪಾಯಿಗಿಂತ ಅಧಿಕ. ವ್ಯಸನಮುಕ್ತಗೊಳಿಸುವ ಈ ಉದಾತ್ತ ಅಭಿಯಾನದಲ್ಲಿ ಕೈಜೋಡಿಸಿ ಸಹಕರಿಸುತ್ತಿರುವ, ತಮ್ಮ ಕೊಡುಗೆ ನೀಡುತ್ತಿರುವ ಎಲ್ಲರನ್ನೂ ನಾನು ಪ್ರಶಂಸಿಸಲು ಬಯಸುತ್ತೇನೆ. ಮಾದಕ ವ್ಯಸನ ಕೇವಲ ಕುಟುಂಬವನ್ನು ಮಾತ್ರವಲ್ಲದೇ ಇಡೀ ಸಮಾಜಕ್ಕೆ ದೊಡ್ಡ ಆತಂಕದ ವಿಷಯವಾಗಿಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಅಪಾಯ ಶಾಶ್ವತವಾಗಿ ಕೊನೆಗೊಳ್ಳಬೇಕಾದರೆ, ನಾವೆಲ್ಲರೂ ಒಗ್ಗೂಡಿ ಈ ನಿಟ್ಟಿನಲ್ಲಿ ಮುಂದೆ ಸಾಗುವುದು ಬಹಳ ಅಗತ್ಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮಾದಕ ಪದಾರ್ಥಗಳು ಮತ್ತು ಯುವ ಪೀಳಿಗೆಯ ಕುರಿತು ಮಾತನಾಡುತ್ತಿರುವಾಗ, ಮಧ್ಯಪ್ರದೇಶದ ಒಂದು ಸ್ಫೂರ್ತಿದಾಯಕ ಪಯಣ ಕುರಿತು ಹೇಳಲು ಬಯಸುತ್ತೇನೆ. ಈ ಸ್ಫೂರ್ತಿದಾಯಕ ಪಯಣ ಮಿನಿ ಬ್ರೆಜಿಲ್ ದಾಗಿದೆ. ನೀವು ಯೋಚಿಸುತ್ತಿರಬಹುದು, ಮಧ್ಯಪ್ರದೇಶದಲ್ಲಿ ಮಿನಿ ಬ್ರೆಜಿಲ್ ಎಲ್ಲಿಂದ ಬಂತು ಎಂದು. ಅದೇ ಟ್ವಿಸ್ಟ್. ಮಧ್ಯಪ್ರದೇಶದ ಶಹಡೋಲ್ ನಲ್ಲಿರುವ ಒಂದು ಗ್ರಾಮ ಬಿಚಾರ್ ಪೂರ್. ಬಿಚಾರ್ ಪೂರ್ ಅನ್ನು ಮಿನಿ ಬ್ರೆಜಿಲ್ ಎಂದು ಕರೆಯುತ್ತಾರೆ. ಮಿನಿ ಬ್ರೆಜಿಲ್ ಎಂದು ಏತಕ್ಕಾಗಿ ಕರೆಯುತ್ತಾರೆಂದರೆ, ಈ ಗ್ರಾಮ ಈಗ ಫುಟ್ಬಾಲ್ ಕ್ರೀಡೆಯ ಉದಯೋನ್ಮುಕ ಕ್ರೀಡಾಪಟುಗಳ ಭದ್ರಕೋಟೆಯಾಗಿದೆ. ನಾನು ಕೆಲವು ವಾರಗಳ ಹಿಂದೆ ಶಹಡೋಲ್ ಗೆ ಹೋಗಿದ್ದಾಗ, ಅಲ್ಲಿ ಇಂತಹ ಅನೇಕ ಫುಟ್ಬಾಲ್ ಕ್ರೀಡಾಪಟುಗಳನ್ನು ಭೇಟಿಯಾಗಿದ್ದೆ. ನಮ್ಮ ದೇಶವಾಸಿಗಳು ವಿಶೇಷವಾಗಿ ಯುವ ಸ್ನೇಹಿತರು ಈ ಬಾರಿ ಈ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಬೇಕೆಂದು ನನಗೆ ಅನಿಸಿತು.
ಸ್ನೇಹಿತರೇ, ಬಿಚಾರ್ ಪೂರ್ ಗ್ರಾಮ ಮಿನಿ ಬ್ರೆಜಿಲ್ ಆಗುವ ಪಯಣ ಸುಮಾರು ಎರಡೂವರೆ ದಶಕಗಳ ಹಿಂದೆ ಆರಂಭವಾಯಿತು. ಆ ಸಮಯದಲ್ಲಿ ಬಿಚಾರ್ ಪೂರ್ ಗ್ರಾಮ ಅಕ್ರಮ ಮದ್ಯಕ್ಕೆ ಕುಖ್ಯಾತವಾಗಿತ್ತು. ಮಾದಕ ವಸ್ತು ವ್ಯಸನದ ಹಿಡಿತದಲ್ಲಿತ್ತು. ಈ ಪರಿಸರದ ನಷ್ಟ ಇಲ್ಲಿನ ಯುವಜನತೆಯ ಮೇಲಾಗುತ್ತಿತ್ತು. ಓರ್ವ ಮಾಜಿ ರಾಷ್ಟ್ರೀಯ ಕ್ರೀಡಾಪಟು ಮತ್ತು ಕೋಚ್ ರೈಸ್ ಅಹಮದ್ ಅವರು ಈ ಯುವಕರ ಪ್ರತಿಭೆಯನ್ನು ಗುರುತಿಸಿದರು. ರೈಸ್ ಅವರ ಬಳಿ ಸಂಪನ್ಮೂಲಗಳು ಹೆಚ್ಚಾಗಿ ಇರಲಿಲ್ಲ.ಆದರೆ ಅವರು, ಸಂಪೂರ್ಣ ಶ್ರದ್ಧೆಯಿಂದ ಯುವಕರಿಗೆ ಫುಟ್ಬಾಲ್ ಕಲಿಸಲು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಇಲ್ಲಿ ಫುಟ್ಬಾಲ್ ಅದೆಷ್ಟು ಜನಪ್ರಿಯವಾಯಿತೆಂದರೆ, ಜನರು ಬಿಚಾರ್ ಪುರವನ್ನು ಫುಟ್ ಬಾಲ್ ಹೆಸರಿನಿಂದಲೇ ಗುರುತಿಸಲಾರಂಭಿಸಿದರು. ಈಗ ಇಲ್ಲಿ ಫುಟ್ಬಾಲ್ ಕ್ರಾಂತಿ ಹೆಸರಿನ ಒಂದು ಕಾರ್ಯಕ್ರಮ ಕೂಡಾ ನಡೆಯುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಯುವಜನರನ್ನು ಈ ಕ್ರೀಡೆಯೊಂದಿಗೆ ಬೆಸೆಯಲಾಗುತ್ತದೆ ಮತ್ತು ಅವರಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಈ ಕಾರ್ಯಕ್ರಮ ಎಷ್ಟೊಂದು ಯಶಸ್ವಿಯಾಯಿತೆಂದರೆ, ಬಿಚಾರ್ ಪುರದಿಂದ ಸುಮಾರು 40 ಕ್ಕೂ ಅಧಿಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡಾಪುಟಗಳು ಹೊರಹೊಮ್ಮಿದರು. ಈ ಫುಟ್ಬಾಲ್ ಕ್ರಾಂತಿ ಈಗ ಮೆಲ್ಲ ಮೆಲ್ಲಗೆ ಇಡೀ ಪ್ರದೇಶದಲ್ಲಿ ವ್ಯಾಪಿಸುತ್ತಿದೆ. ಶಹಡೋಲ್ ಮತ್ತು ಅದರ ಸುತ್ತಮುತ್ತಲಿನ ಸಾಕಷ್ಟು ದೊಡ್ಡ ಪ್ರದೇಶಗಳಲ್ಲಿ 1200 ಕ್ಕೂ ಅಧಿಕ ಫುಟ್ಬಾಲ್ ಕ್ಲಬ್ ಗಳು ತಲೆ ಎತ್ತಿವೆ. ಇವುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡುತ್ತಿದ್ದಾರೆ. ಫುಟ್ಬಾಲ್ ಆಟದ ಅನೇಕ ಹಿರಿಯ ಮತ್ತು ಮಾಜಿ ಕ್ರೀಡಾಕಾರರು ಮತ್ತು ಕೋಚ್ ಗಳು, ಇಂದು ಇಲ್ಲಿ ಯುವಜನರಿಗೆ ತರಬೇತಿ ನೀಡುತ್ತಿದ್ದಾರೆ. ಅಕ್ರಮ ಮದ್ಯಕ್ಕೆ ಹೆಸರಾಗಿದ್ದ, ಮಾದಕ ವ್ಯಸನಕ್ಕೆ ಕುಖ್ಯಾತವಾಗಿದ್ದ ಬುಡಕಟ್ಟು ಪ್ರದೇಶ ಈಗ ದೇಶದ ಫುಟ್ಬಾಲ್ ನರ್ಸರಿಯಾಗಿ ಮಾರ್ಪಟ್ಟಿದೆ ಎಂದರೆ ನೀವೇ ಯೋಚಿಸಿ. ಆದ್ದರಿಂದಲೇ ಹೇಳುತ್ತಾರೆ ಮನಸ್ಸಿದ್ದರೆ ಮಾರ್ಗ ಎಂದು. ನಮ್ಮ ದೇಶದಲ್ಲಿ ಪ್ರತಿಭಾವಂತರ ಕೊರತೆ ಇಲ್ಲ. ಅವುಗಳನ್ನು ಪತ್ತೆ ಹಚ್ಚುವ ಮತ್ತು ಸರಿಯಾದ ರೀತಿಯಲ್ಲಿ ರೂಪಿಸುವ ಅಗತ್ಯವಿದೆ. ನಂತರ ಇದೇ ಯುವಜನತೆ ದೇಶದ ಹೆಸರನ್ನು ಪ್ರಜ್ವಲಿಸುವಂತೆ ಮಾಡುತ್ತಾರೆ ಮತ್ತು ದೇಶದ ಪ್ರಗತಿಗೆ ದಿಕ್ಕನ್ನು ಕೂಡಾ ತೋರಿಸುತ್ತಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಾವೆಲ್ಲರೂ ಸಂಪೂರ್ಣ ಉತ್ಸಾಹದಿಂದ ‘ಅಮೃತ ಮಹೋತ್ಸವ’ ಆಚರಿಸುತ್ತಿದ್ದೇವೆ. ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ ದೇಶದಲ್ಲಿ ಸುಮಾರು ಎರಡು ಲಕ್ಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ವೈವಿಧ್ಯಮಯ ಬಣ್ಣಗಳಿಂದ ಕೂಡಿದ್ದವು. ಈ ಆಯೋಜನೆಗಳ ಒಂದು ವಿಶೇಷತೆಯೂ ಇತ್ತು ಅದೆಂದರೆ, ಇದರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಯುವಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಯುವಜನರಿಗೆ ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯಿತು. ಮೊದಲ ಕೆಲವು ತಿಂಗಳುಗಳ ಬಗ್ಗೆ ಹೇಳಬೇಕೆಂದರೆ, ಸಾರ್ವಜನಿಕ ಭಾಗವಹಿಸುವಿಕೆಯ ಅನೇಕ ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಂತಹದ್ದೇ ಒಂದು ಕಾರ್ಯಕ್ರಮ – ದಿವ್ಯಾಂಗ ಲೇಖಕರಿಗಾಗಿ ಆಯೋಜಿಸಲಾಗಿದ್ದ ‘ಲೇಖಕರ ಸಮಾವೇಶ‘. ಇದರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಕಂಡು ಬಂದಿತು. ಆಂಧ್ರ ಪ್ರದೇಶದ ತಿರುಪತಿಯಲ್ಲಿ ‘ರಾಷ್ಟ್ರೀಯ ಸಂಸ್ಕೃತ ಸಮ್ಮೇಳನ’ ಆಯೋಜಿಸಲಾಗಿತ್ತು.
ನಮ್ಮ ಇತಿಹಾಸದಲ್ಲಿ ಕೋಟೆಗಳ ಮಹತ್ವ ಎಷ್ಟೆಂದು ನಾವೆಲ್ಲರೂ ಅರಿತಿದ್ದೇವೆ. ಇವುಗಳನ್ನು ಪ್ರದರ್ಶಿಸುವ ಒಂದು ಅಭಿಯಾನ, ‘ಕೋಟೆಗಳು ಮತ್ತು ಕತೆಗಳು’ ಅಂದರೆ ಕೋಟೆಗಳೊಂದಿಗೆ ಬೆಸೆದುಕೊಂಡ ಕತೆಗಳು ಕೂಡಾ ಜನರಿಗೆ ಬಹಳ ಇಷ್ಟವಾದವು.
ಸ್ನೇಹಿತರೇ, ಇಂದು ದೇಶದಲ್ಲಿ, ನಾಲ್ಕೂ ನಿಟ್ಟಿನಲ್ಲಿ ‘ಅಮೃತ ಮಹೋತ್ಸವದ’ ಸ್ವರ ಪ್ರತಿಧ್ವನಿಸುತ್ತಿರುವಾಗ, ಆಗಸ್ಟ್ 15 ಇನ್ನೇನು ಸಮೀಪಿಸುತ್ತಿದೆ, ದೇಶದಲ್ಲಿ ಮತ್ತೊಂದು ದೊಡ್ಡ ಅಭಿಯಾನ ಆರಂಭವಾಗುತ್ತಿದೆ. ಹುತಾತ್ಮ ವೀರರಿಗೆ-ವೀರ ವನಿಯೆತರಿಗೆ ಗೌರವ- ಸಮ್ಮಾನ ನೀಡುವುದಕ್ಕಾಗಿ ‘ನನ್ನ ಭೂಮಿ ನನ್ನ ದೇಶ’ ಅಭಿಯಾನ ಆರಂಭವಾಗುತ್ತದೆ. ಇದರ ಅಡಿಯಲ್ಲಿ, ದೇಶಾದ್ಯಂತ ನಮ್ಮ ಅಮರ ಹುತಾತ್ಮರ ಸ್ಮರಣೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಮಹಾನ್ ವ್ಯಕ್ತಿಗಳ ನೆನಪಿನಲ್ಲಿ, ದೇಶದ ಲಕ್ಷಾಂತರ ಗ್ರಾಮ ಪಂಚಾಯಿತಿಗಳಲ್ಲಿ, ವಿಶೇಷ ಶಿಲಾ ಶಾಸನಗಳನ್ನು ಸ್ಥಾಪಿಸಲಾಗುವುದು. ಈ ಅಭಿಯಾನದ ಅಡಿಯಲ್ಲಿ, ದೇಶಾದ್ಯಂತ, ‘ಅಮೃತ ಕಳಶ ಯಾತ್ರಾ’ ಕೂಡಾ ಕೈಗೊಳ್ಳಲಾಗುವುದು. ದೇಶದ ಹಳ್ಳಿ ಹಳ್ಳಿಗಳಿಂದ, ಮೂಲೆ ಮೂಲೆಗಳಿಂದ, 7500 ಕಳಶಗಳಲ್ಲಿ, ಮಣ್ಣು ಸಂಗ್ರಹಿಸಿ, ಈ ‘ಅಮೃತ ಕಳಶ ಯಾತ್ರೆ’ ದೇಶದ ರಾಜಧಾನಿ ದೆಹಲಿ ತಲುಪುತ್ತದೆ. ಈ ಯಾತ್ರೆ ದೇಶದ ಬೇರೆ ಬೇರೆ ಭಾಗಗಳಿಂದ ಗಿಡಗಳನ್ನು ಕೂಡಾ ತನ್ನೊಂದಿಗೆ ತೆಗೆದುಕೊಂಡು ಬರುತ್ತದೆ.7500 ಕಳಶಗಳಲ್ಲಿ ತರಲಾದ ಮಣ್ಣು ಮತ್ತು ಗಿಡವನ್ನು ಸೇರಿಸಿ, ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪ ‘ಅಮೃತ ಉದ್ಯಾನವನ’ ನಿರ್ಮಿಸಲಾಗುವುದು. ಈ ‘ಅಮೃತ ಉದ್ಯಾನವನ’, ‘ಏಕ್ ಭಾರತ್ – ಶ್ರೇಷ್ಠ್ ಭಾರತ್’ ನ ಬಹುದೊಡ್ಡ, ಭವ್ಯ ಪ್ರತೀಕವಾಗಲಿದೆ. ನಾನು ಕಳೆದ ವರ್ಷ ಕೆಂಪು ಕೋಟೆಯಿಂದ ಮುಂದಿನ 25 ವರ್ಷಗಳ ಅಮೃತ ಕಾಲಕ್ಕಾಗಿ ‘ಪಂಚ ಪ್ರಾಣ್ ‘ ಕುರಿತು ಮಾತನಾಡಿದ್ದೆ. ನನ್ನ ಭೂಮಿ ನನ್ನ ದೇಶ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಈ ಪಂಚ ಪ್ರಾಣ್ ಈಡೇರಿಸುವ ಪ್ರತಿಜ್ಞೆಯನ್ನು ಕೂಡಾ ಮಾಡೋಣ. ನೀವೆಲ್ಲರೂ, ದೇಶದ ಪವಿತ್ರ ಮಣ್ಣನ್ನು ಕೈಯಲ್ಲಿ ತೆಗೆದುಕೊಂಡು ಪ್ರತಿಜ್ಞೆ ಮಾಡುತ್ತಾ ನಿಮ್ಮ ಸೆಲ್ಫಿಯನ್ನು yuva.gov.in ನಲ್ಲಿ ಖಂಡಿತವಾಗಿ ಅಪ್ಲೋಡ್ ಮಾಡಿ. ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ‘ಮನೆ ಮನೆಯಲ್ಲೂ ತ್ರಿವರ್ಣ ಧ್ವಜ’ ಅಭಿಯಾನದಲ್ಲಿ ಇಡೀ ದೇಶ ಯಾವರೀತಿ ಕೈಜೋಡಿಸಿತ್ತೋ, ಅಂತೆಯೇ ಈ ಬಾರಿ ಕೂಡಾ ಮತ್ತೊಮ್ಮೆ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು. ಮತ್ತು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಇಂತಹ ಪ್ರಯತ್ನಗಳಿಂದ ನಮಗೆ ನಮ್ಮ ಕರ್ತವ್ಯದ ಅರಿವಾಗುತ್ತದೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅಸಂಖ್ಯಾತ ವೀರರ ನೆನಪು ಬರುತ್ತದೆ, ಸ್ವಾತಂತ್ರ್ಯದ ಮೌಲ್ಯ ತಿಳಿದುಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ದೇಶವಾಸಿಯೂ ಈ ಪ್ರಯತ್ನಗಳೊಂದಿಗೆ ಖಂಡಿತವಾಗಿಯೂ ಕೈಜೋಡಿಸಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ‘ಮನದ ಮಾತು’ ಇಷ್ಟು ವಿಚಾರಗಳೊಂದಿಗೆ ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಾವು ಆಗಸ್ಟ್ 15 ರಂದು ಸ್ವಾತಂತ್ರ್ಯದ ಈ ಮಹಾನ್ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದೇವೆ. ದೇಶದ ಸ್ವಾತಂತ್ರ್ಯಕ್ಕಾಗಿ, ಬಲಿದಾನಗೈದವರನ್ನು ನಾವು ಸದಾ ಕಾಲ ಸ್ಮರಿಸಬೇಕು. ನಾವು ಅವರ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿ ಹಗಲಿರುಳೂ ಶ್ರಮಿಸಬೇಕು ಮತ್ತು ‘ಮನದ ಮಾತು’ ದೇಶವಾಸಿಗಳ ಈ ಶ್ರಮವನ್ನು, ಅನೇಕ ಸಾಮೂಹಿಕ ಪ್ರಯತ್ನಗಳನ್ನು ಜನರ ಮುಂದಿರಿಸುವ ಒಂದು ಮಾಧ್ಯಮವಾಗಿದೆ. ಮುಂದಿನ ಬಾರಿ, ಕೆಲವು ಹೊಸ ವಿಷಯಗಳೊಂದಿಗೆ, ನಿಮ್ಮನ್ನು ಭೇಟಿಯಾಗುತ್ತೇನೆ. ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ, 'ಮನದ ಮಾತಿ’ಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಸ್ವಾಗತ. ಸಾಮಾನ್ಯವಾಗಿ, 'ಮನದ ಮಾತು' ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ, ಆದರೆ, ಈ ಬಾರಿ ಅದು ಒಂದು ವಾರ ಮುಂಚಿತವಾಗಿ ಪ್ರಸಾರವಾಗುತ್ತಿದೆ. ನಾನು ಮುಂದಿನ ವಾರ ಅಮೆರಿಕಾದಲ್ಲಿ ಇರುತ್ತೇನೆ ಮತ್ತು ಅಲ್ಲಿ ಬಹಳ ವ್ಯಸ್ತವಾಗಿರುತ್ತೇನೆ ಎಂಬುದು ನಿಮಗೆಲ್ಲ ಗೊತ್ತು, ಹಾಗಾಗಿ ನಾನು ತೆರಳುವ ಮೊದಲು ನಿಮ್ಮೊಂದಿಗೆ ಮಾತನಾಡಬೇಕೆಂದು ಯೋಚಿಸಿದೆ. ಇದಕ್ಕಿಂತ ಉತ್ತಮವಾದದ್ದು ಇನ್ನೇನಿದೆ? ನಿಮ್ಮೆಲ್ಲರ ಆಶೀರ್ವಾದ, ನಿಮ್ಮ ಸ್ಫೂರ್ತಿ, ನನ್ನ ಶಕ್ತಿಯನ್ನು ಹೆಚ್ಚಿಸುತ್ತದೆ.
ಸ್ನೇಹಿತರೇ, ಪ್ರಧಾನಿಯ ರೂಪದಲ್ಲಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ, ಎಂಥ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಹಲವರು ಹೇಳುತ್ತಾರೆ. 'ಮನದ ಮಾತಿನ' ಅನೇಕ ಕೇಳುಗರು ತಮ್ಮ ಪತ್ರಗಳಲ್ಲಿ ತುಂಬಾ ಹೊಗಳುತ್ತಾರೆ. ಕೆಲವರು ಈ ಕೆಲಸ ಮಾಡಿದ್ದೇನೆ ಎಂದು ಹೇಳಿದರೆ, ಇನ್ನು ಕೆಲವರು ಆ ಕೆಲಸ ಮಾಡಿರುವುದಾಗಿ, ಇಂಥ ಒಳ್ಳೆಯ ಕಾರ್ಯ ಮಾಡಿದೆ ಎಂದು ಕೆಲವರು ಕೊಂಡಾಡಿದರೆ, ಇದನ್ನು ಅತ್ಯುತ್ತಮವಾಗಿ ಮಾಡಿದರು ಎನ್ನುತ್ತಾರೆ, ಆದರೆ, ನಾನು ಭಾರತದ ಸಾಮಾನ್ಯ ಮನುಷ್ಯನ ಪ್ರಯತ್ನಗಳು, ಕಠಿಣ ಪರಿಶ್ರಮ ಮತ್ತು ಅವರ ಇಚ್ಛಾಶಕ್ತಿಯನ್ನು ಕಂಡಾಗ, ಭಾವುಕನಾಗುತ್ತೇನೆ. ಅದು ದೊಡ್ಡ ಗುರಿಯೇ ಆಗಿರಲಿ, ಕಠಿಣ ಸವಾಲಾಗಿರಲಿ, ಭಾರತದ ಜನರ ಸಾಮೂಹಿಕ ಬಲ, ಸಾಮೂಹಿಕ ಶಕ್ತಿ, ಪ್ರತಿ ಸವಾಲಿಗೆ ಪರಿಹಾರವನ್ನು ನೀಡುತ್ತದೆ. ಎರಡು-ಮೂರು ದಿನಗಳ ಹಿಂದೆ, ದೇಶದ ಪಶ್ಚಿಮ ತೀರ ಭಾಗದಲ್ಲಿ ಎಷ್ಟು ದೊಡ್ಡ ಚಂಡಮಾರುತ ಅಪ್ಪಳಿಸಿತು ಎಂಬುದನ್ನು ನಾವು ನೋಡಿದ್ದೇವೆ. ಬಿರುಸಾದ ಗಾಳಿ, ಭಾರೀ ಮಳೆ. ಬಿಪಾರ್ಜೋಯ್ ಚಂಡಮಾರುತ ಕಛ್ನಲ್ಲಿ ಸಾಕಷ್ಟು ವಿನಾಶವನ್ನು ಉಂಟುಮಾಡಿತು, ಆದರೆ ಕಛ್ ಜನತೆ ಇಂತಹ ಅಪಾಯಕಾರಿ ಚಂಡಮಾರುತವನ್ನು ಧೈರ್ಯ ಮತ್ತು ಸನ್ನದ್ಧತೆ ಮೂಲಕ ಎದುರಿಸಿದ್ದು ಅಭೂತಪೂರ್ವವಾಗಿತ್ತು. ಎರಡು ದಿನಗಳ ನಂತರ, ಕಛ್ ಜನರು ತಮ್ಮ ಹೊಸ ವರ್ಷ ಆಶಾಢಿ ಬೀಜ್ ಆಚರಿಸಲಿದ್ದಾರೆ. ಕಾಕತಾಳೀಯವಾಗಿ ಕಛ್ ನಲ್ಲಿ ಆಶಾಢಿ ಬೀಜ್ ಅನ್ನು ಮಳೆಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಾನು ತುಂಬಾ ವರ್ಷಗಳಿಂದ ಕಛ್ಗೆ ಭೇಟಿ ನೀಡುತ್ತಿದ್ದೇನೆ, ಅಲ್ಲಿನ ಜನರ ಸೇವೆ ಮಾಡುವ ಸೌಭಾಗ್ಯವೂ ನನಗೆ ಲಭಿಸಿದೆ ಮತ್ತು ಇದಕ್ಕಾಗಿ ಕಛ್ ಜನತೆಯ ಸ್ಥೈರ್ಯ ಮತ್ತು ಜೀವನೋತ್ಸಾಹದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಎರಡು ದಶಕಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪದ ನಂತರ ಕಛ್ ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದ್ದ, ಅದೇ ಜಿಲ್ಲೆ ಇಂದು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಬಿಪರ್ಜೋಯ್ ಚಂಡಮಾರುತದಿಂದ ಉಂಟಾದ ವಿನಾಶದಿಂದಲೂ ಕಛ್ ಜನತೆ ಬಹಳ ವೇಗವಾಗಿ ಹೊರಬರಲಿದ್ದಾರೆ ಎಂದು ನನಗೆ ವಿಶ್ವಾಸವಿದೆ.
ಸ್ನೇಹಿತರೇ, ನೈಸರ್ಗಿಕ ವಿಕೋಪಗಳ ಮೇಲೆ ಯಾರದ್ದೇ ನಿಯಂತ್ರಣ ಇರುವುದಿಲ್ಲ, ಆದರೆ, ಭಾರತವು ಕಳೆದ ಕೆಲ ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ವಿಪತ್ತು ನಿರ್ವಹಣೆಯ ಶಕ್ತಿಯು ಇಂದು ಒಂದು ಉದಾಹರಣೆಯಾಗಿ ಹೊರಹೊಮ್ಮುತ್ತಿದೆ. ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ಇರುವ ಉತ್ತಮ ಮಾರ್ಗವೆಂದರೆ - ಪ್ರಕೃತಿಯ ಸಂರಕ್ಷಣೆ. ಮಳೆಗಾಲದ ಇಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಅದಕ್ಕಾಗಿಯೇ ಇಂದು ದೇಶವು 'ಕ್ಯಾಚ್ ದಿ ರೈನ್' ನಂತಹ ಅಭಿಯಾನಗಳ ಮೂಲಕ ಸಾಮೂಹಿಕ ಪ್ರಯತ್ನಗಳನ್ನು ಮಾಡುತ್ತಿದೆ. ಕಳೆದ ತಿಂಗಳು 'ಮನದ ಮಾತಿನಲ್ಲಿ ನಾವು ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಸ್ಟಾರ್ಟ್ಅಪ್ಗಳ ಬಗ್ಗೆ ಚರ್ಚಿಸಿದ್ದೇವೆ. ಈ ಬಾರಿಯೂ ನನಗೆ ಪತ್ರ ಬರೆದು ನೀರಿನ ಪ್ರತಿ ಹನಿಯನ್ನೂ ಉಳಿಸಲು ಶತಪ್ರಯತ್ನ ಪಡುತ್ತಿರುವ ಇಂತಹ ಅನೇಕರ ಬಗ್ಗೆ ಹೇಳಿದ್ದಾರೆ. ಅಂತಹ ಸ್ನೇಹಿತರಲ್ಲಿ ಒಬ್ಬರು ಉತ್ತರಪ್ರದೇಶದ ಬಾಂದಾ ಜಿಲ್ಲೆಯ ತುಳಸಿರಾಮ್ ಯಾದವ್. ತುಳಸಿರಾಮ್ ಯಾದವ್ ಅವರು ಲುಕತರಾ ಗ್ರಾಮ ಪಂಚಾಯಿತಿಯ ಮುಖ್ಯಸ್ಥರು. ಬಾಂದಾ ಮತ್ತು ಬುಂದೇಲ್ಖಂಡ್ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂದು ನಿಮಗೆ ಗೊತ್ತು. ಈ ಸವಾಲನ್ನು ಮೆಟ್ಟಿ ನಿಲ್ಲಲು ತುಳಸಿರಾಮ್ ಅವರು ಗ್ರಾಮಸ್ಥರ ಜೊತೆಗೂಡಿ 40ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದಾರೆ. ತುಳಸಿರಾಮ್ ಅವರು – ಗದ್ದೆಯ ನೀರು ಗದ್ದೆಗೆ, ಹಳ್ಳಿಯ ನೀರು ಹಳ್ಳಿಗೆ ಎಂಬುದನ್ನು ತಮ್ಮ ಅಭಿಯಾನದ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿದ್ದಾರೆ. ಇಂದು ಅವರ ಶ್ರಮದ ಫಲವೇ ಅವರ ಗ್ರಾಮದಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತಿದೆ. ಅದೇ ರೀತಿ ಉತ್ತರಪ್ರದೇಶ ಜನತೆ ಒಟ್ಟಾಗಿ ಹಾಪು ಜಿಲ್ಲೆಯ ಬತ್ತಿಹೋದ ನದಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಬಹಳ ಹಿಂದೆ ನೀಮ್ ಹೆಸರಿನ ನದಿ ಇತ್ತು. ಸಮಯ ಸರಿದಂತೆ ಅದು ಕಣ್ಮರೆಯಾಗಿತ್ತು, ಆದರೆ ಅವಳು ಯಾವಾಗಲೂ ಸ್ಥಳೀಯ ನೆನಪುಗಳಲ್ಲಿ ಮತ್ತು ಜಾನಪದದಲ್ಲಿ ಆ ನದಿಯನ್ನು ನೆನಪಿಸಿಕೊಳ್ಳಲಾಗುತ್ತಿತ್ತು. ಅಂತಿಮವಾಗಿ, ಜನರು ತಮ್ಮ ಈ ನೈಸರ್ಗಿಕ ಸಂಪತ್ತನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿದರು. ಜನರ ಸಾಂಘಿಕ ಪ್ರಯತ್ನದಿಂದ ಈಗ ‘ನೀಮ್ ನದಿ’ ಮತ್ತೆ ಜೀವ ತುಂಬಿ ಹರಿಯಲಾರಂಭಿಸಿದೆ. ನದಿಯ ಉಗಮ ಸ್ಥಾನವನ್ನು ಅಮೃತ ಸರೋವರ ಎಂಬ ಹೆಸರಿನಿಂದ ಅಭಿವೃದ್ಧಿಪಡಿಸಲಾಗುತ್ತಿದೆ.
ಸ್ನೇಹಿತರೇ, ಈ ನದಿಗಳು, ಕಾಲುವೆಗಳು, ಸರೋವರಗಳು ನೀರಿನ ಮೂಲಗಳು ಮಾತ್ರವಲ್ಲ, ಜೀವನದ ಬಣ್ಣಗಳು ಮತ್ತು ಭಾವನೆಗಳು ಸಹ ಅವುಗಳೊಂದಿಗೆ ಮಿಳಿತವಾಗಿವೆ.
ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಇಂತಹದ್ದೇ ದೃಶ್ಯ ನೋಡುವ ಅವಕಾಶ ಲಭಿಸಿತ್ತು. ಈ ಪ್ರದೇಶವು ಬಹುತೇಕ ಬರಗಾಲದಿಂದಾವೃತವಾಗಿರುತ್ತದೆ. ಐದು ದಶಕಗಳಿಂದ ನಿರೀಕ್ಷೆ ನಂತರ ನೀಲವಂಡೆ ಅಣೆಕಟ್ಟಿನ ಕಾಲುವೆ ಕಾಮಗಾರಿ ಇಲ್ಲಿ ಈಗ ಪೂರ್ಣಗೊಳ್ಳುತ್ತಿದೆ. ಕೆಲ ದಿನಗಳ ಹಿಂದೆ ಪರೀಕ್ಷೆಗೆಂದು ಕಾಲುವೆಗೆ ನೀರು ಹರಿಸಲಾಗಿತ್ತು. ಈ ವೇಳೆ ತೆಗೆದಂತಹ ಚಿತ್ರಗಳು ನಿಜಕ್ಕೂ ಭಾವುಕರನ್ನಾಗಿಸುವಂಥವು. ಹೋಳಿ ಹಬ್ಬ-ದೀಪಾವಳಿ ಹಬ್ಬದಂತೆ ಗ್ರಾಮದ ಜನರು ಕುಣಿದು ಕುಪ್ಪಳಿಸಿದರು.
ಸ್ನೇಹಿತರೇ, ನಿರ್ವಹಣೆಯ ವಿಷಯದ ಬಗ್ಗೆ ಮಾತನಾಡುತ್ತಿರುವಾಗ, ಇಂದು ನಾನು ಛತ್ರಪತಿ ಶಿವಾಜಿ ಮಹಾರಾಜರನ್ನು ನೆನಪಿಸಿಕೊಳ್ಳಬಯಸುತ್ತೇನೆ. ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಜೊತೆಗೆ ಅವರ ಆಡಳಿತ ಮತ್ತು ಅವರ ನಿರ್ವಹಣಾ ಕೌಶಲ್ಯದಿಂದ ಕಲಿಯುವಂಥದ್ದು ಬಹಳಷ್ಟಿದೆ. ವಿಶೇಷವಾಗಿ ಹೇಳುವುದಾದರೆ, ಛತ್ರಪತಿ ಶಿವಾಜಿ ಮಹಾರಾಜರು ಜಲ ನಿರ್ವಹಣೆ ಮತ್ತು ನೌಕಾಪಡೆಗೆ ಸಂಬಂಧಿಸಿದಂತೆ ಮಾಡಿದ ಕಾರ್ಯಗಳು, ಇನ್ನೂ ಭಾರತೀಯ ಇತಿಹಾಸದ ಹೆಮ್ಮೆಯನ್ನು ವೃದ್ಧಿಸುತ್ತಿವೆ. ಅವರು ನಿರ್ಮಿಸಿದ ಜಲಾವೃತ ಕೋಟೆಗಳು ಸಮುದ್ರದ ಮಧ್ಯದಲ್ಲಿ ಶತಮಾನಗಳ ನಂತರವೂ ಹೆಮ್ಮೆಯಿಂದ ತಲೆಎತ್ತಿ ನಿಂತಿವೆ. ಈ ತಿಂಗಳ ಆರಂಭದಲ್ಲಿಯೇ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭವನ್ನು ದೊಡ್ಡ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಯಗಡ ಕೋಟೆಯಲ್ಲಿ ಅದಕ್ಕೆ ಸಂಬಂಧಿಸಿದ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಲವು ವರ್ಷಗಳ ಹಿಂದೆ 2014 ರಲ್ಲಿ, ರಾಯಗಢಕ್ಕೆ ತೆರಳುವ ಮತ್ತು ಆ ಪುಣ್ಯಭೂಮಿಗೆ ನಮನ ಸಲ್ಲಿಸುವ ಸೌಭಾಗ್ಯ ನನಗೆ ಲಭಿಸಿತ್ತು ಎಂಬುದು ನನಗೆ ನೆನಪಿದೆ. ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಿರ್ವಹಣಾ ಕೌಶಲ್ಯವನ್ನು ತಿಳಿದುಕೊಳ್ಳುವುದು, ಅದರಿಂದ ಕಲಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದರಿಂದ ನಮ್ಮಲ್ಲಿ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯ ಭಾವನೆ ಮೂಡುತ್ತದೆ ಮತ್ತು ಭವಿಷ್ಯಕ್ಕಾಗಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಇದು ಪ್ರೇರಣೆಯೂ ದೊರೆಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ರಾಮಸೇತು ನಿರ್ಮಾಣಕ್ಕೆ ಸಹಾಯ ಮಾಡಲು ಮುಂದೆ ಬಂದ ರಾಮಾಯಣದ ಪುಟ್ಟ ಅಳಿಲಿನ ಬಗ್ಗೆ ನೀವು ಕೇಳಿರಬೇಕು. ನಾನು ಹೇಳುವುದರ ತಾತ್ಪರ್ಯವೇನೆಂದರೆ ಉದ್ದೇಶ ಸ್ಪಷ್ಟವಾಗಿದ್ದಾಗ, ಪ್ರಯತ್ನದಲ್ಲಿ ಪ್ರಾಮಾಣಿಕತೆ ಇದ್ದರೆ ಯಾವ ಗುರಿಯೂ ಕಷ್ಟವಾಗುವುದಿಲ್ಲ. ಭಾರತವೂ ಇಂದು ಈ ಉದಾತ್ತ ಉದ್ದೇಶದೊಂದಿಗೆ ಬಹು ದೊಡ್ಡ ಸವಾಲನ್ನು ಎದುರಿಸುತ್ತಿದೆ ಅದೇನೆಂದರೆ - ಟಿ.ಬಿ, ಇದನ್ನು ಕ್ಷಯರೋಗ ಎಂದೂ ಕರೆಯುತ್ತಾರೆ.
2025 ರ ವೇಳೆಗೆ ಭಾರತವನ್ನು ಟಿ.ಬಿ. ಮುಕ್ತ ರಾಷ್ಟ್ರವನ್ನಾಗಿಸುವ ಸಂಕಲ್ಪಗೈಯ್ಯಲಾಗಿದೆ, ಈ ಗುರಿ ಖಂಡಿತ ಬಹಳ ದೊಡ್ಡದು. ಟಿ.ಬಿ.ಯ ವಿಷಯ ತಿಳಿದ ನಂತರ ಕುಟುಂಬಸ್ಥರೇ ದೂರ ಹೋಗುತ್ತಿದ್ದ ಒಂದು ಕಾಲವಿತ್ತು, ಇಂದಿನ ಕಾಲಘಟ್ಟದಲ್ಲಿ ಟಿ.ಬಿ. ರೋಗಿಗಳನ್ನು ಕುಟುಂಬದ ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡಲಾಗುತ್ತಿದೆ. ಈ ಕ್ಷಯವನ್ನು ಮೂಲದಿಂದ ತೊಡೆದುಹಾಕಲು ನಿಕ್ಷಯ್ ಸ್ನೇಹಿತರು ಮುಂದಾಗಿದ್ದಾರೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ವಿವಿಧ ಸಾಮಾಜಿಕ ಸಂಸ್ಥೆಗಳು ನಿಕ್ಷಯ ಮಿತ್ರರಾಗಿದ್ದಾರೆ. ಹಳ್ಳಿಗಳಲ್ಲಿ ಪಂಚಾಯ್ತಿಗಳಲ್ಲಿ ಸಾವಿರಾರು ಜನರು ಮುಂದೆ ಬಂದು ಟಿ.ಬಿ. ರೋಗಿಗಳನ್ನು ದತ್ತು ಪಡೆದಿದ್ದಾರೆ ಹಾಗೂ ಟಿಬಿ ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಈ ಸಾರ್ವಜನಿಕ ಭಾಗವಹಿಸುವಿಕೆ ಈ ಅಭಿಯಾನದ ದೊಡ್ಡ ಶಕ್ತಿಯಾಗಿದೆ. ಈ ಭಾಗವಹಿಸುವಿಕೆಯಿಂದಾಗಿ ಇಂದು ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಸುಮಾರು 85 ಸಾವಿರ ನಿಕ್ಷಯ್ ಸ್ನೇಹಿತರು ಈ ಪುಣ್ಯದ ಕೆಲಸವನ್ನು ಸಹ ಮಾಡಿದ್ದಾರೆ. ನಾಡಿನ ಅನೇಕ ಸರಪಂಚ್ ರು, ಗ್ರಾಮದ ಮುಖಂಡರೂ ಸಹ ತಮ್ಮ ಗ್ರಾಮಗಳಿಂದ ಟಿ.ಬಿ. ನಿರ್ಮೂಲನೆ ಮಾಡಿಯೇ ತೀರುತ್ತೇವೆ ಎಂಬ ಪಣ ತೊಟ್ಟಿದ್ದಾರೆ ಎಂಬುದು ನನಗೆ ಬಹಳ ಸಂತೋಷವೆನಿಸಿದೆ.
ನೈನಿತಾಲ್ನ ಹಳ್ಳಿಯೊಂದರ ನಿಕ್ಷಯ್ ಸ್ನೇಹಿತ ಶ್ರೀ ದಿಕರ್ ಸಿಂಗ್ ಮೇವಾರಿ ಅವರು ಆರು ಟಿಬಿ ರೋಗಿಗಳನ್ನು ದತ್ತು ಪಡೆದಿದ್ದಾರೆ. ಅದೇ ರೀತಿ, ಕಿನ್ನೌರ್ನ ಗ್ರಾಮ ಪಂಚಾಯತ್ನ ಮುಖ್ಯಸ್ಥರಾದ ಪ್ರಮುಖ ನಿಕ್ಷಯ್ ಮಿತ್ರ ಶ್ರೀ ಜ್ಞಾನ್ ಸಿಂಗ್, ತ ಮ್ಮ ಬ್ಲಾಕ್ನಲ್ಲಿ ಟಿಬಿ ರೋಗಿಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತವನ್ನು ಟಿ.ಬಿ ಮುಕ್ತಗೊಳಿಸುವ ಅಭಿಯಾನದಲ್ಲಿ ನಮ್ಮ ಮಕ್ಕಳು ಮತ್ತು ಯುವ ಸ್ನೇಹಿತರು ಕೂಡ ಹಿಂದೆ ಬಿದ್ದಿಲ್ಲ. ಹಿಮಾಚಲ ಪ್ರದೇಶದ ಊನಾದ 7 ವರ್ಷದ ಹೆಣ್ಣು ಮಗಳು ನಳಿನಿ ಸಿಂಗ್ ಅದ್ಭುತ ಕೆಲಸವನ್ನು ನೋಡಿ. ಅವಳು ತನ್ನ ಪಾಕೆಟ್ ಮನಿಯಿಂದ ಟಿ.ಬಿ. ರೋಗಿಗಳಿಗೆ ಸಹಾಯ ಮಾಡುತ್ತಿದ್ದಾಳೆ. ಮಕ್ಕಳು ಹುಂಡಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದು ನಿಮಗೆ ತಿಳಿದಿದೆ, ಆದರೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ 13 ವರ್ಷದ ಮೀನಾಕ್ಷಿ ಮತ್ತು ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ನ 11 ವರ್ಷದ ಬಶ್ವರ್ ಮುಖರ್ಜಿ ಇಬ್ಬರು ಬೇರೆಯೇ ರೀತಿಯ ಮಕ್ಕಳು. ಈ ಇಬ್ಬರೂ ಮಕ್ಕಳು ತಮ್ಮ ಹುಂಡಿಯ ಹಣವನ್ನು ಟಿ.ಬಿ. ಮುಕ್ತ ಭಾರತದ ಅಭಿಯಾನದಲ್ಲಿ ತೊಡಗಿಸಿದ್ದಾರೆ. ಈ ಎಲ್ಲಾ ಉದಾಹರಣೆಗಳು ಭಾವನಾತ್ಮಕವಾಗಿರುವುದ ಜೊತೆಗೆ, ತುಂಬಾ ಸ್ಪೂರ್ತಿದಾಯಕವಾಗಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಉದಾತ್ತವಾಗಿ ಯೋಚಿಸುತ್ತಿರುವ ಈ ಎಲ್ಲ ಮಕ್ಕಳನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ಹೊಸ ವಿಚಾರಗಳನ್ನು ಸ್ವಾಗತಿಸಲು ಸದಾ ಸಿದ್ಧರಿರುವುದು ಭಾರತೀಯರಾದ ನಮ್ಮ ಸ್ವಭಾವ. ನಾವು ನಮ್ಮ ವಸ್ತುಗಳನ್ನು ಪ್ರೀತಿಸುತ್ತೇವೆ ಮತ್ತು ಹೊಸ ವಿಷಯಗಳನ್ನು ಅಳವಡಿಸಿಕೊಳ್ಳುತ್ತೇವೆ. ಇದಕ್ಕೊಂದು ಉದಾಹರಣೆ ಎಂದರೆ - ಜಪಾನ್ನ ಮಿಯಾವಾಕಿ ತಂತ್ರಜ್ಞಾನ, ಯಾವುದೇ ಸ್ಥಳದ ಮಣ್ಣು ಫಲವತ್ತಾಗಿಲ್ಲದಿದ್ದರೆ, ಆ ಪ್ರದೇಶವನ್ನು ಮತ್ತೆ ಫಲವತ್ತಾಗಿಸಲು ಮಿಯಾವಾಕಿ ತಂತ್ರಜ್ಞಾನವು ಉತ್ತಮ ಮಾರ್ಗವಾಗಿದೆ. ಮಿಯಾವಾಕಿ ಅರಣ್ಯಗಳು ವೇಗವಾಗಿ ಹರಡುತ್ತವೆ ಮತ್ತು ಎರಡು ಮೂರು ದಶಕಗಳಲ್ಲಿ ಜೀವವೈವಿಧ್ಯದ ಕೇಂದ್ರವಾಗುತ್ತವೆ. ಈಗ ಇದು ಭಾರತದ ವಿವಿಧ ಭಾಗಗಳಲ್ಲಿ ಬಹಳ ವೇಗವಾಗಿ ಹರಡುತ್ತಿದೆ. ಕೇರಳದ ಶಿಕ್ಷಕ ಶ್ರೀ ರಾಫಿ ರಾಮನಾಥ್ ಅವರು ಈ ತಂತ್ರಜ್ಞಾನದಿಂದ ಒಂದು ಪ್ರದೇಶದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದಾರೆ. ವಾಸ್ತವವಾಗಿ, ರಾಮನಾಥ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ವಿಸ್ತ್ರತವಾಗಿ ವಿವರಿಸಲು ಬಯಸಿದ್ದರು. ಇದಕ್ಕಾಗಿ ಅವರು ಗಿಡಮೂಲಿಕೆ ಉದ್ಯಾನವನ್ನೇ ಸಿದ್ಧಪಡಿಸಿದರು. ಅವರ ಉದ್ಯಾನ ಈಗ ಜೀವವೈವಿಧ್ಯ ವಲಯವಾಗಿ ಮಾರ್ಪಟ್ಟಿದೆ. ಅವರ ಈ ಯಶಸ್ಸು ಅವರನ್ನು ಇನ್ನಷ್ಟು ಪ್ರೇರೇಪಿಸಿತು. ಇದಾದ ನಂತರ ರಾಫೀಜಿಯವರು ಮಿಯಾವಾಕಿಯ ತಂತ್ರಜ್ಞಾನದಿಂದ ಮಿನಿ ಅರಣ್ಯವನ್ನು ಮಾಡಿ ಅದಕ್ಕೆ ‘ವಿದ್ಯಾವನಂ’ ಎಂದು ಹೆಸರಿಟ್ಟರು. ಒಬ್ಬ ಶಿಕ್ಷಕರು ಮಾತ್ರವೇ ಇಂತಹ ಸುಂದರವಾದ ಹೆಸರನ್ನು ಇಡಬಹುದು - 'ವಿದ್ಯಾವನಂ'. ರಾಮನಾಥಜಿಯವರ ಈ ‘ವಿದ್ಯಾವನಂ’ನಲ್ಲಿ 115 ವಿಧದ 450ಕ್ಕೂ ಹೆಚ್ಚು ಮರಗಳನ್ನು ಚಿಕ್ಕ ಜಾಗದಲ್ಲಿ ನೆಟ್ಟಿದ್ದಾರೆ. ಅವರ ವಿದ್ಯಾರ್ಥಿಗಳು ಸಹ ಅವರ ನಿರ್ವಹಣೆಗೆ ಸಹಾಯ ಮಾಡುತ್ತಾರೆ. ಸಮೀಪದ ಶಾಲಾ ಮಕ್ಕಳು, ಸಾಮಾನ್ಯ ನಾಗರಿಕರು - ಈ ಸುಂದರ ಸ್ಥಳವನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಬರುತ್ತಾರೆ. ಮಿಯಾವಾಕಿ ಅರಣ್ಯವನ್ನು ಯಾವುದೇ ಪ್ರದೇಶದಲ್ಲಿ ಹಾಗೂ ನಗರಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಬಹುದು. ಕೆಲ ಸಮಯದ ಹಿಂದೆ ಗುಜರಾತಿನ ಕೆವಾಡಿಯ, ಏಕ್ತಾ ನಗರದಲ್ಲಿ ಮಿಯಾವಾಕಿ ಅರಣ್ಯವನ್ನು ಉದ್ಘಾಟಿಸಿದ್ದೆ. ಕಚ್ ನಲ್ಲೂ 2001ರ ಭೂಕಂಪದಲ್ಲಿ ಮಡಿದವರ ನೆನಪಿಗಾಗಿ ಮಿಯಾವಾಕಿ ಶೈಲಿಯಲ್ಲಿ ಸ್ಮಾರಕ ವನವನ್ನು ನಿರ್ಮಿಸಲಾಗಿದೆ. ಕಚ್ನಂತಹ ಸ್ಥಳದಲ್ಲಿ ಇದರ ಯಶಸ್ಸು, ಅತ್ಯಂತ ಕಠಿಣವಾದ ನೈಸರ್ಗಿಕ ಪರಿಸರದಲ್ಲಿಯೂ ಈ ತಂತ್ರಜ್ಞಾನವು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತೋರಿಸುತ್ತದೆ. ಅದೇ ರೀತಿ ಅಂಬಾಜಿ ಮತ್ತು ಪಾವಗಡದಲ್ಲೂ ಮಿಯಾವಾಕಿ ಪದ್ಧತಿಯಲ್ಲಿ ಸಸಿಗಳನ್ನು ನೆಡಲಾಗಿದೆ. ಲಕ್ನೋದ ಅಲಿಗಂಜ್ನಲ್ಲಿಯೂ ಮಿಯಾವಾಕಿ ಉದ್ಯಾನವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನನಗೆ ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ 60 ಕ್ಕೂ ಹೆಚ್ಚು ಅರಣ್ಯಗಳಲ್ಲಿ ಕೆಲಸ ಮಾಡಲಾಗಿದೆ. ಈಗ ಈ ತಂತ್ರಜ್ಞಾನವು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸುತ್ತಿದೆ. ಸಿಂಗಾಪುರ, ಪ್ಯಾರಿಸ್, ಆಸ್ಟ್ರೇಲಿಯಾ, ಮಲೇಷಿಯಾ ಮುಂತಾದ ಹಲವು ದೇಶಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮಿಯಾವಾಕಿಯ ವಿಧಾನದ ಬಗ್ಗೆ ಕಲಿಯಲು ಪ್ರಯತ್ನಿಸುವಂತೆ ನಾನು ದೇಶವಾಸಿಗಳಿಗೆ, ವಿಶೇಷವಾಗಿ ನಗರವಾಸಿಗಳಲ್ಲಿ ಮನವಿ ಮಾಡುತ್ತೇನೆ. ಈ ಮೂಲಕ, ನಿಮ್ಮ ಭೂಮಿ ಮತ್ತು ಪ್ರಕೃತಿಯನ್ನು ಹಸಿರಾಗಿಸಲು ಮತ್ತು ಸ್ವಚ್ಛವಾಗಿಸಲು ನೀವು ಅಮೂಲ್ಯವಾದ ಕೊಡುಗೆಯನ್ನು ನೀಡಬಹುದಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವೊಮ್ಮೆ ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ, ಇನ್ನು ಕೆಲವೊಮ್ಮೆ G-20 ರ ಅದ್ಭುತ ಆಯೋಜನೆಯಿಂದಾಗಿ. ಕಾಶ್ಮೀರದ ‘ನಾದ್ರು’ ದೇಶದ ಹೊರಗೂ ಹೇಗೆ ಇಷ್ಟವಾಗುತ್ತಿದೆ ಎಂದು ಕೆಲ ಸಮಯದ ಹಿಂದೆ ‘ಮನದ ಮಾತಿನಲ್ಲಿ ನಾನು ಹೇಳಿದ್ದೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜನರು ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಬಾರಾಮುಲ್ಲಾದಲ್ಲಿ ಹಿಂದಿನಿಂದಲೂ ಬೇಸಾಯ ಮಾಡಲಾಗುತ್ತಿದ್ದರೂ, ಇಲ್ಲಿ ಹಾಲಿನ ಕೊರತೆಯಿತ್ತು. ಬಾರಾಮುಲ್ಲಾದ ಜನರು ಈ ಸವಾಲನ್ನು ಒಂದು ಅವಕಾಶವಾಗಿ ತೆಗೆದುಕೊಂಡರು. ಹೆಚ್ಚಿನ ಸಂಖ್ಯೆಯ ಜನರು ಇಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಇಲ್ಲಿನ ತಾಯಂದಿರು ಈ ಕಾರ್ಯದಲ್ಲಿ ಅಗ್ರಸ್ಥಾನದ್ಲಲಿದ್ದಾರೆ. ಉದಾಹರಣೆಗೆ ಸೋದರಿ ಇಶ್ರತ್ ನಬಿ. ಇಶ್ರತ್ ಒಬ್ಬ ಪದವೀಧರರಾಗಿದ್ದು ಮಿರ್ ಸಿಸ್ಟರ್ಸ್ ಡೈರಿ ಫಾರ್ಮ್ ಆರಂಭಿಸಿದ್ದಾರೆ. ಇವರ ಡೇರಿ ಫಾರಂನಿಂದ ಪ್ರತಿದಿನ ಸುಮಾರು 150 ಲೀಟರ್ ಹಾಲು ಮಾರಾಟವಾಗುತ್ತಿದೆ. ಇಂತಹ ಮತ್ತೊಬ್ಬ ಸ್ನೇಹಿತ ಸೋಪೋರ್ನ ವಸಿಂ ಅನಾಯತ್. ವಸಿಂ ಎರಡು ಡಜನ್ಗಿಂತಲೂ ಹೆಚ್ಚು ರಾಸುಗಳನ್ನು ಹೊಂದಿದ್ದಾರೆ ಮತ್ತು ಪ್ರತಿದಿನ ಇನ್ನೂರು ಲೀಟರ್ಗಿಂತಲೂ ಹೆಚ್ಚು ಹಾಲನ್ನು ಮಾರಾಟ ಮಾಡುತ್ತಾರೆ. ಮತ್ತೊಬ್ಬ ಯುವಕ ಅಬಿದ್ ಹುಸೇನ್ ಕೂಡ ಹೈನುಗಾರಿಕೆ ಮಾಡುತ್ತಿದ್ದಾರೆ. ಅವರ ಕೆಲಸವೂ ಸಾಕಷ್ಟು ಪ್ರಗತಿಯಲ್ಲಿದೆ. ಇಂಥವರ ಪರಿಶ್ರಮದಿಂದ ಬಾರಾಮುಲ್ಲಾದಲ್ಲಿ ನಿತ್ಯ 5.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇಡೀ ಬಾರಾಮುಲ್ಲಾ ಹೊಸ ಶ್ವೇತ ಕ್ರಾಂತಿಗೆ ನಾಂದಿ ಹಾಡುತ್ತಿದೆ. ಕಳೆದ ಎರಡೂವರೆಯಿಂದ 3 ವರ್ಷಗಳಲ್ಲಿ ಇಲ್ಲಿ 500ಕ್ಕೂ ಹೆಚ್ಚು ಡೈರಿ ಘಟಕಗಳು ಆರಂಭಗೊಂಡಿವೆ. ಬಾರಾಮುಲ್ಲಾದ ಡೈರಿ ಉದ್ಯಮವು ನಮ್ಮ ದೇಶದ ಪ್ರತಿಯೊಂದು ಭಾಗವು ಸಾಧ್ಯತೆಗಳಿಂದ ತುಂಬಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಯಾವುದೇ ಪ್ರದೇಶದ ಜನರ ಸಾಮೂಹಿಕ ಇಚ್ಛಾಶಕ್ತಿ ಯಾವುದೇ ಗುರಿಯನ್ನು ಸಾಧಿಸಿ ತೋರಿಸಬಲ್ಲುದು.
ನನ್ನ ಪ್ರೀತಿಯ ದೇಶವಾಸಿಗಳೇ, ಈ ತಿಂಗಳು ಭಾರತಕ್ಕೆ ಕ್ರೀಡಾ ಪ್ರಪಂಚದಿಂದ ಅನೇಕ ಸಂತೋಷಕರ ಸುದ್ದಿಗಳು ಬಂದಿವೆ. ಭಾರತ ತಂಡವು ಮೊದಲಬಾರಿಗೆ ಮಹಿಳಾ ಜ್ಯೂನಿಯರ್ ಏಷ್ಯಾ ಕಪ್ ಗೆದ್ದು ಭಾರತದ ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ. ಇದೇ ತಿಂಗಳು ನಮ್ಮ ಪುರುಷರ ಹಾಕಿ ತಂಡ ಕೂಡಾ ಜ್ಯೂನಿಯರ್ ಹಾಕಿ ಕಪ್ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ನಮ್ಮ ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡ ಎಂಬ ಹೆಗ್ಗಳಿಕೆಗೆ ಕೂಡಾ ನಾವು ಪಾತ್ರರಾಗಿದ್ದೇವೆ. ಜ್ಯೂನಿಯರ್ ಶೂಟಿಂಗ್ ವಿಶ್ವ ಕಪ್ ನಲ್ಲಿ ಕೂಡಾ ನಮ್ಮ ಜ್ಯೂನಿಯರ್ ತಂಡ ಅದ್ಭುತಗಳನ್ನು ಮಾಡಿ ತೊರಿಸಿದೆ. ಭಾರತೀಯ ತಂಡವು ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು ಚಿನ್ನದ ಪದಕಗಳಲ್ಲಿ ಶೇಕಡಾ 20 ರಷ್ಟು ಪದಕಗಳು ಭಾರತಕ್ಕೆ ಸಂದಿವೆ. ಇದೇ ಜೂನ್ ತಿಂಗಳಿನಲ್ಲಿ ಇಪ್ಪತ್ತು ವರ್ಷದೊಳಗಿನವರ ಏಷ್ಯನ್ ಅಥ್ಲೆಟಿಕ್ಸ್ ಪಂದ್ಯಾವಳಿ ಕೂಡಾ ನಡೆಯಿತು. ಇದರಲ್ಲಿ ಭಾರತ ಪದಕ ಪಟ್ಟಿಯಲ್ಲಿ 45 ದೇಶಗಳ ಪೈಕಿ ಮೂರು ಸ್ಥಾನಗಳಲ್ಲಿ ಒಂದಾಗಿದೆ.
ಸ್ನೇಹಿತರೇ, ನಮಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಬಗ್ಗೆ ತಿಳಿದು ಬರುತ್ತಿತ್ತಾದರೂ, ಅದರಲ್ಲಿ ಸಾಮಾನ್ಯವಾಗಿ ಭಾರತದ ಹೆಸರಿನ ಪ್ರಸ್ತಾವನೆ ಇರುತ್ತಿರಲಿಲ್ಲ. ಇಂದು ನಾನು ಕೇವಲ ಹಿಂದಿನ ಕೆಲವು ವಾರಗಳ ಯಶಸ್ಸಿನ ಬಗ್ಗೆ ಮಾತ್ರಾ ಹೇಳುತ್ತಿದ್ದೇನೆ, ಆದರೂ ಇದರ ಪಟ್ಟಿ ಇಷ್ಟು ದೊಡ್ಡದಾಗಿದೆ. ಇದು ನಮ್ಮ ಯುವಸಮುದಾಯದ ನಿಜವಾದ ಸಾಮರ್ಥ್ಯವಾಗಿದೆ. ಇಂತಹ ಅನೇಕ ಕ್ರೀಡೆಗಳು ಮತ್ತು ಪಂದ್ಯಾವಳಿಗಳು ಇವೆ, ಇಂದು ಈ ಸ್ಪರ್ಧೆಗಳಲ್ಲಿ ಭಾರತ ಮೊದಲಬಾರಿಗೆ ತನ್ನ ಅಸ್ತಿತ್ವವನ್ನು ದಾಖಲಿಸುತ್ತಿದೆ. ಲಾಂಗ್ ಜಂಪ್ ನಲ್ಲಿ ಶ್ರೀಶಂಕರ್ ಮುರಳಿ ಅವರು ಪ್ಯಾರಿಸ್ ಡೈಮಂಡ್ ಲೀಗ್ ನಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟರು. ಇದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕವಾಗಿದೆ. ಕಿರ್ಗಿಸ್ತಾನದಲ್ಲೂ ಹದಿನೇಳು ವರ್ಷದೊಳಗಿನವರ ಮಹಿಳಾ ಕುಸ್ತಿ ತಂಡವು ಯಶಸ್ಸು ಸಾಧಿಸಿದೆ. ನಾನು ದೇಶದ ಈ ಎಲ್ಲಾ ಕ್ರೀಡಾಪಟುಗಳಿಗೆ, ಅವರ ತಾಯಿತಂದೆಯರಿಗೆ ಮತ್ತು ಕೋಚ್ ಗಳಿಗೆ ಈ ಪ್ರಯತ್ನಗಳಿಗಾಗಿ ಅಭಿನಂದಿಸುತ್ತಿದ್ದೇನೆ.
ಸ್ನೇಹಿತರೇ, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶದ ಈ ಯಶಸ್ಸಿನ ಹಿಂದೆ ರಾಷ್ಟ್ರ ಮಟ್ಟದ ನಮ್ಮ ಕ್ರೀಡಾಪಟುಗಳ ಕಠಿಣ ಶ್ರಮ ಅಡಗಿರುತ್ತದೆ. ಇಂದು ದೇಶದ ಬೇರೆ ಬೇರೆ ರಾಜ್ಗಳಲ್ಲಿ ಒಂದು ಹೊಸ ಉತ್ಸಾಹದೊಂದಿಗೆ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಆಟವಾಡುವ, ಗೆಲ್ಲುವ ಮತ್ತು ಸೋಲಿನಿಂದ ಕಲಿಯುವ ಅವಕಾಶ ದೊರೆಯುತ್ತದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಆಯೋಜಿಸಲಾಗಿತ್ತು. ಇದರಲ್ಲಿ ಯುವಜನತೆ ಅತ್ಯಂತ ಉತ್ಸಾಹ ಮತ್ತು ಹುರುಪಿನಿಂದ ಪಾಲ್ಗೊಂಡಿದ್ದು ಕಂಡುಬಂದಿತು. ಈ ಕ್ರೀಡೆಗಳಲ್ಲಿ ನಮ್ಮ ಯುವಜನತೆ ಹನ್ನೊಂದು ದಾಖಲೆಗಳನ್ನು ಮುರಿದರು. ಈ ಕ್ರೀಡಾಕೂಟದಲ್ಲಿ ಪಂಜಾಬ್ ವಿಶ್ವವಿದ್ಯಾಲಯ, ಅಮೃತ್ ಸರ್ ನ ಗುರು ನಾನಕ್ ದೇವ್ ವಿಶ್ವ ವಿದ್ಯಾಲಯ ಮತ್ತು ಕರ್ನಾಟಕದ ಜೈನ್ ವಿಶ್ವವಿದ್ಯಾಲಯಗಳು ಪದಕ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದವು.
ಸ್ನೇಹಿತರೇ, ಈ ಪಂದ್ಯವಾಳಿಗಳ ಪ್ರಮುಖ ಅಂಶವೆಂದರೆ, ಇವುಗಳ ಕಾರಣದಿಂದ ಅನೇಕ ಯುವ ಕ್ರೀಡಾಪಟುಗಳ ಅನೇಕ ಸ್ಫೂರ್ತಿದಾಯಕ ಕತೆಗಳು ಬೆಳಕಿಗೆ ಬರುತ್ತವೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ರೋಯಿಂಗ್ ಸ್ಪರ್ಧೆಯಲ್ಲಿ ಅಸ್ಸಾಂನ ಕಾಟನ್ ವಿಶ್ವವಿದ್ಯಾಲಯ ಅನ್ಯತಮ್ ರಾಜ್ ಕುಮಾರ್ ಇಂತಹ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಮೊದಲ ವಿಶೇಷ ಚೇತನ ಕ್ರೀಡಾಪಡು ಎನಿಸಿದರು. ಬರ್ಕತುಲ್ಲಾ ವಿಶ್ವವಿದ್ಯಾಲಯದ ನಿಧಿ ಪರ್ವೈಯಾ ಅವರು ಮೊಣಕಾಲಿನ ಗಂಭೀರ ಗಾಯದ ನಡುವೆಯೂ ಶಾಟ್ ಪುಟ್ ನಲ್ಲಿ ಚಿನ್ನದ ಪದಕ ಗಳಿಸುವುದರಲ್ಲಿ ಯಶಸ್ವಿಯಾದರು. ಕಣಕಾಲಿನಲ್ಲಾದ ಗಾಯದಿಂದಾಗಿ ಕಳೆದ ವರ್ಷ ಬೆಂಗಳೂರಿನಲ್ಲಿ ನಿರಾಶೆ ಹೊಂದಿದ್ದ ಸಾವಿತ್ರೀಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಶುಭಂ ಭಂಡಾರೆ ಅವರು ಈ ಬಾರಿ Steeple chase ನಲ್ಲಿ ಸ್ವರ್ಣ ಪದಕ ವಿಜೇತರಾದರು. ಬರ್ದ್ವಾನ್ ವಿಶ್ವವಿದ್ಯಾಲಯದ ಸರಸ್ವತಿ ಕುಂದೂ ಅವರು ತಮ್ಮ ಕಬಡ್ಡಿ ತಂಡದ ನಾಯಕಿಯಾಗಿದ್ದಾರೆ. ಅವರು ಅನೇಕ ಕಷ್ಟಗಳನ್ನು ದಾಟಿ ಈ ಹಂತ ತಲುಪಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡುವ ಅನೇಕ ಕ್ರೀಡಾಪಟುಗಳಿಗೆ ಟಾಪ್ಸ್ ಸ್ಕೀಮ್ ನಿಂದ ಕೂಡಾ ಸಾಕಷ್ಟು ಸಹಾಯ ದೊರೆಯುತ್ತಿದೆ. ನಮ್ಮ ಕ್ರೀಡಾಪಟುಗಳು ಎಷ್ಟು ಆಡುತ್ತಾರೋ ಅಷ್ಟೇ ಅರಳುತ್ತಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಜೂನ್ ತಿಂಗಳ 21 ಇನ್ನೇನು ಬಂದೇ ಬಿಟ್ಟಿತು. ಈ ಬಾರಿ ಕೂಡಾ ವಿಶ್ವದ ಮೂಲೆ ಮೂಲೆಗಳಲ್ಲಿ ಜನರು ಅಂತಾರಾಷ್ಟ್ರೀಯ ಯೋಗ ದಿನಕ್ಕಾಗಿ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ. ಈ ವರ್ಷದ ಯೋಗ ದಿನದ ಘೋಷವಾಕ್ಯ– ಯೋಗ ಫಾರ್ ವಸುಧೈವ ಕುಟುಂಬಕಂ – ಅಂದರೆ ಒಂದು ವಿಶ್ವ ಒಂದು ಕುಟುಂಬ ಎಂಬ ರೂಪದಲ್ಲಿ ಎಲ್ಲರ ಯೋಗಕ್ಷೇಮಕ್ಕಾಗಿ ಯೋಗ ಎಂಬುದಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಮತ್ತು ಎಲ್ಲರೊಂದಿಗೆ ಮುನ್ನಡೆಯುವ ಯೋಗದ ಭಾವನೆಯನ್ನು ಇದು ವ್ಯಕ್ತಪಡಿಸುತ್ತದೆ. ಪ್ರತಿ ಬಾರಿಯಂತೆಯೇ ಈ ಬಾರಿ ಕೂಡಾ ದೇಶದ ಮೂಲೆ ಮೂಲೆಗಳಲ್ಲಿ, ಯೋಗ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸ್ನೇಹಿತರೇ, ಈ ಬಾರಿ ನನಗೆ ನ್ಯೂ ಯಾರ್ಕ್ ನ ವಿಶ್ವ ಸಂಸ್ಥೆಯ ಮುಖ್ಯ ಕಾರ್ಯಾಲಯದಲ್ಲಿ ನಡೆಯುವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ದೊರೆಯಲಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಯೋಗ ದಿನಕ್ಕೆ ಸಂಬಂಧಿಸಿದಂತೆ ಅಪಾರ ಉತ್ಸಾಹ ಕಂಡುಬರುತ್ತಿದೆ.
ಸ್ನೇಹಿತರೇ, ನೀವೆಲ್ಲರೂ ನಿಮ್ಮ ಜೀವನದಲ್ಲಿ ಯೋಗವನ್ನು ಖಂಡಿತವಾಗಿಯೂ ಅಳವಡಿಸಿಕೊಳ್ಳಿ, ಇದನ್ನು ನಿಮ್ಮ ದೈನಂದಿನ ಚಟುವಟಿಕೆಗಳ ಒಂದು ಭಾಗವನ್ನಾಗಿ ಮಾಡಿಕೊಳ್ಳಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿ. ಒಂದುವೇಳೆ ನೀವು ಇನ್ನೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳದೇ ಇದ್ದಲ್ಲಿ, ಮುಂಬರುವ ಇದೇ 21 ರಂದು ಈ ಸಂಕಲ್ಪಕ್ಕಾಗಿ ಅತ್ಯುತ್ತಮ ಅವಕಾಶವಿದೆ. ಯೋಗದಲ್ಲಂತೂ ಹೆಚ್ಚಿನ ಸಿದ್ಧತೆಗಳು ಅಗತ್ಯವಿರುವುದಿಲ್ಲ. ನೀವು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡಿರಾದರೆ ಎಷ್ಟು ದೊಡ್ಡ ಬದಲಾವಣೆಯಾಗುತ್ತದೆ ಎಂದು ನೀವೇ ನೋಡಬಹುದು.
ನನ್ನ ಪ್ರೀತಿ ದೇಶವಾಸಿಗಳೇ, ನಾಡಿದ್ದು ಅಂದರೆ ಜೂನ್ 20 ರಂದು ಐತಿಹಾಸಿಕ ರಥಯಾತ್ರೆಯ ದಿನವಾಗಿದೆ. ಇಡಿ ವಿಶ್ವದಲ್ಲಿ ಈ ರಥಯಾತ್ರೆಗೆ ಒಂದು ವಿಶೇಷ ಮಾನ್ಯತೆಯಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಭಗವಾನ್ ಜಗನ್ನಾಥನ ರಥಯಾತ್ರೆ ಹೊರಡುತ್ತದೆ. ಒಡಿಶಾದ ಪುರಿಯಲ್ಲಿ ನಡೆಯಲಿರುವ ರಥಯಾತ್ರೆಯಂತೂ ಅತ್ಯಂತ ಅದ್ಭುತವಾಗಿರುತ್ತದೆ. ನಾನು ಗುಜರಾತ್ ನಲ್ಲಿದ್ದಾಗ, ಅಹಮದಾಬಾದ್ ನಲ್ಲಿ ನಡೆಯುವ ವಿಶಾಲ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತಿತ್ತು. ಈ ರಥಯಾತ್ರೆಗಳಲ್ಲಿ ದೇಶಾದ್ಯಂತ, ಪ್ರತಿಯೊಂದು ಸಮಾಜ, ಪ್ರತಿಯೊಂದು ವರ್ಗದ ಜನರು ಸೇರುವ ರೀತಿ ನಿಜಕ್ಕೂ ಅತ್ಯಂತ ಅನುಕರಣೀಯವಾಗಿರುತ್ತದೆ. ಈ ಶ್ರದ್ಧೆಯೊಂದಿಗೆ ಏಕ್ ಭಾರತ್ ಶ್ರೇಷ್ಠ್ ಭಾರತ್ ನ ಪ್ರತಿಬಿಂಬವೂ ಇರುತ್ತದೆ. ಈ ಪಾವನ ಪುಣ್ಯದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಅನೇಕಾನೇಕ ಶುಭ ಹಾರೈಕೆಗಳು. ಭಗವಾನ್ ಜಗನ್ನಾಥ ದೇಶವಾಸಿಗಳೆಲ್ಲರಿಗೂ ಉತ್ತಮ ಆರೋಗ್ಯ, ಸುಖ, ಸಮೃದ್ಧಿ ದೊರೆಯುವಂತೆ ಆಶೀರ್ವದಿಸಲಿ ಎನ್ನುವುದು ನನ್ನ ಹಾರೈಕೆ.
ಸ್ನೇಹಿತರೇ, ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಹಬ್ಬಗಳ ಬಗ್ಗೆ ಮಾತನಾಡುವಾಗ, ದೇಶದ ರಾಜಭವನಗಳಲ್ಲಿ ನಡೆಯುವ ಆಸಕ್ತಿದಾಯಕ ಕಾರ್ಯಕ್ರಮಗಳ ಬಗ್ಗೆ ಕೂಡಾ ನಾನು ಉಲ್ಲೇಖಿಸುತ್ತೇನೆ. ಈಗ ದೇಶದಲ್ಲಿ ರಾಜಭವನಗಳು ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳೊಂದಿಗೆ ಗುರುತಿಸಿಕೊಳ್ಳಲಾಗುತ್ತಿದೆ. ಇಂದು ನಮ್ಮ ರಾಜಭವನ, ಕ್ಷಯರೋಗ ಮುಕ್ತ ಭಾರತ ಅಭಿಯಾನದ, ಸಹಜ ಕೃಷಿ ಸಂಬಂಧಿತ ಅಭಿಯಾನದ ರೂವಾರಿಯಾಗುತ್ತಿದೆ. ಈ ಹಿಂದೆ ಗುಜರಾತ್, ಗೋವಾ, ತೆಲಂಗಾಣಾ, ಮಹಾರಾಷ್ಟ್ರ, ಸಿಕ್ಕಿಂ ಯಾವುದೇ ರಾಜ್ಯವಿರಲಿ, ತಮ್ಮ ತಮ್ಮ ಸಂಸ್ಥಾಪನಾ ದಿನದಂದು ಬೇರೆ ಬೇರೆ ರಾಜಭವನಗಳು ಉತ್ಸಾಹದಿಂದ ಆಚರಿಸಿರುವುದು ಒಂದು ಉದಾಹರಣೆಯಾಗಿದೆ. ಏಕ್ ಭಾರತ್ ಶ್ರೇಷ್ಠ್ ಭಾರತ್ ನ ಚೈತನ್ಯವನ್ನು ಸಶಕ್ತಗೊಳಿಸುವ ಒಂದು ಅದ್ಭುತ ಮೆಟ್ಟಿಲಾಗಿದೆ.
ಸ್ನೇಹಿತರೇ, ಭಾರತ ಪ್ರಜಾಪ್ರಭುತ್ವದ ತಾಯಿ, Mother of Democracy. ನಾವು ಪ್ರಜಾಪ್ರಭುತ್ವದ ಆದರ್ಶಗಳನ್ನು ಸರ್ವಶ್ರೇಷ್ಠವೆಂದು ಭಾವಿಸುತ್ತೇವೆ. ನಮ್ಮ ಸಂವಿಧಾನವನ್ನು ಸರ್ವಶ್ರೇಷ್ಠವೆಂದು ಭಾವಿಸುತ್ತೇವೆ. ಆದ್ದರಿಂದಲೇ ನಾವು ಜೂನ್ 25 ನೇ ತಾರೀಖನ್ನು ಎಂದಿಗೂ ಮರೆಯಲಾಗುವುದಿಲ್ಲ. ಇಂದೇ ದಿನದಂದು ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿತ್ತು. ಇದು ಭಾರತದ ಇತಿಹಾಸದಲ್ಲಿ ಒಂದು ಕರಾಳ ಕಾಲ. ಲಕ್ಷಾಂತರ ಜನರು ತುರ್ತುಪರಿಸ್ಥಿತಿಯನ್ನು ಪೂರ್ಣ ಸಾಮರ್ಥ್ಯದಿಂದ ಎದುರಿಸಿದರು. ಪ್ರಜಾಪ್ರಭುತ್ವದ ಬೆಂಬಲಿಗರನ್ನು ಎಷ್ಟೊಂದು ನೋವು, ಹಿಂಸೆಗೆ ಒಳಪಡಿಸಲಾಯಿತೆಂದರೆ, ಅದನ್ನು ನೆನೆದರೆ ಇಂದಿಗೂ ಮನಸ್ಸು ನಡುಗುತ್ತದೆ. ಈ ದೌರ್ಜನ್ಯಗಳ ಬಗ್ಗೆ, ಪೊಲೀಸರು ಮತ್ತು ಆಡಳಿತ ನೀಡದ ಶಿಕ್ಷೆಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯಲಾಗಿದೆ. ಸಂಘರ್ಷ್ ಮೇ ಗುಜರಾತ್ ಹೆಸರಿನ ಒಂದು ಪುಸ್ತಕ ಬರೆಯುವ ಒಂದು ಅವಕಾಶ ನನಗೂ ದೊರೆತಿತ್ತು. ಕೆಲವು ದಿನಗಳ ಹಿಂದಷ್ಟೇ ತುರ್ತು ಪರಿಸ್ಥಿತಿಯ ಬಗ್ಗೆ ಬರೆದ ಮತ್ತೊಂದು ಪುಸ್ತಕ ನನಗೆ ದೊರೆಯಿತು ಅದರ ಹೆಸರು – Torture of Political Prisoners in India. ತುರ್ತುಪರಿಸ್ಥಿತಿಯಲ್ಲಿ ಸಮಯದಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಅಂದಿನ ಸರ್ಕಾರ ಪ್ರಭಾಪ್ರಭುತ್ವದ ರಕ್ಷಕರೊಂದಿಗೆ ಎಷ್ಟು ಕ್ರೂರವಾಗಿ ನಡೆದುಕೊಂಡಿತ್ತು ಎಂಬುದನ್ನು ವಿವರಿಸಲಾಗಿದೆ. ಈ ಪುಸ್ತಕದಲ್ಲಿ ಹಲವಾರು case studies ಇವೆ, ಬಹಳಷ್ಟು ಚಿತ್ರಗಳೂ ಇವೆ. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ, ದೇಶದ ಸ್ವಾತಂತ್ರ್ಯವನ್ನು ಅಪಾಯಕ್ಕೆ ದೂಡುವ ಇಂತಹ ಅಪರಾಧಗಳನ್ನು ನಾವು ಖಂಡಿತವಾಗಿಯೂ ಅವಲೋಕನ ಮಾಡಬೇಕೆಂದು ನಾನು ಹೇಳುತ್ತೇನೆ. ಇದರಿಂದ ಇಂದಿನ ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಸುಲಭವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮನ್ ಕಿ ಬಾತ್ , ಮನದ ಮಾತು ಎನ್ನುವುದು ಬಣ್ಣ ಬಣ್ಣದ ಮುತ್ತಿನ ಮಣಿಗಳಿಂದ ಪೋಣಿಸಿದ ಒಂದು ಸುಂದರ ಹಾರವಾಗಿದೆ. ಇದರಲ್ಲಿರುವ ಪ್ರತಿಯೊಂದು ಮುತ್ತಿನ ಮಣಿಯೂ ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿದೆ ಮತ್ತು ಅಮೂಲ್ಯವಾಗಿದೆ. ಈ ಕಾರ್ಯಕ್ರಮದ ಪ್ರತಿಯೊಂದು ಆವೃತ್ತಿಯೂ ಅತ್ಯಂತ ಜೀವಂತಿಕೆಯಿಂದ ಕೂಡಿದೆ. ಸಾಮೂಹಿಕತೆಯ ಭಾವನೆಯೊಂದಿಗೆ ಸಮಾಜದೆಡೆಗೆ ನಮ್ಮ ಕರ್ತವ್ಯ ಮತ್ತು ಸೇವೆ ಭಾವನೆಯನ್ನು ಇದು ನಮ್ಮಲ್ಲಿ ಉಂಟು ಮಾಡುತ್ತದೆ. ನಾವು ಹೆಚ್ಚಾಗಿ ಕೇಳಿರದ, ಓದಿರದ ವಿಷಯಗಳ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಲಾಗುತ್ತದೆ. ಮನ್ ಕಿ ಬಾತ್ ನಲ್ಲಿ ಯಾವುದಾದರೊಂದು ವಿಷಯ ಪ್ರಸ್ತಾಪವಾದ ನಂತರ, ಅನೇಕ ದೇಶವಾಸಿಗಳಲ್ಲಿ ಹೊಸದೊಂದು ಪ್ರೇರಣೆ ದೊರೆತಿರುವುದನ್ನು ನಾವು ಆಗಾಗ್ಗೆ ನೋಡುತ್ತಿದ್ದೇವೆ. ಇತ್ತೀಚೆಗಷ್ಟೇ, ನನಗೆ ದೇಶದ ಪ್ರಸಿದ್ಧ ಶಾಸ್ತ್ರೀಯ ನೃತ್ಯಪಟು ಆನಂದಾ ಶಂಕರ್ ಜಯಂತ್ ಅವರಿಂದ ಒಂದು ಪತ್ರ ಬಂದಿದೆ. ನಾವು ಕತೆ ಹೇಳುವ ಕುರಿತಂತೆ ಮಾತನಾಡಿದ್ದ ಸಂಚಿಕೆಯ ಕುರಿತು ತಮ್ಮ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಆ ಕಾರ್ಯಕ್ರಮದಲ್ಲಿ ನಾವು ಈ ರಂಗದಲ್ಲಿ ತೊಡಗಿಸಿಕೊಂಡಿರುವಂತಹ ಜನರ ಪ್ರತಿಭೆಯನ್ನು ಗುರುತಿಸಿದ್ದೆವು. ‘ಮನದ ಮಾತಿನ’ ಆ ಕಾರ್ಯಕ್ರಮದಿಂದ ಪ್ರೇರಣೆ ಪಡೆದ ಆನಂದಾ ಶಂಕರ್ ಜಯಂತ್ ಅವರು “ಕುಟ್ಟಿ ಕಹಾನಿ” ಸಿದ್ಧ ಪಡಿಸಿದ್ದಾರೆ. ಇದು ಮಕ್ಕಳಿಗಾಗಿ ಬೇರೆ ಬೇರೆ ಭಾಷೆಗಳ ಕತೆಗಳ ಅತ್ಯುತ್ತಮ ಸಂಗ್ರಹವಾಗಿದೆ. ಇದು ನಮ್ಮ ಮಕ್ಕಳ ಸಂಸ್ಕೃತಿಯ ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠ ಮತ್ತು ಆಳವಾಗಿಸುವ ಕಾರಣದಿಂದ ಈ ಪ್ರಯತ್ನ ಬಹಳ ಉತ್ತಮವಾಗಿದೆ. ಇವರು ಈ ಕತೆಗಳ ಕೆಲವು ಆಸಕ್ತಿದಾಯ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಾನು ಆನಂದಾ ಶಂಕರ್ ಜಯಂತ್ ಅವರ ಈ ಪ್ರಯತ್ನ ಕುರಿತು ವಿಶೇಷವಾಗಿ ಮಾತನಾಡಿರುವುದು ಏಕೆಂದರೆ, ಯಾವ ರೀತಿ ದೇಶವಾಸಿಗಳ ಉತ್ತಮ ಕೆಲಸಗಳು ಉಳಿದವರಿಗೆ ಯಾವರೀತಿ ಪ್ರೇರಣೆಯಾಗುತ್ತದೆ ಎಂದು ನೋಡಿ ನನಗೆ ಬಹಳ ಆನಂದವಾಯಿತು. ಇದರಿಂದ ಅವರು ತಮ್ಮ ಕೌಶಲ್ಯದಿಂದ ದೇಶ ಮತ್ತು ಸಮಾಜಕ್ಕೆ ಏನನ್ನಾದರೂ ಒಳಿತನ್ನು ಮಾಡುವ ಪ್ರಯತ್ನ ಮಾಡುತ್ತಾರೆ. ಇದೇ ತಾನೇ ದೇಶದ ಪ್ರಗತಿಯಲ್ಲಿ ಹೊಸ ಶಕ್ತಿ ತುಂಬುತ್ತಿರುವ ನಮ್ಮ ಭಾರತೀಯರ ಸಾಮೂಹಿಕ ಸಾಮರ್ಥ್ಯ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನ್ ಕಿ ಬಾತ್ ಅನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಮುಂದಿನ ಬಾರಿ, ಹೊಸ ವಿಷಯಗಳೊಂದಿಗೆ ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ. ಮಳೆಗಾಲದ ಸಮಯವಾದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಮತೋಲಿತ ಆಹಾರ ಸೇವಿಸಿ ಮತ್ತು ಆರೋಗ್ಯದಿಂದಿರಿ. ಅಂದಹಾಗೆ ಖಂಡಿತವಾಗಿಯೂ ಯೋಗ ಮಾಡಿ. ಅನೇಕ ಶಾಲೆಗಳಲ್ಲಿ ಈಗ ಬೇಸಿಗೆ ರಜ ಮುಗಿಯುತ್ತಾ ಬಂದಿದೆ. ಶಾಲೆಯಲ್ಲಿ ನೀಡಿರುವ ಹೋಂವರ್ಕ್ ಅನ್ನು ಕೊನೆಯ ದಿನದವರೆಗೆ ಬಾಕಿ ಉಳಿಸಿಕೊಳ್ಳಬೇಡಿ, ಕೆಲಸ ಮುಗಿಸಿ ಮತ್ತು ನಿಶ್ಚಿಂತರಾಗಿರಿ ಎಂದು ನಾನು ವಿದ್ಯಾರ್ಥಿಗಳಿಗೆ ಹೇಳುತ್ತೇನೆ. ಅನೇಕಾನೇಕ ಧನ್ಯವಾದ.
ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಬಾರಿಯ 'ಮನದ ಮಾತಿನ' ಸಂಚಿಕೆ 2ನೇ ಶತಕದ ಆರಂಭವಾಗಿದೆ. ಕಳೆದ ತಿಂಗಳು ನಾವೆಲ್ಲರೂ ಶತಕದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದೇವೆ. ನಿಮ್ಮ ಭಾಗವಹಿಸುವಿಕೆ ಈ ಕಾರ್ಯಕ್ರಮದ ಬಹು ದೊಡ್ಡ ಶಕ್ತಿಯಾಗಿದೆ. 100ನೇ ಸಂಚಿಕೆ ಪ್ರಸಾರವಾಗುವ ಸಮಯದಲ್ಲಿ ಸಂಪೂರ್ಣ ದೇಶ ಒಂದು ಸೂತ್ರದಲ್ಲಿ ಬಂಧಿಸಿದಂತಾಗಿತ್ತು. ನಮ್ಮ ಸ್ವಚ್ಛತಾ ಕರ್ಮಚಾರಿ ಸಹೋದರ ಮತ್ತು ಸಹೋದರಿಯರು ಅಥವಾ ವಿವಿಧ ಕ್ಷೇತ್ರಗಳ ಅನುಭವಿಗಳಾಗಿರಲಿ, 'ಮನದ ಮಾತು' ಎಲ್ಲರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. 'ಮನದ ಮಾತಿಗೆ' ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಅದು ಭಾವುಕರನ್ನಾಗಿಸುವಂತಿದೆ. 'ಮನದ ಮಾತು' ಪ್ರಸಾರವಾದಾಗ, ಪ್ರಪಂಚದ ವಿವಿಧ ದೇಶಗಳಲ್ಲಿ, ಬೇರೆ ಬೇರೆ ಸಮಯಕ್ಕೆ ಅಂದರೆ, ಎಲ್ಲೋ ಸಂಜೆ ಮತ್ತು ಎಲ್ಲೋ ತಡರಾತ್ರಿಯಾಗಿತ್ತು, ಇದನ್ನು ಲೆಕ್ಕಿಸದೆ, 100 ನೇ ಸಂಚಿಕೆಯನ್ನು ಹೆಚ್ಚಿನ ಸಂಖ್ಯೆಯ ಜನರು ಆಲಿಸಲು ಸಮಯ ಮೀಸಲಿಟ್ಟರು. ನಾನು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ನ್ಯೂಜಿಲೆಂಡ್ನ ಆ ವೀಡಿಯೊವನ್ನು ಕೂಡ ನೋಡಿದೆ, ಅದರಲ್ಲಿ 100 ವರ್ಷದ ತಾಯಿಯೊಬ್ಬರು ಆಶೀರ್ವಾದ ನೀಡುತ್ತಿದ್ದರು. ದೇಶ ವಿದೇಶದ ಜನರು 'ಮನದ ಮಾತಿನ' ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ರಚನಾತ್ಮಕ ವಿಶ್ಲೇಷಣೆಯನ್ನು ಸಹ ಮಾಡಿದ್ದಾರೆ. ‘ಮನದ ಮಾತಿನಲ್ಲಿ’ ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತ್ರ ಚರ್ಚೆಯಾಗಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಆಶೀರ್ವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೆ, ನಾವು ಕೆಲ ದಿನಗಳ ಹಿಂದೆ 'ಮನದ ಮಾತಿನಲ್ಲಿ' ಕಾಶಿ-ತಮಿಳು ಸಂಗಮಂ, ಸೌರಾಷ್ಟ್ರ-ತಮಿಳು ಸಂಗಮಂ ಬಗ್ಗೆ ಮಾತನಾಡಿದ್ದೇವೆ. ಕೆಲ ದಿನಗಳ ಹಿಂದೆ ವಾರಣಾಸಿಯಲ್ಲಿ ಕಾಶಿ-ತೆಲುಗು ಸಂಗಮಂ ಕೂಡ ನಡೆದಿತ್ತು. ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಮನೋಭಾವಕ್ಕೆ ಶಕ್ತಿ ತುಂಬುವ ಇಂತಹ ಮತ್ತೊಂದು ವಿಶಿಷ್ಟ ಪ್ರಯತ್ನ ದೇಶದಲ್ಲಿ ನಡೆದಿದೆ. ಅದೇ ಯುವ ಸಂಗಮದ ಪ್ರಯತ್ನ. ಈ ವಿಶಿಷ್ಟ ಪ್ರಯತ್ನದಲ್ಲಿ ಭಾಗಿಯಾದ ಜನರಿಂದ ಈ ಕುರಿತು ವಿವರವಾಗಿ ಕೇಳಬೇಕೆಂದು ನಾನು ಆಲೋಚಿಸಿದೆ. ಅದಕ್ಕಾಗಿಯೇ ಇಬ್ಬರು ಯುವಕರು ಇದೀಗ ನನ್ನೊಂದಿಗೆ ಫೋನ್ನ ಸಂಪರ್ಕದಲ್ಲಿದ್ದಾರೆ - ಒಬ್ಬರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಅವರು ಮತ್ತು ಇನ್ನೊಬ್ಬರು ಬಿಹಾರದ ಪುತ್ರಿ ವಿಶಾಖಾ ಸಿಂಗ್. ಮೊದಲು ಗ್ಯಾಮರ್ ನ್ಯೋಕುಮ್ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ನಮಸ್ಕಾರ!
ಗ್ಯಾಮರ್: ನಮಸ್ತೆ ಮೋದಿ ಜೀ!
ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ಎಲ್ಲಕ್ಕಿಂತ ಮೊದಲು ನಾನು ನಿಮ್ಮ ಬಗ್ಗೆ ತಿಳಿಯಲು ಬಯಸುತ್ತೇನೆ
ಗ್ಯಾಮರ್ ಜೀ - ಮೋದಿ ಜೀ, ಮೊದಲನೆಯದಾಗಿ ತಾವು ಬಹಳ ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿ ನನ್ನೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ನಾನು ನಿಮಗೆ ಮತ್ತು ಭಾರತ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಾನು ಅರುಣಾಚಲ ಪ್ರದೇಶದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ.
ಪ್ರಧಾನ ಮಂತ್ರಿ: ನಿಮ್ಮ ತಂದೆ ಮತ್ತು ಕುಟುಂಬದ ಇತರರು ಏನು ಮಾಡುತ್ತಾರೆ.
ಗ್ಯಾಮರ್ ಜಿ: ನನ್ನ ತಂದೆ ಸಣ್ಣ ವ್ಯಾಪಾರ ಮತ್ತು ಅದರ ಜೊತೆಗೆ ಎಲ್ಲರೂ ಸೇರಿ ಒಂದಷ್ಟು ಕೃಷಿ ಕೆಲಸ ಮಾಡುತ್ತಾರೆ.
ಪ್ರಧಾನಿ: ಯುವ ಸಂಗಮ್ ಬಗ್ಗೆ ನಿಮಗೆ ಹೇಗೆ ಗೊತ್ತಾಯಿತು, ಯುವಾ ಸಂಗಮಕ್ಕೆ ಎಲ್ಲಿಗೆ ಹೋದಿರಿ? ಹೇಗೆ ಹೋದಿರಿ, ಅಲ್ಲಿ ಏನಾಯಿತು?
ಗ್ಯಾಮರ್ : ಮೋದಿ ಜೀ, ನನಗೆ, ನನ್ನ ಸಂಸ್ಥೆ, ಎನ್ಐಟಿ ಯುವ ಸಂಗಮ್ ಬಗ್ಗೆ ಮಾಹಿತಿ ನೀಡಿತು. ನೀವು ಅದರಲ್ಲಿ ಭಾಗವಹಿಸಬಹುದು ಎಂದು ತಿಳಿಸಿತು. ನಾನು ಮತ್ತೆ ಅಂತರ್ಜಾಲದಲ್ಲಿ ಸ್ವಲ್ಪ ಮಾಹಿತಿ ಹುಡುಕಿದೆ, ಇದು ತುಂಬಾ ಒಳ್ಳೆಯ ಕಾರ್ಯಕ್ರಮ ಎಂದು ನನಗೆ ತಿಳಿಯಿತು, ನನ್ನ ಏಕ್ ಭಾರತ್ ಶ್ರೇಷ್ಠ ಭಾರತ್ನ ದೃಷ್ಟಿಕೋನಕ್ಕೆ ಇದು ಬಹಳಷ್ಟು ಕೊಡುಗೆ ನೀಡಬಲ್ಲದು ಮತ್ತು ನನಗೆ ಹೊಸದನ್ನು ಕಲಿಯುವ ಅವಕಾಶ ಸಿಗುತ್ತದೆ ಎಂದು ಅರಿತು ತಕ್ಷಣವೇ, ನಾನು, ವೆಬ್ಸೈಟ್ ಮೂಲಕ ಅದಕ್ಕೆ ಸೇರ್ಪಡೆಗೊಂಡೆ. ನನ್ನ ಅನುಭವ ತುಂಬಾ ಸಂತೋಷದಾಯಕವಾಗಿತ್ತು, ತುಂಬಾ ಚೆನ್ನಾಗಿತ್ತು.
ಪ್ರಧಾನಿ: ನೀವು ಯಾವುದಾದರೂ ಆಯ್ಕೆ ಮಾಡಬೇಕಿತ್ತೇ?
ಗ್ಯಾಮರ್: ಮೋದಿ ಜಿ ವೆಬ್ಸೈಟ್ ತೆರೆದಾಗ, ಅರುಣಾಚಲದ ನಿವಾಸಿಗಳಿಗೆ ಎರಡು ಆಯ್ಕೆಗಳಿದ್ದವು. ಮೊದಲನೆಯದು ಆಂಧ್ರಪ್ರದೇಶ ಐಐಟಿ ತಿರುಪತಿ ಮತ್ತು ಎರಡನೆಯದು ಕೇಂದ್ರೀಯ ವಿಶ್ವವಿದ್ಯಾಲಯ, ರಾಜಸ್ಥಾನ ಆದ್ದರಿಂದ ನಾನು ನನ್ನ ಮೊದಲ ಆದ್ಯತೆಯನ್ನು ರಾಜಸ್ಥಾನ ಎಂದು ಆಯ್ಕೆಮಾಡಿದೆ, ಎರಡನೇ ಆದ್ಯತೆ ನಾನು ಐಐಟಿ ತಿರುಪತಿ ಮಾಡಿದೆ. ಹಾಗಾಗಿ ರಾಜಸ್ಥಾನಕ್ಕೆ ಆಯ್ಕೆಯಾದೆ. ಆದ್ದರಿಂದ ನಾನು ರಾಜಸ್ಥಾನಕ್ಕೆ ಹೋದೆ.
ಪ್ರಧಾನಿ: ನಿಮ್ಮ ರಾಜಸ್ಥಾನ ಭೇಟಿ ಹೇಗಿತ್ತು? ನೀವು ಮೊದಲ ಬಾರಿಗೆ
ರಾಜಸ್ಥಾನಕ್ಕೆ ಹೋಗಿದ್ದಿರೋ!
ಗ್ಯಾಮರ್: ಹೌದು, ನಾನು ಮೊದಲ ಬಾರಿಗೆ ಅರುಣಾಚಲದಿಂದ ಹೊರಗೆ ಹೋಗಿದ್ದೆ.
ರಾಜಸ್ಥಾನದ ಈ ಎಲ್ಲಾ ಕೋಟೆಗಳನ್ನು ನಾನು ಚಲನ ಚಿತ್ರ ಮತ್ತು ಫೋನ್ನಲ್ಲಿ ಮಾತ್ರ ನೋಡಿದ್ದೆ, ಹಾಗಾಗಿ ಮೊದಲ ಬಾರಿಗೆ ನಾನು ಹೋದಾಗ ನನ್ನ ಅನುಭವ ತುಂಬಾ ಚೆನ್ನಾಗಿತ್ತು, ಅಲ್ಲಿನ ಜನರು ತುಂಬಾ ಒಳ್ಳೆಯವರು ಮತ್ತು ನಮಗೆ ನೀಡಿದ ಆತಿಥ್ಯ ತುಂಬಾ ಚೆನ್ನಾಗಿತ್ತು. ನಾವು ಹೊಸ ವಿಷಯಗಳನ್ನು ಕಲಿಯಲು ಅವಕಾಶ ಲಭಿಸಿತು, ರಾಜಸ್ಥಾನದ ದೊಡ್ಡ ಸರೋವರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ, ನಾನು ಅರಿಯದೇ ಇರುವ ಮಳೆ ನೀರು ಕೊಯ್ಲು ಮುಂತಾದ ಅನೇಕ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು , ಆದ್ದರಿಂದ ರಾಜಸ್ಥಾನ ಭೇಟಿ ನನಗೆ ತುಂಬಾ ಇಷ್ಟವಾಯಿತು .
ಪ್ರಧಾನಿ: ಅರುಣಾಚಲವೂ ವೀರರ ನಾಡು, ರಾಜಸ್ಥಾನವೂ ವೀರರ ನಾಡು, ಸೇನೆಯಲ್ಲಿ ರಾಜಸ್ಥಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅರುಣಾಚಲದ ಗಡಿಯಲ್ಲಿರುವ ಸೈನಿಕರ ಮಧ್ಯೆ ರಾಜಸ್ಥಾನದವರನ್ನು ಭೇಟಿಯಾದಾಗ, ನೀವು ಖಂಡಿತವಾಗಿಯೂ ಅವರೊಂದಿಗೆ ಮಾತನಾಡುತ್ತೀರಿ. ಅವರನ್ನು ನೋಡಿ, ನಾನು ರಾಜಸ್ಥಾನಕ್ಕೆ ಹೋಗಿದ್ದೆ, ನನಗೆ ಅದ್ಭುತ ಅನುಭವವಾಯಿತು ಎಂದು ಹೇಳಿದಾಗ, ನಿಮ್ಮ ನಿಕಟತೆಯೂ ಹೆಚ್ಚುತ್ತದೆ. ರಾಜಸ್ಥಾನದಲ್ಲಿ ಕೆಲವು ಸಾಮ್ಯತೆಗಳನ್ನು ನೀವು ಗಮನಿಸಿರಬಹುದು, ಅರುಣಾಚಲದಲ್ಲೂ ಅದೇ ರೀತಿಯದ್ದನ್ನು ಕಂಡಾಗ ನಿಮಗೆ ವಿಶಿಷ್ಟ ಅನುಭೂತಿಯಾಗುತ್ತದೆ ಅಲ್ಲವೇ, ಇದು ನಿಮಗೆ ದೊರೆತ ಬಹುದೊಡ್ಡ ಅನುಕೂಲ.
ಗ್ಯಾಮರ್: ಮೋದಿ ಜೀ, ನಾನು ಕಂಡುಕೊಂಡ ಒಂದೇ ಒಂದು ಸಾಮ್ಯತೆ ಎಂದರೆ ಅದು ದೇಶ ಪ್ರೇಮ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಬಗ್ಗೆ ನನ್ನ ಭಾವನೆ, ನನ್ನ ಅನುಭೂತಿ ಏಕೆಂದರೆ ಅರುಣಾಚಲದಲ್ಲಿಯೂ ಸಹ ಜನರು ತಾವು ಭಾರತೀಯರು ಎಂದು ತುಂಬಾ ಹೆಮ್ಮೆಪಡುತ್ತಾರೆ, ಮತ್ತು ರಾಜಸ್ಥಾನದ ಜನರು ತಮ್ಮ ಮಾತೃಭೂಮಿಯನ್ನು ತುಂಬಾ ಪ್ರೀತಿಸುತ್ತಾರೆ ಎಂಬುದು ನನಗೆ ತಿಳಿಯಿತು. ವಿಶೇಷವಾಗಿ ಯುವ ಪೀಳಿಗೆ ನನ್ನ ದೇಶಕ್ಕಾಗಿ ಏನು ಮಾಡಬಲ್ಲೆ ಎಂಬ ಚಿಂತನೆ ಹೊಂದಿದೆ. ಅದು ತುಂಬಾ ಹೆಮ್ಮೆ ಎನಿಸುತ್ತದೆ, ಏಕೆಂದರೆ ನಾನು ಅಲ್ಲಿ ಅನೇಕ ಯುವಕರೊಂದಿಗೆ ಸಂವಹನ ನಡೆಸಿದ್ದೇನೆ, ಅವರಲ್ಲಿ ಮತ್ತು ಅರುಣಾಚಲ ಯುವಜನತೆಯಲ್ಲಿ ಸಾಕಷ್ಟು ಸಾಮ್ಯತೆಯನ್ನು ಕಂಡಿದ್ದೇನೆ. ದೇಶಕ್ಕಾಗಿ ತುಡಿಯುವ ಮತ್ತು ಎನನ್ನಾದರೂ ಮಾಡಬೇಕೆನ್ನುವ ಹಂಬಲದ ವಿಷಯದಲ್ಲಿ ಎರಡೂ ರಾಜ್ಯಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ.
ಪ್ರಧಾನಿ: ಅಲ್ಲಿ ಭೇಟಿಯಾದ ಸ್ನೇಹಿತರೊಂದಿಗೆ ಸ್ನೇಹ ಮುಂದುವರಿಯಿತೋ, ಇಲ್ಲಿ
ಬಂದ ಮೇಲೆ ಮರೆತುಬಿಟ್ಟಿರೊ?
ಗ್ಯಾಮರ್ : ಇಲ್ಲ, ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಸ್ನೇಹ ವೃದ್ಧಿಯಾಗುತ್ತಿದೆ.
ಪ್ರಧಾನಿ: ಹಾಂ...! ಹಾಗಾದರೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದೀರಾ?
ಗ್ಯಾಮರ್: ಹೌದು ಮೋದಿ ಜೀ, ನಾನು ಸಕ್ರಿಯವಾಗಿದ್ದೇನೆ.
ಪ್ರಧಾನಿ: ಹಾಗಾದರೆ ನೀವು ಬ್ಲಾಗ್ ಬರೆಯಬೇಕು, ನಿಮ್ಮ ಈ ಯುವ ಸಂಗಮದ ಅನುಭವ ಹೇಗಿತ್ತು, ನೀವು ಹೇಗೆ ನೋಂದಾಯಿಸಿಕೊಂಡಿರಿ, ರಾಜಸ್ಥಾನದಲ್ಲಿ ನಿಮ್ಮ ಅನುಭವ ಹೇಗಿತ್ತು ಎಂಬುದನ್ನು ವಿವರಿಸಿ. ಇದರಿಂದ ದೇಶದ ಯುವಕರು ಏಕ್ ಭಾರತ್ ಶ್ರೇಷ್ಠ ಭಾರತ್ನ ಹಿರಿಮೆಯನ್ನು ತಿಳಿದುಕೊಳ್ಳುತ್ತಾರೆ, ಈ ಯೋಜನೆ ಏನಿದೆ, ಯುವಕರು ಇದರ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು ಎಂದು ಅರಿಯುತ್ತಾರೆ. ನಿಮ್ಮ ಅನುಭವದ ಬಗೆಗೆ ಸಂಪೂರ್ಣ ಬ್ಲಾಗ್ ಬರೆಯಿರಿ, ಅದು ಅನೇಕ ಜನರಿಗೆ ಓದಲು ಉಪಯುಕ್ತವಾಗುತ್ತದೆ.
ಗ್ಯಾಮರ್ : ಹೌದು, ನಾನು ಖಂಡಿತವಾಗಿಯೂ ಬರೆಯುತ್ತೇನೆ.
ಪ್ರಧಾನ ಮಂತ್ರಿ: ಗ್ಯಾಮರ್ ಜೀ, ನಿಮ್ಮೊಂದಿಗೆ ಮಾತನಾಡಿ ಬಹಳ ಸಂತೋಷವಾಯಿತು. ನೀವೆಲ್ಲ ಯುವಕರು ದೇಶಕ್ಕೆ, ದೇಶದ ಉಜ್ವಲ ಭವಿಷ್ಯಕ್ಕಾಗಿ ಬಹಳ ಮುಖ್ಯ. ಏಕೆಂದರೆ ಈ 25 ವರ್ಷಗಳು - ನಿಮ್ಮ ಜೀವನಕ್ಕಾಗಿ ಮತ್ತು ದೇಶದ ಭವಿಷ್ಯಕ್ಕಾಗಿ ಬಹಳ ಮುಖ್ಯವಾಗಿವೆ. ಆದ್ದರಿಂದ ನಿಮಗೆ ಅನಂತ ಶುಭಾಷಯಗಳು ಧನ್ಯವಾದ.
ಗ್ಯಾಮರ್: ತಮಗೂ ಧನ್ಯವಾದಗಳು ಮೋದಿಜೀ.
ಪ್ರಧಾನಿ: ನಮಸ್ಕಾರ, ಸೋದರ.
ಸ್ನೇಹಿತರೇ, ಅರುಣಾಚಲದ ಜನತೆ ಎಷ್ಟು ಆತ್ಮೀಯರು ಎಂದರೆ ಅವರೊಂದಿಗೆ ಮಾತನಾಡುವುದನ್ನು ನಾನು ಆನಂದಿಸುತ್ತೇನೆ. ಯುವ ಸಂಗಮದಲ್ಲಿ ಗ್ಯಾಮರ್ ಅವರ ಅನುಭವ ಅತ್ಯುತ್ತಮವಾಗಿತ್ತು. ಬನ್ನಿ, ಈಗ ಬಿಹಾರದ ಮಗಳು ವಿಶಾಖಾ ಸಿಂಗ್ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ: ವಿಶಾಖಾ ಅವರೇ, ನಮಸ್ಕಾರ.
ವಿಶಾಖಾ: ಮೊದಲನೆಯದಾಗಿ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ನನ್ನ ನಮಸ್ಕಾರಗಳು ಮತ್ತು ನನ್ನೊಂದಿಗೆ ಎಲ್ಲಾ ಪ್ರತಿನಿಧಿಗಳ ಪರವಾಗಿಯೂ ನಿಮಗೆ ಅನಂತ ನಮನಗಳು.
ಪ್ರಧಾನಿ: ಸರಿ ವಿಶಾಖಾ ಅವರೆ, ಮೊದಲು ನಿಮ್ಮ ಬಗ್ಗೆ ಹೇಳಿ. ಜೊತೆಗೆ ಯುವ ಸಂಗಮದ ಬಗ್ಗೆ ಕೂಡ ನಾನು ತಿಳಿಯಬಯಸುತ್ತೇನೆ.
ವಿಶಾಖಾ ಜಿ: ನಾನು ಬಿಹಾರದ ಸಸಾರಂ ನಗರದ ನಿವಾಸಿಯಾಗಿದ್ದು, ನನ್ನ ಕಾಲೇಜಿನ ವಾಟ್ಸಾಪ್ ಗುಂಪಿನ ಸಂದೇಶದ ಮೂಲಕ ಯುವ ಸಂಗಮದ ಬಗ್ಗೆ ಮೊದಲ ಬಾರಿಗೆ ನನಗೆ ತಿಳಿಯಿತು. ತದನಂತರ ನಾನು ಅದರ ಬಗ್ಗೆ ಅದು ಏನು ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಂಡೆ. ಹಾಗಾಗಿ ಇದು ಪ್ರಧಾನಮಂತ್ರಿ ಅವರ ಯೋಜನೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಮೂಲಕ ಇದೊಂದು ಯುವ ಸಂಗಮ ಎಂಬುದು ತಿಳಿಯಿತು. ಆ ನಂತರ ಅರ್ಜಿ ಸಲ್ಲಿಸಿದೆ, ಅರ್ಜಿ ಹಾಕಿದಾಗ ಅದಕ್ಕೆ ಸೇರಲು ಬಹಳ ಉತ್ಸುಕಳಾಗಿದ್ದೆ. ಅಲ್ಲಿಂದ ತಮಿಳುನಾಡಿಗೆ ಪ್ರಯಾಣಿಸಿ ಮರಳಿ ಬಂದೆ. ನನಗೆ ದೊರೆತ exposure ನಿಂದಾಗಿ, ನಾನು ಈ ಕಾರ್ಯಕ್ರಮದ ಭಾಗವಾಗಿದ್ದೇನೆ ಎಂದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ, ಆದ್ದರಿಂದ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷವೆನಿಸಿದೆ ಮತ್ತು ನಮ್ಮಂತಹ ಯುವಕರಿಗಾಗಿ ಭಾರತದ ವಿವಿಧ ಭಾಗಗಳ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳುವಂತೆ ಮಾಡಿದ ಇಂತಹ ಅದ್ಭುತ ಕಾರ್ಯಕ್ರಮವನ್ನು ರೂಪಿಸಿದ್ದಕ್ಕೆ ನಿಮಗೆ ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಪ್ರಧಾನ ಮಂತ್ರಿ: ವಿಶಾಖಾ ಅವರೆ, ನೀವು ಏನು ಅಧ್ಯಯನ ಮಾಡುತ್ತಿದ್ದೀರಿ?
ವಿಶಾಖಾ ಜಿ: ನಾನು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಎರಡನೇ ವರ್ಷದ ವಿದ್ಯಾರ್ಥಿ.
ಪ್ರಧಾನ ಮಂತ್ರಿ: ಸರಿ, ವಿಶಾಖಾ ಅವರೆ, ನೀವು ಯಾವ ರಾಜ್ಯಕ್ಕೆ ಹೋಗಬೇಕು, ಎಲ್ಲಿ ಪಾಲ್ಗೊಳ್ಳಬೇಕು? ಮುಂತಾದ ನಿರ್ಧಾರವನ್ನು ಹೇಗೆ ತೆಗೆದುಕೊಂಡಿರಿ?
ವಿಶಾಖಾ: ನಾನು ಈ ಯುವ ಸಂಗಮ್ ಬಗ್ಗೆ ಗೂಗಲ್ನಲ್ಲಿ ಹುಡುಕಲು ಪ್ರಾರಂಭಿಸಿದಾಗ, ಬಿಹಾರದ ಪ್ರತಿನಿಧಿಗಳನ್ನು ತಮಿಳುನಾಡಿನ ಪ್ರತಿನಿಧಿಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ತಿಳಿದಿತ್ತು. ತಮಿಳುನಾಡು ನಮ್ಮ ದೇಶದ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ರಾಜ್ಯ, ಹಾಗಾಗಿ ಬಿಹಾರದ ಜನರನ್ನು ತಮಿಳುನಾಡಿಗೆ ಕಳುಹಿಸುತ್ತಿರುವುದನ್ನು ಅಲ್ಲಿಗೆ ಹೋದಾಗ ನೋಡಿದೆ, ಇದು ನಾನು ಅರ್ಜಿ ತುಂಬಬೇಕು ಮತ್ತು ಅಲ್ಲಿಗೆ ಹೋಗಿ, ಬೇಕೋ ಬೇಡವೋ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ತುಂಬಾ ಸಹಾಯ ಮಾಡಿತು. ನಾನು ಅದರಲ್ಲಿ ಭಾಗವಹಿಸಿದ್ದಕ್ಕಾಗಿ ಇಂದು ತುಂಬಾ ಹೆಮ್ಮೆಪಡುತ್ತೇನೆ ಮತ್ತು ನನಗೆ ತುಂಬಾ ಸಂತೋಷವಾಗಿದೆ.
ಪ್ರಧಾನಿ: ಇದು ತಮಿಳುನಾಡಿಗೆ ನಿಮ್ಮ ಮೊದಲ ಭೇಟಿಯಾಗಿತ್ತೇ?
ವಿಶಾಖಾ: ಹೌದು, ನಾನು ಮೊದಲ ಬಾರಿಗೆ ಹೋಗಿದ್ದೆ.
ಪ್ರಧಾನ ಮಂತ್ರಿ : ಸರಿ, ಯಾವುದಾದರೂ ವಿಶೇಷವಾಗಿ ನೆನಪಿಟ್ಟುಕೊಳ್ಳುವ ವಿಷಯ ಹೇಳಬೇಕೆಂದರೆ ನೀವು ಯಾವುದನ್ನು ಹೇಳುವಿರಿ? ದೇಶದ ಯುವ ಸಮುದಾಯ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.
ವಿಶಾಖಾ: ಸರ್, ಇಡೀ ಪ್ರಯಾಣವನ್ನು ನಾನು ಪರಿಗಣಿಸಿದರೆ ಅದು ನನಗೆ ಬಹಳ ಚೆನ್ನಾಗಿತ್ತು. ಪ್ರತಿಯೊಂದು ಹಂತದಲ್ಲೂ ನಾವು ಬಹಳ ಉತ್ತಮ ವಿಷಯಗಳನ್ನು ಕಲಿತೆವು. ನಾನು ತಮಿಳುನಾಡಿನಲ್ಲಿ ಉತ್ತಮ ಸ್ನೇಹಿತರನ್ನು ಪಡೆದುಕೊಂಡೆ. ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಂಡೆ. ಅಲ್ಲಿನ ಜನರನ್ನು ನಾನು ಭೇಟಿಯಾದೆ. ಆದರೆ ನನಗೆ ಅಲ್ಲಿ ಬಹಳ ಇಷ್ಟವಾದ ವಿಷಯಗಳಲ್ಲಿ ಮೊದಲನೆಯದೆಂದರೆ ಇಸ್ರೋಗೆ ಹೋಗಲು ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ, ಮತ್ತು ನಾವು ಪ್ರತಿನಿಧಿಗಳಾಗಿದ್ದರಿಂದ ಅದಕ್ಕಾಗಿ ನಮಗೆ ಇಸ್ರೋಗೆ ಪ್ರವೇಶ ದೊರೆಯಿತು. ಜೊತೆಗೆ ಎರಡನೆಯ ಬಹಳ ಒಳ್ಳೆಯ ವಿಷಯವೆಂದರೆ, ನಾವು ರಾಜಭವನಕ್ಕೆ ಹೋಗಿದ್ದು, ಮತ್ತು ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿದ್ದು. ಈ ಎರಡೂ ಸಂದರ್ಭಗಳು ನನಗೆ ಬಹಳ ಇಷ್ಟವಾಯಿತು. ನಮ್ಮಂತಹ ಯುವ ಜನತೆಗೆ ಸಾಮಾನ್ಯವಾಗಿ ದೊರೆಯದ ಈ ಅವಕಾಶ ನಮಗೆ ಯುವಾ ಸಂಗಮ್ ಮುಖಾಂತರ ದೊರೆಯಿತು. ಇದು ನನ್ನ ಪಾಲಿಗೆ ಬಹಳ ಉತ್ತಮವಾದ ಮತ್ತು ನೆನಪಿನಲ್ಲಿ ಉಳಿಯುವಂತಹ ಕ್ಷಣವಾಗಿದೆ.
ಪ್ರಧಾನ ಮಂತ್ರಿ : ಬಿಹಾರದಲ್ಲಿ ಆಹಾರ ಪದ್ಧತಿಯೇ ಬೇರೆ ಮತ್ತು ತಮಿಳುನಾಡಿನಲ್ಲಿ ಆಹಾರ ಪದ್ಧತಿಯೇ ಬೇರೆ.
ವಿಶಾಖಾ : ಹೌದು ಸರ್.
ಪ್ರಧಾನಮಂತ್ರಿ : ಹಾಗಾದರೆ ನೀವು ಪೂರ್ತಿಯಾಗಿ ಹೊಂದಿಕೊಂಡಿರೇ?
ವಿಶಾಖಾ: ನಾವು ಅಲ್ಲಿಗೆ ಹೋದಾಗ, ಅಲ್ಲಿ ತಮಿಳುನಾಡಿನಲ್ಲಿ ಒಂದು ಸೌತ್ ಇಂಡಿಯನ್ ಕ್ಯುಸಿನ್ ಇತ್ತು. ನಾವು ಅಲ್ಲಿಗೆ ಹೋಗುತ್ತಿದ್ದಂತೆಯೇ ನಮಗೆ ದೋಸೆ, ಇಡ್ಲಿ, ಸಾಂಬಾರ್, ಉತ್ತಪ್ಪಮ್, ವಡಾ, ಉಪ್ಪಿಟ್ಟು ಇವುಗಳನ್ನೆಲ್ಲಾ ನೀಡಲಾಯಿತು. ನಾವು ಅದನ್ನು ಮೊದಲ ಬಾರಿ ತಿಂದಾಗಲೇ ಅವು ನಮಗೆ ಬಹಳ ಇಷ್ಟವಾಯಿತು. ಅಲ್ಲಿನ ಆಹಾರ ಪದ್ಧತಿ ಬಹಳವೇ ಆರೋಗ್ಯಕರವಾಗಿದೆ, ವಾಸ್ತವದಲ್ಲಿ ರುಚಿಯಲ್ಲಿ ಕೂಡಾ ಬಹಳ ಉತ್ತಮವಾಗಿರುತ್ತದೆ. ನಮ್ಮ ಉತ್ತರ ಭಾಗದ ಆಹಾರಕ್ಕಿಂತ ಬಹಳ ಭಿನ್ನವಾಗಿರುತ್ತದೆ. ನನಗೆ ಅಲ್ಲಿನ ಆಹಾರ ಬಹಳ ಇಷ್ಟವಾಯಿತು. ಹಾಗೆಯೇ ಅಲ್ಲಿನ ಜನರು ಕೂಡಾ ಬಹಳ ಇಷ್ಟವಾದರು.
ಪ್ರಧಾನಮಂತ್ರಿ : ಹಾಗಾದರೆ ನಿಮಗೆ ತಮಿಳುನಾಡಿನಲ್ಲಿ ಸ್ನೇಹಿತರು ಕೂಡಾ ದೊರೆತರಲ್ಲವೇ?
ವಿಶಾಖಾ : ಹೌದು ಸರ್! ನಾವು ಅಲ್ಲಿ NIT ಟ್ರಿಚಿಯಲ್ಲಿ ಉಳಿದುಕೊಂಡಿದ್ದೆವು, ಅದಾದ ನಂತರ IIT ಮದ್ರಾಸ್ ನಲ್ಲಿ. ಎರಡೂ ಕಡೆಗಳಲ್ಲೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನನಗೆ ಸ್ನೇಹವಾಯಿತು. ಅಲ್ಲದೇ, ಒಂದು ಸಿಐಐ ನ ಸ್ವಾಗತ ಸಮಾರಂಭ ಕೂಡಾ ಇತ್ತು, ಅಲ್ಲಿಗೆ ಸುತ್ತಮುತ್ತಲಿನ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಕೂಡಾ ಬಂದಿದ್ದರು. ನಾವು ಆ ವಿದ್ಯಾರ್ಥಿಗಳೊಂದಿಗೆ ಕೂಡಾ ಮಾತನಾಡಿದೆವು ಮತ್ತು ಅವರನ್ನೆಲ್ಲಾ ಭೇಟಿಯಾಗಿದ್ದು ನನಗೆ ಬಹಳ ಸಂತೋಷ ನೀಡಿತು. ಇವರಲ್ಲಿ ಬಹಳಷ್ಟು ಜನ ನನ್ನ ಸ್ನೇಹಿತರು. ತಮಿಳುನಾಡಿನಿಂದ ಬಿಹಾರಕ್ಕೆ ಬರುತ್ತಿರುವ ಕೆಲವು ಪ್ರತಿನಿಧಿಗಳನ್ನು ಕೂಡಾ ಭೇಟಿ ಮಾಡಿದೆವು ಮತ್ತು ನಾವು ಅವರೊಂದಿಗೆ ಕೂಡಾ ಮಾತುಕತೆ ನಡೆಸಿದೆವು. ನಾವು ಈಗಲೂ ಕೂಡಾ ಅವರೊಂದಿಗೆ ಮಾತನಾಡುತ್ತಿರುತ್ತೇವೆ ಇದಿಂದ ನನಗೆ ಬಹಳ ಸಂತೋಷವಾಗುತ್ತದೆ.
ಪ್ರಧಾನಮಂತ್ರಿ: ವಿಶಾಖಾ ಅವರೇ ನೀವು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಗ್ ಬರೆಯಿರಿ ಮತ್ತು ಈ ಯುವ ಸಂಗಮ್, ಏಕ್ ಭಾರತ್ ಶ್ರೇಷ್ಠ್ ಭಾರತ್, ಮತ್ತು ತಮಿಳುನಾಡಿನಲ್ಲಿ ನಿಮಗೆ ದೊರೆತ ಪರಿಚಯ, ಅಲ್ಲಿ ನಿಮಗೆ ದೊರೆತ ಆದರ, ಆತ್ಮೀಯತೆ, ಸ್ವಾಗತ, ಆತಿಥ್ಯ ತಮಿಳು ಜನರ ಪ್ರೀತಿ ನಿಮಗೆ ದೊರೆತ ಬಗ್ಗೆ ಕೂಡಾ ದೇಶಕ್ಕೆ ನೀವು ತಿಳಿಯಪಡಿಸಿ. ಬರೆಯುತ್ತೀರಲ್ಲವೇ ?
ವಿಶಾಖಾ : ಖಂಡಿತಾ ಸರ್ !
ಪ್ರಧಾನಮಂತ್ರಿ : ನಿಮಗೆ ನನ್ನ ಅನೇಕಾನೇಕ ಶುಭ ಹಾರೈಕೆಗಳು ಮತ್ತು ಅನೇಕಾನೇಕ ಧನ್ಯವಾದ.
ವಿಶಾಖಾ : ಧನ್ಯವಾದ ಸರ್. ನಮಸ್ಕಾರ
ಗ್ಯಾಮರ್ ಮತ್ತು ವಿಶಾಖಾ ನಿಮಗೆ ನನ್ನ ಶುಭಹಾರೈಕೆಗಳು. ಯುವ ಸಂಗಮ್ ನಲ್ಲಿ ನೀವು ಕಲಿತ ವಿಷಯಗಳು ಜೀವನಪೂರ್ತಿ ನಿಮ್ಮೊಂದಿಗೆ ಇರಲಿ. ಇದು ನಿಮಗೆಲ್ಲರಿಗೂ ನನ್ನ ಶುಭ ಹಾರೈಕೆ.
ಸ್ನೇಹಿತರೇ, ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿ ಅಡಗಿದೆ. ನಮ್ಮ ದೇಶದಲ್ಲಿ ನೋಡಲು ಬಹಳಷ್ಟಿದೆ. ಇದನ್ನು ಮನಗಂಡ ಶಿಕ್ಷಣ ಸಚಿವಾಲಯವು, ಯುವ ಸಂಗಮ್ ಹೆಸರಿನಲ್ಲಿ ಒಂದು ಅತ್ಯುತ್ತಮ ಉಪಕ್ರಮ ಕೈಗೊಂಡಿದೆ. ಜನರಿಂದ ಜನರಿಗೆ ಸಂಪರ್ಕ ಹೆಚ್ಚಿಸುವುದರೊಂದಿಗೆ ದೇಶದ ಯುವಜನತೆಗೆ ಪರಸ್ಪರ ಬೆರೆಯುವ ಅವಕಾಶ ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಬೇರೆ ಬೇರೆ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಇದರೊಂದಿಗೆ ಜೋಡಣೆ ಮಾಡಲಾಗಿದೆ. ‘ಯುವಸಂಗಮ್’ ನಲ್ಲಿ ಯುವಜನತೆ ಬೇರೆ ರಾಜ್ಯಗಳ ನಗರ ಮತ್ತು ಗ್ರಾಮಗಳಿಗೆ ಹೋಗುತ್ತಾರೆ, ಅವರಿಗೆ ಬೇರೆ ಬೇರೆ ರೀತಿಯ ಜನರೊಂದಿಗೆ ಬೆರೆಯುವ ಅವಕಾಶ ದೊರೆಯುತ್ತದೆ. ಯುವಸಂಗಮ್ ನ ಮೊದಲ ಸುತ್ತಿನಲ್ಲಿ ಸುಮಾರು 1200 ಮಂದಿ ಯುವಜನತೆ ದೇಶದ 22 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಇದರ ಭಾಗವಾಗುವ ಯುವಜನತೆ, ಜೀವನಪೂರ್ತಿ ತಮ್ಮ ಹೃದಯದಲ್ಲಿ ಉಳಿಯುವಂತಹ ಉತ್ತಮ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದಾರೆ. ಅನೇಕ ದೊಡ್ಡ ಕಂಪೆನಿಗಳ ಸಿಇಒಗಳು, ವ್ಯಾಪಾರ ಮುಖಂಡರು ಬ್ಯಾಗ್ ಪ್ಯಾಕರ್ ಗಳಂತೆ ಭಾರತದಲ್ಲಿ ಸಮಯ ಕಳೆದಿರುವುದನ್ನು ನಾವು ನೋಡಿದ್ದೇವೆ. ನಾನು ಬೇರೆ ದೇಶಗಳ ಮುಖಂಡರನ್ನು ಭೇಟಿ ಮಾಡಿದಾಗ, ತಾವು ತಮ್ಮ ಯೌವನಾವಸ್ಥೆಯಲ್ಲಿ ಭಾರತಕ್ಕೆ ಪ್ರವಾಸ ಬಂದು ತಿರುಗಾಡಿದ್ದಾಗಿ ಅವರು ನನಗೆ ಹೇಳುತ್ತಾರೆ. ನಮ್ಮ ಭಾರತ ದೇಶದಲ್ಲಿ ತಿಳಿದುಕೊಳ್ಳುವ ಮತ್ತು ನೋಡಬೇಕಾದ ಎಷ್ಟೊಂದು ವಿಷಯಗಳು ಮತ್ತು ಸ್ಥಳಗಳಿವೆ ಎಂದರೆ ಪ್ರತಿಬಾರಿಯೂ ನಿಮ್ಮ ಕುತೂಹಲ ಹೆಚ್ಚುತ್ತಲೇ ಇರುತ್ತದೆ. ಈ ರೋಮಾಂಚನಕಾರಿ ಅನುಭವಗಳನ್ನು ತಿಳಿದ ನಂತರ ನೀವು ಕೂಡಾ ದೇಶದ ಬೇರೆ ಬೇರೆ ಭಾಗಗಳ ಪ್ರವಾಸ ಮಾಡುವುದಕ್ಕೆ ಪ್ರೇರಿತರಾಗುತ್ತೀರಿ ಎಂಬ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ ನಾನು ಜಪಾನ್ ದೇಶದ ಹಿರೋಷಿಮಾದಲ್ಲಿ ಇದ್ದೆ. ಅಲ್ಲಿ ನನಗೆ Hiroshima Peace Memorial museum ಗೆ ಭೇಟಿ ನೀಡುವ ಅವಕಾಶ ದೊರೆಯಿತು. ಇದೊಂದು ಭಾವನಾತ್ಮಕ ಅನುಭವವಾಗಿತ್ತು. ನಾವು ನಮ್ಮ ಇತಿಹಾಸದ ನೆನಪುಗಳನ್ನು ರಕ್ಷಿಸಿ ಇರಿಸಿದಾಗ, ಮುಂಬರುವ ಪೀಳಿಗೆಗೆ ಅದು ಬಹಳ ಸಹಾಯವಾಗುತ್ತದೆ. ಕೆಲವೊಮ್ಮೆ ನಮಗೆ ಸಂಗ್ರಹಾಲಯದಲ್ಲಿ ಹೊಸ ಪಾಠ ದೊರೆತರೆ, ಕೆಲವೊಮ್ಮೆ ನಮಗೆ ಕಲಿಯಲು ಬಹಳಷ್ಟು ವಿಚಾರಗಳು ದೊರೆಯುತ್ತವೆ. ಕೆಲವೇ ದಿನಗಳ ಹಿಂದೆ ಭಾರತದಲ್ಲಿ International Museum Expo ಕೂಡಾ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಪಂಚದ 1200 ಕ್ಕೂ ಅಧಿಕ ಸಂಗ್ರಹಾಲಯಗಳ ವಿಶೇಷತೆಗಳನ್ನು ಪ್ರದರ್ಶಿಸಲಾಗಿತ್ತು. ಇಲ್ಲಿ ನಮ್ಮ ಭಾರತದಲ್ಲಿ, ನಮ್ಮ ಭೂತಕಾಲಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರದರ್ಶಿಸುವಂತಹ, ಬೇರೆ ಬೇರೆ ರೀತಿಯ ಸಂಗ್ರಹಾಲಯಗಳಿವೆ, ಗುರುಗ್ರಾಮ್ ನಲ್ಲಿ - Museo Camera ಎನ್ನುವ ವಿಶಿಷ್ಠ ಸಂಗ್ರಹಾಲಯವಿದೆ, ಇದರಲ್ಲಿ 1860 ರ ನಂತರದ ಸುಮಾರು 8 ಸಾವಿರಕ್ಕೂ ಅಧಿಕ ಕ್ಯಾಮೆರಾಗಳ ಸಂಗ್ರಹವಿದೆ. ತಮಿಳುನಾಡಿನ Museum of Possibilities ಅನ್ನು ನಮ್ಮ ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು, ವಿನ್ಯಾಸ ಮಾಡಲಾಗಿದೆ. ಮುಂಬಯಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಾಸ್ತು ಸಂಗ್ರಹಾಲಯದಲ್ಲಿ 70 ಸಾವಿರಕ್ಕೂ ಅಧಿಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಇರಿಸಲಾಗಿದೆ. 2010 ರಲ್ಲಿ ಸ್ಥಾಪನೆಯಾದ Indian Memory Project ಒಂದು ರೀತಿಯಲ್ಲಿ Online museum ಆಗಿದೆ. ಪ್ರಪಂಚಾದ್ಯಂತ ಕಳುಹಿಸಲಾದ ಚಿತ್ರಗಳು ಮತ್ತು ಕತೆಗಳ ಮೂಲಕ ಭಾರತದ ಭವ್ಯ ಇತಿಹಾಸದ ಕೊಂಡಿಗಳನ್ನು ಸಂಪರ್ಕಿಸುವಲ್ಲಿ ಇದು ತೊಡಗಿಸಿಕೊಂಡಿದೆ. ವಿಭಜನೆಯ ಭೀಕರತೆಗೆ ಸಂಬಂಧಿಸಿದ ನೆನಪುಗಳನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನೂ ಮಾಡಲಾಗಿದೆ. ಕಳೆದ ವರ್ಷಗಳಲ್ಲಿ ಭಾರತದಲ್ಲಿ ಹೊಸ ಹೊಸ ರೀತಿಯ ಸಂಗ್ರಹಾಲಯಗಳು ಸ್ಥಾಪನೆಯಾಗಿರುವುದನ್ನು ನಾವು ನೋಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸೋದರ ಸೋದರಿಯರ ಕೊಡುಗೆಯನ್ನು ಸ್ಮರಣಾರ್ಥ 10 ಹೊಸ ಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ. ಕೊಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿರುವ ವಿಪ್ಲವ ಭಾರತ ಗ್ಯಾಲರಿಯೇ ಆಗಿರಲಿ ಅಥವಾ ಜಲಿಯನ್ ವಾಲಾ ಬಾಗ್ ಸ್ಮಾರಕಗಳ ಪುನರುಜ್ಜೀವನವೇ ಇರಲಿ, ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳಿಗೆ ಸಮರ್ಪಿಸಲಾದ ಪಿಎಂ ಮ್ಯೂಸಿಯಂ ಕೂಡಾ ಇಂದು ದೆಹಲಿಯ ಶೋಭೆಯನ್ನು ಹೆಚ್ಚಿಸುತ್ತಿದೆ. ದೆಹಲಿಯಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕ, (ನ್ಯಾಷನಲ್ ವಾರ್ ಮೆಮೋರಿಯಲ್ ) ಮತ್ತು ಪೊಲೀಸ್ ಸ್ಮಾರಕ (ಪೊಲೀಸ್ ಮೆಮೋರಿಯಲ್) ನಲ್ಲಿ ಪ್ರತಿದಿನ ಅನೇಕರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಬರುತ್ತಾರೆ. ಐತಿಹಾಸಿಕ ದಂಡಿ ಸತ್ಯಾಗ್ರಹಕ್ಕೆ ಸಮರ್ಪಿಸಲಾದ ದಂಡಿ ಸ್ಮಾರಕ ಅಥವಾ Statue of Unity Museum ಆಗಿರಲಿ. ಸರಿ ನಾನು ಇಲ್ಲಿಗೆ ನಿಲ್ಲಿಸಬೇಕಾಗುತ್ತದೆ ಏಕೆಂದರೆ ದೇಶಾದ್ಯಂತ ಇರುವ ಸಂಗ್ರಹಾಲಯಗಳ ಪಟ್ಟಿ ಬಹಳ ದೊಡ್ಡದಿದೆ ಮತ್ತು ಮೊದಲ ಬಾರಿಗೆ ದೇಶದಲ್ಲಿ ಎಲ್ಲಾ ಸಂಗ್ರಹಾಲಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಕಂಪೈಲ್ ಕೂಡಾ ಮಾಡಲಾಗಿದೆ. ಮ್ಯೂಸಿಯಂ ಯಾವ ವಿಷಯದ ಮೇಲೆ ಆಧರಿತವಾಗಿದೆ, ಅಲ್ಲಿ ಯಾವ ರೀತಿಯ ವಸ್ತುಗಳನ್ನು ಇರಿಸಲಾಗಿದೆ, ಅಲ್ಲಿನ ಸಂಪರ್ಕ ವಿವರಗಳೇನು – ಇವೆಲ್ಲವನ್ನೂ ಒಂದು ಆನ್ಲೈನ್ ಡೈರೆಕ್ಟರಿಯಲ್ಲಿ ಅಡಕಗೊಳಿಸಲಾಗಿದೆ. ನಿಮಗೆ ಅವಕಾಶ ದೊರೆತಾಗ, ದೇಶದ ಈ ಸಂಗ್ರಹಾಲಯಗಳನ್ನು ನೋಡಲು ನೀವು ಖಂಡಿತವಾಗಿಯೂ ಹೋಗಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿಯಾಗಿದೆ. ನೀವು ಅಲ್ಲಿನ ಆಕರ್ಷಕ ಚಿತ್ರಗಳನ್ನು #(Hashtag) Museum Memories ನಲ್ಲಿ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇದರಿಂದ ನಮ್ಮ ವೈಭವೋಪೇತ ಸಂಸ್ಕೃತಿಯೊಂದಿಗೆ ನಮ್ಮ ಸಂಪರ್ಕ ಮತ್ತಷ್ಟು ಬಲಿಷ್ಠವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ಒಂದು ಹೇಳಿಕೆಯನ್ನು ಅನೇಕ ಬಾರಿ ಕೇಳಿರಬಹುದು, ಆಗಿಂದಾಗ್ಗೆ ಕೇಳಿರಬಹುದು, ಅದೆಂದರೆ – ನೀರಿಲ್ಲದೇ ಎಲ್ಲವೂ ಶೂನ್ಯ . ನೀರಿಲ್ಲದೇ ಜೀವನದಲ್ಲಿ ಬಿಕ್ಕಟ್ಟಂತೂ ಇದ್ದೇ ಇರುತ್ತದೆ ಮಾತ್ರವಲ್ಲದೇ ವ್ಯಕ್ತಿ ಮತ್ತು ದೇಶದ ಅಭಿವೃದ್ಧಿಯೂ ನಿಂತು ಹೋಗುತ್ತದೆ. ಭವಿಷ್ಯದ ಈ ಸವಾಲನ್ನು ನೋಡಿ, ಇಂದು ದೇಶದಲ್ಲಿ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಅಮೃತ ಸರೋವರ ಏತಕ್ಕಾಗಿ ವಿಶೇಷವೆಂದರೆ, ಇವುಗಳನ್ನು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಜನರ ಅಮೃತ ಪ್ರಯತ್ನವಿದೆ. ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ.
ಸ್ನೇಹಿತರೇ, ನಾವು ಪ್ರತಿ ಬೇಸಿಗೆಯಲ್ಲೂ ಇದೇ ರೀತಿ ನೀರಿಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಈ ಬಾರಿ ಕೂಡಾ ನಾವು ಈ ವಿಷಯ ತೆಗೆದುಕೊಳ್ಳೋಣ, ಆದರೆ ಈ ಬಾರಿ ನಾವು ಜಲ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ನವೋದ್ಯಮಗಳ ಬಗ್ಗೆ ಮಾತನಾಡೋಣ. FluxGen ಎಂಬ ಒಂದು ನವೋದ್ಯಮವಿದೆ. ಈ ಸ್ಟಾರ್ಟ್ ಅಪ್ ಐ ಒಟಿ ಹೊಂದಿದ ತಂತ್ರಜ್ಞಾನದ ಮೂಲಕ ಜಲ ನಿರ್ವಹಣೆಯ ಆಯ್ಕೆಗಳನ್ನು ಒದಗಿಸುತ್ತದೆ. ಈ ತಂತ್ರಜ್ಞಾನ ನೀರಿನ ಬಳಕೆಯ ಮಾದರಿಗಳನ್ನು ತಿಳಿಸುತ್ತದೆ ಮತ್ತು ನೀರಿನ ಪರಿಣಾಮಕಾರಿ ಉಪಯೋಗದಲ್ಲಿ ಸಹಾಯ ಮಾಡುತ್ತದೆ. LivNSense ಎನ್ನುವ ಹೆಸರಿನ ಮತ್ತೊಂದು ಸ್ಟಾರ್ಟ್ ಅಪ್ ಇದೆ. ಇದೊಂದು ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ಆಧರಿತ ವೇದಿಕೆಯಾಗಿದೆ. ಇದರ ನೆರವಿನಿಂದ water distribution ಮೇಲೆ ಪರಿಣಾಮಕಾರಿಯಾಗಿ ನಿಗಾ ವಹಿಸಲಾಗುತ್ತದೆ. ಎಲ್ಲಿ ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂದು ಕೂಡಾ ತಿಳಿದುಕೊಳ್ಳಬಹುದಾಗಿದೆ. ಮತ್ತೊಂದು ಸ್ಟಾರ್ಟ್ ಅಪ್ ಇದೆ ಅದರ ಹೆಸರು ‘ಕುಂಭೀ ಕಾಗಜ್(Kumbhi Kagaz)’. ಈ ಕುಂಭಿ ಕಾಗಜ್ ನಲ್ಲಿ ಎಂತಹ ವಿಶೇಷತೆಯಿದೆ ಎಂದರೆ ಖಂಡಿತವಾಗಿಯೂ ಅದು ನಿಮಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ‘ಕುಂಭೀ ಕಾಗಜ್’ (Kumbhi Kagaz) ಸ್ಟಾರ್ಟ್ ಅಪ್ ಒಂದು ವಿಶೇಷ ಕೆಲಸ ಪ್ರಾರಂಭಿಸಿದೆ. ಇವರು ಜಲಕುಂಭಿ ಸಸ್ಯದಿಂದ ಕಾಗದ ತಯಾರಿಸುವ ಕೆಲಸ ಮಾಡುತ್ತಿದ್ದಾರೆ ಅಂದರೆ ಜಲ ಸಂಪನ್ಮೂಲಕ್ಕೆ ಸಮಸ್ಯೆ ಎನಿಸಿದ್ದ ಈ ಜಲಸಸ್ಯದಿಂದ ಕಾಗದ ತಯಾರಿಸಲು ಆರಂಭಿಸಿದ್ದಾರೆ.
ಸ್ನೇಹಿತರೇ, ಅನೇಕ ಯುವಕರು ಆವಿಷ್ಕಾರ ಮತ್ತು ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತಿದ್ದರೆ ಕೆಲವರು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಇಂತಹವರಲ್ಲಿ ಕೆಲವರೆಂದರೆ ಛತ್ತೀಸ್ ಗಢದ ಬಾಲೋದ್ ಜಿಲ್ಲೆಯ ಯುವಕರು. ಇಲ್ಲಿನ ಯುವಜನತೆ ನೀರನ್ನು ಸಂರಕ್ಷಿಸುವುದಕ್ಕಾಗಿ ಒಂದು ಅಭಿಯಾನ ಆರಂಭಿಸಿದ್ದಾರೆ. ಇವರು ಮನೆ ಮನೆಗೆ ತೆರಳಿ, ಜನರಿಗೆ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಾರೆ. ವಿವಾಹದಂತಹ ಸಮಾರಂಭಗಳಿದ್ದಲ್ಲಿ, ಯುವಕರ ಈ ಗುಂಪು ಅಲ್ಲಿಗೆ ಹೋಗಿ ನೀರಿನ ದುರ್ಬಳಕೆಯನ್ನು ಹೇಗೆ ತಡೆಯಬಹುದು ಎಂಬ ಕುರಿತು ಅರಿವು ಮೂಡಿಸುತ್ತಾರೆ. ನೀರಿನ ಸದ್ಬಳಕೆಗೆ ಸಂಬಂಧಿಸಿದ ಒಂದು ಪ್ರೇರಣಾತ್ಮಕ ಪ್ರಯತ್ನ ಜಾರ್ಖಂಡ್ ನ ಖೂಂಟೀ ಜಿಲ್ಲೆಯಲ್ಲಿಯೂ ಕೂಡಾ ನಡೆಯುತ್ತಿದೆ. ಖೂಂಟಿಯ ಜನರು ನೀರಿನ ಬಿಕ್ಕಟ್ಟಿನಿಂದ ಹೊರಬರಲು ಬೋರಿ ಅಣೆಕಟ್ಟಿನ ಮಾರ್ಗ ಕಂಡುಕೊಂಡಿದ್ದಾರೆ. ಬೋರಿ ಅಣೆಕಟ್ಟಿನಿಂದ ನೀರು ಸಂಗ್ರಹವಾಗುವುದರಿಂದ ಇಲ್ಲಿ ಹಸಿರು-ತರಕಾರಿ ಕೂಡಾ ಬೆಳೆಯಲಾರಂಭಿಸಿವೆ. ಇದರಿಂದ ಜನರ ವರಮಾನವೂ ಹೆಚ್ಚಾಗುತ್ತಿದೆ ಮತ್ತು ಕ್ಷೇತ್ರದ ಅಗತ್ಯತೆಗಳೂ ಈಡೇರುತ್ತಿವೆ. ಸಾರ್ವಜನಿಕರ ಸಹಭಾಗಿತ್ವದಿಂದ ಯಾವುದೇ ಪ್ರಯತ್ನ ಯಾವರೀತಿ ಬದಲಾವಣೆಗಳನ್ನು ತರುತ್ತದೆ ಎನ್ನುವುದಕ್ಕೆ ಖೂಂಟಿ ಒಂದು ಆಕರ್ಷಕ ಉದಾಹರಣೆಯಾಗಿದೆ. ಇಲ್ಲಿನ ಜನರ ಈ ಪ್ರಯತ್ನಕ್ಕಾಗಿ ನಾನು ಅವರಿಗೆ ಅನೇಕಾನೇಕ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, 1965 ರ ಯುದ್ಧದ ಸಮಯದಲ್ಲಿ, ನಮ್ಮ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ನ ಘೋಷಣೆ ಮಾಡಿದರು. ನಂತರ ಅಟಲ್ ಜೀ ಇದಕ್ಕೆ ಜೈ ವಿಜ್ಞಾನವನ್ನೂ ಸೇರಿಸಿದ್ದರು. ಕೆಲವು ವರ್ಷಗಳ ಹಿಂದೆ ದೇಶದ ವಿಜ್ಞಾನಿಗಳೊಂದಿಗೆ ಮಾತನಾಡುತ್ತಾ ನಾನು, ಜೈ ಅನುಸಂಧಾನ್ ಬಗ್ಗೆ ಕೂಡಾ ಮಾತನಾಡಿದ್ದೆ. ‘ಮನದ ಮಾತಿನಲ್ಲಿ’ ನಾನು ಇಂದು ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನಸಂಧಾನ್ ಈ ನಾಲ್ಕೂ ಅಂಶಗಳ ಪ್ರತಿಬಿಂಬವಾಗಿರುವಂತಹ ಓರ್ವ ವ್ಯಕ್ತಿಯ ಬಗ್ಗೆ, ಒಂದು ಸಂಸ್ಥೆಯ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ. ಮಹಾರಾಷ್ಟ್ರದ ಶ್ರೀ ಶಿವಾಜಿ ಶಾಮರಾವ್ ಡೋಲೇ ಅವರೇ ಈ ಸಜ್ಜನರು. ಶಿವಾಜಿ ಡೋಲೆ ಅವರು ನಾಸಿಕ್ ಜಿಲ್ಲೆಯ ಒಂದು ಸಣ್ಣ ಗ್ರಾಮದ ನಿವಾಸಿಗಳು. ಅವರು ಬಡ ಬುಡಕಟ್ಟು ರೈತ ಕುಟುಂಬಕ್ಕೆ ಸೇರಿದವರು ಮತ್ತು ಓರ್ವ ಮಾಜಿ ಸೈನಿಕರು ಕೂಡಾ. ಸೈನ್ಯದಲ್ಲಿರುವಾಗ ಅವರು ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ನಿವೃತ್ತಿ ಹೊಂದಿದ ನಂತರ ಅವರು ಹೊಸದನ್ನೇನಾದರೂ ಕಲಿಯಬೇಕೆಂದು ನಿರ್ಧರಿಸಿದರು. ಮತ್ತು ಕೃಷಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಅಂದರೆ ಅವರು ಜೈ ಜವಾನ್ ನಿಂದ ಜೈ ಕಿಸಾನ್ ನಿಟ್ಟಿನಲ್ಲಿ ಸಾಗಿದರು. ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ತಾವು ಹೆಚ್ಚು ಹೆಚ್ಚು ಕೊಡುಗೆ ನೀಡಬಹುದು ಎನ್ನುವುದು ಈಗ ಅವರ ಪ್ರತಿ ಕ್ಷಣದ ಪ್ರಯತ್ನವಾಗಿದೆ. ತಮ್ಮ ಈ ಅಭಿಯಾನದಲ್ಲಿ ಶಿವಾಜಿ ಡೋಲೆ ಅವರು 20 ಜನರ ಒಂದು ಸಣ್ಣ ತಂಡ ಕಟ್ಟಿದರು ಮತ್ತು ಕೆಲವು ಮಾಜಿ ಸೈನಿಕರನ್ನೂ ಇದರಲ್ಲಿ ಸೇರಿಸಿಕೊಂಡರು. ನಂತರ ಅವರ ಈ ತಂಡವು Venkateshwara Co-Operative Power & Agro Processing Limited ಹೆಸರಿನ ಒಂದು ಸಹಕಾರಿ ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡಿತು. ಈ ಸಹಕಾರಿ ಸಂಸ್ಥೆ ನಿಷ್ಕ್ರಿಯವಾಗಿತ್ತು, ಇದನ್ನು ಪುನಶ್ಚೇತನಗೊಳಿಸುವ ಹೊಣೆಯನ್ನು ಇವರು ಹೊತ್ತರು. ನೋಡುತ್ತಿದ್ದಂತೆಯೇ,ಇಂದು Venkateshwara Co-Operative ನ ವ್ಯಾಪ್ತಿ ಹಲವು ಜಿಲ್ಲೆಗಳಲ್ಲಿ ಹರಡಿದೆ. ಇಂದು ಈ ತಂಡ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರೊಂದಿಗೆ ಸುಮಾರು 18 ಸಾವಿರ ಜನರು ಸೇರಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ಮಾಜಿ ಯೋಧರಿದ್ದಾರೆ. ನಾಸಿಕ್ ನ ಮಾಲೇಗಾಂವ್ ನಲ್ಲಿ ಈ ತಂಡದ ಸದಸ್ಯರು 500 ಎಕರೆಗಿಂತ ಹೆಚ್ಚಿನ ಭೂಮಿಯಲ್ಲಿ Agro Farming ಮಾಡುತ್ತಿದ್ದಾರೆ. ಈ ತಂಡ ಜಲ ಸಂರಕ್ಷಣೆಗಾಗಿ ಕೂಡಾ ಅನೇಕ ಕೊಳಗಳ ನಿರ್ಮಾಣದಲ್ಲಿ ತೊಡಗಿದೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಮತ್ತು ಹೈನುಗಾರಿಕೆಯನ್ನೂ ಆರಂಭಿಸಿದ್ದಾರೆ. ಈಗ ಇವರು ಬೆಳೆಸಿದ ದ್ರಾಕ್ಷಿಯನ್ನು ಯೂರೋಪ್ ಗೆ ಕೂಡಾ ರಫ್ತು ಮಾಡಲಾಗುತ್ತಿದೆ. ಈ ತಂಡದ ಎರಡು ವಿಶೇಷತೆಗಳಿವೆ. ಇದು ನನ್ನ ಗಮನವನ್ನು ಸೆಳೆಯಿತು. ಅದೆಂದರೆ, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್. ಈ ತಂಡದ ಸದಸ್ಯರು ತಂತ್ರಜ್ಞಾನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಎರಡನೇ ವಿಶೇಷತೆಯೆಂದರೆ, ಇವರು ರಫ್ತಿಗಾಗಿ ಅಗತ್ಯವಿರುವ ಅನೇಕ ಪ್ರಮಾಣೀಕರಣಗಳ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ‘ಸಹಕಾರದಿಂದ ಸಮೃದ್ಧಿ’ ಭಾವನೆಯೊಂದಿಗೆ ಕೆಲಸ ಮಾಡುತ್ತಿರುವ ಈ ತಂಡವನ್ನು ನಾನು ಪ್ರಶಂಸಿಸುತ್ತೇನೆ. ಈ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯ ಜನರು ಸಬಲೀಕರಣಗೊಳ್ಳುವುದು ಮಾತ್ರವಲ್ಲದೇ ಜೀವನೋಪಾಯದ ಅನೇಕ ಮಾರ್ಗಗಳನ್ನೂ ಕೂಡಾ ಕಂಡುಕೊಳ್ಳಲಾಗಿದೆ. ಈ ಪ್ರಯತ್ನ ಮನದ ಮಾತಿನ ಶ್ರೋತೃಗಳಿಗೆ ಸ್ಫೂರ್ತಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 28 ರಂದು, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ ಕರ್ ಅವರ ಜಯಂತಿಯೂ ಆಗಿದೆ. ಅವರ ತ್ಯಾಗ, ಸಾಹಸ ಮತ್ತು ಸಂಕಲ್ಪ ಶಕ್ತಿಯ ಗಾಥೆಗಳು ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ನಾನು ಅಂಡಮಾನ್ ನಲ್ಲಿ, ವೀರ್ ಸಾವರ್ಕರ್ ಅವರು ಕಾಲಾಪಾನಿ ಶಿಕ್ಷೆ ಅನುಭವಿಸಿದ ಆ ಕೋಣೆಗೆ ಹೋಗಿದ್ದ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ. ವೀರ ಸಾವರ್ಕರ್ ಅವರ ವ್ಯಕ್ತಿತ್ವವು ದೃಢತೆ ಮತ್ತು ಉದಾತ್ತತೆಯ ಸಮ್ಮಿಲನವಾಗಿತ್ತು. ಅವರ ನಿರ್ಭೀತ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಯನ್ನು ಒಪ್ಪಿಕೊಳ್ಳಲಿಲ್ಲ. ಸ್ವಾತಂತ್ರ್ಯ ಚಳುವಳಿ ಮಾತ್ರವಲ್ಲ, ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೂಡಾ ವೀರ್ ಸಾವರ್ಕರ್ ಮಾಡಿರುವ ಕೆಲಸಗಳು ಇಂದಿಗೂ ಸ್ಮರಣೀಯ.
ಸ್ನೇಹಿತರೇ, ಕೆಲವು ದಿನಗಳ ಬಳಿಕ ಜೂನ್ 4 ರಂದು ಸಂತ ಕಬೀರ್ ದಾಸರ ಜಯಂತಿ ಬರಲಿದೆ. ಕಬೀರ್ ದಾಸರು ನಮಗೆ ತೋರಿದ ಹಾದಿ ಇಂದಿಗೂ ಪ್ರಸ್ತುತವಾಗಿದೆ. ಕಬೀರ್ ದಾಸರು ಹೇಳುತ್ತಿದ್ದರು,
“ಕಬೀರಾ ಕುಂವಾ ಏಕ್ ಹೈ, ಪಾನೀ ಭರೇ ಅನೇಕ್ |
ಬರ್ತನ್ ಮೇ ಹೀ ಭೇದ್ ಹೈ, ಪಾನೀ ಸಬ್ ಮೇ ಏಕ್ ಹೈ|”
ಅಂದರೆ, ಬಾವಿಯಲ್ಲಿ ಬೇರೆ ಬೇರೆ ರೀತಿಯ ಜನರು ನೀರು ತುಂಬಿಕೊಳ್ಳಲು ಬರುತ್ತಾರೆ, ಆದರೆ ಬಾವಿ ಯಾವುದೇ ತಾರತಮ್ಯ ಮಾಡುವುದಿಲ್ಲ, ನೀರು ಎಲ್ಲಾ ಪಾತ್ರೆಯಲ್ಲೂ ಒಂದೇ ಆಗಿರುತ್ತದೆ. ಸಮಾಜವನ್ನು ವಿಭಜಿಸುವ ಪ್ರತಿಯೊಂದು ಅನಿಷ್ಠ ಪದ್ಧತಿಯನ್ನೂ ಕಬೀರರು ವಿರೋಧಿಸಿದರು, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಇಂದು ದೇಶ ಅಭಿವೃದ್ಧಿ ಹೊಂದುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿರುವಾಗ, ನಾವು ಸಂತ ಕಬೀರರಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾ, ಸಮಾಜವನ್ನು ಸಶಕ್ತವಾಗಿಸುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾನು ನಿಮ್ಮೊಂದಿಗೆ ರಾಜಕೀಯ ಮತ್ತು ಚಲನಚಿತ್ರ ಪ್ರಪಂಚದಲ್ಲಿ ತನ್ನ ಅದ್ಭುತ ಪ್ರತಿಭೆಯಿಂದ ಛಾಪು ಮೂಡಿಸಿದಂತಹ ಓರ್ವ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ಬಯಸುತ್ತೇನೆ. ಈ ಮಹಾನ್ ವ್ಯಕ್ತಿಯ ಹೆಸರು ಎನ್. ಟಿ. ರಾಮರಾವ್. ನಾವೆಲ್ಲರೂ ಅವರನ್ನು ಎನ್ ಟಿ ಆರ್ ಎಂಬ ಹೆಸರಿನಿಂದ ಅರಿತಿದ್ದೇವೆ. ಇಂದು ಎನ್ ಟಿ ಆರ್ ಅವರ ನೂರನೇ ಜಯಂತಿ. ತಮ್ಮ ಬಹುಮುಖ ಪ್ರತಿಭೆಯಿಂದಾಗಿ ಅವರು ಕೇವಲ ತೆಲುಗು ಸಿನಿಮಾ ಜಗತ್ತಿನ ಮಹಾನಾಯಕರಾಗಿದ್ದು ಮಾತ್ರವಲ್ಲದೇ, ಕೋಟ್ಯಂತರ ಜನರ ಮನವನ್ನೂ ಗೆದ್ದಿದ್ದರು. ಅವರು 300 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆಂದು ನಿಮಗೆ ಗೊತ್ತೇ? ಕೆಲವು ಐತಿಹಾಸಿಕ ಚಲನಚಿತ್ರಗಳಲ್ಲಿ ಅವರು ತಮ್ಮ ಮನೋಜ್ಞ ಅಭಿನಯದಿಂದ ಆ ಪಾತ್ರಗಳಿಗೆ ಜೀವ ತುಂಬಿ ಜೀವಂತಗೊಳಿಸಿದ್ದಾರೆ. ಕೃಷ್ಣ, ರಾಮ ಇತ್ಯಾದಿ ಪಾತ್ರಗಳಲ್ಲಿ ಎನ್ ಟಿ ಆರ್ ಅವರ ನಟನೆಯನ್ನು ಜನರು ಎಷ್ಟೊಂದು ಇಷ್ಟ ಪಡುತ್ತಿದ್ದರೆಂದರೆ ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ಎನ್ ಟಿ ಆರ್ ಅವರು ಚಿತ್ರ ಜಗತ್ತು ಮಾತ್ರವಲ್ಲದೇ ರಾಜಕೀಯದಲ್ಲಿ ಕೂಡಾ ತಮ್ಮದೇ ಆದ ಗುರುತು ಮೂಡಿಸಿದ್ದರು. ಇಲ್ಲಿ ಕೂಡಾ ಅವರಿಗೆ ಜನರಿಂದ ಸಾಕಷ್ಟು ಪ್ರೀತಿ ಮತ್ತು ಆಶೀರ್ವಾದ ದೊರೆಯಿತು. ದೇಶದಲ್ಲಿ, ವಿಶ್ವದಲ್ಲಿ ಲಕ್ಷಾಂತರ ಜನರ ಹೃದಯ ಸಿಂಹಾಸನದಲ್ಲಿ ಇಂದಿಗೂ ವಿರಾಜಮಾನರಾಗಿರುವ ಎನ್ ಟಿ ರಾಮಾರಾವ್ ಅವರಿಗೆ ನನ್ನ ವಿನಯಪೂರ್ವಕ ನಮನಗಳನ್ನು ಅರ್ಪಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನದ ಮಾತು ಇಲ್ಲಿಗೆ ಮುಗಿಸುತ್ತಿದ್ದೇನೆ. ಮುಂದಿನ ಬಾರಿ ಕೆಲವು ಹೊಸ ವಿಷಯಗಳೊಂದಿಗೆ ನಿಮ್ಮ ನಡುವೆ ಬರುತ್ತೇನೆ. ಆ ವೇಳೆಗೆ ಕೆಲವು ಪ್ರದೇಶಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗಬಹುದು. ಕೆಲವು ಪ್ರದೇಶಗಳಲ್ಲಿ ಮಳೆಯೂ ಆರಂಭವಾಗಬಹುದು. ಪ್ರತಿಯೊಂದು ಋತುವಿನಲ್ಲೂ ನೀವು ನಿಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಜೂನ್ 21 ರಂದು ನಾವು ವಿಶ್ವ ಯೋಗ ದಿನ ಆಚರಿಸೋಣ. ಅದಕ್ಕಾಗಿ ಕೂಡಾ ದೇಶ ವಿದೇಶಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ನೀವು ಈ ಸಿದ್ಧತೆಗಳ ಬಗ್ಗೆ ಕೂಡಾ ನಮ್ಮ ಈ ಮನ್ ಕಿ ಬಾತ್ ನಲ್ಲಿ ಬರೆಯುತ್ತಿರಿ. ಬೇರಾವುದೇ ವಿಷಯ ಕುರಿತು ನಿಮಗೇನಾದರೂ ತಿಳಿದುಬಂದರೆ ಅದನ್ನು ಕೂಡಾ ನೀವು ನನಗೆ ತಿಳಿಯಪಡಿಸಿ. ಸಾಧ್ಯವಾದಷ್ಟು ಹೆಚ್ಚು ಸಲಹೆ ಸೂಚನೆಗಳನ್ನು ಮನ್ ಕಿ ಬಾತ್ ನಲ್ಲಿ ತೆಗೆದುಕೊಳ್ಳಬೇಕೆನ್ನುವುದು ನನ್ನ ಪ್ರಯತ್ನವಾಗಿದೆ. ನಿಮಗೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಧನ್ಯವಾದ. ಮುಂದಿನ ಬಾರಿ, ಮುಂದಿನ ತಿಂಗಳು ಪುನಃ ಭೇಟಿಯಾಗೋಣ. ಅಲ್ಲಿಯವರೆಗೂ ನನಗೆ ಅನುಮತಿ ಕೊಡಿ. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು 'ಮನದ ಮಾತಿನ' ನೂರನೇ ಸಂಚಿಕೆ. ನಿಮ್ಮೆಲ್ಲರಿಂದ ನನಗೆ ಸಾವಿರಾರು ಪತ್ರಗಳು, ಲಕ್ಷಗಟ್ಟಲೆ ಸಂದೇಶಗಳು ಬಂದಿವೆ ಮತ್ತು ನಾನು ಸಾಧ್ಯವಾದಷ್ಟು ಪತ್ರಗಳನ್ನು ಓದಲು, ಅವುಗಳನ್ನು ನೋಡಲು ಮತ್ತು ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ನಿಮ್ಮ ಪತ್ರಗಳನ್ನು ಓದುವಾಗ ಹಲವು ಬಾರಿ ನಾನು ಭಾವುಕನಾದೆ, ಭಾವೋದ್ವೇಗಕ್ಕೆ ಒಳಗಾದೆ, ಭಾವೋದ್ವೇಗದ ಹೊಳೆಯಲ್ಲಿ ತೇಲಿ ಹೋದೆ ಜೊತೆಗೆ ನನ್ನನ್ನೂ ನಿಯಂತ್ರಿಸಿಕೊಂಡೆ. 'ಮನದ ಮಾತಿನ' 100 ನೇ ಸಂಚಿಕೆಗಾಗಿ ನೀವು ನನ್ನನ್ನು ಅಭಿನಂದಿಸಿದ್ದೀರಿ, ಆದರೆ ನಾನು ಮನಃ ಪೂರ್ವಕವಾಗಿ ಹೇಳುತ್ತಿದ್ದೇನೆ, ವಾಸ್ತವವಾಗಿ, ನೀವೆಲ್ಲರೂ 'ಮನದ ಮಾತಿನ' ಶ್ರೋತೃಗಳು, ನಮ್ಮ ದೇಶವಾಸಿಗಳು, ಅಭಿನಂದನೆಗೆ ಅರ್ಹರಾಗಿದ್ದೀರಿ. 'ಮನದ ಮಾತು' ಕೋಟ್ಯಂತರ ಭಾರತೀಯರ 'ಮನದ ಮಾತಾಗಿದೆ', ಅದು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ.
ಸ್ನೇಹಿತರೇ, ಅಕ್ಟೋಬರ್ 3, 2014 ವಿಜಯ ದಶಮಿಯ ಹಬ್ಬದಂದು ನಾವೆಲ್ಲರೂ ಒಗ್ಗೂಡಿ ವಿಜಯ ದಶಮಿಯ ದಿನದಂದು 'ಮನದ ಮಾತಿನ' ಪಯಣವನ್ನು ಆರಂಭಿಸಿದ್ದೆವು. ವಿಜಯ ದಶಮಿ ಎಂದರೆ ದುಷ್ಟ ಮರ್ದನ ಶಿಷ್ಟ ರಕ್ಷಣೆಯ ವಿಜಯದ ಹಬ್ಬ. 'ಮನದ ಮಾತು' ದೇಶವಾಸಿಗಳ ಒಳ್ಳೆಯತನ ಮತ್ತು ಸಕಾರಾತ್ಮಕತೆಯ ಒಂದು ವಿಶಿಷ್ಟ ಹಬ್ಬವಾಗಿದೆ. ಎಂಥ ಹಬ್ಬ ಎಂದರೆ ಪ್ರತಿ ತಿಂಗಳು ಬರುವ ಹಬ್ಬವಿದು. ಅದಕ್ಕಾಗಿ ನಾವೆಲ್ಲ ಕಾತುರದಿಂದ ಕಾಯುತ್ತಿರುತ್ತೇವೆ. ನಾವು ಇದರಲ್ಲಿ ಸಕಾರಾತ್ಮಕತೆಯನ್ನು ಆಚರಿಸುತ್ತೇವೆ. ಜನರ ಸಹಭಾಗಿತ್ವವನ್ನು ಆಚರಿಸುತ್ತೇವೆ. ‘ಮನದ ಮಾತು’ಗೆ ಇಷ್ಟು ತಿಂಗಳುಗಳು ಇಷ್ಟು ವರ್ಷಗಳು ತುಂಬಿದೆ ಎಂದರೆ ಕೆಲವೊಮ್ಮೆ ನಂಬುವುದು ಕಷ್ಟವಾಗುತ್ತದೆ. ಪ್ರತಿಯೊಂದು ಸಂಚಿಕೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿತ್ತು. ಪ್ರತಿ ಬಾರಿ, ಹೊಸ ಉದಾಹರಣೆಗಳ ನಾವೀಣ್ಯತೆ, ಪ್ರತಿ ಬಾರಿಯೂ ದೇಶವಾಸಿಗಳ ಯಶಸ್ಸಿನ ಹೊಸ ಅಧ್ಯಾಯ ಇದರಲ್ಲಿ ಮಿಳಿತವಾಗಿತ್ತು. 'ಮನದ ಮಾತು' ನೊಂದಿಗೆ ದೇಶದ ಮೂಲೆ ಮೂಲೆಯ ಜನರು, ಎಲ್ಲಾ ವಯೋಮಾನದವರು ಸೇರಿಕೊಂಡರು. ಭೇಟಿ ಬಚಾವೋ ಭೇಟಿ ಪಢಾವೋ ಆಂದೋಲನವಾಗಲಿ, ಸ್ವಚ್ಛ ಭಾರತ ಆಂದೋಲನವಾಗಲಿ, ಖಾದಿ ಅಥವಾ ಪ್ರಕೃತಿ ಪ್ರೀತಿಯೇ ಆಗಿರಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಥವಾ ಅಮೃತ ಸರೋವರವೇ ಆಗಿರಲಿ, 'ಮನದ ಮಾತು' ಯಾವ ವಿಷಯವನ್ನು ಪ್ರಸ್ತಾಪಿಸಿತೊ, ಅದು ಜನಾಂದೋಲನವಾಗಿ ರೂಪುಗೊಂಡಿತು. ನೀವು ಜನರು ಅದನ್ನು ಸಾಧ್ಯವಾಗಿಸಿದ್ದೀರಿ. ನಾನು ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ‘ಮನದ ಮಾತು’ ಹಂಚಿಕೊಂಡಾಗ ಅದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಸ್ನೇಹಿತರೇ, 'ಮನದ ಮಾತು' ನನಗೆ ಇತರರ ಗುಣಗಳನ್ನು ಆರಾಧಿಸುವ ವೇದಿಕೆಯಂತಿದೆ. ನನಗೆ ಶ್ರೀ ಲಕ್ಷ್ಮಣರಾವ್ ಜಿ ಇನಾಮದಾರ್ ಎಂಬ ಒಬ್ಬ ಮಾರ್ಗದರ್ಶಕರಿದ್ದರು . ನಾವು ಅವರನ್ನು ವಕೀಲ್ ಸಾಹೇಬ್ ಎಂದು ಕರೆಯುತ್ತಿದ್ದೆವು. ನಾವು ಇತರರ ಗುಣಗಳನ್ನು ಮೆಚ್ಚಬೇಕು ಆರಾಧಿಸಬೇಕೆಂದು ಅವರು ಯಾವಾಗಲೂ ಹೇಳುತ್ತಿದ್ದರು. ನಿಮ್ಮ ಮುಂದೆ ಯಾರೇ ಇರಲಿ, ನಿಮ್ಮ ಜೊತೆಗಿರುವವರಾಗಿರಲಿ, ನಿಮ್ಮ ಎದುರಾಳಿಯಾಗಿರಲಿ, ಅವರ ಉತ್ತಮ ಗುಣಗಳನ್ನು ತಿಳಿದುಕೊಳ್ಳಲು ಮತ್ತು ಅವರಿಂದ ಕಲಿಯಲು ನಾವು ಪ್ರಯತ್ನಿಸಬೇಕು. ಅವರ ಈ ಮಾತು ನನಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ. 'ಮನದ ಮಾತು' ಇತರರ ಗುಣಗಳಿಂದ ಕಲಿಯಲು ಉತ್ತಮ ಮಾಧ್ಯಮವಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, ಈ ಕಾರ್ಯಕ್ರಮವು ನನ್ನನ್ನು ನಿಮ್ಮಿಂದ ದೂರ ಹೋಗದಂತೆ ನೋಡಿಕೊಂಡಿದೆ. ನನಗೆ ನೆನಪಿದೆ, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಜನಸಾಮಾನ್ಯರನ್ನು ಭೇಟಿಯಾಗುವುದು, ಸಂವಾದ ನಡೆಸುವುದು ಸಹಜವಾಗಿತ್ತು . ಮುಖ್ಯಮಂತ್ರಿಗಳ ಕೆಲಸ ಮತ್ತು ಅಧಿಕೃತ ಕಚೇರಿ ಹೀಗಿಯೇ ಇರುತ್ತದೆ, ಭೇಟಿಯಾಗುವ ಹಲವಾರು ಅವಕಾಶಗಳು ಲಭಿಸುತ್ತವೆ. ಆದರೆ 2014ರಲ್ಲಿ ದೆಹಲಿಗೆ ಬಂದ ನಂತರ ಇಲ್ಲಿನ ಜೀವನ ತುಂಬಾ ವಿಭಿನ್ನವಾಗಿದೆ ಎಂಬುದನ್ನು ಕಂಡುಕೊಂಡೆ. ಕೆಲಸದ ಸ್ವರೂಪವೇ ಬೇರೆ, ಜವಾಬ್ದಾರಿಯೇ ಬೇರೆ, ಸ್ಥಿತಿ ಮತ್ತು ಪರಿಸ್ಥಿತಿಗಳು ವಿಭಿನ್ನವಾಗಿದ್ದವು, ಭದ್ರತೆಯ ಅತಿರೇಕ, ಕಾಲಮಿತಿ ಎಲ್ಲವೂ ಹೇರಿದಂತಿತ್ತು. ಆರಂಭದ ದಿನಗಳಲ್ಲಿ, ಏನೋ ವಿಭಿನ್ನ ಭಾವನೆ, ಶೂನ್ಯ ಭಾವನೆ ತುಂಬಿತ್ತು. ಒಂದು ದಿನ ನನ್ನ ಸ್ವಂತ ದೇಶದ ಜನರನ್ನು ಸಂಪರ್ಕಿಸುವುದು ಕಷ್ಟಕರವೆನಿಸುವ ಸ್ಥಿತಿಯನ್ನು ಎದುರಿಸಲು ನಾನು ಐವತ್ತು ವರ್ಷಗಳ ಹಿಂದೆ ನನ್ನ ಮನೆಯನ್ನು ತೊರೆದಿರಲಿಲ್ಲ. ನನ್ನ ಸರ್ವಸ್ವವೂ ಆಗಿರುವ ದೇಶವಾಸಿಗಳಿಂದ ಬೇರ್ಪಟ್ಟು ಬದುಕಲು ಸಾಧ್ಯವಿರಲಿಲ್ಲ. ಈ ಸವಾಲನ್ನು ಎದುರಿಸಲು 'ಮನದ ಮಾತು' ನನಗೆ ಪರಿಹಾರವನ್ನು ನೀಡಿತು, ಸಾಮಾನ್ಯ ಜನರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವನ್ನು ಕಲ್ಪಿಸಿತು. ಅಲಂಕರಿಸಿದ ಹುದ್ದೆ ಮತ್ತು ಶಿಷ್ಟಾಚಾರ ಎಂಬುದು ವ್ಯವಸ್ಥೆಗೆ ಸೀಮಿತವಾಗಿ ಉಳಿಯಿತು ಮತ್ತು ಸಾರ್ವಜನಿಕ ಭಾವನೆಗಳು, ಕೋಟಿಗಟ್ಟಲೆ ಜನರೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದು ನನ್ನ ಪ್ರಪಂಚದ ಅವಿಭಾಜ್ಯ ಅಂಗವಾಗಿದೆ. ಪ್ರತಿ ತಿಂಗಳು ನಾನು ದೇಶದ ಜನರ ಸಾವಿರಾರು ಸಂದೇಶಗಳನ್ನು ಓದುತ್ತೇನೆ, ಪ್ರತಿ ತಿಂಗಳು ನಾನು ದೇಶವಾಸಿಗಳ ಅದ್ಭುತ ಸ್ವರೂಪವನ್ನು ಕಾಣುತ್ತೇನೆ. ದೇಶವಾಸಿಗಳ ತಪಸ್ಸು ಮತ್ತು ತ್ಯಾಗದ ಪರಾಕಾಷ್ಠೆಗೆ ಸಾಕ್ಷಿಯಾಗುತ್ತೇನೆ ಮತ್ತು ಅದನ್ನು ಅನುಭವಿಸುತ್ತೇನೆ. ನಾನು ನಿಮ್ಮಿಂದ ಸ್ವಲ್ಪವೂ ದೂರದಲ್ಲಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ನನಗೆ 'ಮನದ ಮಾತು' ಕೇವಲ ಕಾರ್ಯಕ್ರಮವಲ್ಲ, ನನಗೆ ಅದು ನಂಬಿಕೆ, ಪೂಜೆ, ವೃತದಂತೆ. ಜನರು ದೇವರ ಪೂಜೆಗೆ ಹೋದಾಗ ಪ್ರಸಾದದ ತಟ್ಟೆ ತರುತ್ತಾರೆ. ನನ್ನ ಪಾಲಿಗೆ 'ಮನದ ಮಾತು' ಎಂಬುದು ಭಗವಂತನ ಸ್ವರೂಪಿಯಾದ ಜನತಾ ಜನಾರ್ಧನನ ಪಾದಗಳಿಗೆ ಅರ್ಪಿಸುವ ಪ್ರಸಾದದ ತಟ್ಟೆ ಇದ್ದಂತೆ. 'ಮನದ ಮಾತು' ನನ್ನ ಮನಸ್ಸಿನ ಆಧ್ಯಾತ್ಮಿಕ ಯಾತ್ರೆಯಾಗಿದೆ.
'ಮನದ ಮಾತು' ಎಂಬುದು ವ್ಯಕ್ತಿಯಿಂದ ಸಮಷ್ಟಿಯತ್ತ ಪಯಣ.
'ಮನದ ಮಾತು' ಅಹಂ ನಿಂದ ವಯಂನೆಡೆಗೆ ಸಾಗುವ ಪಯಣ.
ಇದು ನಾನಲ್ಲ, ಬದಲಾಗಿ ನೀವುಗಳು ಈ ಸಂಸ್ಕೃತಿಯ ಸಾಧನೆಯಾಗಿದ್ದೀರಿ .
ನೀವು ಊಹಿಸಿಕೊಳ್ಳಿ, ನನ್ನ ದೇಶದ ಕೆಲ ದೇಶವಾಸಿಗಳು 40-40 ವರ್ಷಗಳಿಂದ ನಿರ್ಜನವಾದ ಬೆಟ್ಟಗಳಲ್ಲಿ ಮತ್ತು ಬರಡು ಭೂಮಿಯಲ್ಲಿ ಮರಗಳನ್ನು ನೆಡುತ್ತಿದ್ದಾರೆ, ಅದೆಷ್ಟೋ ಜನರು 30-30 ವರ್ಷಗಳಿಂದ ನೀರಿನ ಸಂರಕ್ಷಣೆಗಾಗಿ ಬಾವಿಗಳನ್ನು ಮತ್ತು ಕೊಳಗಳನ್ನು ನಿರ್ಮಿಸುತ್ತಿದ್ದಾರೆ, ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಕೆಲವರು 25-30 ವರ್ಷಗಳಿಂದ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ, ಕೆಲವರು ಬಡವರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ‘ಮನದ ಮಾತಿನಲ್ಲಿ’ ಅವರನ್ನು ಹಲವು ಬಾರಿ ಪ್ರಸ್ತಾಪಿಸುವಾಗ ನಾನು ಭಾವುಕನಾಗಿದ್ದೇನೆ. ಆಕಾಶವಾಣಿಯ ಸಹೋದ್ಯೋಗಿಗಳು ಹಲವು ಬಾರಿ ಅದನ್ನು ಪುನಃ ಧ್ವನಿ ಮುದ್ರಿಸಬೇಕಾಯಿತು. ಇಂದು ಅದೆಷ್ಟೋ ಗತಕಾಲದ ನೆನಪುಗಳು ಕಣ್ಣ ಮುಂದೆ ಬರುತ್ತಿವೆ. ದೇಶವಾಸಿಗಳ ಈ ಪ್ರಯತ್ನಗಳು ನನ್ನನ್ನು ನಿರಂತರವಾಗಿ ಶ್ರಮಿಸುವಂತೆ ಪ್ರೇರೇಪಿಸಿದೆ.
ಸ್ನೇಹಿತರೇ, ನಾವು 'ಮನದ ಮಾತಿನಲ್ಲಿ” ಯಾರ ಬಗ್ಗೆ ಪ್ರಸ್ತಾಪಿಸುತ್ತೇವೆಯೋ ಅವರೆಲ್ಲರೂ ಈ ಕಾರ್ಯಕ್ರಮಕ್ಕೆ ಜೀವಕಳೆ ತುಂಬಿದ ನಮ್ಮ ಹೀರೋಗಳು. ಇಂದು, ನಾವು 100 ನೇ ಸಂಚಿಕೆಯ ಘಟ್ಟವನ್ನು ತಲುಪಿರುವಾಗ, ನಾವು ಮತ್ತೊಮ್ಮೆ ಈ ಎಲ್ಲಾ ಹೀರೋಗಳ ಬಳಿ ಹೋಗಿ ಅವರ ಪಯಣದ ಬಗ್ಗೆ ತಿಳಿಯಬೇಕೆಂದು ಬಯಸುತ್ತೇನೆ. ಇಂದು ನಾವು ಕೆಲವು ಸ್ನೇಹಿತರೊಂದಿಗೆ ಮಾತನಾಡಲು ಪ್ರಯತ್ನಿಸೋಣ. ಹರಿಯಾಣದ ಸಹೋದರ ಸುನಿಲ್ ಜಗ್ಲಾನ್ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಸುನಿಲ್ ಜಗ್ಲಾನ್ ಅವರು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಲು ಕಾರಣವೇನೆಂದರೆ ಹರಿಯಾಣದಲ್ಲಿ ಲಿಂಗ ಅನುಪಾತದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು ಮತ್ತು ನಾನು ಹರಿಯಾಣದಿಂದಲೇ 'ಬೇಟಿ ಬಚಾವೋ-ಬೇಟಿ ಪಢಾವೋ' ಅಭಿಯಾನವನ್ನು ಪ್ರಾರಂಭಿಸಿದೆ. ಈ ಮಧ್ಯೆ ಸುನೀಲ್ ಅವರ 'ಸೆಲ್ಫಿ ವಿತ್ ಡಾಟರ್' ಅಭಿಯಾನದತ್ತ ನನ್ನ ಗಮನ ಹರಿಯಿತು. ಅದನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು. ನಾನೂ ಅವರಿಂದ ಅರಿತು ಮತ್ತು ‘ಮನದ ಮಾತಿನಲ್ಲಿ’ ಈ ಪ್ರಸ್ತಾಪ ಮಾಡಿದೆ. ನೋಡ ನೋಡುತ್ತಿದ್ದಂತೆ, 'ಸೆಲ್ಫಿ ವಿತ್ ಡಾಟರ್' ಜಾಗತಿಕ ಅಭಿಯಾನವಾಗಿ ಮಾರ್ಪಟ್ಟಿತು. ಮತ್ತು ಇದರಲ್ಲಿ ವಿಷಯ ಸೆಲ್ಫಿಯಲ್ಲ, ತಂತ್ರಜ್ಞಾನವೂ ಅಲ್ಲ, ಮಗಳು, ಮಗಳಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ಈ ಅಭಿಯಾನದ ಮೂಲಕ ಜೀವನದಲ್ಲಿ ಹೆಣ್ಣು ಮಗಳ ಸ್ಥಾನ ಎಷ್ಟು ಮಹತ್ವವಾಗಿದೆ ಎಂಬುದು ತಿಳಿದುಬಂತು. ಇಂತಹ ಹಲವು ಪ್ರಯತ್ನಗಳ ಫಲವೇ ಇಂದು ಹರಿಯಾಣದಲ್ಲಿ ಲಿಂಗ ಅನುಪಾತ ಸುಧಾರಿಸಿದೆ. ಇಂದು ಸುನೀಲ್ ಅವರ ಜೊತೆ ಹರಟೆ ಹೊಡೆಯೋಣ.
ಪ್ರಧಾನಮಂತ್ರಿ: ನಮಸ್ಕಾರ ಸುನೀಲ್ ಅವರೇ
ಸುನೀಲ್: ನಮಸ್ಕಾರ ಸರ್, ನಿಮ್ಮ ಧ್ವನಿ ಕೇಳಿ ನನ್ನ ಖುಷಿ ಇಮ್ಮಡಿಯಾಗಿದೆ ಸರ್.
ಪ್ರಧಾನಮಂತ್ರಿ: ಸುನೀಲ್ ಅವರೇ, 'ಸೆಲ್ಫಿ ವಿತ್ ಡಾಟರ್' ಎಲ್ಲರಿಗೂ ನೆನಪಿದೆ... ಈಗ ಮತ್ತೆ ಇದರ ಬಗ್ಗೆ ಚರ್ಚೆಯಾಗುತ್ತಿರುವಾಗ, ನಿಮಗೆ ಏನನಿಸುತ್ತದೆ?
ಸುನೀಲ್: ಪ್ರಧಾನಮಂತ್ರಿಯವರೆ, ವಾಸ್ತವವಾಗಿ, ನಮ್ಮ ರಾಜ್ಯ ಹರಿಯಾಣದಿಂದ ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸವನ್ನು ತರಲು ಪ್ರಾರಂಭಿಸಿದ ನಾಲ್ಕನೇ ಪಾಣಿಪತ್ ಯುದ್ಧವನ್ನು ಇಡೀ ದೇಶವು ನಿಮ್ಮ ನಾಯಕತ್ವದಲ್ಲಿ ಗೆಲ್ಲಲು ಪ್ರಯತ್ನಿಸಿತ್ತು. ಈ ವಿಷಯ ನನಗೆ ಮತ್ತು ಮಗಳನ್ನು ಪ್ರೀತಿಸುವ ಪ್ರತಿಯೊಬ್ಬ ತಂದೆಗೆ ಬಹಳ ಮಹತ್ವದ ವಿಷಯವಾಗಿದೆ.
ಪ್ರಧಾನಮಂತ್ರಿ: ಸುನೀಲ್ ಜೀ, ನಿಮ್ಮ ಮಗಳು ಈಗ ಹೇಗಿದ್ದಾಳೆ, ಈಗ ಏನು ಮಾಡುತ್ತಿದ್ದಾಳೆ?
ಸುನೀಲ್: ಹೌದು ಸರ್, ನನ್ನ ಹೆಣ್ಣುಮಕ್ಕಳು ನಂದನಿ ಮತ್ತು ಯಾಚಿಕಾ, ಒಬ್ಬಳು 7 ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಒಬ್ಬಳು 4 ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ಅವಳು ನಿಮ್ಮ ದೊಡ್ಡ ಅಭಿಮಾನಿ. ಅವಳು ತನ್ನ ಸ್ನೇಹಿತರೊಂದಿಗೆ ನಿಮಗೆ ಥ್ಯಾಂಕ್ಯು ಪಿ ಎಂ ಎಂದು ಪತ್ರವನ್ನು ಸಿದ್ಧಪಡಿಸಿ ಕಳುಹಿಸಿದ್ದರು
ಪ್ರಧಾನಮಂತ್ರಿ: ವಾಹ್ ವಾಹ್! ಒಳ್ಳೆಯದು, ನೀವು ಮಕ್ಕಳಿಗೆ ನನ್ನ ಮತ್ತು ಮನದ ಮಾತಿನ ಕೇಳುಗರ ವತಿಯಿಂದ ಬಹಳಷ್ಟು ಆಶೀರ್ವಾದಗಳನ್ನು ತಿಳಿಸಿ
ಸುನೀಲ್: ತುಂಬಾ ಧನ್ಯವಾದಗಳು, ನಿಮ್ಮಿಂದಾಗಿ ದೇಶದ ಹೆಣ್ಣುಮಕ್ಕಳ ಮುಖದಲ್ಲಿ ನಗು ನಿರಂತರವಾಗಿ ನೆಲೆ ನಿಂತಿದೆ.
ಪ್ರಧಾನಮಂತ್ರಿ: ಅನಂತ ಧನ್ಯವಾದಗಳು ಸುನಿಲ್ ಅವರೇ.
ಸುನೀಲ್: ಧನ್ಯವಾದಗಳು ಸರ್
ಸ್ನೇಹಿತರೇ, 'ಮನದ ಮಾತಿನಲ್ಲಿ’ ನಾವು ದೇಶದ ಮಹಿಳಾ ಶಕ್ತಿಯ ನೂರಾರು ಸ್ಪೂರ್ತಿದಾಯಕ ಕಥೆಗಳನ್ನು ಉಲ್ಲೇಖಿಸಿದ್ದೇವೆ ಎಂಬುದು ನನಗೆ ತುಂಬಾ ತೃಪ್ತಿಯಾಗಿದೆ. ನಮ್ಮ ಸೈನ್ಯವೇ ಆಗಿರಲಿ, ಕ್ರೀಡಾ ಜಗತ್ತೇ ಇರಲಿ, ನಾನು ಮಹಿಳೆಯರ ಸಾಧನೆಯ ಬಗ್ಗೆ ಮಾತನಾಡಿದಾಗಲೆಲ್ಲ ಆ ಕುರಿತು ಸಾಕಷ್ಟು ಪ್ರಶಂಸೆ ಕೇಳಿ ಬಂದಿದೆ. ಛತ್ತೀಸ್ ಗಢದ ದೇವೂರ್ ಗ್ರಾಮದ ಮಹಿಳೆಯರ ಬಗ್ಗೆ ನಾವು ಚರ್ಚಿಸಿದ್ದೆವು. ಈ ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಗ್ರಾಮದ ಕೂಡು ರಸ್ತೆಗಳು, ರಸ್ತೆಗಳು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಆರಂಬಿಸಿದ್ದರು. ಅದೇ ರೀತಿ, ಸಾವಿರಾರು ಪರಿಸರ ಸ್ನೇಹಿ ಟೆರಾಕೋಟಾ ಕಪ್ ಗಳನ್ನು ರಫ್ತು ಮಾಡಿದ ತಮಿಳುನಾಡಿನ ಬುಡಕಟ್ಟು ಮಹಿಳೆಯರಿಂದ ದೇಶವು ಸಾಕಷ್ಟು ಸ್ಫೂರ್ತಿ ಪಡೆದಿದೆ. ತಮಿಳುನಾಡಿನಲ್ಲಿಯೇ 20 ಸಾವಿರ ಮಹಿಳೆಯರು ಒಗ್ಗೂಡಿ ವೆಲ್ಲೂರಿನಲ್ಲಿ ನಾಗ್ ನದಿಯನ್ನು ಪುನರುಜ್ಜೀವನಗೊಳಿಸಿದ್ದರು. ನಮ್ಮ ಮಹಿಳಾ ಶಕ್ತಿಯ ನೇತೃತ್ವದಲ್ಲಿ ಇಂತಹ ಅನೇಕ ಅಭಿಯಾನಗಳು ನಡೆದಿವೆ ಮತ್ತು ಅವರ ಪ್ರಯತ್ನಗಳನ್ನು ಪ್ರಸ್ತಾಪಿಸಲು 'ಮನದ ಮಾತು' ವೇದಿಕೆಯಾಗಿದೆ.
ಸ್ನೇಹಿತರೇ, ಈಗ ನಮ್ಮೊಂದಿಗೆ ಫೋನ್ ಲೈನ್ ನಲ್ಲಿ ಮತ್ತೊಬ್ಬರು ಸಂಪರ್ಕದಲ್ಲಿದ್ದಾರೆ. ಅವನ ಹೆಸರು ಮಂಜೂರ್ ಅಹಮದ್. 'ಮನದ ಮಾತಿನಲ್ಲಿ' ಜಮ್ಮು ಮತ್ತು ಕಾಶ್ಮೀರದ ಪೆನ್ಸಿಲ್ ಸ್ಲೇಟ್ ಗಳ ಬಗ್ಗೆ ಪ್ರಸ್ತಾಪಿಸಿದಾಗ ಮಂಜೂರ್ ಅಹ್ಮದ್ ಅವರ ಬಗ್ಗೆಯೂ ಉಲ್ಲೇಖಿಸಲಾಗಿತ್ತು.
ಪ್ರಧಾನಮಂತ್ರಿ: ಮಂಜೂರ್ ಅವರೇ ಹೇಗಿದ್ದೀರಾ?
ಮಂಜೂರ್: ಧನ್ಯವಾದ ಸರ್, ತುಂಬಾ ಚೆನ್ನಾಗಿದ್ದೇನೆ
ಪ್ರಧಾನಮಂತ್ರಿ: ಮನದ ಮಾತಿನ 100 ನೇ ಕಂತಿನಲ್ಲಿ ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವೆನಿಸುತ್ತಿದೆ
ಮಂಜೂರ್: ಧನ್ಯವಾದ ಸರ್
ಪ್ರಧಾನಮಂತ್ರಿ: ಪೆನ್ಸಿಲ್ ಸ್ಲೇಟ್ ಕೆಲಸ ಹೇಗೆ ಸಾಗಿದೆ
ಮಂಜೂರ್: ತುಂಬಾ ಚೆನ್ನಾಗಿ ನಡೆದಿದೆ. ನೀವು ನಮ್ಮ ಬಗ್ಗೆ ಮನದ ಮಾತಿನಲ್ಲಿ ಪ್ರಸ್ತಾಪಿಸಿದ ನಂತರ ತುಂಬಾ ಕೆಲಸ ಹೆಚ್ಚಿದೆ. ಬಹಳಷ್ಟು ಜನರಿಗೆ ಈ ಕೆಲಸ ಉದ್ಯೋಗ ಒದಗಿಸಿದೆ.
ಪ್ರಧಾನಮಂತ್ರಿ: ಈಗ ಎಷ್ಟು ಜನರಿಗೆ ಉದ್ಯೋಗ ಲಭಿಸುತ್ತಿದೆ?
ಮಂಜೂರ್ : ಈಗ ನನ್ನ ಬಳಿ 200 ಕ್ಕೂ ಹೆಚ್ಚು ಜನರಿದ್ದಾರೆ...
ಪ್ರಧಾನಮಂತ್ರಿ: ಓಹ್! ತುಂಬಾ ಸಂತೋಷವಾಯಿತು
ಮಂಜೂರ್: ಹೌದು ಸರ್.....ಈಗ ಇದನ್ನು ಒಂದೆರಡು ತಿಂಗಳಲ್ಲಿ ವಿಸ್ತರಿಸುತ್ತಿದ್ದೇನೆ ಮತ್ತು 200 ಜನರಿಗೆ ಉದ್ಯೋಗಾವಕಾಶ ಹೆಚ್ಚಲಿದೆ ಸರ್.
ಪ್ರಧಾನಮಂತ್ರಿ: ವಾಹ್ ವಾಹ್! ಮಂಜೂರ್ ನೋಡಿ...
ಮಂಜೂರ್: ಹೇಳಿ ಸರ್
ಪ್ರಧಾನಮಂತ್ರಿ: ಆ ದಿನ ಇದನ್ನು ಯಾರೂ ಗುರುತಿಸುವುದಿಲ್ಲ, ಪರಿಗಣನೆ ಇಲ್ಲದ ಕೆಲಸ ಇದು ಎಂದು ನೀವು ನನಗೆ ಹೇಳಿದ್ದಿರಿ, ಅದು ನನಗೆ ಚೆನ್ನಾಗಿ ನೆನಪಿದೆ ಮತ್ತು ನಿಮಗೆ ಈ ಕುರಿತು ತುಂಬಾ ನೋವಿತ್ತು. ಇದರಿಂದ ನೀವು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಈಗ ನಿಮ್ಮನ್ನು ಗುರುತಿಸಲಾಗಿದೆ ಮತ್ತು ನೀವು 200 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದೀರಿ.
ಮಂಜೂರ್: ಹೌದು ಸರ್, ಹೌದು ಸರ್ ..
ಪ್ರಧಾನಮಂತ್ರಿ: ನೀವು ಮತ್ತಷ್ಟು ಇದನ್ನು ವಿಸ್ತರಿಸಿ 200 ಜನರಿಗೆ ಉದ್ಯೋಗ ನೀಡುವ ಮೂಲಕ ಅತ್ಯಂತ ಸಂತೋಷದ ಸುದ್ದಿಯನ್ನು ನೀಡಿದ್ದೀರಿ.
ಮಂಜೂರ್: ಇಷ್ಟೇ ಅಲ್ಲ ಸರ್, ಇಲ್ಲಿಯ ರೈತರಿಗೂ ಇದರಿಂದ ಬಹಳ ಲಾಭವಾಗಿದೆ. ಹಿಂದೆ ರೂ. 2000 ಮೌಲ್ಯಕ್ಕೆ ಮರವನ್ನು ಮಾರಾಟ ಮಾಡುತ್ತಿದ್ದರು, ಈಗ ಅದೇ ಮರ ರೂ 5000 ಕ್ಕೆ ಮಾರಾಟವಾಗುತ್ತಿದೆ. ಅಂದಿನಿಂದ ತುಂಬಾ ಬೇಡಿಕೆ ಹೆಚ್ಚಿದೆ. ಹಾಗೂ ಇದು ತನ್ನದೇ ಛಾಪನ್ನೂ ಮೂಡಿಸಿದೆ, ಇದಕ್ಕೆ ನನ್ನ ಬಳಿ ಹಲವು ಆರ್ಡರ್ ಗಳಿವೆ, ಈಗ ನಾನು ಒಂದೆರಡು ತಿಂಗಳಲ್ಲಿ ಮತ್ತಷ್ಟು ವಿಸ್ತರಿಸಲಿದ್ದೇನೆ ಮತ್ತು ಎರಡು-ನಾಲ್ಕು ಹಳ್ಳಿಗಳ ಎರಡು ನೂರರಿಂದ – 250 ಜನರಿಗೆ ಇದರಲ್ಲಿ ಉದ್ಯೋಗ ನೀಡಲು ಪ್ರಯತ್ನಿಸುತ್ತೇನೆ. ಇದರಿಂದ ಯುವಕ ಯುವತಿಯರಿಗೆ ಜೀವನೋಪಾಯ ಮುಂದುವರಿಯಬಹುದು ಸರ್.
ಪ್ರಧಾನಮಂತ್ರಿ: ಮಂಜೂರ್ ಜೀ ನೋಡಿದಿರಾ, ಸ್ಥಳೀಯ ವಸ್ತುಗಳಿಗಾಗಿ ಧ್ವನಿ ಎತ್ತುವುದರ ಶಕ್ತಿ ಎಷ್ಟು ಅದ್ಭುತವಾಗಿದೆ, ನೀವು ಅದನ್ನು ನಿಮ್ಮ ತಾಯ್ನೆಲದಲ್ಲಿ ಸಾಧಿಸಿ ತೋರಿಸಿದ್ದೀರಿ.
ಮಂಜೂರ್: ಹೌದು ಸರ್
ಪ್ರಧಾನಮಂತ್ರಿ: ನಿಮಗೆ ಮತ್ತು ಗ್ರಾಮದ ಎಲ್ಲಾ ರೈತರಿಗೆ ಮತ್ತು ನಿಮ್ಮೊಂದಿಗೆ ಕೆಲಸ ಮಾಡುವ ಎಲ್ಲಾ ಸಹೋದ್ಯೋಗಿಗಳಿಗೆ ಅನಂತ ಅಭಿನಂದನೆಗಳು, ಧನ್ಯವಾದಗಳು ಸಹೋದರ.
ಮಂಜೂರ್: ಧನ್ಯವಾದಗಳು ಸರ್
ಸ್ನೇಹಿತರೇ, ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸಿನ ಶಿಖರವನ್ನು ತಲುಪಿದ ಅನೇಕ ಪ್ರತಿಭಾವಂತರು ನಮ್ಮ ದೇಶದಲ್ಲಿದ್ದಾರೆ. ನನಗೆ ನೆನಪಿದೆ, ವಿಶಾಖಪಟ್ಟಣಂನ ವೆಂಕಟ್ ಮುರಳಿ ಪ್ರಸಾದ್ ಅವರು ಸ್ವಾವಲಂಬಿ ಭಾರತದ ಒಂದು ಚಾರ್ಟ್ ಅನ್ನು ಹಂಚಿಕೊಂಡಿದ್ದರು. ಅವರು ಗರಿಷ್ಠ ಪ್ರಮಾಣದಲ್ಲಿ ಭಾರತೀಯ ಉತ್ಪನ್ನಗಳನ್ನು ಮಾತ್ರ ಹೇಗೆ ಬಳಸುತ್ತಾರೆ ಎಂದು ಹೇಳಿದ್ದರು. ಬೆತಿಯಾದ ಪ್ರಮೋದ್ ಅವರು ಎಲ್ ಇ ಡಿ ಬಲ್ಬ್ ತಯಾರಿಸುವ ಸಣ್ಣ ಘಟಕವನ್ನು ಸ್ಥಾಪಿಸಿದಾಗ ಅಥವಾ ಗಡಮುಕ್ತೇಶ್ವರದ ಸಂತೋಷ್ ಅವರು ಮ್ಯಾಟ್ ತಯಾರಿಸುವ ಉದ್ಯೋಗ ಪ್ರಾರಂಭಿಸಿದಾಗ, ಅವರ ಉತ್ಪನ್ನಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸಲು 'ಮನದ ಮಾತು' ಮಾಧ್ಯಮವಾಯಿತು. ನಾವು 'ಮನದ ಮಾತಿನಲ್ಲಿ' ಮೇಕ್ ಇನ್ ಇಂಡಿಯಾ ದಿಂದ ಸ್ಪೇಸ್ ಸ್ಟಾರ್ಟ್-ಅಪ್ ಗಳ ಅನೇಕ ಉದಾಹರಣೆಗಳನ್ನು ಚರ್ಚಿಸಿದ್ದೇವೆ.
ಸ್ನೇಹಿತರೇ, ಕೆಲವು ಸಂಚಿಕೆಗಳ ಹಿಂದೆ ನಾನು ಮಣಿಪುರದ ಸಹೋದರಿ ವಿಜಯಶಾಂತಿ ದೇವಿಯವರ ಬಗ್ಗೆಯೂ ಪ್ರಸ್ತಾಪಿಸಿದ್ದುದು ನಿಮಗೆ ನೆನಪಿರಬಹುದು. ವಿಜಯಶಾಂತಿ ಅವರು ಕಮಲದ ನಾರುಗಳಿಂದ ಬಟ್ಟೆಗಳನ್ನು ಸಿದ್ಧಪಡಿಸುತ್ತಾರೆ. ಅವರ ಈ ಅನನ್ಯ ಪರಿಸರ ಸ್ನೇಹಿ ಕಲ್ಪನೆಯನ್ನು 'ಮನದ ಮಾತಿನಲ್ಲಿ’ ಚರ್ಚಿಸಲಾಗಿತ್ತು ಮತ್ತು ಅವರ ಕೆಲಸವು ಹೆಚ್ಚು ಜನಪ್ರಿಯವಾಯಿತು. ಇಂದು ವಿಜಯಶಾಂತಿಯವರು ನಮ್ಮೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ.
ಪ್ರಧಾನಮಂತ್ರಿ:- ನಮಸ್ತೆ ವಿಜಯ ಶಾಂತಿಯವರೆ. ಹೇಗಿದ್ದೀರಿ?
ವಿಜಯಶಾಂತಿ:-ಸರ್, ನಾನು ಚೆನ್ನಾಗಿದ್ದೇನೆ.
ಪ್ರಧಾನಮಂತ್ರಿ:- ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ ?
ವಿಜಯಶಾಂತಿ:- ಸರ್, ಈಗಲೂ ನನ್ನ ತಂಡದ 30 ಮಹಿಳೆಯರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇನೆ
ಪ್ರಧಾನಮಂತ್ರಿ:- ಇಷ್ಟು ಕಡಿಮೆ ಅವಧಿಯಲ್ಲಿ ನೀವು 30 ಮಂದಿ ತಂಡದ ಗುರಿ ತಲುಪಿದ್ದೀರಿ!
ವಿಜಯಶಾಂತಿ:- ಹೌದು ಸರ್, ಈ ವರ್ಷ ಕೂಡಾ ನಾನಿರುವ ಪ್ರದೇಶದಲ್ಲಿ ಸುಮಾರು 100 ಮಹಿಳೆಯರನ್ನು ಒಳಗೊಳ್ಳುವಂತೆ ವಿಸ್ತರಿಸುವ ಯೋಜನೆ ಇದೆ.
ಪ್ರಧಾನಮಂತ್ರಿ:- ನಿಮ್ಮ ಗುರಿ 100 ಮಹಿಳೆಯರು
ವಿಜಯಶಾಂತಿ:- ಹೌದು ! 100 ಮಹಿಳೆಯರು
ಪ್ರಧಾನಮಂತ್ರಿ:- ಈಗ ಜನರು ತಾವರೆ ಕಾಂಡದ ನಾರಿನ ಕುರಿತು ಪರಿಚಿತರಾಗಿದ್ದಾರೆ
ವಿಜಯಶಾಂತಿ :- ಹೌದು ಸರ್, ಭಾರತದಾದ್ಯಂತ ಮನದ ಮಾತು ಕಾರ್ಯಕ್ರಮದಿಂದ ಪ್ರತಿಯೊಬ್ಬರಿಗೂ ಈ ಮಾಹಿತಿ ಇದೆ.
ಪ್ರಧಾನಮಂತ್ರಿ:- ಹಾಗಾದರೆ ಈಗ ಇದು ಬಹಳ ಜನಪ್ರಿಯವಾಗಿದೆ
ವಿಜಯಶಾಂತಿ:- ಹೌದು ಸರ್, ಪ್ರಧಾನ ಮಂತ್ರಿಯವರ ಮನದ ಮಾತು ಕಾರ್ಯಕ್ರಮದಿಂದ ಪ್ರತಿಯೊಬ್ಬರೂ ತಾವರೆ ನಾರಿನ ಕುರಿತು ಅರಿತಿದ್ದಾರೆ
ಪ್ರಧಾನಮಂತ್ರಿ:- ಹಾಗಾದರೆ ನಿಮಗೆ ಈಗ ಮಾರುಕಟ್ಟೆಯೂ ದೊರೆತಿದೆ ಅಲ್ಲವೇ?
ವಿಜಯಶಾಂತಿ:- ಹೌದು, ನನಗೆ ಅಮೆರಿಕದಿಂದ ಮಾರುಕಟ್ಟೆ ಅವಕಾಶ ದೊರೆತಿದೆ, ಮತ್ತು ಅವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಬಯಸುತ್ತಾರೆ, ನಾನು ಈ ವರ್ಷದಿಂದ ಅಮೆರಿಕಾಗೆ ರಫ್ತು ಮಾಡಲು ಪ್ರಾರಂಭಿಸುವವಳಿದ್ದೇನೆ.
ಪ್ರಧಾನಮಂತ್ರಿ:- ಹಾಗಾದರೆ, ಈಗ ನೀವು ರಫ್ತುದಾರರು ?
ವಿಜಯಶಾಂತಿ:- ಹೌದು ಸರ್, ಈ ವರ್ಷದಿಂದ ನಾನು ಭಾರತದಲ್ಲಿ ತಾವರೆ ನಾರಿನಿಂದ ತಯಾರಿಸಿದ ನಮ್ಮ ಉತ್ಪನ್ನವನ್ನು ರಫ್ತು ಮಾಡುತ್ತೇನೆ.
ಪ್ರಧಾನಮಂತ್ರಿ:- ಸರಿ, ನಾನು ವೋಕಲ್ ಫಾರ್ ಲೋಕಲ್ ಎನ್ನುತ್ತಿದ್ದೆ ಈಗ ಲೋಕಲ್ ಫಾರ್ ಗ್ಲೋಬಲ್
ವಿಜಯಶಾಂತಿ:- ಹೌದು ಸರ್, ನನ್ನ ಉತ್ಪನ್ನಗಳು ವಿಶ್ವದ ಎಲ್ಲೆಡೆ ತಲುಪಬೇಕೆಂದು ನಾನು ಬಯಸುತ್ತೇನೆ.
ಪ್ರಧಾನಮಂತ್ರಿ:- ಅಭಿನಂದನೆಗಳು ಮತ್ತು ನಿಮಗೆ ಶುಭವಾಗಲಿ
ವಿಜಯಶಾಂತಿ:- ಧನ್ಯವಾದ ಸರ್
ಪ್ರಧಾನಮಂತ್ರಿ:- ಧನ್ಯವಾದ. ಧನ್ಯವಾದ ವಿಜಯಶಾಂತಿ
ವಿಜಯಶಾಂತಿ:- ಧನ್ಯವಾದ ಸರ್
ಸ್ನೇಹಿತರೇ, ಮನದ ಮಾತಿನ ಮತ್ತೊಂದು ವಿಶೇಷತೆಯಿದೆ. ‘ಮನದ ಮಾತಿನ’ ಮೂಲಕ ಎಷ್ಟೊಂದು ಜನಾಂದೋಲನಗಳು ಜನ್ಮತಾಳಿವೆ ಮತ್ತು ವೇಗವನ್ನೂ ಪಡೆದುಕೊಂಡಿವೆ. ನಮ್ಮ ಆಟಿಕೆಗಳು, ನಮ್ಮ ಆಟಿಕೆ ಉದ್ಯಮವನ್ನು ಮರುಸ್ಥಾಪಿಸುವ ಯೋಜನೆ ಕೂಡಾ ಮನದ ಮಾತಿನಿಂದಲೇ ಆರಂಭವಾಯಿತು. ನಮ್ಮ ಭಾರತೀಯ ತಳಿಯಾದ ದೇಶೀಯ ನಾಯಿಗಳ ಕುರಿತಂತೆ ಅರಿವು ಮೂಡಿಸುವ ಆರಂಭ ಕೂಡಾ ಮನದ ಮಾತಿನಿಂದಲೇ ಆಯಿತಲ್ಲವೇ. ನಾವು ಬಡ ಸಣ್ಣ ಪುಟ್ಟ ಅಂಗಡಿಯವರೊಂದಿಗೆ ಚೌಕಾಸಿ ಮಾಡುವುದಿಲ್ಲ, ಅವರೊಂದಿಗೆ ಜಗಳವಾಡುವುದಿಲ್ಲ ಎಂಬ ಮತ್ತೊಂದು ಅಭಿಯಾನವನ್ನು ಕೂಡಾ ನಾವು ಆರಂಭಿಸಿದೆವು. ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನ ಆರಂಭಿಸಿದಾಗ, ದೇಶವಾಸಿಗಳು ಈ ಸಂಕಲ್ಪದೊಂದಿಗೆ ತಮ್ಮನ್ನು ತಾವು ಸೇರಿಕೊಳ್ಳುವ ವಿಷಯದಲ್ಲಿ ‘ಮನದ ಮಾತು’ ಬಹು ದೊಡ್ಡ ಪಾತ್ರ ವಹಿಸಿತು. ಹೀಗೆ ಪ್ರತಿಯೊಂದು ಉದಾಹರಣೆಯೂ ಸಮಾಜದ ಬದಲಾವಣೆ ತರಲು ಕಾರಣವಾಗಿದೆ. ಪ್ರದೀಪ್ ಸಾಂಗ್ವಾನ್ ಅವರು ಕೂಡಾ ಸಮಾಜಕ್ಕೆ ಪ್ರೇರಣೆಯಾಗುವಂತಹ ಕಾರ್ಯವನ್ನು ಕೈಗೊಂಡಿದ್ದಾರೆ. ‘ಮನದ ಮಾತಿನಲ್ಲಿ’ ನಾವು ಪ್ರದೀಪ್ ಸಾಂಗವಾನ್ ಅವರ ‘ಹೀಲಿಂಗ್ ಹಿಮಾಲಯಾಜ್’ ಅಭಿಯಾನ ಕುರಿತು ಮಾತನಾಡಿದ್ದೆವವು. ಅವರು ನಮ್ಮೊಂದಿಗೆ ದೂರವಾಣಿ ಸಂಭಾಷಣೆಯಲ್ಲಿದ್ದಾರೆ.
ಮೋದಿ – ಪ್ರದೀಪ್ ಅವರೆ ನಮಸ್ಕಾರ !
ಪ್ರದೀಪ್ – ಸರ್ ಜೈ ಹಿಂದ್.
ಮೋದಿ – ಜೈ ಹಿಂದ್. ಜೈ ಹಿಂದ್ ಸೋದರಾ. ನೀವು ಹೇಗಿದ್ದೀರಿ?
ಪ್ರದೀಪ್ – ಸರ್ ಚೆನ್ನಾಗಿದ್ದೇನೆ. ನಿಮ್ಮ ಧ್ವನಿ ಕೇಳಿ ಮತ್ತಷ್ಟು ಸಂತೋಷವಾಗುತ್ತಿದೆ.
ಮೋದಿ – ನೀವು ಹಿಮಾಲಯದ ಸ್ವಾಸ್ಥ್ಯ ಕುರಿತು ಆಲೋಚಿಸಿದಿರಿ.
ಪ್ರದೀಪ್ – ಹೌದು ಸರ್.
ಮೋದಿ – ಅಭಿಯಾನವನ್ನೂ ಕೈಗೊಂಡಿದ್ದೀರಿ. ಈಗ ನಿಮ್ಮ ಅಭಿಯಾನ ಹೇಗೆ ನಡೆಯುತ್ತಿದೆ?
ಪ್ರದೀಪ್ – ಬಹಳ ಚೆನ್ನಾಗಿ ನಡೆಯುತ್ತಿದೆ ಸರ್. ನಂಬಿ ಸರ್, ನಾವು ಯಾವ ಕೆಲಸವನ್ನು ಐದು ವರ್ಷಗಳಲ್ಲಿ ಮಾಡುತ್ತಿದ್ದೆವೋ ಅದೇ ಕೆಲಸ 2020 ರ ನಂತರ ಈಗ ಒಂದು ವರ್ಷದಲ್ಲೇ ಆಗಿಬಿಡುತ್ತಿದೆ.
ಮೋದಿ – ಅರೆ ವಾಹ್ !
ಪ್ರದೀಪ್ – ಹೌದು ಹೌದು ಸರ್. ಆರಂಭದಲ್ಲಿ ಬಹಳ ಆತಂಕವಾಗಿತ್ತು. ಜೀವನದಲ್ಲಿ ಇದನ್ನು ಮಾಡಲು ಸಾಧ್ಯವಾಗುತ್ತದೋ ಅಥವಾ ಇಲ್ಲವೋ ಎಂಬ ಹೆದರಿಕೆ ಬಹಳವಿತ್ತು ಆದರೆ ಸ್ವಲ್ಪ ಬೆಂಬಲ ದೊರೆತಿತ್ತು. ಪ್ರಾಮಾಣಿಕವಾಗಿ ಹೇಳುವುದಾದರೆ, 2020 ರವರೆಗೆ ನಾವು ಬಹಳ ಕಷ್ಟ ಪಟ್ಟಿದ್ದೇವೆ. ಬಹಳ ಕಡಿಮೆ ಜನರು ನಮ್ಮೊಡನೆ ಕೈಜೋಡಿಸಿದ್ದರು ಮತ್ತು ಬೆಂಬಲ ನೀಡದೇ ಇದ್ದಂತಹ ಜನರು ಕೂಡಾ ಬಹಳಷ್ಟಿದ್ದರು. ನಮ್ಮ ಪ್ರಚಾರಕ್ಕೆ ಹೆಚ್ಚು ಗಮನ ಕೂಡಾ ನೀಡುತ್ತಿರಲಿಲ್ಲ. ಆದರೆ 2020 ರಲ್ಲಿ ಮನದ ಮಾತಿನಲ್ಲಿ ವಿಷಯ ಪ್ರಸ್ತಾಪವಾದ ನಂತರ, ಬಹಳಷ್ಟು ಬದಲಾವಣೆಗಳಾದವು. ಅಂದರೆ ಮೊದಲು ನಾವು ವರ್ಷವೊಂದರಲ್ಲಿ 6-7 ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತಿದ್ದೆವು, 10 ಸ್ವಚ್ಛತಾ ಅಭಿಯಾನ ಮಾಡುತ್ತಿದ್ದೆವು. ಇಂದು ನಾವು ದಿನಂಪ್ರತಿ ಬೇರೆ ಬೇರೆ ಪ್ರದೇಶಗಳಿಂದ ಐದು ಟನ್ ತ್ಯಾಜ್ಯ ಸಂಗ್ರಹಿಸುತ್ತಿದ್ದೇವೆ.
ಮೋದಿ – ಅರೆ ವಾಹ್!
ಪ್ರದೀಪ್ – ನಾನು ಒಂದು ಸಮಯದಲ್ಲಿ ಹೆಚ್ಚುಕಡಿಮೆ ಇದನ್ನು ಬಿಟ್ಟುಬಿಡುವ ಹಂತ ತಲುಪಿದ್ದೆ , ಮನದ ಮಾತಿನಲ್ಲಿ ಈ ಕುರಿತು ಪ್ರಸ್ತಾಪವಾದ ನಂತರ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು. ನಂತರ ನಾವು ಯೋಚಿಸದೇ ಇದ್ದ ವಿಷಯಗಳೂ ಅಪಾರ ವೇಗ ಪಡೆದುಕೊಂಡವು. ನಮ್ಮಂತಹ ಜನರನ್ನು ನೀವು ಹೇಗೆ ಪತ್ತೆ ಮಾಡುತ್ತೀರಿ? ಎಂದು ತಿಳಿಯದು ಆದರೆ ಸರ್ ನಾನು ಬಹಳ ಕೃತಜ್ಞನಾಗಿದ್ದೇನೆ. ಇಷ್ಟು ದೂರದ ಪ್ರದೇಶದಲ್ಲಿ ಯಾರು ಕೆಲಸ ಮಾಡುತ್ತಾರೆ, ಹಿಮಾಲಯ ಹೋಗಿ ಅಲ್ಲೇ ಇದ್ದು ನಾವು ಕೆಲಸ ಮಾಡುತ್ತಿದ್ದೇವೆ. ಇಷ್ಟು ಎತ್ತರದ ಪ್ರದೇಶದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅಲ್ಲಿ ನೀವು ನಮ್ಮನ್ನು ಹುಡುಕಿದ್ದೀರಿ. ನಮ್ಮ ಕೆಲಸವನ್ನು ಪ್ರಪಂಚದ ಎದುರು ತಂದಿರಿ. ನಾನು ನಮ್ಮ ದೇಶದ ಪ್ರಥಮ ಸೇವಕ ಎಂದು ಕರೆದುಕೊಳ್ಳುವ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೇನೆ. ಅಂದು ಮತ್ತು ಇಂದು ಕೂಡಾ ನನಗೆ ಇದು ಬಹಳ ಭಾವನಾತ್ಮಕ ಕ್ಷಣವಾಗಿದೆ ಸರ್. ನನ್ನ ಪಾಲಿಗೆ ಇದಕ್ಕಿಂತ ಹೆಚ್ಚಿನ ಸೌಭಾಗ್ಯದ ವಿಷಯ ಬೇರೊಂದಿಲ್ಲ.
ಮೋದಿ – ಪ್ರದೀಪ್ ಅವರೆ! ನೀವು ಹಿಮಾಲಯದ ಶಿಖರಗಳಲ್ಲಿ ನಿಜವಾದ ಅರ್ಥದಲ್ಲಿ ಸಾಧನೆ ಮಾಡುತ್ತಿರುವಿರಿ ಮತ್ತು ಈಗ ನಿಮ್ಮ ಹೆಸರು ಕೇಳುತ್ತಲೇ ಜನರಿಗೆ ನೀವು ಪರ್ವತಗಳ ಸ್ವಚ್ಛತಾ ಅಭಿಯಾನದಲ್ಲಿ ಹೇಗೆ ತೊಡಗಿಕೊಂಡಿದ್ದೀರಿ ಎನ್ನುವುದು ನೆನಪಿಗೆ ಬರುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ.
ಪ್ರದೀಪ್ – ಹೌದು ಸರ್.
ಮೋದಿ – ನೀವು ಹೇಳಿದ ಹಾಗೆ ಈಗ ತಂಡ ದೊಡ್ಡದಾಗುತ್ತಾ ಬರುತ್ತಿದೆ ಮತ್ತು ನೀವು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿದಿನ ಕೆಲಸ ಮಾಡುತ್ತಿರುವಿರಿ.
ಪ್ರದೀಪ್ – ಹೌದು ಸರ್
ಮೋದಿ – ನನಗೆ ಪೂರ್ಣ ವಿಶ್ವಾಸವಿದೆ, ನಿಮ್ಮ ಇಂತಹ ಪ್ರಯತ್ನಗಳಿಂದ, ಅದರ ಕುರಿತ ಮಾತುಕತೆಯಿಂದ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪರ್ವತಾರೋಹಿಗಳೆಲ್ಲಾ ಫೋಟೋ ಪೋಸ್ಟ್ ಮಾಡಲಾರಂಭಿಸಿದ್ದಾರೆ.
ಪ್ರದೀಪ್ – ಹೌದು ಸರ್. ನಿಜ.
ಮೋದಿ – ಇದು ಬಹಳ ಒಳ್ಳೆಯ ವಿಚಾರ, ನಿಮ್ಮಂತಹ ಸ್ನೇಹಿತರ ಪ್ರಯತ್ನಗಳ ಕಾರಣದಿಂದಾಗಿ ತ್ಯಾಜ್ಯ ಕೂಡಾ ಸಂಪತ್ತು, (ಕಸದಿಂದ ರಸ) ಎಂಬುದು ಜನರ ಮನಸ್ಸಿನಲ್ಲಿ ಈಗ ಸ್ಥಿರವಾಗಿದೆ. ಹಾಗೆಯೇ ಪರಿಸರದ ರಕ್ಷಣೆಯೂ ಆಗುತ್ತಿದೆ ಮತ್ತು ನಮ್ಮ ಹೆಮ್ಮೆಯೆನಿಸಿರುವ ಹಿಮಾಲಯದ ಸ್ವಾಸ್ಥ್ಯ ಸಂರಕ್ಷಣೆಗೆ, ನಿರ್ವಹಣೆಗೆ ನಾಗರಿಕರು ಕೂಡಾ ಕೈಜೋಡಿಸುತ್ತಿದ್ದಾರೆ. ಪ್ರದೀಪ್ ಅವರೆ ನನಗೆ ಬಹಳ ಸಂತೋಷವೆನಿಸುತ್ತಿದೆ. ಅನೇಕಾನೇಕ ಧನ್ಯವಾದ ಸೋದರಾ.
ಪ್ರದೀಪ್ – ಧನ್ಯವಾದ ಸರ್. ಬಹಳ ಧನ್ಯವಾದ. ಜೈಹಿಂದ್.
ಸ್ನೇಹಿತರೆ, ಇಂದು ದೇಶದಲ್ಲಿ ಪ್ರವಾಸೋದ್ಯಮ ಬಹಳ ವೇಗವಾಗಿ ಅಭಿವೃದ್ಧಿಹೊಂದುತ್ತಿದೆ. ನಮ್ಮ ದೇಶಧ ಈ ಪ್ರಾಕೃತಿಕ ಸಂಪನ್ಮೂಲವಿರಲಿ, ನದಿಗಳಿರಲಿ, ಬೆಟ್ಟಗಳಿರಲಿ, ಕೆರೆ ಸರೋವರಗಳಿರಲಿ, ಅಂತೆಯೇ ನಮ್ಮ ಪುಣ್ಯ ಕ್ಷೇತ್ರಗಳಿರಲಿ, ಅವುಗಳನ್ನು ಸ್ವಚ್ಛವಾಗಿರಿಸುವುದು ಅತ್ಯಗತ್ಯವಾಗಿದೆ. ಇದು ಪ್ರವಾಸೋದ್ಯಮಕ್ಕೆ ಬಹಳ ನೆರವಾಗುತ್ತದೆ. ಪ್ರವಾಸೋದ್ಯದಲ್ಲಿ ಸ್ವಚ್ಛತೆಯೊಂದಿಗೆ ನಾವು Incredible India movement ಬಗ್ಗೆ ಕೂಡಾ ಅನೇಕ ಬಾರಿ ಮಾತುಕತೆ ನಡೆಸಿದ್ದೇವೆ. ಈ ಆಂದೋಲನದಿಂದ ಜನರಿಗೆ ತಮ್ಮ ಸುತ್ತ ಮುತ್ತಲು ಇರುವಂತಹ ಅನೇಕ ಸ್ಧಳಗಳ ಬಗ್ಗೆ ಮೊದಲ ಬಾರಿಗೆ ತಿಳಿದು ಬಂದಿತು. ನಾವು ವಿದೇಶ ಪ್ರವಾಸ ಮಾಡುವುದಕ್ಕೆ ಮೊದಲು ನಮ್ಮ ದೇಶದಲ್ಲೇ ಇರುವಂತಹ ಪ್ರವಾಸಿ ತಾಣಗಳ ಪೈಕಿ ಕನಿಷ್ಠ 15 ತಾಣಗಳಿಗೆ ಖಂಡಿತವಾಗಿಯೂ ಹೋಗಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಈ ಪ್ರವಾಸಿ ತಾಣಗಳು ನೀವು ವಾಸ ಮಾಡುತ್ತಿರುವ ರಾಜ್ಯದಲ್ಲೇ ಇರಬೇಕೆಂದಿಲ್ಲ, ನಿಮ್ಮ ರಾಜ್ಯದ ಹೊರಗೆ ಇರುವ ಬೇರೊಂದು ರಾಜ್ಯದಲ್ಲಿರಬೇಕು. ಅಂತೆಯೇ ನಾವು ಸ್ವಚ್ಛ ಸಿಯಾಚಿನ್, ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಇ-ತ್ಯಾಜ್ಯದಂತಹ ಗಂಭೀರ ವಿಷಯಗಳ ಬಗ್ಗೆ ಕೂಡಾ ಸತತವಾಗಿ ಮಾತನಾಡಿದ್ದೇವೆ. ಇಂದು ಇಡೀ ವಿಶ್ವ ಪರಿಸರಕ್ಕೆ ಸಂಬಂಧಿಸಿದಂತೆ ಇಷ್ಟೊಂದು ಸಮಸ್ಯೆ ಎದುರಿಸುತ್ತಿರುವಾಗ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮನದ ಮಾತಿನ ಈ ಪ್ರಯತ್ನ ಬಹಳ ಮುಖ್ಯವಾಗಿದೆ.
ಸ್ನೇಹಿತರೇ, ‘ಮನದ ಮಾತಿಗೆ’ ಸಂಬಂಧಿಸಿದಂತೆ ನನಗೆ ಈ ಬಾರಿ ಮತ್ತೊಂದು ಮತ್ತು ವಿಶೇಷ ಸಂದೇಶವೊಂದು UNESCO ದ DG ಆದ್ರೇ ಅಜುಲೇ (Audrey Azoulay) ಅವರಿಂದ ಬಂದಿದೆ. ಅವರು ಎಲ್ಲಾ ದೇಶವಾಸಿಗಳಿಗೆ ನೂರು ಸಂಚಿಕೆಗಳ ಈ ಅದ್ಭುತ ಪಯಣಕ್ಕೆ ಶುಭ ಹಾರೈಸಿದ್ದಾರೆ. ಅದರೊಂದಿಗೆ, ಅವರು ಕೆಲವು ಪ್ರಶ್ನೆಗಳನ್ನು ಕೂಡಾ ಕೇಳಿದ್ದಾರೆ. ಬನ್ನಿ ಮೊದಲು UNESCO ದ DG ಯವರ ಮನದ ಮಾತುಗಳನ್ನು ಆಲಿಸೋಣ.
#ಆಡಿಯೋ (UNESCO DG)#
ಡಿಜಿ ಯುನೆಸ್ಕೊ: ನಮಸ್ತೆ ಗೌರವಾನ್ವಿತ, ಆತ್ಮೀಯ ಪ್ರಧಾನಿಯವರೆ, ಮನದ ಮಾತು ರೇಡಿಯೋ ಪ್ರಸಾರದ 100 ನೇ ಸಂಚಿಕೆಯ ಭಾಗವಾಗುವ ಈ ಅವಕಾಶಕ್ಕಾಗಿ ಯುನೆಸ್ಕೋ ಪರವಾಗಿ ನಿಮಗೆ ಧನ್ಯವಾದ ಹೇಳುತ್ತಿದ್ದೇನೆ. ಯುನೆಸ್ಕೊ ಮತ್ತು ಭಾರತ ಎರಡೂ ದೀರ್ಘಕಾಲೀನ ಸಮಾನ ಇತಿಹಾಸ ಹೊಂದಿವೆ. ಶಿಕ್ಷಣ, ವಿಜ್ಞಾನ, ಸಂಸ್ಕೃತಿ, ಮತ್ತು ಮಾಹಿತಿ ಈ ಎಲ್ಲಾ ವಲಯಗಳಲ್ಲಿ ನಾವು ಒಟ್ಟಾಗಿ ಬಲವಾದ ಪಾಲುದಾರಿಕೆ ಹೊಂದಿದ್ದೇವೆ. ಶಿಕ್ಷಣದ ಪ್ರಾಮುಖ್ಯತೆ ಕುರಿತು ಮಾತನಾಡುವುದಕ್ಕೆ ನಾನು ಇಂದಿನ ಈ ಅವಕಾಶ ಬಳಸಿಕೊಳ್ಳುತ್ತೇನೆ. 2030 ರ ವೇಳೆಗೆ ವಿಶ್ವದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಯುನೆಸ್ಕೊ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವಾಗಿರುವ ನೀವು, ಈ ಉದ್ದೇಶ ಸಾಧನೆಗೆ ಭಾರತದ ಮಾರ್ಗಗಳನ್ನು ದಯವಿಟ್ಟು ವಿವರಿಸುವಿರಾ. ಸಂಸ್ಕೃತಿಗಳನ್ನು ಬೆಂಬಲಿಸಲು ಮತ್ತು ಪರಂಪರೆಯನ್ನು ರಕ್ಷಿಸಲು ಯುನೆಸ್ಕೋ ಕೂಡಾ ಕೆಲಸ ಮಾಡುತ್ತದೆ ಮತ್ತು ಭಾರತ ಈ ವರ್ಷ ಜಿ20 ಅಧ್ಯಕ್ಷತೆ ವಹಿಸಿದೆ. ಈ ಸಮಾರಂಭದಲ್ಲಿ ಭಾಗವಹಿಸಲು ಜಾಗತಿಕ ಮುಖಂಡರು ನವದೆಹಲಿಗೆ ಆಗಮಿಸಲಿದ್ದಾರೆ. ಮಾನ್ಯರೇ, ಅಂತಾರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಸಂಸ್ಕೃತಿ ಮತ್ತು ಶಿಕ್ಷಣವನ್ನು ಭಾರತ ಅಗ್ರಸ್ಥಾನದಲ್ಲಿ ಯಾವರೀತಿ ಇರಿಸಲು ಬಯಸುತ್ತದೆ? ಈ ಅವಕಾಶಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಿದ್ದೇನೆ ಮತ್ತು ಭಾರತೀಯರಿಗೆ ನಿಮ್ಮ ಮೂಲಕ ನನ್ನ ಶುಭಾಶಯಗಳನ್ನು ಕೋರುತ್ತಿದ್ದೇನೆ. ಶೀಘ್ರದಲ್ಲೇ ಭೇಟಿಯಾಗೋಣ. ಧನ್ಯವಾದ.
ಪ್ರಧಾನಿ ಮೋದಿ: ಧನ್ಯವಾದ ಮಾನ್ಯರೇ. ಮನದ ಮಾತು ಕಾರ್ಯಕ್ರಮದ 100 ನೇ ಸಂಚಿಕೆಯಲ್ಲಿ ನಿಮ್ಮೊಂದಿಗೆ ಸಂವಾದ ನಡೆಸಿದ್ದು ನನಗೆ ಬಹಳ ಸಂತೋಷವೆನಿಸಿದೆ. ಶಿಕ್ಷಣ ಮತ್ತು ಸಂಸ್ಕೃತಿಯ ಪ್ರಮುಖ ವಿಷಯಗಳ ಕುರಿತು ನೀವು ಮಾತನಾಡಿದ್ದು ನನಗೆ ಕೂಡಾ ಸಂತಸವೆನಿಸಿದೆ.
ಸ್ನೇಹಿತರೆ, UNESCO ದ DG ಯವರು, Education ಮತ್ತು Cultural Preservation, ಅಂದರೆ ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಯ ಕುರಿತಂತೆ ಭಾರತದ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದಾರೆ. ಇವೆರಡೂ ವಿಷಯಗಳು ಮನದ ಮಾತಿನ ಅತ್ಯಂತ ನೆಚ್ಚಿನ ವಿಷಯಗಳೆನಿಸಿವೆ.
ಶಿಕ್ಷಣ ಕುರಿತ ಮಾತಾಗಿರಲಿ, ಅಥವಾ ಸಂಸ್ಕೃತಿ ಕುರಿತಾಗಿರಲಿ, ಅವುಗಳ ಸಂರಕ್ಷಣೆಯಾಗಿರಲಿ ಅಥವಾ ಪ್ರಗತಿಯಾಗಿರಲಿ, ಇದು ಭಾರತದ ಪ್ರಾಚೀನ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಇಂದು ನಡೆಯುತ್ತಿರುವ ಕೆಲಸ ಕಾರ್ಯಗಳು ನಿಜಕ್ಕೂ ಬಹಳ ಪ್ರಶಂಸನೀಯವಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ, ಅಥವಾ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ಆಯ್ಕೆ, ಶಿಕ್ಷಣದಲ್ಲಿ ತಂತ್ರಜ್ಞಾನದ ಏಕೀಕರಣ, ನಿಮಗೆ ಇಂತಹ ಅನೇಕ ಪ್ರಯತ್ನಗಳು ಕಂಡುಬರುತ್ತವೆ. ಬಹಳ ವರ್ಷಗಳ ಹಿಂದೆ ಗುಜರಾತ್ ನಲ್ಲಿ ಉತ್ತಮ ಶಿಕ್ಷಣ ನೀಡುವ ಮತ್ತು ಅರ್ಧದಲ್ಲೇ ಶಿಕ್ಷಣ ನಿಲ್ಲಿಸಿಬಿಡುವವರ ಪ್ರಮಾಣ ಕಡಿಮೆ ಮಾಡುವುದಕ್ಕಾಗಿ, ‘ಗುಣೋತ್ಸವ ಮತ್ತು ಶಾಲಾ ಪ್ರವೇಶೋತ್ಸವ’ ದಂತಹ ಕಾರ್ಯಕ್ರಮ ಜನರ ಪಾಲುದಾರಿಕೆಯಿಂದಾಗಿ ಒಂದು ಅದ್ಭುತ ಉದಾಹರಣೆಯಾಯಿತು. ನಿಸ್ವಾರ್ಥ ಮನೋಭಾವದಿಂದ ಶಿಕ್ಷಣಕ್ಕಾಗಿ ಕೆಲಸ ಮಾಡುವ ಇಂತಹ ಅದೆಷ್ಟೋ ಜನರ ಪ್ರಯತ್ನಗಳನ್ನು ನಾವು ‘ಮನದ ಮಾತು’ ಕಾರ್ಯಕ್ರಮದಲ್ಲಿ Highlight ಮಾಡಿದ್ದೇವೆ. ನಿಮಗೆ ನೆನಪಿರಬಹುದು, ಒಡಿಶಾದಲ್ಲಿ ತಳ್ಳುವ ಗಾಡಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದ ದಿವಂಗತ ಡಿ. ಪ್ರಕಾಶ್ ರಾವ್ ಅವರ ಬಗ್ಗೆ ಮಾತನಾಡಿದ್ದೆವು. ಇವರು ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದರು. ಜಾರ್ಖಂಡ್ ನಲ್ಲಿ ಹಳ್ಳಿಯಲ್ಲಿ ಡಿಜಿಟಲ್ ಗ್ರಂಥಾಲಯ ನಡೆಸುವ ಸಂಜಯ್ ಕಶ್ಯಪ್ ಇರಬಹುದು, ಕೋವಿಡ್ ಸಮಯದಲ್ಲಿ ಇ-ಲರ್ನಿಂಗ್ ಮುಖಾಂತರ ಹಲವಾರು ಮಕ್ಕಳಿಗೆ ನೆರವಾದಂತಹ ಹೇಮಲತಾ ಎನ್ ಕೆ ಇರಬಹುದು, ಇಂತಹ ಅನೇಕ ಶಿಕ್ಷಕರ ಉದಾಹರಣೆಗಳನ್ನು ನಾವು ‘ಮನದ ಮಾತಿನಲ್ಲಿ’ ನೀಡಿದ್ದೇವೆ. ನಾವು ಸಾಂಸ್ಕೃತಿಕ ರಕ್ಷಣೆಯ ಪ್ರಯತ್ನಗಳ ಬಗ್ಗೆ ಕೂಡಾ ಮನದ ಮಾತಿನಲ್ಲಿ ಸಾಕಷ್ಟು ಬಾರಿ ಮಾತನಾಡಿದ್ದೇವೆ.
ಲಕ್ಷದ್ವೀಪದ Kummel Brothers Challengers Club ಇರಬಹುದು, ಅಥವಾ ಕರ್ನಾಟಕದ ಕ್ವೇಮ್ ಶ್ರೀ ಅವರ ಕಲಾಚೇತನದಂತಹ ವೇದಿಕೆಯಿರಬಹುದು, ದೇಶದ ಮೂಲೆ ಮೂಲೆಗಳಿಂದ ಜನರು ನನಗೆ ಪತ್ರ ಬರೆದು ಹಲವು ಉದಾಹರಣೆಗಳನ್ನು ಕಳುಹಿಸಿಕೊಡುತ್ತಾರೆ. ದೇಶ ಭಕ್ತಿ ಕುರಿತ ಹಾಡು, ಜೋಗುಳ ಮತ್ತು ರಂಗೋಲಿ ಸ್ಪರ್ಧೆ ಈ ಮೂರು ಸ್ಪರ್ಧೆಗಳ ಕುರಿತು ಕೂಡಾ ನಾವು ಮಾತನಾಡಿದ್ದೆವು. ನಿಮಗೆ ನೆನಪಿರಬಹುದು ಒಂದು ಬಾರಿ ನಾವು ದೇಶಾದ್ಯಂತ ಕತೆ ಹೇಳುವವರಿಂದ ಕಥೆ ಹೇಳುತ್ತಾ ಶಿಕ್ಷಣ ನೀಡುವಂತಹ ಭಾರತೀಯ ವಿಧಾನಗಳ ಬಗ್ಗೆ ಕೂಡಾ ಮಾತನಾಡಿದ್ದೆವು. ಸಾಮೂಹಿಕ ಪ್ರಯತ್ನದಿಂದ ದೊಡ್ಡ ದೊಡ್ಡ ಬದಲಾವಣೆಗಳನ್ನು ತರಬಹುದು ಎನ್ನುವುದು ನನ್ನ ಅಚಲ ನಂಬಿಕೆಯಾಗಿದೆ. ಈ ವರ್ಷ ನಾವು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಮುಂದೆ ಸಾಗುತ್ತಿದ್ದೇವೆ, ಜಿ 20 ಅಧ್ಯಕ್ಷತೆಯನ್ನೂ ವಹಿಸುತ್ತಿದ್ದೇವೆ. ಶಿಕ್ಷಣದೊಂದಿಗೆ ವೈವಿಧ್ಯಮಯ ಜಾಗತಿಕ ಸಂಸ್ಕೃತಿಗಳನ್ನು ಸಮೃದ್ಧಿಗೊಳಿಸುವ ನಮ್ಮ ಸಂಕಲ್ಪ ಮತ್ತಷ್ಟು ಬಲಿಷ್ಠಗೊಳ್ಳಲು ಇದು ಕೂಡಾ ಒಂದು ಕಾರಣವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಉಪನಿಷತ್ತುಗಳಲ್ಲಿ ಒಂದು ಮಂತ್ರ ಶತಮಾನಗಳಿಂದ ನಮ್ಮ ಮನಸ್ಸಿಗೆ ಪ್ರೇರಣೆ ನೀಡುತ್ತಾ ಬಂದಿದೆ.
ಚರೈವೇತಿ ಚರೈವೇತಿ ಚರೈವೇತಿ
ಚಲತೇ ರಹೋ – ಚಲತೇ ರಹೋ – ಚಲತೇ ರಹೋ
(चरैवेति चरैवेति चरैवेति |
चलते रहो-चलते रहो-चलते रहो |)
ನಾವು ಇಂದು ಇದೇ ಮುಂದೆ ಸಾಗಿ ಮುಂದೆ ಸಾಗಿ ಎನ್ನುವ ಭಾವನೆಯೊಂದಿಗೆ ಮನದ ಮಾತಿನ 100 ನೇ ಸಂಚಿಕೆ ಪೂರ್ಣಗೊಳಿಸುತ್ತಿದ್ದೇವೆ. ಭಾರತದ ಸಾಮಾಜಿಕ ರಚನೆಯನ್ನು ಬಲಿಷ್ಠಗೊಳಿಸುವಲ್ಲಿ, ಮನದ ಮಾತು ಯಾವುದೇ ಹಾರದ ದಾರ ಮಣಿಗಳನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ, ಪ್ರತಿಯೊಬ್ಬರನ್ನೂ ಒಂದುಗೂಡಿಸುತ್ತದೆ. ಪ್ರತಿಯೊಂದು ಸಂಚಿಕೆಯಲ್ಲಿ ದೇಶವಾಸಿಗಳ ಸೇವೆ ಮತ್ತು ಸಾಮರ್ಥ್ಯ ಇತರರಿಗೆ ಸ್ಫೂರ್ತಿಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರತಿ ದೇಶವಾಸಿ ಮತ್ತೊಬ್ಬ ದೇಶವಾಸಿಗೆ ಪ್ರೇರಣೆಯಾಗುತ್ತಾರೆ. ಒಂದು ರೀತಿಯಲ್ಲಿ ಮನದ ಮಾತಿನ ಪ್ರತಿ ಸಂಚಿಕೆಯೂ ಮುಂದಿನ ಸಂಚಿಕೆಗೆ ಭದ್ರ ಬುನಾದಿ ಸಿದ್ಧಪಡಿಸುತ್ತದೆ. ‘ಮನದ ಮಾತು’ ಯಾವಾಗಲೂ ಸದ್ಭಾವನೆ, ಸೇವಾ ಮನೋಭಾವ ಮತ್ತು ಕರ್ತವ್ಯ ಮನೋಭಾವದಿಂದ ಮುಂದೆ ಸಾಗಿ ಬಂದಿದೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಇದೇ ಸಕಾರಾತ್ಮಕ ಭಾವನೆ ದೇಶವನ್ನು ಮುಂದೆ ಕರೆದೊಯ್ಯಲಿದೆ, ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಮತ್ತು ಅಂದು ಆರಂಭಗೊಂಡ ಮನದ ಮಾತು ಇಂದು ದೇಶದ ಹೊಸ ಪರಂಪರೆಗೆ ನಾಂದಿಯಾಗಿದೆ ಎಂದು ತಿಳಿದು ನನಗೆ ಸಂತಸವೆನಿಸುತ್ತಿದೆ. ಈ ಪರಂಪರೆಯಿಂದ ಪ್ರತಿಯೊಬ್ಬರ ಪ್ರಯತ್ನವನ್ನೂ ಅರಿಯುವ ಅವಕಾಶ ದೊರೆತಿದೆ.
ಸ್ನೇಹಿತರೇ, ಅತ್ಯಂತ ಧೈರ್ಯದಿಂದ ಈ ಇಡೀ ಕಾರ್ಯಕ್ರಮ ರೆಕಾರ್ಡ್ ಮಾಡುವಂತಹ ಆಕಾಶವಾಣಿಯ ಸ್ನೇಹಿತರಿಗೆ ಕೂಡಾ ನಾನು ಇಂದು ಧನ್ಯವಾದ ಹೇಳುತ್ತಿದ್ದೇನೆ. ಬಹಳ ಕಡಿಮೆ ಸಮಯದಲ್ಲಿ, ಬಹಳ ವೇಗವಾಗಿ, ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದ ಮಾಡುವಂತಹ ಅನುವಾದಕರಿಗೆ ಕೂಡಾ ನಾನು ಕೃತಜ್ಞನಾಗಿದ್ದೇನೆ. ನಾನು ದೂರದರ್ಶನ ಮತ್ತು MyGov ನ ಸ್ನೇಹಿತರಿಗೆ ಕೂಡಾ ಧನ್ಯವಾದ ಹೇಳುತ್ತಿದ್ದೇನೆ. ಮನ್ ಕಿ ಬಾತ್ ಕಾರ್ಯಕ್ರಮವನ್ನು ವಾಣಿಜ್ಯ ವಿರಾಮ ಇಲ್ಲದೇ ಪ್ರಸಾರ ಮಾಡುವ ದೇಶಾದ್ಯಂತದ ಟಿವಿ ವಾಹಿನಿಗಳಿಗೆ, ವಿದ್ಯುನ್ಮಾನ ಮಾಧ್ಯಮದ ಮಿತ್ರರಿಗೂ ನಾನು ಕೃತಜ್ಞನಾಗಿದ್ದೇನೆ. ಕೊನೆಯದಾಗಿ ಮನದ ಮಾತಿನ ಚುಕ್ಕಾಣಿ ಹಿಡಿದಿರುವ, ನಿಭಾಯಿಸುತ್ತಿರುವ ಭಾರತದ ಜನರಿಗೆ, ಭಾರತದ ಮೇಲೆ ವಿಶ್ವಾಸ ಇರಿಸಿರುವ ಎಲ್ಲರಿಗೂ ನಾನು ನನ್ನ ಕೃತಜ್ಞತೆ ವ್ಯಕ್ತ ಪಡಿಸುತ್ತಿದ್ದೇನೆ. ಇವೆಲ್ಲವೂ ನಿಮ್ಮೆಲ್ಲರ ಪ್ರೇರಣೆ, ಸ್ಫೂರ್ತಿ ಮತ್ತು ಶಕ್ತಿಯಿಂದಲೇ ಸಾಧ್ಯವಾಯಿತು.
ಸ್ನೇಹಿತರೇ, ನನ್ನ ಮನದಲ್ಲಿ ಇಂದು ಇನ್ನೂ ಬಹಳ ಹೇಳಬೇಕೆಂಬ ಆಸೆ ಇದೆ ಆದರೆ ಸಮಯ ಮತ್ತು ಪದಗಳು ಎರಡೂ ಕಡಿಮೆ ಎನಿಸುತ್ತಿದೆ. ಆದರೂ ನೀವೆಲ್ಲರೂ ನನ್ನ ಅನಿಸಿಕೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ, ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂಬ ನಂಬಿಕೆ ನನಗಿದೆ. ನಿಮ್ಮ ಕುಟುಂಬದ ಓರ್ವ ಸದಸ್ಯನ ರೂಪದಲ್ಲಿ ಮನದ ಮಾತಿನ ಮುಖಾಂತರ ನಿಮ್ಮೊಂದಿಗಿದ್ದೇನೆ. ನಿಮ್ಮ ನಡುವೆಯೇ ಇರುತ್ತೇನೆ. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ. ಮತ್ತೊಮ್ಮೆ ಹೊಸ ವಿಚಾರಗಳೊಂದಿಗೆ, ಹೊಸ ಮಾಹಿತಿಯೊಂದಿಗೆ ದೇಶವಾಸಿಗಳ ಯಶಸ್ಸನ್ನು ಆಚರಿಸೋಣ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ ಹಾಗೆಯೇ ನಿಮ್ಮ ಹಾಗೂ ನಿಮ್ಮವರ ಬಗ್ಗೆ ಕಾಳಜಿ ವಹಿಸಿ. ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರಿಯ ದೇಶಬಾಂಧವರೆ. ಮನದ ಮಾತಿನಲ್ಲಿ ಬೇರೆಯವರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂಥ ಸಾವಿರಾರು ಜನರ ಬಗ್ಗೆ ಚರ್ಚಿಸಿದ್ದೇವೆ. ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಪೂರ್ಣ ಪಿಂಚಣಿಯನ್ನೇ ಮುಡಿಪಾಗಿಟ್ಟವರು ಹಲವರಿದ್ದರೆ, ಇನ್ನೂ ಎಷ್ಟೋ ಜನರು ತಮ್ಮ ಜೀವನವದ ಸಂಪೂರ್ಣ ಗಳಿಕೆಯನ್ನು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಸೇವೆಗೆ ಸಮರ್ಪಿಸಿಬಿಡುತ್ತಾರೆ. ನಮ್ಮ ದೇಶದಲ್ಲಿ ಪರಮಾರ್ಥವನ್ನು ಎಷ್ಟು ಉತ್ತುಂಗದಲ್ಲಿರಿಸಿದ್ದಾರೆಂದರೆ ಬೇರೆಯವರ ಸುಖಕ್ಕಾಗಿ ತಮ್ಮ ಸರ್ವಸ್ವವನ್ನೂ ದಾನ ಮಾಡಲು ಹಿಂಜರಿಯುವುದಿಲ್ಲ. ಹಾಗಾಗಿ ಬಾಲ್ಯದಿಂದಲೂ ನಮಗೆ ಶಿಬಿ ಮತ್ತು ದಧೀಚಿಯಂತಹ ದೇಹ ದಾನ ಮಾಡಿದವರ ಕಥೆಗಳನ್ನು ಹೇಳುತ್ತಾರೆ.
ಸ್ನೇಹಿತರೆ ಆಧುನಿಕ ವೈದ್ಯವಿಜ್ಞಾನದ ಈ ಕಾಲಘಟ್ಟದಲ್ಲಿ ಅಂಗ ದಾನ, ಒಬ್ಬರಿಗೆ ಜೀವದಾನ ನೀಡುವಂತಹ ಬಹುದೊಡ್ಡ ಮಾಧ್ಯಮವಾಗಿದೆ. ಒಬ್ಬ ವ್ಯಕ್ತಿ ಮೃತ್ಯುವಿನ ನಂತರ ತನ್ನ ದೇಹದಾನ ಮಾಡಿದಲ್ಲಿ ಅದರಿಂದ 8-9 ಜನರಿಗೆ ಹೊಸ ಜೀವನ ಲಭಿಸುವ ಸಂಭಾವ್ಯತೆಯಿರುತ್ತದೆ ಎಂದು ಹೇಳಲಾಗುತ್ತದೆ. ಇಂದು ದೇಶದಲ್ಲಿ ಅಂಗ ದಾನದ ಬಗ್ಗೆ ಜಾಗರೂಕತೆ ಹೆಚ್ಚಾಗುತ್ತಿದೆ ಎಂಬುದು ಸಂತೋಷದ ಸಂಗತಿ. 2013 ರಲ್ಲಿ ಅಂಗ ದಾನದ 5000 ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದ್ದವು ಆದರೆ 2022 ರಲ್ಲಿ ಈ ಸಂಖ್ಯೆ 15 ಸಾವಿರಕ್ಕೂ ಹೆಚ್ಚಾಗಿದೆ. ಅಂಗ ದಾನ ಮಾಡುವ ವ್ಯಕ್ತಿ ಮತ್ತು ಅವರ ಕುಟುಂಬ ನಿಜಕ್ಕೂ ಪುಣ್ಯದ ಕೆಲಸ ಮಾಡಿದೆ.
ಸ್ನೇಹಿತರೆ, ಬಹಳ ಸಮಯದಿಂದ ಇಂಥ ಪುಣ್ಯದ ಕೆಲಸ ಮಾಡಿದವರ ಮನದ ಮಾತನ್ನು ಅರಿಯುವ ಮತ್ತು ಇತರ ದೇಶಬಾಂಧವರೊಂದಿಗೆ ಅದನ್ನು ಹಂಚಿಕೊಳ್ಳಬೇಕು ಎಂಬ ಬಯಕೆ ಇತ್ತು. ಆದ್ದರಿಂದ ಇಂದು ಮನದ ಮಾತಿನಲ್ಲಿ ಒಬ್ಬ ಪುಟ್ಟ ಹೆಣ್ಣುಮಗು ಮತ್ತು ಓರ್ವ ಸುಂದರ ಹೆಣ್ಣುಮಗುವಿನ ತಂದೆ ಹಾಗೂ ತಾಯಿ ನಮ್ಮೊಂದಿಗೆ ಮಾತನಾಡಲಿದ್ದಾರೆ. ತಂದೆಯ ಹೆಸರು ಸುಖಬೀರ್ ಸಿಂಗ್ ಸಂಧು ಮತ್ತು ತಾಯಿಯ ಹೆಸರು ಸುಪ್ರೀತಾ ಕೌರ್. ಈ ಕುಟುಂಬ ಪಂಜಾಬ್ ನ ಅಮೃತಸರದಲ್ಲಿ ವಾಸಿಸುತ್ತಾರೆ. ಬಹಳಷ್ಟು ಹರಕೆ ಹೊತ್ತ ನಂತರ ಅವರಿಗೆ ಒಬ್ಬ ಸುಂದರ ಹೆಣ್ಣುಮಗುವನ್ನು ಭಗವಂತ ಕರುಣಿಸಿದ. ಕುಟುಂಬದವರೆಲ್ಲ ಬಹಳ ಪ್ರೀತಿಯಿಂದ ಅವಳಿಗೆ ಅಬಾಬತ್ ಕೌರ್ ಎಂದು ಹೆಸರಿಟ್ಟಿದ್ದರು. ಅಬಾಬತ್ ಎಂಬುದರ ಅರ್ಥ ಬೇರೆಯವರ ಸೇವೆಯೊಂದಿಗೆ, ಇತರರ ಕಷ್ಟಗಳನ್ನು ಪರಿಹರಿಸುವುದರೊಂದಿಗೆ ಸೇರಿದೆ. ಅಬಾಬತ್ 39 ದಿನಗಳ ಮಗುವಾಗಿದ್ದಾಗಲೇ ಅಸುನೀಗಿದಳು. ಆದರೆ ಸುಖಬೀರ್ ಸಿಂಗ್ ಸಂಧು, ಅವರ ಪತ್ನಿ ಸುಪ್ರೀತ್ ಕೌರ್ ಹಾಗೂ ಅವರ ಕುಟುಂಬ 39 ದಿನಗಳ ತಮ್ಮ ಮಗುವಿನ ಅಂಗದಾನ ಮಾಡುವಂತಹ ಅತ್ಯಂತ ಪ್ರೇರಣಾತ್ಮಕ ನಿರ್ಣಯ ತೆಗೆದುಕೊಂಡರು. ಈಗ ದೂರವಾಣಿ ಕರೆಯಲ್ಲಿ ಸುಖಬೀರ್ ಸಿಂಗ್ ಮತ್ತು ಅವರ ಪತ್ನಿ ನಮ್ಮ ಜೊತೆಗಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡೋಣ.
ಪ್ರಧಾನಮಂತ್ರಿ: ಸುಖಬೀರ್ ಅವರೆ ನಮಸ್ಕಾರ.
ಸುಖಬೀರ್ ಸಿಂಗ್: ಗೌರವಾನ್ವಿತ ಪ್ರಧಾನಮಂತ್ರಿಗಳೇ ನಮಸ್ಕಾರ, ಸತ್ ಶ್ರೀ ಅಕಾಲ
ಪ್ರಧಾನಮಂತ್ರಿ: ಸತ್ ಶ್ರೀ ಅಕಾಲ್ ಜಿ, ಸತ್ ಶ್ರೀ ಅಕಾಲ್ … ಸುಖಬೀರ್ ಅವರೆ ಇಂದು ನಾನು ಮನದ ಮಾತಿನ ಬಗ್ಗೆ ಆಲೋಚಿಸುತ್ತಿದ್ದಾಗ, ಅಬಾಬತ್ ವಿಷಯ ಅದೆಷ್ಟು ಪ್ರೇರಣಾದಾಯಕವಾಗಿದೆ ಎಂಬುದನ್ನು ನಿಮ್ಮ ಮಾತುಗಳಲ್ಲೇ ಕೇಳಬೇಕು ಎಂದೆನಿಸಿತು. ಏಕೆಂದರೆ ಮನೆಯಲ್ಲಿ ಹೆಣ್ಣುಮಗುವಿನ ಜನನದೊಂದಿಗೆ ಅವರ ಕನಸುಗಳು ಸಾಕಷ್ಟು ಸಂತಸ ಸಂಭ್ರಮವನ್ನು ಹೊತ್ತು ತರುತ್ತವೆ. ಆದರೆ ಮಗಳು ಇಷ್ಟು ಬೇಗ ತೊರೆದು ಹೋದರೆ ಆ ಕಷ್ಟ ಎಷ್ಟು ವೇದನೆಯನ್ನು ತಂದು ಕೊಡುತ್ತದೆ ಎಂಬುದನ್ನು ನಾನು ಊಹಿಸಬಲ್ಲೆ. ನೀವು ಯಾವ ರೀತಿ ನಿರ್ಣಯ ಕೈಗೊಂಡಿರಿ ಎಂಬುದರ ಬಗ್ಗೆ ವಿವರವಾಗಿ ತಿಳಿಯಬಯಸುತ್ತೇನೆ.
ಸುಖಬೀರ್ ಸಿಂಗ್: ಸರ್, ಭಗವಂತ ನಮಗೆ ಬಹಳ ಒಳ್ಳೇ ಮಗುವನ್ನು ಕರುಣಿಸಿದ್ದ. ನಮ್ಮ ಮನೆಗೆ ಬಹಳ ಸುಂದರ ಹೆಣ್ಣುಮಗುವನ್ನು ದಯಪಾಲಿಸಿದ್ದ. ಆದರೆ ಅವಳ ಜನ್ಮದ ನಂತರ ನಮಗೆ ಅವಳ ಮೆದುಳಿನಲ್ಲಿ ಕೆಲ ನರಗಳು ಗಂಟು ಕಟ್ಟಿಕೊಂಡರುವುದರಿಂದ ಅವಳ ಹೃದಯದ ಗಾತ್ರ ದೊಡ್ಡದಾಗುತ್ತಾ ಸಾಗಿದೆ ಎಂಬುದು ತಿಳಿಯಿತು. ಆದರೆ, ಮಗುವಿನ ಆರೋಗ್ಯ ತುಂಬಾ ಚೆನ್ನಾಗಿತ್ತು, ಎಷ್ಟೊಂದು ಸುಂದರ ಮಗು ಎಂಥ ದೊಡ್ಡ ಸಮಸ್ಯೆಯೊಂದಿಗೆ ಜನ್ಮ ತಳೆದಿದೆ ಎಂಬುದು ನಮ್ಮಲ್ಲಿ ಆತಂಕ ಮೂಡಿಸಿತು. ಮೊದಲ ಆರಂಭದ 24 ದಿನಗಳು ಮಗು ತುಂಬಾ ಚೆನ್ನಾಗಿತ್ತು. Normal ಆಗೇ ಇತ್ತು. ಇದ್ದಕ್ಕಿದ್ದಂತೆ ಅವಳ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು. ಕೂಡಲೇ ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದರು. ಆದರೆ ಅವಳ ಸಮಸ್ಯೆಯೇನೆಂದು ತಿಳಿಯಲು ಸಮಯ ಬೇಕಾಯಿತು. ಅಷ್ಟು ಪುಟ್ಟ ಮಗುವಿಗೆ ಹೃದಯಾಘಾತವಾಯಿತು, ನಾವು ಚಿಕಿತ್ಸೆಗಾಗಿ ಅವಳನ್ನು ಚಂದೀಘಡದ ಪಿ ಜಿ ಐ ಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಬಹಳ ಧೈರ್ಯದಿಂದ ಮಗು ಚಿಕಿತ್ಸೆಗೆ ಸ್ಪಂದಿಸುವ ಪ್ರಯತ್ನ ಮಾಡಿತು. ಆದರೆ ರೋಗ ಎಷ್ಟು ಗಂಭೀರವಾಗಿತ್ತೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದರ ಚಿಕಿತ್ಸೆ ಅಸಾಧ್ಯವಾಗಿತ್ತು. ವೈದ್ಯರು ಅವಳು ಚೇತರಿಕೊಳ್ಳುವಂತಾಗಲು ಬಹಳ ಪ್ರಯತ್ನಪಟ್ಟರು. 6 ತಿಂಗಳವರೆಗೆ ಮಗು ಚೇತರಿಸಿಕೊಂಡರೆ ಆಪರೇಷನ್ ಮಾಡಬಹುದಾಗಿತ್ತು. ಆದರೆ ದೇವರ ಇಚ್ಛೇ ಬೆರೆಯೇ ಆಗಿತ್ತು. ಮಗು 39 ದಿನದವಳಾಗಿದ್ದಾಗ ಮತ್ತೆ ಅವಳಿಗೆ ಹೃದಯಾಘಾತವಾಗಿದೆ ಅಲ್ಲದೆ ಅವಳ ಬದುಕುಳಿಯುವ ಸಂಭಾವ್ಯತೆ ಬಹಳ ಕಡಿಮೆ ಎಂದು ವೈದ್ಯರು ಹೇಳಿದರು. ಆಗ ನಾವಿಬ್ಬರೂ ದಂಪತಿಗಳು ಆ ಮಗು ಮತ್ತೆ ಮತ್ತೆ ಸಾವಿನೊಂದಿಗೆ ಹೋರಾಡಿ ಚೇತರಿಸಿಕೊಳ್ಳುತ್ತಿರುವುದನ್ನು ನಾವು ಕಂಡಿದ್ದೆವು, ಇನ್ನೇನು ಕೈಬಿಟ್ಟು ಹೋಗುತ್ತಾಳೆ ಎನ್ನುತ್ತಿರುವಾಗಲೇ ಚೇತರಿಸಿಕೊಳ್ಳುತ್ತಿದ್ದಳು. ಅವಳು ಕೊನೆಯುಸಿರೆಳೆದಾಗ ಈ ಮಗು ಈ ಲೋಕಕ್ಕೆ ಬಂದಿರುವುದರ ಹಿಂದೆ ಯಾವುದೋ ಉದ್ದೇಶವಿದೆ ಆದ್ದರಿಂದ ಯಾಕೆ ನಾವು ಅವಳ ಅಂಗದಾನ ಮಾಡಬಾರದು, ಬೇರೆ ಯಾವುದೋ ಮಗುವಿನ ಜೀವನದಲ್ಲಿ ಬೆಳಕು ಮೂಡಬಹುದಲ್ಲ ಎಂದು ಆಲೋಚಿಸಿದೆವು. ಆಗ ನಾವು ಪಿಜಿಐ ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸಿದೆವು. ಇಷ್ಟು ಪುಟ್ಟ ಮಗುವಿನ ಮೂತ್ರಪಿಂಡವನ್ನು ಮಾತ್ರವೇ ತೆಗೆದುಕೊಳ್ಳಬಹುದು ಎಂದು ಅವರು ನಮಗೆ ಮಾರ್ಗದರ್ಶನ ನೀಡಿದರು. ಆ ಭಗವಂತನೇ ನಮಗೆ ಶಕ್ತಿ ತುಂಬಿದ ಗುರುನಾನಕ ದೇವ್ ಅವರ ತತ್ವ ಇದನ್ನೇ ಹೇಳುತ್ತದೆ ಎಂದು ತಿಳಿದು ನಾವು ನಿರ್ಣಯ ಕೈಗೊಂಡೆವು
ಪ್ರಧಾನಮಂತ್ರಿ: ಗುರು ತೋರಿದ ದಾರಿಯಲ್ಲಿ ನಡೆಯುವುದು ಮಾತ್ರವಲ್ಲ ಅದನ್ನೇ ಜೀವಿಸಿ ತೋರಿಸಿದ್ದೀರಿ. ಸುಪ್ರೀತ್ ಅವರಿದ್ದಾರೆಯೇ? ಅವರೊಂದಿಗೆ ಮಾತನಾಡಬಹುದೇ?
ಸುಖಬೀರ್ ಸಿಂಗ್: ಇದ್ದಾರೆ ಸರ್
ಸುಪ್ರೀತ್: ಹಲ್ಲೋ
ಪ್ರಧಾನಮಂತ್ರಿ: ಹಲ್ಲೋ, ಸುಪ್ರೀತ್ ಅವರೆ ನಮಸ್ಕಾರ
ಸುಖಬೀರ್ ಸಿಂಗ್: ನಮಸ್ಕಾರ ಸರ್, ನೀವು ನಮ್ಮೊಂದಿಗೆ ಮಾತನಾಡುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ.
ಪ್ರಧಾನಮಂತ್ರಿ: ನೀವು ಎಷ್ಟು ದೊಡ್ಡ ಕೆಲಸ ಮಾಡಿದ್ದೀರಿ. ದೇಶದ ಜನರು ನಿಮ್ಮ ಮಾತುಗಳನ್ನು ಕೇಳಿದಾಗ ಜನರು ಇತರರ ಜೀವ ಉಳಿಸಲೆಂದು ಮುಂದೆ ಬರುತ್ತಾರೆ ಎಂಬುದು ನನ್ನ ಆಶಯ.ತೆಗೆದುಹಾಕಬೇಕೆಂದುಕೊಂಡೆವು ಅಬಾಬತ್ ಳ ಕೊಡುಗೆ ಬಹಳ ದೊಡ್ಡದು.
ಸುಪ್ರೀತ್: ಸರ್, ಬಹುಶಃ ಗುರು ನಾನಕ್ ಜಿ ಅವರ ಪ್ರೇರಣೆಯೇ ಇರಬೇಕು - ನಾವು ಇಷ್ಟು ದೊಡ್ಡ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಯಿತು.
ಪ್ರಧಾನಮಂತ್ರಿ: ಗುರುಗಳ ಕೃಪೆಯಿಲ್ಲದೆ ಏನೂ ಸಾಧ್ಯವಿಲ್ಲ.
ಸುಪ್ರೀತ್: ಖಂಡಿತ ಸರ್,
ಪ್ರಧಾನಮಂತ್ರಿ: ಸುಖಬೀರ್ ಅವರೆ ನೀವು ಆಸ್ಪತ್ರೆಯಲ್ಲಿದ್ದಾಗ ಎದೆ ಝಲ್ಲೆನ್ನುವಂತಹ ವಿಷಯವನ್ನು ನಿಮಗೆ ತಿಳಿಸಿದಾಗ್ಯೂ ನೀವು ಮತ್ತು ನಿಮ್ಮ ಪತ್ನಿ ಎದೆಗುಂದದೆ ಇಷ್ಟು ದೊಡ್ಡ ನಿರ್ಣಯ ಕೈಗೊಂಡಿರಿ. ಗುರುಗಳ ಆಶೀರ್ವಾದದಿಂದಲೇ ನಿಮ್ಮ ಮನದಲ್ಲಿ ಇಷ್ಟು ಉದಾತ್ತ ವಿಚಾರಗಳು ಬಂದಿವೆ. ಸಾಮಾನ್ಯ ಮಾತುಗಳಲ್ಲಿ ಹೇಳುವುದಾದರೆ ಅಬಾಬತ್ ಅರ್ಥವೇ ಬೇರೆಯವರಿಗೆ ನೆರವಾಗುವುದು ಎಂದಿದೆ. ಇಂಥ ಉದಾತ್ತ ಕಾರ್ಯ ಮಾಡಿದ ಕ್ಷಣದ ಬಗ್ಗೆ ನಾನು ಕೇಳಬಯಸುತ್ತೇನೆ.
ಸುಖಬೀರ್: ಸರ್, ಪ್ರಿಯಾ ಎಂಬ ನಮ್ಮ ಕುಟುಂಬ ಸ್ನೇಹಿತರೊಬ್ಬರಿದ್ದಾರೆ. ಅವರು ತಮ್ಮ ಅಂಗದಾನ ಮಾಡಿದ್ದರು. ಅವರಿಂದಲೂ ನಮಗೆ ಪ್ರೇರಣೆ ದೊರೆಯಿತು. ಆಗ ನಮಗೆ ಈ ಶರೀರ ಪಂಚತತ್ವಗಳಲ್ಲಿ ವಿಲೀನವಾಗಿಹೋಗುವುದು ಎಂದೆನಿಸಿತು. ಯಾರಾದರೂ ನಮ್ಮನ್ನಗಲಿದಾಗ ಅವರ ಶರೀರವನ್ನು ಅಗ್ನಿಯಲ್ಲಿ ದಹಿಸಲಾಗುತ್ತದೆ ಇಲ್ಲವೆ ಹೂಳಲಾಗುತ್ತದೆ. ಆದರೆ ಅವರ ಅಂಗ ಯಾರಿಗಾದರೂ ಉಪಯೋಗಕ್ಕೆ ಬಂದರೆ ಅದು ಒಳ್ಳೆಯದೇ ಅಲ್ಲವೇ. ವೈದ್ಯರು ನಮಗೆ ನಿಮ್ಮ ಮಗಳು ಭಾರತದ ಅತ್ಯಂತ ಕಿರಿಯ ವಯಸ್ಸಿನ ಅಂಗದಾನಿಯಾಗಿದ್ದಾಳೆ ಮತ್ತು ಅವಳ ಅಂಗ ಯಶಸ್ವಿಯಾಗಿ ಬೇರೆಯವರಿಗೆ ಕಸಿ ಮಾಡಲಾಗಿದೆ ಎಂದು ಹೇಳಿದಾಗ ನಮಗೆ ಬಹಳ ಹೆಮ್ಮೆಯೆನಿಸಿತು. ನಾವು ಇಷ್ಟು ವರ್ಷಗಳಲ್ಲಿ ನಮ್ಮ ಪಾಲಕರ ಹೆಸರನ್ನು ಬೆಳಗಲಾಗಲಿಲ್ಲ, ಆದರೆ ಒಂದು ಪುಟ್ಟ ಮಗು ಕೆಲವೇ ದಿನಗಳಲ್ಲಿ ನಮ್ಮ ಹೆಸರನ್ನು ಬೆಳಗಿಸಿದ್ದಾಳೆ. ಇಷ್ಟೇ ಅಲ್ಲ ಈ ವಿಷಯದ ಕುರಿತು ನಿಮ್ಮೊಂದಿಗೆ ನಾವು ಮಾತನಾಡುತ್ತಿರುವುದು ಮತ್ತಷ್ಟು ಹೆಮ್ಮೆಯ ವಿಷಯವಾಗಿದೆ.
ಪ್ರಧಾನಮಂತ್ರಿ: ಸುಖಬೀರ್ ಅವರೇ ಇಂದು ನಿಮ್ಮ ಮಗುವಿನ ಅಂಗ ಮಾತ್ರ ಜೀವಂತವಾಗಿದೆ ಎಂದಲ್ಲ, ನಿಮ್ಮ ಮಗಳು ಮಾನವತೆಯ ಅಮರಗಾಥೆಯ ಅಮರ ಯಾತ್ರಿಕಳಾಗಿದ್ದಾಳೆ. ತನ್ನ ಶರೀರದ ಅಂಶದೊಂದಿಗೆ ಅವಳು ಇಂದಿಗೂ ಜೀವಂತವಾಗಿದ್ದಾಳೆ. ಈ ಉತ್ತಮ ಕೆಲಸಕ್ಕಾಗಿ ನಿಮ್ಮನ್ನು, ನಿಮ್ಮ ಶ್ರೀಮತಿಯವರನ್ನು ಮತ್ತು ಕುಟುಂಬದವರನ್ನು ನಾನು ಪ್ರಶಂಸಿಸುತ್ತೇನೆ.
ಸುಖಬೀರ್: ಧನ್ಯವಾದಗಳು ಸರ್…
ಸ್ನೇಹಿತರೆ, ನಾವು ಶಾಶ್ವತವಾಗಿ ಹೊರಟು ಹೋಗುವಾಗಲೂ ಒಬ್ಬರ ಜೀವವನ್ನು ಉಳಿಸಬೇಕು ಎಂಬುದೇ ಅಂಗಾಂಗ ದಾನದ ಬಹುದೊಡ್ಡ ಧ್ಯೇಯವಾಗಿರುತ್ತದೆ. ಅಂಗಾಂಗ ದಾನಕ್ಕಾಗಿ ಕಾಯುವ ಜನರಿಗೆ, ಕಾಯುವ ಪ್ರತಿ ಕ್ಷಣವನ್ನು ಕಳೆಯುವುದು ಎಷ್ಟು ಕಷ್ಟದಾಯಕ ಎಂಬುದು ತಿಳಿದಿರುತ್ತದೆ ಮತ್ತು ಅಂತಹ ಸ್ಥಿತಿಯಲ್ಲಿ, ಅಂಗದಾನಿ ಅಥವಾ ದೇಹದಾನಿ ದೊರೆತಲ್ಲಿ ಅವರು ದೇವರ ಪ್ರತಿರೂಪದಂತೆ ಕಾಣುತ್ತಾರೆ. ಜಾರ್ಖಂಡ್ ನಿವಾಸಿ ಸ್ನೇಹಲತಾ ಚೌಧರಿ ಕೂಡ ದೇವರಂತೆ ಇತರರಿಗೆ ಜೀವನ ನೀಡಿದವರು. 63 ವರ್ಷದ ಸ್ನೇಹಲತಾ ಚೌಧರಿ ಅವರು ತಮ್ಮ ಹೃದಯ, ಮೂತ್ರಪಿಂಡ ಮತ್ತು ಯಕೃತ್ತು ದಾನ ಮಾಡಿದ್ದಾರೆ. ಇಂದು 'ಮನ್ ಕಿ ಬಾತ್' ನಲ್ಲಿ ಅವರ ಮಗ – ಸೋದರ ಅಭಿಜಿತ್ ಚೌಧರಿ ನಮ್ಮೊಂದಿಗಿದ್ದಾರೆ. ಅವರೊಂದಿಗೆ ಮಾತನಾಡೋಣ.
ಪ್ರಧಾನಮಂತ್ರಿ – ಅಭಿಜೀತ್ ಅವರೇ ನಮಸ್ಕಾರ
ಅಭಿಜೀತ್ ಜೀ- ನಮಸ್ಕಾರ ಸರ್.
ಪ್ರಧಾನಮಂತ್ರಿ- ಅಭಿಜೀತ್ ಅವರೆ, ನಿಮ್ಮ ತಾಯಿ ನಿಮಗೆ ಜನ್ಮ ನೀಡುವ ಮೂಲಕ ತಾಯಿಯಾದರೂ ತಮ್ಮ ಮರಣಾ ನಂತರವೂ ಅನೇಕ ಜನರಿಗೆ ಜೀವನ ನೀಡಿದ ಮಹಾತಾಯಿಯ ಮಗ ನೀವು. ಮಗನಾಗಿ ಅಭಿಜಿತ್ ನಿಮಗೆ ಬಹಳ ಹೆಮ್ಮೆ ಎನಿಸುತ್ತಿರಬೇಕು.
ಅಭಿಜೀತ್: ಹೌದು ಸರ್.
ಪ್ರಧಾನಮಂತ್ರಿ: ನಿಮ್ಮ ತಾಯಿಯ ಬಗ್ಗೆ ಸ್ವಲ್ಪ ಹೇಳಿ, ಯಾವ ಸಂದರ್ಭದಲ್ಲಿ ಅಂಗಾಂಗ ದಾನದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು?
ಅಭಿಜೀತ್: ಜಾರ್ಖಂಡ್ನಲ್ಲಿ ಸರಾಯಿಕೆಲಾ ಎಂಬ ಒಂದು ಪುಟ್ಟ ಗ್ರಾಮವಿದೆ, ಅಲ್ಲಿ ನನ್ನ ತಂದೆ-ತಾಯಿ ಇಬ್ಬರೂ ವಾಸಿಸುತ್ತಿದ್ದರು. ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ನಮ್ಮ ತಾಯಿ ಬೆಳಗಿನ ವಾಕಿಂಗ್ ಮಾಡುತ್ತಿದ್ದರು, ಅವರು ತಮ್ಮ ಅಭ್ಯಾಸಬಲದಂತೆ ಬೆಳಗಿನ ಜಾವ 4 ಗಂಟೆಗೆ ತಮ್ಮ ಬೆಳಗಿನ ವಾಕಿಂಗ್ ಗೆ ಹೊರಟಿದ್ದರು. ಆ ವೇಳೆ ಬೈಕ್ ಸವಾರನೊಬ್ಬ ಅವರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಆಕೆಯ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ನಾವು ಅವರನ್ನು ಸರಾಯಿಕೆಲಾ ಆಸ್ಪತ್ರೆಗೆ ಕರೆದೊಯ್ದೆವು, ವೈದ್ಯರು ಅವರಿಗೆ ಔಷಧೋಪಚಾರ ಮಾಡಿದರು, ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ತಕ್ಷಣ ಅವರನ್ನು ಟಾಟಾ ಮುಖ್ಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು, 48 ಗಂಟೆಗಳ ವೀಕ್ಷಣೆಯ ನಂತರ, ವೈದ್ಯರು ಅವರು ಬದುಕುಳಿಯುವ ಅವಕಾಶಗಳು ಬಹಳ ಕಡಿಮೆ ಎಂದು ಹೇಳಿದರು. ನಂತರ ನಾವು ಅವರನ್ನು ವಿಮಾನದಲ್ಲಿ ಕರೆತಂದು ದೆಹಲಿಯ ಏಮ್ಸ್ಗೆ ಕರೆದುಕೊಂಡುಹೋದವು.. ಸುಮಾರು 7-8 ದಿನಗಳ ಕಾಲ ಅಲ್ಲಿ ಚಿಕಿತ್ಸೆ ನಡೆಯಿತು. ಅನಂತರ ಅವರ ಸ್ಥಿತಿ ಸುಧಾರಿಸಿತ್ತು. ಇದ್ದಕ್ಕಿದ್ದಂತೆ ಅವರ ರಕ್ತದೊತ್ತಡ ತುಂಬಾ ಕಡಿಮೆಯಾಯಿತು, ಆ ನಂತರ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿದೆ ಎಂದು ಗೊತ್ತಾಯಿತು. ನಂತರ ಶಿಷ್ಟಾಚಾರದಂತೆ ವೈದ್ಯರು ಅಂಗಾಂಗ ದಾನದ ಬಗ್ಗೆ ನಮಗೆ ತಿಳಿಸುತ್ತಿದ್ದರು. ಅಂಗಾಂಗ ದಾನ ಎಂಬುದು ಕೂಡ ಅಸ್ತಿತ್ವದಲ್ಲಿದೆ ಎಂದು ನಮ್ಮ ತಂದೆಗೆ ನಾವು ಹೇಳಲು ಸಾಧ್ಯವಿರಲಿಲ್ಲ. ಏಕೆಂದರೆ ಸಹಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ ಎಂದು ನಾವು ಭಾವಿಸಿದ್ದೆವು. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬುದನ್ನು ಅವರ ಮನಸ್ಸಿನಿಂದ ತೆಗೆದುಹಾಕಬೇಕೆಂದುಕೊಂಡೆವು. ನಾವು ಅವರಿಗೆ ಅಂಗಾಂಗ ದಾನದ ಮಾತು ನಡೆಯುತ್ತಿದೆ ಎಂದು ಹೇಳಿದ ತಕ್ಷಣ ಅವರು “ಇದೇ ನಿಮ್ಮ ತಾಯಿಯ ಇಚ್ಛೆಯಾಗಿತ್ತು ಮತ್ತು ನಾವು ಇದನ್ನು ಖಂಡಿತ ಮಾಡಲೇಬೇಕು ಎಂದು ಹೇಳಿದರು. ನಮ್ಮ ತಾಯಿ ಬದುಕುಳಿಯುವುದಿಲ್ಲ ಎಂದು ತಿಳಿದಾಗ ನಮಗೆ ತುಂಬಾ ನಿರಾಸೆಯಾಗಿತ್ತು ಆದರೆ ಅಂಗಾಂಗ ದಾನದ ಬಗ್ಗೆ ಚರ್ಚೆ ಪ್ರಾರಂಭವಾದ ನಂತರ, ಆ ನಿರಾಶಾವಾದವು ಸಕಾರಾತ್ಮಕವಾಗಿ ಬದಲಾಗಿಹೋಯಿತು ಮತ್ತು ನಾವು ತುಂಬಾ ಸಕಾರಾತ್ಮಕ ವಾತಾವರಣಕ್ಕೆ ಮರಳಿದೆವು. . ಹೀಗೆ ಚರ್ಚೆ ಮುಂದುವರಿದು ರಾತ್ರಿ 8 ಗಂಟೆಗೆ ಆಪ್ತಸಮಾಲೋಚನೆ ನಡೆಸಲಾಯಿತು. ಎರಡನೇ ದಿನ ಅಂಗಾಂಗ ದಾನ ಮಾಡಿದೆವು. ನಮ್ಮ ತಾಯಿ ಈ ಹಿಂದೆ ನೇತ್ರದಾನ ಮತ್ತು ಸಾಮಾಜಿಕ ಚಟುವಟಿಕೆಯಂಥ ವಿಷಯಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಬಹುಶಃ ನಾವು ಈ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತು ಈ ವಿಷಯದ ಬಗ್ಗೆ ನನ್ನ ತಂದೆಯ ನಿರ್ಧಾರದಿಂದಾಗಿ ಅಂತಹ ದೊಡ್ಡ ನಿರ್ಧಾರ ಕೈಗೊಳ್ಳಲು ಸಾಧ್ಯವಾಯಿತು.
ಪ್ರಧಾನಮಂತ್ರಿ: ಎಷ್ಟು ಜನರಿಗೆ ಅಂಗಾಂಗ ಉಪಯುಕ್ತವಾದವು?
ಅಭಿಜೀತ್: ಅವರ ಹೃದಯ, ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಎರಡೂ ಕಣ್ಣುಗಳನ್ನು ದಾನ ಮಾಡಲಾಯಿತು, ಇದರಿಂದ ನಾಲ್ಕು ಜನರಿಗೆ ಜೀವದಾನ ದೊರೆಯಿತು ಮತ್ತು ಇಬ್ಬರಿಗೆ ದೃಷ್ಟಿ ಲಭಿಸಿತು.
ಪ್ರಧಾನಮಂತ್ರಿ- ಅಭಿಜೀತ್ ಅವರೇ, ನಿಮ್ಮ ತಂದೆ ಮತ್ತು ತಾಯಿ ಇಬ್ಬರೂ ಗೌರವಕ್ಕೆ ಅರ್ಹರು. ನಾನು ಅವರಿಗೆ ಮತ್ತು ನಿಮ್ಮ ತಂದೆ ನಿಮ್ಮ ಕುಟುಂಬ ಸದಸ್ಯರ ಇಂತಹ ದೊಡ್ಡ ನಿರ್ಧಾರಕ್ಕೆ ನೇತೃತ್ವವಹಿಸಿದ್ದು, ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಮತ್ತು ತಾಯಿ ಎಲ್ಲರಿಗೂ ತಾಯಿಯೇ ಎಂದು ನಾನು ನಂಬುತ್ತೇನೆ. ತಾಯಿ ಸ್ಫೂರ್ತಿಯ ಸೆಲೆ. ಆದರೆ ತಾಯಿ ಬಿಟ್ಟು ಹೋಗುವ ಸಂಸ್ಕಾರ ಪೀಳಿಗೆಯಿಂದ ಪೀಳಿಗೆಗೆ ಅಗಾಧ ಶಕ್ತಿಯಾಗುತ್ತಾ ಸಾಗುತ್ತದೆ. ಅಂಗಾಂಗ ದಾನದ ವಿಷಯದಲ್ಲಿ ನಿಮ್ಮ ತಾಯಿಯ ಪ್ರೇರಣೆ ಇಂದು ಇಡೀ ದೇಶವನ್ನೇ ತಲುಪುತ್ತಿದೆ. ಈ ಪವಿತ್ರ ಮತ್ತು ಉತ್ತಮ ಕೆಲಸಕ್ಕಾಗಿ ನಿಮ್ಮ ಇಡೀ ಕುಟುಂಬವನ್ನು ನಾನು ಅಭಿನಂದಿಸುತ್ತೇನೆ. ಧನ್ಯವಾದಗಳು ಅಭಿಜೀತ್ ಅವರೆ, ಮತ್ತು ನಿಮ್ಮ ತಂದೆಗೆ ಖಂಡಿತ ನಮನಗಳನ್ನು ತಿಳಿಸಿ.
ಅಭಿಜೀತ್: ಖಂಡಿತವಾಗಿ, ಧನ್ಯವಾದಗಳು.
ಸ್ನೇಹಿತರೇ, 39 ದಿನಗಳ ಕಾಲ ಜೀವಿಸಿದ್ದಅಬಾಬತ್ಕೌರ್ ಇರಬಹುದು ಅಥವಾ 63 ವರ್ಷ ವಯಸ್ಸಿನ ಸ್ನೇಹಲತಾಚೌಧರಿ ಇರಬಹುದು, ಇಂತಹ ದಾನವೀರರು ನಮಗೆ ಜೀವನದ ಮಹತ್ವ ಅರ್ಥಮಾಡಿಸಿಹೋಗುತ್ತಾರೆ. ನಮ್ಮ ದೇಶದಲ್ಲಿ ಇಂದು, ಆರೋಗ್ಯಪೂರ್ಣ ಜೀವನ ನಡೆಸುವ ಆಸೆಯಿಂದ, ಅಂಗಾಂಗ ದಾನ ಪಡೆದುಕೊಳ್ಳುವ ಅಗತ್ಯವಿರುವ, ಅದಕ್ಕಾಗಿ ನಿರೀಕ್ಷಿಸುತ್ತಿರುವಂತಹ ಜನರು ಅತಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅಂಗಾಗದಾನವನ್ನು ಸುಲಭ ಮಾಡುವುದಕ್ಕಾಗಿ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ದೇಶಾದ್ಯಂತ ಇಂತಹ ಏಕರೂಪದನೀತಿಯ ಪ್ರಕಾರ ಕೆಲಸ ನಡೆಯುತ್ತಿದೆ ಎಂಬ ತೃಪ್ತಿ ನನಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ವಾಸಸ್ಥಳದಷರತ್ತುಗಳನ್ನುತೆಗೆದುಹಾಕುವ ನಿರ್ಣಯ ಕೂಡಾ ಕೈಗೊಳ್ಳಲಾಗುತ್ತಿದೆ, ಅಂದರೆ, ರೋಗಿಯು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ಅಂಗಪಡೆದುಕೊಳ್ಳುವುದಕ್ಕಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಸರ್ಕಾರವು ಅಂಗಾಂಗ ದಾನಕ್ಕಾಗಿ 65 ವರ್ಷಕ್ಕಿಂತ ಕಡಿಮೆ ವಯಸ್ಸಿನ, ವಯಸ್ಸು ಮಿತಿಯನ್ನು ಕೂಡಾ ಕೊನೆಗೊಳಿಸುವ ನಿರ್ಣಯ ಕೈಗೊಂಡಿದೆ. ಈ ಪ್ರಯತ್ನಗಳ ನಡುವೆಯೇ, ಅಂಗಾಂಗ ದಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬರಬೇಕೆಂದು ನಾನು ದೇಶವಾಸಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮ ಇಂತಹ ಒಂದು ನಿರ್ಧಾರ, ಅನೇಕರ ಜೀವ ಉಳಿಸಬಹುದಾಗಿದೆ, ಅನೇಕರಿಗೆ ಜೀವನ ನೀಡಬಹುದಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇದು ನವರಾತ್ರಿಯ ಸಮಯ, ಶಕ್ತಿ ದೇವತೆಯ ಆರಾಧನೆಯ ಸಮಯ. ಇಂದು ಹೊಸ ಕೋನದಿಂದ ಹೊರಹೊಮ್ಮುತ್ತಾ ಮುಂದೆ ಬರುತ್ತಿರುವ ಭಾರತದ ಸಾಮರ್ಥ್ಯದಲ್ಲಿ, ಅತ್ಯಂತ ದೊಡ್ಡ ಪಾತ್ರ ನಮ್ಮ ಮಹಿಳೆಯರ ಶಕ್ತಿಯಾಗಿದೆ. ಇತ್ತೀಚೆಗೆ ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದೆ ಬಂದಿವೆ. ಇತ್ತೀಚೆಗೆ ನೀವು ಸೋಷಿಯಲ್ ಮೀಡಿಯಾದಲ್ಲಿ ಏಷ್ಯಾದ ಪ್ರಥಮ ಮಹಿಳಾ ಲೋಕೋಪೈಲಟ್ ಸುರೇಖಾ ಯಾದವ್ ಅವರನ್ನು ಖಂಡಿತವಾಗಿಯೂ ನೋಡಿಯೇ ಇರುತ್ತೀರಿ. ಸುರೇಖಾ ಅವರು, ವಂದೇ ಭಾರತ್ ಎಕ್ಸ್ ಪ್ರೆಸ್ ನ ಪ್ರಥಮ ಮಹಿಳಾ ಲೋಕೋ ಪೈಲಟ್ ಆಗಿ ಮತ್ತೊಂದು ಹೆಗ್ಗಳಿಕೆಯ ದಾಖಲೆಗೆ ಪಾತ್ರರಾಗಿದ್ದಾರೆ. ಇದೇ ತಿಂಗಳು, ಚಿತ್ರ ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕೀ ಗೋಂಜಾಲ್ವಿಸ್ ಅವರುಗಳು ತಮ್ಮ ಡಾಕ್ಯುಮೆಂಟರಿ ‘Elephant Whisperers’ ಗಾಗಿ Oscar ಪ್ರಶಸ್ತಿ ವಿಜೇತರಾಗಿ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿ, ಜ್ಯೋತಿರ್ಮಯಿ ಮೊಹಾಂತಿ ಅವರು ಕೂಡಾ ದೇಶಕ್ಕಾಗಿ ಮತ್ತೊಂದು ಸಾಧನೆ ಮಾಡಿದ್ದಾರೆ. ಜ್ಯೋತಿರ್ಮಯಿ ಅವರಿಗೆ ಕೆಮಿಕಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ IUPAC ನ ವಿಶೇಷ ಪ್ರಶಸ್ತಿ ದೊರೆತಿದೆ. ಈ ವರ್ಷದ ಆರಂಭದಲ್ಲಿ, ಭಾರತದ 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳಾ ಕ್ರಿಕೆಟ್ ತಂಡವು ಟಿ-20 ವಿಶ್ವಕಪ್ ಪ್ರಶಸ್ತಿ ತನ್ನದಾಗಿಸಿಕೊಂಡು ಹೊಸದೊಂದು ಇತಿಹಾಸ ಸೃಷ್ಟಿಸಿತು. ನೀವು ರಾಜಕೀಯದತ್ತ ನೋಡಿದರೆ, ಒಂದು ಹೊಸ ಆರಂಭ ನಾಗಾಲ್ಯಾಂಡ್ ನಲ್ಲಿ ನಡೆದಿದೆ. ನಾಗಾಲ್ಯಾಂಡ್ ನಲ್ಲಿ 75 ವರ್ಷಗಳಲ್ಲಿ ಮೊದಲಬಾರಿಗೆ ಇಬ್ಬರು ಮಹಿಳಾ ಶಾಸಕರು ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿದ್ದಾರೆ. ಇವರಲ್ಲಿ ಒಬ್ಬರನ್ನು ನಾಗಾಲ್ಯಾಂಡ್ ಸರ್ಕಾರವು ಸಚಿವರನ್ನಾಗಿ ಕೂಡಾ ನೇಮಿಸಿದೆ ಅಂದರೆ, ರಾಜ್ಯದ ಜನತೆಗೆ ಪ್ರಥಮ ಬಾರಿಗೆ ಮಹಿಳಾ ಸಚಿವರೊಬ್ಬರು ದೊರೆತಿದ್ದಾರೆ.
ಸ್ನೇಹಿತರೇ, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ ಅಲ್ಲಿನ ಜನರಿಗೆ ಸಹಾಯ ಮಾಡಲು ಹೋಗಿದ್ದಂತಹ ಆ ಧೈರ್ಯಶಾಲಿ ಹೆಣ್ಣುಮಕ್ಕಳನ್ನು ನಾನು ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದೆ. ಇವರೆಲ್ಲರೂ NDRF ತಂಡದಲ್ಲಿ ಸೇರಿದ್ದರು. ಇವರ ಧೈರ್ಯ ಮತ್ತು ಕೌಶಲ್ಯವನ್ನು ಇಡೀ ಜಗತ್ತೇ ಪ್ರಶಂಸಿಸುತ್ತಿದೆ. ಭಾರತವು ವಿಶ್ವಸಂಸ್ಥೆಯ ಮಿಷನ್ ಅಡಿಯಲ್ಲಿ ಶಾಂತಿ ಪಾಲನಾ ಸೇನೆಯಲ್ಲಿ ಕೇವಲ ಮಹಿಳೆಯರನ್ನು ಒಳಗೊಂಡ ತುಕಡಿಯನ್ನು ಕೂಡಾ ನಿಯೋಜಿಸಿದೆ.
ಇಂದು ದೇಶದ ಹೆಣ್ಣು ಮಕ್ಕಳು, ನಮ್ಮ ಮೂರು ಸೇನೆಗಳಲ್ಲಿ ತಮ್ಮ ಶೌರ್ಯ, ಸಾಹಸದ ಬಾವುಟ ಹಾರಿಸುತ್ತಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶಾಲಿಜಾಧಾಮಿ ಅವರು Combat Unit ನಲ್ಲಿ Command Appointment ಪಡೆದುಕೊಂಡ ಪ್ರಥಮ ಮಹಿಳಾ ವಾಯುಸೇನಾ ಅಧಿಕಾರಿಯಾಗಿದ್ದಾರೆ. ಅವರು ಸುಮಾರು 3 ಸಾವಿರ ಗಂಟೆಗಳ flying experience- ವಿಮಾನ ಹಾರಟದ ಅನುಭವ ಹೊಂದಿದ್ದಾರೆ. ಇದೇ ರೀತಿ ಭಾರತೀಯ ಸೇನೆಯ ಕ್ಯಾಪ್ಟನ್ ಶಿವಾ ಚೌಹಾಣ್ ಅವರು ಸಿಯಾಚಿನ್ ನಲ್ಲಿ ನೇಮಕಗೊಡ ಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಾಪಮಾನ ಮೈನಸ್ ಅರವತ್ತು ಡಿಗ್ರಿ ಸೆಲ್ಷಿಯಸ್ ಗೆ ಕುಸಿಯುವ ಸಿಯಾಚಿನ್ ಪ್ರದೇಶದಲ್ಲಿ ಶಿವಾ ಅವರು ಮೂರು ತಿಂಗಳ ಕಾಲ ನೆಲೆಸುತ್ತಾರೆ.
ಸ್ನೇಹಿತರೇ, ಪಟ್ಟಿ ಎಷ್ಟೊಂದು ಉದ್ದವಿದೆಯೆಂದರೆ ಎಲ್ಲರ ಬಗ್ಗೆ ಮಾತನಾಡುವುದು ಸಾಧ್ಯವಾಗುವುದಿಲ್ಲ. ಇಂತಹ ಎಲ್ಲ ಮಹಿಳೆಯರು, ನಮ್ಮ ಹೆಣ್ಣು ಮಕ್ಕಳು, ಭಾರತ ಮತ್ತು ಭಾರತದ ಕನಸಿಗೆ ಬಲ ತುಂಬುತ್ತಿದ್ದಾರೆ. ನಾರಿ ಶಕ್ತಿಯ ಈ ಬಲವು ಅಭಿವೃದ್ಧಿ ಹೊಂದುತ್ತಿರುವ ಭಾರತದ ಜೀವಾಳವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ವಿಶ್ವದೆಲ್ಲಡೆ ಸ್ವಚ್ಛ ಇಂಧನ, ಮರುನವೀಕರಿಸಬಹುದಾದ ಇಂಧನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಾನು ವಿಶ್ವದ ಜನರನ್ನು ಭೇಟಿ ಮಾಡಿದಾಗ ಅವರು, ಈ ಕ್ಷೇತ್ರದಲ್ಲಿ ಭಾರತದ ಅಭೂತಪೂರ್ವ ಯಶಸ್ಸಿನ ಬಗ್ಗೆ ಖಂಡಿತವಾಗಿಯೂ ಮಾತುಗಳನ್ನು ಆಡುತ್ತಾರೆ. ವಿಶೇಷವಾಗಿ, ಭಾರತ, ಸೌರ ಇಂಧನದ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ವೇಗವು ನಿಜಕ್ಕೂ ಒಂದು ದೊಡ್ಡ ಸಾಧನೆಯಾಗಿದೆ. ಭಾರತದ ಜನರು ಶತಮಾನಗಳಿಂದಲೂ ಸೂರ್ಯನೊಂದಿಗೆ ವಿಶೇಷ ಅನುಬಂಧ ಹೊಂದಿದ್ದಾರೆ. ನಮ್ಮಲ್ಲಿ ಸೂರ್ಯನ ಶಕ್ತಿಯ ಬಗ್ಗೆ ಇರುವ ವೈಜ್ಞಾನಿಕ ತಿಳುವಳಿಕೆ, ಸೂರ್ಯನ ಆರಾಧನೆಯ ಸಂಪ್ರದಾಯ ಇತರ ಪ್ರದೇಶಗಳಲ್ಲಿ ವಿರಳವಾಗಿ ಕಂಡುಬರುತ್ತದೆ. ಇಂದು ಪ್ರತಿಯೊಬ್ಬ ದೇಶವಾಸಿಯೂ ಸೌರ ಶಕ್ತಿಯ ಪ್ರಾಮುಖ್ಯವನ್ನು ಅರಿಯುತ್ತಿದ್ದಾರೆ ಮತ್ತು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಲು ಬಯಸುತ್ತಿದ್ದಾರೆಂದು ನನಗೆ ಬಹಳ ಸಂತೋಷವಿದೆ. ‘ಸಬ್ ಕಾ ಪ್ರಯಾಸ್’ ನ ಈ ಸ್ಫೂರ್ತಿಯು ಇಂದು ಭಾರತದ Solar Mission ಅನ್ನು ಮುಂದೆ ನಡೆಸುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ, ಇಂತಹ ಒಂದು ಉತ್ತಮ ಪ್ರಯತ್ನವು ನನ್ನ ಗಮನವನ್ನು ತನ್ನೆಡೆಗೆ ಸೆಳೆಯಿತು. ಇಲ್ಲಿ MSR-Olive Housing Society ಯ ಜನರು, ಸೊಸೈಟಿಯಲ್ಲಿ ಕುಡಿಯುವ ನೀರು, ಲಿಫ್ಟ್ ಮತ್ತು ಲೈಟ್ ನಂತಹ ಸಾಮೂಹಿಕ ಬಳಕೆಯ ವಸ್ತುಗಳನ್ನು, ಈಗ ಸೌರ ಶಕ್ತಿಯಿಂದಲೇ ಚಾಲನೆಗೊಳಿಸಬೇಕೆಂದು ನಿರ್ಧರಿಸಿದರು. ನಂತರ ಸೊಸೈಟಿಯ ಎಲ್ಲ ಜನರು ಒಂದುಗೂಡಿ Solar Panel ಅಳವಡಿಸಿಕೊಂಡರು. ಇಂದು ಈ ಸೋಲಾರ್ ಪ್ಯಾನೆಲ್ ನಿಂದ ಪ್ರತಿ ವರ್ಷ ಸುಮಾರು 90 ಸಾವಿರ ಕಿಲೋವ್ಯಾಟ್ ಗಂಟೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳೂ ಸುಮಾರು 40ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಪ್ರಯೋಜನ ಸೊಸೈಟಿಯಲ್ಲಿ ಪ್ರತಿಯೊಬ್ಬರಿಗೂ ದೊರೆಯುತ್ತಿದೆ. ಸ್ನೇಹಿತರೇ, ಪುಣೆಯಂತೆಯೇ, ದಮನ್-ಡಿಯುದಲ್ಲಿ ಡಿಯು ಒಂದು ಪ್ರತ್ಯೇಕ ಜಿಲ್ಲೆಯಾಗಿದೆ. ಅಲ್ಲಿನ ಜನರು ಕೂಡಾ ಒಂದು ಅದ್ಭುತ ಕೆಲಸ ಮಾಡಿ ತೋರಿಸಿದ್ದಾರೆ. ಡಿಯು ದ್ವೀಪ ಸೋಮನಾಥ್ ಗೆ ಸಮೀಪದಲ್ಲಿದೆ ಎಂಬುದು ನಿಮಗೆ ತಿಳಿದೇ ಇದೆ. ಹಗಲಿನ ವೇಳೆಯಲ್ಲಿ ಎಲ್ಲ ರೀತಿಯ ಅಗತ್ಯ ಕೆಲಸಗಳಿಗಾಗಿ ಶೇಕಡಾ ನೂರರಷ್ಟು ಕ್ಲೀನ್ ಎನರ್ಜಿ ಬಳಕೆ ಮಾಡುತ್ತಿರುವ ಭಾರತದ ಪ್ರಥಮ ಜಿಲ್ಲೆ ಈ ದ್ವೀಪವಾಗಿದೆ. ಡಿಯುವಿನ ಈ ಯಶಸ್ಸಿನ ಹಿಂದಿನ ಮಂತ್ರ ಕೂಡಾ ‘ಎಲ್ಲರ ಪ್ರಯತ್ನ,’ ಅಂದರೆ ‘ಸಬ್ ಕಾ ಪ್ರಯಾಸ್’ ಎಂಬುದೇ ಆಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆಗಾಗಿ ಸಂಪನ್ಮೂಲಗಳ ಸವಾಲಿತ್ತು, ಜನರು ಈ ಸವಾಲಿನ ಉತ್ತರವಾಗಿ ಸೌರ ಶಕ್ತಿಯನ್ನು ಆಯ್ಕೆ ಮಾಡಿಕೊಂಡರು. ಇಲ್ಲಿ ಬರಡು ಭೂಮಿಗಳಲ್ಲಿ ಮತ್ತು ಅನೇಕ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಯಿತು. ಈ ಪ್ಯಾನೆಲ್ ಗಳಿಂದ ಡಿಯುನಲ್ಲಿ ಹಗಲಿನ ವೇಳೆಯಲ್ಲಿ ಎಷ್ಟು ವಿದ್ಯುತ್ತಿನ ಅಗತ್ಯವಿರುತ್ತದೆಯೋ ಅದಕ್ಕಿಂತ ಹಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಸೌರ ಯೋಜನೆಯಿಂದ, ವಿದ್ಯುತ್ ಖರೀದಿಗಾಗಿ ವೆಚ್ಚವಾಗುತ್ತಿದ್ದ ಸುಮಾರು 52 ಕೋಟಿ ರೂಪಾಯಿ ಉಳಿತಾಯವಾಗಿದೆ. ಇದರಿಂದ ಪರಿಸರದ ರಕ್ಷಣೆಯೂ ಆಗಿದೆ.
ಸ್ನೇಹಿತರೇ, ಪುಣೆ ಮತ್ತು ದೀವ್ ನ ಜನರು ಮಾಡಿ ತೋರಿಸಿರುವಂತಹ ಪ್ರಯತ್ನವು ದೇಶಾದ್ಯಂತ ಅನೇಕ ಕಡೆ ಕೂಡಾ ನಡೆಯುತ್ತಿದೆ. ಪರಿಸರ ಮತ್ತು ಪ್ರಕೃತಿಯ ವಿಷಯದಲ್ಲಿ ನಾವು ಭಾರತೀಯರು ಎಷ್ಟು ಸಂವೇದನಾಶೀಲರಾಗಿದ್ದೇವೆ, ಮತ್ತು ನಮ್ಮ ದೇಶ ಯಾವರೀತಿ ಭವಿಷ್ಯದ ಪೀಳಿಗೆಗಾಗಿ ಎಷ್ಟು ಜಾಗರೂಕತೆ ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇಂತಹ ಎಲ್ಲ ಪ್ರಯತ್ನಗಳನ್ನೂ ನಾನು ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕಾಲಕಾಲಕ್ಕೆ, ಸ್ಥಿತಿ-ಪರಿಸ್ಥಿತಿಗಳಿಗೆ ಅನುಗುಣವಾಗಿ, ಅನೇಕ ಸಂಪ್ರದಾಯಗಳು ಅಭಿವೃದ್ಧಿ ಹೊಂದುತ್ತಿರುತ್ತವೆ. ಇದೇ ಸಂಪ್ರದಾಯಗಳು ನಮ್ಮ ಸಂಸ್ಕೃತಿಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅದು ಪ್ರತಿದಿನಕ್ಕೆ ಬೇಕಾಗಿರುವ ಪ್ರಾಣಶಕ್ತಿಯನ್ನು ನೀಡುತ್ತದೆ. ಕೆಲವು ತಿಂಗಳ ಹಿಂದೆ, ಕಾಶಿಯಲ್ಲಿ ಇಂತಹದ್ದೇ ಸಂಪ್ರದಾಯವೊಂದು ಆರಂಭವಾಯಿತು. ಕಾಶಿ-ತಮಿಳ್ ಸಂಗಮಮ್ ಸಮಯದಲ್ಲಿ, ಕಾಶಿ ಮತ್ತು ತಮಿಳು ಕ್ಷೇತ್ರದ ನಡುವೆ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸಂಭ್ರಮದಿಂದ ಆಚರಿಸಲಾಯಿತು. ‘ಏಕ್ ಭಾರತ್–ಶ್ರೇಷ್ಠ ಭಾರತ್ ನ ಭಾವನೆ ನಮ್ಮ ದೇಶಕ್ಕೆ ಬಲ ತುಂಬುತ್ತದೆ. ನಾವು ಪರಸ್ಪರರ ಬಗ್ಗೆ ಅರಿತುಕೊಂಡಾಗ, ಪರಸ್ಪರರಿಂದ ಕಲಿತಾಗ, ಏಕತೆಯ ಈ ಅನಿಸಿಕೆ ಮತ್ತಷ್ಟು ಗಾಢವಾಗುತ್ತದೆ. ಏಕತೆಯ ಈ ಸ್ಫೂರ್ತಿಯೊಂದಿಗೆ ಮುಂದಿನ ತಿಂಗಳು ಗುಜರಾತ್ ನ ವಿವಿಧ ಭಾಗಗಳಲ್ಲಿ ‘ಸೌರಾಷ್ಟ್ರ-ತಮಿಳ್ ಸಂಗಮಮ್’ನಡೆಯಲಿದೆ. ‘ಸೌರಾಷ್ಟ್ರ-ತಮಿಳ್ ಸಂಗಮಮ್’ ಏಪ್ರಿಲ್ ತಿಂಗಳಿನಲ್ಲಿ 17 ರಿಂದ 30 ರವರೆಗೂ ನಡೆಯಲಿದೆ. ಗುಜರಾತ್ ರಾಜ್ಯಕ್ಕೆ ತಮಿಳುನಾಡಿನೊಂದಿಗೆ ಏನು ಸಂಬಂಧ? ಎಂದು ‘ಮನದ ಮಾತಿನ‘ ಕೆಲವು ಶ್ರೋತೃಗಳು ಆಲೋಚಿಸುತ್ತಿರಬಹುದು. ವಾಸ್ತವದಲ್ಲಿ, ಶತಮಾನಗಳ ಹಿಂದೆಯೇ, ಸೌರಾಷ್ಟ್ರದ ಅನೇಕ ಮಂದಿ ತಮಿಳು ನಾಡಿನ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಇವರನ್ನು ಇಂದಿಗೂ ಸೌರಾಷ್ಟ್ರೀ ತಮಿಳರು ಎಂದೇ ಕರೆಯಲಾಗುತ್ತಿದೆ. ಇವರ ತಿಂಡಿ-ತಿನಿಸು, ಉಡುಗೆ-ತೊಡುಗೆ, ಜೀವನ ಶೈಲಿ, ಸಾಮಾಜಿಕ ಪದ್ಧತಿಗಳಲ್ಲಿ ಇಂದು ಕೂಡಾ ಸೌರಾಷ್ಟ್ರದ ನೋಟ ಸ್ವಲ್ಪ ಮಟ್ಟಿಗೆ ಕಂಡುಬರುತ್ತದೆ. ಈ ಕಾರ್ಯಕ್ರಮದ ಆಯೋಜನೆ ಕುರಿತಂತೆ ನನಗೆ ತಮಿಳುನಾಡಿನಿಂದ ಬಹಳಷ್ಟು ಮಂದಿ ಸಲಹೆ ನೀಡುತ್ತಾ ಪತ್ರ ಬರೆದಿದ್ದಾರೆ. ಮಧುರೈ ನಿವಾಸಿ ಜಯಚಂದ್ರನ್ ಅವರು ಒಂದು ಭಾವನಾತ್ಮಕ ವಿಷಯವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರು ಹೇಳಿದ್ದಾರೆ –“ಸಾವಿರ ವರ್ಷಗಳ ನಂತರ, ಮೊದಲ ಬಾರಿಗೆ ಸೌರಾಷ್ಟ್ರ-ತಮಿಳರ ಬಗ್ಗೆ ಆಲೋಚಿಸಲಾಗಿದೆ, ಸೌರಾಷ್ಟ್ರದಿಂದ ತಮಿಳುನಾಡಿಗೆ ಬಂದು ನೆಲೆಸಿರುವ ಜನರ ಬಗ್ಗೆ ಕೇಳಲಾಗುತ್ತಿದೆ” ಜಯಚಂದ್ರನ್ ಅವರು ಈ ಮಾತುಗಳು, ಸಾವಿರಾರು ತಮಿಳು ಸೋದರ-ಸೋದರಿಯರ ಅಭಿವ್ಯಕ್ತಿಯಾಗಿದೆ.
ಸ್ನೇಹಿತರೇ, ‘ಮನದ ಮಾತಿನ’ ಶ್ರೋತೃಗಳಿಗೆ ನಾನು ಅಸ್ಸಾಂಗೆ ಸಂಬಂಧಿಸಿದ ಒಂದು ವಿಷಯ ಹೇಳಲು ಬಯಸುತ್ತೇನೆ. ಇದು ಕೂಡಾ ‘ಏಕ್ ಭಾರತ್–ಶ್ರೇಷ್ಠ ಭಾರತ್ ನ ಭಾವನೆಯನ್ನು ಬಲಿಷ್ಠಗೊಳಿಸುತ್ತದೆ. ನಾವು ವೀರ ಲಾಸಿತ್ ಬೋರ್ ಫುಕನ್ ಅವರ 400 ನೇ ಜಯಂತಿ ಆಚರಿಸುತ್ತಿದ್ದೇವೆಂದು ನಿಮಗೆಲ್ಲರಿಗೂ ತಿಳಿದೇ ಇದೆ. ವೀರ ಲಾಸಿತ್ ಬೋರ್ ಫುಕನ್ ಅವರು ಗುವಾಹಟಿಯನ್ನು ಮೊಘಲ್ ಸುಲ್ತಾನರ ದಬ್ಬಾಳಿಕೆಯಿಂದ ಮುಕ್ತಗೊಳಿಸಿದರು. ಇಂದು ದೇಶಕ್ಕೆ, ಈ ಮಹಾನ್ ಸೇನಾನಿಯ ಅದಮ್ಯ ಸಾಹಸದ ಪರಿಚಯವಾಗುತ್ತಿದೆ. ಕೆಲ ದಿನಗಳ ಹಿಂದೆ ಲಾಸಿತ್ ಬೋರ್ ಫುಕನ್ ಅವರ ಜೀವನಾಧಾರಿತ ಪ್ರಬಂಧ ಬರೆಯುವ ಒಂದು ಅಭಿಯಾನ ನಡೆಸಲಾಗಿತ್ತು. ಇದಕ್ಕಾಗಿ ಸುಮಾರು 45 ಲಕ್ಷ ಮಂದಿ ಪ್ರಬಂಧ ಬರೆದು ಕಳುಹಿಸಿದ್ದರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಈಗ ಇದೊಂದು ಗಿನ್ನೀಸ್ ದಾಖಲೆಯಾಗಿದೆಯೆಂದು ತಿಳಿದು ಕೂಡಾ ನಿಮಗೆ ಸಂತೋಷವೆನಿಸಬಹುದು. ಇದಕ್ಕಿಂತ ಮುಖ್ಯವಾದ ವಿಷಯವೆಂದರೆ ವೀರ ಲಾಸಿತ್ ಬೋರ್ ಫುಕನ್ ಕುರಿತಂತೆ ಬರೆದ ಪ್ರಬಂಧಗಳನ್ನು ಸುಮಾರು 23 ಬೇರೆ ಬೇರೆ ಭಾಷೆಗಳಲ್ಲಿ ಬರೆದು ಕಳುಹಿಸಲಾಗಿತ್ತು. ಈ ಭಾಷೆಗಳಲ್ಲಿ ಅಸ್ಸಾಮಿ ಭಾಷೆ ಮಾತ್ರವಲ್ಲದೇ ಹಿಂದೀ, ಇಂಗ್ಲೀಷ್, ಬಂಗಾಳಿ, ಬೋಡೋ, ನೇಪಾಳಿ, ಸಂಸ್ಕೃತ, ಸಂಥಾಲಿಯಂತಹ ಅನೇಕ ಭಾಷೆಗಳ ಜನರು ಪ್ರಬಂಧ ಬರೆದು ಕಳುಹಿಸಿದ್ದರು. ಈ ಪ್ರಯತ್ನದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರನ್ನೂ ನಾನು ಮನಃಪೂರ್ವಕವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕಾಶ್ಮೀರ ಅಥವಾ ಶ್ರೀನಗರದ ವಿಷಯ ಬಂದಾಗ, ಎಲ್ಲಕ್ಕಿಂತ ಮೊದಲು, ನಮ್ಮ ಕಣ್ಣುಗಳ ಮುಂದೆ, ಅಲ್ಲಿನ ಕಣಿವೆಗಳು, ಮತ್ತು ದಾಲ್ ಸರೋವರದ ಚಿತ್ರ ಮೂಡಿ ಬರುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ದಾಲ್ ಸರೋವರವನ್ನು ನೋಡಿ ಕಣ್ತುಂಬಿಕೊಳ್ಳಲು ಬಯಸುತ್ತೇವೆ, ಈ ಸರೋವರದಲ್ಲಿ ಮತ್ತೊಂದು ವಿಶೇಷತೆಯಿದೆ, ಅದೆಂದರೆ, ಈ ಸರೋವರವು ತನ್ನ ಸ್ವಾದಿಷ್ಟ ಲೋಟಸ್ ಸ್ಸ್ಟೆಮ್ಸ್– ತಾವರೆಯ ಕಾಂಡಗಳಿಗಾಗಿ ಕೂಡಾ ಹೆಸರುವಾಸಿಯಾಗಿದ್ದು, ಇದನ್ನು ಕಮಲ್ಕಕಡಿ ಎಂದು ಕರೆಯಲಾಗುತ್ತದೆ. ತಾವರೆಯ ಕಾಂಡವನ್ನು ದೇಶದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕಾಶ್ಮೀರದಲ್ಲಿ ಇದನ್ನು ನಾದರೂ ಎಂದು ಕರೆಯುತ್ತಾರೆ. ಕಾಶ್ಮೀರದ ನಾದರೂಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲಿದೆ. ಈ ಬೇಡಿಕೆಯನ್ನು ಮನಗಂಡು, ದಾಲ್ ಸರೋವರದಲ್ಲಿ ನಾದರೂ ಬೆಳೆಯುವ ರೈತರು ಒಂದು FPO ಸಿದ್ಧಪಡಿಸಿದರು. ಈ FPO ದಲ್ಲಿ ಸುಮಾರು 250 ರೈತರು ಒಳಗೊಂಡಿದ್ದಾರೆ. ಇಂದು ಈ ರೈತರು ತಮ್ಮ ನಾದರೂ ಬೆಳೆಯನ್ನು ವಿದೇಶಗಳಿಗೂ ಕಳುಹಿಸಲಾರಂಭಿಸಿದ್ದಾರೆ. ಈಗ ಕೆಲವು ದಿನಗಳ ಹಿಂದೆ ಈ ರೈತರು ಯುಎಇಗೆ ಎರಡು ಲೋಡ್ ಸರಕು ಕಳುಹಿಸಿದ್ದಾರೆ. ಈ ಯಶಸ್ಸು ಕಾಶ್ಮೀರಕ್ಕೆ ಹೆಸರು ತಂದುಕೊಡುತ್ತಿರುವುದು ಮಾತ್ರವಲ್ಲದೇ, ನೂರಾರು ರೈತರ ವರಮಾನ ಹೆಚ್ಚಳಕ್ಕೆ ಕೂಡಾ ಕಾರಣವಾಗುತ್ತಿದೆ.
ಸ್ನೇಹಿತರೇ, ಕಾಶ್ಮೀರದ ಕೃಷಿಗೆ ಸಂಬಂಧಪಟ್ಟಂತೆ ಮತ್ತೊಂದು ಇಂತಹದ್ದೇ ಪ್ರಯತ್ನ ತನ್ನ ಯಶಸ್ಸಿನ ಪರಿಮಳವನ್ನು ಪಸರಿಸುತ್ತಿದೆ. ನಾನು ಯಶಸ್ಸಿನ ಪರಿಮಳದ ಬಗ್ಗೆ ಏಕೆ ಮಾತನಾಡುತ್ತಿದ್ದೇನೆಂದು ನೀವು ಯೋಚಿಸುತ್ತಿರಬಹುದು–ಹೌದು ಇದು ಪರಿಮಳದ ಮಾತು, ಸುಗಂಧದ ಮಾತು.! ವಾಸ್ತವದಲ್ಲಿ, ಜಮ್ಮು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಭದರ್ವಾಹ್ ಎಂಬ ಊರು ಇದೆ! ಇಲ್ಲಿನ ರೈತರು, ದಶಕಗಳಿಂದಲೂ ಜೋಳದ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು, ಆದರೆ, ಕೆಲವು ರೈತರು ಏನನ್ನಾದರೂ ಹೊಸತನ್ನು ಮಾಡಬೇಕೆಂದು ಆಲೋಚಿಸಿದರು. ಅವರು floriculture ಅಂದರೆ ಹೂಗಳ ಕೃಷಿ ಮಾಡಬೇಕೆಂದು ಆಲೋಚಿಸಿದರು. ಇಂದು ಸುಮಾರು ಎರಡೂವರೆ ಸಾವಿರ ರೈತರು ಲ್ಯಾವೆಂಡರ್ ಕೃಷಿ ಕೈಗೊಂಡಿದ್ದಾರೆ. ಇವರಿಗೆ ಕೇಂದ್ರ ಸರ್ಕಾರದಿಂದ aroma mission ಅಡಿಯಲ್ಲಿ ಸಹಾಯ ಕೂಡಾ ದೊರೆತಿದೆ. ಈ ಹೊಸ ಕೃಷಿಯು ರೈತರ ಆದಾಯವನ್ನು ಸಾಕಷ್ಟು ಹೆಚ್ಚಳ ಮಾಡಿದೆ ಮತ್ತು ಇಂದು ಲ್ಯಾವೆಂಡರ್ ಬೆಳೆಯೊಂದಿಗೆ ಇದರ ಯಶಸ್ಸಿನ ಪರಿಮಳ ಕೂಡಾ ದೂರದೂರವರೆಗೂ ವ್ಯಾಪಿಸುತ್ತಿದೆ.
ಸ್ನೇಹಿತರೇ, ಕಾಶ್ಮೀರದ ವಿಷಯಕ್ಕೆ ಬಂದಾಗ, ಕಮಲದ ಹೂವಿನ ಮಾತು, ಹೂವಿನ ಮಾತು, ಸುಗಂಧದ ಮಾತು, ಹಾಗೆಯೇ ಕಮಲದ ಪುಷ್ಪದಲ್ಲಿ ವಿರಾಜಮಾನಳಾಗಿರುವ ತಾಯಿ ಶಾರದೆಯ ಸ್ಮರಣೆ ಬರುವುದು ಸಹಜವೇ ತಾನೇ. ಕೆಲವು ದಿನಗಳ ಹಿಂದಷ್ಟೇ, ಕುಪ್ವಾರಾದಲ್ಲಿ ತಾಯಿ ಶಾರದೆಯ ಭವ್ಯ ದೇವಾಲಯ ಲೋಕಾರ್ಪಣೆಗೊಂಡಿದೆ. ಶಾರದಾ ಪೀಠಕ್ಕೆ ಬೇಟಿ ನೀಡಲು ಸಾಗುತ್ತಿದ್ದ ಅದೇ ಮಾರ್ಗದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜನತೆ ಈ ದೇವಾಲಯದ ನಿರ್ಮಾಣಕ್ಕೆ ಬಹಳ ಸಹಾಯ ಮಾಡಿದ್ದಾರೆ. ನಾನು ಜಮ್ಮು ಕಾಶ್ಮೀರದ ಜನರಿಗೆ ಈ ಶುಭ ಕಾರ್ಯಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇವು ಈ ಬಾರಿಯ‘ಮನದ ಮಾತು’ ಗಳು. ಮುಂದಿನ ಬಾರಿ, ಮನದ ಮಾತಿನ 100 ನೇ ಸಂಚಿಕೆಯಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ನೀವೆಲ್ಲರೂ ಸಲಹೆ ಸೂಚನೆಗಳನ್ನು ಖಂಡಿತವಾಗಿಯೂ ಕಳುಹಿಸಿಕೊಡಿ. ಈ ಮಾರ್ಚ್ ತಿಂಗಳಿನಲ್ಲಿ, ನಾವು ಹೋಳಿ ಹಬ್ಬದಿಂದ ನವರಾತ್ರಿಯವರೆಗೂ ಅನೇಕ ಹಬ್ಬಗಳ ಆಚರಣೆಯಲ್ಲಿ ನಿರತರಾಗಿದ್ದೆವು. ರಂಜಾನ್ ನ ಪವಿತ್ರ ತಿಂಗಳು ಕೂಡಾ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಶ್ರೀ ರಾಮನವಮಿ ಹಬ್ಬ ಕೂಡಾ ಬರಲಿದೆ. ಆ ನಂತರ ಮಹಾವೀರ ಜಯಂತಿ, ಶುಭ ಶುಕ್ರವಾರ (ಗುಡ್ ಫ್ರೈಡೇ) ಮತ್ತು ಈಸ್ಟರ್ ಹಬ್ಬಗಳು ಕೂಡಾ ಇರಲಿವೆ, ಏಪ್ರಿಲ್ ತಿಂಗಳಿನಲ್ಲಿ ನಾವು, ಇಬ್ಬರು ಭಾರತದ ಮಹಾಪುರುಷರ ಜಯಂತಿಯನ್ನು ಕೂಡಾ ಆಚರಿಸಲಿದ್ದೇವೆ. ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್. ಈ ಇಬ್ಬರು ಮಹಾಪುರುಷರು ಸಮಾಜದಲ್ಲಿನ ಭೇದಭಾವ ತೊಡೆದುಹಾಕಲು ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ. ಇಂದು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ನಾವು, ಇಂತಹ ಮಹಾನ್ ಪುರುಷರಿಂದ ಕಲಿಯಬೇಕಾದ ಮತ್ತು ಪ್ರೇರಣೆ ಹೊಂದುವ ಅಗತ್ಯವಿದೆ. ನಾವು ನಮ್ಮ ಕರ್ತವ್ಯಗಳನ್ನು ಆದ್ಯತೆಯಾಗಿಸಿಕೊಳ್ಳಬೇಕುಸ್ನೇಹಿತರೇ, ಕೆಲವು ಸ್ಥಳಗಳಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಆದ್ದರಿಂದ ನೀವೆಲ್ಲರೂ ಜಾಗರೂಕತೆಯಿಂದ ಇರಬೇಕು, ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಮುಂದಿನ ತಿಂಗಳು, ಮನದ ಮಾತಿನ 100 ನೇಸಂಚಿಕೆಯಲ್ಲಿ ನಾವು ಪುನಃ ಭೇಟಿಯಾಗೋಣ, ಅಲ್ಲಿಯವರೆಗೂ ನನಗೆ ವಿದಾಯ ಹೇಳಿ,
ಧನ್ಯವಾದ, ನಮಸ್ಕಾರ
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿನ ಈ 98 ನೇ ಸಂಚಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ನೂರನೇ ಸಂಚಿಕೆಯತ್ತ ಸಾಗುತ್ತಿರುವ ಈ ಪ್ರಯಾಣದಲ್ಲಿ ಮನದ ಮಾತನ್ನು, ನೀವೆಲ್ಲರೂ ಜನಭಾಗಿದಾ ಅಭಿವ್ಯಕ್ತಿಯ ಅದ್ಭುತ ವೇದಿಕೆಯನ್ನಾಗಿ ಮಾಡಿದ್ದೀರಿ. ಪ್ರತಿ ತಿಂಗಳೂ, ಲಕ್ಷಾಂತರ ಸಂದೇಶಗಳಲ್ಲಿ ಎಷ್ಟೊಂದು ಜನರ ಮನದ ಮಾತು ನನಗೆ ತಲುಪುತ್ತದೆ. ನೀವೆಲ್ಲರೂ ನಿಮ್ಮ ಮನದ ಸಾಮರ್ಥ್ಯವನ್ನಂತೂ ಅರಿತೇ ಇದ್ದೀರಿ, ಅಂತೆಯೇ ಸಮಾಜದ ಶಕ್ತಿ ಸಾಮರ್ಥ್ಯದಿಂದ ದೇಶದ ಶಕ್ತಿ ಸಾಮರ್ಥ್ಯ ಹೇಗೆ ಹೆಚ್ಚಾಗುತ್ತದೆಂದು ನಾವು ಮನದ ಮಾತಿನ ಬೇರೆ ಬೇರೆ ಸಂಚಿಕೆಗಳಲ್ಲಿ ನೋಡಿದ್ದೇವೆ, ಅರ್ಥ ಮಾಡಿಕೊಂಡಿದ್ದೇವೆ, ಮತ್ತು ನನ್ನ ಅನುಭವಕ್ಕೂ ಬಂದಿದೆ ಅಂತೆಯೇ ಅಂಗೀಕರಿಸಿದ್ದೇನೆ ಕೂಡಾ. ನಾವು ಮನದ ಮಾತಿನಲ್ಲಿ ಭಾರತದ ಸಾಂಪ್ರದಾಯಿಕ ಆಟಗಳಿಗೆ ಪ್ರೋತ್ಸಾಹ ನೀಡುವ ಕುರಿತು ಮಾತನಾಡಿದ ಆ ದಿನ ನನಗೆ ನೆನಪಿದೆ. ಆ ಸಮಯದಲ್ಲಿ ತಕ್ಷಣವೇ ದೇಶದಲ್ಲಿ ಭಾರತೀಯ ಕ್ರೀಡೆಗಳೊಡನೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಆನಂದಿಸಲು ಮತ್ತು ಅವುಗಳನ್ನು ಕಲಿಯಲು ಒಂದು ಅಲೆಯೇ ಮೇಲೆ ಎದ್ದಿತ್ತು. ಮನದ ಮಾತಿನಲ್ಲಿ ಭಾರತೀಯ ಆಟಿಕೆಗಳ ಮಾತು ಬಂದಾಗ, ದೇಶದ ಜನತೆ ಇದಕ್ಕೆ ಕೂಡಾ ಕೈಜೋಡಿಸಿ ಪ್ರಚಾರಕ್ಕೆ ಮುಂದಾದರು. ಈಗಂತೂ ಭಾರತೀಯ ಆಟಿಕೆಗಳ ಮೇಲೆ ಜನರಲ್ಲಿ ಎಷ್ಟು ಇಷ್ಟ ಮೂಡಿದೆಯೆಂದರೆ, ವಿದೇಶಗಳಲ್ಲೂ ಇವುಗಳಿಗೆ ಬೇಡಿಕೆ ಬಹಳ ಹೆಚ್ಚಾಗುತ್ತಿದೆ. ಮನದ ಮಾತಿನಲ್ಲಿ ನಾವು ಕತೆ ಹೇಳುವ ಭಾರತೀಯ ಶೈಲಿಗಳ ಬಗ್ಗೆ ಮಾತನಾಡಿದಾಗ, ಇದರ ಜನಪ್ರಿಯತೆ ಕೂಡಾ ದೂರದೂರವರೆಗೂ ತಲುಪಿತು. ಜನರು ಭಾರತೀಯ ಕತೆ ಹೇಳುವ ಶೈಲಿಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗತೊಡಗಿದರು.
ಸ್ನೇಹಿತರೇ, ನಿಮಗೆ ನೆನಪಿರಬಹುದು, ಸರ್ದಾರ್ ಪಟೇಲರ ಜಯಂತಿ ಅಂದರೆ ಏಕತಾ ದಿವಸ್ ಸಂದರ್ಭದಲ್ಲಿ ಮನ್ ಕಿ ಬಾತ್ ನಲ್ಲಿ ನಾವು ಮೂರು ಸ್ಪರ್ಧೆಗಳ ಬಗ್ಗೆ ಮಾತನಾಡಿದ್ದೆವು. ಈ ಸ್ಪರ್ಧೆಗಳಲ್ಲಿ ದೇಶಭಕ್ತಿ ಆಧಾರಿತ ಗೀತೆಗಳು, ಲಾಲಿ ಹಾಡುಗಳು ಮತ್ತು ರಂಗೋಲಿ ಸ್ಪರ್ಧೆಗಳು ಸೇರಿದ್ದವು. ದೇಶಾದ್ಯಂತ 700 ಕ್ಕಿಂತಲೂ ಅಧಿಕ ಜಿಲ್ಲೆಗಳ 5 ಲಕ್ಷಕ್ಕೂ ಅಧಿಕ ಜನರು ಬಹಳ ಉತ್ಸಾಹದಿಂದ ಇವುಗಳಲ್ಲಿ ಪಾಲ್ಗೊಂಡಿದ್ದರೆಂದು ನಿಮಗೆ ಹೇಳಲು ನನಗೆ ಬಹಳ ಹರ್ಷವೆನಿಸುತ್ತದೆ. ಮಕ್ಕಳು, ದೊಡ್ಡವರು, ವೃದ್ಧರೂ ಎಲ್ಲರೂ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡರು ಮತ್ತು 20 ಕ್ಕೂ ಅಧಿಕ ಭಾಷೆಗಳಲ್ಲಿ ತಮ್ಮ ಪ್ರವೇಶ ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ನನ್ನ ಕಡೆಯಿಂದ ಅನೇಕ ಶುಭಾಶಯಗಳು. ನಿಮ್ಮಲ್ಲಿ ಪ್ರತಿಯೊಬ್ಬರೂ, ನಿಮಗೆ ನೀವೇ ಛಾಂಪಿಯನ್ ಗಳು, ಕಲಾ ಸಾಧಕರಾಗಿದ್ದೀರಿ. ನಿಮ್ಮೆಲ್ಲರ ಹೃದಯದಲ್ಲಿ ದೇಶದ ವಿವಿಧತೆ ಮತ್ತು ಸಂಸ್ಕೃತಿಯ ಕುರಿತು ಎಷ್ಟೊಂದು ಪ್ರೀತಿಯಿದೆ ಎಂದು ನೀವೆಲ್ಲರೂ ತೋರಿಸಿದ್ದೀರಿ.
ಸ್ನೇಹಿತರೇ, ಇಂದು ಈ ಸಂದರ್ಭದಲ್ಲಿ ನನಗೆ ಲತಾ ಮಂಗೇಶ್ಕರ್, ಲತಾ ದೀದಿಯ ನೆನಪು ಬರುವುದು ಬಹಳ ಸಹಜವಾಗಿದೆ. ಏಕೆಂದರೆ ಈ ಸ್ಪರ್ಧೆ ಪ್ರಾರಂಭವಾದಾಗ, ಲತಾ ಅವರು ದೇಶದ ಜನತೆ ಈ ಸ್ಪರ್ಧೆಯಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬೇಕೆಂದು ಟ್ವೀಟ್ ಮೂಲಕ ಮನವಿ ಮಾಡಿದ್ದರು.
ಸ್ನೇಹಿತರೇ, ಲಾಲಿ ಬರಹ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕರ್ನಾಟಕದ ಚಾಮರಾಜ ನಗರದ ಜಿಲ್ಲೆಯ ಬಿ. ಎಂ ಮಂಜುನಾಥ್ ಅವರಿಗೆ ಸಂದಿದೆ. ಅವರು ಕನ್ನಡದಲ್ಲಿ ಬರೆದ ಲಾಲಿ ಮಲಗು ಕಂದಾ ಹಾಡಿಗೆ ಈ ಬಹುಮಾನ ಸಂದಿದೆ. ತಮ್ಮ ತಾಯಿ ಮತ್ತು ಅಜ್ಜಿ ಹಾಡುತ್ತಿದ್ದ ಜೋಗುಳದ ಹಾಡುಗಳಿಂದ ಇವರಿಗೆ ಲಾಲಿ ಹಾಡು ಬರೆಯುವ ಪ್ರೇರಣೆ ದೊರೆಯಿತು. ಇದನ್ನು ಕೇಳಿದರೆ ನಿಮಗೆ ಕೂಡಾ ಖಂಡಿತವಾಗಿಯೂ ಸಂತೋಷವಾಗುತ್ತದೆ.
(Kannad Sound Clip (35 seconds) HINDI Translation)
ಮಲಗು ಮಲಗು ಮಗುವೇ ಮಲಗು
ನನ್ನ ಜಾಣ ಮುದ್ದು ಮಗುವೇ ಮಲಗು,
ದಿನ ಕಳೆದು ಕತ್ತಲಾಗಿದೆ,
ನಿದ್ರಾದೇವಿ ಬರುತ್ತಾಳೆ, ತಾರೆಗಳ ತೋಟದಿಂದ.
ಕನಸು ಕಿತ್ತು ತರುತ್ತಾಳೆ, ಮಲಗು ಮಲಗು
ಜೋ ಜೋಜೋ..
ಜೋ. ಜೋಜೋ
(“ಸೋ ಜಾವೋ ಸೋ ಜಾವೋ ಬೇಬಿ,
ಮೇರೆ ಸಮಜ್ ದಾರ್ ಲಾಡಲೇ, ಸೋ ಜಾವೋ
ದಿನ್ ಚಲಾ ಗಯಾ ಹೈ ಔರ್ ಅಂಧೇರಾ ಹೈ
ನಿದ್ರಾ ದೇವೀ ಆ ಜಾಯೇಗೀ, ಸಿತಾರೋಂ ಕೆ ಬಾಗ್ ಸೇ,
ಸಪನೇ ಕಾಟ್ ಲಾಯೇಗೀ,
ಸೋ ಜಾವೋ, ಸೋ ಜಾವೋ,
ಜೋಜೋ..ಜೋ..ಜೋ,”)
ಅಸ್ಸಾಂನಲ್ಲಿ ಕಾಮರೂಪ್ ಜಿಲ್ಲೆಯ ನಿವಾಸಿ ದಿನೇಶ್ ಗೋವಾಲಾ ಅವರು ಈ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ವಿಜೇತರಾಗಿತ್ತಾರೆ. ಇವರು ಬರೆದಿರುವ ಲಾಲಿ ಹಾಡಿನಲ್ಲಿ, ಸ್ಥಳೀಯ ಮಣ್ಣು ಮತ್ತು ಲೋಹದ ಪಾತ್ರೆಗಳನ್ನು ತಯಾರಿಸುವ ಕುಶಲ ಕರ್ಮಿಗಳ ಜನಪ್ರಿಯ ಕಲೆಯ ಛಾಪು ಕೂಡಾ ಇದೆ.
(Assamese Sound Clip (35 seconds) HINDI Translation)
ಕುಂಬಾರಜ್ಜ ಜೋಳಿಗೆ ತಂದಿದ್ದಾರೆ
ಜೋಳಿಗೆಯಲ್ಲಿ ಇರುವುದಾದರೂ ಏನು?
ಕುಂಬಾರಜ್ಜನ ಜೋಳಿಗೆ ತೆರೆದು ನೋಡಿದೆ,
ಜೋಳಿಗೆಯಲ್ಲಿತ್ತು ಸುಂದರ ಬಟ್ಟಲೊಂದು!
ನಮ್ಮ ಪುಟ್ಟ ಹೆಣ್ಣುಮಗು ಕುಂಬಾರನನ್ನು ಕೇಳಿತು,
ಹೇಗಿದೆ ಈ ಪುಟ್ಟ ಬಟ್ಟಲು!
(ಕುಮ್ಹಾರ ದಾದಾ ಝೋಲಾ ಲೇಕರ್ ಆಯೇ ಹೈ,
ಝೋಲೇ ಮೇ ಭಲಾ ಕ್ಯಾ ಹೈ?
ಖೋಲ್ ಕರ್ ದೇಖಾ ಕುಮ್ಹಾರಾ ಕೇ ಝೋಲೇ ಕೋ ತೋ,
ಝೋಲೇ ಮೇ ಥೀ ಪ್ಯಾರೀ ಸೀ ಕಟೋರೀ!
ಹಮಾರೀ ಗುಡಿಯಾ ನೇ ಕುಮ್ಹಾರಾ ಸೇ ಪೂಛಾ,
ಕೈಸೀ ಹೈ ಛೋಟೀ ಸೀ ಕಟೋರೀ!)
ಗೀತೆಗಳು ಮತ್ತು ಲಾಲಿ ಹಾಡಿನಂತೆಯೇ ರಂಗೋಲಿ ಸ್ಪರ್ಧೆ ಕೂಡಾ ಬಹಳ ಜನಪ್ರಿಯವಾಯಿತು. ಇದರಲ್ಲಿ ಪಾಲ್ಗೊಂಡವರು ಒಂದಕ್ಕಿಂತ ಒಂದು ಸುಂದರವಾದ ರಂಗೋಲಿಗಳನ್ನು ಬಿಡಿಸಿ ಕಳುಹಿಸಿದ್ದರು. ಇದರಲ್ಲಿ ಪಂಜಾಬ್ ನ ಕಮಲ್ ಕುಮಾರ್ ಅವರು ಕಳುಹಿಸಿದ ರಂಗೋಲಿಗೆ ಬಹುಮಾನ ದೊರೆಯಿತು. ಇವರು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಹುತಾತ್ಮ ವೀರ ಭಗತ್ ಸಿಂಗ್ ಅವರುಗಳ ಚಿತ್ರಗಳನ್ನು ಬಹಳ ಸುಂದರವಾಗಿ ರಂಗೋಲಿಯಲ್ಲಿ ಮೂಡಿಸಿದ್ದರು. ಮಹಾರಾಷ್ಟ್ರದ ಸಾಂಗ್ಲಿಯ ಸಚಿನ್ ನರೇಂದ್ರ ಅವಸಾರಿ ಅವರು ಜಲಿಯನ್ ವಾಲಾ ಬಾಗ್, ಅಲ್ಲಿ ನಡೆದ ನರಮೇಧ, ಮತ್ತು ಹುತಾತ್ಮ ಉಧಮ್ ಸಿಂಗ್ ಅವರ ಪರಾಕ್ರಮ ರಂಗೋಲಿಯಲ್ಲಿ ಪ್ರದರ್ಶಿತಗೊಳಿಸಿದ್ದರು. ಗೋವಾ ನಿವಾಸಿ ಗುರುದತ್ ವಾಂಟೇಕರ್ ಅವರು ಗಾಂಧೀಜಿಯವರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದರೆ, ಪುದುಚೆರಿಯ ಮಾಲತಿ ಸೆಲ್ವಮ್ ಅವರು ಸ್ವಾತಂತ್ರ್ಯ ಹೋರಾಟದ ಅನೇಕ ಮಹಾನ್ ಸೈನಿಕರ ಚಿತ್ರ ಬಿಡಿಸುವಲ್ಲಿ ತಮ್ಮ ಏಕಾಗ್ರತೆ ತೋರಿಸಿದ್ದರು. ದೇಶ ಭಕ್ತಿ ಗೀತೆಯ ಸ್ಪರ್ಧೆಯಲ್ಲಿ ವಿಜೇತರಾದ ಟಿ ವಿಜಯ ದುರ್ಗಾ ಆಂಧ್ರಪ್ರದೇಶಕ್ಕೆ ಸೇರಿದವರು. ಅವರು ತೆಲುಗಿನಲ್ಲಿ ತಮ್ಮ ಎಂಟ್ರಿ ಕಳುಹಿಸಿ ಕೊಟ್ಟಿದ್ದರು. ಅವರು ತಮ್ಮ ಕ್ಷೇತ್ರದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ನರಸಿಂಹ ರೆಡ್ಡಿ ಅವರಿಂದ ಪ್ರೇರಿತರಾಗಿದ್ದರು. ವಿಜಯ ದುರ್ಗಾ ಅವರ ಎಂಟ್ರಿಯ ಈ ಭಾಗವನ್ನು ನೀವು ಕೂಡಾ ಕೇಳಿಸಿಕೊಳ್ಳಿ
(Telugu Sound Clip (27 seconds) HINDI Translation)
ರೇನಾಡು ಪ್ರಾಂತ್ಯದ ಸೂರ್ಯ
ಹೇ ವೀರ ನರಸಿಂಹ
ಭಾರತ ಸ್ವಾತಂತ್ರ್ಯ ಸಂಗ್ರಾಮ ಮೊಳಕೆಯೊಡೆಯಿತು, ಅಂಕುಶವಾದೆ ನೀ
ಬ್ರಿಟಿಷರ ನ್ಯಾಯರಹಿತ ನಿರಂಕುಶ ದಮನ ಕಾಂಡ ನೋಡಿ
ನಿನ್ನ ನೆತ್ತುರು ಕುದಿಯಿತು, ಬೆಂಕಿಯ ಕಾರಿತು
ರೇನಾಡು ಪ್ರಾಂತ್ಯದ ಸೂರ್ಯ
ಹೇ ವೀರ ನರಸಿಂಹ
(ರೇನಾಡೂ ಪ್ರಾಂತ್ ಕೇ ಸೂರಜ್,
ಹೇ ವೀರ ನರಸಿಂಹ!
ಭಾರತೀಯ ಸ್ವತಂತ್ರತಾ ಸಂಗ್ರಾಮ್ ಕೇ ಅಂಕುರ್ ಹೋ, ಅಂಕುಶ್ ಹೋ!
ಅಂಗ್ರೇಜೋ ಕೇ ನ್ಯಾಯ ರಹಿತ ನಿರಂಕುಶ ದಮನ ಕಾಂಡ್ ಕೋ ದೇಖ್
ಖೂನ್ ತೇರಾ ಸುಲಗಾ ಔರ್ ಆಗ್ ಉಗಲಾ!
ರೇನಾಡೂ ಪ್ರಾಂತ್ ಕೇ ಸೂರಜ್
ಹೇ ವೀರ ನರಸಿಂಹ!)
ತೆಲುಗಿನ ನಂತರ, ಈಗ ನಾನು ನಿಮಗೆ ಮೈಥಿಲಿಯಲ್ಲಿ ಒಂದು ಕ್ಲಿಪ್ ಕೇಳಿಸುತ್ತೇನೆ. ಇದನ್ನು ದೀಪಕ್ ವತ್ಸ್ ಅವರು ಕಳುಹಿಸಿಕೊಟ್ಟಿದ್ದಾರೆ. ಅವರು ಕೂಡಾ ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
(Maithili Sound Clip (30 seconds) HINDI Translation)
ಭಾರತ ಪ್ರಪಂಚದ ಹೆಮ್ಮೆ ಸೋದರಾ
ನಮ್ಮ ದೇಶ ಶ್ರೇಷ್ಠವಾದುದು
ಮೂರು ಕಡೆ ಸಮುದ್ರದಿಂದ ಸುತ್ತುರಿದಿದೆ
ಉತ್ತರದಲ್ಲಿ ಕೈಲಾಸ ಪರ್ವತ ಬಲಿಷ್ಟವಾಗಿದೆ
ಗಂಗಾ, ಯಮುನಾ, ಕೃಷ್ಣಾ, ಕಾವೇರಿ
ಕೋಶಿ, ಕಮಲಾ ಬಲಾನ್ ಇದೆ
ನಮ್ಮ ದೇಶ ಶ್ರೇಷ್ಠವಾದುದು ಸೋದರಾ
ತ್ರಿವರ್ಣ ಧ್ವಜದಲ್ಲಿ ನಮ್ಮ ಜೀವವಿದೆ
(ಭಾರತ್ ದುನಿಯಾ ಕೀ ಶಾನ್ ಹೈ ಭಯ್ಯಾ,
ಅಪನಾ ದೇಶ್ ಮಹಾನ್ ಹೈ,
ತೀನ್ ದಿಶಾ ಸಮುನ್ದರ್ ಸೇ ಧಿರಾ,
ಉತ್ತರ್ ಮೇ ಕೈಲಾಶ್ ಬಲವಾನ್ ಹೈ,
ಗಂಗಾ, ಯಮುನಾ, ಕೃಷ್ಣಾ, ಕಾವೇರಿ,
ಕೋಶೀ, ಕಮಲಾ ಬಲಾನ್ ಹೈ,
ಅಪನಾ ದೇಶ್ ಮಹಾನ್ ಹೈ ಭಯ್ಯಾ,
ತಿರಂಗೇ ಮೇ ಬಸಾ ಪ್ರಾಣ್ ಹೈ )
ಸ್ನೇಹಿತರೇ ನಿಮಗೆ ಇದು ಇಷ್ಟವಾಯಿತೆಂದು ನಾನು ನಂಬುತ್ತೇನೆ. ಸ್ಪರ್ಧೆಗಾಗಿ ಬಂದಂತಹ ಇಂತಹ ಅರ್ಜಿಗಳ ಪಟ್ಟಿ ಬಹಳ ಉದ್ದವಾಗಿದೆ. ನೀವು, ಸಂಸ್ಕೃತಿ ಸಚಿವಾಲಯ ಜಾಲತಾಣಕ್ಕೆ ಭೇಟಿ ನೀಡಿ, ನಿಮ್ಮ ಕುಟುಂಬದವರೊಡನೆ ನೋಡಿ ಮತ್ತು ಕೇಳಿಸಿಕೊಳ್ಳಿ – ನಿಮಗೆ ಬಹಳ ಪ್ರೇರಣೆ ದೊರೆಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಬನಾರಸ್ ವಿಷಯವಾಗಿರಲಿ, ಶಹನಾಯಿ ವಿಷಯವಾಗಿರಲಿ, ಉಸ್ತಾದ್ ಬಿಸ್ಮಿಲ್ಲಾ ಖಾನ್ ವಿಷಯವಾಗಿರಲಿ, ನನ್ನ ಗಮನ ಅತ್ತ ಹೋಗುವುದು ಸಹಜವೇ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಈ ಪುರಸ್ಕಾರವನ್ನು ಸಂಗೀತ ಮತ್ತು ಪ್ರದರ್ಶನ ಕಲೆಗಳಲ್ಲಿ ಹೊರಹೊಮ್ಮುತ್ತಿರುವ ಪ್ರತಿಭಾವಂತ ಕಲಾವಿದರಿಗೆ ಪ್ರದಾನ ಮಾಡಲಾಗುತ್ತದೆ. ಇದು ಕಲೆ ಮತ್ತು ಸಂಗೀತ ಪ್ರಪಂಚದ ಜನಪ್ರಿಯತೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಏಳಿಗೆಗೂ ತನ್ನ ಕೊಡುಗೆ ನೀಡುತ್ತಿದೆ. ಕಾಲ ಕ್ರಮೇಣ ಜನಪ್ರಿಯತೆ ಕಡಿಮೆಯಾಗುತ್ತಿರುವ ಸಂಗೀತ ವಾದ್ಯಗಳಿಗೆ ಹೊಸ ಜೀವ ತುಂಬಿದ ಕಲಾವಿದರೂ ಇವರಲ್ಲಿ ಸೇರಿದ್ದಾರೆ. ಈಗ ನೀವೆಲ್ಲರೂ ಈ ಸ್ವರವನ್ನು ಗಮನವಿಟ್ಟು ಆಲಿಸಿರಿ...
(Sound Clip (21 seconds) Instrument- ‘सुरसिंगार’, Artist -जॉयदीप मुखर्जी)
ಇದು ಯಾವ ಸಂಗೀತ ವಾದ್ಯವೆಂದು ನಿಮಗೆ ತಿಳಿದಿದೆಯೇ? ನಿಮಗೆ ತಿಳಿಯದೇ ಇರುವ ಸಾಧ್ಯತೆಯೂ ಇದೆ! ಈ ಸಂಗೀತ ವಾದ್ಯದ ಹೆಸರು ಸುರಸಿಂಗಾರ್ ಎಂದಾಗಿದೆ ಮತ್ತು ಈ ಸ್ವರವನ್ನು ಸಂಯೋಜಿಸಿದವರು ಜೊಯಿದೀಪ್ ಮುಖರ್ಜಿಯವರು. ಜೊಯಿದೀಪ್ ಅವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರಕ್ಕೆ ಭಾಜನರಾದ ಯುವ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಈ ವಾದ್ಯದ ಸ್ವರವನ್ನು ಸುಮಾರು 50 ಮತ್ತು 60 ದಶಗಳಿಂದ ಕೇಳುವುದು ಅಸಾಧ್ಯವಾಗಿತ್ತು, ಆದರೆ ಜೊಯಿದೀಪ್ ಅವರು ಸುರ್ ಸಿಂಗಾರ್ ಅನ್ನು ಪುನಃ ಜನಪ್ರಿಯಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಸೋದರಿ ಉಪ್ಲಪೂ ನಾಗಮಣಿಯವರ ಪ್ರಯತ್ನ ಕೂಡಾ ಬಹಳ ಪ್ರೇರಣಾದಾಯಕವಾಗಿದೆ, ಇವರಿಗೆ ಮ್ಯಾಂಡೋಲಿನ್ ನಲ್ಲಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತಕ್ಕಾಗಿ ಈ ಪುರಸ್ಕಾರ ನೀಡಲಾಗಿದೆ. ಸಂಗ್ರಾಮ್ ಸಿಂಗ್ ಸುಹಾಸ್ ಭಂಡಾರೆ ಅವರಿಗೆ ವಾರ್ಕರಿ ಕೀರ್ತನ್ ಗಾಗಿ ಈ ಪುರಸ್ಕಾರ ಸಂದಿದೆ. ಈ ಪಟ್ಟಿಯಲ್ಲಿ ಕೇವಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಲಾವಿದರು ಮಾತ್ರ ಅಲ್ಲ – ವಿ ದುರ್ಗಾ ದೇವಿಯವರು, ನಾಟ್ಯದ ಒಂದು ಪ್ರಾತೀನ ಶೈಲಿಯಾದ ಕರಕಟ್ಟಂದಿ ಪುರಸ್ಕೃತರಾಗಿದ್ದಾರೆ. ಈ ಪುರಸ್ಕಾರಕ್ಕೆ ಭಾಜನರಾದ ರಾಜ್ ಕುಮಾರ್ ನಾಯಕ್ ಅವರು, ತೆಲಂಗಾಣದ 31 ಜಿಲ್ಲೆಗಳಲ್ಲಿ, 101 ದಿನಗಳ ಕಾಲ ನಡೆಯುವ ಪೆರಿನೀ ಒಡಿಸೀ ಆಯೋಜಿಸಿದ್ದರು. ಇಂದು ಜನರು ಅವರನ್ನು ಪೆರಿನಿ ರಾಜ್ ಕುಮಾರ್ ಎಂಬ ಹೆಸರಿನಿಂದಲೇ ಗುರುತಿಸುತ್ತಾರೆ. ಪೆರಿನೀ ನಾಟ್ಯ, ಭಗವಂತ ಶಿವನಿಗೆ ಅರ್ಪಿಸುವ ಒಂದು ನೃತ್ಯವಾಗಿದ್ದು, ಇದು ಕಾಕತೀಯ ರಾಜವಂಶಸ್ಥರ ಕಾಲದಲ್ಲಿ ಬಹಳ ಜನಪ್ರಿಯವಾಗಿತ್ತು. ಈ ರಾಜವಂಶದ ಬೇರುಗಳು ಇಂದಿನ ತೆಲಂಗಾಣದೊಂದಿಗೆ ಬೆಸೆದುಕೊಂಡಿವೆ. ಈ ಪುರಸ್ಕಾರಕ್ಕೆ ಭಾಜನರಾಗಿರುವ ಮತ್ತೊಬ್ಬ ವ್ಯಕ್ತಿಯೆಂದರೆ ಸಾಯಿಖೋಮ್ ಸುರ್ ಚಂದ್ರಾ ಸಿಂಗ್. ಮೈತೇಯಿ ಪುಂಗ್ ವಾದ್ಯ ತಯಾರಿಸುವುದರಲ್ಲಿ ಪಾಂಡಿತ್ಯ ಸಾಧಿಸಿ ಇವರು ಹೆಸರಾಗಿದ್ದಾರೆ. ಈ ವಾದ್ಯ ಮಣಿಪುರದೊಂದಿಗೆ ಬೆಸೆದುಕೊಂಡಿದೆ. ಪೂರಣ್ ಸಿಂಗ್ ಓರ್ವ ದಿವ್ಯಾಂಗ ಕಲಾವಿದರಾಗಿದ್ದು, ರಾಜೂಲಾ-ಮಲುಶಾಹೀ, ನ್ಯೂಯೋಲಿ, ಹುಡಕ ಬೋಲ್, ಜಾಗರ್ ನಂತಹ ವಿಭಿನ್ನ ಸಂಗೀತ ವಿಧಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಆಡಿಯೋ ರೆಕಾರ್ಡಿಂಗ್ ಗಳನ್ನು ಕೂಡಾ ಇವರು ಸಿದ್ಧಪಡಿಸಿದ್ದಾರೆ. ಉತ್ತರಾಖಂಡ್ ನ ಜನಪದ ಸಂಗೀತದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅನೇಕ ಬಹುಮಾನಗಳನ್ನು ಪೂರಣ್ ಸಿಂಗ್ ಗಳಿಸಿದ್ದಾರೆ. ಸಮಯದ ಮಿತಿಯ ಕಾರಣದಿಂದಾಗಿ ಪ್ರಶಸ್ತಿ ಪುರಸ್ಕೃತರೆಲ್ಲರ ಬಗ್ಗೆ ನನಗೆ ಮಾತನಾಡಲು ಸಾಧ್ಯವಾಗುವುದಿಲ್ಲ, ಆದರೆ, ನೀವೆಲ್ಲರೂ ಇವರೆಲ್ಲರ ಬಗ್ಗೆ ಖಂಡಿತಾ ಓದುತ್ತೀರೆಂಬ ನಂಬಿಕೆ ನನಗಿದೆ. ಎಲ್ಲಾ ಕಲಾವಿದರೂ, ಪ್ರದರ್ಶನ ಕಲೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಎಲ್ಲರಿಗೂ ತಳಮಟ್ಟದಿಂದಲೂ ಸ್ಪೂರ್ತಿ ನೀಡುತ್ತಲೇ ಇರುತ್ತಾರೆ ಎಂಬ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕ್ಷಿಪ್ರಗತಿಯಿಂದ ಮುಂದೆ ಸಾಗುತ್ತಿರುವ ನಮ್ಮ ದೇಶದಲ್ಲಿ ಡಿಜಿಟಲ್ ಭಾರತದ ಸಾಮರ್ಥ್ಯ ಪ್ರತಿಯೊಂದು ಮೂಲೆಯಲ್ಲೂ ಕಂಡುಬರುತ್ತಿದೆ. Digital India ದ ಸಾಮರ್ಥ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ವಿಧ ವಿಧದ ಆಪ್ ಗಳ ಪಾತ್ರ ಬಹಳ ದೊಡ್ಡದಿರುತ್ತದೆ. ಅಂತಹದ್ದೇ ಒಂದು ಆಪ್ E-Sanjeevani . ಈ ಆಪ್ ಮೂಲಕ Tele-consultation ಅಂದರೆ ದೂರದಲ್ಲಿದ್ದುಕೊಂಡೇ, ವಿಡಿಯೋ ಕಾನ್ಫರೆನ್ಸ್ ಮುಖಾಂತರ ನೀವು ತಮ್ಮ ಅನಾರೋಗ್ಯ ಕುರಿತಂತೆ ವೈದ್ಯರೊಂದಿಗೆ ಸಮಾಲೋಚಿಸಬಹುದು. ಈ ಅನ್ವಯಿಕವನ್ನು ಬಳಸಿ ಇದುವರೆಗೂ ಟೆಲಿ ಕನ್ಸಲ್ಟೇಷನ್ ಮಾಡಿರುವವರ ಸಂಖ್ಯೆ 10 ಕೋಟಿ ದಾಟಿದೆ. ನೀವು ಊಹೆ ಮಾಡಬಹುದು, ವಿಡಿಯೋ ಕಾನ್ಫರೆನ್ಸ್ ಮುಖಾಂತರ 10 ಕೋಟಿ ಸಮಾಲೋಚನೆಗಳು! ರೋಗಿ ಮತ್ತು ವೈದ್ಯರ ನಡುವೆ ಅದ್ಭುತ ಸಂಬಂಧ – ಇದೊಂದು ಬಹುದೊಡ್ಡ ಸಾಧನೆಯಾಗಿದೆ. ಈ ಸಾಧನೆಗಾಗಿ ನಾನು ಎಲ್ಲಾ ವೈದ್ಯರಿಗೆ ಮತ್ತು ಇದರ ಪ್ರಯೋಜನ ಪಡೆದುಕೊಂಡಿರುವ ಎಲ್ಲಾ ರೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತದ ಜನತೆ, ತಂತ್ರಜ್ಞಾನವನ್ನು ಯಾವರೀತಿ ತಮ್ಮ ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ, ಎನ್ನುವುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ಕೊರೋನಾ ಸಮಯದಲ್ಲಿ ಇ-ಸಂಜೀವಿನಿ ಆಪ್ ಮೂಲಕ ಟೆಲಿ ಕನ್ಸಲ್ಟೇಷನ್ ಎನ್ನುವುದು ಜನರಿಗೆ ಯಾವರೀತಿ ಒಂದು ದೊಡ್ಡ ವರದಾನವಾಯಿತು ಎಂಬುದನ್ನು ನಾವು ನೋಡಿದ್ದೇವೆ. ಮನದ ಮಾತಿನಲ್ಲಿ ಓರ್ವ ವೈದ್ಯರೊಂದಿಗೆ ಮತ್ತು ಓರ್ವ ರೋಗಿಯೊಂದಿಗೆ ನಾವು ಮಾತನಾಡಬಾರದೇಕೆ, ಸಂವಾದ ನಡೆಸಬಾರದೇಕೇ ಮತ್ತು ಇದನ್ನು ನಿಮಗೆ ತಲುಪಿಸಬಾರದೇಕೆ ಎಂದು ನನಗೆ ಅನಿಸಿತು. ಟೆಲಿ ಕನ್ಸಲ್ಟೇಷನ್ ಜನರಿಗೆ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಯುವ ಪ್ರಯತ್ನ ಮಾಡಿದೆವು. ನಮ್ಮೊಂದಿಗೆ ಸಿಕ್ಕಿಂನ ವೈದ್ಯ ಡಾಕ್ಟರ್ ಮದನ್ ಮಣಿ ಅವರಿದ್ದಾರೆ. ಡಾಕ್ಟರ್ ಮದನ್ ಮಣಿ ಸಿಕ್ಕಿಂ ನಿವಾಸಿಗಳೇನೋ ನಿಜ ಆದರೆ ಅವರು ಧನ್ ಬಾದ್ ನಲ್ಲಿ ತಮ್ಮ ಎಂಬಿಬಿಎಸ್ ಪದವಿ ಪಡೆದರು ಮತ್ತು ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಡಿ ಪದವಿ ಪಡೆದರು. ಇವರು ಗ್ರಾಮೀಣ ಭಾಗದ ನೂರಾರು ಜನರೊಂದಿಗೆ ಟೆಲಿ ಕನ್ಸಲ್ಟೇಷನ್ ನಡೆಸಿದ್ದಾರೆ.
ಪ್ರಧಾನ ಮಂತ್ರಿ: ನಮಸ್ಕಾರ.. ಮದನ್ ಮಣಿ ಅವರೆ
ಡಾ. ಮದನ್ ಮಣಿ: ನಮಸ್ಕಾರ ಸರ್
ಪ್ರಧಾನ ಮಂತ್ರಿ: ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ
ಡಾ. ಮದನ್ ಮಣಿ: ಹೇಳಿ ಸರ್...
ಪ್ರಧಾನ ಮಂತ್ರಿ: ನೀವು ಬನಾರಸ್ ನಲ್ಲಿ ಓದಿದ್ದೀರಲ್ಲವೇ
ಡಾ. ಮದನ್ ಮಣಿ: ಹೌದು ಸರ್ ನಾನು ಬನಾರಸ್ ನಲ್ಲಿ ಓದಿದ್ದೇನೆ
ಪ್ರಧಾನ ಮಂತ್ರಿ: ನಿಮ್ಮ ವೈದ್ಯಕೀಯ ಶಿಕ್ಷಣ ಅಲ್ಲಿಯೇ ಆಯಿತಲ್ಲವೇ
ಡಾ. ಮದನ್ ಮಣಿ: ಹೌದು ಸರ್ ಹೌದು
ಪ್ರಧಾನ ಮಂತ್ರಿ: ಹಾಗಿದ್ದರೆ ಅಲ್ಲಿ ಇದ್ದಾಗಿನ ಬನಾರಸ್ ಮತ್ತು ಈಗಿನ ಬದಲಾವಣೆಯಾಗಿರುವ ಬನಾರಸ್ ನೋಡಲು ಹೋಗಿರುವಿರೋ ಅಥವಾ ಹೋಗಿಲ್ಲವೋ|
ಡಾ. ಮದನ್ ಮಣಿ: ಪ್ರಧಾನ ಮಂತ್ರಿಯವರೇ ನಾನು ಸಿಕ್ಕಿಂಗೆ ಹಿಂದಿರುಗಿ ಬಂದಾಗಿನಿಂದ ನನಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಅಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಎಂದು ನಾನು ಕೇಳಿದ್ದೇನೆ.
ಪ್ರಧಾನ ಮಂತ್ರಿ: ನೀವು ಬನಾರಸ್ ನಿಂದ ಹೊರಟುಬಂದು ಎಷ್ಟು ವರ್ಷಗಳಾಗಿವೆ?
ಡಾ. ಮದನ್ ಮಣಿ: ನಾನು ಬನಾರಸ್ ನಿಂದ 2006 ರಲ್ಲಿ ಹೊರಟು ಬಂದೆ ಸರ್
ಪ್ರಧಾನ ಮಂತ್ರಿ: ಓ.. ಹಾಗಾದರೆ ನೀವು ಖಂಡಿತಾ ಹೋಗಲೇ ಬೇಕು
ಡಾ. ಮದನ್ ಮಣಿ: ಹೌದು... ಹೌದು
ಪ್ರಧಾನ ಮಂತ್ರಿ: ಸರಿ, ನೀವು ಸಿಕ್ಕಿಂನಲ್ಲಿ ದೂರ ಬೆಟ್ಟಗುಡ್ಡಗಳ ಪ್ರಾಂತ್ಯದಲ್ಲಿ ನೆಲೆಸಿ ಅಲ್ಲಿನ ಜನರಿಗೆ ಟೆಲಿ ಕನ್ಸಲ್ಟೇಷನ್ ನ ಬಹು ದೊಡ್ಡ ಸೇವೆ ನೀಡುತ್ತೀರೆಂದು ಕೇಳಿ ನಿಮಗೆ ನಾನು ಕರೆ ಮಾಡುತ್ತಿದ್ದೇನೆ.
. ಮದನ್ ಮಣಿ: ಸರಿ ಸರ್
ಪ್ರಧಾನ ಮಂತ್ರಿ: ಮನದ ಮಾತಿನ ಶ್ರೋತೃಗಳಿಗೆ ನಾನು ನಿಮ್ಮ ಅನುಭವ ಕೇಳಿಸಬೇಕೆಂದು ಬಯಸುತ್ತೇನೆ.
ಡಾ. ಮದನ್ ಮಣಿ: ಸರಿ ಸರ್
ಪ್ರಧಾನ ಮಂತ್ರಿ: ಅನುಭವ ಹೇಗಿತ್ತೆಂದು ನನಗೆ ಹೇಳಿ?
ಡಾ. ಮದನ್ ಮಣಿ: ಅನುಭ ಬಹಳ ಚೆನ್ನಾಗಿತ್ತು ಪ್ರಧಾನ ಮಂತ್ರಿಯವರೆ. ಏನೆಂದರೆ ಸಿಕ್ಕಿಂನಲ್ಲಿ ಅತ್ಯಂತ ಸಮೀಪವಿರುವ ಪಿಹೆಚ್ ಸಿ ಗೆ ಹೋಗಬೇಕೆಂದರೂ ಜನರು ವಾಹನದಲ್ಲಿ ಹೋಗಬೇಕು ಮತ್ತು ಕನಿಷ್ಠ ಒಂದು ಅಥವಾ ಎರಡುನೂರು ರೂಪಾಯಿ ತೆಗೆದುಕೊಂಡು ಹೋಗಬೇಕಿತ್ತು. ಅಲ್ಲದೇ ವೈದ್ಯರು ಸಿಗುತ್ತಾರೋ ಇಲ್ಲವೋ ಅದು ಕೂಡಾ ಸಮಸ್ಯೆಯೇ. ಹೀಗಾಗಿ ದೂರ ದೂರದ ಜನರು ಟೆಲಿ ಕನ್ಸಲ್ಟೇಷನ್ ಮುಖಾಂತರ ನಮ್ಮೊಂದಿಗೆ ಸಂಪರ್ಕ ಹೊಂದುತ್ತಿದ್ದರು. Health & Wellness Centre ನ CHOಗಳು ನಮ್ಮನ್ನು ಜನರೊಂದಿಗೆ ಕನೆಕ್ಟ್ ಮಾಡಿಸುತ್ತಾರೆ. ಮತ್ತು ನಮಗೆ ರೋಗಿಗಳ ವರದಿಗಳು, ಅವರ ಪ್ರಸಕ್ತ ಸ್ಥಿತಿ ಈ ಎಲ್ಲಾ ವಿಷಯಗಳ ಕುರಿತು ನಮಗೆ ತಿಳಿಯಪಡಿಸುತ್ತಾರೆ.
ಪ್ರಧಾನ ಮಂತ್ರಿ: ಅಂದರೆ ದಾಖಲೆಗಳನ್ನು ವರ್ಗಾವಣೆ ಮಾಡುತ್ತಾರೆ.
ಡಾ. ಮದನ್ ಮಣಿ: ಹೌದು ಸರ್. ದಾಖಲೆಗಳ ವರ್ಗಾವಣೆ ಮಾಡುತ್ತಾರೆ ಮತ್ತು ಒಂದುವೇಳೆ ವರ್ಗಾವಣೆ ಮಾಡಲಾಗದೇ ಇದ್ದಲ್ಲಿ, ಅದರಲ್ಲಿರುವುದನ್ನು ನಮಗೆ ಓದಿ ಹೇಳುತ್ತಾರೆ.
ಪ್ರಧಾನ ಮಂತ್ರಿ: ಅಂದರೆ ಕ್ಷೇಮ ಕೇಂದ್ರದ ವೈದ್ಯರು ಹೇಳುತ್ತಾರೆ
ಡಾ. ಮದನ್ ಮಣಿ: ಹೌದು, ಕ್ಷೇಮ ಕೇಂದ್ರದಲ್ಲಿರುವ ಸಿಹೆಚ್ ಓ, ಸಮುದಾಯ ಆರೋಗ್ಯ ಅಧಿಕಾರಿ.
ಪ್ರಧಾನ ಮಂತ್ರಿ: ಮತ್ತು ರೋಗಿ ತಮ್ಮ ತೊಂದರೆಗಳನ್ನು ನಿಮಗೆ ನೇರವಾಗಿ ತಿಳಿಯಪಡಿಸುತ್ತಾರೆ.
ಡಾ. ಮದನ್ ಮಣಿ: ಹೌದು. ರೋಗಿ ಕೂಡಾ ತಮ್ಮ ಸಮಸ್ಯೆಗಳನ್ನು ನಮಗೆ ಹೇಳುತ್ತಾರೆ. ಹಿಂದಿನ ರೆಕಾರ್ಡ್ ಗಳನ್ನು ನೋಡಿ ಇನ್ನೇನಾದರೂ ಹೊಸ ಸಮಸ್ಯೆ ಇದ್ದರೆ ಅದನ್ನು ನಾವು ತಿಳಿದುಕೊಳ್ಳಬೇಕು. ಅಂದರೆ ರೋಗಿಗೆ Chest Auscultate ಮಾಡಬೇಕಾದರೆ, ಅವರ ಕಾಲು ಊದಿಕೊಂಡಿದೆಯೇ ಅಥವಾ ಇಲ್ಲವೇ? ಒಂದುವೇಳೆ CHO ನೋಡಿಲ್ಲವೆಂದರೆ, ಕಾಲು ಊದಿದೆಯೇ ಅಥವಾ ಇಲ್ಲವೇ ಎಂದು ನೋಡಿ, ಕಣ್ಣುಗಳನ್ನು ನೋಡಿ, ರಕ್ತ ಹೀನತೆ ಇದೆಯೋ ಇಲ್ಲವೋ ನೋಡಿ, ಒಂದುವೇಳೆ ಅವರಿಗೆ ಕೆಮ್ಮು ಇದ್ದಲ್ಲಿ Chest ಅನ್ನು Auscultate ಮಾಡಿ ಮತ್ತು ಶಬ್ದ ಬರುತ್ತಿದೆಯೋ ಇಲ್ಲವೋ ಎಂದು ಕಂಡುಕೊಳ್ಳಿ ಎಂದು ಹೇಳುತ್ತೇವೆ.
ಪ್ರಧಾನ ಮಂತ್ರಿ: ನೀವು ವಾಯ್ಸ್ ಕಾಲ್ ನಲ್ಲಿ ಮಾತನಾಡುತ್ತೀರೋ ಅಥವಾ ವಿಡಿಯೋ ಕಾಲ್ ಕೂಡಾ ಬಳಸುತ್ತೀರೋ ?
ಡಾ. ಮದನ್ ಮಣಿ: ಸರ್, ವಿಡಿಯೋ ಕಾಲ್ ಬಳಸುತ್ತೇವೆ
ಪ್ರಧಾನ ಮಂತ್ರಿ: ಅಂದರೆ ನೀವು ರೋಗಿಯನ್ನು ನೋಡುತ್ತೀರಿ ಕೂಡಾ ಅಲ್ಲವೇ
ಡಾ. ಮದನ್ ಮಣಿ: ಹೌದು ಸರ್. ರೋಗಿಯನ್ನು ನೋಡುತ್ತೇವೆ ಕೂಡಾ
ಪ್ರಧಾನ ಮಂತ್ರಿ: ರೋಗಿಗೆ ಯಾವ ರೀತಿಯ ಅನಿಸಿಕೆ ಉಂಟಾಗುತ್ತದೆ ?
ಡಾ. ಮದನ್ ಮಣಿ: ರೋಗಿಗೆ ಸಂತೋಷವಾಗುತ್ತದೆ ಏಕೆಂದರೆ ಅವರು ವೈದ್ಯರನ್ನು ಸಮೀಪದಿಂದ ನೋಡುತ್ತಾರೆ. ಔಷಧ ಕಡಿಮೆ ಮಾಡಬೇಕೋ, ಜಾಸ್ತಿ ಮಾಡಬೇಕೋ ಎಂದು ಅವರಿಗೆ ಗೊಂದಲವಿರುತ್ತದೆ. ಏಕೆಂದರೆ ಸಿಕ್ಕಿಂನಲ್ಲಿರುವ ಜನರಲ್ಲಿ ರೋಗಿಗಳು ಮಧು ಮೇಹ ಮತ್ತು ಹೈಪರ್ ಟೆನ್ಷನ್ ನಿಂದ ಬರುತ್ತಾರೆ ಮತ್ತು ಮಧು ಮೇಹ ಮತ್ತು ಹೈಪರ್ ಟೆನ್ಷನ್ ಔಷಧಗಳನ್ನು ಬದಲಾಯಿಸುವುದಕ್ಕಾಗಿ ಅವರು ವೈದ್ಯರನ್ನು ಕಾಣಲು ಬಹಳ ದೂರ ಹೋಗಬೇಕಾಗುತ್ತದೆ. ಆದರೆ, ಟೆಲಿ ಕನ್ಸಲ್ಟೇಷನ್ ಮುಖಾಂತರ ವೈದ್ಯರು ಅಲ್ಲೇ ಸಿಗುತ್ತಾರೆ ಮತ್ತು ಔಷಧ ಕೂಡಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಉಚಿತ ಔಷಧ ಉಪಕ್ರಮದ ಅಡಿಯಲ್ಲಿ ದೊರೆಯುತ್ತದೆ. ಹೀಗಾಗಿ ಅವರು ಅಲ್ಲಿಂದಲೇ ಔಷಧವನ್ನೂ ತೆಗೆದುಕೊಂಡು ಹೋಗುತ್ತಾರೆ.
ಪ್ರಧಾನಮಂತ್ರಿಯವರು: ಸರಿ ಮದನ್ ಮಣಿ ಅವರೆ, ರೋಗಿಗಳಿಗೆ ಒಂದು ಅಭ್ಯಾಸವಿರುತ್ತದೆ. ಎಲ್ಲಿವರೆಗೆ ವೈದ್ಯರು ಬರುವುದಿಲ್ಲ, ವೈದ್ಯರು ತಮ್ಮನ್ನು ನೋಡುವುದಿಲ್ಲ, ಅವರು ತೃಪ್ತಿ ಹೊಂದುವುದಿಲ್ಲ ಎಂಬುದು ನಿಮಗೆ ತಿಳಿದಿದೆ ಮತ್ತು ರೋಗಿಯನ್ನು ನೋಡಬೇಕು ಎಂದು ವೈದ್ಯರಿಗೆ ಕೂಡ ಅನಿಸುತ್ತದೆ. ಈಗ ಅಲ್ಲಿ ಎಲ್ಲಾ ಸಮಾಲೋಚನೆಗಳನ್ನು ಟೆಲಿಕಾಂ ಮೂಲಕವೇ ಮಾಡಲಾಗುತ್ತದೆ, ಆದ್ದರಿಂದ ವೈದ್ಯರಿಗೆ ಏನು ಅನಿಸುತ್ತದೆ, ರೋಗಿಗೆ ಏನು ಅನಿಸುತ್ತದೆ?
ಡಾ. ಮದನ್ ಮಣಿ: ಹೌದು, ರೋಗಿಯು ವೈದ್ಯರನ್ನು ನೋಡಬೇಕು ಎಂದು ಭಾವಿಸಿದಂತೆ, ನಾವು ಏನನ್ನು ನೋಡಬೇಕು ಎಂದು ಅನಿಸುತ್ತದೆಯೋ ಅದನ್ನು CHO ಗೆ ನೋಡಲು ಹೇಳಿ ವೀಡಿಯೊ ಮೂಲಕವೇ ನಾವು ನೋಡಲು ಹೇಳಿ ಮಾತನಾಡುತ್ತೇವೆ. ಕೆಲವೊಮ್ಮೆ, ವೀಡಿಯೊದಲ್ಲಿಯೇ ರೋಗಿಯನ್ನು ಹತ್ತಿರ ಬರುವಂತೆ ಹೇಳಿ, ಅವನು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಮಗೆ ತೋರಿಸಲು ಹೇಳುತ್ತೇವೆ. ಯಾರಿಗಾದರೂ ಚರ್ಮದ ಸಮಸ್ಯೆ ಇದ್ದರೆ, skin problem ಇದ್ದರೆ ಅವರು ವೀಡಿಯೊದ ಮೂಲಕವೇ ನಮಗೆ ತೋರಿಸುತ್ತಾರೆ. ಹೀಗೆ ಆ ರೋಗಿಯೂ ತೃಪ್ತರಾಗಿರುತ್ತಾರೆ.
ಪ್ರಧಾನಮಂತ್ರಿಯವರು: ಅವರಿಗೆ ಚಿಕಿತ್ಸೆ ನೀಡಿದ ನಂತರ, ಅವರು ತೃಪ್ತಿ ಪಡೆಯುತ್ತಾರೆಯೇ, ಅವರು ಏನು ಭಾವಿಸುತ್ತಾರೆ? ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆಯೇ?
ಡಾ.ಮದನ್ ಮಣಿ: ಹೌದು, ನನಗೆ ತುಂಬಾ ತೃಪ್ತಿ ಎನಿಸುತ್ತದೆ. ರೋಗಿಗಳಿಗೂ ತೃಪ್ತಿ ಸಿಗುತ್ತದೆ ಸರ್. ನಾನು ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿದ್ದೇನೆ ಜೊತೆ ಜೊತೆಗೆ ಟೆಲಿ-ಕನ್ಸಲ್ಟೇಶನ್ ಮಾಡುವುದರಿಂದ, ಫೈಲ್ ಜೊತೆಗೆ ರೋಗಿಯನ್ನು ನೋಡುವುದು ನನಗೆ ತುಂಬಾ ಒಳ್ಳೆಯ, ಅನುಭವವನ್ನು ನೀಡುತ್ತಿದೆ.
ಪ್ರಧಾನ ಮಂತ್ರಿ: ಸರಾಸರಿ ಎಷ್ಟು ರೋಗಿಗಳನ್ನು ಟೆಲಿ ಕನ್ಸಲ್ಟೇಶನ್ ಮೂಲಕ ಪರೀಕ್ಷಿಸುತ್ತೀರಿ?
ಡಾ.ಮದನ್ ಮಣಿ: ಇಲ್ಲಿಯವರೆಗೆ ನಾನು 536 ರೋಗಿಗಳನ್ನು ನೋಡಿದ್ದೇನೆ.
ಪ್ರಧಾನಿಯವರು: ಓಹ್... ಅಂದರೆ ನೀವು ಅದನ್ನು ಸಾಕಷ್ಟು ಪರಿಣಿತಿ ಹೊಂದಿದ್ದೀರಿ.
ಡಾ.ಮದನ್ ಮಣಿ: ಹೌದು, ಒಳ್ಳೇ ಅನುಭವ
ಪ್ರಧಾನಿಯವರು: ಒಳ್ಳೆಯದು, ನಿಮಗೆ ಶುಭ ಹಾರೈಕೆಗಳು. ಈ ತಂತ್ರಜ್ಞಾನವನ್ನು ಬಳಸಿಕೊಂಡು, ನೀವು ಸಿಕ್ಕಿಂನ ದೂರದ ಕಾಡುಗಳಲ್ಲಿ, ಪರ್ವತಗಳಲ್ಲಿ ವಾಸಿಸುವ ಜನರಿಗೆ ಅಂತಹ ದೊಡ್ಡ ಸೇವೆಯನ್ನು ಮಾಡುತ್ತಿದ್ದೀರಿ. ಮತ್ತು ನಮ್ಮ ದೇಶದ ದೂರದ ಪ್ರದೇಶಗಳಲ್ಲೂ ಇಂತಹ ತಂತ್ರಜ್ಞಾನದ ಸದ್ಬಳಕೆಯಾಗುತ್ತಿರುವುದು ಸಂತಸದ ವಿಚಾರ. ನನ್ನ ಪರವಾಗಿ ನಿಮಗೆ ಅನಂತ ಅಭಿನಂದನೆಗಳು.
ಡಾ. ಮದನ್ ಮಣಿ: ಧನ್ಯವಾದಗಳು!
ಸ್ನೇಹಿತರೇ, ಇ-ಸಂಜೀವಿನಿ ಆ್ಯಪ್ ಅವರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದು ಡಾ.ಮದನ್ ಮಣಿ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಡಾ. ಮದನ್ ಅವರ ನಂತರ, ಈಗ ನಾವು ಮತ್ತೊಬ್ಬ ಮದನ್ ಜಿ ನಮ್ಮೊಂದಿಗೆ ಮಾತನಾಡಲಿದ್ದಾರೆ. ಇವರು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿ ಮದನ್ ಮೋಹನ್ ಲಾಲ್ ಜಿ. ಈಗ ಚಂದೌಲಿ ಕೂಡ ಬನಾರಸ್ ಗೆ ಹೊಂದಿಕೊಂಡಿರುವುದು ಕಾಕತಾಳೀಯ. ಇ- ಸಂಜೀವಿನಿ ಸಂಬಂಧಿಸಿದಂತೆ ರೋಗಿಯಾಗಿ ಅವರ ಅನುಭವ ಏನು ಎಂದು ಮದನ್ ಮೋಹನ್ ಜಿ ಅವರಿಂದ ತಿಳಿಯೋಣ?
ಪ್ರಧಾನಮಂತ್ರಿ: ಮದನ್ ಮೋಹನ್ ಅವರೆ ನಮಸ್ಕಾರ!
ಮದನ್ ಮೋಹನ್ ಜಿ: ನಮಸ್ಕಾರ, ನಮಸ್ಕಾರ ಸರ್.
ಪ್ರಧಾನಿಯವರು: ನಮಸ್ಕಾರ! ನೀವು ಮಧುಮೇಹ ರೋಗಿ ಎಂದು ನನಗೆ ಹೇಳಲಾಗಿದೆ.
ಮದನ್ ಮೋಹನ್ ಜಿ: ಹೌದು.
ಪ್ರಧಾನ ಮಂತ್ರಿ: ನೀವು ತಂತ್ರಜ್ಞಾನವನ್ನು ಬಳಸಿಕೊಂಡು ಟೆಲಿ ಸಮಾಲೋಚನೆಯ ಮೂಲಕ ನಿಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದ ಸಹಾಯವನ್ನು ಪಡೆಯುತ್ತಿದ್ದೀರಿ.
ಮದನ್ ಮೋಹನ್ ಜಿ: ಹೌದು ಸರ್.
ಪ್ರಧಾನ ಮಂತ್ರಿ: ಒಬ್ಬ ರೋಗಿಯಾಗಿ, ಪೀಡಿತನಾಗಿ, ನಾನು ನಿಮ್ಮ ಅನುಭವಗಳನ್ನು ಕೇಳಬಯಸುತ್ತೇನೆ, ಈ ಮೂಲಕ ನಮ್ಮ ಗ್ರಾಮಗಳಲ್ಲಿ ವಾಸಿಸುವ ಜನರು ಇಂದಿನ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ದೇಶವಾಸಿಗಳಿಗೆ ತಿಳಿಸಲು ನಾನು ಬಯಸುತ್ತೇನೆ. ತಾವು ಅದನ್ನು ಹೇಗೆ ಬಳಸಿಕೊಳ್ಳುತ್ತಿದ್ದೀರಿ ಎಂದು ಹೇಳಿ?
ಮದನ್ ಮೋಹನ್ ಜೀ : ಸರ್, ಆಸ್ಪತ್ರೆಗಳು ದೂರದಲ್ಲಿವೆ, ಮಧುಮೇಹ ಕಾಯಿಲೆ ಬಂದಾಗ 5-6 ಕಿ.ಮೀ ದೂರ ಹೋಗಿ ಚಿಕಿತ್ಸೆ ಪಡೆಯಬೇಕಿತ್ತು. ನೀವು ವ್ಯವಸ್ಥೆ ಮಾಡಿರುವುದರಿಂದ. ಈಗ ನಾವು ಹೋಗುತ್ತೇವೆ, ನಮ್ಮನ್ನು ಪರೀಕ್ಷಿಸಲಾಗುತ್ತದೆ, ನಮ್ಮನ್ನು ದೂರದ ವೈದ್ಯರೊಂದಿಗೆ ಮಾತನಾಡುವಂತೆ ಕೂಡ ಅನುಕೂಲ ಮಾಡುತ್ತಾರೆ ಮತ್ತು ನಮಗೆ ಔಷಧಿಗಳನ್ನೂ ನೀಡುತ್ತಾರೆ. ಇದರಿಂದ ನಮಗೆ ಹೆಚ್ಚಿನ ಪ್ರಯೋಜನವಾಗಿದೆ ಮತ್ತು ಇತರ ಜನರು ಸಹ ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಪ್ರಧಾನಿಯವರು: ಹಾಗಾದರೆ ಪ್ರತಿ ಬಾರಿಯೂ ಅದೇ ವೈದ್ಯರು ನಿಮ್ಮನ್ನು ನೋಡುತ್ತಾರೋ ಅಥವಾ ವೈದ್ಯರು ಬದಲಾಗುತ್ತಿರುತ್ತಾರೆಯೇ?
ಮದನ್ ಮೋಹನ್ ಜಿ: ಅವರಿಗೆ ತಿಳಿಯದಿದ್ದರೆ ಬೇರೆ ವೈದ್ಯರಿಗೆ ತೋರಿಸುತ್ತಾರೆ. ಅವರು ಸ್ವತಃ ಬೇರೆ ವೈದ್ಯರೊಂದಿಗೆ ಮಾತನಾಡುತ್ತಾರೆ ಮತ್ತು ಆ ವೈದ್ಯರೊಂದಿಗೆ ನಮ್ಮನ್ನು ಮಾತನಾಡುವಂತೆ ಮಾಡುತ್ತಾರೆ.
ಪ್ರಧಾನ ಮಂತ್ರಿ: ವೈದ್ಯರು ನಿಮಗೆ ನೀಡುವ ಮಾರ್ಗದರ್ಶನದಿಂದ ಪೂರ್ಣ ಪ್ರಯೋಜನವನ್ನು ಪಡೆಯುತ್ತೀರಾ.
ಮದನ್ ಮೋಹನ್ ಜಿ: ನಮಗೆ ಲಾಭವಾಗಿದೆ. ಇದರಿಂದ ನಮಗೆ ಬಹಳ ಲಾಭವಿದೆ. ಗ್ರಾಮದ ಜನರಿಗೂ ಇದರ ಪ್ರಯೋಜನವಿದೆ. ಅಲ್ಲಿದ್ದವರೆಲ್ಲ, ನಮಗೆ ಬಿಪಿ ಇದೆ, ಶುಗರ್ ಇದೆ, ಪರೀಕ್ಷೆ ಮಾಡಿ, ಔಷಧಿ ಕೊಡಿ ಎಂದು ಕೇಳುತ್ತಾರೆ. ಈ ಮೊದಲು ಅವರು 5-6 ಕಿಲೋಮೀಟರ್ ದೂರ ಹೋಗುತ್ತಿದ್ದರು, ಉದ್ದನೆಯ ಸರತಿ ಸಾಲುಗಳಲ್ಲಿ ನಿಲ್ಲುತ್ತಿದ್ದರು , ರೋಗ ಪರೀಕ್ಷೆಗೆ ಸರತಿ ಸಾಲುಗಳು ಇರುತ್ತಿದ್ದವು. ಸಂಪೂರ್ಣ ದಿನ ನಷ್ಟವಾಗುತ್ತಿತ್ತು.
ಪ್ರಧಾನಿಯವರು: ಅಂದರೆ ಈಗ ನಿಮ್ಮ ಸಮಯವೂ ಉಳಿತಾಯವಾಗುತ್ತದೆ.
ಮದನ್ ಮೋಹನ್ ಜಿ: ಹಣ ಸಹ ಖರ್ಚು ಮಾಡಬೇಕಿತ್ತು ಆದರೆ ಇಲ್ಲಿ ಎಲ್ಲಾ ಸೇವೆಗಳು ಉಚಿತವಾಗಿ ಲಭಿಸುತ್ತಿವೆ.
ಪ್ರಧಾನಿಯವರು: ನಿಮ್ಮ ವೈದ್ಯರನ್ನು ನೋಡಿದಾಗ, ಒಂದು ವಿಶ್ವಾಸ ಮೂಡುತ್ತದೆ. ಸರಿ, ಡಾಕ್ಟರ್ ಇದ್ದಾರೆ, ಅವರು ನನ್ನ ನಾಡಿ, ಕಣ್ಣು, ನಾಲಿಗೆಯನ್ನೂ ಪರೀಕ್ಷಿಸಿದ್ದಾರೆ. ಅದೊಂದು ವಿಭಿನ್ನ ಭಾವನೆ ಮೂಡಿಸುತ್ತದೆ. ಈಗ ಅವರು ಟೆಲಿ ಕನ್ಸಲ್ಟೇಶನ್ ಮಾಡಿದರೆ ನಿಮಗೆ ಅದೇ ತೃಪ್ತಿ ಸಿಗುತ್ತದೆಯೇ?
ಮದನ್ ಮೋಹನ್ ಜಿ: ಹೌದು, ತೃಪ್ತಿ ಇದೆ. ಅವರು ನಮ್ಮ ನಾಡಿಮಿಡಿತವನ್ನು ಪರೀಕ್ಷಿಸುತ್ತಿದ್ದಾರೆ, ಎದೆ ಬಡಿತ ಪರೀಕ್ಷಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ನೀವು ಇಷ್ಟು ಒಳ್ಳೆಯ ವ್ಯವಸ್ಥೆ ಮಾಡಿದ್ದೀರಿ ಎಂದು ನನಗೆ ತುಂಬಾ ಸಂತೋಷವಾಗಿದೆ, ಹಿಂದೆ ನಾವು ಕಷ್ಟಪಟ್ಟು ಇಲ್ಲಿಗೆ ಹೋಗಬೇಕಾಗಿತ್ತು, ಕಾರಿಗೆ ಹಣ ತೆರಬೇಕಾಗುತ್ತಿತ್ತು, ಅಲ್ಲಿ ಸಾಲಾಗಿ ನಿಲ್ಲಬೇಕಿತ್ತು. ಆದರೆ ಈಗ ಮನೆಯಲ್ಲಿ ಕುಳಿತೇ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ.
ಪ್ರಧಾನಿಯವರು: ಮದನ್ ಮೋಹನ್ ಅವರೇ, ನನ್ನ ಪರವಾಗಿ ನಿಮಗೆ ಅನಂತ ಶುಭ ಹಾರೈಕೆಗಳು. ಈ ವಯಸ್ಸಿನಲ್ಲೂ ನೀವು ತಂತ್ರಜ್ಞಾನವನ್ನು ಕಲಿತಿದ್ದೀರಿ, ತಂತ್ರಜ್ಞಾನವನ್ನು ಬಳಸುತ್ತಿದ್ದೀರಿ. ಇತರರಿಗೂ ತಿಳಿಸಿ ಇದರಿಂದ ಜನರ ಸಮಯ ಉಳಿತಾಯವಾಗುತ್ತದೆ, ಹಣವೂ ಉಳಿತಾಯವಾಗುತ್ತದೆ ಮತ್ತು ಅವರು ಮಾರ್ಗದರ್ಶನ ಪಡೆದು ಉತ್ತಮ ರೀತಿಯಲ್ಲಿ ಔಷಧಗಳನ್ನು ಬಳಸಬಹುದು.
ಮದನ್ ಮೋಹನ್ ಜಿ: ಹೌದು ಸರ್, ಮತ್ತಿನ್ನೇನು.
ಪ್ರಧಾನ ಮಂತ್ರಿ: ಮದನ್ ಮೋಹನ್ ಅವರೇ ನಿಮಗೆ ನನ್ನ ಅನಂತ ಶುಭಾಶಯಗಳು.
ಮದನ್ ಮೋಹನ್ ಜಿ: ಸರ್, ನೀವು ಬನಾರಸ್ ಅನ್ನು ಕಾಶಿ ವಿಶ್ವನಾಥ ಸ್ಟೇಷನ್ ಮಾಡಿದ್ದೀರಿ, ಅದನ್ನು ಅಭಿವೃದ್ಧಿಪಡಿಸಿದ್ದೀರಿ. ನಿಮಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು.
ಪ್ರಧಾನಿಯವರು: ನಿಮಗೆ ಧನ್ಯವಾದ ತಿಳಿಸಬಯಸುತ್ತೇನೆ. ನಾವೇನು ಮಾಡಿದ್ದೇವೆ, ಬನಾರಸ್ ಜನರು ಬನಾರಸ್ ಅಭಿವೃದ್ಧಿ ಮಾಡಿದ್ದಾರೆ | ನಾನು ಕೇವಲ ಗಂಗಾಮಾತೆಯ ಸೇವೆಗಾಗಿ ಇದ್ದೇನೆ. ಗಂಗಾಮಾತೆ ಕರೆದಿದ್ದಷ್ಟೇ ನನಗೆ ಗೊತ್ತು. ಒಳ್ಳೆಯದು, ನಿಮಗೆ ಅನಂತ ಶುಭಾಷಯಗಳು. ನಮಸ್ಕಾರ
ಮದನ್ ಮೋಹನ್ ಜಿ: ನಮಸ್ಕಾರ ಸರ್!
ಪ್ರಧಾನಿಯವರು: ನಮಸ್ಕಾರ!
ಸ್ನೇಹಿತರೇ, ಇ-ಸಂಜೀವನಿ ದೇಶದ ಸಾಮಾನ್ಯ ಜನರಿಗೆ, ಮಧ್ಯಮ ವರ್ಗದವರಿಗೆ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಜೀವ ರಕ್ಷಕ ಅಪ್ಲಿಕೇಶನ್ ಆಗುತ್ತಿದೆ. ಇದು ಭಾರತದ ಡಿಜಿಟಲ್ ಕ್ರಾಂತಿಯ ಶಕ್ತಿ ಮತ್ತು ಇಂದು ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಅದರ ಪರಿಣಾಮವನ್ನು ಕಾಣುತ್ತಿದ್ದೇವೆ. ಭಾರತದ UPI ಯ ಶಕ್ತಿಯ ಬಗ್ಗೆಯೂ ನಿಮಗೆ ತಿಳಿದಿದೆ. ಪ್ರಪಂಚದ ಅದೆಷ್ಟೋ ದೇಶಗಳು ಇದರತ್ತ ಆಕರ್ಷಿತವಾಗಿವೆ. ಕೆಲವು ದಿನಗಳ ಹಿಂದೆ, ಭಾರತ ಮತ್ತು ಸಿಂಗಾಪುರದ ಮಧ್ಯೆ ಯುಪಿಐ-ಪೇ ನೌ ಲಿಂಕ್ ಅನ್ನು ಪ್ರಾರಂಭಿಸಲಾಯಿತು. ಈಗ, ಸಿಂಗಾಪುರ ಮತ್ತು ಭಾರತದ ಜನರು ತಮ್ಮ ತಮ್ಮ ದೇಶಗಳಲ್ಲಿ ಮಾಡುವ ರೀತಿಯಲ್ಲಿಯೇ ತಮ್ಮ ಮೊಬೈಲ್ ಫೋನ್ಗಳಿಂದ ಪರಸ್ಪರ ಹಣವನ್ನು ವರ್ಗಾಯಿಸುತ್ತಿದ್ದಾರೆ. ಜನರು ಅದರ ಲಾಭವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಅದು ಭಾರತದ ಇ-ಸಂಜೀವಿನಿ ಆ್ಯಪ್ ಆಗಿರಲಿ ಅಥವಾ UPI, ಜೀವನವನ್ನು ಸುಲಭಗೊಳಿಸಲು ಇವು ತುಂಬಾ ಸಹಾಯಕರ ಎಂದು ಸಾಬೀತಾಗಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಒಂದು ದೇಶದಲ್ಲಿ ನಶಿಸಿ ಹೋಗುತ್ತಿರುವ ಒಂದು ಪ್ರಜಾತಿಯ ಪಕ್ಷಿ, ಪ್ರಾಣಿಯನ್ನು ಉಳಿಸಿದಾಗ, ಅದು ಪ್ರಪಂಚದಾದ್ಯಂತ ಚರ್ಚೆಯಾಗುತ್ತದೆ. ನಮ್ಮ ದೇಶದಲ್ಲಿ ಕಣ್ಮರೆಯಾಗಿದ್ದ, ಜನಮಾನಸದಿಂದ ದೂರವಾಗಿದ್ದ ಇಂತಹ ಹಲವಾರು ಶ್ರೇಷ್ಠ ಸಂಪ್ರದಾಯಗಳಿವೆ, ಆದರೆ ಈಗ ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ, ಹಾಗಾಗಿ ಈ ಕುರಿತು ಚರ್ಚಿಸಲು ಮನದ ಮಾತಿಗಿಂತ ಉತ್ತಮ ವೇದಿಕೆ ಯಾವುದಿದೆ?
ಈಗ ನಾನು ನಿಮಗೆ ಹೇಳಲಿರುವುದನ್ನು ತಿಳಿದು, ನಿಜವಾಗಿಯೂ ಸಂತೋಷಪಡುತ್ತೀರಿ, ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೀರಿ. ಅಮೆರಿಕಾದಲ್ಲಿ ನೆಲೆಸಿರುವ ಶ್ರೀ ಕಂಚನ್ ಬ್ಯಾನರ್ಜಿಯವರು ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಇಂತಹ ಒಂದು ಅಭಿಯಾನದ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ಸ್ನೇಹಿತರೇ, ಈ ತಿಂಗಳು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬಾನ್ಸ್ ಬೇರಿಯಾದಲ್ಲಿ 'ತ್ರಿವೇಣಿ ಕುಂಭ ಮಹೋತ್ಸವ' ಆಯೋಜಿಸಲಾಗಿದೆ. ಇದರಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು ಆದರೆ ಇದು ಏಕೆ ವಿಶೇಷವಾಗಿದೆ ಎಂದು ನಿಮಗೆ ತಿಳಿದಿದೆಯೇ? ವಿಶೇಷವೇನೆಂದರೆ 700 ವರ್ಷಗಳ ನಂತರ ಈ ಪದ್ಧತಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದಾದರೂ, ದುರದೃಷ್ಟವಶಾತ್ ಬಂಗಾಳದ ತ್ರಿವೇಣಿಯಲ್ಲಿ ನಡೆಯುತ್ತಿದ್ದ ಈ ಉತ್ಸವವನ್ನು 700 ವರ್ಷಗಳ ಹಿಂದೆ ನಿಲ್ಲಿಸಲಾಗಿತ್ತು. ಸ್ವಾತಂತ್ರ್ಯಾನಂತರ ಇದನ್ನು ಆರಂಭಿಸಬೇಕಿತ್ತು, ಆದರೆ ಅದೂ ಸಾಧ್ಯವಾಗಲಿಲ್ಲ. ಎರಡು ವರ್ಷಗಳ ಹಿಂದೆ, ಸ್ಥಳೀಯ ಜನರು ಮತ್ತು 'ತ್ರಿವೇಣಿ ಕುಂಭ ಪರಿಚಲನಾ ಸಮಿತಿ' ಮೂಲಕ ಈ ಉತ್ಸವವು ಮತ್ತೆ ಪ್ರಾರಂಭವಾಗಿದೆ. ಅದರ ಸಂಘಟನೆಗೆ ಸಂಬಂಧಿಸಿದ ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ. ನೀವು ಕೇವಲ ಸಂಪ್ರದಾಯವನ್ನು ಜೀವಂತವಾಗಿಸಿಕೊಳ್ಳುತ್ತಿಲ್ಲ, ನೀವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಹ ರಕ್ಷಿಸುತ್ತಿದ್ದೀರಿ.
ಸ್ನೇಹಿತರೇ, ಪಶ್ಚಿಮ ಬಂಗಾಳದ ತ್ರಿವೇಣಿ ಶತಮಾನಗಳಿಂದಲೂ ಪವಿತ್ರ ಸ್ಥಳವೆಂದು ಹೆಸರುವಾಸಿಯಾಗಿದೆ. ಇದನ್ನು ವಿವಿಧ ಮಂಗಳಕಾವ್ಯ, ವೈಷ್ಣವ ಸಾಹಿತ್ಯ, ಶಾಕ್ತ ಸಾಹಿತ್ಯ ಮತ್ತು ಇತರ ಬಂಗಾಳಿ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರದೇಶವು ಒಂದು ಕಾಲದಲ್ಲಿ ಸಂಸ್ಕೃತ, ಶಿಕ್ಷಣ ಮತ್ತು ಭಾರತೀಯ ಸಂಸ್ಕೃತಿಯ ಕೇಂದ್ರವಾಗಿತ್ತು ಎಂದು ವಿವಿಧ ಐತಿಹಾಸಿಕ ದಾಖಲೆಗಳಿಂದ ತಿಳಿಯುತ್ತದೆ. ಅನೇಕ ಸಂತರು ಇದನ್ನು ಮಾಘ ಸಂಕ್ರಾಂತಿಯಲ್ಲಿ ಕುಂಭ ಸ್ನಾನಕ್ಕೆ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ತ್ರಿವೇಣಿಯಲ್ಲಿ, ನೀವು ಅನೇಕ ಗಂಗಾ ಘಾಟ್ಗಳು, ಶಿವ ದೇವಾಲಯಗಳು ಮತ್ತು ಟೆರಾಕೋಟಾ ವಾಸ್ತುಕಲೆಯಿಂದ ಅಲಂಕರಿಸಲ್ಪಟ್ಟ ಪ್ರಾಚೀನ ಕಟ್ಟಡಗಳನ್ನು ಕಾಣಬಹುದು. ತ್ರಿವೇಣಿಯ ಪರಂಪರೆಯನ್ನು ಮರುಸ್ಥಾಪಿಸಲು ಮತ್ತು ಕುಂಭ ಸಂಪ್ರದಾಯದ ವೈಭವವನ್ನು ಪುನರುಜ್ಜೀವನಗೊಳಿಸಲು ಕಳೆದ ವರ್ಷ ಇಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಏಳು ಶತಮಾನಗಳ ನಂತರ, ಮೂರು ದಿನಗಳ ಕುಂಭ ಮಹಾಸ್ನಾನ ಮತ್ತು ಜಾತ್ರೆಯು ಈ ಪ್ರದೇಶಕ್ಕೆ ಹೊಸ ಶಕ್ತಿಯನ್ನು ತುಂಬಿದೆ. ಮೂರು ದಿನಗಳ ಕಾಲ ಪ್ರತಿದಿನ ನಡೆಯುತ್ತಿದ್ದ ಗಂಗಾ ಆರತಿ, ರುದ್ರಾಭಿಷೇಕ, ಯಜ್ಞದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ಬಾರಿಯ ಉತ್ಸವದಲ್ಲಿ ವಿವಿಧ ಆಶ್ರಮಗಳು, ಮಠಗಳು ಮತ್ತು ಅಖಾಡಗಳು ಸಹ ಸೇರಿವೆ. ಬೆಂಗಾಲಿ ಸಂಪ್ರದಾಯಗಳಿಗೆ ಸಂಬಂಧಿಸಿದ ವಿವಿಧ ಪ್ರಕಾರಗಳಾದ ಕೀರ್ತನೆ, ಬೌಲ್, ಗೋಡಿಯೋ ನೃತ್ಯ, ಶ್ರೀ-ಖೋಲ್, ಪೋಟೆರ್ ಗಾಯನ, ಛೌ-ನೃತ್ಯ , ಸಂಜೆ ಕಾರ್ಯಕ್ರಮಗಳ ಆಕರ್ಷಣೆಯ ಕೇಂದ್ರವಾಗಿದ್ದವು. ನಮ್ಮ ಯುವಜನರನ್ನು ದೇಶದ ಸುವರ್ಣ ಗತಕಾಲದೊಂದಿಗೆ ಬೆರೆಯುವಂತೆ ಮಾಡಲು ಇದು ಅತ್ಯಂತ ಶ್ಲಾಘನೀಯ ಪ್ರಯತ್ನವಾಗಿದೆ. ಭಾರತದಲ್ಲಿ ಇಂತಹ ಇನ್ನೂ ಅನೇಕ ಆಚರಣೆಗಳಿವೆ, ಅವುಗಳನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ. ಅವುಗಳ ಬಗೆಗಿನ ಚರ್ಚೆ ಈ ದಿಶೆಯಲ್ಲಿ ಖಂಡಿತವಾಗಿಯೂ ಜನರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಅರ್ಥವೇ ಬದಲಾಗಿದೆ. ದೇಶದಲ್ಲಿ ಎಲ್ಲಿಯೇ ಆಗಲಿ ಶುಚಿತ್ವಕ್ಕೆ ಸಂಬಂಧಿಸಿದಂತೆ ಏನಾದರೂ ವಿಷಯಗಳಿದ್ದರೆ, ಜನರು ಖಂಡಿತವಾಗಿಯೂ ಅದರ ಬಗ್ಗೆ ನನಗೆ ತಿಳಿಸುತ್ತಾರೆ. ಅದರಂತೆ ಹರಿಯಾಣದ ಯುವಕರು ಸ್ವಚ್ಛತಾ ಅಭಿಯಾನದತ್ತ ನನ್ನ ಗಮನ ಸೆಳೆದಿದ್ದಾರೆ. ಹರಿಯಾಣದಲ್ಲಿ ದುಲ್ಹೇರಿ ಎಂಬ ಒಂದು ಹಳ್ಳಿಯಿದೆ -. ಸ್ವಚ್ಛತೆಯ ವಿಷಯದಲ್ಲಿ ಭಿವಾನಿ ನಗರವನ್ನು ಮಾದರಿಯಾಗಿಸಬೇಕು ಎಂದು ಇಲ್ಲಿನ ಯುವಕರು ನಿರ್ಧರಿಸಿದ್ದಾರೆ. ಅವರೆಲ್ಲ ಸೇರಿ ಯುವ ಸ್ವಚ್ಛತಾ ಮತ್ತು ಜನ ಸೇವಾ ಸಮಿತಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ಸಮಿತಿಯ ಯುವಕರು ಮುಂಜಾನೆ 4 ಗಂಟೆಗೆ ಭಿವಾನಿ ತಲುಪುತ್ತಾರೆ. ಅವರೆಲ್ಲ ಸೇರಿ ನಗರದ ವಿವಿಧೆಡೆ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಈ ಜನರು ಇದುವರೆಗೆ ನಗರದ ವಿವಿಧ ಪ್ರದೇಶಗಳಿಂದ ಟನ್ಗಟ್ಟಲೆ ಕಸವನ್ನು ತೆರವುಗೊಳಿಸಿದ್ದಾರೆ.
ಸ್ನೇಹಿತರೇ, waste to wealth (ಕಸದಿಂದ ರಸ) ಎಂಬುದು ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಅಂಶವಾಗಿದೆ. ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಸಹೋದರಿ ಕಮಲಾ ಮೊಹರಾನಾ ಸ್ವಸಹಾಯ ಸಂಘವನ್ನು ನಡೆಸುತ್ತಿದ್ದಾರೆ. ಈ ಗುಂಪಿನ ಮಹಿಳೆಯರು ಹಾಲಿನ ಚೀಲಗಳು ಮತ್ತು ಇತರ ಪ್ಲಾಸ್ಟಿಕ್ ಪ್ಯಾಕಿಂಗ್ಗಳಿಂದ ಬುಟ್ಟಿಗಳು ಮತ್ತು ಮೊಬೈಲ್ ಸ್ಟ್ಯಾಂಡ್ಗಳಂತಹ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಸ್ವಚ್ಛತೆಯ ಜತೆಗೆ ಅವರಿಗೆ ಉತ್ತಮ ಆದಾಯದ ಮೂಲವೂ ದೊರೆಯುತ್ತಿದೆ. ನಾವು ಸಂಕಲ್ಪಗೈದರೆ ಸ್ವಚ್ಛ ಭಾರತದಲ್ಲಿ ದೊಡ್ಡ ಕೊಡುಗೆ ನೀಡಬಹುದು. ಕನಿಷ್ಠ ನಾವೆಲ್ಲರೂ ಪ್ಲಾಸ್ಟಿಕ್ ಚೀಲಗಳನ್ನು ಬಟ್ಟೆಯ ಚೀಲಗಳೊಂದಿಗೆ ಬದಲಾಯಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ನಿಮ್ಮ ಈ ನಿರ್ಣಯವು ನಿಮಗೆ ಎಷ್ಟು ತೃಪ್ತಿಯನ್ನು ನೀಡುತ್ತದೆ ಮತ್ತು ಇತರ ಜನರಿಗೆ ಖಂಡಿತವಾಗಿಯೂ ಸ್ಫೂರ್ತಿ ನೀಡುತ್ತದೆ ಎಂದು ನೀವೇ ಕಾಣುತ್ತೀರಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನೀವು ಮತ್ತು ನಾನು ಒಟ್ಟಿಗೆ ಸೇರಿ ಮತ್ತೊಮ್ಮೆ ಅನೇಕ ಸ್ಪೂರ್ತಿದಾಯಕ ವಿಷಯಗಳ ಕುರಿತು ಮಾತನಾಡಿದ್ದೇವೆ. ಮನೆಯವರ ಜೊತೆ ಕೂತು ಅದನ್ನು ಕೇಳಿದ್ದೇವೆ ಈಗ ದಿನವಿಡೀ ಅದನ್ನೇ ಗುನುಗುಣಿಸುತ್ತೇವೆ. ದೇಶದ ಶ್ರಮಿಕತನದ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ನಮಗೆ ಶಕ್ತಿ ಬರುತ್ತದೆ. ಈ ಶಕ್ತಿಯ ಪ್ರವಾಹದೊಂದಿಗೆ ಚಲಿಸುತ್ತಾ, ಇಂದು ನಾವು 'ಮನದ ಮಾತಿನ' 98 ನೇ ಸಂಚಿಕೆಯನ್ನು ತಲುಪಿದ್ದೇವೆ. ಹೋಳಿ ಹಬ್ಬ ಇಂದಿನಿಂದ ಕೆಲವೇ ದಿನಗಳಲ್ಲಿ ಬರಲಿದೆ. ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ವೋಕಲ್ ಫಾರ್ ಲೋಕಲ್ ಎಂಬ ಸಂಕಲ್ಪದೊಂದಿಗೆ ನಮ್ಮ ಹಬ್ಬಗಳನ್ನು ಆಚರಿಸಬೇಕು. ನಿಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ. ಅಲ್ಲಿಯವರೆಗೆ ನನ್ನನ್ನು ಬೀಳ್ಕೊಡಿ. ಮುಂದಿನ ಬಾರಿ ನಾವು ಹೊಸ ವಿಷಯಗಳೊಂದಿಗೆ ಮತ್ತೆ ಭೇಟಿಯಾಗೋಣ. ಅನಂತ ಧನ್ಯವಾದಗಳು ನಮಸ್ಕಾರ
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇದು 2023 ನೇ ಮೊದಲ ಮನದ ಮಾತು ಜೊತೆಗೆ ಈ ಕಾರ್ಯಕ್ರಮದ 97 ನೇ ಕಂತು ಇದಾಗಿದೆ. ನಿಮ್ಮೆಲ್ಲರೊಂದಿಗೆ ಮತ್ತೊಮ್ಮೆ ಮಾತನಾಡಿ ನನಗೆ ಬಹಳ ಸಂತೋಷವೆನಿಸುತ್ತಿದೆ. ಪ್ರತಿ ವರ್ಷ ಜನವರಿ ತಿಂಗಳು ಬಹಳಷ್ಟು ಕಾರ್ಯಕ್ರಮಗಳಿಂದ ತುಂಬಿ ತುಳುಕುತ್ತದೆ. ಈ ತಿಂಗಳಿನಲ್ಲಿ ಜನವರಿ 14 ರಂದು ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ ದೇಶಾದ್ಯಂತ ಹಬ್ಬಗಳ ಉತ್ಸಾಹವಿರುತ್ತದೆ. ಇದರ ನಂತರ ದೇಶ ತನ್ನ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಈ ವರ್ಷವೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಹಳಷ್ಟು ಅಂಶಗಳ ಬಗ್ಗೆ ಬಹಳಷ್ಟು ಪ್ರಶಂಸೆ ಮೂಡಿಬರುತ್ತಿದೆ. ಜೈಸಲ್ಮೇರ್ ನಿಂದ ಪುಲ್ಕಿತ್ ಅವರು ನನಗೆ ಹೀಗೆ ಬರೆದಿದ್ದಾರೆ - ಜನವರಿ 26 ರ ಕವಾಯತಿನ ಸಂದರ್ಭದಲ್ಲಿ ಕಾರ್ಮಿಕರು ಕರ್ತವ್ಯ ಪಥವನ್ನು ನಿರ್ಮಿಸುತ್ತಿರುವುದನ್ನು ಕಂಡು ಬಹಳ ಸಂತೋಷವಾಯಿತು. ಕಾನ್ಪುರದಿಂದ ಜಯಾ ಅವರು ಮೆರವಣಿಗೆಯಲ್ಲಿ ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಕಂಡು ಆನಂದಿಸಿರುವುದಾಗಿ ಬರೆದಿದ್ದಾರೆ. ಈ ಪರೇಡ್ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ ಸಿಆರ್ಪಿಎಫ್ನ ಮಹಿಳಾ ತುಕಡಿ ಕೂಡ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.
ಸ್ನೇಹಿತರೇ, ಡೆಹ್ರಾಡೂನ್ನ ವತ್ಸಲ್ ಜೀ ಅವರು “ನಾನು ಯಾವಾಗಲೂ ಜನವರಿ 25 ಕ್ಕಾಗಿ ಕಾಯುತ್ತೇನೆ ಏಕೆಂದರೆ ಆ ದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ ಮತ್ತು 25 ರ ಸಂಜೆಯೇ ಜನವರಿ 26 ರ ನನ್ನ ಉತ್ಸಾಹ ಮತ್ತಷ್ಟು ಹೆಚ್ಚುತ್ತದೆ” ಎಂದು ಬರೆದಿದ್ದಾರೆ. ಮೂಲ ಹಂತದಿಂದ ತಮ್ಮ ಸಮರ್ಪಣೆ ಮತ್ತು ಸೇವೆಯ ಮೂಲಕ ಸಾಧನೆ ಮಾಡಿದವರಿಗೆ ಕೊಡಮಾಡುವ ಪೀಪಲ್ಸ್ ಪದ್ಮ ಪ್ರಶಸ್ತಿ ಬಗ್ಗೆಯೂ ಅನೇಕರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಬುಡಕಟ್ಟು ಸಮುದಾಯ ಮತ್ತು ಬುಡಕಟ್ಟು ಜೀವನದೊಂದಿಗೆ ಸಂಬಂಧವನ್ನು ಹೊಂದಿರುವ ಜನರ ಸಾಕಷ್ಟು ಪ್ರತಿನಿದಹಿತ್ವವಿತ್ತು. ಬುಡಕಟ್ಟು ಜನರ ಜೀವನವು ನಗರಗಳ ಗಡಿಬಿಡಿಗಿಂತ ಭಿನ್ನವಾಗಿದೆ, ಅದರ ಸವಾಲುಗಳು ಕೂಡಾ ವಭಿನ್ನವಾಗಿರುತ್ತವೆ. ಇದರ ಹೊರತಾಗಿಯೂ, ಬುಡಕಟ್ಟು ಸಮಾಜಗಳು ತಮ್ಮ ಸಂಪ್ರದಾಯಗಳನ್ನು ಉಳಿಸಲು ಯಾವಾಗಲೂ ಸನ್ನದ್ಧವಾಗಿರುತ್ತವೆ. ಬುಡಕಟ್ಟು ಸಮಾಜಗಳಿಗೆ ಸಂಬಂಧಿಸಿದ ವಸ್ತುಗಳ ಸಂರಕ್ಷಣೆ ಮತ್ತು ಅವುಗಳ ಮೇಲೆ ಸಂಶೋಧನೆಯ ಪ್ರಯತ್ನಗಳನ್ನು ಕೂಡಾ ಮಾಡಲಾಗುತ್ತದೆ. ಹೀಗೆ ಟೊಟೊ, ಕುಇ, ಕುವಿ ಮತ್ತು ಮಾಂಡಾದಂತಹ ಬುಡಕಟ್ಟು ಭಾಷೆಗಳ ಮೇಲೆ ಕೆಲಸ ಮಾಡಿದಂತಹ ಅನೇಕ ಮಹಾನುಭಾವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಧಾನಿರಾಮ್ ಟೊಟೊ, ಜಾನುಮ್ ಸಿಂಗ್ ಸೋಯ್ ಮತ್ತು ಬಿ ರಾಮಕೃಷ್ಣ ರೆಡ್ಡಿ ಇವರ ಹೆಸರು ಈಗ ಸಂಪೂರ್ಣ ದೇಶಕ್ಕೆ ಪರಿಚಿತವಾಗಿದೆ. ಸಿದ್ಧಿ, ಜಾರವಾ ಮತ್ತು ಓಂಗೆಯಂತಹ ಮೂಲ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡುವ ಹೀರಾಬಾಯಿ ಲೋಬಿ, ರತನ್ ಚಂದ್ರ ಕಾರ್ ಮತ್ತು ಈಶ್ವರ್ ಚಂದ್ರ ವರ್ಮಾರಂತಹ ಮಹನೀಯರಿಗೂ ಈ ಬಾರಿ ಸನ್ಮಾನಿಸಲಾಗಿದೆ. ಬುಡಕಟ್ಟು ಜನಾಂಗ ನಮ್ಮ ಭೂಮಿ, ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ವಪೂರ್ಣವಾಗಿದೆ. ಅವರಿಗಾಗಿ ಕೆಲಸ ಮಾಡುವ ವ್ಯಕ್ತಿತ್ವಗಳನ್ನು ಸನ್ಮಾನಿಸುವುದು ಹೊಸ ಪೀಳಿಗೆಗೂ ಪ್ರೇರಣೆ ನೀಡುತ್ತದೆ. ಈ ವರ್ಷ ಪದ್ಮ ಪ್ರಶಸ್ತಿಯ ನಿನಾದ ನಕ್ಸಲ್ ಪ್ರಭಾವಕ್ಕೆ ಒಳಗಾದಂತಹ ಪ್ರದೇಶಗಳಲ್ಲೂ ಮೊಳಗುತ್ತಿದೆ. ನಕ್ಸಲ್ ಪ್ರಭಾವಿತ ಕ್ಷೇತ್ರಗಳಲ್ಲಿ ದಾರಿ ತಪ್ಪಿದ ಯುವಜನತೆಗೆ ತಮ್ಮ ಪ್ರಯತ್ನದಿಂದ ಸೂಕ್ತ ಮಾರ್ಗವನ್ನು ತೋರಿದಂತಹವರಿಗೂ ಈ ಬಾರಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಹಿನ್ನಲೆಯಲ್ಲಿ ಕಾಂಕೇರ್ ನಲ್ಲಿ ಕಟ್ಟಿಗೆಯ ಮೇಲೆ ನಕ್ಷೆ ಬಿಡಿಸುವಅಜಯ್ ಕುಮಾರ್ ಮಾಂಡವಿ ಮತ್ತು ಗಡ್ಚಿರೋಲಿಯ ಪ್ರಸಿದ್ಧ ಝಾಡಿಪಟ್ಟಿ ರಂಭೂಮಿಯೊಂದಿಗೆ ಕೆಲಸ ಮಾಡುವ ಪರಶುರಾಮ್ ಕೋಮಾಜಿ ಖುಣೇ ಅವರಿಗೂ ಈ ಸನ್ಮಾನ ಲಭಿಸಿದೆ. ಇದೇ ರೀತಿ ಈಶಾನ್ಯ ಭಾಗದಲ್ಲಿ ತಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಗಿರುವ ರಾಮ್ ಕುಯಿ ವಾಂಗ್ಬೆ ನಿವುಮೆ, ವಿಕ್ರಂ ಬಹಾದೂರ್ ಜಮಾತಿಯಾ ಮತ್ತು ಕರಮಾ ವಾಂಗ್ಚು ಅವರನ್ನೂ ಸನ್ಮಾನಿಸಲಾಗಿದೆ.
ಸ್ನೇಹಿತರೇ, ಈ ಬಾರಿ ಪದ್ಮ ಪ್ರಶಸ್ತಿ ಪರಸ್ಕೃತರಾಗುವವರಲ್ಲಿ ಸಂಗೀತ ಲೋಕವನ್ನು ಮತ್ತಷ್ಟು ಸಮೃದ್ಧಗೊಳಿಸಿದಂಥವರೂ ಇದ್ದಾರೆ. ಯಾರಿಗೆ ತಾನೇ ಸಂಗೀತ ಷ್ಟವಾಗುವುದಿಲ್ಲ. ಪ್ರತಿಯೊಬ್ಬನ ಸಂಗೀತದ ಅಭಿರುಚಿ ಬೇರೆ ಬೇರೆಯಾಗಿರಬಹುದು ಆದರೆ ಸಂಗೀತ ಪ್ರತಿಯೊಬ್ಬರ ಜೀವನದ ಭಾಗವಾಗಿರುತ್ತದೆ. ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಸಂತೂರ್, ಬಮ್ಹುಮ್, ದ್ವಿತಾರಾದಂತಹ ನಮ್ಮ ಪಾರಂಪರಿಕ ವಾದ್ಯಗಳ ನಿನಾದವನ್ನು ಪಸರಿಸುವಲ್ಲಿ ಪಾಂಡಿತ್ಯವನ್ನು ಹೊಂದಿರುವವರೂ ಸೇರಿದ್ದಾರೆ. ಗುಲಾಂ ಮೊಹಮ್ಮದ್ ಜಾಜ್, ಮೊವಾ ಸು-ಪೊಂಗ್, ರಿ ಸಿಂಹಬೊರ್ ಕುರಕಾ-ಲಾಂಗ್, ಮುನಿವೆಂಕಟಪ್ಪ ಮತ್ತು ಮಂಗಲ ಕಾಂತಿ ರಾಯ್ ಇಂಥ ಅದೆಷ್ಟೋ ವ್ಯಕ್ತಿಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಸ್ನೇಹಿತರೇ, ಪದ್ಮ ಪ್ರಶಸ್ತಿ ಪರಸ್ಕೃತರಲ್ಲಿ ಅನೇಕರು, ನಮ್ಮ ಮಧ್ಯೆಯೇ ಇದ್ದು ಎಂದೆಂದಿಗೂ ದೇಶಕ್ಕೆ ಪ್ರಥಮ ಆದ್ಯತೆ ನೀಡಿದಂತಹವರಾಗಿದ್ದಾರೆ, ದೇಶ ಮೊದಲು ಎಂಬ ಸಿದ್ಧಾಂತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಸೇವಾಭಾವನೆಯಿಂದ ತಮ್ಮ ಕೆಲಸದಲ್ಲಿ ತೊಡಗಿದ್ದರು ಮತ್ತು ಇದಕ್ಕಾಗಿ ಎಂದಿಗೂ ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷೆಪಟ್ಟವರಲ್ಲ. ಅವರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಅವರ ಮುಖದ ಮೇಲಿನ ಮಂದಹಾಸವೇ ಅವರಿಗೆ ಬಹುದೊಡ್ಡ ಪ್ರಶಸ್ತಿಯಾಗಿದೆ. ಇಂಥ ಸಮರ್ಪಿತ ಜನರನ್ನು ಸನ್ಮಾನ ಮಾಡುವ ಮೂಲಕ ನಾವು ದೇಶವಾಸಿಗಳ ಗೌರವ ಮತ್ತಷ್ಟು ಹೆಚ್ಚಿದೆ. ನಾನು ಎಲ್ಲ ಪದ್ಮ ಪುರಸ್ಕೃತರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಲಾಗುವುದಿಲ್ಲ ಆದರೆ, ನೀವು ಪದ್ಮ ಪುರಸ್ಕೃತರ ಜೀವನದ ಬಗ್ಗೆ ವಿಸ್ತೃತವಾಗಿ ಅರಿಯಿರಿ ಮತ್ತು ಇನ್ನುಳಿದವರಿಗೂ ಅದರ ಬಗ್ಗೆ ತಿಳಿಸಿ ಎಂದು ನಾನು ಆಗ್ರಹಿಸುತ್ತೇನೆ
ಸ್ನೇಹಿತರೇ ಇಂದು ನಾವು ಆಜಾದಿ ಕೆ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಗಣರಾಜ್ಯೋತ್ಸವದ ಬಗ್ಗೆ ಚರ್ಚಿಸುತ್ತಿರುವಾಗ, ಒಂದು ಆಸಕ್ತಿದಾಯಕ ಪುಸ್ತಕದ ಬಗ್ಗೆ ಪ್ರಸ್ತಾಪಿಸಬಯಸುತ್ತೇನೆ. ಕೆಲ ವಾರಗಳ ಹಿಂದೆ ನನಗೆ ದೊರೆತ ಪುಸ್ತಕದಲ್ಲಿ ಒಂದು ಆಸಕ್ತಿಕರ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಈ ಪುಸ್ತಕದ ಹೆಸರು “ಇಂಡಿಯಾ ದಿ ಮದರ್ ಆಫ್ ಡೆಮಾಕ್ರಸಿ” ಎಂದಿದೆ. ಇದರಲ್ಲಿ ಬಹಳಷ್ಟು ಉತ್ತಮ ಪ್ರಬಂಧಗಳಿವೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ನಾವು ಭಾರತೀಯರಿಗೆ ನಮ್ಮ ದೇಶ ಮದರ್ ಆಫ್ ಡೆಮಾಕ್ರಸಿ ಬಗ್ಗೆ ಬಹಳ ಹೆಮ್ಮೆಯಿದೆ. ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ನಮ್ಮ ಸಂಸ್ಕೃತಿಯಲ್ಲಿದೆ. ಶತಮಾನಗಳಿಂದ ಇದು ನಮ್ಮ ಕಾರ್ಯವೈಖರಿಯ ಅವಿಭಾಜ್ಯ ಅಂಗವಾಗಿದೆ. ಸ್ವಭಾವತಃ ನಾವು ಒಂದು ಪ್ರಜಾಪ್ರಭುತ್ವ ಸಮಾಜವಾಗಿದ್ದೇವೆ. ಡಾ. ಅಂಬೇಡ್ಕರ್ ಅವರು ಬೌದ್ಧ ಭಿಕ್ಷುಗಳ ಸಂಘದ ಸಾಮ್ಯತೆಯನ್ನು ಭಾರತೀಯ ಸಂಸತ್ತಿಗೆ ಹೋಲಿಸಿದ್ದರು. ನಡೆ, ನಿರ್ಣಯಗಳು, ಸರ್ವಾನುಮತ, ಮತದಾನ ಮತ್ತು ಮತಗಳ ಎಣಿಕೆಗಳಿಗೆ ಅನೇಕ ನಿಯಮಗಳನ್ನು ಹೊಂದಿದ ದು ಸಂಸ್ಥೆ ಎಂದು ಅವರು ಅದನ್ನು ಬಣ್ಣಿಸಿದ್ದರು. ಭಗವಾನ್ ಬುದ್ಧನಿಗೆ ಇದರ ಪ್ರೇರಣೆ ಅಂದಿನ ರಾಜನೈತಿಕ ವ್ಯವಸ್ಥೆಗಳಿಂದ ದೊರೆತಿರಬಹುದು ಎಂಬುದು ಬಾಬಾಸಾಹೇಬರ ನಂಬಿಕೆಯಾಗಿತ್ತು.
ತಮಿಳುನಾಡಿನಲ್ಲಿ ಉತಿರಮೆರೂರ್ ಎಂಬ ಒಂದು ಪುಟ್ಟ ಆದರೆ ಪ್ರಸಿದ್ಧ ಗ್ರಾಮವಿದೆ. ಇಲ್ಲಿರುವ 1100-1200 ವರ್ಷಗಳ ಹಿಂದಿನ ಕಲ್ಲಿನ ಶಾಸನವೊಂದು ಇಡೀ ವಿಶ್ವವನ್ನೇ ಅಚ್ಚರಿಗೊಳಿಸುತ್ತಿದೆ. ಈ ಶಿಲಾಶಾಸನ ಒಂದು ಪುಟ್ಟ ಸಂವಿಧಾನದಂತಿದೆ. ದರಲ್ಲಿ ಗ್ರಾಮ ಸಭೆಯನ್ನು ಹೇಗೆ ನಡೆಸಬೇಕು ಮತ್ತು ಅದರ ಸದಸ್ಯರ ಆಯ್ಕೆ ಪ್ರಕ್ರಿಯೆ ಹೇಗಿರಬೇಕು ಎಂಬುದನ್ನು ವಿವರವಾಗಿ ವಿವರಿಸಲಾಗಿದೆ. ನಮ್ಮ ದೇಶದ ಇತಿಹಾಸದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತೊಂದು ಉದಾಹರಣೆಯೆಂದರೆ - 12 ನೇ ಶತಮಾನದ ಭಗವಾನ್ ಬಸವೇಶ್ವರರ ಅನುಭವ ಮಂಟಪ. ಇಲ್ಲಿ ಮುಕ್ತ ಸಂವಾದ ಮತ್ತು ಚರ್ಚೆಗೆ ಉತ್ತೇಜನ ನೀಡಲಾಗುತ್ತಿತ್ತು. ಇದು ಮ್ಯಾಗ್ನಾ ಕಾರ್ಟಾಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವಾರಂಗಲ್ನ ಕಾಕತೀಯ ರಾಜವಂಶದ ರಾಜರ ಗಣರಾಜ್ಯ ಸಂಪ್ರದಾಯಗಳು ಸಹ ಬಹಳ ಪ್ರಸಿದ್ಧವಾಗಿದ್ದವು. ಭಕ್ತಿ ಚಳುವಳಿಯು ಪಶ್ಚಿಮ ಭಾರತದಲ್ಲಿ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ವೃದ್ಧಿಸಿತ್ತು. ಗುರುನಾನಕ್ ದೇವ್ ಜಿ ಯವರ ಒಮ್ಮತದಿಂದ ತೆಗೆದುಕೊಂಡ ನಿರ್ಧಾರಗಳ ಮೇಲೆ ಬೆಳಕು ಚೆಲ್ಲುವ ಸಿಖ್ ಪಂಥ್ನ ಪ್ರಜಾಪ್ರಭುತ್ವ ಮನೋಭಾವದ ಕುರಿತಾದ ಲೇಖನವನ್ನು ಸಹ ಪುಸ್ತಕದಲ್ಲಿ ಸೇರಿಸಲಾಗಿದೆ. ಮಧ್ಯ ಭಾರತದ ಉರಾಂವ್ ಮತ್ತು ಮುಂಡಾ ಬುಡಕಟ್ಟುಗಳಲ್ಲಿ ಸಮುದಾಯ ಚಾಲಿತ ಮತ್ತು ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕೂಡಾ ಈ ಪುಸ್ತಕದಲ್ಲಿ ಉತ್ತಮ ಮಾಹಿತಿ ಲಭ್ಯವಿದೆ. ನೀವು ಈ ಪುಸ್ತಕ ಓದಿದ ಮೇಲೆ ದೇಶದ ಎಲ್ಲ ಭಾಗಗಳಲ್ಲಿ ಶತಮಾನಗಳಿಂದ ಹೇಗೆ ಪ್ರಜಾಸತ್ತಾತ್ಮಕ ಭಾವನೆ ಪ್ರವಹಿಸುತ್ತಿದೆ ಎಂಬುದು ಅನುಭವಕ್ಕೆ ಬರುತ್ತದೆ. Mother of Democracy ಯ ರೂಪದಲ್ಲಿ, ನಾವು ನಿರಂತರವಾಗಿ ಈ ವಿಷಯದ ಬಗ್ಗೆ ಆಳವಾಗಿ ಯೋಚಿಸಬೇಕು, ಚರ್ಚಿಸಬೇಕು ಮತ್ತು ವಿಶ್ವಕ್ಕೆ ಅದರ ಅರಿವೂ ಮೂಡಿಸಬೇಕಿದೆ. ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಭಾವನೆ ಮತ್ತಷ್ಟು ಬಲಗೊಳ್ಳುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಯೋಗ ದಿನ ಮತ್ತು ನಮ್ಮ ವಿವಿಧ ರೀತಿಯ ಗಟ್ಟಿ ಧಾನ್ಯಗಳು – ಸಿರಿ ಧಾನ್ಯಗಳ ನಡುವೆ ಏನು ಸಾಮಾನ್ಯ ಅಂಶವಿದೆ ಎಂದು ನಾನು ನಿಮ್ಮನ್ನು ಕೇಳಿದರೆ, ಇದೆಂಥ ಹೋಲಿಕೆ ಎಂದು ನೀವು ಯೋಚಿಸುತ್ತೀರಿ? ಎರಡರಲ್ಲೂ ಸಾಮ್ಯತೆ ಇದೆ ಎಂದು ನಾನು ಹೇಳಿದರೆ, ನಿಮಗೆ ಆಶ್ಚರ್ಯವಾಗುತ್ತದೆ. ವಾಸ್ತವದಲ್ಲಿ ವಿಶ್ವಸಂಸ್ಥೆಯು, ಭಾರತದ ಪ್ರಸ್ತಾಪದ ನಂತರ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎರಡರ ನಿರ್ಧಾರವನ್ನು ತೆಗೆದುಕೊಂಡಿದೆ. ಎರಡನೆಯದಾಗಿ, ಯೋಗವು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಸಿರಿಧಾನ್ಯಗಳು ಕೂಡ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೂರನೆಯ ವಿಷಯವು ಹೆಚ್ಚು ಮಹತ್ವಪೂರ್ಣವಾಗಿದೆ- ಎರಡೂ ಅಭಿಯಾನಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯಿಂದಾಗಿ ಕ್ರಾಂತಿ ಮೂಡುತ್ತಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯೋಗ ಮತ್ತು ದೇಹದಾರ್ಢ್ಯವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಂತೆ, ಜನರು ದೊಡ್ಡ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಕೂಡಾ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಜನರು ಈಗ ಸಿರಿಧಾನ್ಯಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯ ದೊಡ್ಡ ಪರಿಣಾಮವೂ ಗೋಚರಿಸುತ್ತಿದೆ. ಸಾಂಪ್ರದಾಯಿಕವಾಗಿ ಸಿರಿಧಾನ್ಯಗಳ ಉತ್ಪಾದನೆ ಮಾಡುತ್ತಿದ್ದ ಸಣ್ಣ ರೈತರು ಉತ್ಸಾಹಭರಿತರಾಗಿದ್ದಾರೆ. ವಿಶ್ವ ಇಂದು ಸಿರಿಧಾನ್ಯಗಳ ಮಹತ್ವವನ್ನು ಅರಿತುಕೊಳ್ಳಲು ಪ್ರಾರಂಭಿಸಿದೆ ಎಂದು ಅವರು ತುಂಬಾ ಸಂತೋಷಪಡುತ್ತಿದ್ದಾರೆ. ಮತ್ತೊಂದೆಡೆ, ಎಫ್ಪಿಒಗಳು ಮತ್ತು ಉದ್ಯಮಿಗಳು ಸಿರಿಧಾನ್ಯಗಳನ್ನು ಮಾರುಕಟ್ಟೆಗೆ ತಲುಪಿಸುವ ಮತ್ತು ಜನರಿಗೆ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ನಿವಾಸಿ ಕೆ.ವಿ. ರಾಮ ಸುಬ್ಬಾರೆಡ್ಡಿ ಅವರು ಸಿರಿಧಾನ್ಯಗಳಿಗಾಗಿ ಉತ್ತಮ ಸಂಬಳದ ಉದ್ಯೋಗವನ್ನು ತೊರೆದರು. ಅಮ್ಮನ ಕೈಯಿಂದ ಮಾಡಿದ ಸಿರಿಧಾನ್ಯಗಳ ರುಚಿ ಎಷ್ಟಿತ್ತೆಂದರೆ ಅವರು ತಮ್ಮ ಗ್ರಾಮದಲ್ಲಿ ಸಜ್ಜೆಯ ಸಂಸ್ಕರಣಾ ಘಟಕವನ್ನೇ ಪ್ರಾರಂಭಿಸಿದರು. ಸುಬ್ಬಾರೆಡ್ಡಿ ಅವರು ಸಿರಿಧಾನ್ಯಗಳ ಪ್ರಯೋಜನಗಳನ್ನು ಜನರಿಗೆ ತಿಳಿಸುತ್ತಿದ್ದಾರೆ ಮತ್ತು ಅವು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್ ಸಮೀಪದ ಕೆನಾಡ್ ಗ್ರಾಮದ ನಿವಾಸಿ ಶರ್ಮಿಳಾ ಓಸ್ವಾಲ್ ಕಳೆದ 20 ವರ್ಷಗಳಿಂದ ಸಿರಿಧಾನ್ಯಗಳ ಉತ್ಪಾದನೆ ಮೂಲಕ ವಿಶಿಷ್ಟ ರೀತಿಯ ಕೊಡುಗೆ ನೀಡುತ್ತಿದ್ದಾರೆ. ರೈತರಿಗೆ ಸ್ಮಾರ್ಟ್ ಕೃಷಿಯ ತರಬೇತಿ ನೀಡುತ್ತಿದ್ದಾರೆ. ಇವರ ಪ್ರಯತ್ನದಿಂದ ಸಿರಿಧಾನ್ಯಗಳ ಇಳುವರಿ ಮಾತ್ರವಲ್ಲದೆ ರೈತರ ಆದಾಯವೂ ಹೆಚ್ಚಿದೆ.
ಛತ್ತೀಸ್ಗಢದ ರಾಯ್ಗಡ್ಗೆ ಭೇಟಿ ನೀಡುವ ಅವಕಾಶ ನಿಮಗೆ ದೊರೆತರೆ, ನೀವು ಮಿಲೆಟ್ಸ್ ಕೆಫೆಗೆ ಖಂಡಿತ ಭೇಟಿ ನೀಡಿ. ಕೆಲವು ತಿಂಗಳ ಹಿಂದೆ ಆರಂಭವಾದ ಈ ಮಿಲ್ಲೆಟ್ಸ್ ಕೆಫೆಯಲ್ಲಿ ಚೀಲಾ, ದೋಸೆ, ಮೊಮೊಸ್, ಪಿಜ್ಜಾ, ಮಂಚೂರಿಯನ್ ಮುಂತಾದ ವಸ್ತುಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ನಾನು ನಿಮಗೆ ಇನ್ನೊಂದು ವಿಷಯ ಕೇಳಬಹುದೇ? ನೀವು ಉದ್ಯಮಿ ಎಂಬ ಪದವನ್ನು ಕೇಳಿರಬೇಕು, ಆದರೆ ನೀವು Milletpreneurs ಅನ್ನು ಕೇಳಿದ್ದೀರಾ? ಒಡಿಶಾದ Milletpreneurs ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಲ್ಲಿದ್ದಾರೆ. ಬುಡಕಟ್ಟು ಜಿಲ್ಲೆ ಸುಂದರ್ಗಢ್ನ ಸಮೀಪ ಸುಮಾರು 1500 ಮಹಿಳೆಯರ ಸ್ವಸಹಾಯ ಗುಂಪೊಂದು ಒಡಿಶಾ ಮಿಲೆಟ್ಸ್ ಮಿಷನ್ ಜೊತೆಗೆ ಕೈಜೋಡಿಸಿದೆ. ಇಲ್ಲಿ ಮಹಿಳೆಯರು ಸಿರಿಧಾನ್ಯಗಳಿಂದ ಕುಕ್ಕೀಸ್, ರಸಗುಲ್ಲಾ, ಗುಲಾಬ್ ಜಾಮೂನ್ ಮತ್ತು ಕೇಕ್ ಕೂಡಾ ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ, ಮಹಿಳೆಯರ ಆದಾಯವೂ ಹೆಚ್ಚುತ್ತಿದೆ.
ಕರ್ನಾಟಕದ ಕಲಬುರ್ಗಿಯಲ್ಲಿರುವ ಆಳಂದ ಭೂತಾಯಿ (ಆಳಂದ್ ಭೂತಾಯಿ) ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯು ಕಳೆದ ವರ್ಷ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಮೇಲ್ವಿಚಾರಣೆಯಲ್ಲಿ ಕೆಲಸವನ್ನು ಪ್ರಾರಂಭಿಸಿತು. ಇಲ್ಲಿನ ಖಾಕ್ರಾ, ಬಿಸ್ಕೆಟ್, ಲಡ್ಡೂಗಳನ್ನು ಜನರು ಇಷ್ಟಪಡುತ್ತಿದ್ದಾರೆ. ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ, ಹುಲ್ಸೂರು ಉತ್ಪಾದಕ ಕಂಪನಿಗೆ ಸೇರಿದ ಮಹಿಳೆಯರು ಸಿರಿಧಾನ್ಯ ಕೃಷಿಯ ಜೊತೆಗೆ ಅವರ ಹಿಟ್ಟನ್ನು ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಅವರ ಆದಾಯವೂ ಸಾಕಷ್ಟು ಹೆಚ್ಚಿದೆ. ನೈಸರ್ಗಿಕ ಕೃಷಿ ಕೈಗೊಳ್ಳುತ್ತಿರುವ ಛತ್ತೀಸ್ಗಢದ ಸಂದೀಪ್ ಶರ್ಮಾ ಅವರ ಎಫ್ಪಿಒ ಜೊತೆಗೆ ಇಂದು 12 ರಾಜ್ಯಗಳ ಕೃಷಿಕರು ಕೈಜೋಡಿಸಿದ್ದಾರೆ. ಬಿಲಾಸ್ಪುರದ ಎಫ್ಪಿಒ 8 ಬಗೆಯ ಸಿರಿಧಾನ್ಯಗಳ ಹಿಟ್ಟು ಮತ್ತು ಅದರ ಭಕ್ಷ್ಯಗಳನ್ನು ತಯಾರಿಸುತ್ತಿದೆ.
ಸ್ನೇಹಿತರೇ, ಇಂದು ಭಾರತದ ಮೂಲೆ ಮೂಲೆಯಲ್ಲಿ ನಿರಂತರವಾಗಿ G-20 ಶೃಂಗಸಭೆಗಳು ನಡೆಯುತ್ತಿವೆ ಮತ್ತು G-20 ಶೃಂಗಸಭೆ ನಡೆಯುವಲ್ಲೆಲ್ಲಾ, ಸಿರಿಧಾನ್ಯಗಳಿಂದ ಮಾಡಿದ ಪೌಷ್ಟಿಕ ಮತ್ತು ರುಚಿಕರವಾದ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ ಎಂಬುದು ನನಗೆ ಸಂತೋಷವನ್ನು ನೀಡುತ್ತದೆ. ಇಲ್ಲಿ ತಯಾರಿಸಿದ ಸಜ್ಜೆಯಿಂದ ತಯಾರಿಸಿದ ಖಿಚಡಿ, ಪೋಹಾ, ಖೀರ್ ಮತ್ತು ರೊಟ್ಟಿಯಂತಹ ಖಾದ್ಯಗಳ ಜೊತೆ ಜೊತೆಗೆ ರಾಗಿಯಿಂದ ತಯಾರಿಸಿದ ಪಾಯಸ, ಪೂರಿ ಮತ್ತು ದೋಸೆಗಳನ್ನು ಸಹ ಉಣಬಡಿಸಲಾಗುತ್ತದೆ. G20 ನಡೆಯುತ್ತಿರುವ ಎಲ್ಲ ಸ್ಥಳಗಳಲ್ಲೂ ಸಿರಿಧಾನ್ಯಗಳ ಪ್ರದರ್ಶನಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಆರೋಗ್ಯ ಪಾನೀಯಗಳು, ಧಾನ್ಯಗಳು ಮತ್ತು ನೂಡಲ್ಸ್ ಅನ್ನು ಪ್ರದರ್ಶಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಭಾರತೀಯ ಮಿಷನ್ಗಳು ಇವುಗಳ ಜನಪ್ರಿಯತೆಯನ್ನು ಹೆಚ್ಚಿಸಲು ಬಹಳಷ್ಟು ಪ್ರಯತ್ನ ಮಾಡುತ್ತಿವೆ. ದೇಶದ ಈ ಪ್ರಯತ್ನ ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಸಿರಿಧಾನ್ಯ ಬೇಡಿಕೆಯು ನಮ್ಮ ಸಣ್ಣಪುಟ್ಟ ರೈತರಿಗೆ ಷ್ಟೊಂದು ಬಲವನ್ನು ನೀಡಲಿದೆ ಎಂದು ನೀವು ಊಹಿಸಬಹುದು. ಇಂದು ಸಿರಿಧಾನ್ಯಗಳಿಂದ ಸಿದ್ಧಪಡಿಸಲಾಗುತ್ತಿರುವ ವಿವಿಧ ರೀತಿಯ ಹೊಸ ತಿಂಡಿ ತಿನಿಸುಗಳು ಯುವ ಪೀಳಿಗೆಗೆ ಕೂಡಾ ಅಷ್ಟೇ ಇಷ್ಟವಾಗುತ್ತಿರುವುದನ್ನು ಕಂಡು ನನಗೂ ಬಹಳ ಸಂತೋಷವೆನಿಸಿದೆ. ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಅದ್ಭುತವಾಗಿ ಪ್ರಾರಂಭಿಸಿದ್ದಕ್ಕಾಗಿ ಮತ್ತು ಅದನ್ನು ನಿರಂತರವಾಗಿ ಮುನ್ನಡೆಸುತ್ತಿರುವುದಕ್ಕಾಗಿ ನಾನು 'ಮನದ ಮಾತಿನ' ಶ್ರೋತೃಗಳನ್ನು ಅಭಿನಂದಿಸುತ್ತೇನೆ.ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೊಂದಿಗೆ ಯಾರಾದರೂ ಟೂರಿಸ್ಟ್ ಹಬ್ ಗೋವಾ ಬಗ್ಗೆ ಮಾತನಾಡಿದಾಗ, ನಿಮಗೆ ಏನು ನೆನಪಿಗೆ ಬರುತ್ತದೆ? ಗೋವಾ ಹೆಸರು ಕೇಳುತ್ತಲೇ ಎಲ್ಲಕ್ಕಿಂತ ಮೊದಲು ಅಲ್ಲಿನ ಸುಂದರ ಕರಾವಳಿ, ಸಮುದ್ರ ತೀರಗಳು ಮತ್ತು ರುಚಿಯಾದ ಊಟ ತಿಂಡಿಗಳ ನೆನಪು ಬರುವುದು ಸರ್ವೇಸಾಮಾನ್ಯ. ಆದರೆ ಈ ಬಾರಿ ಗೋವಾದಲ್ಲಿ ಮತ್ತೊಂದು ಘಟನೆ ಕೂಡಾ ನಡೆದಿದ್ದು ಅದು ಬಹಳ ಮುಖ್ಯವಾದ ವಿಷಯವಾಗಿತ್ತು. ಇಂದು ಮನದ ಮಾತಿನಲ್ಲಿ ನಾನು ನಿಮ್ಮೊಂದಿಗೆ ಈ ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ಗೋವಾದಲ್ಲಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮವೆಂದರೆ – ಪರ್ಪಲ್ ಫೆಸ್ಟ್. ಈ ನೇರಳೆ ಉತ್ಸವ ಅಥವಾ ಪರ್ಪಲ್ ಫೆಸ್ಟ್ ಅನ್ನು ಗೋವಾದ ಪಣಜಿಯಲ್ಲಿ ಇದೇ ತಿಂಗಳು ಅಂದರೆ ಜನವರಿ 6 ರಿಂದ 8 ರವರೆಗೆ ಆಯೋಜಿಸಲಾಗಿತ್ತು. ದಿವ್ಯಾಂಗರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಇದೊಂದು ಬಹಳ ವಿಶಿಷ್ಟವಾದ ಪ್ರಯತ್ನವಾಗಿತ್ತು. 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನಮ್ಮ ಸೋದರ ಸೋದರಿಯರು ಇದರಲ್ಲಿ ಪಾಲ್ಗೊಂಡಿದ್ದರೆಂದು ತಿಳಿದಾಗ ಈ ಪರ್ಪಲ್ ಫೆಸ್ಟ್ ಎಷ್ಟು ದೊಡ್ಡ ಅವಕಾಶವಾಗಿತ್ತೆಂಬ ಅಂದಾಜು ನಿಮಗೆ ದೊರೆಯುತ್ತದೆ. ಇಲ್ಲಿಗೆ ಬಂದಿದ್ದ ಜನರು ತಾವು “ಮೀರಾಮಾರ್ ತೀರ”ದಲ್ಲಿ ತಿರುಗಾಟ ನಡೆಸುವ ಸಂಪೂರ್ಣ ಆನಂದ ಪಡೆಯಬಹುದೆಂದು ತಿಳಿದು ಬಹಳ ರೋಮಾಂಚಿತರಾಗಿದ್ದರು. ವಾಸ್ತವದಲ್ಲಿ ಮೀರಾಮಾರ್ ತೀರವನ್ನು ನಮ್ಮ ದಿವ್ಯಾಂಗ ಸೋದರ ಸೋದರಿಯರು ಸುಲಭವಾಗಿ ತಲುಪುವಂತಹ ಗೋವಾದಲ್ಲಿನ ಸಮುದ್ರ ತೀರಗಳಲ್ಲಿ ಒಂದಾಗಿ ಮಾಡಲಾಗಿದೆ. ಇಲ್ಲಿ ಕ್ರಿಕೆಟ್ ಪಂದ್ಯಾವಳಿ, ಟೇಬಲ್ ಟೆನ್ನಿಸ್ ಪಂದ್ಯಾವಳಿ, ಮ್ಯಾರಥಾನ್ ಸ್ಪರ್ಧೆಯೊಂದಿಗೆ ಒಂದು ಮಾತು ಬಾರದವರ – ದೃಷ್ಟಿ ಹೀನರ ಸಮಾವೇಶ ಕೂಡಾ ಆಯೋಜಿಸಲಾಗಿತ್ತು. ಇಲ್ಲಿ ಒಂದು ವಿಶಿಷ್ಟ ಪಕ್ಷಿ ವೀಕ್ಷಣಾ ಕಾರ್ಯಕ್ರಮ ಮಾತ್ರವಲ್ಲದೇ ಒಂದು ಚಿತ್ರ ಕೂಡಾ ಪ್ರದರ್ಶಿಸಲಾಯಿತು. ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು, ಇದರಿಂದಾಗಿ ನಮ್ಮೆಲ್ಲಾ ದಿವ್ಯಾಂಗ ಸೋದರ ಸೋದರಿಯರು ಮತ್ತು ಮಕ್ಕಳು ಇದರ ಸಂಪೂರ್ಣ ಆನಂದ ಪಡೆಯುವಂತಾಯಿತು. ಪರ್ಪಲ್ ಫೆಸ್ಟ್ ನ ವಿಶೇಷ ಅಂಶವೆಂದರೆ ಇದರಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ. ದಿವ್ಯಾಂಗ ಸ್ನೇಹಿ ಉತ್ಪನ್ನಗಳನ್ನು ಈ ಖಾಸಗಿ ವಲಯದ ಪಾಲುದಾರಿಕೆ ಮೂಲಕ ಪ್ರದರ್ಶಿಸಲಾಗಿತ್ತು. ಈ ಉತ್ಸವದಲ್ಲಿ ದಿವ್ಯಾಂಗರ ಕಲ್ಯಾಣ ಕುರಿತು ಜಾಗರೂಕತೆ ಮೂಡಿಸುವ ಅನೇಕ ಪ್ರಯತ್ನಗಳು ಕಂಡುಬಂದವು. ಪರ್ಪಲ್ ಉತ್ಸವ ಯಶಸ್ವಿಯಾಗಿಸುವುದಕ್ಕೆ ಕಾರಣರಾದ, ಇದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನೂ ನಾನು ಅಭಿನಂದಿಸುತ್ತಿದ್ದೇನೆ. ಇದನ್ನು ಆಯೋಜಿಸಲು ಹಗಲು ರಾತ್ರಿ ಸತತವಾಗಿ ಶ್ರಮಿಸಿದ ಸ್ವಯಂ ಸೇವಕರನ್ನು ಕೂಡಾ ನಾನು ಅಭಿನಂದಿಸುತ್ತೇನೆ. ಆಕ್ಸೆಸಬಲ್ ಇಂಡಿಯಾ ಕುರಿತ ನಮ್ಮ ಮುನ್ನೋಟವನ್ನು ಸಾಕಾರಗೊಳಿಸುವುದಕ್ಕೆ ಈ ರೀತಿಯ ಅಭಿಯಾನಗಳು ಬಹಳ ಪರಿಣಾಮಕಾರಿ ಎನ್ನುವುದನ್ನು ಸಾಬೀತು ಪಡಿಸುತ್ತವೆ ಎಂಬ ಸಂಪೂರ್ಣ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ಮನದ ಮಾತಿನಲ್ಲಿ ನಾನು ಹೇಳುವ ಒಂದು ವಿಷಯ ಕೇಳಿ ನಿಮಗೆ ಬಹಳ ಸಂತೋಷವೆನಿಸುತ್ತದೆ, ಬಹಳ ಹೆಮ್ಮೆಯುಂಟಾಗುತ್ತದೆ ಹಾಗೆಯೇ ನಿಮ್ಮ ಮನಸ್ಸು ಆಹಾ ಆಹಾ ಎಂದು ಸಂತೋಷದಿಂದ ಕೂಗುತ್ತದೆ.! ದೇಶದ ಅತ್ಯಂತ ಹಳೆಯ ವಿಜ್ಞಾನ ಸಂಸ್ಥೆಗಳಲ್ಲಿ ಒಂದೆನಿಸಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ಎಂದರೆ, IISc ಒಂದು ಅದ್ಭುತ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ. ಮನದ ಮಾತಿನಲ್ಲಿ ನಾನು ಈ ಮೊದಲು ಕೂಡಾ ಇದರ ಕುರಿತು ಮಾತನಾಡಿದ್ದೇನೆ, ಭಾರತದ ಇಬ್ಬರು ಮಹಾನ್ ಪುರುಷರೆನಿಸಿದ ಜೆಮ್ ಶೆಡ್ ಜಿ ಟಾಟಾ ಮತ್ತು ಸ್ವಾಮಿ ವಿವೇಕಾನಂದರು ಯಾವ ರೀತಿ ಈ ಸಂಸ್ಥೆಯ ಹಿಂದಿನ ಸ್ಫೂರ್ತಿಯಾಗಿದ್ದಾರೆಂದು ಹೇಳಿದ್ದೇನೆ. ನನಗೆ ಮತ್ತು ನಿಮಗೆಲ್ಲರಿಗೂ ಸಂತಸ ಮತ್ತು ಹೆಮ್ಮೆ ತರುವ ವಿಷಯವೆಂದರೆ 2022 ನೇ ಇಸವಿಯಲ್ಲಿ, ಈ ಸಂಸ್ಥೆಯ ಹೆಸರಿನಲ್ಲಿ ಒಟ್ಟು 145 ಪೇಟೆಂಟ್ ಗಳಿವೆ. ಇದರ ಅರ್ಥವೆಂದರೆ – ಪ್ರತಿ ಐದು ದಿನಗಳಿಗೊಮ್ಮೆ ಎರಡು ಪೇಟೆಂಟ್ ಗಳು. ಈ ದಾಖಲೆ ನಿಜಕ್ಕೂ ಒಂದು ಅದ್ಭುತವೇ ಸರಿ. ಈ ಯಶಸ್ಸಿಗಾಗಿ ನಾನು IISc ನ ಸಂಪೂರ್ಣ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಸ್ನೇಹಿತರೇ, ಇಂದು Patent Filing ನಲ್ಲಿ ಭಾರತ 7 ನೇ ಸ್ಥಾನದಲ್ಲಿದೆ ಮತ್ತು ವ್ಯಾಪಾರ ಗುರುತಿನಲ್ಲಿ 5 ನೇ ಸ್ಥಾನದಲ್ಲಿದೆ. ಕೇವಲ ಪೇಟೆಂಟ್ ಗಳ ವಿಷಯಕ್ಕೆ ಬಂದರೆ, ಕಳೆದ ಐದು ವರ್ಷಗಳಲ್ಲಿ ಇದರಲ್ಲಿ ಸುಮಾರು 50 ಪ್ರತಿಶತ ವೃದ್ಧಿಯಾಗಿದೆ. Global Innovation Index ನಲ್ಲಿ ಕೂಡಾ ಭಾರತದ ranking ನಲ್ಲಿ, ಅತ್ಯಂತ ಸುಧಾರಣೆಯಾಗಿದೆ ಮತ್ತು ಈಗ 40 ನೇ ಸ್ಥಾನ ತಲುಪಿದೆ. 2015 ರಲ್ಲಿ ಭಾರತ ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ 80ನೇ ಸ್ಥಾನಕ್ಕಿಂತಲೂ ಹಿಂದಿತ್ತು. ನಿಮಗೆ ಮತ್ತೊಂದು ಆಸಕ್ತಿದಾಯಕ ವಿಷಯ ಹೇಳಲು ಬಯಸುತ್ತೇನೆ. ಭಾರತದಲ್ಲಿ ಕಳೆದ 11 ವರ್ಷಗಳಲ್ಲಿ ಮೊದಲ ಬಾರಿಗೆ Domestic Patent Filing ನ ಸಂಖ್ಯೆ Foreign Filing ಗಿಂತ ಹೆಚ್ಚು ಕಂಡು ಬಂದಿದೆ. ಇದು ಭಾರತದ ವೃದ್ಧಿಯಾಗುತ್ತಿರುವ ವೈಜ್ಞಾನಿಕ ಸಾಮರ್ಥ್ಯವನ್ನು ತೋರುತ್ತದೆ.
ಸ್ನೇಹಿತರೇ, 21 ನೇ ಶತಮಾನದ ಜಾಗತಿಕ ಆರ್ಥಿಕತೆಯಲ್ಲಿ ಜ್ಞಾನವೇ ಅತ್ಯುನ್ನತ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಭಾರತದ Techade ನ ಕನಸು ನಮ್ಮೆಲ್ಲಾ Innovators ಮತ್ತು ಅವರ ಪೇಟೆಂಟ್ ಗಳ ಬಲದಿಂದ ಖಂಡಿತವಾಗಿಯೂ ನನಸಾಗುತ್ತದೆಂಬ ವಿಶ್ವಾಸ ನನಗಿದೆ. ಇದರಿಂದ ನಾವೆಲ್ಲರೂ ನಮ್ಮ ದೇಶದಲ್ಲೇ ತಯಾರಿಸಲಾದ ವಿಶ್ವ ಶ್ರೇಣಿಯ ತಂತ್ರಜ್ಞಾನ ಮತ್ತು ಉತ್ಪನ್ನಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, NaMoApp ನಲ್ಲಿ ನಾನು ತೆಲಂಗಾಣದ ಇಂಜಿನಿಯರ್ ವಿಜಯ್ ಅವರ ಪೋಸ್ಟ್ ನೋಡಿದೆ. ಇದರಲ್ಲಿ ವಿಜಯ್ ಅವರು ಇ-ತ್ಯಾಜ್ಯ ಕುರಿತು ಬರೆದಿದ್ದಾರೆ. ಮನದ ಮಾತಿನಲ್ಲಿ ನಾನು ಈ ವಿಷಯದ ಬಗ್ಗೆ ಮಾತನಾಡಬೇಕೆಂದು ವಿಜಯ್ ಅವರು ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾವು ಈ ಮೊದಲು ಕೂಡಾ ವೇಸ್ಟ್ ಟು ವೆಲ್ತ್ ಅಂದರೆ ಕಸದಿಂದ ರಸ ಕುರಿತು ಮಾತನಾಡಿದ್ದೇವೆ. ಆದರೆ, ಬನ್ನಿ ಇಂದು ಇ-ತ್ಯಾಜ್ಯ ಕುರಿತು ಚರ್ಚಿಸೋಣ.
ಸ್ನೇಹಿತರೇ, ಇಂದು ಪ್ರತಿ ಮನೆಯಲ್ಲೂ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ನಂತಹ ಸಾಧನಗಳು ಸಾಮಾನ್ಯವಾಗಿವೆ. ಇಡೀ ದೇಶದಲ್ಲಿ ಇವುಗಳ ಸಂಖ್ಯೆಯಲ್ಲಿ ಕೋಟಿಗಳಷ್ಟಿರಬಹುದು. ಇಂದಿನ ನವೀನ ಸಾಧನಗಳು ಮುಂದಿನ ಭವಿಷ್ಯದ ಇ-ತ್ಯಾಜ್ಯಗಳೇ ಆಗುತ್ತವೆ. ಯಾರೇ ಆಗಲಿ ಹೊಸ ಸಾಧನವನ್ನು ಖರೀದಿಸಿದಾಗ ಅಥವಾ ತಮ್ಮ ಹಳೆಯ ಸಾಧನವನ್ನು ಬದಲಾಯಿಸಿದಾಗ, ಅದನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆಯೋ ಇಲ್ಲವೋ ಎಂಬ ವಿಷಯದ ಮೇಲೆ ಗಮನ ಹರಿಸುವುದು ಬಹಳ ಅಗತ್ಯವಾಗಿದೆ. ಒಂದುವೇಳೆ ಇ-ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇದ್ದರೆ, ನಮ್ಮ ಪರಿಸರಕ್ಕೆ ಕೂಡಾ ಹಾನಿಯುಂಟಾಗಬಹುದು. ಆದರೆ, ಜಾಗರೂಕತೆಯಿಂದ ಈ ರೀತಿ ಮಾಡಿದಾಗ, ಇದು Recycle ಮತ್ತು ಮರುಬಳಕೆಯ Circular ಆರ್ಥಿಕತೆಯ ಬಹುದೊಡ್ಡ ಶಕ್ತಿಯಾಗಬಹುದು. ಪ್ರತಿ ವರ್ಷ 50 ದಶಲಕ್ಷ ಟನ್ ಇ-ತ್ಯಾಜ್ಯವನ್ನು ಬಿಸಾಡಲಾಗುತ್ತದೆ ಎಂದು ವಿಶ್ವಸಂಸ್ಥೆಯ ಒಂದು ವರದಿ ಹೇಳುತ್ತದೆ. ಎಷ್ಟಾಗುತ್ತದೆಂದು ನೀವು ಅಂದಾಜಿಸಬಹುದೇ? ಮಾನವ ಇತಿಹಾಸದಲ್ಲಿ ಎಷ್ಟು ವಾಣಿಜ್ಯ ವಿಮಾನಗಳನ್ನು ತಯಾರಿಸಲಾಗಿದೆಯೋ ಅವುಗಳೆಲ್ಲದರ ತೂಕವನ್ನು ಒಟ್ಟು ಸೇರಿಸಿದರೂ ಕೂಡಾ, ಈಗ ಉತ್ಪತ್ತಿಯಾಗುತ್ತಿರುವ ಇ-ತ್ಯಾಜ್ಯದ ತೂಕಕ್ಕೆ ಅದು ಸಮನಾಗುವುದಿಲ್ಲ. ಇದು ಪ್ರತಿ ಸೆಕೆಂಡಿಗೆ ಸುಮಾರು 800 ಲ್ಯಾಪ್ ಟಾಪ್ ಗಳನ್ನು ಬಿಸಾಡುತ್ತಿರುವಂತಿದೆ. ಬೇರೆ ಬೇರೆ ಪ್ರಕ್ರಿಯೆಗಳ ಮೂಲಕ ಈ ಇ-ತ್ಯಾಜ್ಯದಿಂದ ಸುಮಾರು 17 ವಿಧದ ಅಮೂಲ್ಯ ಲೋಹ ತೆಗೆಯಬಹುದೆಂದು ತಿಳಿದು ನೀವು ಬೆಚ್ಚಿ ಬೀಳುತ್ತೀರಿ. ಇವುಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರ ಮತ್ತು ನಿಕ್ಕೆಲ್ ಸೇರಿವೆ. ಆದ್ದರಿಂದ ಇ-ತ್ಯಾಜ್ಯದ ಸದುಪಯೋಗ ಪಡೆದುಕೊಳ್ಳುವುದೆಂದರೆ ಕಸದಿಂದ ರಸ ತಯಾರಿಸುವುದಕ್ಕಿಂತ ಕಡಿಮೆಯೇನಲ್ಲ. ಈ ನಿಟ್ಟಿನಲ್ಲಿ ಇನ್ನೋವೇಟಿವ್ ಕೆಲಸ ಮಾಡುತ್ತಿರುವ ನವೋದ್ಯಮಗಳು ಕಡಿಮೆಯೇನಿಲ್ಲ. ಇಂದು ಸುಮಾರು, 500 E-Waste Recyclers ಈ ಕ್ಷೇತ್ರದೊಂದಿಗೆ ತೊಡಗಿಕೊಂಡಿವೆ ಮತ್ತು ಅನೇಕ ಹೊಸ ಉದ್ಯಮಿಗಳನ್ನು ಕೂಡಾ ಇದರಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಈ ವಲಯವು ಸಾವಿರಾರು ಮಂದಿಗೆ ನೇರ ಉದ್ಯೋಗವನ್ನೂ ನೀಡಿದೆ. ಬೆಂಗಳೂರಿನ E-Parisaraa ಇಂತಹದ್ದೇ ಒಂದು ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಇದು Printed Circuit Boards ನ ದುಬಾರಿ ಲೋಹಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಇದೇ ರೀತಿ ಮುಂಬೈನಲ್ಲಿ ಕೆಲಸ ಮಾಡುತ್ತಿರುವ Ecoreco (ಇಕೋ- ರೀಕೋ) ಸಂಸ್ಥೆಯು Mobile App ನಿಂದ ಇ-ತ್ಯಾಜ್ಯ ಸಂಗ್ರಹಿಸುವ ಸಿಸ್ಟಂ ಸಿದ್ಧಪಡಿಸಿದೆ. ಉತ್ತರಾಖಂಡದ ರೂಡಕೀ ನಲ್ಲಿರುವ Attero (ಎಟೆರೋ) Recycling ಈ ವಲಯದಲ್ಲಿ ವಿಶ್ವಾದ್ಯಂತ ಅನೇಕ Patents ತನ್ನದಾಗಿಸಿಕೊಂಡಿದೆ. ಈ ಸಂಸ್ಥೆ ಕೂಡಾ ತನ್ನದೇ ಆದ E-Waste Recycling Technology ಅಭಿವೃದ್ಧಿಪಡಿಸಿ ಸಾಕಷ್ಟು ಹೆಸರು ಗಳಿಸಿದೆ. ಭೋಪಾಲ್ ನಲ್ಲಿ Mobile App ಮತ್ತು ಜಾಲತಾಣ ‘ಕಬಾಡೀವಾಲ’ ಮೂಲಕ ಟನ್ ಗಳಷ್ಟು ಇ-ತ್ಯಾಜ್ಯ ಸಂಗ್ರಹಿಸುತ್ತಿದೆ. ಇಂತಹ ಅನೇಕ ಉದಾಹರಣೆಗಳಿವೆ. ಇವೆಲ್ಲವೂ ಭಾರತವನ್ನು ಜಾಗತಿಕ ರೀಸೈಕ್ಲಿಂಗ್ ಹಬ್ ಮಾಡುವಲ್ಲಿ ಸಹಾಯ ಮಾಡುತ್ತಿವೆ, ಆದರೆ ಇಂತಹ ಉಪಕ್ರಮಗಳ ಯಶಸ್ಸಿಗಾಗಿ ಒಂದು ಅತ್ಯಗತ್ಯ ಷರತ್ತು ಕೂಡಾ ಇದೆ – ಅದೆಂದರೆ, ಇ-ತ್ಯಾಜ್ಯ ವಿಲೇವಾರಿ ಮಾಡುವ ಸುರಕ್ಷಿತ ವಿಧಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರಬೇಕು. ಪ್ರತಿ ವರ್ಷ ಕೇವಲ ಶೇಕಡಾ 15-17 ರಷ್ಟು ಇ-ತ್ಯಾಜ್ಯವನ್ನು ಮಾತ್ರಾ ರೀಸೈಕಲ್ ಮಾಡಲಾಗುತ್ತಿದೆ ಎಂದು ಇ-ತ್ಯಾಜ್ಯದ ವಲಯದಲ್ಲಿ ಕೆಲಸ ಮಾಡುವವರು ಹೇಳುತ್ತಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಇಡೀ ವಿಶ್ವದಲ್ಲಿ ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ಸಂರಕ್ಷಣೆ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಬಲವಾದ ಪ್ರಯತ್ನಗಳ ಬಗ್ಗೆ ನಾವು ಸತತವಾಗಿ ಮಾತನಾಡುತ್ತಿದ್ದೇವೆ. ಭಾರತ ತನ್ನ wetlands ಗಾಗಿ ಮಾಡಿರುವ ಕೆಲಸವನ್ನು ತಿಳಿದರೆ, ನಿಮಗೆ ಕೂಡಾ ಬಹಳ ಸಂತಸವೆನಿಸುತ್ತದೆ. wetlands ಅಂದರೇನು ಎಂದು ಕೆಲವು ಶ್ರೋತೃಗಳು ಯೋಚಿಸುತ್ತಿರಬಹುದು? Wetland sites ಅಥವಾ ಜೌಗು ಪ್ರದೇಶಗಳು ಎಂದರೆ ಜೌಗು ಮಣ್ಣಿರುವ ಭೂಮಿಯಲ್ಲಿ ವರ್ಷವಿಡೀ ನೀರು ಸಂಗ್ರಹವಾಗಿರುವ ಸ್ಥಳಗಳು ಎಂದರ್ಥ. ಕೆಲವೇ ದಿನಗಳ ನಂತರ ಫೆಬ್ರವರಿ 2 ರಂದು World Wetlands day ಬರಲಿದೆ. ನಮ್ಮ ಭೂಮಿಯ ಅಸ್ತಿತ್ವಕ್ಕೆ ಜೌಗು ಪ್ರದೇಶಗಳು ಬಹಳ ಅತ್ಯಗತ್ಯ, ಏಕೆಂದರೆ ಇವುಗಳನ್ನು ಅನೇಕ ಪಕ್ಷಿಗಳು, ಜೀವಜಂತುಗಳು ಅವಲಂಬಿಸಿರುತ್ತವೆ. ಈ ಜೀವವೈವಿಧ್ಯವನ್ನು ಸಮೃದ್ಧವಾಗಿಸುವುದರೊಂದಿಗೆ ಇದು ಪ್ರವಾಹ ನಿಯಂತ್ರಣ ಮತ್ತು ಅಂತರ್ಜಲ ಮರುಪೂರಣವನ್ನು ಕೂಡಾ ಖಚಿತ ಪಡಿಸುತ್ತದೆ. Ramsar (ರಾಮ್ ಸರ್) Sites ಇಂತಹ ಜೌಗು ಪ್ರದೇಶಗಳಾಗಿವೆ, ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಪ್ರಾಮುಖ್ಯ ಇದೆ ಎನ್ನುವುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿದೆ. Wetlands ಯಾವುದೇ ದೇಶದಲ್ಲಿರಲಿ, ಅದು ಅನೇಕ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ, ಆಗ ಅವುಗಳನ್ನು Ramsar Sites ಎಂದು ಘೋಷಿಸಲಾಗುತ್ತದೆ. Ramsar Sites ನಲ್ಲಿ 20,000 ಅಥವಾ ಅದಕ್ಕಿಂತ ಅಧಿಕ water birds ಇರಬೇಕಾಗುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಜಾತಿಯ ಮೀನುಗಳಿರಬೇಕಾಗುತ್ತದೆ. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ, ಅಮೃತ ಮಹೋತ್ಸವದ ಸಂದರ್ಭದಲ್ಲಿ Ramsar Sites ಕುರಿತ ಒಂದು ಒಳ್ಳೆಯ ಸಮಾಚಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಈಗ Ramsar Sites ಗಳ ಒಟ್ಟು ಸಂಖ್ಯೆ 75 ರಷ್ಟಿದೆ, 2014 ಕ್ಕೂ ಮೊದಲು ದೇಶದಲ್ಲಿ ಕೇವಲ 26 Ramsar Sites ಇದ್ದವು. ಈ ಜೀವವೈವಿಧ್ಯವನ್ನು ಸಂರಕ್ಷಿಸಿರುವ ಸ್ಥಳೀಯ ಸಮುದಾಯ ಪ್ರಶಂಸೆಗೆ ಅರ್ಹವಾಗಿದೆ. ಈ ಪ್ರಕೃತಿಯೊಂದಿಗೆ ಸಾಮರಸ್ಯದೊಂದಿಗೆ ಬಾಳುವ ನಮ್ಮ ಶತಮಾನಗಳಷ್ಟು ಹಳೆಯದಾದ ಸಂಸ್ಕೃತಿ ಮತ್ತು ಪರಂಪರೆ ಗೌರವಪ್ರದವೆನಿಸಿದೆ. ಭಾರತದ ಈ Wetlands ನಮ್ಮ ನೈಸರ್ಗಿಕ ಸಾಮರ್ಥ್ಯದ ಉದಾಹರಣೆಯೂ ಆಗಿದೆ. ಒಡಿಶಾದ ಚಿಲ್ಕಾ ಸರೋವರಕ್ಕೆ 40 ಕ್ಕಿಂತಲೂ ಅಧಿಕ ಜಲ ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆಂದು ಹೇಳಲಾಗುತ್ತದೆ. ಕಯಿಬುಲ್ – ಲಮ್ಜಾವು, ಲೋಕಟಾಕ್ ಅನ್ನು Swamp ಜಿಂಕೆಯ ಏಕೈಕ ನೈಸರ್ಗಿಕ ವಾಸಸ್ಥಾನ - Natural Habitat (ಹೆಬಿಟೇಟ್) ಎಂದು ಹೇಳಲಾಗುತ್ತದೆ. ತಮಿಳುನಾಡಿನ ವೇದಂತಂಗಲ್ ಅನ್ನು 2022 ರಲ್ಲಿ Ramsar Site ಎಂದು ಘೋಷಿಸಲಾಯಿತು. ಇಲ್ಲಿ ಪಕ್ಷಿ ಸಂಕುಲವನ್ನು ಸಂರಕ್ಷಿಸುವ ಸಂಪೂರ್ಣ ಶ್ರೇಯಸ್ಸು ಆ ಪ್ರದೇಶದ ಸುತ್ತಮುತ್ತಲಿನ ರೈತರಿಗೆ ಸಲ್ಲುತ್ತದೆ. ಕಾಶ್ಮೀರದಲ್ಲಿ ಪಂಜಾತ್ ನಾಗ್ ಸಮುದಾಯವು Annual Fruit Blossom festival ಮೂಲಕ ಒಂದು ದಿನವನ್ನು ವಿಶೇಷ ರೀತಿಯಲ್ಲಿ ಹಳ್ಳಿಯ ನೀರಿನ ಚಿಲುಮೆ, ಕಾಲವೆಗಳ ಸ್ವಚ್ಛತೆಗೆ ಮೀಸಲಿಟ್ಟಿದೆ. ವಿಶ್ವದ Ramsar Sites ಗಳ ಪೈಕಿ ಹೆಚ್ಚಿನವು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಮಣಿಪುರದ ಲೋಕಟಾಕ್ ಮತ್ತು ಪವಿತ್ರ ಸರೋವರವೆನಿಸಿರುವ ರೇಣುಕಾ ಅಲ್ಲಿನ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿವೆ. ಇದೇ ರೀತಿ Sambhar ಸಂಬಂಧ ದುರ್ಗಾದೇವಿಯ ಅವತಾರ ಶಾಕಾಂಬರಿ ದೇವಿಯೊಂದಿಗೆ ಕೂಡಾ ಇದೆ. ಭಾರತದಲ್ಲಿ Wetlands ನ ವ್ಯಾಪ್ತಿಯ ಕಾರಣವೆಂದರೆ Ramsar Sites ನ ಸುತ್ತಮುತ್ತ ವಾಸಿಸುವ ಜನರು. ನಾನು ಇವರೆಲ್ಲರನ್ನೂ ಪ್ರಶಂಸಿಸುತ್ತೇನೆ ಮತ್ತು ಮನ್ ಕಿ ಬಾತ್ ನ ಶ್ರೋತೃಗಳ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿ ನಮ್ಮ ದೇಶದಲ್ಲಿ ವಿಶೇಷವಾಗಿ ಉತ್ತರ ಭಾರದಲ್ಲಿ ತೀವ್ರವಾದ ಚಳಿಯಿತ್ತು. ಈ ಚಳಿಗಾಲದಲ್ಲಿ ಜನರು ಬೆಟ್ಟಗಳ ಮೇಲೆ ಬಿದ್ದ ಹಿಮದ ಆನಂದವನ್ನೂ ಕೂಡಾ ಸಾಕಷ್ಟು ಅನುಭವಿಸಿದರು. ಜಮ್ಮು ಕಾಶ್ಮೀರದಿಂದ ಇಂತಹದ್ದೇ ಕೆಲವು ಚಿತ್ರಗಳು ಬಂದಿದ್ದು ಇಡೀ ದೇಶದ ಮನಸೂರೆಗೊಂಡವು. ಸಾಮಾಜಿಕ ಮಾಧ್ಯಮದಲ್ಲಂತೂ, ಇಡೀ ವಿಶ್ವದ ಜನರು ಈ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ಹಿಮಪಾತದಿಂದಾಗಿ ನಮ್ಮ ಕಾಶ್ಮೀರ ಕಣಿವೆಯು ಪ್ರತಿ ವರ್ಷದಂತೆ ಈ ಬಾರಿ ಕೂಡಾ ಬಹಳ ಸುಂದರವಾಗಿ ಕಂಗೊಳಿಸುತ್ತಿದೆ. ಬನಿಹಾಲ್ ನಿಂದ ಬಡಗಾಮ್ ಗೆ ಹೋಗುವ ರೈಲಿನ ವಿಡಿಯೋವನ್ನು ಕೂಡಾ ಜನರು ವಿಶೇಷವಾಗಿ ನೋಡಿ ಇಷ್ಟಪಡುತ್ತಿದ್ದಾರೆ. ಅತಿ ಸುಂದರ ಹಿಮದಿಂದ ತುಂಬಿದ, ನಾಲ್ಕೂ ದಿಕ್ಕುಗಳಲ್ಲಿ ಬಿಳಿ ಬಣ್ಣದ ಹೊದಿಕೆಯಂತೆ ಕಾಣುವ ಮಂಜು. ಈ ದೃಶ್ಯ ಕಿನ್ನರ ಲೋಕದ ಕತೆಯ ದೃಶ್ಯಗಳಂತೆ ಕಾಣುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಇದು ಯಾವುದೋ ವಿದೇಶದ ಚಿತ್ರವಲ್ಲ ನಮ್ಮ ದೇಶದ ಕಾಶ್ಮೀರದ ಚಿತ್ರವೆಂದು ಹೇಳುತ್ತಿದ್ದಾರೆ.
ಓರ್ವ ಸಾಮಾಜಿಕ ಜಾಲತಾಣ ಬಳಕೆದಾರ ಹೀಗೆಂದು ಬರೆದಿದ್ದಾರೆ – ಸ್ವರ್ಗ ಇದಕ್ಕಿಂತ ಸುಂದರವಾಗಿ ಇರಲು ಹೇಗೆ ಸಾಧ್ಯ?’ ಈ ಮಾತು ಖಂಡಿತವಾಗಿಯೂ ಸರಿಯಾಗಿದೆ – ಆದ್ದರಿಂದಲೇ ಅಲ್ಲವೇ ಕಾಶ್ಮೀರವನ್ನು ಭೂಮಿಯ ಸ್ವರ್ಗ ಎಂದು ಕರೆಯುವುದು. ನೀವು ಕೂಡಾ ಈ ಚಿತ್ರಗಳನ್ನು ನೋಡಿ ಕಾಶ್ಮೀರ ಪ್ರವಾಸ ಮಾಡಬೇಕೆಂದು ಖಂಡಿತವಾಗಿ ಯೋಚಿಸಿರುತ್ತೀರಿ ಅಲ್ಲವೇ. ನೀವು ಖಂಡಿತವಾಗಿಯೂ ಹೋಗಿ ಮತ್ತು ನಿಮ್ಮೊಂದಿಗೆ ನಿಮ್ಮ ಸ್ನೇಹಿತರನ್ನು ಕೂಡಾ ಕರೆದೊಯ್ಯಿರಿ. ಕಾಶ್ಮೀರದಲ್ಲಿ ಹಿಮಚ್ಛಾದಿತ ಬೆಟ್ಟಗಳು, ಪ್ರಾಕೃತಿಕ ಸೌಂದರ್ಯ ಮಾತ್ರವಲ್ಲದೇ ನೋಡಲು-ಅರಿಯಲು ಬಹಳಷ್ಟಿದೆ. ಕಾಶ್ಮೀರದ ಸಯ್ಯದಾಬಾದ್ ನಲ್ಲಿ Winter games ಆಯೋಜಿಸಲಾಗಿತ್ತು. ಈ Games ಗಳ ಧ್ಯೇಯ – ಹಿಮ ಕ್ರಿಕೆಟ್ -Snow Cricket ಎಂದಾಗಿತ್ತು. ಸ್ನೋ ಕ್ರಿಕೆಟ್ ಬಹಳ ರೋಮಾಂಚನವಾಗಿರುತ್ತದೆ ಎಂದು ನೀವು ಯೋಚಿಸುತ್ತಿರಬಹುದಲ್ಲವೇ – ನೀವು ಸರಿಯಾಗಿ ಯೋಚಿಸುತ್ತಿದ್ದೀರಿ. ಕಾಶ್ಮೀರದ ಯುವಜನತೆ ಹಿಮದ ನಡುವೆ ಕ್ರಿಕೆಟ್ ಆಟವನ್ನು ಮತ್ತಷ್ಟು ಅದ್ಭುತವನ್ನಾಗಿಸುತ್ತಾರೆ. ಇದರ ಮೂಲಕ ಕಾಶ್ಮೀರದಲ್ಲಿ ಮುಂದೆ ಟೀಮ್ ಇಂಡಿಯಾ ಪರವಾಗಿ ಆಡಬಹುದಾದ ಯುವ ಕ್ರೀಡಾಪಟುಗಳ ಅನ್ವೇಷಣೆ ಕೂಡಾ ನಡೆಯುತ್ತದೆ. ಇದು ಒಂದು ರೀತಿಯಲ್ಲಿ Khelo India Movement ನ ವಿಸ್ತರಣೆಯೇ ಆಗಿದೆ. ಕಾಶ್ಮೀರದಲ್ಲಿ ಯುವಜನತೆಯಲ್ಲಿ ಕ್ರೀಡೆಗಳ ಬಗ್ಗೆ ಉತ್ಸಾಹ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವರ ಪೈಕಿ ಅನೇಕ ಯುವಕರು ಯುವತಿಯರು ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಾರೆ, ತ್ರಿವರ್ಣ ಧ್ವಜ ಹಾರಿಸುತ್ತಾರೆ. ಮುಂದಿನ ಬಾರಿ ನೀವು ಕಾಶ್ಮೀರ ಪ್ರವಾಸ ಯೋಜಿಸುವಾಗ, ಇಂತಹ ವಿಶೇಷತೆಗಳನ್ನು ನೋಡಲು ಕೂಡಾ ಸಮಯ ಮೀಸಲಿಡಿ ಎನ್ನುವುದು ನಿಮಗೆ ನನ್ನ ಸಲಹೆಯಾಗಿದೆ. ಈ ಅನುಭವ ನಿಮ್ಮ ಪ್ರವಾಸವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಗಣತಂತ್ರವನ್ನು ಬಲಿಷ್ಠಗೊಳಿಸುವ ನಮ್ಮ ಪ್ರಯತ್ನ ನಿರಂತರ ಸಾಗುತ್ತಲೇ ಇರಬೇಕು. ಜನರ ಸಹಕಾರದಿಂದ, ಎಲ್ಲರ ಪ್ರಯತ್ನದಿಂದ, ದೇಶಕ್ಕಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದರಿಂದ, ಗಣತಂತ್ರ ಸುದೃಢಗೊಳ್ಳುತ್ತದೆ. ನಮ್ಮ ಮನ್ ಕಿ ಬಾತ್ ಕಾರ್ಯಕ್ರಮ ಕರ್ತವ್ಯನಿಷ್ಟ ಹೋರಾಟಗಾರರ ಗಟ್ಟಿ ಧ್ವನಿಯಾಗಿದೆ ಎಂದು ನನಗೆ ಸಂತೋಷವೆನಿಸುತ್ತದೆ. ಮುಂದಿನ ಬಾರಿ ಪುನಃ ಭೇಟಿಯಾಗೋಣ ಇಂತಹ ಕರ್ತವ್ಯನಿಷ್ಟ ಹೋರಾಟಗಾರರ ಆಸಕ್ತಿಪೂರ್ಣ ಮತ್ತು ಸ್ಫೂರ್ತಿದಾಯಕ ಕತೆಗಳೊಂದಿಗೆ. ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇಂದು ನಾವು ಮನದ ಮಾತಿನ 96 ನೇ ಕಂತಿನಲ್ಲಿ ಭೇಟಿಯಾಗುತ್ತಿದ್ದೇವೆ. ಮನದ ಮಾತಿನ ಮುಂದಿನ ಕಂತು 2023 ರ ಮೊದಲ ಕಂತಾಗಲಿದೆ. ನೀವು ಕಳುಹಿಸಿದ ಸಂದೇಶಗಳಲ್ಲಿ ಕಳೆದುಹೋಗುತ್ತಿರುವ 2022 ನೇ ಸಾಲಿನ ಬಗ್ಗೆ ಮಾತನಾಡುವಂತೆ ಆಗ್ರಹಿಸಲಾಗಿದೆ. ಮುಗಿದ ಅಧ್ಯಾಯದ ಅವಲೋಕನ ನಮಗೆ ಸದಾ ವರ್ತಮಾನ ಮತ್ತು ಭವಿಷ್ಯದ ತಯಾರಿಗೆ ಪ್ರೇರಣೆಯನ್ನು ನೀಡುತ್ತದೆ. 2022 ರಲ್ಲಿ ದೇಶದ ಜನತೆಯ ಸಾಮರ್ಥ್ಯ, ಅವರ ಸಹಯೋಗ, ಅವರ ಸಂಕಲ್ಪ, ಅವರ ಸಫಲತೆಯ ವಿಸ್ತಾರ ಎಷ್ಟು ವಿಶಾಲವಾಗಿತ್ತು ಎಂದರೆ ಮನದ ಮಾತಿನಲ್ಲಿ ಅದನ್ನು ಒಗ್ಗೂಡಿಸುವುದು ಕಷ್ಟಸಾಧ್ಯ. 2022 ಬಹಳಷ್ಟು ವಿಧಗಳಲ್ಲಿ ಪ್ರೇರಣಾದಾಯಕವಾಗಿತ್ತು, ಅದ್ಭುತವಾಗಿತ್ತು. ಈ ವರ್ಷ ಭಾರತ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದೆ. ಇದೇ ವರ್ಷ ಅಮೃತ ಕಾಲವೂ ಪ್ರಾರಂಭವಾಯಿತು. ಈ ವರ್ಷ ದೇಶ ಹೊಸ ವೇಗವನ್ನು ಪಡೆದುಕೊಂಡಿದೆ. ಪ್ರತಿಯೊಬ್ಬ ಭಾರತೀಯನೂ ಒಂದಕ್ಕಿಂತ ಒಂದು ಉತ್ತಮ ಕೆಲಸವನ್ನು ಮಾಡಿದ್ದಾನೆ. 2022 ರ ವಿಭಿನ್ನ ರೀತಿಯ ಸಫಲತೆ ಇಂದು ಸಂಪೂರ್ಣ ವಿಶ್ವದಲ್ಲಿ ಭಾರತಕ್ಕೆ ಒಂದು ವಿಶೇಷ ಸ್ಥಾನವನ್ನು ದೊರಕಿಸಿಕೊಟ್ಟಿದೆ. 2022 ಅಂದರೆ ಭಾರತದ ಮುಖಾಂತರ ವಿಶ್ವದ 5 ನೇ ಅತಿ ದೊಡ್ಡ ಅರ್ಥವ್ಯವಸ್ಥೆಯ ಗುರಿ ತಲುಪಿದ್ದಾಗಿದೆ. 2022 ಅಂದರೆ ಭಾರತ ಊಹಿಸಲಸಾಧ್ಯವಾದ 220 ಕೋಟಿಗೂ ಹೆಚ್ಚು ಲಸಿಕೆಗಳನ್ನು ಪೂರೈಸಿರುವ ದಾಖಲೆ. 2022 ಎಂದರೆ ಭಾರತವು 400 ಬಿಲಿಯನ್ ಡಾಲರ್ ರಫ್ತುಗಳ ಮಾಂತ್ರಿಕ ಸಂಖ್ಯೆಯನ್ನು ಮೀರಿದ ಸಾಧನೆ, 2022 ಎಂದರೆ ದೇಶದ ಜನರು 'ಸ್ವಾವಲಂಬಿ ಭಾರತ' ಎಂಬ ಸಂಕಲ್ಪವನ್ನು ಅಳವಡಿಸಿಕೊಳ್ಳುವುದು ಮತ್ತು ಅದನ್ನು ಅನುಸರಿಸಿ ತೋರಿಸುವುದಾಗಿದೆ. 2022 ಎಂದರೆ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐ ಎನ್ ಎಸ್ ವಿಕ್ರಾಂತ್ ಗೆ ಸ್ವಾಗತ ಕೋರಿದ ವರ್ಷ, 2022 ಎಂದರೆ ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ವಲಯದಲ್ಲಿ ಭಾರತದ ವೈಭವ, 2022 ಎಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ತನ್ನ ಶಕ್ತಿಯನ್ನು ಮೆರೆದ ವರ್ಷ. ಕಾಮನ್ವೆಲ್ತ್ ಕ್ರೀಡಾಕೂಟವಾಗಲಿ ಅಥವಾ ನಮ್ಮ ಮಹಿಳಾ ಹಾಕಿ ತಂಡದ ವಿಜಯವಾಗಲಿ ಕ್ರೀಡಾ ಕ್ಷೇತ್ರದಲ್ಲಿಯೂ ಸಹ, ನಮ್ಮ ಯುವಕರು ಅದ್ಭುತ ಸಾಮರ್ಥ್ಯವನ್ನು ತೋರಿದ್ದಾರೆ.
ಸ್ನೇಹಿತರೇ, ಇದೆಲ್ಲದರ ಜೊತೆಗೆ, 2022 ರ ವರ್ಷವು ಇನ್ನೂ ಒಂದು ಕಾರಣಕ್ಕಾಗಿ ಎಂದಿಗೂ ಸ್ಮರಣೆಯಲ್ಲಿ ಉಳಿಯುತ್ತದೆ. ಇದು ‘ಏಕ್ ಭಾರತ್-ಶ್ರೇಷ್ಠ ಭಾರತ’ ದ ಚೈತನ್ಯದ ವಿಸ್ತರಣೆಯಾಗಿದೆ. ದೇಶದ ಜನರು ಏಕತೆ ಮತ್ತು ಒಗ್ಗಟ್ಟನ್ನು ಆಚರಿಸಲು ಕೂಡ ಹಲವಾರು ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಿದರು. ರುಕ್ಮಿಣಿಯ ವಿವಾಹ ಮತ್ತು ಶ್ರೀಕೃಷ್ಣನ ಪೂರ್ವ ಸಂಬಂಧವನ್ನು ಆಚರಿಸುವ ಗುಜರಾತ್ ನ ಮಾಧವಪುರ ಮೇಳವಾಗಲಿ ಇಲ್ಲವೆ ಕಾಶಿ-ತಮಿಳು ಸಂಗಮವಾಗಲಿ, ಈ ಹಬ್ಬಗಳಲ್ಲಿ ಏಕತೆಯ ಹಲವು ಬಣ್ಣಗಳು ಗೋಚರಿಸಿದವು. 2022ರಲ್ಲಿ ದೇಶವಾಸಿಗಳು ಮತ್ತೊಂದು ಅಮರ ಇತಿಹಾಸ ಬರೆದಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿದ 'ಹರ್ ಘರ್ ತಿರಂಗಾ' ಅಭಿಯಾನವನ್ನು ಯಾರು ಮರೆಯಲು ಸಾಧ್ಯ. ದೇಶದ ಪ್ರತಿ ಪ್ರಜೆಯ ಮೈನವಿರೇಳುವಂತಹ ಕ್ಷಣಗಳವು. ಸ್ವಾತಂತ್ರ್ಯದ 75 ವರ್ಷಗಳ ಈ ಅಭಿಯಾನದಲ್ಲಿ ಇಡೀ ದೇಶವೇ ತ್ರಿವರ್ಣ ಧ್ವಜಮಯವಾಯಿತು. 6 ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಕೂಡ ಕಳುಹಿಸಿದ್ದಾರೆ. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮುಂದಿನ ವರ್ಷವೂ ಇದೇ ರೀತಿ ಮುಂದುವರಿಯುತ್ತದೆ - ಇದು ಅಮೃತ ಕಾಲದ ಅಡಿಪಾಯವನ್ನು ಮತ್ತಷ್ಟು ಸಬಲಗೊಳಿಸಲಿದೆ.
ಸ್ನೇಹಿತರೇ, ಈ ವರ್ಷ ಭಾರತಕ್ಕೆ ಜಿ-20 ರಾಷ್ಟ್ರಗಳ ಸಮೂಹದ ಅಧ್ಯಕ್ಷತೆಯ ಜವಾಬ್ದಾರಿ ದೊರೆತಿದೆ. ಕಳೆದ ಬಾರಿ ನಾನು ಈ ಬಗ್ಗೆ ವಿವರವಾಗಿ ಚರ್ಚಿಸಿದ್ದೆ. 2023 ರಲ್ಲಿ, ನಾವು G-20 ಯ ಉತ್ಸಾಹವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ, ಈ ಕಾರ್ಯಕ್ರಮವನ್ನು ಜನಾಂದೋಲನವನ್ನಾಗಿ ಮಾಡಬೇಕಿದೆ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ಕ್ರಿಸ್ಮಸ್ ಹಬ್ಬವನ್ನು ಪ್ರಪಂಚದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದು ಯೇಸುಕ್ರಿಸ್ತನ ಜೀವನ ಮತ್ತು ಬೋಧನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ನಿಮ್ಮೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಅನಂತ ಶುಭಾಶಯಗಳನ್ನು ಕೋರುತ್ತೇನೆ
ಸ್ನೇಹಿತರೇ, ಇಂದು ನಮ್ಮ ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೌದು. ಅವರು ದೇಶಕ್ಕೆ ಅಸಾಧಾರಣ ನಾಯಕತ್ವವನ್ನು ನೀಡಿದ ಮಹಾನ್ ರಾಜಕಾರಿಣಿ ಆಗಿದ್ದರು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ನನಗೆ ಕೋಲ್ಕತ್ತಾದಿಂದ ಆಸ್ತಾಜಿಯವರ ಪತ್ರ ಬಂದಿದೆ. ಈ ಪತ್ರದಲ್ಲಿ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಸಮಯದಲ್ಲಿ ಅವರು ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದೆ ಎಂದು ಅವರು ಬರೆದಿದ್ದಾರೆ. ಈ ಸಂಗ್ರಹಾಲಯದಲ್ಲಿರುವ ಅಟಲ್ ಜಿ ಅವರ ಗ್ಯಾಲರಿ ಅವರಿಗೆ ತುಂಬಾ ಇಷ್ಟವಾಗಿತ್ತು. ಅಟಲ್ ಜೀ ಅವರೊಂದಿಗೆ ಕ್ಲಿಕ್ಕಿಸಿದ ಚಿತ್ರವು ಅವರಿಗೆ ಸ್ಮರಣೀಯವಾಗಿದೆ. ಅಟಲ್ ಜಿ ಅವರ ಗ್ಯಾಲರಿಯಲ್ಲಿ, ದೇಶಕ್ಕೆ ಅವರ ಅಮೂಲ್ಯ ಕೊಡುಗೆಯ ಪ್ರಮುಖ ಅಂಶಗಳನ್ನು ನಾವಿಲ್ಲಿ ಕಾಣಬಹುದು. ಮೂಲಸೌಕರ್ಯ, ಶಿಕ್ಷಣ ಅಥವಾ ವಿದೇಶಾಂಗ ನೀತಿಯಾಗಿರಲಿ, ಅವರು ಪ್ರತಿ ಕ್ಷೇತ್ರದಲ್ಲೂ ಭಾರತವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸಿದ್ದರು. ನಾನು ಮತ್ತೊಮ್ಮೆ ನನ್ನ ಹೃದಯಪೂರ್ವಕವಾಗಿ ಅಟಲ್ ಜೀ ಅವರಿಗೆ ನಮಸ್ಕರಿಸುತ್ತೇನೆ.
ಸ್ನೇಹಿತರೇ, ನಾಳೆ ಡಿಸೆಂಬರ್ 26 ರಂದು 'ವೀರ್ ಬಾಲ್ ದಿವಸ್' ಆಚರಿಸಲಾಗುತ್ತದೆ. ಮತ್ತು ಈ ಸಂದರ್ಭದಲ್ಲಿ ದೆಹಲಿಯಲ್ಲಿ ಸಾಹಿಬ್ ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ ಜಾದಾ ಫತೇ ಸಿಂಗ್ ಜಿ ಯಂತಹ ಹುತಾತ್ಮರಿಗೆ ಮೀಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ದೊರೆಯಲಿದೆ. ಸಾಹಿಬ್ ಜಾದಾ ಮತ್ತು ಮಾತಾ ಗುಜರಿ ಅವರ ತ್ಯಾಗವನ್ನು ದೇಶವು ಯಾವಾಗಲೂ ಸ್ಮರಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ ಹೀಗೆ ಹೇಳುತ್ತಾರೆ -
ಸತ್ಯಂ ಕಿಂ ಪ್ರಮಾಣಮ್, ಪ್ರತ್ಯಕ್ಷಂ ಕಿಂ ಪ್ರಮಾಣಮ್ ।
ಅಂದರೆ, ಸತ್ಯಕ್ಕೆ ಪುರಾವೆ ಅಗತ್ಯವಿಲ್ಲ, ಪ್ರತ್ಯಕ್ಷವಾಗಿ ಕಾಣುವುದಕ್ಕೂ ಪುರಾವೆ ಬೇಕಾಗಿಲ್ಲ. ಆದರೆ ಆಧುನಿಕ ವೈದ್ಯಕೀಯ ವಿಜ್ಞಾನದ ಮಾತನಾಡುವುದಾದರೆ, ಪುರಾವೆ- ಸಾಕ್ಷ್ಯ ಅತ್ಯಂತ ಹೆಚ್ಚಿನ ಮಹತ್ವ ಪಡೆಯುತ್ತದೆ. ಶತಮಾನಗಳಿಂದ ಭಾರತೀಯರ ಜೀವನದ ಅಂಗವಾಗಿದ್ದ ಯೋಗ ಮತ್ತು ಆಯುರ್ವೇದದಂತಹ ನಮ್ಮ ಧರ್ಮಗ್ರಂಥಗಳಿಗೆ ಹೋಲಿಸಿದಾಗ ಸಾಕ್ಷ್ಯಾಧಾರಿತ ಸಂಶೋಧನೆಯ ಕೊರತೆಯು ಇಂದಿಗೂ ಒಂದು ಸವಾಲಾಗಿಯೇ ಉಳಿದಿದೆ - ಫಲಿತಾಂಶಗಳು ಗೋಚರಿಸುತ್ತವೆ, ಆದರೆ ಪುರಾವೆ ಇರುವುದಿಲ್ಲ. ಆದರೆ, ಸಾಕ್ಷ್ಯಾಧಾರಿತ ಔಷಧದ ಯುಗದಲ್ಲಿ, ಯೋಗ ಮತ್ತು ಆಯುರ್ವೇದವು ಆಧುನಿಕ ಯುಗದ ಪರಿಶೀಲನೆ ಮತ್ತು ಪರೀಕ್ಷೆಗಳಲ್ಲಿ ಅಪ್ಪಟವೆಂದು ಸಾಬೀತಾಗಿದೆ ಎಂಬುದು ನನಗೆ ಸಂತೋಷವೆನಿಸಿದೆ. ಮುಂಬೈನಲ್ಲಿರುವ ಟಾಟಾ ಸ್ಮಾರಕ ಕೇಂದ್ರದ ಬಗ್ಗೆ ನೀವೆಲ್ಲರೂ ಕೇಳಿರಬಹುದು. ಈ ಸಂಸ್ಥೆ ಸಂಶೋಧನೆ, ನಾವೀನ್ಯತೆ ಮತ್ತು ಕ್ಯಾನ್ಸರ್ ಆರೈಕೆಯಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಸ್ತನ ಕ್ಯಾನ್ಸರ್ ರೋಗಿಗಳಿಗೆ ಯೋಗವು ತುಂಬಾ ಪರಿಣಾಮಕಾರಿ ಎಂದು ಈ ಕೇಂದ್ರ ನಡೆಸಿದ ತೀವ್ರ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಟಾಟಾ ಮೆಮೋರಿಯಲ್ ಸೆಂಟರ್ ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ ಸ್ತನ ಕ್ಯಾನ್ಸರ್ ಸಮ್ಮೇಳನದಲ್ಲಿ ತನ್ನ ಸಂಶೋಧನೆಯ ಫಲಿತಾಂಶಗಳನ್ನು ಪ್ರಸ್ತುತಪಡಿಸಿದೆ. ಈ ಫಲಿತಾಂಶಗಳು ವಿಶ್ವದ ಅತಿದೊಡ್ಡ ತಜ್ಞರ ಗಮನವನ್ನು ಸೆಳೆದಿವೆ. ಏಕೆಂದರೆ, ಯೋಗದಿಂದ ರೋಗಿಗಳು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಟಾಟಾ ಸ್ಮಾರಕ ಕೇಂದ್ರವು ಸಾಕ್ಷಿ ಸಮೇತ ಪ್ರಸ್ತುತಪಡಿಸಿದೆ. ಈ ಕೇಂದ್ರದ ಸಂಶೋಧನೆಯ ಪ್ರಕಾರ, ಯೋಗದ ನಿಯಮಿತ ಅಭ್ಯಾಸ ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ರೋಗದ ಮರುಕಳಿಸುವಿಕೆ ಮತ್ತು ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡುತ್ತದೆ. ಪಾಶ್ಚಿಮಾತ್ಯ ವಿಧಾನಗಳ ಕಟ್ಟುನಿಟ್ಟಾದ ಮಾನದಂಡಗಳ ಪ್ರಕಾರ ಭಾರತೀಯ ಸಾಂಪ್ರದಾಯಿಕ ಔಷಧವನ್ನು ಪರೀಕ್ಷಿಸಿದ ಮೊದಲ ಉದಾಹರಣೆ ಇದಾಗಿದೆ. ಅಲ್ಲದೆ, ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ಯೋಗವು ಜೀವನದ ಗುಣಮಟ್ಟವನ್ನು ಸುಧಾರಿಸಿದೆ ಎಂದು ಸಾಬೀತುಪಡಿಸಿರುವ ಮೊದಲ ಅಧ್ಯಯನವೂ ಇದಾಗಿದೆ. ಇದರ ದೀರ್ಘಾವಧಿಯ ಪ್ರಯೋಜನಗಳೂ ಬೆಳಕಿಗೆ ಬಂದಿವೆ. ಪ್ಯಾರಿಸ್ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಮೆಡಿಕಲ್ ಆಂಕೊಲಾಜಿ ಸಮ್ಮೇಳನದಲ್ಲಿ ಟಾಟಾ ಮೆಮೋರಿಯಲ್ ಸೆಂಟರ್ ತನ್ನ ಅಧ್ಯಯನದ ಫಲಿತಾಂಶಗಳನ್ನು ಪ್ರಸ್ತುತಪಡಿಸಿದೆ.
ಸ್ನೇಹಿತರೇ, ಇಂದಿನ ಯುಗದಲ್ಲಿ, ಭಾರತೀಯ ವೈದ್ಯಕೀಯ ವ್ಯವಸ್ಥೆಗಳು ಹೆಚ್ಚು ಸಾಕ್ಷ್ಯಾಧಾರಿತವಾಗಿವೆ, ಇಡೀ ಪ್ರಪಂಚದಲ್ಲಿ ಅವುಗಳ ಸ್ವೀಕಾರಾರ್ಹತೆ ಹೆಚ್ಚಾಗುತ್ತದೆ. ಇದೇ ನಿಟ್ಟಿನಲ್ಲಿ ದೆಹಲಿಯ ಏಮ್ಸ್ ನಲ್ಲೂ ಪ್ರಯತ್ನ ನಡೆಯುತ್ತಿದೆ. ಇಲ್ಲಿ, ಆರು ವರ್ಷಗಳ ಹಿಂದೆ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಮೌಲ್ಯೀಕರಿಸಲು ಸೆಂಟರ್ ಫಾರ್ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ ಅನ್ನು ಸ್ಥಾಪಿಸಲಾಯಿತು. ಇದರಲ್ಲಿ ಆಧುನಿಕ ತಂತ್ರಗಳು ಮತ್ತು ಸಂಶೋಧನಾ ವಿಧಾನಗಳನ್ನು ಬಳಸಲಾಗುತ್ತದೆ. ಕೇಂದ್ರವು ಈಗಾಗಲೇ 20 ಪ್ರಬಂಧಗಳನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ ಮೂರ್ಛೆಯಿಂದ ಬಳಲುತ್ತಿರುವ ರೋಗಿಗಳಿಗೆ ಯೋಗದ ಪ್ರಯೋಜನಗಳನ್ನು ವಿವರಿಸಲಾಗಿದೆ. ಅದೇ ರೀತಿ, ನ್ಯೂರಾಲಜಿ ಜರ್ನಲ್ ಪತ್ರಿಕೆಯಲ್ಲಿ, ಅರೆ ತಲೆಶೂಲೆಯಲ್ಲಿ ಯೋಗದ ಪ್ರಯೋಜನಗಳನ್ನು ವಿವರಿಸಲಾಗಿದೆ. ಇಷ್ಟೇ ಅಲ್ಲದೆ, ಹೃದ್ರೋಗ, ಖಿನ್ನತೆ, ನಿದ್ರಾಹೀನತೆ ಮತ್ತು ಗರ್ಭಾವಸ್ಥೆಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳಂತಹ ಇನ್ನೂ ಅನೇಕ ರೋಗಗಳಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಾನು ವಿಶ್ವ ಆಯುರ್ವೇದ ಕಾಂಗ್ರೆಸ್ ನಲ್ಲಿ ಪಾಲ್ಗೊಳ್ಳಲು ಗೋವಾದಲ್ಲಿದ್ದೆ. 40ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು ಮತ್ತು 550ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಇಲ್ಲಿ ಮಂಡಿಸಲಾಯಿತು. ಇಲ್ಲಿ ನಡೆದ ಪ್ರದರ್ಶನದಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತದ ಸುಮಾರು 215 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದವು. ನಾಲ್ಕು ದಿನಗಳ ಕಾಲ ನಡೆದ ಈ ಎಕ್ಸಪೋದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಆಯುರ್ವೇದಕ್ಕೆ ಸಂಬಂಧಿಸಿದ ತಮ್ಮ ಅನುಭವವನ್ನು ಆನಂದಿಸಿದರು. ಆಯುರ್ವೇದ ಕಾಂಗ್ರೆಸ್ನಲ್ಲಿ, ಪ್ರಪಂಚದಾದ್ಯಂತದ ಆಯುರ್ವೇದ ತಜ್ಞರಲ್ಲಿ ನಾನು ಸಾಕ್ಷಾಧಾರಿತ ಸಂಶೋಧನೆಗಾಗಿ ಮತ್ತೊಮ್ಮೆ ಆಗ್ರಹಿಸಿದೆ. ಜಾಗತಿಕ ಮಹಾಮಾರಿಯಾದ ಕೊರೊನಾ ಸಮಯದಲ್ಲಿ ಯೋಗ ಮತ್ತು ಆಯುರ್ವೇದದ ಶಕ್ತಿಯನ್ನು ನಾವೆಲ್ಲರೂ ನೋಡುತ್ತಿದ್ದೇವೆ, ಇವುಗಳಿಗೆ ಸಂಬಂಧಿಸಿದ ಪುರಾವೆ ಆಧಾರಿತ ಸಂಶೋಧನೆ ಬಹಳ ಮಹತ್ವಪೂರ್ಣ ಎಂದು ಸಾಬೀತಾಗುತ್ತದೆ. ಯೋಗ, ಆಯುರ್ವೇದ ಮತ್ತು ನಮ್ಮ ಸಾಂಪ್ರದಾಯಿಕ ವೈದ್ಯಕೀಯ ವಿಧಾನಗಳಿಗೆ ಸಂಬಂಧಿಸಿದ ಪ್ರಯತ್ನಗಳ ಬಗ್ಗೆ ನಿಮ್ಮಲ್ಲಿ ಯಾವುದೇ ಮಾಹಿತಿ ಇದ್ದಲ್ಲಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿತ ಹಂಚಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ಕಳೆದ ಕೆಲವು ವರ್ಷಗಳಲ್ಲಿ ನಾವು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಸವಾಲುಗಳನ್ನು ಜಯಿಸಿದ್ದೇವೆ. ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ವೈದ್ಯಕೀಯ ತಜ್ಞರು, ವಿಜ್ಞಾನಿಗಳು ಮತ್ತು ದೇಶವಾಸಿಗಳ ಇಚ್ಛಾಶಕ್ತಿಗೆ ಸಲ್ಲುತ್ತದೆ. ನಾವು ಭಾರತದಿಂದ ಸಿಡುಬು, ಪೋಲಿಯೊ ಮತ್ತು 'ಗಿನಿ ವರ್ಮ್' ಅಂತಹ ರೋಗಗಳನ್ನು ನಿರ್ಮೂಲನೆ ಮಾಡಿದ್ದೇವೆ.
ಇಂದು, ನಾನು 'ಮನದ ಮಾತು' ಶ್ರೋತೃಳಿಗೆ ಮತ್ತೊಂದು ಸವಾಲಿನ ಬಗ್ಗೆ ಹೇಳಬಯಸುತ್ತೇನೆ, ಈಗ ಅದು ನಿರ್ಮೂಲನೆಯ ಹಂತದಲ್ಲಿದೆ. ಅದೇನೆಂದರೆ– 'ಕಾಲಾ-ಅಜಾರ್' ಎಂಬ ಪರಾವಲಂಬಿ ಮರಳು ನೊಣದ ಕಡಿತದಿಂದ ಹರಡುವ ಜ್ವರ. ‘ಕಾಲಾ-ಅಜಾರ್’ ಪೀಡಿತರಿಗೆ ತಿಂಗಳಾನುಗಟ್ಟಲೆ ಜ್ವರ, ರಕ್ತಹೀನತೆ, ದೇಹ ಬಲಹೀನವಾಗುವುದು ಮತ್ತು ತೂಕ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತವೆ. ಈ ರೋಗವು ಮಕ್ಕಳಿಂದ ಹಿರಿಯರವರೆಗೆ ಯಾರಿಗಾದರೂ ಬರಬಹುದು. ಆದರೆ ಎಲ್ಲರ ಪ್ರಯತ್ನದಿಂದ ಪ್ರಸ್ತುತ ‘ಕಾಲಾ-ಅಜಾರ್’ ಹೆಸರಿನ ಈ ರೋಗ ವೇಗವಾಗಿ ನಿರ್ಮೂಲನೆಯಾಗುತ್ತಿದೆ. ಇತ್ತೀಚೆಗೆ ಕಾಲಾ-ಅಜಾರ್ ತೀವ್ರತೆ ಏಕಾಏಕಿ 4 ರಾಜ್ಯಗಳ 50 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹರಡಿತ್ತು. ಆದರೆ ಈಗ ಈ ರೋಗವು ಬಿಹಾರ ಮತ್ತು ಜಾರ್ಖಂಡ್ನ 4 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಬಿಹಾರ-ಜಾರ್ಖಂಡ್ನ ಜನತೆಯ ಸಾಮರ್ಥ್ಯ ಮತ್ತು ಅರಿವು ಈ ನಾಲ್ಕು ಜಿಲ್ಲೆಗಳಿಂದಲೂ ‘ಕಾಲಾ-ಅಜಾರ್’ ಅನ್ನು ತೊಡೆದುಹಾಕುವ ಸರ್ಕಾರದ ಪ್ರಯತ್ನಗಳಿಗೆ ನೆರವಾಗಲಿದೆ ಎಂದು ನನಗೆ ವಿಶ್ವಾಸವಿದೆ. ‘ಕಾಲಾ-ಅಜಾರ್’ ಪೀಡಿತ ಪ್ರದೇಶಗಳ ಜನರು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಒಂದು - ಮರಳು ನೊಣ ನಿಯಂತ್ರಣ, ಮತ್ತು ಎರಡನೆಯದಾಗಿ, ತ್ವರಿತಗತಿಯಲ್ಲಿ ಈ ರೋಗವನ್ನು ಗುರುತಿಸುವುದು ಮತ್ತು ಸಂಪೂರ್ಣ ಚಿಕಿತ್ಸೆ. ‘ಕಾಲಾ-ಅಜಾರ್’ ಚಿಕಿತ್ಸೆ ಸುಲಭ, ಇದಕ್ಕೆ ಬಳಸುವ ಔಷಧಿಗಳೂ ತುಂಬಾ ಪರಿಣಾಮಕಾರಿ. ನೀವು ಜಾಗೃತವಾಗಿರಬೇಕು. ಜ್ವರ ಬಂದರೆ ನಿರ್ಲಕ್ಷಿಸಬೇಡಿ ಮತ್ತು ಮರಳು ನೊಣವನ್ನು ನಾಶಪಡಿಸುವ ಔಷಧಗಳನ್ನು ಸಿಂಪಡಿಸುತ್ತಿರಿ. ನಮ್ಮ ದೇಶ ‘ಕಾಲಾ-ಅಜಾರ್’ ದಿಂದ ಮುಕ್ತವಾದಲ್ಲಿ ನಮಗೆಲ್ಲರಿಗೂ ಎಷ್ಟು ಸಂತಸ ತರಲಿದೆ ಎಂದು ಒಮ್ಮೆ ಯೋಚಿಸಿ. ಸಬ್ಕಾ ಪ್ರಾಯಸ್ ನ ಇದೇ ಹುಮ್ಮಸ್ಸಿನೊಂದಿಗೆ, 2025 ರ ವೇಳೆಗೆ ನಾವು, ಭಾರತವನ್ನು ಕ್ಷಯದಿಂದಲೂ ಮುಕ್ತಗೊಳಿಸುವ ಪ್ರಯತ್ನದಲ್ಲಿದ್ದೇವೆ. ಈ ಹಿಂದೆ, ಕ್ಷಯರೋಗ ಮುಕ್ತ ಭಾರತ ಅಭಿಯಾನ ಆರಂಭ ಮಾಡಿದಾಗ ಕ್ಷಯರೋಗ ಪೀಡಿತರ ಸಹಾಯಕ್ಕೆ ಸಾವಿರಾರು ಜನರು ಮುಂದೆ ಬಂದಿರುವುದನ್ನು ನೀವು ನೋಡಿರಬಹುದು. ಈ ಜನರು, ನಿಕ್ಷಯ್ ಮಿತ್ರರ ರೂಪದಲ್ಲಿ, ಕ್ಷಯ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಅವರಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಿದ್ದಾರೆ. ಜನ ಸೇವೆ ಮತ್ತು ಸಾರ್ವಜನಿಕರು ಭಾಗವಹಿಸುವಿಕೆಯ ಈ ಶಕ್ತಿ ಪ್ರತಿ ಕಷ್ಟಕರ ಗುರಿಯನ್ನು ಸಾಧಿಸಿಯೇ ತೋರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯು ಗಂಗಾ ಮಾತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಗಂಗಾ ಜಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಪುರಾಣ, ಧರ್ಮಗ್ರಂಥಗಳಲ್ಲಿ ಹೀಗೆಂದು ಹೇಳಲಾಗಿದೆ :-
ನಮಾಮಿ ಗಂಗೆ ತವ ಪಾದ ಪಂಕಜಂ,
ಸುರ ಅಸುರೈಃ ವಂದಿತ ದಿವ್ಯ ರೂಪಂ
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ
ಭಾವ ಅನುಸಾರೇಣ ಸದಾ ನರಾಣಾಂ.
ಅಂದರೆ, ಹೇ ಗಂಗಾ ಮಾತೆ, ನೀವು ನಿಮ್ಮ ಭಕ್ತರಿಗೆ ಅವರವರ ಇಚ್ಛೆಗೆ ಅನುಗುಣವಾಗಿ – ಲೌಕಿಕ ಸುಖ, ಆನಂದ, ಮತ್ತು ಮೋಕ್ಷವನ್ನು ಪ್ರಸಾದಿಸುತ್ತೀಯೆ. ಎಲ್ಲರೂ ನಿಮ್ಮ ಪವಿತ್ರ ಚರಣಗಳಿಗೆ ವಂದಿಸುತ್ತಾರೆ. ನಾನು ಕೂಡಾ ನಿಮ್ಮ ಪವಿತ್ರ ಚರಣಗಳಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ ಎಂದರ್ಥ.
ಹೀಗಿರುವಾಗ ಶತಮಾನಗಳಿಂದ ಕಲ ಕಲ ಧ್ವನಿಯಿಂದ ಪ್ರವಹಿಸುತ್ತಿರುವ ಗಂಗಾ ಮಾತೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಅತಿ ದೊಡ್ಡ ಜವಾಬ್ದಾರಿಯಾಗಿದೆ. ಇದೇ ಉದ್ದೇಶದಿಂದ, ಎಂಟು ವರ್ಷಗಳ ಹಿಂದೆ, ನಾವು ‘ನಮಾಮಿ ಗಂಗೆ ಅಭಿಯಾನ’ ಆರಂಭಿಸಿದೆವು. ಭಾರತದ ಈ ಉಪಕ್ರಮಕ್ಕೆ ಇಂದು ವಿಶ್ವಾದ್ಯಾಂತ ಪ್ರಶಂಸೆ ದೊರೆಯುತ್ತಿದೆ ಎನ್ನುವುದು ನಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ವಿಶ್ವಸಂಸ್ಥೆಯು ‘ನಮಾಮಿ ಗಂಗೆ’ ಅಭಿಯಾನವನ್ನು ಪರಿಸರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ವಿಶ್ವದ ಹತ್ತು ಅಗ್ರ ಉಪಕ್ರಮಗಳಲ್ಲಿ ಸೇರಿಸಿದೆ. ಇಡೀ ವಿಶ್ವದ ಇಂತಹ 160 ಉಪಕ್ರಮಗಳ ಪೈಕಿ ‘ನಮಾಮಿ ಗಂಗೆ’ ಉಪಕ್ರಮಕ್ಕೆ ಈ ಗೌರವ ದೊರೆತಿರುವುದು ಮತ್ತಷ್ಟು ಸಂತೋಷದ ವಿಷಯವಾಗಿದೆ.
ಸ್ನೇಹಿತರೇ, ‘ನಮಾಮಿ ಗಂಗೆ’ ಅಭಿಯಾನದ ಅತಿ ದೊಡ್ಡ ಶಕ್ತಿಯೆಂದರೆ ಅದು ಜನರ ನಿರಂತರ ಸಹಭಾಗಿತ್ವ. ‘ನಮಾಮಿ ಗಂಗೆ’ ಅಭಿಯಾನದಲ್ಲಿ, ದೂತರು ಮತ್ತು ಪ್ರಹರಿಗಳ ಪಾತ್ರ ಬಹಳ ದೊಡ್ಡದಿದೆ. ಅವರು ಗಿಡ ನೆಡುವುದು, ಘಾಟ್ ಗಳ ಸ್ವಚ್ಛತೆ, ಗಂಗಾ ಆರತಿ, ಬೀದಿ ನಾಟಕಗಳು, ಪೈಂಟಿಂಗ್ ಮತ್ತು ಕವಿತೆಗಳ ಮೂಲಕ ಜನರಲ್ಲಿ ಜಾಗರೂಕತೆ ಮೂಡಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಅಭಿಯಾನದಿಂದಾಗಿ ಜೀವವೈವಿಧ್ಯತೆಯಲ್ಲಿ ಕೂಡಾ ಸಾಕಷ್ಟು ಸುಧಾರಣೆ ಕಂಡುಬರುತ್ತಿದೆ. ಹಿಲ್ಸಾ ಮೀನು, ಗಂಗಾ ಡಾಲ್ಫಿನ್ ಮತ್ತು ಆಮೆಗಳ ವಿವಿಧ ಜಾತಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಗಂಗೆಯ ಪರಿಸರ ವ್ಯವಸ್ಥೆ ಸ್ವಚ್ಛವಾಗುತ್ತಿರುವುದರಿಂದ, ಜೀವನೋಪಾಯದ ಅವಕಾಶಗಳು ಕೂಡಾ ಹೆಚ್ಚಾಗುತ್ತಿವೆ. ಇಲ್ಲಿ ನಾನು ‘ಜಲವಾಸಿ ಜೀವನೋಪಾಯ ಮಾದರಿ’ ಯ ಕುರಿತು ಮಾತನಾಡಲು ಬಯಸುತ್ತೇನೆ, ಇದನ್ನು ಜೀವವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಈ ಪ್ರವಾಸೋದ್ಯಮ-ಆಧರಿತ ಬೋಟ್ ಸಫಾರಿಗಳನ್ನು 26 ಸ್ಥಳಗಳಲ್ಲಿ ಆರಂಭಿಸಲಾಗಿದೆ. ನಿಸ್ಸಂಶಯವಾಗಿ, ‘ನಮಾಮಿ ಗಂಗೆ’ ಅಭಿಯಾನದ ವಿಸ್ತಾರ, ಅದರ ವ್ಯಾಪ್ತಿ, ನದಿಯನ್ನು ಸ್ವಚ್ಛಗೊಳಿಸುವುದನ್ನು ಮೀರಿ ದೊಡ್ಡದಾಗಿದೆ. ಇದು ಯಾವರೀತಿ ನಮ್ಮ ಇಚ್ಛಾಶಕ್ತಿ ಮತ್ತು ದಣಿವರಿಯದ ಪ್ರಯತ್ನಗಳ ಪ್ರತ್ಯಕ್ಷ ರುಜುವಾತಾಗಿದೆಯೋ ಅಂತೆಯೇ, ಪರಿಸರದ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಪಂಚಕ್ಕೆ ಒಂದು ಹೊಸ ಮಾರ್ಗ ತೋರಿಸುವಂತಹ ಪ್ರಯತ್ನವೂ ಆಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಕಲ್ಪಶಕ್ತಿ ಯಾವಾಗ ಬಲವಾಗಿರುತ್ತದೆಯೋ, ಆಗ ದೊಡ್ಡ ದೊಡ್ಡ ಸವಾಲುಗಳು ಕೂಡಾ ಬಹಳ ಸುಲಭವೆನಿಸಿಬಿಡುತ್ತವೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಸಿಕ್ಕಿಂನ ಥೆಗೂ ಗ್ರಾಮದ ‘ಸಂಗೆ ಶೆರ್ಪಾ’ ಅವರು. ಇವರು ಕಳೆದ 14 ವರ್ಷಗಳಿಂದ 12,000 ಅಡಿಗಿಂತ ಹೆಚ್ಚು ಎತ್ತರದ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಂಗೆ ಅವರು ಸಾಂಸ್ಕೃತಿಕ ಮತ್ತು ಪೌರಾಣಿಕ ಪ್ರಾಮುಖ್ಯತೆಯಿರುವ Tsomgo (ಸೋಮಗೋ) ಸರೋವರವನ್ನು ಸ್ವಚ್ಛವಾಗಿರಿಸುವ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಅವಿರತ ಪರಿಶ್ರಮದಿಂದ ಅವರು ಈ ಗ್ಲೇಷಿಯರ್ ಸರೋವರದ ರೂಪರೇಷೆ ಬದಲಾಯಿಸಿದ್ದಾರೆ. 2008 ರಲ್ಲಿ ಸ್ವಚ್ಛತೆಯ ಈ ಅಭಿಯಾನ ಆರಂಭಿಸಿದಾಗ, ಸಂಗೆ ಶೆರ್ಪಾ ಅವರು, ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಕ್ರಮೇಣ ಕೆಲಸಮಯದಲ್ಲೇ ಅವರ ಈ ಉದಾತ್ತ ಕೆಲಸಕ್ಕೆ ಯುವಕರು ಮತ್ತು ಗ್ರಾಮೀಣ ಜನತೆಯೊಂದಿಗೆ ಪಂಚಾಯಿತ್ ನಿಂದ ಕೂಡಾ ಸಾಕಷ್ಟು ಸಹಕಾರ ದೊರೆಯಲಾರಂಭಿಸಿತು. ಒಂದುವೇಳೆ ನೀವು Tsomgo (ಸೋಮಗೋ) ಸರೋವರ ನೋಡಲು ಹೋದರೆ, ನಿಮಗೆ ಅಲ್ಲಿ ನಾಲ್ಕೂ ದಿಕ್ಕಿನಲ್ಲೂ ದೊಡ್ಡ ದೊಡ್ಡ ಕಸದ ಬುಟ್ಟಿಗಳು ಕಾಣಸಿಗುತ್ತವೆ. ಈಗ ಇಲ್ಲಿ ಸಂಗ್ರಹವಾಗುವ ಕಸ-ಕಡ್ಡಿಯನ್ನು ರೀಸೈಕ್ಲಿಂಗ್ ಗಾಗಿ ಕಳುಹಿಸಿಕೊಡಲಾಗುತ್ತದೆ. ಕಸ-ಕಡ್ಡಿಯನ್ನು ಇಲ್ಲಿಗೆ ಬರುವ ಪ್ರವಾಸಿಗರು ಅಲ್ಲಿ ಇಲ್ಲಿ ಎಸೆಯಬಾರದೆಂಬ ಉದ್ದೇಶದಿಂದ ಪ್ರವಾಸಿಗರಿಗೆ ಬಟ್ಟೆಯಿಂದ ತಯಾರಿಸಿದ ಗಾರ್ಬೇಜ್ ಚೀಲಗಳನ್ನು ಕೂಡಾ ನೀಡಲಾಗುತ್ತದೆ. ಈಗ ಸಾಕಷ್ಟು ಸ್ವಚ್ಛವಾಗಿರುವ ಈ ಸರೋವರವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಸುಮಾರು 5 ಲಕ್ಷ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. Tsomgo (ಸೋಮಗೊ) ಸರೋವರದ ಸಂರಕ್ಷಣೆಯ ಈ ಅನನ್ಯ ಪ್ರಯಾಸಕ್ಕಾಗಿ ಸಂಗೆ ಶೆರ್ಪಾ ಅವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಇಂತಹ ಪ್ರಯತ್ನಗಳ ಕಾರಣದಿಂದಾಗಿ ಇಂದು ಸಿಕ್ಕಿಂ ಅನ್ನು ಭಾರತದ ಅತ್ಯಂತ ಸ್ವಚ್ಛ ಸುಂದರ ರಾಜ್ಯಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ. ನಾನು ಸಂಗೆ ಶೆರ್ಪಾ ಮತ್ತು ಅವರ ಸ್ನೇಹಿತರು ಮತ್ತು ದೇಶಾದ್ಯಂತ ಪರಿಸರ ಸಂರಕ್ಷಣೆಯ ಉದಾತ್ತ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನೂ ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.
ಸ್ನೇಹಿತರೆ, ಇಂದು ಸ್ವಚ್ಛ ಭಾರತ ಅಭಿಯಾನ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ನೆಲೆಯೂರಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. 2014 ರಲ್ಲಿ ಈ ಅಭಿಯಾನದ ಆರಂಭದೊಂದಿಗೇ, ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ, ಜನರು ಅನೇಕ ವಿಶಿಷ್ಠ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಈ ಪ್ರಯತ್ನ ಕೇವಲ ಸಮಾಜದೊಳಗೆ ಮಾತ್ರವಲ್ಲದೇ ಸರ್ಕಾರದೊಳಗೂ ನಡೆಯುತ್ತಿದೆ. ಇಂತಹ ಸತತ ಪ್ರಯತ್ನಗಳ ಪರಿಣಾಮವಾಗಿ, ಕಸ ಕಡ್ಡಿ ತೊಲಗಿಸಿದ್ದರಿಂದ, ಅನಗತ್ಯ ವಸ್ತುಗಳನ್ನು ತೊಲಗಿಸಿದ್ದರಿಂದ, ಕಛೇರಿಗಳಲ್ಲಿ ಸಾಕಷ್ಟು ಸ್ಥಳಾವಕಾಶ ಉಂಟಾಗಿದೆ. ಈ ಹಿಂದೆ ಸ್ಥಳ ಅಭಾವದ ಕಾರಣದಿಂದಾಗಿ ದೂರ ದೂರದಲ್ಲಿ ಬಾಡಿಗೆಗೆ ಕಛೇರಿ ತೆರೆಯಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಈ ಸ್ವಚ್ಛತೆಯ ಕಾರಣದಿಂದಾಗಿ ಎಷ್ಟೊಂದು ಸ್ಥಳ ದೊರೆತಿದೆಯೆಂದರೆ, ಈಗ ಒಂದೇ ಸ್ಥಳದಲ್ಲಿ ಎಲ್ಲಾ ಕಛೇರಿಗಳೂ ನೆಲೆಗೊಂಡಿವೆ. ಕೆಲ ದಿನಗಳ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡಾ ಮುಂಬಯಿ, ಅಹಮದಾಬಾದ್, ಕೊಲ್ಕತ್ತಾ, ಶಿಲ್ಲಾಂಗ್, ಇತರ ಅನೇಕ ನಗರಗಳಲ್ಲಿ ತಮ್ಮ ಕಛೇರಿಗಳಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ ಮತ್ತು ಇದರಿಂದಾಗಿ ಸಚಿವಾಲಯಕ್ಕೆ ಸಂಪೂರ್ಣ ಹೊಸದರಂತೆ ಎರಡು, ಮೂರು ಮಹಡಿಗಳು, ಕಾರ್ಯ ನಿರ್ವಹಿಸುವುದಕ್ಕೆ ಲಭ್ಯವಾದಂತಾಗಿವೆ. ಈ ಸ್ವಚ್ಛತೆಯ ಕಾರಣದಿಂದಾಗಿ, ನಮ್ಮ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಅನುಭವ ನಮಗೆ ದೊರೆಯುತ್ತಿದೆ. ಸಮಾಜದಲ್ಲಿ, ಗ್ರಾಮಗಳಲ್ಲಿ, ನಗರಗಳಲ್ಲಿ ಕೂಡಾ, ಅಂತೆಯೇ ಕಛೇರಿಗಳಲ್ಲಿ ಕೂಡಾ ಈ ಅಭಿಯಾನವು ದೇಶಕ್ಕಾಗಿ ಪ್ರತಿಯೊಂದು ರೀತಿಯಲ್ಲಿಯೂ ಉಪಯುಕ್ತವೆಂದು ಸಾಬೀತಾಗುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಕಲೆ-ಸಂಸ್ಕೃತಿಯ ಕುರಿತು ಒಂದು ಹೊಸ ಅರಿವು ಮೂಡುತ್ತಿದೆ, ಒಂದು ಹೊಸ ಚೈತನ್ಯ ಜಾಗೃತವಾಗುತ್ತಿದೆ. ‘ಮನದ ಮಾತಿ’ ನಲ್ಲಿ, ನಾವು ಇಂತಹ ಉದಾಹರಣೆಗಳ ಬಗ್ಗೆ ಕೂಡಾ ಮಾತನಾಡುತ್ತಿರುತ್ತೇವೆ. ಯಾವರೀತಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಸಾಮೂಹಿಕ ಬಂಡವಾಳವಾಗಿದೆಯೋ ಅದೇ ರೀತಿ ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಕೂಡಾ ಸಮಾಜಕ್ಕೆ ಇರುತ್ತದೆ. ಇಂತಹ ಒಂದು ಯಶಸ್ವೀ ಪ್ರಯತ್ನ ಲಕ್ಷದ್ವೀಪದಲ್ಲಿ ನಡೆಯುತ್ತಿದೆ. ಇಲ್ಲಿ ‘ಕಲ್ಪೆನಿ’ ದ್ವೀಪದಲ್ಲಿ ಒಂದು ಕ್ಲಬ್ ಇದೆ – ಅದರ ಹೆಸರು ‘ಕೂಮೇಲ್ ಬ್ರದರ್ಸ್ ಛಾಲೆಂಜರ್ಸ್ ಕ್ಲಬ್’. ಸ್ಥಳೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸುವುದಕ್ಕೆ ಯುವಜನತೆಗೆ ಈ ಕ್ಲಬ್ ಪ್ರೇರೇಪಿಸುತ್ತದೆ. ಇಲ್ಲಿ ಸ್ಥಳೀಯ ಕಲೆ ‘ಕೊಲ್ ಕಲಿ’, ‘ಪರೀಚಾಕಲೀ’, ‘ಕಿಲಿಪ್ಪಾಟ್’ ಮತ್ತು ಸಾಂಪ್ರದಾಯಿಕ ಹಾಡುಗಳ ಬಗ್ಗೆ ಯುವಜನತೆಗೆ ತರಬೇತಿ ಕೂಡಾ ನೀಡಲಾಗುತ್ತದೆ. ಅಂದರೆ, ಪ್ರಾಚೀನ ಪರಂಪರೆ, ಹೊಸ ಪೀಳಿಗೆಯ ಕೈಯಲ್ಲಿ ಸುರಕ್ಷಿತವಾಗುತ್ತಿದೆ, ಮುಂದುವರಿಯುತ್ತಿದೆ ಮತ್ತು ಸ್ನೇಹಿತರೆ, ಇಂತಹ ಪ್ರಯತ್ನಗಳು ಕೇವಲ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡಾ ನಡೆಯುತ್ತಿರುವುದು ನನಗೆ ಬಹಳ ಸಂತೋಷದ ವಿಷಯವೆನಿಸಿದೆ. ಇತ್ತೀಚೆಗೆ ದುಬೈನ ‘ಕಲಾರಿ’ ಕ್ಲಬ್, ‘ಗಿನ್ನೀಸ್ ವಿಶ್ವ ದಾಖಲೆಯ ಪುಸ್ತಕ’ದಲ್ಲಿ ಹೆಸರು ನೋಂದಾಯಿಸಿದೆ ಎಂದು ಅಲ್ಲಿಂದ ಸುದ್ದಿ ಬಂದಿದೆ. ದುಬೈನ ಕ್ಲಬ್ ದಾಖಲೆ ಸಾಧಿಸಿದರೆ ಅದರಲ್ಲಿ ಭಾರತಕ್ಕೆ ಏನು ಸಂಬಂಧ? ಎಂದು ಯಾರಿಗಾದರೂ ಅನಿಸಬಹುದು. ವಾಸ್ತವದಲ್ಲಿ ಈ ದಾಖಲೆ, ಭಾರತದ ಪ್ರಾಚೀನ ಸಮರ ಕಲೆ ‘ಕಲರೀಪಯಟ್’ ನೊಂದಿಗೆ ಸಂಬಂಧ ಹೊಂದಿದೆ. ಒಟ್ಟಿಗೆ ಅನೇಕ ಮಂದಿ ಸೇರಿ ಮಾಡಿದ ಕಲರಿ ಪ್ರದರ್ಶನದ ದಾಖಲೆ ಇದಾಗಿದೆ. ‘ದುಬೈ ಕಲಾರಿ ಕ್ಲಬ್’, ದುಬೈ ಪೊಲೀಸರೊಡಗೂಡಿ ಈ ಯೋಜನೆ ಸಿದ್ಧಪಡಿಸಿತ್ತು ಮತ್ತು ಯುಎಇ ನ ರಾಷ್ಟ್ರೀಯ ದಿನದಂದು ಪ್ರದರ್ಶಿಸಲಾಯಿತು. ಈ ಆಯೋಜನೆಯಲ್ಲಿ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು 60 ವರ್ಷ ವಯೋಮಾನದವರೆಗಿನವರು ‘ಕಲಾರಿ’ ಕಲೆಯಲ್ಲಿ ತಮ್ಮ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಬೇರೆ ಬೇರೆ ಪೀಳಿಗೆಗಳು ಯಾವ ರೀತಿ ಒಂದು ಪ್ರಾಚೀನ ಪರಂಪರೆಯನ್ನು ಮುಂದುರಿಸಿಕೊಂಡು ಹೋಗುತ್ತಿವೆ, ಸಂಪೂರ್ಣ ಉತ್ಸಾಹದಿಂದ ಮುನ್ನಡೆಸಿಕೊಂಡು ಹೋಗುತ್ತಿವೆ ಎನ್ನುವುದಕ್ಕೆ ಇದೊಂದು ಅದ್ಭುತ ಉದಾಹರಣೆಯಾಗಿದೆ.
ಸ್ನೇಹಿತರೇ, ‘ಮನದ ಮಾತಿ’ ನ ಶ್ರೋತೃಗಳಿಗೆ ನಾನು ಕರ್ನಾಟಕದ ಗದಗ ಜಿಲ್ಲೆಯ ನಿವಾಸಿ ಕ್ವೇಮ್ ಶ್ರೀ ಅವರ ಬಗ್ಗೆ ಹೇಳಲು ಬಯಸುತ್ತೇನೆ. ಕ್ವೇಮ್ ಶ್ರೀ ಅವರು ದಕ್ಷಿಣ ಭಾರತದಲ್ಲಿ ಕರ್ನಾಟಕದ ಕಲಾ-ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಅಭಿಯಾನದಲ್ಲಿ ಕಳೆದ 25 ವರ್ಷಗಳಿಂದ ಸತತವಾಗಿ ತೊಡಗಿಕೊಂಡಿದ್ದಾರೆ. ಅವರ ಈ ತಪಸ್ಸು ಎಷ್ಟೊಂದು ದೊಡ್ಡದೆಂದು ನೀವು ಊಹಿಸಬಹುದು. ಮೊದಲು ಅವರು ಹೊಟೇಲ್ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಆದರೆ, ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅವರಿಗೆ ಆಳವಾದ ಬಾಂಧವ್ಯ ಎಷ್ಟಿತ್ತೆಂದರೆ, ಅವರು ಇದನ್ನು ತಮ್ಮ ಧ್ಯೇಯವಾಗಿಸಿಕೊಂಡರು. ಅವರು ‘ಕಲಾ ಚೇತನ’ ಎಂಬ ಹೆಸರಿನ ಒಂದು ವೇದಿಕೆ ಸಿದ್ಧಪಡಿಸಿದರು. ಈ ವೇದಿಕೆ ಇಂದು, ಕರ್ನಾಟಕದ, ಮತ್ತು ದೇಶ-ವಿದೇಶದ ಕಲಾವಿದರ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದರಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕಾಗಿ ಅನೇಕ ನವೀನ ಆವಿಷ್ಕಾರಕ ಕೆಲಸ ಕಾರ್ಯಗಳು ಕೂಡಾ ಒಳಗೊಂಡಿರುತ್ತವೆ.
ಸ್ನೇಹಿತರೇ, ನಮ್ಮ ಕಲೆ-ಸಂಸ್ಕೃತಿಯ ಬಗ್ಗೆ ದೇಶವಾಸಿಗಳ ಈ ಉತ್ಸಾಹವು, ‘ನಮ್ಮ ಪರಂಪರೆಯ ಕುರಿತು ಹೆಮ್ಮೆಯ’ ಭಾವನೆಯ ದ್ಯೋತಕವೇ ಆಗಿದೆ. ನಮ್ಮ ದೇಶದಲ್ಲಂತೂ, ಪ್ರತಿಯೊಂದು ಮೂಲೆಯಲ್ಲೂ ಇಂತಹ ಅದೆಷ್ಟೊಂದು ಬಣ್ಣಗಳು ಹರಡಿವೆ. ಇವುಗಳನ್ನು ಅಲಂಕರಿಸಲು, ಸಂರಕ್ಷಿಸಲು ನಾವೆಲ್ಲರೂ ಸತತವಾಗಿ ಕೆಲಸ ಮಾಡಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಅನೇಕ ಪ್ರದೇಶಗಳಲ್ಲಿ ಬಿದಿರಿನಿಂದ ಅನೇಕ ಸುಂದರ ಮತ್ತು ಉಪಯುಕ್ತ ವಸ್ತುಗಳನ್ನು ತಯಾರಿಸಲಾಗುತ್ತದೆ. ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಬಿದಿರಿನ ವಸ್ತುಗಳನ್ನು ತಯಾರಿಸುವ ಕುಶಲಕರ್ಮಿಗಳು, ನುರಿತ ಕಲೆಗಾರರಿದ್ದಾರೆ. ಬಿದಿರಿಗೆ ಸಂಬಂಧಿಸಿದ, ಬ್ರಿಟಿಷರ ಕಾಲದ ಕಾನೂನನ್ನು ದೇಶ ಬದಲಾವಣೆ ಮಾಡಿದ ನಂತರ, ಬಿದಿರಿನ ದೊಡ್ಡ ಮಾರುಕಟ್ಟೆಯೇ ಸಿದ್ಧವಾಗಿಬಿಟ್ಟಿತು. ಮಹಾರಾಷ್ಟ್ರದ ಪಾಲ್ಘರ್ ನಂತಹ ಪ್ರದೇಶದಲ್ಲಿ ಕೂಡಾ ಬುಡಕಟ್ಟು ಸಮಾಜದ ಜನರು ಬಿದಿರಿನಿಂದ ಅನೇಕ ಸುಂದರ, ಆಕರ್ಷಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಿದಿರಿನಿಂದ ತಯಾರಿಸಲಾಗುವ ಪೆಟ್ಟಿಗೆಗಳು, ಕುರ್ಚಿ, ಚಹಾದಾನಿ, ಬುಟ್ಟಿಗಳು ಮತ್ತು ಟ್ರೇ ಇತ್ಯಾದಿ ವಸ್ತುಗಳು ಬಹಳ ಜನಪ್ರಿಯವಾಗುತ್ತಿವೆ. ಅಷ್ಟೇ ಅಲ್ಲ, ಈ ಜನರು, ಬಿದಿರಿನ ಹುಲ್ಲಿನಿಂದ ಸುಂದರ ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳನ್ನು ಕೂಡಾ ತಯಾರಿಸುತ್ತಾರೆ. ಇದರಿಂದಾಗಿ ಬುಡಕಟ್ಟು ಮಹಿಳೆಯರಿಗೆ ಜೀವನೋಪಾಯವೂ ದೊರೆಯುತ್ತಿದೆ, ಹಾಗೆಯೇ ಅವರ ಕೌಶಲ್ಯಕ್ಕೆ ಮನ್ನಣೆಯೂ ದೊರೆಯುತ್ತಿದೆ.
ಸ್ನೇಹಿತರೇ, ಕರ್ನಾಟಕದ ಓರ್ವ ದಂಪತಿ ಅಡಿಕೆ ನಾರು ಅಥವಾ ಹಾಳೆಯಿಂದ ತಯಾರಿಸಲಾದ ಅನೇಕ ವಿಶಿಷ್ಠ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ. ಈ ದಂಪತಿಯೆಂದರೆ ಕರ್ನಾಟಕದ ಶಿವಮೊಗ್ಗ ನಿವಾಸಿಗಳಾದ ಶ್ರೀ ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಮೈಥಿಲಿ ಜೋಡಿ. ಇವರು ಅಡಿಕೆಯ ಹಾಳೆಯಿಂದ ಟ್ರೇ, ತಟ್ಟೆ ಮತ್ತು ಕೈ ಚೀಲದಿಂದ ಹಿಡಿದು, ಅನೇಕ ಅಲಂಕಾರಿಕ ವಸ್ತುಗಳನ್ನು ಕೂಡಾ ತಯಾರಿಸುತ್ತಾರೆ. ಇದೇ ಅಡಿಕೆ ಹಾಳೆಯಿಂದ ತಯಾರಿಸಲಾದ ಪಾದರಕ್ಷೆಗಳಿಗೆ ಕೂಡಾ ಈಗ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ತಯಾರಿಸುವ ಉತ್ಪನ್ನಗಳು ಈಗ ಲಂಡನ್ ಮತ್ತು ಯೂರೋಪ್ ನ ಇತರೆ ಮಾರುಕಟ್ಟೆಗಳಲ್ಲಿ ಕೂಡಾ ಮಾರಾಟವಾಗುತ್ತಿದೆ. ಇದೇ ನಮ್ಮ ಪ್ರಾಕೃತಿಕ ಸಂಪನ್ಮೂಲಗಳ ಮತ್ತು ಸಾಂಪ್ರದಾಯಿಕ ಕೌಶಲ್ಯಗಳ ವೈಶಿಷ್ಟ್ಯವಾಗಿದ್ದು, ಎಲ್ಲರಿಗೂ ಮೆಚ್ಚುಗೆಯಾಗುತ್ತಿದೆ. ಭಾರತದ ಈ ಸಾಂಪ್ರದಾಯಿಕ ಅರಿವಿನಲ್ಲಿ ವಿಶ್ವ, ಸುಸ್ಥಿರ ಭವಿಷ್ಯದ ಹಾದಿಯನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ನಾವು ಸ್ವಯಂ ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯವಿದೆ. ನಾವು ಸ್ವಯಂ ಇಂತಹ ದೇಶೀಯ ಮತ್ತು ಸ್ಥಳೀಯ ಉತ್ಪನ್ನವನ್ನು ಉಪಯೋಗಿಸಬೇಕು ಮತ್ತು ಇತರರಿಗೆ ಕೂಡಾ ಇದನ್ನು ಉಡುಗೊರೆಯ ರೂಪದಲ್ಲಿ ನೀಡಬೇಕು. ಇದರಿಂದ ನಮ್ಮ ಗುರುತು ಬಲಿಷ್ಠವಾಗುತ್ತದೆ, ಸ್ಥಳೀಯ ಆರ್ಥಿಕತೆ ಬಲಿಷ್ಠವಾಗುತ್ತದೆ, ಮತ್ತು ದೊಡ್ಡ ಪ್ರಮಾಣದಲ್ಲಿ, ಜನರ ಭವಿಷ್ಯ ಕೂಡಾ ಉಜ್ವಲವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಕ್ರಮೇಣ ಮನದ ಮಾತಿನ 100 ನೇ ಸಂಚಿಕೆಯ ಅಭೂತಪೂರ್ವ ಮೈಲುಗಲ್ಲಿನ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇವೆ. ನನಗೆ ದೇಶವಾಸಿಗಳಲ್ಲಿ ಅನೇಕರಿಂದ ಪತ್ರಗಳು ಬಂದಿವೆ, ಇದರಲ್ಲಿ ಅವರು 100 ನೇ ಸಂಚಿಕೆಯ ಕುರಿತು ಹೆಚ್ಚಿನ ಕುತೂಹಲ ವ್ಯಕ್ತಪಡಿಸಿದ್ದಾರೆ. 100 ನೇ ಸಂಚಿಕೆಯಲ್ಲಿ ನಾವು ಯಾವ ವಿಷಯ ಕುರಿತು ಮಾತನಾಡಬೇಕು, ಅದನ್ನು ಯಾವರೀತಿ ವಿಶೇಷವಾಗಿಸಬಹುದು, ಇವುಗಳ ಬಗ್ಗೆ ನೀವು ನನಗೆ ಸಲಹೆ, ಅಭಿಪ್ರಾಯ ಕಳುಹಿಸಿಕೊಟ್ಟಲ್ಲಿ, ನನಗೆ ಬಹಳ ಸಂತೋಷವಾಗುತ್ತದೆ. ಮುಂದಿನಬಾರಿ ನಾವು ಹೊಸ ವರ್ಷ 2023 ರಲ್ಲಿ ಭೇಟಿಯಾಗೋಣ. ನಿಮ್ಮೆಲ್ಲರಿಗೂ 2023 ರ ವರ್ಷಕ್ಕಾಗಿ ನಾನು ಶುಭಾಶಯ ಕೋರುತ್ತೇನೆ. ಈ ವರ್ಷ ಕೂಡಾ ದೇಶಕ್ಕೆ ವಿಶೇಷವೆನಿಸಲಿ, ದೇಶ ಮತ್ತಷ್ಟು ಎತ್ತರಗಳನ್ನು ಮುಟ್ಟಲಿ, ಇದಕ್ಕಾಗಿ ನಾವೆಲ್ಲರೂ ಸಂಕಲ್ಪವನ್ನೂ ಮಾಡಬೇಕು, ಸಾಕಾರಗೊಳಿಸಲೂ ಬೇಕು. ಈಗ ಬಹುತೇಕ ಜನರು ರಜಾದಿನಗಳ ಮೂಡ್ ನಲ್ಲಿದ್ದಾರೆ. ನೀವೆಲ್ಲರೂ ಈ ರಜಾ ದಿನಗಳ, ಹಬ್ಬದ ಸಂದರ್ಭವನ್ನು ಸಂಪೂರ್ಣವಾಗಿ ಆನಂದಿಸಿ, ಆದರೆ, ಸ್ವಲ್ಪ ಜಾಗರೂಕರಾಗಿ ಕೂಡಾ ಇರಿ. ವಿಶ್ವದ ಅನೇಕ ದೇಶಗಳಲ್ಲಿ ಕೊರೋನಾ ಹೆಚ್ಚಾಗುತ್ತಿದೆ, ಆದ್ದರಿಂದ ನಾವು ಮುಖ ಗವುಸು ಧರಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವಂತಹ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ನಾವು ಎಚ್ಚರಿಕೆಯಿಂದ ಇದ್ದಲ್ಲಿ ಸುರಕ್ಷಿತವಾಗಿ ಇರಬಹುದು. ಆಗ ನಮ್ಮ ಸಂತೋಷಕ್ಕೆ ಯಾವುದೇ ಅಡಚಣೆ ಕೂಡಾ ಉಂಟಾಗುವುದಿಲ್ಲ. ಇದರೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಶುಭಹಾರೈಕೆಗಳು. ಅನೇಕಾನೇಕ ಧನ್ಯವಾದ, ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. 'ಮನದ ಮಾತಿಗೆ' ನಿಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ. ಈ ಕಾರ್ಯಕ್ರಮವು 95 ನೇ ಸಂಚಿಕೆಯಾಗಿದೆ. ನಾವು 'ಮನದ ಮಾತಿನ’ ಶತಕದತ್ತ ಬಹು ವೇಗವಾಗಿ ಸಾಗುತ್ತಿದ್ದೇವೆ. ಈ ಕಾರ್ಯಕ್ರಮವು 130 ಕೋಟಿ ದೇಶವಾಸಿಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಮತ್ತೊಂದು ಮಾಧ್ಯಮವಾಗಿದೆ. ಪ್ರತಿ ಸಂಚಿಕೆಗೂ ಮುನ್ನ ಗ್ರಾಮಗಳು-ನಗರಗಳಿಂದ ಬರುವ ಸಾಕಷ್ಟು ಪತ್ರಗಳನ್ನು ಓದುವುದು, ಮಕ್ಕಳಿಂದ ಹಿರಿಯರವರೆಗೆ ಆಡಿಯೋ ಸಂದೇಶಗಳನ್ನು ಕೇಳುವುದು ನನಗೆ ಒಂದು ಆಧ್ಯಾತ್ಮಿಕ ಅನುಭವದಂತಿದೆ.
ಸ್ನೇಹಿತರೇ, ನಾನು ಇಂದಿನ ಕಾರ್ಯಕ್ರಮವನ್ನು ಒಂದು ಅನನ್ಯವಾದ ಉಡುಗೊರೆಯ ಕುರಿತ ಚರ್ಚೆಯೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಯೆಲ್ದಿ ಹರಿಪ್ರಸಾದ್ ಎಂಬ ಒಬ್ಬ ನೇಕಾರ ಸೋದರನಿದ್ದಾನೆ. ಅವರು ತಮ್ಮ ಕೈಯಿಂದಲೇ ನೇಯ್ದ G-20 ಲೋಗೋವನ್ನು ನನಗೆ ಕಳುಹಿಸಿದ್ದಾರೆ. ಈ ಅದ್ಭುತ ಉಡುಗೊರೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಹರಿಪ್ರಸಾದ್ ಜಿ ತಮ್ಮ ಕಲೆಯಲ್ಲಿ ಎಷ್ಟು ನಿಪುಣರಾಗಿದ್ದಾರೆಂದರೆ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಹರಿಪ್ರಸಾದ್ ಜಿ ಅವರು ಕೈಯಿಂದ ನೇಯ್ದ ಜಿ-20 ಲೋಗೋದ ಜೊತೆಗೆ ನನಗೆ ಪತ್ರವೊಂದನ್ನೂ ಕಳುಹಿಸಿದ್ದಾರೆ. ಇದರಲ್ಲಿ ಅವರು ಮುಂದಿನ ವರ್ಷ ಜಿ-20 ಶೃಂಗಸಭೆಯನ್ನು ಆಯೋಜಿಸುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ಬರೆದಿದ್ದಾರೆ. ದೇಶ ಈ ಸಾಧನೆಗೈಯ್ದ ಖುಷಿಯಲ್ಲಿ ತಮ್ಮ ಕೈಯಿಂದಲೇ ಜಿ-20 ಲೋಗೋ ಸಿದ್ಧಪಡಿಸಿದ್ದಾರೆ. ನೇಯ್ಗೆಯ ಈ ಅದ್ಭುತ ಪ್ರತಿಭೆ ಅವರಿಗೆ ತಂದೆಯಿಂದ ಪರಂಪರಾಗತ ಕೊಡುಗೆಯ ರೂಪದಲ್ಲಿ ದೊರೆತಿದೆ. ಇಂದು ಅವರು ಸಂಪೂರ್ಣ ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ನೇಹಿತರೇ, ಕೆಲ ದಿನಗಳ ಹಿಂದೆಯಷ್ಟೇ ನನಗೆ G-20 ಲಾಂಛನ ಮತ್ತು ಭಾರತದ ಪ್ರೆಸಿಡೆನ್ಸಿಯ ವೆಬ್ಸೈಟ್ ಅನ್ನು ಬಿಡುಗಡೆ ಮಾಡುವ ಸದವಕಾಶ ಲಭಿಸಿತ್ತು. ಈ ಲೋಗೋವನ್ನು ಸಾರ್ವಜನಿಕ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗಿದೆ. ಹರಿಪ್ರಸಾದ್ ಅವರಿಂದ ನನಗೆ ಈ ಉಡುಗೊರೆ ಲಭಿಸಿದಾಗ ನನ್ನ ಮನಸ್ಸಿನಲ್ಲಿ ಮತ್ತೊಂದು ಆಲೋಚನೆ ಮೂಡಿತು. ತೆಲಂಗಾಣದ ಜಿಲ್ಲೆಯಲ್ಲಿ ಕುಳಿತ ಒಬ್ಬ ವ್ಯಕ್ತಿಯು ಜಿ-20 ಶೃಂಗಸಭೆಯೊಂದಿಗೆ ತನ್ನನ್ನು ತಾನು ಹೇಗೆ ಕನೆಕ್ಟ್ ಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಇಂದು ಹರಿಪ್ರಸಾದ್ ಅವರಂತಹ ಅನೇಕರು ನನಗೆ ಪತ್ರ ಬರೆದು ದೇಶ ಇಷ್ಟು ಬೃಹತ್ ಶೃಂಗಸಭೆಯನ್ನು ಆಯೋಜಿಸಿತ್ತಿರುವುದು ತಮಗೆ ಬಹಳ ಹೆಮ್ಮೆಯ ವಿಷಯವೆನಿಸಿದೆ ಎಂದು ಹೇಳಿದ್ದಾರೆ. ಪುಣೆಯ ಸುಬ್ಬರಾವ್ ಚಿಲ್ಲಾರಾ ಅವರು ಮತ್ತು ಕೋಲ್ಕತ್ತಾದಿಂದ ತುಷಾರ್ ಜಗಮೋಹನ್ ಅವರ ಸಂದೇಶಗಳ ಬಗ್ಗೆಯೂ ನಿಮ್ಮೊಂದಿಗೆ ಪ್ರಸ್ತಾಪಿಸಲಿದ್ದೇನೆ. G-20 ಗೆ ಸಂಬಂಧಿಸಿದಂತೆ ಭಾರತದ ಸಕ್ರಿಯ ಪ್ರಯತ್ನಗಳನ್ನು ಅವರು ಬಹಳ ಶ್ಲಾಘಿಸಿದ್ದಾರೆ.
ಸ್ನೇಹಿತರೇ, G-20 ವಿಶ್ವ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಪಾಲನ್ನು ಹೊಂದಿದೆ, ವಿಶ್ವ ವ್ಯಾಪಾರದಲ್ಲಿ ನಾಲ್ಕನೇ- ಮುಕ್ಕಾಲು ಪಾಲು ಮತ್ತು ವಿಶ್ವ ಜಿಡಿಪಿಯಲ್ಲಿ ಶೇ.85 ರಷ್ಟು ಪಾಲುದಾರಿಕೆಯನ್ನು ಹೊಂದಿದೆ. ಭಾರತವು ಇಂದಿನಿಂದ 3 ದಿನಗಳ ನಂತರ ಅಂದರೆ ಡಿಸೆಂಬರ್ 1 ರಿಂದ ಅಂತಹ ಬೃಹತ್ ಸಮೂಹದ, ಅಂತಹ ಸಮರ್ಥ ತಂಡದ ಅಧ್ಯಕ್ಷತೆ ವಹಿಸಲಿದೆ ಎಂದು ನೀವು ಊಹಿಸಬಹುದು. ಭಾರತಕ್ಕೆ, ಪ್ರತಿಯೊಬ್ಬ ಭಾರತೀಯನಿಗೆ ಇದು ಎಂತಹ ಅದ್ಭುತ ಅವಕಾಶವಲ್ಲವೇ. ಆಜಾದಿ ಕೆ ಅಮೃತ ಮಹೋತ್ಸವದಲ್ಲಿ ಭಾರತಕ್ಕೆ ಈ ಜವಾಬ್ದಾರಿ ದೊರೆತಿರುವುದು ಮತ್ತಷ್ಟು ವಿಶೇಷವೆನ್ನಿಸುತ್ತದೆ.
ಸ್ನೇಹಿತರೇ, ಜಿ-20 ಅಧ್ಯಕ್ಷತೆ ನಮಗೆ ಉತ್ತಮ ಅವಕಾಶವಾಗಿದೆ. ನಾವು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಮತ್ತು ಜಾಗತಿಕ ಒಳಿತಿಗಾಗಿ, ವಿಶ್ವ ಕಲ್ಯಾಣದತ್ತ ಗಮನ ಹರಿಸಬೇಕು. ಅದು ಶಾಂತಿಯಾಗಿರಲಿ ಅಥವಾ ಏಕತೆಯಾಗಿರಲಿ, ಪರಿಸರದ ಕುರಿತು ಸಂವೇದನಶೀಲತೆಯಾಗಿರಲಿ ಅಥವಾ ಸುಸ್ಥಿರ ಅಭಿವೃದ್ಧಿಯಾಗಿರಲಿ, ಇವುಗಳಿಗೆ ಸಂಬಂಧಿಸಿದ ಸವಾಲುಗಳಿಗೆ ಭಾರತ ಪರಿಹಾರಗಳನ್ನು ಹೊಂದಿದೆ. ನಾವು ನೀಡಿರುವ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ವಿಷಯ ವಸ್ತು ವಸುಧೈವ ಕುಟುಂಬಕಂ ಕುರಿತ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಾವು ಯಾವಾಗಲೂ ಹೇಳುತ್ತೇವೆ -
ಓಂ ಸರ್ವೇಶಾಂ ಸ್ವಸ್ಥಿರ್ ಭವತು
ಸರ್ವೇಶಾಂ ಶಾಂತಿರ್ ಭವತು
ಸರ್ವೇಶಾಂ ಪೂರ್ಣಮ್ ಭವತು
ಸರ್ವೇಶಾಂ ಮಂಗಳಂ ಭವತು
ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ ಎಲ್ಲರ ಕಲ್ಯಾಣವಾಗಲಿ, ಎಲ್ಲರಿಗೂ ಶಾಂತಿ ದೊರೆಯಲಿ, ಎಲ್ಲರಿಗೂ ಪರಿಪೂರ್ಣತೆ ದೊರೆಯಲಿ ಮತ್ತು ಎಲ್ಲರಿಗೂ ಶುಭವಾಗಲಿ. ಮುಂದಿನ ದಿನಗಳಲ್ಲಿ ಜಿ-20 ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ದೇಶದ ವಿವಿಧೆಡೆ ಆಯೋಜಿಸಲಾಗುವುದು. ಈ ಸಮಯದಲ್ಲಿ, ಪ್ರಪಂಚದ ವಿವಿಧ ಭಾಗಗಳ ಜನರು ನಿಮ್ಮ ರಾಜ್ಯಗಳಿಗೆ ಭೇಟಿ ನೀಡುವ ಅವಕಾಶವಿದೆ. ನಿಮ್ಮ ಸಂಸ್ಕೃತಿಯ ವೈವಿಧ್ಯಮಯ ಮತ್ತು ವಿಶಿಷ್ಟ ರೂಪಗಳನ್ನು ನೀವು ಜಗತ್ತಿಗೆ ಪ್ರದರ್ಶಿಸುತ್ತೀರಿ ಎಂದು ನನಗೆ ಭರವಸೆಯಿದೆ ಮತ್ತು ಈಗ ಜಿ -20 ಗೆ ಬರುವ ಜನರು ಒಬ್ಬ ಪ್ರತಿನಿಧಿಯಂತೆ ಬರಬಹುದು, ಆದರೆ ಅವರು ಭವಿಷ್ಯದ ಪ್ರವಾಸಿಗಳು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ನಿಮ್ಮೆಲ್ಲರಲ್ಲಿ ನನ್ನ ಒಂದು ವಿನಂತಿ. ಅದರಲ್ಲೂ ನನ್ನ ಯುವ ಸ್ನೇಹಿತರಲ್ಲಿ ವಿನಂತಿಸುವುದೇನೆಂದರೆ ಹರಿಪ್ರಸಾದ್ ಅವರಂತೆ ನೀವೂ ಒಂದಲ್ಲ ಒಂದು ರೀತಿಯಲ್ಲಿ ಜಿ-20 ಯೊಂದಿಗೆ ಜೋಡಿಸಿಕೊಳ್ಳಿ. G-20 ಭಾರತೀಯ ಲೋಗೋವನ್ನು ಬಟ್ಟೆಗಳ ಮೇಲೆ ತುಂಬಾ ಸುಂದರವಾಗಿ, ಸೊಗಸಾದ ರೀತಿಯಲ್ಲಿ ವಿನ್ಯಾಸಿಸಬಹುದು ಮತ್ತು ಮುದ್ರಿಸಬಹುದು. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲೂ ತಮ್ಮ ಆವರಣಗಳಲ್ಲಿ G-20 ಗೆ ಸಂಬಂಧಿಸಿದ ಚರ್ಚೆಗಳು ಮತ್ತು ಸ್ಪರ್ಧೆಗಳಿಗೆ ಅವಕಾಶಗಳನ್ನು ಸೃಷ್ಟಿಸುವಂತೆ ನಾನು ಆಗ್ರಹಿಸುತ್ತೇನೆ. ನೀವು G20.in ವೆಬ್ಸೈಟ್ಗೆ ಹೋದರೆ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಅನೇಕ ವಿಷಯಗಳು ಕಾಣಬಹುದು.
ನನ್ನ ಪ್ರೀತಿಯ ದೇಶವಾಸಿಗಳೇ, ನವೆಂಬರ್ 18 ರಂದು ಇಡೀ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಕ್ಕೆ ಸಾಕ್ಷಿಯಾಗಿದೆ. ಈ ದಿನ, ಭಾರತವು ತನ್ನ ಮೊದಲ ಭಾರತದ ಖಾಸಗಿ ವಲಯದಿಂದ ವಿನ್ಯಾಸಗೊಳಿಸಿ ಸಿದ್ಧಪಡಿಸಲಾದ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಈ ರಾಕೆಟ್ನ ಹೆಸರು - 'ವಿಕ್ರಮ್-ಎಸ್'. ಸ್ವದೇಶಿ ಬಾಹ್ಯಾಕಾಶ ಸ್ಟಾರ್ಟ್ ಅಪ್ ನ ಈ ಮೊದಲ ರಾಕೆಟ್ ಶ್ರೀಹರಿಕೋಟಾದಿಂದ ಐತಿಹಾಸಿಕ ಹಾರಾಟವನ್ನು ಮಾಡಿದ ತಕ್ಷಣ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಬೀಗಿದನು.
ಸ್ನೇಹಿತರೇ, 'ವಿಕ್ರಮ್-ಎಸ್' ರಾಕೆಟ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಇತರ ರಾಕೆಟ್ಗಳಿಗಿಂತ ಹಗುರವಾಗಿದೆ ಮತ್ತು ಅಗ್ಗವಾಗಿದೆ. ಇದರ ಅಭಿವೃದ್ಧಿ ವೆಚ್ಚವು ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತೊಡಗಿರುವ ಇತರ ದೇಶಗಳ ವೆಚ್ಚಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಕಡಿಮೆ ವೆಚ್ಚದಲ್ಲಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವಿಶ್ವ ದರ್ಜೆಯ ಗುಣಮಟ್ಟ ಎಂಬುದು ಭಾರತದ ಹೆಗ್ಗುರುತಾಗಿದೆ. ಈ ರಾಕೆಟ್ ತಯಾರಿಕೆಯಲ್ಲಿ ಮತ್ತೊಂದು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ರಾಕೆಟ್ ನ ಕೆಲವು ಪ್ರಮುಖ ಭಾಗಗಳನ್ನು 3D ಪ್ರಿಂಟಿಂಗ್ ಮೂಲಕ ತಯಾರಿಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವೆನಿಸಬಹುದು. ವಾಸ್ತವವಾಗಿ, 'ವಿಕ್ರಮ್-ಎಸ್' ಉಡಾವಣಾ ಮಿಷನ್ ಗೆ ನೀಡಲಾದ 'ಪ್ರಾರಂಭ' ಎಂಬ ಹೆಸರು ಅತ್ಯಂತ ಸೂಕ್ತವೆನ್ನಿಸುತ್ತದೆ. ಇದು ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಯುಗದ ಉದಯಕ್ಕೆ ಪ್ರತೀಕದಂತಿದೆ. ಇದು ದೇಶದಲ್ಲಿ ಆತ್ಮವಿಶ್ವಾಸದಿಂದ ತುಂಬಿದ ಹೊಸ ಯುಗಕ್ಕೆ ನಾಂದಿಯಾಗಿದೆ. ಒಂದು ಕಾಲದಲ್ಲಿ ಕಾಗದದ ವಿಮಾನವನ್ನು ಕೈಯಿಂದ ಹಾರಿಸುತ್ತಿದ್ದ ಮಕ್ಕಳು ಈಗ ಭಾರತದಲ್ಲಿಯೇ ವಿಮಾನಗಳನ್ನು ತಯಾರಿಸುವ ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ನೀವು ಊಹಿಸಬಹುದೇ? ಒಂದು ಕಾಲದಲ್ಲಿ ಚಂದ್ರ, ನಕ್ಷತ್ರಗಳನ್ನು ನೋಡುತ್ತಾ ಆಕಾಶದಲ್ಲಿ ಆಕೃತಿಗಳನ್ನು ಬಿಡಿಸುತ್ತಿದ್ದ ಮಕ್ಕಳಿಗೆ ಈಗ ಭಾರತದಲ್ಲಿಯೇ ರಾಕೆಟ್ ತಯಾರಿಸುವ ಅವಕಾಶ ಲಭಿಸುತ್ತಿದೆ ಎಂದು ನೀವು ಕಲ್ಪಿಸಬಹುದು! ಬಾಹ್ಯಾಕಾಶವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ನಂತರ ಯುವಕರ ಈ ಕನಸುಗಳೂ ನನಸಾಗುತ್ತಿವೆ. ರಾಕೆಟ್ ತಯಾರಿಸುವ ಈ ಯುವಕರು – ‘ಸ್ಕೈ ಈಸ್ ನಾಟ್ ದಿ ಲಿಮಿಟ್’ ಎಂದು ಹೇಳುತ್ತಿದ್ದಾರೆ.
ಸ್ನೇಹಿತರೇ, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಯಶಸ್ಸನ್ನು ತನ್ನ ನೆರೆಯ ರಾಷ್ಟ್ರಗಳೊಂದಿಗೂ ಹಂಚಿಕೊಳ್ಳುತ್ತಿದೆ. ನಿನ್ನೆಯಷ್ಟೇ ಭಾರತ ಒಂದು ಉಪಗ್ರಹವನ್ನು ಉಡಾವಣೆ ಮಾಡಿದ್ದು, ಇದನ್ನು ಭಾರತ ಮತ್ತು ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಉಪಗ್ರಹವು ಉತ್ತಮ ರೆಸಲ್ಯೂಶನ್ ಚಿತ್ರಗಳನ್ನು ಕಳುಹಿಸುತ್ತದೆ, ಇದು ಭೂತಾನ್ ಗೆ ತನ್ನ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಈ ಉಪಗ್ರಹದ ಉಡಾವಣೆಯು ಬಲವಾದ ಭಾರತ-ಭೂತಾನ್ ನ ಬಲವಾದ ಸಂಬಂಧದ ಪ್ರತಿಬಿಂಬವಾಗಿದೆ.
ಸ್ನೇಹಿತರೇ, ಕಳೆದ ಕೆಲವು 'ಮನದ ಮಾತಿ' ನಲ್ಲಿ ನಾವು ಬಾಹ್ಯಾಕಾಶ, ತಂತ್ರಜ್ಞಾನ, ನಾವೀನ್ಯಗಳ ಬಗ್ಗೆ ಬಹಳಷ್ಟು ಮಾತನಾಡಿರುವುದನ್ನು ನೀವು ಗಮನಿಸಿರಬೇಕು. ಇದಕ್ಕೆ ಎರಡು ವಿಶೇಷ ಕಾರಣಗಳಿವೆ, ಒಂದು ನಮ್ಮ ಯುವಕರು ಈ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. They are thinking big and achieving big. ಈಗ ಅವರು ಸಣ್ಣ ಸಣ್ಣ ಸಾಧನೆಗಳಿಂದ ತೃಪ್ತರಾಗುವುದಿಲ್ಲ. ಎರಡನೆಯದಾಗಿ, ನಾವೀನ್ಯತೆ ಮತ್ತು ಮೌಲ್ಯ ಸೃಷ್ಟಿಯ ಈ ರೋಮಾಂಚಕಾರಿ ಪಯಣದಲ್ಲಿ, ಅವರು ತಮ್ಮ ಇತರ ಯುವ ಸಹೋದ್ಯೋಗಿಗಳು ಮತ್ತು ಸ್ಟಾರ್ಟ್-ಅಪ್ಗಳನ್ನು ಸಹ ಪ್ರೋತ್ಸಾಹಿಸುತ್ತಿದ್ದಾರೆ.
ಸ್ನೇಹಿತರೇ, ನಾವು ತಂತ್ರಜ್ಞಾನಕ್ಕೆ ಸಂಬಂಧಿಸಿದ ಆವಿಷ್ಕಾರಗಳ ಬಗ್ಗೆ ಮಾತನಾಡುವಾಗ, ನಾವು ಡ್ರೋನ್ಗಳನ್ನು ಮರೆಯಲಾಗದು. ಡ್ರೋನ್ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುಂದುವರಿಯುತ್ತಿದೆ. ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಡ್ರೋನ್ಗಳ ಮೂಲಕ ಸೇಬುಗಳನ್ನು ಹೇಗೆ ಸಾಗಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಕಿನ್ನೌರ್ ಹಿಮಾಚಲದ ದೂರದ ಜಿಲ್ಲೆಯಾಗಿದೆ ಮತ್ತು ಅಲ್ಲಿ ಈ ಋತುವಿನಲ್ಲಿ ಭಾರೀ ಹಿಮಪಾತವಾಗುತ್ತಿರುತ್ತದೆ. ಈ ಅತಿಯಾದ ಹಿಮಪಾತದಿಂದ, ರಾಜ್ಯದ ಇತರ ಭಾಗಗಳೊಂದಿಗೆ ಕಿನ್ನೌರ್ನ ಸಂಪರ್ಕವು ವಾರಗಟ್ಟಲೆ ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಲ್ಲಿಂದ ಸೇಬುಗಳ ಸಾಗಣೆಯು ಅಷ್ಟೇ ಕಷ್ಟಕರವಾಗಿದೆ. ಈಗ ಡ್ರೋನ್ ತಂತ್ರಜ್ಞಾನದ ಸಹಾಯದಿಂದ, ಹಿಮಾಚಲದ ರುಚಿಕರವಾದ ಕಿನ್ನೌರಿ ಸೇಬುಗಳು ಮತ್ತಷ್ಟು ಬೇಗ ಜನರನ್ನು ತಲುಪಲಾರಂಭಿಸಿವೆ. ಇದು ನಮ್ಮ ರೈತ ಸಹೋದರ ಸಹೋದರಿಯರ ವೆಚ್ಚವನ್ನು ಕಡಿಮೆ ಮಾಡುತ್ತದೆ - ಸೇಬುಗಳು ಸರಿಯಾದ ಸಮಯಕ್ಕೆ ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗುತ್ತದೆ, ಸೇಬುಗಳು ಹಾಳಾಗುವುದೂ ಕಡಿಮೆಯಾಗುತ್ತದೆ.
ಸ್ನೇಹಿತರೇ, ಇಂದು ನಮ್ಮ ದೇಶವಾಸಿಗಳು ತಮ್ಮ ಆವಿಷ್ಕಾರಗಳಿಂದ ಈ ಹಿಂದೆ ಊಹಿಸಲೂ ಸಾಧ್ಯವಾಗದಂತಹ ವಿಷಯಗಳನ್ನು ಸಾಧ್ಯವಾಗಿಸುತ್ತಿದ್ದಾರೆ. ಇದನ್ನು ನೋಡಿ ಯಾರಿಗೆ ಸಂತೋಷವಾಗುವುದಿಲ್ಲ? ಇತ್ತೀಚಿನ ವರ್ಷಗಳಲ್ಲಿ, ನಮ್ಮ ದೇಶವು ಸಾಕಷ್ಟು ಸಾಧನೆಗಳನ್ನು ಮಾಡಿದೆ. ನಾವು ಭಾರತೀಯರು ಮತ್ತು ವಿಶೇಷವಾಗಿ ನಮ್ಮ ಯುವ ಪೀಳಿಗೆಯು ಇಷ್ಟಕ್ಕೇ ನಿಲ್ಲುವುದಿಲ್ಲ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ.
ಆತ್ಮೀಯ ದೇಶವಾಸಿಗಳೇ, ನಾನು ನಿಮಗಾಗಿ ಒಂದು ಚಿಕ್ಕ ಕ್ಲಿಪ್ ಪ್ಲೇ ಮಾಡಲಿದ್ದೇನೆ..
##(Song)##
ನೀವೆಲ್ಲರೂ ಈ ಹಾಡನ್ನು ಎಂದಾದರೂ ಕೇಳಿರಬಹುದು. ಅಷ್ಟಕ್ಕೂ ಇದು ಬಾಪು ಅವರ ಅಚ್ಚುಮೆಚ್ಚಿನ ಹಾಡು ಆದರೆ ಇದನ್ನು ಹಾಡಿರುವ ಗಾಯಕರು ಗ್ರೀಸ್ ದೇಶದವರು ಎಂದು ಹೇಳಿದರೆ ಖಂಡಿತಾ ಆಶ್ಚರ್ಯಪಡುತ್ತೀರಿ! ಮತ್ತು ಈ ವಿಷಯವು ನಿಮಗೆ ಹೆಮ್ಮೆಯನ್ನು ತರುತ್ತದೆ. ಈ ಹಾಡನ್ನು ಗ್ರೀಸ್ ಗಾಯಕ - 'ಕಾನ್ ಸ್ಟಾಂಟಿನೋಸ್ ಕಲೈಟ್ಜಿಸ್' ಹಾಡಿದ್ದಾರೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರು ಇದನ್ನು ಹಾಡಿದ್ದರು. ಆದರೆ ಇಂದು ನಾನು ಬೇರೆ ಯಾವುದೋ ಕಾರಣಕ್ಕಾಗಿ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ಅವರು ಭಾರತ ಮತ್ತು ಭಾರತೀಯ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದಾರೆ. ಭಾರತದ ಬಗ್ಗೆ ಅವರು ಅದೆಷ್ಟು ಪ್ರೀತಿಯನ್ನು ಹೊಂದಿದ್ದಾರೆಂದರೆ, ಕಳೆದ 42 ವರ್ಷಗಳಲ್ಲಿ ಅವರು ಬಹುತೇಕ ಪ್ರತಿ ವರ್ಷ ಭಾರತಕ್ಕೆ ಬಂದಿದ್ದಾರೆ. ಅವರು ಭಾರತೀಯ ಸಂಗೀತದ ಮೂಲ, ವಿವಿಧ ಭಾರತೀಯ ಸಂಗೀತ ವ್ಯವಸ್ಥೆಗಳು, ವಿವಿಧ ರೀತಿಯ ರಾಗಗಳು, ತಾಳಗಳು ಮತ್ತು ರಸಗಳು ಮತ್ತು ವಿವಿಧ ಘರಾನಾಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ಭಾರತೀಯ ಸಂಗೀತದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಅಧ್ಯಯನ ಮಾಡಿದ್ದಾರೆ, ಅವರು ಭಾರತದ ಶಾಸ್ತ್ರೀಯ ನೃತ್ಯಗಳ ವಿವಿಧ ಮಗ್ಗುಲುಗಳನ್ನು ಸಹ ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿದ್ದಾರೆ. ಈಗ ಅವರು ಭಾರತಕ್ಕೆ ಸಂಬಂಧಿಸಿದ ಈ ಎಲ್ಲ ಅನುಭವಗಳನ್ನು ಪುಸ್ತಕದಲ್ಲಿ ಬಹಳ ಸುಂದರವಾಗಿ ಜೋಡಿಸಿದ್ದಾರೆ. ಭಾರತೀಯ ಸಂಗೀತ ಎಂಬ ಅವರ ಪುಸ್ತಕದಲ್ಲಿ ಸುಮಾರು 760 ಚಿತ್ರಗಳಿವೆ. ಈ ಹೆಚ್ಚಿನ ಛಾಯಾಚಿತ್ರಗಳನ್ನು ಅವರೇ ತೆಗೆದಿದ್ದಾರೆ. ಇತರ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ಇಂತಹ ಉತ್ಸಾಹ ಮತ್ತು ಆಕರ್ಷಣೆ ನಿಜವಾಗಿಯೂ ಹೃದಯ ತುಂಬುವಂತದ್ದಾಗಿದೆ.
ಸ್ನೇಹಿತರೇ, ಕೆಲವು ವಾರಗಳ ಹಿಂದೆ ಮತ್ತೊಂದು ಸುದ್ದಿ ಬಂದಿತ್ತು ಅದು ಕೂಡ ನಮಗೆ ಹೆಮ್ಮೆಯನ್ನು ತುಂಬುವಂಥದ್ದು. ಕಳೆದ 8 ವರ್ಷಗಳಲ್ಲಿ ಭಾರತದಿಂದ ಸಂಗೀತ ಉಪಕರಣಗಳ ರಫ್ತು ಮೂರೂವರೆ ಪಟ್ಟು ಹೆಚ್ಚಾಗಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಎಲೆಕ್ಟ್ರಿಕಲ್ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ಗಳ ಬಗ್ಗೆ ಮಾತನಾಡುವುದಾದರೆ, ಅವುಗಳ ರಫ್ತು 60 ಪಟ್ಟು ಹೆಚ್ಚಾಗಿದೆ. ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿ ಮತ್ತು ಸಂಗೀತದ ವ್ಯಾಮೋಹ ಹೆಚ್ಚುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತೀಯ ಸಂಗೀತ ವಾದ್ಯಗಳ ದೊಡ್ಡ ಖರೀದಿದಾರರು ಅಮೇರಿಕ, ಜರ್ಮನಿ, ಫ್ರಾನ್ಸ್, ಜಪಾನ್ ಮತ್ತು ಬ್ರಿಟನ್ ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ . ನಮ್ಮ ದೇಶವು ಸಂಗೀತ, ನೃತ್ಯ ಮತ್ತು ಕಲೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವುದು ನಮ್ಮೆಲ್ಲರ ಸೌಭಾಗ್ಯ.
ಸ್ನೇಹಿತರೇ, ಮಹಾನ್ ಕವಿ ಭರ್ತೃಹರಿ ಅವರು ರಚಿಸಿರುವ ‘ನೀತಿ ಶತಕ’ದಿಂದಾಗಿ ನಮಗೆ ಚಿರಪರಿಚಿತರು. ಒಂದು ಶ್ಲೋಕದಲ್ಲಿ ಅವರು ಹೀಗೆನ್ನುತ್ತಾರೆ, ಕಲೆ, ಸಂಗೀತ ಮತ್ತು ಸಾಹಿತ್ಯದೊಂದಿಗೆ ನಮ್ಮ ಬಾಂಧವ್ಯವೇ ಮಾನವೀಯತೆಯ ನಿಜವಾದ ಗುರುತು ಎಂದು. ವಾಸ್ತವದಲ್ಲಿ, ನಮ್ಮ ಸಂಸ್ಕೃತಿ ಇದನ್ನು ಮಾನವೀಯತೆಗಿಂತ ಎತ್ತರಕ್ಕೆ ದೈವತ್ವಕ್ಕೆ ಕರೆದೊಯ್ಯುತ್ತದೆ. ವೇದಗಳಲ್ಲಿ ಸಾಮವೇದವನ್ನಂತೂ ನಮ್ಮ ವಿವಿಧ ಸಂಗೀತಗಳ ಮೂಲ ಎಂದೇ ಕರೆಯಲಾಗುತ್ತದೆ. ತಾಯಿ ಸರಸ್ವತಿಯ ವೀಣೆಯಾಗಿರಲಿ, ಭಗವಂತ ಶ್ರೀಕೃಷ್ಣನ ಕೊಳಲೇ ಆಗಿರಲಿ, ಅಥವಾ ಭೋಲೇನಾಥ ಶಿವನ ಢಮರುಗವೇ ಆಗಲಿ, ನಮ್ಮ ದೇವರು, ದೇವತೆಗಳು ಕೂಡಾ ಸಂಗೀತಕ್ಕಿಂತ ಭಿನ್ನವಾಗಿಲ್ಲ. ಭಾರತೀಯರಾದ ನಾವು, ಪ್ರತಿಯೊಂದರಲ್ಲೂ ಸಂಗೀತವನ್ನು ಕಾಣುತ್ತೇವೆ. ಅದು ನದಿಯ ಹರಿವಿನ ಕಲರವವಾಗಿರಲಿ, ಮಳೆ ನೀರಿನ ಹನಿ ಬೀಳುವ ಶಬ್ದವಾಗಿರಲಿ, ಪಕ್ಷಿಗಳ ಇಂಚರವಾಗಿರಲಿ, ಅಥವಾ ಬೀಸುವ ಗಾಳಿಯ ಧ್ವನಿಯೇ ಆಗಿರಲಿ, ನಮ್ಮ ನಾಗರಿಕತೆಯಲ್ಲಿ ಸಂಗೀತ ಎಲ್ಲೆಡೆ ಮಿಳಿತವಾಗಿದೆ. ಈ ಸಂಗೀತ ಕೇವಲ ನಮ್ಮ ಶರೀರಕ್ಕೆ ವಿಶ್ರಾಂತಿ ನೀಡುವುದು ಮಾತ್ರವಲ್ಲ, ಮನಸ್ಸಿಗೆ ಸಂತೋಷವನ್ನೂ ನೀಡುತ್ತದೆ. ಸಂಗೀತ ನಮ್ಮ ಸಮಾಜವನ್ನೂ ಬೆಸೆಯುತ್ತದೆ. ಭಾಂಗ್ಡಾ ಮತ್ತು ಲಾವಣಿ ಉತ್ಸಾಹ ಮತ್ತು ಸಂತೋಷ ನೀಡಿದರೆ ರವೀಂದ್ರ ಸಂಗೀತವು ನಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ದೇಶಾದ್ಯಂತ ಇರುವ ಬುಡಕಟ್ಟು ಜನಾಂಗದ ಆದಿವಾಸಿಗಳು ವಿಭಿನ್ನ ಸಂಗೀತ ಪರಂಪರೆಯನ್ನು ಹೊಂದಿದ್ದಾರೆ. ಪರಸ್ಪರ ಸಹಕಾರ ಮತ್ತು ಸಾಮರಸ್ಯದಿಂದ ಪ್ರಕೃತಿಯೊಂದಿಗೆ ಬಾಳುವ ಪ್ರೇರಣೆಯನ್ನು ಇವು ನಮಗೆ ನೀಡುತ್ತವೆ.
ಸ್ನೇಹಿತರೇ, ಸಂಗೀತದ ನಮ್ಮ ಪ್ರಕಾರಗಳು ಕೇವಲ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿರುವುದು ಮಾತ್ರವಲ್ಲದೇ, ವಿಶ್ವಾದ್ಯಂತ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಭಾರತೀಯ ಸಂಗೀತ ಖ್ಯಾತಿಯು ವಿಶ್ವದ ಮೂಲೆ ಮೂಲೆಗೂ ವ್ಯಾಪಿಸಿದೆ. ನಾನು ನಿಮಗೆ ಮತ್ತೊಂದು ಆಡಿಯೋ ಕ್ಲಿಪ್ ಕೇಳಿಸುತ್ತೇನೆ.
##(ಹಾಡು)##
ಮನೆಯ ಸಮೀಪ ಯಾವುದೋ ದೇವಾಲಯದಲ್ಲಿ ಭಜನೆ ಕೀರ್ತನೆ ನಡೆಯುತ್ತಿರಬಹುದೆಂದು ನೀವು ಯೋಚಿಸುತ್ತಿರಬಹುದು. ಆದರೆ ಈ ಸ್ವರ ಕೂಡಾ ಭಾರತದಿಂದ ಸಾವಿರಾರು ಕಿಲೋಮೀಟರ್ ದೂರವಿರುವ ದಕ್ಷಿಣ ಅಮೆರಿಕಾ ದೇಶದ ಗಯಾನದಿಂದ ಬಂದಿರುವುದಾಗಿದೆ. 19ನೇ ಮತ್ತು 20ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮದೇಶದವರು ಗಯಾನ ದೇಶಕ್ಕೆ ಹೋದರು. ಅವರು ತಮ್ಮೊಂದಿಗೆ ಭಾರತದ ಅನೇಕ ಸಂಪ್ರದಾಯಗಳನ್ನು ತೆಗೆದುಕೊಂಡು ಹೋದರು. ಉದಾಹರಣೆಗೆ ನಾವು ಭಾರತದಲ್ಲಿ ಯಾವರೀತಿ ಹೋಳಿ ಹಬ್ಬ ಆಚರಿಸುತ್ತೇವೆಯೋ, ಗಯಾನದಲ್ಲಿ ಕೂಡಾ ಹೋಳಿ ಹಬ್ಬದ ರಂಗಿನಾಚರಣೆ ನಡೆಯುತ್ತದೆ. ಎಲ್ಲಿ ಹೋಳಿ ಹಬ್ಬದ ಆಚರಣೆಯ ಸಂಭ್ರಮವಿರುತ್ತದೋ ಅಲ್ಲಿ ಫಗವಾ ಅಂದರೆ, ಫಗುವಾ ಸಂಗೀತವೂ ಇರುತ್ತದೆ. ಗಯಾನಾದ ಫಗುವಾದಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ವಿವಾಹದ ಹಾಡುಗಳನ್ನು ಹಾಡುವ ಒಂದು ವಿಶೇಷ ಸಂಪ್ರದಾಯವಿದೆ. ಈ ಹಾಡುಗಳನ್ನು ಚೌತಾಲ ಎಂದು ಕರೆಯುತ್ತಾರೆ. ನಮ್ಮಲ್ಲಿ ಹಾಡುವ ರಾಗ ಮತ್ತು ಎತ್ತರದ ಸ್ವರದಲ್ಲಿ ಅಲ್ಲಿ ಕೂಡಾ ಹಾಡಲಾಗುತ್ತದೆ. ಅಷ್ಟೇ ಅಲ್ಲದೆ, ಗಯಾನಾದಲ್ಲಿ ಚೌತಾಲ್ ಸ್ಪರ್ಧೆ ಕೂಡಾ ನಡೆಯುತ್ತದೆ. ಇದೇ ರೀತಿ ಅನೇಕ ಭಾರತೀಯರು, ವಿಶೇಷವಾಗಿ ಪೂರ್ವ ಉತ್ತರಪ್ರದೇಶದ ಮತ್ತು ಬಿಹಾರದ ಜನರು ಫಿಜಿ ದೇಶಕ್ಕೆ ಕೂಡಾ ಹೋಗಿದ್ದಾರೆ. ಅವರು ಸಾಂಪ್ರದಾಯಿಕ ಭಜನೆ-ಕೀರ್ತನೆಗಳನ್ನು ಹಾಡುತ್ತಿದ್ದರು, ಇವುಗಳಲ್ಲಿ ಮುಖ್ಯವಾಗಿ ರಾಮಚರಿತ ಮಾನಸದ ದ್ವಿಪದಿಗಳು ಇರುತ್ತಿದ್ದವು. ಅವರುಗಳ ಫಿಜಿ ದೇಶದಲ್ಲಿ ಕೂಡಾ ಭಜನೆ-ಕೀರ್ತನೆಗಳಿಗೆ ಸಂಬಂಧಿಸಿದ ಅನೇಕ ಮಂಡಳಿಗಳನ್ನು ಕೂಡಾ ಸ್ಥಾಪಿಸಿದರು. ಇಂದಿಗೂ ಫಿಜಿಯಲ್ಲಿ ರಾಮಾಯಣ ಮಂಡಳಿ ಹೆಸರಿನ ಎರಡು ಸಾವಿರಕ್ಕೂ ಅಧಿಕ ಭಜನೆ-ಕೀರ್ತನೆ ಮಂಡಳಿಗಳಿವೆ. ಇಂದು ಪ್ರತಿ ಗ್ರಾಮ-ಮೊಹಲ್ಲಾಗಳಲ್ಲಿ ಇವುಗಳನ್ನು ಕಾಣಬಹುದಾಗಿದೆ. ನಾನು ಇಲ್ಲಿ ಕೇವಲ ಕೆಲವೇ ಉದಾಹರಣೆಗಳನ್ನು ಕೊಟ್ಟಿದ್ದೇನೆ. ನೀವು ಇಡೀ ವಿಶ್ವದಲ್ಲಿ ನೋಡಿದರೆ, ಈ ಭಾರತೀಯ ಸಂಗೀತವನ್ನು ಇಷ್ಟಪಡುವವರ ಪಟ್ಟಿ ಬಹಳಷ್ಟು ದೊಡ್ಡದಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ನಮ್ಮ ದೇಶ ಪ್ರಪಂಚದಲ್ಲಿ ಎಲ್ಲಕ್ಕಿಂತ ಪ್ರಾಚೀನ ಸಂಪ್ರದಾಯಗಳ ನಿಲಯವಾಗಿದೆ ಎಂದು ಯಾವಾಗಲೂ ಹೆಮ್ಮೆ ಪಡುತ್ತೇವೆ. ಆದ್ದರಿಂದಲೇ, ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಉತ್ತೇಜಿಸುವುದು ಹಾಗೂ ಸಾಧ್ಯವಾದಷ್ಟೂ ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಇಂತಹ ಒಂದು ಪ್ರಶಂಸನೀಯ ಪ್ರಯತ್ನವನ್ನು ನಮ್ಮ ಈಶಾನ್ಯ ರಾಜ್ಯ ನಾಗಾಲ್ಯಾಂಡಿನ ಕೆಲವು ಸ್ನೇಹಿತರು ಮಾಡುತ್ತಿದ್ದಾರೆ. ಈ ಪ್ರಯತ್ನ ನನಗೆ ಬಹಳ ಇಷ್ಟವಾಯಿತು, ಹೀಗಾಗಿ ಈ ವಿಷಯವನ್ನು ಮನದ ಮಾತಿನ ಶ್ರೋತೃಗಳೊಂದಿಗೆ ಹಂಚಿಕೊಳ್ಳಬೇಕೆಂದು ಕೊಂಡೆ.
ಸ್ನೇಹಿತರೆ, ನಾಗಾಲ್ಯಾಂಡ್ ನಲ್ಲಿ ನಾಗಾ ಸಮಾಜದ ಜೀವನಶೈಲಿ, ಅವರ ಕಲೆ-ಸಂಸ್ಕೃತಿ ಮತ್ತು ಸಂಗೀತ, ಇವು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಇದು ನಮ್ಮ ದೇಶದ ಭವ್ಯ ಪರಂಪರೆಯ ಪ್ರಮುಖ ಭಾಗವಾಗಿದೆ. ನಾಗಾಲ್ಯಾಂಡ್ ನ ಜನರ ಜೀವನ ಮತ್ತು ಅವರ ನಿಪುಣತೆಗಳು, ಸುಸ್ಥಿರ ಜೀವನಶೈಲಿಗೆ ಕೂಡಾ ಬಹಳ ಮಹತ್ವವೆನಿಸಿವೆ. ಈ ಸಂಪ್ರದಾಯಗಳು ಮತ್ತು ನೈಪುಣ್ಯಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದಕ್ಕಾಗಿ ಅಲ್ಲಿನ ಜನರು ಒಂದು ಸಂಸ್ಥೆಯನ್ನು ಸ್ಥಾಪಿಸಿದ್ದು, ಅದರ ಹೆಸರು -‘ಲಿಡಿ-ಕ್ರೋ-ಯೂ’ ಎಂದಾಗಿದೆ. ಕ್ರಮೇಣ ಕಣ್ಮರೆಯಾಗುತ್ತಿರುವ ಸುಂದರ ನಾಗಾ ಸಂಸ್ಕೃತಿಯನ್ನು ‘ಲಿಡಿ-ಕ್ರೋ-ಯೂ’ ಸಂಸ್ಥೆ ಪುನಃಶ್ಚೇತನಗೊಳಿಸುವ ಕೆಲಸ ಮಾಡಿದೆ. ಉದಾಹರಣೆಗೆ, ನಾಗಾ ಜಾನಪದ ಸಂಗೀತವು ಅತ್ಯಂತ ಶ್ರೀಮಂತ ಪ್ರಕಾರವಾಗಿದೆ. ಈ ಸಂಸ್ಥೆಯು ನಾಗ ಸಂಗೀತದ Albums launch ಮಾಡುವ ಕೆಲಸ ಆರಂಭಿಸಿದೆ. ಈವರೆಗೂ ಇಂತಹ ಮೂರು albums launch ಮಾಡಲಾಗಿದೆ. ಇವರು ಜಾನಪದ-ಸಂಗೀತ, ಜಾನಪದ ನೃತ್ಯ ಸಂಬಂಧಿತ ಕಾರ್ಯಾಗಾರಗಳನ್ನು ಕೂಡಾ ಆಯೋಜಿಸುತ್ತಾರೆ. ಯುವಜನತೆಗೆ ಇವುಗಳೆಲ್ಲದರ ಕುರಿತ ತರಬೇತಿಯನ್ನು ಕೂಡಾ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಶೈಲಿಯ ಉಡುಪು ತಯಾರಿಕೆ, ಹೊಲಿಗೆ, ಕಸೂತಿಯಂತಹ ಕೆಲಸಗಳ ಬಗ್ಗೆ ಕೂಡಾ ಯುವಜನತೆಗೆ ತರಬೇತಿ ನೀಡಲಾಗುತ್ತದೆ. ಈಶಾನ್ಯದಲ್ಲಿ ಬಿದಿರಿನಿಂದ ಅದೆಷ್ಟೋ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೊಸ ಪೀಳಿಗೆಯ ಯುವಜನತೆಗೆ ಬಿದಿರಿನ ಉತ್ಪನ್ನಗಳ ತಯಾರಿಕೆ ಬಗ್ಗೆ ಕೂಡಾ ಕಲಿಸಲಾಗುತ್ತದೆ. ಇವುಗಳಿಂದಾಗಿ ಈ ಯುವಜನತೆಗೆ ತಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಬರುವುದರೊಂದಿಗೆ, ಅವರುಗಳಿಗೆ ಉದ್ಯೋಗಕ್ಕಾಗಿ ಹೊಸ ಹೊಸ ಅವಕಾಶಗಳು ಕೂಡಾ ತೆರೆದುಕೊಳ್ಳುತ್ತವೆ. ನಾಗಾ ಜಾನಪದ ಸಂಸ್ಕೃತಿಯ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಯುವಂತೆ ಮಾಡಲು ಕೂಡಾ ‘ಲಿಡಿ-ಕ್ರೋ-ಯೂ’ ಸಂಸ್ಥೆಯ ಜನರು ಪ್ರಯತ್ನಿಸುತ್ತಿದ್ದಾರೆ.
ಸ್ನೇಹಿತರೇ, ನೀವಿರುವ ಪ್ರದೇಶದಲ್ಲಿ ಕೂಡಾ ಇಂತಹ ಸಾಂಸ್ಕೃತಿಕ ಪ್ರಕಾರಗಳು ಮತ್ತು ಸಂಪ್ರದಾಯಗಳು ಇರಬಹುದು. ನೀವು ಕೂಡಾ ನಿಮ್ಮ ನಿಮ್ಮ ಪ್ರದೇಶಗಳಲ್ಲಿ ಇಂತಹ ಪ್ರಯತ್ನಗಳನ್ನು ಮಾಡಬಹುದು. ಇಂತಹ ವಿಶಿಷ್ಠ ಪ್ರಯತ್ನ ನಡೆದಿರುವ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಅಂತಹ ಪ್ರಯತ್ನದ ಬಗ್ಗೆ ನನ್ನೊಂದಿಗೆ ಖಂಡಿತಾ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ ಹೀಗೆಂದು ಹೇಳಲಾಗುತ್ತದೆ -
ವಿದ್ಯಾದಾನಂ ಸರ್ವಧನಪ್ರಧಾನಂ
(विद्याधनं सर्वधनप्रधानम् )
ಅಂದರೆ, ಯಾರಾದರೂ ವಿದ್ಯಾದಾನ ಮಾಡುತ್ತಿದ್ದಾರೆಂದರೆ, ಅವರು ಸಮಾಜದ ಹಿತಾಸಕ್ತಿಯಲ್ಲಿ ಬಹುದೊಡ್ಡ ಕೆಲಸ ಮಾಡುತ್ತಿದ್ದಾರೆಂದರ್ಥ. ಶಿಕ್ಷಣ ಕ್ಷೇತ್ರದಲ್ಲಿ ಬೆಳಗಿಸಲಾದ ಒಂದು ಚಿಕ್ಕ ದೀಪ ಕೂಡಾ ಇಡೀ ಸಮಾಜವನ್ನು ಬೆಳಕಾಗಿಸಬಲ್ಲದು. ದೇಶಾದ್ಯಂತ ಇಂತಹ ಅನೇಕ ಪ್ರಯತ್ನಗಳು ನಡೆಯುತ್ತಿರುವುದನ್ನು ಕಂಡು ನನಗೆ ಬಹಳ ಸಂತೋಷವಾಗುತ್ತಿದೆ. ಉತ್ತರಪ್ರದೇಶ ರಾಜಧಾನಿ ಲಕ್ನೋದಿಂದ ಸುಮಾರು 70-80 ಕಿಲೋಮೀಟರ್ ದೂರದಲ್ಲಿ ಹರ್ದೋಯಿಯಲ್ಲಿರುವ ಒಂದು ಗ್ರಾಮ ಬಾಂಸಾ. ಶಿಕ್ಷಣದ ಬೆಳಕನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಂಡಿರುವ ಈ ಗ್ರಾಮದ ಜತಿನ್ ಲಲಿತ್ ಸಿಂಗ್ ಅವರ ಬಗ್ಗೆ ನನಗೆ ತಿಳಿದುಬಂತು. ಜತಿನ್ ಅವರು ಎರಡು ವರ್ಷಗಳ ಹಿಂದೆ ಇಲ್ಲಿ ‘ಸಮುದಾಯ ಗ್ರಂಥಾಲಯ ಮತ್ತು ಸಂಪನ್ಮೂಲ ಕೇಂದ್ರ’ (‘Community Library and Resource Centre’) ಪ್ರಾರಂಭಿಸಿದರು. ಅವರ ಈ ಕೇಂದ್ರದಲ್ಲಿ ಹಿಂದಿ ಮತ್ತು ಆಂಗ್ಲ ಸಾಹಿತ್ಯ, ಕಂಪ್ಯೂಟರ್, ಕಾನೂನು ಮತ್ತು ಅನೇಕ ಸರ್ಕಾರಿ ಪರೀಕ್ಷೆಗಳ ಸಿದ್ಧತೆಗೆ ಸಂಬಂಧಿಸಿದ 3000 ಕ್ಕಿಂತಲೂ ಹೆಚ್ಚು ಪುಸ್ತಕಗಳಿವೆ. ಈ ಗ್ರಂಥಾಲಯಲ್ಲಿ ಮಕ್ಕಳ ಇಷ್ಟಗಳ ಬಗ್ಗೆ ಕೂಡಾ ಗಮನ ಹರಿಸಲಾಗಿದೆ. ಇಲ್ಲಿ ಲಭ್ಯವಿರುವ ಕಾಮಿಕ್ಸ್ ಪುಸ್ತಕಗಳೇ ಆಗಲಿ ಅಥವಾ ಶಿಕ್ಷಣ ಸಂಬಂಧಿತ ಆಟಿಕೆಗಳೇ ಆಗಲಿ, ಮಕ್ಕಳು ಬಹಳ ಇಷ್ಟಪಡುತ್ತಾರೆ. ಸಣ್ಣ ಮಕ್ಕಳು ಆಟವಾಡುತ್ತಲೇ ಹೊಸ ಹೊಸ ವಿಷಯಗಳನ್ನು ಕಲಿಯಲು ಇಲ್ಲಿಗೆ ಬರುತ್ತಾರೆ. ಶಿಕ್ಷಣ Offline ಆಗಿರಲಿ ಅಥವಾ Online ಆಗಿರಲಿ, ಸುಮಾರು 40 ಸ್ವಯಂಸೇವಕರು ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ತೊಡಗಿಕೊಂಡಿರುತ್ತಾರೆ. ಪ್ರತಿದಿನ ಗ್ರಾಮದ ಸುಮಾರು 80 ವಿದ್ಯಾರ್ಥಿಗಳು ಓದುವುದಕ್ಕಾಗಿ ಈ ಗ್ರಂಥಾಲಯಕ್ಕೆ ಬರುತ್ತಾರೆ.
ಸ್ನೇಹಿತರೇ, ಝಾರ್ಖಂಡ್ ನಿವಾಸಿ ಸಂಜಯ್ ಕಶ್ಯಪ್ ಅವರು ಕೂಡಾ ಬಡ ಮಕ್ಕಳ ಕನಸಿಗೆ ಹೊಸ ರೆಕ್ಕೆಗಳನ್ನು ನೀಡುತ್ತಿದ್ದಾರೆ. ಸಂಜಯ್ ಅವರು ತಮ್ಮ ವಿದ್ಯಾರ್ಥಿ ಜೀವನಕಾಲದಲ್ಲಿ ಉತ್ತಮ ಪುಸ್ತಕಗಳ ಕೊರತೆಯನ್ನು ಎದುರಿಸಿದ್ದರು. ಪುಸ್ತಕಗಳ ಕೊರತೆಯಿಂದಾಗಿ ತಮ್ಮ ಪ್ರದೇಶದ ಮಕ್ಕಳ ಭವಿಷ್ಯ ಅಂಧಕಾರಮಯವಾಗಲು ಬಿಡುವುದಿಲ್ಲವೆಂದು ನಿರ್ಧರಿಸಿದ ಅವರು, ಈಗ ಝಾರ್ಖಂಡ್ ನಲ್ಲಿ ‘Library Man’ ಆಗಿಬಿಟ್ಟಿದ್ದಾರೆ. ಸಂಜಯ್ ಅವರು ತಮ್ಮ ವೃತ್ತಿಜೀವನ ಆರಂಭಿಸಿದಾಗ, ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ತಮ್ಮ ಮೊದಲ ಗ್ರಂಥಾಲಯವನ್ನು ಸ್ಥಾಪಿಸಿದರು. ಉದ್ಯೋಗದ ನಿಮಿತ್ತ ಅವರಿಗೆ ಯಾವುದೇ ಸ್ಥಳಕ್ಕೆ ವರ್ಗಾವಣೆಯಾದರೂ, ಅಲ್ಲಿ ಅವರು ಬಡ ಮತ್ತು ಆದಿವಾಸಿ ಮಕ್ಕಳ ಓದಿಗಾಗಿ, ಗ್ರಂಥಾಲಯ ತೆರೆಯುವ ಅಭಿಯಾನದೊಂದಿಗೆ ಸೇರಿಕೊಳ್ಳುತ್ತಿದ್ದರು. ಈ ರೀತಿ ಮಾಡುತ್ತಾ ಅವರು ಝಾರ್ಖಂಡ್ ನ ಅನೇಕ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಗ್ರಂಥಾಲಯ ತೆರೆದಿದ್ದಾರೆ. ಗ್ರಂಥಾಲಯ ಸ್ಥಾಪಿಸುವ ಅವರ ಈ ಅಭಿಯಾನ ಇಂದು ಒಂದು ಸಾಮಾಜಿಕ ಆಂದೋಲನದ ರೂಪ ತಾಳುತ್ತಿದೆ. ಸಂಜಯ್, ಜತಿನ್ ಅವರಂತಹ ಇಂತಹ ಪ್ರಯತ್ನಗಳಿಗಾಗಿ ಅವರನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ವೈದ್ಯಕೀಯ ವಿಜ್ಞಾನ (Medical science) ಪ್ರಪಂಚವು ಸಂಶೋಧನೆ ಮತ್ತು ಆವಿಷ್ಕಾರದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ಸಾಕಷ್ಟು ಪ್ರಗತಿ ಸಾಧಿಸಿದೆ ಆದರೆ, ಕೆಲವು ರೋಗಗಳು ಇಂದಿಗೂ ನಮಗೆ ಬಹು ದೊಡ್ಡ ಸವಾಲಾಗಿ ಉಳಿದಿದೆ. ಇಂತಹ ಒಂದು ರೋಗವೇ Muscular Dystrophy! ಇದು ಮುಖ್ಯವಾಗಿ ಒಂದು ಅನುವಂಶೀಯ ರೋಗವಾಗಿದ್ದು, ಯಾವುದೇ ವಯಸ್ಸಿನಲ್ಲಾದರೂ ಉಂಟಾಗಬಹುದು, ಇದರಲ್ಲಿ ಶರೀರದ ಸ್ನಾಯುಗಳು ದುರ್ಬಲವಾಗತೊಡಗುತ್ತವೆ. ರೋಗಿಗೆ ದಿನನಿತ್ಯದ ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ಕೂಡಾ ಕಷ್ಟವಾಗಿಬಿಡುತ್ತದೆ, ಇಂತಹ ರೋಗಿಗಳ ಚಿಕಿತ್ಸೆ ಮತ್ತು ಅವರಿಗೆ ಆರೈಕೆ ಮಾಡಲು ಸೇವಾ ಭಾವನೆ ಮುಖ್ಯವಾಗಿ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಹಿಮಾಚಲ ಪ್ರದೇಶದ ಸೋಲನ್ ನಲ್ಲಿ ಇಂತಹ ಒಂದು ಕೇಂದ್ರವಿದೆ, ಈ ಕೇಂದ್ರವು Muscular Dystrophy ರೋಗಿಗಳಿಗೆ ಒಂದು ಭರವಸೆಯ ಕಿರಣವಾಗಿ ಹೊರಹೊಮ್ಮಿದೆ. ಈ ಕೇಂದ್ರದ ಹೆಸರು – ಮಾನವ್ ಮಂದಿರ್ ಎಂದಾಗಿದೆ, ಇದನ್ನು Indian Association Of Muscular Dystrophy ನಡೆಸುತ್ತಿದೆ. ಮಾನವ್ ಮಂದಿರ್ ಎನ್ನುವುದು ಹೆಸರಿನಂತೆಯೇ ಮಾನವ ಸೇವೆಯ ಒಂದು ಅದ್ಭುತ ಉದಾಹರಣೆಯಾಗಿದೆ. ಇಲ್ಲಿ ರೋಗಿಗಳಿಗಾಗಿ ಹೊರರೋಗಿ ವಿಭಾಗ (OPD) ಮತ್ತು ದಾಖಲಾತಿ (admission) ಸೇವೆಗಳು ಮೂರ್ನಾಲ್ಕು ವರ್ಷಗಳ ಹಿಂದೆಯೇ ಆರಂಭವಾಗಿದೆ. ಮಾನವ್ ಮಂದಿರ್ ನಲ್ಲಿ ಸುಮಾರು 50 ರೋಗಿಗಳಿಗಾಗಿ ಹಾಸಿಗೆಗಳ ಸೌಲಭ್ಯವೂ ಇದೆ. Physiotherapy, Electrotherapy, ಮತ್ತು Hydrotherapy ಮಾತ್ರವಲ್ಲದೇ, ಯೋಗ-ಪ್ರಾಣಾಯಾಮದ ನೆರವಿನಿಂದ ಕೂಡಾ ಇಲ್ಲಿ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ.
ಸ್ನೇಹಿತರೆ, ಪ್ರತಿಯೊಂದು ರೀತಿಯ ಹೈ ಟೆಕ್ ಸೌಲಭ್ಯಗಳ ಮೂಲಕ ಈ ಕೇಂದ್ರದಲ್ಲಿ ರೋಗಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವೂ ನಡೆಯುತ್ತದೆ. Muscular Dystrophy ಯೊಂದಿಗೆ ಇರುವ ಒಂದು ಸವಾಲೆಂದರೆ ಅದರ ಕುರಿತಾಗಿನ ತಿಳುವಳಿಕೆಯ ಅಭಾವ. ಆದ್ದರಿಂದಲೇ ಈ ಕೇಂದ್ರವು ಕೇವಲ ಹಿಮಾಚಲ ಪ್ರದೇಶ ಮಾತ್ರವಲ್ಲದೇ, ದೇಶಾದ್ಯಂತ ರೋಗಿಗಳಿಗಾಗಿ ಜಾಗೃತಿ ಶಿಬಿರಗಳನ್ನು ಕೂಡಾ ಆಯೋಜಿಸುತ್ತದೆ. ಅತ್ಯಂತ ಪ್ರೋತ್ಸಾಹದಾಯಕ ವಿಷಯವೆಂದರೆ, ಈ ಸಂಸ್ಥೆಯನ್ನು ಮುಖ್ಯವಾಗಿ ರೋಗಪೀಡಿತ ವ್ಯಕ್ತಿಗಳೇ ನಿರ್ವಹಿಸುತ್ತಿದ್ದಾರೆ, ಸಾಮಾಜಿಕ ಕಾರ್ಯಕರ್ತೆ ಊರ್ಮಿಳಾ ಬಾಲ್ದೀ ಅವರು, Indian Association Of Muscular Dystrophy ಸಂಘಟನೆಯ ಅಧ್ಯಕ್ಷರಾದ ಸಂಜನಾ ಗೋಯಲ್ ಮತ್ತು ಈ Association ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಸಿರುವ ಶ್ರೀ ವಿಪುಲ್ ಗೋಯಲ್ ಅವರುಗಳು ಈ ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮಾನವ್ ಮಂದಿರವನ್ನು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನಗಳು ಕೂಡಾ ನಡೆಯುತ್ತಿವೆ. ಇದರಿಂದಾಗಿ ಇಲ್ಲಿ ರೋಗಿಗಳಿಗೆ ಮತ್ತಷ್ಟು ಉತ್ತಮವಾದ ಚಿಕಿತ್ಸೆ ದೊರೆಯಬಹುದಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಹಾಗೆಯೇ Muscular Dystrophy ಎದುರಿಸುತ್ತಿರುವ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತಿನಲ್ಲಿ ನಾವು ದೇಶವಾಸಿಗಳ ಕುರಿತು ಯಾವ ಸೃಜನಾತ್ಮಕ ಮತ್ತು ಸಾಮಾಜಿಕ ಕೆಲಸಕಾರ್ಯಗಳ ಬಗ್ಗೆ ಮಾತನಾಡಿದೆವೋ, ಅವುಗಳೆಲ್ಲವೂ ದೇಶದ ಶಕ್ತಿ ಮತ್ತು ಉತ್ಸಾಹದ ಉದಾಹರಣೆಗಳಾಗಿವೆ. ಇಂದು ಪ್ರತಿಯೊಬ್ಬ ದೇಶವಾಸಿಯೂ ಒಂದಲ್ಲಾ ಒಂದು ಕ್ಷೇತ್ರದಲ್ಲಿ, ಪ್ರತಿಯೊಂದು ಹಂತದಲ್ಲಿ, ದೇಶಕ್ಕಾಗಿ ಏನಾದರೊಂದು ವಿಭಿನ್ನರೀತಿಯ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂದಿನ ಮಾತುಕತೆಯಲ್ಲಿ, ಜಿ-20 ಶೃಂಗಸಭೆಯಂತಹ ಉದ್ದೇಶದಲ್ಲಿ ನಮ್ಮ ಓರ್ವ ನೇಕಾರ ಸೋದರರೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು, ಅದನ್ನು ನಿಭಾಯಿಸಲು ಮುಂದೆ ಬಂದಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಇದೇ ರೀತಿ, ಪರಿಸರಕ್ಕಾಗಿ ಪ್ರಯತ್ನ ಪಡುತ್ತಿರುವುದು ಕೆಲವರಾದರೆ, ನೀರಿಗಾಗಿ ಮತ್ತೆ ಕೆಲವರು ಕೆಲಸ ನಿರ್ವಹಿಸುತ್ತಿದ್ದಾರೆ, ಎಷ್ಟೊಂದು ಜನರು ಶಿಕ್ಷಣ, ಚಿಕಿತ್ಸೆ, ಮತ್ತು ವಿಜ್ಞಾನ ತಂತ್ರಜ್ಞಾನದಿಂದ ಹಿಡಿದು, ಸಂಸ್ಕೃತಿ-ಪರಂಪರೆಯವರೆಗೂ ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ಇಂದು ನಮ್ಮ ಪ್ರತಿಯೊಬ್ಬ ನಾಗರಿಕನೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಇಂತಹ ಕರ್ತವ್ಯ ನಿರ್ವಹಣೆಯ ಭಾವನೆ ದೇಶದ ಯಾವುದೇ ನಾಗರಿಕನ ಮನಸ್ಸಿನಲ್ಲಿ ಮೂಡಿದಾಗ, ಆ ದೇಶದ ಸುವರ್ಣ ಭವಿಷ್ಯ ತಾನಾಗಿಯೇ ನಿರ್ಧಾರವಾಗಿಬಿಡುತ್ತದೆ ಮತ್ತು ದೇಶದ ಸುವರ್ಣ ಭವಿಷ್ಯದಲ್ಲಿಯೇ ನಮ್ಮೆಲ್ಲರ ಸುವರ್ಣ ಭವಿಷ್ಯವೂ ಅಡಗಿದೆ.
ನಾನು, ಮತ್ತೊಮ್ಮೆ ದೇಶವಾಸಿಗಳಿಗೆ ಅವರ ಪ್ರಯತ್ನಗಳಿಗಾಗಿ ನಮಿಸುತ್ತೇನೆ. ಮುಂದಿನ ತಿಂಗಳು ನಾವು ಮತ್ತೆ ಭೇಟಿಯಾಗೋಣ ಮತ್ತು ಇಂತಹ ಅನೇಕ ಉತ್ಸಾಹ ಹೆಚ್ಚಿಸುವ ವಿಷಯಗಳ ಬಗ್ಗೆ ಖಂಡಿತವಾಗಿಯೂ ಮಾತನಾಡೋಣ. ನಿಮ್ಮ ಸಲಹೆ ಮತ್ತು ಚಿಂತನೆಗಳನ್ನು ನನಗೆ ಖಂಡಿತವಾಗಿಯೂ ಕಳುಹಿಸುತ್ತಿರಿ. ನಿಮಗೆಲ್ಲರಿಗೂ ಅನೇಕಾನೇಕ ಧನ್ಯವಾದಗಳು.
ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ. ಇಂದು ದೇಶದ ಹಲವೆಡೆ ಸೂರ್ಯನ ಆರಾಧನೆಯ ಮಹಾ ಹಬ್ಬವಾದ 'ಛಠ್' ಆಚರಿಸಲಾಗುತ್ತಿದೆ. 'ಛಠ್' ಹಬ್ಬದ ಪ್ರಯುಕ್ತ ಲಕ್ಷಾಂತರ ಭಕ್ತರು ತಮ್ಮ ಗ್ರಾಮಗಳು, ತಮ್ಮತಮ್ಮ ಮನೆಗಳು, ತಮ್ಮ ಕುಟುಂಬಗಳಿದ್ದಲ್ಲಿಗೆ ತಲುಪಿದ್ದಾರೆ. 'ಛಠ್' ಮಹಾತಾಯಿ ಎಲ್ಲರಿಗೂ ಸಮೃದ್ಧಿ ಮತ್ತು ಕಲ್ಯಾಣವಾಗಲಿ ಎಂದು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಸ್ನೇಹಿತರೇ, ನಮ್ಮ ಸಂಸ್ಕೃತಿ, ನಂಬಿಕೆ, ಪ್ರಕೃತಿಯೊಂದಿಗೆ ಎಷ್ಟು ಆಳವಾದ ಸಂಬಂಧವನ್ನು ಹೊಂದಿದೆ ಎಂಬುದಕ್ಕೆ ಸೂರ್ಯ ಆರಾಧನೆಯ ಸಂಪ್ರದಾಯ ಸಾಕ್ಷಿಯಾಗಿದೆ. ಈ ಪೂಜೆಯ ಮೂಲಕ ನಮ್ಮ ಜೀವನದಲ್ಲಿ ಸೂರ್ಯನ ಬೆಳಕಿನ ಮಹತ್ವವನ್ನು ವಿವರಿಸಲಾಗಿದೆ. ಇದರೊಂದಿಗೆ ಏರಿಳಿತಗಳು ಬದುಕಿನ ಅವಿಭಾಜ್ಯ ಅಂಗ ಎಂಬ ಸಂದೇಶವನ್ನೂ ನೀಡಲಾಗಿದೆ. ಆದ್ದರಿಂದಲೇ, ಎಲ್ಲ ಸಂದರ್ಭದಲ್ಲೂ ನಾವು ಒಂದೇ ಮನೋಭಾವವನ್ನು ಹೊಂದಿರಬೇಕು. 'ಛಠ್' ತಾಯಿಯ ಪೂಜೆಯಲ್ಲಿ ವಿವಿಧ ಹಣ್ಣುಗಳು ಮತ್ತು ಠೆಕುವಾವನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಇದರ ಉಪವಾಸ ವ್ರತವೂ ಯಾವುದೇ ಕಠಿಣ ಸಾಧನೆಗಿಂತ ಕಡಿಮೆಯೇನಲ್ಲ. ಛಠ್ ಪೂಜೆಯ ಮತ್ತೊಂದು ವಿಶೇಷವೆಂದರೆ ಪೂಜೆಗೆ ಬಳಸುವ ವಸ್ತುಗಳನ್ನು ಸಮಾಜದ ವಿಭಿನ್ನ ಜನರು ಒಟ್ಟಾಗಿ ತಯಾರಿಸುತ್ತಾರೆ. ಇದರಲ್ಲಿ ಬಿದಿರಿನಿಂದ ಮಾಡಿದ ಬುಟ್ಟಿ ಅಥವಾ ಸುಪಲಿ ಎಂಬ ಬಳ್ಳಿಯನ್ನು ಬಳಸುತ್ತಾರೆ. ಮಣ್ಣಿನ ದೀಪಗಳಿಗೆ ತನ್ನದೇ ಆದ ಮಹತ್ವವೂ ಇದೆ. ಈ ಮೂಲಕ ಕಡಲೆ ಬೆಳೆಯುವ ರೈತರು ಹಾಗೂ ಬತ್ತಾಸು ತಯಾರಿಸುವ ಸಣ್ಣ ಉದ್ದಿಮೆದಾರರ ಮಹತ್ವ ಸಮಾಜದಲ್ಲಿ ನೆಲೆಯೂರಿದೆ. ಅವರ ಸಹಕಾರವಿಲ್ಲದೇ ಛಠ್ ಪೂಜೆ ಪೂರ್ಣಗೊಳ್ಳುವುದಿಲ್ಲ. ಛಠ್ ಹಬ್ಬವು ನಮ್ಮ ಜೀವನದಲ್ಲಿ ಸ್ವಚ್ಛತೆಯ ಮಹತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಈ ಹಬ್ಬದ ಆಗಮನದ ಸಂದರ್ಭದಲ್ಲಿ, ರಸ್ತೆಗಳು, ನದಿಗಳು, ಸ್ನಾನಘಟ್ಟಗಳು, ವಿವಿಧ ನೀರಿನ ಮೂಲಗಳು, ಎಲ್ಲವನ್ನೂ ಸಮುದಾಯ ಮಟ್ಟದಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಛಠ್ ಹಬ್ಬವು 'ಏಕ್ ಭಾರತ್- ಶ್ರೇಷ್ಠ ಭಾರತ'ದ ಉದಾಹರಣೆಯಾಗಿದೆ. ಇಂದು ಬಿಹಾರ ಮತ್ತು ಪೂರ್ವಾಂಚಲದ ಜನರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಛಠ್ ಅನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೆಹಲಿ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳು ಮತ್ತು ಗುಜರಾತ್ ನ ಹಲವು ಭಾಗಗಳಲ್ಲಿ ಛಠ್ ಪೂಜೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ಹಿಂದೆ ಗುಜರಾತಿನಲ್ಲಿ ಛಠ್ ಪೂಜೆ ಅಷ್ಟೊಂದು ಪ್ರಚಲಿತವಾಗಿರಲಿಲ್ಲ ಎಂಬುದು ನನಗೆ ನೆನಪಿದೆ. ಆದರೆ ಕಾಲಾನಂತರದಲ್ಲಿ, ಛಠ್ ಪೂಜೆಯ ಚರಣೆಗಳು ಸಂಪೂರ್ಣ ಗುಜರಾತ್ ನಲ್ಲಿ ಕಾಣಲಾರಂಭಿಸಿವೆ. ನನಗೂ ಇದನ್ನು ನೋಡಿ ತುಂಬಾ ಖುಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಛಠ್ ಪೂಜೆಯ ಸುಂದರವಾದ ಚಿತ್ರಗಳು ವಿದೇಶದಿಂದ ಹರಿದು ಬರುತ್ತಿವೆ ಎಂಬುದನ್ನು ನಾವು ನೋಡುತ್ತೇವೆ. ಅಂದರೆ, ಭಾರತದ ಶ್ರೀಮಂತ ಪರಂಪರೆ, ನಮ್ಮ ನಂಬಿಕೆ, ಪ್ರಪಂಚದ ಮೂಲೆ ಮೂಲೆಯಲ್ಲಿ ತನ್ನ ಗುರುತನ್ನು ಸ್ಥಾಪಿಸುತ್ತಿದೆ. ಈ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬ ಭಕ್ತರಿಗೂ ನನ್ನ ಶುಭಾಶಯಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾವು ಪವಿತ್ರ ಛಠ್ ಪೂಜೆಯ ಬಗ್ಗೆ ಮಾತನಾಡಿದೆವು, ಭಗವಾನ್ ಸೂರ್ಯನ ಆರಾಧನೆ ಬಗ್ಗೆ ಮಾತನಾಡಿದೆವು. ಹಾಗಾದರೆ ಇಂದು ಸೂರ್ಯನನ್ನು ಪೂಜಿಸುವ ಜೊತೆಗೆ ಅವನು ನೀಡಿದ ವರದ ಬಗ್ಗೆಯೂ ಚರ್ಚಿಸೋಣ. 'ಸೌರಶಕ್ತಿ' ಸೂರ್ಯದೇವನ ವರದಾನ. ಸೌರಶಕ್ತಿ ಇಡೀ ಜಗತ್ತು ತನ್ನ ಭವಿಷ್ಯವನ್ನು ಅದರಲ್ಲಿ ಕಾಣುವಂತಹ ಒಂದು ವಿಷಯವಾಗಿದೆ ಮತ್ತು ಭಾರತಕ್ಕಾಗಿ, ಸೂರ್ಯ ದೇವ ಶತಮಾನಗಳಿಂದ ಕೇವಲ ಪೂಜಿತನಲ್ಲ, ಜೀವನ ವಿಧಾನದ ಕೇಂದ್ರವಾಗಿ ಮಿಳಿತವಾಗಿದ್ದಾನೆ. ಭಾರತವು ಇಂದು ತನ್ನ ಸಾಂಪ್ರದಾಯಿಕ ಅನುಭವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತಿದೆ, ಅದಕ್ಕಾಗಿಯೇ, ಇಂದು ನಾವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಒಂದೆನಿಸಿದ್ದೇವೆ. ಸೌರಶಕ್ತಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದೂ ಅಧ್ಯಯನದ ವಿಷಯವಾಗಿದೆ.
ತಮಿಳುನಾಡಿನಲ್ಲಿ ಕಾಂಚೀಪುರಂನಲ್ಲಿ ಥಿರು ಕೆ. ಎಳಿಲನ್ ಎಂಬ ಕೃಷಿಕರೊಬ್ಬರಿದ್ದಾರೆ. ಇವರು ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ’ ಯ ಲಾಭ ಪಡೆದು ತಮ್ಮ ಜಮೀನಿನಲ್ಲಿ ಹತ್ತು ಅಶ್ವಶಕ್ತಿಯ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಜಮೀನಿಗೆ ವಿದ್ಯುತ್ತಿಗಾಗಿ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಈಗ ಅವರು ಹೊಲದಲ್ಲಿ ನೀರಾವರಿಗಾಗಿ ಸರ್ಕಾರದ ವಿದ್ಯುತ್ ಪೂರೈಕೆಯ ಮೇಲೆ ಅವಲಂಬಿತವಾಗಿಲ್ಲ. ಅದೇ ರೀತಿ ರಾಜಸ್ಥಾನದ ಭರತ್ಪುರದಲ್ಲಿ 'ಪಿ.ಎಂ. ಕುಸುಮ್ ಯೋಜನೆ'ಯ ಇನ್ನೊಬ್ಬ ಫಲಾನುಭವಿ ರೈತರಿದ್ದಾರೆ - ಕಮಲ್ ಮೀನಾ. ಕಮಲ್ ಅವರು ತಮ್ಮ ಹೊಲದಲ್ಲಿ ಸೋಲಾರ್ ಪಂಪ್ ಅನ್ನು ಸ್ಥಾಪಿಸಿದರು, ಇದರಿಂದಾಗಿ ಅವರ ವೆಚ್ಚ ಕಡಿಮೆಯಾಗಿದೆ. ವೆಚ್ಚ ಕಡಿಮೆಯಾದುದರಿಂದ ಆದಾಯವೂ ಹೆಚ್ಚಿತು. ಕಮಲಜಿ ಸೋಲಾರ್ ವಿದ್ಯುತ್ ಅನ್ನು ಇತರ ಅನೇಕ ಸಣ್ಣ ಕೈಗಾರಿಕೆಗಳಿಗೆ ಅಳವಡಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಪ್ರದೇಶದಲ್ಲಿ ಮರದ ಕೆಲಸ ಇದೆ, ಹಸುವಿನ ಸಗಣಿಯಿಂದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ, ಇವೆಲ್ಲವುಗಳಿಗೆ ಸೋಲಾರ್ ವಿದ್ಯುತ್ ಬಳಸಲಾಗುತ್ತಿದೆ, ಅವರು 10-12 ಜನರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ, ಅಂದರೆ ಕಮಲ್ ಕುಸುಮ್ ಯೋಜನೆಯಿಂದ ಆರಂಭಿಸಿದ ಉಪಕ್ರಮದ ಪರಿಮಳವು ಬಹಳ ಜನರಿಗೆ ತಲುಪಲಾರಂಭಿಸಿದೆ.
ಸ್ನೇಹಿತರೇ, ನೀವು ತಿಂಗಳಪೂರ್ತಿ ವಿದ್ಯುತ್ ಅನ್ನು ಬಳಸಬಹುದು ಮತ್ತು ನಿಮ್ಮ ವಿದ್ಯುತ್ ಬಿಲ್ ಪಡೆಯುವ ಬದಲು ನಿಮಗೆ ವಿದ್ಯುತ್ ಹಣ ಸಿಗುವುದು ಎಂದು ನೀವು ಊಹಿಸಬಹುದೇ? ಸೌರಶಕ್ತಿ ಇದನ್ನು ಕೂಡ ಮಾಡಿ ತೋರಿಸಿದೆ. ಕೆಲವು ದಿನಗಳ ಹಿಂದೆ, ನೀವು ದೇಶದ ಮೊದಲ ಸೂರ್ಯ ಗ್ರಾಮ - ಗುಜರಾತ್ನ ಮೊಢೆರಾ ಬಗ್ಗೆ ಸಾಕಷ್ಟು ಕೇಳಿರಬಹುದು. ಮೊಢೆರಾ ಸೂರ್ಯ ಗ್ರಾಮದ ಬಹುತೇಕ ಮನೆಗಳು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಆರಂಭಿಸಿವೆ. ಈಗ ಅಲ್ಲಿನ ಹಲವು ಮನೆಗಳಲ್ಲಿ ತಿಂಗಳಾಂತ್ಯದಲ್ಲಿ ವಿದ್ಯುತ್ ಬಿಲ್ ಬರುತ್ತಿಲ್ಲ ಬದಲಾಗಿ ವಿದ್ಯುತ್ ನಿಂದ ಸಂಪಾದನೆಯ ಚೆಕ್ ಬರುತ್ತಿದೆ. ಹೀಗಾಗುತ್ತಿರುವುದನ್ನು ಕಂಡು ಈಗ ದೇಶದ ಹಲವು ಗ್ರಾಮಗಳ ಜನರು ತಮ್ಮ ಗ್ರಾಮವನ್ನೂ ಸೂರ್ಯಗ್ರಾಮವನ್ನಾಗಿ ಪರಿವರ್ತಿಸಬೇಕು ಎಂದು ಪತ್ರ ಬರೆಯುತ್ತಿದ್ದಾರೆ, ಅಂದರೆ ಭಾರತದಲ್ಲಿ ಸೂರ್ಯಗ್ರಾಮಗಳ ನಿರ್ಮಾಣ ದೊಡ್ಡ ಜನಾಂದೋಲನವಾಗುವ ದಿನ ದೂರವಿಲ್ಲ. ಮತ್ತು ಇದರ ಆರಂಭವನ್ನು ಮೊಢೆರಾ ಗ್ರಾಮದ ಜನತೆ ಈಗಾಗಲೇ ಮಾಡಿದ್ದಾರೆ.
ಬನ್ನಿ 'ಮನದ ಮಾತಿನ' ಕೇಳುಗರಿಗೆ ಮೊಢೆರಾದ ಜನತೆಯನ್ನು ಪರಿಚಯಿಸೋಣ. ಶ್ರೀ ವಿಪಿನ್ಭಾಯ್ ಪಟೇಲ್ ಅವರು ಪ್ರಸ್ತುತ ಫೋನ್ ಲೈನ್ನಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ.
ಪ್ರಧಾನ ಮಂತ್ರಿ - ವಿಪಿನ್ ಭಾಯ್ ನಮಸ್ತೆ! ನೋಡಿ ಈಗ ಮೊಢೆರಾ ಇಡೀ ದೇಶಕ್ಕೆ ಮಾದರಿಯಾಗಿ ಚರ್ಚೆಯ ವಿಷಯವಾಗಿದೆ. ಆದರೆ ನಿಮ್ಮ ಸಂಬಂಧಿಕರು ಮತ್ತು ಪರಿಚಯಸ್ಥರು ನಿಮಗೆ ಈ ಬಗ್ಗೆ ಕೇಳಿದಾಗ ನೀವು ಏನೆಲ್ಲ ವಿವರಿಸುತ್ತೀರಿ, ಏನು ಪ್ರಯೋಜನವಾಗಿದೆ?
ವಿಪಿನ್ ಜೀ - ಸರ್, ಜನರು ನಮ್ಮನ್ನು ಕೇಳಿದಾಗ ನಾವು ಹೀಗೆ ಹೇಳುತ್ತೇವೆ, ನಮಗೆ ಈಗ ವಿದ್ಯುತ್ ಬಿಲ್ ಸೊನ್ನೆಯಾಗಿದೆ. ಕೆಲವೊಮ್ಮೆ 70 ರೂಪಾಯಿಯಷ್ಟು ಬಿಲ್ ಬರುತ್ತದೆ ಆದರೆ ಈ ನಮ್ಮ ಇಡೀ ಗ್ರಾಮದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳುತ್ತೇವೆ.
ಪ್ರಧಾನಿ - ಅಂದರೆ ಒಂದು ರೀತಿಯಲ್ಲಿ ಹಿಂದೆ ವಿದ್ಯುತ್ ಬಿಲ್ ಬಗ್ಗೆ ಇದ್ದ ಚಿಂತೆ ದೂರವಾಗಿದೆ.
ವಿಪಿನ್ ಜಿ - ಹೌದು ಸಾರ್, ನಿಮ್ಮ ಮಾತು ಸರಿಯಾಗಿದೆ ಸರ್. ಇದೀಗ ಇಡೀ ಗ್ರಾಮದಲ್ಲಿ ಯಾವುದೇ ಚಿಂತೆಯಿಲ್ಲ. ತಾವು ಮಾಡಿದ ಕೆಲಸ ತುಂಬಾ ಚೆನ್ನಾಗಿದೆ ಎಂದು ಎಲ್ಲರಿಗೂ ಅನಿಸುತ್ತಿದೆ. ಅವರು ಖುಷಿಯಾಗಿದ್ದಾರೆ ಸರ್ ಎಲ್ಲರೂ ಸಂಭ್ರಮ ಪಡುತ್ತಿದ್ದಾರೆ
ಪ್ರಧಾನಿ - ಈಗ ಅವರೇ ತಮ್ಮ ಮನೆಯಲ್ಲಿ ವಿದ್ಯುತ್ ಕಾರ್ಖಾನೆಯ ಮಾಲೀಕರಾಗಿದ್ದಾರೆ. ತಮ್ಮ ಸ್ವಂತ ಮನೆಯ ಛಾವಣಿಯ ಮೇಲೆ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ವಿಪಿನ್ ಜಿ - ಹೌದು ಸರ್, ಸರಿಯಾಗಿದೆ ಸರ್.
ಪ್ರಧಾನ ಮಂತ್ರಿ - ಹಾಗಾದರೆ ಈ ಬದಲಾವಣೆಯು ಹಳ್ಳಿಯ ಜನರ ಮೇಲೆ ಏನು ಪರಿಣಾಮ ಬೀರಿದೆ?
ವಿಪಿನ್ ಜೀ - ಸರ್, ಇಡೀ ಗ್ರಾಮದ ಜನ, ಕೃಷಿ ಮಾಡುತ್ತಿದ್ದಾರೆ, ನಮಗೆ ಇದ್ದ ವಿದ್ಯುತ್ ಗೊಡವೆಯಿಂದ ಮುಕ್ತಿ ಲಭಿಸಿದೆ, ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಹಾಗಾಗಿ ನಿಶ್ಚಿಂತರಾಗಿದ್ದೇವೆ ಸರ್.
ಪ್ರಧಾನಿ - ಅಂದರೆ, ವಿದ್ಯುತ್ ಬಿಲ್ ಕೂಡ ಇಲ್ಲ ಮತ್ತು ಸೌಲಭ್ಯ ಹೆಚ್ಚಿದೆ.
ವಿಪಿನ್ ಜೀ - ಕಿರಿ ಕಿರಿಯೇ ತಪ್ಪಿದಂತಾಗಿದೆ ಸರ್ ನೀವು ಇಲ್ಲಿಗೆ ಬಂದು ಇಲ್ಲಿ 3D ಶೋ ಉದ್ಘಾಟನೆ ಮಾಡಿದ ಮೇಲಂತೂ ಮೊಢೆರಾ ಗ್ರಾಮದ ಕಿರೀಟಕ್ಕೆ ಮತ್ತಷ್ಟು ಗರಿ ಸೇರಿಸಿದಂತಾಗಿದೆ ಸರ್. ಮತ್ತು ಆ ಕಾರ್ಯದರ್ಶಿಗಳು ಬಂದಿದ್ದರಲ್ಲವೇ ಸರ್...
ಪ್ರಧಾನಿ - ಹೌದು ಹೌದು ...
ವಿಪಿನ್ ಜೀ - ಅದರಿಂದ ಗ್ರಾಮ ಪ್ರಸಿದ್ಧವಾಗಿ ಹೋಯಿತು ಸರ್.
ಪ್ರಧಾನಮಂತ್ರಿ - ಹೌದು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರ ಸ್ವಆಶಯವಾಗಿತ್ತು. ತಾವು ಇಷ್ಟು ದೊಡ್ಡ ಕೆಲಸ ಮಾಡಿದ್ದೀರಿ ಎಂದ ಮೇಲೆ ನಾನು ಸ್ವತಃ ಅಲ್ಲಿಗೆ ಹೋಗಿ ನೋಡಬೇಕು ಎಂದು ತುಂಬಾ ಆಗ್ರಹಿಸಿದರು. ಸರಿ ವಿಪಿನ್ ಭಾಯಿ ತಮಗೆ ಮತ್ತು ತಮ್ಮ ಗ್ರಾಮದ ಎಲ್ಲಾ ಜನರಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ಜಗತ್ತು ನಿಮ್ಮಿಂದ ಸ್ಫೂರ್ತಿ ಪಡೆಯಲಿ ಮತ್ತು ಈ ಸೌರಶಕ್ತಿ ಅಭಿಯಾನವು ಮನೆ ಮನೆಗೆ ತಲುಪಲಿ ಎಂದು ಆಶಿಸುತ್ತೇನೆ.
ವಿಪಿನ್ ಜಿ - ಸರಿ ಸರ್. ಸೋಲಾರ್ ಅಳವಡಿಸಿ, ನಿಮ್ಮ ಹಣದಲ್ಲಿಯೇ ಅಳವಡಿಸಿಕೊಳ್ಳಿ, ಇದರಿಂದ ಸಾಕಷ್ಟು ಲಾಭವಿದೆ ಎಂದು ನಾನು ಎಲ್ಲರಿಗೂ ಹೇಳುತ್ತೇನೆ ಸರ್.
ಪ್ರಧಾನಿ - ಹೌದು, ದಯವಿಟ್ಟು ಜನರಿಗೆ ವಿವರಿಸಿ. ತಮಗೆ ಅನಂತ ಶುಭಹಾರೈಕೆಗಳು. ಧನ್ಯವಾದಗಳು ಸಹೋದರ
ವಿಪಿನ್ ಜಿ - ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಿ ನನ್ನ ಜೀವನ ಧನ್ಯವಾಯಿತು.
ವಿಪಿನ್ ಭಾಯ್ ಅವರಿಗೆ ಅನಂತ ಧನ್ಯವಾದಗಳು
ನಾವೀಗ ಮೊಢೆರಾ ಗ್ರಾಮದ ಸಹೋದರಿ ವರ್ಷಾ ಬೇನ್ ಅವರೊಂದಿಗೆ ಮಾತನಾಡೋಣ.
ವರ್ಷಾಬೆನ್ - ಹಲೋ, ನಮಸ್ಕಾರ ಸರ್!
ಪ್ರಧಾನ ಮಂತ್ರಿ - ನಮಸ್ತೆ-ನಮಸ್ತೇ ವರ್ಷಾಬೆನ್ | ನೀವು ಹೇಗಿದ್ದೀರಿ
ವರ್ಷಾಬೆನ್ - ನಾನು ಚೆನ್ನಾಗಿದ್ದೇನೆ ಸರ್. ನೀವು ಹೇಗಿದ್ದೀರಿ ?
ಪ್ರಧಾನಿ:- ನಾನು ತುಂಬಾ ಚೆನ್ನಾಗಿದ್ದೇನೆ.
ವರ್ಷಾಬೆನ್ - ನಿಮ್ಮೊಂದಿಗೆ ಮಾತನಾಡಿ ಧನ್ಯಳಾದೆ ಸರ್.
ಪ್ರಧಾನ ಮಂತ್ರಿ - ಸರಿ ವರ್ಷಾಬೆನ್.
ವರ್ಷಾಬೆನ್ - ಹಾಂ ಸರ್
ಪ್ರಧಾನ ಮಂತ್ರಿ- ನೀವು ಮೊಡೆರಾದಲ್ಲಿ, ಮಿಲಿಟರಿ ಕುಟುಂಬದವರು ಅಲ್ಲವೆ.
ವರ್ಷಾಬೆನ್ - ನಾನು ಮಿಲಿಟರಿ ಕುಟುಂಬದವಳು. ಮಾಜಿ ಸೈನಿಕನ ಪತ್ನಿ ಮಾತನಾಡುತ್ತಿದ್ದೇನೆ ಸರ್.
ಪ್ರಧಾನ ಮಂತ್ರಿ - ಹಾಗಾದರೆ ಭಾರತದಲ್ಲಿ ನಿಮಗೆ ಎಲ್ಲೆಲ್ಲಿ ಹೋಗಲು ಅವಕಾಶ ಲಭಿಸಿತ್ತು?
ವರ್ಷಾಬೆನ್ - ರಾಜಸ್ಥಾನದಲ್ಲಿ, ಗಾಂಧಿ ನಗರದಲ್ಲಿ, ಕಚರಾ ಕಾಂಝೋರ್ ಜಮ್ಮು, ಅಲ್ಲೆಲ್ಲಿ ಅವರೊಂದಿಗೆ ಇರುವ ಅವಕಾಶ ಸಿಕ್ಕಿತ್ತು. ಅಲ್ಲಿ ಸಾಕಷ್ಟು ಸೌಲಭ್ಯ ದೊರೆಯುತ್ತಿತ್ತು ಸರ್.
ಪ್ರಧಾನ ಮಂತ್ರಿ - ಹೌದು. ಸೇನೆಯಲ್ಲಿ ತಾವು ಇದ್ದುದರಿಂದ ಹಿಂದಿಯನ್ನೂ ಚೆನ್ನಾಗಿ ಮಾತನಾಡುತ್ತೀರಿ.
ವರ್ಷಾಬೆನ್ - ಹೌದು ಸರ್. ನಾನು ಕಲಿತಿದ್ದೇನೆ ಸರ್..
ಪ್ರಧಾನ ಮಂತ್ರಿ - ಮೊಢೆರಾದಲ್ಲಿ ದೊಡ್ಡ ಬದಲಾವಣೆಯನ್ನು ತಂದಂತಹ ಈ ಸೋಲಾರ್ ರೂಫ್ಟಾಪ್ ಪ್ಲಾಂಟ್ ಅನ್ನು ನೀವು ಅಳವಡಿಸಿಕೊಂಡಿದ್ದೀರಿ? ಜನರು ಆರಂಭದಲ್ಲಿ ಏನು ಹೇಳುತ್ತಿದ್ದರೋ ಅದನ್ನು ಕೇಳಿ ನಿಮಗೆ, ಇದರ ಅರ್ಥವೇನು? ಏನು ಮಾಡುತ್ತಿದ್ದಾರೆ ? ಏನಾಗುವುದು ? ಈ ರೀತಿ ಎಂದಾದರೂ ವಿದ್ಯುತ್ ಲಭಿಸುತ್ತದೆಯೇ? ಇವೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿರಬಹುದು. ಈಗ ನಿಮ್ಮ ಅನುಭವವೇನು? ಇದರಿಂದ ಏನು ಪ್ರಯೋಜನವಾಗುತ್ತಿದೆ?
ವರ್ಷಾಬೆನ್ - ತುಂಬಾ ಲಾಭವಿದೆ, ಸಾಕಷ್ಟು ಲಾಭ ದೊರೆಯುತ್ತಿದೆ ಸರ್. ಸರ್, ನಿಮ್ಮಿಂದಾಗಿ ನಮ್ಮ ಗ್ರಾಮದಲ್ಲಿ ಪ್ರತಿದಿನ ದೀಪಾವಳಿ ಆಚರಿಸುತ್ತಿದ್ದೇವೆ. ನಮಗೆ 24 ಗಂಟೆ ವಿದ್ಯುತ್ ಸಿಗುತ್ತಿದೆ, ಬಿಲ್ ಬರುವುದೇ ಇಲ್ಲ. ನಮ್ಮ ಮನೆಯಲ್ಲಿ ಎಲ್ಲಾ ಎಲೆಕ್ಟ್ರಿಕ್ ಸಾಮಾನುಗಳನ್ನು ತಂದಿದ್ದೇವೆ ಸರ್, ನಾವು ಎಲ್ಲವನ್ನೂ ಬಳಸುತ್ತಿದ್ದೇವೆ –ನಮಗೆ ವಿದ್ಯುತ್ ಬಿಲ್ ಬರದಿದ್ದರೆ ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಬಳಸಬಹುದು ಅಲ್ಲವೇ ಸರ್!
ಪ್ರಧಾನಮಂತ್ರಿ - ನೀವು ಹೇಳಿದ ಮಾತು ಸರಿಯಾಗಿದೆ, ನೀವೂ ಕೂಡ ವಿದ್ಯುಚ್ಛಕ್ತಿಯ ಗರಿಷ್ಠ ಬಳಕೆ ಮಾಡಲು ಕೂಡಾ ಮನಸ್ಸು ಮಾಡಿದ್ದೀರಿ.
ವರ್ಷಾಬೆನ್ - ಹೌದು ಸರ್, ಹೌದು| ಸದ್ಯ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಮುಕ್ತ ಮನಸ್ಸಿನಿಂದ ವಾಷಿಂಗ್ ಮೆಷಿನ್, ಎಸಿ, ಎಲ್ಲ ಬಳಸಬಹುದು ಸರ್.
ಪ್ರಧಾನ ಮಂತ್ರಿ - ಮತ್ತು ಹಳ್ಳಿಯ ಉಳಿದ ಜನರು ಸಹ ಇದರಿಂದ ಸಂತೋಷವಾಗಿದ್ದಾರೆಯೇ?
ವರ್ಷಾಬೆನ್ - ತುಂಬಾ ಸಂತೋಷವಾಗಿದ್ದಾರೆ ಸರ್.
ಪ್ರಧಾನಿ - ಅಲ್ಲಿ ಸೂರ್ಯ ದೇವಾಲಯದಲ್ಲಿ ಕೆಲಸ ಮಾಡುವವರು ನಿಮ್ಮ ಪತಿಯೇ? ಅಲ್ಲಿ ನಡೆದ ಲೈಟ್ ಶೋ ಎಷ್ಟು ದೊಡ್ಡ ಕಾರ್ಯಕ್ರಮವಾಗಿತ್ತೆಂದರೆ, ಈಗ ಜಗತ್ತಿನೆಲ್ಲೆಡೆಯಿಂದ ಅತಿಥಿಗಳು ಅಲ್ಲಿಗೆ ಬರುತ್ತಿದ್ದಾರೆ.
ವರ್ಷಾ ಬೆನ್ - ಪ್ರಪಂಚದಾದ್ಯಂತದ ವಿದೇಶಿಯರು ಬರಬಹುದು ಆದರೆ ನೀವು ನಮ್ಮ ಗ್ರಾಮವನ್ನು ವಿಶ್ವದಲ್ಲೇ ಪ್ರಸಿದ್ಧಿಗೊಳಿಸಿದ್ದೀರಿ.
ಪ್ರಧಾನ ಮಂತ್ರಿ - ಹಾಗಾದರೆ ಅಷ್ಟೊಂದು ಅತಿಥಿಗಳು ದೇವಸ್ಥಾನಕ್ಕೆ ನೋಡಲು ಬರುತ್ತಿದ್ದಾರೆ ಅಂದ ಮೇಲೆ ನಿಮ್ಮ ಪತಿಗೆ ಈಗ ಕೆಲಸ ಹೆಚ್ಚಿರಬೇಕು
ವರ್ಷಾ ಬೆನ್ - ಓಹ್! ಎಷ್ಟೇ ಕೆಲಸ ಹೆಚ್ಚಾದರೂ ಪರವಾಗಿಲ್ಲ ಸರ್, ನನ್ನ ಪತಿಗೆ ಇದರಿಂದ ಯಾವುದೇ ತೊಂದರೆ ಇಲ್ಲ, ನೀವು ನಮ್ಮ ಹಳ್ಳಿಯನ್ನು ಅಭಿವೃದ್ಧಿಪಡಿಸುತ್ತಾ ಸಾಗಿರಿ, ಅಷ್ಟು ಸಾಕು.
ಪ್ರಧಾನಿ - ಈಗ ನಾವೆಲ್ಲರೂ ಒಟ್ಟಾಗಿ ಗ್ರಾಮದ ಅಭಿವೃದ್ಧಿಯನ್ನು ಮಾಡಬೇಕಿದೆ.
ವರ್ಷಾ ಬೆನ್ - ಹೌದು, ಹೌದು. ಸರ್ ನಿಮ್ಮ ಜೊತೆ ನಾವಿದ್ದೇವೆ
ಪ್ರಧಾನಮಂತ್ರಿ - ಗ್ರಾಮವು ಈ ಯೋಜನೆಯನ್ನು ಒಪ್ಪಿಕೊಂಡಿತು ಮತ್ತು ನಾವು ನಮ್ಮ ಮನೆಯಲ್ಲಿ ವಿದ್ಯುತ್ ತಯಾರಿಸಬಹುದು ಎಂದು ಗ್ರಾಮಸ್ಥರಿಗೆ ಮನವರಿಕೆಯಾಯಿತು ಹಾಗಾಗಿ ನಾನು ಮೊಢೆರಾದ ಜನರನ್ನು ಅಭಿನಂದಿಸಲು ಬಯಸುತ್ತೇನೆ.
ರೈನ್ ಬೆನ್ -24 ಗಂಟೆಗಳು ಸರ್! ನಮ್ಮ ಮನೆಗೆ ವಿದ್ಯುತ್ ಸರಬರಾಜಿದೆ, ನಾವು ತುಂಬಾ ಸಂತೋಷವಾಗಿದ್ದೇವೆ.
ಪ್ರಧಾನಮಂತ್ರಿ- ಒಳ್ಳೆಯದು! ನಿಮಗೆ ನನ್ನ ಅನಂತ ಶುಭ ಹಾರೈಕೆಗಳು. ಉಳಿದ ಹಣವನ್ನು ಮಕ್ಕಳ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಿ. ನಿಮ್ಮ ಜೀವನಕ್ಕೆ ಪ್ರಯೋಜನವಾಗುವಂತೆ ಆ ಹಣವನ್ನು ಸೂಕ್ತವಾಗಿ ಬಳಸಿ. ನಿಮ್ಮೆಲ್ಲರಿಗೆ ಶುಭ ಹಾರೈಸುತ್ತೇನೆ. ಮತ್ತು ಮೊಢೆರಾದ ಸಮಸ್ತ ಜನತೆಗೆ ನನ್ನ ನಮನಗಳು!
ಸ್ನೇಹಿತರೇ, ವರ್ಷಾಬೆನ್ ಮತ್ತು ಬಿಪಿನ್ ಭಾಯ್ ಹೇಳಿರುವುದು ಇಡೀ ದೇಶಕ್ಕೆ, ಗ್ರಾಮಗಳಿಗೆ ಮತ್ತು ನಗರಗಳಿಗೆ ಸ್ಫೂರ್ತಿಯಾಗಿದೆ. ಮೊಢೆರಾದ ಈ ಅನುಭವವನ್ನು ದೇಶದಾದ್ಯಂತ ಅಳವಡಿಸಿಕೊಳ್ಳಬಹುದಾಗಿದೆ . ಸೂರ್ಯನ ಶಕ್ತಿಯು ಈಗ ಹಣವನ್ನು ಉಳಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ. ಮಂಜೂರ್ ಅಹ್ಮದ್ ಲಾರ್ವಾಲ್ ಎಂಬ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಸ್ನೇಹಿತರೊಬ್ಬರಿದ್ದಾರೆ. ಕಾಶ್ಮೀರದಲ್ಲಿ ಚಳಿಗಾಲದ ಕಾರಣ, ವಿದ್ಯುತ್ ವೆಚ್ಚ ಹೆಚ್ಚು ಇದ್ದುದರಿಂದ ಮಂಜೂರ್ ಜಿ ಅವರ ವಿದ್ಯುತ್ ಬಿಲ್ ಕೂಡ 4 ಸಾವಿರ ರೂಪಾಯಿಗಿಂತ ಹೆಚ್ಚಿರುತ್ತಿತ್ತು, ಆದರೆ, ಮಂಜೂರ್ ಜಿ ಅವರ ಮನೆಗೆ ಸೋಲಾರ್ ರೂಫ್ಟಾಪ್ ಪ್ಲಾಂಟ್ ಅಳವಡಿಸಿದ್ದರಿಂದ, ಅವರ ವೆಚ್ಚ ಅರ್ಧಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ಒಡಿಶಾದ ಕುನ್ನಿ ದೇವೋರಿ ಎಂಬ ಹೆಣ್ಣು ಮಗಳು ಸೌರಶಕ್ತಿಯನ್ನು ತನಗೆ ಹಾಗೂ ಇತರ ಮಹಿಳೆಯರಿಗೆ ಉದ್ಯೋಗದ ಮೂಲವನ್ನಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಕುನ್ನಿ ಒಡಿಶಾದ ಕೆಂದುರ್ ಜಿಲ್ಲೆಯ ಕರ್ದಾಪಾಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ಸೌರಶಕ್ತಿ ಚಾಲಿತ ರೀಲಿಂಗ್ ಯಂತ್ರದಲ್ಲಿ ರೇಷ್ಮೆಯನ್ನು ನೂಲುವ ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ಸೋಲಾರ್ ಮೆಷಿನ್ನಿಂದಾಗಿ ಈ ಬುಡಕಟ್ಟು ಮಹಿಳೆಯರು ವಿದ್ಯುತ್ ಬಿಲ್ನ ಹೊರೆಯನ್ನು ಹೊರಬೇಕಾಗಿಲ್ಲ ಮತ್ತು ಅವರಿಗೆ ಆದಾಯ ಲಭಿಸುತ್ತಿದೆ. ಇದು ಸೂರ್ಯದೇವನ ಸೌರಶಕ್ತಿಯ ಏಕೈಕ ವರವಾಗಿದೆ. ವರದಾನ ಮತ್ತು ಪ್ರಸಾದದ ಪರಿಧಿ ಹೆಚ್ಚಿದಷ್ಟೂ ಉತ್ತಮ. ಆದುದರಿಂದ, ನನ್ನ ಪ್ರಾರ್ಥನೆಯೇನೆಂದರೆ, ನೀವೂ ಸಹ ಇದರಲ್ಲಿ ಸೇರಿಕೊಳ್ಳಿ ಮತ್ತು ಇತರರನ್ನು ಸೇರಿಸಿ.
ನನ್ನ ಪ್ರಿಯ ದೇಶವಾಸಿಗಳೇ, ಈಗಷ್ಟೇ ನಾನು ನಿಮ್ಮೊಂದಿಗೆ ಸೂರ್ಯನ ಬಗ್ಗೆ ಮಾತನಾಡುತ್ತಿದ್ದೆ. ಈಗ ನನ್ನ ಗಮನವು ಬಾಹ್ಯಾಕಾಶದ ಕಡೆಗೆ ಹೋಗುತ್ತಿದೆ. ಏಕೆಂದರೆ ನಮ್ಮ ದೇಶ ಸೌರ ಕ್ಷೇತ್ರದ ಜೊತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಅದ್ಭುತಗಳನ್ನು ಸಾಧಿಸುತ್ತಿದೆ. ಇಡೀ ವಿಶ್ವವೇ ಇಂದು ಭಾರತದ ಸಾಧನೆಯನ್ನು ಕಂಡು ಬೆರಗಾಗಿದೆ. ಹಾಗಾಗಿ ‘ಮನದ ಮಾತಿನ’ ಕೇಳುಗರಿಗೆ ಇದನ್ನು ಹೇಳುವ ಮೂಲಕ ಅವರನ್ನೂ ಸಂತೋಷಪಡಿಸಬೇಕು ಎಂದುಕೊಂಡೆ.
ಸ್ನೇಹಿತರೇ, ಈಗ ಕೆಲವು ದಿನಗಳಿಗೆ ಮುನ್ನ, ಭಾರತ ಏಕ ಕಾಲದಲ್ಲಿ 36 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನೆಲೆಗೊಳಿಸಿದನ್ನು ನೀವು ನೋಡಿರಬಹುದು. ದೀಪಾವಳಿ ಹಬ್ಬಕ್ಕೆ ಸರಿಯಾಗಿ ಒಂದು ದಿನ ಮೊದಲು, ದೊರೆತ ಈ ಯಶಸ್ಸು ಒಂದು ರೀತಿಯಲ್ಲಿ ನಮ್ಮ ಯುವಜನತೆಯಿಂದ ದೇಶಕ್ಕೆ ದೊರೆತ ದೀಪಾವಳಿ ಹಬ್ಬದ ವಿಶೇಷ ಉಡುಗೊರೆ ಎಂದೇ ಹೇಳಬಹುದು. ಈ ಲಾಂಚಿಂಗ್ ನಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್ ನಿಂದ ಕೊಹಿಮಾವರೆಗೆ ಇಡೀ ದೇಶದಲ್ಲಿ ಡಿಜಿಟಲ್ ಸಂಪರ್ಕಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇದರ ಸಹಾಯದಿಂದ ದೂರ ದೂರದ ಪ್ರದೇಶಗಳು ಕೂಡಾ ದೇಶದ ಉಳಿದ ಭಾಗಗಳೊಂದಿಗೆ ಮತ್ತಷ್ಟು ಸುಲಭವಾಗಿ ಸಂಪರ್ಕ ಹೊಂದುತ್ತವೆ. ದೇಶ ಸ್ವಾವಲಂಬಿಯಾದಾಗ ಯಾವ ರೀತಿ ಯಶಸ್ಸಿನ ಹೊಸ ಶಿಖರಗಳನ್ನು ಸಾಧಿಸಬಹುದು ಎನ್ನುವುದಕ್ಕೆ ಇದು ಕೂಡಾ ಒಂದು ಉದಾಹರಣೆಯಾಗಿದೆ. ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ಭಾರತಕ್ಕೆ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನ ನೀಡದಂತೆ ತಡೆಯಲಾಗಿದ್ದ ಆ ಹಳೆಯ ಸಮಯ ಕೂಡಾ ನನಗೆ ನೆನಪಿಗೆ ಬರುತ್ತಿದೆ. ಆದರೆ ಭಾರತದ ವಿಜ್ಞಾನಿಗಳು ಕೇವಲ ದೇಶೀಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದು ಮಾತ್ರವಲ್ಲದೇ, ಇಂದು ಇದರ ಸಹಾಯದೊಂದಿಗೆ ಹತ್ತಾರು ಉಪಗ್ರಹಗಳನ್ನು ಏಕಕಾಲಕ್ಕೆ ಒಟ್ಟಿಗೆ ಅಂತರಿಕ್ಷಕ್ಕೆ ಕಳುಹಿಸುತ್ತಿದ್ದಾರೆ. ಈ ಲಾಂಚಿಂಗ್ ನೊಂದಿಗೆ ಭಾರತ ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಒಂದು ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿದೆ, ಇದರಿಂದ ಬಾಹ್ಯಾಕಾಶ ವಲಯದಲ್ಲಿ ಭಾರತಕ್ಕೆ ಅವಕಾಶಗಳ ಹೊಸ ಬಾಗಿಲು ಕೂಡಾ ತೆರೆದಿದೆ.
ಸ್ನೇಹಿತರೇ, ಅಭಿವೃದ್ಧಿಹೊಂದಿದ ಭಾರತವಾಗುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿರುವ ನಮ್ಮ ದೇಶ, ಎಲ್ಲರ ಪ್ರಯತ್ನದಿಂದಾಗಿಯೇ, ತನ್ನ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಮೊದಲು ಬಾಹ್ಯಾಕಾಶ ವಲಯ, ಸರ್ಕಾರಿ ವ್ಯವಸ್ಥೆಗಳ ವ್ಯಾಪ್ತಿಗೆ ಸೀಮಿತವಾಗಿತ್ತು. ಬಾಹ್ಯಾಕಾಶ ವಲಯವನ್ನು ಭಾರತದ ಯುವಜನತೆಗಾಗಿ, ಭಾರತದ ಖಾಸಗಿ ವಲಯಕ್ಕಾಗಿ ಮುಕ್ತವಾಗಿ ಯಾವಾಗ ತೆರೆಯಲಾಯಿತೋ ಆಗ ಇದರಲ್ಲಿ ಕ್ರಾಂತಿಕಾರಿ ಪರಿವರ್ತನೆಗಳು ಕಂಡುಬರತೊಡಗಿದವು. ಭಾರತೀಯ ಕೈಗಾರಿಕಾ ವಲಯ ಮತ್ತು ನವೋದ್ಯಮಗಳು ಈ ವಲಯದಲ್ಲಿ ಹೊಸ ಹೊಸ ಆವಿಷ್ಕಾರಗಳು ಮತ್ತು ಹೊಸ ಹೊಸ ತಂತ್ರಜ್ಞಾನಗಳನ್ನು ತರುವುದರಲ್ಲಿ ತೊಡಗಿವೆ. ವಿಶೇಷವಾಗಿ IN-SPACe ಸಹಯೋಗದೊಂದಿಗೆ ಈ ವಲಯದಲ್ಲಿ ಅತಿ ದೊಡ್ಡ ಬದಲಾವಣೆಯಾಗಲಿದೆ.
IN-SPACe ಮುಖಾಂತರ ಸರ್ಕಾರೇತರ ಕಂಪೆನಿಗಳಿಗೆ ಕೂಡಾ ತಮ್ಮ ಪೇಲೋಡ್ಸ್ ಮತ್ತು ಉಪಗ್ರಹ ಉಡಾವಣೆ ಮಾಡುವ ಸೌಲಭ್ಯ ದೊರೆಯುತ್ತಿದೆ. ಬಾಹ್ಯಾಕಾಶ ವಲಯದಲ್ಲಿ ಭಾರತದಲ್ಲಿ ದೊರೆಯುತ್ತಿರುವ ಈ ದೊಡ್ಡ ಅವಕಾಶಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ನಾನು ಹೆಚ್ಚು ಹೆಚ್ಚು ನವೋದ್ಯಮಗಳು ಹಾಗೂ ಆವಿಷ್ಕಾರಕರಲ್ಲಿ ಮನವಿ ಮಾಡುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ವಿದ್ಯಾರ್ಥಿಗಳ ವಿಷಯಕ್ಕೆ ಬಂದಾಗ, ಯುವಶಕ್ತಿಯ ವಿಷಯ ಬಂದಾಗ, ಮುಂದಾಳತ್ವ ಶಕ್ತಿಯ ವಿಷಯ ಬಂದಾಗ, ನಮ್ಮ ಮನಸ್ಸಿನಲ್ಲಿ ಕೆಲವು ಹಳೆಯ, ಮಾಸಿದ, ಅನೇಕ ಪರಿಕಲ್ಪನೆಗಳು ಮೂಡುತ್ತವೆ. ವಿದ್ಯಾರ್ಥಿ ಬಲದ ಮಾತು ಬಂದಾಗ, ಅದನ್ನು ವಿದ್ಯಾರ್ಥಿ ಸಂಘದ ಚುನಾವಣೆಯೊಂದಿಗೆ ಜೋಡಿಸಿ, ಅದರ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗುವುದನ್ನು ನಾವು ಅನೇಕ ಬಾರಿ ನೋಡುತ್ತೇವೆ. ಆದರೆ ವಿದ್ಯಾರ್ಥಿ ಶಕ್ತಿಯ ವ್ಯಾಪ್ತಿ ಬಹಳ ವಿಶಾಲವಾದುದು, ಬಹಳ ದೊಡ್ಡದು. ವಿದ್ಯಾರ್ಥಿ ಶಕ್ತಿ ಎನ್ನುವುದು ಭಾರತವನ್ನು ಶಕ್ತಿಶಾಲಿ ಮಾಡುವುದಕ್ಕೆ ಆಧಾರವಾಗಿದೆ. ಭಾರತವನ್ನು 2047 ರವರೆಗೆ ಕರೆದೊಯ್ಯುವವರು ಇಂದಿನ ಯುವಜನತೆಯೇ ತಾನೇ. ಭಾರತ ಶತಮಾನೋತ್ಸವ ಆಚರಿಸುವಾಗ, ಯುವಜನತೆಯ ಈ ಶಕ್ತಿ, ಅವರ ಶ್ರಮ, ಅವರ ಬೆವರು, ಅವರ ಪ್ರತಿಭೆ, ಭಾರತವನ್ನು ಯಾವ ಎತ್ತರಕ್ಕೆ ಕೊಂಡೊಯ್ಯುತ್ತದೆಯೋ ಅದರ ಸಂಕಲ್ಪವನ್ನು ದೇಶ ಇಂದು ಕೈಗೊಳ್ಳುತ್ತಿದೆ. ನಮ್ಮ ಇಂದಿನ ಯುವಜನಾಂಗ, ದೇಶಕ್ಕಾಗಿ ಕೆಲಸ ಮಾಡುತ್ತಿರುವ ರೀತಿ, ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ರೀತಿ ನೋಡಿ ನನ್ನ ಮನಸ್ಸಿನಲ್ಲಿ ಅತ್ಯಂತ ಭರವಸೆ ಮೂಡಿದೆ. ನಮ್ಮ ಯುವಜನತೆ Hakathon ಗಳಲ್ಲಿ ಸಮಸ್ಯೆ ಪರಿಷ್ಕರಿಸುವ ರೀತಿ, ರಾತ್ರಿಯಿಡೀ ಎಚ್ಚರವಾಗಿದ್ದು ಹಲವಾರು ಗಂಟೆಗಳ ಕಾಲ ಕೆಲಸಮಾಡುವ ರೀತಿ ಬಹಳ ಪ್ರೇರಣಾದಾಯಕವಾಗಿದೆ. ಕಳೆದ ವರ್ಷಗಳಲ್ಲಿ ನಡೆದ ಒಂದು ಹ್ಯಾಕಥಾನ್ಸ್ ದೇಶದ ಲಕ್ಷಾಂತರ ಯುವಕರು ಜೊತೆಗೂಡಿ ಅನೇಕ ಸವಾಲುಗಳನ್ನು ಪರಿಹರಿಸಿದ್ದಾರೆ. ದೇಶಕ್ಕೆ ಹೊಸ ಪರಿಹಾರಗಳನ್ನು ನೀಡಿದ್ದಾರೆ.
ಸ್ನೇಹಿತರೇ, ನಾನು ಕೆಂಪುಕೋಟೆಯಿಂದ ಜೈ ಅನುಸಂಧಾನ್ ಎಂದು ಕರೆ ನೀಡಿದ್ದು ನಿಮಗೆ ನೆನಪಿರಬಹುದು. ನಾನು ಈ ದಶಕವನ್ನು ಭಾರತದ Techade ಮಾಡುವ ಮಾತು ಕೂಡಾ ಆಡಿದ್ದೆ. ನಮ್ಮ ಐಐಟಿ ವಿದ್ಯಾರ್ಥಿಗಳು ಕೂಡಾ ಇದರ ಜವಾಬ್ದಾರಿ ವಹಿಸಿಕೊಂಡಿರುವುದನ್ನು ನೋಡಿ ನನಗೆ ಬಹಳ ಸಂತೋಷವೆನಿಸಿತು. ಇದೇ ತಿಂಗಳು ಅಂದರೆ ಅಕ್ಟೋಬರ್ 14-15 ರಂದು ಎಲ್ಲಾ 23 ಐಐಟಿಗಳು ತಮ್ಮ ಆವಿಷ್ಕಾರಗಳು ಮತ್ತು ಸಂಶೋಧನಾ ಪ್ರಾಜೆಕ್ಟ್ ಪ್ರದರ್ಶಿಸಲು ಮೊದಲ ಬಾರಿಗೆ ಒಂದೇ ವೇದಿಕೆಗೆ ಬಂದವು. ಈ ವೇದಿಕೆಯಲ್ಲಿ ದೇಶಾದ್ಯಂತ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಸಂಶೋಧಕರು 75 ಕ್ಕಿಂತ ಹೆಚ್ಚು ಅತ್ಯುತ್ತಮ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು. ಆರೋಗ್ಯ ಸಂರಕ್ಷಣೆ, ಕೃಷಿ, ರೋಬೋಟಿಕ್ಸ್, ಸೆಮಿ ಕಂಡಕ್ಟರ್ಸ್, 5ಜಿ ಕಮ್ಯೂನಿಕೇಷನ್ಸ್ ಹೀಗೆ ಹಲವಾರು ವಿಷಯಗಳನ್ನು ಆಧರಿಸಿ ಆ ಪ್ರಾಜೆಕ್ಟ್ ಗಳನ್ನು ರೂಪಿಸಲಾಗಿತ್ತು. ಈ ಪ್ರಾಜೆಕ್ಟ್ ಗಳೆಲ್ಲವೂ ಒಂದಕ್ಕಿಂತ ಮತ್ತೊಂದು ಉತ್ತಮವಾಗಿದ್ದವು, ಆದರೆ, ನಾನು ಕೆಲವು ಪ್ರಾಜೆಕ್ಟ್ ಗಳ ಕುರಿತಂತೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಐಐಟಿ ಭುವನೇಶ್ವರ್ ನ ಒಂದು ತಂಡವು ನವಜಾತ ಶಿಶುಗಳಿಗಾಗಿ Portable ventilator ಅಭಿವೃದ್ಧಿ ಪಡಿಸಿತ್ತು. ಇದು ಬ್ಯಾಟರಿ ಚಾಲಿತವಾಗಿದೆ ಮತ್ತು ಇದನ್ನು ದೂರ ದೂರದ ಪ್ರದೇಶಗಳಲ್ಲಿ ಸುಲಭವಾಗಿ ಉಪಯೋಗಿಸಬಹುದಾಗಿದೆ. ಅವಧಿ ಪೂರ್ವ ಜನಿಸಿದಂತಹ ಮಕ್ಕಳ ಜೀವ ಉಳಿಸುವುದರಲ್ಲಿ ಇದು ಬಹಳ ಸಹಾಯಕ ಎಂದು ಸಾಬೀತಾಗಬಹುದು. Electric mobility ಆಗಲಿ, ಡ್ರೋನ್ ತಂತ್ರಜ್ಞಾನವಾಗಲಿ, 5 ಜಿ ಆಗಲಿ, ನಮ್ಮ ಬಹುತೇಕ ವಿದ್ಯಾರ್ಥಿಗಳು, ಇದರೊಂದಿಗಿನ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಐಐಟಿಗಳು ಒಂದಾಗಿ ಬಹುಭಾಷೀಯ ಪ್ರಾಜೆಕ್ಟ್ ಕುರಿತಂತೆ ಕೆಲಸ ಮಾಡುತ್ತಿದ್ದು, ಇದು ಸ್ಥಳೀಯ ಭಾಷೆಗಳನ್ನು ಕಲಿಯುವ ವಿಧಾನವನ್ನು ಸುಲಭಗೊಳಿಸುತ್ತದೆ. ಈ ಪ್ರಾಜೆಕ್ಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳ ಸಾಧನೆಗೆ ಕೂಡಾ ಬಹಳ ಸಹಾಯಕವಾಗುತ್ತದೆ. ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರ್ ಭಾರತದ ಸ್ವದೇಶೀ 5ಜಿ ಟೆಸ್ಟ್ ಬೆಡ್ ತಯಾರಿಕೆಯಲ್ಲಿ ಮುಂಚೂಣಿ ಪಾತ್ರ ವಹಿಸಿದೆಯೆಂದು ತಿಳಿದು ನಿಮಗೆ ಸಂತೋಷವೆನಿಸಬಹುದು. ಖಂಡಿತವಾಗಿಯೂ ಇದೊಂದು ಅದ್ಭುತ ಆರಂಭವೇ ಆಗಿದೆ. ಮುಂಬರುವ ದಿನಗಳಲ್ಲಿ ಇಂತಹ ಅನೇಕ ಪ್ರಯತ್ನಗಳು ನಮಗೆ ಕಾಣಸಿಗುತ್ತವೆ ಎಂಬ ಭರವಸೆ ನನಗಿದೆ. ಐಐಟಿಗಳಿಂದ ಸ್ಫೂರ್ತಿ ಪಡೆದು, ಇತರೆ ವಿದ್ಯಾ ಸಂಸ್ಥೆಗಳು ಕೂಡಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಬಂಧಿತ ತಮ್ಮ ಕಾರ್ಯ ಚಟುವಟಿಕೆಗೆ ವೇಗ ತುಂಬುತ್ತವೆ ಎಂದು ಕೂಡಾ ನನಗೆ ನಂಬಿಕೆ ಇದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪರಿಸರ ಕುರಿತ ಕಾಳಜಿ ನಮ್ಮ ಸಮಾಜದ ಕಣ ಕಣದಲ್ಲೂ ತುಂಬಿದೆ ಮತ್ತು ನಾವು ನಮ್ಮ ಸುತ್ತಮುತ್ತಲೂ ಇದರ ಇರುವಿಕೆಯ ಅನುಭವ ಹೊಂದುತ್ತೇವೆ. ಪರಿಸರದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಜನರ ಸಂಖ್ಯೆ ದೇಶದಲ್ಲಿ ಕಡಿಮೆಯೇನಿಲ್ಲ.
ಕರ್ನಾಟಕದ ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಅವರಿಂದ ಕೂಡಾ ನಾವು ಬಹಳಷ್ಟು ಕಲಿಯಬಹುದಾಗಿದೆ. ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಬಗ್ಗೆ ಬಹಳ ಉತ್ಸಾಹ ತುಂಬಿದೆ. 20 ವರ್ಷಗಳ ಹಿಂದೆ ಅವರು ನಗರದ ಸಹಕಾರನಗರದ ಒಂದು ಅರಣ್ಯವನ್ನು ಪುನಃ ಹಸಿರಿನಿಂದ ನಳನಳಿಸುವಂತೆ ಮಾಡುವುದಕ್ಕೆ ಮುಂದಾಗಿದ್ದರು. ಈ ಕೆಲಸ ಕಷ್ಟದಿಂದ ಕೂಡಿತ್ತು, ಆದರೆ 20 ವರ್ಷಗಳ ಹಿಂದೆ ನೆಟ್ಟ ಆ ಗಿಡಗಳು ಇಂದು ಸುಮಾರು 40 ರಿಂದ 45 ಅಡಿ ಎತ್ತರಕ್ಕೆ ಬೆಳೆದು ಬೃಹತ್ ಮರಗಳಾಗಿವೆ. ಈಗ ಇದರ ಸೌಂದರ್ಯ ಪ್ರತಿಯೊಬ್ಬರ ಮನಸೂರೆಗೊಳ್ಳುತ್ತದೆ. ಇದರಿಂದಾಗಿ ಅಲ್ಲಿ ವಾಸಿಸುವ ಜನರಿಗೆ ಕೂಡಾ ಬಹಳ ಹೆಮ್ಮೆ ಎನಿಸುತ್ತದೆ. ಸುರೇಶ್ ಕುಮಾರ್ ಮತ್ತೊಂದು ಅದ್ಭುತ ಕೆಲಸವನ್ನು ಕೂಡಾ ಮಾಡುತ್ತಾರೆ. ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರನಗರದಲ್ಲಿ ಒಂದು ಬಸ್ ತಂಗುದಾಣವನ್ನು ಕೂಡಾ ನಿರ್ಮಿಸಿದ್ದಾರೆ. ಅವರು ನೂರಾರು ಜನರಿಗೆ ಕನ್ನಡ ಭಾಷೆಯಲ್ಲಿ ಬರೆಯಲಾಗಿರುವ Brass plate ಗಳನ್ನು ಕೂಡಾ ಉಡುಗೊರೆಯಾಗಿ ನೀಡಿದ್ದಾರೆ. ಪರಿಸರ ಮತ್ತು ಸಂಸ್ಕೃತಿ ಎರಡೂ ಒಟ್ಟಾಗಿ ಬೆಳೆದು, ಅರಳಿದರೆ ಯೋಚಿಸಿ ನೋಡಿ...ಇದು ಎಷ್ಟೊಂದು ದೊಡ್ಡ ಉತ್ತಮ ವಿಚಾರವಲ್ಲವೇ.
ಸ್ನೇಹಿತರೇ, ಇಂದು ಪರಿಸರ ಸ್ನೇಹಿ ಜೀವನ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಕುರಿತಂತೆ ಜನರಲ್ಲಿ ಮೊದಲಿಗಿಂತ ಅತ್ಯಂತ ಹೆಚ್ಚು ಜಾಗೃತಿ ಕಂಡುಬರುತ್ತಿದೆ. ತಮಿಳುನಾಡಿನ ಇಂತಹದ್ದೇ ಒಂದು ಕುತೂಹಲಕಾರಿ ಪ್ರಯತ್ನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ದೊರೆಯಿತು. ಕೊಯಂಬತ್ತೂರಿನ ಅನಾಯಿಕಟ್ಟೀಯಲ್ಲಿ ಬುಡಕಟ್ಟು ಮಹಿಳೆಯರ ಒಂದು ತಂಡದ ಉತ್ತಮ ಪ್ರಯತ್ನ ಇದಾಗಿದೆ. ಈ ಮಹಿಳೆಯರು ರಫ್ತು ಮಾಡುವುದಕ್ಕಾಗಿ ಹತ್ತು ಸಾವಿರ ಪರಿಸರ ಸ್ನೇಹಿ ಟೆರ್ರಕೋಟಾ ಟೀ ಕಪ್ ಗಳನ್ನು ತಯಾರಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ, ಟೆರ್ರಕೋಟಾ ಟೀ ಕಪ್ಸ್ ತಯಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಈ ಮಹಿಳೆಯರು ಸ್ವತಃ ಕೈಗೆತ್ತಿಕೊಂಡರು. Clay Mixing ನಿಂದ ಹಿಡಿದು Final Packaging ವರೆಗೂ ಎಲ್ಲಾ ಕೆಲಸವನ್ನೂ ಸ್ವತಃ ತಾವೇ ಮಾಡಿದರು. ಇದಕ್ಕಾಗಿ ಅವರು ತರಬೇತಿಯನ್ನೂ ಪಡೆದುಕೊಂಡಿದ್ದರು. ಈ ಅದ್ಭುತ ಪ್ರಯತ್ನವನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ.
ಸ್ನೇಹಿತರೇ, ತ್ರಿಪುರಾದ ಕೆಲವು ಗ್ರಾಮಗಳು ಕೂಡಾ ಬಹಳ ಉತ್ತಮ ಉದಾಹರಣೆಗಳನ್ನು ನೀಡಿವೆ. ನೀವು ಬಯೋ ವಿಲೇಜ್ ಎನ್ನುವ ಪದವನ್ನು ಖಂಡಿತವಾಗಿಯೂ ಕೇಳಿರಬಹುದು, ಆದರೆ ತ್ರಿಪುರಾದ ಕೆಲವು ಗ್ರಾಮಗಳು Bio-Village 2 ಮೆಟ್ಟಿಲನ್ನು ಏರಿವೆ. Bio-Village 2 ನಲ್ಲಿ ಪ್ರಾಕೃತಿಕ ವಿಕೋಪಗಳಿಂದ ಸಂಭವಿಸುವ ನಷ್ಟವನ್ನು ಯಾವರೀತಿ ಕಡಿಮೆ ಮಾಡಬಹುದು ಎಂಬ ಅಂಶಕ್ಕೆ ಒತ್ತು ನೀಡಲಾಗುತ್ತದೆ. ಇದರಲ್ಲಿ ವಿಭಿನ್ನ ಕ್ರಮಗಳ ಮೂಲಕ ಜನರ ಜೀವನ ಮಟ್ಟವನ್ನು ಮತ್ತಷ್ಟು ಉತ್ತಮವಾಗಿ ಹೇಗೆ ಮಾಡಬಹುದು ಎಂಬ ಕುರಿತು ಸಂಪೂರ್ಣ ಗಮನ ಹರಿಸಲಾಗುತ್ತದೆ. Solar Energy, Biogas, Bee Keeping ಮತ್ತು Bio Fertilizers, ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಗಮನ ಕೇಂದ್ರೀಕರಿಸಲಾಗುತ್ತದೆ. ಒಟ್ಟಾರೆ ನೋಡಿದಲ್ಲಿ, ಹವಾಮಾನ ಬದಲಾವಣೆ ವಿರುದ್ಧ ಅಭಿಯಾನಕ್ಕೆ Bio-Village 2 ಸಾಕಷ್ಟು ಬಲ ತುಂಬಲಿದೆ. ಪರಿಸರ ಸಂರಕ್ಷಣೆ ಕುರಿತಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಉತ್ಸಾಹ ನೋಡಿ ನಾನು ಬಹಳ ಸಂತಸಗೊಂಡಿದ್ದೇನೆ. ಕೆಲವು ದಿನಗಳ ಹಿಂದಷ್ಟೇ, ಭಾರತದಲ್ಲಿ ಪರಿಸರ ಸಂರಕ್ಷಣೆಗಾಗಿ ಸಮರ್ಪಿತ Mission Life ಗೆ ಕೂಡಾ ಚಾಲನೆ ನೀಡಲಾಗಿದೆ. ಮಿಷನ್ ಲೈಫ್ ನ ಸರಳ ಸಿದ್ಧಾಂತವೆಂದರೆ – ಪರಿಸರಕ್ಕೆ ನಷ್ಟ ಉಂಟುಮಾಡದಂತಹ ಜೀವನ ಶೈಲಿಯನ್ನು ಉತ್ತೇಜಿಸುವುದು. ನೀವು ಕೂಡಾ ಮಿಷನ್ ಲೈಫ್ ಕುರಿತು ತಿಳಿದುಕೊಳ್ಳಿ, ಅದನ್ನು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.
ಸ್ನೇಹಿತರೇ, ನಾಳೆ, ಅಕ್ಟೋಬರ್ 31 ರಾಷ್ಟ್ರೀಯ ಏಕತಾ ದಿನವಾಗಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲರ ಜಯಂತಿಯ ಶುಭ ಸಂದರ್ಭವಾಗಿದೆ. ಈ ದಿನದಂದು ದೇಶದ ಮೂಲೆ ಮೂಲೆಯಲ್ಲಿ ಏಕತೆಗಾಗಿ ಓಟ ಆಯೋಜಿಸಲಾಗುತ್ತದೆ. ಈ ಓಟ, ದೇಶದಲ್ಲಿ ಏಕತೆಯ ಸೂತ್ರವನ್ನು ಬಲಿಷ್ಠಗೊಳಿಸುತ್ತದೆ, ನಮ್ಮ ಯುವಜನತೆಗೆ ಪ್ರೇರಣೆ ನೀಡುತ್ತದೆ. ಈಗ ಕೆಲವು ದಿನಗಳ ಹಿಂದೆ, ಇಂತಹದ್ದೇ ಭಾವನೆ ನಮ್ಮ ರಾಷ್ಟ್ರೀಯ ಕ್ರೀಡೆಗಳಲ್ಲಿ ನಮಗೆ ಕಂಡುಬಂದಿತ್ತು. ‘ಜುಡೇಗಾ ಇಂಡಿಯಾ ತೋ ಜೀತೇಗಾ ಇಂಡಿಯಾ’ ಈ Theme ನೊಂದಿಗೆ ರಾಷ್ಟ್ರೀಯ ಕ್ರೀಡೆಗಳು ಏಕತೆಯ ಸಂದೇಶವನ್ನು ನೀಡಿದವೋ ಅಂತೆಯೇ ಭಾರತದ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುವ ಕೆಲಸವನ್ನೂ ಮಾಡಿದೆ. ಭಾರತದಲ್ಲಿ ಇದುವರೆಗಿನ ರಾಷ್ಟ್ರೀಯ ಕ್ರೀಡೆಗಳ ಬಹು ದೊಡ್ಡ ಆಯೋಜನೆ ಇದಾಗಿತ್ತು ತಿಳಿದು ನಿಮಗೆ ಸಂತೋಷನೆನಿಸುತ್ತದೆ. ಇವುಗಳಲ್ಲಿ 36 ಕ್ರೀಡೆಗಳನ್ನು ಸೇರಿಸಲಾಗಿತ್ತು, ಇವುಗಳ ಪೈಕಿ 7 ಹೊಸಾ ಮತ್ತು ಎರಡು ದೇಶೀಯ ಸ್ಪರ್ಧೆ ಯೋಗಾಸನ ಮತ್ತು ಮಲ್ಲಕಂಭ ಕೂಡಾ ಸೇರಿದ್ದವು. ಚಿನ್ನದ ಪದಕ ಗಳಿಸುವಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದ್ದ ಮೂರು ತಂಡಗಳೆಂದರೆ ಸರ್ವೀಸಸ್ ತಂಡ, ಮಹಾರಾಷ್ಟ್ರ ಮತ್ತು ಹರಿಯಾಣದ ತಂಡ. ಈ ಕ್ರೀಡೆಗಳಲ್ಲಿ ಆರು ರಾಷ್ಟ್ರೀಯ ದಾಖಲೆಗಳು ಮತ್ತು ಸುಮಾರು 60 ರಾಷ್ಟ್ರೀಯ ಕ್ರೀಡಾ ದಾಖಲೆಗಳನ್ನು ಕೂಡಾ ಮಾಡಲಾಗಿದೆ. ಪದಕ ವಿಜೇತರಿಗೆ, ದಾಖಲೆಗಳನ್ನು ಸೃಷ್ಟಿಸಿದವರಿಗೆ, ಈ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡವರನ್ನು, ಎಲ್ಲಾ ಕ್ರೀಡಾಕಾರರಿಗೆ, ಅನೇಕಾನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಈ ಆಟಗಾರರ ಭವ್ಯ ಭವಿಷ್ಯಕ್ಕಾಗಿ ಶುಭ ಕೋರುತ್ತೇನೆ.
ಸ್ನೇಹಿತರೇ, ಗುಜರಾತ್ ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಯಶಸ್ವಿ ಆಯೋಜನೆಯಲ್ಲಿ ತಮ್ಮ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಮನಃಪೂರ್ವಕವಾಗಿ ಶ್ಲಾಘಿಸುತ್ತೇನೆ. ಗುಜರಾತ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ನವರಾತ್ರಿಯ ಸಂದರ್ಭದಲ್ಲಿ ಆಯೋಜಿಸಲಾಗಿತ್ತೆಂದು ನೀವೆಲ್ಲಾ ನೋಡಿದ್ದೀರಿ. ಈ ಸಮಯದಲ್ಲಿ ಗುಜರಾತ್ ಜನತೆ ಹಬ್ಬದ ಆಚರಣೆಯಲ್ಲಿ ತೊಡಗಿರುತ್ತಾರೆ ಮತ್ತು ಈ ಕ್ರೀಡೆಗಳ ಆನಂದದ ಅನುಭವವನ್ನು ಜನರು ಹೇಗೆ ಆಸ್ವಾದಿಸುತ್ತಾರೆ? ಇಷ್ಟೊಂದು ಭಾರೀ ಸಿದ್ಧತೆ ಹಾಗೂ ಮತ್ತೊಂದೆಡೆ ನವರಾತ್ರಿಯ ಗರ್ಭಾ ಇತ್ಯಾದಿಗಳ ಸಿದ್ಧತೆ. ಈ ಎಲ್ಲಾ ಕೆಲಸವನ್ನೂ ಗುಜರಾತ್ ಒಂದೇ ಬಾರಿಗೆ ಹೇಗೆ ಮಾಡುತ್ತದೆ? ಎನ್ನುವುದು ಈ ಪಂದ್ಯಾವಳಿ ಆಯೋಜನೆಗೆ ಮೊದಲು ನನ್ನ ಮನದಲ್ಲಿ ಮೂಡಿದ್ದ ಪ್ರಶ್ನೆಯಾಗಿತ್ತು ಆದರೆ ಗುಜರಾತ್ ರಾಜ್ಯದ ಜನತೆ ತಮ್ಮ ಅತಿಥಿ ಸತ್ಕಾರದಿಂದ ಎಲ್ಲಾ ಅತಿಥಿಗಳನ್ನೂ ಸಂತೋಷಭರಿತರನ್ನಾಗಿ ಮಾಡಿತು. ಆಹಮದಾಬಾದ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಸಂದರ್ಭದಲ್ಲಿ ನಡೆದ ಕಲೆ, ಕ್ರೀಡೆ ಮತ್ತು ಸಂಸ್ಕೃತಿಯ ಸಂಗಮ ಎಲ್ಲರಲ್ಲೂ ಉತ್ಸಾಹ ತುಂಬುವಂತಹದ್ದಾಗಿತ್ತು. ಆಟಗಾರರು ಕೂಡಾ ದಿನದಲ್ಲಿ ಯಾವ ಜಾಗದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೋ ಅಲ್ಲೇ ಸಂಜೆಯ ವೇಳೆ ಗರ್ಭಾ ಮತ್ತು ದಾಂಡಿಯಾದ ವರ್ಣಗಳಲ್ಲಿ ಮುಳುಗೇಳುತ್ತಿದ್ದರು. ಅವರು ಗುಜರಾತಿ ತಿನಿಸುಗಳು ಮತ್ತು ನವರಾತ್ರಿಯ ಚಿತ್ರಗಳನ್ನು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಹಂಚಿಕೊಂಡರು. ಇದನ್ನು ನೋಡುವುದು ನಮಗೆಲ್ಲರಿಗೂ ಬಹಳ ಸಂತೋಷದಾಯಕ ವಿಷಯವಾಗಿದೆ. ಇಂತಹ ಕ್ರೀಡೆಗಳಿಂದ, ಭಾರತದ ವಿವಿಧ ಸಂಸ್ಕೃತಿಯ ಬಗ್ಗೆ ಕೂಡಾ ತಿಳಿದುಬರುತ್ತದೆ ಅಲ್ಲವೇ. ಇದು ಏಕ್ ಭಾರತ್ ಶ್ರೇಷ್ಠ್ ಭಾರತ್ ಭಾವನೆಯನ್ನು ಕೂಡಾ ಅಷ್ಟೇ ಬಲಿಷ್ಠಗೊಳಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನವೆಂಬರ್ ತಿಂಗಳಿನಲ್ಲಿ 15 ತಾರೀಖಿನಂದು ನಮ್ಮ ದೇಶ ಬುಡಕಟ್ಟು ಜನರ ಗೌರವ ದಿನವನ್ನು ಆಚರಿಸುತ್ತದೆ. ನಿಮಗೆ ನೆನಪಿರಬಹುದು. ದೇಶವು ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಬುಡಕಟ್ಟು ಪರಂಪರೆ ಮತ್ತು ಗೌರವದ ಆಚರಣೆಯನ್ನು ಆರಂಭಿಸಿತು. ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಲಕ್ಷಾಂತರ ಜನರನ್ನು ಒಗ್ಗೂಡಿಸಿದ್ದರು. ಅವರು ಭಾರತದ ಸ್ವಾತಂತ್ರ್ಯ ಹಾಗೂ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದರು. ನಾವು ಧರತೀ ಆಬಾ ಬಿರ್ಸಾ ಮುಂಡಾ ಅವರಿಂದ ಕಲಿಯುವಂತಹದ್ದು ಬಹಳಷ್ಟಿದೆ. ಸ್ನೇಹಿತರೇ, ಧರತೀ ಆಬಾ ಬಿರ್ಸಾ ಮುಂಡಾ ಅವರ ವಿಷಯ ಬಂದಾಗ, ಅವರ ಅಲ್ಪ ಜೀವನಕಾಲದತ್ತ ದೃಷ್ಟಿ ಹರಿಸಿ ನೋಡಿದಾಗ, ನಾವು ಇಂದು ಕೂಡಾ ಅದರಿಂದ ಬಹಳಷ್ಟು ಕಲಿಯಬಹುದಾಗಿದೆ. ಧರತೀ ಆಬಾ ಅವರು ಹೀಗೆಂದು ಹೇಳಿದ್ದರು – ಈ ಭೂಮಿ ನಮ್ಮದು, ನಾವು ಇದರ ರಕ್ಷಕರು. ಅವರ ಈ ವಾಕ್ಯದಲ್ಲಿ ತಾಯ್ನೆಲಕ್ಕಾಗಿ ಕರ್ತವ್ಯದ ಭಾವನೆ ತುಂಬಿದೆ ಮತ್ತು ಪರಿಸರಕ್ಕಾಗಿ ನಮ್ಮ ಕರ್ತವ್ಯದ ಭಾವನೆಯೂ ಅಡಗಿದೆ. ನಾವು ನಮ್ಮ ಬುಡಕಟ್ಟು ಸಂಸ್ಕೃತಿಯನ್ನು ಮರೆಯಬಾರದು, ಅದರಿಂದ ಎಂದಿಗೂ ಸ್ವಲ್ಪವೂ ಕೂಡಾ ದೂರ ಸರಿಯಬಾರದೆಂದು ಅವರು ಯಾವಾಗಲೂ ಒತ್ತಿ ಹೇಳುತ್ತಿದ್ದರು. ಇಂದು ಕೂಡಾ ನಮ್ಮ ದೇಶದ ಬುಡಕಟ್ಟು ಸಮಾಜದಿಂದ ಪ್ರಕೃತಿ ಮತ್ತು ಪರಿಸರ ಕುರಿತಂತೆ ನಾವು ಬಹಳಷ್ಟು ಕಲಿಯಬಹುದಾಗಿದೆ.
ಸ್ನೇಹಿತರೇ, ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯ ಸಂದರ್ಭದಲ್ಲಿ, ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ವಸ್ತು ಸಂಗ್ರಹಾಲಯ ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿತ್ತು. ಸಮಯ ದೊರೆತಾಗ ಇದನ್ನು ನೋಡಲು ಖಂಡಿತವಾಗಿಯೂ ಹೋಗಬೇಕೆಂದು ನಾನು ಯುವಜನತೆಯಲ್ಲಿ ಮನವಿ ಮಾಡುತ್ತೇನೆ. ನವೆಂಬರ್ 1 ರಂದು ಅಂದರೆ ನಾಡಿದ್ದು, ನಾನು ಗುಜರಾತ್-ರಾಜಸ್ತಾನ್ ನ ಗಡಿಯಲ್ಲಿರುವ ಮಾನ್ ಗಢ್ ನಲ್ಲಿರುತ್ತೇನೆ ಎಂದು ನಿಮಗೆ ಹೇಳಲು ಬಯಸುತ್ತೇನೆ. ಭಾರತದ ಸ್ವತಂತ್ರ ಸಂಗ್ರಾಮ ಮತ್ತು ನಮ್ಮ ಸಮೃದ್ಧ ಬುಡಕಟ್ಟು ಪರಂಪರೆಯಲ್ಲಿ ಮಾನಗಢ್ ಗೆ ಬಹಳ ವಿಶಿಷ್ಟ ಸ್ಥಾನವಿದೆ. ಇಲ್ಲಿ ನವೆಂಬರ್ 1913 ರಲ್ಲಿ ಒಂದು ಭೀಕರ ಹತ್ಯಾಕಾಂಡ ನಡೆಯಿತು. ಇದರಲ್ಲಿ ಬ್ರಿಟಿಷರು ಸ್ಥಳೀಯ ಬುಡಕಟ್ಟು ಜನರನ್ನು ನಿರ್ದಯೆಯಿಂದ ಕೊಂದು ಹಾಕಿದರು. ಈ ಹತ್ಯಾಕಾಂಡದಲ್ಲಿ ಒಂದು ಸಾವಿರಕ್ಕೂ ಅಧಿಕ ಬುಡಕಟ್ಟು ಜನಾಂಗದವರು ತಮ್ಮ ಪ್ರಾಣ ಕಳೆದುಕೊಂಡರೆಂದು ಹೇಳಲಾಗುತ್ತದೆ. ಈ ಬುಡಕಟ್ಟು ಚಳುವಳಿಯ ನೇತೃತ್ವವನ್ನು ಗೋವಿಂದ್ ಗುರು ವಹಿಸಿದ್ದರು, ಇವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವಂತಹದ್ದಾಗಿದೆ. ನಾನು ಇಂದು ಎಲ್ಲಾ ಬುಡಕಟ್ಟು ಹುತಾತ್ಮರಿಗೆ ಮತ್ತು ಗೋವಿಂದ್ ಗುರು ಅವರ ಅದಮ್ಯ ಸಾಹಸ ಮತ್ತು ಶೌರ್ಯಕ್ಕೆ ನಮನ ಸಲ್ಲಿಸುತ್ತೇನೆ. ನಾವು ಈ ಅಮೃತ ಕಾಲದಲ್ಲಿ ಭಗವಾನ್ ಬಿರ್ಸಾ ಮುಂಡಾ, ಗೋವಿಂದ್ ಗುರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಎಷ್ಟು ನಿಷ್ಠೆಯಿಂದ ಅನುಸರಿಸುತ್ತೇವೆಯೋ, ನಮ್ಮ ದೇಶ ಅಷ್ಟೇ ಎತ್ತರವನ್ನು ಮುಟ್ಟುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಬರುವ ನವೆಂಬರ್ 8 ರಂದು ಗುರುಪೂರಬ್ ಆಚರಿಸಲಾಗುತ್ತದೆ. ಗುರು ನಾನಕ್ ಅವರ ಪ್ರಕಾಶ್ ಪರ್ವ್ ನಮ್ಮ ನಂಬಿಕೆಗೆ ಎಷ್ಟು ಮಹತ್ವದ್ದೋ ನಮಗೆ ಕಲಿಯಲು ಕೂಡಾ ಅಷ್ಟೇ ದೊರೆಯುತ್ತದೆ. ಗುರು ನಾನಕ್ ದೇವ್ ಅವರು ತಮ್ಮ ಇಡೀ ಜೀವನದಲ್ಲಿ ಮಾನವೀಯತೆಯ ಬೆಳಕನ್ನು ಪಸರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ದೇಶವು, ಗುರುಗಳು ಪಸರಿಸಿದ ಬೆಳಕನ್ನು ಜನತೆಗೆ ತಲುಪಿಸುವುದಕ್ಕಾಗಿ ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ. ಗುರು ನಾನಕ್ ದೇವ್ ಅವರ 550 ನೇ ಪ್ರಕಾಶ ಪರ್ವವನ್ನು ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಆಚರಿಸುವ ಸೌಭಾಗ್ಯ ದೊರೆತಿತ್ತು. ದಶಕಗಳ ಕಾಯುವಿಕೆಯ ನಂತರ, ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನಿರ್ಮಾಣ ನೋಡುವುದು ಕೂಡಾ ಅಷ್ಟೇ ಆಹ್ಲಾದಕರ. ಕೆಲವು ದಿನಗಳ ಹಿಂದಷ್ಟೇ, ನನಗೆ ಹೇಮಕುಂಡ್ ಸಾಹಿಬ್ ಗಾಗಿ ರೋಪ್ ವೇ ಗಾಗಿ ಅಡಿಗಲ್ಲು ಇಡುವ ಸೌಭಾಗ್ಯ ಕೂಡಾ ದೊರೆತಿತ್ತು. ನಾವು ನಮ್ಮ ಗುರುಗಳ ಚಿಂತನೆಗಳಿಂದ ನಿರಂತರವಾಗಿ ಕಲಿಯುತ್ತಿರಬೇಕು, ಅದಕ್ಕಾಗಿ ಸಮರ್ಪಣಾ ಭಾವ ಹೊಂದಬೇಕು. ಇದೇ ದಿನ ಕಾರ್ತೀಕ ಮಾಸದ ಹುಣ್ಣಿಮೆ ಕೂಡಾ ಆಗಿದೆ. ಈ ದಿನದಂದು ನಾವು ತೀರ್ಥಕ್ಷೇತ್ರಗಳಲ್ಲಿ, ನದಿಗಳಲ್ಲಿ ಸ್ನಾನ ಮಾಡುತ್ತೇವೆ, ಸೇವೆ ಸಲ್ಲಿಸುತ್ತೇವೆ ಮತ್ತು ದಾನ ಮಾಡುತ್ತೇವೆ. ನಾನು ನಿಮ್ಮೆಲ್ಲರಿಗೂ ಈ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತೇನೆ. ಮುಂಬರುವ ದಿನಗಳಲ್ಲಿ ಅನೇಕ ರಾಜ್ಯಗಳು, ತಮ್ಮ ರಾಜ್ಯೋತ್ಸವವನ್ನು ಕೂಡಾ ಆಚರಿಸಲಿವೆ. ಆಂಧ್ರಪ್ರದೇಶ ತಮ್ಮ ಸಂಸ್ಥಾಪನಾ ದಿನ ಆಚರಿಸಲಿದೆ, ಕೇರಳ ಪಿರವಿ ಆಚರಿಸುತ್ತದೆ. ಕರ್ನಾಟಕ ರಾಜ್ಯೋತ್ಸವ ಆಚರಿಸಲಿವೆ. ಇದೇ ರೀತಿ ಮಧ್ಯಪ್ರದೇಶ, ಛತ್ತೀಸ್ ಗಢ್ ಮತ್ತು ಹರಿಯಾಣಾ ಕೂಡಾ ತಮ್ಮ ತಮ್ಮ ರಾಜ್ಯೋತ್ಸವ ಆಚರಿಸಲಿವೆ. ನಾನು ಈ ಎಲ್ಲ ರಾಜ್ಯಗಳ ಜನತೆಗೂ ಶುಭಾಶಯಗಳನ್ನು ಹಾರೈಸುತ್ತೇನೆ. ನಮ್ಮ ಎಲ್ಲಾ ರಾಜ್ಯಗಳಲ್ಲಿ, ಪರಸ್ಪರರಿಂದ ಕಲಿಯುವ, ಸಹಯೋಗ ನೀಡುವ ಮತ್ತು ಒಟ್ಟಾಗಿ ಕೆಲಸ ಮಾಡುವ ಸ್ಫೂರ್ತಿ ಎಷ್ಟು ಬಲಿಷ್ಠವಾಗಿರುತ್ತದೆಯೋ ನಮ್ಮ ದೇಶ ಅಷ್ಟೇ ಪ್ರಗತಿಯಾಗುತ್ತದೆ. ನಾವು ಇದೇ ಭಾವನೆಯೊಂದಿಗೆ ಮುಂದೆ ಸಾಗುತ್ತೇವೆಂಬ ಭರವಸೆ ನನಗಿದೆ. ನೀವೆಲ್ಲರೂ ನಿಮ್ಮ ಬಗ್ಗೆ ಕಾಳಜಿ ವಹಿಸಿ, ಆರೋಗ್ಯದಿಂದಿರಿ. ಮನ್ ಕಿ ಬಾತ್ ನಲ್ಲಿ ಮುಂದಿನ ಭೇಟಿಯವರೆಗೆ ನನಗೆ ಅನುಮತಿ ನೀಡಿ. ನಮಸ್ಕಾರ. ಧನ್ಯವಾದ.
ನನ್ನ ಪ್ರೀತಿಯ ದೇಶವಾಸಿಗಳೇ,
ನಮಸ್ಕಾರ!
ಕಳೆದ ಕೆಲವು ದಿನಗಳಲ್ಲಿ ನಮ್ಮ ಗಮನ ಸೆಳೆದ ವಿಷಯವೆಂದರೆ ಚೀತಾ. ಚೀತಾಗಳ ಬಗ್ಗೆ ಮಾತನಾಡುವಂತೆ ಸಾಕಷ್ಟು ಸಂದೇಶಗಳು ಬಂದಿವೆ. ಉತ್ತರ ಪ್ರದೇಶದ ಅರುಣ್ ಕುಮಾರ್ ಗುಪ್ತಾ ಅಥವಾ ತೆಲಂಗಾಣದ ಎನ್. ರಾಮಚಂದ್ರನ್ ರಘುರಾಮ್, ಗುಜರಾತ್ನ ರಾಜನ್ ಅಥವಾ ದೆಹಲಿಯ ಸುಬ್ರತಾ ಹೀಗೆ ದೇಶದ ಮೂಲೆ ಮೂಲೆಗಳಿಂದ ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. 130 ಕೋಟಿ ಭಾರತೀಯರು ಸಂತೋಷದಿಂದ, ಹೆಮ್ಮೆಯಿಂದ ಬೀಗಿದ್ದಾರೆ; ಇದು ಪ್ರಕೃತಿಯ ಬಗೆಗಿನ ಭಾರತದ ಪ್ರೀತಿ. ಈ ಬಗ್ಗೆ ಜನರು ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ "ಮೋದಿ ಜೀ, ಚೀತಾಗಳನ್ನು ನೋಡಲು ನಮಗೆ ಯಾವಾಗ ಅವಕಾಶ ಸಿಗುತ್ತದೆ?"
ಸ್ನೇಹಿತರೇ, ಒಂದು ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯು ಚೀತಾಗಳ ಮೇಲೆ ನಿಗಾ ವಹಿಸುತ್ತದೆ ಮತ್ತು ಅವು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಎಷ್ಟು ಸಮರ್ಥವಾಗಿವೆ ಎಂಬುದನ್ನು ನೋಡಿಕೊಳ್ಳುತ್ತದೆ. ಇದರ ಆಧಾರದ ಮೇಲೆ ಕೆಲವು ತಿಂಗಳ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು, ನಂತರ ನೀವು ಚೀತಾಗಳನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ಅಲ್ಲಿಯವರೆಗೆ ನಿಮ್ಮೆಲ್ಲರಿಗೂ ಒಂದಿಷ್ಟು ಕೆಲಸವನ್ನು ನಿಯೋಜಿಸುತ್ತಿದ್ದೇನೆ. ಇದಕ್ಕಾಗಿ, MyGov ವೇದಿಕೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು, ಅದರಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವಂತೆ ನಾನು ಜನರನ್ನು ಕೇಳಿಕೊಳ್ಳುತ್ತೇನೆ. ನಾವು ಚೀತಾಗಳ ಬಗ್ಗೆ ನಡೆಸುತ್ತಿರುವ ಅಭಿಯಾನಕ್ಕೆ ಯಾವ ಹೆಸರಿಡಬಹುದು? ಈ ಎಲ್ಲಾ ಚೀತಾಗಳಿಗೆ ನಾವು ಹೆಸರಿಡುವ ಬಗ್ಗೆ ಯೋಚಿಸಬಹುದೇ ... ಪ್ರತಿಯೊಂದನ್ನೂ ಯಾವ ಹೆಸರಿನಿಂದ ಕರೆಯಬೇಕು? ಅಂದಹಾಗೆ, ಈ ನಾಮಕರಣವು ಸಾಂಪ್ರದಾಯಿಕ ಸ್ವರೂಪದ್ದಾಗಿದ್ದರೆ, ಅದು ತುಂಬಾ ಚೆನ್ನಾಗಿರುತ್ತದೆ, ಏಕೆಂದರೆ ನಮ್ಮ ಸಮಾಜ ಮತ್ತು ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಗೆ ಸಂಬಂಧಿಸಿದ ಯಾವುದಾದರೂ ನಮ್ಮನ್ನು ಸುಲಭವಾಗಿ ಸೆಳೆಯುತ್ತದೆ. ಅಷ್ಟೇ ಅಲ್ಲ, ಮನುಷ್ಯರು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಸಹ ನೀವು ಹಂಚಿಕೊಳ್ಳಬೇಕು! ನಮ್ಮ ಮೂಲಭೂತ ಕರ್ತವ್ಯಗಳಲ್ಲಿಯೂ ಸಹ ಪ್ರಾಣಿಗಳಿಗೆ ಗೌರವ ನೀಡುವ ಬಗ್ಗೆ ಒತ್ತು ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ನೀವೆಲ್ಲರೂ ಭಾಗವಹಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಯಾರಿಗೆ ಗೊತ್ತು… ಚಿರತೆಯನ್ನು ನೋಡುವ ಅವಕಾಶವನ್ನು ಬಹುಮಾನವಾಗಿ ಪಡೆಯುವ ಮೊದಲಿಗರು ನೀವಾಗಬಹುದು!
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಸೆಪ್ಟೆಂಬರ್ 25 ರಂದು ದೇಶದ ಅದ್ಭುತ ಮಾನವತಾವಾದಿ, ಚಿಂತಕ ಮತ್ತು ಮಹಾನ್ ಪುತ್ರ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಯಾವುದೇ ದೇಶದ ಯುವಕರು ತಮ್ಮ ಗುರುತು ಮತ್ತು ಗೌರವದ ಬಗ್ಗೆ ಹೆಚ್ಚು ಹೆಮ್ಮೆಪಡುತ್ತಾರೆ, ಅವರ ಮೂಲ ಕಲ್ಪನೆಗಳು ಮತ್ತು ತತ್ವಗಳು ಅವರನ್ನು ಹೆಚ್ಚು ಆಕರ್ಷಿಸುತ್ತವೆ. ದೀನದಯಾಳ್ ಅವರ ಆಲೋಚನೆಗಳ ದೊಡ್ಡ ವೈಶಿಷ್ಟ್ಯವೆಂದರೆ ಅವರ ತಮ್ಮ ಜೀವಿತಾವಧಿಯಲ್ಲಿ ಪ್ರಪಂಚದ ದೊಡ್ಡ ಕ್ರಾಂತಿಗಳನ್ನು ಕಂಡಿದ್ದಾರೆ. ಅವರು ಸಿದ್ಧಾಂತಗಳ ಹೋರಾಟಗಳಿಗೆ ಸಾಕ್ಷಿಯಾಗಿದ್ದರು. ಆದುದರಿಂದಲೇ ಅವರು ದೇಶದ ಮುಂದೆ ಸಂಪೂರ್ಣ ಭಾರತೀಯವಾಗಿದ್ದ ‘ಏಕಾತ್ಮ ಮಾನವದರ್ಶನ’ ಮತ್ತು ‘ಅಂತ್ಯೋದಯ’ದ ಕಲ್ಪನೆಯನ್ನು ಮುಂದಿಟ್ಟರು. ದೀನದಯಾಳ್ ಅವರ 'ಏಕಾತ್ಮ ಮಾನವದರ್ಶನ'ವು ಸಿದ್ಧಾಂತದ ಕ್ಷೇತ್ರದಲ್ಲಿ ಸಂಘರ್ಷ ಮತ್ತು ಪೂರ್ವಾಗ್ರಹದಿಂದ ಮುಕಿಯನ್ನು ನೀಡುವ ಒಂದು ಕಲ್ಪನೆಯಾಗಿದೆ. ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುವ ಭಾರತೀಯ ತತ್ವವನ್ನು ಅವರು ಮತ್ತೊಮ್ಮೆ ಜಗತ್ತಿಗೆ ಸಾರಿದರು. ನಮ್ಮ ಧರ್ಮಗ್ರಂಥಗಳಲ್ಲಿ 'ಆತ್ಮವತ್ ಸರ್ವಭೂತೇಷು' ಎಂದು ಹೇಳಲಾಗಿದೆ. ಅಂದರೆ, ನಾವು ಜೀವಿಗಳನ್ನು ನಮ್ಮಂತೆಯೇ ಪರಿಗಣಿಸಬೇಕು ಮತ್ತು ಅದೇ ರೀತಿ ನಡೆಸಿಕೊಳ್ಳಬೇಕು. ಆಧುನಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಲ್ಲಿಯೂ ಸಹ ಭಾರತೀಯ ತತ್ವಶಾಸ್ತ್ರವು ಜಗತ್ತನ್ನು ಹೇಗೆ ಮಾರ್ಗದರ್ಶಿಸುತ್ತದೆ ಎಂಬುದನ್ನು ದೀನದಯಾಳ್ ಜಿ ನಮಗೆ ಕಲಿಸಿದರು. ಒಂದು ರೀತಿಯಲ್ಲಿ ಸ್ವಾತಂತ್ರ್ಯಾನಂತರ ದೇಶದಲ್ಲಿ ತಲೆದೋರಿದ್ದ ಕೀಳರಿಮೆಯಿಂದ ನಮ್ಮನ್ನು ಮುಕ್ತಗೊಳಿಸಿ ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು. 'ನಮ್ಮ ಸ್ವಾತಂತ್ರ್ಯವು ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ವ್ಯಕ್ತಪಡಿಸಿದಾಗ ಮಾತ್ರ ಅರ್ಥಪೂರ್ಣವಾಗಿರುತ್ತದೆ' ಎಂದು ಅವರು ಹೇಳುತ್ತಿದ್ದರು. ಈ ಚಿಂತನೆಯ ಆಧಾರದ ಮೇಲೆ, ಅವರು ದೇಶದ ಅಭಿವೃದ್ಧಿಗೆ ದೃಷ್ಟಿಕೋನವನ್ನು ನೀಡಿದರು. ದೇಶದ ಪ್ರಗತಿಯ ಅಳತೆಗೋಲು ಅತ್ಯಂತ ಕೆಳಸ್ತರದಲ್ಲಿರುವ ವ್ಯಕ್ತಿಯಾಗಿರುತ್ತಾನೆ ಎಂದು ದೀನದಯಾಳ್ ಉಪಾಧ್ಯಾಯ ಅವರು ಹೇಳುತ್ತಿದ್ದರು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ, ದೀನದಯಾಳ್ ಅವರನ್ನು ನಾವು ಹೆಚ್ಚು ತಿಳಿಯುತ್ತೇವೆ, ಅವರಿಂದ ನಾವು ಹೆಚ್ಚು ಕಲಿಯುತ್ತೇವೆ, ದೇಶವನ್ನು ಮುನ್ನಡೆಸಲು ನಾವು ಹೆಚ್ಚು ಸ್ಫೂರ್ತಿ ಪಡೆಯುತ್ತೇವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮೂರು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 28 ರಂದು ಅಮೃತ ಮಹೋತ್ಸವದ ವಿಶೇಷ ದಿನ. ಈ ದಿನ ನಾವು ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸುತ್ತೇವೆ. ಭಗತ್ ಸಿಂಗ್ ಅವರ ಜನ್ಮದಿನದ ಮುನ್ನವೇ ಅವರಿಗೆ ಗೌರವ ಸಲ್ಲಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ. ಇದು ಬಹಳ ಸಮಯದಿಂದ ಬಾಕಿಯಿತ್ತು. ಈ ನಿರ್ಧಾರಕ್ಕಾಗಿ ನಾನು ಚಂಡೀಗಢ, ಪಂಜಾಬ್ ಮತ್ತು ಹರಿಯಾಣ ಮತ್ತು ಇಡೀ ದೇಶದ ಜನರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆದು, ಅವರ ಆದರ್ಶಗಳನ್ನು ಅನುಸರಿಸೋಣ ಮತ್ತು ಅವರ ಕನಸಿನ ಭಾರತವನ್ನು ನಿರ್ಮಿಸೋಣ… ಇದು ಅವರಿಗೆ ನಾವು ನೀಡುವ ಗೌರವವಾಗಿದೆ. ಹುತಾತ್ಮರ ಹೆಸರಿನ ಸ್ಮಾರಕಗಳು, ಸ್ಥಳಗಳು ಮತ್ತು ಸಂಸ್ಥೆಗಳು ನಮ್ಮಲ್ಲಿ ಕರ್ತವ್ಯ ಪ್ರಜ್ಞೆಯನ್ನು ಪ್ರೇರೇಪಿಸುತ್ತವೆ. ಕೆಲವೇ ದಿನಗಳ ಹಿಂದೆ, ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ದೇಶವು ಇದೇ ರೀತಿಯ ಪ್ರಯತ್ನವನ್ನು ಮಾಡಿದೆ ಮತ್ತು ಈಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಇಡುತ್ತಿರುವುದು ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಿಶೇಷ ಸಂದರ್ಭಗಳನ್ನು ಹೇಗೆ ಆಚರಿಸುತ್ತೇವೆಯೋ ಅದೇ ರೀತಿ ಸೆಪ್ಟೆಂಬರ್ 28 ರಂದು ಪ್ರತಿಯೊಬ್ಬ ಯುವಕರು ಏನಾದೂ ಹೊಸದನ್ನು ಪ್ರಯತ್ನಿಸಬೇಕು ಎಂದು ನಾನು ಬಯಸುತ್ತೇನೆ.
ಅಂದಹಾಗೆ, ನನ್ನ ಪ್ರೀತಿಯ ದೇಶವಾಸಿಗಳೇ, ನೀವೆಲ್ಲರೂ ಸೆಪ್ಟೆಂಬರ್ 28 ಅನ್ನು ಸಂಭ್ರಮಿಸಲು ಇನ್ನೊಂದು ಕಾರಣವಿದೆ. ಅದು ಏನು ಗೊತ್ತಾ? ನಾನು ಕೇವಲ ಎರಡು ಪದಗಳನ್ನು ಹೇಳುತ್ತೇನೆ ಮತ್ತು ನಿಮ್ಮ ಉತ್ಸಾಹವು ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂದು ನನಗೆ ಗೊತ್ತು. ಈ ಎರಡು ಪದಗಳೆಂದರೆ - ಸರ್ಜಿಕಲ್ ಸ್ಟ್ರೈಕ್!
ಜೋಶ್ ಹೆಚ್ಚಾಯಿತು ಅಲ್ಲವೇ!! ನಮ್ಮ ದೇಶದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಪ್ರಚಾರವನ್ನು ತುಂಬ ಉತ್ಸಾಹದಿಂದ ಆಚರಿಸೋಣ, ನಮ್ಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ.
ನನ್ನ ಪ್ರೀತಿಯ ದೇಶವಾಸಿಗಳೇ,ಜೀವನದಲ್ಲಿ ಹೋರಾಟದಿಂದ ಬಂದ ವ್ಯಕ್ತಿಯ ದಾರಿಯಲ್ಲಿ ಯಾವುದೇ ಅಡೆತಡೆಗಳು ನಿಲ್ಲುವುದಿಲ್ಲ ಎಂದು ಹೇಳಲಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ, ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ಕೆಲವು ಸ್ನೇಹಿತರನ್ನು ಸಹ ನಾವು ನೋಡುತ್ತೇವೆ. ಕೇಳಲು ಸಾಧ್ಯವಾಗದ ಅಥವಾ ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅಂತಹ ಸ್ನೇಹಿತರಿಗೆ ದೊಡ್ಡ ಬೆಂಬಲವೆಂದರೆ ಸಂಜ್ಞೆ ಭಾಷೆ. ಆದರೆ ಭಾರತದಲ್ಲಿ ಹಲವು ವರ್ಷಗಳಿಂದ ಒಂದು ದೊಡ್ಡ ಸಮಸ್ಯೆಯೆಂದರೆ, ಯಾವುದೇ ಸ್ಪಷ್ಟ ಸನ್ನೆಗಳಿಲ್ಲ, ಸಂಜ್ಞೆ ಭಾಷೆಗೆ ಯಾವುದೇ ಮಾನದಂಡಗಳಿಲ್ಲ. ಈ ತೊಂದರೆಗಳನ್ನು ನಿವಾರಿಸಲು, 2015 ರಲ್ಲಿ ಭಾರತೀಯ ಸಂಜ್ಞೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಇದುವರೆಗೆ ಹತ್ತು ಸಾವಿರ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಒಳಗೊಂಡಿರುವ ನಿಘಂಟನ್ನು ಸಿದ್ಧಪಡಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಎರಡು ದಿನಗಳ ಹಿಂದೆ ಅಂದರೆ ಸೆಪ್ಟಂಬರ್ 23 ರಂದು, ಸಂಜ್ಞೆ ಭಾಷೆಯ ದಿನದಂದು, ಅನೇಕ ಶಾಲಾ ಕೋರ್ಸ್ಗಳನ್ನು ಸಹ ಸಂಜ್ಞೆ ಭಾಷೆಯಲ್ಲಿ ಪ್ರಾರಂಭಿಸಲಾಗಿದೆ. ಸಂಜ್ಞೆ ಭಾಷೆಗೆ ನಿಗದಿತ ಗುಣಮಟ್ಟವನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಸಂಜ್ಞೆ ಭಾಷೆಯ ನಿಘಂಟಿನ ವೀಡಿಯೋಗಳನ್ನು ಮಾಡುವ ಮೂಲಕವೂ ಅದನ್ನು ಮತ್ತಷ್ಟು ಪ್ರಸಾರ ಮಾಡಲಾಗುತ್ತಿದೆ. ಯೂಟ್ಯೂಬ್ನಲ್ಲಿ, ಅನೇಕ ಜನರು, ಅನೇಕ ಸಂಸ್ಥೆಗಳು, ಭಾರತೀಯ ಸಂಜ್ಞೆ ಭಾಷೆಯಲ್ಲಿ ತಮ್ಮ ಚಾನೆಲ್ಗಳನ್ನು ಪ್ರಾರಂಭಿಸಿದ್ದಾರೆ, ಅಂದರೆ, 7-8 ವರ್ಷಗಳ ಹಿಂದೆ ಸಂಜ್ಞೆ ಭಾಷೆಯ ಕುರಿತು ದೇಶದಲ್ಲಿ ಪ್ರಾರಂಭವಾದ ಅಭಿಯಾನವು ಈಗ ನನ್ನ ಲಕ್ಷಾಂತರ ವಿಶೇಷ ಸಾಮರ್ಥ್ಯದ ಸಹೋದರ ಸಹೋದರಿಯರಿಗೆ ಪ್ರಯೋಜನವನ್ನು ನೀಡುತ್ತಿದೆ. ಹರಿಯಾಣದ ಪೂಜಾ ಅವರು ಭಾರತೀಯ ಸಂಜ್ಞೆ ಭಾಷೆಯಿಂದ ತುಂಬಾ ಸಂತೋಷವಾಗಿದ್ದಾರೆ. ಈ ಮೊದಲು ಅವರಿಗೆ ತನ್ನ ಮಗನೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ 2018 ರಲ್ಲಿ ಸಂಜ್ಞೆ ಭಾಷೆ ತರಬೇತಿಯನ್ನು ಪಡೆದ ನಂತರ, ತಾಯಿ ಮತ್ತು ಮಗನ ಜೀವನವು ಸುಲಭವಾಗಿದೆ. ಪೂಜಾ ಅವರ ಮಗನೂ ಸಹ ಸಂಜ್ಞೆ ಭಾಷೆಯನ್ನು ಕಲಿತಿದ್ದಾನೆ ಮತ್ತು ಅವನು ಶಾಲೆಯಲ್ಲಿ ಕಥೆ ಹೇಳುವುದರಲ್ಲಿಯೂ ಬಹುಮಾನವನ್ನು ಗೆದ್ದಿದ್ದಾನೆ. ಅದೇ ರೀತಿ ಟಿಂಕಾಜಿಗೆ ಆರು ವರ್ಷದ ಮಗಳಿದ್ದು ಅವಳಿಗೆ ಕಿವಿ ಕೇಳುವುದಿಲ್ಲ. ಟಿಂಕಾಜಿ ತನ್ನ ಮಗಳನ್ನು ಸಂಜ್ಞೆ ಭಾಷೆಯ ಕೋರ್ಸ್ಗೆ ಸೇರಿಸಿದರು. ಆದರೆ ಅವರಿಗೂ ಸಂಜ್ಞೆ ಭಾಷೆ ತಿಳಿದಿರಲಿಲ್ಲ, ಆದ್ದರಿಂದ ಅವರು ತನ್ನ ಮಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಈಗ ಟಿಂಕಾಜಿ ಸಹ ಸಂಜ್ಞೆ ಭಾಷೆಯ ತರಬೇತಿಯನ್ನು ಪಡೆದಿದ್ದಾರೆ. ಈಗ ತಾಯಿ ಮತ್ತು ಮಗಳು ಇಬ್ಬರೂ ಪರಸ್ಪರ ಬಹಳಷ್ಟು ಮಾತನಾಡುತ್ತಾರೆ. ಈ ಪ್ರಯತ್ನಗಳಿಂದ ಕೇರಳದ ಮಂಜು ಅವರು ಕೂಡ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಮಂಜುಗೆ ಹುಟ್ಟಿನಿಂದಲೇ ಕಿವಿ ಕೇಳಿಸುವುದಿಲ್ಲ. ಅಷ್ಟೇ ಅಲ್ಲ ಆಕೆಯ ತಂದೆ ತಾಯಿಯರ ಜೀವನದಲ್ಲೂ ಇದೇ ಪರಿಸ್ಥಿತಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಸಂಜ್ಞೆ ಭಾಷೆ ಇಡೀ ಕುಟುಂಬಕ್ಕೆ ಸಂವಹನ ಸಾಧನವಾಗಿದೆ. ಈಗ ಸ್ವತಃ ಮಂಜು ಅವರು ಸಂಜ್ಞೆ ಭಾಷಾ ಶಿಕ್ಷಕರಾಗಲು ನಿರ್ಧರಿಸಿದ್ದಾರೆ.
ಸ್ನೇಹಿತರೇ, ಭಾರತೀಯ ಸಂಜ್ಞೆ ಭಾಷೆಯ ಬಗ್ಗೆ ಅರಿವು ಹೆಚ್ಚಾಗಲಿ ಎಂದೂ ಸಹ ನಾನು 'ಮನ್ ಕಿ ಬಾತ್' ನಲ್ಲೂ ಈ ಬಗ್ಗೆ ಚರ್ಚಿಸುತ್ತಿದ್ದೇನೆ. ಇದರೊಂದಿಗೆ, ನಮ್ಮ ವಿಶೇಷ ಚೇತನ ಸ್ನೇಹಿತರಿಗೆ ನಾವು ಹೆಚ್ಚು ಹೆಚ್ಚು ಸಹಾಯ ಮಾಡಲು ಸಾಧ್ಯವಾಗುತ್ತದೆ. ಸಹೋದರ ಸಹೋದರಿಯರೇ, ಕೆಲವು ದಿನಗಳ ಹಿಂದೆ, ಬ್ರೈಲ್ ಲಿಪಿಯಲ್ಲಿ ಬರೆದ ಹೇಮಕೋಶ್ನ ಪ್ರತಿ ನನಗೆ ಸಿಕ್ಕಿತು. ಹೇಮಕೋಶ್ ಅಸ್ಸಾಮಿ ಭಾಷೆಯ ಅತ್ಯಂತ ಹಳೆಯ ನಿಘಂಟುಗಳಲ್ಲಿ ಒಂದಾಗಿದೆ. ಇದನ್ನು 19 ನೇ ಶತಮಾನದಲ್ಲಿ ಸಿದ್ಧಪಡಿಸಲಾಯಿತು. ಇದನ್ನು ಖ್ಯಾತ ಭಾಷಾಶಾಸ್ತ್ರಜ್ಞ ಹೇಮಚಂದ್ರ ಬರುವಾ ಅವರು ಸಂಪಾದಿಸಿದ್ದಾರೆ. ಹೇಮಕೋಶ್ನ ಬ್ರೈಲ್ ಆವೃತ್ತಿಯು ಸುಮಾರು 10,000 ಪುಟಗಳನ್ನು ಹೊಂದಿದೆ ಮತ್ತು 15 ಕ್ಕೂ ಹೆಚ್ಚು ಸಂಪುಟಗಳಲ್ಲಿ ಪ್ರಕಟವಾಗಲಿದೆ. ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ಪದಗಳನ್ನು ಅನುವಾದಿಸಲಾಗಿದೆ. ಈ ಕಠಿಣ ಪ್ರಯತ್ನವನ್ನು ನಾನು ತುಂಬಾ ಪ್ರಶಂಸಿಸುತ್ತೇನೆ. ಅಂತಹ ಪ್ರತಿಯೊಂದು ಪ್ರಯತ್ನವು ನಮ್ಮ ವಿಶೇಷ ಚೇತನ ಸ್ನೇಹಿತರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನವಾಗುತ್ತದೆ. ಇಂದು ಭಾರತವೂ ಪ್ಯಾರಾ ಸ್ಪೋರ್ಟ್ಸ್ನಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸುತ್ತಿದೆ. ಅನೇಕ ಕ್ರೀಡಾಕೂಟಗಳಲ್ಲಿ ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇಂದು ತಳಮಟ್ಟದಲ್ಲಿರುವ ವಿಶೇಷ ಸಾಮರ್ಥ್ಯವುಳ್ಳವರಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಉತ್ತೇಜಿಸಲು ತೊಡಗಿರುವ ಅನೇಕ ಜನರಿದ್ದಾರೆ. ಇದು ವಿಶೇಷ ಚೇತನರ ಆತ್ಮಸ್ಥೈರ್ಯಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ನಾನು ಸೂರತ್ನ ಅನ್ವಿ ಎಂಬ ಬಾಲಕಿಯನ್ನು ಭೇಟಿಯಾಗಿದ್ದೆ. ಅನ್ವಿ ಮತ್ತು ಅನ್ವಿಯ ಯೋಗದೊಂದಿಗಿನ ನನ್ನ ಭೇಟಿಯು ಎಷ್ಟು ಸ್ಮರಣೀಯವಾಗಿದೆ ಎಂದರೆ 'ಮನ್ ಕಿ ಬಾತ್' ನ ಎಲ್ಲಾ ಕೇಳುಗರಿಗೆ ನಾನು ಅದರ ಬಗ್ಗೆ ಹೇಳಲು ಬಯಸುತ್ತೇನೆ. ಸ್ನೇಹಿತರೇ, ಅನ್ವಿ ಹುಟ್ಟಿನಿಂದಲೇ ಡೌನ್ ಸಿಂಡ್ರೋಮ್ನಿಂದ ಬಳಲುತ್ತಿದ್ದಾಳೆ ಮತ್ತು ಅವಳು ಬಾಲ್ಯದಿಂದಲೂ ಗಂಭೀರ ಹೃದಯ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾಳೆ. ಅವಳು ಕೇವಲ ಮೂರು ತಿಂಗಳ ಮಗುವಾಗಿದ್ದಾಗ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇಷ್ಟೆಲ್ಲಾ ಕಷ್ಟಗಳಿದ್ದರೂ ಅನ್ವಿಯಾಗಲಿ, ಆಕೆಯ ತಂದೆ ತಾಯಿಯಾಗಲಿ ಹತಾಶರಾಗಲಿಲ್ಲ. ಅನ್ವಿಯ ಪೋಷಕರು ಡೌನ್ ಸಿಂಡ್ರೋಮ್ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದರು ಮತ್ತು ನಂತರ ಅನ್ವಿ ಇತರರ ಮೇಲೆ ಅವಲಂಬಿತಳಾಗುವುದನ್ನು ಕಡಿಮೆ ಮಾಡುವ ಮಾರ್ಗವನ್ನು ಹುಡುಕಿದರು. ಅವರು ಅನ್ವಿಗೆ ನೀರಿನ ಲೋಟ ಎತ್ತುವುದು ಹೇಗೆ, ಶೂ ಲೇಸ್ ಕಟ್ಟುವುದು ಹೇಗೆ, ಬಟ್ಟೆಗಳ ಗುಂಡಿ ಹಾಕುವುದು ಹೇಗೆ ಎಂಬಂತಹ ಸಣ್ಣ ವಿಷಯಗಳ ಬಗ್ಗೆ ಕಲಿಸಲು ಪ್ರಾರಂಭಿಸಿದರು. ಯಾವ ವಸ್ತುವಿಗೆ ಯಾವುದು ಸೂಕ್ತವಾದ ಸ್ಥಳ, ಒಳ್ಳೆಯ ಅಭ್ಯಾಸಗಳು ಯಾವುವು, ಇವೆಲ್ಲವನ್ನೂ ಅನ್ವಿಗೆ ಬಹಳ ತಾಳ್ಮೆಯಿಂದ ಕಲಿಸಲು ಪ್ರಯತ್ನಿಸಿದರು. ಮಗಳು ಅನ್ವಿ ಕಲಿಯುವ ಇಚ್ಛಾಶಕ್ತಿ ತೋರಿದ ರೀತಿ, ಪ್ರತಿಭೆ ಪ್ರದರ್ಶಿಸಿದ ರೀತಿಗೆ ಪೋಷಕರ ಪ್ರೋತ್ಸಾಹವೂ ಸಿಕ್ಕಿತು. ಅವರು ಅನ್ವಿಗೆ ಯೋಗ ಕಲಿಯಲು ಪ್ರೇರೇಪಿಸಿದರು. ಸಮಸ್ಯೆ ತುಂಬಾ ಗಂಭೀರವಾಗಿತ್ತು, ಅನ್ವಿಗೆ ತನ್ನ ಕಾಲಿನ ಮೇಲೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ... ಅಂತಹ ಪರಿಸ್ಥಿತಿಯಲ್ಲಿ, ಆಕೆಯ ಪೋಷಕರು ಅನ್ವಿಗೆ ಯೋಗವನ್ನು ಕಲಿಯಲು ಪ್ರೇರೇಪಿಸಿದರು. ಮೊಟ್ಟಮೊದಲ ಬಾರಿಗೆ ಯೋಗ ತರಬೇತುದಾರನ ಬಳಿಗೆ ಹೋದಾಗ, ಈ ಮುಗ್ಧ ಹುಡುಗಿ ಯೋಗ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ತರಬೇತುದಾರರಿಗೂ ಇತ್ತು! ಆದರೆ ಆ ತರಬೇತುದಾರರಿಗೂ ಬಹುಶಃ ಅನ್ವಿಯ ದೃಢತೆ ಬಗ್ಗೆ ತಿಳಿದಿರಲಿಲ್ಲ. ತನ್ನ ತಾಯಿಯೊಂದಿಗೆ ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದ ಆಕೆ ಈಗ ಯೋಗದಲ್ಲಿ ಪರಿಣತಳಾಗಿದ್ದಾಳೆ. ಇಂದು ಅನ್ವಿ ದೇಶಾದ್ಯಂತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾಳೆ. ಅನ್ವಿಗೆ ಯೋಗ ಹೊಸ ಜೀವನ ನೀಡಿದೆ. ಅನ್ವಿ ಯೋಗವನ್ನು ಮೈಗೂಡಿಸಿಕೊಂಡರು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರು. ಯೋಗವು ಅನ್ವಿಯ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ತಂದಿದೆ ಎಂದು ಅನ್ವಿಯ ಪೋಷಕರು ನನಗೆ ಹೇಳಿದರು. ಈಗ ಅವರ ಆತ್ಮವಿಶ್ವಾಸವು ಹೆಚ್ಚಾಗಿದೆ. ಯೋಗವು ಅನ್ವಿಯ ದೈಹಿಕ ಆರೋಗ್ಯವನ್ನು ಸುಧಾರಿಸಿದೆ ಮತ್ತು ಔಷಧಿಗಳ ಅಗತ್ಯವನ್ನೂ ಕಡಿಮೆ ಮಾಡಿದೆ. ದೇಶ-ವಿದೇಶಗಳಲ್ಲಿ 'ಮನ್ ಕಿ ಬಾತ್' ಕೇಳುಗರು ಯೋಗದಿಂದ ಅನ್ವಿಗೆ ಆಗಿರುವ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಯೋಗದ ಶಕ್ತಿಯನ್ನು ಪರೀಕ್ಷಿಸಲು ಬಯಸುವವರಿಗೆ ಅನ್ವಿ ಉತ್ತಮ ಕೇಸ್ ಸ್ಟಡಿ ಎಂದು ನಾನು ಭಾವಿಸುತ್ತೇನೆ. ಅಂತಹ ವಿಜ್ಞಾನಿಗಳು ಅನ್ವಿಯ ಯಶಸ್ಸಿನ ಆಧಾರದ ಮೇಲೆ ಅಧ್ಯಯನಗಳಿಗೆ ಮುಂದಾಗಬೇಕು ಮತ್ತು ಯೋಗದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಬೇಕು. ಅಂತಹ ಯಾವುದೇ ಸಂಶೋಧನೆಯು ಪ್ರಪಂಚದಾದ್ಯಂತ ಡೌನ್ ಸಿಂಡ್ರೋಮ್ನಿಂದ ಪೀಡಿತ ಮಕ್ಕಳಿಗೆ ಉತ್ತಮ ಪ್ರಯೋಜನ ನೀಡಬಹುದು. ಈಗ, ಯೋಗವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಬಹಳ ಪರಿಣಾಮಕಾರಿ ಎಂದು ಜಗತ್ತು ಒಪ್ಪಿಕೊಂಡಿದೆ. ವಿಶೇಷವಾಗಿ ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಯೋಗವು ಬಹಳಷ್ಟು ಸಹಾಯ ಮಾಡುತ್ತದೆ. ಯೋಗದ ಅಂತಹ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಸಂಸ್ಥೆಯು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ನಿರ್ಧರಿಸಿತು. ಇದೀಗ ವಿಶ್ವಸಂಸ್ಥೆಯು ಭಾರತದ ಮತ್ತೊಂದು ಪ್ರಯತ್ನವನ್ನು ಗುರುತಿಸಿ ಗೌರವಿಸಿದೆ. ಇದು 2017 ರಲ್ಲಿ ಪ್ರಾರಂಭವಾದ ಪ್ರಯತ್ನವಾಗಿದೆ, ಅದುವೇ "ಭಾರತದ ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮ". ಇದರ ಅಡಿಯಲ್ಲಿ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಲಕ್ಷಾಂತರ ಜನರು ಸರ್ಕಾರಿ ಕ್ಷೇಮ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಉಪಕ್ರಮವು ಅಂತರರಾಷ್ಟ್ರೀಯ ಸಂಸ್ಥೆಗಳ ಗಮನ ಸೆಳೆದ ರೀತಿ ಅಭೂತಪೂರ್ವವಾಗಿದೆ. ಚಿಕಿತ್ಸೆ ಪಡೆದ ಅರ್ಧದಷ್ಟು ಮಂದಿಯಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿರುವುದು ನಮಗೆಲ್ಲರಿಗೂ ಉತ್ತೇಜನದ ಸಂಗತಿಯಾಗಿದೆ. ಈ ಉಪಕ್ರಮಕ್ಕಾಗಿ ಶ್ರಮಿಸುತ್ತಿರುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ, ಅವರು ತಮ್ಮ ಅವಿರತ ಪರಿಶ್ರಮದಿಂದ ಇದನ್ನು ಯಶಸ್ವಿಗೊಳಿಸಿದ್ದಾರೆ.
ಸ್ನೇಹಿತರೇ, ಮಾನವ ಜೀವನದ ವಿಕಾಸದ ಪ್ರಯಾಣವು ನಿರಂತರವಾಗಿ ನೀರಿನೊಂದಿಗೆ ಸಂಪರ್ಕ ಹೊಂದಿದೆ - ಅದು ಸಮುದ್ರಗಳಾಗಿರಬಹುದು, ನದಿ ಅಥವಾ ಕೆರೆಕಟ್ಟೆಗಳಾಗಿರಬಹುದು. ಏಳೂವರೆ ಸಾವಿರ ಕಿಲೋಮೀಟರ್ (7500 ಕಿ.ಮೀ) ಗಿಂತ ಹೆಚ್ಚು ಉದ್ದದ ಕಡಲತೀರದ ಕಾರಣದಿಂದಾಗಿ ಸಮುದ್ರದೊಂದಿಗಿನ ನಮ್ಮ ಬಾಂಧವ್ಯವು ಅವಿನಾಭಾವವಾಗಿ ಉಳಿದುಕೊಂಡಿರುವುದು ಭಾರತದ ಅದೃಷ್ಟವಾಗಿದೆ. ಈ ಕರಾವಳಿಯು ಅನೇಕ ರಾಜ್ಯಗಳು ಮತ್ತು ದ್ವೀಪಗಳ ಮೂಲಕ ಹಾದುಹೋಗುತ್ತದೆ. ವಿವಿಧ ಸಮುದಾಯಗಳು ಮತ್ತು ವೈವಿಧ್ಯತೆಯಿಂದ ಕೂಡಿರುವ ಇಲ್ಲಿ ಭಾರತದ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬಂದಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ ಈ ಕರಾವಳಿ ಪ್ರದೇಶಗಳ ತಿನಿಸುಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಈ ಆಸಕ್ತಿದಾಯಕ ಸಂಗತಿಗಳ ಜೊತೆಗೆ, ಬೇಸರದ ವಿಷಯವೂ ಇದೆ. ನಮ್ಮ ಈ ಕರಾವಳಿ ಪ್ರದೇಶಗಳು ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಹವಾಮಾನ ಬದಲಾವಣೆಯು ಸಾಗರ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಬೆದರಿಕೆಯಾಗಿದೆ. ಮತ್ತೊಂದೆಡೆ, ನಮ್ಮ ಕಡಲತೀರಗಳಲ್ಲಿ ಹರಡಿರುವ ಕಸವು ಆತಂಕವನ್ನುಂಟುಮಾಡುತ್ತದೆ. ಈ ಸವಾಲುಗಳಿಗೆ ಗಂಭೀರ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇಲ್ಲಿ ನಾನು ದೇಶದ ಕರಾವಳಿ ಪ್ರದೇಶಗಳಲ್ಲಿ ಕಡಲತೀರದ ಸ್ವಚ್ಛತೆಯ ಬಗ್ಗೆ ಮಾತನಾಡಲು ಬಯಸುತ್ತೇನೆ 'ಸ್ವಚ್ಛ ಸಾಗರ-ಸುರಕ್ಷಿತ ಸಾಗರ'. ಜುಲೈ 5 ರಂದು ಪ್ರಾರಂಭವಾದ ಈ ಅಭಿಯಾನವು ವಿಶ್ವಕರ್ಮ ಜಯಂತಿಯ ದಿನವಾದ ಸೆಪ್ಟೆಂಬರ್ 17 ರಂದು ಮುಕ್ತಾಯಗೊಂಡಿತು. ಅಂದು ಕರಾವಳಿ ಸ್ವಚ್ಛತಾ ದಿನವೂ ಆಗಿತ್ತು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಆರಂಭವಾದ ಈ ಅಭಿಯಾನ 75 ದಿನಗಳ ಕಾಲ ನಡೆಯಿತು. ಇದರಲ್ಲಿ ಸಾರ್ವಜನಿಕರು ಭಾಗವಹಿಸಿದ್ದು ಕಣ್ಮನ ಸೆಳೆಯುವಂತಿತ್ತು. ಈ ಪ್ರಯತ್ನದ ಸಮಯದಲ್ಲಿ, ಇಡೀ ಎರಡೂವರೆ ತಿಂಗಳ ಕಾಲ ಅನೇಕ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಕಂಡುಬಂದವು. ಗೋವಾದಲ್ಲಿ ಸುದೀರ್ಘ ಮಾನವ ಸರಪಳಿ ನಿರ್ಮಿಸಲಾಯಿತು. ಕಾಕಿನಾಡದಲ್ಲಿ ಗಣಪತಿ ವಿಸರ್ಜನೆಯ ವೇಳೆ ಪ್ಲಾಸ್ಟಿಕ್ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಲಾಯಿತು. ಎನ್ಎಸ್ಎಸ್ನ ಸುಮಾರು 5000 ಯುವ ಸ್ನೇಹಿತರು 30 ಟನ್ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿದರು. ಒಡಿಶಾದಲ್ಲಿ ಮೂರು ದಿನಗಳಲ್ಲಿ, 20 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸ್ವಚ್ಛ ಸಾಗರ-ಸುರಕ್ಷಿತ ಸಾಗರ ಉಪಕ್ರಮಕ್ಕಾಗಿ ತಮ್ಮ ಕುಟುಂಬ ಮತ್ತು ಇತರರನ್ನು ಪ್ರೇರೇಪಿಸುವುದಾಗಿ ಪ್ರತಿಜ್ಞೆ ಮಾಡಿದರು. ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರನ್ನು ನಾನು ಅಭಿನಂದಿಸುತ್ತೇನೆ.
ನಾನು ಚುನಾಯಿತ ಪ್ರತಿನಿಧಿಗಳೊಂದಿಗೆ, ವಿಶೇಷವಾಗಿ ನಗರಗಳ ಮೇಯರ್ಗಳು ಮತ್ತು ಗ್ರಾಮಗಳ ಸರಪಂಚರೊಂದಿಗೆ ಸಂವಾದ ನಡೆಸಿದಾಗ, ಸ್ಥಳೀಯ ಸಮುದಾಯಗಳು ಮತ್ತು ಸ್ಥಳೀಯ ಸಂಸ್ಥೆಗಳನ್ನು ಸ್ವಚ್ಛತೆಯಂತಹ ಪ್ರಯತ್ನಗಳಲ್ಲಿ ಸೇರಿಸಿಕೊಳ್ಳುವಂತೆ ಮತ್ತು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅವರನ್ನು ಒತ್ತಾಯಿಸುತ್ತೇನೆ.
ಬೆಂಗಳೂರಿನಲ್ಲಿ ಯೂತ್ ಫಾರ್ ಪರಿವರ್ತನ್ ಎಂಬ ಒಂದು ತಂಡವಿದೆ. ಕಳೆದ ಎಂಟು ವರ್ಷಗಳಿಂದ ಈ ತಂಡವು ಸ್ವಚ್ಛತೆ ಮತ್ತು ಇತರ ಸಮುದಾಯ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದೆ. ಅವರ ಧ್ಯೇಯವಾಕ್ಯವು ತುಂಬಾ ಸ್ಪಷ್ಟವಾಗಿದೆ - 'ದೂರುವುದನ್ನು ನಿಲ್ಲಿಸಿ, ಕೆಲಸ ಆರಂಭಿಸಿ'. ಈ ತಂಡ ಇದುವರೆಗೆ ನಗರದಾದ್ಯಂತ 370ಕ್ಕೂ ಹೆಚ್ಚು ಸ್ಥಳಗಳನ್ನು ಸುಂದರಗೊಳಿಸಿದೆ. ಯೂತ್ ಫಾರ್ ಪರಿವರ್ತನ್ ಅಭಿಯಾನವು ಪ್ರತಿ ಸ್ಥಳದಲ್ಲಿ 100 ರಿಂದ 150 ನಾಗರಿಕರನ್ನು ಸಂಪರ್ಕಿಸಿದೆ. ಪ್ರತಿ ಭಾನುವಾರ ಈ ಕಾರ್ಯಕ್ರಮವು ಬೆಳಿಗ್ಗೆ ಪ್ರಾರಂಭವಾಗಿ ಮಧ್ಯಾಹ್ನದವರೆಗೆ ಮುಂದುವರಿಯುತ್ತದೆ. ಈ ಕಾರ್ಯದಲ್ಲಿ ಕಸ ಎತ್ತುವುದಷ್ಟೇ ಅಲ್ಲ, ಗೋಡೆಗಳಿಗೆ ಬಣ್ಣ ಬಳಿಯುವ, ಕಲಾತ್ಮಕ ರೇಖಾಚಿತ್ರಗಳನ್ನು ಬಿಡಿಸುವ ಕೆಲಸವೂ ನಡೆಯುತ್ತದೆ. ಅನೇಕ ಸ್ಥಳಗಳಲ್ಲಿ, ನೀವು ಪ್ರಸಿದ್ಧ ವ್ಯಕ್ತಿಗಳ ರೇಖಾಚಿತ್ರಗಳನ್ನು ಮತ್ತು ಅವರ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಸಹ ನೋಡಬಹುದು. ಬೆಂಗಳೂರಿನ ಯೂತ್ ಫಾರ್ ಪರಿವರ್ತನ್ ಪ್ರಯತ್ನದ ನಂತರ, ಮೀರತ್ನ 'ಕಬಾದ್ ಸೆ ಜುಗಾದ್' ಅಭಿಯಾನದ ಬಗ್ಗೆಯೂ ಹೇಳಬೇಕು. ಈ ಅಭಿಯಾನವು ಪರಿಸರ ಸಂರಕ್ಷಣೆ ಹಾಗೂ ನಗರದ ಸುಂದರೀಕರಣಕ್ಕೆ ಸಂಬಂಧಿಸಿದ್ದು. ಈ ಅಭಿಯಾನದ ವಿಶೇಷವೆಂದರೆ, ಇದರಲ್ಲಿ ಕಬ್ಬಿಣದ ಗುಜರಿ ವಸ್ತು, ಪ್ಲಾಸ್ಟಿಕ್ ತ್ಯಾಜ್ಯ, ಹಳೆಯ ಟೈರ್ ಮತ್ತು ಡ್ರಮ್ಗಳಂತಹ ತ್ಯಾಜ್ಯವನ್ನು ಬಳಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕ ಸ್ಥಳಗಳನ್ನು ಹೇಗೆ ಸುಂದರಗೊಳಿಸಬಹುದು ಎಂಬುದಕ್ಕೆ ಈ ಅಭಿಯಾನವೂ ಒಂದು ಉದಾಹರಣೆಯಾಗಿದೆ. ಈ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ನನ್ನ ಹೃದಯಾಂತರಾಳದ ಅಭಿನಂದನೆಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ದೇಶದಾದ್ಯಂತ ಹಬ್ಬದ ಉತ್ಸಾಹವಿದೆ. ನಾಳೆ ನವರಾತ್ರಿಯ ಮೊದಲ ದಿನ. ಇದರಲ್ಲಿ ದೇವಿಯ ಮೊದಲ ಅವತಾರ 'ಮಾತೆ ಶೈಲಪುತ್ರಿ'ಯನ್ನು ಪೂಜಿಸುತ್ತೇವೆ. ಇಲ್ಲಿಂದ ಒಂಬತ್ತು ದಿನ ಸ್ವಯಂ ಶಿಸ್ತು, ಸಂಯಮ, ಉಪವಾಸವಿರುತ್ತದೆ, ನಂತರ ವಿಜಯದಶಮಿ ಹಬ್ಬವೂ ಇರುತ್ತದೆ. ಒಂದು ರೀತಿಯಲ್ಲಿ ನೋಡಿದರೆ ನಮ್ಮ ಹಬ್ಬಗಳಲ್ಲಿ ನಂಬಿಕೆ ಮತ್ತು ಅಧ್ಯಾತ್ಮದ ಜೊತೆಗೆ ಗಹನವಾದ ಸಂದೇಶ ಅಡಗಿರುವುದೂ ತಿಳಿಯುತ್ತದೆ. ಶಿಸ್ತು ಮತ್ತು ಸಂಯಮದ ಮೂಲಕ ‘ಸಿದ್ಧಿ’ಯನ್ನು ಸಾಧಿಸಿ, ನಂತರ ವಿಜಯೋತ್ಸವದ ಹಬ್ಬ, ಅದು ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸುವ ಮಾರ್ಗವಾಗಿದೆ. ದಸರಾ ನಂತರ, ಧನ್ತೆರೇಸ್ ಮತ್ತು ದೀಪಾವಳಿ ಹಬ್ಬಗಳು ಬರುತ್ತವೆ.
ಸ್ನೇಹಿತರೇ, ಕಳೆದ ಕೆಲವು ವರ್ಷಗಳಲ್ಲಿ, ದೇಶದ ಹೊಸ ಸಂಕಲ್ಪವೂ ನಮ್ಮ ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ. ನಿಮಗೆಲ್ಲ ಗೊತ್ತೇ ಇದೆ, ಇದು 'ವೋಕಲ್ ಫಾರ್ ಲೋಕಲ್'ನ ಸಂಕಲ್ಪ. ನಾವು ಈಗ ನಮ್ಮ ದೇಶೀಯ ಕುಶಲಕರ್ಮಿಗಳು, ಕಸುಬುದಾರರು ಮತ್ತು ವ್ಯಾಪಾರಿಗಳನ್ನು ಹಬ್ಬದ ಸಂತೋಷದಲ್ಲಿ ಸೇರಿಸಿಕೊಳ್ಳುತ್ತೇವೆ. ಅಕ್ಟೋಬರ್ 2 ರಂದು ಬಾಪು ಅವರ ಜನ್ಮದಿನದ ಸಂದರ್ಭದಲ್ಲಿ ನಾವು ಈ ಅಭಿಯಾನವನ್ನು ತೀವ್ರಗೊಳಿಸುವ ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಖಾದಿ, ಕೈಮಗ್ಗ, ಕರಕುಶಲ ವಸ್ತುಗಳು...ಈ ಎಲ್ಲಾ ಉತ್ಪನ್ನಗಳ ಜೊತೆಗೆ, ನೀವು ಸ್ಥಳೀಯ ವಸ್ತುಗಳನ್ನು ಖರೀದಿಸಬೇಕು. ಅಷ್ಟಕ್ಕೂ, ಈ ಹಬ್ಬದ ನಿಜವಾದ ಸಂತೋಷವಿರುವುದು ಎಲ್ಲರೂ ಅದರ ಭಾಗವಾದಾಗ ಮಾತ್ರ. ಆದ್ದರಿಂದ, ಸ್ಥಳೀಯ ಉತ್ಪನ್ನಗಳ ಕೆಲಸಕ್ಕೆ ಸಂಬಂಧಿಸಿದ ಜನರನ್ನು ನಾವು ಬೆಂಬಲಿಸಬೇಕು. ಹಬ್ಬದ ಸಮಯದಲ್ಲಿ ನಾವು ನೀಡುವ ಯಾವುದೇ ಉಡುಗೊರೆಗಳಲ್ಲಿ ಈ ರೀತಿಯ ಉತ್ಪನ್ನಗಳು ಇರುವಂತೆ ನೋಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ಈಗ, ಈ ಅಭಿಯಾನವು ವಿಶೇಷವಾಗಿದೆ ಏಕೆಂದರೆ ಆಜಾದಿ ಕಾ ಅಮೃತ ಮಹೋತ್ಸವದ ಸಮಯದಲ್ಲಿ, ನಾವು ಸಹ ಸ್ವಾವಲಂಬಿ ಭಾರತದ ಗುರಿಯೊಂದಿಗೆ ಮುಂದುವರಿಯುತ್ತೇವೆ. ಇದು ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ನಿಜವಾದ ಗೌರವವಾಗಿದೆ. ಅದಕ್ಕಾಗಿಯೇ ಖಾದಿ, ಕೈಮಗ್ಗ ಅಥವಾ ಕರಕುಶಲ ಉತ್ಪನ್ನಗಳ ಖರೀದಿಯಲ್ಲಿ ಈ ಬಾರಿ ಎಲ್ಲಾ ದಾಖಲೆಗಳನ್ನು ಮುರಿಯಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ. ಹಬ್ಬ ಹರಿದಿನಗಳಲ್ಲಿ ಪ್ಯಾಕಿಂಗ್ ಮತ್ತು ಪ್ಯಾಕೇಜಿಂಗ್ಗೆ ಪಾಲಿಥಿನ್ ಚೀಲಗಳನ್ನು ಹೆಚ್ಚಾಗಿ ಬಳಸುವುದನ್ನು ನಾವು ನೋಡಿದ್ದೇವೆ. ಶುಚಿತ್ವ ಕಾಪಾಡಬೇಕಾದ ಹಬ್ಬ ಹರಿದಿನಗಳಲ್ಲಿ ಪಾಲಿಥಿನ್ನಂತಹ ಹಾನಿಕಾರಕ ಕಸ ನಮ್ಮ ಹಬ್ಬಗಳ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ, ನಾವು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ಯೇತರ ಚೀಲಗಳನ್ನು ಮಾತ್ರ ಬಳಸಬೇಕು. ಸೆಣಬು, ಹತ್ತಿ, ಬಾಳೆ ನಾರಿನಿಂದ ಮಾಡಿದ ಹಲವು ಸಾಂಪ್ರದಾಯಿಕ ಚೀಲಗಳ ಟ್ರೆಂಡ್ ಮತ್ತೊಮ್ಮೆ ಹೆಚ್ಚುತ್ತಿದೆ. ಹಬ್ಬ ಹರಿದಿನಗಳಲ್ಲಿ ಅವುಗಳನ್ನು ಪ್ರೋತ್ಸಾಹಿಸುವುದು, ಸ್ವಚ್ಛತೆಯ ಜೊತೆಗೆ ನಮ್ಮ ಆರೋಗ್ಯ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಪರಹಿತ್ ಸರಿಸ್ ಧರಮ್ ನಹೀ ಭಾಯಿ' ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಅಂದರೆ ಇತರರಿಗೆ ಉಪಕಾರ ಮಾಡುವುದು, ಪರರ ಸೇವೆ ಮಾಡುವುದು, ದಾನ ಮಾಡುವುದಕ್ಕಿಂತ ಬೇರೆ ಧರ್ಮ ಇನ್ನೊಂದಿಲ್ಲ. ಇತ್ತೀಚಿಗೆ ದೇಶದಲ್ಲಿ ಈ ಸಮಾಜ ಸೇವಾ ಮನೋಭಾವದ ಮತ್ತೊಂದು ಝಲಕ್ ಕಾಣಿಸಿದೆ. ಜನರು ಮುಂದೆ ಬಂದು ಟಿಬಿ ರೋಗಿಯನ್ನು ದತ್ತು ತೆಗೆದುಕೊಳ್ಳುತ್ತಿರುವುದನ್ನು ಮತ್ತು ಪೌಷ್ಟಿಕಾಂಶದ ಆಹಾರವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಮುಂದಾಳತ್ವ ವಹಿಸುತ್ತಿರುವುದನ್ನು ನೀವು ನೋಡಿರಬೇಕು ವಾಸ್ತವವಾಗಿ, ಇದು ಕ್ಷಯ ಮುಕ್ತ ಭಾರತ ಅಭಿಯಾನದ ಒಂದು ಭಾಗವಾಗಿದೆ, ಇದರ ಆಧಾರವೇ ಸಾರ್ವಜನಿಕ ಭಾಗವಹಿಸುವಿಕೆಯಾಗಿದೆ; ಕರ್ತವ್ಯ ಪ್ರಜ್ಞೆ. ಸರಿಯಾದ ಪೋಷಣೆಯೊಂದಿಗೆ, ಸರಿಯಾದ ಸಮಯದಲ್ಲಿ ಸರಿಯಾದ ಔಷಧಿಗಳೊಂದಿಗೆ ಕ್ಷಯಯನ್ನು ಗುಣಪಡಿಸಲು ಸಾಧ್ಯವಿದೆ. ಸಾರ್ವಜನಿಕ ಸಹಭಾಗಿತ್ವದ ಈ ಶಕ್ತಿಯಿಂದ ಭಾರತವು 2025 ರ ವೇಳೆಗೆ ಖಂಡಿತವಾಗಿಯೂ ಕ್ಷಯ ರೋಗದಿಂದ ಮುಕ್ತವಾಗಲಿದೆ ಎಂದು ನನಗೆ ನಂಬಿಕೆಯಿದೆ.
ಸ್ನೇಹಿತರೇ, ದಾದ್ರಾ-ನಗರ ಹವೇಲಿ ಮತ್ತು ದಮನ್-ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲೂ ಇಂತಹ ಹೃದಯಸ್ಪರ್ಶಿ ಉದಾಹರಣೆಗಳ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿ ವಾಸಿಸುತ್ತಿರುವ ಜಿನು ರಾವತಿಯಾ ಅವರು, ಗ್ರಾಮ ದತ್ತು ಕಾರ್ಯಕ್ರಮದ ಅಡಿಯಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು 50 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಬರೆದಿದ್ದಾರೆ. ಇದು ಜಿನು ಅವರ ಗ್ರಾಮವನ್ನು ಸಹ ಒಳಗೊಂಡಿದೆ. ಈ ವೈದ್ಯಕೀಯ ವಿದ್ಯಾರ್ಥಿಗಳು ಅನಾರೋಗ್ಯದಿಂದ ದೂರವಿರುವ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸುತ್ತಾರೆ, ಚೇತರಿಸಿಕೊಳ್ಳಲು ಸಹಾಯ ಮಾಡುತ್ತಾರೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಪರೋಪಕಾರದ ಮನೋಭಾವವು ಹಳ್ಳಿಗಳಲ್ಲಿ ವಾಸಿಸುವ ಜನರ ಜೀವನದಲ್ಲಿ ಹೊಸ ಸಂತೋಷವನ್ನು ತಂದಿದೆ. ಈ ಪ್ರಯತ್ನಕ್ಕಾಗಿ ನಾನು ವೈದ್ಯಕೀಯ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ, 'ಮನ್ ಕಿ ಬಾತ್' ನಲ್ಲಿ ವಿವಿಧ ಹೊಸ ವಿಷಯಗಳು ಚರ್ಚೆಯಾಗುತ್ತಿವೆ. ಅನೇಕ ಬಾರಿ, ಈ ಕಾರ್ಯಕ್ರಮದ ಮೂಲಕ, ಕೆಲವು ಹಳೆಯ ವಿಷಯಗಳ ಆಳವನ್ನು ತಿಳಿಯುವ ಅವಕಾಶವೂ ನಮಗೆ ಸಿಗುತ್ತದೆ. ಕಳೆದ ತಿಂಗಳು 'ಮನ್ ಕಿ ಬಾತ್' ನಲ್ಲಿ, ನಾನು ಸಿರಿಧಾನ್ಯಗಳ ಬಗ್ಗೆ ಮತ್ತು 2023 ರ ವರ್ಷವನ್ನು 'ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ' ಎಂದು ಆಚರಿಸುವ ಬಗ್ಗೆ ಚರ್ಚಿಸಿದ್ದೆ. ಜನರು ಈ ವಿಷಯದ ಬಗ್ಗೆ ಬಹಳ ಕುತೂಹಲಿಗಳಾಗಿದ್ದಾರೆ. ಅಂತಹ ಹಲವಾರು ಪತ್ರಗಳು ನನಗೆ ಬಂದಿವೆ, ಅದರಲ್ಲಿ ಜನರು ಸಿರಿಧಾನ್ಯವನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಮಾಡಿಕೊಂಡಿರುವ ಬಗ್ಗೆ ಬರೆದಿದ್ದಾರೆ. ಕೆಲವರು ಸಿರಿಧಾನ್ಯದಿಂದ ಮಾಡಿದ ಸಾಂಪ್ರದಾಯಿಕ ತಿನಿಸುಗಳ ಬಗ್ಗೆಯೂ ಹೇಳಿದ್ದಾರೆ. ಇವು ದೊಡ್ಡ ಬದಲಾವಣೆಯ ಲಕ್ಷಣಗಳಾಗಿವೆ. ಜನರ ಈ ಉತ್ಸಾಹವನ್ನು ನೋಡಿ, ನಾವು ಒಟ್ಟಾಗಿ ಇ-ಪುಸ್ತಕವೊಂದನ್ನು ಸಿದ್ಧಪಡಿಸಬೇಕು ಎಂದು ನಾನು ಭಾವಿಸುತ್ತೇನೆ, ಅದರಲ್ಲಿ ಜನರು ತಮ್ಮ ಅನುಭವಗಳನ್ನು ಮತ್ತು ಸಿರಿಧಾನ್ಯಗಳಿಂದ ಮಾಡಿದ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು, ಆದ್ದರಿಂದ, ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಪ್ರಾರಂಭವಾಗುವ ಮೊದಲು, ನಾವು ಸಾರ್ವಜನಿಕ ವಿಶ್ವಕೋಶವನ್ನು ಹೊಂದಿರುತ್ತೇವೆ. ಅದನ್ನು MyGov ಪೋರ್ಟಲ್ನಲ್ಲಿ ಪ್ರಕಟಿಸಬಹುದಾಗಿದೆ.
ಸ್ನೇಹಿತರೇ, ಈ ಬಾರಿಯ 'ಮನ್ ಕಿ ಬಾತ್' ಇಲ್ಲಿಗೆ ಮಗಿಯಿತು. ಆದರೆ ನಾನು ಹೊರಡುವ ಮೊದಲು, ರಾಷ್ಟ್ರೀಯ ಕ್ರೀಡಾಕೂಟದ ಬಗ್ಗೆಯೂ ಹೇಳಲು ಬಯಸುತ್ತೇನೆ. ಸೆಪ್ಟೆಂಬರ್ 29 ರಿಂದ ಗುಜರಾತ್ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇದು ಬಹಳ ವಿಶೇಷವಾದ ಸಂದರ್ಭ, ಏಕೆಂದರೆ ಹಲವು ವರ್ಷಗಳ ನಂತರ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹಿಂದಿನ ಕ್ರೀಡಾಕೂಟಗಳನ್ನು ರದ್ದುಗೊಳಿಸಬೇಕಾಯಿತು. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ನನ್ನ ಶುಭಾಶಯಗಳು. ಆಟಗಾರರ ಉತ್ಸಾಹವನ್ನು ಹೆಚ್ಚಿಸಲು, ಅಂದು ನಾನು ಅವರ ಮಧ್ಯೆ ಇರುತ್ತೇನೆ. ನೀವೆಲ್ಲರೂ ರಾಷ್ಟ್ರೀಯ ಕ್ರೀಡಾಕೂಟವನ್ನು ನೋಡಬೇಕು ಮತ್ತು ನಮ್ಮ ಆಟಗಾರರನ್ನು ಪ್ರೋತ್ಸಾಹಿಸಬೇಕು. ನಾನೀಗ ತೆರಳುತ್ತಿದ್ದೇನೆ. ಮುಂದಿನ ತಿಂಗಳು 'ಮನ್ ಕಿ ಬಾತ್' ನಲ್ಲಿ ಹೊಸ ವಿಷಯಗಳೊಂದಿಗೆ ನಾವು ಮತ್ತೆ ಭೇಟಿಯಾಗೋಣ.
ಧನ್ಯವಾದಗಳು,
ನಮಸ್ಕಾರ!
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ!
ಈ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಎಲ್ಲಾ ಪತ್ರಗಳು, ಸಂದೇಶಗಳು ಮತ್ತು ಕಾರ್ಡ್ ಗಳು ನನ್ನ ಕಛೇರಿಯನ್ನು ತ್ರಿವರ್ಣ ಧ್ವಜದ ಬಣ್ಣದಲ್ಲಿ ತೋಯಿಸಿವೆ. ತ್ರಿವರ್ಣ ಧ್ವಜ ಚಿತ್ರವನ್ನು ಹೊಂದಿರದ ಅಥವಾ ತ್ರಿವರ್ಣ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡದ ಯಾವುದೇ ಪತ್ರವನ್ನು ನಾನು ನೋಡಿಲ್ಲ. ಮಕ್ಕಳು ಮತ್ತು ಯುವ ಸ್ನೇಹಿತರು ಅಮೃತ ಮಹೋತ್ಸವದಲ್ಲಿ ಸುಂದರವಾದ ಚಿತ್ರಗಳು ಮತ್ತು ಕಲಾಕೃತಿಗಳನ್ನು ಕಳುಹಿಸಿದ್ದಾರೆ. ಸ್ವಾತಂತ್ರ್ಯದ ಸಂಭ್ರಮದ ಈ ತಿಂಗಳಲ್ಲಿ ನಮ್ಮ ಇಡೀ ದೇಶದಲ್ಲಿ, ಪ್ರತಿ ನಗರದಲ್ಲಿ, ಪ್ರತಿ ಹಳ್ಳಿಯಲ್ಲಿ ಅಮೃತ ಮಹೋತ್ಸವದ ಅಮೃತಧಾರೆ ಹರಿಯುತ್ತಿದೆ. ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ, ನಾವು ದೇಶದ ಸಾಮೂಹಿಕ ಶಕ್ತಿಯನ್ನು ನೋಡಿದ್ದೇವೆ. ಸಾಕ್ಷಾತ್ಕಾರದ ಪ್ರಜ್ಞೆ ಬಂದಿದೆ. ಇಷ್ಟು ದೊಡ್ಡ ದೇಶ, ಹಲವು ವೈವಿಧ್ಯಗಳು, ಆದರೆ ತ್ರಿವರ್ಣ ಧ್ವಜವನ್ನು ಹಾರಿಸುವ ವಿಷಯ ಬಂದಾಗ, ಎಲ್ಲರಲ್ಲೂ ಒಂದೇ ಉತ್ಸಾಹ ಹರಿಯುತ್ತಿತ್ತು. ಜನರು ಸ್ವತಃ ಮುಂದೆ ಬಂದರು, ತ್ರಿವರ್ಣದ ಹೆಮ್ಮೆಯ ಜೊತೆ ಮುಂಚೂಣಿಯಲ್ಲಿದ್ದರು. ಸ್ವಚ್ಛತಾ ಅಭಿಯಾನ ಮತ್ತು ಲಸಿಕೆ ಅಭಿಯಾನದಲ್ಲಿ ದೇಶದ ಚೈತನ್ಯವನ್ನು ನಾವು ನೋಡಿದ್ದೇವೆ. ಅಮೃತ ಮಹೋತ್ಸವದಲ್ಲಿ ನಾವು ಮತ್ತೆ ಅದೇ ದೇಶಭಕ್ತಿಯ ಮನೋಭಾವವನ್ನು ನೋಡುತ್ತಿದ್ದೇವೆ. ನಮ್ಮ ಸೈನಿಕರು ಎತ್ತರದ ಪರ್ವತಗಳ ಶಿಖರಗಳಲ್ಲಿ, ದೇಶದ ಗಡಿಗಳಲ್ಲಿ ಮತ್ತು ಸಮುದ್ರದ ಮಧ್ಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ತ್ರಿವರ್ಣ ಧ್ವಜ ಪ್ರಚಾರಕ್ಕಾಗಿ ಜನರು ವಿಭಿನ್ನ ವಿನೂತನ ಐಡಿಯಾಗಳೊಂದಿಗೆ ಬಂದರು. ಉದಾಹರಣೆಗೆ ಯುವ ಸ್ನೇಹಿತ ಕೃಷ್ಣ್ ಅನಿಲ್ ಜೀ ಅವರು. ಅನಿಲ್ ಜೀ ಅವರು ಒಗಟು ಕಲಾವಿದರಾಗಿದ್ದು, ದಾಖಲೆ ಸಮಯದಲ್ಲಿ ಸುಂದರವಾದ ತ್ರಿವರ್ಣ ಮೊಸಾಯಿಕ್ ಕಲೆಯನ್ನು ರಚಿಸಿದ್ದಾರೆ. ಕರ್ನಾಟಕದ ಕೋಲಾರದಲ್ಲಿ ಜನರು 630 ಅಡಿ ಉದ್ದ ಮತ್ತು 205 ಅಡಿ ಅಗಲದ ತ್ರಿವರ್ಣ ಧ್ವಜವನ್ನು ಹಿಡಿದು ವಿಶಿಷ್ಟ ದೃಶ್ಯವನ್ನು ಪ್ರಸ್ತುತಪಡಿಸಿದರು.
ಅಸ್ಸಾಂನಲ್ಲಿ, ದಿಘಾಲಿಪುಖುರಿ ಯುದ್ಧ ಸ್ಮಾರಕದಲ್ಲಿ ಹಾರಿಸಲು ಸರ್ಕಾರಿ ನೌಕರರು ತಮ್ಮ ಕೈಗಳಿಂದ 20 ಅಡಿ ತ್ರಿವರ್ಣ ಧ್ವಜವನ್ನು ರಚಿಸಿದರು. ಅದೇ ರೀತಿ ಇಂದೋರ್ನ ಜನರು ಮಾನವ ಸರಪಳಿಯ ಮೂಲಕ ಭಾರತದ ನಕ್ಷೆಯನ್ನು ರಚಿಸಿದರು. ಚಂಡೀಗಢದಲ್ಲಿ ಯುವಕರು ಬೃಹತ್ ಮಾನವ ತ್ರಿವರ್ಣ ಧ್ವಜವನ್ನು ತಯಾರಿಸಿದ್ದಾರೆ. ಈ ಎರಡೂ ಪ್ರಯತ್ನಗಳು ಗಿನ್ನೆಸ್ ದಾಖಲೆಗಳಲ್ಲಿ ದಾಖಲಾಗಿವೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶದ ಗಂಗೋಟ್ ಪಂಚಾಯತ್ನಲ್ಲಿ ಒಂದು ದೊಡ್ಡ ಸ್ಫೂರ್ತಿದಾಯಕ ಉದಾಹರಣೆಯೂ ಕಂಡುಬಂದಿದೆ. ಇಲ್ಲಿ ಪಂಚಾಯತ್ನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಲಸೆ ಕಾರ್ಮಿಕರ ಮಕ್ಕಳನ್ನು ಮುಖ್ಯ ಅತಿಥಿಗಳಾಗಿ ಕರೆಸಿ ಗೌರವಿಸಲಾಯಿತು.
ಸ್ನೇಹಿತರೇ, ಅಮೃತ ಮಹೋತ್ಸವದ ಈ ಬಣ್ಣಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಇತರ ದೇಶಗಳಲ್ಲಿಯೂ ಕಂಡುಬರುತ್ತವೆ. ಬೋಟ್ಸ್ ವಾನಾದಲ್ಲಿ ವಾಸಿಸುವ ಸ್ಥಳೀಯ ಗಾಯಕರು 75 ದೇಶಭಕ್ತಿಯ ಗೀತೆಗಳ ಮೂಲಕ ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿದರು. ಇದರಲ್ಲಿ ಇನ್ನೂ ವಿಶೇಷವೆಂದರೆ ಈ 75 ಹಾಡುಗಳನ್ನು ಹಿಂದಿ, ಪಂಜಾಬಿ, ಗುಜರಾತಿ, ಬಾಂಗ್ಲಾ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ ಮತ್ತು ಸಂಸ್ಕೃತ ಮುಂತಾದ ಭಾಷೆಗಳಲ್ಲಿ ಹಾಡಲಾಗಿದೆ. ಅದೇ ರೀತಿ ನಮೀಬಿಯಾದಲ್ಲಿ ಇಂಡೋ-ನಮೀಬಿಯಾ ಸಾಂಸ್ಕೃತಿಕ-ಸಾಂಪ್ರದಾಯಿಕ ಸಂಬಂಧಗಳ ಕುರಿತು ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಲಾಗಿದೆ.
ಸ್ನೇಹಿತರೇ, ನಾನು ನಿಮ್ಮೊಂದಿಗೆ ಇನ್ನೊಂದು ಸಂತೋಷದ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು. ಅಲ್ಲಿ ದೂರದರ್ಶನ ಧಾರಾವಾಹಿ ‘ಸ್ವರಾಜ್’ ಪ್ರದರ್ಶನ ಏರ್ಪಡಿಸಿದ್ದರು. ಅದರ ಪ್ರಥಮ ಪ್ರದರ್ಶನ ವೀಕ್ಷಿಸುವ ಅವಕಾಶ ನನಗೆ ಸಿಕ್ಕಿತು. ದೇಶದ ಯುವ ಪೀಳಿಗೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅಪ್ರತಿಮ ವೀರ ಮತ್ತು ನಾಯಕಿಯರ ಶ್ರಮವನ್ನು ಪರಿಚಯಿಸಲು ಇದು ಉತ್ತಮ ಉಪಕ್ರಮವಾಗಿದೆ. ದೂರದರ್ಶನದಲ್ಲಿ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ. ಮತ್ತು ಅದು 75 ವಾರಗಳವರೆಗೆ ಮುಂದುವರಿಯುತ್ತದೆ ಎಂದು ನನಗೆ ತಿಳಿಸಲಾಯಿತು. ಅದನ್ನು ನೀವೂ ಕೂಡಾ ವೀಕ್ಷಿಸಲು ಮತ್ತು ಮನೆಯ ಮಕ್ಕಳಿಗೆ ತೋರಿಸಲು ಸಮಯವನ್ನು ಮೀಸಲಿಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಮತ್ತು ಅದನ್ನು ರೆಕಾರ್ಡ್ ಮಾಡಬಹುದು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೋಮವಾರ ಶಾಲಾ-ಕಾಲೇಜು ಪ್ರಾರಂಭವಾದಾಗ ವಿಶೇಷ ಕಾರ್ಯಕ್ರಮ ರೂಪಿಸಿ ಎಲ್ಲರೂ ವೀಕ್ಷಿಸಬಹುದು, ಇದರಿಂದ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಜನ್ಮದ ಮಹಾನ್ ವೀರರ ಬಗ್ಗೆ ಹೊಸ ಜಾಗೃತಿ ಮೂಡುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವವು ಮುಂದಿನ ವರ್ಷ ಅಂದರೆ ಆಗಸ್ಟ್ 2023 ರವರೆಗೆ ಮುಂದುವರಿಯುತ್ತದೆ. ದೇಶಕ್ಕಾಗಿ, ಸ್ವಾತಂತ್ರ್ಯ ಹೋರಾಟಗಾರರಿಗಾಗಿ, ನಾವು ಆಯೋಜಿಸುತ್ತಿರುವ ಬರಹಗಳು ಮತ್ತು ಕಾರ್ಯಕ್ರಮಗಳನ್ನು ನಾವು ಮುಂದುವರಿಸಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪೂರ್ವಜರ ಜ್ಞಾನ, ನಮ್ಮ ಪೂರ್ವಜರ ದೂರದೃಷ್ಟಿ ಮತ್ತು ಏಕಾತ್ಮಚಿಂತನ, ಸಮಗ್ರ ಸ್ವಯಂ ಸಾಕ್ಷಾತ್ಕಾರವು ಇಂದಿಗೂ ಬಹಳ ಮಹತ್ವದ್ದಾಗಿದೆ; ನಾವು ಅದರ ಆಳಕ್ಕೆ ಹೋದಾಗ, ನಾವು ಆಶ್ಚರ್ಯದಿಂದ ತುಂಬಿರುತ್ತೇವೆ. ನಮ್ಮ ಸಾವಿರಾರು ವರ್ಷಗಳ ಋಗ್ವೇದ! ಋಗ್ವೇದದಲ್ಲಿ ಹೀಗೆ ಹೇಳಲಾಗಿದೆ:-
ಓಮನ್-ಮಾಪೋ ಮಾನುಷಿ: ಅಮೃತಕಂ ಧಾತ್ ತೋಕಾಯ್ ತನಯಾಯ ಶ್ಯಾಮ್ಯೋ: |
ಯೂಯಂ ಹಿಸಥ ಭಿಷಜೋ ಮಾತೃತಮಾ ವಿಶ್ವಸ್ಯ ಸ್ಥಾತು: ಜಗತೋ ಜನಿತ್ರಿ: ||
ಅರ್ಥ - ಓ ನೀರು, ನೀನು ಮಾನವೀಯತೆಯ ಅತ್ಯುತ್ತಮ ಸ್ನೇಹಿತ. ನೀನು ಜೀವದಾತ, ನಿನ್ನಿಂದ ಆಹಾರ ಉತ್ಪತ್ತಿಯಾಗುತ್ತದೆ ಮತ್ತು ನಿನ್ನಿಂದಲೇ ನಮ್ಮ ಮಕ್ಕಳ ಯೋಗಕ್ಷೇಮ. ನೀನು ನಮಗೆ ರಕ್ಷಕ ಮತ್ತು ಎಲ್ಲ ದುಷ್ಟರಿಂದ ನಮ್ಮನ್ನು ದೂರವಿಡುವವ,. ನೀನೇ ಅತ್ಯುತ್ತಮ ಔಷಧ, ಮತ್ತು ನೀನು ಈ ಬ್ರಹ್ಮಾಂಡದ ಪೋಷಕ.
ಈ ಕುರಿತು ಯೋಚಿಸಿ... ನೀರು ಮತ್ತು ನೀರಿನ ಸಂರಕ್ಷಣೆಯ ಮಹತ್ವವನ್ನು ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ. ಇಂದಿನ ಸಂದರ್ಭದಲ್ಲಿ ನಮ್ಮ ಹಿಂದಿನವರ ಜ್ಞಾನವನ್ನು ನೋಡಿದಾಗ, ನಾವು ರೋಮಾಂಚನಗೊಳ್ಳುತ್ತೇವೆ, ಆದರೆ ರಾಷ್ಟ್ರವು ಈ ಜ್ಞಾನವನ್ನು ತನ್ನ ಶಕ್ತಿಯಾಗಿ ಸ್ವೀಕರಿಸಿದಾಗ, ಅವರ ಶಕ್ತಿಯು ಹಲವಾರು ಪಟ್ಟು ಹೆಚ್ಚಾಗುತ್ತದೆ. ನಾಲ್ಕು ತಿಂಗಳ ಹಿಂದೆ ‘ಮನ್ ಕಿ ಬಾತ್’ನಲ್ಲಿ ಅಮೃತ ಸರೋವರದ ಬಗ್ಗೆ ಹೇಳಿದ್ದೆ ನಿಮಗೆ ನೆನಪಿರಬಹುದು. ಅದರ ನಂತರ, ಸ್ಥಳೀಯ ಆಡಳಿತವು ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಯಿತು, ಸ್ವಯಂಸೇವಾ ಸಂಸ್ಥೆಗಳು ಒಗ್ಗೂಡಿದವು ಮತ್ತು ಸ್ಥಳೀಯ ಜನರು ಪರಸ್ಪರ ಸಂಪರ್ಕ ಸಾಧಿಸಿದರು ಮತ್ತು ಅಮೃತ್ ಸರೋವರಗಳ ನಿರ್ಮಾಣ ಒಂದು ಜನಾಂದೋಲನವಾಯಿತು. ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಆಳವಾದ ಭಾವನೆ, ತನ್ನ ಕರ್ತವ್ಯಗಳನ್ನು ಅರಿತುಕೊಳ್ಳುವುದು, ಮುಂಬರುವ ಪೀಳಿಗೆಯ ಬಗ್ಗೆ ಕಾಳಜಿ ಇದ್ದಾಗ, ಸಾಮರ್ಥ್ಯಗಳು ಕೂಡ ಸೇರಿಕೊಂಡು, ಸಂಕಲ್ಪವು ಉದಾತ್ತವಾಗುತ್ತದೆ.
ತೆಲಂಗಾಣದ ವಾರಂಗಲ್ ನಿಂದ ಅದ್ಭುತ ಪ್ರಯತ್ನದ ಬಗ್ಗೆ ನನಗೆ ತಿಳಿದು ಬಂದಿದೆ. ಅಲ್ಲಿ ಹೊಸ ಗ್ರಾಮ ಪಂಚಾಯಿತಿ ರಚನೆಯಾಗಿದ್ದು, ಅದಕ್ಕೆ ‘ಮಾಂಗ್ತ್ಯಾ-ವಾಲ್ಯ ತಾಂಡಾ’ ಎಂದು ಹೆಸರಿಡಲಾಗಿದೆ. ಈ ಗ್ರಾಮವು ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿದೆ. ಗ್ರಾಮದ ಸಮೀಪದಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿತ್ತು. ಗ್ರಾಮಸ್ಥರ ಪ್ರೇರಣೆಯಿಂದ ಈ ಸ್ಥಳವನ್ನು ಈಗ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಈ ಕೆರೆ ಸಂಪೂರ್ಣ ಭರ್ತಿಯಾಗಿದೆ.
ಮಧ್ಯಪ್ರದೇಶದ ಮಾಂಡ್ಲಾದ ಮೋಚಾ ಗ್ರಾಮ ಪಂಚಾಯತ್ ನಲ್ಲಿ ನಿರ್ಮಿಸಲಾದ ಅಮೃತ ಸರೋವರದ ಬಗ್ಗೆಯೂ ನಾನು ನಿಮಗೆ ಹೇಳಲು ಬಯಸುತ್ತೇನೆ. ಈ ಅಮೃತ ಸರೋವರವನ್ನು ಕನ್ಹಾ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲಾಗಿದೆ ಮತ್ತು ಇದರಿಂದಾಗಿ ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರ ಪ್ರದೇಶದ ಲಲಿತ್ ಪುರದಲ್ಲಿ ನೂತನವಾಗಿ ನಿರ್ಮಿಸಿರುವ ಶಹೀದ್ ಭಗತ್ ಸಿಂಗ್ ಅಮೃತ ಸರೋವರ ಕೂಡ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ನಿವಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಕೆರೆ 4 ಎಕರೆ ವಿಸ್ತೀರ್ಣ ಹೊಂದಿದೆ. ಸರೋವರದ ದಡದಲ್ಲಿ ಮರಗಳ ನೆಡುವಿಕೆ ತನ್ನ ಸೌಂದರ್ಯವನ್ನು ಹೆಚ್ಚಿಸುತ್ತಿದೆ. ಕೆರೆಯ ಬಳಿ ಇರುವ 35 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ನೋಡಲು ದೂರದೂರುಗಳಿಂದ ಕೂಡ ಜನರು ಬರುತ್ತಿದ್ದಾರೆ. ಅಮೃತ ಸರೋವರಗಳ ಈ ಅಭಿಯಾನ ಕರ್ನಾಟಕದಲ್ಲಿಯೂ ಜೋರಾಗಿ ನಡೆಯುತ್ತಿದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ 'ಬಿಲ್ಕೆರೂರು' ಗ್ರಾಮದಲ್ಲಿ ಜನರು ಅತ್ಯಂತ ಸುಂದರವಾದ ಅಮೃತ ಸರೋವರವನ್ನು ನಿರ್ಮಿಸಿದ್ದಾರೆ. ವಾಸ್ತವವಾಗಿ, ಈ ಪ್ರದೇಶದಲ್ಲಿ, ಪರ್ವತದಿಂದ ನೀರು ಹರಿಯುವುದರಿಂದ ಜನರು ಬಹಳಷ್ಟು ಸಮಸ್ಯೆಗಳನ್ನು ಹೊಂದಿದ್ದರು; ರೈತರು ಮತ್ತು ಅವರ ಬೆಳೆಗಳು ಸಹ ನಷ್ಟವನ್ನು ಅನುಭವಿಸಿದವು. ಅಮೃತ ಸರೋವರವನ್ನು ಮಾಡಲು, ಗ್ರಾಮದ ಜನರು ಎಲ್ಲ ನೀರನ್ನು ಚಾನಲ್ ಮಾಡಿ ಪಕ್ಕಕ್ಕೆ ತಂದರು. ಇದರಿಂದ ಆ ಪ್ರದೇಶದಲ್ಲಿನ ಪ್ರವಾಹ ಸಮಸ್ಯೆಯೂ ಬಗೆಹರಿದಿದೆ. ಅಮೃತ್ ಸರೋವರ ಅಭಿಯಾನವು ಇಂದಿನ ನಮ್ಮ ಅನೇಕ ಸಮಸ್ಯೆಗಳನ್ನು ಮಾತ್ರ ಪರಿಹರಿಸುವುದಿಲ್ಲ; ಇದು ನಮ್ಮ ಮುಂದಿನ ಪೀಳಿಗೆಗೆ ಕೂಡಾ ಅಷ್ಟೇ ಅವಶ್ಯಕ. ಈ ಅಭಿಯಾನದ ಅಡಿಯಲ್ಲಿ, ಅನೇಕ ಸ್ಥಳಗಳಲ್ಲಿ, ಹಳೆಯ ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಅಮೃತ ಸರೋವರಗಳನ್ನು ಪ್ರಾಣಿಗಳ ದಾಹ ನೀಗಿಸಲು ಹಾಗೂ ಬೇಸಾಯಕ್ಕೆ ಬಳಸಲಾಗುತ್ತಿದೆ. ಈ ಕೆರೆಗಳಿಂದಾಗಿ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಅವರ ಸುತ್ತಲೂ ಹಸಿರು ಕೂಡ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಅಮೃತ್ ಸರೋವರದಲ್ಲಿ ಮೀನು ಸಾಕಣೆಗೆ ಹಲವೆಡೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಅಮೃತ್ ಸರೋವರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ನೀರಿನ ಸಂರಕ್ಷಣೆ ಮತ್ತು ನೀರಿನ ಸಂಗ್ರಹಣೆಯ ಈ ಪ್ರಯತ್ನಗಳಿಗೆ ಸಂಪೂರ್ಣ ಶಕ್ತಿಯನ್ನು ನೀಡುವಂತೆ ಮತ್ತು ಅವುಗಳನ್ನು ಮುಂದಕ್ಕೆ ಕೊಂಡೊಯ್ಯಲು ನಿಮ್ಮೆಲ್ಲರನ್ನೂ, ವಿಶೇಷವಾಗಿ ನನ್ನ ಯುವ ಸ್ನೇಹಿತರನ್ನು ನಾನು ಕೋರುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಅಸ್ಸಾಂನ ಬೊಂಗೈ ಗ್ರಾಮದಲ್ಲಿ ಆಸಕ್ತಿದಾಯಕ ಯೋಜನೆಯನ್ನು ನಡೆಸಲಾಗುತ್ತಿದೆ - ಸಂಪೂರ್ಣ ಯೋಜನೆ. ಈ ಯೋಜನೆಯ ಉದ್ದೇಶವು ಅಪೌಷ್ಟಿಕತೆಯ ವಿರುದ್ಧ ಹೋರಾಡುವುದಾಗಿದೆ ಮತ್ತು ವಿಧಾನವು ತುಂಬಾ ವಿಶಿಷ್ಟವಾಗಿದೆ. ಇದರ ಅಡಿಯಲ್ಲಿ, ಅಂಗನವಾಡಿ ಕೇಂದ್ರದಿಂದ ಆರೋಗ್ಯವಂತ ಮಗುವಿನ ತಾಯಿ ಪ್ರತಿ ವಾರ ಅಪೌಷ್ಟಿಕತೆಯ ಮಗುವಿನ ತಾಯಿಯನ್ನು ಭೇಟಿಯಾಗುತ್ತಾರೆ ಮತ್ತು ಎಲ್ಲಾ ಪೌಷ್ಟಿಕಾಂಶ ಸಂಬಂಧಿತ ಮಾಹಿತಿಯನ್ನು ಚರ್ಚಿಸುತ್ತಾರೆ. ಅಂದರೆ, ಒಬ್ಬ ತಾಯಿ ಇನ್ನೊಬ್ಬ ತಾಯಿಗೆ ಸ್ನೇಹಿತೆಯಾಗುತ್ತಾಳೆ, ಅವಳಿಗೆ ಸಹಾಯ ಮಾಡುತ್ತಾಳೆ ಮತ್ತು ಕಲಿಸುತ್ತಾಳೆ. ಈ ಯೋಜನೆಯ ನೆರವಿನಿಂದ ಈ ಪ್ರದೇಶದಲ್ಲಿ ಒಂದು ವರ್ಷದಲ್ಲಿ ಶೇ.90ಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯಾಗಿದೆ.
ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಾಡು ಮತ್ತು ಸಂಗೀತ ಮತ್ತು ಭಜನೆಗಳನ್ನು ಕೂಡಾ ಬಳಸಬಹುದೇ ಎಂಬುದನ್ನು ನೀವು ಊಹಿಸಬಲ್ಲಿರಾ? ಇದನ್ನು "ಮೇರಾ ಬಚ್ಚಾ ಅಭಿಯಾನ"ದಲ್ಲಿ ಯಶಸ್ವಿಯಾಗಿ ಬಳಸಲಾಯಿತು; ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ "ಮೇರಾ ಬಚ್ಚಾ ಅಭಿಯಾನ". ಇದರ ಅಡಿಯಲ್ಲಿ, ಜಿಲ್ಲೆಯಲ್ಲಿ ಭಜನೆ-ಕೀರ್ತನೆಗಳನ್ನು ಆಯೋಜಿಸಲಾಯಿತು, ಇದರಲ್ಲಿ ಶಿಕ್ಷಕರನ್ನು ಪೌಷ್ಟಿಕಾಂಶದ ಗುರುಗಳಾಗಿ ಕರೆಯಲಾಯಿತು. ಮಟ್ಕಾ ಕಾರ್ಯಕ್ರಮವೂ ನಡೆದಿದ್ದು, ಅಂಗನವಾಡಿ ಕೇಂದ್ರಕ್ಕೆ ಮಹಿಳೆಯರು ಹಿಡಿ ಧಾನ್ಯಗಳನ್ನು ತಂದು, ಈ ಧಾನ್ಯದೊಂದಿಗೆ ಶನಿವಾರಗಳಂದು ಬಾಲಭೋಜನ ಏರ್ಪಡಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಳದ ಜೊತೆಗೆ ಅಪೌಷ್ಟಿಕತೆಯೂ ಇಳಿಮುಖವಾಗಿದೆ. ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲು ಜಾರ್ಖಂಡ್ನಲ್ಲಿ ವಿಶಿಷ್ಟ ಅಭಿಯಾನವೂ ನಡೆಯುತ್ತಿದೆ. ಜಾರ್ಖಂಡ್ನ ಗಿರಿದಿಹ್ ನಲ್ಲಿ ಹಾವು-ಏಣಿ ಆಟವನ್ನು ಸಿದ್ಧಪಡಿಸಲಾಗಿದೆ. ಆಟದ ಮೂಲಕ ಮಕ್ಕಳು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳನ್ನು ಕಲಿಯುತ್ತಿದ್ದಾರೆ.
ಸ್ನೇಹಿತರೇ, ಅಪೌಷ್ಟಿಕತೆಗೆ ಸಂಬಂಧಿಸಿದ ಹಲವಾರು ವಿನೂತನ ಪ್ರಯೋಗಗಳ ಬಗ್ಗೆ ನಾನು ನಿಮಗೆ ಹೇಳುತ್ತಿದ್ದೇನೆ, ಏಕೆಂದರೆ ಮುಂಬರುವ ತಿಂಗಳಲ್ಲಿ ನಾವೆಲ್ಲರೂ ಈ ಅಭಿಯಾನಕ್ಕೆ ಸೇರಬೇಕಾಗಿದೆ. ಸೆಪ್ಟೆಂಬರ್ ತಿಂಗಳನ್ನು ಹಬ್ಬಗಳಿಗೆ ಮೀಸಲಿಡಲಾಗಿದೆ ಮತ್ತು ಪೋಷಣೆಗೆ ಸಂಬಂಧಿಸಿದ ದೊಡ್ಡ ಅಭಿಯಾನವನ್ನು ಹೊಂದಿದೆ. ನಾವು ಪ್ರತಿ ವರ್ಷ ಸೆಪ್ಟೆಂಬರ್ 1 ರಿಂದ 30 ರವರೆಗೆ ಪೋಷಣ ಮಾಹೆಯನ್ನು ಆಚರಿಸುತ್ತೇವೆ. ಅಪೌಷ್ಟಿಕತೆಯ ವಿರುದ್ಧ ದೇಶದಾದ್ಯಂತ ಅನೇಕ ಸೃಜನಶೀಲ ಮತ್ತು ವೈವಿಧ್ಯಮಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನದ ಉತ್ತಮ ಬಳಕೆ ಮತ್ತು ಸಾರ್ವಜನಿಕ ಸಹಭಾಗಿತ್ವವು ಪೌಷ್ಟಿಕಾಂಶ ಅಭಿಯಾನದ ಪ್ರಮುಖ ಭಾಗವಾಗಿದೆ. ದೇಶದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಸಾಧನಗಳನ್ನು ಒದಗಿಸುವುದರಿಂದ, ಅಂಗನವಾಡಿ ಸೇವೆಗಳ ಲಭ್ಯತೆಯನ್ನು ಮೇಲ್ವಿಚಾರಣೆ ಮಾಡಲು ಪೋಶನ್ ಟ್ರ್ಯಾಕರ್ ಅನ್ನು ಸಹ ಪ್ರಾರಂಭಿಸಲಾಗಿದೆ. ಎಲ್ಲ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ, 14 ರಿಂದ 18 ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಸಹ ಪೋಶನ್ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ. ಅಪೌಷ್ಟಿಕತೆಯ ಕಾಯಿಲೆಗೆ ಪರಿಹಾರವು ಕೇವಲ ಈ ಹಂತಗಳಿಗೆ ಸೀಮಿತವಾಗಿಲ್ಲ - ಈ ಹೋರಾಟದಲ್ಲಿ, ಇತರ ಅನೇಕ ಉಪಕ್ರಮಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ, ಜಲ ಜೀವನ್ ಮಿಷನ್ ಅನ್ನು ತೆಗೆದುಕೊಳ್ಳಿ... ಭಾರತವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವಲ್ಲಿ ಈ ಮಿಷನ್ ಕೂಡ ದೊಡ್ಡ ಪರಿಣಾಮವನ್ನು ಬೀರಲಿದೆ.
ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ಸಾಮಾಜಿಕ ಜಾಗೃತಿಯ ಪ್ರಯತ್ನಗಳು ಪ್ರಮುಖ ಪಾತ್ರವಹಿಸುತ್ತವೆ. ಮುಂಬರುವ ಪೌಷ್ಟಿಕಾಂಶದ ಅಭಿಯಾನದ ತಿಂಗಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಪ್ರಯತ್ನಗಳಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರಿಗೂ ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಚೆನ್ನೈನ ಶ್ರೀದೇವಿ ವರದರಾಜನ್ ಜೀ ಅವರು ನನಗೆ ವಿಜ್ಞಾಪನೆಯನ್ನು ಕಳುಹಿಸಿದ್ದಾರೆ. ಅವರು ಮೈಗೌನಲ್ಲಿ ಈ ರೀತಿ ಬರೆದಿದ್ದಾರೆ - ಹೊಸ ವರ್ಷವು ಬರಲು 5 ತಿಂಗಳುಗಳಿಗಿಂತ ಕಡಿಮೆಯಿದೆ, ಮತ್ತು ಮುಂದಿನ ಹೊಸ ವರ್ಷವನ್ನು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸಲಾಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ನನಗೆ ದೇಶದ ಸಿರಿಧಾನ್ಯಗಳ ನಕ್ಷೆಯನ್ನೂ ಕಳುಹಿಸಿದ್ದಾರೆ. 'ಮನ್ ಕಿ ಬಾತ್' ನ ಮುಂಬರುವ ಸಂಚಿಕೆಯಲ್ಲಿ ನೀವು ಇದನ್ನು ಚರ್ಚಿಸಬಹುದೇ ಎಂದು ಆಕೆ ಕೇಳಿದ್ದಾರೆ. ನನ್ನ ದೇಶವಾಸಿಗಳಲ್ಲಿ ಈ ರೀತಿಯ ಮನೋಭಾವವನ್ನು ನೋಡುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ. ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿದ್ದು ನಿಮಗೆ ನೆನಪಿರಬಹುದು. ಭಾರತದ ಈ ಪ್ರಸ್ತಾಪವನ್ನು 70 ಕ್ಕೂ ಹೆಚ್ಚು ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿದರೆ ನಿಮಗೆ ತುಂಬಾ ಸಂತೋಷವಾಗ ಬಹುದು.
ಇಂದು, ಪ್ರಪಂಚದಾದ್ಯಂತ, ಈ ಸಿರಿ ಧಾನ್ಯಗಳ ಬಗ್ಗೆ ವ್ಯಾಮೋಹ ಹೆಚ್ಚುತ್ತಿದೆ. ಸ್ನೇಹಿತರೇ, ನಾನು ಸಿರಿ ಧಾನ್ಯಗಳ ಬಗ್ಗೆ ಇಂದು ಮಾತನಾಡುವಾಗ, ನನ್ನ ಒಂದು ಪುಟ್ಟ ಪ್ರಯತ್ನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ಕೆಲವು ಸಮಯದಿಂದ, ಯಾವುದೇ ವಿದೇಶಿ ಅತಿಥಿಗಳು ಭಾರತಕ್ಕೆ ಬಂದಾಗ, ರಾಷ್ಟ್ರಗಳ ಮುಖ್ಯಸ್ಥರು ಭಾರತಕ್ಕೆ ಬಂದಾಗ, ಔತಣಕೂಟಗಳಲ್ಲಿ ಭಾರತದ ರಾಗಿಯಿಂದ ಮಾಡಿದ ಭಕ್ಷ್ಯಗಳನ್ನು, ಅಂದರೆ ನಮ್ಮ ಸಿರಿ ಧಾನ್ಯಗಳ ಪದಾರ್ಥಗಳನ್ನು ನೀಡುವುದು ನನ್ನ ಪ್ರಯತ್ನವಾಗಿದೆ. ಈ ಮಹನೀಯರು ಅವುಗಳ ಆಹಾರವನ್ನು ತುಂಬಾ ಆನಂದಿಸಿದ್ದಾರೆ ಮತ್ತು ಅವರು ನಮ್ಮ ಸಿರಿ ಧಾನ್ಯಗಳ ಬಗ್ಗೆ, ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿದ್ದಾರೆ. ರಾಗಿ, ಸಿರಿ ಧಾನ್ಯಗಳು ಪ್ರಾಚೀನ ಕಾಲದಿಂದಲೂ ನಮ್ಮ ಕೃಷಿ, ಸಂಸ್ಕೃತಿ ಮತ್ತು ನಾಗರಿಕತೆಯ ಭಾಗವಾಗಿದೆ.
ಸಿರಿಧಾನ್ಯಗಳನ್ನು ನಮ್ಮ ವೇದಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅದೇ ರೀತಿ ಪುರಾಣನೂರು ಮತ್ತು ತೊಲ್ಕಾಪ್ಪಿಯಂನಲ್ಲಿಯೂ ಉಲ್ಲೇಖಿಸಲಾಗಿದೆ. ದೇಶದ ಯಾವುದೇ ಭಾಗಕ್ಕೆ ಹೋದರೆ ಅಲ್ಲಿನ ಜನರ ಆಹಾರದಲ್ಲಿ ವಿವಿಧ ಬಗೆಯ ಸಿರಿಧಾನ್ಯಗಳು ಖಂಡಿತ ಸಿಗುತ್ತವೆ. ನಮ್ಮ ಸಂಸ್ಕೃತಿಯಂತೆಯೇ ಸಿರಿಧಾನ್ಯಗಳಲ್ಲಿಯೂ ಸಾಕಷ್ಟು ವೈವಿಧ್ಯ ಕಂಡುಬರುತ್ತದೆ. ಜೋಳ, ಸಜ್ಜೆ, ರಾಗಿ, ಊದಲು(ಸಾವನ್), ಕಂಗ್ನಿ, ಚೀಣ, ಕೊಡೋ, ಕುಟ್ಕಿ, ಕುಟ್ಟು, ಇವೆಲ್ಲ ಸಿರಿಧಾನ್ಯಗಳೇ ಆಗಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳ ಉತ್ಪಾದಕ ದೇಶವಾಗಿದೆ; ಆದ್ದರಿಂದ ಈ ಉಪಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯು ನಮ್ಮ ಭಾರತೀಯರ ಹೆಗಲ ಮೇಲಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು ಮತ್ತು ದೇಶದ ಜನರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಬೇಕು. ಮತ್ತು ಸ್ನೇಹಿತರೇ, ನಿಮಗೆ ಚೆನ್ನಾಗಿ ತಿಳಿದಿದೆ, ಸಿರಿಧಾನ್ಯಗಳು ರೈತರಿಗೆ ಮತ್ತು ವಿಶೇಷವಾಗಿ ಸಣ್ಣ ರೈತರಿಗೆ ಸಹ ಪ್ರಯೋಜನಕಾರಿ. ವಾಸ್ತವವಾಗಿ, ಬೆಳೆ ಬಹಳ ಕಡಿಮೆ ಸಮಯದಲ್ಲಿ ಫಸಲು ನೀಡುತ್ತದೆ ಮತ್ತು ಹೆಚ್ಚು ನೀರಿನ ಅಗತ್ಯವಿರುವುದಿಲ್ಲ.
ನಮ್ಮ ಸಣ್ಣ ರೈತರಿಗೆ, ಸಿರಿಧಾನ್ಯ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಸಿರಿಧಾನ್ಯಗಳ ಹುಲ್ಲು ಕೂಡ ಅತ್ಯುತ್ತಮ ಮೇವು ಎಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಆರೋಗ್ಯಕರ ಜೀವನ ಮತ್ತು ಆಹಾರ ಸೇವನೆಯತ್ತ ಹೆಚ್ಚು ಗಮನಹರಿಸುತ್ತಿದೆ. ನೀವು ಈ ರೀತಿ ನೋಡಿದರೆ, ಸಿರಿಧಾನ್ಯಗಳಲ್ಲಿ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಖನಿಜಗಳಿವೆ. ಅನೇಕ ಜನರು ಇದನ್ನು ಸೂಪರ್ಫುಡ್ ಎಂದೂ ಕರೆಯುತ್ತಾರೆ. ಸಿರಿಧಾನ್ಯಗಳು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಬೊಜ್ಜು ಕಡಿಮೆ ಮಾಡುವುದರ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ, ಹೊಟ್ಟೆ ಮತ್ತು ಯಕೃತ್ತಿನ ಕಾಯಿಲೆಗಳನ್ನು ತಡೆಯಲು ಸಹ ಅವು ಸಹಾಯಕವಾಗಿವೆ. ನಾವು ಸ್ವಲ್ಪ ಸಮಯದ ಹಿಂದೆ ಅಪೌಷ್ಟಿಕತೆಯ ಬಗ್ಗೆ ಉಲ್ಲೇಖಿಸಿದ್ದೇವೆ. ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಸಿರಿಧಾನ್ಯಗಳು ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಅವುಗಳು ಶಕ್ತಿ ಮತ್ತು ಪ್ರೋಟೀನ್ ನಿಂದ ತುಂಬಿರುತ್ತವೆ. ಇಂದು ದೇಶದಲ್ಲಿ ಸಿರಿಧಾನ್ಯಗಳನ್ನು ಉತ್ತೇಜಿಸಲು ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಆವಿಷ್ಕಾರಗಳ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ಎಫ್.ಪಿ.ಒ.ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ, ಇದರಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು. ನನ್ನ ರೈತ ಬಂಧುಗಳು ರಾಗಿ, ಅಂದರೆ ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬಳಸಿ ಅದರ ಪ್ರಯೋಜನ ಪಡೆಯಬೇಕೆಂಬುದು ನನ್ನ ವಿನಂತಿ. ಸಿರಿಧಾನ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂತಹ ಅನೇಕ ಸ್ಟಾರ್ಟ್ಅಪ್ಗಳು ಇಂದು ಹೊರಹೊಮ್ಮುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಇವುಗಳಲ್ಲಿ ಕೆಲವರು ರಾಗಿ ಕುಕೀಸ್ ತಯಾರಿಸುತ್ತಿದ್ದರೆ, ಕೆಲವರು ರಾಗಿ ಪ್ಯಾನ್ ಕೇಕ್ ಗಳು ಮತ್ತು ದೋಸೆಯನ್ನು ಸಹ ಮಾಡುತ್ತಿದ್ದಾರೆ. ಕೆಲವರು ರಾಗಿ ಎನರ್ಜಿ ಬಾರ್ ಗಳು ಮತ್ತು ರಾಗಿ ಬ್ರೇಕ್ಫಾಸ್ಟ್ಗಳನ್ನು ತಯಾರಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಶುಭ ಹಾರೈಸುತ್ತೇನೆ. ಈ ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಖಾದ್ಯಗಳಲ್ಲಿ ನಾವು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸುತ್ತೇವೆ. ನಿಮ್ಮ ಮನೆಗಳಲ್ಲಿ ಮಾಡಿದ ಇಂತಹ ಖಾದ್ಯಗಳ ಚಿತ್ರಗಳನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಕು, ಇದರಿಂದ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ, ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಜೋರ್ಸಿಂಗ್ ಗ್ರಾಮದ ಸುದ್ದಿ ನಾನು ನೋಡಿದೆ. ಈ ಸುದ್ದಿಯು ಈ ಗ್ರಾಮದ ಜನರು ಹಲವು ವರ್ಷಗಳಿಂದ ಕಾಯುತ್ತಿದ್ದ ಬದಲಾವಣೆಯ ಕುರಿತಾಗಿತ್ತು. ವಾಸ್ತವವಾಗಿ, ಈ ತಿಂಗಳು ಜೋರ್ಸಿಂಗ್ ಗ್ರಾಮದಲ್ಲಿ, 4ಜಿ ಇಂಟರ್ನೆಟ್ ಸೇವೆಗಳು ಸ್ವಾತಂತ್ರ್ಯ ದಿನಾಚರಣೆಯಿಂದ ಪ್ರಾರಂಭವಾಗಿವೆ. ಹಾಗೆ, ಹಿಂದಿನ ಜನರು ಹಳ್ಳಿಗೆ ವಿದ್ಯುತ್ ಬಂದಾಗ ಸಂತೋಷಪಡುತ್ತಿದ್ದರು; ಈಗ, ನವ ಭಾರತದಲ್ಲಿ, 4ಜಿ ಅಲ್ಲಿಗೆ ತಲುಪಿದಾಗ ಅದೇ ಸಂತೋಷವನ್ನು ಅನುಭವಿಸಲಾಗುತ್ತದೆ. ಅರುಣಾಚಲ ಮತ್ತು ಈಶಾನ್ಯದ ದೂರದ ಪ್ರದೇಶಗಳಲ್ಲಿ 4ಜಿ ರೂಪದಲ್ಲಿ ಹೊಸ ಸೂರ್ಯೋದಯ ಕಂಡುಬಂದಿದೆ; ಇಂಟರ್ನೆಟ್ ಸಂಪರ್ಕವು ಹೊಸ ಉದಯವನ್ನು ತಂದಿದೆ. ಒಂದು ಕಾಲದಲ್ಲಿ ದೊಡ್ಡ ನಗರಗಳಲ್ಲಿ ಮಾತ್ರ ಲಭ್ಯವಿದ್ದ ಸೌಲಭ್ಯಗಳನ್ನು ಡಿಜಿಟಲ್ ಇಂಡಿಯಾದ ಮೂಲಕ ಪ್ರತಿ ಹಳ್ಳಿಗೂ ತರಲಾಗಿದೆ. ಈ ಕಾರಣದಿಂದ ದೇಶದಲ್ಲಿ ಹೊಸ ಡಿಜಿಟಲ್ ಉದ್ಯಮಿಗಳು ಹೆಚ್ಚುತ್ತಿದ್ದಾರೆ. ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಸೇಥಾ ಸಿಂಗ್ ರಾವತ್ ಜೀ ಅವರು 'ದರ್ಜಿ ಆನ್ಲೈನ್', 'ಇ-ಸ್ಟೋರ್' ನಡೆಸುತ್ತಿದ್ದಾರೆ. ಆನ್ಲೈನ್ನಲ್ಲಿ ದರ್ಜಿ ಎಂದರೇನು ಎಂದು ನೀವು ಆಶ್ಚರ್ಯ ಪಡುತ್ತೀರಿ! ವಾಸ್ತವವಾಗಿ ಸೇಥಾ ಸಿಂಗ್ ರಾವತ್ ಅವರು ಹೊಲಿಗೆ (ಟೈಲರಿಂಗ್) ಕೆಲಸ ಮಾಡುತ್ತಿದ್ದಾರೆ .
ಕೋವಿಡ್ ಬಂದಾಗ, ರಾವತ್ ಜೀ ಈ ಸವಾಲನ್ನು ಕಷ್ಟವಾಗಿ ತೆಗೆದುಕೊಳ್ಳಲಿಲ್ಲ; ಬದಲಿಗೆ ಅವಕಾಶವಾಗಿ ಬದಲಾಯಿಸಿದರು. ಅವರು 'ಸಾಮಾನ್ಯ ಸೇವಾ ಕೇಂದ್ರ' ಅಂದರೆ ಸಿ.ಎಸ್.ಸಿ ಇ-ಸ್ಟೋರ್ಗೆ ಸೇರಿಕೊಂಡರು ಮತ್ತು ಆನ್ಲೈನ್ ನಲ್ಲಿ ದರ್ಜಿ ಕೆಲಸ ಮಾಡಲು ಪ್ರಾರಂಭಿಸಿದರು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ಗಳಿಗಾಗಿ ಆರ್ಡರ್ ಮಾಡುವುದನ್ನು ಅವರು ಗುರುತಿಸಿದರು. ಅವರು ಕೆಲವು ಮಹಿಳೆಯರನ್ನು ನೇಮಿಸಿಕೊಂಡರು ಮತ್ತು ಮುಖಗವಸುಗಳನ್ನು ತಯಾರಿಸಲು ಪ್ರಾರಂಭಿಸಿದರು. ಇದರ ನಂತರ ಅವರು ತಮ್ಮ 'ದರ್ಜಿ ಆನ್ಲೈನ್' ಆನ್ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿದರು, ಅದರಲ್ಲಿ ಅವರು ಅನೇಕ ರೀತಿಯ ಹೊಲಿದ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಇಂದು, ಡಿಜಿಟಲ್ ಇಂಡಿಯಾದ ಶಕ್ತಿಯೊಂದಿಗೆ, ಸೇಠ ಸಿಂಗ್ ಜೀ ಅವರ ಕೆಲಸವು ತುಂಬಾ ಬೆಳೆದಿದೆ, ಈಗ ಅವರಿಗೆ ದೇಶಾದ್ಯಂತ ಆರ್ಡರ್ ಗಳು ಬರುತ್ತಿವೆ. ಇಲ್ಲಿನ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.
ಉತ್ತರಪ್ರದೇಶದ ಉನ್ನಾವೊದ ಶ್ರೀ ಓಂ ಪ್ರಕಾಶ್ ಸಿಂಗ್ ಜೀ ಅವರನ್ನು ಡಿಜಿಟಲ್ ಇಂಡಿಯಾ ಉಪಕ್ರಮವು ಡಿಜಿಟಲ್ ಉದ್ಯಮಿಯನ್ನಾಗಿ ಮಾಡಿದೆ. ಅವರು ತಮ್ಮ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ರಾಡ್ಬ್ಯಾಂಡ್ ಸಂಪರ್ಕಗಳನ್ನು ಸ್ಥಾಪಿಸಿದ್ದಾರೆ. ಓಂ ಪ್ರಕಾಶ್ ಜೀ ಅವರು ತಮ್ಮ ಸಾಮಾನ್ಯ ಸೇವಾ ಕೇಂದ್ರದ ಸುತ್ತಲೂ ಉಚಿತ ವೈಫೈ ವಲಯವನ್ನು ನಿರ್ಮಿಸಿದ್ದಾರೆ, ಇದು ಅಗತ್ಯವಿರುವ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಓಂ ಪ್ರಕಾಶ್ ಜೀ ಅವರ ಕೆಲಸ ಎಷ್ಟು ವೃದ್ಧಿಸಿದೆ ಎಂದರೆ ಅವರು 20 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದಾರೆ. ಈ ಜನರು ಗ್ರಾಮಗಳ ಶಾಲೆ, ಆಸ್ಪತ್ರೆ, ತಹಸಿಲ್ ಕಚೇರಿ, ಅಂಗನವಾಡಿ ಕೇಂದ್ರಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡುತ್ತಿದ್ದು, ಅದರಿಂದ ಉದ್ಯೋಗವನ್ನೂ ಪಡೆಯುತ್ತಿದ್ದಾರೆ. ಸಾಮಾನ್ಯ ಸೇವಾ ಕೇಂದ್ರದಂತೆ, ಸರ್ಕಾರಿ ಇ-ಮಾರುಕಟ್ಟೆ ಸ್ಥಳದಲ್ಲಿ ಅಂದರೆ ಜಿ.ಇ.ಎಂ. ಪೋರ್ಟಲ್ನಲ್ಲಿ ಇಂತಹ ಅನೇಕ ಯಶಸ್ಸಿನ ಕಥೆಗಳು ಕಂಡುಬರುತ್ತವೆ.
ಸ್ನೇಹಿತರೇ, ನಾನು ಹಳ್ಳಿಗಳಿಂದ ಇಂತಹ ಹಲವಾರು ಸಂದೇಶಗಳನ್ನು ಪಡೆಯುತ್ತೇನೆ, ಅದು ಅಂತರ್ಜಾಲದಿಂದ ತಂದ ಬದಲಾವಣೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತದೆ. ಇಂಟರ್ನೆಟ್ ನಮ್ಮ ಯುವ ಸ್ನೇಹಿತರು ಕಲಿಯುವ ಮತ್ತು ಕಲಿಯುವ ವಿಧಾನವನ್ನು ಬದಲಾಯಿಸಿದೆ. ಉದಾಹರಣೆಗೆ, ಉತ್ತರಪ್ರದೇಶದ ಶ್ರೀಮತಿ ಗುಡಿಯಾ ಸಿಂಗ್ ಅವರು ಉನ್ನಾವೊದ ಅಮೋಯ ಹಳ್ಳಿಯಲ್ಲಿರುವ ಅತ್ತೆಯ ಮನೆಗೆ ಬಂದಾಗ, ಅವರು ತಮ್ಮ ಅಧ್ಯಯನದ ಬಗ್ಗೆ ಚಿಂತಿತರಾಗಿದ್ದರು. ಆದರೆ, ಭಾರತ್ ನೆಟ್ ಅವರ ಕಳವಳವನ್ನು ಪರಿಹರಿಸಿತು. ಗುಡಿಯಾ ಅಂತರ್ಜಾಲದ ಮೂಲಕ ತನ್ನ ಅಧ್ಯಯನವನ್ನು ಮುಂದುವರಿಸಿದರು. ಮತ್ತು ತನ್ನ ಪದವಿಯನ್ನು ಸಹ ಪೂರ್ಣಗೊಳಿಸಿದರು. ಡಿಜಿಟಲ್ ಇಂಡಿಯಾ ಅಭಿಯಾನದಿಂದ ಹಳ್ಳಿಗಳಲ್ಲಿ ಇಂತಹ ಎಷ್ಟು ಜೀವಗಳು ಹೊಸ ಶಕ್ತಿ ಪಡೆಯುತ್ತಿವೆ. ಹಳ್ಳಿಗಳ ಡಿಜಿಟಲ್ ಉದ್ಯಮಿಗಳ ಬಗ್ಗೆ ನಿಮಗೆ ಸಾಧ್ಯವಾದಷ್ಟು ನನಗೆ ಬರೆಯಿರಿ ಮತ್ತು ಅವರ ಯಶಸ್ಸಿನ ಕಥೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಲ್ಪ ದಿನಗಳ ಹಿಂದೆ, ಹಿಮಾಚಲ ಪ್ರದೇಶದಿಂದ 'ಮನ್ ಕಿ ಬಾತ್' ಕೇಳುಗ ಶ್ರೀ ರಮೇಶ್ ಜೀ ಅವರಿಂದ ನನಗೆ ಪತ್ರ ಬಂದಿತ್ತು. ರಮೇಶ್ ಜೀ ಅವರು ತಮ್ಮ ಪತ್ರದಲ್ಲಿ ಗುಡ್ಡಬೆಟ್ಟಗಳ ಹಲವು ವಿಶೇಷತೆಗಳನ್ನು ವಿವರಿಸಿದ್ದಾರೆ. ಪರ್ವತಗಳ ಮೇಲಿನ ನಿವಾಸ-ವಸಾಹತುಗಳು ದೂರ-ದೂರದಲ್ಲಿರಬಹುದು, ಆದರೆ ಜನರ ಹೃದಯಗಳು ಪರಸ್ಪರ ಹತ್ತಿರದಲ್ಲಿವೆ ಎಂದು ಅವರು ಬರೆದಿದ್ದಾರೆ. ನಿಜಕ್ಕೂ, ಬೆಟ್ಟಗಳಲ್ಲಿ ವಾಸಿಸುವ ಜನರ ಜೀವನದಿಂದ ನಾವು ಬಹಳಷ್ಟು ಕಲಿಯಬಹುದು. ಮಲೆನಾಡಿನ ಜೀವನಶೈಲಿ ಮತ್ತು ಸಂಸ್ಕೃತಿಯಿಂದ ನಾವು ಪಡೆಯುವ ಮೊದಲ ಪಾಠವೆಂದರೆ ನಾವು ಪರಿಸ್ಥಿತಿಗಳ ಒತ್ತಡಕ್ಕೆ ಒಳಗಾಗದಿದ್ದರೆ, ನಾವು ಅವುಗಳನ್ನು ಸುಲಭವಾಗಿ ಜಯಿಸಬಹುದು ಮತ್ತು ಎರಡನೆಯದಾಗಿ, ಸ್ಥಳೀಯ ಸಂಪನ್ಮೂಲಗಳೊಂದಿಗೆ ನಾವು ಹೇಗೆ ಸ್ವಾವಲಂಬಿಯಾಗಬಹುದು ಎಂಬುದನ್ನು ಅವರು ತಮ್ಮ ಜೀವನ ಮೂಲಕ ನಮಗೆ ಹೇಳಿಕೊಡುತ್ತಾರೆ.
ಅವರು ಹೇಳಿದ ಮೊದಲ ಸುಂದರ ಪಾಠ, ಇತ್ತೀಚಿನ ದಿನಗಳಲ್ಲಿ ಸ್ಪಿತಿ ಪ್ರದೇಶದಲ್ಲಿ ಕಂಡುಬರುತ್ತದೆ. ಸ್ಪಿತಿ ಬುಡಕಟ್ಟು ಪ್ರದೇಶವಾಗಿದೆ. ಇಲ್ಲಿ, ಇತ್ತೀಚಿನ ದಿನಗಳಲ್ಲಿ, ಅವರೆಕಾಳು ಕೀಳುವುದು ನಡೆಯುತ್ತಿದೆ. ಬೆಟ್ಟದ ಜಮೀನುಗಳಲ್ಲಿ ಇದು ಶ್ರಮದಾಯಕ ಮತ್ತು ಕಷ್ಟಕರವಾದ ಕೆಲಸವಾಗಿದೆ. ಆದರೆ ಇಲ್ಲಿ ಹಳ್ಳಿಯ ಹೆಂಗಸರು ಒಂದೆಡೆ ಸೇರಿ ಪರಸ್ಪರರ ಹೊಲಗಳಿಂದ ಅವರೆಕಾಳು ಕೀಳುತ್ತಾರೆ. ಈ ಕಾರ್ಯದ ಜೊತೆಗೆ, ಮಹಿಳೆಯರು ಸ್ಥಳೀಯ ಹಾಡು 'ಛಪ್ರಾ ಮಾಝಿ ಛಾಪ್ರಾ' ಅನ್ನು ಸಹ ಹಾಡುತ್ತಾರೆ. ಅಂದರೆ ಇಲ್ಲಿ ಪರಸ್ಪರ ಸಹಕಾರವೂ ಜನಪದ ಸಂಪ್ರದಾಯದ ಭಾಗವಾಗಿದೆ. ಸ್ಥಳೀಯ ಸಂಪನ್ಮೂಲಗಳ ಬಳಕೆಯ ಅತ್ಯುತ್ತಮ ಉದಾಹರಣೆ ಸ್ಪಿತಿಯಲ್ಲಿಯೂ ಕಂಡುಬರುತ್ತದೆ. ಸ್ಪಿತಿಯಲ್ಲಿ ಹಸುಗಳನ್ನು ಸಾಕುವ ರೈತರು ಸಗಣಿ ಒಣಗಿಸಿ ಗೋಣಿಚೀಲಗಳಲ್ಲಿ ತುಂಬುತ್ತಾರೆ. ಚಳಿಗಾಲ ಬಂತೆಂದರೆ ಹಸುಗಳು ವಾಸಿಸುವ ಶೆಡ್ಗಳಲ್ಲಿ ಈ ಗೋಣಿಚೀಲಗಳನ್ನು ಹಾಕಲಾಗುತ್ತದೆ, ಇದನ್ನು ಇಲ್ಲಿ “ಖುದ್” ಎಂದು ಕರೆಯಲಾಗುತ್ತದೆ. ಹಿಮಪಾತದ ಸಮಯದಲ್ಲಿ, ಈ ಚೀಲಗಳು ಚಳಿಯಿಂದ ಹಸುಗಳಿಗೆ ರಕ್ಷಣೆ ನೀಡುತ್ತದೆ. ಚಳಿಗಾಲದ ನಂತರ, ಈ ಹಸುವಿನ ಸಗಣಿ, ಹೊಲಗಳಲ್ಲಿ ಗೊಬ್ಬರವಾಗಿ ಬಳಸಲ್ಪಡುತ್ತದೆ. ಅಂದರೆ, ನಮ್ಮ ಸಾಕುಪ್ರಾಣಿಗಳ ತ್ಯಾಜ್ಯವನ್ನು ಬಳಸಿಕೊಂಡು ಪ್ರಾಣಿಗಳ ರಕ್ಷಣೆ ಮತ್ತು ಹೊಲಗಳಿಗೆ ಗೊಬ್ಬರವನ್ನು ಸಹ ಬಳಸಲಾಗುತ್ತದೆ. ಸಾಗುವಳಿ ವೆಚ್ಚವೂ ಕಡಿಮೆ, ಹೊಲಗಳಲ್ಲಿ ಇಳುವರಿಯೂ ಹೆಚ್ಚು. ಅದಕ್ಕಾಗಿಯೇ ಈ ಪ್ರದೇಶವು ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಕೃಷಿಗೆ ಸ್ಫೂರ್ತಿಯಾಗಿದೆ.
ಸ್ನೇಹಿತರೇ, ನಮ್ಮ ಇತರ ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲೂ ಇಂತಹ ಶ್ಲಾಘನೀಯ ಪ್ರಯತ್ನಗಳು ಕಂಡುಬರುತ್ತಿವೆ. ಉತ್ತರಾಖಂಡದಲ್ಲಿ ಅನೇಕ ರೀತಿಯ ಔಷಧಿಗಳು ಮತ್ತು ಸಸ್ಯಗಳು ಕಂಡುಬರುತ್ತವೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ಒಂದು ಹಣ್ಣು – “ಬೇಡು”. ಇದನ್ನು “ಹಿಮಾಲಯನ್ ಫಿಗ್ “ಎಂದೂ ಕರೆಯುತ್ತಾರೆ. ಈ ಹಣ್ಣಿನಲ್ಲಿ ಖನಿಜಗಳು ಮತ್ತು ವಿಟಮಿನ್ ಗಳು ಹೇರಳವಾಗಿ ಕಂಡುಬರುತ್ತವೆ. ಜನರು ಇದನ್ನು ಹಣ್ಣಿನ ರೂಪದಲ್ಲಿ ಮಾತ್ರವಲ್ಲ, ಅನೇಕ ರೋಗಗಳ ಚಿಕಿತ್ಸೆಯಲ್ಲಿಯೂ ಬಳಸುತ್ತಾರೆ. ಈ ಹಣ್ಣಿನಲ್ಲಿರುವ ಈ ಗುಣಗಳನ್ನು ಗಮನದಲ್ಲಿಟ್ಟುಕೊಂಡು ಈಗ ಬೀಡು ಜ್ಯೂಸ್, ಜಾಮ್, ಚಟ್ನಿ, ಉಪ್ಪಿನಕಾಯಿ, ಒಣಗಿಸಿ ತಯಾರಿಸಿದ ಒಣ ಹಣ್ಣುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಪಿಥೋರಗಢ ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಹಕಾರದಿಂದ ಬೀಡುವನ್ನು ವಿವಿಧ ರೂಪಗಳಲ್ಲಿ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ. “ಪಹಾರಿ ಅಂಜೂರ” ಎಂದು ಬ್ರಾಂಡ್ ಮಾಡುವ ಮೂಲಕ ಆನ್ಲೈನ್ ಮಾರುಕಟ್ಟೆಯಲ್ಲೂ ಬೀಡು ಬಿಡುಗಡೆಯಾಗಿದೆ. ಇದರಿಂದಾಗಿ, ರೈತರು ಹೊಸ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ ಮಾತ್ರವಲ್ಲದೆ, ”ಬೀಡು” ಹಣ್ಣಿನ ಔಷಧೀಯ ಗುಣಗಳ ಪ್ರಯೋಜನಗಳು ದೂರದವರೆಗೆ ತಲುಪಲು ಪ್ರಾರಂಭಿಸಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ಆರಂಭದಲ್ಲಿ, ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಉಲ್ಲೇಖಿಸಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯ ಮಹಾರಥೋತ್ಸವದ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ಹಬ್ಬಗಳು ಅಣಿಯಾಗುತ್ತಿವೆ.
ಇನ್ನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ, ಭಗವಾನ್ ಗಣೇಶನನ್ನು ಪೂಜಿಸುವ ಹಬ್ಬ ಬರುತ್ತದೆ. ಗಣೇಶ ಚತುರ್ಥಿ, ಅಂದರೆ ಗಣಪತಿ ಬಪ್ಪನ ಆಶೀರ್ವಾದದ ಹಬ್ಬ. ಗಣೇಶ ಚತುರ್ಥಿಯ ಜೊತೆಗೆ ಓಣಂ ಹಬ್ಬವೂ ಆರಂಭವಾಗುತ್ತದೆ. ಓಣಂ ಅನ್ನು ವಿಶೇಷವಾಗಿ ಕೇರಳದಲ್ಲಿ ಶಾಂತಿ ಮತ್ತು ಸಮೃದ್ಧಿಯ ಭಾವನೆಯೊಂದಿಗೆ ಆಚರಿಸಲಾಗುತ್ತದೆ. ಹರ್ತಾಲಿಕಾ ತೀಜ್ ಕೂಡ ಆಗಸ್ಟ್ 30 ರಂದು. ಒಡಿಶಾದಲ್ಲಿ ಸೆಪ್ಟೆಂಬರ್ 1 ರಂದು ನುವಾಖಾಯ್ ಹಬ್ಬವನ್ನು ಆಚರಿಸಲಾಗುತ್ತದೆ. ನುವಾಖೈ ಎಂದರೆ ಹೊಸ ಆಹಾರ, ಅಂದರೆ ಇದು ಕೂಡ ಇತರ ಅನೇಕ ಹಬ್ಬಗಳಂತೆ ನಮ್ಮ ಕೃಷಿ ಸಂಪ್ರದಾಯಗಳಿಗೆ ಸಂಬಂಧಿಸಿದ ಹಬ್ಬವಾಗಿದೆ. ಇದೇ ವೇಳೆ ಜೈನ ಸಮುದಾಯದ ಸಂವತ್ಸರಿ ಉತ್ಸವವೂ ನಡೆಯಲಿದೆ. ನಮ್ಮ ಈ ಎಲ್ಲ ಹಬ್ಬಗಳು ನಮ್ಮ ಸಾಂಸ್ಕೃತಿಕ ಏಳಿಗೆ ಮತ್ತು ಜೀವಂತಿಕೆಗೆ ಸಮಾನಾರ್ಥಕವಾಗಿವೆ. ಈ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ.
ಈ ಹಬ್ಬಗಳ ಜೊತೆಗೆ ನಾಳೆ ಆಗಸ್ಟ್ 29 ರಂದು ಮೇಜರ್ ಧ್ಯಾನಚಂದ್ ಜಿ ಅವರ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಸಹ ಆಚರಿಸಲಾಗುತ್ತದೆ. ನಮ್ಮ ಯುವ ಕ್ರೀಡಾ ಪಟುಗಳು ಜಾಗತಿಕ ವೇದಿಕೆಗಳಲ್ಲಿ ನಮ್ಮ ತ್ರಿವರ್ಣ ಧ್ವಜದ ವೈಭವವನ್ನು ಹೆಚ್ಚಿಸುವುದನ್ನು ಮುಂದುವರಿಸಲಿ, ಇದು ಧ್ಯಾನ್ ಚಂದ್ ಜಿ ಅವರಿಗೆ ನಮ್ಮ ಗೌರವವಾಗಿದೆ. ನಾವೆಲ್ಲರೂ ಸೇರಿ ದೇಶಕ್ಕಾಗಿ ಹೀಗೆ ಕೆಲಸ ಮಾಡೋಣ; ದೇಶದ ಗೌರವವನ್ನು ಹೆಚ್ಚಿಸುತ್ತಾ ಇರೋಣ...ಈ ಹಾರೈಕೆಯೊಂದಿಗೆ ನಾನು ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ. ಮುಂದಿನ ತಿಂಗಳು ಮತ್ತೊಮ್ಮೆ ‘ಮನ್ ಕಿ ಬಾತ್’ ನಡೆಯಲಿದೆ.
ಧನ್ಯವಾದಗಳು!
ನನ್ನ ಆತ್ಮೀಯ ದೇಶವಾಸಿಗಳೇ, ನಮಸ್ಕಾರ..!
ಇದು 'ಮನ್ ಕಿ ಬಾತ್' ನ 91ನೇ ಸಂಚಿಕೆಯಾಗಿದೆ. ಈ ಹಿಂದೆ ನಾವು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ, ನಾನಾ ವಿಷಯಗಳ ಬಗ್ಗೆ ನಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದೇವೆ, ಆದರೆ, ಈ ಬಾರಿಯ 'ಮನ್ ಕಿ ಬಾತ್' ಕಾರ್ಯಕ್ರಮ ತುಂಬಾ ವಿಶೇಷವಾಗಿದೆ. ಅದಕ್ಕೆ ಕಾರಣ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುತ್ತಿರುವುದು. ನಾವೆಲ್ಲರೂ ಈ ಒಂದು ಮಹತ್ವದ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ. ದೇವರು ನಮಗೆ ಈ ಸೌಭಾಗ್ಯ ಕರುಣಿಸಿದ್ದಾನೆ.
ನೀವು ಸಹ ಯೋಚಿಸಿ, ಒಂದು ವೇಳೆ, ನಾವು ಗುಲಾಮಗಿರಿಯ ಯುಗದಲ್ಲಿ ಜನಿಸಿದ್ದರೆ, ಈ ದಿನವನ್ನು ನಾವು ಹೇಗೆ ಊಹಿಸಿಕೊಳ್ಳ ಬಹುದಾಗಿತ್ತು? ಗುಲಾಮಗಿರಿಯಿಂದ ಮುಕ್ತವಾಗುವ ಆ ಹಂಬಲ, ಪರಾಧೀನತೆಯ ಸಂಕೋಲೆಯಿಂದ ಬಿಡಿಸಿಕೊಂಡು ಸ್ವಾತಂತ್ರ್ಯ ಪಡೆಯುವ ಕಾತುರ- ಎಷ್ಟು ದೊಡ್ಡದಾಗಿರಬಹುದು. ಆ ದಿನಗಳು, ಯಾವಾಗ ನಾವು ಪ್ರತಿದಿನ, ಲಕ್ಷಾಂತರ ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ, ಸಂಘರ್ಷ ಮಾಡುವುದನ್ನು, ಬಲಿದಾನ ಮಾಡುವುದನ್ನು ನಾವು ನೋಡುತ್ತಿದ್ದುದಾರೆ, ನಾವು ಪ್ರತಿದಿನ ಬೆಳಗ್ಗೆ 'ನನ್ನ ಭಾರತ ಯಾವಾಗ ಸ್ವತಂತ್ರವಾಗುತ್ತದೆ ಮತ್ತು ಆಗಬಹುದು’ ಎಂಬ ಕನಸಿನೊಂದಿಗೆ ಏಳಬೇಕಾಗಿತ್ತು. ಅಲ್ಲದೆ ನಮ್ಮ ಜೀವನದಲ್ಲಿ ವಂದೇ ಮಾತರಂ ಮತ್ತು ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಾ, ಮುಂದಿನ ಪೀಳಿಗೆಗೆ ನಾವು ನಮ್ಮ ಜೀವ ಸಮರ್ಪಿಸಿಕೊಳ್ಳುವ ಆ ದಿನ ಎಂದು ಬರುತ್ತದೆ ಎಂದು ಮತ್ತು ನಮ್ಮ ಯೌವನವು ಹಾಗೆಯೇ ಕಳೆದುಹೋಗುತ್ತಿತ್ತು.
ಮಿತ್ರರೇ, ಜುಲೈ 31 ರಂದು, ಅಂದರೆ ಈ ಇಂದು ನಾವೆಲ್ಲ ದೇಶವಾಸಿಗಳು, ಹುತಾತ್ಮ ಯೋಧ ಶಹೀದ್ ಉಧಂ ಸಿಂಗ್ ಅವರಿಗೆ ನಮಿಸುತ್ತೇವೆ. ದೇಶಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಇತರ ಎಲ್ಲ ಮಹಾನ್ ಕ್ರಾಂತಿಕಾರಿಗಳಿಗೆ ನಾನು ವಿನಮ್ರ ಗೌರವ ನಮನವನ್ನು ಸಲ್ಲಿಸುತ್ತೇನೆ.
ಮಿತ್ರರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವವು ಜನಾಂದೋಲನದ ರೂಪ ಪಡೆಯುತ್ತಿರುವುದನ್ನು ಕಂಡು ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲಾ ಕ್ಷೇತ್ರದ ಮತ್ತು ಸಮಾಜದ ಎಲ್ಲಾ ವರ್ಗದ ಜನರು ಇದಕ್ಕೆ ಸಂಬಂಧಿಸಿದ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೇಘಾಲಯದಲ್ಲಿ ಅಂತಹುದೇ ಒಂದು ಕಾರ್ಯಕ್ರಮ ನಡೆದಿದೆ. ಮೇಘಾಲಯದ ವೀರ ಯೋಧ, ಯು. ತಿರೋತ್ ಸಿಂಗ್ ಅವರ ಪುಣ್ಯತಿಥಿಯಂದು ಜನರು ಅವರನ್ನು ನೆನಪಿಸಿಕೊಂಡರು. ತಿರೋತ್ ಸಿಂಗ್ ಅವರು ಖಾಸಿ ಬೆಟ್ಟಗಳನ್ನು ನಿಯಂತ್ರಿಸಲು ಮತ್ತು ಅಲ್ಲಿನ ಸಂಸ್ಕೃತಿಯನ್ನು ನಾಶಗೊಳಿಸಲು ಬ್ರಿಟಿಷರು ನಡೆಸಿದ ಸಂಚನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಸುಂದರ ಪ್ರದರ್ಶನ ನೀಡಿದರು. ಅವರು ಇತಿಹಾಸವನ್ನು ಜೀವಂತವಾಗಿರಿಸಿದರು. ಮೇಘಾಲಯದ ಶ್ರೇಷ್ಠ ಸಂಸ್ಕೃತಿಯನ್ನು ಅತ್ಯಂತ ಸುಂದರವಾಗಿ ಬಿಂಬಿಸುವ ಅತ್ಯಂತ ಸಂಭ್ರಮದ ಸಮಾರಂಭವನ್ನು ಕೂಡ ಆಯೋಜನೆಗೊಂಡಿತ್ತು. ಕೆಲವು ವಾರಗಳ ಹಿಂದೆ, ಕರ್ನಾಟಕದಲ್ಲಿ 'ಅಮೃತ ಭಾರತಿಗೆ ಕನ್ನಡದಾರತಿ' ಎಂಬ ವಿಶಿಷ್ಟ ಅಭಿಯಾನವನ್ನು ಆರಂಭಿಸಲಾಗಿದೆ. ಅದರಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ವೈಭವ್ಯದಿಂದ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಜೊತೆಗೆ ಸ್ಥಳೀಯ ಸಾಹಿತ್ಯ ಸಾಧನೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಯಿತು.
ಮಿತ್ರರೇ, ಇದೇ ಜುಲೈ ತಿಂಗಳಲ್ಲಿ 'ಸ್ವಾತಂತ್ರ್ಯದ ರೈಲುಗಾಡಿ ಮತ್ತು ರೈಲು ನಿಲ್ದಾಣ' ಎಂದು ಹೆಸರಿಡಲಾದ ಬಹಳ ಆಸಕ್ತಿದಾಯಕ ಪ್ರಯತ್ನವನ್ನು ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರೈಲ್ವೇಯ ಪಾತ್ರವನ್ನು ಜನರಿಗೆ ತಿಳಿಸಿಕೊಡುವುದು ಈ ಪ್ರಯತ್ನದ ಉದ್ದೇಶವಾಗಿದೆ. ಸ್ವಾತಂತ್ರ್ಯ ಚಳವಳಿಯ ಇತಿಹಾಸದೊಂದಿಗೆ ಸಂಬಂಧ ಹೊಂದಿರುವ ಇಂತಹ ಅನೇಕ ರೈಲು ನಿಲ್ದಾಣಗಳು ದೇಶದಲ್ಲಿ ಕಾಣಬಹುದು. ಈ ರೈಲು ನಿಲ್ದಾಣಗಳ ಬಗ್ಗೆ ತಿಳಿದರೆ ನಿಮಗೂ ಸಹ ಆಶ್ಚರ್ಯವಾಗಬಹುದು, ಜಾರ್ಖಂಡ್ನ ಗೋಮೋ ಜಂಕ್ಷನ್ ಅನ್ನು ಈಗ ಅಧಿಕೃತವಾಗಿ 'ನೇತಾಜಿ ಸುಭಾಸ್ ಚಂದ್ರ ಬೋಸ್ ಜಂಕ್ಷನ್ ಗೋಮೋ' ಎಂದು ಕರೆಯಲಾಗುತ್ತದೆ. ಅದು ಏಕೆ ಗೊತ್ತೇ? ವಾಸ್ತವವಾಗಿ ಈ ನಿಲ್ದಾಣದಲ್ಲಿ ನೇತಾಜಿ ಸುಭಾಷ್ ಅವರು ಕಾಲ್ಕಾ ಮೇಲ್ ರೈಲು ಹತ್ತಿ ಬ್ರಿಟಿಷ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಲಕ್ನೋ ಬಳಿಯ ಕಾಕೋರಿ ರೈಲು ನಿಲ್ದಾಣದ ಹೆಸರನ್ನು ನೀವೆಲ್ಲರೂ ಕೇಳಿರಬೇಕು. ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ಲಾ ಖಾನ್ ಅವರಂತಹ ವೀರರ ಹೆಸರುಗಳು ಈ ನಿಲ್ದಾಣದೊಂದಿಗೆ ಸಂಬಂಧ ಹೊಂದಿವೆ. ಇಲ್ಲಿಂದ ರೈಲಿನಲ್ಲಿ ಹೋಗುವ ಬ್ರಿಟಿಷರ ಖಜಾನೆಯನ್ನು ಲೂಟಿ ಮಾಡುವ ಮೂಲಕ ವೀರ ಕ್ರಾಂತಿಕಾರಿಗಳು ಬ್ರಿಟಿಷರಿಗೆ ತಮ್ಮ ಶಕ್ತಿಯನ್ನು ತೋರಿಸಿದ್ದರು. ನೀವು ತಮಿಳುನಾಡಿನ ಜನರೊಂದಿಗೆ ಮಾತನಾಡುವಾಗ, ತೂತುಕುಡಿ ಜಿಲ್ಲೆಯ ವಾಂಚಿ ಮಣಿಯಾಚ್ಚಿ ಜಂಕ್ಷನ್ ಬಗ್ಗೆ ತಿಳಿದುಕೊಳ್ಳಬಹುದು. ಈ ನಿಲ್ದಾಣಕ್ಕೆ ತಮಿಳು ಸ್ವಾತಂತ್ರ್ಯ ಹೋರಾಟಗಾರ ವಾಂಚಿನಾಥನ್ ಜಿ ಅವರ ಹೆಸರನ್ನು ಇಡಲಾಗಿದೆ. 25ರ ಹರೆಯದ ಯುವಕ ವಾಂಚಿ ಬ್ರಿಟಿಷ್ ಕಲೆಕ್ಟರ್ಗೆ ಆತನ ಕೃತ್ಯಗಳಿಗಾಗಿ ಶಿಕ್ಷೆ ನೀಡಿದ ಸ್ಥಳ ಇದಾಗಿದೆ.
ಮಿತ್ರರೇ, ಈ ಪಟ್ಟಿ ತುಂಬಾ ಉದ್ದವಾಗಿದೆ. ದೇಶದಾದ್ಯಂತ 24 ರಾಜ್ಯಗಳಲ್ಲಿ ಹರಡಿರುವ ಇಂತಹ 75 ರೈಲು ನಿಲ್ದಾಣಗಳನ್ನು ಗುರುತಿಸಲಾಗಿದೆ. ಈ 75 ನಿಲ್ದಾಣಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗುತ್ತಿದ್ದು, ಅಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ನೀವು ನಿಮ್ಮ ಸಮೀಪದ ಅಂತಹ ಐತಿಹಾಸಿಕ ನಿಲ್ದಾಣಕ್ಕೆ ಭೇಟಿ ನೀಡಲು ಸಮಯವನ್ನು ತೆಗೆದಿರಿಸಿ. ನಿಮಗೆ ತಿಳಿದಿಲ್ಲದ ಸ್ವಾತಂತ್ರ್ಯ ಚಳವಳಿಯ ಇತಿಹಾಸದ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬಹುದು. ನಾನು ಅಂತಹ ನಿಲ್ದಾಣಗಳ ಹತ್ತಿರದ ಶಾಲೆಯ ವಿದ್ಯಾರ್ಥಿಗಳನ್ನು, ಶಿಕ್ಷಕರು ತಮ್ಮ ಶಾಲೆಯ ಸಣ್ಣ ಮಕ್ಕಳನ್ನು ಅಂತಹ ರೇಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಇಡೀ ಘಟನೆಯನ್ನು ಆ ಮಕ್ಕಳಿಗೆ ವಿವರಿಸಬೇಕು ಎಂದು ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ 'ಹರ್ ಘರ್ ತಿರಂಗಾ- ಹರ್ ಘರ್ ತಿರಂಗಾ, ಮನೆ ಮನೆಯಲ್ಲೂ ತ್ರಿವರ್ಣ ಧ್ವಜ' ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ, ಆಗಸ್ಟ್ 13 ರಿಂದ 15 ರವರೆಗೆ, ಒಂದು ವಿಶೇಷ ಅಭಿಯಾನದಲ್ಲಿ ನೀವು ನಿಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು. ತ್ರಿವರ್ಣ ಧ್ವಜ ನಮ್ಮನ್ನು ಬೆಸೆಯುತ್ತದೆ. ದೇಶಕ್ಕಾಗಿ ಏನನ್ನಾದರೂ ಮಾಡಲು ಉತ್ತೇಜಿಸುತ್ತದೆ. ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಮಾಧ್ಯಮ ಜಾಲತಾಣಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳಬೇಕು ಎಂಬುದು ನನ್ನ ಸಲಹೆ. ಅಂದಹಾಗೆ, ನಿಮಗೆ ಗೊತ್ತೇ? ಆಗಸ್ಟ್ 2ಕ್ಕೂ ನಮ್ಮ ತ್ರಿವರ್ಣ ಧ್ವಜಕ್ಕೂ ವಿಶೇಷ ಸಂಬಂಧವಿದೆ. ಈ ದಿನ ನಮ್ಮ ರಾಷ್ಟ್ರಧ್ವಜ ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಜಿ ಅವರ ಜನ್ಮದಿನ. ಅವರಿಗೆ ನನ್ನ ಗೌರವಪೂರ್ವಕ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ನಮ್ಮ ರಾಷ್ಟ್ರಧ್ವಜದ ಬಗ್ಗೆ ಮಾತನಾಡುವಾಗ, ನಾನು ಶ್ರೇಷ್ಠ ಕ್ರಾಂತಿಕಾರಿ ಮೇಡಂ ಕಾಮಾ ಅವರನ್ನೂ ನೆನಪಿಸಿಕೊಳ್ಳುತ್ತೇನೆ. ತ್ರಿವರ್ಣ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಮಿತ್ರರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಆಯೋಜಿಸಲಾಗುತ್ತಿರುವ ಈ ಎಲ್ಲಾ ಕಾರ್ಯಕ್ರಮಗಳ ದೊಡ್ಡ ಸಂದೇಶವೆಂದರೆ ದೇಶವಾಸಿಗಳಾದ ನಾವೆಲ್ಲರೂ ನಮ್ಮ ಕರ್ತವ್ಯವನ್ನು ಪೂರ್ಣ ನಿಷ್ಠೆಯಿಂದ ಪಾಲಿಸಬೇಕು. ಆಗ ಮಾತ್ರ ನಾವು ಆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸಾಗಿಸಲು ಸಾಧ್ಯ ಮತ್ತು ಅವರ ಕನಸಿನ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದಲೇ ನಮ್ಮ ಮುಂದಿನ 25 ವರ್ಷಗಳ ಈ ಅಮೃತ ಕಾಲವು ಪ್ರತಿಯೊಬ್ಬ ದೇಶವಾಸಿಯೂ ತಮ್ಮ ಕರ್ತವ್ಯ ನಿರ್ವಹಿಸಬೇಕಾದ ಅವಧಿಯಾಗಿದೆ.
ದೇಶವನ್ನು ವಿಮೋಚನೆಗೊಳಿಸಲು ನಮ್ಮ ವೀರ ಹೋರಾಟಗಾರರು ನಮಗೆ ಈ ಜವಾಬ್ದಾರಿ ನೀಡಿದ್ದಾರೆ ಮತ್ತು ಅದನ್ನು ನಾವು ಸಂಪೂರ್ಣ ಸಾಕಾರಗೊಳಿಸಬೇಕಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ವಿರುದ್ಧ ನಮ್ಮ ದೇಶವಾಸಿಗಳ ಹೋರಾಟ ಇನ್ನೂ ನಡೆಯುತ್ತಿದೆ. ಇಡೀ ಜಗತ್ತು ಇನ್ನೂ ಸೆಣೆಸುತ್ತಿದೆ. ಜನರಲ್ಲಿ ಸಮಗ್ರ ಆರೋಗ್ಯರಕ್ಷಣೆ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯು, ಪ್ರತಿಯೊಬ್ಬರಿಗೂ ಸಾಕಷ್ಟು ಸಹಾಯ ಮಾಡಿದೆ. ಇದರಲ್ಲಿ ಭಾರತೀಯ ಸಾಂಪ್ರದಾಯಿಕ ಪದ್ಧತಿಗಳು ಎಷ್ಟು ಉಪಯುಕ್ತ ಎಂದು ನಮಗೆಲ್ಲರಿಗೂ ತಿಳಿದಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ, 'ಆಯುಷ್' ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಿದೆ. ಜಗತ್ತಿನಾದ್ಯಂತ ಆಯುರ್ವೇದ ಮತ್ತು ಭಾರತೀಯ ಔಷಧಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಇದು ಆಯುಷ್ ರಫ್ತು ದಾಖಲೆಯ ಪ್ರಮಾಣ ಏರಿಕೆಯಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಈ ವಲಯದಲ್ಲಿ ಅನೇಕ ಹೊಸ ನವೋದ್ಯಮಗಳು ಸಹ ಉದಯವಾಗುತ್ತಿರುವುದು ತುಂಬಾ ಸಂತೋಷಕರವಾಗಿದೆ. ಇತ್ತೀಚೆಗೆ, ಒಂದು ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ನಡೆಯಿತು. ಅದರಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವ ಬಂದಿವೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಕೊರೋನಾ ಅವಧಿಯಲ್ಲಿ ಔಷಧೀಯ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ ಎಂಬುದು ಮತ್ತೊಂದು ಪ್ರಮುಖ ಸಂಗತಿಯಾಗಿದೆ. ಈ ಕುರಿತು ಹಲವು ಸಂಶೋಧನಾ ಅಧ್ಯಯನಗಳು ಪ್ರಕಟವಾಗುತ್ತಿವೆ. ಇದು ಖಂಡಿತವಾಗಿಯೂ ಉತ್ತಮ ಆರಂಭವಾಗಿದೆ.
ಮಿತ್ರರೇ, ನಾನಾ ರೀತಿಯ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ದೇಶದಲ್ಲಿ ಮತ್ತೊಂದು ದೊಡ್ಡ ಪ್ರಯತ್ನ ನಡೆದಿದೆ. ‘ಭಾರತೀಯ ವರ್ಚುವಲ್ ಹರ್ಬೇರಿಯಂ’ ಅನ್ನು ಜುಲೈ ತಿಂಗಳಲ್ಲಿ ಆರಂಭಿಸಲಾಗಿದೆ. ನಮ್ಮ ಬೇರುಗಳೊಂದಿಗೆ ಸಂಪರ್ಕ ಸಾಧಿಸಲು ನಾವು ಡಿಜಿಟಲ್ ಜಗತ್ತನ್ನು ಹೇಗೆ ಬಳಸಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ. ಭಾರತೀಯ ವರ್ಚುವಲ್ ಹರ್ಬೇರಿಯಂ, ಸಂರಕ್ಷಿತ ಸಸ್ಯಗಳು ಅಥವಾ ಸಸ್ಯದ ಭಾಗಗಳ ಡಿಜಿಟಲ್ ಚಿತ್ರಗಳ ಆಸಕ್ತಿದಾಯಕ ಸಂಗ್ರಹವಾಗಿದೆ, ಇದು ಜಾಲತಾಣದಲ್ಲಿ ಉಚಿತವಾಗಿ ಲಭ್ಯವಿದೆ. ಈ ವರ್ಚುವಲ್ ಹರ್ಬೇರಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಾದರಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿ ಇದೆ. ವರ್ಚುವಲ್ ಹರ್ಬೇರಿಯಂನಲ್ಲಿ, ಭಾರತದ ಸಸ್ಯಶಾಸ್ತ್ರೀಯ ವೈವಿಧ್ಯದ ಶ್ರೀಮಂತ ಚಿತ್ರಣವೂ ಗೋಚರಿಸುತ್ತದೆ. ಭಾರತೀಯ ಸಸ್ಯವರ್ಗದ ಸಂಶೋಧನೆಗೆ ಭಾರತೀಯ ವರ್ಚುವಲ್ ಹರ್ಬೇರಿಯಂ ಪ್ರಮುಖ ಸಂಪನ್ಮೂಲವಾಗಲಿದೆ ಎಂಬ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ಬಾರಿಯೂ 'ಮನ್ ಕಿ ಬಾತ್' ನಲ್ಲಿ ನಮ್ಮ ಮುಖದಲ್ಲಿ ಮುಗುಳ್ನಗು ಮೂಡಿಸುವಂತಹ ದೇಶವಾಸಿಗಳ ಅಂತಹ ಯಶಸ್ಸಿನ ಬಗ್ಗೆ ನಾವು ಚರ್ಚಿಸುತ್ತೇವೆ. ಯಶಸ್ಸಿನ ಕಥೆಯು ಮುಗುಳ್ನಗೆ ಹರಡಿದರೆ ಮತ್ತು ಸಿಹಿಯಾಗಿ ರಚಿಸಿದರೆ, ನೀವು ಖಂಡಿತವಾಗಿಯೂ ಅದನ್ನು ಕೇಕ್ ಮೇಲೆ ಐಸ್ ಇಟ್ಟ ಹಾಗೆ ಎಂದು ಕರೆಯುತ್ತೀರಿ. ಇತ್ತೀಚಿನ ದಿನಗಳಲ್ಲಿ ನಮ್ಮ ರೈತರು ಜೇನು ಉತ್ಪಾದನೆಯಲ್ಲಿ ಇದೇ ರೀತಿಯ ಪವಾಡದಂತಹ ಸಾಧನೆ ಮಾಡುತ್ತಿದ್ದಾರೆ. ಜೇನಿನ ಸಿಹಿ ನಮ್ಮ ರೈತರ ಬದುಕನ್ನೂ ಸಹ ಬದಲಾಯಿಸುತ್ತಿದೆ, ಆದಾಯವೂ ಹೆಚ್ಚುತ್ತಿದೆ. ಹರಿಯಾಣದ ಯಮುನಾನಗರದಲ್ಲಿ, ಜೇನುಸಾಕಣೆ ಮಾಡುವ ಒರ್ವ ಮಿತ್ರ ಸುಭಾಷ್ ಕಂಬೋಜ್ ಜಿ ವಾಸಿಸುತ್ತಿದ್ದಾರೆ. ಸುಭಾಷ್ ಜಿ ಅವರು ಜೇನುಸಾಕಣೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ತರಬೇತಿ ಪಡೆದವರು. ಅವರು ಕೇವಲ ಆರು ಜೇನು ಪೆಟ್ಟಿಗೆಗಳೊಂದಿಗೆ ತಮ್ಮ ಕೃಷಿ ಆರಂಭಿಸಿದರು. ಇಂದು ಸುಮಾರು ಎರಡು ಸಾವಿರ ಪೆಟ್ಟಿಗೆಗಳಲ್ಲಿ ಜೇನು ಕೃಷಿ ಮಾಡುತ್ತಿದ್ದಾರೆ. ಅವರ ಜೇನುತುಪ್ಪ ಅನೇಕ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಜಮ್ಮುವಿನ ಪಲ್ಲಿ ಗ್ರಾಮದ ವಿನೋದ್ ಕುಮಾರ್ ಅವರು ಒಂದೂವರೆ ಸಾವಿರಕ್ಕೂ ಹೆಚ್ಚು ಕಾಲೋನಿಗಳಲ್ಲಿ ಜೇನುಸಾಕಣೆ ಮಾಡುತ್ತಿದ್ದಾರೆ. ಅವರು ಕಳೆದ ವರ್ಷ ರಾಣಿ ಜೇನುನೊಣ ಸಾಕಣೆ ತರಬೇತಿ ಪಡೆದಿದ್ದಾರೆ. ಅವರು ಇದರಿಂದ ವಾರ್ಷಿಕ 15 ರಿಂದ 20 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಮತ್ತೊಬ್ಬ ರೈತ ಕರ್ನಾಟಕದ ಮಧುಕೇಶ್ವರ ಹೆಗಡೆ ಜಿ ಅವರು. ಮಧುಕೇಶ್ವರ್ 50 ಜೇನುನೊಣಗಳ ಕಾಲೋನಿಗಳಿಗೆ ಭಾರತ ಸರ್ಕಾರದಿಂದ ಸಬ್ಸಿಡಿ ತೆಗೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. ಅವರು ಇಂದು 800 ಕ್ಕೂ ಹೆಚ್ಚು ಜೇನು ಕಾಲೋನಿಗಳನ್ನು ಹೊಂದಿದ್ದಾರೆ ಮತ್ತು ಅವರು ಹಲವು ಟನ್ ಗಳಷ್ಟು ಜೇನುತುಪ್ಪ ಮಾರಾಟ ಮಾಡುತ್ತಾರೆ. ಅವರು ತಮ್ಮ ಕೃಷಿಯಲ್ಲಿ ಹೊಸತನ ಪರಿಚಯಿಸಿದರು ಮತ್ತು ಅವರು ನೇರಳೆ ಜೇನು, ತುಳಸಿ ಜೇನು, ನೆಲ್ಲಿ ಜೇನು ಮುಂತಾದ ವನಸ್ಪತಿಯುಕ್ತ ಜೇನುತುಪ್ಪಗಳನ್ನು ಸಹ ಮಾಡುತ್ತಿದ್ದಾರೆ. ಮಧುಕೇಶ್ವರ್ ಜಿ ಜೇನು ಕೃಷಿಯಲ್ಲಿ ನಿಮ್ಮ ನಾವೀನ್ಯ ಮತ್ತು ಯಶಸ್ಸು ಕೂಡ ನಿಮ್ಮ ಹೆಸರನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದೆ.
ಮಿತ್ರರೇ, ನಮ್ಮ ಸಾಂಪ್ರದಾಯಿಕ ಆರೋಗ್ಯ ವಿಜ್ಞಾನದಲ್ಲಿ ಜೇನುತುಪ್ಪಕ್ಕೆ ಎಷ್ಟು ಪ್ರಾಮುಖ್ಯ ನೀಡಲಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆಯುರ್ವೇದ ಗ್ರಂಥಗಳಲ್ಲಿ ಜೇನುತುಪ್ಪವನ್ನು ಮಕರಂದ ಅಥವಾ ಸಂಜೀವಿನಿ (ಪರಮೌಷಧ) ಎಂದು ವಿವರಿಸಲಾಗಿದೆ. ಜೇನುತುಪ್ಪವು ರುಚಿ ಮಾತ್ರವಲ್ಲ, ಆರೋಗ್ಯವನ್ನೂ ನೀಡುತ್ತದೆ. ಜೇನು ಉತ್ಪಾದನೆಯಲ್ಲಿ ಇಂದು ಹಲವು ಸಾಧ್ಯತೆಗಳಿದ್ದು, ವೃತ್ತಿಪರ ಶಿಕ್ಷಣ ಪಡೆಯುವ ಯುವಕರೂ ಅದನ್ನೇ ಸ್ವಯಂ ಉದ್ಯೋಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಯುವಕರಲ್ಲಿ ಉತ್ತರಪ್ರದೇಶದ ಗೋರಖ್ಪುರ ನಿವಾಸಿ ನಿಮಿತ್ ಸಿಂಗ್ ಒಬ್ಬರು. ನಿಮಿತ್ ಜಿ ಬಿ.ಟೆಕ್ ಮಾಡಿದ್ದಾರೆ.ಅವರ ತಂದೆ ಕೂಡ ವೈದ್ಯರಾಗಿದ್ದಾರೆ, ಆದರೆ ಅವರ ಅಧ್ಯಯನದ ನಂತರ, ನಿಮಿತ್ ಅವರು ಉದ್ಯೋಗದ ಬದಲು ಸ್ವಯಂ ಉದ್ಯೋಗ ಮಾಡಲು ನಿರ್ಧರಿಸಿದರು. ಅವರು ಜೇನು ಉತ್ಪಾದನೆ ಆರಂಭಿಸಿದರು. ಅದರ ಗುಣಮಟ್ಟದ ಪರಿಶೀಲನೆಗಾಗಿ ಲಕ್ನೋದಲ್ಲಿ ಅವರು ಸ್ವಂತ ಪ್ರಯೋಗಾಲಯ ಸ್ಥಾಪಿಸಿದರು. ನಿಮಿತ್ ಜಿ ಇದೀಗ ಜೇನು ಮತ್ತು ಜೇನಿನ ಮೇಣದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ ಮತ್ತು ವಿವಿಧ ರಾಜ್ಯಗಳಿಗೆ ಹೋಗಿ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಅಂತಹ ಯುವಕರ ಕಠಿಣ ಪರಿಶ್ರಮದಿಂದ ದೇಶ ಇಂದು ಭಾರಿ ದೊಡ್ಡ ಜೇನು ಉತ್ಪಾದಕ ರಾಷ್ಟ್ರವಾಗುತ್ತಿದೆ. ದೇಶದಿಂದ ಜೇನುತುಪ್ಪದ ರಫ್ತು ಕೂಡ ಹೆಚ್ಚಾಗಿದೆ ಎಂಬುದನ್ನು ತಿಳಿದರೆ ನಿಮಗೂ ಸಂತೋಷವಾಗುತ್ತದೆ. ದೇಶವು 'ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್' ನಂತಹ ಅಭಿಯಾನಗಳನ್ನು ಆರಂಭಿಸಿದೆ, ಅದಕ್ಕಾಗಿ ರೈತರು ಕಷ್ಟಪಟ್ಟು ದುಡಿದು ನಮ್ಮ ಜೇನುತುಪ್ಪದ ಸಿಹಿಯವನ್ನು ಜಗತ್ತಿನಾದ್ಯಂತ ಪಸರಿಸಲು ಆರಂಭಿಸಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನೂ ದೊಡ್ಡ ಸಾಧ್ಯತೆಗಳಿವೆ. ನಮ್ಮ ಯುವಕರು ಈ ಅವಕಾಶ ಜೊತೆ ಸೇರಬೇಕು ಮತ್ತು ಅವುಗಳನ್ನು ಬಳಸಿಕೊಂಡು ಲಾಭ ಪಡೆದುಕೊಳ್ಳಬೇಕು ಮತ್ತು ಹೊಸ ಸಾಧ್ಯತೆಗಳನ್ನು ಅರಿತು ಸಾಕಾರಗೊಳಿಸಿಕೊಳ್ಳ ಬೇಕೆಂದು ನಾನು ಬಯಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ನಾನು ಹಿಮಾಚಲ ಪ್ರದೇಶದ ನಿವಾಸಿ, ‘ಮನ್ ಕಿ ಬಾತ್‘ ಕೇಳುಗರಾದ ಶ್ರೀ ಆಶಿಷ್ ಬಲ್ ಜಿ ಅವರಿಂದ ಒಂದು ಸ್ವೀಕರಿಸಿದ್ದೇನೆ. ಅವರು ತಮ್ಮ ಪತ್ರದಲ್ಲಿ ಚಂಬಾದ “ಮಿಂಜರ್ ಮೇಳ’ ಕುರಿತು ಉಲ್ಲೇಖಿಸಿದ್ದಾರೆ. ವಾಸ್ತವದಲ್ಲಿ ಮಿಂಜರ್ ಎಂದು ಜೋಳದ ಹೂವನ್ನು ಕರೆಯುತ್ತಾರೆ. ಜೋಳದ ತೆನೆಯಲ್ಲಿ ಹೂವು ಮೂಡಿದಾಗ ಮಿಂಜರ್ ಮೇಳ ಆಯೋಜಿಸಲಾಗುತ್ತದೆ ಹಾಗೂ ಈ ಮೇಳದಲ್ಲಿ ದೇಶಾದ್ಯಂತ ಪ್ರವಾಸಿಗರು ದೂರದ ದೂರದ ಪ್ರದೇಶಗಳಿಂದ ಪಾಲ್ಗೊಳ್ಳಲು ಬರುತ್ತಾರೆ. ಕಾಕತಾಳೀಯವೆಂದರೆ, ಈಗ ಮಿಂಜರ್ ಜಾತ್ರೆ ನಡೆಯುತ್ತಿದೆ. ಒಂದು ವೇಳೆ ನೀವು ಹಿಮಾಚಲ ಪ್ರದೇಶಕ್ಕೆ ಈಗ ಪ್ರವಾಸಕ್ಕೆಂದು ಹೋಗಿದ್ದರೆ, ಈ ಮೇಳವನ್ನು ನೋಡಲು ಚಂಬಾಗೆ ಹೋಗಬಹುದು. ಚಂಬಾ ನಿಜಕ್ಕೂ ಎಷ್ಟೊಂದು ಸುಂದರ ಪ್ರದೇಶವೆಂದರೆ, ಇಲ್ಲಿನ ಜಾನಪದ ಗೀತೆಗಳಲ್ಲಿ ಹೀಗೆಂದು ಮತ್ತೆ ಮತ್ತೆ ಹೇಳಲಾಗುತ್ತದೆ –
“ಚಂಬೇ ಏಕ್ ದಿನ್ ಓನಾ ಕಾನೇ ಮಹೀನಾ ರೈನಾ”
ಅಂದರೆ, ಯಾರು ಕೇವಲ ಒಂದು ದಿನಕ್ಕೆಂದು ಚಂಬಾಗೆ ಬರುತ್ತಾರೋ, ಅವರು ಅದರ ಸೌಂದರ್ಯ ನೋಡಿ ತಿಂಗಳು ಪೂರ್ತಿ ಇಲ್ಲಿಯೇ ಉಳಿಯುತ್ತಾರೆಂಬುದು ಅದರ ಅರ್ಥ.
ಮಿತ್ರರೇ, ನಮ್ಮ ದೇಶದಲ್ಲಿ ಮೇಳ, ಜಾತ್ರೆಗಳಿಗೆ ಬಹು ದೊಡ್ಡ ಸಾಂಸ್ಕೃತಿಕ ಪ್ರಾಮುಖ್ಯ ಇದೆ. ಮೇಳ-ಜಾತ್ರೆ ಎನ್ನುವುದು ಜನ-ಮನ ಎರಡನ್ನೂ ಒಂದುಗೂಡಿಸುತ್ತದೆ. ಹಿಮಾಚಲ ಪ್ರದೇಶದಲ್ಲಿ ಮಳೆಗಾಲದ ನಂತರ ಮುಂಗಾರು ಬೆಳೆ ಕೊಯ್ಲಿಗೆ ಬಂದಾಗ, ಸೆಪ್ಟೆಂಬರ್ ತಿಂಗಳಿನಲ್ಲಿ ಶಿಮ್ಲಾ, ಮಂಡಿ, ಕುಲು, ಮತ್ತು ಸೋಲನ್ ನಲ್ಲಿ ಸೈರಿ ಅಥವಾ ಸೈರ್ ಆಚರಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿಯೇ ಜಾಗರಾ ಜಾತ್ರೆ ಕೂಡಾ ಬರಲಿದೆ. ಜಾಗರಾ ಜಾತ್ರೆಯಲ್ಲಿ ಮಹಸು ದೇವತೆಯ ಆವಾಹನೆ ಮಾಡಿ, ಬೀಸೂ ಹಾಡುಗಳನ್ನು ಹಾಡಲಾಗುತ್ತದೆ. ಮಹಾಸು ದೇವತೆಯ ಜಾತ್ರೆ ಹಿಮಾಚಲ ಪ್ರದೇಶದಲ್ಲಿ ಶಿಮ್ಲಾ, ಕಿನ್ನೌರ್ ಮತ್ತು ಸಿರಮೌರ್ ನಲ್ಲಿ ಹಾಗೂ ಉತ್ತರಾಖಂಡ್ ನಲ್ಲಿ ಏಕಕಾಲದಲ್ಲಿ ನಡೆಯುತ್ತದೆ.
ಮಿತ್ರರೇ, ನಮ್ಮ ದೇಶದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಆದಿವಾಸಿ ಸಮುದಾಯದ ಅನೇಕ ಪಾರಂಪರಿಕ ಜಾತ್ರೆ ನಡೆಯುತ್ತವೆ. ಅವುಗಳಲ್ಲಿ ಕೆಲವು ಜಾತ್ರೆಗಳು ಬುಡಕಟ್ಟು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದರೆ ಕೆಲವು ಜಾತ್ರೆಗಳು ಬುಡಕಟ್ಟು ಇತಿಹಾಸ ಹಾಗೂ ಪರಂಪರೆಗೆ ಸಂಬಂಧಿಸಿದ್ದಾಗಿವೆ. ಹಾಗೆಯೇ ನಿಮಗೆ ಅವಕಾಶ ಸಿಕ್ಕರೆ ತೆಲಂಗಾಣದ ಮೇದಾರಂನ ನಾಲ್ಕು ದಿವಸಗಳ ಸಮಕ್ಕಾ-ಸರಳಮ್ಮಾ ಜಾತ್ರೆ ನೋಡಲು ಖಂಡಿತಾ ಹೋಗಿ. ಈ ಜಾತ್ರೆಯನ್ನು ತೆಲಂಗಾಣದ ಮಹಾಕುಂಭವೆಂದು ಕರೆಯಲಾಗುವುದು. ಸರಳಮ್ಮ ಜಾತ್ರೆಯನ್ನು ಇಬ್ಬರು ಬುಡಕಟ್ಟು ಮಹಿಳಾ ನಾಯಕಿಯರಾದ ಸಮಕ್ಕಾ ಮತ್ತು ಸರಳಮ್ಮ ಅವರುಗಳ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಕೇವಲ ತೆಲಂಗಾಣ ಮಾತ್ರವಲ್ಲ ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಕೋಯಾ ಅದಿವಾಸಿ ಸಮುದಾಯದ ನಂಬಿಕೆಯ ದೊಡ್ಡ ಆಚರಣೆಯಾಗಿದೆ. ಆಂಧ್ರಪ್ರದೇಶದಲ್ಲಿ ಮಾರಿದಮ್ಮ ಜಾತ್ರೆ ಕೂಡಾ ಬುಡಕಟ್ಟು ಸಮಾಜದ ನಂಬಿಕೆಗಳಿಗೆ ಸಂಬಂಧಿಸಿದ ದೊಡ್ಡ ಜಾತ್ರೆಯಾಗಿದೆ. ಮಾರಿದಮ್ಮ ಜಾತ್ರೆಯು ಜ್ಯೇಷ್ಠ ಮಾಸದ ಅಮಾವಾಸ್ಯೆಯಿಂದ ಆಷಾಢ ಮಾಸದ ಅಮಾವಾಸ್ಯೆಯವರೆಗೂ ನಡೆಯುತ್ತದೆ ಮತ್ತು ಅದನ್ನು ಅಲ್ಲಿನ ಆದಿವಾಸಿ ಸಮಾಜವು ಶಕ್ತಿ ಉಪಾಸನೆಯ ಕಾಲವೆಂದು ಕೂಡಾ ನಂಬಿ ಆಚರಿಸುತ್ತಾರೆ. ಇಲ್ಲಿಯೇ, ಪೂರ್ವ ಗೋದಾವರಿಯ ಪೆದ್ದಾಪುರಂದಲ್ಲಿ, ಮಾರಿದಮ್ಮಾ ದೇವಾಲಯ ಕೂಡಾ ಇದೆ. ಇದೇ ರೀತಿ ರಾಜಸ್ಥಾನದಲ್ಲಿ ಗರಾಸಿಯಾ ಜನಾಂಗದ ಜನರು ವೈಶಾಖ ಶುಕ್ಲ ಚತುರ್ದಶಿಯಂದು ‘ಸಿಯಾವಾ ಜಾತ್ರೆ’ ಅಥವಾ ‘ಮನಖಾಂ ರೋ ಮೇಳ’ ಆಯೋಜಿಸುತ್ತಾರೆ.
ಛತ್ತೀಸ್ ಗಢದ ಬಸ್ತಾರ್ ನಲ್ಲಿನ ನಾರಾಯಣಪುರದ ‘ಮಾವಲಿ ಜಾತ್ರೆ’ ತುಂಬಾ ವಿಶೇಷವಾಗಿರುತ್ತದೆ. ಸಮೀಪದಲ್ಲೇ, ಮಧ್ಯಪ್ರದೇಶದ ಭಗೋರಿಯಾ ಮೇಳ ಕೂಡಾ ಹೆಸರುವಾಸಿಯಾಗಿದೆ. ಭಗೋರಿಯಾಜಾತ್ರೆಯ ಆರಂಭ ಭೋಜ ಮಹಾರಾಜನ ಕಾಲದಲ್ಲಿ ಆಗಿದೆ ಎಂದು ಹೇಳಲಾಗುತ್ತದೆ. ಆಗ ಭೀಲ್ಲರ ದೊರೆ, ಕಸುಮರಾ ಮತ್ತು ಬಲುನ್ ಮೊದಲ ಬಾರಿಗೆ ತಮ್ಮ ತಮ್ಮ ರಾಜಧಾನಿಗಳಲ್ಲಿ ಇದನ್ನು ಆಯೋಜಿಸಿದ್ದರು. ಅಂದಿನಿಂದ ಇಂದಿನವರೆಗೂ, ಈ ಜಾತ್ರೆಯನ್ನು ಅಷ್ಟೇ ಉತ್ಸಾಹದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ, ಗುಜರಾತ್ ನಲ್ಲಿ ತರಣೇತರ್ ಮತ್ತು ಮಾಧೋಪುರ್ ನಂತಹ ಅನೇಕ ಜಾತ್ರೆಗಳು ಬಹಳ ಪ್ರಸಿದ್ಧವಾಗಿದೆ.
ಜಾತ್ರೆಗಳು ನಮ್ಮ ಸಮಾಜಕ್ಕೆ,ನಮ್ಮ ಜೀವನಕ್ಕೆ ಶಕ್ತಿಯ ಬಹು ದೊಡ್ಡ ಮೂಲವಾಗಿದೆ. ನೀವು ವಾಸ ಮಾಡುವ ಪ್ರದೇಶದ ಸುತ್ತ ಮುತ್ತ ಕೂಡಾ ಇಂತಹ ಹಲವು ಜಾತ್ರೆಗಳಿರಬಹುದು. ಆಧುನಿಕ ಕಾಲದಲ್ಲಿ ಸಮಾಜದಲ್ಲಿನ ಈ ಹಳೆಯ ಕೊಂಡಿಗಳು, ಏಕ್ ಭಾರತ-ಶ್ರೇಷ್ಠ್ ಭಾರತ ಭಾವನೆ ಮತ್ತಷ್ಟು ಬಲಿಷ್ಠವಾಗಿ ಅತ್ಯಂತ ಪ್ರಮುಖವಾದವುಗಳಾಗಿವೆ. ನಮ್ಮ ಯುವಜನತೆ ಅವುಗೊಳೊಂದಿಗೆ ಬೆಎರೆಯಬೇಕು ಮತ್ತು ಅಲ್ಲಿನ ಭೇಟಿ ನೀಡಿದಾಗ ಅಲ್ಲಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು. ಅಗತ್ಯಬಿದ್ದರೆ ನೀವು ಯಾವುದಾದರೊಂದು ವಿಶೇಷ ಹ್ಯಾಶ್ ಟ್ಯಾಗ್ ಕೂಡಾ ಉಪಯೋಗಿಸಬಹುದು. ಇದರಿಂದಾಗಿ ಈ ಜಾತ್ರೆಗಳ ಬಗ್ಗೆ ಇತರರಿಗೆ ಕೂಡಾ ತಿಳಿಯುತ್ತದೆ. ನೀವು ಸಂಸ್ಕೃತಿ ಸಚಿವಾಲಯದ ಜಾಲತಾಣದಲ್ಲಿ ಕೂಡಾ ಚಿತ್ರಗಳನ್ನು ಅಪ್ಲೋಡ್ ಮಾಡಬಹುದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಸ್ಕೃತಿ ಸಚಿವಾಲಯ ಒಂದು ಸ್ಪರ್ಧೆಯನ್ನು ಕೂಡಾ ಆರಂಭಿಸಲಿದೆ. ಆಗ ಜಾತ್ರೆಗಳಿಗೆ ಸಂಬಂಧಿಸಿದ ಅತ್ಯುತ್ತಮ ಚಿತ್ರ ಕಳುಹಿಸಿಕೊಟ್ಟವರಿಗೆ ಬಹುಮಾನ ಕೂಡಾ ನೀಡಲಾಗುವುದು. ಹಾಗಿದ್ದರೆ ಇನ್ನು ತಡ ಮಾಡಬೇಡಿ, ಜಾತ್ರೆಗಳಲ್ಲಿ ಸುತ್ತಾಡಿ, ಅವುಗಳ ಚಿತ್ರಗಳನ್ನು ಹಂಚಿಕೊಳ್ಳಿ ಮತ್ತು ಇದಕ್ಕಾಗಿ ನಿಮಗೆ ಬಹುಮಾನ ಲಭಿಸಲೂ ಬಹುದು.
ನನ್ನ ಪ್ರಿಯ ದೇಶವಾಸಿಗಳೇ, ನಿಮಗೆ ನೆನಪಿರಬಹುದು, ಮನ್ ಕಿ ಬಾತ್ ನ ಒಂದು ಸಂಚಿಕೆಯಲ್ಲಿ ನಾನು ಹೇಳಿದ್ದೆ ಆಟಿಕೆಗಳ ರಫ್ತಿನಲ್ಲಿ ಶಕ್ತಿ ಕೇಂದ್ರ ಎನಿಸುವ ಎಲ್ಲ ಸಾಮರ್ಥ್ಯ ಭಾರತಕ್ಕಿದೆ ಎಂದು. ನಾನು ವಿಶೇಷವಾಗಿ ಕ್ರೀಡಾ ಮತ್ತು ಆಟಗಳಲ್ಲಿ ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಚರ್ಚೆ ಮಾಡಿದ್ದೆ. ಭಾರತದ ಸ್ಥಳೀಯ ಆಟಿಕೆಗಳು ಪರಂಪರೆ ಹಾಗೂ ಪರಿಸರ ಸ್ನೇಹಿ ಎರಡಕ್ಕೂ ಹೊಂದಿಕೆಯಾಗುತ್ತದೆ. ಇಂದು ನಾನು ನಿಮ್ಮೊಂದಿಗೆ ಭಾರತೀಯ ಆಟಿಕೆಗಳ ಯಶಸ್ಸನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಯುವಜನತೆ, ನವೋದ್ಯಮಗಳು, ಮತ್ತು ಉದ್ಯಮಿಗಳಿಂದಾಗಿ ನಮ್ಮ ಆಟಿಕೆ ಉದ್ಯಮ ಮಾಡಿರು ಸಾಧನೆಯನ್ನು, ಗಳಿಸಿರುವ ಯಶಸ್ಸನ್ನು ಯಾರೂ ಊಹಿಸಿರಲು ಸಾಧ್ಯವಿಲ್ಲ. ಭಾರತೀಯ ಆಟಿಕೆಗಳ ಮಾತು ಬಂದಾಗ ಇಂದು ಎಲ್ಲೆಲ್ಲೂ ಸ್ಥಳೀಯ ಉತ್ಪನ್ನಗಳಿಗೆ ಧ್ವನಿ (ವೋಕಲ್ ಫಾರ್ ಲೋಕಲ್ ನ) ಕೇಳಿ ಬರುತ್ತದೆ. ಭಾರತದಲ್ಲಿ ಈಗ ವಿದೇಶಗಳಿಂದ ಬರುವ ಆಟಿಕೆಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂಬುದನ್ನು ತಿಳಿದು ನಿಮಗೆ ಸಂತೋಷವೆನಿಸುತ್ತದೆ. ಮೊದಲಿಗೆ 3 ಸಾವಿರ ಕೋಟಿ ರೂಪಾಯಿ ಮೌಲ್ಯಕ್ಕೂ ಅಧಿಕ ಆಟಿಕೆಗಳು ಹೊರದೇಶಗಳಿಂದ ಬರುತ್ತಿದ್ದವು, ಈಗ ಇವುಗಳ ಆಮದು ಶೇಕಡಾ 70 ರಷ್ಟು ಕಡಿತಗೊಂಡಿದೆ ಮತ್ತು ಇದೇ ಅವಧಿಯಲ್ಲಿ ಭಾರತವು ಎರಡು ಸಾವಿರದ ಆರುನೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಟಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ ಎಂಬುದನ್ನು ತಿಳಿಯಲು ಸಂತೋಷವಾಗುತ್ತಿದೆ. ಮೊದಲು ಕೇವಲ 300-400 ಕೋಟಿ ರೂಪಾಯಿ ಆಟಿಕೆಗಳು ಮಾತ್ರಾ ಭಾರತದಿಂದ ಹೊರದೇಶಗಳಿಗೆ ಹೋಗುತ್ತಿದ್ದವು ಮತ್ತು ಇದೆಲ್ಲವೂ ಕೊರೋನಾ ಅವಧಿಯಲ್ಲಿ ನಡೆಯಿತೆಂದು ನಿಮಗೆ ತಿಳಿದಿದೆ. ಭಾರತ ಆಟಿಕೆ ವಲಯವು ತನ್ನನ್ನು ತಾನು ಪರಿವರ್ತಿಸಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಭಾರತೀಯ ಆಟಿಕೆ ತಯಾರಕರು ಇದೀಗ ಭಾರತೀಯ ಪುರಾಣ, ಇತಿಹಾಸ ಮತ್ತು ಸಂಸ್ಕೃತಿ ಆಧಾರಿತ ಆಟಿಕೆಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ದೇಶದಲ್ಲಿ ಅಲ್ಲಲ್ಲಿ ಇರುವ ಆಟಿಕೆಗಳ ಕ್ಲಸ್ಟರ್ ಗಳು, ಆಟಿಕೆ ತಯಾರಿಸುವ ಸಣ್ಣ ಪುಟ್ಟ ಉದ್ಯಮಿಗಳಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತಿದೆ. ಈ ಸಣ್ಣ ಪುಟ್ಟ ಉದ್ಯಮಿಗಳು ತಯಾರಿಸಿರುವ ಆಟಿಕೆಗಳು ಈಗ ಜಗತ್ತಿನೆಲ್ಲೆಡೆಗೆ ಹೋಗುತ್ತಿವೆ. ಭಾರತದ ಆಟಿಕೆ ತಯಾರಕರು, ಇದೀಗ ವಿಶ್ವದ ಪ್ರಮುಖ ಜಾಗತಿಕ ಆಟಿಕೆ ಬ್ರಾಂಡ್ ಗಳ ಜೊತೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನವೋದ್ಯಮ ವಲಯ ಕೂಡಾ ಆಟಿಕೆಗಳ ಪ್ರಪಂಚದತ್ತ ಸಾಕಷ್ಟು ಗಮನ ಹರಿಸುತ್ತಿದೆ ಎನ್ನುವುದು ನನಗೆ ಇಷ್ಟದ ಸಂಗತಿಯಾಗಿದೆ, ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ತಮಾಷೆಯ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಶೂಮಿ ಆಟಿಕೆಗಳ ಹೆಸರಿನ ನವೋದ್ಯಮ, ಪರಿಸರ ಸ್ನೇಹಿ ಆಟಿಕೆಗಳತ್ತ ಗಮನ ಹರಿಸುತ್ತಿದೆ. ಗುಜರಾತ್ ನಲ್ಲಿ ಆರ್ಕಿಡ್ಜೂ ಕಂಪೆನಿಯು ಎಆರ್ ಆಧಾರಿತ ಫ್ಲ್ಯಾಶ್ ಕಾರ್ಡ್ ಗಳು ಮತ್ತು ಎಆರ್ ಆಧಾರಿತ ಕತೆ ಪುಸಕ್ತಗಳನ್ನು ತಯಾರಿಸುತ್ತಿದೆ. ಪೂನಾದ ಫನ್ವೆನ್ಷನ್ ಕಂಪನಿಯು ಕಲಿಕೆ, ಆಟಿಕೆ ಮತ್ತು ಪದಬಂಧ (ಪಜಲ್ಸ್) ನ ಮೂಲಕ ವಿಜ್ಞಾನ, ತಂತ್ರಜ್ಞಾನ, ಮತ್ತು ಗಣಿತದಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸುವ ಕೆಲಸದಲ್ಲಿ ತೊಡಗಿದೆ. ಆಟಿಕೆಗಳ ಜಗತ್ತಿನಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಇಂತಹ ಎಲ್ಲಾ ತಯಾರಕರಿಗೆ, ನವೋದ್ಯಮಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಬನ್ನಿ, ನಾವೆಲ್ಲರೂ ಸೇರಿ, ಭಾರತೀಯ ಆಟಿಕೆಗಳನ್ನು, ಜಗತ್ತಿನೆಲ್ಲೆಡೆ, ಮತ್ತಷ್ಟು ಜನಪ್ರಿಯಗೊಳಿಸೋಣ. ಇದರೊಂದಿಗೆ, ನಾನು ಹೆಚ್ಚು ಹೆಚ್ಚು ಭಾರತೀಯ ಆಟಿಕೆಗಳನ್ನು, ಪಧಬಂಧಗಳನ್ನು ಮತ್ತು ಕೀಡಾ ಆಟಿಕೆಗಳನ್ನು ಖರೀದಿಸಬೇಕೆಂದು ಪೋಷಕರನ್ನು ಒತ್ತಾಯಪಡಿಸುತ್ತೇನೆ.
ಮಿತ್ರರೇ, ಇಂದು ನಮ್ಮ ಯುವಜನತೆ, ತರಗತಿಯೇ ಆಗಲಿ ಅಥವಾ ಆಟದ ಮೈದಾನವೇ ಆಗಲಿ, ಪ್ರತಿಯೊಂದು ಕ್ಷೇತ್ರದಲ್ಲೂ, ದೇಶವೇ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಇದೇ ತಿಂಗಳು ಪಿವಿ ಸಿಂಧು ಅವರು ಸಿಂಗಾಪೂರ್ ಓಪನ್ ನಲ್ಲಿ ಚೊಚ್ಚಲ ಪ್ರಶಸ್ತಿಗಳಿಸಿದ್ದಾರೆ. ನೀರಜ್ ಛೋಪ್ರಾ ಅವರು ಕೂಡಾ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ದೇಶಕ್ಕಾಗಿ ರಜತ ಪದಕ ಗೆದ್ದುರು.ಐರ್ ಲ್ಯಾಂಡ್ ಪ್ಯಾರಾ ಬ್ಯಾಂಡ್ಮಿಟನ್ ಇಂಟರ್ ನ್ಯಾಷನಲ್ ನಲ್ಲಿ ಕೂಡಾ ನಮ್ಮ ಆಟಗಾರರು 11 ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ರೋಮ್ ನಲ್ಲಿ ನಡೆದ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ ಷಿಪ್ ನಲ್ಲೂ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ಅಥ್ಲೀಟ್ ಸೂರಜ್ ಅವರಂತೂ ಗ್ರೀಕೋ-ರೋಮನ್ ಸ್ಪರ್ಧೆಯಲ್ಲಿ ಪವಾಡವನ್ನು ಮಾಡಿ ತೋರಿಸಿದ್ದಾರೆ. ಅವರು 32 ವರ್ಷಗಳ ದೀರ್ಘ ಅಂತರದ ನಂತರ ಈ ಸ್ಪರ್ಧೆಯಲ್ಲಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಆಟಗಾರರಿಗಂತೂ ಈ ತಿಂಗಳೀಡಿ ಸಂಪೂರ್ಣ ಚಟುವಟಿಕೆಗಳಿಂದ ಕೂಡಿರುತ್ತದೆ. ಚೆನ್ನೈನಲ್ಲಿ 44 ನೇ ಚೆಸ್ ಒಲಿಂಪಿಯಾಡ್ ನ ಆತಿಥ್ಯ ವಹಿಸುವುದು ಕೂಡಾ ಭಾರತಕ್ಕೆ ದೊರೆತ ಅತಿದೊಡ್ಡ ಗೌರವವಾಗಿದೆ. ಜುಲೈ 28 ರಂದು ಈ ಪಂದ್ಯಾವಳಿಯ ಶುಭಾರಂಭವಾಯಿತು ಮತ್ತು ನನಗೆ ಅದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸೌಭಾಗ್ಯ ದೊರಕಿತ್ತು. ಅದೇ ದಿನ ಯುನೈಟೆಡ್ ಕಿಂಗ್ ಡಂನಲ್ಲಿ ಕಾಮನ್ ವೆಲ್ತ್ ಕ್ರೀಡೆ ಕೂಡಾ ಆರಂಭವಾಯಿತು. ಯುವ ಉತ್ಸಾಹಿ ಭಾರತೀಯ ಆಟಗಾರರು ಅಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎಲ್ಲಾ ಆಟಗಾರರಿಗೆ ಮತ್ತು ಅಥ್ಲೀಟ್ ಗಳಿಗೆ ದೇಶವಾಸಿಗಳ ಪರವಾಗಿ ನಾನು ಶುಭ ಕೋರುತ್ತೇನೆ. ಭಾರತ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ನ ಆತಿಥ್ಯ ವಹಿಸುತ್ತಿದೆ ಎಂಬ ವಿಷಯ ನನಗೆ ಆನಂದವನ್ನುಂಟು ಮಾಡಿದೆ. ಈ ಟೂರ್ನಿ ಬರುವ ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತದೆ, ಇದು ದೇಶದ ಹೆಣ್ಣುಮಕ್ಕಳ ಉತ್ಸಾಹವನ್ನುನೂರ್ಮಡಿಗೊಳಿಸುತ್ತದೆ.
ಮಿತ್ರರೇ, ಕೆಲ ದಿನಗಳ ಹಿಂದಷ್ಟೇ ದೇಶದೆಲ್ಲೆಡೆ 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ತಮ್ಮ ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಯಶಸ್ಸು ಗಳಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ನಾನು ಅಭಿನಂದಿಸುತ್ತೇನೆ. ಸಾಂಕ್ರಾಮಿಕದ ಕಾರಣದಿಂದ ಕಳೆದೆರಡು ವರ್ಷ ನಿಜಕ್ಕೂ ಸವಾಲಿನಿಂದ ಕೂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೂಡಾ ನಮ್ಮ ಯುವಜನತೆ ತೋರಿದ ಶೌರ್ಯ ಮತ್ತು ಸಂಯಮ ನಿಜಕ್ಕೂ ಶ್ಲಾಘನೀಯ. ನಾನು ಅವರೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
ನನ್ನ ಪ್ರೀಯ ದೇಶವಾಸಿಗಳೇ, ಇಂದು ನಾವು 75ನೇ ಸ್ವಾತಂತ್ರೋತ್ಸವದೊಂದಿಗೆ ನಮ್ಮ ಮಾತುಕತೆ ಆರಂಭಿಸಿ ದೇಶದ ಪಯಣ ಮಾಡಿದೆವು. ನಾವು ಮುಂದಿನ ಬಾರಿ ಭೇಟಿಯಾಗುವಷ್ಟರಲ್ಲಿ ನಮ್ಮ ಮುಂದಿನ 25 ವರ್ಷಗಳ ಪಯಣ ಆರಂಭವಾಗಿರುತ್ತದೆ. ನಮ್ಮ ಮತ್ತು ನಮ್ಮ ಪ್ರೀತಿಪಾತ್ರರ ಮನೆಗಳಲ್ಲಿ ನಮ್ಮ ಪ್ರೀತಿಯ ತ್ರಿವರ್ಣ ಧ್ವಜ ಹಾರಲಿ, ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು. ನೀವು ಈ ಬಾರಿ ಸ್ವಾತಂತ್ರ್ಯ ದಿನವನ್ನು ಯಾವ ರೀತಿ ಆಚರಿಸಿದಿರಿ, ವಿಶೇಷವಾದುದು ಏನಾದರೂ ಮಾಡಿದಿರಾ, ಎಲ್ಲ ವಿಷಯವನ್ನು ನನ್ನೊಂದಿಗೆ ಹಂಚಿಕೊಳ್ಳಿ. ಮುಂದಿನ ಬಾರಿ, ನಾವು ನಮ್ಮ ಈ ಅಮೃತ ಪರ್ವದ ನಾನಾ ಬಣ್ಣಗಳ ಬಗ್ಗೆ ಮತ್ತೆ ಮಾತನಾಡೋಣ. ಅಲ್ಲಿಯವರೆಗೆ ನಿಮ್ಮಿಂದ ತೆರಳುತ್ತಿದ್ದೀನೆ. ತುಂಬಾ ತುಂಬಾ ಧನ್ಯವಾದಗಳು.
ನಮಸ್ಕಾರ ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ! ‘ಮನ್ ಕಿ ಬಾತ್’ಗಾಗಿ ನಿಮ್ಮೆಲ್ಲರಿಂದ ನನಗೆ ಅನೇಕ ಪತ್ರಗಳು ಬಂದಿವೆ; ನಾನು ಸಾಮಾಜಿಕ ಮಾಧ್ಯಮ ಮತ್ತು ನಮೋಆಪ್ (NaMoApp) ನಲ್ಲಿ ಹಲವಾರು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಅದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಈ ಕಾರ್ಯಕ್ರಮದಲ್ಲಿ, ಪರಸ್ಪರ ಸ್ಫೂರ್ತಿದಾಯಕ ಪ್ರಯತ್ನಗಳನ್ನು ಚರ್ಚಿಸುವುದು ಮತ್ತು ಇಡೀ ದೇಶಕ್ಕೆ ಜನಾಂದೋಲನದ ಮೂಲಕ ಬದಲಾವಣೆಯ, ಪರಿವರ್ತನೆಯ ಕಥೆಯನ್ನು ಹೇಳುವುದು ನಮ್ಮ ಪ್ರಯತ್ನವಾಗಿದೆ. ಈ ಸಂಚಿಕೆಯಲ್ಲಿ, ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿರುವ ದೇಶದ ಅಂತಹ ಒಂದು ಜನಾಂದೋಲನದ ಬಗ್ಗೆ ನಾನು ಇಂದು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ. ಆದರೆ, ಅದಕ್ಕೂ ಮುನ್ನ ನಾನು ಇಂದಿನ ಪೀಳಿಗೆಯ ಯುವಕರಿಗೆ, 24-25 ವರ್ಷ ವಯಸ್ಸಿನ ಯುವಕರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಮತ್ತು ಪ್ರಶ್ನೆ ತುಂಬಾ ಗಂಭೀರವಾಗಿದೆ ... ನನ್ನ ಪ್ರಶ್ನೆಯ ಬಗ್ಗೆ ವಿಚಾರ ಮಾಡಿ. ನಿಮ್ಮ ಹೆತ್ತವರು ನಿಮ್ಮ ವಯಸ್ಸಿನವರಾಗಿದ್ದಾಗ, ಒಮ್ಮೆ ಅವರ ಬದುಕುವ ಹಕ್ಕನ್ನು ಸಹ ಅವರಿಂದ ಕಸಿದುಕೊಳ್ಳಲಾಯಿತು ಎಂದು ನಿಮಗೆ ತಿಳಿದಿದೆಯೇ? ಇದು ಹೇಗೆ ಸಂಭವಿಸಿತು ಎಂದು ನೀವು ಯೋಚಿಸುತ್ತಿರಬಹುದು? ಇದು ಅಸಾಧ್ಯ! ಆದರೆ ನನ್ನ ಯುವ ಸ್ನೇಹಿತರೇ, ಇದು ನಮ್ಮ ದೇಶದಲ್ಲಿ ಒಮ್ಮೆ ಸಂಭವಿಸಿದೆ. ಇದು ಹಲವು ವರ್ಷಗಳ ಹಿಂದೆ 1975 ರಲ್ಲಿ ಸಂಭವಿಸಿತು. ತುರ್ತು ಪರಿಸ್ಥಿತಿ ಹೇರಿದಾಗ ಅದು ಜೂನ್ ತಿಂಗಳು. ಅದರಲ್ಲಿ ದೇಶದ ನಾಗರಿಕರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಹೀಗೆ ಕಸಿದುಕೊಂಡ ಹಕ್ಕುಗಳಲ್ಲಿ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಎಲ್ಲಾ ಭಾರತೀಯರಿಗೆ ಒದಗಿಸಲಾದ 'ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ' ದ ಹಕ್ಕು ಕೂಡಾ ಒಂದಾಗಿತ್ತು. ಆ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಪ್ರಯತ್ನ ನಡೆಯಿತು. ದೇಶದ ನ್ಯಾಯಾಲಯಗಳು, ಸಾಂವಿಧಾನಿಕ ಸಂಸ್ಥೆಗಳು, ಪತ್ರಿಕಾ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲಾಯಿತು ಸೆನ್ಸಾರ್ಶಿಪ್ನ ಸ್ಥಿತಿಯು ಹೇಗಿತ್ತು ಎಂದರೆ ಅನುಮೋದನೆಯಿಲ್ಲದೆ, ಅನುಮತಿ ಇಲ್ಲದೆ ಯಾವುದನ್ನೂ ಮುದ್ರಿಸುವುದು ಅಸಾಧ್ಯವಾಗಿತ್ತು. ನನಗೆ ನೆನಪಿದೆ, ಖ್ಯಾತ ಗಾಯಕ ಕಿಶೋರ್ ಕುಮಾರ್ ಸರ್ಕಾರವನ್ನು ಶ್ಲಾಘಿಸಲು ನಿರಾಕರಿಸಿದಾಗ, ಅವರನ್ನು ನಿಷೇಧಿಸಲಾಯಿತು. ರೇಡಿಯೊದಲ್ಲಿ ಅವರ ಅವಕಾಶವನ್ನು ತಡೆಹಿಡಿಯಲಾಯಿತು. ಆದರೆ ಹಲವು ಪ್ರಯತ್ನಗಳು, ಸಾವಿರಾರು ಬಂಧನಗಳು ಮತ್ತು ಲಕ್ಷಾಂತರ ಜನರ ಮೇಲಿನ ದೌರ್ಜನ್ಯಗಳು ನಡೆದರೂ ಪ್ರಜಾಪ್ರಭುತ್ವದ ಮೇಲಿನ ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ ... ಎಂದಿಗೂ ಇಲ್ಲ! ನಮಗೆ, ಭಾರತದ ಜನರಿಗೆ, ನಾವು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವದ ಸಂಸ್ಕಾರಗಳು; ನಮ್ಮ ರಕ್ತನಾಳಗಳಲ್ಲಿರುವ ಪ್ರಜಾಪ್ರಭುತ್ವದ ಮನೋಭಾವ ಅಂತಿಮವಾಗಿ ಗೆಲುವು ಸಾಧಿಸಿದವು. ಭಾರತದ ಜನರು ತುರ್ತು ಪರಿಸ್ಥಿತಿಯನ್ನು ತೊಡೆದು ಹಾಕಿದರು ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದರು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿ, ಸರ್ವಾಧಿಕಾರಿ ಧೋರಣೆಗಳನ್ನು ಸೋಲಿಸಿದ ಇಂತಹ ಉದಾಹರಣೆ ಇಡೀ ಜಗತ್ತಿನಲ್ಲಿ ಸಿಗುವುದು ಕಷ್ಟ. ತುರ್ತುಪರಿಸ್ಥಿತಿಯ ಸಮಯದಲ್ಲಿ, ದೇಶವಾಸಿಗಳ ಹೋರಾಟದಲ್ಲಿ ಭಾಗಿಯಾಗುವ-ಪ್ರಜಾಪ್ರಭುತ್ವದ ಸೈನಿಕನಾಗಿ ಸಾಕ್ಷಿಯಾಗುವ ಸೌಭಾಗ್ಯ ನನಗೆ ಲಭಿಸಿತ್ತು. ಇಂದು, ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಆ ಭಯಾನಕ ತುರ್ತು ಪರಿಸ್ಥಿತಿಯನ್ನು ನಾವು ಎಂದಿಗೂ ಮರೆಯಬಾರದು. ಮುಂದಿನ ಪೀಳಿಗೆಯೂ ಮರೆಯಬಾರದು. ಅಮೃತ ಮಹೋತ್ಸವವು ನೂರಾರು ವರ್ಷಗಳ ಗುಲಾಮಗಿರಿಯಿಂದ ಸ್ವಾತಂತ್ರ್ಯದ ವಿಜಯದ ಸಾಹಸದ ಕಥನವನ್ನು ಒಳಗೊಂಡಿರುವುದು ಮಾತ್ರವಲ್ಲದೆ, ಸ್ವಾತಂತ್ರ್ಯದ ನಂತರದ 75 ವರ್ಷಗಳ ಪ್ರಯಾಣವನ್ನೂ ಒಳಗೊಂಡಿದೆ. ನಾವು ಇತಿಹಾಸದ ಪ್ರತಿಯೊಂದು ಪ್ರಮುಖ ಹಂತದಿಂದ ಕಲಿಯುತ್ತಾ ಮುನ್ನಡೆಯಬೇಕಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಜೀವನದಲ್ಲಿ ಆಕಾಶಕ್ಕೆ ಸಂಬಂಧಿಸಿದ ರಮ್ಯ ಕಥಾನಕಗಳಿಲ್ಲದವರು ಯಾರೂ ಇರಲಿಕ್ಕಿಲ್ಲ. ಬಾಲ್ಯದಲ್ಲಿ, ಆಗಸದ ಚಂದ್ರ ಮತ್ತು ನಕ್ಷತ್ರಗಳ ಕಥೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಯುವಜನರಿಗೆ, ಆಕಾಶವನ್ನು ಮುಟ್ಟುವುದು ಎಂದರೆ ಕನಸುಗಳನ್ನು ನನಸಾಗಿಸುವುದು ಎಂದರ್ಥ. ಇಂದು, ನಮ್ಮ ಭಾರತವು ಹಲವಾರು ಕ್ಷೇತ್ರಗಳಲ್ಲಿ ಯಶಸ್ಸಿನ ಆಕಾಶವನ್ನು ಮುಟ್ಟುತ್ತಿರುವಾಗ, ಆಕಾಶ ಅಥವಾ ಬಾಹ್ಯಾಕಾಶವು ಸ್ಪರ್ಶ ಲಭ್ಯವಾಗದೇ ಉಳಿಯುವುದು ಹೇಗೆ ಸಾಧ್ಯ!. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ದೊಡ್ಡ ಸಾಧನೆಗಳನ್ನು ಸಾಧಿಸಲಾಗಿದೆ. ದೇಶದ ಈ ಸಾಧನೆಗಳಲ್ಲಿ ಇನ್-ಸ್ಪೇಸ್ ಹೆಸರಿನ ಏಜೆನ್ಸಿಯ ರಚನೆಯೂ ಒಂದು … ಭಾರತದ ಖಾಸಗಿ ವಲಯಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಉತ್ತೇಜಿಸುವ ಏಜೆನ್ಸಿ ಇದು. ಈ ಆರಂಭವು ವಿಶೇಷವಾಗಿ ನಮ್ಮ ದೇಶದ ಯುವಜನರನ್ನು ಆಕರ್ಷಿಸಿದೆ. ಅನೇಕ ಯುವಕರಿಂದ ನನಗೆ ಈ ಸಂಬಂಧ ಸಂದೇಶಗಳು ಬಂದಿವೆ.
ಕೆಲವು ದಿನಗಳ ಹಿಂದೆ ನಾನು ಇನ್-ಸ್ಪೇಸ್ನ ಪ್ರಧಾನ ಕಛೇರಿಯನ್ನು ಲೋಕಾರ್ಪಣೆ ಮಾಡಲು ಹೋದಾಗ, ಅನೇಕ ಯುವ ಸ್ಟಾರ್ಟ್ಅಪ್ಗಳ ಆಲೋಚನೆಗಳು ಮತ್ತು ಉತ್ಸಾಹವನ್ನು ನೋಡಿದೆ. ನಾನು ಕೂಡ ಅವರ ಜೊತೆ ತುಂಬಾ ಹೊತ್ತು ಮಾತನಾಡಿದೆ. ಅವರ ಬಗ್ಗೆ ತಿಳಿದಾಗ ನಿಮಗೆ ಆಶ್ಚರ್ಯಪಡದೆ ಇರಲು ಸಾಧ್ಯವಾಗದು. ಉದಾಹರಣೆಗೆ, ಸ್ಪೇಸ್ ಸ್ಟಾರ್ಟ್-ಅಪ್ಗಳ (ಬಾಹ್ಯಾಕಾಶ ನವೋದ್ಯಮಗಳ) ಸಂಖ್ಯೆ ಮತ್ತು ವೇಗವನ್ನು ಗಮನಿಸಿ. ಕೆಲವು ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾರೂ ನವೋದ್ಯಮಗಳ ಬಗ್ಗೆ ಯೋಚಿಸಿರಲಿಲ್ಲ. ಇಂದು ಅವುಗಳ ಸಂಖ್ಯೆ ನೂರಕ್ಕೂ ಹೆಚ್ಚು. ಈ ಎಲ್ಲಾ ನವೋದ್ಯಮಗಳು ಈ ಹಿಂದೆ ಯೋಚಿಸಿರದ ಅಥವಾ ಖಾಸಗಿ ವಲಯಕ್ಕೆ ಅಸಾಧ್ಯವೆಂದು ಪರಿಗಣಿಸಲಾದ ಆಲೋಚನೆಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ, ಚೆನ್ನೈ ಮತ್ತು ಹೈದರಾಬಾದ್ಗಳು ಎರಡು ನವೋದ್ಯಮಗಳನ್ನು ಹೊಂದಿವೆ, ಅವುಗಳೆಂದರೆ - ಅಗ್ನಿಕುಲ್ ಮತ್ತು ಸ್ಕೈರೂಟ್! ಈ ಸ್ಟಾರ್ಟ್-ಅಪ್ಗಳು ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ, ಅದು ಸಣ್ಣ ಪೇಲೋಡ್ಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುತ್ತದೆ. ಈ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆಯ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ, ಹೈದರಾಬಾದ್ನ ಮತ್ತೊಂದು ನವೋದ್ಯಮ ಧ್ರುವ ಸ್ಪೇಸ್, ಉಪಗ್ರಹ ಡಿಪ್ಲೋಯರ್ ಮತ್ತು ಉಪಗ್ರಹಗಳಿಗಾಗಿ ಉನ್ನತ ತಂತ್ರಜ್ಞಾನದ ಸೌರ ಪ್ಯಾನಲ್ಗಳ ತಯಾರಿಕೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶದಲ್ಲಿ ತ್ಯಾಜ್ಯವನ್ನು ಗುರುತು ಮಾಡಲು ಪ್ರಯತ್ನಿಸುತ್ತಿರುವ ಮತ್ತೊಂದು ಬಾಹ್ಯಾಕಾಶ ನವೋದ್ಯಮ ದಿಗಂತರದ ತನ್ವೀರ್ ಅಹ್ಮದ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಬಾಹ್ಯಾಕಾಶದಲ್ಲಿಯ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಕಾರ್ಯಾಚರಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ಅವರಿಗೆ ಹೇಳಿದ್ದೇನೆ. ದಿಗಂತರಾ ಮತ್ತು ಧ್ರುವ ಸ್ಪೇಸ್ ಎರಡೂ ಜೂನ್ 30 ರಂದು ಇಸ್ರೋದ ಉಡಾವಣಾ ವಾಹನದಿಂದ ತಮ್ಮ ಮೊದಲ ಉಡಾವಣೆ ಮಾಡಲಿವೆ. ಅದೇ ರೀತಿ ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ನವೋದ್ಯಮ ಆಸ್ಟ್ರೋಮ್ ನ ಸಂಸ್ಥಾಪಕಿ ನೇಹಾ ಕೂಡ ಅದ್ಭುತ ಐಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನವೋದ್ಯಮ ಚಪ್ಪಟೆ ಆಂಟೆನಾಗಳನ್ನು ತಯಾರಿಸುತ್ತಿದೆ ಅವು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಮಾತ್ರವಲ್ಲ ಅವುಗಳ ವೆಚ್ಚವೂ ತುಂಬಾ ಕಡಿಮೆ. ಈ ತಂತ್ರಜ್ಞಾನಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇರುವ ಸಾಧ್ಯತೆ ಇದೆ.
ಸ್ನೇಹಿತರೇ, ಇನ್-ಸ್ಪೇಸ್ ಕಾರ್ಯಕ್ರಮದಲ್ಲಿ ನಾನು ಮೆಹ್ಸಾನಾ ಶಾಲೆಯ ವಿದ್ಯಾರ್ಥಿನಿ ಬೇಟಿ ತನ್ವಿ ಪಟೇಲ್ ಅವರನ್ನು ಭೇಟಿಯಾಗಿದ್ದೆ. ಅವಳು ಅತ್ಯಂತ ಚಿಕ್ಕ ಉಪಗ್ರಹದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾಳೆ, ಅದು ಮುಂದಿನ ಕೆಲವು ತಿಂಗಳುಗಳಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ. ತನ್ವಿ ತನ್ನ ಕೆಲಸದ ಬಗ್ಗೆ ನನಗೆ ಗುಜರಾತಿಯಲ್ಲಿ ತುಂಬಾ ಸರಳವಾಗಿ ತಿಳಿಸಿದ್ದಾಳೆ. ಅಮೃತ್ ಮಹೋತ್ಸವದಲ್ಲಿ ತನ್ವಿಯಂತೆ, ದೇಶದ ಸುಮಾರು ಏಳುನೂರೈವತ್ತು ಶಾಲಾ ವಿದ್ಯಾರ್ಥಿಗಳು ಇಂತಹ 75 ಉಪಗ್ರಹಗಳ ಬಗ್ಗೆ ಕಾರ್ಯನಿರತರಾಗಿದ್ದಾರೆ ಮತ್ತು ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದೇಶದ ಸಣ್ಣ ಪಟ್ಟಣಗಳಿಂದ ಬಂದವರು ಎಂಬುದು ಬಹಳ ಸಂತೋಷದ ಸಂಗತಿ.
ಸ್ನೇಹಿತರೇ, ಕೆಲವು ವರ್ಷಗಳ ಹಿಂದೆ ಯಾರ ಮನಸ್ಸಿನಲ್ಲಿ ಬಾಹ್ಯಾಕಾಶದ ಚಿತ್ರವು ರಹಸ್ಯದಂತೆ ಕಾಡುತ್ತಿತ್ತೋ -ಅದೇ ಯುವಕರು ಇವರು. ದೇಶವು ಬಾಹ್ಯಾಕಾಶ ಸುಧಾರಣೆಗಳನ್ನು ಕೈಗೊಂಡಿತು ಮತ್ತು ಅದೇ ಯುವಕರು ಈಗ ತಮ್ಮದೇ ಆದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದಾರೆ. ದೇಶದ ಯುವಜನತೆ ಆಕಾಶ ಮುಟ್ಟಲು ಸಿದ್ಧವಾಗಿರುವಾಗ ನಮ್ಮ ದೇಶ ಹಿಂದೆ ಬೀಳುವುದಾದರೂ ಹೇಗೆ?
ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ನಲ್ಲಿ, ನಿಮ್ಮ ಮನಸ್ಸನ್ನು ಸಂತೋಷಪಡಿಸುವ ಮತ್ತು ನಿಮಗೆ ಸ್ಫೂರ್ತಿ ನೀಡುವ ವಿಷಯದ ಕುರಿತು ಈಗ ಮಾತನಾಡೋಣ. ಇತ್ತೀಚೆಗೆ, ನಮ್ಮ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತೆ ಮುಖ್ಯಾಂಶಗಳಲ್ಲಿ ಕಾಣಿಸಿಕೊಂಡರು. ಒಲಿಂಪಿಕ್ಸ್ ನಂತರವೂ ಒಂದರ ಹಿಂದೆ ಒಂದರಂತೆ ಹೊಸ ದಾಖಲೆಗಳನ್ನು ಅವರು ಮಾಡುತ್ತಿದ್ದಾರೆ. ಫಿನ್ಲ್ಯಾಂಡ್ನಲ್ಲಿ ನಡೆದ ಪಾವೊ ನೂರ್ಮಿ ಕ್ರೀಡಾಕೂಟದಲ್ಲಿ ನೀರಜ್ ಬೆಳ್ಳಿ ಗೆದ್ದರು. ಅಷ್ಟೇ ಅಲ್ಲ, ತಮ್ಮದೇ ಜಾವೆಲಿನ್ ಥ್ರೋ ದಾಖಲೆಯನ್ನೂ ಅವರು ಮುರಿದಿದ್ದಾರೆ. ಕುರ್ಟಾನೆ ಕ್ರೀಡಾಕೂಟದಲ್ಲಿ ನೀರಜ್ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅಲ್ಲಿನ ಹವಾಮಾನ ಪ್ರತಿಕೂಲವಾಗಿದ್ದಾಗಲೂ ಅವರು ಈ ಚಿನ್ನವನ್ನು ಗೆದ್ದರು. ಈ ಉತ್ಸಾಹ ಇಂದಿನ ಯುವಕರ ಲಕ್ಷಣವಾಗಿದೆ. ನವೋದ್ಯಮಗಳಿಂದ ಕ್ರೀಡಾ ಪ್ರಪಂಚದವರೆಗೆ, ಭಾರತದ ಯುವಜನತೆ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲೂ ನಮ್ಮ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಆಟಗಳಲ್ಲಿ ಒಟ್ಟು 12 ದಾಖಲೆಗಳನ್ನು ಮುರಿಯಲಾಗಿದೆ ಎಂದು ತಿಳಿದರೆ ನೀವು ಹರ್ಷಪಡುತ್ತೀರಿ - ಅಷ್ಟೇ ಅಲ್ಲ, 11 ಹೊಸ ದಾಖಲೆಗಳು ಮಹಿಳಾ ಆಟಗಾರರ ಹೆಸರಿನಲ್ಲಿ ನೋಂದಾವಣೆಯಾಗಿವೆ. ಮಣಿಪುರದ ಎಂ.ಮಾರ್ಟಿನಾ ದೇವಿ ವೇಟ್ ಲಿಫ್ಟಿಂಗ್ (ಭಾರ ಎತ್ತುಗೆಯಲ್ಲಿ) ನಲ್ಲಿ ಎಂಟು ದಾಖಲೆಗಳನ್ನು ಮಾಡಿದ್ದಾರೆ.
ಅದೇ ರೀತಿ ಸಂಜನಾ, ಸೋನಾಕ್ಷಿ ಮತ್ತು ಭಾವನಾ ಕೂಡ ವಿವಿಧ ದಾಖಲೆಗಳನ್ನು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಘನತೆ ಎಷ್ಟರಮಟ್ಟಿಗೆ ಏರಲಿದೆ ಎಂಬುದನ್ನು ಈ ಆಟಗಾರರು ತಮ್ಮ ಕಠಿಣ ಪರಿಶ್ರಮದಿಂದ ಸಾಬೀತು ಮಾಡಿದ್ದಾರೆ. ನಾನು ಈ ಎಲ್ಲ ಆಟಗಾರರನ್ನು ಅಭಿನಂದಿಸುತ್ತೇನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ.
ಸ್ನೇಹಿತರೇ, ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಮತ್ತೊಂದು ವಿಶೇಷತೆ ಇದೆ. ಈ ಬಾರಿಯೂ ಇಂತಹ ಹಲವು ಪ್ರತಿಭೆಗಳು ಹೊರಹೊಮ್ಮಿವೆ. ಈ ಪ್ರತಿಭಾವಂತರು ತೀರಾ ಸಾಮಾನ್ಯ ಕುಟುಂಬದಿಂದ ಬಂದವರು. ಯಶಸ್ಸಿನ ಈ ಹಂತವನ್ನು ತಲುಪಲು ಈ ಆಟಗಾರರು ತಮ್ಮ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಯಶಸ್ಸಿನಲ್ಲಿ, ಅವರ ಕುಟುಂಬ ಮತ್ತು ಪೋಷಕರು ಸಹ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.
70 ಕಿಮೀ ಸೈಕ್ಲಿಂಗ್ನಲ್ಲಿ ಚಿನ್ನ ಗೆದ್ದ ಶ್ರೀನಗರದ ಆದಿಲ್ ಅಲ್ತಾಫ್ ಅವರ ತಂದೆ ಟೈಲರಿಂಗ್ ಕೆಲಸ ಮಾಡುತ್ತಾರೆ. ಆದರೆ, ಮಗನ ಕನಸುಗಳನ್ನು ನನಸಾಗಿಸಲು ಅವರು ಎಲ್ಲವನ್ನೂ ಮಾಡಿದ್ದಾರೆ. ಇಂದು ಆದಿಲ್ ತನ್ನ ತಂದೆ ಮತ್ತು ಇಡೀ ಜಮ್ಮು-ಕಾಶ್ಮೀರಕ್ಕೆ ಹೆಮ್ಮೆ ತಂದಿದ್ದಾರೆ. ಚಿನ್ನ ಗೆದ್ದ ಎಲ್.ಧನುಷ್ ಅವರ ತಂದೆ ಚೆನ್ನೈಯಲ್ಲಿ ಬಡಗಿ. ಸಾಂಗ್ಲಿಯ ಮಗಳು ಕಾಜೋಲ್ ಸರ್ಗರ್ ಅವರ ತಂದೆ ಚಹಾ ಮಾರಾಟಗಾರರಾಗಿ ಕೆಲಸ ಮಾಡುತ್ತಾರೆ. ಕಾಜೋಲ್ ತನ್ನ ತಂದೆಗೆ ಸಹಾಯ ಮಾಡುತ್ತಾ ಅದರ ಜೊತೆಗೆ ಭಾರ ಎತ್ತುಗೆಯನ್ನು ಅಭ್ಯಾಸ ಮಾಡುತ್ತಿದ್ದರು. ಅವರ ಮತ್ತು ಅವರ ಕುಟುಂಬದವರ ಈ ಕಠಿಣ ಪರಿಶ್ರಮವು ಫಲ ನೀಡಿತು ಮತ್ತು ಕಾಜೋಲ್ ಭಾರ ಎತ್ತುಗೆಯಲ್ಲಿ ಸಾಕಷ್ಟು ಪ್ರಶಂಸೆಯನ್ನು ಗಳಿಸಿದ್ದಾರೆ. ರೋಹ್ಟಕ್ನ ತನು ಇದೇ ರೀತಿಯ ಪವಾಡವನ್ನು ಮೆರೆದಿದ್ದಾರೆ. ತನು ಅವರ ತಂದೆ ರಾಜ್ಬೀರ್ ಸಿಂಗ್ ರೋಹ್ಟಕ್ನಲ್ಲಿ ಶಾಲಾ ಬಸ್ ಚಾಲಕ. ಕುಸ್ತಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತನು ತನ್ನ ಮತ್ತು ತನ್ನ ಕುಟುಂಬದ ಹಾಗೂ ತಂದೆಯ ಕನಸನ್ನು ನನಸಾಗಿಸಿದ್ದಾರೆ.
ಸ್ನೇಹಿತರೇ, ಕ್ರೀಡಾ ಜಗತ್ತಿನಲ್ಲಿ ಈಗ ಭಾರತೀಯ ಆಟಗಾರರ ಪ್ರಾಬಲ್ಯ ಹೆಚ್ಚುತ್ತಿದೆ; ಇದೇ ವೇಳೆ, ಭಾರತೀಯ ಕ್ರೀಡೆಗಳ ಹೊಸ ಪ್ರತಿಷ್ಟೆಯೂ ಅನಾವರಣಗೊಳ್ಳುತ್ತಿದೆ. ಉದಾಹರಣೆಗೆ, ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ, ಒಲಿಂಪಿಕ್ಸ್ನಲ್ಲಿರುವ ವಿಭಾಗಗಳ ಜೊತೆ, ಐದು ದೇಶೀಯ ಕ್ರೀಡೆಗಳನ್ನು ಈ ಬಾರಿ ಸೇರಿಸಲಾಗಿದೆ. ಈ ಐದು ಕ್ರೀಡೆಗಳು - ಗಟ್ಕಾ, ಥಾಂಗ್ ಥಾ, ಯೋಗಾಸನ, ಕಲರಿಪಯಟ್ಟು ಮತ್ತು ಮಲ್ಲಕಂಭ.
ಸ್ನೇಹಿತರೇ, ನಮ್ಮದೇ ದೇಶದಲ್ಲಿ ಶತಮಾನಗಳ ಹಿಂದೆ ಜನ್ಮತಾಳಿದ ಆಟವೊಂದರ ಅಂತಾರಾಷ್ಟ್ರೀಯ ಪಂದ್ಯಾವಳಿ...ಭಾರತದಲ್ಲಿ ನಡೆಯಲಿದೆ. ಇದುವೇ ಜುಲೈ 28 ರಿಂದ ಪ್ರಾರಂಭವಾಗುವ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ. ಈ ಬಾರಿ 180ಕ್ಕೂ ಹೆಚ್ಚು ದೇಶಗಳು ಚೆಸ್ ಒಲಿಂಪಿಯಾಡ್ ನಲ್ಲಿ ಭಾಗವಹಿಸುತ್ತಿವೆ. ಇಂದು ಕ್ರೀಡೆ ಮತ್ತು ದೈಹಿಕ ಕ್ಷಮತೆಯ ಚರ್ಚೆಯು ಇನ್ನೊಂದು ಹೆಸರಿಲ್ಲದೆ ಸಮಾಪನಗೊಳ್ಳದು - ಇದು ತೆಲಂಗಾಣದ ಪರ್ವತಾರೋಹಿ ಪೂರ್ಣಾ ಮಾಲಾವತ್ ಅವರ ಹೆಸರು. 7 ಸವಾಲುಗಳನ್ನು ಪೂರ್ಣಗೊಳಿಸುವ ಮೂಲಕ ಪೂರ್ಣಾ ತಮ್ಮ ಯಶಸ್ಸಿನ ಮುಡಿಗೆ ಮತ್ತೊಂದು ಗರಿಯನ್ನು ಸಿಕ್ಕಿಸಿಕೊಂಡಿದ್ದಾರೆ. ಅದು ಏಳು ಶಿಖರಗಳ ಸವಾಲು...ಅದು ಏಳು ಅತ್ಯಂತ ಕಷ್ಟಕರವಾದ ಮತ್ತು ಅತಿ ಎತ್ತರದ ಕಡಿದಾದ ಪರ್ವತ ಶಿಖರಗಳನ್ನು ಏರುವ ಸವಾಲು. ತನ್ನ ಅದಮ್ಯ ಉತ್ಸಾಹದಿಂದ, ಪೂರ್ವಾ ಅವರು ಉತ್ತರ ಅಮೆರಿಕಾದ ಮೌಂಟ್ ಡೆನಾಲಿಯ ಅತ್ಯುನ್ನತ ಕಡಿದಾದ ಶಿಖರವನ್ನು ಆರೋಹಣ ಮಾಡಿದ್ದಾರೆ ಮತ್ತು ದೇಶಕ್ಕೆ ಗೌರವವನ್ನು ತಂದಿದ್ದಾರೆ. ಈ ಪೂರ್ಣಾ ಕೇವಲ 13 ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರುವ ಅದ್ಭುತ ಸಾಧನೆಯನ್ನು ಮಾಡಿದ ಭಾರತದ ಮಗಳು.
ಸ್ನೇಹಿತರೇ, ಕ್ರೀಡೆಯ ವಿಷಯಕ್ಕೆ ಬಂದರೆ, ಇಂದು ನಾನು ಭಾರತದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರಾದ ಮಿಥಾಲಿ ರಾಜ್ ಬಗ್ಗೆ ಚರ್ಚಿಸಲು ಬಯಸುತ್ತೇನೆ.
ಈ ತಿಂಗಳಷ್ಟೇ, ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ, ಇದು ಅನೇಕ ಕ್ರೀಡಾ ಪ್ರೇಮಿಗಳನ್ನು ಭಾವನಾತ್ಮಕವಾಗಿ ಕಂಗೆಡಿಸಿದೆ. ಮಿಥಾಲಿ ಅಸಾಧಾರಣ ಆಟಗಾರ್ತಿ ಮಾತ್ರವಲ್ಲ, ಹಲವು ಆಟಗಾರರಿಗೆ ಅವರು ಪ್ರೇರಣೆ ಒದಗಿಸಿದ್ದಾರೆ, ಸ್ಫೂರ್ತಿಯಾಗಿದ್ದಾರೆ. ಮಿಥಾಲಿ ಅವರಿಗೆ ಭವ್ಯ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ನಲ್ಲಿ ನಾವು “ತ್ಯಾಜ್ಯದಿಂದ ಸಂಪತ್ತು” ಕುರಿತಂತೆ ಯಶಸ್ವಿ ಪ್ರಯತ್ನಗಳನ್ನು ಚರ್ಚಿಸುತ್ತಿರುತ್ತೇವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಮಿಜೋರಾಂನ ರಾಜಧಾನಿ ಐಜ್ವಾಲ್. ಐಜ್ವಾಲ್ನಲ್ಲಿ ಸುಂದರವಾದ 'ಚಿಟ್ಟೆ ಲುಯಿ' ನದಿ ಇದೆ, ಇದು ವರ್ಷಗಳ ನಿರ್ಲಕ್ಷ್ಯದಿಂದಾಗಿ ಕೊಳಕಿನ ಮತ್ತು ಕಸದ ರಾಶಿಯಾಗಿ ಮಾರ್ಪಟ್ಟಿತ್ತು. ಕಳೆದ ಕೆಲವು ವರ್ಷಗಳಿಂದ ಈ ನದಿಯನ್ನು ಉಳಿಸುವ ಪ್ರಯತ್ನಗಳು ಪ್ರಾರಂಭವಾಗಿವೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಜನರು ಒಟ್ಟಾಗಿ ಚಿಟ್ಟೆ ಲುಯಿ ರಕ್ಷಿಸಿ ಎಂಬ ಕ್ರಿಯಾ ಯೋಜನೆಯನ್ನು ಅನುಷ್ಟಾನಿಸುತ್ತಿದ್ದಾರೆ. ನದಿ ಸ್ವಚ್ಛತೆಯ ಈ ಅಭಿಯಾನ ತ್ಯಾಜ್ಯದಿಂದ ಸಂಪತ್ತು ಸೃಷ್ಟಿಗೂ ಅವಕಾಶ ಕಲ್ಪಿಸಿದೆ. ವಾಸ್ತವದಲ್ಲಿ ಈ ನದಿ ಮತ್ತು ಅದರ ದಂಡೆಗಳು ಪ್ಲಾಸ್ಟಿಕ್ ಮತ್ತು ಪಾಲಿಥಿನ್ ತ್ಯಾಜ್ಯದಿಂದ ತುಂಬಿ ಹೋಗಿದ್ದವು. ನದಿ ಉಳಿಸಲು ಶ್ರಮಿಸುತ್ತಿರುವ ಸಂಸ್ಥೆ, ಈ ಪಾಲಿಥಿನ್ ಅಂದರೆ ನದಿಯಿಂದ ಹೊರ ತೆಗೆಯುವ ತ್ಯಾಜ್ಯವನ್ನು ಬಳಸಿ ರಸ್ತೆ ನಿರ್ಮಿಸಲು ನಿರ್ಧರಿಸಿತು. ಅದರಿಂದ, ಮಿಜೋರಾಂನ ಹಳ್ಳಿಯೊಂದರಲ್ಲಿ, ರಾಜ್ಯದ ಮೊದಲ ಪ್ಲಾಸ್ಟಿಕ್ ರಸ್ತೆಯನ್ನು ನಿರ್ಮಿಸಲಾಯಿತು ... ಅದು ಸ್ವಚ್ಛತೆ ಮತ್ತು ಅದು ಅಭಿವೃದ್ಧಿಯೂ ಆಗಿದೆ.
ಸ್ನೇಹಿತರೇ, ಪುದುಚೇರಿಯ ಯುವಕರು ತಮ್ಮ ಸ್ವಯಂಸೇವಾ ಸಂಸ್ಥೆಗಳ ಮೂಲಕ ಅಂತಹ ಒಂದು ಪ್ರಯತ್ನವನ್ನು ಕೈಗೊಂಡಿದ್ದಾರೆ. ಪುದುಚೇರಿ ಸಮುದ್ರ ತೀರದಲ್ಲಿದೆ. ಅಲ್ಲಿನ ಕಡಲ ತೀರಗಳು ಮತ್ತು ಸಮುದ್ರ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಪುದುಚೇರಿಯ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ನಿಂದ ಉಂಟಾಗುವ ಮಾಲಿನ್ಯ ಕೂಡಾ ಹೆಚ್ಚುತ್ತಿದೆ. ಇದರಿಂದ ಅದರ ಸಮುದ್ರ, ಮತ್ತು ಕಡಲ ದಂಡೆಗಳು ಮತ್ತು ಪರಿಸರವನ್ನು ಉಳಿಸಲು, ಇಲ್ಲಿನ ಜನರು 'ಜೀವನಕ್ಕಾಗಿ ಮರುಬಳಕೆ' ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇಂದು, ಪುದುಚೇರಿಯ ಕಾರೈಕಲ್ನಲ್ಲಿ ಪ್ರತಿದಿನ ಸಾವಿರಾರು ಕಿಲೋಗ್ರಾಂಗಳಷ್ಟು ಕಸವನ್ನು ಸಂಗ್ರಹಿಸಿ ವಿಂಗಡಿಸಲಾಗುತ್ತದೆ. ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ ಮಾಡಲಾಗುತ್ತದೆ. ಉಳಿದ ತ್ಯಾಜ್ಯವನ್ನು ಪ್ರತ್ಯೇಕಿಸಿ ಮರುಬಳಕೆ ಮಾಡಲಾಗುತ್ತದೆ. ಇಂತಹ ಪ್ರಯತ್ನಗಳು ಕೇವಲ ಸ್ಪೂರ್ತಿದಾಯಕವಾಗಿ ಮಾತ್ರವಲ್ಲ, ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಭಾರತದ ಅಭಿಯಾನಕ್ಕೆ ವೇಗವನ್ನು ನೀಡುತ್ತವೆ.
ಸ್ನೇಹಿತರೇ, ನಾನು ನಿಮ್ಮೊಂದಿಗೆ ಮಾತನಾಡುತ್ತಿರುವ ಈ ಸಮಯದಲ್ಲಿ, ಹಿಮಾಚಲ ಪ್ರದೇಶದಲ್ಲಿ ವಿಶಿಷ್ಟವಾದ ಸೈಕ್ಲಿಂಗ್ ಯಾತ್ರೆ ನಡೆಯುತ್ತಿದೆ. ಇದರ ಬಗ್ಗೆಯೂ ನಾನು ನಿಮಗೆ ಹೇಳಲು ಬಯಸುತ್ತೇನೆ. ಸ್ವಚ್ಛತೆಯ ಸಂದೇಶ ಸಾರುವ ಸೈಕ್ಲಿಸ್ಟ್ಗಳ (ಸೈಕಲ್ ಸವಾರರ) ಗುಂಪು ಶಿಮ್ಲಾದಿಂದ ಮಂಡಿಗೆ ಹೊರಟಿದೆ. ಈ ಜನರು ಪರ್ವತದ ರಸ್ತೆಗಳಲ್ಲಿ ಸುಮಾರು ನೂರ ಎಪ್ಪತ್ತೈದು ಕಿಲೋಮೀಟರ್ ದೂರವನ್ನು ಸೈಕ್ಲಿಂಗ್ ಮೂಲಕ ಕ್ರಮಿಸುತ್ತಾರೆ. ಈ ಗುಂಪಿನಲ್ಲಿ ಮಕ್ಕಳು ಹಾಗೂ ಹಿರಿಯರು ಇದ್ದಾರೆ. ನಮ್ಮ ಪರಿಸರ ಸ್ವಚ್ಛವಾಗಿದ್ದರೆ, ನಮ್ಮ ಪರ್ವತಗಳು ಮತ್ತು ನದಿಗಳು, ನಮ್ಮ ಸಮುದ್ರಗಳು ಸ್ವಚ್ಛವಾಗಿ ಉಳಿಯುತ್ತವೆ; ನಮ್ಮ ಆರೋಗ್ಯವೂ ಸುಧಾರಿಸುತ್ತದೆ. ಅಂತಹ ಪ್ರಯತ್ನಗಳ ಬಗ್ಗೆ ನೀವು ನನಗೆ ಬರೆಯುತ್ತಲೇ ಇರಿ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಈಗ ಮುಂಗಾರು ಆವರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಮಳೆ ಹೆಚ್ಚುತ್ತಿದೆ. ‘ಜಲ’ ಮತ್ತು ‘ಜಲ ಸಂರಕ್ಷಣೆ’ಯ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುವ ಸಮಯವೂ ಇದಾಗಿದೆ. ನಮ್ಮ ದೇಶದಲ್ಲಿ, ಶತಮಾನಗಳಿಂದ, ಈ ಜವಾಬ್ದಾರಿಯನ್ನು ಸಮಾಜವು ಒಗ್ಗೂಡಿ ನಿಭಾಯಿಸುತ್ತಿದೆ. ನಿಮಗೆ ನೆನಪಿರಬಹುದು, 'ಮನ್ ಕಿ ಬಾತ್' ನಲ್ಲಿ ನಾವು ಒಮ್ಮೆ ಮೆಟ್ಟಿಲು ಬಾವಿಗಳ ಪರಂಪರೆಯನ್ನು ಚರ್ಚಿಸಿದ್ದೇವೆ. ಬಾವೊಲಿಗಳು ಎಂದರೆ ಬೃಹತ್ ಬಾವಿಗಳು, ಅವುಗಳು ಮೆಟ್ಟಿಲುಗಳನ್ನು ಹೊಂದಿರುತ್ತವೆ. ರಾಜಸ್ಥಾನದ ಉದಯಪುರದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಅಂತಹ ಒಂದು ಮೆಟ್ಟಿಲು ಬಾವಿ ಇದೆ - ಅದುವೇ 'ಸುಲ್ತಾನ್ ಕಿ ಬಾವೊಲಿ'. ಇದನ್ನು ರಾವ್ ಸುಲ್ತಾನ್ ಸಿಂಗ್ ನಿರ್ಮಿಸಿದ್ದರು, ಆದರೆ ನಿರ್ಲಕ್ಷ್ಯದಿಂದಾಗಿ ಈ ಸ್ಥಳವು ಕ್ರಮೇಣ ಕಸದ ರಾಶಿಯಾಗಿ ಮಾರ್ಪಟ್ಟಿತು. ಒಂದು ದಿನ ಕೆಲವು ಯುವಕರು ತಿರುಗಾಡುತ್ತಾ ಈ ಮೆಟ್ಟಿಲುಬಾವಿಯನ್ನು ತಲುಪಿದರು ಮತ್ತು ಅದರ ಸ್ಥಿತಿಯನ್ನು ಕಂಡು ತುಂಬಾ ದುಃಖಿತರಾದರು. ಆ ಕ್ಷಣದಲ್ಲಿಯೇ ಈ ಯುವಕರು ಸುಲ್ತಾನ್ ಕಿ ಬಾವೋಲಿಯ ಚಿತ್ರ ಮತ್ತು ಅದೃಷ್ಟವನ್ನು ಬದಲಾಯಿಸಲು ನಿರ್ಧರಿಸಿದರು. ಅವರು ತಮ್ಮ ಈ ಕಾರ್ಯಾಚರಣೆಗೆ 'ಸುಲ್ತಾನ್ ಸೆ ಸುರ್-ತಾನ್' ಎಂದು ಹೆಸರಿಸಿದರು. ಇದೇನು ‘ಸುರ್ ತಾನ್! ನಿಮಗೆ ಆಶ್ಚರ್ಯವಾಗಿರಬಹುದು.ವಾಸ್ತವದಲ್ಲಿ ಅವರು ತಮ್ಮ ಪ್ರಯತ್ನಗಳ ಮೂಲಕ ಈ ಮೆಟ್ಟಿಲು ಬಾವಿಯನ್ನು ಪುನರುಜ್ಜೀವಗೊಳಿಸಿರುವುದು ಮಾತ್ರವಲ್ಲ ಅದನ್ನು ಸಂಗೀತದ ಸ್ವರಗಳು ಮತ್ತು ಮಾಧುರ್ಯಕ್ಕೆ ಜೋಡಿಸಿದ್ದಾರೆ. ಸುಲ್ತಾನನ ಮೆಟ್ಟಿಲು ಬಾವಿಯನ್ನು ಸ್ವಚ್ಛಗೊಳಿಸಿದ ನಂತರ, ಅದನ್ನು ಅಲಂಕರಿಸಿದ ಬಳಿಕ, ಸಾಮರಸ್ಯ ಮತ್ತು ಸಂಗೀತದ ಕಾರ್ಯಕ್ರಮವು ನಡೆಯುತ್ತದೆ. ಈ ಬದಲಾವಣೆಯ, ಪರಿವರ್ತನೆಯ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ, ಇದನ್ನು ನೋಡಲು ವಿದೇಶದಿಂದ ಸಾಕಷ್ಟು ಜನರು ಬರಲು ಪ್ರಾರಂಭಿಸಿದ್ದಾರೆ. ಈ ಯಶಸ್ವಿ ಪ್ರಯತ್ನದ ಪ್ರಮುಖ ಅಂಶವೆಂದರೆ ಅಭಿಯಾನವನ್ನು ಪ್ರಾರಂಭಿಸಿದ ಯುವಕರು ಚಾರ್ಟರ್ಡ್ ಅಕೌಂಟೆಂಟ್ ಗಳು. ಕಾಕತಾಳೀಯವೆಂಬಂತೆ, ಇನ್ನು ಕೆಲವೇ ದಿನಗಳಲ್ಲಿ, ಜುಲೈ 1ನ್ನು ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ನಾನು ದೇಶದ ಎಲ್ಲಾ ಸಿಎಗಳನ್ನು ಮುಂಚಿತವಾಗಿ ಅಭಿನಂದಿಸುತ್ತೇನೆ. ನಮ್ಮ ಜಲಮೂಲಗಳನ್ನು ಸಂಗೀತ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜೋಡಿಸುವ ಮೂಲಕ ನಾವು ಇಂತಹದೇ ರೀತಿಯ ಜಾಗೃತಿಯ ಭಾವನೆಯನ್ನು ಮೂಡಿಸಬಹುದು. ಜಲ ಸಂರಕ್ಷಣೆ ಎಂದರೆ ಅದು ಜೀವ ಸಂರಕ್ಷಣೆ. ಇಂದಿನ ದಿನಗಳಲ್ಲಿ ಎಷ್ಟು 'ನದಿ ಉತ್ಸವ'ಗಳು ನಡೆಯುತ್ತಿವೆ ಎಂಬುದನ್ನು ನೀವು ನೋಡಿರಬಹುದು! ನಿಮ್ಮ ನಗರಗಳಲ್ಲಿ ಯಾವುದೇ ನೀರಿನ ಮೂಲಗಳಿದ್ದರೂ, ನೀವು ಒಂದಲ್ಲ ಒಂದು ಕಾರ್ಯಕ್ರಮವನ್ನು ಆಯೋಜಿಸುವಂತಾಗಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಉಪನಿಷತ್ತುಗಳು ಜೀವನ ಮಂತ್ರದ ಬಗ್ಗೆ ಉಲ್ಲೇಖಿಸುತ್ತವೆ- ‘ಚರೈವೇತಿ-ಚರೈವೇತಿ-ಚರೈವೇತಿ’- ಈ ಮಂತ್ರವನ್ನು ನೀವೂ ಕೇಳಿರಬಹುದು. ಇದರರ್ಥ – ಮುನ್ನಡೆಯುತ್ತಿರಿ, ಮುನ್ನಡೆಯುತ್ತಿರಿ ಎಂದು. ಈ ಮಂತ್ರವು ನಮ್ಮ ದೇಶದಲ್ಲಿ ತುಂಬಾ ಜನಪ್ರಿಯವಾಗಿದೆ ಏಕೆಂದರೆ ಅದು ಸದಾ ಚಲಿಸುತ್ತಲೇ ಇರುವ ಪ್ರಕೃತಿಯ ಭಾಗವಾಗಿದೆ. ಅದು ಚಲನಶೀಲವಾಗಿರುವಂತಹದು ಮತ್ತು ಸದಾ ಚಲಿಸುತ್ತಿರುವಂತಹದ್ದು. ಒಂದು ರಾಷ್ಟ್ರವಾಗಿ, ನಾವು ಸಾವಿರಾರು ವರ್ಷಗಳ ಅಭಿವೃದ್ಧಿಯ ಪ್ರಯಾಣದ ಮೂಲಕ ಇಲ್ಲಿಯವರೆಗೆ ಬಂದಿದ್ದೇವೆ. ಸಮಾಜವಾಗಿ, ನಾವು ಯಾವಾಗಲೂ ಹೊಸ ಆಲೋಚನೆಗಳನ್ನು, ಹೊಸ ಬದಲಾವಣೆಗಳನ್ನು ಸ್ವೀಕರಿಸುವ ಮೂಲಕ ಮುಂದೆ ಸಾಗಿದ್ದೇವೆ. ನಮ್ಮ ಸಾಂಸ್ಕೃತಿಕ ಚಲನಶೀಲತೆ ಮತ್ತು ಪ್ರವಾಸಗಳು ಇದಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಅದಕ್ಕಾಗಿಯೇ ನಮ್ಮ ಋಷಿಮುನಿಗಳು ಮತ್ತು ಸಂತರು ತೀರ್ಥಯಾತ್ರೆಯಂತಹ ಆಧ್ಯಾತ್ಮಿಕ ಜವಾಬ್ದಾರಿಗಳನ್ನು ನಮಗೆ ನೀಡಿದ್ದರು. ನಾವೆಲ್ಲರೂ ವಿವಿಧ ತೀರ್ಥಯಾತ್ರೆಗಳಿಗೆ ಹೋಗುತ್ತೇವೆ. ಈ ಬಾರಿ ಚಾರ್ ಧಾಮ್ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದನ್ನು ನೀವು ನೋಡಿರಬೇಕು. ನಮ್ಮ ದೇಶದಲ್ಲಿ ಕಾಲಕಾಲಕ್ಕೆ ವಿವಿಧ ದೇವಯಾತ್ರೆಗಳೂ ನಡೆಯುತ್ತವೆ. ದೇವ ಯಾತ್ರೆಗಳು... ಅಂದರೆ, ಇದರಲ್ಲಿ ಭಕ್ತರು ಮಾತ್ರವಲ್ಲದೆ ನಮ್ಮ ದೇವರುಗಳೂ ಪ್ರಯಾಣಿಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಜುಲೈ 1 ರಂದು ಜಗನ್ನಾಥ ದೇವರ ಪ್ರಸಿದ್ಧ ಯಾತ್ರೆ ಆರಂಭವಾಗಲಿದೆ. ಒಡಿಶಾದ ಪುರಿ ಯಾತ್ರೆ ನಮಗೆಲ್ಲ ಚಿರಪರಿಚಿತ. ಈ ಸಂದರ್ಭದಲ್ಲಿ ಪುರಿಗೆ ಹೋಗುವ ಸೌಭಾಗ್ಯ, ಅದೃಷ್ಟ ಲಭಿಸುವಂತೆ ಮಾಡಲು ಜನರು ಬಹಳ ಪ್ರಯತ್ನಗಳನ್ನು ಮಾಡುತ್ತಾರೆ. ಇತರ ರಾಜ್ಯಗಳಲ್ಲಿಯೂ ಸಹ, ಜಗನ್ನಾಥ ಯಾತ್ರೆಗಳನ್ನು ಬಹಳ ಉತ್ಸಾಹದಿಂದ ಮತ್ತು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಭಗವಾನ್ ಜಗನ್ನಾಥ ಯಾತ್ರೆಯು ಆಷಾಢ ಮಾಸದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ನಮ್ಮ ಗ್ರಂಥಗಳಲ್ಲಿ 'ಆಷಾಢಸ್ಯ ದ್ವಿತೀಯ ದಿವಸೇ... ರಥಯಾತ್ರೆ' ಎಂದಿರುತ್ತದೆ. ಸಂಸ್ಕೃತ ಶ್ಲೋಕಗಳು ಈ ವಿವರಣೆಯನ್ನು ನೀಡುತ್ತವೆ. ಗುಜರಾತ್ನ ಅಹಮದಾಬಾದ್ನಲ್ಲಿಯೂ ಪ್ರತಿ ವರ್ಷ ರಥಯಾತ್ರೆಯು ಆಷಾಢ ದ್ವಿತೀಯದಿಂದ ಪ್ರಾರಂಭವಾಗುತ್ತದೆ. ನಾನು ಗುಜರಾತಿನಲ್ಲಿದ್ದೆ, ಹಾಗಾಗಿ ಪ್ರತಿ ವರ್ಷ ಈ ಯಾತ್ರೆಯಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೂ ಸಿಗುತ್ತಿತ್ತು. ಆಷಾಢ ದ್ವಿತೀಯ, ಆಶಾಧಿ ಬಿಜ್ ಎಂದೂ ಕರೆಯಲ್ಪಡುವ ಈ ದಿನ ಕಚ್ನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ನನ್ನ ಎಲ್ಲಾ ಕಚ್ಚಿ ಸಹೋದರ ಸಹೋದರಿಯರಿಗೆ ನಾನು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ನನಗೆ ಈ ದಿನ ಬಹಳ ವಿಶೇಷ ದಿನವಾಗಿದೆ. ನನಗೆ ನೆನಪಿದೆ, ಆಷಾಢ ದ್ವಿತೀಯದ ಒಂದು ದಿನ ಮೊದಲು, ಅಂದರೆ, ಆಷಾಢದ ಮೊದಲ ತಿಥಿಯಂದು, ನಾವು ಗುಜರಾತ್ನಲ್ಲಿ ಸಂಸ್ಕೃತ ಉತ್ಸವವನ್ನು ಪ್ರಾರಂಭಿಸಿದೆವು. ಸಂಸ್ಕೃತ ಭಾಷೆಯಲ್ಲಿ ಹಾಡುಗಳು, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದು ಒಳಗೊಂಡಿದೆ. ಈ ಕಾರ್ಯಕ್ರಮದ ಹೆಸರು - 'ಆಷಾಢಸ್ಯ ಪ್ರಥಮ ದಿನ'. ಹಬ್ಬಕ್ಕೆ ಈ ವಿಶೇಷ ಹೆಸರು ಇಡುವುದರ ಹಿಂದೆಯೂ ಒಂದು ಕಾರಣವಿದೆ. ವಾಸ್ತವವಾಗಿ, ಮಹಾನ್ ಸಂಸ್ಕೃತ ಕವಿ ಕಾಳಿದಾಸನು ಆಷಾಢ ಮಾಸದ ಮಳೆಯ ಆಗಮನದ ಮೇಲೆ ಮೇಘದೂತವನ್ನು ಬರೆದನು. ಮೇಘದೂತಂನಲ್ಲಿ ಒಂದು ಶ್ಲೋಕವಿದೆ – ಆಷಾಢಸ್ಯ ಪ್ರಥಮ ದಿವಸೆ, ಮೇಘಂ ಆಶ್ಲಿಷ್ಟ ಸನುಮ್, ಅಂದರೆ ಆಷಾಢದ ಮೊದಲ ದಿನ ಮೋಡಗಳಿಂದ ಆವೃತವಾದ ಪರ್ವತ ಶಿಖರಗಳು ಎಂದು. ಈ ಶ್ಲೋಕವೇ ಈ ಕಾರ್ಯಕ್ರಮಕ್ಕೆ ಮೂಲಾಧಾರ.
ಸ್ನೇಹಿತರೇ, ಅದು ಅಹಮದಾಬಾದ್ ಇರಲಿ ಅಥವಾ ಪುರಿಯಿರಲಿ, ಜಗನ್ನಾಥ ದೇವರು ಈ ಪ್ರಯಾಣದ ಮೂಲಕ ನಮಗೆ ಅನೇಕ ಆಳವಾದ ಮಾನವ ಸಂದೇಶಗಳನ್ನು ನೀಡುತ್ತಾರೆ. ಭಗವಾನ್ ಜಗನ್ನಾಥ ಪ್ರಪಂಚದ ಅಧಿಪತಿ, ಆದರೆ ಬಡವರು ಮತ್ತು ದೀನ ದಲಿತರು ಅವರ ಪ್ರಯಾಣದಲ್ಲಿ ವಿಶೇಷ ಭಾಗವಹಿಸುವಿಕೆಯನ್ನು ಹೊಂದಿದ್ದಾರೆ. ಸಮಾಜದ ಪ್ರತಿಯೊಂದು ವರ್ಗ ಮತ್ತು ವ್ಯಕ್ತಿಗಳೊಂದಿಗೆ ದೇವರು ನಡೆಯುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ನಡೆಯುವ ಎಲ್ಲಾ ಪ್ರಯಾಣಗಳಲ್ಲಿಯೂ ಬಡವ-ಬಲ್ಲಿದ ಎಂಬ ಭೇದ-ಭಾವವಿರುವುದಿಲ್ಲ. ಮೇಲಿನವರು-ಕೆಳಗಿನವರು ಎಂಬ ತಾರತಮ್ಯ ಇರುವುದಿಲ್ಲ. ಎಲ್ಲಾ ತಾರತಮ್ಯವನ್ನು ಮೀರಿ ಯಾತ್ರೆಯೇ ಇಲ್ಲಿ ಅತಿಮುಖ್ಯ. ಮಹಾರಾಷ್ಟ್ರದ ಪಂಢರಪುರದ ಯಾತ್ರೆಯ ಬಗ್ಗೆ ನೀವು ಕೇಳಿರಬಹುದು. ಪಂಢರಪುರ ಯಾತ್ರೆಯಲ್ಲಿ ಯಾರೊಬ್ಬರೂ ದೊಡ್ಡವರಲ್ಲ, ಹಾಗೂ ಚಿಕ್ಕವರಲ್ಲ. ಎಲ್ಲರೂ ವಾರಕರಿಗಳು, ಭಗವಾನ್ ವಿಠ್ಠಲನ ಸೇವಕರು. ಕೇವಲ 4 ದಿನಗಳ ನಂತರ, ಜೂನ್ 30 ರಿಂದ ಅಮರನಾಥ ಯಾತ್ರೆಯು ಕೂಡಾ ಪ್ರಾರಂಭಗೊಳ್ಳಲಿದೆ. ಅಮರನಾಥ ಯಾತ್ರೆಗಾಗಿ ದೇಶಾದ್ಯಂತ ಭಕ್ತರು ಜಮ್ಮು ಕಾಶ್ಮೀರವನ್ನು ತಲುಪುತ್ತಾರೆ. ಜಮ್ಮು ಕಾಶ್ಮೀರದ ಸ್ಥಳೀಯ ಜನರು ಈ ಯಾತ್ರೆಯ ಜವಾಬ್ದಾರಿಯನ್ನು ಸಮಾನ ಪೂಜ್ಯತೆಯಿಂದ ವಹಿಸಿ ಕೊಳ್ಳುತ್ತಾರೆ ಮತ್ತು ಯಾತ್ರಾರ್ಥಿಗಳೊಂದಿಗೆ ಸಹಕರಿಸುತ್ತಾರೆ.
ಸ್ನೇಹಿತರೇ, ದಕ್ಷಿಣದಲ್ಲಿ ಶಬರಿಮಲೆ ಯಾತ್ರೆಗೆ ಅಷ್ಟೇ ಮಹತ್ವವಿದೆ. ಶಬರಿಮಲೆಯ ಬೆಟ್ಟಗಳ ಮೇಲಿರುವ ಭಗವಾನ್ ಅಯ್ಯಪ್ಪನ ದರ್ಶನಕ್ಕಾಗಿ ಈ ಯಾತ್ರೆಯು ನಡೆಯುತ್ತದೆ. ಈ ಮಾರ್ಗವು ಸಂಪೂರ್ಣವಾಗಿ ಅರಣ್ಯದಿಂದ ಆವೃತವಾಗಿದ್ದ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಇಂದಿಗೂ, ಜನರು ಈ ಯಾತ್ರೆಗಳಿಗೆ ಹೋದಾಗ, ಬಡವರಿಗೆ ಎಷ್ಟೊಂದು ಅವಕಾಶಗಳು ನಿರ್ಮಾಣವಾಗುತ್ತವೆ. ... ಧಾರ್ಮಿಕ ಆಚರಣೆಗಳಿಂದ ಹಿಡಿದು ವಸತಿ ವ್ಯವಸ್ಥೆಗಳವರೆಗೆ ... ಅಂದರೆ, ಈ ಯಾತ್ರೆಗಳು ನೇರವಾಗಿ ನಮಗೆ ಬಡವರ ಸೇವೆ ಮಾಡಲು ಅವಕಾಶವನ್ನು ನೀಡುತ್ತವೆ ಮತ್ತು ಅವರಿಗೂ ಅವು ಅಷ್ಟೇ ಪ್ರಯೋಜನಕಾರಿಯಾಗಿವೆ. ಅದಕ್ಕಾಗಿಯೇ ದೇಶವು ಈಗ ತೀರ್ಥಯಾತ್ರೆಯಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ನೀವೂ ಕೂಡ ಇಂತಹ ಯಾತ್ರೆ ಕೈಗೊಂಡರೆ ಆಧ್ಯಾತ್ಮದ, ಭಕ್ತಿಯ ಜೊತೆಗೆ ಏಕ್ ಭಾರತ್-ಶ್ರೇಷ್ಠ ಭಾರತಗಳ ದರ್ಶನವೂ ಆಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಎಂದಿನಂತೆ, ಈ ಬಾರಿಯೂ 'ಮನ್ ಕಿ ಬಾತ್' ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸಿರುವುದು ಬಹಳ ಆಹ್ಲಾದಕರ ಅನುಭವ. ನಾವು ದೇಶವಾಸಿಗಳ ಯಶಸ್ಸು ಮತ್ತು ಸಾಧನೆಗಳನ್ನು ಚರ್ಚಿಸಿದ್ದೇವೆ. ಇದೆಲ್ಲದರ ನಡುವೆ ನಾವು ಕೊರೊನಾ ವಿರುದ್ಧ ಮುಂಜಾಗ್ರತೆ ವಹಿಸಬೇಕಿದೆ. ಆದಾಗ್ಯೂ, ಇಂದು ದೇಶವು ಲಸಿಕೆಯ ಸಮಗ್ರ ರಕ್ಷಣಾತ್ಮಕ ಕವಚವನ್ನು ಹೊಂದಿದೆ ಎಂಬುದು ತೃಪ್ತಿಯ ವಿಷಯವಾಗಿದೆ. ನಾವು ಸುಮಾರು 200 ಕೋಟಿ ಲಸಿಕೆ ಡೋಸ್ ಗಳ ಸನಿಹದಲ್ಲಿದ್ದೇವೆ. ದೇಶದಲ್ಲಿ ಮುನ್ನೆಚ್ಚರಿಕೆ ಡೋಸ್ ಕೂಡಾ ತ್ವರಿತವಾಗಿ ನೀಡಲಾಗುತ್ತಿದೆ. ನಿಮ್ಮ ಎರಡನೇ ಡೋಸ್ ನಂತರ ಮುನ್ನೆಚ್ಚರಿಕೆಯ ಡೋಸ್ಗೆ ಸಮಯವಾಗಿದ್ದರೆ, ನೀವು ಈ ಮೂರನೇ ಡೋಸ್ ಹಾಕಿಸಿಕೊಳ್ಳಬೇಕು. ನಿಮ್ಮ ಕುಟುಂಬದ ಸದಸ್ಯರು, ವಿಶೇಷವಾಗಿ ವಯಸ್ಸಾದವರು, ಮುನ್ನೆಚ್ಚರಿಕೆಯ ಡೋಸ್ ತೆಗೆದುಕೊಳ್ಳುವಂತೆ ಮಾಡಿ. ಕೈ ಸ್ವಚ್ಛತೆ ಮತ್ತು ಮುಖಗವಸುಗಳಂತಹ ಅಗತ್ಯ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿ ಸುತ್ತಮುತ್ತಲಿನ ಕೊಳಚೆಯಿಂದ ಉಂಟಾಗುವ ರೋಗಗಳ ಬಗ್ಗೆಯೂ ಎಚ್ಚರ ವಹಿಸಬೇಕು. ನೀವೆಲ್ಲರೂ ಜಾಗರೂಕರಾಗಿರಿ, ಆರೋಗ್ಯದಿಂದಿರಿ ಮತ್ತು ಇದೇ ರೀತಿಯ ಸಕಾರಾತ್ಮಕ ಶಕ್ತಿಯೊಂದಿಗೆ ಮುನ್ನಡೆಯಿರಿ. ನಾವು ಮುಂದಿನ ತಿಂಗಳು ಮತ್ತೆ ಭೇಟಿಯಾಗೋಣ, ಅಲ್ಲಿಯವರೆಗೆ, ಅನೇಕ ಧನ್ಯವಾದಗಳು. ನಮಸ್ಕಾರ!.
ನನ್ನ ಪ್ರಿಯ ದೇಶವಾಸಿಗಳೆ, ನಮಸ್ಕಾರ. ಇಂದು ಮತ್ತೊಮ್ಮೆ ಮನದ ಮಾತಿನ ಮೂಲಕ ಕೋಟ್ಯಂತರ ನನ್ನ ಕುಟುಂಬ ಸದಸ್ಯರೊಂದಿಗೆ ಭೇಟಿಯಾಗುವ ಸುಸಂದರ್ಭ ಒದಗಿ ಬಂದಿದೆ. ಮನದ ಮಾತಿಗೆ ನಿಮಗೆಲ್ಲ ಸುಸ್ವಾಗತ. ಕೆಲ ದಿನಗಳ ಹಿಂದೆ ದೇಶ ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತ ಮಹತ್ವಪೂರ್ಣ ಸಾಧನೆಯೊಂದನ್ನು ಮಾಡಿದೆ. ಇದು ಭಾರತದ ಸಾಮರ್ಥ್ಯದ ಬಗ್ಗೆ ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ನೀವು ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡದ ಬ್ಯಾಟ್ಸ್ ಮನ್ ಒಬ್ಬರ ಶತಕದ ಬಗ್ಗೆ ಕೇಳಿ ಸಂಭ್ರಮಿಸುತ್ತಿರಬಹುದು ಆದರೆ ಭಾರತ ಮತ್ತೊಂದು ಮೈದಾನದಲ್ಲೂ ಶತಕ ಬಾರಿಸಿದೆ ಮತ್ತು ಅದು ಬಹಳ ವಿಶೇಷವಾಗಿದೆ. ಈ ತಿಂಗಳ 5 ನೇ ತಾರೀಖಿನಂದು ದೇಶದಲ್ಲಿ ಯುನಿಕಾರ್ನ್ ಸಂಖ್ಯೆ ನೂರಕ್ಕೆ ತಲುಪಿದೆ ಮತ್ತು ಒಂದು ಯುನಿಕಾರ್ನ್ ಅಂದರೆ ಸುಮಾರು ಕಡಿಮೆ ಎಂದರೂ ಏಳೂವರೆ ಸಾವಿರ ಕೋಟಿ ರೂಪಾಯಿಗಳ ಸ್ಟಾರ್ಟ್ ಅಪ್ ಎಂಬುದು ನಿಮಗೆ ತಿಳಿದಿದೆ. ಈ ಯುನಿಕಾರ್ನ್ ಗಳ ಒಟ್ಟು ಮೌಲ್ಯ 330 ಶತಕೋಟಿ ಡಾಲರ್, ಅಂದರೆ 25 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು. ಖಂಡಿತ ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ವಿಷಯ. ನಮ್ಮ ಒಟ್ಟು ಯುನಿಕಾರ್ನ್ ಗಳಲ್ಲಿ ಇಡೀ ವರ್ಷದಲ್ಲಿ ಕೇವಲ 44 ಸ್ಥಾಪಿತವಾಗಿದ್ದವು ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸಬಹುದು. ಇಷ್ಟೇ ಅಲ್ಲ ಈ ವರ್ಷದ 3-4 ತಿಂಗಳುಗಳಲ್ಲೇ 14 ಹೊಸ ಯುನಿಕಾರ್ನ್ ಗಳು ನಿರ್ಮಿತವಾಗಿವೆ ಎಂಬ ವಿಷಯ ನಿಮಗೆ ಅಚ್ಚರಿ ಮೂಡಿಸಬಹುದು. ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲೂ ನಮ್ಮ ಸ್ಟಾರ್ಟ್ ಅಪ್ ಗಳು ಸಂಪತ್ತು ಮತ್ತು ಮೌಲ್ಯ ಸೃಷ್ಟಿಯಲ್ಲಿ ತೊಡಗಿದ್ದವು ಎಂಬುದು ಇದರರ್ಥ. ಭಾರತೀಯ ಯುನಿಕಾರ್ನ್ ಗಳ ಸರಾಸರಿ ವಾರ್ಷಿಕ ಬೆಳವಣಿಗೆ ದರ ಅಮೇರಿಕ, ಬ್ರಿಟನ್ ಮುಂತಾದ ದೇಶಗಳಿಗಿಂತ ಹೆಚ್ಚಾಗಿದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯಲ್ಲಿ ತ್ವರಿತ ವೃದ್ಧಿ ಕಂಡುಬರಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ನಮ್ಮ ಯುನಿಕಾರ್ನ್ ಗಳು ವಿಭಿನ್ನವಾದವು ಎಂಬುದು ಮತ್ತೊಂದು ಉತ್ತಮ ವಿಷಯವಾಗಿದೆ. ಇವು e-commerce, Fin-Tech, Ed-Tech, Bio-Tech ನಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. Start-Ups ವಿಶ್ವವು ನವಭಾರತದ ಚೈತನ್ಯವನ್ನು ಪ್ರತಿಬಿಂಬಿಸುವಂಥದ್ದಾಗಿದೆ ಎಂಬುದು ಮತ್ತೊಂದು ಪ್ರಮುಖವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಇಂದು ಭಾರತದ Start-Up ecosystem ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಣ್ಣ ಪುಟ್ಟ ನಗರಗಳು ಮತ್ತು ಗ್ರಾಮಗಳಿಂದಲೂ ಉದ್ಯಮಿಗಳು ಹೊರ ಹೊಮ್ಮುತ್ತಿದ್ದಾರೆ. ಇದರಿಂದ ಭಾರತದಲ್ಲಿ ಯಾರ ಬಳಿ ಹೊಸ ಶೋಧದ ಕಲ್ಪನೆಗಳಿವೆಯೋ ಅವರು ಸಂಪತ್ತನ್ನು ಸೃಷ್ಟಿಸಬಲ್ಲರು ಎಂಬುದು ಸಾಬೀತಾಗುತ್ತದೆ.
ಸ್ನೇಹಿತರೆ, ದೇಶದ ಈ ಸಫಲತೆಯ ಹಿಂದೆ, ದೇಶದ ಯುವಶಕ್ತಿ, ದೇಶದ ಪ್ರತಿಭೆ ಮತ್ತು ಸರ್ಕಾರ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಕೊಡುಗೆಯೂ ಇದರಲ್ಲಿದೆ. ಆದರೆ ಇನ್ನೊಂದು ವಿಷಯ ಇಲ್ಲಿ ಮಹತ್ವಪೂರ್ಣವಾಗಿದೆ. Start-Up ವಿಶ್ವದಲ್ಲಿ ಸೂಕ್ತ ಮಾರ್ಗದರ್ಶನ. ಒಬ್ಬ ಉತ್ತಮ ಮಾರ್ಗದರ್ಶಕ Start-Up ಅನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡಯ್ಯಬಲ್ಲ. ಅವನು ಸಂಸ್ಥಾಪಕರು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ವ ರೀತಿಯಲ್ಲೂ ಮಾರ್ಗದರ್ಶನ ನೀಡಬಲ್ಲ. Start-Up ಗಳನ್ನು ಯಶಸ್ಸಿನತ್ತ ಕೊಂಡೊಯ್ಯಲು ತಮ್ಮನ್ನೇ ಮುಡಿಪಾಗಿಟ್ಟ ಮಾರ್ಗದರ್ಶಕರು ಭಾರತದಲ್ಲಿ ಬಹಳಷ್ಟು ಜನರಿದ್ದಾರೆ ಎಂಬುದು ನನಗೆ ಹೆಮ್ಮೆ ಎನಿಸುತ್ತದೆ.
ಶ್ರೀಧರ್ ವೆಂಬೂ ಅವರಿಗೆ ಇತ್ತೀಚೆಗೆ ಪದ್ಮ ಪ್ರಶಸ್ತಿ ಲಭಿಸಿದೆ. ಅವರು ಸ್ವತಃ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಆದರೆ ಅವರೀಗ ಬೇರೆ ಉದ್ಯಮಿಗಳನ್ನು ರೂಪಿಸುವ ಪಣ ತೊಟ್ಟಿದ್ದಾರೆ. ಶ್ರೀಧರ್ ಅವರು ಗ್ರಾಮೀಣ ಭಾಗದಿಂದ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಅವರು ಗ್ರಾಮೀಣ ಯುವಜನತೆಯನ್ನು ಗ್ರಾಮದಲ್ಲಿದ್ದುಕೊಂಡೇ ಈ ಕ್ಷೇತ್ರದಲ್ಲಿ ಸಾಧನೆಗೈಯ್ಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಗ್ರಾಮೀಣ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲೆಂದೇ 2014 ರಲ್ಲಿ One-Bridge ಎಂಬ ವೇದಿಕೆಯನ್ನು ಸಿದ್ಧಗೊಳಿಸಿದ ಮದನ್ ಪದಕಿಯಂಥವರೂ ನಮ್ಮೊಂದಿಗಿದ್ದಾರೆ. ಇಂದು One-Bridge ದಕ್ಷಿಣ ಮತ್ತು ಪೂರ್ವ ಭಾರತದ 75 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಕೈಜೋಡಿಸಿದ 9000 ಕ್ಕೂ ಅಧಿಕ ಗ್ರಾಮೀಣ ಉದ್ಯಮಿಗಳು ಗ್ರಾಮೀಣ ಗ್ರಾಹಕರಿಗೆ ತಮ್ಮ ಸೇವೆಗಳನ್ನು ಒದಗಿಸುತ್ತಿದ್ದಾರೆ. ಮೀರಾ ಶೆಣೈ ಕೂಡಾ ಇದೇ ಸಾಲಿಗೆ ಸೇರಿದವರಾಗಿದ್ದಾರೆ. ಗ್ರಾಮೀಣ, ಬುಡಕಟ್ಟು ಮತ್ತು ವಿಕಲಚೇತನ ಯುವಜನತೆಗೆ Market Linked Skills Training ಕ್ಷೇತ್ರದಲ್ಲಿ ಗಣನೀಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ನಾನು ಕೆಲವೇ ಹೆಸರುಗಳನ್ನು ಉಲ್ಲೇಖಿಸಿದ್ದೇನೆ ಆದರೆ, ಇಂದು ನಮ್ಮ ಬಳಿ ಮಾರ್ಗದರ್ಶಕರ ಕೊರತೆಯಿಲ್ಲ. ಇಂದು ದೇಶದಲ್ಲಿ Start-Up ಗಳಿಗಾಗಿ ಸಂಪೂರ್ಣ support system ಒಂದು ಸಿದ್ಧಗೊಳ್ಳುತ್ತಿದೆ ಬಹಳ ಸಮಾಧಾನಕರ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಭಾರತದ Start-Up ಪ್ರಪಂಚದಲ್ಲಿ ಪ್ರಗತಿಯ ಹೊಸ ಆಯಾಮಗಳು ನೋಡಲು ಸಿಗುತ್ತವೆ ಎಂದು ನನಗೆ ವಿಶ್ವಾಸವಿದೆ.
ಸ್ನೇಹಿತರೆ, ಕೆಲ ದಿನಗಳ ಹಿಂದೆ ನನಗೆ ಇಂಥದೇ ಒಂದು ಆಸಕ್ತಿಕರ ಮತ್ತು ಆಕರ್ಷಕ ವಸ್ತು ಲಭಿಸಿದೆ, ಅದರಲ್ಲಿ ದೇಶವಾಸಿಗಳ ಸೃಜನಶೀಲತೆ ಮತ್ತು ಕಲಾತ್ಮಕ ಪ್ರತಿಭೆಯ ರಂಗು ತುಂಬಿದೆ. ತಮಿಳು ನಾಡಿನ ತಂಜಾವೂರಿನ ಒಂದು ಸ್ವಸಹಾಯ ಗುಂಪು ನನಗೆ ಕಳುಹಿಸಿದ ಉಡುಗೊರೆಯದು. ಈ ಉಡುಗೊರೆಯಲ್ಲಿ ಭಾರತೀಯತೆಯ ಸುಗಂಧವಿದೆ ಮತ್ತು ಮಾತೃ ಶಕ್ತಿಯ ಆಶೀರ್ವಾದವಿದೆ. ಇದರಲ್ಲಿ ನನ್ನ ಬಗ್ಗೆ ಅವರಿಗಿರುವ ಸ್ನೇಹದ ಕುರುಹೂ ಇದೆ. ಇದು ತಂಜಾವೂರಿನ ವಿಶೇಷ ಬೊಂಬೆ. ಇದಕ್ಕೆ GI Tag ಕೂಡಾ ಲಭಿಸಿದೆ. ಸ್ಥಳೀಯ ಸಂಸ್ಕೃತಿಯಿಂದ ಮೈಗೂಡಿಸಿದ ಇಂತಹ ಕಾಣಿಕೆಯನ್ನು ಕಳುಹಿಸಿದ್ದಕ್ಕಾಗಿ ನಾನು ತಂಜಾವೂರಿನ ಸ್ವಸಹಾಯ ಗುಂಪಿನ ಸದಸ್ಯರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೇನೇ ಸ್ನೇಹಿತರೇ, ಈ ತಂಜಾವೂರಿನ ಬೊಂಬೆ ಎಷ್ಟು ಸುಂದರವಾಗಿದೆಯೋ, ಅಷ್ಟೇ ಸುಂದರವಾಗಿ ಇದು ಮಹಿಳಾ ಸಬಲೀಕರಣದ ಹೊಸ ಕಥೆಯನ್ನೂ ಬರೆಯುತ್ತಿದೆ.
ತಂಜಾವೂರಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಮಳಿಗೆ ಮತ್ತು ಕಿಯೋಸ್ಕ್ ಸಹ ಪ್ರಾರಂಭವಾಗಲಿದೆ. ಇದು ಹಲವಾರು ಬಡ ಕುಟುಂಬಗಳ ಜೀವನಶೈಲಿಯನ್ನು ಬದಲಿಸಿದೆ. ಇಂತಹ ಕಿಯೋಸ್ಕ್ ಮತ್ತು ಮಳಿಗೆಗಳ ಸಹಾಯದಿಂದ ಮಹಿಳೆಯರು ಈಗ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಈ ಉಪಕ್ರಮಕ್ಕೆ ‘ಥಾರಗಯಿಗಲ್ ಕಯಿವಿನಯೀ ಪೊರುತ್ತಕ್ಕಳ್ ವಿರಪ್ಪನಯೀ ಅಂಗಾಡಿ’ ಎಂದು ಹೆಸರಿಸಲಾಗಿದೆ. ಈ ಉಪಕ್ರಮದೊಂದಿಗೆ 22 ಸ್ವಸಹಾಯ ಗುಂಪುಗಳು ಸೇರಿರುವುದು ವಿಶೇಷವಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳ ಈ ಅಂಗಡಿ ತಂಜಾವೂರಿನ ಪ್ರಮುಖ ಸ್ಥಳದಲ್ಲಿ ಇದೆ ಎಂಬುದನ್ನು ಕೇಳಿ ನಿಮಗೆ ಸಂತೋಷವೆನ್ನಿಸಬಹುದು. ಈ ಅಂಗಡಿಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನೂ ಮಹಿಳೆಯರೇ ವಹಿಸಿಕೊಂಡಿದ್ದಾರೆ. ಈ ಮಹಿಳಾ ಸ್ವಸಹಾಯ ಗುಂಪುಗಳು ತಂಜಾವೂರು ಬೊಂಬೆ ಮತ್ತು ಕಂಚಿನ ದೀಪದಂತಹ GI ಉತ್ಪನ್ನಗಳ ಜೊತೆಗೆ ಆಟಿಕೆಗಳು, ಮ್ಯಾಟ್ ಮತ್ತು ಕೃತಕ ಆಭರಣಗಳನ್ನು ತಯಾರಿಸುತ್ತವೆ. ಇಂಥ ಅಂಗಡಿಗಳಿಂದಾಗಿ GI ಉತ್ಪನ್ನಗಳ ಜೊತೆಗೆ ಕರಕುಶಲ ಉತ್ಪನ್ನಗಳ ಮಾರಾಟದಲ್ಲೂ ಹೆಚ್ಚಳ ಕಂಡುಬರುತ್ತಿದೆ. ಈ ಉಪಕ್ರಮದಿಂದಾಗಿ ಕೇವಲ ಕರಕುಶಲಕರ್ಮಿಗಳಿಗೆ ಮಾತ್ರವಲ್ಲ ಮಹಿಳೆಯರ ಆದಾಯ ಹೆಚ್ಚಳದಿಂದ ಅವರ ಸಶಕ್ತೀಕರಣವೂ ಆಗುತ್ತಿದೆ. ಮನದ ಮಾತಿನ ಶ್ರೋತೃಗಳಲ್ಲಿ ಒಂದು ವಿನಂತಿಯಿದೆ. ನೀವು ನಿಮ್ಮ ಕ್ಷೇತ್ರದಲ್ಲಿ ಯಾವ ಮಹಿಳಾ ಸ್ವಸಹಾಯ ಗುಂಪು ಕೆಲಸ ಮಾಡುತ್ತಿದೆ ಎಂದು ಪತ್ತೆ ಹಚ್ಚಿ. ಅವರ ಉತ್ಪನ್ನಗಳ ಬಗ್ಗೆಯೂ ಮಾಹಿತಿ ಕಲೆಹಾಕಿ ಮತ್ತು ಈ ಉತ್ಪನ್ನಗಳ ಹೆಚ್ಚೆಚ್ಚು ಬಳಕೆಯನ್ನು ಆರಂಭಿಸಿ. ಹೀಗೆ ಮಾಡುವ ಮೂಲಕ ನೀವು ಸ್ವಸಹಾಯ ಗುಂಪುಗಳ ಆದಾಯ ಹೆಚ್ಚಳದ ಜೊತೆಗೆ ಸ್ವಾವಲಂಬಿ ಭಾರತ ಅಭಿಯಾನದ ವೇಗವನ್ನೂ ಹೆಚ್ಚಿಸಲಿದ್ದೀರಿ.
ಸ್ನೇಹಿತರೆ, ನಮ್ಮ ದೇಶದಲ್ಲಿ ಬಹಳಷ್ಟು ಭಾಷೆಗಳ ಲಿಪಿಗಳು ಮತ್ತು ಆಡುಭಾಷೆಯ ಸಮೃದ್ಧವಾದ ಖಜಾನೆಯಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಭಿನ್ನವಾದ ಉಡುಗೆ, ಆಹಾರ ಮತ್ತು ಸಂಸ್ಕೃತಿ ನಮ್ಮ ಹೆಗ್ಗುರುತಾಗಿದೆ. ಈ ವೈವಿಧ್ಯ ಒಂದು ರಾಷ್ಟ್ರದ ರೂಪದಲ್ಲಿ ನಮ್ಮನ್ನು ಸಶಕ್ತಗೊಳಿಸುತ್ತದೆ ಮತ್ತು ಒಗ್ಗಟ್ಟು ಮೂಡಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಹೆಣ್ಣು ಮಗಳು ಕಲ್ಪನಾಳ ಕಥೆ ಬಹಳ ಪ್ರೇರಣಾದಾಯಕ ಉದಾಹರಣೆಯಿದೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅವಳ ಹೆಸರು ಕಲ್ಪನಾ ಆದರೆ ಅವಳ ಪ್ರಯತ್ನ ‘ಏಕ್ ಭಾರತ್ ಶ್ರೇಷ್ಠ ಭಾರತ್’ ದ ನಿಜವಾದ ಭಾವನೆಗಳೊಂದಿಗೆ ತುಂಬಿದೆ. ಕಲ್ಪನಾ ಇತ್ತೀಚೆಗೆ ಕರ್ನಾಟಕದಲ್ಲಿ ತನ್ನ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಆದರೆ ಅವಳ ಸಫಲತೆಯ ವಿಶೇಷತೆಯೇನೆಂದರೆ ಕಲ್ಪನಾಗೆ ಕೆಲ ದಿನಗಳ ಹಿಂದಿನವರೆಗೂ ಕನ್ನಡ ಭಾಷೆಯೇ ಬರುತ್ತಿರಲಿಲ್ಲ. ಅವಳು ಕೇವಲ 3 ತಿಂಗಳಲ್ಲಿ ಕನ್ನಡ ಭಾಷೆಯನ್ನು ಕಲಿಯುವುದು ಮಾತ್ರವಲ್ಲ 92 ರಷ್ಟು ಅಂಕಗಳನ್ನೂ ಗಳಿಸಿದ್ದಾಳೆ. ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗುತ್ತಿರಬಹುದು ಆದರೆ ಇದು ನಿಜ. ಅವಳ ಕುರಿತು ಆಶ್ಚರ್ಯ ಮೂಡಿಸುವ ಮತ್ತು ಪ್ರೇರಣೆಯನ್ನು ನೀಡುವಂತಹ ಇನ್ನೂ ಇಂಥ ಹಲವಾರು ವಿಷಯಗಳಿವೆ. ಕಲ್ಪನಾ ಮೂಲತಃ ಉತ್ತರಾಖಂಡದ ಜೋಷಿ ಮಠದ ನಿವಾಸಿಯಾಗಿದ್ದಾರೆ. ಅವಳು ಈ ಹಿಂದೆ ಕ್ಷಯ ರೋಗಕ್ಕೆ ತುತ್ತಾಗಿದ್ದಳು. ಅವಳು 3 ನೇ ತರಗತಿಯಲ್ಲಿ ಓದುತ್ತಿರುವಾಗಲೇ ದೃಷ್ಟಿ ಕಳೆದುಕೊಂಡಿದ್ದಳು. ಆದರೆ ‘ಮನಸ್ಸಿದ್ದಲ್ಲಿ ಮಾರ್ಗ’ ಎಂದು ಹೇಳುತ್ತಾರಲ್ಲವೇ ಹಾಗೆ ಕಲ್ಪನಾ ನಂತರ ಮೈಸೂರು ನಿವಾಸಿಯಾದ ತಾರಾ ಮೂರ್ತಿಯವರನ್ನು ಭೇಟಿಯಾದಳು. ಅವರು ಕಲ್ಪನಾಳಿಗೆ ಪ್ರೋತ್ಸಾಹಿಸುವುದಲ್ಲದೇ ಸಾಕಷ್ಟು ಸಹಾಯವನ್ನೂ ಮಾಡಿದರು. ಇಂದು ಅವಳು ನಮಗೆಲ್ಲರಿಗೂ ನಿದರ್ಶನವಾಗಿದ್ದಾಳೆ. ಕಲ್ಪನಾಳಿಗೆ ಅವಳ ಛಲಕ್ಕಾಗಿ ಅಭಿನಂದಿಸುತ್ತೇನೆ. ಇದೇ ರೀತಿ ಭಾಷೆಯ ವೈವಿಧ್ಯವನ್ನು ಪುಷ್ಟಿಗೊಳಿಸುವಲ್ಲಿ ತೊಡಗಿಸಿಕೊಂಡವರು ನಮ್ಮ ದೇಶದಲ್ಲಿ ಅನೇಕ ಜನರಿದ್ದಾರೆ. ಪಶ್ಚಿಮ ಬಂಗಾಳದ ಪುರುಲಿಯಾದ ಶ್ರೀಪತಿ ಟುಡು ಅವರು ಇಂಥವರಲ್ಲಿ ಒಬ್ಬರು. ಟುಡು ಅವರು ಪುರುಲಿಯಾದ ಸಿದ್ದೋ ಕಾನೊ ಬಿರ್ಸಾ ವಿಶ್ವವಿದ್ಯಾಲಯದಲ್ಲಿ ಸಂಥಾಲಿ ಭಾಷೆಯ ಪ್ರೊಫೆಸರ್ ಆಗಿದ್ದಾರೆ. ಅವರು ಸಂಥಾಲಿ ಸಮಾಜಕ್ಕಾಗಿ ಅವರ ‘ಓಲ್ ಚಿಕೀ’ ಲಿಪಿಯಲ್ಲಿ ನಮ್ಮ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿದ್ದಾರೆ. ಶ್ರೀಪತಿ ಟುಡು ಅವರು ನಮ್ಮ ಸಂವಿಧಾನ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೆ ತನ್ನ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಲಿಸಿಕೊಡುತ್ತದೆ ಎನ್ನುತ್ತಾರೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಇದನ್ನು ಅರಿತಿರಬೇಕು. ಹೀಗಾಗಿ ಅವರು ಸಂಥಾಲಿ ಸಮಾಜಕ್ಕಾಗಿ ಅವರ ಲಿಪಿಯಲ್ಲೇ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿ ಕೊಡುಗೆಯಾಗಿ ನೀಡಿದ್ದಾರೆ. ಶ್ರೀಪತಿಯವರ ಈ ವಿಚಾರ ಮತ್ತು ಪ್ರಯತ್ನಗಳ ಪ್ರಶಂಸೆ ಮಾಡುತ್ತೇನೆ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ಭಾವನೆಯ ಜ್ವಲಂತ ಉದಾಹರಣೆ ಇದಾಗಿದೆ. ಈ ಭಾವನೆಯನ್ನು ಮುಂದಕ್ಕೆ ಕೊಂಡೊಯ್ಯುವ ಹಲವಾರು ಪ್ರಯತ್ನಗಳ ಬಗ್ಗೆ ನೀವು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಜಾಲತಾಣದಲ್ಲೂ ಮಾಹಿತಿ ಪಡೆಯಬಹುದು. ಇಲ್ಲಿ ನಿಮಗೆ ಆಹಾರ, ಕಲೆ, ಸಂಸ್ಕೃತಿ, ಪ್ರವಾಸ ಮುಂತಾದ ವಿಷಯಗಳ ಕುರಿತು ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ನೀವು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂಬಹುದು. ಇದರಿಂದ ನಿಮಗೆ ನಿಮ್ಮ ದೇಶದ ಮಾಹಿತಿಯೂ ಲಭಿಸುತ್ತದೆ ಮತ್ತು ದೇಶದ ವಿವಿಧತೆಯನ್ನೂ ಅನುಭವಿಸಬಹುದು.
ನನ್ನ ಪ್ರೀತಿಯ ದೇಶಬಾಂಧವರೇ, ಈಗ ನಮ್ಮ ದೇಶದಲ್ಲಿ ಉತ್ತರಾಖಂಡದ ಚಾರ್ -ಧಾಮ್ ನ ಪವಿತ್ರ ಯಾತ್ರೆ ನಡೆಯುತ್ತಿದೆ. ಚಾರ್-ಧಾಮ್ ಮತ್ತು ಅದರಲ್ಲೂ ವಿಶೇಷವಾಗಿ ಕೇದಾರನಾಥ್ ನಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಅಲ್ಲಿಗೆ ತಲುಪುತ್ತಿದ್ದಾರೆ. ಜನರು ತಮ್ಮ ಚಾರ್-ಧಾಮ್ ಯಾತ್ರೆಯ ಸಂತೋಷದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ, ಕೇದಾರನಾಥದಲ್ಲಿ ಕೆಲವು ಯಾತ್ರಿಕರು ಹರಡುತ್ತಿರುವ ತ್ಯಾಜ್ಯದಿಂದಾಗಿ ಭಕ್ತರು ಬಹಳ ದುಃಖಿತರಾಗಿದ್ದಾರೆಂದು ಕೂಡಾ ನನಗೆ ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾವು ಪವಿತ್ರ ಯಾತ್ರೆಗೆಂದು ಹೋದಾಗ ಅಲ್ಲಿ ಕೊಳಚೆ ರಾಶಿ ತುಂಬಿದರೆ ಹೇಗೆ, ಇದು ಸರಿಯಲ್ಲ. ಆದರೆ ಸ್ನೇಹಿತರೇ, ಇಂತಹ ದೂರುಗಳ ನಡುವೆಯೇ ಉತ್ತಮ ಚಿತ್ರಣ ಕೂಡಾ ನೋಡಲುನಮಗೆ ಸಿಗುತ್ತಿದೆ. ಎಲ್ಲಿ ಶ್ರದ್ಧೆ ಇರುತ್ತದೆಯೋ ಅಲ್ಲಿ ಸೃಷ್ಟಿ ಮತ್ತು ಸಕಾರಾತ್ಮಕತೆಯೂ ಇರುತ್ತದೆ. ಕೇದಾರನಾಥ್ ಕ್ಷೇತ್ರದಲ್ಲಿ ದರ್ಶನ ಹಾಗೂ ಪೂಜೆಯ ಜೊತೆ ಜೊತೆಯಲ್ಲೇ ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡುತ್ತಿರುವ ಅನೇಕ ಭಕ್ತರೂ ಕೂಡಾ ಇದ್ದಾರೆ. ಕೆಲವರು ತಾವು ವಸತಿ ಹೂಡಿರುವ ಸ್ಥಳದ ಸುತ್ತಮುತ್ತ ಸ್ವಚ್ಛಗೊಳಿಸುತ್ತಿದ್ದರೆ, ಕೆಲವರು ಯಾತ್ರೆಯ ಮಾರ್ಗದಲ್ಲಿ ಬಿದ್ದಿರಬಹುದಾದ ಕಸ-ಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸುತ್ತಿದ್ದಾರೆ. ಸ್ವಚ್ಛ ಭಾರತ ಅಭಿಯಾನ ತಂಡದೊಂದಿಗೆ ಕೈಜೋಡಿಸಿ ಹಲವು ಸಂಘಸಂಸ್ಥೆಗಳು ಹಾಗೂ ಸ್ವಯಂಸೇವಕ ಸಂಘಗಳು ಕೂಡಾ ಅಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿವೆ. ಸ್ನೇಹಿತರೇ, ನಮ್ಮಲ್ಲಿ ಪುಣ್ಯಕ್ಷೇತ್ರಗಳಿಗೆ ಕೈಗೊಳ್ಳುವ ಯಾತ್ರೆ ಹೇಗೆ ಮಹತ್ವವೆನಿಸುತ್ತದೋ ಅಂತೆಯೇ ಪುಣ್ಯಕ್ಷೇತ್ರದಲ್ಲಿ ಸೇವೆ ಕೂಡಾ ಅಷ್ಟೇ ಮುಖ್ಯವೆಂದು ಹೇಳಲಾಗುತ್ತದೆ. ತೀರ್ಥ ಕ್ಷೇತ್ರದ ಸೇವೆ ಮಾಡದೇ ತೀರ್ಥಯಾತ್ರೆ ಪೂರ್ಣವಾಗುವುದಿಲ್ಲವೆಂದು ನಾನು ಹೇಳುತ್ತೇನೆ. ದೇವಭೂಮಿ ಉತ್ತರಾಖಂಡದಲ್ಲಿ ಎಷ್ಟೊಂದು ಜನರು ಸ್ವಚ್ಛತೆ ಹಾಗೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರುದ್ರ ಪ್ರಯಾಗ ನಿವಾಸಿ ಶ್ರೀ ಮನೋಜ್ ಬೈಂಜ್ ವಾಲ್ ಅವರಿಂದ ಕೂಡಾ ನಿಮಗೆ ಬಹಳ ಸ್ಫೂರ್ತಿ ದೊರೆಯುತ್ತದೆ. ಮನೋಜ್ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಪರಿಸರ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿದ್ದಾರೆ. ಅವರು ಸ್ವಚ್ಛತಾ ಕಾರ್ಯದ ಮುಂದಾಳತ್ವ ವಹಿಸುವುದರ ಜೊತೆಗೇ ಪವಿತ್ರ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಕೆಲಸದಲ್ಲಿ ಕೂಡಾ ತೊಡಗಿಕೊಂಡಿದ್ದಾರೆ. ಹಾಗೆಯೇ ಗುಪ್ತಕಾಶಿಯಲ್ಲಿ ವಾಸವಾಗಿರುವ ಸುರೇಂದ್ರ ಬಗವಾಡಿ ಅವರು ಕೂಡಾ ಸ್ವಚ್ಛತೆಯನ್ನು ತಮ್ಮ ಜೀವನದ ಮಂತ್ರವಾಗಿಸಿಕೊಂಡಿದ್ದಾರೆ. ಅವರು ಗುಪ್ತಕಾಶಿಯಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಾರೆ ಮತ್ತು ಅವರು ಈ ಅಭಿಯಾನಕ್ಕೆ ‘ಮನ್ ಕಿ ಬಾತ್’ ಎಂಬ ಹೆಸರು ನೀಡಿದ್ದಾರೆಂದು ನನಗೆ ತಿಳಿದುಬಂದಿದೆ. ಅಂತೆಯೇ ದೇವರ್ ಗ್ರಾಮದ ನಿವಾಸಿ ಚಂಪಾದೇವಿಯವರು ಕಳೆದ ಮೂರು ವರ್ಷಗಳಿಂದ ತಮ್ಮ ಗ್ರಾಮದ ಮಹಿಳೆಯರಿಗೆ ತ್ಯಾಜ್ಯ ನಿರ್ವಹಣೆ ಅಂದರೆ waste management ಬಗ್ಗೆ ಕಲಿಸುತ್ತಿದ್ದಾರೆ. ಚಂಪಾದೇವಿಯವರು ನೂರಾರು ಮರಗಳನ್ನು ಕೂಡಾ ನೆಟ್ಟಿದ್ದಾರೆ ಮತ್ತು ತಮ್ಮ ಪರಿಶ್ರಮದಿಂದ ಹಸಿರಿನಿಂದ ತುಂಬಿದ ಒಂದುವನವನ್ನು ನಿರ್ಮಿಸಿದ್ದಾರೆ. ಸ್ನೇಹಿತರೆ, ಇಂತಹ ಜನರ ಪ್ರಯತ್ನಗಳಿಂದ ದೇವಭೂಮಿ ಮತ್ತು ಪುಣ್ಯಕ್ಷೇತ್ರಗಳ ದೈವಿಕ ಅನುಭೂತಿ ಜನರಿಗೆ ದೊರೆಯುತ್ತಿದೆ, ಇಂತಹ ದೈವಿಕ ಅನುಭವ ಪಡೆಯಲು ನಾವು ಅಲ್ಲಿಗೆ ಹೋಗುತ್ತೇವೆ, ಈ ದೈವಿಕ ಹಾಗೂ ಆಧ್ಯಾತ್ಮಿಕತೆಯ ಅನುಭೂತಿ ಹಾಗೆಯೇ ಉಳಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಈಗ, ನಮ್ಮ ದೇಶದಲ್ಲಿ ‘ಚಾರ್ – ಧಾಮ್’ ಯಾತ್ರೆಯೊಂದಿಗೆ ಮುಂಬರುವ ದಿನಗಳಲ್ಲಿ ‘ಅಮರನಾಥ್ ಯಾತ್ರೆ’, ‘ಪಂಡರಾಪುರ ಯಾತ್ರೆ’ ಮತ್ತು ‘ಜಗನ್ನಾಥ ಯಾತ್ರೆ’ ಹೀಗೆ ಅನೇಕ ಯಾತ್ರೆಗಳು ಇರಲಿವೆ. ಶ್ರಾವಣ ಮಾಸದಲ್ಲಂತೂ ಪ್ರತಿಯೊಂದು ಹಳ್ಳಿಯಲ್ಲೂ ಬಹುಶಃ ಒಂದಲ್ಲಾ ಒಂದು ಜಾತ್ರೆ ನಡೆಯುತ್ತಲೇ ಇರುತ್ತದೆ.
ಸ್ನೇಹಿತರೇ, ನಾವು ಎಲ್ಲಿಗೇ ಹೋಗಲಿ, ಈ ಪುಣ್ಯಕ್ಷೇತ್ರಗಳ ಘನತೆಯನ್ನು ಕಾಪಾಡಿಕೊಳ್ಳಬೇಕು. ಶುಚಿತ್ವ, ಸ್ವಚ್ಛತೆ ತುಂಬಿದ ಪವಿತ್ರ ಪರಿಸರವನ್ನು ನಾವು ಎಂದಿಗೂ ಮರೆಯಬಾರದು, ಅವುಗಳನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬೇಕು ಮತ್ತು ಆದ್ದರಿಂದಲೇ ನಾವು ಸ್ವಚ್ಛತೆಯ ಸಂಕಲ್ಪವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೆಲವೇ ದಿನಗಳ ನಂತರ, ಜೂನ್ 5 ಅನ್ನು ವಿಶ್ವ ‘ಪರಿಸರ ದಿನದ’ ಹೆಸರಿನಲ್ಲಿ ಆಚರಿಸಲಾಗುತ್ತದೆ. ಪರಿಸರ ಕುರಿತಂತೆ ನಾವು ನಮ್ಮ ಸುತ್ತ ಮುತ್ತ ಸಕಾರಾತ್ಮಕ ಅಭಿಯಾನ ನಡೆಸಬೇಕು ಇದು ಸತತವಾಗಿ ನಡೆಯಬೇಕಾಗಿರುವ ಕೆಲಸವಾಗಿದೆ. ನೀವೆಲ್ಲರೂ ಈ ಬಾರಿ ಎಲ್ಲರನ್ನೂ ಒಟ್ಟುಗೂಡಿಸಿ ಸ್ವಚ್ಛತೆ ಹಾಗೂ ಗಿಡ ನೆಡುವುದಕ್ಕಾಗಿ ಸ್ವಲ್ಪ ಪ್ರಯತ್ನ ಖಂಡಿತವಾಗಿಯೂ ಮಾಡಿ. ನೀವು ಸ್ವಂತವಾಗಿ ಗಿಡ ನೆಡಿ ಮತ್ತು ಗಿಡ ನೆಡುವುದಕ್ಕಾಗಿ ಇತರರಿಗೆ ಸ್ಫೂರ್ತಿ ತುಂಬಿ.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ತಿಂಗಳು ಜೂನ್ 21 ರಂದು, ನಾವು ಎಂಟನೇ ‘ಅಂತಾರಾಷ್ಟ್ರೀಯ ಯೋಗ’ ದಿನ ಆಚರಿಸಲಿದ್ದೇವೆ. ಈ ಬಾರಿಯ ಯೋಗ ದಿನದ ಧ್ಯೇಯ ವಾಕ್ಯ –‘ಮಾನವೀಯತೆಗಾಗಿ ಯೋಗ’ ಎಂಬುದಾಗಿದೆ. ನೀವೆಲ್ಲರೂ ಬಹಳ ಉತ್ಸಾಹದಿಂದ ಯೋಗ ದಿನ ಆಚರಣೆ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಹಾಂ, ಕೊರೋನಾ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ಮರೆಯದೇ ಕೈಗೊಳ್ಳಿ, ಈಗ ವಿಶ್ವಾದ್ಯಾಂತ ಕೊರೋನಾ ವಿಷಯದಲ್ಲಿ ಪರಿಸ್ಥಿತಿ ಮುಂಚಿಗಿಂತ ಸುಧಾರಣೆಯಾಗಿರುವಂತೆ ಕಂಡುಬರುತ್ತಿದೆ, ಅತಿ ಹೆಚ್ಚು ವ್ಯಾಕ್ಸಿನೇಷನ್ ಕವರೇಜ್ ಕಾರಣದಿಂದಾಗಿ ಜನರು ಮೊದಲಿಗಿಂತ ಹೆಚ್ಚು ಮನೆಯಿಂದ ಹೊರಗೆ ಬರುತ್ತಿದ್ದಾರೆ, ಆದ್ದರಿಂದ, ವಿಶ್ವಾದ್ಯಂತ ಯೋಗ ದಿನಾಚರಣೆಗಾಗಿ ಸಾಕಷ್ಟು ಸಿದ್ಧತೆಗಳು ಕಂಡುಬರುತ್ತಿವೆ. ನಮ್ಮ ಜೀವನದಲ್ಲಿ, ಆರೋಗ್ಯಕ್ಕೆ ಎಷ್ಟೊಂದು ಮಹತ್ವವಿದೆ, ಮತ್ತು ಯೋಗ ಎಷ್ಟು ದೊಡ್ಡ ಮಾಧ್ಯಮವಾಗಿದೆ ಎಂಬ ಅರಿವನ್ನು ಕೊರೋನಾ ಸಾಂಕ್ರಾಮಿಕ ನಮ್ಮೆಲ್ಲರಿಗೂ ಮೂಡಿಸಿದೆ. ಯೋಗದಿಂದ ದೈಹಿಕ, ಆಧ್ಯಾತ್ಮಿಕ ಮತ್ತು ಭೌದ್ಧಿಕ ಯೋಗಕ್ಷೇಮಕ್ಕೆ ಕೂಡಾ ಎಷ್ಟೊಂದು ಪ್ರಯೋಜನ ಎಂಬುದನ್ನು ಜನರು ತಿಳಿದುಕೊಳ್ಳುತ್ತಿದ್ದಾರೆ. ವಿಶ್ವದ ಪ್ರಮುಖ ವ್ಯಾಪಾರವೇತ್ತರಿಂದ ಹಿಡಿದು ಚಲನಚಿತ್ರ ಕ್ಷೇತ್ರದ ಪ್ರಮುಖರು ಮತ್ತು ಕ್ರೀಡಾ ಪಟುಗಳವರೆಗೂ, ವಿದ್ಯಾರ್ಥಿಗಳಿಂದ ಹಿಡಿದು, ಸಾಮಾನ್ಯ ನಾಗರಿಕನವರೆಗೂ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತ ಯೋಗಕ್ಕೆ ದೊರೆಯುತ್ತಿರುವ ಜನಪ್ರಿಯತೆಯನ್ನು ನೋಡಿ ನಿಮಗೆಲ್ಲರಿಗೂ ಬಹಳ ಸಂತೋಷವಾಗುತ್ತದೆಂದು ನನಗೆ ಸಂಪೂರ್ಣ ಭರವಸೆಯಿದೆ. ಸ್ನೇಹಿತರೆ, ಈ ಬಾರಿ ದೇಶ-ವಿದೇಶಗಳಲ್ಲಿ ಯೋಗ ದಿನದಂದು ನಡೆಯಲಿರುವ ಕೆಲವು ಅತ್ಯಂತ ವಿನೂತನ ಉದಾಹರಣೆಗಳ ಬಗ್ಗೆ ನನಗೆ ಸಮಾಚಾರ ಬಂದಿದೆ. ಇವುಗಳಲ್ಲಿ ಒಂದು - guardian Ring –ಇದೊಂದು ಬಹುದೊಡ್ಡ ವಿಶಿಷ್ಟ ಕಾರ್ಯಕ್ರಮವಾಗಲಿದೆ. ಇದರಲ್ಲಿ Movement of Sun ಅನ್ನು celebrate ಮಾಡಲಾಗುತ್ತದೆ, ಅಂದರೆ ಸೂರ್ಯ ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಸಾಗುತ್ತಿರುವಂತೆಯ ನಾವು ಯೋಗದ ಮೂಲಕ ಆತನನ್ನು ಸ್ವಾಗತಿಸೋಣ. ಬೇರೆ-ಬೇರೆ ದೇಶಗಳಲ್ಲಿ ಭಾರತೀಯ ಭಾರತೀಯ ಆಯೋಗಗಳು ಅಲ್ಲಿನ ಸ್ಥಳೀಯ ಸಮಯಕ್ಕೆ ಅನುಗುಣವಾಗಿ ಸೂರ್ಯೋದಯದ ಸಮಯದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸುತ್ತವೆ. ಒಂದು ದೇಶದ ನಂತರ ಮತ್ತೊಂದು ದೇಶದಿಂದ ಕಾರ್ಯಕ್ರಮ ಆರಂಭವಾಗುತ್ತದೆ. ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ನಿರಂತರ ಪಯಣ ಸಾಗುತ್ತಲೇ ಇರುತ್ತದೆ, ಅಂತೆಯೇ ಇದು ಮುಂದುವರಿಯುತ್ತದೆ. ಈ ಕಾರ್ಯಕ್ರಮಗಳ ಸ್ಟ್ರೀಮಿಂಗ್ ಕೂಡಾ ಒಂದರ ನಂತರ ಮತ್ತೊಂದು ಜೋಡಣೆಯಾಗುತ್ತಾ ಹೋಗುತ್ತದೆ ಅಂದರೆ, ಒಂದು ರೀತಿಯಲ್ಲಿ Relay Yoga Streaming Event ಆಗಿರುತ್ತದೆ. ನೀವು ಕೂಡಾ ಖಂಡಿತವಾಗಿಯೂ ಇದನ್ನು ನೋಡಿ.
ಸ್ನೇಹಿತರೆ, ನಮ್ಮ ದೇಶದಲ್ಲಿ ಈ ಬಾರಿ ಅಮೃತ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು, ದೇಶದ 75 ಪ್ರಮುಖ ಸ್ಥಳಗಳಲ್ಲಿ ಕೂಡಾ ಅಂತಾರಾಷ್ಟ್ರೀಯ ಯೋಗ ದಿನ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಅನೇಕ ಸಂಸ್ಥೆಗಳು ಮತ್ತು ದೇಶವಾಸಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ತಮ್ಮ ತಮ್ಮ ಮಟ್ಟದಲ್ಲಿ ಏನಾದರೂ ವಿನೂತನವಾಗಿರುವುದನ್ನು ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿ ಯೋಗ ದಿನಾಚರಣೆಗಾಗಿ ನೀವು ನಿಮ್ಮ ನಗರ, ತಾಲ್ಲೂಕು ಅಥವಾ ಗ್ರಾಮದಲ್ಲಿ ಎಲ್ಲಕ್ಕಿಂತ ವಿಶೇಷವಾಗಿರುವ ಸ್ಥಳವೊಂದನ್ನು ಆಯ್ಕೆ ಮಾಡಿಕೊಳ್ಳಿರೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಸ್ಥಳ ಯಾವುದಾದರೊಂದು ಪ್ರಾಚೀನ ದೇವಾಲಯವಾಗಿರಬಹುದು, ಅಥವಾ ಪ್ರವಾಸೀ ಕೇಂದ್ರವಾಗಿರಬಹುದು ಅಥವಾ ಯಾವುದೇ ಪ್ರಸಿದ್ಧ ನದಿ, ಸರೋವರ ಅಥವಾ ಕೆರೆಯ ದಡವಾಗಿರಬಹುದು. ಇದರಿಂದಾಗಿ ಯೋಗದೊಂದಿಗೆ ನಿಮ್ಮ ಪ್ರದೇಶದ ಖ್ಯಾತಿಯೂ ಹೆಚ್ಚಾಗುತ್ತದೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನವೂ ದೊರೆಯುತ್ತದೆ. ಈಗ ‘ಯೋಗ ದಿನ’ ಕುರಿತಂತೆ 100 ದಿನಗಳ ಗಣನೆ ಕೂಡಾ ಪ್ರಾರಂಭವಾಗಿದೆ. ಅಂದರೆ ವೈಯಕ್ತಿಕ ಮತ್ತು ಸಾಮಾಜಿಕ ಪ್ರಯತ್ನಗಳಿಂದ ಕೂಡಿದ ಕಾರ್ಯಕ್ರಮಗಳು ಮೂರು ತಿಂಗಳಿಗೆ ಮೊದಲೇ ಪ್ರಾರಂಭವಾಗಿದೆ ಎಂದು ಹೇಳಬಹುದು. ದೆಹಲಿಯಲ್ಲಿ 100 ನೇ ದಿನ ಮತ್ತು 75 ನೇ ದಿನದ countdown ಕಾರ್ಯಕ್ರಮಗಳು ಕೂಡಾ ನಡೆದಿವೆ. ಅಂತೆಯೇ ಅಸ್ಸಾಂನ ಶಿವಸಾಗರದಲ್ಲಿ 50 ನೇ ಮತ್ತು ಹೈದರಾಬಾದ್ ನಲ್ಲಿ 25ನೇ Countdown Event ಆಯೋಜಿಸಲಾಗಿತ್ತು. ನೀವು ಕೂಡಾ ನೀವಿರುವ ಪ್ರದೇಶದಲ್ಲಿ ಯೋಗ ದಿನಾಚರಣೆಗೆ ಸಿದ್ಧತೆ ಆರಂಭಿಸಬೇಕೆಂದು ನಾನು ಬಯಸುತ್ತೇನೆ. ಹೆಚ್ಚು ಹೆಚ್ಚು ಜನರನ್ನು ಭೇಟಿ ಮಾಡಿ, ಪ್ರತಿಯೊಬ್ಬರನ್ನೂ ಯೋಗ ದಿನದ ಕಾರ್ಯಕ್ರಮದಲ್ಲಿ ಸೇರಬೇಕೆಂದು ಮನವಿ ಮಾಡಿ, ಪ್ರೇರೇಪಿಸಿ, ಸ್ಫೂರ್ತಿ ತುಂಬಿ. ನೀವೆಲ್ಲರೂ ಯೋಗ ದಿನಾಚರಣೆಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತೀರೆಂದು, ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುತ್ತೀರೆಂಬ ವಿಶ್ವಾಸ ನನಗಿದೆ.
ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಾನು ಜಪಾನ್ ದೇಶಕ್ಕೆ ಹೋಗಿದ್ದೆ. ನನ್ನ ಅನೇಕ ಕಾರ್ಯಕ್ರಮಗಳ ನಡುವೆಯೇ ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನನಗೆ ದೊರೆಯಿತು. ನಾನು ‘ಮನ್ ಕಿ ಬಾತ್ ’ ನಲ್ಲಿ, ನಿಮ್ಮೊಂದಿಗೆ ಅವರ ಬಗ್ಗೆ ಮಾತನಾಡಲು ಬಯಸುತ್ತೇನೆ. ಅವರು ಜಪಾನ್ ದೇಶವಾಸಿಗಳು, ಆದರೆ ಅವರ ಮನದಲ್ಲಿ ಭಾರತ ದೇಶದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ತುಂಬಿದೆ. ಅವರಲ್ಲೊಬ್ಬರು ಹಿರೋಶಿ ಕೋಯಿಕೆ ಅವರು. ಇವರು ಹೆಸರಾಂತ ಕಲಾ ನಿರ್ದೇಶಕರಾಗಿದ್ದಾರೆ. ಇವರು ಮಹಾಭಾರತ್ ಪ್ರಾಜೆಕ್ಟ್ ನಿರ್ದೇಶನ ಮಾಡಿದ್ದಾರೆಂದು ತಿಳಿದರೆ ನಿಮಗೆ ಬಹಳ ಸಂತೋಷವೆನಿಸುತ್ತದೆ. ಈ ಯೋಜನೆಯ ಆರಂಭ ಕಾಂಬೋಡಿಯಾ ದೇಶದಲ್ಲಾಯಿತು ಮತ್ತು ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ! ಹಿರೋಶಿ ಕೋಯಿಕೆ ಅವರು ಪ್ರತಿಯೊಂದು ಕೆಲಸವನ್ನೂ ಬಹಳ ವಿಭಿನ್ನ ರೀತಿಯಲ್ಲಿ ಮಾಡುತ್ತಾರೆ. ಅವರು ಪ್ರತಿ ವರ್ಷ, ಏಷ್ಯಾ ದೇಶದ ಯಾವುದಾದರೊಂದು ದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾರೆ ಮತ್ತು ಅಲ್ಲಿನ ಸ್ಥಳೀಯ ಕಲಾವಿದರು ಹಾಗೂ ಸಂಗೀತಗಾರರೊಂದಿಗೆ ಮಹಾಭಾರತದ ಕೆಲವು ಭಾಗಗಳನ್ನು ತಯಾರಿಸುತ್ತಾರೆ. ಈ ಯೋಜನೆಯ ಮುಖಾಂತರ ಅವರು ಭಾರತ, ಕಾಂಬೋಡಿಯಾ ಹಾಗೂ ಇಂಡೋನೇಷ್ಯಾ ಸೇರಿದಂತೆ 9 ದೇಶಗಳಲ್ಲಿ Production ಮಾಡಿದ್ದಾರೆ ಮತ್ತು ರಂಗ ಪ್ರದರ್ಶನಗಳನ್ನು ಕೂಡಾ ನೀಡಿದ್ದಾರೆ. ಹಿರೋಶಿ ಕೊಯಿಕೆ ಅವರು ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ಏಷ್ಯನ್ ಪ್ರದರ್ಶನ ಕಲೆಯಲ್ಲಿ ವಿಭಿನ್ನ ಹಿನ್ನೆಲೆ ಇರುವಂತಹ ಕಲಾವಿದರನ್ನು ಒಟ್ಟುಗೂಡಿಸುತ್ತಾರೆ. ಹೀಗಾಗಿ ಅವರ ಕೆಲಸ ಕಾರ್ಯಗಳಲ್ಲಿ ವಿವಿಧ ಬಣ್ಣಗಳು ನೋಡಲು ಕಾಣಸಿಗುತ್ತವೆ. ಇಂಡೋನೇಷ್ಯಾ, ಥೈಲ್ಯಾಂಡ್ ಮಲೇಷಿಯಾ ಮತ್ತು ಜಪಾನ್ ದೇಶಗಳ ಪ್ರದರ್ಶನಕಾರರ ಜಾವಾ ನೃತ್ಯ, ಬಾಲೀ ನೃತ್ಯ, ಥಾಯ್ ನೃತ್ಯದ ಮುಖಾಂತರ ಇದನ್ನು ಮತ್ತಷ್ಟು ಆಕರ್ಷಣೀಯವಾಗಿಸುತ್ತಾರೆ. ಇದರಲ್ಲಿನ ವಿಶೇಷವೆಂದರೆ ಇದರಲ್ಲಿ ಪ್ರತಿಯೊಬ್ಬ ಪ್ರದರ್ಶನಕಾರ ತನ್ನದೇ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ಕೋರಿಯೋಗ್ರಾಫಿ ಈ ವೈವಿಧ್ಯತೆಯನ್ನು ಬಹಳ ಸುಂದರ ರೀತಿಯಿಂದ ಪ್ರದರ್ಶಿಸುತ್ತದೆ ಮತ್ತು ಸಂಗೀತದ ವೈವಿಧ್ಯತೆ ಈ ಕಾರ್ಯಕ್ರಮವನ್ನು ಇನ್ನಷ್ಟು ಜೀವಂತವಾಗಿಸುತ್ತದೆ. ನಮ್ಮ ಸಮಾಜದಲ್ಲಿ ವೈವಿಧ್ಯ ಮತ್ತು ಸಹ ಬಾಳ್ವೆಯ ಪ್ರಾಮುಖ್ಯವನ್ನು ಮತ್ತು ವಾಸ್ತವದಲ್ಲಿ ಶಾಂತಿಯ ಸ್ವರೂಪ ಹೇಗಿರಬೇಕೆಂದು ತಿಳಿಯಪಡಿಸುವುದು ಇದರ ಉದ್ದೇಶವಾಗಿರುತ್ತದೆ. ಇವರಲ್ಲದೇ ಜಪಾನ್ ದೇಶದಲ್ಲಿ ನಾನು ಭೇಟಿ ಮಾಡಿದ ಇತರ ಇಬ್ಬರು ವ್ಯಕ್ತಿಗಳೆಂದರೆ ಆತ್ಸುಶಿ ಮಾತ್ಸುವೋ ಹಾಗೂ ಕೆಂಜೀ ಯೋಶೀ ಅವರುಗಳು. ಇವರಿಬ್ಬರೂ TEM Production Company ಗೆ ಸೇರಿದವರಾಗಿದ್ದಾರೆ. ಈ ಕಂಪೆನಿಯ ಸಂಬಂಧ 1993 ರಲ್ಲಿ ಬಿಡುಗಡೆಯಾದ ರಾಮಾಯಣದ Japanese Animation Film ನೊಂದಿಗೆ ಸೇರಿದ್ದಾಗಿದೆ. ಈ Project ಜಪಾನಿನ ಅತ್ಯಂತ ಪ್ರಸಿದ್ಧ ಚಿತ್ರ ನಿರ್ದೇಶಕ ಯಗೋ ಸಾಕೋ ಅವರದ್ದಾಗಿತ್ತು. ಸುಮಾರು 40 ವರ್ಷಗಳ ಹಿಂದೆ 1983 ರಲ್ಲಿ ಅವರಿಗೆ ರಾಮಾಯಣ ಕುರಿತು ತಿಳಿದುಬಂದಿತು. ‘ರಾಮಾಯಣ’ ಅವರ ಮನ ಮುಟ್ಟಿತು, ಆ ನಂತರ ಅವರು ಇದರ ಬಗ್ಗೆ ಆಳವಾದ ಸಂಶೋಧನೆ ಆರಂಭಿಸಿದರು. ಇಷ್ಟೇ ಅಲ್ಲ, ಅವರು ಜಪಾನೀ ಭಾಷೆಯಲ್ಲಿ ರಾಮಾಯಣದ 10 ಆವೃತ್ತಿಗಳನ್ನು ಓದಿ ಮುಗಿಸಿದರು, ನಂತರ ಅಷ್ಟಕ್ಕೇ ನಿಲ್ಲಿಸದೇ, ಅದನ್ನು ಅನಿಮೇಷನ್ ರೂಪದಲ್ಲಿ ತರಲು ಬಯಸಿದರು. ಇದರಲ್ಲಿ ಭಾರತೀಯ Animators ಕೂಡಾ ಅವರಿಗೆ ಸಾಕಷ್ಟು ಸಹಾಯ ಮಾಡಿದರು, ಆ ಚಿತ್ರದಲ್ಲಿ ತೋರಿಸಲಾಗಿರುವ ಭಾರತೀಯ ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಲಾಯಿತು. ಭಾರತೀಯರು ಯಾವ ರೀತಿ ಧೋತಿ ಧರಿಸುತ್ತಾರೆ, ಯಾವ ರೀತಿ ಸೀರೆ ಉಡುತ್ತಾರೆ, ಯಾವ ರೀತಿ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ ಎಂಬುದನ್ನು ಹೇಳಲಾಯಿತು. ಮಕ್ಕಳು ಕುಟುಂಬದಲ್ಲಿ ಪರಸ್ಪರರನ್ನು ಹೇಗೆ ಗೌರವಿಸುತ್ತಾರೆ, ಆಶೀರ್ವಾದ ನೀಡುವ ಸಂಪ್ರದಾಯವೆಂದರೇನು ಎಲ್ಲವನ್ನೂ ತಿಳಿಸಲಾಯಿತು. ಮುಂಜಾನೆ ನಿದ್ರೆಯಿಂದ ಎದ್ದ ನಂತರ ಮನೆಯ ಹಿರಿಯರಿಗೆ ನಮಸ್ಕರಿಸುವುದು, ಅವರ ಆಶೀರ್ವಾದ ಪಡೆಯುವುದು – ಈ ಎಲ್ಲಾ ವಿಷಯವನ್ನೂ ಈಗ 30 ವರ್ಷಗಳ ನಂತರ ಈ ಅನಿಮೇಷನ್ ಚಲನಚಿತ್ರದಲ್ಲಿ ಪುನಃ 4K ನಲ್ಲಿ re-master ಮಾಡಲಾಗುತ್ತಿದೆ. ಈ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಮ್ಮಿಂದ ಸಾವಿರಾರು ಕಿಲೋಮೀಟರ್ ದೂರದ ಜಪಾನ್ ದೇಶದಲ್ಲಿ ಕುಳಿತಿರುವ ಜನರಿಗೆ ನಮ್ಮ ಭಾಷೆಯ ಬಗ್ಗೆ ತಿಳಿದಿಲ್ಲ ಅಥವಾ ನಮ್ಮ ಸಂಪ್ರದಾಯದ ಬಗ್ಗೆ ಅಷ್ಟೇನೂ ತಿಳಿದಿಲ್ಲ, ಅವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅವರಿಗೆ ಶ್ರದ್ಧೆ, ಸಮರ್ಪಣಾ ಭಾವ, ಈ ಗೌರವ, ಬಹಳ ಶ್ಲಾಘನೀಯವಲ್ಲವೇ – ಇದನ್ನು ಅರಿತು ಹೆಮ್ಮೆ ಪಡದ ಭಾರತೀಯ ಇರುತ್ತಾನೆಯೇ?
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾರ್ಥ ತೊರೆದು ಸಮಾಜ ಸೇವೆಯ ಮಂತ್ರ, self for society ಯ ಮಂತ್ರ ನಮ್ಮ ಸಂಸ್ಕಾರದ ಒಂದು ಭಾಗವಾಗಿದೆ. ನಮ್ಮ ದೇಶದಲ್ಲಿ ಅಸಂಖ್ಯಾತ ಮಂದಿ ಈ ಮಂತ್ರವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮರ್ಕಾಪುರಂನಲ್ಲಿ ವಾಸವಾಗಿರುವ ರಾಮ್ ಭೂಪಾಲ್ ರೆಡ್ಡಿ ಅವರ ಬಗ್ಗೆ ತಿಳಿಯಿತು. ರಾಮ್ ಭೂಪಾಲ್ ರೆಡ್ಡಿ ಅವರು ತಮ್ಮ ನಿವೃತ್ತಿಯ ನಂತರ ದೊರೆಯುವ ತಮ್ಮ ಸಂಪೂರ್ಣ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಾನವಾಗಿ ನೀಡಿದರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಅವರು ಸುಮಾರು 100 ಹೆಣ್ಣು ಮಕ್ಕಳಿಗಾಗಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯ ಮುಖಾಂತರ ಖಾತೆ ತೆರೆದರು ಮತ್ತು ಅದರಲ್ಲಿ ತಮ್ಮ 25 ಲಕ್ಷಕ್ಕೂ ಅಧಿಕಮೊತ್ತವನ್ನುಜಮಾ ಮಾಡಿದರು. ಅದೇ ರೀತಿ ಸೇವಾಮನೋಭಾವದ ಮತ್ತೊಂದು ಉದಾಹರಣೆಯೆಂದರೆ ಉತ್ತರ ಪ್ರದೇಶದ ಆಗ್ರಾದ ಕಚೌರಾ ಗ್ರಾಮದ್ದಾಗಿದೆ. ಈ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಕೊರತೆಯಿತ್ತು. ಈ ಮಧ್ಯೆ ಗ್ರಾಮದ ಓರ್ವ ರೈತ ಕುವರ್ ಸಿಂಗ್ ಅವರಿಗೆ ಗ್ರಾಮದಿಂದ ಆರೇಳು ಕಿಲೋಮೀಟರ್ ದೂರದಲ್ಲಿ ತಮ್ಮ ಹೊಲದಲ್ಲಿ ಕುಡಿಯುವ ನೀರು ಸಿಕ್ಕಿತು. ಅವರಿಗೆ ಇದು ಬಹಳ ಸಂತೋಷದಾಯಕ ವಿಷಯವಾಗಿತ್ತು. ಈ ನೀರಿನಿಂದ ಉಳಿದ ಗ್ರಾಮವಾಸಿಗಳಿಗೂ ಕೂಡಾ ಏಕೆ ನೀಡಬಾರದೆಂದು ಅವರು ಯೋಚಿಸಿದರು. ಆದರೆ ಹೊಲದಿಂದ ಗ್ರಾಮಕ್ಕೆ ನೀರು ತರುವುದಕ್ಕೆ 30 ರಿಂದ 32 ಲಕ್ಷ ರೂಪಾಯಿ ಬೇಕಾಗುತ್ತಿತ್ತು. ಸ್ವಲ್ಪ ಸಮಯದ ನಂತರ ಕುವರ್ ಸಿಂಗ್ ಅವರ ಚಿಕ್ಕ ಸೋದರ ಶ್ಯಾಂ ಸಿಂಗ್ ಅವರು ಸೇನೆಯಿಂದ ನಿವೃತ್ತರಾಗಿ ಗ್ರಾಮಕ್ಕೆ ಬಂದರು, ಅವರಿಗೆ ಈ ವಿಷಯ ತಿಳಿಯಿತು. ಅವರು ನಿವೃತ್ತಿ ಸಮಯದಲ್ಲಿ ದೊರೆತ ತಮ್ಮ ಸಂಪೂರ್ಣ ಹಣವನ್ನು ಈ ಕೆಲಸಕ್ಕಾಗಿ ಸಮರ್ಪಿಸಿದರು ಮತ್ತು ಹೊಲದಿಂದ ಗ್ರಾಮದವರೆಗೂ ಕೊಳವೆ ಮಾರ್ಗ ಹಾಕಿಸಿ ಗ್ರಾಮಸ್ಥರಿಗೆ ಕುಡಿಯುವ ಸಿಹಿನೀರು ತಲುಪಿಸಿದರು. ಮಾಡುವ ಕೆಲಸದಲ್ಲಿ ನಿಷ್ಠೆ, ಸಮರ್ಪಣಾ ಭಾವವಿದ್ದರೆ ಕೇವಲ ಒಬ್ಬ ವ್ಯಕ್ತಿ ಸಮಾಜದ ಭವಿಷ್ಯವನ್ನೇ ಬದಲಾಯಿಸಿಬಿಡಬಹುದು, ಇವರ ಈ ಪ್ರಯತ್ನ ನಿಜಕ್ಕೂ ಬಹಳ ಪ್ರೇರಣಾದಾಯಕವಾಗಿದೆ. ನಾವು ಕರ್ತವ್ಯದ ಹಾದಿಯಲ್ಲಿ ನಡೆಯುತ್ತಲೇ ಸಮಾಜವನ್ನು ಸಶಕ್ತವನ್ನಾಗಿಸಬಹುದು, ದೇಶವನ್ನು ಸಶಕ್ತವಾಗಿಸಬಹುದು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ ಇದೇ ನಮ್ಮ ಸಂಕಲ್ಪವಾಗಬೇಕು ಮತ್ತು ಇದೇ ನಮ್ಮ ಸಾಧನೆಯೂ ಆಗಬೇಕು ಮತ್ತು ಇದಕ್ಕಾಗಿ ಒಂದೇ ಮಾರ್ಗವೆಂದರೆ – ಕರ್ತವ್ಯ, ಕರ್ತವ್ಯ ಮತ್ತು ಕರ್ತವ್ಯ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವಿಂದು ಮನ್ ಕಿ ಬಾತ್ ನಲ್ಲಿ ಸಮಾಜದೊಂದಿಗೆ ಸೇರಿಕೊಂಡಿರುವ ಅನೇಕ ಮಹತ್ವದ ವಿಷಯಗಳ ಬಗ್ಗೆ ಮಾತನಾಡಿದೆವು. ನೀವೆಲ್ಲರೂ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಮಹತ್ವಪೂರ್ಣ ಸಲಹೆ ಸೂಚನೆಗಳನ್ನು ನನಗೆ ಕಳುಹಿಸಿಕೊಡುತ್ತೀರಿ, ಮತ್ತು ಅದನ್ನು ಆಧರಿಸಿ ನಮ್ಮ ಮಾತುಕತೆ ಮುಂದುವರಿಯುತ್ತದೆ. ‘ಮನ್ ಕಿ ಬಾತ್’ ನ ಮುಂದಿನ ಸಂಚಿಕೆಗಾಗಿ ನಿಮ್ಮ ಚಿಂತನೆಗಳನ್ನು ಕಳುಹಿಸಿಕೊಡಲು ಮರೆಯಬೇಡಿ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ನಡೆಯುತ್ತಿರುವ ಕಾರ್ಯಕ್ರಮಗಳು, ನೀವು ತೊಡಗಿಕೊಂಡಿರುವ ಕಾರ್ಯಕ್ರಮಗಳ ಕುರಿತು ಕೂಡಾ ನನಗೆ ಖಂಡಿತವಾಗಿಯೂ ಬರೆದು ಕಳುಹಿಸಿ. Namo app ಮತ್ತು MyGov ನಲ್ಲಿ ನಿಮ್ಮ ಸಲಹೆ ಸೂಚನೆಗಳಿಗಾಗಿ ನಾನು ಎದುರು ನೋಡುತ್ತೇನೆ. ಮುಂದಿನ ಬಾರಿ ನಾವು ಪುನಃ ಭೇಟಿಯಾಗೋಣ, ದೇಶವಾಸಿಗಳಿಗೆ ಸಂಬಂಧಿಸಿದ ಇಂತಹದ್ದೇ ವಿಷಯಗಳ ಬಗ್ಗೆ ಮಾತನಾಡೋಣ. ನೀವು ನಿಮ್ಮ ಬಗ್ಗೆ, ನಿಮ್ಮ ಸುತ್ತಮುತ್ತಲಿನ ಸಕಲ ಜೀವರಾಶಿಗಳ ಬಗ್ಗೆ ಕಾಳಜಿ ವಹಿಸಿ. ಬೇಸಿಗೆಯ ಈ ಋತುವಿನಲ್ಲಿ ಪಶು-ಪಕ್ಷಿಗಳಿಗಾಗಿ ಆಹಾರ ನೀರು ನೀಡುವಂತಹ ನಿಮ್ಮ ಮಾನವೀಯ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರಿ. ಇವುಗಳನ್ನು ಸದಾ ನೆನಪಿನಲ್ಲಿ ಇಡಿ. ಅಲ್ಲಿಯವರೆಗೆ ಅನಂತಾನಂತ ಧನ್ಯವಾದಗಳು.
ನನ್ನ ಪ್ರೀತಿಯ ದೇಶಬಾಂಧವರೇ, ನಮಸ್ಕಾರಗಳು.
ಹೊಸ ವಿಷಯಗಳೊಂದಿಗೆ, ಹೊಸದಾದ ಪ್ರೇರಣಾದಾಯಕ ಉದಾಹರಣೆಗಳೊಂದಿಗೆ, ಹೊಸ ಹೊಸ ಸಂದೇಶಗಳನ್ನು ಹೊತ್ತು ಮತ್ತೊಮ್ಮೆ ನಾನು ತಮ್ಮೊಂದಿಗೆ 'ಮನದ ಮಾತು' ಆಡಲು ಬಂದಿರುವೆ. ನಿಮಗೆ ಗೊತ್ತಾ ಈ ಸಲ ನನಗೆ ಅತಿ ಹೆಚ್ಚು ಪತ್ರಗಳು ಸಂದೇಶಗಳು ಯಾವ ವಿಷಯದ ಬಗ್ಗೆ ಬಂದಿವೆ? ಅಂತ ಆ ವಿಷಯ ಹೇಗಿದೆಯೆಂದರೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯ ಮೂರಕ್ಕೂ ಅನ್ವಯವಾಗುತ್ತದೆ. ನಾನಿಂದು ಮಾತನಾಡುತ್ತಿರುವುದು ರಾಷ್ಟ್ರಕ್ಕೆ ದೊರಕಿದ ದೇಶದ ಪ್ರಧಾನ ಮಂತ್ರಿಗಳ ಸಂಗ್ರಹಾಲಯದ ಬಗ್ಗೆ. ಇದೇ ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದಂದು ಪ್ರಧಾನಮಂತ್ರಿ ಸಂಗ್ರಹಾಲಯ ಲೋಕಾರ್ಪಣೆಗೊಂಡಿದೆ. ಇದನ್ನು ದೇಶದ ನಾಗರಿಕರಿಗಾಗಿ ತೆರೆದಿಡಲಾಗಿದೆ. ನಮ್ಮ ಕೇಳುಗರೊಬ್ಬರು ಅವರ ಹೆಸರು ಸಾರ್ಥಕ್, ಸಾರ್ಥಕ್ ಅವರು ಗುರು ಗ್ರಾಮದಲ್ಲಿ ವಾಸಿಸುತ್ತಾರೆ. ಮೊದಲ ಅವಕಾಶ ಸಿಗುತ್ತಲೇ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನೋಡಿ ಬಂದರು. ಸಾರ್ಥಕ್ ಅವರು ನಮೋ ಆಪ್ ನಲ್ಲಿ ಏನು ಬರೆದುಕೊಂಡಿದ್ದಾರೆ, ಅದನ್ನು ನೋಡಿ, ನನಗೆ ಬಹಳ ಕುತೂಹಲ ಮೂಡಿಸಿತು.
ಅವರು ಏನು ಬರೆದಿದ್ದಾರೆ ಅಂದ್ರೆ ವರ್ಷಗಳಿಂದ ನ್ಯೂಸ್ ಚಾನೆಲ್ ನೋಡುತ್ತಾರೆ, ದಿನಪತ್ರಿಕೆಗಳನ್ನು ಓದುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಯೂ ಕೂಡ ತೊಡಗಿಸಿಕೊಂಡಿದ್ದಾರೆ, ಇದರಿಂದ ಅವರಿಗೆ ತಮ್ಮ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ ಎಂದು ತಿಳಿದಿದ್ದರು. ಆದರೆ, ಯಾವಾಗ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನೋಡಿ ಬಂದರೋ, ಅವರಿಗೆ ಆಶ್ಚರ್ಯವೆನಿಸಿತು. ಇಲ್ಲಿವರೆಗೂ ನಮ್ಮ ದೇಶ ಮತ್ತು ದೇಶದ ನೇತೃತ್ವವನ್ನು ವಹಿಸಿದ ನಾಯಕರ ಬಗ್ಗೆ ಹಲವಾರು ವಿಷಯಗಳು ತಿಳಿದಿರಲಿಲ್ಲ. ಅವರು ಪ್ರಧಾನಮಂತ್ರಿ ಸಂಗ್ರಹಾಲಯದ ಕೆಲವು ವಸ್ತುಗಳ ಬಗ್ಗೆ ಹೀಗೆ ಬರೆಯುತ್ತಾರೆ- ಲಾಲ್ ಬಹದ್ದೂರ್ ಶಾಸ್ತ್ರಿಯವರ ಚರಕವನ್ನು ನೋಡಿ ಅವರು ಚಕಿತಗೊಂಡರು, ಏಕೆಂದರೆ ಅದು ಅವರಿಗೆ ಅವರ ಮಾವನ ಮನೆಯಿಂದ ಕೊಡುಗೆಯಾಗಿ ಬಂದಿತ್ತು. ಅವರು ಶಾಸ್ತ್ರೀಜಿಯವರ ಪಾಸ್ ಬುಕ್ ಕೂಡ ನೋಡಿದರು. ಅಲ್ಲಿ ಅವರು ಅವರ ಹತ್ತಿರ ಎಷ್ಟು ಕಡಿಮೆ ಉಳಿತಾಯವಿತ್ತು ಎನ್ನುವುದನ್ನು ಕೂಡ ನೋಡಿದರು.
ಸಾರ್ಥಕ್ ಅವರು ಬರೆಯುತ್ತಾರೆ, ಅವರಿಗೆ ಮುರಾರ್ಜಿ ದೇಸಾಯಿ ಅವರು ಸ್ವತಂತ್ರ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಮೊದಲು ಗುಜರಾತ್ನಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿದ್ದರು ಎನ್ನುವುದು ಕೂಡ ಗೊತ್ತಿರಲಿಲ್ಲ. ಭಾರತದ ಆಡಳಿತ ಸೇವೆಯಲ್ಲಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದರು.
ಸಾರ್ಥಕ್ ಅವರು, ಚೌಧರಿ ಚರಣ್ ಸಿಂಗ್ ಅವರ ಬಗ್ಗೆ ಹೀಗೆ ಬರೆದಿದ್ದಾರೆ- ಜಮೀನುದಾರಿ ಪದ್ಧತಿಯನ್ನು ಹೋಗಲಾಡಿಸುವಲ್ಲಿ ಅವರ ಕೊಡುಗೆ ಅಪಾರವಾಗಿದ್ದು ಗೊತ್ತಿರ್ಲಿಲ್ಲ. ಅಷ್ಟೇ ಅಲ್ಲಾ, ಅವರು ಮುಂದೆ ಹೀಗೆ ಹೇಳಿದ್ದಾರೆ- ಭೂ ಸುಧಾರಣೆಯ ಬಗ್ಗೆ ನೋಡುತ್ತಾ ಹೋದಂತೆ ಅವರು, ಪಿ ವಿ ನರಸಿಂಹರಾವ್ ಅವರೂ ಭೂ ಸುಧಾರಣೆಯ ಬಗ್ಗೆ ಆಸಕ್ತಿ ಹೊಂದಿದ್ದರೆಂಬುದನ್ನು ತಿಳಿದುಕೊಳ್ಳುತ್ತಾರೆ. ಸಾರ್ಥಕ್ ಅವರಿಗೆ ಈ ಮ್ಯೂಸಿಯಂನಲ್ಲಿ ಬಂದ ನಂತರವೇ ಗೊತ್ತಾಗಿದ್ದು ಏನೆಂದರೆ, ಶ್ರೀ ಚಂದ್ರಶೇಖರ್ ಅವರು 4,000 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ಮಾಡಿದ್ದರು ಅನ್ನುವುದು. ಅವರು ಅಟಲ್ ಬಿಹಾರಿ ವಾಜಪೇಯಿ ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ನೋಡಿದರು, ಅವರ ಭಾಷಣಗಳನ್ನು ಕೇಳಿ ಹೆಮ್ಮೆಪಟ್ಟರು. ಸಾರ್ಥಕ್ ಅವರು ಈ ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಡಾಕ್ಟರ್ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಮತ್ತು ನಮ್ಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರ ಬಗ್ಗೆ ಬಹಳ ರೋಚಕ ಸಂಗತಿಗಳು ತಿಳಿದವು ಎಂದು ಹೇಳಿದ್ದಾರೆ.
ಮಿತ್ರರೇ, ದೇಶದ ಪ್ರಧಾನ ಮಂತ್ರಿಗಳ ಕೊಡುಗೆಯೇನು ಎಂಬುದನ್ನು ನೆನಪಿಸಿಕೊಳ್ಳಲು 'ಆಜಾದೀ ಕಾ ಅಮೃತಮಹೋತ್ಸವ' ಕ್ಕಿಂತಲೂ ಹೆಚ್ಚಿನ ಯಾವ ಅವಕಾಶವಿದೆ. 'ಆಜಾದೀ ಕಾ ಅಮೃತಮಹೋತ್ಸವ' ಒಂದು ಜನಾಂದೋಲನ ರೂಪ ತಾಳುತ್ತಿರುವುದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಇತಿಹಾಸ ವಿಷಯದ ಬಗ್ಗೆ ಜನರ ಆಸಕ್ತಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಮ್ಯೂಸಿಯಂ ಯುವಕರಿಗೆ ಒಂದು ಆಕರ್ಷಣೆಯ ಕೇಂದ್ರವಾಗಿದೆ. ಇದು ರಾಷ್ಟ್ರದ ಅಮೂಲ್ಯ ಪರಂಪರೆಗೆ ಸೇರ್ಪಡೆಯಾಗುತ್ತಿದೆ.
ಹಾಗೆಯೇ ಮಿತ್ರರೇ, ಮ್ಯೂಜಿಯಮ್ ಬಗ್ಗೆ ಇಷ್ಟೊಂದು ವಿಷಯ ಹಂಚಿಕೊಳ್ಳುತ್ತಾ ನನಗೆ ಅನಿಸುತ್ತಿದೆ, ನಾನು ತಮ್ಮನ್ನು ಯಾಕೆ ಕೆಲವು ಪ್ರಶ್ನೆ ಕೇಳಬಾರದು. ನೋಡೋಣ, ನಿಮ್ಮ ಸಾಮಾನ್ಯ ಜ್ಞಾನ ಏನು ಹೇಳುತ್ತದೆ. ನಿಮಗೆ ಎಷ್ಟು ತಿಳಿದಿದೆ. ನನ್ನ ಪ್ರಿಯ ಯುವ ಮಿತ್ರರೇ, ತಯಾರಾಗಿದ್ದೀರಾ, ಪೆನ್ನು ಮತ್ತು ಪೇಪರು ಎತ್ತಿಕೊಂಡಿರಾ? ನಿಮಗೆ ಪ್ರಶ್ನೆಗಳನ್ನು ಕೇಳುತ್ತೇನೆ, ನೀವು ಅವುಗಳಿಗೆ ಉತ್ತರವನ್ನು ನಮೋ ಆಪ್ ಅಥವಾ ಸೋಶಿಯಲ್ ಮೀಡಿಯಾ ದಲ್ಲಿ # Tag Museum quiz (ಹ್ಯಾಶ್ ಟ್ಯಾಗ್ ಮ್ಯೂಸಿಯಂ ಕ್ವಿಜ್) ನೊಂದಿಗೆ ಶೇರ್ ಮಾಡಿಕೊಳ್ಳಿ. ಅವಶ್ಯವಾಗಿ ಮಾಡಿರಿ. ನಾನು ತಮಗೆ ಆಗ್ರಹ ಮಾಡುವುದೇನೆಂದರೆ- ನೀವು ಅವಶ್ಯವಾಗಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ರಾಷ್ಟ್ರದಾದ್ಯಂತ ಎಲ್ಲರಿಗೂ ಕೂಡ ಈ ಮ್ಯೂಸಿಯಂ ಬಗ್ಗೆ ಹೆಚ್ಚು ಕುತೂಹಲ ಮೂಡುತ್ತದೆ. ದೇಶದ ಯಾವ ನಗರದಲ್ಲಿ ಪ್ರಸಿದ್ಧ ರೇಲ್ವೆ ಮ್ಯೂಸಿಯಂ ಇದೆ, ಅಲ್ಲಿ ಕಳೆದ 45 ವರ್ಷಗಳಿಂದ ಭಾರತೀಯ ರೈಲಿನ ಪರಂಪರೆಯನ್ನು ನೋಡುವ ಅವಕಾಶ ದೊರೆಯುತ್ತಿದೆ. ನಾನು ನಿಮಗೆ ಒಂದು ಕ್ಲೂ ಕೊಡುತ್ತೇನೆ. ನೀವು ಇಲ್ಲಿ ಫೇರಿ ಕ್ವೀನ್, ಸಲೂನ್ ಆಫ್ ಪ್ರಿನ್ಸ್ ಆಫ್ ವೇಲ್ಸ್ ರಿಂದ ಹಿಡಿದು Fireless(ಫಾಯರ್ಲೆಸ್) ಸ್ಟೀಮ್ ಲೋಕೊಮೋಟಿವ್ ಗಳನ್ನು ಕೂಡ ನೋಡಬಹುದಾಗಿದೆ.
ಮುಂಬೈನಲ್ಲಿ ಕರೆನ್ಸಿಯ ವಿಕಾಸದ ಬಗ್ಗೆ ಬಹಳ ರೋಚಕ ವಿಷಯವನ್ನು ನೀಡುವ ಒಂದು ಮ್ಯೂಸಿಯಂ ಇದೆ. ಅದು ಯಾವುದು ಎಂದು ಗೊತ್ತಾ...? ಅಲ್ಲಿ ಕ್ರಿಸ್ತ ಪೂರ್ವ 6ನೇ ಶತಮಾನದಷ್ಟು ಹಳೆಯ ನಾಣ್ಯಗಳು ಇವೆ. ಇನ್ನೊಂದೆಡೆ E-Money ('ಈ-ಮನಿ') ಕೂಡ ಇದೆ.
ಮೂರನೇ ಪ್ರಶ್ನೆ, ವಿರಾಸತ್-ಎ-ಖಲ್ಸಾ ಮ್ಯೂಸಿಯಂ ಬಗ್ಗೆ ಇದೆ, ಇದು ಪಂಜಾಬಿನ ಯಾವ ನಗರದಲ್ಲಿದೆ ಎಂದು ಗೊತ್ತಾ...?೬
ಗಾಳಿಪಟ ಹಾರಿಸುವುದು ನಿಮ್ಮೆಲ್ಲರಿಗೂ ಕೂಡ ಬಹಳ ಆನಂದದಾಯಕ ವಿಷಯವಲ್ಲವೇ, ಮುಂದಿನ ಪ್ರಶ್ನೆ ಇದಕ್ಕೆ ಸಂಬಂಧಿಸಿದ್ದಾಗಿದೆ. ದೇಶದಲ್ಲಿ ಒಂದೇ ಒಂದು ಗಾಳಿಪಟ ಮ್ಯೂಸಿಯಮ್ ಇದೆ ಅದು ಎಲ್ಲಿದೆ... ಬನ್ನಿ ನಾನು ನಿಮಗೆ ಒಂದು ಕ್ಲೂ ಕೊಡುತ್ತೇನೆ. ಅಲ್ಲೊಂದು ಬಹುದೊಡ್ಡ ಗಾಳಿಪಟ ಇಟ್ಟಿದ್ದಾರೆ ಅದರ ಗಾತ್ರ 22 ಅಡಿ ಉದ್ದ 16 ಅಡಿ ಅಗಲ ಇದೆ. ಏನಾದ್ರೂ ಗೊತ್ತಾಯ್ತ... ಇಲ್ಲಾಂದ್ರೆ ಇನ್ನೊಂದು ವಿಷಯ ಹೇಳುತ್ತೇನೆ. ಇದು ಯಾವ ನಗರದಲ್ಲಿದೆಯೋ ಆ ನಗರದೊಂದಿಗೆ ಬಾಪೂ ಅವರ ವಿಶೇಷ ಸಂಬಂಧವಿತ್ತು.
ಚಿಕ್ಕವರಿದ್ದಾಗ ಅಂಚೆಚೀಟಿಗಳನ್ನು ಸಂಗ್ರಹಿಸುವ ಆಸಕ್ತಿ ಯಾರಿಗೆ ಇರಲಿಕ್ಕಿಲ್ಲ. ಆದರೆ, ನಿಮಗೆ ಗೊತ್ತಾ ಭಾರತದಲ್ಲಿ ಅಂಚೆಚೀಟಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮ್ಯೂಸಿಯಂ ಎಲ್ಲಿದೆ?
ನಾನು ನಿಮಗೆ ಇನ್ನೊಂದು ಪ್ರಶ್ನೆ ಕೇಳುತ್ತೇನೆ, ಗುಲ್ಶನ್ ಮಹಲ್ ಎಂಬ ಕಟ್ಟಡದಲ್ಲಿ ಯಾವ ಮ್ಯೂಸಿಯಂ ಇದೆ? ಇದಕ್ಕೆ ಕ್ಲೂ ಅಂದರೆ, ಈ ಮ್ಯೂಸಿಯಂನಲ್ಲಿ ನೀವು ಫಿಲಂ ಡೈರೆಕ್ಟರ್ ಕೂಡ ಆಗಬಹುದು. ಕ್ಯಾಮರಾ, ಎಡಿಟಿಂಗ್ ಮಾಡುವ ಸೂಕ್ಷ್ಮ ವಿಷಯಗಳನ್ನು ಕೂಡ ನೋಡಬಹುದಾಗಿದೆ.
ಸರಿ, ನೀವು ಅಂತಹ ಯಾವುದಾದರೂ ಮ್ಯೂಸಿಯಂ ನೋಡಿದ್ದೀರಾ, ಅಲ್ಲಿ ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಅದರ ಪರಂಪರೆಯನ್ನು ಆಚರಿಸುತ್ತಾರೆ. ಈ ಮ್ಯೂಸಿಯಂನಲ್ಲಿ ಮಿನಿಯೇಚರ್ ಪೇಂಟಿಂಗ್ಸ್, ಜೈನ್ ಮ್ಯಾನುಸ್ಕ್ರಿಪ್ಟ್ಸ್, ಸ್ಕಲ್ಪ್ ಚರ್ (Sculpture) ಇನ್ನೂ ಹಲವು ವಿಷಯಗಳಿವೆ. ಅವುಗಳ ವಿಶಿಷ್ಟ ಪ್ರದರ್ಶನಕ್ಕಾಗಿಯೇ ಈ ಮ್ಯೂಜಿಯಮ್ ಹೆಸರುವಾಸಿಯಾಗಿದೆ.
ಮಿತ್ರರೇ, ತಂತ್ರಜ್ಞಾನದ ಈ ಸಮಯದಲ್ಲಿ ಇವುಗಳ ಉತ್ತರ ಹುಡುಕಲು ನಿಮಗೆ ಬಹಳ ಸುಲಭವಾಗಿದೆ. ಈ ಪ್ರಶ್ನೆಗಳನ್ನು ನಿಮಗೆ ಯಾಕೆ ಕೇಳಿದೆ ಅಂದರೆ ನಮ್ಮ ಯುವ ಪೀಳಿಗೆಯಲ್ಲಿ ಜಿಜ್ಞಾಸೆ ಹೆಚ್ಚಲಿ, ಅವರು ಇವುಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲಿ, ಅವುಗಳನ್ನು ನೋಡಲು ಹೋಗಲಿ ಎಂದು... ಈಗಂತೂ ಮ್ಯೂಸಿಯಂನ ಮಹತ್ವ ತಿಳಿದ ಮೇಲೆ ಹಲವಾರು ಜನರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಮ್ಯೂಸಿಯಂಗಾಗಿ ದಾನ ನೀಡುತ್ತಿದ್ದಾರೆ. ಹಲವರು, ತಾವು ಸಂಗ್ರಹಿಸಿದ್ದ ಐತಿಹಾಸಿಕ ವಸ್ತುಗಳನ್ನು ಮ್ಯೂಸಿಯಂಗೆ ದಾನ ನೀಡುತ್ತಿದ್ದಾರೆ. ನೀವೇನಾದರೂ ಹಾಗೆ ಮಾಡುತ್ತಿದ್ದರೆ ಅದು ಒಂದು ರೀತಿಯಿಂದ ಒಂದು ಸಾಂಸ್ಕೃತಿಕ ಸಂಪತ್ತನ್ನು ಇಡೀ ಸಮಾಜಕ್ಕೆ ನೀಡಿದಂತಾಗುತ್ತದೆ. ಭಾರತದಲ್ಲಿಯೂ ಜನರು ಈಗ ಇದಕ್ಕಾಗಿ ಮುಂದೆ ಬರುತ್ತಿದ್ದಾರೆ. ನಾನು ಇಂತಹ ಹಲವು ಖಾಸಗಿ ಪ್ರಯತ್ನಗಳನ್ನು ಕೂಡ ಶ್ಲಾಘಿಸುತ್ತೇನೆ. ಬದಲಾಗುತ್ತಿರುವ ಇಂದಿನ ಸಮಯದಲ್ಲಿ ಹಾಗೂ ಕೋವಿಡ್ ಪ್ರೋಟೋಕಾಲ್ ನಿಂದಾಗಿ ಸಂಗ್ರಹಾಲಯಗಳಲ್ಲಿ ಹೊಸ ರೀತಿಯ ವಿಧಾನಗಳನ್ನು ಅನುಸರಿಸುವಲ್ಲಿ ತೊಡಗಿಕೊಂಡಿದ್ದಾರೆ. ಮ್ಯೂಸಿಯಂಗಳಲ್ಲಿ, ಡಿಜಿಟೈಸೇಷನ್ ಕಡೆಗೂ ಒತ್ತು ನೀಡಲಾಗುತ್ತಿದೆ. ಮೇ 18ರಂದು ಅಂತರರಾಷ್ಟ್ರೀಯ ಮ್ಯೂಸಿಯಂ ದಿವಸ ಆಚರಿಸುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇದನ್ನು ನೋಡಿದಾಗ ಯುವ ಮಿತ್ರರಿಗಾಗಿ ನನ್ನ ಹತ್ತಿರ ಒಂದು ವಿಚಾರ ಇದೆ. ಯಾಕೆ ನೀವು ಮುಂಬರುವ ರಜಾ ದಿನಗಳಲ್ಲಿ ನಿಮ್ಮ ಮಿತ್ರರೊಂದಿಗೆ ಸೇರಿ ಯಾವುದಾದರೂ ಒಂದು ಸ್ಥಳೀಯ ಮ್ಯೂಸಿಯಂಗೆ ಹೋಗಬಾರದು. ನೀವು ನಿಮ್ಮ ಅನುಭವವನ್ನು # Tag Museum Memories (ಹ್ಯಾಶ್ ಟ್ಯಾಗ್ ಮ್ಯೂಸಿಯಂ ಮೆಮೊರಿಸ್) ನೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಹಾಗೆ ಮಾಡುವುದರಿಂದ ಇನ್ನೊಬ್ಬರ ಮನಸ್ಸಿನಲ್ಲಿಯೂ ಸಂಗ್ರಹಾಲಯಗಳ ಬಗ್ಗೆ ಜಿಜ್ಞಾಸೆ ಮೂಡುವುದು.
ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮ ನಿಮ್ಮ ಜೀವನದಲ್ಲಿ ಬಹಳ ಸಂಕಲ್ಪಗಳನ್ನು ಮಾಡಿರಬಹುದು, ಪೂರ್ಣಗೊಳಿಸಲು ಪ್ರಯತ್ನಗಳನ್ನು ಮಾಡಿದ್ದಿರಬಹುದು. ಬಂಧುಗಳೇ, ಆದರೆ ಇತ್ತೀಚೆಗೆ ನನಗೆ ಒಂದು ಸಂಕಲ್ಪದ ಬಗ್ಗೆ ಮಾಹಿತಿ ಬಂತು, ಅದು ನಿಜವಾಗಿಯೂ ಬಹಳ ಒಳ್ಳೆಯದಾಗಿತ್ತು, ಬಹಳ ವಿಶಿಷ್ಟ ಕೂಡ ಆಗಿತ್ತು. ಆಗ, ಇದನ್ನು ಮನದಾಳದ ಮಾತಿನಲ್ಲಿ ಅವಶ್ಯವಾಗಿ ನಮ್ಮ ಶ್ರೋತೃಗಳೊಂದಿಗೆ ಹಂಚಿಕೊಳ್ಳೋಣ ಎಂದೆನಿಸಿತು.
ಬಂಧುಗಳೇ, ಯಾರಾದರೂ ಬೆಳಗ್ಗೆ ತಮ್ಮ ಮನೆಯಿಂದ ಹೊರಬಿದ್ದು ಇಂದು ಇಡೀ ನಗರವನ್ನು ಸುತ್ತುವೆನು ಹಾಗೂ ನನ್ನ ಇಡೀ ದಿನದ ಎಲ್ಲ ವ್ಯವಹಾರಗಳಲ್ಲಿ ಯಾವುದೇ ನಗದು ವ್ಯವಹಾರ ಮಾಡುವುದಿಲ್ಲ ಎಂದು ಸಂಕಲ್ಪ ಮಾಡುವುದು ಒಂದು ವಿಶಿಷ್ಟ ಸಂಕಲ್ಪವಲ್ಲವೇ... ದೆಹಲಿಯ ಇಬ್ಬರು ಪುತ್ರಿಯರು ಸಾಗರಿಕಾ ಮತ್ತು ಪ್ರೇಕ್ಷಾ ಇಂತಹ Cashless Day out (ಕ್ಯಾಶ್ಲೆಸ್ ಡೇ ಔಟ್) ನ ಪ್ರಯೋಗಕ್ಕೆ ಸಂಕಲ್ಪ ಮಾಡಿದವರು. ಸಾಗರಿಕಾ ಮತ್ತು ಪ್ರೇಕ್ಷಾ ದಿಲ್ಲಿಯಲ್ಲಿ ಎಲ್ಲೇ ಹೋದರು ಅವರಿಗೆ ಕ್ಯಾಶ್ಲೆಸ್ ಪೇಮೆಂಟ್ ಮಾಡುವ ಅವಕಾಶ ದೊರಕಿತು. UPI QR Code (ಯುಪಿಐ ಕ್ಯೂಆರ್ ಕೋಡ್) ನಿಂದಾಗಿ ಅವರಿಗೆ ನಗದು ಹಣ ತೆಗೆಯುವ ಅವಶ್ಯಕತೆಯೇ ಬರಲಿಲ್ಲ. ಎಲ್ಲಿಯವರೆಗೆ ಅಂದರೆ, ರಸ್ತೆ ಬದಿಯಲ್ಲಿ ತಯಾರಿಸುವ ತಿಂಡಿ-ತಿನಿಸುಗಳು, ಸಂದು-ಗೊಂದಿಯ ಅಂಗಡಿಗಳಲ್ಲಿಯೂ ಕೂಡ ಬಹುತೇಕ ಸ್ಥಳಗಳಲ್ಲಿ Online transaction (ಆನ್ಲೈನ್ ಟ್ರಾಂಜೆಕ್ಷನ್) ವ್ಯವಸ್ಥೆ ಇತ್ತು.
ಮಿತ್ರರೇ, ನಿಮಗನಿಸಬಹುದು ಇದು ದಿಲ್ಲಿ. ಮೆಟ್ರೋ ಸಿಟಿ, ಅಲ್ಲಿ ಇವೆಲ್ಲ ಇರುವುದು ಸರ್ವೇಸಾಮಾನ್ಯ… ಆದರೆ ಈಗ ಹಾಗಿಲ್ಲ. ಯುಪಿಐ ನ ಈ ಬಳಕೆಯು ದಿಲ್ಲಿಯಂತಹ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ನನಗೆ ಗಾಜಿಯಾಬಾದ್ ನ ಆನಂದಿತಾ ತ್ರಿಪಾಠಿಯವರ ಒಂದು ಸಂದೇಶ ಬಂದಿದೆ. ಆನಂದಿತಾ ತನ್ನ ಪತಿಯೊಂದಿಗೆ ಕಳೆದ ವಾರ ಈಶಾನ್ಯ ರಾಜ್ಯಗಳ (ನಾರ್ಥ್ ಈಸ್ಟ್) ಪ್ರವಾಸಕ್ಕೆ ಹೋಗಿದ್ದರು. ಅವರು ಅಸ್ಸಾಮ್ ನಿಂದ ಹಿಡಿದು ಮೇಘಾಲಯ ಮತ್ತು ಅರುಣಾಚಲಪ್ರದೇಶದ ತವಾಂಗ್ ವರೆಗಿನ ತಮ್ಮ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಲವು ದಿನಗಳ ಈ ಯಾತ್ರೆಯಲ್ಲಿ ಅವರಿಗೆ ದೂರದೂರದ ಊರುಗಳಲ್ಲಿಯೂ ಕೂಡ ನಗದು ಉಪಯೋಗಿಸುವ ಪ್ರಮೇಯವೇ ಬರಲಿಲ್ಲ ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸಬಹುದು. ಯಾವ ಸ್ಥಳಗಳಲ್ಲಿ ಕೆಲವರ್ಷಗಳ ಹಿಂದೆ ಇಂಟರ್ನೆಟ್ ನ ಒಳ್ಳೆಯ ವ್ಯವಸ್ಥೆಯೂ ಇರಲಿಲ್ಲವೋ, ಅಲ್ಲಿಯೂ ಕೂಡ ಈಗ ಯುಪಿಐ ನಿಂದ ನಿಮ್ಮ ಹಣ ಪಾವತಿಸಬಹುದಾಗಿದೆ. ಸಾಗರಿಕಾ, ಪ್ರೇಕ್ಷಾ ಮುತ್ತು ಆನಂದಿತಾ ಅವರ ಅನುಭವಗಳನ್ನು ನೋಡಿ ನಾನು ತಮ್ಮಲ್ಲಿಯೂ ಕೂಡ ಕೇಳಿಕೊಳ್ಳುವುದೇನೆಂದರೆ Cashless Day Out (ಕ್ಯಾಶ್ಲೆಸ್ ಡೇ ಔಟ್) ನ ಪ್ರಯೋಗ ಮಾಡಿ ನೋಡಿ… ಅವಶ್ಯವಾಗಿ ಮಾಡಿರಿ.
ಮಿತ್ರರೇ, ಕಳೆದ ಕೆಲವು ವರ್ಷಗಳಲ್ಲಿ BHIM UPI(ಭೀಮ್ ಯುಪಿಐ) ಬಹಳ ವೇಗವಾಗಿ ನಮ್ಮ ಅರ್ಥವ್ಯವಸ್ಥೆ ಮತ್ತು ನಮ್ಮ ದಿನಚರಿಯ ಭಾಗವಾಗಿದೆ. ಈಗಂತೂ, ಸಣ್ಣ ಸಣ್ಣ ನಗರಗಳಲ್ಲಿ ಅಲ್ಲದೆ ಹೆಚ್ಚಿನ ಹಳ್ಳಿಗಳಲ್ಲಿಯೂ ಕೂಡ ಜನರು ಯುಪಿಐ ನಿಂದಲೇ ಕೊಡು ಕೊಳ್ಳುವಿಕೆಯನ್ನು ಮಾಡುತ್ತಿದ್ದಾರೆ. ಡಿಜಿಟಲ್ ಎಕಾನಮಿ ಇಂದ ದೇಶದಲ್ಲಿ ಒಂದು ಸಂಸ್ಕೃತಿಯು ಹುಟ್ಟಿಕೊಳ್ಳುತ್ತಿದೆ. ಓಣಿಯಲ್ಲಿನ ಚಿಕ್ಕ ಚಿಕ್ಕ ಅಂಗಡಿಗಳಲ್ಲಿಯೂ ಕೂಡ ಡಿಜಿಟಲ್ ಪೇಮೆಂಟ್ ಮಾಡುವುದರಿಂದಾಗಿ ಅವರಿಗೆ ತಮ್ಮ ಗ್ರಾಹಕರಿಗೆ ಸುಲಭವಾಗಿ ಸೇವೆ ಒದಗಿಸುವಂತೆ ಆಗಿದೆ. ಅವರಿಗೆ ಈಗ ಚಿಲ್ಲರೆ ಹಣದ ಸಮಸ್ಯೆ ಆಗುವುದಿಲ್ಲ. ನೀವು ಕೂಡ ದೈನಂದಿನ ಕಾರ್ಯಕಲಾಪಗಳಲ್ಲಿ ಯುಪಿಐ ಉಪಯೋಗ ಮಾಡುತ್ತಿರಬಹುದು. ಎಲ್ಲಿಗೆ ಹೋಗಲಿ ನಗದು ತೆಗೆದುಕೊಂಡು ಹೋಗುವುದು, ಬ್ಯಾಂಕಿಗೆ ಹೋಗುವುದು, ಎಟಿಎಂನಿಂದ ಹಣ ಪಡೆಯುವ ಕಷ್ಟವೇ ಇಲ್ಲ. ಮೊಬೈಲ್ ನಿಂದಲೇ ಎಲ್ಲಾ ಪೇಮೆಂಟ್ ಮಾಡಬಹುದಾಗಿದೆ. ಆದರೆ, ನಿಮಗೆ ಗೊತ್ತಾ, ನಿಮ್ಮ ಈ ಸಣ್ಣ ಸಣ್ಣ ಆನ್ಲೈನ್ ಪೇಮೆಂಟ್ ನಿಂದ ರಾಷ್ಟ್ರದಲ್ಲಿ ಎಷ್ಟು ದೊಡ್ಡ ಡಿಜಿಟಲ್ ಎಕಾನಮಿ ತಯಾರಾಗಿದೆ ಎಂದು. ಈಗ ನಮ್ಮ ದೇಶದಲ್ಲಿ ಪ್ರತಿದಿನ ಸರಿಸುಮಾರು 20 ಸಾವಿರ ಕೋಟಿ ರೂಪಾಯಿಗಳ ಆನ್ಲೈನ್ ಟ್ರಾನ್ಸಾಕ್ಷನ್ ಆಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅಂತೂ ಯುಪಿಐ ಟ್ರಾನ್ಸಾಕ್ಷನ್ ಸುಮಾರು ಹತ್ತು ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತ್ತು. ಇದರಿಂದ ದೇಶದಲ್ಲಿ ಅನುಕೂಲಗಳು ಹೆಚ್ಚಾಗುತ್ತಿವೆ ಅಲ್ಲದೆ ಪ್ರಾಮಾಣಿಕತೆಯ ವಾತಾವರಣ ನಿರ್ಮಾಣವಾಗುತ್ತಿದೆ. ಈಗಂತೂ ದೇಶದಲ್ಲಿ ಫಿನ್-ಟೆಕ್ ನೊಂದಿಗೆ ಸೇರಿಕೊಂಡು ಹೊಸ ಸ್ಟಾರ್ಟ್ ಅಪ್ ಗಳು ಮುಂದುವರಿಯುತ್ತಿವೆ. ಒಂದು ವೇಳೆ ನಿಮ್ಮ ಹತ್ತಿರ ಇಂತಹ ಡಿಜಿಟಲ್ ಪೇಮೆಂಟ್ ಮತ್ತು ಸ್ಟಾರ್ಟಪ್ ಎಕೊಸಿಸ್ಟಮ್ ನ ಶಕ್ತಿಯೊಂದಿಗೆ ಸಂಬಂಧಿಸಿದ ಅನುಭವಗಳಿದ್ದರೆ ಅವುಗಳನ್ನು ಹಂಚಿಕೊಳ್ಳಿ. ನಿಮ್ಮ ಅನುಭವಗಳು ಇನ್ನುಳಿದ ಹಲವಾರು ದೇಶವಾಸಿಗಳಿಗೆ ಪ್ರೇರಣೆಯಾಗಬಹುದಾಗಿದೆ.
ನನ್ನ ಪ್ರಿತಿಯ ದೇಶವಾಸಿಗಳೇ, ತಂತ್ರಜ್ಞಾನದ ಶಕ್ತಿಯು ಇಂದು ಹೀಗೆ ಸಾಮಾನ್ಯ ಜನರ ಜೀವನವನ್ನು ಬದಲಾಯಿಸುತ್ತದೆ, ಇದು ನಮಗೆ ನಮ್ಮ ಸುತ್ತಮುತ್ತಲೂ ಯಾವಾಗಲೂ ಕಾಣಸಿಗುತ್ತಿದೆ. ತಂತ್ರಜ್ಞಾನವು ಇನ್ನೊಂದು ದೊಡ್ಡ ಕೆಲಸ ಮಾಡಿದೆ. ಅದೆಂದರೆ ನಮ್ಮ ದಿವ್ಯಾಂಗ ಅಸಾಧಾರಣ ಕ್ಷಮತೆಯ ಲಾಭವನ್ನು ರಾಷ್ಟ್ರ ಮತ್ತು ವಿಶ್ವಕ್ಕೆ ನೀಡುವುದು. ನಮ್ಮ ದಿವ್ಯಾಂಗ ಸಹೋದರ-ಸಹೋದರಿಯರು ಏನು ಮಾಡುತ್ತಾರೆ ಎಂಬುದನ್ನು ನಾವು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನೋಡಿದ್ದೇವೆ. ಕ್ರೀಡೆಗಳ ಹಾಗೆಯೇ, ಕಲೆ, ಶಿಕ್ಷಣ ಮುತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ದಿವ್ಯಾಂಗ ಮಿತ್ರರು ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ, ಯಾವಾಗ ಇವರಿಗೆ ತಂತ್ರಜ್ಞಾನದ ಶಕ್ತಿ ಒದಗುವುದೋ, ಆಗ ಇವರು ಇನ್ನೂ ಹೆಚ್ಚಿನದನ್ನು ಸಾಧಿಸಿ ತೋರಿಸಬಹುದಾಗಿದೆ. ಆದ್ದರಿಂದ, ರಾಷ್ಟ್ರವು ದಿವ್ಯಾಂಗ ಬಂಧುಗಳಿಗಾಗಿ ಸಂಪನ್ಮೂಲಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಾಧನೆಯ ಹಾದಿ ಇನ್ನಷ್ಟು ಸುಲಭಗೊಳಿಸಲು ನಿರಂತರ ಪ್ರಯತ್ನಶೀಲವಾಗಿದೆ. ದೇಶದಲ್ಲಿ ಹಲವು ಸ್ಟಾರ್ಟಪ್ ಗಳು ಮತ್ತು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರೇರಣಾದಾಯಕ ಕಾರ್ಯನಿರ್ವಹಿಸುತ್ತಿವೆ. ಅಂತಹ ಒಂದು ಸಂಸ್ಥೆಯೆಂದರೆ ವಾಯ್ಸ್ ಆಫ್ specially-abled ಪೀಪಲ್, ಈ ಸಂಸ್ಥೆಗಳು Assistive ಟೆಕ್ನೋಲಜಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ಹುಟ್ಟುಹಾಕುತ್ತಿದೆ. ದಿವ್ಯಾಂಗ ಕಲಾಕಾರರ ಕಾರ್ಯಗಳನ್ನು, ಜಗತ್ತಿನಾದ್ಯಂತ ಪಸರಿಸಲು ಒಂದು ಹೊಸ ಇನ್ನೋವೇಟಿವ್ ಕಾರ್ಯ ಆರಂಭಿಸಿತು. ವಾಯ್ಸ್ ಆಫ್ specially-abled ಪೀಪಲ್ ನ ಎಲ್ಲಾ ಕಲಾಕಾರರ ಪೇಂಟಿಂಗ್ ಗಳ ಒಂದು ಡಿಜಿಟಲ್ ಆರ್ಟ್ ಗ್ಯಾಲರಿ ಮಾಡಲಾಗಿದೆ. ದಿವ್ಯಾಂಗ ಮಿತ್ರರು ಹೇಗೆ ಅಸಾಧಾರಣ ಪ್ರತಿಭೆಗಳ ಆಗರವಾಗಿದ್ದಾರೆ ಮತ್ತು ಅವರಲ್ಲಿ ಅದೆಷ್ಟು ಅಸಾಧಾರಣ ಶಕ್ತಿ ಇರುತ್ತದೆ ಎಂಬುದನ್ನು ಅರಿಯಲು ಈ ಆರ್ಟ್ ಗ್ಯಾಲರಿಯು ಒಂದು ಉದಾಹರಣೆಯಾಗಿದೆ. ದಿವ್ಯಾಂಗ ಮಿತ್ರರ ಜೀವನದಲ್ಲಿ ಎಂತಹ ಸವಾಲುಗಳು ಎದುರಾಗುತ್ತವೆ, ಅವುಗಳಿಂದ ಹೊರಬಂದು ಅವರು ಎಲ್ಲಿಯವರೆಗೆ ಮುಟ್ಟಬಹುದು, ಇಂತಹ ಅನೇಕ ವಿಷಯಗಳನ್ನು ಪೇಂಟಿಂಗ್ಸ್ ಗಳಲ್ಲಿ ನಾವು ಕಾಣಬಹುದಾಗಿದೆ. ನಿಮಗೂ ಕೂಡ ಯಾರಾದರೂ ದಿವ್ಯಾಂಗ ಮಿತ್ರರು ಪರಿಚಯವಿದ್ದರೆ, ಅವರ ಜಾಣ್ಮೆಯನ್ನು ತಿಳಿದಿದ್ದರೆ, ಡಿಜಿಟಲ್ ತಂತ್ರಜ್ಞಾನದಿಂದ ಅದನ್ನು ವಿಶ್ವದ ಮುಂದೆ ತರಬಹುದಾಗಿದೆ. ದಿವ್ಯಾಂಗ ಮಿತ್ರರೆಲ್ಲರೂ ಇಂತಹ ಪ್ರಯತ್ನಗಳೊಂದಿಗೆ ಅವಶ್ಯವಾಗಿ ಸೇರಿರಿ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಬಹುತೇಕ ಭಾಗಗಳಲ್ಲಿ ಬೇಸಿಗೆಯು ಬಹಳ ತೀವ್ರವಾಗಿ ಹೆಚ್ಚುತ್ತಿದೆ. ಏರುತ್ತಿರುವ ಈ ಶಾಖವು, ನೀರಿನ ಸಂರಕ್ಷಣೆಯ ನಮ್ಮ ಜವಾಬ್ದಾರಿಯನ್ನೂ ಕೂಡ ಅಷ್ಟೇ ಹೆಚ್ಚಿಸುತ್ತದೆ. ಈಗ ನೀವು ಇರುವ ಸ್ಥಳದಲ್ಲಿ ಸಾಕಷ್ಟು ನೀರು ಲಭ್ಯವಿರಬಹುದು. ಆದರೆ, ನೀರಿನ ಪ್ರತಿ ಹನಿಯೂ ಅಮೃತಕ್ಕೆ ಸಮನಾದಂತಹ, ಜಲಕ್ಷಾಮ ಪ್ರದೇಶಗಳಲ್ಲಿ ವಾಸಿಸುವ ಕೋಟ್ಯಂತರ ಜನರನ್ನು ನೀವು ಸದಾ ಸ್ಮರಿಸುತ್ತಿರಬೇಕು.
ಸ್ನೇಹಿತರೇ, ಸ್ವಾತಂತ್ರ್ಯದ 75 ನೇ ವರ್ಷದ ಈ ಸಂದರ್ಭದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ, ಯಾವ ಸಂಕಲ್ಪಗಳೊಂದಿಗೆ ದೇಶವು ಮುನ್ನಡೆಯುತ್ತಿದೆಯೋ ಅದರಲ್ಲಿ ಜಲ ಸಂರಕ್ಷಣೆಯೂ ಕೂಡ ಒಂದಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುವುದು. ಈ ಚಳವಳಿಯು ಎಷ್ಟು ದೊಡ್ಡದೆಂದು ನೀವು ಊಹಿಸಬಹುದು. ನಿಮ್ಮದೇ ನಗರದಲ್ಲಿ 75 ಅಮೃತ ಸರೋವರಗಳು ಇರುವ ದಿನವು ದೂರವಿಲ್ಲ. ನೀವೆಲ್ಲರೂ ಮತ್ತು ವಿಶೇಷವಾಗಿ ಯುವಕರು ಈ ಚಳವಳಿಯ ಬಗ್ಗೆ ತಿಳಿದುಕೊಳ್ಳಬೇಕೆಂದು ಮತ್ತು ಅದರ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಯಾವುದೇ ಇತಿಹಾಸವಿದ್ದರೆ, ಹೋರಾಟಗಾರರ ಸ್ಮೃತಿ ಇದ್ದರೆ, ನೀವು ಅದನ್ನೂ ಅಮೃತ ಸರೋವರದೊಂದಿಗೆ ಕೂಡಿಸಬಹುದು. ಅಂದಹಾಗೆ, ಅಮೃತ ಸರೋವರದ ಸಂಕಲ್ಪವನ್ನು ತೆಗೆದುಕೊಂಡ ನಂತರ, ಅನೇಕ ಸ್ಥಳಗಳಲ್ಲಿ ಇದರ ಕೆಲಸವು ವೇಗವಾಗಿ ಪ್ರಾರಂಭವಾಗಿವೆ ಎಂದು ತಿಳಿದು ನನಗೆ ಸಂತೋಷವಾಯಿತು.
ಉತ್ತರಪ್ರದೇಶದ ರಾಂಪುರದ ಗ್ರಾಮ ಪಂಚಾಯತ್ ಪಟ್ವಾಯಿ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅಲ್ಲಿ ಗ್ರಾಮ ಸಭೆಯ ಜಾಗದಲ್ಲಿ ಒಂದು ಕೆರೆ ಇತ್ತು. ಆದರೆ ಅದು ಕಸದಿಂದ ತುಂಬಿ ಕೊಳಕಾಗಿತ್ತು. ಕಳೆದ ಕೆಲವು ವಾರಗಳಿಂದ ಸಾಕಷ್ಟು ಶ್ರಮವಹಿಸಿ, ಸ್ಥಳೀಯರ ನೆರವಿನಿಂದ, ಸ್ಥಳೀಯ ಶಾಲಾ ಮಕ್ಕಳ ನೆರವಿನಿಂದ, ಕೊಳೆ ತುಂಬಿದ್ದ ಆ ಕೆರೆಯ ರೂಪವೇ ಬದಲಾಯಿತು. ಈಗ ಆ ಕೆರೆಯ ದಡದಲ್ಲಿ ತಡೆಗೋಡೆ, ಗಡಿಗೋಡೆ, ಫುಡ್ ಕೋರ್ಟ್, ಕಾರಂಜಿ ಅಲ್ಲದೆ ಲೈಟಿಂಗ್… ಹೀಗೆ ಏನೆಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯತ್ನಕ್ಕಾಗಿ ನಾನು ರಾಂಪುರದ ಪಟ್ವಾಯಿ ಗ್ರಾಮ ಪಂಚಾಯತ್, ಆ ಗ್ರಾಮದ ಜನತೆ, ಅಲ್ಲಿನ ಮಕ್ಕಳನ್ನು ಬಹಳ ಅಭಿನಂದಿಸುತ್ತೇನೆ.
ಸ್ನೇಹಿತರೇ, ನೀರಿನ ಲಭ್ಯತೆ ಮತ್ತು ನೀರಿನ ಕೊರತೆ, ಇವು ಯಾವುದೇ ದೇಶದ ಪ್ರಗತಿ ಮತ್ತು ವೇಗದ ಮೇಲೆ ಪ್ರಭಾವ ಬೀರುತ್ತವೆ. 'ಮನ್ ಕಿ ಬಾತ್' ನಲ್ಲಿ ನಾನು ಸ್ವಚ್ಛತೆಯಂತಹ ವಿಷಯಗಳ ಜೊತೆ-ಜೊತೆಗೆ ನೀರಿನ ಸಂರಕ್ಷಣೆಯ ಬಗ್ಗೆಯೂ ಮತ್ತೆ ಮತ್ತೆ ಮಾತನಾಡುವುದನ್ನು ನೀವು ಗಮನಿಸಿರಬೇಕು. ಇದನ್ನೇ ನಮ್ಮ ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ -
“ಪಾನಿಯಂ ಪರಮಂ ಲೋಕೇ, ಜೀವಾನಾಂ ಜೀವನಂ ಸ್ಮೃತಮ್||”
ಅಂದರೆ, ಪ್ರಪಂಚದಲ್ಲಿ ನೀರು, ಪ್ರತಿಯೊಂದು ಜೀವಿಯ, ಜೀವನದ ಆಧಾರವಾಗಿದೆ ಮತ್ತು ನೀರು ಬಹಳ ದೊಡ್ಡ ಸಂಪನ್ಮೂಲವೂ ಆಗಿದೆ, ಆದ್ದರಿಂದಲೇ ನಮ್ಮ ಪೂರ್ವಜರು ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದರು. ವೇದಗಳಿಂದ ಪುರಾಣಗಳವರೆಗೆ ಎಲ್ಲೆಡೆ ನೀರನ್ನು ಸಂರಕ್ಷಿಸುವುದು, ಕೊಳಗಳು, ಸರೋವರಗಳನ್ನು ನಿರ್ಮಿಸುವುದು ಮನುಷ್ಯನ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕರ್ತವ್ಯವೆಂದು ಹೇಳಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಜಲಮೂಲಗಳನ್ನು ಜೋಡಿಸುವುದಕ್ಕೆ ಹಾಗೂ ಜಲ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಅದೇ ರೀತಿ, ಸಿಂಧೂ-ಸರಸ್ವತಿ ಮತ್ತು ಹರಪ್ಪನ್ ನಾಗರಿಕತೆಗಳ ಕಾಲದಲ್ಲೂ ಭಾರತದಲ್ಲಿ ನೀರಿಗೆ ಸಂಬಂಧಿಸಿದ ಇಂಜಿನಿಯರಿಂಗ್ ಅನ್ನು ಎಷ್ಟು ಅಭಿವೃದ್ಧಿಪಡಿಸಲಾಗಿತ್ತು ಎಂಬುದು ಇತಿಹಾಸದ ವಿದ್ಯಾರ್ಥಿಗಳಿಗೆ ತಿಳಿದಿರುತ್ತದೆ. ಪ್ರಾಚೀನ ಕಾಲದಲ್ಲಿ, ಅನೇಕ ನಗರಗಳಲ್ಲಿ ನೀರಿನ ಮೂಲಗಳ ಪರಸ್ಪರ ಸಂಪರ್ಕಿತ ವ್ಯವಸ್ಥೆ ಇರುತ್ತಿತ್ತು ಮತ್ತು ಆ ಸಮಯದಲ್ಲಿ, ಜನಸಂಖ್ಯೆಯು ಹೆಚ್ಚಿರಲಿಲ್ಲ, ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿರಲಿಲ್ಲ, ಒಂದು ರೀತಿಯ ಸಮೃದ್ಧಿ ಇತ್ತು, ಆದರೂ, ನೀರಿನ ಸಂರಕ್ಷಣೆಯ ಬಗ್ಗೆ ಆಗಿನ ಕಾಲದಲ್ಲಿಯೇ ಅತ್ಯಂತ ಹೆಚ್ಚಿನ ಅರಿವಿತ್ತು. ಆದರೆ, ಇಂದು ಪರಿಸ್ಥಿತಿ ತದ್ವಿರುದ್ಧವಾಗಿದೆ. ನಿಮ್ಮ ಪ್ರದೇಶದಲ್ಲಿರುವ ಇಂತಹ ಹಳೆಯ ಕೊಳಗಳು, ಬಾವಿಗಳು ಮತ್ತು ಕೆರೆಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಅಮೃತ್ ಸರೋವರ ಅಭಿಯಾನದಿಂದಾಗಿ, ಜಲ ಸಂರಕ್ಷಣೆಯ ಜೊತೆ-ಜೊತೆಗೆ, ನಿಮ್ಮ ಕ್ಷೇತ್ರವೂ ಸಹ ಗುರುತಿಸಲ್ಪಡುತ್ತದೆ.
ಇದರಿಂದಾಗಿ, ನಗರಗಳಲ್ಲಿ, ಪ್ರದೇಶಗಳಲ್ಲಿ ಸ್ಥಳೀಯ ಪ್ರವಾಸಿ ಸ್ಥಳಗಳು ಅಭಿವೃದ್ಧಿಯಾಗುತ್ತವೆ, ಜನರ ತಿರುಗಾಟಕ್ಕೆ ಸ್ಥಳವೂ ಸಹ ಸಿದ್ಧವಾಗುತ್ತದೆ.
ಸ್ನೇಹಿತರೇ, ನೀರಿಗೆ ಸಂಬಂಧಿಸಿದ ಪ್ರತಿಯೊಂದು ಪ್ರಯತ್ನವೂ ನಮ್ಮ ನಾಳೆಗೆ ಸಂಬಂಧಿಸಿದೆ. ಇದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಇದಕ್ಕಾಗಿ ಶತಮಾನಗಳಿಂದ ವಿವಿಧ ಸಮಾಜಗಳಿಂದ, ವಿಭಿನ್ನ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಉದಾಹರಣೆಗೆ, 'ಮಾಲ್ ಧಾರಿ' ಎಂಬ "Ran of kutch " ನಲ್ಲಿನ ಬುಡಕಟ್ಟು ಪ್ರದೇಶದ ಜನಾಂಗವು ಜಲ ಸಂರಕ್ಷಣೆಗಾಗಿ "ವೃದಾಸ್" ಎಂಬ ವಿಧಾನವನ್ನು ಬಳಸುತ್ತದೆ. ಇದರ ಭಾಗವಾಗಿ, ಸಣ್ಣ ಬಾವಿಗಳನ್ನು ನಿರ್ಮಿಸಲಾಗುತ್ತದೆ ಮತ್ತು ಅವುಗಳನ್ನು ಸಂರಕ್ಷಿಸಲು ಸುತ್ತಲೂ ಮರ-ಗಿಡಗಳನ್ನು ನೆಡಲಾಗುತ್ತದೆ. ಇದೇ ರೀತಿ, ಮಧ್ಯಪ್ರದೇಶದ ’ಭಿಲ್’ ಬುಡಕಟ್ಟು ಜನಾಂಗದವರು ತಮ್ಮ ಐತಿಹಾಸಿಕ "ಹಲ್ಮಾ" ಸಂಪ್ರದಾಯವನ್ನು ನೀರಿನ ಸಂರಕ್ಷಣೆಗಾಗಿ ಬಳಸಿದರು. ಈ ಸಂಪ್ರದಾಯದಲ್ಲಿ, ಇಲ್ಲಿನ ಬುಡಕಟ್ಟು ಜನರು ನೀರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಒಂದು ಸ್ಥಳದಲ್ಲಿ ಸೇರಿ ಚರ್ಚಿಸುತ್ತಾರೆ. ಹಲ್ಮಾ ಸಂಪ್ರದಾಯದಿಂದ ಬಂದ ಸಲಹೆಗಳಿಂದಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ ಮತ್ತು ಅಂತರ್ಜಲ ಮಟ್ಟವೂ ಹೆಚ್ಚುತ್ತಿದೆ.
ಸ್ನೇಹಿತರೇ, ಇಂತಹುದೇ ಕರ್ತವ್ಯ ಭಾವನೆಯು ಪ್ರತಿಯೊಬ್ಬರ ಮನಸ್ಸಿನಲ್ಲಿ ಬಂದರೆ, ನೀರಿನ ಸಮಸ್ಯೆಗೆ ಸಂಬಂಧಿಸಿದ ದೊಡ್ಡ ಸವಾಲುಗಳನ್ನು ಕೂಡ ಪರಿಹರಿಸಬಹುದು. ಬನ್ನಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಜಲ ಸಂರಕ್ಷಣೆ ಮತ್ತು ಜೀವನ ಸಂರಕ್ಷಣೆಯ ಪ್ರತಿಜ್ಞೆ ಮಾಡೋಣ. ನಾವು ಹನಿ-ಹನಿ ನೀರನ್ನು ಉಳಿಸಿ ಪ್ರತಿಯೊಂದು ಜೀವವನ್ನೂ ಉಳಿಸೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಗಮನಿಸಿರಬೇಕು, ಕೆಲವು ದಿನಗಳ ಹಿಂದೆ ನಾನು ನನ್ನ ಯುವ ಸ್ನೇಹಿತರು, ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೆ ಚರ್ಚಾ' ನಡೆಸಿದ್ದೆ. ಈ ಚರ್ಚೆಯಲ್ಲಿ ಕೆಲವು ವಿದ್ಯಾರ್ಥಿಗಳು ಹೇಳಿದ್ದು, ಅವರಿಗೆ ಪರೀಕ್ಷೆಯಲ್ಲಿ ಗಣಿತದ ಬಗ್ಗೆ ಭಯವಿದೆ. ಇದೇ ವಿಷಯವನ್ನು ಅನೇಕ ವಿದ್ಯಾರ್ಥಿಗಳು ತಮ್ಮ ಸಂದೇಶದಲ್ಲಿ ನನಗೆ ಕಳುಹಿಸಿದ್ದರು. ಈ ಬಾರಿಯ ‘ಮನ್ ಕಿ ಬಾತ್’ನಲ್ಲಿ ಗಣಿತ-mathematics ಬಗ್ಗೆ ಖಂಡಿತ ಚರ್ಚೆ ಮಾಡುವೆನೆಂದು ನಾನು ನಿರ್ಧರಿಸಿದ್ದೆ. ಸ್ನೇಹಿತರೇ, ಗಣಿತಶಾಸ್ತ್ರವು ಎಂತಹ ವಿಷಯವೆಂದರೆ, ಅದರ ಬಗ್ಗೆ ಭಾರತೀಯರಾದ ನಮಗೆ ಅದು ಹೆಚ್ಚು ಸಹಜವಾಗಬೇಕು. ಏಕೆಂದರೆ, ಗಣಿತಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತಿಗೆ ಹೆಚ್ಚಿನ ಸಂಶೋಧನೆ ಮತ್ತು ಕೊಡುಗೆಯನ್ನು ಭಾರತೀಯರೇ ನೀಡಿದ್ದಾರೆ. ಸೊನ್ನೆ ಅಂದರೆ ಝೀರೊ, ಇದರ ಆವಿಷ್ಕಾರ ಮತ್ತು ಪ್ರಾಮುಖ್ಯದ ಬಗ್ಗೆ ನೀವು ಸಾಕಷ್ಟು ಕೇಳಿರಲೂಬಹುದು. ಇದನ್ನೂ ನೀವು ಕೇಳಿರಬಹುದು, ಸೊನ್ನೆಯನ್ನು ಕಂಡುಹಿಡಿಯಲಾಗದಿದ್ದರೆ, ಬಹುಶಃ ನಾವು, ಪ್ರಪಂಚದ ಇಷ್ಟೊಂದು ವೈಜ್ಞಾನಿಕ ಉನ್ನತಿಯನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕಲನಶಾಸ್ತ್ರದಿಂದ ಕಂಪ್ಯೂಟರ್ಗಳವರೆಗೆ - ಈ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಶೂನ್ಯದ ಅನ್ವೇಷಣೆಯನ್ನೇ ಆಧರಿಸಿವೆ. ಭಾರತದ ಗಣಿತಶಾಸ್ತ್ರಜ್ಞರು ಮತ್ತು ವಿದ್ವಾಂಸರು ಎಲ್ಲಿಯವರೆಗೆ ಬರೆದಿದ್ದಾರೆಂದರೆ -
“ಯತ್ ಕಿಂಚಿತ್ ವಸ್ತು ತತ್ ಸರ್ವಂ, ಗಣಿತೇನ ಬಿನಾ ನಹಿಂ!”
ಅಂದರೆ, ಈ ಇಡೀ ವಿಶ್ವದಲ್ಲಿ ಏನಿದೆಯೋ, ಅದೆಲ್ಲವೂ ಗಣಿತವನ್ನೇ ಅವಲಂಬಿಸಿದೆ. ನೀವು ವಿಜ್ಞಾನದ ಅಧ್ಯಯನವನ್ನು ನೆನಪಿಸಿಕೊಂಡರೆ, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ. ವಿಜ್ಞಾನದ ಪ್ರತಿಯೊಂದು ನಿಯಮವನ್ನು ಗಣಿತದ ಸೂತ್ರದಲ್ಲಿಯೇ ವಿವರಿಸಲಾಗುತ್ತದೆ. ನ್ಯೂಟನ್ ನ ನಿಯಮಗಳಾಗಿರಲಿ, ಐನ್ಸ್ಟೈನ್ನ ಪ್ರಸಿದ್ಧ ಸಮೀಕರಣವಾಗಲಿ, ಬ್ರಹ್ಮಾಂಡಕ್ಕೆ ಸಂಬಂಧಿಸಿದ ಎಲ್ಲಾ ವಿಜ್ಞಾನವೂ ಗಣಿತವೇ ಆಗಿದೆ. ಈಗಂತೂ ವಿಜ್ಞಾನಿಗಳು ಥಿಯರಿ ಆಫ್ ಎವೆರಿಥಿಂಗ್ ಬಗ್ಗೆಯೂ ಮಾತನಾಡುತ್ತಾರೆ, ಅಂದರೆ, ಬ್ರಹ್ಮಾಂಡದಲ್ಲಿ ಎಲ್ಲವನ್ನೂ ವಿವರಿಸುವಂತಹ ಏಕೈಕ ಸೂತ್ರ. ಗಣಿತದ ಸಹಾಯದಿಂದ ವೈಜ್ಞಾನಿಕ ತಿಳಿವಳಿಕೆಯ ಇಂತಹ ಹರಿವಿನ ಕಲ್ಪನೆಯನ್ನು ನಮ್ಮ ಋಷಿಮುನಿಗಳು ಆಗಲೇ ಮಾಡಿದ್ದರು. ಸೊನ್ನೆಯನ್ನು ಕಂಡುಹಿಡಿಯುವುದರ ಜೊತೆಗೆ, ನಾವು ಅನಂತತೆ ಅಂದರೆ infinite ಅನ್ನೂ ಕೂಡ ವಿವರಿಸಿದ್ದೇವೆ. ಸಾಮಾನ್ಯ ಭಾಷೆಯಲ್ಲಿ, ನಾವು ಸಂಖ್ಯೆಗಳ ಬಗ್ಗೆ ಮಾತನಾಡುವಾಗ, ನಾವು ಮಿಲಿಯನ್, ಬಿಲಿಯನ್ ಮತ್ತು ಟ್ರಿಲಿಯನ್ ಗಳವರೆಗೆ ಮಾತನಾಡುತ್ತೇವೆ ಮತ್ತು ಯೋಚಿಸುತ್ತೇವೆ. ಆದರೆ, ವೇದಗಳು ಮತ್ತು ಭಾರತೀಯ ಗಣಿತಶಾಸ್ತ್ರದಲ್ಲಿ, ಈ ಲೆಕ್ಕಾಚಾರವು ಮತ್ತಷ್ಟು ಹೆಚ್ಚು ಮುಂದಕ್ಕೆ ಹೋಗುತ್ತದೆ. ನಮ್ಮಲ್ಲಿ ಬಹಳ ಹಳೆಯ ಶ್ಲೋಕವೊಂದು ಪ್ರಚಲಿತದಲ್ಲಿದೆ -
ಎಕಂ ದಶಂ ಶತಂ ಚೈವ, ಸಹಸ್ರಮ್ ಅಯುತಂ ತಥಾ |
ಲಕ್ಷಂ ಚ ನಿಯುತಂ ಚೈವ, ಕೋಟಿ: ಅರ್ಬುದಮ್ ಎವ ಚ ||
ವೃಂದಂ ಖರ್ವೋ ನಿಖರ್ವ್: ಚ, ಶಂಖ: ಪದ್ಮ: ಚ ಸಾಗರ: |
ಅಂತ್ಯಂ ಮಧ್ಯಂ ಪರಾರ್ಧ: ಚ, ದಶ ವೃಧ್ಯಾ ಯಥಾ ಕ್ರಮಮ್ ||
ಈ ಶ್ಲೋಕದಲ್ಲಿ ಸಂಖ್ಯೆಗಳ ಕ್ರಮವನ್ನು ವಿವರಿಸಲಾಗಿದೆ. ಹೇಗೆಂದರೆ -
ಒಂದು, ಹತ್ತು, ನೂರು, ಸಾವಿರ ಮತ್ತು ಅಯುತ!
ಲಕ್ಷ, ನಿಯುತ್ ಮತ್ತು ಕೋಟಿ.
ಇದೇರೀತಿ ಈ ಸಂಖ್ಯೆಗಳು ಮುಂದುವರಿಯುತ್ತವೆ - ಶಂಖ, ಪದ್ಮ ಮತ್ತು ಸಾಗರದವರೆಗೆ. ಒಂದು ಸಾಗರದ ಅರ್ಥವೆಂದರೆ 10 (57). ಇಷ್ಟೇ ಅಲ್ಲ, ಇದರ ನಂತರವೂ ಓಘ್ ಮತ್ತು ಮಹೋಘ್ ನಂತಹ ಸಂಖ್ಯೆಗಳಿರುತ್ತವೆ. ಒಂದು ಮಹೋಘ ಎಂದರೆ - 10 (62) ಕ್ಕೆ ಸಮನಾಗಿರುತ್ತದೆ, ಅಂದರೆ, ಒಂದರ ಮುಂದೆ 62 ಸೊನ್ನೆಗಳು, ಅರವತ್ತೆರಡು ಸೊನ್ನೆಗಳು. ನಾವು ಮನಸ್ಸಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ, ಆದರೆ, ಭಾರತೀಯ ಗಣಿತಶಾಸ್ತ್ರದಲ್ಲಿ, ಇವುಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ನಾನು ಇಂಟೆಲ್ ಕಂಪನಿಯ ಸಿಇಒ ಅವರನ್ನು ಭೇಟಿಯಾಗಿದ್ದೆ. ಅವರು ನನಗೆ ಒಂದು ವರ್ಣಚಿತ್ರವನ್ನು ನೀಡಿದ್ದರು, ಅದರಲ್ಲಿ ವಾಮನ ಅವತಾರದ ಮೂಲಕ ಅಂತಹ ಒಂದು ಭಾರತೀಯ ಲೆಕ್ಕಾಚಾರ ಅಥವಾ ಅಳತೆಯ ವಿಧಾನವನ್ನು ಚಿತ್ರಿಸಲಾಗಿದೆ. ಇಂಟೆಲ್ ಹೆಸರು ಕೇಳಿದ ತಕ್ಷಣ ನಿಮಗೆ ತಾನಾಗಿಯೇ ಕಂಪ್ಯೂಟರ್ ನೆನಪಾಗಿರಬಹುದು. ಕಂಪ್ಯೂಟರಿನ ಭಾಷೆಯಲ್ಲಿ Binary ಪದ್ಧತಿಯ ಬಗ್ಗೆಯೂ ನೀವು ಕೇಳಿರಬಹುದು, ಆದರೆ ಆಚಾರ್ಯ ಪಿಂಗಳಾರಂತಹ ಋಷಿಗಳು ನಮ್ಮ ದೇಶದಲ್ಲಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಇವರು Binary ಪದ್ಧತಿಯನ್ನು ಕಂಡುಹಿಡಿದಿದ್ದರು. ಇದೇ ರೀತಿ ಆರ್ಯಭಟ್ಟರಿಂದ ಹಿಡಿದು ರಾಮಾನುಜನ್ ರಂತಹ ಗಣಿತಶಾಸ್ತ್ರಜ್ಞರವರೆಗೂ, ನಮ್ಮಲ್ಲಿ ಗಣಿತದ ಹಲವಾರು ಸಿದ್ಧಾಂತಗಳ ಮೇಲೆ, ಕೆಲಸಗಳು ನಡೆದಿವೆ.
ಸ್ನೇಹಿತರೇ, ಭಾರತೀಯರಾದ ನಮಗೆ ಗಣಿತವು ಎಂದಿಗೂ ಕಷ್ಟದ ವಿಷಯವಾಗಿರಲಿಲ್ಲ, ಇದಕ್ಕೆ ನಮ್ಮ ವೈದಿಕ ಗಣಿತವೇ ದೊಡ್ಡ ಕಾರಣ. ಆಧುನಿಕ ಕಾಲದಲ್ಲಿ ವೈದಿಕ ಗಣಿತದ ಶ್ರೇಯಸ್ಸು ಶ್ರೀ ಭಾರತೀ ಕೃಷ್ಣ ತೀರ್ಥ ಜಿ ಮಹಾರಾಜರಿಗೆ ಸಲ್ಲುತ್ತದೆ. ಇವರು ಲೆಕ್ಕಾಚಾರದ ಪ್ರಾಚೀನ ವಿಧಾನಗಳನ್ನು ಪುನರುಜ್ಜೀವಗೊಳಿಸಿ, ಅದಕ್ಕೆ ವೈದಿಕ ಗಣಿತ ಎಂದು ಹೆಸರಿಸಿದರು. ವೈದಿಕ ಗಣಿತದ ಪ್ರಾಮುಖ್ಯ ಎಂದರೆ ಇದರ ಮೂಲಕ ನೀವು ಅತ್ಯಂತ ಕಿಷ್ಟಕರವಾದ ಲೆಕ್ಕಾಚಾರಗಳನ್ನು ಸಹ ಕಣ್ಣು ಮಿಟುಕಿಸುವುದರಲ್ಲಿ ಮನಸ್ಸಿನಲ್ಲಿಯೇ ಮಾಡಬಹುದು. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನೇಕ ಯುವಕರು ವೈದಿಕ ಗಣಿತವನ್ನು ಕಲಿಯುವ ಮತ್ತು ಕಲಿಸುವ ವೀಡಿಯೊಗಳನ್ನು ನೀವು ನೋಡಿರಬೇಕು.
ಸ್ನೇಹಿತರೇ, ಇಂದು 'ಮನ್ ಕಿ ಬಾತ್' ನಲ್ಲಿ ವೈದಿಕ ಗಣಿತವನ್ನು ಕಲಿಸುವ ಇಂತಹ ಒಬ್ಬ ಸ್ನೇಹಿತರು ನಮ್ಮೊಂದಿಗೆ ಇದ್ದಾರೆ. ಇವರು ಕೋಲ್ಕತ್ತಾದ ಗೌರವ್ ಟೆಕರೀವಾಲ್ ರವರು. ಕಳೆದ ಎರಡು-ಎರಡೂವರೆ ದಶಕಗಳಿಂದ, ವೈದಿಕ ಗಣಿತದ ಆಂದೋಲನವನ್ನು ಬಹಳ ಸಮರ್ಪಣೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ಬನ್ನಿ, ಅವರೊಂದಿಗೆ ಮಾತನಾಡೋಣ…
ಮೋದಿ ಜಿ - ಗೌರವ್ ಜಿ ನಮಸ್ತೆ!
ಗೌರವ್ - ನಮಸ್ತೆ ಸರ್!
ಮೋದಿ ಜೀ - ನಿಮಗೆ ವೈದಿಕ ಗಣಿತದಲ್ಲಿ ಬಹಳ ಆಸಕ್ತಿ ಇರುವುದಾಗಿಯೂ, ಈ ಬಗ್ಗೆ ಬಹಳಷ್ಟು ಕೆಲಸ ಮಾಡಿರುವುದಾಗಿಯೂ ನಾನು ಕೇಳಿದ್ದೇನೆ. ಆದ್ದರಿಂದ ಮೊದಲು ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳ ಬಯಸುತ್ತೇನೆ ಹಾಗೂ ನೀವು ಈ ವಿಷಯದಲ್ಲಿ ಹೇಗೆ ಆಸಕ್ತಿ ತಾಳಿದ್ದೀರಿ, ನನಗೆ ಹೇಳಿ?
ಗೌರವ್ - ಸರ್, ಇಪ್ಪತ್ತು ವರ್ಷಗಳ ಹಿಂದೆ ನಾನು ಬಿಸಿನೆಸ್ ಸ್ಕೂಲ್ಗೆ ಅರ್ಜಿ ಸಲ್ಲಿಸುವಾಗ, ಅದರಲ್ಲಿ CAT ಎಂಬ ಸ್ಪರ್ಧಾತ್ಮಕ ಪರೀಕ್ಷೆ ಇತ್ತು. ಅದರಲ್ಲಿ ಗಣಿತದ ಹಲವಾರು ಪ್ರಶ್ನೆಗಳಿರುತ್ತಿದ್ದವು. ಅವುಗಳನ್ನು ಕಡಿಮೆ ಸಮಯದಲ್ಲಿ ಮಾಡಬೇಕಿತ್ತು. ಆಗ ನನ್ನ ತಾಯಿ ನನಗೆ ವೈದಿಕ ಗಣಿತ ಎಂಬ ಪುಸ್ತಕವನ್ನು ತಂದು ಕೊಟ್ಟರು. ಸ್ವಾಮಿ ಶ್ರೀ ಭಾರತೀಕೃಷ್ಣ ತೀರ್ಥ ಜಿ ಮಹಾರಾಜರು ಆ ಪುಸ್ತಕವನ್ನು ಬರೆದಿದ್ದರು. ಮತ್ತು ಅದರಲ್ಲಿ ಅವರು 16 ಸೂತ್ರಗಳನ್ನು ನೀಡಿದ್ದರು. ಇದರಲ್ಲಿ ಗಣಿತವು ತುಂಬಾ ಸರಳ ಮತ್ತು ವೇಗವಾಗಿರುತ್ತದೆ. ಅದನ್ನು ಓದಿದಾಗ ನನಗೆ ಬಹಳ ಪ್ರೇರಣೆ ದೊರೆಯಿತು ಮತ್ತು ನಂತರ ಗಣಿತದಲ್ಲಿ ನನ್ನ ಆಸಕ್ತಿಯು ಜಾಗೃತವಾಯಿತು. ಭಾರತದ ಕೊಡುಗೆಯಾದ, ನಮ್ಮ ಪರಂಪರೆಯಾಗಿರುವ ಈ ವಿಷಯವನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ಅಂದಿನಿಂದ ನಾನು ವೈದಿಕ ಗಣಿತವನ್ನು ಪ್ರಪಂಚದ ಮೂಲೆ ಮೂಲೆಗಳಿಗೆ ತಲುಪಿಸುವ ಗುರಿಯನ್ನು ಹೊಂದಿದ್ದೇನೆ. ಏಕೆಂದರೆ ಗಣಿತದ ಭಯ ಎಲ್ಲರನ್ನೂ ಕಾಡುತ್ತದೆ. ಮತ್ತು ವೈದಿಕ ಗಣಿತಕ್ಕಿಂತ ಸರಳವಾದದ್ದು ಮತ್ತಿನ್ನೇನಿದೆ?
ಮೋದಿ ಜೀ - ಗೌರವ್ ಜೀ ನೀವು ಎಷ್ಟು ವರ್ಷಗಳಿಂದ ಇದರಲ್ಲಿ ಕೆಲಸ ಮಾಡುತ್ತಿದ್ದೀರಿ?
ಗೌರವ್ - ನನಗೆ ಇಂದಿಗೆ ಸುಮಾರು 20 ವರ್ಷಗಳಾದವು ಸರ್! ನಾನು ಇದರಲ್ಲಿಯೇ ತೊಡಗಿಸಿಕೊಂಡಿದ್ದೇನೆ.
ಮೋದಿ ಜೀ - ಈ ಬಗ್ಗೆ ಜಾಗೃತಿಗಾಗಿ ಏನು ಮಾಡುತ್ತಿರಿ, ಯಾವ ಪ್ರಯೋಗಗಳನ್ನು ಮಾಡುತ್ತೀರಿ, ಜನರ ಬಳಿ ಹೇಗೆ ಹೋಗುತ್ತೀರಿ?
ಗೌರವ್ - ನಾವು ಶಾಲೆಗಳಿಗೆ ಹೋಗುತ್ತೇವೆ, ನಾವು ಆನ್ಲೈನ್ ಶಿಕ್ಷಣವನ್ನು ನೀಡುತ್ತೇವೆ. ನಮ್ಮ ಸಂಸ್ಥೆಯ ಹೆಸರು ವೇದಿಕ್ ಮ್ಯಾಥ್ಸ್ ಫೋರಮ್ ಇಂಡಿಯಾ. ಈ ಸಂಸ್ಥೆಯ ಅಡಿಯಲ್ಲಿ ಇಂಟರ್ನೆಟ್ ಮೂಲಕ ದಿನದ 24 ಗಂಟೆಯೂ ವೈದಿಕ ಗಣಿತವನ್ನು ಕಲಿಸುತ್ತೇವೆ ಸರ್!
ಮೋದಿ ಜೀ - ಗೌರವ್ ಜೀ, ನಿಮಗೆ ತಿಳಿದಿರಬಹುದು, ನಾನು ಯಾವಾಗಲೂ ಮಕ್ಕಳೊಂದಿಗೆ ಮಾತನಾಡಲು ಇಷ್ಟಪಡುತ್ತೇನೆ ಮತ್ತು ನಾನು ಅವಕಾಶಗಳಿಗಾಗಿ ಕಾಯುತ್ತಿರುತ್ತೇನೆ. ಮತ್ತು ಎಕ್ಸಾಂ ವಾರಿಯರ್ ಮೂಲಕ, ನಾನು ಅದನ್ನು ಒಂದು ರೀತಿಯಲ್ಲಿ ಸಾಂಸ್ಥಿಕಗೊಳಿಸಿದ್ದೇನೆ ಮತ್ತು ನಾನು ಮಕ್ಕಳೊಂದಿಗೆ ಮಾತನಾಡುವಾಗ ನನಗೆ ತಿಳಿದದ್ದು, ಅವರು ಗಣಿತದ ಹೆಸರು ಕೇಳಿದರೆ ಸಾಕು ಓಡಿಹೋಗುತ್ತಾರೆ ಮತ್ತು ಎಲ್ಲೆಡೆ ಹರಡಿರುವ ಈ ಭಯವನ್ನು ಹೋಗಲಾಡಿಸಬೇಕು ಎನ್ನುವುದೇ ನನ್ನ ಪ್ರಯತ್ನವಾಗಿದೆ. ಈ ಭಯವನ್ನು ಹೋಗಲಾಡಿಸಬೇಕು. ಸಂಪ್ರದಾಯದಿಂದ ಬಂದ ಸಣ್ಣ ತಂತ್ರಗಳಿಂದ. ಇದು ಗಣಿತದ ವಿಷಯದಲ್ಲಿ ಭಾರತಕ್ಕೆ ಹೊಸದೇನಲ್ಲ.. ಬಹುಶಃ ಪ್ರಪಂಚದ ವಿವಿಧ ಪ್ರಾಚೀನ ಸಂಪ್ರದಾಯಗಳಲ್ಲಿ ಭಾರತ ಗಣಿತದ ಸಂಪ್ರದಾಯವನ್ನು ಹೊಂದಿದೆ, ಆದ್ದರಿಂದ ಪರೀಕ್ಷಾ ಯೋಧರು ಭಯವನ್ನು ದೂಡಬೇಕೆಂದರೆ ನೀವು ಅವರಿಗೆ ಏನು ಹೇಳಬಯಸುತ್ತೀರಿ?
ಗೌರವ್ - ಸರ್, ಇದು ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಿದೆ, ಏಕೆಂದರೆ, ಪರೀಕ್ಷೆಯ ಕಾಲ್ಪನಿಕ ಭಯವು ಪ್ರತಿ ಮನೆಯಲ್ಲೂ ಬಂದು ಬಿಟ್ಟಿದೆ. ಪರೀಕ್ಷೆಗಾಗಿ ಮಕ್ಕಳು ಟ್ಯೂಷನ್ ತೆಗೆದುಕೊಳ್ಳುತ್ತಾರೆ, ಪೋಷಕರು ಆತಂಕಗೊಂಡಿರುತ್ತಾರೆ. ಶಿಕ್ಷಕರೂ ಕೂಡ ಆತಂಕಗೊಂಡಿರುತ್ತಾರೆ. ಆದರೆ ವೈದಿಕ ಗಣಿತದಿಂದ ಇದೆಲ್ಲವೂ ಛೂಮಂತ್ರವಾಗುತ್ತದೆ. ಈ ಸಾಮಾನ್ಯ ಗಣಿತಕ್ಕಿಂತ ವೈದಿಕ ಗಣಿತವು ಶೇಕಡ ಸಾವಿರದೈದುನೂರು ಪಟ್ಟು ವೇಗವಾಗಿದೆ ಮತ್ತು ಇದು ಮಕ್ಕಳಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತದೆ ಹಾಗೂ ಬುದ್ಧಿಯೂ ವೇಗವಾಗಿ ಓಡುತ್ತದೆ. ನಾವು ವೈದಿಕ ಗಣಿತದೊಂದಿಗೆ ಯೋಗವನ್ನೂ ಪರಿಚಯಿಸಿದ್ದೇವೆ. ಇದರಿಂದ ಮಕ್ಕಳು ಕಣ್ಣು ಮುಚ್ಚಿಕೊಂಡು ಕೂಡ ವೈದಿಕ ಗಣಿತದ ವಿಧಾನದಿಂದ ಲೆಕ್ಕಗಳನ್ನು ಮಾಡಬಹುದು.
ಮೋದಿ ಜಿ - ಧ್ಯಾನದ ಸಂಪ್ರದಾಯದಲ್ಲಿಯೂ ಸಹ, ಈ ರೀತಿಯಲ್ಲಿ ಗಣಿತವನ್ನು ಮಾಡುವುದು, ಇದು ಕೂಡ ಧ್ಯಾನದ ಒಂದು ಪ್ರಾಥಮಿಕ ಕೋರ್ಸ್ ಆಗಿರುತ್ತದೆ.
ಗೌರವ್ - ಹೌದು ಸರ್!
ಮೋದಿ ಜೀ - ಗೌರವ್ ಜೀ, ನನಗೆ ಬಹಳ ಸಂತೋಷವಾಯಿತು. ನೀವು ಮಿಷನ್ ಮೋಡ್ನಲ್ಲಿ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೀರಿ. ಮತ್ತು ವಿಶೇಷವಾಗಿ ನಿಮ್ಮ ತಾಯಿಯವರು ಒಬ್ಬ ಉತ್ತಮ ಶಿಕ್ಷಕಿಯಂತೆ ನಿಮ್ಮನ್ನು ಈ ಮಾರ್ಗದಲ್ಲಿ ಕರೆದೊಯ್ದಿದ್ದಾರೆ. ಇಂದು ನೀವು ಲಕ್ಷಾಂತರ ಮಕ್ಕಳನ್ನು ಆ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದೀರಿ. ನಿಮಗೆ ನನ್ನ ಶುಭ ಹಾರೈಕೆಗಳು.
ಗೌರವ್ - ಧನ್ಯವಾದಗಳು ಸರ್! ನಾನು ನಿಮಗೆ ಆಭಾರಿಯಾಗಿದ್ದೇನೆ ಸರ್! ವೈದಿಕ ಗಣಿತಕ್ಕೆ ಪ್ರಾಮುಖ್ಯವನ್ನು ನೀಡಿ, ನೀವು ನನ್ನನ್ನು ಆಯ್ಕೆ ಮಾಡಿದ್ದೀರಿ ಸರ್! ಆದ್ದರಿಂದ ನಾವು ತುಂಬಾ ಕೃತಜ್ಞರಾಗಿರುತ್ತೇವೆ.
ಮೋದಿಜಿ - ತುಂಬಾ ಧನ್ಯವಾದಗಳು. ನಮಸ್ಕಾರ |
ಗೌರವ್ - ನಮಸ್ತೆ ಸರ್.
ಸ್ನೇಹಿತರೇ, ಗೌರವ್ ರವರು ಬಹಳ ಚೆನ್ನಾಗಿ ವಿವರಿಸಿದರು. ವೈದಿಕ ಗಣಿತವು, ಗಣಿತವನ್ನು ಹೇಗೆ ಕ್ಲಿಷ್ಟದಿಂದ ಇಷ್ಟ ಪಡುವಂತೆ ಮಾಡುತ್ತದೆ ಎಂಬುದನ್ನು. ಇಷ್ಟೇ ಅಲ್ಲ, ನೀವು ವೈದಿಕ ಗಣಿತದ ಮೂಲಕ ದೊಡ್ಡ ವೈಜ್ಞಾನಿಕ ಸಮಸ್ಯೆಗಳನ್ನು ಸಹ ಪರಿಹರಿಸಬಹುದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ವೈದಿಕ ಗಣಿತವನ್ನು ಕಲಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುವುದಲ್ಲದೆ, ಅವರ ಮೆದುಳಿನ ವಿಶ್ಲೇಷಣಾತ್ಮಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೆ ಗಣಿತದ ಬಗ್ಗೆ ಕೆಲವು ಮಕ್ಕಳಲ್ಲಿ ಏನೇ ಚಿಕ್ಕ ಭಯವಿದ್ದರೂ, ಆ ಭಯವೂ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನ್ ಕಿ ಬಾತ್' ನಲ್ಲಿ, ಮ್ಯೂಸಿಯಂನಿಂದ ಹಿಡಿದು ಗಣಿತದವರೆಗೆ ಅನೇಕ ಮಾಹಿತಿಯುಕ್ತ ವಿಷಯಗಳನ್ನು ಚರ್ಚಿಸಲಾಗಿದೆ. ನಿಮ್ಮ ಸಲಹೆಗಳಿಂದಾಗಿ ಈ ಎಲ್ಲಾ ವಿಷಯಗಳು 'ಮನ್ ಕಿ ಬಾತ್' ನ ಭಾಗವಾಗುತ್ತವೆ. ಇದೇ ರೀತಿ, ನಿಮ್ಮ ಸಲಹೆಗಳನ್ನು ಮುಂದೆಯೂ ನನಗೆ ನಮೋ ಆಪ್ ಮತ್ತು MyGov ಮೂಲಕ ಕಳುಹಿಸುತ್ತಿರಿ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಈದ್ ಹಬ್ಬ ಬರಲಿದೆ. ಮೇ 3 ರಂದು ಅಕ್ಷಯ ತೃತೀಯ ಮತ್ತು ಭಗವಾನ್ ಪರಶುರಾಮರ ಜನ್ಮದಿನವನ್ನು ಸಹ ಆಚರಿಸಲಾಗುತ್ತದೆ. ಕೆಲವು ದಿನಗಳ ನಂತರದಲ್ಲೇ ವೈಶಾಖ ಬುದ್ಧ ಪೂರ್ಣಿಮೆಯ ಹಬ್ಬವೂ ಬರುತ್ತದೆ.
ಈ ಎಲ್ಲಾ ಹಬ್ಬಗಳು ಸಂಯಮ, ಪವಿತ್ರತೆ, ದಾನ ಮತ್ತು ಸಾಮರಸ್ಯದ ಹಬ್ಬಗಳಾಗಿವೆ. ನಿಮ್ಮೆಲ್ಲರಿಗೂ ಮುಂಚಿತವಾಗಿ ಈ ಎಲ್ಲ ಹಬ್ಬಗಳಿಗೆ ಶುಭಾಶಯಗಳು. ಈ ಹಬ್ಬಗಳನ್ನು ಬಹಳ ಸಂತೋಷದಿಂದ ಮತ್ತು ಸಾಮರಸ್ಯದಿಂದ ಆಚರಿಸಿ. ಇದೆಲ್ಲದರ ನಡುವೆಯೂ ನೀವು ಕೊರೊನಾ ಬಗ್ಗೆ ಎಚ್ಚರದಿಂದಿರಬೇಕು. ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈಗಳನ್ನು ತೊಳೆಯುವುದು, ತಡೆಗಟ್ಟುವಿಕೆಗೆ ಅಗತ್ಯವಾದ ಕ್ರಮಗಳೆಲ್ಲವನ್ನೂ ನೀವು ಪಾಲಿಸುತ್ತಿರಿ. ಮುಂದಿನ ಬಾರಿ 'ಮನ್ ಕಿ ಬಾತ್' ನಲ್ಲಿ ನಾವು ಮತ್ತೊಮ್ಮೆ ಭೇಟಿಯಾಗೋಣ ಹಾಗೂ ನೀವು ಕಳುಹಿಸಿದ ಇನ್ನಷ್ಟು ಹೊಸ ವಿಷಯಗಳ ಬಗ್ಗೆ ಚರ್ಚಿಸೋಣ - ಅಲ್ಲಿಯವರೆಗೆ ವಿದಾಯ ಹೇಳೋಣ. ಬಹಳ ಬಹಳ ಧನ್ಯವಾದಗಳು.
ನನ್ನ ಪ್ರಿಯ ದೇಶಬಾಂಧವರೆ, ಕಳೆದ ವಾರ ನಾವು ಮಾಡಿದ ಸಾಧನೆ ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಭಾರತ ಕಳೆದ ವಾರ 400 ಶತಕೋಟಿ ಡಾಲರ್ ಅಂದರೆ 30 ಲಕ್ಷಕೋಟಿ ರೂಪಾಯಿಗಳ ರಫ್ತಿನ ಗುರಿಯನ್ನು ಸಾಧಿಸಿದೆ ಎಂದು ನೀವು ಕೇಳಿರಬಹುದು. ಮೊದಲ ಬಾರಿಗೆ ಕೇಳಿದಾಗ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಷಯ ಅನ್ನಿಸಬಹುದು. ಆದರೆ ಇದು ಅರ್ಥವ್ಯವಸ್ಥೆಗೂ ಮೀರಿ ಭಾರತದ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಒಂದು ಕಾಲದಲ್ಲಿ ಭಾರತದ ರಫ್ತಿನ ಅಂಕಿ ಸಂಖ್ಯೆ ಕೆಲವೊಮ್ಮೆ 100 ಶತಕೋಟಿ ಇನ್ನು ಕೆಲವೊಮ್ಮೆ 150 ಶತಕೋಟಿ 200 ಶತಕೋಟಿವರೆಗೂ ತಲುಪುತ್ತಿತ್ತು. ಈಗ ಭಾರತ 400 ಶತಕೋಟಿ ಡಾಲರ್ ತಲುಪಿದೆ. ಇದರರ್ಥ ವಿಶ್ವಾದ್ಯಂತ ಭಾರತದಲ್ಲಿ ತಯಾರಿಸಲಾದ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮತ್ತೊಂದು ಅರ್ಥ ಸರಬರಾಜು ಸರಪಳಿ ದಿನೇ ದಿನೇ ಸಶಕ್ತಗೊಳ್ಳುತ್ತಿದೆ. ಇದರ ಹಿಂದೆ ಒಂದು ಪ್ರಮುಖ ಸಂದೇಶವೂ ನೀಡುತ್ತಿದೆ. ಕನಸುಗಳಿಗಿಂತ ಹಿರಿದಾದ ಸಂಕಲ್ಪವಿದ್ದಾಗ ದೇಶ ಬೃಹತ್ ಹೆಜ್ಜೆಯನ್ನು ಇಡುತ್ತದೆ. ಸಂಕಲ್ಪಗಳ ಪೂರೈಕೆಗೆ ಹಗಲಿರುಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಆ ಸಂಕಲ್ಪಗಳನ್ನು ಸಾಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲೂ ಹೀಗೆಯೇ ಆಗುವುದನ್ನು ನೀವು ಕಾಣಬಹುದು. ಯಾರದೇ ಸಂಕಲ್ಪ, ಪ್ರಯತ್ನಗಳು ಅವರ ಕನಸುಗಳನ್ನು ಮೀರಿ ಬೆಳೆಯುತ್ತವೆಯೋ ಆಗ ಸಫಲತೆ ಆತನ ಬಳಿ ತಾನಾಗೇ ಅರಸಿ ಬರುತ್ತದೆ.
ಸ್ನೇಹಿತರೆ, ದೇಶದ ಮೂಲೆಮೂಲೆಗಳಿಂದ ಹೊಸ ಹೊಸ ಉತ್ಪನ್ನಗಳು ವಿದೇಶಕ್ಕೆ ತೆರಳುವಾಗ ಅಸ್ಸಾಂನ ಹೈಲಾಕಾಂಡಿಯ ಚರ್ಮದ ಉತ್ಪನ್ನಗಳಾಗಿರಲಿ, ಉಸ್ಮಾನಾಬಾದ್ ನ ಕೈಮಗ್ಗ ಉತ್ಪನ್ನಗಳೇ ಆಗಿರಲಿ, ಬೀಜಾಪುರದ ಹಣ್ಣು ತರಕಾರಿಗಳಾಗಲಿ ಅಥವಾ ಚಂದೌಲಿಯ ಕಪ್ಪು ಅಕ್ಕಿಯಾಗಲಿ ಎಲ್ಲದರ ರಫ್ತು ಹೆಚ್ಚುತ್ತಿದೆ. ಈಗ ನಿಮಗೆ ಲದ್ದಾಖ್ ನ ವಿಶ್ವ ಪ್ರಸಿದ್ಧ ಎಪ್ರಿಕಾಟ್ (ಅಕ್ರೋಟ್) ದುಬೈನಲ್ಲೂ ಲಭ್ಯ. ಸೌದಿ ಅರೇಬಿಯಾದಲ್ಲಿ ತಮಿಳುನಾಡಿನಿಂದ ರಫ್ತಾದ ಬಾಳೆಹಣ್ಣು ಸಿಗುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಹೊಸ ಹೊಸ ಉತ್ಪನ್ನಗಳನ್ನು ಹೊಸ ಹೊಸ ದೇಶಗಳಿಗೆ ರಫ್ತು ಮಾಡುತ್ತಿರುವುದೇ ಮಹತ್ವದ ಸಂಗತಿ. ಹಿಮಾಚಲ್, ಉತ್ತರಾಖಂಡ್ ನಲ್ಲಿ ಬೆಳೆದ ಸಿರಿಧಾನ್ಯದ ಗುಜರಾತ್ ನಿಂದ ಮೊದಲ ಕಂತಿನ ಸರಕನ್ನು ಡೆನ್ಮಾರ್ಕ್ ಗೆ ರವಾನಿಸಲಾಗಿದೆ. ಆಂಧ್ರಪ್ರದೇಶದ ಕೃಷ್ಣಾ ಮತ್ತು ಚಿತ್ತೂರ ಜಿಲ್ಲೆಯ ಬೈಗನಪಲ್ಲಿ ಮತ್ತು ಸುವರ್ಣ ರೇಖಾ ಮಾವನ್ನು ದಕ್ಷಿಣ ಕೋರಿಯಾಗೆ ರಫ್ತು ಮಾಡಲಾಗಿದೆ. ತ್ರಿಪುರಾದಿಂದ ತಾಜಾ ಹಲಸನ್ನು ಲಂಡನ್ ಗೆ ವಾಯು ಮಾರ್ಗವಾಗಿ ರಫ್ತು ಮಾಡಲಾಗಿದೆ. ಅಲ್ಲದೆ ಪ್ರಥಮ ಬಾರಿಗೆ ನಾಗಾಲ್ಯಾಂಡ್ ನ ರಾಜಾ ಮೆಣಸಿನಕಾಯಿಯನ್ನು ಲಂಡನ್ ಗೆ ಕಳುಹಿಸಲಾಗಿದೆ. ಇದೇ ರೀತಿ ಭಾಲಿಯಾ ಗೋಧಿಯ ಪ್ರಥಮ ಕಂತನ್ನು ಗುಜರಾತ್ ನಿಂದ ಕೀನ್ಯಾ ಮತ್ತು ಶ್ರೀಲಂಕಾಗೆ ರಫ್ತು ಮಾಡಲಾಗಿದೆ. ಅಂದರೆ ನೀವೀಗ ಬೇರೆ ದೇಶಗಳಿಗೆ ಹೋದಾಗ ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಹಿಂದಿಗಿಂತ ಅತಿ ಹೆಚ್ಚು ಕಾಣಸಿಗುತ್ತವೆ.
ಸ್ನೇಹಿತರೆ, ಈ ಪಟ್ಟಿ ಬಹಳ ದೊಡ್ಡದಾಗಿದೆ. ಇದು ಎಷ್ಟು ದೊಡ್ಡದಾಗಿದೆಯೋ ಮೇಕ್ ಇನ್ ಇಂಡಿಯಾ ಶಕ್ತಿಯೂ ಅಷ್ಟೇ ಪ್ರಬಲವಾಗಿದೆ. ಬೃಹತ್ ಭಾರತದ ಸಾಮರ್ಥ್ಯವೂ ಅಷ್ಟೇ ಬಲವಾಗಿದೆ. ಅಲ್ಲದೆ ಸಾಮರ್ಥ್ಯದ ಆಧಾರ – ನಮ್ಮ ಕೃಷಿಕರು, ನಮ್ಮ ಕುಶಲಕರ್ಮಿಗಳು, ನಮ್ಮ ನೇಕಾರರು, ನಮ್ಮ ಇಂಜಿನಿಯರುಗಳು, ನಮ್ಮ ಉದ್ಯಮಿಗಳು, ನಮ್ಮ ಎಂ ಎಸ್ ಎಂ ಇ ಕ್ಷೇತ್ರ ಮತ್ತು ಅನೇಕ ಭಿನ್ನ ಭಿನ್ನ ವೃತ್ತಿಗಳಲ್ಲಿ ತೊಡಗಿರುವ ಸಾವಿರಾರು ಜನರು. ಇವರೆಲ್ಲರೂ ನಿಜವಾದ ಶಕ್ತಿಯಾಗಿದ್ದಾರೆ. ಇವರ ಪರಿಶ್ರಮದಿಂದಲೇ 400 ಶತಕೋಟಿ ಡಾಲರ್ ರಫ್ತಿನ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಅಲ್ಲದೆ ಭಾರತದ ಜನತೆಯ ಈ ಸಾಮರ್ಥ್ಯ ವಿಶ್ವದ ಮೂಲೆ ಮೂಲೆಗಳಿಗೆ ಮತ್ತು ಹೊಸ ಮಾರುಕಟ್ಟೆಗಳಿಗೆ ತಲುಪುತ್ತಿದೆ ಎಂಬುದು ನನಗೆ ಸಂತೋಷವನ್ನು ನೀಡುತ್ತದೆ. ಭಾರತದ ಪ್ರತಿಯೊಬ್ಬ ನಿವಾಸಿ ಸ್ಥಳೀಯ ವಸ್ತುಗಳಿಗಾಗಿ ಧ್ವನಿಯಾಗುತ್ತಾನೆಯೋ ಆಗ ಸ್ಥಳೀಯ ವಸ್ತುಗಳು ಜಾಗತಿಕ ಮಟ್ಟ ತಲುಪುವುದು ತಡವಾಗುವುದಿಲ್ಲ. ಬನ್ನಿ ಲೋಕಲ್ ಅನ್ನು ಗ್ಲೋಬಲ್ ಗೊಳಿಸೋಣ ಮತ್ತು ನಮ್ಮ ಉತ್ಪನ್ನಗಳ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸೋಣ.
ಸ್ನೇಹಿತರೆ, ‘ನಮ್ಮ ಮನದ ಮಾತಿನ ಶ್ರೋತೃಗಳಿಗೆ ಸ್ಥಳೀಯ ಮಟ್ಟದಲ್ಲಿ ನಮ್ಮ ಲಘು ಉದ್ಯಮಿಗಳ ಸಫಲತೆ ನಮಗೆ ಹೆಮ್ಮೆ ತರಲಿದೆ ಎಂದು ಕೇಳಿ ಸಂತೋಷ ಎನಿಸುತ್ತದೆ’ ಏಕೆಂದರೆ ಇಂದು ನಮ್ಮ ಲಘು ಉದ್ಯಮಿಗಳು ಸರ್ಕಾರದ ಇ-ಮಾರುಕಟ್ಟೆ ಅಂದರೆ ಜಿ ಇ ಎಂ ಮೂಲಕ ದೊಡ್ಡ ಮಟ್ಟದ ಪಾಲುದಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನದ ಮೂಲಕ ಬಹಳ ಪಾರದರ್ಶಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಜೆಮ್ ಪೋರ್ಟಲ್ ಮೂಲಕ ಸರ್ಕಾರ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸರಕನ್ನು ಖರೀದಿಸಿದೆ. ದೇಶದ ಮೂಲೆಮೂಲೆಗಳಿಂದ ಸುಮಾರು 1 ಲಕ್ಷ 25 ಸಾವಿರ ಕಿರು ಉದ್ಯಮಿಗಳು ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ದೊಡ್ಡ ಕಂಪನಿಗಳು ಮಾತ್ರ ಸರ್ಕಾರಕ್ಕೆ ತಮ್ಮ ಸರಕನ್ನು ಮಾರಾಟ ಮಾಡಬಹುದಾದಂತಹ ಒಂದು ಕಾಲವಿತ್ತು. ಆದರೆ ಈಗ ದೇಶ ಬದಲಾಗುತ್ತಿದೆ. ಹಳೆಯ ವ್ಯವಸ್ಥೆಯೂ ಬದಲಾಗಿದೆ. ಈಗ ಸಣ್ಣ ಪುಟ್ಟ ವ್ಯಾಪಾರಿಗಳು ಜೆಮ್ ಪೋರ್ಟಲ್ ಮೂಲಕ ಸರ್ಕಾರಕ್ಕೆ ತಮ್ಮ ಸರಕನ್ನು ಮಾರಾಟ ಮಾಡಬಹುದು – ಇದೇ ನವಭಾರತ. ಇದು ಕೇವಲ ದೊಡ್ಡ ದೊಡ್ಡ ಕನಸುಗಳನ್ನು ಕಾಣುವಂತೆ ಮಾಡುವುದಿಲ್ಲ ಹೊರತಾಗಿ ಹಿಂದೆ ಯಾರೂ ತಲುಪದಂತಹ ಗುರಿ ತಲುಪುವಂತೆ ಪ್ರೋತ್ಸಾಹಿಸುತ್ತದೆ. ಇದೇ ಸಾಹಸದ ಹಿನ್ನಲೆಯಲ್ಲಿ ನಾವೆಲ್ಲ ಭಾರತೀಯರೂ ಒಗ್ಗೂಡಿ ಸ್ವಾವಲಂಬಿ ಭಾರತದ ಕನಸನ್ನು ಖಂಡಿತ ಪೂರ್ತಿಗೊಳಿಸುತ್ತೇವೆ.
ನನ್ನ ಪ್ರಿಯ ದೇಶಬಾಂಧವರೆ, ಇತ್ತೀಚೆಗೆ ಜರುಗಿದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀವು ಬಾಬಾ ಶಿವಾನಂದ ಅವರನ್ನು ಖಂಡಿತ ನೋಡಿರಬಹುದು. 126 ವರ್ಷ ವಯೋಮಾನದ ಹಿರಿಯರ ಹುಮ್ಮಸ್ಸನ್ನು ಕಂಡು ನನ್ನಂತೆ ಎಲ್ಲರೂ ಆಶ್ಚರ್ಯಚಕಿತರಾಗಿರಬಹುದು. ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ನಂದಿ ಮುದ್ರೆಯಲ್ಲಿ ನಮಸ್ಕರಿಸಿದ್ದನ್ನು ನಾನು ನೋಡಿದೆ. ನಾನು ಕೂಡಾ ತಲೆ ಬಾಗಿ ಬಾಬಾ ಶಿವಾನಂದರಿಗೆ ನಮಸ್ಕರಿಸಿದೆ. 126 ರ ವಯಸ್ಸು ಮತ್ತು ಬಾಬಾ ಶಿವಾನಂದರ ದೇಹದಾರ್ಢ್ಯತೆ ಇಂದು ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿವೆ. ನಾನು ಸಾಮಾಜಿಕ ಜಾಲತಾಣದಲ್ಲಿ ಹಲವರ ವಿಡಿಯೋಗಳನ್ನು ನೋಡಿದೆ ಬಾಬಾ ಶಿವಾನಂದರು ತಮ್ಮ ಕಾಲು ಭಾಗದ ವಯೋಮಾನದವರಿಗಿಂತ ಸುದೃಢರಾಗಿದ್ದಾರೆ. ಬಾಬಾ ಶಿವಾನಂದರ ಜೀವನ ನಮಗೆಲ್ಲರಿಗೂ ಖಂಡಿತ ಪ್ರೇರಣಾದಾಯಕವಾಗಿದೆ. ಅವರ ದೀರ್ಘಾಯುಷ್ಯಕ್ಕೆ ನಾನು ಪ್ರಾರ್ಥಿಸುತ್ತೇನೆ. ಅವರಿಗೆ ಯೋಗದ ಬಗ್ಗೆ ವಿಶೇಷ ಒಲವಿದೆ ಮತ್ತು ಅವರು ಬಹಳ ಆರೋಗ್ಯವಂತ ಜೀವನ ನಡೆಸುತ್ತಾರೆ. ಜೀವೇಮ ಶರದಃ ಶತಂ
ನಮ್ಮ ಸಂಸ್ಕೃತಿಯಲ್ಲಿ ಎಲ್ಲರಿಗೆ ನೂರು ವರುಷಗಳ ಆರೋಗ್ಯಯುತ ಜೀವನದ ಹಾರೈಕೆಯನ್ನು ಮಾಡಲಾಗುತ್ತದೆ. ನಾವು ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತೇವೆ. ಇಂದು ಸಂಪೂರ್ಣ ವಿಶ್ವದಲ್ಲಿ ಆರೋಗ್ಯದ ಕುರಿತು – ಅದು ಯೋಗವಾಗಿರಲಿ ಅಥವಾ ಆಯುರ್ವೇದವಾಗಿರಲಿ ಇವುಗಳೆಡೆ ಒಲವು ಹೆಚ್ಚುತ್ತಿದೆ. ಕಳೆದ ವಾರ ಕತಾರ್ ನಲ್ಲಿ ಒಂದು ಯೋಗಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದನ್ನು ನೀವು ನೋಡಿರಬಹುದು. ಇದರಲ್ಲಿ 114 ದೇಶದ ನಾಗರಿಕರು ಪಾಲ್ಗೊಂಡು ಹೊಸ ವಿಶ್ವದಾಖಲೆಯನ್ನು ಬರೆದರು. ಇದೇ ರೀತಿ ಆಯುಷ್ ಉದ್ಯಮದ ಮಾರುಕಟ್ಟೆಯೂ ನಿರಂತರವಾಗಿ ವಿಸ್ತಾರಗೊಳ್ಳುತ್ತಿದೆ. 6 ವರ್ಷಗಳ ಹಿಂದೆ ಆಯುರ್ವೇದೀಯ ಔಷಧಿಗಳ ಮಾರುಕಟ್ಟೆ ಸುಮಾರು 22 ಸಾವಿರ ಕೋಟಿ ರೂಪಾಯಿಗಳಷ್ಟಿತ್ತು. ಇಂದು ಆಯುಷ್ ಉತ್ಪಾದನಾ ಉದ್ಯಮ ಸುಮಾರು 1 ಲಕ್ಷ 40 ಸಾವಿರ ಕೋಟಿ ರೂಪಾಯಿಗಳಷ್ಟಾಗಿದೆ. ಅಂದರೆ ಈ ಕ್ಷೇತ್ರದಲ್ಲಿ ಅವಕಾಶಗಳು ನಿರಂತರವಾಗಿ ಹೆಚ್ಚುತ್ತಿವೆ. ಸ್ಟಾರ್ಟ್ ಅಪ್ ಲೋಕದಲ್ಲೂ ಆಯುಷ್ ಆಕರ್ಷಣೆಯ ಕೇಂದ್ರವಾಗುತ್ತಿದೆ.
ಸ್ನೇಹಿತರೆ, ಆರೋಗ್ಯ ಕ್ಷೇತ್ರದ ಇನ್ನುಳಿದ ಸ್ಟಾರ್ಟ್ ಅಪ್ ಗಳ ಬಗ್ಗೆ ನಾನು ಹಿಂದೆಯೇ ಮಾತನಾಡಿದ್ದೇನೆ. ಆದರೆ ಈ ಬಾರಿ ಆಯುಷ್ ಸ್ಟಾರ್ಟ್ ಅಪ್ ಬಗ್ಗೆ ವಿಶೇಷವಾಗಿ ಮಾತನಾಡಲಿದ್ದೇನೆ. ಕಪಿವಾ ಎಂಬ ಒಂದು ಸ್ಟಾರ್ಟ್ ಅಪ್ ಇದೆ. ಇದರ ಹೆಸರಲ್ಲೇ ಇದರರ್ಥ ಅಡಗಿದೆ. ಇದರಲ್ಲಿ ಕ ಅಂದರೆ – ಕಫ, ಪಿ ಅಂದರೆ – ಪಿತ್ತ ಮತ್ತು ವಾ ಅಂದರೆ –ವಾತಾ. ಈ ಸ್ಟಾರ್ಟ್ ಅಪ್ ನಮ್ಮ ಮೂಲ ಪರಂಪರೆ ಅನುಸಾರ ಆರೋಗ್ಯಯುತ ಆಹಾರ ಸೇವನೆಯನ್ನು ಆಧರಿಸಿದೆ. ಮತ್ತೊಂದು ಸ್ಟಾರ್ಟ್ ಅಪ್ – ನಿರೋಗ್ ಸ್ಟ್ರೀಟ್ ಕೂಡ ಇದೆ. ಆಯುರ್ವೇದ ಹೆಲ್ತ್ ಕೇರ್ ಇಕೊಸಿಸ್ಟಂನಲ್ಲಿ ಇದೊಂದು ವಿಶಿಷ್ಟ ಉಪಕ್ರಮವಾಗಿದೆ. ಇದರ ತಂತ್ರಜ್ಞಾನ ಆಧಾರಿತ ವೇದಿಕೆ ವಿಶ್ವಾದ್ಯಂತದ ಆಯುರ್ವೇದ ತಜ್ಞರ ಸಂಪರ್ಕವನ್ನು ನೇರವಾಗಿ ಜನರಿಗೆ ಒದಗಿಸುತ್ತದೆ. 50 ಸಾವಿರಕ್ಕೂ ಹೆಚ್ಚು ತಜ್ಞರು ಇದರೊಂದಿಗೆ ಕೈಜೋಡಿಸಿದ್ದಾರೆ. ಇದೇ ರೀತಿ ಆತ್ರೇಯ ಇನ್ನೊವೇಶನ್ಸ್ ಒಂದು ಆರೋಗ್ಯ ರಕ್ಷಣಾ ತಂತ್ರಜ್ಞಾನವಾಗಿದೆ. ಇದು ಸಮಗ್ರ ಸ್ವಾಸ್ಥ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇಕ್ಸೊರಿಯಲ್ ಕೇವಲ ಅಶ್ವಗಂಧದ ಉಪಯೋಗದ ಬಗ್ಗೆ ಅರಿವು ಮೂಡಿಸುವುದಲ್ಲದೆ ಅತ್ಯುತ್ತಮ ಗುಣಮಟ್ಟದ ಉತ್ಪಾದನಾ ಪ್ರಕ್ರಿಯೆಯಲ್ಲೂ ಬೃಹತ್ ಪ್ರಮಾಣದ ಹೂಡಿಕೆ ಮಾಡಿದೆ. ಕ್ಯೂರ್ ವೇದಾ ಎಂಬುದು ಗಿಡ ಮೂಲಿಕೆಗಳ ಆಧುನಿಕ ಸಂಶೋಧನೆ ಮತ್ತು ಪಾರಂಪರಿಕ ಜ್ಞಾನವನ್ನು ಮೇಳೈಸಿ ಸಮಗ್ರ ಜೀವನಕ್ಕಾಗಿ ಪೂರಕ ಆಹಾರವನ್ನು ಸಿದ್ಧಗೊಳಿಸಿದೆ.
ಸ್ನೇಹಿತರೆ, ಈಗ ನಾನು ಕೆಲವು ಹೆಸರುಗಳನ್ನು ಮಾತ್ರ ಹೆಸರಿಸಿದ್ದೇನೆ, ಈ ಪಟ್ಟಿ ತುಂಬಾ ದೊಡ್ಡದಾಗಿದೆ. ಇದು ಭಾರತದ ಯುವ ಉದ್ಯಮಿಗಳು ಮತ್ತು ಭಾರತದಲ್ಲಿಯ ಸಂಭಾವ್ಯಗಳ ಪ್ರತೀಕವಾಗಿದೆ. ಆರೋಗ್ಯ ಕ್ಷೇತ್ರದ ಸ್ಟಾರ್ಟ್ ಅಪ್ ಗಳು ಅದಲ್ಲೂ ವಿಶೇಷವಾಗಿ ಆಯುಷ್ ಸ್ಟಾರ್ಟ್ ಅಪ್ ಗಳನ್ನು ಒಂದು ವಿಷಯದ ಕುರಿತು ನಾನು ಆಗ್ರಹಿಸುತ್ತೇನೆ. ನೀವು ಆನ್ ಲೈನ್ ನಲ್ಲಿ ಯಾವುದೇ ಪೋರ್ಟಲ್ ಆರಂಭಿಸಿದರೂ ಯಾವುದೇ ವಿಷಯವಸ್ತುವನ್ನು ಸೃಷ್ಟಿಸಿದರೂ ಅದು ವಿಶ್ವ ಸಂಸ್ಥೆಯಿಂದ ಮಾನ್ಯತೆ ಪಡೆದ ಎಲ್ಲ ಭಾಷೆಗಳಲ್ಲು ಒದಗಿಸುವಂತೆ ಪ್ರಯತ್ನಿಸಿ. ವಿಶ್ವದಲ್ಲಿ ಇಂಗ್ಲೀಷ್ ನ್ನು ಅಷ್ಟಾಗಿ ಮಾತನಾಡದ ಅಥವಾ ಅರ್ಥಮಾಡಿಕೊಳ್ಳದ ಬಹಳಷ್ಟು ಇಂಥ ದೇಶಗಳಿವೆ. ಆ ರಾಷ್ಟ್ರಗಳನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಉತ್ಪನ್ನಗಳ ಕುರಿತಾದ ಪ್ರಚಾರ ಮತ್ತು ಪ್ರಸಾರ ಮಾಡಿ. ಭಾರತದ ಆಯುಷ್ ಸ್ಟಾರ್ಟ್ ಅಪ್ ಗಳು ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ಬಹುಬೇಗ ವಿಶ್ವಾದ್ಯಂತ ಜನಪ್ರಿಯಗೊಳ್ಳಲಿವೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ, ಆರೋಗ್ಯದ ನೇರ ಸಂಬಂಧ ಸ್ವಚ್ಛತೆಯೊಂದಿಗಿದೆ. ಮನದ ಮಾತಿನಲ್ಲಿ ನಾವು ಎಂದಿಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡವರು ಮಾಡಿದ ಪ್ರಯತ್ನಗಳ ಬಗ್ಗೆ ಖಂಡಿತ ಪ್ರಸ್ತಾಪಿಸುತ್ತೇವೆ. ಚಂದ್ರ ಕಿಶೋರ್ ಪಾಟೀಲ್ ಅವರು ಇಂಥ ಸ್ವಚ್ಛತಾ ಆಂದೋಲನಕಾರರಾಗಿದ್ದಾರೆ. ಇವರು ಮಹಾರಾಷ್ಟ್ರದ ನಾಸಿಕ್ ನಲ್ಲಿ ವಾಸವಾಗಿದ್ದಾರೆ. ಚಂದ್ರ ಕಿಶೋರ್ ಅವರು ಸ್ವಚ್ಛತೆ ಬಗ್ಗೆ ಬಹಳ ದೃಡವಾದ ಸಂಕಲ್ಪ ಹೊಂದಿದ್ದಾರೆ. ಅವರು ಗೋದಾವರಿ ನದಿಯ ದಡದಲ್ಲಿ ನಿಂತು ನಿರಂತರವಾಗಿ ಜನರು ನದಿಯಲ್ಲಿ ಕಸ ಕಡ್ಡಿ ಎಸೆಯದಂತೆ ಮನವರಿಕೆ ಮಾಡಿಕೊಡುತ್ತಾರೆ. ಯಾರೇ ಇಂಥ ಕೆಲಸ ಮಾಡುತ್ತಿದ್ದರೂ ತಡೆಯುತ್ತಾರೆ. ಈ ಕೆಲಸದಲ್ಲಿ ಚಂದ್ರ ಕಿಶೋರ್ ತಮ್ಮ ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಾರೆ. ಸಂಜೆವರೆಗೆ ಅವರ ಬಳಿ ಜನರು ನದಿಯಲ್ಲಿ ಎಸೆಯಲು ತಂದಿರುವಂತಹ ವಸ್ತುಗಳ ರಾಶಿಯೇ ಸಿದ್ಧವಾಗುತ್ತದೆ. ಚಂದ್ರ ಕಿಶೋರ್ ಅವರ ಈ ಪ್ರಯತ್ನ ಅರಿವು ಮೂಡಿಸುತ್ತದೆ ಮತ್ತು ಪ್ರೇರಣಾದಾಯಕವೂ ಆಗಿದೆ. ಇದೇ ರೀತಿ ಮತ್ತೊಬ್ಬ ಸ್ವಚ್ಛಾಗ್ರಹಿ ಇದ್ದಾರೆ. ಒಡಿಶಾದ ಪುರಿಯ ರಾಹುಲ್ ಮಹಾರಾಣಾ. ರಾಹುಲ್ ಪ್ರತಿ ಭಾನುವಾರ ಬೆಳಿಗ್ಗೆಯೇ ಪವಿತ್ರ ತೀರ್ಥ ಸ್ಥಳಕ್ಕೆ ತೆರಳುತ್ತಾರೆ ಮತ್ತು ಅಲ್ಲಿಯ ಪ್ಲಾಸ್ಟಿಕ್ ಕಸವನ್ನು ಆಯುತ್ತಾರೆ. ಈಗಾಗಲೇ ಅವರು ನೂರಾರು ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಸ್ವಚ್ಛಗೊಳಿಸಿದ್ದಾರೆ. ಪುರಿಯ ರಾಹುಲ್ ಗಿರಲಿ ಅಥವಾ ನಾಸಿಕ್ ನ ಚಂದ್ರ ಕಿಶೋರ್ ಆಗಿರಲಿ ಇವರೆಲ್ಲ ನಮಗೆ ಸಾಕಷ್ಟು ಕಲಿಸುತ್ತಾರೆ. ನಾಗರಿಕರಾಗಿ ನಾವು ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ. ಅದು ಸ್ವಚ್ಛತೆಯಾಗಿರಲಿ, ಪೋಷಣೆಯಾಗಿರಲಿ, ಲಸಿಕೆ ಹಾಕುವುದಾಗಿರಲಿ, ಈ ಎಲ್ಲ ಪ್ರಯತ್ನಗಳಿಂದ ಆರೋಗ್ಯವಾಗಿರಲು ಅನುಕೂಲವಾಗುತ್ತದೆ.
ನನ್ನ ಪ್ರಿಯ ದೇಶಬಾಂಧವರೆ, ಬನ್ನಿ ಕೇರಳದ ಮುಪಟ್ಟಮ್ ಶ್ರೀ ನಾರಾಯಣನ್ ಅವರ ಬಗ್ಗೆ ಮಾತನಾಡೋಣ. ಅವರು ‘ಪಾಟ್ಸ್ ಫಾರ್ ಲೈಫ್’ ಎಂಬ ಯೋಜನೆಯೊಂದನ್ನು ಆರಂಭಿಸಿದ್ದಾರೆ. ನೀವು ಈ ಯೋಜನೆ ಬಗ್ಗೆ ತಿಳಿದರೆ ಎಂಥ ಅದ್ಭುತ ಕೆಲಸ ಎಂದುಕೊಳ್ಳುತ್ತೀರಿ
ಸಂಗಾತಿಗಳೇ, ಮುಪಟ್ಟಮ್ ಶ್ರೀ ನಾರಾಯಣನ್ ಅವರು, ಬೇಸಿಗೆಯ ಕಾರಣದಿಂದ ಪಶು-ಪಕ್ಷಿಗಳಿಗೆ ನೀರಿನ ಅಭಾವ ಉಂಟಾಗದಿರಲಿ ಎಂದು ಮಣ್ಣಿನ ಮಡಕೆ ವಿತರಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಬೇಸಿಗೆಯಲ್ಲಿ ಪಶು-ಪಕ್ಷಿಗಳು ನೀರಿಗಾಗಿ ಎದುರಿಸುವ ತೊಂದರೆಯನ್ನು ನೋಡಿ ಅವರು ಸ್ವಯಂ ಸಮಸ್ಯೆಗೆ ಸಿಲುಕಿದಂತೆ ಚಿಂತಿತರಾಗುತ್ತಿದ್ದರು. ಬಳಿಕ, ಅವರು ತಾವೇ ಏಕೆ ಮಣ್ಣಿನಿಂದ ಮಾಡಿದ ಪಾತ್ರೆಯನ್ನು ವಿತರಿಸುವ ಕಾರ್ಯ ಶುರು ಮಾಡಬಾರದು ಎಂದು ಯೋಚಿಸಿದರು, ಆ ಮಡಕೆಗಳಲ್ಲಿ ಮತ್ತೊಬ್ಬರು ಕೇವಲ ನೀರು ತುಂಬಿಸುವ ಕೆಲಸ ಮಾಡಿದರೆ ಸಾಕು ಎಂದು ಯೋಚನೆ ಮಾಡಿದರು. ನಾರಾಯಣನ್ ಅವರಿಂದ ವಿತರಣೆಯಾದ ಮಣ್ಣಿನ ಮಡಕೆಗಳ ಸಂಖ್ಯೆ ಒಂದು ಲಕ್ಷದ ಗಡಿಯನ್ನು ದಾಟುತ್ತಿದೆ ಎಂದು ತಿಳಿದರೆ ನೀವು ಚಕಿತರಾಗುತ್ತೀರಿ. ಅಲ್ಲದೆ, ಅವರು ತಮ್ಮ ಅಭಿಯಾನದ ಅಂಗವಾಗಿ ಒಂದು ಲಕ್ಷದನೇ ಮಡಕೆಯನ್ನು ಗಾಂಧೀಜಿ ಅವರಿಂದ ಸ್ಥಾಪಿತವಾಗಿರುವ ಸಾಬರಮತಿ ಆಶ್ರಮಕ್ಕೆ ದಾನ ಮಾಡುತ್ತಿದ್ದಾರೆ. ಇಂದು ಬೇಸಿಗೆ ಕಾಲವು ಹೆಜ್ಜೆಯಿಟ್ಟಿದೆ, ಈ ಸಮಯದಲ್ಲಿ ನಾರಾಯಣನ್ ಅವರ ಈ ಕಾರ್ಯ ನಮಗೆಲ್ಲರಿಗೂ ಪ್ರೇರಣೆ ನೀಡುತ್ತದೆ ಹಾಗೂ ನಾವೂ ಈ ಬೇಸಿಗೆಯಲ್ಲಿ ನಮ್ಮ ಪಶು-ಪಕ್ಷಿ ಮಿತ್ರರಿಗಾಗಿ ನೀರಿನ ವ್ಯವಸ್ಥೆಯನ್ನು ಮಾಡೋಣ.
ಸ್ನೇಹಿತರೇ, ನಾವು ನಮ್ಮ ಸಂಕಲ್ಪಗಳನ್ನು ಪುನರ್ ಸ್ವೀಕರಿಸೋಣ ಎಂದು ನಾನು ನಮ್ಮ ``ಮನದ ಮಾತು' ಕೇಳುಗರಿಗೂ ಆಗ್ರಹಿಸುತ್ತೇನೆ. ನೀರಿನ ಒಂದೊಂದು ಹನಿಯನ್ನೂ ರಕ್ಷಿಸಲು ಏನೆಲ್ಲ ಮಾಡಲು ಸಾಧ್ಯವೋ ಅವುಗಳೆಲ್ಲವನ್ನೂ ನಾವು ಅಗತ್ಯವಾಗಿ ಮಾಡಬೇಕು. ಇದರ ಹೊರತಾಗಿ, ನೀರಿನ ಮರುಬಳಕೆಯ ಕಡೆಗೂ ನಾವು ಅಷ್ಟೇ ಆದ್ಯತೆ ನೀಡಬೇಕಾಗಿದೆ. ಮನೆಯಲ್ಲಿ ಬಳಕೆ ಮಾಡಿದ ನೀರನ್ನು ಹೂಕುಂಡಗಳಿಗೆ ಬಳಸಲು ಬರುತ್ತದೆ, ಕೈತೋಟಗಳಿಗೂ ಬಳಸಬಹುದು. ಒಟ್ಟಿನಲ್ಲಿ ನೀರನ್ನು ಅಗತ್ಯವಾಗಿ ಮತ್ತೊಂದು ಬಾರಿ ಬಳಕೆ ಮಾಡಬೇಕಾಗಿದೆ. ಚಿಕ್ಕದಾದ ಇಂಥ ಪ್ರಯತ್ನದಿಂದ ತಾವು ತಮ್ಮ ಮನೆಗಳಲ್ಲಿ ಒಂದು ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಬಲ್ಲಿರಿ. ರಹೀಂ ದಾಸ್ ಅವರು ಶತಮಾನಗಳ ಹಿಂದೆಯೇ ಕೆಲವು ಉದ್ದೇಶಗಳನ್ನು ಹೇಳಿ ನಡೆದಿದ್ದಾರೆ, ಅದೇನೆಂದರೆ, ``ರಹೀಮನ ನೀರನ್ನು ಉಳಿಸಿಕೊಳ್ಳಿ. ನೀರಿಲ್ಲದಿದ್ದರೆ ಎಲ್ಲವೂ ಶೂನ್ಯ' ಎಂದು ಹೇಳಿದ್ದಾರೆ. ಮತ್ತು ನೀರನ್ನು ಉಳಿತಾಯ ಮಾಡುವ ಈ ಕೆಲಸದಲ್ಲಿ ನನಗೆ ಮಕ್ಕಳಿಂದಲೂ ಬಹಳ ನಿರೀಕ್ಷೆಯಿದೆ. ಸ್ವಚ್ಛತೆಯನ್ನು ಹೇಗೆ ನಮ್ಮ ಮಕ್ಕಳು ಆಂದೋಲನವನ್ನಾಗಿ ರೂಪಿಸಿದರೋ, ಅದೇ ರೀತಿ ``ಜಲ ಯೋಧ'ರಾಗಿ ನೀರನ್ನು ಉಳಿಸುವ ಕಾರ್ಯದಲ್ಲಿ ಅವರು ಸಹಾಯ ಮಾಡಬಲ್ಲರು.
ಸಂಗಾತಿಗಳೇ, ನಮ್ಮ ದೇಶದಲ್ಲಿ ಜಲ ಸಂರಕ್ಷಣೆ, ಜಲಮೂಲಗಳ ಸುರಕ್ಷತೆಗಳೆಲ್ಲವೂ ಶತಮಾನಗಳಿಂದ ಸಮಾಜದ ಸ್ವಭಾವದ ಭಾಗವಾಗಿದೆ. ನನಗೆ ಸಂತಸವಿದೆ, ಏನೆಂದರೆ, ದೇಶದಲ್ಲಿ ಬಹಳಷ್ಟು ಜನರು ``ಜಲ ಸಂರಕ್ಷಣೆ'ಯನ್ನು ಜೀವನದ ಕಾರ್ಯಯೋಜನೆಯನ್ನಾಗಿ ಮಾಡಿದ್ದಾರೆ. ಚೆನ್ನೈನ ಒಬ್ಬರು ಸ್ನೇಹಿತರಿದ್ದಾರೆ ಅರುಣ್ ಕೃಷ್ಣಮೂರ್ತಿ ಎಂದು. ಅರುಣ್ ಅವರು ತಮ್ಮ ಪ್ರದೇಶಗಳಲ್ಲಿರುವ ಕೆರೆ-ಕೊಳಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಅವರು 150ಕ್ಕೂ ಹೆಚ್ಚು ಹೊಂಡ ಮತ್ತು ಕೆರೆಗಳ ಸ್ವಚ್ಛತೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು ಹಾಗೂ ಅವರು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇದೇ ರೀತಿ ಮಹಾರಾಷ್ಟ್ರದ ಒಬ್ಬ ಸ್ನೇಹಿತ ರೋಹನ್ ಕಾಳೆ ಇದ್ದಾರೆ. ರೋಹನ್ ಅವರು ಒಬ್ಬ ಮಾನವ ಸಂಪನ್ಮೂಲ ವೃತ್ತಿಯಲ್ಲಿದ್ದಾರೆ. ಅವರು ಮಹಾರಾಷ್ಟ್ರದ ನೂರಾರು ಸ್ಟೆಪ್ ವೆಲ್ ಅರ್ಥಾತ್ ಮೆಟ್ಟಿಲುಗಳುಳ್ಳ ಹಳೆಯ ಬಾವಿಗಳ ಸಂರಕ್ಷಣೆಯ ಆಂದೋಲನ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವು ಬಾವಿಗಳಂತೂ ನೂರಾರು ವರ್ಷಗಳಷ್ಟು ಹಿಂದಿನವು. ಅಲ್ಲದೆ ಅವು ನಮ್ಮ ಪರಂಪರೆಯ ಭಾಗವಾಗಿವೆ. ಸಿಕಂದರಾಬಾದ್ ನಲ್ಲಿ ಬನ್ಸಿಲಾಲ್ ಪೇಟೆಯಲ್ಲಿ ಒಂದು ಇದೇ ರೀತಿಯ ಮೆಟ್ಟಿಲುಗಳ ಬಾವಿಯಿದೆ. ವರ್ಷಗಳ ಕಾಲ ಉಪೇಕ್ಷೆ ಮಾಡಿದ್ದರಿಂದ ಈ ಬಾವಿ ಮಣ್ಣು ಮತ್ತು ಕಸದಿಂದ ತುಂಬಿ ಹೋಗಿತ್ತು. ಆದರೆ, ಅಲ್ಲಿ ಈಗ ಈ ಬಾವಿಯ ಪುನರುಜ್ಜೀವಗೊಳಿಸುವ ಅಭಿಯಾನ ಜನರ ಸಹಯೋಗದೊಂದಿಗೆ ಆರಂಭವಾಗಿದೆ.
ಸ್ನೇಹಿತರೇ, ನಾನು ಸದಾ ನೀರಿನ ಅಭಾವ ಇರುವ ರಾಜ್ಯದಿಂದ ಬಂದಿದ್ದೇನೆ. ಗುಜರಾತಿನಲ್ಲಿ ಈ ರೀತಿಯ ಮೆಟ್ಟಿಲುಗಳ ಬಾವಿಗೆ ವಾವ್ ಎಂದು ಕರೆಯುತ್ತಾರೆ. ಗುಜರಾತ್ ನಂತಹ ರಾಜ್ಯದಲ್ಲಿ ವಾವ್ ಗಳು ಮಹತ್ವದ ಪಾತ್ರ ವಹಿಸಿವೆ. ಈ ಬಾವಿಗಳು ಅಥವಾ ಮೆಟ್ಟಿಲುಗಳನ್ನು ಹೊಂದಿರುವ ಕೊಳಗಳ ರಕ್ಷಣೆಯಲ್ಲಿ ಜಲ ಮಂದಿರ ಯೋಜನೆಯು ದೊಡ್ಡ ಪಾತ್ರ ನಿಭಾಯಿಸಿದೆ. ಇಡೀ ಗುಜರಾತಿನಲ್ಲಿ ಅನೇಕ ಮೆಟ್ಟಿಲು ಕೊಳಗಳನ್ನು ಪುನರುಜ್ಜೀವಗೊಳಿಸಲಾಗಿದೆ. ಇದರಿಂದ ಈ ಪ್ರದೇಶಗಳಲ್ಲಿ ಅಂತರ್ಜಲ ಸುಧಾರಿಸಲು ಸಹ ಸಾಕಷ್ಟು ಸಹಾಯವಾಗಿದೆ. ಇಂಥದ್ದೇ ಅಭಿಯಾನವನ್ನು ತಾವೂ ಸಹ ಸ್ಥಳೀಯ ಮಟ್ಟದಲ್ಲಿ ನಡೆಸಬಹುದಾಗಿದೆ. ಚೆಕ್ ಡ್ಯಾಂ ಗಳನ್ನು ನಿರ್ಮಿಸುವುದಾಗಲೀ ಮಳೆ ನೀರು ಸಂಗ್ರಹ ವ್ಯವಸ್ಥೆಯಾಗಲೀ ಇವುಗಳಲ್ಲಿ ವ್ಯಕ್ತಿಗತ ಪ್ರಯತ್ನ ಕೂಡ ಮುಖ್ಯವಾಗಿದೆ. ಮತ್ತು ಸಾಮೂಹಿಕ ಪ್ರಯತ್ನದ ಅಗತ್ಯವೂ ಇದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ ನಮ್ಮ ದೇಶದ ಪ್ರತಿ ಜಿಲ್ಲೆಯಲ್ಲಿ ಕಡಿಮೆ ಎಂದರೂ 75 ಅಮೃತ ಸರೋವರಗಳನ್ನು ನಿರ್ಮಿಸಬಹುದಾಗಿದೆ. ಕೆಲವು ಪುರಾತನ ಕೆರೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಕೆಲವು ಹೊಸ ಕೆರೆಗಳನ್ನು ನಿರ್ಮಿಸಬಹುದಾಗಿದೆ. ತಾವು ಈ ನಿಟ್ಟಿನಲ್ಲಿ ಅಗತ್ಯವಾಗಿ ಏನಾದರೊಂದು ಪ್ರಯತ್ನ ಮಾಡುತ್ತೀರಿ ಎನ್ನುವ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಬಹು ಭಾಷೆಗಳು, ಉಪಭಾಷೆಗಳ ಸಂದೇಶ ನನಗೆ ಲಭ್ಯವಾಗುತ್ತದೆ, ಇದು ``ಮನದ ಮಾತು' ಕಾರ್ಯಕ್ರಮದ ಸೌಂದರ್ಯವೂ ಆಗಿದೆ. ಹಲವು ಜನರು ಆಡಿಯೋ ಸಂದೇಶವನ್ನು ಸಹ ಕಳುಹಿಸುತ್ತಾರೆ. ಭಾರತದ ಸಂಸ್ಕೃತಿ, ನಮ್ಮ ಭಾಷೆಗಳು, ನಮ್ಮ ಉಪಭಾಷೆಗಳು, ನಮ್ಮ ಜೀವನ ರೀತಿ, ವಿಭಿನ್ನ ರೀತಿಯ ಆಹಾರ ಸೇವನೆ ಈ ಎಲ್ಲ ವೈವಿಧ್ಯಗಳು ನಮ್ಮ ಬಹುದೊಡ್ಡ ಶಕ್ತಿಯಾಗಿವೆ. ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗಿನ ಈ ವೈವಿಧ್ಯ ಭಾರತವನ್ನು ಏಕತೆಯಿಂದ ರೂಪಿಸುತ್ತದೆ. ಏಕ ಭಾರತ-ಶ್ರೇಷ್ಠ ಭಾರತವನ್ನಾಗಿ ಮಾಡುತ್ತದೆ. ಇದರಲ್ಲಿಯೂ ನಮ್ಮ ಐತಿಹಾಸಿಕ ಸ್ಥಳಗಳು ಮತ್ತು ಪೌರಾಣಿಕ ಕಥೆಗಳು ಎರಡರದ್ದೂ ಬಹಳ ಮುಖ್ಯವಾದ ಕೊಡುಗೆಯಿದೆ. ನಾನು ಈಗ ತಮ್ಮ ಬಳಿ ಈ ಮಾತನ್ನು ಏಕೆ ಹೇಳುತ್ತಿರುವೆ ಎಂದು ತಾವು ಯೋಚಿಸುತ್ತಿರಬಹುದು. ಇದರ ಕಾರಣವೆಂದರೆ, ಮಾಧವಪುರ ಮೇಳ. ಮಾಧವಪುರ ಮೇಳ ಎಲ್ಲಿ ನಡೆಯುತ್ತದೆ, ಯಾಕಾಗಿ ನಡೆಯುತ್ತದೆ, ಇದು ಹೇಗೆ ಭಾರತದ ವಿವಿಧತೆಯೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮನದ ಮಾತು ಶ್ರೋತೃಗಳಿಗೆ ತುಂಬ ಆಸಕ್ತಿದಾಯಕ ಎನಿಸಬಹುದು.
ಸ್ನೇಹಿತರೇ, ಮಾಧವಪುರ ಮೇಳ ಗುಜರಾತಿನ ಪೋರ್ ಬಂದರ್ ನ ಸಮುದ್ರದ ಬಳಿ ಇರುವ ಮಾಧವಪುರ ಗ್ರಾಮದಲ್ಲಿ ಜರುಗುತ್ತದೆ. ಆದರೆ, ಇದಕ್ಕೆ ಹಿಂದುಸ್ತಾನದ ಪೂರ್ವ ಭಾಗದಿಂದಲೂ ಸಂಬಂಧವಿದೆ. ಇದು ಹೇಗೆ ಸಾಧ್ಯ ಎಂದು ತಾವು ಯೋಚಿಸುತ್ತಿರಬಹುದು. ಇದಕ್ಕೆ ಉತ್ತರ ಕೂಡ ಒಂದು ಪೌರಾಣಿಕ ಕಥೆಯಿಂದಲೇ ದೊರೆಯುತ್ತದೆ. ಸಾವಿರಾರು ವರ್ಷಗಳ ಮೊದಲು ಭಗವಾನ್ ಶ್ರೀ ಕೃಷ್ಣನ ಮದುವೆ ಈಶಾನ್ಯ ಭಾಗದ ರಾಜಕುಮಾರಿ ರುಕ್ಮಿಣಿಯೊಂದಿಗೆ ನಡೆದಿತ್ತು ಎಂದು ಹೇಳಲಾಗುತ್ತದೆ. ಈ ಮದುವೆ ಪೋರಬಂದರಿನ ಮಾಧವಪುರದಲ್ಲಿ ಸಂಪನ್ನಗೊಂಡಿತ್ತು ಹಾಗೂ ಅದೇ ವಿವಾಹದ ಪ್ರತೀಕದ ರೂಪದಲ್ಲಿ ಇಂದಿಗೂ ಅಲ್ಲಿ ಮಾಧವಪುರ ಮೇಳವನ್ನು ಆಯೋಜಿಸಲಾಗುತ್ತದೆ. ಪೂರ್ವ ಮತ್ತು ಪಶ್ಚಿಮದ ಈ ಆಳವಾದ ಸಂಬಂಧ ನಮ್ಮ ಪರಂಪರೆಯಾಗಿದೆ. ಸಮಯದ ಜತೆಜತೆಗೇ ಈಗ ಜನರ ಪ್ರಯತ್ನದಿಂದ ಮಾಧವಪುರ ಮೇಳದಲ್ಲಿ ಹೊಸ ಹೊಸ ಚಟುವಟಿಕೆಗಳೂ ಜೋಡಿಸಲ್ಪಟ್ಟಿವೆ. ನಮ್ಮ ಈ ಭಾಗದಲ್ಲಿ ಕನ್ಯೆಯ ಕಡೆಯವರನ್ನು ಘರಾತಿ ಎಂದು ಕರೆಯಲಾಗುತ್ತದೆ. ಹಾಗೂ ಈ ಮೇಳಕ್ಕೆ ಈಗ ಈಶಾನ್ಯ ಪ್ರದೇಶದ ಬಹಳಷ್ಟು ಘರಾತಿಗಳೂ ಬರಲು ಆರಂಭಿಸಿದ್ದಾರೆ. ಒಂದು ವಾರ ಕಾಲ ನಡೆಯುವ ಮಾಧವಪುರ ಮೇಳಕ್ಕೆ ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಕಲಾವಿದರು ಬಂದು ತಲುಪುತ್ತಾರೆ. ಕರಕುಶಲ ಕಲೆಗೆ ಸಂಬಂಧಿಸಿದ ಕಲಾವಿದರು ಆಗಮಿಸುತ್ತಾರೆ. ಮತ್ತು ಈ ಮೇಳದ ಹೊಳಪು ನಾಲ್ಕು ಪಟ್ಟು ವೃದ್ಧಿಸುತ್ತದೆ. ಒಂದು ವಾರ ನಡೆಯುವ, ಭಾರತದ ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಗಳ ಸಂಗಮವಾಗಿರುವ ಈ ಮಾಧವಪುರ ಮೇಳ ಏಕ ಭಾರತ-ಶ್ರೇಷ್ಠ ಭಾರತ ಪರಿಕಲ್ಪನೆಯ ಬಹಳ ಸುಂದರ ಉದಾಹರಣೆಯಾಗಿ ಗೋಚರಿಸುತ್ತದೆ. ತಾವೂ ಸಹ ಈ ಮೇಳದ ಕುರಿತು ಓದಿ ಮತ್ತು ತಿಳಿದುಕೊಳ್ಳಿ ಎಂದು ನಾನು ತಮ್ಮಲ್ಲಿ ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಈಗ ಜನರ ಸಹಭಾಗಿತ್ವದೊಂದಿಗೆ ಹೊಸ ಮಾದರಿಯಾಗಿ ನಿಂತಿದೆ. ಕೆಲವು ದಿನಗಳ ಮೊದಲು ಮಾರ್ಚ್ ೨೩ರಂದು ಹುತಾತ್ಮರ ದಿನದಂದು ದೇಶದ ವಿವಿಧ ಭಾಗಗಳಲ್ಲಿ ಅನೇಕ ಕಾರ್ಯಕ್ರಮಗಳು ಜರುಗಿದವು. ದೇಶದಲ್ಲಿ ಜನರು ತಮ್ಮ ಸ್ವಾತಂತ್ರ ಹೋರಾಟದ ನಾಯಕ-ನಾಯಕಿಯರನ್ನು ಸ್ಮರಿಸಿಕೊಂಡರು, ಶ್ರದ್ಧಾಪೂರ್ವಕವಾಗಿ ನೆನಪಿಸಿಕೊಂಡರು. ಇದೇ ದಿನ ನನಗೆ ಕೋಲ್ಕತದಲ್ಲಿ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಬಿಪ್ಲೋಬಿ ಭಾರತ ಗ್ಯಾಲರಿಯನ್ನು ಲೋಕಾರ್ಪಣೆಗೊಳಿಸುವ ಅವಕಾಶ ದೊರೆತಿತ್ತು. ಭಾರತದ ವೀರ ಕ್ರಾಂತಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇದು ನಮ್ಮ ಅತ್ಯಂತ ಅನನ್ಯವಾಗಿರುವ ಗ್ಯಾಲರಿಯಾಗಿದೆ. ಯಾವಾಗಲಾದರೂ ಅವಕಾಶ ಸಿಕ್ಕಾಗ ಇದನ್ನು ವೀಕ್ಷಿಸಲು ತಾವು ಅಗತ್ಯವಾಗಿ ಹೋಗಿ. ಸ್ನೇಹಿತರೇ, ಏಪ್ರಿಲ್ ತಿಂಗಳಲ್ಲಿ ನಾವು ಇಬ್ಬರು ಶ್ರೇಷ್ಠ ಮಹನೀಯರ ಜಯಂತಿಯನ್ನು ಆಚರಿಸುತ್ತೇವೆ. ಇವರಿಬ್ಬರೂ ಭಾರತೀಯ ಸಮಾಜದ ಮೇಲೆ ತಮ್ಮ ಆಳವಾದ ಪ್ರಭಾವ ಬೀರಿದ್ದಾರೆ. ಈ ಶ್ರೇಷ್ಠ ಮಹನೀಯರೆಂದರೆ ಮಹಾತ್ಮಾ ಫುಲೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್. ಮಹಾತ್ಮಾ ಫುಲೆ ಅವರ ಜಯಂತಿಯನ್ನು ಏಪ್ರಿಲ್ ೧೧ರಂದು ಹಾಗೂ ಬಾಬಾ ಸಾಹೇಬ್ ಅವರ ಜಯಂತಿಯನ್ನು ಏಪ್ರಿಲ್ ೧೪ರಂದು ಆಚರಿಸುತ್ತೇವೆ. ಈ ಇಬ್ಬರೂ ಮಹಾಪುರುಷರು ಭೇದಭಾವ ಹಾಗೂ ಅಸಮಾನತೆಯ ವಿರುದ್ಧ ಬಹುದೊಡ್ಡ ಹೋರಾಟ ಮಾಡಿದರು. ಮಹಾತ್ಮಾ ಫುಲೆ ಅವರು ಇದರ ಅಂಗವಾಗಿ ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ಹೆಣ್ಣು ಮಗು ಹತ್ಯೆಯ ವಿರುದ್ಧ ದನಿ ಎತ್ತಿದರು. ಅವರು ನೀರಿನ ಸಮಸ್ಯೆ ನಿವಾರಣೆಗಾಗಿಯೂ ಸಹ ಮಹತ್ವದ ಅಭಿಯಾನವನ್ನು ನಡೆಸಿದರು.
ಸ್ನೇಹಿತರೇ, ಮಹಾತ್ಮಾ ಫುಲೆ ಅವರ ಕುರಿತ ಈ ಚರ್ಚೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಉಲ್ಲೇಖವೂ ಅಷ್ಟೇ ಮುಖ್ಯವಾಗಿದೆ. ಸಾವಿತ್ರಿಬಾಯಿ ಫುಲೆ ಅವರು ಹಲವಾರು ಸಾಮಾಜಿಕ ಸಂಸ್ಥೆಗಳನ್ನು ಸ್ಥಾಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದರು. ಒಬ್ಬ ಶಿಕ್ಷಕಿ ಹಾಗೂ ಒಬ್ಬ ಸಮಾಜ ಸುಧಾರಕರ ರೂಪದಲ್ಲಿ ಅವರಿಬ್ಬರು ಸಮಾಜದಲ್ಲಿ ಅರಿವನ್ನು ಮೂಡಿಸಿದರು ಹಾಗೂ ಅದರ ಸ್ಥೈರ್ಯವನ್ನೂ ಹೆಚ್ಚಿಸಿದರು. ಇಬ್ಬರೂ ಜತೆ ಸೇರಿ ಸತ್ಯಶೋಧಕ ಸಮಾಜದ ಸ್ಥಾಪನೆ ಮಾಡಿದರು. ಜನರ ಸಶಕ್ತೀಕರಣಕ್ಕಾಗಿ ಪ್ರಯತ್ನಿಸಿದರು. ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾರ್ಯಗಳಲ್ಲಿ ಸಹ ಮಾಹಾತ್ಮಾ ಫುಲೆ ಅವರ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಯಾವುದೇ ಸಮಾಜದ ಅಭಿವೃದ್ಧಿಯ ಮೌಲ್ಯಮಾಪನವನ್ನು ಆ ಸಮಾಜದ ಮಹಿಳೆಯರ ಸ್ಥಿತಿಗತಿಯನ್ನು ನೋಡಿ ಮಾಡಬಹುದು ಎಂದು ಬಾಬಾಸಾಹೇಬ್ ಹೇಳುತ್ತಿದ್ದರು. ಮಹಾತ್ಮಾ ಫುಲೆ, ಸಾವಿತ್ರಿಬಾಯಿ ಫುಲೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದಿಂದ ಪ್ರೇರಣೆ ಪಡೆಯುತ್ತ, ನಿಮ್ಮ ಹೆಣ್ಣುಮಕ್ಕಳಿಗೆ ಅಗತ್ಯವಾಗಿ ಶಿಕ್ಷಣ ನೀಡಿ ಎಂದು ಎಲ್ಲ ತಾಯಿ-ತಂದೆಯರು ಮತ್ತು ಪೋಷಕರಲ್ಲಿ ನಾನು ಮನವಿ ಮಾಡುತ್ತೇನೆ. ಶಾಲೆಯಲ್ಲಿ ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿಸಲೆಂದು ಕೆಲವು ದಿನಗಳ ಮೊದಲು ಕನ್ಯಾ ಶಿಕ್ಷಾ ಪ್ರವೇಶ ಉತ್ಸವ ಎನ್ನುವ ಕಾರ್ಯಕ್ರಮವನ್ನು ಆರಂಭ ಮಾಡಲಾಗಿದೆ. ಆ ಮೂಲಕ, ಒಂದೊಮ್ಮೆ ಹೆಣ್ಣುಮಕ್ಕಳ ಶಿಕ್ಷಣ ಯಾವುದೇ ಕಾರಣದಿಂದ ಸ್ಥಗಿತವಾಗಿದ್ದರೂ ಅವರನ್ನು ಮತ್ತೊಮ್ಮೆ ಶಾಲೆಗೆ ಕರೆತರಲು ಆದ್ಯತೆ ನೀಡಲಾಗುತ್ತಿದೆ.
ಸ್ನೇಹಿತರೇ, ಬಾಬಾ ಸಾಹೇಬ್ ಅವರೊಂದಿಗೆ ಗುರುತಿಸಲಾಗುವ ಐದು ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರಿಗೂ ಸೌಭಾಗ್ಯದ ವಿಚಾರವಾಗಿದೆ. ಅವರ ಜನ್ಮಸ್ಥಳ ಮಹೂ ಇರಲಿ, ಮುಂಬೈನಲ್ಲಿರುವ ಚೈತ್ಯಭೂಮಿಯಾಗಲಿ, ಲಂಡನ್ ನಲ್ಲಿರುವ ಅವರ ನಿವಾಸವಾಗಲೀ, ನಾಗಪುರದ ದೀಕ್ಷಾ ಸ್ಥಳವಾಗಲಿ ಅಥವಾ ದೆಹಲಿಯಲ್ಲಿರುವ ಬಾಬಾಸಾಹೇಬ್ ಅವರ ಮಹಾ ಪರಿನಿರ್ವಾಣ ಸ್ಥಳವಾಗಿರಲಿ. ನನಗೆ ಎಲ್ಲ ಪ್ರದೇಶಗಳಿಗೂ, ಎಲ್ಲ ಕ್ಷೇತ್ರಗಳಿಗೂ ಭೇಟಿ ನೀಡುವ ಸೌಭಾಗ್ಯ ದೊರೆತಿದೆ. ಮಹಾತ್ಮಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಗುರುತಿಸಲಾಗುವ ಸ್ಥಳಗಳ ದರ್ಶನವನ್ನು ಖಂಡಿತವಾಗಿ ಮಾಡಿ ಎಂದು ನಾನು ``ಮನದ ಮಾತು' ಕೇಳುಗರನ್ನು ಆಗ್ರಹಿಸುತ್ತೇನೆ. ತಮಗೆ ಅಲ್ಲಿ ಬಹಳಷ್ಟು ಕಲಿಯಲು ಸಿಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ``ಮನದ ಮಾತು' ಕಾರ್ಯಕ್ರಮದಲ್ಲಿ ಈ ಬಾರಿ ಕೂಡ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಮುಂದಿನ ತಿಂಗಳಲ್ಲಿ ಅನೇಕ ಉತ್ಸವ, ಹಬ್ಬಗಳು ಬರುತ್ತಿವೆ. ಕೆಲವೇ ದಿನಗಳ ಮಾತು, ನವರಾತ್ರಿ ಹತ್ತಿರವಾಗುತ್ತಿದೆ. ನವರಾತ್ರಿಯಲ್ಲಿ ನಾವು ವ್ರತ, ಉಪವಾಸ, ಶಕ್ತಿಯ ಸಾಧನೆಗಳನ್ನು ಮಾಡುತ್ತೇವೆ. ಶಕ್ತಿಯ ಪೂಜೆಯನ್ನು ಮಾಡುತ್ತೇವೆ. ಅಂದರೆ, ನಮ್ಮ ಪರಂಪರೆಗಳು ನಮಗೆ ಸಂತೋಷವನ್ನೂ ನೀಡುತ್ತವೆ ಹಾಗೂ ಸಂಯಮವನ್ನೂ ಕಲಿಸುತ್ತವೆ. ಸಂಯಮ ಮತ್ತು ತಪಗಳು ನಮಗೆ ಹಬ್ಬಗಳೂ ಹೌದು. ಹೀಗಾಗಿಯೇ ನವರಾತ್ರಿಯು ಎಂದಿನಿಂದಲೂ ನಮ್ಮೆಲ್ಲರಿಗೂ ಬಹಳ ವಿಶೇಷವಾಗಿದೆ. ನವರಾತ್ರಿಯ ಮೊದಲ ದಿನವೇ ನೂತನ ವರ್ಷಾರಂಭವಾದ ``ಗುಡಿ ಪಡ್ವಾ' ಹಬ್ಬವೂ ಇದೆ. ಏಪ್ರಿಲ್ ನಲ್ಲಿಯೇ ಈಸ್ಟರ್ ಹಬ್ಬವೂ ಬರುತ್ತದೆ ಹಾಗೂ ರಮ್ ಜಾನಿನ ಪವಿತ್ರ ದಿನವೂ ಆರಂಭವಾಗುತ್ತದೆ. ತಾವು ಎಲ್ಲ ಜತೆಗೂಡಿ ತಮ್ಮ ಹಬ್ಬವನ್ನು ಆಚರಿಸಿ. ಭಾರತದ ವೈವಿಧ್ಯವನ್ನು ಸಶಕ್ತಗೊಳಿಸಿ. ಎಲ್ಲರದ್ದೂ ಇದೇ ಆಶಯವಾಗಿದೆ. ಈ ಬಾರಿಯ ``ಮನದ ಕಾರ್ಯಕ್ರಮದಲ್ಲಿ ಇಷ್ಟೇ ವಿಚಾರಗಳು. ಮುಂದಿನ ತಿಂಗಳು ತಮ್ಮೊಂದಿಗೆ ಹೊಸ ವಿಷಯಗಳೊಂದಿಗೆ ಪುನಃ ಭೇಟಿ ಆಗುತ್ತೇನೆ.
ಅನಂತ ಧನ್ಯವಾದ.
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ ಮನದ ಮಾತಿಗೆ ಮತ್ತೊಮ್ಮೆ ತಮ್ಮೆಲ್ಲರಿಗೂ ಸ್ವಾಗತ. ಇಂದು ಮನದ ಮಾತಿನ ಆರಂಭವನ್ನು ನಾವು ಭಾರತದ ಸಫಲತೆಯ ವಿಚಾರದೊಂದಿಗೆ ಆರಂಭಿಸೋಣ. ಈ ತಿಂಗಳ ಆರಂಭದಲ್ಲಿ ಭಾರತ ಇಟಲಿಯಿಂದ ತನ್ನ ಬಹು ಅಮೂಲ್ಯವಾದ ಪರಂಪರಾಗತ ಆಸ್ತಿಯೊಂದನ್ನು ಮರಳಿ ಪಡೆಯುವಲ್ಲಿ ಸಫಲವಾಗಿದೆ. ಅದೇನೆಂದರೆ ಅವಲೋಕಿತೇಶ್ವರ ಪದ್ಮಪಾಣಿಯ ಪ್ರತಿಮೆ. ಇದು ಸಾವಿರ ವರ್ಷಕ್ಕಿಂತ ಹಳೆಯದ್ದು. ಈ ಮೂರ್ತಿ ಕೆಲ ವರ್ಷಗಳ ಹಿಂದೆ ಬಿಹಾರದಲ್ಲಿ ಗಯಾ ದೇವಿಯ ಸ್ಥಳವಾದ ಕುಂಡಲಪುರ ದೇವಾಲಯದಿಂದ ಕದಿಯಲಾಗಿತ್ತು. ಆದರೆ ಬಹಳ ಪರಿಶ್ರಮದ ನಂತರ ಈಗ ಭಾರತಕ್ಕೆ ಈ ಪ್ರತಿಮೆ ಮರಳಿ ದೊರೆತಿದೆ. ಹೀಗೆಯೇ ಕೆಲ ವರ್ಷಗಳ ಹಿಂದೆ ತಮಿಳುನಾಡಿನ ವೆಲ್ಲೂರಿನಿಂದ ಭಗವಾನ್ ಆಂಜನೇಯರ್ ಹನುಮಂತ ದೇವರ ಪ್ರತಿಮೆ ಕಳ್ಳತನವಾಗಿತ್ತು. ಹನುಮಂತ ದೇವರ ಈ ಪ್ರತಿಮೆ ಕೂಡ 600-700 ವರ್ಷ ಪುರಾತನವಾದದ್ದು. ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಮಗೆ ಇದು ಲಭಿಸಿತು.
ಸ್ನೇಹಿತರೆ, ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಒಂದಕ್ಕಿಂತ ಒಂದು ಅಪ್ರತಿಮ ಮೂರ್ತಿಗಳು ನಿರ್ಮಾಣಗೊಳ್ಳುತ್ತಿದ್ದವು, ಇದರಲ್ಲಿ ಶೃದ್ಧೆಯಿತ್ತು, ಸಾಮರ್ಥ್ಯವಿತ್ತು, ಕೌಶಲ್ಯವಿತ್ತು ಮತ್ತು ವಿವಿಧತೆಯಿಂದ ಕೂಡಿತ್ತು. ಅಲ್ಲದೆ ನಮ್ಮ ಪ್ರತಿಯೊಂದು ಮೂರ್ತಿಯ ಇತಿಹಾಸದಲ್ಲಿ ಆಯಾ ಕಾಲದ ಪ್ರಭಾವವೂ ಕಂಡುಬರುತ್ತದೆ. ಇದು ಭಾರತದ ಶಿಲ್ಪಕಲೆಯ ಅಪರೂಪದ ಉದಾಹರಣೆಯಂತೂ ಆಗಿದೆಯಲ್ಲದೆ, ಇದರೊಂದಿಗೆ ನಮ್ಮ ಶೃದ್ಧೆಯೂ ಮಿಳಿತವಾಗಿತ್ತು. ಆದರೆ ಭೂತ ಕಾಲದಲ್ಲಿ ಬಹಳಷ್ಟು ಮೂರ್ತಿಗಳು ಕಳ್ಳತನದಿಂದು ಭಾರತದಿಂದ ಹೊರ ಹೋಗುತ್ತಲೇ ಇದ್ದವು. ಕೆಲವೊಮ್ಮೆ ಈ ದೇಶ ಕೆಲವೊಮ್ಮೆ ಆ ದೇಶದಲ್ಲಿ ಈ ಮೂರ್ತಿಗಳು ಮಾರಾಟಗೊಳ್ಳಲ್ಪಡುತ್ತಿದ್ದವು. ಅವರಿಗೆ ಇವು ಕಲಾಕೃತಿಗಳು ಮಾತ್ರ ಆಗಿದ್ದವು. ಅದರ ಇತಿಹಾಸ ಮತ್ತು ಶೃದ್ಧೆ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ. ಈ ಮೂರ್ತಿಗಳನ್ನು ಮತ್ತೆ ತರುವುದು ಭಾರತ ಮಾತೆಯೆಡೆಗೆ ನಮ್ಮ ಕರ್ತವ್ಯವಾಗಿದೆ. ಈ ಮೂರ್ತಿಗಳಲ್ಲಿ ಭಾರತದ ಆತ್ಮ ಮತ್ತು ಶೃದ್ಧೆಯ ಅಂಶವಿದೆ. ಇವುಗಳಿಗೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವೂ ಇದೆ. ಈ ಕರ್ತವ್ಯವನ್ನು ಅರಿತು ಭಾರತ ತನ್ನ ಪ್ರಯತ್ನ ಮುಂದುವರಿಸಿತು. ಇದಕ್ಕೆ ಮತ್ತೊಂದು ಕಾರಣ ಕಳ್ಳತನ ಮಾಡುವ ಪ್ರವೃತ್ತಿಯವರಲ್ಲೂ ಒಂದು ಬಗೆಯ ಭಯ ಹುಟ್ಟಿತು. ಯಾವ ದೇಶಗಳಲ್ಲಿ ಈ ಮೂರ್ತಿಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಲಾಗಿತ್ತೋ ಆ ದೇಶಗಳಿಗೂ ಭಾರತದೊಂದಿಗೆ ಸಂಬಂಧ ವೃದ್ಧಿಯ ನವಿರಾದ ರಾಜತಂತ್ರದ ಮಾರ್ಗದಲ್ಲಿ ಇದರ ಮಹತ್ವ ಬಹು ದೊಡ್ಡದು ಎಂಬುದರ ಅರಿವಾಗಿತ್ತು. ಏಕೆಂದರೆ ಇದರೊಂದಿಗೆ ಭಾರತದ ಭಾವನೆಗಳು, ಧಾರ್ಮಿಕ ಶೃದ್ಧೆ ಮಿಳಿತವಾಗಿದೆ. ಅಲ್ಲದೆ ಒಂದು ರೀತಿ ಜನರಿಂದ ಜನರ ಸಂಬಂಧಗಳಲ್ಲೂ ಇದು ಬಹು ದೊಡ್ಡ ಶಕ್ತಿಯ ಸಂಚಲನ ಉಂಟುಮಾಡುತ್ತದೆ. ಇದೀಗ ಕೆಲ ದಿನಗಳ ಹಿಂದೆ ನೀವು ನೋಡಿರಬಹುದು – ಕಾಶಿಯಿಂದ ಕಳ್ಳತನಗೊಂಡಿದ್ದ ಮಾತೆ ಅನ್ನಪೂರ್ಣೆಯ ಪ್ರತಿಮೆಯನ್ನು ಮರಳಿ ತರಲಾಗಿತ್ತು. ಇದು ಭಾರತದ ಬಗ್ಗೆ ಬದಲಾಗುತ್ತಿರುವ ಜಾಗತಿಕ ದೃಷ್ಟಿಕೋನಕ್ಕೆ ಒಂದು ಉದಾಹರಣೆಯಾಗಿದೆ. 2013 ರವರೆಗೆ ಸುಮಾರು 13 ಪ್ರತಿಮೆಗಳು ಭಾರತಕ್ಕೆ ಹಿಂದಿರುಗಿ ಬಂದಿವೆ.
ಆದರೆ ಕಳೆದ 7 ವರ್ಷಗಳಲ್ಲಿ 200 ಕ್ಕೂ ಹೆಚ್ಚು ಬಹು ಅಮೂಲ್ಯ ಪ್ರತಿಮೆಗಳನ್ನು ಭಾರತ ಸಫಲವಾಗಿ ಮರಳಿ ಸ್ವದೇಶಕ್ಕೆ ತಂದಿದೆ. ಅಮೇರಿಕಾ, ಬ್ರಿಟನ್, ಹಾಲೆಂಡ್, ಫ್ರಾನ್ಸ್, ಕೆನಡಾ, ಜರ್ಮನಿ, ಸಿಂಗಾಪೂರ್, ಹೀಗೆ ಅನೇಕ ದೇಶಗಳು ಭಾರತದ ಈ ಭಾವನೆಗಳನ್ನು ಅರಿತಿವೆ ಮತ್ತು ಮೂರ್ತಿಗಳನ್ನು ಮರಳಿ ತರುವಲ್ಲಿ ನಮಗೆ ಸಹಾಯ ಮಾಡಿವೆ. ನಾನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಮೇರಿಕಕ್ಕೆ ತೆರಳಿದಾಗ ಅಲ್ಲಿ ನನಗೆ ಬಹಳ ಪುರಾತನವಾದ ಹಲವಾರು ಪ್ರತಿಮೆಗಳು ಮತ್ತು ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ ಅನೇಕ ವಸ್ತುಗಳು ದೊರೆತವು. ದೇಶದ ಬಹು ಅಮೂಲ್ಯ ಪರಂಪರಾಗತ ವಸ್ತು ಮರಳಿ ಸಿಕ್ಕಾಗ, ಇತಿಹಾಸದ ಬಗ್ಗೆ ಶೃದ್ಧೆಯುಳ್ಳವರು, ಪುರಾತತ್ವ ಶಾಸ್ತ್ರದಲ್ಲಿ ಶೃದ್ಧೆಯುಳ್ಳವರು, ಶೃದ್ಧೆ ಮತ್ತು ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿದವರು ಮತ್ತು ಭಾರತೀಯರಾಗಿ ನಮಗೆಲ್ಲರಿಗೂ ಸಂಭ್ರಮಾನಂದವಾಗುವುದು ಅತ್ಯಂತ ಸಹಜ.
ಸ್ನೇಹಿತರೆ, ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಬಗ್ಗೆ ಮಾತನಾಡುತ್ತಾ ಇಂದು ಮನದ ಮಾತಿನಲ್ಲಿ ನಾನು ನಿಮಗೆ ಇಬ್ಬರು ವ್ಯಕ್ತಿಗಳೊಂದಿಗೆ ಭೇಟಿ ಮಾಡಿಸಬಯಸುತ್ತೇನೆ. ಈ ಮಧ್ಯೆ, ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ತಾಂಜಾನಿಯಾದ ಇಬ್ಬರು ಸೋದರ ಸೋದರಿಯರಾದ ಕಿಲಿ ಪಾಲ್ ಮತ್ತು ನೀಮಾ ಅವರು ಬಹಳ ಚರ್ಚೆಯಲ್ಲಿದ್ದಾರೆ. ನೀವೂ ಅವರ ಬಗ್ಗೆ ಖಂಡಿತಾ ಕೇಳಿರುತ್ತೀರಿ ಎಂದು ನನಗೆ ನಂಬಿಕೆಯಿದೆ. ಅವರಲ್ಲಿ ಭಾರತೀಯ ಸಂಗೀತದ ಬಗ್ಗೆ ಒಂದು ಬಗೆಯ ಹುರುಪಿದೆ, ಒಂದು ಬಗೆಯ ಹುಚ್ಚಿದೆ ಮತ್ತು ಇದರಿಂದಾಗಿಯೇ ಅವರು ಬಹಳ ಜನಪ್ರಿಯವಾಗಿದ್ದಾರೆ. ಅವರು ಲಿಪ್ ಸಿಂಕ್ ಮಾಡುವ ರೀತಿಯಿಂದ ಅವರು ಇದಕ್ಕಾಗಿ ಅದೆಷ್ಟು ಶ್ರಮಪಡುತ್ತಿದ್ದಾರೆ ಎಂಬುದರ ಅರಿವಾಗುತ್ತದೆ. ಇತ್ತೀಚೆಗೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುತ್ತಿರುವ ಅವರ ವಿಡಿಯೋ ಬಹಳ ವೈರಲ್ ಆಗಿತ್ತು. ಕೆಲ ದಿನಗಳ ಹಿಂದೆ ಅವರು ಲತಾ ದೀದಿಯವರ ಹಾಡೊಂದನ್ನು ಹಾಡಿ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದ್ದರು. ನಾನು ಈ ಅದ್ಭುತ ಕ್ರಿಯಾತ್ಮಕತೆಗೆ ಈ ಸೋದರ ಸೋದರಿ ಕಿಲಿ ಮತ್ತು ನೀಮಾ ಅವರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಕೆಲ ದಿನಗಳ ಹಿಂದೆ ತಾಂಜಾನಿಯಾದಲ್ಲಿ ಭಾರತೀಯ ರಾಯಭಾರಿ ಕಛೇರಿಯಲ್ಲಿ ಇವರನ್ನು ಸನ್ಮಾನಿಸಲಾಗಿದೆ. ಭಾರತೀಯ ಸಂಗೀತದ ಜಾದೂ ಅಷ್ಟು ಅದ್ಭುತವಾಗಿದೆ. ಎಲ್ಲರ ಮನಸೂರೆಗೊಳ್ಳುತ್ತದೆ. ಕೆಲ ವರ್ಷಗಳ ಹಿಂದೆ ವಿಶ್ವದ 150 ಕ್ಕೂ ಹೆಚ್ಚು ದೇಶಗಳ ಗಾಯಕರು, ಸಂಗೀತಗಾರರು ತಂತಮ್ಮ ವೇಷ ಭೂಷಣಗಳೊಂದಿಗೆ ಪೂಜ್ಯ ಬಾಪು ಪ್ರಿಯ ಮಹಾತ್ಮಾ ಗಾಂಧಿಯವರ ಪ್ರಿಯ ಭಜನೆ ವೈಷ್ಣವ ಜನತೋ ಹಾಡುವ ಸಫಲ ಪ್ರಯತ್ನವನ್ನು ಮಾಡಿದ್ದರು
ಇಂದು ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಮಹತ್ವಪೂರ್ಣ ಪರ್ವವನ್ನು ಆಚರಿಸುತ್ತಿರುವಾಗ ದೇಶ ಭಕ್ತಿ ಗೀತೆಗಳಲ್ಲೂ ಇಂಥ ಪ್ರಯತ್ನಗಳನ್ನು ಮಾಡಬಹುದಾಗಿದೆ. ವಿದೇಶಿ ನಾಗರಿಕರು, ಅಲ್ಲಿಯ ಪ್ರಸಿದ್ಧ ಗಾಯಕರನ್ನು ಭಾರತೀಯ ದೇಶ ಭಕ್ತಿ ಗೀತೆಗಳನ್ನು ಹಾಡಲು ಆಮಂತ್ರಿಸಬಹುದಾಗಿದೆ. ಇಷ್ಟೇ ಅಲ್ಲ ತಾಂಜೇನಿಯಾದ ಕಿಲಿ ಮತ್ತು ನೀಮಾ ಭಾರತೀಯ ಗೀತೆಗಳೊಂದಿಗೆ ಹೀಗೆ ಲಿಪ್ ಸಿಂಕ್ ಮಾಡಬಹುದಾದರೆ ನಮ್ಮ ದೇಶದ ಹಲವಾರು ಭಾಷೆಗಳಲ್ಲಿ ಅನೇಕ ಬಗೆಯ ಗೀತೆಗಳಿವೆ. ನಾವು ಗುಜರಾತಿ ಮಗು ತಮಿಳು ಗೀತೆಗೆ, ಕೇರಳದ ಮಗು ಅಸ್ಸಾಂ ಗೀತೆಗೆ, ಕನ್ನಡದ ಮಗು ಜಮ್ಮು ಮತ್ತು ಕಾಶ್ಮೀರದ ಗೀತೆಗೆ ಲಿಪ್ ಸಿಂಕ್ ಮಾಡಬಹುದಲ್ಲವೆ. ನಾವು ‘ಏಕ್ ಭಾರತ್ ಶ್ರೇಷ್ಠ ಭಾರತ’ ಎಂಬ ಪರಿಸರವನ್ನು ಅನುಭವಿಸುವ ಇಂತಹ ವಾತಾವರಣ ಸೃಷ್ಟಿಸಬಹುದು. ಇಷ್ಟೇ ಅಲ್ಲ ನಾವು ಅಜಾದಿ ಕೆ ಅಮೃತ್ ಮಹೋತ್ಸವವನ್ನು ವಿಭಿನ್ನ ರೀತಿಯಲ್ಲಿ ಖಂಡಿತ ಆಚರಿಸಬಹುದಾಗಿದೆ. ಭಾರತೀಯ ಭಾಷೆಗಳ ಸುಪ್ರಸಿದ್ಧ ಗೀತೆಗಳನ್ನು ನೀವು ನಿಮ್ಮದೇ ರೀತಿಯಲ್ಲಿ ವಿಡಿಯೋ ಚಿತ್ರೀಕರಿಸಿ ಎಂದು ದೇಶದ ಯುವಜನತೆಯನ್ನು ನಾನು ಆಹ್ವಾನಿಸುತ್ತೇನೆ. ಇದರಿಂದ ನೀವು ಬಹಳ ಪ್ರಸಿದ್ಧಿ ಹೊಂದುತ್ತೀರಿ. ಅಲ್ಲದೆ ದೇಶದ ವಿವಿಧತೆ ಬಗ್ಗೆ ಹೊಸ ಪೀಳಿಗೆಗೆ ಪರಿಚಯವೂ ಆಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ಕೆಲವು ದಿನಗಳ ಹಿಂದಷ್ಟೇ, ನಾವು ಮಾತೃಭಾಷಾ ದಿನವನ್ನು ಆಚರಿಸಿದೆವು. ವಿದ್ವಾಂಸರು ಮಾತೃಭಾಷೆ ಶಬ್ದ ಎಲ್ಲಿಂದ ಬಂದಿತು, ಯಾವರೀತಿ ಅದರ ಉತ್ಪತ್ತಿಯಾಯಿತು, ಎಂಬ ಕುರಿತು ಬಹಳ ಅಕಾಡಮಿಕ್ ಇನ್ ಪುಟ್ ನೀಡಬಲ್ಲರು. ಯಾವ ರೀತಿ ನಮ್ಮ ತಾಯಿ ನಮ್ಮ ಜೀವನವನ್ನು ರೂಪಿಸುತ್ತಾಳೆಯೋ ಅದೇ ರೀತಿ ಮಾತೃಭಾಷೆ ಕೂಡಾ ನಮ್ಮ ಜೀವನವನ್ನು ರೂಪಿಸುತ್ತದೆ ಎಂದು ನಾನು ಹೇಳುತ್ತೇನೆ. ತಾಯಿ ಮತ್ತು ಮಾತೃಭಾಷೆ ಎರಡೂ ಜೀವನದ ಅಡಿಪಾಯವನ್ನು ಬಲಿಷ್ಠಗೊಳಿಸುತ್ತವೆ, ಚಿರಂಜೀವಿಯನ್ನಾಗಿಸುತ್ತವೆ. ಯಾವರೀತಿ ನಾವು ನಮ್ಮ ತಾಯಿಯನ್ನು ಬಿಡಲಾರೆವೋ ಅದೇ ರೀತಿ ಮಾತೃಭಾಷೆಯನ್ನು ಕೂಡಾ ಬಿಡಲಾರೆವು. ನನಗೆ ಕೆಲ ವರ್ಷಗಳ ಹಿಂದಿನ ಒಂದು ವಿಷಯ ನೆನಪಿನಲ್ಲಿದೆ. ನಾನು ಅಮೆರಿಕಾಗೆ ಹೋಗಬೇಕಾಯಿತು. ಅಲ್ಲಿ ವಿವಿಧ ಕುಟುಂಬಗಳಿಗೆ ಭೇಟಿ ನೀಡುವ ಅವಕಾಶ ದೊರೆಯುತ್ತಿತ್ತು, ಹಾಗೆಯೇ ಒಮ್ಮೆ ತೆಲುಗು ಭಾಷೆ ಮಾತನಾಡುವ ಕುಟುಂಬಕ್ಕೆ ಭೇಟಿ ನೀಡುವ ಅವಕಾಶ ದೊರೆತಿತ್ತು ಅಲ್ಲಿ ಬಹಳ ಸಂತೋಷ ನೀಡುವ ದೃಶ್ಯವೊಂದು ನನಗೆ ಕಂಡುಬಂದಿತು. ಅವರು ನನಗೆ ಹೇಳಿದ್ದೇನೆಂದರೆ, ಅವರು ಕುಟುಂಬದಲ್ಲಿ ಒಂದು ನಿಯಮದ ಪಾಲನೆ ಮಾಡುತ್ತಾರೆ ಅದೇನೆಂದರೆ ನಗರದಲ್ಲೇ ಇದ್ದಲ್ಲಿ, ಎಷ್ಟೇ ಕೆಲಸ ಕಾರ್ಯಗಳಿದ್ದರೂ, ಕುಟುಂಬದ ಪ್ರತಿಯೊಬ್ಬ ಸದಸ್ಯನೂ ರಾತ್ರಿಯ ಊಟದ ಸಮಯದಲ್ಲಿ ಒಟ್ಟಿಗೆ ಕುಳಿತು ಊಟ ಮಾಡಬೇಕು ಮತ್ತು ಪರಸ್ಪರರೊಂದಿಗೆ ಕಡ್ಡಾಯವಾಗಿ ತೆಲುಗು ಭಾಷೆಯಲ್ಲಿ ಮಾತ್ರಾ ಮಾತನಾಡಬೇಕು. ಅಲ್ಲಿಯೇ ಜನ್ಮತಾಳಿದ ಮಕ್ಕಳಿಗೂ ಅವರ ಮನೆಯಲ್ಲಿ ಇದೇ ನಿಯಮ ಅನ್ವಯವಾಗುತ್ತದೆ. ತಮ್ಮ ಮಾತೃಭಾಷೆಯ ಬಗ್ಗೆ ಅವರ ಈ ಪ್ರೀತಿಯನ್ನು ನೋಡಿ, ಈ ಕುಟುಂಬದಿಂದ ನಾನು ಬಹಳ ಪ್ರಭಾವಿತನಾದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾತಂತ್ರ್ಯಬಂದು 75 ವರ್ಷಗಳು ಕಳೆದಿದ್ದರೂ, ಕೆಲವರು ಇನ್ನೂ ತಮ್ಮ ಭಾಷೆ, ತಮ್ಮ ಉಡುಗೆ-ತೊಡುಗೆ, ತಮ್ಮಆಹಾರ-ಪಾನೀಯ ಕುರಿತಂತೆ ಒಂದು ರೀತಿಯ ಸಂಕೋಚ ಸ್ವಭಾವದಿಂದ, ಮಾನಸಿಕ ದ್ವಂದ್ವದೊಂದಿಗೆ ಜೀವಿಸುತ್ತಿದ್ದಾರೆ, ವಿಶ್ವದಲ್ಲಿ ಬೇರೆಲ್ಲಿಯೂ ಈ ರೀತಿ ಇಲ್ಲ. ನಮ್ಮ ಮಾತೃಭಾಷೆಯಲ್ಲಿ ನಾವು ಹೆಮ್ಮೆಯಿಂದ ಮಾತನಾಡಬೇಕು. ನಮ್ಮ ಭಾರತವಂತೂ ಭಾಷೆಯ ವಿಷಯದಲ್ಲಿ ಅದೆಷ್ಟು ಶ್ರೀಮಂತವಾಗಿದೆಯೆಂದರೆ ಇದಕ್ಕೆ ಹೋಲಿಕೆಯೇ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್ ನಿಂದ ಕೋಹಿಮಾದವರೆಗೆ ನೂರಾರು ಭಾಷೆಗಳು, ಸಾವಿರಾರು ಉಪ ಭಾಷೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿದ್ದರೂ ಕೂಡಾ ಸಂಯೋಜಿತವಾಗಿವೆ. ಭಾಷೆಗಳು ಅನೇಕ–ಭಾವ ಒಂದೇ, ಇದೇ ನಮ್ಮ ಭಾಷೆಗಳಲ್ಲಿನ ಅತ್ಯಂತ ಸುಂದರವಾದ ಅಂಶ. ಶತಮಾನಗಳಿಂದ ನಮ್ಮ ಭಾಷೆಗಳು ಪರಸ್ಪರರಿಂದ ಕಲಿಯುತ್ತಿವೆ, ಪರಿಷ್ಕೃತಗೊಳ್ಳುತ್ತಿವೆ ಮತ್ತು ಪರಸ್ಪರ ಅಭಿವೃದ್ಧಿ ಹೊಂದುತ್ತಿವೆ. ಭಾರತದಲ್ಲಿ ಅತ್ಯಂತ ಹಳೆಯ ಭಾಷೆ ತಮಿಳು ಭಾಷೆಯಾಗಿದೆ, ಪ್ರಪಂಚದ ಇಷ್ಟು ದೊಡ್ಡ ಪರಂಪರೆ ನಮ್ಮಲ್ಲಿದೆ ಎನ್ನುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ವಿಷಯ. ಅದೇ ರೀತಿ ಅದೆಷ್ಟು ಪುರಾಣ ಗ್ರಂಥಗಳಿವೆಯೋ, ಅವುಗಳಲ್ಲಿ ಅಭಿವ್ಯಕ್ತಿ ಕೂಡಾ ನಮ್ಮ ಸಂಸ್ಕೃತ ಭಾಷೆಯಲ್ಲಿಯೇ ಇದೆ. ಭಾರತದ ಜನತೆ ಸುಮಾರು 121 ಪ್ರಕಾರದ ಮಾತೃ ಭಾಷೆಗಳಿಂದ ಸಂಪರ್ಕಿತರಾಗಿದ್ದೇವೆಂದು ನಮಗೆ ಹೆಮ್ಮೆಯೆನಿಸುತ್ತದೆ. ಇವುಗಳ ಪೈಕಿ 14 ಭಾಷೆಗಳಲ್ಲಂತೂ ಒಂದು ಕೋಟಿಗೂ ಅಧಿಕ ಜನರು ತಮ್ಮ ದೈನಂದಿನ ಜೀವನದಲ್ಲಿ ಮಾತನಾಡುತ್ತಾರೆ. ಅಂದರೆ, ಅನೇಕ ಐರೋಪ್ಯ ದೇಶಗಳು ಹೊಂದಿರುವ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರು ನಮ್ಮ ದೇಶದಲ್ಲಿ 14 ಬೇರೆ ಬೇರೆ ಭಾಷೆಗಳಿಂದ ಪರಸ್ಪರ ಸಂಪರ್ಕಿತರಾಗಿದ್ದಾರೆ. 2019 ರಲ್ಲಿ ಹಿಂದೀ ಭಾಷೆಯು ವಿಶ್ವದಲ್ಲಿ ಅತಿ ಹೆಚ್ಚಾಗಿ ಮಾತನಾಡುತ್ತಿರುವ ಭಾಷೆಗಳ ಪೈಕಿ ಮೂರನೇ ಸ್ಥಾನದಲ್ಲಿತ್ತು. ಈ ಬಗ್ಗೆ ಕೂಡಾ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕು. ಭಾಷೆ ಎನ್ನುವುದು ಕೇವಲ ಅಭಿವ್ಯಕ್ತಪಡಿಸುವ ಮಾಧ್ಯಮ ಮಾತ್ರವಲ್ಲ, ಭಾಷೆ ಎನ್ನುವುದು ಸಮಾಜದ ಸಂಸ್ಕೃತಿ ಮತ್ತು ಪರಂಪರೆಯನ್ನು ಕೂಡಾ ಉಳಿಸಿ ಬೆಳೆಸುವ ಕಾರ್ಯ ನಿರ್ವಹಿಸುತ್ತದೆ. ತಮ್ಮ ಭಾಷೆಯ ಪರಂಪರೆಯನ್ನು ಉಳಿಸುವ ಬೆಳೆಸುವ ಇಂತಹ ಕಾರ್ಯವನ್ನು ಸೂರಿನಾಮ್ ನಲ್ಲಿ ಸುರ್ಜನ್ ಪರೋಹೀ ಅವರು ಮಾಡುತ್ತಿದ್ದಾರೆ. ಈ ತಿಂಗಳ ಎರಡರಂದು ಅವರು 84ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಪೂರ್ವಜರು ಅನೇಕ ವರ್ಷಗಳ ಹಿಂದೆಯೇ, ಸಾವಿರಾರು ಕಾರ್ಮಿಕರೊಂದಿಗೆ ಹೊಟ್ಟೆಪಾಡಿಗಾಗಿ ಸೂರೀನಾಮ್ ಗೆ ಬಂದು ನೆಲೆಸಿದ್ದರು. ಸುರ್ಜನ್ ಪರೋಹಿ ಅವರು ಹಿಂದೀ ಭಾಷೆಯಲ್ಲಿ ಬಹಳ ಸುಂದರವಾಗಿ ಕವಿತೆಗಳನ್ನು ಬರೆಯುತ್ತಾರೆ, ಅಲ್ಲಿನ ರಾಷ್ಟ್ರಕವಿಗಳ ಪೈಕಿ ಇವರ ಹೆಸರು ಕೂಡಾ ಕೇಳಿಬರುತ್ತದೆ. ಅಂದರೆ, ಇಂದಿಗೂ ಅವರ ಹೃದಯದಲ್ಲಿ ಹಿಂದೂಸ್ತಾನ್ ಮಿಡಿಯುತ್ತದೆ, ಅವರ ಕೃತಿಗಳಲ್ಲಿ ಭಾರತೀಯ ಮಣ್ಣಿನ ಘಮ ಹೊರಸೂಸುತ್ತದೆ. ಸೂರಿನಾಮ್ ನ ಜನತೆ ಸುರ್ಜನ್ ಪರೋಹಿ ಅವರ ಹೆಸರಿನಲ್ಲಿ ಒಂದು ವಸ್ತು ಸಂಗ್ರಹಾಲಯ ಕೂಡಾ ಮಾಡಿದ್ದಾರೆ. 2015 ರಲ್ಲಿ ಇವರನ್ನು ಸನ್ಮಾನಿಸುವ ಅವಕಾಶ ನನಗೆ ದೊರೆತಿದ್ದು ನನ್ನ ಸೌಭಾಗ್ಯವಾಗಿತ್ತು.
ಸ್ನೇಹಿತರೇ, ಇಂದು, ಅಂದರೆ ಫೆಬ್ರವರಿ 27 ಮರಾಠಿ ಭಾಷೆಯ ಹೆಮ್ಮೆಯ ದಿನವೂ ಆಗಿದೆ.
“ಸರ್ವ ಮರಾಠಿ ಬಂಧು ಭಗಿನಿನಾ ಮರಾಠಿ ಭಾಷಾ ದಿನಾಚ್ಯಾ ಹಾರ್ದಿಕ್ ಶುಭೇಚ್ಚಾ”
“ಮರಾಠಿ ಸೋದರ ಸೋದರಿಯರಿಗೆಲ್ಲಾ ಮರಾಠಿ ದಿನದ ಹಾರ್ದಿಕ ಶುಭಾಶಯಗಳು.”
ಈ ದಿನವನ್ನು ಮರಾಠಿ ಭಾಷೆಯ ಕವಿವರ್ಯ, ವಿಷ್ಣು ಬಾಮನ್ ಶಿರ್ವಾಡ್ಕರ್, ಶ್ರೀಮಾನ್ ಕುಸುಮಾಗ್ರಜ್ ಅವರಿಗೆ ಸಮರ್ಪಿಸಲಾಗಿದೆ. ಇಂದು ಕುಸುಮಾಗ್ರಜ್ ಅವರ ಜನ್ಮ ಜಯಂತಿಯೂ ಹೌದು. ಕುಸುಮಾಗ್ರಜ್ ಅವರು ಮರಾಠಿ ಕವಿತೆಗಳನ್ನು ರಚಿಸಿದ್ದಾರೆ, ಅನೇಕ ನಾಟಕಗಳನ್ನು ರಚಿಸಿದ್ದಾರೆ, ಮರಾಠಿ ಸಾಹಿತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಸ್ನೇಹಿತರೇ, ನಮ್ಮಲ್ಲಿ ಭಾಷೆಗೆ ತನ್ನದೇ ಆದ ಸೌಂದರ್ಯವಿದೆ, ಮಾತೃಭಾಷೆಗೆ ತನ್ನದೇ ಆದ ವಿಜ್ಞಾನವಿದೆ. ಈ ವಿಜ್ಞಾನವನ್ನು ಅರ್ಥ ಮಾಡಿಕೊಂಡೇ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಸ್ಥಳೀಯ ಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ನಮ್ಮ ವೃತ್ತಿಪರ ಕೋರ್ಸ್ಗಳಲ್ಲಿ ಕೂಡಾ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಇಂತಹ ಪ್ರಯತ್ನಗಳಿಗೆ ನಾವೆಲ್ಲರೂ ಒಂದುಗೂಡಿ ವೇಗ ನೀಡಬೇಕಾಗಿದೆ, ಇದೊಂದು ಸ್ವಾಭಿಮಾನದಕೆಲಸವಾಗಿದೆ. ನೀವು ಯಾವ ಮಾತೃಭಾಷೆ ಮಾತನಾಡುತ್ತೀರೋ ಅದರ ಸೌಂದರ್ಯದ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಬೇಕೆಂದು ಮತ್ತು ಏನನ್ನಾದರೂ ಬರೆಯಬೇಕೆಂದು ನಾನು ಬಯಸುತ್ತೇನೆ.
ಸ್ನೇಹಿತರೇ, ಕೆಲವೇ ದಿನಗಳ ಹಿಂದೆ, ನನ್ನ ಸ್ನೇಹಿತ, ಕೀನ್ಯಾ ದೇಶದ ಮಾಜಿ ಪ್ರಧಾನ ಮಂತ್ರಿ ರಾಯಿಲಾ ಒಡಿಂಗಾ ಅವರನ್ನು ನಾನು ಭೇಟಿ ಮಾಡಿದ್ದೆ. ಈ ಭೇಟಿಯು ಬಹಳ ಆತ್ಮೀಯವಾಗಿತ್ತು ಮಾತ್ರವಲ್ಲ ಭಾವಪೂರ್ಣವಾಗಿತ್ತು. ನಾನು ಬಹಳ ಉತ್ತಮ ಮಿತ್ರರಾಗಿದ್ದೇವೆ ಆದ್ದರಿಂದ ಬಿಚ್ಚುಮನಸ್ಸಿನಿಂದ ಅನೇಕ ವಿಚಾರಗಳ ಬಗ್ಗೆ ಮಾತುಕತೆ ಆಡುತ್ತೇವೆ. ನಾವಿಬ್ಬರೂ ಮಾತನಾಡುತ್ತಿದ್ದಾಗ, ಒಡಿಂಗಾ ಅವರು ತಮ್ಮ ಮಗಳ ಬಗ್ಗೆ ಹೇಳಿದರು. ಅವರ ಮಗಳು ರೋಸ್ ಮೇರಿಗೆ ಬ್ರೈನ್ ಟ್ಯೂಮರ್ ಆಗಿತ್ತು ಮತ್ತು ಹೀಗಾಗಿ ಆಕೆಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಆದರೆ ಅದರ ಒಂದು ಅಡ್ಡಪರಿಣಾಮ ಉಂಟಾಗಿ ರೋಸ್ ಮೇರಿಯ ಕಣ್ಣುಗಳ ದೃಷ್ಟಿ ಹೆಚ್ಚುಕಡಿಮೆ ನಷ್ಟವಾಗಿತ್ತು, ಕಣ್ಣು ಕಾಣಿಸುತ್ತಿರಲಿಲ್ಲ. ಆ ಹೆಣ್ಣು ಮಗುವಿನ ಪರಿಸ್ಥಿತಿ ಏನಾಗಿರಬಹುದು, ಮತ್ತು ಆಕೆಯ ತಂದೆಯ ಪರಿಸ್ಥಿತಿ ಏನಾಗಿರಬಹುದು ಎಂದು ನಾವು ಊಹಿಸಬಹುದು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಅವರು ವಿಶ್ವಾದ್ಯಂತ ಆಸ್ಪತ್ರೆಗಳಲ್ಲಿ, ಮಗಳ ಚಿಕಿತ್ಸೆಗಾಗಿ, ಪ್ರಯತ್ನ ಪಡದ ವಿಶ್ವದ ಯಾವುದೇ ದೊಡ್ಡ ದೇಶವಿಲ್ಲ. ವಿಶ್ವದ ದೊಡ್ಡ ದೊಡ್ಡ ದೇಶಗಳಲ್ಲಿ ಪ್ರಯತ್ನಿಸಿದರು, ಆದರೆ ಎಲ್ಲೂ ಫಲ ದೊರೆಯಲಿಲ್ಲ. ಒಂದು ರೀತಿಯಲ್ಲಿ ಎಲ್ಲಾ ಆಸೆಗಳನ್ನೂ ಕೈಬಿಟ್ಟರು, ಮನೆಯಲ್ಲಿ ಒಂದು ರೀತಿಯ ನಿರಾಶಾದಾಯಕ ವಾತಾವರಣ ಸೃಷ್ಟಿಯಾಯಿತು. ಇಷ್ಟರಲ್ಲೇ, ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗಾಗಿ ಬರುವಂತೆ ಯಾರೋ ಒಬ್ಬರು ಸಲಹೆ ನೀಡಿದರು. ಅವರು ಈವರೆಗೇ ಸಾಕಷ್ಟು ಪ್ರಯತ್ನಗಳನ್ನು ಮಾಡಿಯಾಗಿತ್ತು, ಆದರೂ ಇದನ್ನೂ ಕೂಡಾ ಒಮ್ಮೆ ಪ್ರಯತ್ನಿಸಿ ನೋಡಬಾರದೇಕೆ ಎಂದು ಯೋಚಿಸಿದರು. ಅವರು ಭಾರತಕ್ಕೆ ಬಂದರು, ಕೇರಳದ ಒಂದು ಆಯುರ್ವೇದ ಆಸ್ಪತ್ರೆಯಲ್ಲಿ ತಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ಆರಂಭಿಸಿದರು. ಸಾಕಷ್ಟು ಸಮಯ ಮಗಳು ಇಲ್ಲಿಯೇ ಇದ್ದರು. ಆಯುರ್ವೇದದ ಚಿಕಿತ್ಸೆಯಿಂದಾಗಿ ರೋಸ್ ಮೇರಿಯವರ ಕಣ್ಣಿನ ದೃಷ್ಟಿ ಪುನಃ ಸಾಕಷ್ಟು ಮರಳಿ ಬಂದಿತು. ಯಾವ ರೀತಿ ಆಕೆಗೆ ಒಂದು ಹೊಸ ಜೀವನ ದೊರೆಯಿತು, ರೋಸ್ ಮೇರಿ ಜೀವನದಲ್ಲಿ ಹೊಸ ಬೆಳಕು ಮೂಡಿತೆಂದು ನೀವು ಊಹಿಸಬಹುದು. ಇಡೀ ಕುಟುಂಬದಲ್ಲಿ ಹೊಸ ಬೆಳಕು, ಹೊಸ ಜೀವನ ಮೂಡಿತು. ಒಡಿಂಗಾ ಅವರು ಬಹಳ ಭಾವುಕರಾಗಿ ಈ ವಿಚಾರವನ್ನು ನನಗೆ ಹೇಳಿದರು, ಭಾರತದ ಆಯುರ್ವೇದದ ಜ್ಞಾನವನ್ನು ಅವರು ಕೀನ್ಯಾಗೆ ಕೂಡಾ ತಲುಪುವಂತೆ ಮಾಡುವ ತಮ್ಮ ಇಚ್ಛೆಯನ್ನು ಪ್ರಕಟಿಸಿದರು. ಯಾವ ರೀತಿ ಗಿಡಗಳು ಈ ಕಾರ್ಯದಲ್ಲಿ ಉಪಯೋಗಕ್ಕೆಬರುತ್ತದೆಯೋ ಅಂತಹ ಗಿಡಗಳನ್ನು ಬೆಳೆಸುವುದಾಗಿ ಮತ್ತು ಅದರ ಪ್ರಯೋಜನ ಹೆಚ್ಚಿನ ಜನರಿಗೆ ಸಿಗುವಂತೆ ಅವರು ಪ್ರಯತ್ನ ಪಡುವುದಾಗಿ ಅವರು ಹೇಳಿದರು.
ನಮ್ಮ ಭೂಮಿ ಮತ್ತು ಪರಂಪರೆಯಿಂದ ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಕಷ್ಟ ದೂರವಾಗಿದೆ ಎನ್ನುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ. ಇದನ್ನು ಕೇಳಿ ನಿಮಗೆ ಕೂಡಾ ಬಹಳ ಸಂತೋಷವಾಗಿರುತ್ತದೆ. ಇದರಿಂದ ಹೆಮ್ಮೆ ಪಡದ ಭಾರತೀಯ ಇರುತ್ತಾನೆಯೇ? ಕೇವಲ ಒಡಿಂಗಾ ಅವರು ಮಾತ್ರವಲ್ಲದೇ, ಪ್ರಪಂಚದ ಲಕ್ಷಾಂತರ ಜನರು ಆಯುರ್ವೇದದಿಂದ ಇಂತಹ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ.
ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಅವರು ಕೂಡಾ ಆಯುರ್ವೇದದ ಬಹು ದೊಡ್ಡ ಪ್ರಶಂಸಕರಾಗಿದ್ದಾರೆ. ಅವರೊಂದಿಗೆ ನಾನು ಭೇಟಿಯಾದಾಗಲೆಲ್ಲ ಅವರು ಆಯುರ್ವೇದದ ಬಗ್ಗೆ ಖಂಡಿತಾ ಪ್ರಸ್ತಾಪಿಸುತ್ತಾರೆ. ಅವರಿಗೆ ಭಾರತದ ಹಲವಾರು ಆಯುರ್ವೇದ ಸಂಸ್ಥೆಗಳ ಬಗ್ಗೆ ಮಾಹಿತಿಯೂ ಇದೆ.
ಸ್ನೇಹಿತರೆ, ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಆಯುರ್ವೇದದ ಪ್ರಚಾರ ಮತ್ತು ಪ್ರಸಾರ ಕುರಿತು ಬಹಳಷ್ಟು ಗಮನಹರಿಸಲಾಗಿದೆ. ಆಯುಷ್ ಸಚಿವಾಲಯ ಆರಂಭಿಸುವುದರೊಂದಿಗೆ ಚಿಕಿತ್ಸೆ ಮತ್ತು ಆರೋಗ್ಯ ಕುರಿತು ನಮ್ಮ ಪಾರಂಪರಿಕ ಪದ್ಧತಿಗಳನ್ನು ಜನಪ್ರಿಯಗೊಳಿಸುವ ಸಂಕಲ್ಪಕ್ಕೆ ಮತ್ತಷ್ಟು ಬಲ ದೊರೆತಿದೆ. ಕಳೆದ ಕೆಲ ಸಮಯದಿಂದ ಆಯುರ್ವೇದ ಕ್ಷೇತ್ರದಲ್ಲೂ ಅನೇಕ ಹೊಸ ಸ್ಟಾರ್ಟ್ ಅಪ್ ಗಳು ಆರಂಭವಾಗಿದೆ ಎಂಬ ಕುರಿತು ನನಗೆ ಬಹಳ ಸಂತೋಷವೆನಿಸುತ್ತದೆ. ಇದೇ ತಿಂಗಳ ಆರಂಭದಲ್ಲಿ ಆಯಷ್ ಸ್ಟಾರ್ಟ್ ಅಪ್ ಚಾಲೆಂಜ್ ಆರಂಭಗೊಂಡಿತ್ತು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸ್ಟಾರ್ಟ್ ಅಪ್ ಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿತ್ತು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಜನತೆ ಈ ಸ್ಪರ್ಧೆಯಲ್ಲಿ ಖಂಡಿತ ಭಾಗವಹಿಸಿ ಎಂದು ನಾನು ಆಗ್ರಹಿಸುತ್ತೇನೆ.
ಸ್ನೇಹಿತರೆ, ಒಂದು ಬಾರಿ ಜನರು ಒಗ್ಗೂಡಿ ಏನನ್ನದರೂ ಮಾಡಬೇಕೆಂದು ನಿರ್ಧರಿಸಿದರೆ ಅದ್ಭುತವಾದುದನ್ನು ಮಾಡಿಬಿಡುತ್ತಾರೆ. ಸಮಾಜದಲ್ಲಿ ಜನರ ಪಾಲ್ಗೊಳ್ಳುವಿಕೆಯಿಂದ, ಸಾಮೂಹಿಕ ಪ್ರಯತ್ನದಿಂದ ಮಾಡಿದಂತಹ ಇಂಥ ಅನೇಕ ದೊಡ್ಡ ಬದಲಾವಣೆಗಳಾಗಿವೆ. “ಮಿಷನ್ ಜಲ್ ಥಲ್” ಎಂಬ ಹೆಸರಿನ ಇಂಥದೇ ಒಂದು ಜನಾಂದೋಲನ ಕಾಶ್ಮೀರದ ಶ್ರೀನಗರದಲ್ಲಿ ನಡೆಯುತ್ತಿದೆ. ಇದು ಶ್ರೀನಗರದ ಕೊಳಗಳು ಮತ್ತು ಕೆರೆಗಳ ಸ್ವಚ್ಛತೆ ಮತ್ತು ಅವುಗಳ ಹಳೆಯ ವೈಭವವನ್ನು ಮರುಕಳಿಸುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. “ಮಿಷನ್ ಜಲ್ ಥಲ್” ದ ದೃಷ್ಟಿಕೋನ “ಕುಶಲ್ ಸಾರ” ಮತ್ತು “ಗಿಲ್ ಸಾರ” ಮೇಲಿದೆ. ಜನಾಂದೋಲನದ ಜೊತೆಗೆ ಇದರಲ್ಲಿ ತಂತ್ರಜ್ಞಾನದ ಸಹಾಯವನ್ನೂ ಪಡೆದುಕೊಳ್ಳಲಾಗುತ್ತಿದೆ. ಎಲ್ಲೆಲ್ಲಿ ಅತಿಕ್ರಮಣ ಮಾಡಿಕೊಳ್ಳಲಾಗಿದೆ, ಎಲ್ಲೆಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಇದನ್ನು ಪತ್ತೆಹಚ್ಚಲು ಈ ಕ್ಷೇತ್ರವನ್ನು ಸಂಪೂರ್ಣ ಸರ್ವೆ ಮಾಡಲಾಯಿತು. ಇದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡುವ ಮತ್ತು ಕಸ ವಿಮೋಚನೆ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಅಭಿಯಾನದ 2 ನೇ ಹಂತ ಹಳೆಯ ನಾಲೆಗಳು ಮತ್ತು ಕೆರೆ ತುಂಬುವ ನಿಟ್ಟಿನಲ್ಲಿ 19 ಕೊಳಗಳನ್ನು ಪುನರುಜ್ಜೀವನಗೊಳಿಸುವ ಸಂಪೂರ್ಣ ಪ್ರಯತ್ನ ಮಾಡಲಾಯಿತು. ಈ ಪುನರುಜ್ಜೀವಗೊಳಿಸುವ ಯೋಜನೆಯ ಮಹತ್ವದ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸಲು ಸ್ಥಳೀಯ ಜನರು ಮತ್ತು ಯುವಜನತೆಯನ್ನು ಜಲ ರಾಯಭಾರಿಗಳನ್ನಾಗಿ ನೇಮಿಸಲಾಯಿತು. ಈಗ ಸ್ಥಳೀಯರು “ಗಿಲ್ ಸಾರ್” ಕೊಳದಲ್ಲಿ ಪ್ರವಾಸಿ ಪಕ್ಷಿಗಳು ಮತ್ತು ಮೀನಿನ ಸಂಖ್ಯೆ ವೃದ್ಧಿಸುತ್ತಲೇ ಸಾಗಲಿ ಎಂದು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಅದನ್ನು ಕಂಡು ಸಂತೋಷವೂ ಆಗುತ್ತದೆ. ನಾನು ಈ ಅದ್ಭುತ ಪ್ರಯತ್ನಕ್ಕೆ ಶ್ರೀನಗರದ ಜನತೆಗೆ ಅನಂತ ಅಭಿನಂದನೆ ಸಲ್ಲಿಸುತ್ತೇನೆ.
ಸ್ನೇಹಿತರೆ, 8 ವರ್ಷಗಳ ಹಿಂದೆ ದೇಶ ಆರಂಭಿಸಿದ್ದ ‘ಸ್ವಚ್ಛ ಭಾರತ’ ಅಭಿಯಾನದ ವಿಸ್ತಾರ ಸಮಯದೊಂದಿಗೆ ವೃದ್ಧಿಸುತ್ತಾ ಸಾಗಿದೆ. ಹೊಸ ಹೊಸ ಆವಿಷ್ಕಾರಗಳೂ ಇದರೊಂದಿಗೆ ಸೇರಿಕೊಂಡವು. ಭಾರತದಲ್ಲಿ ನೀವು ಎಲ್ಲಿಯೇ ಹೋದರೂ ಎಲ್ಲೆಡೆ ಸ್ವಚ್ಛತೆ ಬಗ್ಗೆ ಒಂದಲ್ಲಾ ಒಂದು ರೀತಿಯ ಪ್ರಯತ್ನ ಸಾಗಿರುವುದನ್ನು ಕಾಣಬಹುದು. ಅಸ್ಸಾಂ ನ ಕೊಖ್ರಜಾರ್ ನಲ್ಲಿಯ ಇಂಥದೇ ಒಂದು ಪ್ರಯತ್ನದ ಬಗ್ಗೆ ನನಗೆ ತಿಳಿಯಿತು. ಇಲ್ಲಿ ಬೆಳಗ್ಗೆ ವಾಕಿಂಗ್ ಮಾಡುವವರ ಒಂದು ಗುಂಪು ‘ಸ್ವಚ್ಛ ಮತ್ತು ಹಸಿರು ಕೋಖ್ರಜಾರ್’ ನಿರ್ಮಾಣಕ್ಕೆ ಶ್ಲಾಘನೀಯ ಪ್ರಯತ್ನವನ್ನು ಮಾಡಿದ್ದಾರೆ. ಇವರೆಲ್ಲರೂ ಹೊಸ ಫ್ಲೈ ಓವರ್ ಕ್ಷೇತ್ರದಲ್ಲಿ 3 ಕಿ ಮೀ ಉದ್ದದ ರಸ್ತೆಯನ್ನು ಸ್ವಚ್ಛಗೊಳಿಸಿ, ಸ್ವಚ್ಛತೆಯ ಬಗ್ಗೆ ಪ್ರೇರಣಾತ್ಮಕ ಸಂದೇಶವನ್ನು ಸಾರಿದ್ದಾರೆ. ಇದರಂತೆ ವಿಶಾಖ ಪಟ್ಟಣಂ ದಲ್ಲಿ ‘ಸ್ವಚ್ಛ ಭಾರತ ಆಂದೋಲನ’ ಅಡಿ ಪಾಲಿಥೀನ್ ಬದಲಾಗಿ ಬಟ್ಟೆಯ ಚೀಲಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇಲ್ಲಿಯ ಜನತೆ ಪರಿಸರವನ್ನು ಸ್ವಚ್ಛವಾಗಿಡಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಉತ್ಪನ್ನಗಳ ವಿರುದ್ಧ ಅಭಿಯಾನವನ್ನೂ ಆರಂಭಿಸಿದ್ದಾರೆ. ಇದರ ಜೊತೆಗೆ ಜನರು ಮನೆಯಲ್ಲೇ ಕಸವನ್ನು ಬೇರ್ಪಡಿಸುವ ಬಗ್ಗೆ ಜಾಗರೂಕತೆಯನ್ನು ಮೂಡಿಸುತ್ತಿದ್ದಾರೆ. ಮುಂಬೈಯ ಸೋಮಯ್ಯಾ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಸೌಂದರ್ಯವನ್ನೂ ಸೇರಿಸಿಕೊಂಡಿದ್ದಾರೆ. ಇವರು ಕಲ್ಯಾಣ ರೈಲ್ವೇ ನಿಲ್ದಾಣದ ಗೋಡೆಗಳನ್ನು ಸುಂದರ ವರ್ಣಚಿತ್ರಗಳಿಂದ ಅಲಂಕರಿಸಿದ್ದಾರೆ. ರಾಜಸ್ಥಾನದ ಸವಾಯಿ ಮಾಧವಪುರದ ಪ್ರೇರಣಾತ್ಮಕ ಉದಾಹರಣೆ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಇಲ್ಲಿಯ ಯುವಜನತೆ ರಣಥಂಬೋರ್ ನಲ್ಲಿ ‘ಮಿಶನ್ ಬೀಟ್ ಪ್ಲಾಸ್ಟಿಕ್’ ಎಂಬ ಆಂದೋಲನವನ್ನು ಆರಂಭಿಸಿದ್ದಾರೆ. ಇದರಲ್ಲಿ ರಣಥಂಬೋರ್ ಕಾಡುಗಳಿಂದ ಪ್ಲಾಸ್ಟಿಕ್’ ಮತ್ತು ಪಾಲಿಥೀನ್ ತೊಡೆದುಹಾಕಿದ್ದಾರೆ. ಎಲ್ಲರ ಪ್ರಯತ್ನದ ಇದೇ ಭಾವನೆ ದೇಶದಲ್ಲಿ ಜನಾಂದೋಲನದ ಭಾವನೆಗೆ ಪುಷ್ಟಿ ನೀಡುತ್ತದೆ. ಜನರ ಪಾಲ್ಗೊಳ್ಳುವಿಕೆಯಿದ್ದಲ್ಲಿ ದೊಡ್ಡ ದೊಡ್ಡ ಗುರಿಯನ್ನೂ ಸಾಧಿಸಲಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ, ಮಾರ್ಚ್ 8 ರಂದು ಇಡೀ ವಿಶ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಮಹಿಳೆಯರ ಸಾಹಸ, ನೈಪುಣ್ಯ, ಅವರ ಪ್ರತಿಭೆ ಸಂಬಂಧಿತ ಎಷ್ಟೊಂದು ಉದಾಹರಣೆಗಳನ್ನು ನಾವು ಮನ್ ಕಿ ಬಾತ್ ನಲ್ಲಿ ಸತತವಾಗಿ ಹಂಚಿಕೊಳ್ಳುತ್ತಿದ್ದೇವೆ. ಸ್ಕಿಲ್ ಇಂಡಿಯಾ ಆಗಿರಲಿ, ಸ್ವ ಸಹಾಯ ಗುಂಪೇ ಆಗಿರಲಿ, ಅಥವಾ ಸಣ್ಣ ದೊಡ್ಡ ಉದ್ಯೋಗವಿರಲಿ ಮಹಿಳೆಯರು ಪ್ರತಿಯೊಂದರಲ್ಲೂ ಮುನ್ನಡೆ ಸಾಧಿಸಿದ್ದಾರೆ. ನೀವು ಯಾವುದೇ ಕ್ಷೇತ್ರದಲ್ಲಾದರೂ ನೋಡಿ, ಮಹಿಳೆಯರು ಹಿಂದಿನ ಮಿಥ್ಯೆಗಳನ್ನು ತೊಡೆದುಹಾಕುತ್ತಿದ್ದಾರೆ. ಇಂದು ನಮ್ಮ ದೇಶದಲ್ಲಿ ಪಾರ್ಲಿಮೆಂಟ್ ನಿಂದ ಪಂಚಾಯತ್ ವರೆಗೂ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಹೊಸ ಔನ್ನತ್ಯಗಳನ್ನು ಸಾಧಿಸುತ್ತಿದ್ದಾರೆ. ಸೇನೆಯಲ್ಲಿ ಕೂಡಾ ಹೆಣ್ಣು ಮಕ್ಕಳು ಹೊಸ ಮತ್ತು ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ, ಮತ್ತು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಗಣರಾಜ್ಯೋತ್ಸವ ದಿನದಂದು ಆಧುನಿಕ ಫೈಟರ್ ವಿಮಾನಗಳನ್ನು ಕೂಡಾ ಹೆಣ್ಣುಮಕ್ಕಳು ಹಾರಾಟ ನಡೆಸಿದ್ದನ್ನು ನಾವು ನೋಡಿದೆವು. ದೇಶದ ಸೈನಿಕ್ ಶಾಲೆಗಳಲ್ಲಿ ಕೂಡಾ ಹೆಣ್ಣುಮಕ್ಕಳ ಪ್ರವೇಶಾತಿಗೆ ಇದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ, ಇಡೀ ದೇಶದಲ್ಲಿ ಹೆಣ್ಣು ಮಕ್ಕಳು ಸೈನಿಕ್ ಶಾಲೆಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳುತ್ತಿದ್ದಾರೆ. ಇದೇ ರೀತಿ, ನಮ್ಮ ಸ್ಟಾರ್ಟ್ ಅಪ್ ಜಗತ್ತನ್ನು ನೋಡಿ, ಕಳೆದ ವರ್ಷ, ದೇಶದಲ್ಲಿ ಸಾವಿರಾರು ಹೊಸ ಸ್ಟಾರ್ಟಪ್ ಗಳು ಆರಂಭವಾದವು. ಇವುಗಳ ಪೈಕಿ ಅರ್ಧದಷ್ಟು ಸ್ಟಾರ್ಟ್ ಅಪ್ ಗಳಲ್ಲಿ ಮಹಿಳೆಯರು ನಿರ್ದೇಶಕರ ಪಾತ್ರ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲವು ಸಮಯದಲ್ಲಿ ಮಹಿಳೆಯರಿಗಾಗಿ ಮಾತೃತ್ವ ರಜಾ ದಿನಗಳನ್ನು ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಗಿದೆ. ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡುತ್ತಾ, ವಿವಾಹದ ವಯಸ್ಸನ್ನು ಸರಿದೂಗಿಸುವುದಕ್ಕೆ ದೇಶ ಪ್ರಯತ್ನಿಸುತ್ತಿದೆ. ಇದರಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗುತ್ತಿರುವುದನ್ನು ನೀವು ನೋಡುತ್ತಿರಬಹುದು. ಈ ಬದಲಾವಣೆ ನಮ್ಮ ಸಾಮಾಜಿಕ ಅಭಿಯಾನಗಳ ಯಶಸ್ಸು. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಯಶಸ್ಸನ್ನೇ ನೋಡಿ, ದೇಶದಲ್ಲಿ ಇಂದು ಲಿಂಗ ಅನುಪಾತದಲ್ಲಿ ಸುಧಾರಣೆಯಾಗುತ್ತಿದೆ. ಶಾಲೆಗೆ ಹೋಗುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಕೂಡಾ ಹೆಚ್ಚಳವಾಗಿದೆ. ನಮ್ಮ ಹೆಣ್ಣು ಮಕ್ಕಳು ಮಧ್ಯದಲ್ಲಿ ಶಾಲೆಗೆ ಹೋಗುವುದನ್ನು ನಿಲ್ಲಿಸದಂತೆ ನೋಡಿಕೊಳ್ಳುವುದು ಕೂಡಾ ನಮ್ಮದೇ ಜವಾಬ್ದಾರಿಯಾಗಿದೆ. ಇದೇ ರೀತಿ, ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ, ದೇಶದಲ್ಲಿ ಮಹಿಳೆಯರಿಗೆ ಬಯಲು ಶೌಚದಿಂದ ಮುಕ್ತಿ ದೊರೆತಿದೆ. ತ್ರಿವಳಿ ತಲಾಖ್ ನಂತಹ ಸಾಮಾಜಿಕ ಪಿಡುಗು ಕೂಡಾ ಅಂತ್ಯವಾಗುತ್ತಿದೆ. ತ್ರಿವಳಿ ತಲಾಖ್ ವಿರುದ್ಧದ ಕಾನೂನು ಬಂದಾಗಿನಿಂದ, ದೇಶದಲ್ಲಿ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಶೇಕಡಾ 80 ರಷ್ಟು ಇಳಿಕೆ ಕಂಡುಬಂದಿದೆ. ಇಷ್ಟೊಂದು ಬದಲಾವಣೆಗಳು ಇಷ್ಟು ಕಡಿಮೆ ಸಮಯದಲ್ಲಿ ಹೇಗೆ ಸಾಧ್ಯವಾಗುತ್ತಿದೆ ? ನಮ್ಮ ದೇಶದಲ್ಲಿ ಪರಿವರ್ತನೆ ಮತ್ತು ಪ್ರಗತಿಶೀಲ ಪ್ರಯತ್ನಗಳ ನೇತೃತ್ವವನ್ನು ಸ್ವತಃ ಮಹಿಳೆಯರೇ ವಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾಳೆ ಫೆಬ್ರವರಿ 28 ರಂದು ಅಂತಾರಾಷ್ಟ್ರೀಯ ವಿಜ್ಞಾನ ದಿನ. ಈ ದಿನ ರಾಮನ್ ಎಫೆಕ್ಟ್ ನ ಅನ್ವೇಷಣೆಗಾಗಿ ಕೂಡಾ ಹೆಸರಾಗಿದೆ. ನಮ್ಮ ವೈಜ್ಞಾನಿಕ ಪಯಣವನ್ನು ಶ್ರೀಮಂತವಾಗಿಸಲು ತಮ್ಮ ಮಹತ್ವಪೂರ್ಣ ಕೊಡುಗೆ ನೀಡಿರುವ ಸಿ.ವಿ. ರಾಮನ್ ಅವರಿಗೆ ಮತ್ತು ಅಂತಹ ಎಲ್ಲಾ ವಿಜ್ಞಾನಿಗಳಿಗೆ ಗೌರವಪೂರ್ಣ ವಂದನೆಗಳನ್ನು ಅರ್ಪಿಸುತ್ತೇನೆ. ಸ್ನೇಹಿತರೇ, ನಮ್ಮ ಜೀವನದಲ್ಲಿ ತಂತ್ರಜ್ಞಾನವು ಸುಲಭ ಮತ್ತು ಸರಳತೆಯಲ್ಲಿ ಸಾಕಷ್ಟು ಮಹತ್ವದ ಪಾತ್ರ ವಹಿಸುತ್ತದೆ. ಯಾವ ತಂತ್ರಜ್ಞಾನ ಉತ್ತಮವಾಗಿದೆ, ಯಾವ ತಂತ್ರಜ್ಞಾನದ ಉತ್ತಮ ಉಪಯೋಗ ಯಾವುದು, ಈ ಎಲ್ಲ ವಿಷಯಗಳ ಬಗ್ಗೆ ನಾವು ಸಾಮಾನ್ಯವಾಗಿ ತಿಳಿದಿರುತ್ತೇವೆ. ಆದರೆ, ನಮ್ಮ ಕುಟುಂಬದ ಮಕ್ಕಳಿಗೆ ಆ ತಂತ್ರಜ್ಞಾನದ ಆಧಾರ ಯಾವುದು, ಅದರ ಹಿಂದಿರುವ ವಿಜ್ಞಾನ ಯಾವುದು, ಈ ವಿಷಯಗಳ ಬಗ್ಗೆ ನಮ್ಮ ಗಮನ ಹೋಗುವುದೇ ಇಲ್ಲ. ಈ ವಿಜ್ಞಾನ ದಿನದಂದು ತಮ್ಮ ಮಕ್ಕಳ ವೈಜ್ಞಾನಿಕ ಮನೋಭಾವ ವಿಕಾಸವಾಗುವಂತೆ ಮಾಡಲು ಖಂಡಿತವಾಗಿಯೂ ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡಲಾರಂಭಿಸಬೇಕೆಂದು ನಾನು ಎಲ್ಲ ಕುಟುಂಬದವರಲ್ಲಿ ಮನವಿ ಮಾಡುತ್ತಿದ್ದೇನೆ. ಕೇವಲ ಕನ್ನಡಕ ಹಾಕಿ ನೋಡುವುದು, ಸಂತೋಷ ಪಡುವುದು ಇಷ್ಟೇ ಅಲ್ಲ. ಕನ್ನಡಕ ಹಾಕಿಕೊಂಡ ನಂತರ ಹಿಂದಿಗಿಂತ ಚೆನ್ನಾಗಿ ಕಾಣಿಸುತ್ತಿದೆ ಎನ್ನುವುದರ ಹಿಂದೆ ಇರುವ ವಿಜ್ಞಾನ ಯಾವುದು ಎಂಬುದನ್ನು ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸಬಹುದು. ನೀವು ಈಗ ಮಕ್ಕಳಿಗೆ ಒಂದು ಸಣ್ಣ ಕಾಗದದ ಮೇಲೆ ಬರೆದು ಅವರಿಗೆ ತಿಳಿಸಬಹುದು. ಈಗ ಅವರು ಮೊಬೈಲ್ ಫೋನ್ ಉಪಯೋಗಿಸುತ್ತಾರೆ. ಕ್ಯಾಲ್ಕ್ಯುಲೇಟರ್ ಹೇಗೆ ಕೆಲಸ ಮಾಡುತ್ತದೆ, ರಿಮೋಟ್ ಕಂಟ್ರೋಲ್ ಹೇಗೆ ಕೆಲಸ ಮಾಡುತ್ತದೆ. ಸೆನ್ಸರ್ ಎಂದರೇನು, ಇಂತಹ ವೈಜ್ಞಾನಿಕ ಮಾತುಕತೆ ಮನೆಯಲ್ಲಿ ನಡೆಯುತ್ತದೆಯೇ? ಇದನ್ನು ನಾವು ಸುಲಭವಾಗಿ ಮಾಡಬಹುದು. ನಾವು ನಮ್ಮ ದೈನದಿಂನ ಜೀವನದಲ್ಲಿನ ಕೆಲವು ವಿಷಯಗಳನ್ನು, ಅವುಗಳ ಹಿಂದಿರುವ ವೈಜ್ಞಾನಿಕತೆಯನ್ನು ಸುಲಭವಾಗಿ ಮಕ್ಕಳಿಗೆ ವಿವರಿಸಬಹುದು. ಅದೇರೀತಿ, ನಾವು ನಮ್ಮ ಮಕ್ಕಳೊಂದಿಗೆ ಒಟ್ಟಿಗೆ ಆಕಾಶದತ್ತ ನೋಡಿದ್ದೇವೆಯೇ? ರಾತ್ರಿಯಲ್ಲಿ ನಕ್ಷತ್ರಗಳ ಬಗ್ಗೆ ಕೂಡಾ ಖಂಡಿತವಾಗಿಯೂ ಮಾತನಾಡಬಹುದು. ಅನೇಕ ರೀತಿಯ ನಕ್ಷತ್ರ ಪುಂಜಗಳು ಕಂಡುಬರುತ್ತವೆ, ಅವುಗಳ ಬಗ್ಗೆ ತಿಳಿಸಿಕೊಡಿ. ಈ ರೀತಿ ಮಾಡುವ ಮೂಲಕ ನೀವು ಮಕ್ಕಳಲ್ಲಿ ಭೌತಶಾಸ್ತ್ರ ಮತ್ತು ಖಗೋಳ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಹೊಸ ಕುತೂಹಲ ಮೂಡುವಂತೆ ಮಾಡಬಹುದು. ನೀವು ನಕ್ಷತ್ರಗಳು ಮತ್ತು ಗ್ರಹಗಳನ್ನು ಪತ್ತೆ ಮಾಡಬಹುದಾದ ಅಥವಾ ಆಕಾಶದಲ್ಲಿ ಕಾಣಿಸುತ್ತಿರುವ ನಕ್ಷತ್ರವನ್ನು ಗುರುತಿಸಬಹುದಾದ ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳಬಹುದಾದ ಅನೇಕ ಅನ್ವಯಿಕಗಳು ಕೂಡಾ ಈಗ ಲಭ್ಯವಿದೆ. ನೀವು ನಿಮ್ಮ ನೈಪುಣ್ಯ ಮತ್ತು ವೈಜ್ಞಾನಿಕ ಗುಣಗಳನ್ನು ರಾಷ್ಟ್ರ ನಿರ್ಮಾಣದ ಕೆಲಸ ಕಾರ್ಯಗಳಲ್ಲಿ ಕೂಡಾ ಉಪಯೋಗಿಸಿ ಎಂದು ನಾನು ನಮ್ಮ ಸ್ಟಾರ್ಟ್ ಅಪ್ ಗಳಿಗೆ ಕೂಡಾ ಹೇಳುತ್ತೇನೆ. ಇದು ದೇಶಕ್ಕಾಗಿ ನಮ್ಮ ಸಾಮೂಹಿಕ ವೈಜ್ಞಾನಿಕ ಜವಾಬ್ದಾರಿಯೂ ಆಗಿದೆ. ನಮ್ಮ Start-ups virtual reality ಪ್ರಪಂಚದಲ್ಲಿ ಕೂಡಾ ಬಹಳ ಚೆನ್ನಾಗಿ ಕೆಲಸ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ವರ್ಚುವಲ್ ತರಗತಿಗಳ ಈ ಕಾಲದಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಒಂದು ವರ್ಚುವಲ್ ಪ್ರಯೋಗಾಲಯವನ್ನು ಕೂಡಾ ನಿರ್ಮಿಸಬಹುದಾಗಿದೆ. ನಾವು virtual reality ಮೂಲಕ ಮಕ್ಕಳು ಮನೆಯಲ್ಲಿ ಕುಳಿತಿರುವಂತೆಯೇ ಅವರಿಗೆ chemistry lab ನ ಅನುಭವ ಉಂಟಾಗುವಂತೆ ಮಾಡಬಹುದು. ನಮ್ಮ ಶಿಕ್ಷಕರು ಮತ್ತು ಪೋಷಕರಲ್ಲಿ ನನ್ನ ವಿನಂತಿಯೆಂದರೆ, ನೀವೆಲ್ಲರೂ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಪ್ರಶ್ನೆ ಕೇಳುವುದಕ್ಕೆ ಪ್ರೋತ್ಸಾಹಿಸಿ ಮತ್ತು ಅವರೊಂದಿಗೆ ಸೇರಿ ಸರಿಯಾದ ಉತ್ತರಕ್ಕಾಗಿ ಹುಡುಕಾಟ ನಡೆಸಿ. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತೀಯ ವಿಜ್ಞಾನಿಗಳ ಪಾತ್ರವನ್ನು ನಾನು ಇಂದು ಪ್ರಶಂಸಿಸಲು ಬಯಸುತ್ತೇನೆ. ಅವರ ಕಠಿಣ ಪರಿಶ್ರಮದಿಂದಾಗಿಯೇ Made In India ಲಸಿಕೆಯ ಉತ್ಪಾದನೆ ಸಾಧ್ಯವಾಯಿತು, ಇದರಿಂದಾಗಿ ಇಡೀ ವಿಶ್ವಕ್ಕೆ ಬಹುದೊಡ್ಡ ಸಹಾಯ ದೊರೆತಂತಾಯಿತು. ಮನುಕುಲಕ್ಕೆ ಇದು ವಿಜ್ಞಾನದ ಬಹುದೊಡ್ಡ ಕೊಡುಗೆಯಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈಬಾರಿ ಕೂಡಾ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಮುಂಬರುವ ಮಾರ್ಚ್ ತಿಂಗಳಿನಲ್ಲಿ ಅನೇಕ ಹಬ್ಬ, ಉತ್ಸವಗಳು ಬರಲಿವೆ. ಶಿವರಾತ್ರಿ ಹಬ್ಬವಿದೆ ಮತ್ತು ಕೆಲವೇ ದಿನಗಳ ನಂತರ ನೀವೆಲ್ಲರೂ ಹೋಳಿ ಹಬ್ಬದ ಸಿದ್ಧತೆಯಲ್ಲಿ ತೊಡಗಲಿದ್ದೀರಿ. ನಮ್ಮೆಲ್ಲರನ್ನೂ ಒಂದೇ ಸೂತ್ರದಲ್ಲಿ ಜೋಡಿಸುವ ಹಬ್ಬ ಹೋಳಿ ಹಬ್ಬವಾಗಿದೆ. ಇದರಲ್ಲಿ ನಮ್ಮವರು-ಪರರು, ದ್ವೇಷ-ವಿದ್ವೇಷ, ಸಣ್ಣ-ದೊಡ್ಡ ಎಂಬೆಲ್ಲಾ ಭೇದಭಾವಗಳು ಅಳಿಸಿಹೋಗುತ್ತವೆ. ಆದ್ದರಿಂದಲೇ ಹೀಗೆಂದು ಹೇಳುತ್ತಾರೆ, ಹೋಳಿಯ ಬಣ್ಣಕ್ಕಿಂತಲೂ ಗಾಢವಾದ ಬಣ್ಣ, ಹೋಳಿಯ ಪ್ರೇಮ ಮತ್ತು ಸೌಹಾರ್ದದ್ದು ಎಂದು. ಹೋಳಿ ಹಬ್ಬದಲ್ಲಿ ಗುಜಿಯಾ ಸಿಹಿತಿನಿಸಿನ ಜೊತೆಯಲ್ಲಿ ಬಾಂಧವ್ಯದ ಸಿಹಿಯೂ ವಿಶಿಷ್ಟವಾಗಿರುತ್ತದೆ. ಈ ಬಾಂಧವ್ಯವನ್ನು ನಾವು ಮತ್ತಷ್ಟು ಬಲಗೊಳಿಸಬೇಕು ಮತ್ತು ಬಾಂಧವ್ಯ ಕೇವಲ ನಮ್ಮ ಕುಟುಂಬದ ಸದಸ್ಯರೊಂದಿಗೆ ಮಾತ್ರವಲ್ಲ, ನಮ್ಮ ಈ ಮಹಾನ್ ಕುಟುಂಬದ ಭಾಗವಾಗಿರುವ ಎಲ್ಲರೊಂದಿಗೂ ಇರಬೇಕು. ಇದರ ಮಹತ್ವಪೂರ್ಣ ವಿಧಾನ ಕೂಡಾ ನೀವು ನೆನಪಿಟ್ಟುಕೊಳ್ಳಬೇಕು. ಈ ವಿಧಾನವೆಂದರೆ– ‘Vocal for Local’ ಮಂತ್ರದೊಂದಿಗೆ ಹಬ್ಬ ಆಚರಿಸುವುದು. ನೀವು ಹಬ್ಬಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ, ಇದರಿಂದಾಗಿ ನಿಮ್ಮ ಸುತ್ತಮುತ್ತ ವಾಸಿಸುವ ಜನರ ಜೀವನದಲ್ಲಿ ಸಂತೋಷದ, ಭರವಸೆಯ ಬಣ್ಣ ತುಂಬಲಿ. ನಮ್ಮ ದೇಶ ಯಶಸ್ವಿಯಾಗಿ ಕೋರೋನಾ ವಿರುದ್ಧದ ಹೋರಾಟ ನಡೆಸುತ್ತಾ ಮುಂದೆ ಸಾಗುತ್ತಿದೆಯೋ ಅದರಿಂದಾಗಿ ಹಬ್ಬಗಳಲ್ಲಿ ಉತ್ಸಾಹ ಕೂಡಾ ಅನೇಕ ಪಟ್ಟು ಹೆಚ್ಚಾಗುತ್ತಿದೆ. ಇದೇ ಉತ್ಸಾಹದೊಂದಿಗೆ ನಾವು ನಮ್ಮ ಹಬ್ಬಗಳನ್ನು ಆಚರಿಸಬೇಕು, ಮತ್ತು ಅದರೊಂದಿಗೆ ಎಚ್ಚರಿಕೆಯಿಂದ ಕೂಡಾ ಇರಬೇಕು. ನಾನು ನಿಮ್ಮೆಲ್ಲರಿಗೂ ಮುಂಬರಲಿರುವ ಹಬ್ಬಗಳಿಗಾಗಿ ಶುಭಾಶಯಗಳನ್ನು ಕೋರುತ್ತನೆ. ನಾನು ಸದಾಕಾಲ ನಿಮ್ಮ ಮಾತುಗಳ, ನಿಮ್ಮ ಪತ್ರಗಳ ಮತ್ತು ನಿಮ್ಮ ಸಂದೇಶಗಳ ನಿರೀಕ್ಷೆಯಲ್ಲಿ ಇರುತ್ತೇನೆ.
ಅನೇಕಾನೇಕ ಧನ್ಯವಾದ.
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ! ಇಂದು ಮನದ ಮಾತಿನ ಮತ್ತೊಂದು ಸಂಚಿಕೆಯೊಂದಿಗೆ ನಾವೆಲ್ಲರೂ ಒಗ್ಗೂಡುತ್ತಿದ್ದೇವೆ. 2022 ರ ಮೊದಲ ಮನದ ಮಾತು ಇದಾಗಿದೆ. ಇಂದು ಕೂಡಾ ನಾವು ದೇಶ ಮತ್ತು ದೇಶಬಾಂಧವರ ಸಕಾರಾತ್ಮಕ ಪ್ರೇರಣೆ ಮತ್ತು ಸಾಮೂಹಿಕ ಪ್ರಯತ್ನಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡೋಣ. ಇಂದು ನಮ್ಮ ಪೂಜ್ಯ ಬಾಪು ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ. ಜನವರಿ 30 ರ ಈ ದಿನ ನಮಗೆ ಬಾಪು ಅವರ ಮಾರ್ಗದರ್ಶನವನ್ನು ನೆನಪಿಸಿಕೊಡುತ್ತದೆ. ಕೆಲ ದಿನಗಳ ಹಿಂದೆಯಷ್ಟೇ ನಾವು ಗಣರಾಜ್ಯೋತ್ಸವ ಆಚರಿಸಿದ್ದೇವೆ. ದೆಹಲಿಯ ರಾಜ್ ಪಥ್ ದಲ್ಲಿ ನಾವು ಶೌರ್ಯ ಮತ್ತು ಸಾಮರ್ಥ್ಯದ ಝಲಕ್ ನೋಡಿದ್ದೇವೆ. ಇದು ನಮ್ಮೆಲ್ಲರಲ್ಲಿ ಹೆಮ್ಮೆ ಮತ್ತು ಉತ್ಸಾಹವನ್ನು ತುಂಬಿದೆ. ಗಣರಾಜ್ಯೋತ್ಸವ ದಿನದ ಸಮಾರಂಭ ಜನವರಿ 23 ರಿಂದ ಅಂದರೆ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿಯಿಂದ ಆರಂಭವಾಗುತ್ತದೆ ಮತ್ತು ಜನವರಿ 30 ಗಾಂಧೀಜಿಯವರ ಪುಣ್ಯತಿಥಿವರೆಗೆ ಮುಂದುವರಿಯುತ್ತದೆ ಎಂಬ ಬದಲಾವಣೆಯನ್ನು ನೀವು ಗಮನಿಸಿರಬಹುದು. ಇಂಡಿಯಾ ಗೇಟ್ ಬಳಿ ನೇತಾಜಿಯವರ ಡಿಜಿಟಲ್ ಪ್ರತಿಮೆಯನ್ನು ಕೂಡಾ ಸ್ಥಾಪಿಸಿದ್ದೇವೆ. ದೇಶ ಈ ವಿಷಯವನ್ನು ಸ್ವಾಗತಿಸಿದ ರೀತಿ, ದೇಶದೆಲ್ಲೆಡೆ ಆನಂದದ ಅಲೆ ಎದ್ದಿರುವ ರೀತಿ, ಪ್ರತಿಯೊಬ್ಬ ದೇಶವಾಸಿ ವ್ಯಕ್ತಪಡಿಸಿದಂತಹ ಸಂತಸದ ಭಾವನೆಯನ್ನು ನಾವು ಎಂದಿಗೂ ಮರೆಯಲಾಗದು.
ಸ್ನೇಹಿತರೆ, ಆಜಾದಿ ಕೆ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ದೇಶ ಇಂಥ ಪ್ರಯತ್ನಗಳ ಮೂಲಕ ರಾಷ್ಟ್ರೀಯ ಪ್ರತಿಷ್ಠೆಯನ್ನು ಪುನಃ ಪ್ರತಿಸ್ಥಾಪಿಸುತ್ತಿದೆ. ಇಂಡಿಯಾ ಗೇಟ್ ಬಳಿಯ ‘ಅಮರ ಜವಾನ್ ಜ್ಯೋತಿ’ ಯನ್ನು ಹತ್ತಿರವೇ ‘ರಾಷ್ಟ್ರೀಯ ಯುದ್ಧ ಸ್ಮಾರಕ’ ದ ಜ್ಯೋತಿಗಳಲ್ಲಿ ಲೀನಗೊಳಿಸಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಇಂಥ ಭಾವನಾತ್ಮಕ ಸಂದರ್ಭದಲ್ಲಿ ಬಹಳಷ್ಟು ದೇಶವಾಸಿಗಳು ಮತ್ತು ಹುತಾತ್ಮ ಕುಟುಂಬದವರ ಕಣ್ಣಲ್ಲಿ ನೀರು ಜಿನುಗಿತ್ತು. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಬರೆಯಲಾಗಿದೆ. ನನಗೆ ಸೇನೆಯ ಕೆಲವು ಮಾಜಿ ಯೋಧರು ಪತ್ರ ಬರೆದು ಹೀಗೆ ಹೇಳಿದ್ದಾರೆ – “ಹುತಾತ್ಮರ ನೆನಪುಗಳೆದುರು ಪ್ರಜ್ವಲಿಸುತ್ತಿರುವ ‘ಅಮರ ಜವಾನ್ ಜ್ಯೋತಿ’ ಹುತಾತ್ಮರು ಅಮರರಾಗಿರುವುದಕ್ಕೆ ಸಾಕ್ಷಿಯಾಗಿದೆ.” ಅಮರ ಜವಾನ್ ಜ್ಯೋತಿ’ ಯಂತೆ ಹುತಾತ್ಮರ ತ್ಯಾಗ ಮತ್ತು ಬಲಿದಾನವೂ ಅಮರವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಿಮ್ಮೆಲ್ಲರಿಗೂ ಹೇಳಬಯಸುತ್ತೇನೆ. ನಿಮ್ಮ ಕುಟುಂಬ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಿ. ಇಲ್ಲಿ ನಿಮಗೆ ಒಂದು ವಿಭಿನ್ನವಾದ ಶಕ್ತಿ ಮತ್ತು ಪ್ರೇರಣೆಯ ಅನುಭವವಾಗುತ್ತದೆ.
ಸ್ನೇಹಿತರೆ, ಅಮೃತ ಮಹೋತ್ಸವದ ಈ ಆಯೋಜನೆಗಳ ಮಧ್ಯೆ ದೇಶದಲ್ಲಿ ಅನೇಕ ರಾಷ್ಟ್ರೀಯ ಪುರಸ್ಕಾರಗಳನ್ನೂ ನೀಡಲಾಯಿತು. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಇದರಲ್ಲೊಂದಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಹಸ ಮತ್ತು ಪ್ರೇರಣಾದಾಯಕ ಕೆಲಸ ಮಾಡಿದಂತಹ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುವುದು. ನಾವೆಲ್ಲರೂ ಮನೆಯಲ್ಲಿ ಈ ಮಕ್ಕಳ ಬಗ್ಗೆ ಖಂಡಿತ ಹೇಳಬೇಕು. ಇದರಿಂದ ನಮ್ಮ ಮಕ್ಕಳಿಗೂ ಪ್ರೇರಣೆ ದೊರೆಯುವುದು ಮತ್ತು ಅವರ ಮನದಲ್ಲಿ ದೇಶದ ಹೆಸರನ್ನು ಉಜ್ವಲಗೊಳಿಸುವ ಉತ್ಸಾಹ ಮೂಡುವುದು. ದೇಶದಲ್ಲಿ ಇದೀಗ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪದ್ಮ ಪ್ರಶಸ್ತಿಯನ್ನು ಪಡೆದವರಲ್ಲಿ ಕೆಲವರ ಬಗ್ಗೆ ಜನರಿಗೆ ಅಷ್ಟೇನೂ ತಿಳಿದಿರದಂತಹ ಹೆಸರುಗಳೂ ಇವೆ. ಇವರೆಲ್ಲ ನಮ್ಮ ದೇಶದ ತೆರೆಮರೆಯ ಸಾಧಕರಾಗಿದ್ದಾರೆ. ಇವರು ಸಾಧಾರಣ ಪರಿಸ್ಥಿತಿಗಳಲ್ಲೂ ಅಸಾಧಾರಣ ಕೆಲಸವನ್ನು ಮಾಡಿದ್ದಾರೆ. ಉದಾಹರಣೆಗೆ ಉತ್ತರಾಖಂಡದ ಬಸಂತಿದೇವಿ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಬಸಂತಿದೇವಿ ತಮ್ಮ ಜೀವನವನ್ನು ಸಂಘರ್ಷದಲ್ಲೇ ಸವೆಸಿದವರು. ಚಿಕ್ಕ ವಯಸ್ಸಿನಲ್ಲಿಯೇ ಪತಿ ವಿಯೋಗ ಕಾಡಿತ್ತು. ಅವರು ಆಶ್ರಮದಲ್ಲಿರಬೇಕಾಗಿ ಬಂದಿತು. ಇಲ್ಲಿದ್ದು ಅವರು ನದಿ ಸಂರಕ್ಷಣೆಗಾಗಿ ಸಂಘರ್ಷಗೈದರು ಮತ್ತು ಪರಿಸರ ಸಂರಕ್ಷಣೆಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರು ಮಹಿಳಾ ಸಶಕ್ತೀಕರಣಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಇದೇ ರೀತಿ ಮಣಿಪುರದ 77 ರ ವಯೋಮಾನದ ಲೌರೆಂಬಮ್ ಬಿನೊದೇವಿ ದಶಕಗಳಿಂದ ಮಣಿಪುರದ ಲಿಬಾ ಟೆಕ್ಸಟೈಲ್ ಕಲೆಯನ್ನು ಸಂರಕ್ಷಿಸುತ್ತಿದ್ದಾರೆ. ಅವರನ್ನೂ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಮಧ್ಯಪ್ರದೇಶದ ಅರ್ಜುನ್ ಸಿಂಗ್ ಅವರಿಗೆ ಬೈಗಾ ಬುಡಕಟ್ಟು ನೃತ್ಯಕ್ಕೆ ಮನ್ನಣೆ ದೊರೆಯುವಂತೆ ಮಾಡಿರುವುದಕ್ಕಾಗಿ ಪದ್ಮಶ್ರೀ ದೊರೆತಿದೆ. ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತೊಬ್ಬರು ಶ್ರೀಯುತ ಅಮಾಯಿ ಮಹಾಲಿಂಗ ನಾಯಿಕ್. ಇವರೊಬ್ಬ ಕೃಷಿಕರು ಮತ್ತು ಕರ್ನಾಟಕದವರಾಗಿದ್ದಾರೆ. ಇವರನ್ನು ಕೆಲವರು ಟನಲ್ ಮ್ಯಾನ್ ಎಂದೂ ಕರೆಯುತ್ತಾರೆ. ಇವರು ಕೃಷಿಯಲ್ಲಿ ಎಂಥೆಂಥ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ ಇದನ್ನು ನೋಡಿ ಜನರು ನೋಡಿ ದಂಗಾಗುತ್ತಾರೆ. ಇವರ ಪ್ರಯತ್ನದ ಫಲ ಸಣ್ಣ ಹಿಡುವಳಿದಾರರಿಗೆ ಆಗುತ್ತಿದೆ. ಇಂಥ ಅನೇಕ ತೆರೆಮರೆಯ ಸಾಧಕರ ಕೊಡುಗೆಗಳಿಗೆ ದೇಶ ಅವರನ್ನು ಸನ್ಮಾನಿಸಿದೆ. ನೀವು ಖಂಡಿತ ಇಂಥವರ ಬಗ್ಗೆ ಅರಿಯುವ ಪ್ರಯತ್ನ ಮಾಡಿ. ಇವರಿಂದ ಜೀವನದಲ್ಲಿ ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ.
ನನ್ನ ಪ್ರಿಯ ದೇಶಬಾಂಧವರೆ ಅಮೃತ್ ಮಹೋತ್ಸವದ ಅಂಗವಾಗಿ ನೀವೆಲ್ಲ ನನಗೆ ನೂರಾರು ಸಂದೇಶ ಮತ್ತು ಪತ್ರಗಳನ್ನು ಕಳುಹಿಸುತ್ತೀರಿ. ಸಾಕಷ್ಟು ಸಲಹೆಗಳನ್ನು ನೀಡುತ್ತೀರಿ. ಇವುಗಳಲ್ಲಿ ಅವಿಸ್ಮರಣೀಯವಾದ ಘಟನೆಗಳೂ ಇವೆ. ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ‘ಮನದ ಮಾತನ್ನು’ ಪೋಸ್ಟ್ ಕಾರ್ಡನಲ್ಲಿ ಬರೆದು ನನಗೆ ಕಳುಹಿಸಿದ್ದಾರೆ. ಈ ಒಂದು ಕೋಟಿ ಪೋಸ್ಟ್ ಕಾರ್ಡಗಳು ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬಂದಿವೆ. ಬಿಡುವು ಮಾಡಿಕೊಂಡು ಇದರಲ್ಲಿ ಹಲವಾರು ಪೋಸ್ಟ್ ಕಾರ್ಡಗಳನ್ನು ಓದುವ ಪ್ರಯತ್ನ ಮಾಡಿದ್ದೇನೆ. ಈ ಪೋಸ್ಟ್ ಕಾರ್ಡಗಳನ್ನು ಗಮನಿಸಿದಾಗ ದೇಶದ ಭವಿಷ್ಯಕ್ಕಾಗಿ ನಮ್ಮ ಹೊಸ ಪೀಳಿಗೆಯ ವಿಚಾರಗಳು ಎಷ್ಟೊಂದು ವ್ಯಾಪಕವಾಗಿವೆ ಮತ್ತು ಎಷ್ಟು ಬೃಹತ್ ಆಗಿದೆ ಎಂಬುದರ ಅರಿವಾಗುತ್ತದೆ. ನಾನು ಮನದ ಮಾತಿನ ಶ್ರೋತೃಗಳಿಗಾಗಿ ಕೆಲವು ಪೋಸ್ಟ್ ಕಾರ್ಡ ಗಳನ್ನು ಆಯ್ದುಕೊಂಡಿದ್ದೇನೆ. ಇವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಅಸ್ಸಾಂನ ಗುವಾಹಾಟಿಯಿಂದ ರಿದ್ಧಿಮಾ ಸ್ವರ್ಗಿಯಾರಿ ಅವರ ಪೋಸ್ಟ್ ಕಾರ್ಡ ಹೀಗಿದೆ. ರಿದ್ಧಿಮಾ 7 ನೇ ತರಗತಿ ವಿದ್ಯಾರ್ಥಿನಿ. ಅವರು ಸ್ವಾತಂತ್ರ್ಯದ 100 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ಸ್ವಚ್ಛ ದೇಶವೆಂದೆನಿಸಿಕೊಳ್ಳುವ, ಉಗ್ರವಾದದಿಂದ ಸಂಪೂರ್ಣ ಮುಕ್ತವಾದ, ಶೇಕಡಾ ನೂರರಷ್ಟು ಸಾಕ್ಷರ ದೇಶಗಳ ಪಟ್ಟಿಯಲ್ಲಿರುವ ದೇಶ, ಮತ್ತು ಸುಸ್ಥಿರತೆ ಮೂಲಕ ಆಹಾರ ಭದ್ರತೆಯಲ್ಲಿ ಸಕ್ಷಮವಾದ ಭಾರತವನ್ನು ನೋಡಬಯಸುತ್ತೇನೆ ಎಂದು ಬರೆದಿದ್ದಾರೆ. ರಿದ್ಧಿಮಾ – ನಮ್ಮ ಹೆಣ್ಣು ಮಕ್ಕಳ ವಿಚಾರ ಮತ್ತು ದೇಶಕ್ಕಾಗಿ ಅವರು ಕಾಣುವ ಕನಸು ಪೂರ್ಣಗೊಳ್ಳುತ್ತವೆ. ಎಲ್ಲರ ಪ್ರಯತ್ನಗಳು ಒಗ್ಗೂಡಿದಾಗ, ಯುವ ಪೀಳಿಗೆ ಇದನ್ನು ಗುರಿಯಾಗಿರಿಸಿಕೊಂಡು ಕೆಲಸ ಮಾಡಿದಾಗ ಭಾರತವನ್ನು ನೀವು ಹೇಗೆ ರೂಪಿಸಬೇಕೆಂದು ಕೊಂಡಿದ್ದೀರೊ ಹಾಗೆ ರೂಪಿಸಬಹುದಾಗಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ನವ್ಯಾ ವರ್ಮಾ ಅವರಿಂದಲೂ ಪೋಸ್ಟ್ ಕಾರ್ಡ ಒಂದು ದೊರೆತಿದೆ. ನವ್ಯಾ ಹೀಗೆ ಬರೆದಿದ್ದಾರೆ. 2047 ರಲ್ಲಿ ಎಲ್ಲರಿಗೂ ಗೌರವಯುತ ಜೀವನ ದೊರೆಯುವಂತಹ ಭಾರತವನ್ನು ಕಾಣಬಯಸುತ್ತಾರೆ. ಅದರಲ್ಲಿ ಕೃಷಿಕರು ಸಮೃದ್ಧಿಯನ್ನು ಹೊಂದಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂದು ಬಯಸಿದ್ದಾರೆ. ನವ್ಯಾ- ದೇಶದ ಕುರಿತಾದ ನಿಮ್ಮ ಕನಸು ಪ್ರಶಂಸನೀಯವಾಗಿದೆ. ಈ ದಿಸೆಯಲ್ಲಿ ದೇಶ ತ್ವರಿತಗತಿಯಲ್ಲಿ ಮುಂದುವರಿಯುತ್ತಿದೆ. ನೀವು ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದೀರಿ. ಭ್ರಷ್ಟಾಚಾರ ದೇಶವನ್ನು ಗೆದ್ದಲಿನಂತೆ ಟೊಳ್ಳು ಮಾಡಿಬಿಡುತ್ತದೆ. ಇದರಿಂದ ಮುಕ್ತರಾಗಲು 2047 ರ ವರೆಗೆ ಏಕೆ ಕಾಯಬೇಕು ಈ ಕೆಲಸವನ್ನು ಎಲ್ಲ ದೇಶವಾಸಿಗಳು ಮತ್ತು ಇಂದಿನ ಯುವಪೀಳಿಗೆ ಒಗ್ಗೂಡಿ ಮಾಡಬೇಕಿದೆ. ಆದಷ್ಟು ಬೇಗ ಮಾಡಬೇಕಿದೆ. ಇದಕ್ಕಾಗಿ ಸ್ವತಃ ನಾವೆಲ್ಲರೂ ನಮ್ಮ ಕರ್ತವ್ಯಗಳಿಗೆ ಆದ್ಯತೆಯನ್ನು ನೀಡುವುದು ಬಹಳ ಅವಶ್ಯಕವಾಗಿದೆ. ಕರ್ತವ್ಯ ನಿಭಾಯಿಸುವ ಅರಿವಿದ್ದಲ್ಲಿ ಕರ್ತವ್ಯ ಸರ್ವಶ್ರೇಷ್ಠವಾದಾಗ ಅಲ್ಲಿ ಭ್ರಷ್ಟಾಚಾರ ಸುಳಿಯುವುದೂ ಇಲ್ಲ.
ಸ್ನೇಹಿತರೇ, ನನ್ನ ಮುಂದೆ ಚೆನ್ನೈನ ಮೊಹಮ್ಮದ್ ಇಬ್ರಾಹಿಂ ಅವರ ಮತ್ತೊಂದು ಪೋಸ್ಟ್ ಕಾರ್ಡ್ ಇದೆ. ಇಬ್ರಾಹಿಂ ಅವರು ಭಾರತವನ್ನು 2047 ರಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಬಹುದೊಡ್ಡ ಬಲಿಷ್ಠ ಸಾಮರ್ಥ್ಯದ ರೂಪದಲ್ಲಿ ನೋಡಲು ಬಯಸುತ್ತಾರೆ. ಚಂದ್ರನ ಮೇಲೆ ಭಾರತ ತನ್ನದೇ ಆದ ಸಂಶೋಧನಾ ನೆಲೆ ಹೊಂದಿರಬೇಕು, ಮತ್ತು ಮಂಗಳ ಗ್ರಹವನ್ನು ಭಾರತ ಜನರಿಗೆ ವಾಸಿಸಲು ಯೋಗ್ಯ ಸ್ಥಳವನ್ನಾಗಿ ಮಾಡಬೇಕೆಂದು ಅವರು ಬಯಸುತ್ತಾರೆ. ಇದರೊಂದಿಗೆ, ಭೂಮಿಯನ್ನು ಮಾಲಿನ್ಯ ರಹಿತವನ್ನಾಗಿ ಮಾಡುವಲ್ಲಿ ಭಾರತದ ಬಹುದೊಡ್ಡಪಾತ್ರವನ್ನು ನೋಡಬೇಕೆಂದು ಇಬ್ರಾಹಿಂ ಬಯಸುತ್ತಾರೆ. ಇಬ್ರಾಹಿಂ ಅವರೆ ನಿಮ್ಮಂತಹ ಯುವಜನರು ಇರುವ ದೇಶಕ್ಕೆ ಯಾವುದೇ ಕೆಲಸ ಅಸಾಧ್ಯವಲ್ಲ.
ಸ್ನೇಹಿತರೇ, ನನ್ನ ಎದುರು ಮತ್ತೊಂದು ಪತ್ರವಿದೆ. ಈ ಪತ್ರ ಮಧ್ಯಪ್ರದೇಶದ ರಾಯ್ ಸೇನಾದಲ್ಲಿ ಸರಸ್ವತಿ ವಿದ್ಯಾ ಮಂದಿರದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾವನಾ ಅವರದ್ದು. ಯಾವ ರೀತಿಯಲ್ಲಿ ನೀವು ಪೋಸ್ಟ್ ಕಾರ್ಡ್ ಅನ್ನು ತ್ರಿವರ್ಣದಲ್ಲಿ ಅಲಂಕರಿಸಿ ಕಳುಹಿಸಿದ್ದೀರೋ ಅದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಎಲ್ಲಕ್ಕಿಂತ ಮೊದಲು ಭಾವನಾ ಅವರಿಗೆ ಹೇಳಬಯಸುತ್ತೇನೆ. ಭಾವನಾ ಅವರು ಕ್ರಾಂತಿಕಾರಿ ಶಿರೀಷ್ ಕುಮಾರ್ ಅವರ ಬಗ್ಗೆ ಬರೆದಿದ್ದಾರೆ.
ಸ್ನೇಹಿತರೇ, ಗೋವಾದಿಂದ ಲಾರೆನ್ಶಿಯೋ ಪರೇರಾ ಅವರಿಂದ ಕೂಡಾ ಒಂದು ಪತ್ರ ಬಂದಿದೆ. ಇವರು 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಇವರ ಪತ್ರದಲ್ಲಿನ ವಿಷಯ, ಸ್ವಾತಂತ್ರ್ಯದ ತೆರೆಮರೆಯ ಮಹಾನ್ ವೀರರು. ಇದರ ಸಾರಾಂಶವನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಇವರು ಬರೆದಿದ್ದಾರೆ –ಭೀಕಾಜಿಕಾಮಾ ಅವರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದ ಮಹಾನ್ ವೀರ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಅವರು ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿಸಲು ದೇಶ ವಿದೇಶಗಳಲ್ಲಿ ಅನೇಕ ಅಭಿಯಾನಗಳನ್ನು ನಡೆಸಿದರು. ಅನೇಕ ಪ್ರದರ್ಶನಗಳನ್ನು ಆಯೋಜಿಸಿದರು. ನಿಸ್ಸಂಶಯವಾಗಿ, ಭೀಕಾಜಿಕಾಮಾ ಅವರು ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಅತ್ಯಂತ ಧೈರ್ಯಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 1907 ರಲ್ಲಿ ಅವರು ಜರ್ಮನಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಈ ತ್ರಿವರ್ಣ ಧ್ವಜ ವಿನ್ಯಾಸ ಮಾಡುವಲ್ಲಿ ಅವರೊಂದಿಗೆ ಕೈಜೋಡಿಸಿದ ವ್ಯಕ್ತಿಯೆಂದರೆ ಶ್ರೀ ಶ್ಯಾಮ್ ಜಿ ಕೃಷ್ಣ ಶರ್ಮಾ. ಶ್ರೀ ಶ್ಯಾಮ್ ಜೀ ಕೃಷ್ಣ ವರ್ಮಾ ಅವರು ಜಿನಿವಾದಲ್ಲಿ 1930 ರಲ್ಲಿ ನಿಧನರಾದರು. ಭಾರತ ಸ್ವತಂತ್ರವಾದ ನಂತರ ಅವರ ಅಸ್ಥಿಯನ್ನು ಭಾರತಕ್ಕೆ ತರಬೇಕೆಂಬುದು ಅವರ ಅಂತಿಮ ಕೋರಿಕೆಯಾಗಿತ್ತು. ಹಾಗೆಯೇ 1947 ರಲ್ಲಿ ಸ್ವಾತಂತ್ರ್ಯ ಬಂದ ಎರಡನೇ ದಿನವೇ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕಿತ್ತು, ಆದರೆ, ಈ ಕಾರ್ಯ ನಡೆಯಲಿಲ್ಲ. ಬಹುಶಃ ಈ ಕಾರ್ಯ ನಾನು ಮಾಡಬೇಕೆಂಬುದು ಭಗವಂತನ ಇಚ್ಛೆಯಾಗಿತ್ತೇನೋ, ಈ ಕಾರ್ಯ ಮಾಡುವ ಸೌಭಾಗ್ಯ ನನಗೆ ದೊರೆಯಿತು. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, 2003 ರಲ್ಲಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಲಾಯಿತು. ಶ್ಯಾಮಜಿ ಕೃಷ್ಣ ವರ್ಮಾ ಅವರ ಸ್ಮರಣಾರ್ಥ ಅವರ ಜನ್ಮಸ್ಥಳವಾದ, ಕಛ್ ನ ಮಾಂಡ್ವಿಯಲ್ಲಿ ಒಂದು ಸ್ಮಾರಕವನ್ನು ಕೂಡಾ ಸ್ಥಾಪಿಸಲಾಯಿತು.
ಸ್ನೇಹಿತರೇ, ಭಾರತದ ಆಜಾದಿ ಕೇ ಅಮೃತ ಮಹೋತ್ಸವದ ಉತ್ಸಾಹ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ನನಗೆ ಭಾರತದ ಮಿತ್ರ ರಾಷ್ಟ್ರವಾದ ಕ್ರೊಯೇಷಿಯಾದಿಂದ ಕೂಡಾ 75 ಪತ್ರಗಳು ಬಂದಿವೆ. ಕ್ರೊಯೇಷಿಯಾದ ಜಾಗ್ರೇಬ್ ನಲ್ಲಿ School of Applied Arts and Design ನ ವಿದ್ಯಾರ್ಥಿಗಳು ಭಾರತದ ಜನರಿಗಾಗಿ 75 ಕಾರ್ಡ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಮತ್ತು ಅಮೃತ ಮಹೋತ್ಸವದ ಅಂಗವಾಗಿ ಶುಭ ಕೋರಿದ್ದಾರೆ. ನಾನು ನಮ್ಮ ದೇಶವಾಸಿಗಳ ಪರವಾಗಿ ಕ್ರೋಯೇಷಿಯಾ ಮತ್ತು ಅಲ್ಲಿನ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೇ ಭಾರತ ಜ್ಞಾನ ಮತ್ತು ಶಿಕ್ಷಣದ ತಪೋಭೂಮಿಯಾಗಿದೆ. ನಾವು ಶಿಕ್ಷಣವನ್ನು ಕೇವಲ ಪುಸ್ತಕ ಜ್ಞಾನಕ್ಕೆ ಮಾತ್ರಾ ಸೀಮಿತ ಮಾಡಿಲ್ಲ, ಶಿಕ್ಷಣವನ್ನು ಜೀವನದ ಸಮಗ್ರ ಅನುಭವದ ರೀತಿಯಲ್ಲಿ ನೋಡಿದ್ದೇವೆ. ನಮ್ಮ ದೇಶದ ಮಹಾನ್ ವ್ಯಕ್ತಿಗಳು ಕೂಡಾ ಶಿಕ್ಷಣ ಕ್ಷೇತ್ರದೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ. ಪಂಡಿತ್ ಮದನ್ ಮೋಹನ ಮಾಳವೀಯ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದರೆ, ಮಹಾತ್ಮಾ ಗಾಂಧಿಯವರು ಗುಜರಾತ್ ವಿದ್ಯಾಪೀಠದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ನ ಆನಂದ್ ನಲ್ಲಿ ಒಂದು ಬಹಳ ಸುಂದರವಾದ ಸ್ಥಳವಿದೆ ಅದೆಂದರೆ ವಲ್ಲಭ್ ವಿದ್ಯಾನಗರ್. ಸರ್ದಾರ್ ಪಟೇಲ್ ಅವರ ಒತ್ತಾಯದ ಮೇರೆಗೆ, ಅವರ ಇಬ್ಬರು ಸಹವರ್ತಿಗಳಾದ, ಭಾಯಿ ಕಾಕಾ ಮತ್ತು ಭೀಖಾ ಭಾಯಿ ಅವರು, ಅಲ್ಲಿನ ಯುವಕರಿಗಾಗಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರು. ಇದೇ ರೀತಿಯಲ್ಲಿ ಗುರುದೇವ ರವೀಂದ್ರನಾಥ್ ಠಾಗೂರ್ ಅವರು, ಶಾಂತಿ ನಿಕೇತನ್ ಸ್ಥಾಪಿಸಿದರು. ಮಹಾರಾಜಾ ಗಾಯಕ್ವಾಡ್ ಅವರು ಕೂಡಾ ಶಿಕ್ಷಣದ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಮತ್ತು ಡಾ. ಅಂಬೇಡ್ಕರ್ ಮತ್ತು ಶ್ರೀ ಅರಬಿಂದೋ ಸೇರಿದಂತೆ ಅನೇಕ ಮಹನೀಯರನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೇರೇಪಿಸಿದರು. ಅಂತೆಯೇ, ಅಂತಹ ಮಹನೀಯರ ಪಟ್ಟಿಯಲ್ಲಿ ಮತ್ತೊಂದು ಹೆಸರು ರಾಜಾ ಮಹೇಂದ್ರ ಪ್ರತಾಪ್ ಸಿಂಹ ಅವರದ್ದು. ರಾಜಾ ಮಹೇಂದ್ರ ಪ್ರತಾಪ್ ಸಿಂಹ ಅವರು ಒಂದು ತಾಂತ್ರಿಕ ಶಾಲೆಯ ಸ್ಥಾಪನೆಗಾಗಿ ತಮ್ಮ ಮನೆಯನ್ನೇ ಕೊಡುಗೆಯಾಗಿ ನೀಡಿದರು. ಅವರು ಅಲೀಗಢ್ ಮತ್ತು ಮಥುರಾದಲ್ಲಿ ಶಿಕ್ಷಣ ಕೇಂದ್ರಗಳ ಸ್ಥಾಪನೆಗಾಗಿ ಸಾಕಷ್ಟು ಆರ್ಥಿಕ ಸಹಾಯ ಮಾಡಿದರು. ಸ್ವಲ್ಪ ದಿನಗಳ ಹಿಂದೆ, ಅಲಿಗಢ್ ನಲ್ಲಿ ಅವರ ಹೆಸರಿನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ದೊರೆತಿತ್ತು. ಶಿಕ್ಷಣದ ಬೆಳಕನ್ನು ಜನರ ಬಳಿಗೆ ಕೊಂಡೊಯ್ಯುವ ಅದೇ ಸ್ಫೂರ್ತಿದಾಯಕ ಮನೋಭಾವನೆಯು ಇಂದಿಗೂ ಭಾರತದಲ್ಲಿ ಜೀವಂತವಾಗಿದೆ ಎಂಬುದು ನನಗೆ ಬಹಳ ಸಂತೋಷದ ವಿಷಯವಾಗಿದೆ. ಈ ಭಾವನೆಯಲ್ಲಿ ಅತ್ಯಂತ ಸುಂದರ ವಿಷಯ ಏನೆಂದು ನಿಮಗೆ ಗೊತ್ತೇ? ಶಿಕ್ಷಣದ ಬಗ್ಗೆ ಅರಿವು ಸಮಾಜದ ಪ್ರತಿಯೊಂದು ಹಂತದಲ್ಲೂ ಕಂಡುಬರುತ್ತಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಉಡುಮಲ್ ಪೇಟ್ ನಿವಾಸಿ ತಾಯಮ್ಮಾಳ್ ಅವರ ಉದಾಹರಣೆ ಬಹಳ ಪ್ರೇರಣಾದಾಯಕವಾಗಿದೆ. ತಾಯಮ್ಮಾಳ್ ಅವರಿಗೆ ತಮ್ಮದೇ ಯಾವುದೇ ಭೂಮಿ ಇಲ್ಲ. ಹಲವಾರು ವರ್ಷಗಳಿಂದ ಇವರ ಕುಟುಂಬ ಎಳನೀರು ಮಾರಾಟ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ ಆದರೂ, ತಾಯಮ್ಮಾಳ್ ತನ್ನ ಮಗ ಮತ್ತು ಮಗಳಿಗೆ ಶಿಕ್ಷಣ ಕೊಡಿಸಲು ಯಾವುದೇ ಹಿಂದೇಟು ಹಾಕಲಿಲ್ಲ. ಆಕೆಯ ಮಕ್ಕಳು ಚಿನ್ನವೀರಮ್ ಪಟ್ಟಿ ಪಂಚಾಯಿಚ್ ಯೂನಿಯನ್ ಮಿಡಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಗೆಯೇ ಒಂದು ದಿನ ಶಾಲೆಯಲ್ಲಿ ಪೋಷಕರೊಂದಿಗೆ ನಡೆದ ಸಭೆಯಲ್ಲಿ ತರಗತಿಗಳು ಮತ್ತು ಶಾಲೆಯ ಸ್ಥಿತಿಗತಿ ಸುಧಾರಣೆ, ಶಾಲೆಯ ಮೂಲಸೌಕರ್ಯ ಸುಧಾರಣೆ ಮಾಡುವ ವಿಷಯ ಚರ್ಚೆಗೆ ಬಂದಿತು. ತಾಯಮ್ಮಾಳ್ ಕೂಡಾ ಆ ಸಭೆಯಲ್ಲಿ ಹಾಜರಿದ್ದರು. ಅವರು ಎಲ್ಲವನ್ನೂ ಕೇಳಿಸಿಕೊಂಡರು. ಇದೇ ಸಭೆಯಲ್ಲಿ, ಈ ಕೆಲಸ ಕಾರ್ಯಗಳಿಗಾಗಿ ಹಣದ ಕೊರತೆ ಇರುವ ವಿಷಯ ಕೂಡಾ ಚರ್ಚೆಗೆ ಬಂದಿತು. ಇದಾದ ನಂತರ, ತಾಯಮ್ಮಾಳ್ ಏನು ಮಾಡಿದರೆಂದು ಯಾರೂ ಕಲ್ಪನೆ ಕೂಡಾ ಮಾಡಲು ಸಾಧ್ಯವಿಲ್ಲ. ಎಳನೀರು ಮಾರಾಟ ಮಾಡಿ ಅಲ್ಪ ಸ್ವಲ್ಪ ಸಂಗ್ರಹಿಸಿದ್ದ ಒಂದು ಲಕ್ಷ ರೂಪಾಯಿಯನ್ನು ತಾಯಮ್ಮಾಳ್ ಶಾಲೆಗಾಗಿ ದಾನ ಮಾಡಿದರು. ವಾಸ್ತವದಲ್ಲಿ ಇದನ್ನು ಮಾಡಲು ಬಹಳ ದೊಡ್ಡ ಹೃದಯ ಮತ್ತು ಸೇವಾಮನೋಭಾವ ಬೇಕು. ಈಗಿರುವ ಶಾಲೆಯಲ್ಲಿ 8 ನೇ ತರಗತಿಯವರೆಗೆ ಇದೆ. ಶಾಲೆಯ ಮೂಲಸೌಕರ್ಯ ಸುಧಾರಣೆಯಾದಾಗ,ಇಲ್ಲಿ ಹೈಯರ್ ಸೆಕೆಂಡರಿವರೆಗೆ ಶಿಕ್ಷಣ ನೀಡುವಂತಾಗುತ್ತದೆ ಎಂದು ತಾಯಮ್ಮಾಳ್ ಹೇಳುತ್ತಾರೆ.
ನಾನು ಈಗ ಚರ್ಚೆ ಮಾಡುತ್ತಿದ್ದುದು ನಮ್ಮ ದೇಶದಲ್ಲಿ ಶಿಕ್ಷಣದ ಬಗ್ಗೆ ಇರುವ ಇದೇ ಭಾವನೆಯ ಕುರಿತಾಗಿ. IIT BHU ನ ಒಂದು Alumnus ನ ಇದೇ ರೀತಿಯ ದಾನದ ಬಗ್ಗೆ ಕೂಡಾ ನನಗೆ ತಿಳಿದು ಬಂದಿದೆ. BHUದ ಹಳೆಯ ವಿದ್ಯಾರ್ಥಿ ಜಯ್ ಚೌಧರಿ ಅವರು IIT BHUFoundation ಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು ಏಳೂವರೆ ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ.
PART 3
ಸ್ನೇಹಿತರೇ, ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಿಗೆ ಸೇರಿದ ಅನೇಕ ಜನರಿದ್ದಾರೆ, ಅವರು ಇತರರಿಗೆ ಸಹಾಯ ಮಾಡುವ ಮೂಲಕ ಸಮಾಜದ ಕುರಿತಾದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ನಮ್ಮ ವಿವಿಧ ಐಐಟಿಗಳಲ್ಲಿ ಇಂತಹ ಪ್ರಯತ್ನಗಳು ನಿರಂತರವಾಗಿ ಕಂಡುಬರುತ್ತಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲೂ ಇಂತಹ ಸ್ಫೂರ್ತಿದಾಯಕ ಉದಾಹರಣೆಗಳಿಗೆ ಕೊರತೆಯಿಲ್ಲ. ಇಂತಹ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲು ಕಳೆದ ವರ್ಷ ಸೆಪ್ಟೆಂಬರ್ ನಿಂದ ದೇಶದಲ್ಲಿ ವಿದ್ಯಾಂಜಲಿ ಅಭಿಯಾನವನ್ನೂ ಪ್ರಾರಂಭಿಸಲಾಗಿದೆ. ವಿವಿಧ ಸಂಸ್ಥೆಗಳು, CSR ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ. ಸಮುದಾಯದ ಭಾಗವಹಿಸುವಿಕೆ ಮತ್ತು ಮಾಲೀಕತ್ವದ ಮನೋಭಾವವನ್ನು ವಿದ್ಯಾಂಜಲಿ ಉತ್ತೇಜಿಸುತ್ತಿದೆ. ನಿಮ್ಮ ಶಾಲೆ, ಕಾಲೇಜುಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಏನಾದರೂ ಕೊಡುಗೆ ನೀಡಿದಲ್ಲಿ, ದೊರೆಯುವ ಆನಂದ ಮತ್ತು ಸಂತೋಷದ ಅನುಭವ ಅನುಭವಿಸಿದಾಗ ಮಾತ್ರಾ ತಿಳಿದುಬರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಪ್ರತಿಯೊಂದು ಜೀವಿಯ ಬಗ್ಗೆ ಕರುಣೆ ಇವು ನಮ್ಮ ಸಂಸ್ಕೃತಿಯೂ ಹೌದು ಸಹಜ ಸ್ವಭಾವವೂ ಹೌದು. ಇತ್ತೀಚಿಗೆ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಾಗ ನಮ್ಮ ಈ ಸಂಸ್ಕಾರದ ಒಂದು ನೋಟ ನಮಗೆ ಕಾಣಸಿಕ್ಕಿತು. ಈ ಹುಲಿಯನ್ನು ಜನರು ಕಾಲರ್ ವಾಲಿ ಹೆಣ್ಣು ಹುಲಿ ಎಂದು ಕರೆಯುತ್ತಿದ್ದರು. ಅರಣ್ಯ ಇಲಾಖೆ ಇದಕ್ಕೆ ಟಿ-15 ಎಂದು ಹೆಸರಿಸಿದೆ. ಇದರ ಮೃತ್ಯುವಿನಿಂದ ತಮ್ಮ ಆಪ್ತರು ಯಾರೋ ಮರಣ ಹೊಂದಿದಂತೆ ಜನರು ಭಾವುಕರಾದರು. ಜನರು ಅದರ ಅಂತಿಮ ವಿಧಿಗಳನ್ನು ನೆರವೇರಿಸಿದರು, ಅದನ್ನು ಬಹಳ ಗೌರವ ಮತ್ತು ಪ್ರೀತಿಯಿಂದ ಬೀಳ್ಕೊಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳನ್ನು ನೀವೂ ನೋಡಿರಬಹುದು. ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಭಾರತೀಯರಾದ ನಮಗಿರುವ ಈ ಪ್ರೀತಿಯನ್ನು ಪ್ರಪಂಚದಾದ್ಯಂತ ಬಹಳವಾಗಿ ಪ್ರಶಂಸಿಸಲಾಗಿದೆ. ಕಾಲರ್ ಹುಲಿ ತನ್ನ ಜೀವಿತಾವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿತ್ತು. ಅವುಗಳ ಪೈಕಿ 25 ಮರಿಗಳನ್ನು ಬೆಳೆಸಿತು. ಈ ಟಿ-15 ರ ಜೀವನವನ್ನು ನಾವೂ ಸಂಭ್ರಮಿಸಿದ್ದೇವೆ ಮತ್ತು ಅದು ಇಹಲೋಕವನ್ನು ತ್ಯಜಿಸಿದಾಗ ಭಾವುಕ ವಿದಾಯವನ್ನೂ ನೀಡಿದ್ದೇವೆ. ಇದೇ ಭಾರತದ ಜನರ ವಿಶೇಷತೆ. ನಾವು ಪ್ರತಿಯೊಂದು ಜೀವಿಯೊಂದಿಗೆ ಪ್ರೀತಿ ಬಾಂಧವ್ಯವನ್ನು ಬೆಸೆದುಕೊಳ್ಳುತ್ತೇವೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲೂ ನಾವು ಅಂತಹದ್ದೇ ದೃಶ್ಯವನ್ನು ನೋಡಿದ್ದೇವೆ. ಈ ಪರೇಡ್ನಲ್ಲಿ ಅಧ್ಯಕ್ಷರ ಅಂಗರಕ್ಷಕ ಚಾರ್ಜರ್ ಕುದುರೆ ವಿರಾಟ್ ತನ್ನ ಕೊನೆಯ ಪರೇಡ್ನಲ್ಲಿ ಭಾಗವಹಿಸಿತು. ವಿರಾಟ್ ಹೆಸರಿನ ಕುದುರೆ 2003 ರಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದಿತು ಮತ್ತು ಪ್ರತಿ ಬಾರಿ ಗಣರಾಜ್ಯೋತ್ಸವದಂದು Commandant charger ರೂಪದಲ್ಲಿ ಪರೇಡ್ ಅನ್ನು ಮುನ್ನಡೆಸುತ್ತಿತ್ತು. ರಾಷ್ಟ್ರಪತಿ ಭವನದಲ್ಲಿ ವಿದೇಶಿ ರಾಷ್ಟ್ರದ ಮುಖ್ಯಸ್ಥರನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೂಡಾ ಅದು ಈ ಪಾತ್ರವನ್ನು ನಿರ್ವಹಿಸುತ್ತಿತ್ತು. ಈ ವರ್ಷ, ಸೇನಾ ದಿನದಂದು ಸೇನಾ ಮುಖ್ಯಸ್ಥರು ವಿರಾಟ್ ಕುದುರೆಗೆ COAS Commendation Card ಕೂಡಾ ಪ್ರದಾನ ಮಾಡಿದರು. ಕುದುರೆ ವಿರಾಟ್ ನ ವಿರಾಟ ರೂಪದ ಸೇವೆಯನ್ನು ಗುರುತಿಸಿ ಅದರ ಸೇವಾ ನಿವೃತ್ತಿಯ ನಂತರ ಅದನ್ನು ಅಷ್ಟೇ ಅದ್ಧೂರಿಯಾಗಿ ಬೀಳ್ಕೊಡಲಾಯಿತು.
ನನ್ನ ಪ್ರೀತಿಯ ದೇಶವಾಸಿಗಳೇ, ನಿಷ್ಠೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿದಾಗ, ಉದಾತ್ತ ಧ್ಯೇಯದೊಂದಿಗೆ ಕೆಲಸ ಮಾಡಿದಾಗ, ಅದಕ್ಕೆ ಉತ್ತಮ ಫಲಿತಾಂಶ ದೊರೆಯುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಅಸ್ಸಾಂ ನಿಂದ ನನ್ನ ಮುಂದೆ ಬಂದಿದೆ. ಅಸ್ಸಾಂ ಹೆಸರು ಕೇಳುತ್ತಿದ್ದಂತೆಯೇ ಅಲ್ಲಿನ ಚಹಾ ತೋಟಗಳು ಮತ್ತು ಅನೇಕ ರಾಷ್ಟ್ರೀಯ ಉದ್ಯಾನವನಗಳ ನೆನಪು ಮೂಡುತ್ತದೆ. ಅದರೊಂದಿಗೆ, ಒಂದು ಕೊಂಬಿನ ಘೇಂಡಾ ಮೃಗ ಅಂದರೆ one horn Rhino ದ ಚಿತ್ರವೂ ಕೂಡಾ ಮನದಲ್ಲಿ ಮೂಡುತ್ತದೆ. ಒಂದು ಕೊಂಬಿನ ಘೇಂಡಾಮೃಗ ಯಾವಾಗಲೂ ಅಸ್ಸಾಂ ಸಂಸ್ಕೃತಿಯ ಭಾಗವಾಗಿದೆ ಎಂದು ನಿಮಗೆಲ್ಲಾ ತಿಳಿದೇ ಇದೆ. ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಈ ಹಾಡು ಪ್ರತಿಯೊಬ್ಬರ ಕಿವಿಯಲ್ಲೂ ಅನುರಣಿಸುತ್ತದೆ.
##SONG (A Separate audio file will be shared on Whatdsapp)
ಸ್ನೇಹಿತರೇ, ಈ ಹಾಡಿನ ಅರ್ಥ ಬಹಳ ಪ್ರಸ್ತುತವಾಗಿದೆ. ಈ ಗೀತೆಯಲ್ಲಿ ಹೀಗೆಂದು ಹೇಳಲಾಗಿದೆ, ಕಾಜಿರಂಗದ ಹಸಿರು ತುಂಬಿದ ಪರಿಸರ, ಆನೆ ಮತ್ತು ಹುಲಿಯ ವಾಸಸ್ಥಳ, ಒಂದು ಕೊಂಬಿನ ಘೇಂಡಾಮೃಗವನ್ನು ಭೂಮಿ ನೋಡುತ್ತದೆ, ಹಕ್ಕಿಗಳ ಮಧುರ ಕಲರವವನ್ನು ಕೇಳಿಸಿಕೊಳ್ಳುತ್ತದೆ. ಅಸ್ಸಾಮಿನ ವಿಶ್ವ ಪ್ರಸಿದ್ಧ ಕೈಮಗ್ಗದಲ್ಲಿ ನೇಯ್ದ ಮೂಗ ಮತ್ತು ಏರಿ ಉಡುಪುಗಳಲ್ಲಿ ಕೂಡಾ ಘೇಂಡಾ ಮೃಗದ ಆಕೃತಿಯನ್ನು ನೋಡಬಹುದು. ಅಸ್ಸಾಮಿನ ಸಂಸ್ಕೃತಿಯಲ್ಲಿ ಯಾವ ಘೇಂಡಾಮೃಗದ ಇಷ್ಟೊಂದು ಪ್ರಾಮುಖ್ಯತೆ ಇದೆಯೋ ಆ ಘೇಂಡಾ ಮೃಗಗಳು ಕೂಡಾ ಕಷ್ಟಗಳನ್ನು ಎದುರಿಸಬೇಕಾಯಿತು. 2013 ರಲ್ಲಿ 37 ಮತ್ತು 2014 ರಲ್ಲಿ 32 ಘೇಂಡಾ ಮೃಗಗಳನ್ನು ಪ್ರಾಣಿ ಕಳ್ಳಸಾಗಣೆದಾರರು ಕೊಂದು ಹಾಕಿದ್ದರು. ಈ ಸವಾಲನ್ನು ಎದುರಿಸಲು, ಕಳೆದ ಏಳು ವರ್ಷಗಳಲ್ಲಿ ಅಸ್ಸಾಂ ಸರ್ಕಾರವು ವಿಶೇಷ ಪ್ರಯತ್ನಗಳನ್ನು ಕೈಗೊಂಡಿತು. ಘೇಂಡಾಮೃಗಗಳ ಬೇಟೆಯ ವಿರುದ್ಧ ಬಹು ದೊಡ್ಡ ಅಭಿಯಾನ ನಡೆಸಿತು. ಕಳೆದ ಸೆಪ್ಟೆಂಬರ್ 22 ರಂದು World Rhino Day ಸಂದರ್ಭದಲ್ಲಿ, ಕಳ್ಳ ಸಾಗಣೆದಾರರಿಂದ ವಶಪಡಿಸಿಕೊಂಡ 2400 ಕ್ಕೂ ಹೆಚ್ಚು ಘೇಂಡಾಗಳ ಕೊಂಬುಗಳನ್ನು ಸುಡಲಾಯಿತು. ಇದು ಕಳ್ಳ ಸಾಗಾಣಿಕೆದಾರರಿಗೆ ಒಂದು ಸ್ಪಷ್ಟ ಸಂದೇಶವಾಗಿತ್ತು. ಇಂತಹ ಪ್ರಯತ್ನಗಳ ಫಲವಾಗಿ ಈಗ ಅಸ್ಸಾಂನಲ್ಲಿ ಘೇಂಡಾ ಮೃಗಗಳ ಬೇಟೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. 2013 ರಲ್ಲಿ 37 ಘೇಂಡಾ ಮೃಗಗಳು ಕೊಲ್ಲಲ್ಪಟ್ಟಿದ್ದರೆ, 2020 ರಲ್ಲಿ 2 ಮತ್ತು 2021 ರಲ್ಲಿ ಕೇವಲ ಒಂದು ಘೇಂಡಾಮೃಗದ ಬೇಟೆಯ ಪ್ರಕರಣ ಕಂಡು ಬಂದಿತು. ಘೇಂಡಾ ಮೃಗಗಳನ್ನು ಕಾಪಾಡಲು ಅಸ್ಸಾಂ ಸರ್ಕಾರದ ಈ ಸಂಕಲ್ಪವನ್ನು ನಾನು ಪ್ರಶಂಸಿಸುತ್ತೇನೆ.
ಸ್ನೇಹಿತರೇ, ಭಾರತೀಯ ಸಂಸ್ಕೃತಿಯ ವಿವಿಧ ಬಣ್ಣುಗಳು ಮತ್ತು ಆಧ್ಯಾತ್ಮದ ಶಕ್ತಿಯು ವಿಶ್ವಾದ್ಯಾಂತ ಜನರನ್ನು ಯಾವಾಗಲೂ ತನ್ನೆಡೆಗೆ ಆಕರ್ಷಿಸುತ್ತಲೇ ಇದೆ. ಭಾರತೀಯ ಸಂಸ್ಕೃತಿಯು ಅಮೆರಿಕಾ, ಕೆನಡಾ, ದುಬೈ, ಸಿಂಗಪೂರ್, ಪಶ್ಚಿಮ ಯೂರೋಪ್ ಮತ್ತು ಜಪಾನ್ ದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ ಎಂದು ನಾನು ನಿಮಗೆ ಹೇಳಿದರೆ, ನಿಮಗೆ ಇದು ಸಾಮಾನ್ಯ, ಎನಿಸಬಹುದು, ಯಾವುದೇ ಆಶ್ಚರ್ಯವಾಗದೇ ಇರಬಹುದು. ಆದರೆ, ಲ್ಯಾಟಿನ್ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕೂಡಾ ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಆಕರ್ಷಣೆಯಿದೆ ಎಂದು ಹೇಳಿದಾಗ, ನೀವು ಖಂಡಿತವಾಗಿಯೂ ಯೋಚನೆ ಮಾಡುತ್ತೀರಿ. Mexico ದಲ್ಲಿ ಖಾದಿಗೆ ಪ್ರೋತ್ಸಾಹ ನೀಡುವ ಮಾತೇ ಇರಲಿ ಅಥವಾ ಬ್ರೆಜಿಲ್ ನಲ್ಲಿ ಭಾರತೀಯ ಸಂಪ್ರದಾಯಗಳನ್ನು ಜನಪ್ರಿಯಗೊಳಿಸಲು ನಡೆಸುತ್ತಿರುವ ಪ್ರಯತ್ನಗಳೇ ಇರಲಿ, ಮನ್ ಕಿ ಬಾತ್ ನಲ್ಲಿ ನಾವು ಈ ವಿಷಯಗಳ ಬಗ್ಗೆ ಈ ಮೊದಲು ಕೂಡಾ ಚರ್ಚೆ ಮಾಡಿದ್ದೇವೆ. ಇಂದು ನಾನು Argentinaದಲ್ಲಿ ಹರಡುತ್ತಿರುವ ಭಾರತೀಯ ಸಂಸ್ಕೃತಿಯ ವಿಷಯದ ಬಗ್ಗೆ ಹೇಳುತ್ತೇನೆ. Argentina ದಲ್ಲಿ, ನಮ್ಮ ಸಂಸ್ಕೃತಿಯನ್ನು ಬಹಳ ಇಷ್ಟ ಪಡುತ್ತಾರೆ. 2018 ರಲ್ಲಿ, ನಾನು ಅರ್ಜೆಂಟೀನಾ ಪ್ರವಾಸದಲ್ಲಿ ಯೋಗದ ಕಾರ್ಯಕ್ರಮವಾದ ‘Yoga For Peace’ನಲ್ಲಿ ಪಾಲ್ಗೊಂಡಿದ್ದೆನು. ಇಲ್ಲಿ Argentina ನಲ್ಲಿ, ಹಸ್ತಿನಾಪುರ ಫೌಂಡೇಷನ್ ಎಂಬ ಹೆಸರಿನ ಸಂಸ್ಥೆಯಿದೆ. ಎಲ್ಲಿಯ ಅರ್ಜೆಂಟೀನಾ, ಎಲ್ಲಿಯ ಹಸ್ತಿನಾಪುರ ಫೌಂಡೇಷನ್, ನಿಮಗೆ ಇದನ್ನು ಕೇಳಿ ಆಶ್ಚರ್ಯವೆನಿಸುತ್ತದೆ ಅಲ್ಲವೇ? ಈ ಫೌಂಡೇಷನ್, ಅರ್ಜೆಂಟೀನಾದಲ್ಲಿ ಭಾರತೀಯ ವೈದಿಕ ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿಕೊಂಡಿದೆ. ಈ ಸಂಸ್ಥೆಯನ್ನು 40 ವರ್ಷಗಳಿಗೆ ಮೊದಲು, ಓರ್ವ ಮೇಡಂ, ಪ್ರೊಫೆಸರ್ ಏಡಾ ಎಲ್ ಬ್ರೆಕ್ಟ್ ಅವರು ಸ್ಥಾಪಿಸಿದರು. ಇಂದು ಪ್ರೊಫೆಸರ್ ಏಡಾ ಎಲ್ ಬ್ರೆಕ್ಟ್ ಅವರು 90 ವರ್ಷ ಸಮೀಪಿಸುತ್ತಿದ್ದಾರೆ. ಭಾರತದೊಂದಿಗೆ ಅವರ ಒಡನಾಟ ಹೇಗೆ ಪ್ರಾರಂಭವಾಯಿತು ಎಂಬುದು ಬಹಳ ಕುತೂಹಲಕಾರಿ ವಿಷಯವಾಗಿದೆ. ಅವರು 18 ವರ್ಷ ವಯಸ್ಸಿನವರಾಗಿದ್ದಾಗ, ಮೊದಲ ಬಾರಿಗೆ ಅವರಿಗೆ ಭಾರತೀಯ ಸಂಸ್ಕೃತಿಯ ಶಕ್ತಿಯ ಪರಿಚಯವಾಯಿತು. ಅವರು ಭಾರತದಲ್ಲಿ ಸಾಕಷ್ಟು ಕಾಲ ಇದ್ದರು. ಭಗವದ್ಗೀತೆ ಮತ್ತು ಉಪನಿಷತ್ ಬಗ್ಗೆ ಆಳವಾಗಿ ಅರಿತರು. ಇಂದು ಹಸ್ತಿನಾಪುರ ಫೌಂಡೇಷನ್ ನ 40 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ ಮತ್ತು Argentina ಮತ್ತು ಇತರ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಇದರ ಸುಮಾರು 30 ಶಾಖೆಗಳಿವೆ. ಹಸ್ತಿನಾಪುರ ಫೌಂಡೇಷನ್ ಸ್ಪ್ಯಾನಿಷ್ ಭಾಷೆಯಲ್ಲಿ 100 ಕ್ಕೂ ಅಧಿಕ ವೈದಿಕ ಮತ್ತು ತತ್ವಶಾಸ್ತ್ರ ಗ್ರಂಥಗಳನ್ನು ಪ್ರಕಟಿಸಿದೆ. ಇದರ ಆಶ್ರಮ ಕೂಡಾ ಬಹಳ ಆಕರ್ಷಣೀಯವಾಗಿದೆ. ಆಶ್ರಮದಲ್ಲಿ 12 ದೇವಾಲಯಗಳನ್ನು ನಿರ್ಮಿಸಲಾಗಿದೆ, ಇದರಲ್ಲಿ ಅನೇಕ ದೇವಾನುದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಎಲ್ಲಾ ಕೇಂದ್ರಗಳಲ್ಲಿ ಅದ್ವೈತವಾದಿ ಧ್ಯಾನ ಮತ್ತು ಪ್ರಾರ್ಥನೆಗಾಗಿ ವಿಶೇಷವಾದ ಮಂದಿರಗಳನ್ನು ಕೂಡಾ ನಿರ್ಮಿಸಲಾಗಿದೆ.
ಸ್ನೇಹಿತರೆ ಇಂಥ ಹಲವಾರು ಉದಾಹರಣೆಗಳು, ನಮ್ಮ ಸಂಸ್ಕೃತಿ ನಮಗೆ ಮಾತ್ರವಲ್ಲ ಸಂಪೂರ್ಣ ವಿಶ್ವಕ್ಕೆ ಅಮೂಲ್ಯ ಪರಂಪರೆಯಾಗಿದೆ ಎಂಬುದನ್ನು ತೋರ್ಪಡಿಸುತ್ತದೆ. ವಿಶ್ವದಾದ್ಯಂತದ ಜನರು ಇದನ್ನು ಅರಿಯಬಯಸುತ್ತಾರೆ. ಜೀವಿಸಬಯಸುತ್ತಾರೆ. ನಾವು ಕೂಡಾ ಸಂಪೂರ್ಣ ಜವಾಬ್ದಾರಿಯಿಂದ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸ್ವತಃ ನಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುತ್ತಾ ಎಲ್ಲರಿಗೂ ತಲುಪಿಸುವ ಪ್ರಯತ್ನ ಮಾಡಬೇಕು.
ನನ್ನ ಪ್ರಿಯ ದೇಶಬಾಂಧವರೆ, ಈಗ ನಿಮ್ಮೆಲ್ಲರಿಗೆ ವಿಶೇಷವಾಗಿ ಯುವಮಿತ್ರರಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ನೀವು ಒಂದು ಬಾರಿಗೆ ಎಷ್ಟು ಪುಶ್ ಅಪ್ಸ್ ಮಾಡಬಹುದು ಎಂದು ಆಲೋಚಿಸಿ. ನಾನು ನಿಮಗೆ ಹೇಳಬಯಸುವ ವಿಷಯ ಕೇಳಿ ಖಂಡಿತ ನಿಮಗೆ ಆಶ್ಚರ್ಯವಾಗುತ್ತದೆ. ಮಣಿಪುರದಲ್ಲಿ 24 ವರ್ಷದ ಯುವಕ ಥೌನಾವೋಜಮ್ ನಿರಂಜಾಯ್ ಸಿಂಗ್ ಒಂದು ನಿಮಿಷದಲ್ಲಿ 109 ಪುಶ್ ಅಪ್ಸ್ ಮಾಡಿ ದಾಖಲೆ ಬರೆದಿದ್ದಾರೆ. ನಿರಂಜಾಯ್ ಸಿಂಗ್ ಅವರಿಗೆ ದಾಖಲೆ ಮುರಿಯುವುದು ಹೊಸತೇನಲ್ಲ. ಇದಕ್ಕೂ ಮೊದಲು ಒಂದೇ ಕೈಯಿಂದ ಅತಿ ಹೆಚ್ಚು ನಕಲ್ ಪುಶ್ ಅಪ್ಸ್ ದಾಖಲೆ ಮಾಡಿದ್ದಾರೆ. ನಿರಂಜಾಯ್ ಸಿಂಗ್ ಅವರಿಂದ ಪ್ರೇರಿತರಾಗಿ ನೀವು ಕೂಡಾ ದೈಹಿಕ ಸ್ವಾಸ್ಥ್ಯವನ್ನು ಜೀವನದ ಭಾಗವನ್ನಾಗಿಸಿಕೊಳ್ಳುತ್ತೀರಿ ಎಂದು ನಾನು ಭಾವಿಸಿದ್ದೇನೆ.
ಸ್ನೇಹಿತರೆ ಇಂದು ನಾನು ನಿಮ್ಮ ಬಳಿ ಲಡಾಖ್ ನ ಒಂದು ವಿಷಯ ಪ್ರಸ್ತಾಪಿಸಬಯಸುತ್ತೇನೆ. ಇದರ ಬಗ್ಗೆ ತಿಳಿದು ನಿಮಗೆ ಹೆಮ್ಮೆಯೆನಿಸುತ್ತದೆ. ಲಡಾಖ್ ಗೆ ಬಹುಬೇಗ ಒಂದು ಅದ್ಭುತ ಒಪನ್ ಸಿಂಥೆಟಿಕ್ ಟ್ರ್ಯಾಕ್ ಮತ್ತು ಆಸ್ಟ್ರೊ ಟರ್ಫ್ ಫುಟ್ಬಾಲ್ ಸ್ಟೇಡಿಯಂ ಕೊಡುಗೆ ಲಭಿಸಲಿದೆ. ಈ ಕ್ರೀಡಾಂಗಣ 10 ಸಾವಿರಕ್ಕೂ ಹೆಚ್ಚು ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಲಡಾಖ್ ನ ಈ ಕ್ರೀಡಾಂಗಣ ಅತ್ಯಂತ ದೊಡ್ಡದಾಗಿರಲಿದ್ದು 30 ಸಾವಿರ ಜನರು ಕುಳಿತುಕೊಳ್ಳಬಹುದಾಗಿದೆ. ಲಡಾಖ್ ನ ಈ ಆಧುನಿಕ ಫುಟ್ಬಾಲ್ ಕ್ರೀಡಾಂಗಣದಲ್ಲಿ 8 ಸಾಲುಗಳ ಸಿಂಥೆಟಿಕ್ ಟ್ರ್ಯಾಕ್ ಕೂಡಾ ಇರಲಿದೆ. ಇದಲ್ಲದೆ ಇಲ್ಲಿ 1000 ಹಾಸಿಗೆಗಳ ವಸತಿಗೃಹ ವ್ಯವಸ್ಥೆಯೂ ಇರಲಿದೆ. ಈ ಕ್ರೀಡಾಂಗಣಕ್ಕೆ ಫುಟ್ಬಾಲ್ ನ ಮಹಾನ್ ಸಂಸ್ಥೆಯಾದ ಫೀಫಾ ಕೂಡಾ ಮನ್ನಣೆ ನೀಡಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಕ್ರೀಡೆಯ ಇಂಥ ಬೃಹತ್ ಪ್ರಮಾಣದ ಮೂಲಭೂತ ಸೌಕರ್ಯದ ನಿರ್ಮಾಣವಾದಾಗ ದೇಶದ ಯುವಜನತೆಗೆ ಉತ್ತಮ ಅವಕಾಶಗಳನ್ನು ಹೊತ್ತು ತರುತ್ತದೆ. ಅಲ್ಲದೆ ಇಂಥ ವ್ಯವಸ್ಥೆಗಳಿದ್ದಲ್ಲಿ ದೇಶಾದ್ಯಂತದಿಂದ ಜನರು ಭೇಟಿ ನೀಡಲಾರಂಭಿಸುತ್ತಾರೆ. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ದೊರೆಯುತ್ತದೆ ಮತ್ತು ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ಲಡಾಖ್ ನ ಅನೇಕ ಯುವಕ ಯುವತಿಯರಿಗೂ ಈ ಕ್ರೀಡಾಂಗಣದಿಂದ ಲಾಭವಾಗಲಿದೆ.
ನನ್ನ ಪ್ರಿಯ ದೇಶಬಾಂಧವರೆ, ಮನದ ಮಾತಿನಲ್ಲಿ ಈ ಬಾರಿಯೂ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಕೊರೊನಾದ ರೂಪಾಂತರಿಯ ವಿರುದ್ಧದ ಹೋರಾಟದ ಸಫಲತೆಗಾಗಿ ಭಾರತ ಬಹಳ ಶ್ರಮಿಸುತ್ತಿದೆ. ಸುಮಾರು ನಾಲ್ಕುವರೆ ಕೋಟಿ ಮಕ್ಕಳು ಕೊರೊನಾ ಲಸಿಕೆ ಪಡೆದಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಇದರರ್ಥವೇನೆಂದರೆ 15 ರಿಂದ 18 ವರ್ಷದ ವಯೋಮಾನದ ಸುಮಾರು 60% ರಷ್ಟು ಯುವಜನತೆ 3-4 ವಾರಗಳಲ್ಲೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಿಂದ ಯುವಜನತೆಯ ರಕ್ಷಣೆ ಮಾತ್ರವಲ್ಲ ಅವರು ಓದು ಮುಂದುವರಿಸಲೂ ಸಹಾಯವಾಗುತ್ತದೆ. ಮತ್ತೊಂದು ಒಳ್ಳೇ ವಿಷಯವೆಂದರೆ 20 ದಿನಗಳಲ್ಲೇ ಸುಮಾರು 1 ಕೋಟಿ ಜನರು ಪ್ರಿಕಾಶನ್ ಡೋಸ್ ಪಡೆದಿದ್ದಾರೆ. ನಮ್ಮ ದೇಶದ ಲಸಿಕೆ ಮೇಲೆ ದೇಶಬಾಂಧವರ ಈ ವಿಶ್ವಾಸ ನಮ್ಮ ದೊಡ್ಡ ಶಕ್ತಿಯಾಗಿದೆ. ಈಗಂತೂ ಕೊರೊನಾ ಕೇಸ್ ಗಳು ಕೂಡಾ ಕಡಿಮೆಯಾಗಲಾರಂಭಿಸಿವೆ – ಇದು ಬಹಳ ಸಕಾರಾತ್ಮಕ ಸಂಕೇತವಾಗಿದೆ. ಜನರು ಸುರಕ್ಷಿತವಾಗಿರಲಿ, ದೇಶದ ಆರ್ಥಿಕ ವ್ಯವಹಾರ ವೇಗ ಪಡೆಯಲಿ ಎಂಬುದು ದೇಶದ ಜನತೆಯ ಆಕಾಂಕ್ಷೆಯಾಗಿದೆ. ನಿಮಗೆ ಗೊತ್ತೇ ಇದೆ – ಮನದ ಮಾತಿನಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸದೇ ಇರಲು ಸಾಧ್ಯವಿಲ್ಲ. ಅವು – ‘ಸ್ವಚ್ಛತಾ ಆಂದೋಲನ’ ವನ್ನು ನಾವು ಮರೆಯಬಾರದು. ಸಿಂಗಲ್ ಯೂಸ್ ಪ್ಲಾಸ್ಟಿಕ್ ಆಂದೋಲನದ ವೇಗ ಹೆಚ್ಚಿಸಬೇಕಿದೆ, ವೋಕಲ್ ಫಾರ್ ಲೋಕಲ್ ಎಂಬ ಮಂತ್ರ ನಮ್ಮ ಜವಾಬ್ದಾರಿಯಾಗಿದೆ, ಸ್ವಾವಲಂಬಿ ಭಾರತ ಅಭಿಯಾನಕ್ಕೆ ತನುಮನದಿಂದ ಒಗ್ಗೂಡಬೇಕಿದೆ. ನಮ್ಮೆಲ್ಲರ ಪ್ರಯತ್ನದಿಂದಲೇ ದೇಶ ಅಭಿವೃದ್ಧಿಯ ಹೊಸ ಉತ್ತುಂಗಕ್ಕೆರಲಿದೆ. ಇದೇ ಆಶಯದೊಂದಿಗೆ ನಾನು ನಿಮ್ಮಿಂದ ವಿದಾಯ ಪಡೆಯುತ್ತೇನೆ. ಅನಂತ ಧನ್ಯವಾದಗಳು.
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಈಗ ನೀವು 2021 ರ ಬೀಳ್ಕೊಡುಗೆ ಮತ್ತು 2022 ರ ಸ್ವಾಗತಕ್ಕೆ ಸಿದ್ಧರಾಗಿರಬಹುದು. ಹೊಸ ವರ್ಷದಲ್ಲಿ ಪ್ರತಿ ವ್ಯಕ್ತಿ, ಪ್ರತಿ ಸಂಸ್ಥೆ ಮುಂಬರುವ ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿಯ ಮತ್ತು ಸುಧಾರಣೆಯ ಸಂಕಲ್ಪಗೈಯ್ಯುತ್ತಾರೆ. ಕಳೆದ 7 ವರ್ಷಗಳಲ್ಲಿ ನಮ್ಮ ಈ ಮನದ ಮಾತು ಕೂಡಾ ವ್ಯಕ್ತಿಗಳ, ಸಮಾಜದ ದೇಶದ ಒಳ್ಳೆತನವನ್ನು ಬೆಳಕಿಗೆ ತಂದು ಮತ್ತಷ್ಟು ಸಾಧಿಸುವ ಮತ್ತಷ್ಟು ಸುಧಾರಿಸುವ ಪ್ರೇರಣೆ ನೀಡುತ್ತಾ ಬಂದಿದೆ. ಈ 7 ವರ್ಷಗಳಲ್ಲಿ ಮನದ ಮಾತಿನಲ್ಲಿ ನಾನು ಸರ್ಕಾರದ ಸಾಧನೆಗಳ ಬಗ್ಗೆಯೂ ಚರ್ಚೆ ಮಾಡಬಹುದಿತ್ತು. ನಿಮಗೂ ಹಿತವೆನಿಸುತ್ತಿತ್ತು ನೀವೂ ಶ್ಲಾಘಿಸಬಹುದಿತ್ತು. ಮಾಧ್ಯಮದ ಥಳಕು ಬೆಳಕಿನ ಹೊರತಾಗಿ, ವೃತ್ತ ಪತ್ರಿಕೆಗಳ ಮುಖ್ಯಾಂಶಗಳ ಹೊರತಾಗಿಯೂ ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿರುವ ಕೋಟಿ ಕೋಟಿ ಜನರಿದ್ದಾರೆ ಎಂಬುದು ದಶಕಗಳ ನನ್ನ ಅನುಭವವಾಗಿದೆ. ಅವರು ದೇಶದ ಭವಿಷ್ಯಕ್ಕಾಗಿ ತಮ್ಮ ವರ್ತಮಾನವನ್ನು ವ್ಯಯಿಸುತ್ತಿದ್ದಾರೆ. ಮುಂಬರುವ ದೇಶದ ಪೀಳಿಗೆಗಾಗಿ ತಮ್ಮ ಪ್ರಯತ್ನಗಳಲ್ಲಿ ಇಂದು ತನುಮನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥವರ ವಿಷಯಗಳು ಆಹ್ಲಾದವನ್ನು ನೀಡುತ್ತವೆ ಮತ್ತು ಪ್ರೇರಣೆ ಒದಗಿಸುತ್ತವೆ. ನನಗೆ ಮನದ ಮಾತು ಎಂದರೆ ಎಂದೆಂದಿಗೂ ಇಂತಹ ಜನರ ಪ್ರಯತ್ನಗಳಿಂದ ತುಂಬಿದ, ಅಲಂಕೃತವಾದ, ಅರಳಿದಂತಹ ಉದ್ಯಾನದಂತಿದೆ. ಮನದ ಮಾತಿನಲ್ಲಿ ಪ್ರತಿ ತಿಂಗಳು ನಾನು ಉದ್ಯಾನದ ಯಾವ ಹೂವಿನ ವಿಚಾರ ನಿಮ್ಮೊಂದಿಗೆ ಹಂಚಿಕೊಳ್ಳಲಿ ಎಂಬುದೇ ನನ್ನ ಪ್ರಯತ್ನವಾಗಿರುತ್ತದೆ.
ಬಹುರತ್ನ ವಸುಂಧರೆಯ ಪುಣ್ಯ ಕಾರ್ಯಗಳ ಅವಿರತ ಪ್ರವಾಹ ನಿರಂತರ ಹರಿಯುತ್ತಿರುತ್ತದೆ. ಮತ್ತು ಇಂದು ದೇಶವು 'ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವಾಗ, ನಮ್ಮ ಜನಶಕ್ತಿ, ಜನ – ಜನಶಕ್ತಿಯಾಗಿದೆ ಮತ್ತು ಅದರ ಉಲ್ಲೇಖ ಮತ್ತು ಪ್ರಯತ್ನಗಳು ಹಾಗೂ ಅದರ ಪರಿಶ್ರಮ ಭಾರತದ ಹಾಗೂ ಮಾನವತೆಯ ಉಜ್ವಲ ಭವಿಷ್ಯಕ್ಕಾಗಿ ಒಂದು ಬಗೆಯಲ್ಲಿ ಭರವಸೆಯನ್ನು ನೀಡುತ್ತದೆ.
ಸ್ನೇಹಿತರೇ, ಇದು ಜನಶಕ್ತಿ ಮತ್ತು ಎಲ್ಲರ ಪ್ರಯತ್ನದಿಂದಲೇ ಭಾರತವು 100 ವರ್ಷಗಳಲ್ಲಿ ಎದುರಾದ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವಾಯಿತು. ಪ್ರತಿ ಸಂಕಷ್ಟ ಸಮಯದಲ್ಲಿ ನಾವು ಕುಟುಂಬದಂತೆ ಒಬ್ಬರಿಗೊಬ್ಬರು ನೆರವಾಗಿದ್ದೇವೆ. ತಂತಮ್ಮ ಪ್ರದೇಶದಲ್ಲಿ ಅಥವಾ ನಗರದಲ್ಲಿ ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದಲ್ಲಿ ಸಾಧ್ಯವಾದುದಕ್ಕಿಂತ ಹೆಚ್ಚಿನದನ್ನು ಮಾಡಲು ಪ್ರಯತ್ನಿಸಿದ್ದೇವೆ. ಇಂದು ವಿಶ್ವದಲ್ಲಿರುವ ಲಸಿಕೆಯ ಅಂಕಿಅಂಶಗಳನ್ನು ನಾವು ಭಾರತದ ಅಂಕಿಅಂಶಗಳೊಂದಿಗೆ ಹೋಲಿಸಿದರೆ, ದೇಶವು ಅಭೂತಪೂರ್ವ ಕೆಲಸವನ್ನು ಮಾಡಿದೆ, ದೊಡ್ಡ ಗುರಿಯನ್ನು ಸಾಧಿಸಿದೆ. ಲಸಿಕೆಯ 140 ಕೋಟಿ ಡೋಸ್ ಗಳ ಮೈಲಿಗಲ್ಲಿನ ಸಾಧನೆ ಪ್ರತಿಯೊಬ್ಬ ಭಾರತೀಯರ ಪಾಲುದಾರಿಕೆಯಿಂದಾಗಿದೆ. ಇದರಿಂದ ಪ್ರತಿಯೊಬ್ಬ ಭಾರತೀಯನೂ ವ್ಯವಸ್ಥೆಯ ಮೇಲಿಟ್ಟಿರುವ ಭರವಸೆಯನ್ನು, ವಿಜ್ಞಾನಿಗಳ ಮತ್ತು ವಿಜ್ಞಾನದ ಮೇಲಿಟ್ಟಿರುವ ಭರವಸೆಯನ್ನು ಸಾಬೀತುಪಡಿಸುತ್ತದೆ ಮತ್ತು ಸಮಾಜದೆಡೆ ತನ್ನ ಕರ್ತವ್ಯವನ್ನು ನಿಭಾಯಿಸುವ ಭಾರತೀಯರ ಇಚ್ಛಾಶಕ್ತಿಗೆ ಸಾಕ್ಷಿಯೂ ಆಗಿದೆ. ಆದರೆ ಸ್ನೇಹಿತರೆ, ಕೊರೊನಾದ ಹೊಸ ರೂಪಾಂತರಿ ಬಂದೆರಗಿದೆ ಎಂಬುದರ ಬಗ್ಗೆಯೂ ಗಮನಹರಿಸಬೇಕಿದೆ. ಈ ಜಾಗತಿಕ ಮಹಾಮಾರಿಯನ್ನು ಸದೆಬಡೆಯಲು ಒಬ್ಬ ನಾಗರಿಕನಂತೆ ನಮ್ಮ ಪ್ರಯತ್ನ ಬಹಳ ಮಹತ್ವಪೂರ್ಣವಾಗಿದೆ ಎಂಬುದು ಕಳೆದ 2 ವರ್ಷಗಳ ಅನುಭವವಾಗಿದೆ. ನಮ್ಮ ವಿಜ್ಞಾನಿಗಳು ಈ ಹೊಸ ರೂಪಾಂತರಿ ಒಮಿಕ್ರಾನ್ ನ ಅಧ್ಯಯನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರತಿ ದಿನ ಅವರಿಗೆ ಹೊಸ ಮಾಹಿತಿ ಲಭಿಸುತ್ತಿದೆ. ಅವರ ಸಲಹೆ ಮೇರೆಗೆ ಕೆಲಸ ಕಾರ್ಯ ನಡೆಯುತ್ತಿದೆ. ಹೀಗಿರುವಾಗ ಸ್ವಯಂ ಜಾಗರೂಕತೆ, ಸ್ವಂತ ನೀತಿ ನಿಯಮಗಳು ಕೊರೊನಾ ರೂಪಾಂತರಿ ವಿರುದ್ಧ ಹೋರಾಡಲು ದೇಶದ ಬಹುದೊಡ್ಡ ಶಕ್ತಿಯಾಗಿದೆ. ನಮ್ಮ ಸಾಮೂಹಿಕ ಶಕ್ತಿಯೇ ಕೊರೊನಾವನ್ನು ಸೋಲಿಸಲಿದೆ. ಇದೇ ಜವಾಬ್ದಾರಿಯೊಂದಿಗೆ ನಾವು 2022 ನ್ನು ಪ್ರವೇಶಿಸಬೇಕಿದೆ.
ನನ್ನ ಪ್ರೀತಿಯ ದೇಶಬಾಂಧವರೆ ಮಹಾಭಾರತ ಯುದ್ಧದಲ್ಲಿ ಭಗವಂತ ಶ್ರೀ ಕೃಷ್ಣ ಅರ್ಜುನನಿಗೆ ಹೀಗೆ ಉಪದೇಶಿಸಿದ್ದ
‘ನಭಃ ಸ್ಪರ್ಷಂ ದೀಪ್ತಂ’ ಅಂದರೆ ಹೆಮ್ಮೆಯಿಂದ ಆಗಸದ ಸ್ಪರ್ಶ ಎಂದರ್ಥ. ಇದು ಭಾರತೀಯ ವಾಯುಪಡೆಯ ಧ್ಯೇಯವಾಕ್ಯವೂ ಆಗಿದೆ. ತಾಯಿ ಭಾರತಿಯ ಸೇವೆಯಲ್ಲಿ ತೊಡಗಿರುವ ಅನೇಕ ಜೀವಗಳು ಆಕಾಶದ ಈ ಉತ್ತುಂಗವನ್ನು ಪ್ರತಿದಿನ ಹೆಮ್ಮೆಯಿಂದ ತಲುಪುತ್ತಾರೆ. ನಮಗೆ ಬಹಳಷ್ಟು ಕಲಿಸುತ್ತಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರದ್ದು ಇಂಥದೇ ಜೀವನವಾಗಿದೆ. ಈ ತಿಂಗಳು ತಮಿಳು ನಾಡಿನಲ್ಲಿ ಅವಘಡಕ್ಕೆ ಒಳಗಾಗಿದ್ದ ಹೆಲಿಕಾಪ್ಟರ್ ಅನ್ನು ವರುಣ್ ಸಿಂಗ್ ಉಡಾಯಿಸುತ್ತಿದ್ದರು. ಈ ಅವಘಡದಲ್ಲಿ ನಾವು ದೇಶದ ಪ್ರಥಮ
ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿಯೂ ಸೇರಿದಂತೆ ಅನೇಕ ವೀರರನ್ನು ಕಳೆದುಕೊಂಡಿದ್ದೇವೆ. ವರುಣ್ ಸಿಂಗ್ ಹಲವಾರು ದಿನ ಮೃತ್ಯುವಿನೊಂದಿಗೆ ಧೈರ್ಯದಿಂದ ಹೋರಾಡಿದರು ಆದರೆ ಅವರೂ ನಮ್ಮನ್ನಗಲಿದರು. ವರುಣ್ ಆಸ್ಪತ್ರೆಯಲ್ಲಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ನೋಡಿದ ಸಂಗತಿಯೊಂದು ನನ್ನ ಹೃದಯವನ್ನು ಕಲಕಿತು. ಈ ವರ್ಷದ ಅಗಸ್ಟ್ ತಿಂಗಳಲ್ಲಿ ಅವರನ್ನು ಶೌರ್ಯ ಚಕ್ರದಿಂದ ಗೌರವಿಸಲಾಗಿತ್ತು. ಈ ಸನ್ಮಾನದ ನಂತರ ಅವರು ತಮ್ಮ ಶಾಲಾ ಪ್ರಾಂಶುಪಾಲರಿಗೆ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಓದಿ – ಯಶಸ್ಸಿನ ಶಿಖರಕ್ಕೇರಿದರೂ ಅವರು ತಮ್ಮ ಬೇರುಗಳನ್ನು ಮರೆತಿಲ್ಲ ಎಂದು ನನಗೆ ಅನ್ನಿಸಿತು. ಎರಡನೇಯದಾಗಿ ಅವರ ಬಳಿ ಸಂಭ್ರಮಾಚರಣೆಗೆ ಸಮಯವಿದ್ದರೂ ಅವರು ಮುಂಬರುವ ಪೀಳಿಗೆ ಬಗ್ಗೆ ಆಲೋಚಿಸಿದರು. ತಾವು ಓದಿದ ಶಾಲೆಯ ಮಕ್ಕಳ ಜೀವನವೂ ಸಂಭ್ರಮಾಚರಣೆಯಿಂದ ತುಂಬಲಿ ಎಂಬುದು ಅವರ ಆಲೋಚನೆಯಾಗಿತ್ತು. ತಮ್ಮ ಪತ್ರದಲ್ಲಿ ವರುಣ್ ಸಿಂಗ್ ತಮ್ಮ ಪರಾಕ್ರಮದ ಬಗ್ಗೆ ಹೆಮ್ಮೆಯಿಂದ ವರ್ಣಿಸಿರಲಿಲ್ಲ ಬದಲಾಗಿ ತಮ್ಮ ಅಸಫಲತೆಯ ಬಗ್ಗೆ ಮಾತನಾಡಿದರು. ತಮ್ಮ ದೌರ್ಬಲ್ಯಗಳನ್ನು ಹೇಗೆ ಶಕ್ತಿಯಾಗಿ ಪರಿವರ್ತಿಸಿಕೊಂಡರು ಎಂಬುದನ್ನು ವರ್ಣಿಸಿದ್ದರು. ಈ ಪತ್ರದಲ್ಲಿ ಅವರು ಹೀಗೆ ಬರೆದಿದ್ದರು.
“ಸಾಧಾರಣವಾಗಿದ್ದರೆ ತಪ್ಪೇನೂ ಇಲ್ಲ. ಶಾಲೆಯಲ್ಲಿ ಎಲ್ಲರೂ ಎಲ್ಲರೂ ಶಾಲೆಯಲ್ಲಿ ಉತ್ಕೃಷ್ಟ ಸಾಧನೆ ಮಾಡ ಬಲ್ಲವರಾಗಿರುವುದಿಲ್ಲ ಮತ್ತು ಎಲ್ಲರೂ 90 ರಷ್ಟು ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ನೀವು ಅಷ್ಟು ಅಂಕ ಗಳಿಸಿದರೆ ಅದು ಅದ್ಭುತ ಸಾಧನೆ ಮತ್ತು ಶ್ಲಾಘಿಸಲೇಬೇಕು. ಆದಾಗ್ಯೂ, ನೀವು ಸಾಧಿಸಲಾಗದಿದ್ದರೆ, ನೀವು ಸಾಧಾರಣ ಎಂದು ಭಾವಿಸಬೇಡಿ. ನೀವು ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿರ ಬಹುದು ಆದರೆ ಜೀವನದಲ್ಲಿ ಬರಲಿರುವ ಸಾಧನೆಗಳಿಗೆ ಇದು ಅಳತೆಗೋಲಲ್ಲ. ನಿಮ್ಮ ಇಷ್ಟವಾದ ಕ್ಷೇತ್ರವನ್ನು ಅರಿತುಕೊಳ್ಳಿ; ಅದು ಕಲೆ, ಸಂಗೀತ, ಗ್ರಾಫಿಕ್ ವಿನ್ಯಾಸ, ಸಾಹಿತ್ಯ ಇತ್ಯಾದಿ ಆಗಿರಬಹುದು. ನೀವು ಏನೇ ಕೆಲಸ ಮಾಡಿದರೂ, ಸಮರ್ಪಿತರಾಗಿ, ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಎಂದಿಗೂ ನಿದ್ರೆಗೆ ಜಾರುವಾಗ ನಾನು ಹೆಚ್ಚಿನ ಪ್ರಯತ್ನಗಳನ್ನು ಮಾಡಬಹುದಿತ್ತು ಎಂಬ ನಕಾರಾತ್ಮಕ ಭಾವನೆಗಳು ಬೇಡ”
ಸ್ನೇಹಿತರೇ, ಸಾಧಾರಣದಿಂದ ಅಸಾಧಾರಣವಾಗಲು ಅವರು ನೀಡಿರುವ ಮಂತ್ರ ಕೂಡಾ ಅಷ್ಟೇ ಮಹತ್ವಪೂರ್ಣವಾಗಿದೆ. ಇದೇ ಪತ್ರದಲ್ಲಿ ವರುಣ್ ಸಿಂಗ್ ಅವರು ಹೀಗೆ ಬರೆದಿದ್ದಾರೆ. –
“ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ. ನೀವು ಏನಾಗಬೇಕೆಂದು ಕೊಳ್ಳುತ್ತಿದ್ದೀರೋ ಅದರಲ್ಲಿ ನೀವು ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಎಂದಿಗೂ ಭಾವಿಸಬೇಡಿ. ಅದು ಸುಲಭವಾಗಿ ಬರುವುದಿಲ್ಲ, ಅದಕ್ಕೆ ಸಮಯದ ಮತ್ತು ಆರಾಮಗಳ ತ್ಯಾಗದ ಅಗತ್ಯವೂ ಇದೆ. ನಾನೊಬ್ಬ ಸಾಧಾರಣ ವ್ಯಕ್ತಿಯಾಗಿದ್ದೆ, ಈಗ ನಾನು ನನ್ನ ವೃತ್ತಿಯಲ್ಲಿ ಕಠಿಣ ಮೈಲಿಗಲ್ಲುಗಳನ್ನು ತಲುಪಿದ್ದೇನೆ. 12 ನೇ ತರಗತಿಯ ಅಂಕಗಳು ಜೀವನದಲ್ಲಿ ಸಾಧನೆ ಮಾಡಲು ನೀವು ಸಮರ್ಥರೋ ಅಲ್ಲವೋ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಭಾವಿಸಬೇಡಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಡಿ ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗಿ”
ತಾವು ಕೇವಲ ಒಬ್ಬ ವಿದ್ಯಾರ್ಥಿಗೆ ಪ್ರೇರಣೆ ನೀಡಿದರೂ ಸಾಕು ಅದು ಬಹಳವೇ ದೊಡ್ಡದೆಂದು ವರುಣ್ ಬರೆದಿದ್ದಾರೆ. ಆದರೆ, ನಾನು ಇಂದು ಹೇಳಲು ಬಯಸುತ್ತೇನೆ- ಇವರು ಇಡೀ ದೇಶಕ್ಕೇ ಪ್ರೇರಣೆ ನೀಡಿದ್ದಾರೆ ಎಂದು. ಅವರ ಪತ್ರ ಕೇವಲ ವಿದ್ಯಾರ್ಥಿಗಳೊಂದಿಗೆ ಮಾತನಾಡಬಹುದು, ಆದರೆ, ಅದು ನಮ್ಮ ಇಡೀ ಸಮಾಜಕ್ಕೆ ಸಂದೇಶ ನೀಡಿದೆ.
ಸ್ನೇಹಿತರೇ, ಪ್ರತಿ ವರ್ಷ ನಾನು ಇಂತಹದ್ದೇ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪರ್ ಚರ್ಚಾ ಕಾರ್ಯಕ್ರಮ ಮಾಡುತ್ತೇನೆ. ಈ ವರ್ಷ ಕೂಡಾ ಪರೀಕ್ಷೆಗಳಿಗೆ ಮುನ್ನವೇ ನಾನು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಬೇಕೆಂದು ಯೋಜಿಸುತ್ತಿದ್ದೇನೆ. ಈ ಕಾರ್ಯಕ್ರಮಕ್ಕಾಗಿ ಎರಡು ದಿನಗಳ ನಂತರ ಅಂದರೆ ಡಿಸೆಂಬರ್ 28 ರಂದು MyGov.in ನಲ್ಲಿ ನೋಂದಣಿ ಆರಂಭವಾಗಲಿದೆ. ಈ ನೋಂದಣಿ ಡಿಸೆಂಬರ್ 28 ರಿಂದ ಜನವರಿ 20 ರವರೆಗೆ ನಡೆಯಲಿದೆ. ಇದಕ್ಕಾಗಿ, 9 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು, ಮತ್ತು ತಂದೆತಾಯಿಯರಿಗಾಗಿ ಆನ್ಲೈನ್ ಸ್ಪರ್ಧೆ ಕೂಡಾ ಆಯೋಜನೆಯಾಗಲಿದೆ. ನೀವೆಲ್ಲರೂ ಇದರಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮನ್ನು ಭೇಟಿಯಾಗುವ ಅವಕಾಶ ದೊರೆಯುತ್ತದೆ. ನಾವೆಲ್ಲರೂ ಒಂದಾಗಿ ಸೇರಿ, ಪರೀಕ್ಷೆ, ವೃತ್ತಿ, ಸಫಲತೆ ಮತ್ತು ವಿದ್ಯಾರ್ಥಿ ಜೀವನದೊಂದಿಗೆ ಸೇರಿರುವ ಅನೇಕ ವಿಷಯಗಳ ಬಗ್ಗೆ ಮಾತನಾಡೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಮನ್ ಕಿ ಬಾತ್ ನಲ್ಲಿ ನಾನು ಈಗ ನಿಮಗೆ ಗಡಿಯಾಚೆಯಿಂದ, ಬಹಳ ದೂರದಿಂದ ಬಂದಿರುವಂತಹ ಒಂದು ವಿಷಯ ಕೇಳಿಸಲುಬಯಸುತ್ತೇನೆ. ಇದು ನಿಮ್ಮನ್ನು ಸಂತೋಷಗೊಳಿಸುತ್ತದೆ ಹಾಗೆಯೇ ಆಶ್ಚರ್ಯಚಕಿತರನ್ನಾಗಿಸುತ್ತದೆ ಕೂಡಾ.:
ಧ್ವನಿ#(VandeMatram)
ವಂದೇಮಾತರಂ . ವಂದೇಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ. ವಂದೇ ಮಾತರಂ
ಶುಭ್ರ ಜ್ಯೋತ್ಸ್ನಾ ಫುಲಕಿತಯಾಮಿನೀಂ
ಫುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ. ವಂದೇಮಾತರಂ
ವಂದೇಮಾತರಂ ವಂದೇಮಾತರಂ
ಇದನ್ನು ಕೇಳಿ ನಿಮಗೆ ಬಹಳ ಸಂತೋಷವಾಯಿತೆಂದು, ಹೆಮ್ಮೆಯೆನಿಸಿತೆಂದು ನನಗೆ ಪೂರ್ಣ ವಿಶ್ವಾಸವಿದೆ. ವಂದೇಮಾತರಂ ನಲ್ಲಿ ಅಡಗಿರುವ ಭಾವಾರ್ಥ, ನಮಲ್ಲಿ ಹೆಮ್ಮೆ ಮತ್ತು ಉತ್ಸಾಹ ತುಂಬುತ್ತದೆ.
ಸ್ನೇಹಿತರೇ, ಈ ಅತಿ ಸುಂದರ ಧ್ವನಿ ಎಲ್ಲಿಯದು ಮತ್ತು ಯಾವ ದೇಶದಿಂದ ಬಂದಿದೆಯೆಂದು ನೀವು ಖಂಡಿತಾ ಯೋಚಿಸುತ್ತಿರ ಬಹುದುಲ್ಲವೇ? ಈ ಪ್ರಶ್ನೆಗೆ ಉತ್ತರ ನಿಮ್ಮಲ್ಲಿ ಮತ್ತಷ್ಟು ಆಶ್ಚರ್ಯವನ್ನು ಹೆಚ್ಚಿಸುತ್ತದೆ. ವಂದೇಮಾತರಂ ಪ್ರಸ್ತುತ ಪಡಿಸುತ್ತಿರುವ ಇವರು ಗ್ರೀಸ್ ದೇಶದ ವಿದ್ಯಾರ್ಥಿಗಳಾಗಿದ್ದಾರೆ. ಅವರು ಅಲ್ಲಿಯ ಇಲಿಯಾದ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಸುಂದರವಾಗಿ ಮತ್ತು ಭಾವಪೂರ್ಣವಾಗಿ ಹಾಡಿರುವ ವಂದೇಮಾತರಂ ನಿಜಕ್ಕೂ ಅದ್ಭುತವಾಗಿದೆ ಮತ್ತು ಪ್ರಶಂಸಾರ್ಹವಾಗಿದೆ. ಇಂತಹ ಪ್ರಯತ್ನಗಳು, ಎರಡು ದೇಶಗಳ ಜನರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ. ನಾನು ಗ್ರೀಸ್ ನ ಈ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮತ್ತು ಅವರ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಾಡಲಾಗಿರುವ ಅವರ ಪ್ರಯತ್ನವನ್ನು ಶ್ಲಾಘಿಸುತ್ತೇನೆ.
ಸ್ನೇಹಿತರೇ, ಲಕ್ನೋದ ನಿವಾಸಿಯಾಗಿರುವ ನಿಲೇಶ್ ಅವರ ಒಂದು ಪೋಸ್ಟ್ ಕುರಿತು ಕೂಡಾ ಚರ್ಚಿಸಲು ಬಯಸುತ್ತೇನೆ. ನಿಲೇಶ್ ಅವರು ಲಕ್ನೋದಲ್ಲಿ ನಡೆದ ಒಂದು ವಿಶಿಷ್ಟ ಡ್ರೋನ್ ಪ್ರದರ್ಶನವನ್ನು ಬಹಳ ಪ್ರಶಂಸಿಸಿದ್ದಾರೆ. ಈ ಡ್ರೋನ್ ಪ್ರದರ್ಶನವನ್ನು ಲಕ್ನೋದ ರೆಸಿಡೆನ್ಸಿ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. 1857 ಕ್ಕೂ ಮೊದಲಿನ ಸ್ವಾತಂತ್ರ್ಯ ಸಂಗ್ರಾಮದ ಸಾಕ್ಷಿಗಳು, ರೆಸಿಡೆನ್ಸಿಯ ಗೋಡೆಗಳ ಮೇಲೆ ಇಂದಿಗೂ ಕಾಣಬರುತ್ತದೆ. ರೆಸಿಡೆನ್ಸಿಯಲ್ಲಿ ನಡೆದ ಡ್ರೋನ್ ಪ್ರದರ್ಶನದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಆಯಾಮಗಳಿಗೆ ಜೀವ ತುಂಬಲಾಯಿತು. ಚೌರಿ-ಚೌರಾ ಚಳವಳಿಯಿರಲಿ, ಕಾಕೋರಿಟ್ರೆನ್ ನ ಘಟನೆಯೇ ಇರಲಿ, ಅಥವಾ ನೇತಾಜಿ ಸುಭಾಷ್ ಅವರ ಅದಮ್ಯ ಸಾಹಸ ಮತ್ತು ಪರಾಕ್ರಮವೇ ಇರಲಿ, ಈ ಡ್ರೋನ್ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ನೀವು ಕೂಡಾ ಇದೇ ರೀತಿ ನಿಮ್ಮ ನಗರಗಳಲ್ಲಿ, ಗ್ರಾಮಗಳಲ್ಲಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ವಿಶಿಷ್ಟ ಅಂಶಗಳನ್ನು ಜನರ ಮುಂದೆ ತರಬಹುದು. ಇದರಲ್ಲಿ ತಂತ್ರಜ್ಞಾನದ ಸಹಾಯವನ್ನು ಹೆಚ್ಚಾಗಿ ಬಳಸಬಹುದು. ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮಗೆ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಜೀವಂತವಾಗಿಸುವ ಅವಕಾಶ ನೀಡುತ್ತದೆ. ಅದನ್ನು ಅನುಭವಿಸುವ ಅವಕಾಶ ನೀಡುತ್ತದೆ. ಈ ದೇಶಕ್ಕಾಗಿ ಹೊಸ ಸಂಕಲ್ಪ ತೊಡುವ, ಏನನ್ನಾದರೂ ಸಾಧಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಒಂದು ಪ್ರೇರಕ ಹಬ್ಬ ಇದಾಗಿದೆ, ಪ್ರೇರಕ ಅವಕಾಶ ಇದಾಗಿದೆ. ಬನ್ನಿ, ಸ್ವಾತಂತ್ರ್ಯ ಹೋರಾಟದ ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾ, ದೇಶಕ್ಕಾಗಿ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಗೊಳಿಸೋಣ.
ನನ್ನ ಪ್ರೀತಿಯ ದೇಶಾಸಿಗಳೇ, ನಮ್ಮ ದೇಶ ಅನೇಕ ಅಸಾಧಾರಣ ಪ್ರತಿಭೆಗಳಿಂದ ಸಮೃದ್ಧವಾಗಿದೆ ಅವರುಗಳ ಸೃಜನಶೀಲತೆಯು ಇತರರಿಗೂ ಕೂಡಾ ಏನನ್ನಾದರೂ ಮಾಡುವಂತೆ ಪ್ರೇರೇಪಿಸುತ್ತದೆ. ಅಂತಹ ಓರ್ವ ವ್ಯಕ್ತಿ ತೆಲಂಗಾಣದ ಡಾಕ್ಟರ್ ಕುರೇಲಾ ವಿಠಲಾಚಾರ್ಯ ಅವರು. ಅವರಿಗೆ 84 ವರ್ಷ ವಯಸ್ಸು. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕೆ ವಯಸ್ಸು ಮುಖ್ಯವಲ್ಲ ಎಂಬ ಮಾತಿಗೆ ವಿಠಾಲಾಚಾರ್ಯ ಒಂದು ಉದಾಹರಣೆಯಾಗಿದ್ದಾರೆ.
ಸ್ನೇಹಿತರೇ, ವಿಠಲಾಚಾರ್ಯ ಅವರಿಗೆ ಬಾಲ್ಯದಿಂದಲೂ ಒಂದು ದೊಡ್ಡ ಗ್ರಂಥಾಲಯ ತೆರೆಯಬೇಕೆಂಬ ಇಚ್ಛೆಯಿತ್ತು. ಆಗ ದೇಶ ಗುಲಾಮಗಿರಿಯಲ್ಲಿತ್ತು. ಬಾಲ್ಯದ ಕನಸು ಕನಸಾಗಿಯೇ ಉಳಿದುಬಿಟ್ಟಂತಹ ಪರಿಸ್ಥಿತಿಗಳು ಆ ಸಮಯದಲ್ಲಿದ್ದವು. ಕಾಲಾಂತರದಲ್ಲಿ ವಿಠಲಾಚಾರ್ಯ ಅವರು ಲೆಕ್ಚರರ್ ಆದರು, ತೆಲುಗು ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದರು, ಮತ್ತು ಅದರಲ್ಲಿ ಅನೇಕ ಕೃತಿಗಳನ್ನು ರಚಿಸಿದರು 6-7 ವರ್ಷಗಳ ಹಿಂದೆ ಅವರು ಪುನಃ ತಮ್ಮ ಕನಸನ್ನು ಸಾಕಾರಗೊಳಿಸಲು ಆರಂಭಿಸಿದರು. ಅವರು ತಮ್ಮ ಸ್ವಂತ ಪುಸ್ತಕಗಳಿಂದ ಗ್ರಂಥಾಲಯ ಆರಂಭಿಸಿದರು. ತಮ್ಮ ಜೀವಮಾನದ ಗಳಿಕೆಯನ್ನು ಇದರಲ್ಲಿ ತೊಡಗಿಸಿದರು. ಕ್ರಮೇಣ ಜನರು ಇದರೊಂದಿಗೆ ಸೇರಲಾರಂಭಿಸಿದರು ಮತ್ತು ಕೊಡುಗೆ ನೀಡಲಾರಂಬಿಸಿದರು. ಯದಾದ್ರಿ-ಭುವನಗಿರಿ ಜಿಲ್ಲೆಯಲ್ಲಿ ರಮಣ್ಣಾ ಪೇಟ್ಮಂಡಲ್ ದಲ್ಲಿರುವ ಈ ಗ್ರಂಥಾಲಯದಲ್ಲಿ ಸುಮಾರು 2 ಲಕ್ಷ ಪುಸ್ತಕಗಳಿವೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ತಾವು ಎದುರಿಸಿದ ಕಷ್ಟಗಳನ್ನು ಬೇರಾರೂ ಎದುರಿಸಬಾರದೆಂದು ವಿಠಲಾಚಾರ್ಯ ಹೇಳುತ್ತಾರೆ. ಇಂದು ಬಹಳಷ್ಟು ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯುತ್ತಿರುವುದನ್ನು ನೋಡಿ ಅವರಿಗೆ ಬಹಳ ಸತೋಷವಾಗುತ್ತದೆ. ಅವರ ಈ ಪ್ರಯತ್ನಗಳಿಂದ ಪ್ರೇರಿತರಾಗಿ, ಹಲವಾರು ಇತರೆ ಗ್ರಾಮಗಳ ಜನರು ಕೂಡಾ ಗ್ರಂಥಾಲಯ ಪ್ರಾರಂಭಿಸುವುದರಲ್ಲಿ ತೊಡಗಿಕೊಂಡಿದ್ದಾರೆ.
ಸ್ನೇಹಿತರೆ ಪುಸ್ತಕಗಳು ಕೇವಲ ಜ್ಞಾನವನ್ನು ಹೆಚ್ಚಿಸುವುದಲ್ಲದೇ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ, ಜೀವನವನ್ನು ರೂಪಿಸುತ್ತದೆ. ಪುಸ್ತಕಗಳನ್ನು ಓದುವ ಹವ್ಯಾಸ ಅದ್ಭುತ ಸಂತಸವನ್ನು ಒದಗಿಸುತ್ತದೆ. ಈ ವರ್ಷದಲ್ಲಿ ಇಷ್ಟೊಂದು ಪುಸ್ತಕಗಳನ್ನು ಓದಿದೆ ಎಂದು ಜನರು ಬಹಳ ಹೆಮ್ಮೆಯಿಂದ ಹೇಳುವುದನ್ನು ನಾನು ಕಂಡಿದ್ದೇನೆ. ಮತ್ತು ನನಗೆ ಈ ವರ್ಷ ಮತ್ತಷ್ಟು ಪುಸ್ತಕಗಳನ್ನು ಓದಬೇಕಿದೆ. ಇದು ಒಂದು ಒಳ್ಳೇ ಅಭ್ಯಾಸ. ಈ ಅಭ್ಯಾಸವನ್ನು ವೃದ್ಧಿಸಬೇಕು. ಈ ವರ್ಷ ನಿಮಗೆ ಇಷ್ಟವಾದ ಅಂಥ 5 ಪುಸ್ತಕಗಳ ಬಗ್ಗೆ ತಿಳಿಸಿ ಎಂದು ಮನದ ಮಾತಿನ ಮೂಲಕ ಶ್ರೋತೃಗಳನ್ನು ಆಗ್ರಹಿಸುತ್ತೇನೆ. ಹೀಗೆ ನೀವು 2022 ರಲ್ಲಿ ಇತರ ಓದುಗರಿಗೆ ಉತ್ತಮ ಪುಸ್ತಕಗಳನ್ನು ಆಯ್ದುಕೊಳ್ಳಲು ನೆರವಾಗಬಹುದು. ನಮ್ಮ ಸ್ಕ್ರೀನ್ ಟೈಂ ಹೆಚ್ಚುತ್ತಿರುವಂಥ ಈ ಸಮಯದಲ್ಲಿ ಪುಸ್ತಕ ವಾಚನ ಹೆಚ್ಚು ಪ್ರಚಲಿತಗೊಳ್ಳಲಿ ಎಂಬುದಕ್ಕೆ ಜೊತೆಗೂಡಿ ಪ್ರಯತ್ನ ಮಾಡಬೇಕು.
ನನ್ನ ಪ್ರಿಯ ದೇಶವಾಸಿಗಳೆ, ಇತ್ತೀಚೆಗೆ ಒಂದು ಆಸಕ್ತಿಕರ ಪ್ರಯತ್ನದತ್ತ ಹರಿಯಿತು. ಅದು ನಮ್ಮ ಪ್ರಾಚೀನ ಗ್ರಂಥಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಭಾರತದಲ್ಲಷ್ಟೇ ಅಲ್ಲ ವಿಶ್ವಾದ್ಯಂತ ಜನಪ್ರಿಯಗೊಳಿಸುವ ಪ್ರಯತ್ನವಾಗಿದೆ. ಪುಣೆಯಲ್ಲಿ ಭಂಡಾರ್ಕರ್ ಒರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ಕೇಂದ್ರವಿದೆ. ಈ ಸಂಸ್ಥೆ ವಿದೇಶಿಗರಿಗೆ ಮಹಾಭಾರತದ ಮಹತ್ವವನ್ನು ಪರಿಚಯಿಸಲು ಆನ್ ಲೈನ್ ಕೋರ್ಸ್ ಆರಂಭಿಸಿದೆ. ಕೋರ್ಸ್ ಈಗ ಮಾತ್ರ ಆರಂಭಿಸಿರಬಹುದು ಆದರೆ ಇದರ ವಿಷಯವಸ್ತುವನ್ನು ಸಿದ್ಧಪಡಿಸುವ ಕಾರ್ಯ ನೂರು ವರ್ಷಗಳ ಹಿಂದೆಯೇ ಆರಂಭಿಸಲಾಗಿತ್ತು ಎಂಬುದನ್ನು ಕೇಳಿ ನಿಮಗೆ ಬಹಳ ಆಶ್ಚರ್ಯವಾಗಬಹುದು. ಈ ಸಂಸ್ಥೆ ಇಂತಹ ಕೋರ್ಸ್ ಆರಂಭಿಸಿದಾಗ ಅದಕ್ಕೆ ಬಹಳ ಉತ್ತಮ ಪ್ರತಿಕ್ರಿಯೆ ದೊರೆಯಿತು. ನಮ್ಮ ಪರಂಪರೆಯ ವಿಭಿನ್ನ ಮಗ್ಗಲುಗಳನ್ನು ಹೇಗೆ ಆಧುನಿಕ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎಂದು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಇಂಥ ಅದ್ಭುತ ಉಪಕ್ರಮದ ಚರ್ಚೆಯನ್ನು ಮಾಡುತ್ತಿದ್ದೇನೆ. ಸಪ್ತ ಸಮುದ್ರಗಳಾಚೆ ಇರುವ ಜನರಿಗೂ ಇದರ ಲಾಭ ದೊರೆಯುವಂತೆ ಮಾಡಲು ಆವಿಷ್ಕಾರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಸ್ನೇಹಿತರೆ ಇಂದು ವಿಶ್ವಾದ್ಯಂತ ಭಾರತೀಯ ಸಂಸ್ಕೃತಿ ಬಗ್ಗೆ ಅರಿಯುವ ಆಸಕ್ತಿ ಹೆಚ್ಚುತ್ತಿದೆ. ಬೇರೆ ಬೇರೆ ದೇಶದ ಜನತೆ ಕೇವಲ ನಮ್ಮ ಸಂಸ್ಕೃತಿಯ ಬಗ್ಗೆ ಅರಿಯಲು ಉತ್ಸುಕರಾಗಿರುವುದಷ್ಟೆ ಅಲ್ಲ ಅದನ್ನು ಪಸರಿಸುವಲ್ಲಿಯೂ ಸಹಾಯ ಮಾಡುತ್ತಿದ್ದಾರೆ. ಸರ್ಬಿಯನ್ ಮೇಧಾವಿ ಡಾ. ಮೊಮಿರ್ ನಿಕಿಚ್ ಇಂಥ ಒಬ್ಬ ಸಾಧಕರಾಗಿದ್ದಾರೆ. ಇವರು ದ್ವಿಭಾಷೆಯ ಸಂಸ್ಕೃತ ಸರ್ಬಿಯನ್ ಶಬ್ದಕೋಶವನ್ನು ಸಿದ್ಧಪಡಿಸಿದ್ದಾರೆ. ಈ ಶಬ್ದಕೋಶದಲ್ಲಿ ಬಳಸಲಾದ 70 ಸಾವಿರಕ್ಕೂ ಹೆಚ್ಚು ಸಂಸ್ಕೃತ ಪದಗಳನ್ನು ಸರ್ಬಿಯನ್ ಭಾಷೆಯಲ್ಲಿ ಅನುವಾದಿಸಲಾಗಿದೆ. ಡಾ ನಿಕಿಚ್ ಅವರು 70 ರ ವಯೋಮಾನದಲ್ಲಿ ಸಂಸ್ಕೃತವನ್ನು ಕಲಿತಿದ್ದಾರೆ ಎಂದು ಕೇಳಿ ನಿಮಗೆ ಮತ್ತಷ್ಟು ಸಂತೋಷವಾಗಬಹುದು. ಮಹಾತ್ಮಾ ಗಾಂಧಿಯವರ ಲೇಖನಗಳನ್ನು ಓದಿ ಅವರಿಗೆ ಇದಕ್ಕೆ ಪ್ರೇರಣೆ ದೊರೆಯಿತು ಎಂದು ಅವರು ಹೇಳುತ್ತಾರೆ. ಮಂಗೋಲಿಯಾದ 93 ರ ವಯೋಮಾನದ ಪ್ರೊ.ಜೆ ಗೆಂದೆಧರಮ್ ಅವರದ್ದೂ ಇಂಥದೇ ಒಂದು ಉದಾಹರಣೆಯಾಗಿದೆ. ಕಳೆದ 4 ದಶಕಗಳಲ್ಲಿ ಅವರು ಸುಮಾರು 40 ಭಾರತೀಯ ಪ್ರಾಚೀನ ಗ್ರಂಥಗಳು, ಮಹಾಕಾವ್ಯಗಳು ಮತ್ತು ರಚನೆಗಳನ್ನು ಮಂಗೋಲಿಯಾ ಭಾಷೆಗೆ ಅನುವಾದಿಸಿದ್ದಾರೆ. ನಮ್ಮ ದೇಶದಲ್ಲೂ ಇಂಥ ಉತ್ಸಾಹದಿಂದ ಬಹಳಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ನನಗೆ ಗೋವಾದ ಸಾಗರ್ ಮುಳೆ ಅವರ ಪ್ರಯತ್ನಗಳ ಬಗ್ಗೆ ತಿಳಿಯುವ ಅವಕಾಶ ದೊರೆಯಿತು. ಅವರು ನೂರಾರು ವರ್ಷಗಳಷ್ಟು ಹಳೆಯ ‘ಕಾವೀ’ ಚಿತ್ರಕಲೆಯನ್ನು ನಶಿಸಿಹೋಗದಂತೆ ಕಾಪಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ‘ಕಾವೀ’ ಚಿತ್ರಕಲೆ ಭಾರತದ ಪುರಾತನ ಇತಿಹಾಸವನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಕಾವ್ ಎಂದರೆ ಕೆಂಪು ಮಣ್ಣು ಎಂದರ್ಥ. ಪುರಾತನ ಕಾಲದಲ್ಲಿ ಈ ಕಲೆಗಾಗಿ ಕೆಂಪು ಮಣ್ಣನ್ನು ಬಳಸಲಾಗುತ್ತಿತ್ತು. ಗೋವಾದಲ್ಲಿ ಪೋರ್ಚುಗೀಸ್ ಆಡಳಿತದಲ್ಲಿದ್ದಾಗ ಅಲ್ಲಿಂದ ಪಲಾಯನಗೈದಂತಹ ಜನರು ಬೇರೆ ರಾಜ್ಯಗಳ ಜನರಿಗೆ ಈ ಅದ್ಭುತ ಚಿತ್ರ ಕಲೆಯನ್ನು ಪರಿಚಯಿಸಿದರು. ಕಾಲಾ ನಂತರ ಈ ಅದ್ಭುತ ಕಲೆಗೆ ಅಳಿವಿನ ಅಂಚಿಗೆ ಸರಿಯುತ್ತಿತ್ತು. ಆದರೆ ಸಾಗರ್ ಮುಳೆಯವರು ಈ ಕಲೆಗೆ ಜೀವ ತುಂಬಿದ್ದಾರೆ. ಅವರ ಈ ಪ್ರಯತ್ನಕ್ಕೆ ಬಹಳಷ್ಟು ಮೆಚ್ಚುಗೆ ದೊರೆಯುತ್ತಿದೆ. ಸ್ನೇಹಿತರೆ, ಒಂದು ಪುಟ್ಟ ಪ್ರಯತ್ನ, ಒಂದು ಪುಟ್ಟ ಹೆಜ್ಜೆ ನಮ್ಮ ಸಮೃದ್ಧ ಕಲೆಗಳ ಸಂರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸಬಹುದಾಗಿದೆ. ನಮ್ಮ ದೇಶದ ಜನ ನಿರ್ಧಾರ ಕೈಗೊಂಡರೆ ಸಾಕು ನಮ್ಮ ಪ್ರಾಚೀನ ಕಲೆಗಳನ್ನು ಉಳಿಸಿ ಬೆಳೆಸುವ ಮತ್ತು ಸಂರಕ್ಷಿಸುವ ಚೈತನ್ಯ ಜನಾಂದೋಲನದ ರೂಪ ಪಡೆಯಬಲ್ಲುದು. ನಾನು ಇಲ್ಲಿ ಕೆಲ ಪ್ರಯತ್ನಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ದೇಶಾದ್ಯಂತ ಇಂಥ ಅನೇಕ ಪ್ರಯತ್ನಗಳು ನಡೆಯುತ್ತಿವೆ. ನೀವು ಅವುಗಳ ಮಾಹಿತಿಯನ್ನು ನಮೋ ಆಪ್ ಮೂಲಕ ನನಗೆ ಖಂಡಿತಾ ತಲುಪಿಸಿ.
ನನ್ನ ಪ್ರಿಯ ದೇಶಬಾಂಧವರೆ ಅರುಣಾಚಲ ಪ್ರದೇಶದ ಜನತೆ ಒಂದು ವರ್ಷದಿಂದ ವಿಶಿಷ್ಟ ಆಂದೋಲನವನ್ನು ಕೈಗೊಂಡಿದ್ದಾರೆ. ಅದಕ್ಕೆ ‘ಅರುಣಾಚಲ ಪ್ರದೇಶ ಏರ್ ಗನ್ ಸರೆಂಡರ್ ಅಭಿಯಾನ್’ ಎಂದು ಹೆಸರಿಸಿದ್ದಾರೆ. ಈ ಆಂದೋಲನದಲ್ಲಿ ಜನರು ಸ್ವ ಇಚ್ಛೆಯಿಂದ ಒಪ್ಪಿಸುತ್ತಿದ್ದಾರೆ. ಏಕೆಂದು ಗೊತ್ತೆ? ಏಕೆಂದರೆ ಅರುಣಾಚಲ ಪ್ರದೇಶದಲ್ಲಿ ಪಕ್ಷಿಗಳ ವಿವೇಚನಾರಹಿತ ಬೇಟೆ ನಿಲ್ಲಿಸಬೇಕಾಗಿದೆ. ಅರುಣಾಚಲ ಪ್ರದೇಶ 500 ಕ್ಕೂ ಹೆಚ್ಚು ಪಕ್ಷಿ ಪ್ರಭೇದದ ತವರಾಗಿದೆ. ಇವುಗಳಲ್ಲಿ ಕೆಲವು ಸ್ಥಳೀಯ ಪ್ರಭೇದಗಳು ಎಷ್ಟು ವಿಶಿಷ್ಟವಾಗಿವೆ ಎಂದರೆ ವಿಶ್ವದಲ್ಲಿ ಬೇರೆ ಎಲ್ಲೂ ಇವು ಕಾಣಸಿಗುವುದಿಲ್ಲ. ಆದರೆ ಕ್ರಮೇಣ ಕಾಡಿನಲ್ಲೂ ಈಗ ಪಕ್ಷಿಗಳ ಸಂಖ್ಯೆ ಕ್ಷೀಣಿಸಲಾರಂಭಿಸಿದೆ. ಇದನ್ನು ತಡೆಗಟ್ಟಲೆಂದೇ ಈಗ ಏರ್ ಗನ್ ಸರೆಂಡರ್ ಆಂದೋಲನ ಜಾರಿಯಲ್ಲಿದೆ. ಕಳೆದ ಕೆಲವು ತಿಂಗಳಲ್ಲಿ ಬೆಟ್ಟ ಪ್ರದೇಶದಿಂದ ಬಯಲು ಪ್ರದೇಶಗಳವರೆಗೆ ಒಂದು ಸಮುದಾಯದಿಂದ ಮತ್ತೊಂದು ಸಮುದಾಯದವರೆಗೆ, ರಾಜ್ಯದಲ್ಲಿ ಎಲ್ಲೆಡೆ ಜನರು ಮುಕ್ತ ಹೃದಯದಿಂದ ಇದನ್ನು ಸ್ವಾಗತಿಸಿದ್ದಾರೆ. ಅರುಣಾಚಲ ಪ್ರದೇಶದ ಜನತೆ ಸ್ವ ಇಚ್ಛೆಯಿಂದ 1600 ಕ್ಕೂ ಹೆಚ್ಚು ಏರ್ ಗನ್ ಗಳನ್ನು ಒಪ್ಪಿಸಿದ್ದಾರೆ. ಇದಕ್ಕಾಗಿ ನಾನು ಅರುಣಾಚಲ ಪ್ರದೇಶದ ಜನತೆಯನ್ನು ಶ್ಲಾಘಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ
ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಂದ 2022 ಕ್ಕೆ ಸಂಬಂಧಿಸಿದ ಹಲವಾರು ಸಂದೇಶಗಳು ಮತ್ತು ಸಲಹೆಗಳು ಬಂದಿವೆ. ಪ್ರತಿಬಾರಿಯಂತೆಯೇ ಒಂದು ವಿಷಯ ಹೆಚ್ಚಿನ ಜನರಿಂದ ಬಂದ ಸಂದೇಶಗಳಲ್ಲಿ ಇದೆ. ಅದೆಂದರೆ ಸ್ವಚ್ಛತೆ ಮತ್ತು ಸ್ವಚ್ಛಭಾರತ್ . ಸ್ವಚ್ಛತೆಯ ಈ ಸಂಕಲ್ಪ ಶಿಸ್ತು, ಜಾಗೃತಿ ಮತ್ತು ಸಮರ್ಪಣಾ ಭಾವದಿಂದ ಮಾತ್ರವೇ ಈಡೇರುತ್ತದೆ. ನಾವು ಎನ್ ಸಿ ಸಿ ಕೇಡೆಟ್ಸ್ (NCC Cadets)ಗಳಿಂದ ಆರಂಭಿಸಿದ ಪುನೀತ್ ಸಾಗರ್ ಅಭಿಯಾನದಲ್ಲಿ ಕೂಡಾ ಇದರ ಒಂದು ನೋಟವನ್ನು ಕಾಣಬಹುದು. 30 ಸಾವಿರಕ್ಕೂ ಅಧಿಕ ಎನ್ ಸಿಸಿ ಕೇಡೆಟ್ ಗಳು ಈ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಎನ್ ಸಿಸಿಯ ಈ ಕೆಡೇಟ್ ಗಳು ಸಮುದ್ರ ತೀರಗಳನ್ನು ಸ್ವಚ್ಛಗೊಳಿಸಿದರು, ಅಲ್ಲಿಂದ ಪ್ಲಾಸ್ಟಿಕ್ ತ್ಯಾಜ್ಯ ಆರಿಸಿ ಅವುಗಳನ್ನು ರಿಸೈಕ್ಲಿಂಗ್ ಗಾಗಿ ಸಂಗ್ರಹ ಮಾಡಿದರು. ನಮ್ಮ ಬೀಚ್ ಗಳು, ನಮ್ಮ ಬೆಟ್ಟಗುಡ್ಡಗಳು ಸ್ವಚ್ಛವಾಗಿದ್ದರೆ ತಾನೇ ನಮಗೆ ಸುತ್ತಾಡಲು ಯೋಗ್ಯವಾಗಿರುತ್ತವೆ. ಅನೇಕರು ಎಲ್ಲಿಯಾದರೂ ಹೋಗಬೇಕೆಂದು ಜೀವಮಾನ ಪೂರ್ತಿ ಕನಸು ಕಾಣುತ್ತಿರುತ್ತಾರೆ, ಆದರೆ ಅಲ್ಲಿಗೆ ಹೋದಾಗ, ತಿಳಿದೋ ತಿಳಿಯದೆಯೋ ಅಲ್ಲಿ ತ್ಯಾಜ್ಯ ಹರಡಿ ಬರುತ್ತಾರೆ. ಯಾವ ಜಾಗ ನಮಗೆ ಇಷ್ಟೊಂದು ಸಂತೋಷ ನೀಡುತ್ತದೆಯೋ, ಅದನ್ನು ನಾವು ಕೊಳಕು ಮಾಡಬಾರದು ಎನ್ನುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕು.
ಸ್ನೇಹಿತರೇ, ನನಗೆ ಸಾಫ್ ವಾಟರ್ (saafwater) ಹೆಸರಿನ ಒಂದು ಸ್ಟಾರ್ಟ್ ಅಪ್ ನ ಬಗ್ಗೆ ತಿಳಿದು ಬಂತು. ಕೆಲವು ಯುವಕರು ಸೇರಿ ಇದನ್ನು ಆರಂಭಿಸಿದ್ದಾರೆ. ಇದು ಕೃತಕ ಬುದ್ಧಿಮತ್ತೆ ಮತ್ತು internet of things ನ ಸಹಾಯದಿಂದ ಜನರಿಗೆ ಅವರಿರುವ ಪ್ರದೇಶದಲ್ಲಿ ನೀರಿನ ಶುದ್ಧತೆ ಮತ್ತು ಗುಣಮಟ್ಟ ಸಂಬಂಧಿತ ಮಾಹಿತಿ ತಿಳಿಸುತ್ತದೆ. ಇದೊಂದು ಸ್ವಚ್ಛತೆಯ ಮತ್ತೊಂದು ರೀತಿಯ ಕ್ರಮವಾಗಿದೆ. ಜನರ ಸ್ವಚ್ಛ ಮತ್ತು ಆರೋಗ್ಯಪೂರ್ಣ ಭವಿಷ್ಯಕ್ಕಾಗಿ ಈ ಸ್ಟಾರ್ಟ್ ಅಪ್ ನ ಪ್ರಾಮುಖ್ಯತೆಯ ದೃಷ್ಟಿಯಿಂದ ಇದಕ್ಕೆ ಒಂದು ಜಾಗತಿಕ ಪ್ರಶಸ್ತಿ ಕೂಡಾ ದೊರೆತಿದೆ.
ಸ್ನೇಹಿತರೇ, ‘ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ’ ಈ ಪ್ರಯತ್ನದಲ್ಲಿ ಸಂಸ್ಥೆಗಳಿರಲಿ ಅಥವಾ ಸರ್ಕಾರವೇ ಇರಲಿ ಎಲ್ಲರದ್ದೂ ಮಹತ್ವಪೂರ್ಣ ಪಾತ್ರವಿದೆ. ಈ ಮೊದಲು ಸರ್ಕಾರಿ ಕಚೇರಿಗಳಲ್ಲಿ ಹಳೆಯ ಕಡತಗಳು ಮತ್ತು ಕಾಗದಗಳ ಎಷ್ಟೊಂದು ರಾಶಿ ಇರುತ್ತಿತ್ತೆಂದು ನಿಮಗೆಲ್ಲರಿಗೂ ತಿಳಿದಿದೆ. ಸರ್ಕಾರ ಹಳೆಯ ವಿಧಾನಗಳನ್ನು ಬದಲಾಯಿಸಲು ಆರಂಭಿಸಿದಾಗಿನಂದ, ಈ ಕಡತಗಳು ಮತ್ತು ಕಾಗದಪತ್ರಗಳ ರಾಶಿ ಡಿಜಿಟೈಸ್ ಆಗಿ, ಕಂಪ್ಯೂಟರ್ ನ ಫೋಲ್ಡರ್ ಗಳಲ್ಲಿ ಸಂಗ್ರಹಗೊಳ್ಳುತ್ತಿವೆ. ಹಳೆಯ ಮತ್ತು ಬಾಕಿ ಉಳಿದಿರುವ ಸಾಮಗ್ರಿಗಳನ್ನು ವಿಲೇವಾರಿ ಮಾಡಲು ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ವಿಶೇಷ ಅಭಿಯಾನವನ್ನು ಕೂಡಾ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಕೆಲವು ಕುತೂಹಲಕಾರಿ ವಿಷಯಗಳು ಕೂಡಾ ನಡೆದಿವೆ. ಅಂಚೆ ಇಲಾಖೆಯಲ್ಲಿ ಈ ಅಭಿಯಾನ ನಡೆದಾಗ, ಅಲ್ಲಿನ ಜಂಕ್ ಯಾರ್ಡ್ ಸಂಪೂರ್ಣವಾಗಿ ಖಾಲಿಯಾಯಿತು. ಈಗ ಈ ಜಂಕ್ ಯಾರ್ಡ್ ಅನ್ನು ಕೋರ್ಟ್ ಯಾರ್ಡ್ ಮತ್ತು ಕೆಫೇಟೇರಿಯಾ ಆಗಿ ಪರಿವರ್ತಿಸಲಾಗಿದೆ. ಮತ್ತೊಂದು ಜಂಕ್ ಯಾರ್ಡ್ ಅನ್ನು ದ್ವಿಚಕ್ರ ವಾಹನಗಳಿಗಾಗಿ ನಿಲುಗಡೆ ತಾಣವನ್ನಾಗಿ ಮಾಡಲಾಗಿದೆ. ಇದೇ ರೀತಿ ಪರಿಸರ ಸಚಿವಾಲಯವು ತನ್ನ ಖಾಲಿಯಾದ ಜಂಕ್ ಯಾರ್ಡ್ ಅನ್ನು ಕ್ಷೇಮ ಕೇಂದ್ರವನ್ನಾಗಿ ಪರಿವರ್ತಿಸಿದೆ. ನಗರ ವ್ಯವಹಾರಗಳ ಸಚಿವಾಲಯವು ಒಂದು ಸ್ವಚ್ಛ ಎಟಿಎಂ ಅನ್ನು ಕೂಡಾ ಸ್ಥಾಪಿಸಿದೆ. ಜನರು ತ್ಯಾಜ್ಯ ನೀಡಿ ಬದಲಿಗೆ ನಗದು ತೆಗೆದುಕೊಂಡು ಹೋಗಲಿ ಎನ್ನುವುದು ಇದರ ಉದ್ದೇಶವಾಗಿದೆ. ನಾಗರೀಕ ವಿಮಾನ ಸಚಿವಾಲಯದ ವಿಭಾಗಗಳು, ಗಿಡಗಳಿಂದ ಉದುರುವ ಒಣ ಎಲೆಗಳನ್ನು ಮತ್ತು ಸಾವಯವ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲು ಪ್ರಾರಂಭಿಸಿವೆ. ಈ ವಿಭಾಗವು ತ್ಯಾಜ್ಯ ಕಾಗದದಿಂದ ಸ್ಟೇಷನರಿ ತಯಾರಿಸುವ ಕೆಲಸ ಕೂಡಾ ಮಾಡುತ್ತಿದೆ. ನಮ್ಮ ಸರ್ಕಾರದ ಇಲಾಖೆಗಳು ಕೂಡಾ ಸ್ವಚ್ಛತೆಯಂತಹ ವಿಷಯಗಳ ಮೇಲೆ ಇಷ್ಟೊಂದು ಇನ್ನೋವೇಟಿವ್ ಆಗಬಹುದಾಗಿದೆ. ಕೆಲವು ವರ್ಷಗಳ ಹಿಂದೆ ಯಾರಿಗೂ ಇಂತಹ ಭರವಸೆ ಕೂಡಾ ಇರುತ್ತಿರಲಿಲ್ಲ. ಆದರೆ ಈಗ ಇದು ವ್ಯವಸ್ಥೆಯ ಭಾಗವಾಗುತ್ತಾ ಬರುತ್ತಿದೆ. ಇದೇ ಅಲ್ಲವೇ ದೇಶದ ಹೊಸ ಚಿಂತನೆ, ಇದರ ನೇತೃತ್ವವನ್ನು ದೇಶವಾಸಿಗಳೆಲ್ಲಾ ಒಟ್ಟಾಗಿ ಸೇರಿ ನಿರ್ವಹಿಸುತ್ತಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿ ’ ನಾವು ಈ ಬಾರಿಯೂ ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಪ್ರತಿಬಾರಿಯಂತೆ, ಒಂದು ತಿಂಗಳ ನಂತರ ನಾವು ಪುನಃ ಭೇಟಿಯಾಗೋಣ. ಆದರೆ ಅದು 2022 ರಲ್ಲಿ. ಪ್ರತಿಯೊಂದು ಹೊಸ ಆರಂಭವೂ ನಮ್ಮ ಸಾಮರ್ಥ್ಯವನ್ನು ಗುರುತಿಸುವ ಒಂದು ಅವಕಾಶವನ್ನು ಹೊತ್ತು ತರುತ್ತದೆ. ಯಾವ ಗುರಿಗಳನ್ನು ನಾವು ಮೊದಲು ಕಲ್ಪನೆ ಕೂಡಾ ಮಾಡಿರಲಿಲ್ಲವೋ, ದೇಶ ಇಂದು ಅವುಗಳಿಗಾಗಿ ಪ್ರಯತ್ನ ಮಾಡುತ್ತಿದೆ. ನಮ್ಮಲ್ಲಿ ಹೀಗೆ ಹೇಳಲಾಗುತ್ತದೆ–
ಕ್ಷಣಶಃ ಕಣಶಶ್ಚೈವ, ವಿದ್ಯಾಮ್ ಅರ್ಥಂ ಚ ಸಾಧಯೇತ್,
ಕ್ಷಣೇ ನಷ್ಟೇ ಕುತೋ ವಿದ್ಯಾ, ಕಣೆ ನಷ್ಟೇ ಕುತೋ ಧನಮ್
(क्षणश: कणशश्चैव, विद्याम् अर्थं च साधयेत् |
क्षणे नष्टे कुतो विद्या, कणे नष्टे कुतो धनम् ||)
ಅಂದರೆ, ನಾವು ಜ್ಞಾನಾರ್ಜನೆ ಮಾಡಬೇಕಾದರೆ, ಏನಾದರೂ ಹೊಸದನ್ನು ಕಲಿಯಬೇಕಾದರೆ, ಮಾಡಬೇಕಾದರೆ, ನಾವು ಪ್ರತಿಯೊಂದು ಕ್ಷಣವನ್ನೂ ಉಪಯೋಗಿಸಿಕೊಳ್ಳಬೇಕು. ಮತ್ತು ನಮಗೆ ಧನಾರ್ಜನೆ ಮಾಡಬೇಕಾದರೆ, ಅಂದರೆ ಉನ್ನತಿ, ಪ್ರಗತಿ ಸಾಧಿಸಬೇಕಾದರೆ, ಪ್ರತಿಯೊಂದು ಕಣದ ಅಂದರೆ ಪ್ರತಿಯೊಂದು ಸಂಪನ್ಮೂಲದ, ಸೂಕ್ತ ಬಳಕೆ ಮಾಡಬೇಕು. ಏಕೆಂದರೆ ಕ್ಷಣ ನಷ್ಟವಾಗುವುದರಿಂದ ವಿದ್ಯೆ ಹಾಗೂ ಜ್ಞಾನ ಹೊರಟುಹೋಗುತ್ತದೆ ಮತ್ತು ಕಣ ನಷ್ಟವಾಗುವುದರಿಂದ, ಧನ ಮತ್ತು ಪ್ರಗತಿಯ ರಸ್ತೆ ಮುಚ್ಚಿಹೋಗುತ್ತದೆ. ಈ ಮಾತು ದೇಶವಾಸಿಗಳೆಲ್ಲರಿಗೂ ಪ್ರೇರಣೆಯಾಗಿದೆ. ನಾವು ಬಹಳಷ್ಟನ್ನು ಕಲಿಯಬೇಕು, ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು, ಹೊಸ ಹೊಸ ಗುರಿಗಳನ್ನು ಸಾಧಿಸಬೇಕು, ಆದ್ದರಿಂದ ನಾವು ಒಂದು ಕ್ಷಣವನ್ನು ಕೂಡಾ ನಷ್ಟ ಮಾಡಿಕೊಳ್ಳಬಾರದು. ನಾವು ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು, ಆದ್ದರಿಂದ, ನಾವು ನಮ್ಮ ಸಂಪನ್ಮೂಲಗಳನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಬೇಕು. ಇದು ಒಂದು ರೀತಿಯಲ್ಲಿ ಸ್ವಾವಲಂಬಿ ಭಾರತದ ಮಂತ್ರ ಕೂಡಾ ಆಗಿದೆ, ಏಕೆಂದರೆ, ನಾವೆಲ್ಲರೂ ನಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಿದಾಗ, ಅವುಗಳನ್ನು ವ್ಯರ್ಥವಾಗಲು ಬಿಡದೇ ಇದ್ದಾಗ, ನಾವು ನಮ್ಮ ಸ್ಥಳೀಯ ಸಾಮರ್ಥ್ಯವನ್ನು ಗುರುತಿಸುತ್ತೇವೆ, ಆಗ ದೇಶ ಸ್ವಾವಲಂಬಿಯಾಗುತ್ತದೆ. ಆದ್ದರಿಂದ, ಉತ್ತಮವಾಗಿ ಯೋಚಿಸೋಣ, ದೊಡ್ಡ ಕನಸುಗಳನ್ನು ಕಾಣೋಣ, ಮತ್ತು ಅವುಗಳನ್ನು ಸಾಕಾರಗೊಳಿಸುವುದಕ್ಕಾಗಿ ಶ್ರಮಿಸೋಣ ಎನ್ನುವ ಸಂಕಲ್ಪವನ್ನು ಪುನರುಚ್ಚರಿಸೋಣ ಬನ್ನಿ. ಮತ್ತು ನಮ್ಮ ಕನಸುಗಳನ್ನು ಕೇವಲ ನಮಗೆ ಮಾತ್ರ ಸೀಮಿತವಾಗಿರುವುದಿಲ್ಲ. ನಮ್ಮ ಕನಸುಗಳು ಸಮಾಜ ಮತ್ತು ದೇಶದ ಅಬಿವೃದ್ಧಿಗೆ ಸಂಬಂಧಿಸಿದ್ದಾಗಿರಬೇಕು, ನಮ್ಮ ಪ್ರಗತಿಯಿಂದ ದೇಶದ ಪ್ರಗತಿಯ ಮಾರ್ಗ ತೆರೆಯಬೇಕು ಮತ್ತು ಇದಕ್ಕಾಗಿ, ನಾವು ಒಂದು ಕ್ಷಣವನ್ನೂ, ಒಂದು ಕಣವನ್ನೂ ವ್ಯರ್ಥವಾಗುವುದಕ್ಕೆ ಬಿಡದಂತೆ ಇಂದಿನಿಂದಲೇ ಶ್ರಮಿಸೋಣ. ಇದೇ ಸಂಕಲ್ಪದೊಂದಿಗೆ, ಮುಂಬರುವ ವರ್ಷದಲ್ಲಿ ದೇಶ ಮುಂದೆ ಸಾಗುತ್ತದೆ, ಮತ್ತು 2022, ಒಂದು ನವ ಭಾರತ ನಿರ್ಮಾಣದ ಸುವರ್ಣ ಪುಟವಾಗಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಇದೇ ವಿಶ್ವಾಸದೊಂದಿಗೆ ನಿಮ್ಮೆಲ್ಲರಿಗೂ ಹೊಸ ವರ್ಷ 2022 ಕ್ಕಾಗಿ ಅನೇಕ ಶುಭಾಶಯಗಳು. ಅನೇಕಾನೇಕ ಧನ್ಯವಾದ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.
ಇಂದು ಮತ್ತೊಮ್ಮೆ ನಾವು ಮನದ ಮಾತಿನಲ್ಲಿ ಒಗ್ಗೂಡುತ್ತಿದ್ದೇವೆ. 2 ದಿನಗಳ ನಂತರ ಡಿಸೆಂಬರ್ ತಿಂಗಳು ಆರಂಭವಾಗುತ್ತಿದೆ. ಡಿಸೆಂಬರ್ ಬರುತ್ತಿದ್ದಂತೆ ಮಾನಸಿಕವಾಗಿ ನಮಗೆ ಅಂತೂ ವರ್ಷ ಮುಗಿಯಿತು ಎಂದೆನ್ನಿಸುತ್ತದೆ. ಇದು ವರ್ಷದ ಕೊನೆಯ ಮಾಸವಾಗಿದೆ. ನವ ವರ್ಷಕ್ಕೆ ಹೊಸ ಯೋಜನೆಗಳನ್ನು ಹೆಣೆಯಲಾರಂಭಿಸುತ್ತೇವೆ. ಇದೇ ತಿಂಗಳು ನೌಕಾಪಡೆ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನೂ ದೇಶ ಆಚರಿಸುತ್ತದೆ. ಡಿಸೆಂಬರ್ 16 ರಂದು 1971 ನೇ ವರ್ಷದಲ್ಲಿ ನಡೆದ ಯುದ್ಧದ ಸ್ವರ್ಣ ಜಯಂತಿಯನ್ನು ದೇಶ ಆಚರಿಸುತ್ತಿದೆ ಎಂದು ನಮಗೆಲ್ಲ ತಿಳಿದಿದೆ. ನಾನು ಈ ಎಲ್ಲ ಸಂದರ್ಭಗಳಲ್ಲಿ ದೇಶದ ಸುರಕ್ಷತಾ ಬಲವನ್ನು ಸ್ಮರಿಸುತ್ತೇನೆ. ನಮ್ಮ ಯೋಧರನ್ನು ಸ್ಮರಿಸುತ್ತೇನೆ ಹಾಗೂ ವಿಶೇಷವಾಗಿ ಇಂಥ ಯೋಧರಿಗೆ ಜನ್ಮ ನೀಡಿದ ವೀರ ಮಾತೆಯರನ್ನು ಸ್ಮರಿಸುತ್ತೇನೆ. ಎಂದಿನಂತೆ ಈ ಬಾರಿಯೂ ನನಗೆ ನಮೋ ಆಪ್ ನಲ್ಲಿ ಮತ್ತು ಮೈ ಗೌ ನಲ್ಲಿ ನಿಮ್ಮ ಹಲವಾರು ಸಲಹೆ ಸೂಚನೆಗಳು ದೊರೆತಿವೆ. ನೀವು ನನ್ನನ್ನು ನಿಮ್ಮ ಕುಟುಂಬ ಸದಸ್ಯನಂತೆ ಪರಿಗಣಿಸಿ ಸುಖ ದುಖಃಗಳನ್ನು ಹಂಚಿಕೊಂಡಿದ್ದೀರಿ. ಇದರಲ್ಲಿ ಬಹಳಷ್ಟು ಯುವಜನತೆ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಇದ್ದಾರೆ. ಮನದ ಮಾತಿನ ನಮ್ಮ ಈ ಕುಟುಂಬ ನಿರಂತರವಾಗಿ ವೃದ್ಧಿಸುತ್ತಿದೆ ಮತ್ತು ಮನಸ್ಸುಗಳು ಬೆರೆಯುತ್ತಿವೆ ಗುರಿಯೊಂದಿಗೂ ಬೆಸೆಯುತ್ತಿವೆ ಎಂದು ನನಗೆ ಬಹಳ ಸಂತೋಷವೆನಿಸುತ್ತದೆ. ಗಾಢವಾಗಿ ಬೇರೂರುತ್ತಿರುವ ನಮ್ಮ ಸಂಬಂಧಗಳು ನಮ್ಮ ನಡುವೆ ನಿರಂತರವಾಗಿ ಸಕಾರಾತ್ಮಕತೆಯನ್ನು ಪ್ರವಹಿಸುತ್ತಿವೆ.
ನನ್ನ ಪ್ರಿಯ ದೇಶಬಾಂಧವರೆ, ಸೀತಾಪುರದ ಓಜಸ್ವಿ ಎಂಬುವರು ಹೀಗೆ ಬರೆಯುತ್ತಾರೆ- ಅಮೃತ ಮಹೋತ್ಸವದ ಕುರಿತು ನಡೆಯುತ್ತಿರುವ ಚರ್ಚೆಗಳು ಅವರಿಗೆ ಬಹಳ ಇಷ್ಟವಾಗುತ್ತಿವೆ. ಅವರು ತಮ್ಮ ಸ್ನೇಹಿತರೊಂದಿಗೆ ಮನದ ಮಾತುಗಳನ್ನು ಕೇಳುತ್ತಾರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಾಕಷ್ಟು ಅರಿಯಲು ಮತ್ತು ಕಲಿಯಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸ್ನೇಹಿತರೆ, ಅಮೃತ ಮಹೋತ್ಸವ ನಮಗೆ ಕಲಿಕೆಯ ಜೊತೆಗೆ ದೇಶಕ್ಕಾಗಿ ಏನನ್ನಾದರೂ ಮಾಡುವಂತಹ ಪ್ರೇರಣೆಯನ್ನೂ ನೀಡುತ್ತದೆ. ಈಗಂತೂ ದೇಶದೆಲ್ಲೆಡೆ ಸಾಮಾನ್ಯ ಜನರಲ್ಲಾಗಲಿ ಅಥವಾ ಸರ್ಕಾರದಲ್ಲಾಗಲಿ, ಪಂಚಾಯ್ತಿಯಿಂದ ಹಿಡಿದು ಸಂಸತ್ತಿನವರೆಗೆ ಅಮೃತ ಮಹೋತ್ಸವ ಪ್ರತಿಧ್ವನಿಸುತ್ತಿದೆ ಮತ್ತು ನಿರಂತರವಾಗಿ ಈ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಜರುಗುತ್ತಿವೆ. ಇಂಥದೇ ಒಂದು ರೋಮಾಂಚಕಾರಿ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಿತು. “ಅಜಾದಿ ಕಿ ಕಹಾನಿ ಬಚ್ಚೊಂಕಿ ಜುಬಾನಿ” ಕಾರ್ಯಕ್ರಮದಲ್ಲಿ ಮಕ್ಕಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕಥೆಗಳನ್ನು ಮನಃಪೂರ್ವಕವಾಗಿ ಪ್ರಸ್ತುತಪಡಿಸಿದರು. ವಿಶೇಷವೆಂದರೆ ಇದರಲ್ಲಿ ಭಾರತದ ಜೊತೆಗೆ ನೇಪಾಳ, ಮಾರಿಷಿಯಸ್, ತಾಂಜೇನಿಯಾ, ನ್ಯೂಜಿಲೆಂಡ್ ಮತ್ತು ಫಿಜಿ ದೇಶದ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ನಮ್ಮ ದೇಶದ ಮಹಾರತ್ನ ಒಎನ್ ಜಿಸಿ. ಒಎನ್ ಜಿಸಿ ಕೂಡ ಸ್ವಲ್ಪ ವಿಭಿನ್ನವಾಗಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಒಎನ್ ಜಿಸಿ ಈ ಮಧ್ಯೆ ವಿದ್ಯಾರ್ಥಿಗಳಿಗೆ ತೈಲ ಕ್ಷೇತ್ರದಲ್ಲಿ ಅಧ್ಯಯನ ಪ್ರವಾಸವನ್ನು ಆಯೋಜಿಸುತ್ತಿದೆ. ಈ ಪ್ರವಾಸದಲ್ಲಿ ಒಎನ್ ಜಿಸಿ ವಿದ್ಯಾರ್ಥಿಗಳಿಗೆ ತೈಲ ಕ್ಷೇತ್ರದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮುಂಬರುವ ನಮ್ಮ ಇಂಜಿನೀಯರ್ ಗಳು ರಾಷ್ಟ್ರ ನಿರ್ಮಾಣದ ಪ್ರಯತ್ನದಲ್ಲಿ ಸಂಪೂರ್ಣ ಹುರುಪು ಮತ್ತು ಶೃದ್ಧೆಯಿಂದ ಪಾಲ್ಗೊಳ್ಳಲಿ ಎಂಬುದು ಇದರ ಉದ್ದೇಶವಾಗಿದೆ.
ಸ್ನೇಹಿತರೆ, ಸ್ವಾತಂತ್ರ್ಯದಲ್ಲಿ ನಮ್ಮ ಬುಡಕಟ್ಟು ಜನರ ಕೊಡುಗೆಯನ್ನು ಮನಗಂಡು ದೇಶ ಬುಡಕಟ್ಟು ಜನರ ಗೌರವ ಸಪ್ತಾಹವನ್ನೂ ಆಚರಿಸಿದೆ. ದೇಶದ ವಿಭಿನ್ನ ಭಾಗಗಳಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳೂ ಜರುಗಿದವು. ಅಂಡಮಾನ್ ಮತ್ತು ನಿಕೊಬಾರ್ ದ್ವೀಪ ಸಮೂಹದಲ್ಲಿ ಜಾರ್ವಾ ಮತ್ತು ಓಂಗೆ ಎಂಬ ಬುಡಕಟ್ಟು ಸಮುದಾಯದ ಜನರು ತಮ್ಮ ಸಂಸ್ಕೃತಿಯ ಸಾಕಾರ ರೂಪವನ್ನು ಪ್ರದರ್ಶಿಸಿದರು. ಹಿಮಾಚಲ ಪ್ರದೇಶದ ಊನಾದ ಮಿನಿಯೇಚರ್ ಬರಹಗಾರ ರಾಮ್ ಕುಮಾರ್ ಜೋಷಿಯವರು ಒಂದು ಅದ್ಭುತ ಕೆಲಸವನ್ನು ಮಾಡಿದ್ದಾರೆ. ಅವರು ಒಂದು ಪುಟ್ಟ ಪೋಸ್ಟೇಜ್ ಸ್ಟಾಂಪ್ ಮೇಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಪೂರ್ವ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಜಿಯವರ ವಿಶೇಷ ಸ್ಕೆಚ್ ಬರೆದಿದ್ದಾರೆ. ಹಿಂದಿಯಲ್ಲಿ ಬರೆದ ‘ರಾಮ್’ ಎಂಬ ಶಬ್ದದ ಮೇಲೆ ಸ್ಕೆಚ್ ಬರೆದಿದ್ದಾರೆ. ಇದರಲ್ಲಿ ಇಬ್ಬರೂ ಮಹಾಪುರುಷರ ಜೀವನಗಾಥೆಯನ್ನು ಸಂಕ್ಷಿಪ್ತವಾಗಿ ಬಿಡಿಸಲಾಗಿದೆ. ಮಧ್ಯಪ್ರದೇಶದ ಕಟನಿಯಿಂದ ಕೆಲ ಸ್ನೇಹಿತರು ಒಂದು ಅವಿಸ್ಮರಣೀಯ ಕಥೆ ಹೇಳುವ ಕಾರ್ಯಕ್ರಮದ ಮಾಹಿತಿ ನೀಡಿದ್ದಾರೆ. ಇದರಲ್ಲಿ ರಾಣಿ ದುರ್ಗಾವತಿಯ ಅದಮ್ಯ ಸಾಹಸ ಮತ್ತು ಬಲಿದಾನದ ನೆನಪುಗಳನ್ನು ಸ್ಮರಿಸಲಾಗಿದೆ. ಇಂಥದೇ ಒಂದು ಕಾರ್ಯಕ್ರಮ ಕಾಶಿಯಲ್ಲಿ ಜರುಗಿತು. ಗೋಸವಾಮಿ ತುಲಸಿದಾಸ್, ಸಂತ ಕಬೀರ್, ಸಂತ ರವಿದಾಸ್, ಭಾರತೇಂದು ಹರಿಶ್ಚಂದ್ರ, ಮುನ್ಶಿ ಪ್ರೇಮ್ ಚಂದ್ ಮತ್ತು ಜೈಶಂಕರ್ ಪ್ರಸಾದ್ ರಂತಹ ಮಹಾನುಭಾವರ ಗೌರವಾರ್ಥ 3 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೇರೆ ಬೇರೆ ಕಾಲಘಟ್ಟದಲ್ಲಿ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಇವರೆಲ್ಲರ ಕೊಡುಗೆ ಬಹಳ ಮಹತ್ವದ ಪಾತ್ರವಹಿಸಿದೆ. ಮನದ ಮಾತಿನ ಹಿಂದಿನ ಕಂತುಗಳಲ್ಲಿ ನಾನು 3 ಸ್ಪರ್ಧೆಗಳ ಬಗ್ಗೆ ಉಲ್ಲೇಖಿಸಿದ್ದೆ ಎಂಬುದು ನಿಮಗೆ ನೆನಪಿರಬಹುದು, ದೇಶ ಭಕ್ತಿ ಗೀತೆ ಬರೆಯುವುದು, ದೇಶ ಭಕ್ತಿಗೆ ಸಂಬಂಧಿಸಿದ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಘಟನೆಗಳ ರಂಗೋಲಿ ಬಿಡಿಸುವುದು ಮತ್ತು ನಮ್ಮ ಮಕ್ಕಳ ಮನದಲ್ಲಿ ಭವ್ಯ ಭಾರತದ ಕನಸುಗಳನ್ನು ಬಿತ್ತುವಂತಹ ಜೋಗುಳದ ಹಾಡುಗಳನ್ನು ಬರೆಯುವ ಕುರಿತು ಹೇಳಿದ್ದೆ. ಈ ಸ್ಪರ್ದೆಗಳಿಗೆ ತಾವು ಖಂಡಿತ ಪ್ರವೇಶ ಪಡೆದಿರಬಹುದು, ಯೋಜನೆ ರೂಪಿಸಿರಬಹುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿರಲೂಬಹುದು ಎಂದು ನನಗೆ ನಿರೀಕ್ಷೆಯಿದೆ. ಭಾರತದ ಪ್ರತಿ ಮೂಲೆಮೂಲೆಯಲ್ಲೂ ನಾ ಮುಂದು ತಾ ಮುಂದು ಎನ್ನುವಂತೆ ಈ ಕಾರ್ಯಕ್ರಮಗಳನ್ನು ಮುನ್ನಡೆಸುತ್ತೀರಿ ಎಂದು ನಿರೀಕ್ಷಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ ಈ ಚರ್ಚೆಯಿಂದ ಈಗ ನಿಮ್ಮನ್ನು ನೇರವಾಗಿ ಬೃಂದಾವನಕ್ಕೆ ಕರೆದೊಯ್ಯುತ್ತೇನೆ. ಭಗವಂತನ ಪ್ರೀತಿಯ ಪ್ರತ್ಯಕ್ಷ ಸ್ವರೂಪ ಎಂದು ಬೃಂದಾವನವನ್ನು ಪರಿಗಣಿಸಲಾಗುತ್ತದೆ. ನಮ್ಮ ಸಂತರೂ ಹೀಗೆ ಹೇಳಿದ್ದಾರೆ,
ಯಹ ಆಸಾ ಧರಿ ಚಿತ್ತ ಮೆ, ಯಹ ಆಸಾ ಧರಿ ಚಿತ್ತ ಮೆ
ಕಹತ ಜಥಾ ಮತಿ ಮೋರ
ವೃಂದಾವನ್ ಸುಖ ರಂಗಕೌ,
ವೃಂದಾವನ್ ಸುಖ ರಂಗಕೌ,
ಕಾಹುನಾ ಪಾಯೌ ಔರ್
ಅಂದರೆ ವೃಂದಾವನದ ಮಹಿಮೆಯನ್ನು ನಾವು ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಸಾರ ಬಿಂಬಿಸುತ್ತೇವೆ ಆದರೆ ವೃಂದಾವನದ ಸುಖ ಮತ್ತು ಇಲ್ಲಿಯ ಅನುಭೂತಿಯನ್ನು ಯಾರೂ ಸಂಪೂರ್ಣ ಅನುಭವಿಸಲಾರರು. ಅದು ಸೀಮಾತೀತವಾಗಿದೆ. ಆದ್ದರಿಂದಲೇ ವಿಶ್ವಾದ್ಯಂತದ ಜನರನ್ನು ವೃಂದಾವನ್ ತನ್ನೆಡೆಗೆ ಆಕರ್ಷಿಸುತ್ತಿದೆ. ಇದರ ಛಾಪು ವಿಶ್ವದ ಮೂಲೆಮೂಲೆಯಲ್ಲಿ ನೋಡಲು ಸಿಗುತ್ತದೆ.
ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪರ್ಥ್ ಎಂಬ ನಗರವಿದೆ. ಕ್ರಿಕೆಟ್ ಪ್ರೇಮಿಗಳು ಇದರ ಬಗ್ಗೆ ಚೆನ್ನಾಗಿ ಬಲ್ಲರು. ಏಕೆಂದರೆ ಪರ್ಥ್ ನಲ್ಲಿ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಲೇ ಇರುತ್ತವೆ. ಪರ್ಥ್ ನಲ್ಲಿ ‘ಸೆಕ್ರೆಡ್ ಇಂಡಿಯಾ ಗ್ಯಾಲರಿ’ ಎಂಬ ಹೆಸರಿನ ಕಲಾ ವಸ್ತು ಸಂಗ್ರಹಾಲಯವಿದೆ. ಈ ಸಂಗ್ರಹಾಲಯವನ್ನು ಸ್ವಾನ್ ವ್ಯಾಲಿ ಎಂಬ ಸುಂದರ ಸ್ಥಳದಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಆಸ್ಟ್ರೇಲಿಯಾದ ನಿವಾಸಿ ಜಗತ್ ತಾರಿಣಿ ದಾಸಿಯವರ ಪ್ರಯತ್ನದ ಫಲವಾಗಿದೆ. ಜಗತ್ ತಾರಿಣಿ ಅವರು ಮೂಲತಃ ಆಸ್ಟ್ರೇಲಿಯಾದವರು. ಅಲ್ಲಿಯೇ ಜನನ, ಅಲ್ಲಿಯೇ ಬೆಳೆದದ್ದು ಆದರೆ 16 ವರ್ಷಗಳಿಗೂ ಹೆಚ್ಚು ಕಾಲ ವೃಂದಾವನದಲ್ಲಿ ಅವರು ಕಳೆದಿದ್ದಾರೆ. ತಮ್ಮ ಸ್ವದೇಶ ಆಸ್ಟ್ರೇಲಿಯಾಕ್ಕೆ ಮರಳಿ ಹೋದರೂ ವೃಂದಾವನವನ್ನು ಮರೆಯಲಾಗಲಿಲ್ಲ ಎಂದು ಅವರು ಹೇಳುತ್ತಾರೆ. ಹಾಗಾಗಿ ಅವರು ವೃಂದಾವನ ಮತ್ತು ಅದರ ಆಧ್ಯಾತ್ಮಿಕ ಭಾವದೊಂದಿಗೆ ಹೊಂದಿಕೊಂಡಿರಲು ಆಸ್ಟ್ರೇಲಿಯಾದಲ್ಲಿಯೇ ವೃಂದಾವನ ನಿರ್ಮಿಸಿದರು. ಕಲೆಯನ್ನೇ ಮಾಧ್ಯಮವನ್ನಾಗಿಸಿಕೊಂಡು ಅಧ್ಬುತ ವೃಂದಾವನವನ್ನು ಅವರು ನಿರ್ಮಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಜನರಿಗೆ ಹಲವಾರು ಕಲಾಕೃತಿಗಳನ್ನು ನೋಡುವ ಅವಕಾಶ ಲಭಿಸುತ್ತದೆ. ಅವರಿಗೆ ಭಾರತದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ವೃಂದಾವನ, ನವಾದ್ವೀಪ ಮತ್ತು ಜಗನ್ನಾಥ ಪುರಿಯ ಪರಂಪರೆ ಮತ್ತು ಸಂಸ್ಕೃತಿಯ ನೋಟ ಕಾಣಸಿಗುತ್ತದೆ. ಇಲ್ಲಿ ಭಗವಾನ್ ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದ ಅನೇಕ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಭಗವಾನ್ ಶ್ರೀಕೃಷ್ಣ ಗೋವರ್ಧನಗಿರಿಯನ್ನು ತನ್ನ ಕಿರುಬೆರಳಲ್ಲಿ ಎತ್ತಿ ಹಿಡಿದಿದ್ದು ಅದರಡಿ ವೃಂದಾವನದ ಜನರು ಆಶ್ರಯ ಪಡೆದಿರುವ ಒಂದು ಕಲಾಕೃತಿಯೂ ಇದೆ. ಜಗತ್ ತಾರಿಣಿಯವರ ಈ ಅದ್ಭುತ ಪ್ರಯತ್ನ ಖಂಡಿತ ನಮಗೆ ಶ್ರೀಕೃಷ್ಣ ಭಕ್ತಿಯ ಶಕ್ತಿ ಏನೆಂಬುದರ ದರ್ಶನ ಮಾಡಿಸುತ್ತದೆ. ನಾನು ಅವರ ಈ ಪ್ರಯತ್ನಕ್ಕೆ ಅನಂತ ಶುಭಾಷಯಗಳನ್ನು ಕೋರುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ಈಗ ನಾನು ಆಸ್ಟ್ರೇಲಿಯಾದ ಪರ್ಥ್ ನಲ್ಲಿ ನಿರ್ಮಿಸಲಾದ ವೃಂದಾವನದ ಬಗ್ಗೆ ಮಾತನಾಡುತ್ತಿದ್ದೆ. ಒಂದು ಆಸಕ್ತಿಕರ ಇತಿಹಾಸವೆಂದರೆ ಬುಂದೇಲ್ ಖಂಡದ ಝಾನ್ಸಿಯೊಂದಿಗೂ ಆಸ್ಟ್ರೇಲಿಯಾದ ನಂಟಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಕಾನೂನಾತ್ಮಕ ಸಮರವನ್ನು ನಡೆಸುತ್ತಿದ್ದಾಗ ಜಾನ್ ಲ್ಯಾಂಗ್ ಅವರ ವಕೀಲರಾಗಿದ್ದರು. ಜಾನ್ ಲ್ಯಾಂಗ್ ಮೂಲತಃ ಆಸ್ಟ್ರೇಲಿಯಾದವರಾಗಿದ್ದರು. ಭಾರತದಲ್ಲಿದ್ದುಕೊಂಡು ಅವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಮೊಕದ್ದಮೆಯನ್ನು ನಡೆಸಿದ್ದರು. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಝಾನ್ಸಿ ಮತ್ತು ಬುಂದೇಲ್ ಖಂಡ್ ಕೊಡುಗೆಯೇನೆಂಬುದು ನಮಗೆಲ್ಲ ತಿಳಿದಿದೆ. ಇಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ವೀರರಮಣಿ ಝಲ್ಕಾರಿಬಾಯಿಯವರೂ ಜನಿಸಿದ್ದರು. ಮೇಜರ್ ಧ್ಯಾನ್ ಚಂದ್ ರಂತಹ ಖೇಲ್ ರತ್ನವನ್ನೂ ಕೂಡಾ ಈ ಭೂಮಿ ದೇಶಕ್ಕೆ ಕೊಡುಗೆಯಾಗಿ ನೀಡಿದೆ.
ಸ್ನೇಹಿತರೆ, ಶೌರ್ಯವನ್ನು ಕೇವಲ ಯುದ್ಧ ಭೂಮಿಯಲ್ಲಿ ಮಾತ್ರ ತೋರ್ಪಡಿಸಬೇಕೆಂದೇನೂ ಇಲ್ಲ. ಶೌರ್ಯವೆಂಬುದು ಒಂದು ವೃತವಾದಾಗ ಮತ್ತು ಅದು ವಿಸ್ತರಣೆಗೊಂಡಾಗ ಪ್ರತಿ ಕ್ಷೇತ್ರದಲ್ಲೂ ಅನೇಕ ಕಾರ್ಯಗಳು ಸಿದ್ಧಿಸಲಾರಂಭಿಸುತ್ತವೆ. ಇಂಥ ಶೌರ್ಯದ ಬಗ್ಗೆ ಶ್ರೀಮತಿ ಜೋತ್ಸ್ನಾ ಅವರು ಪತ್ರ ಬರೆದು ತಿಳಿಸಿದ್ದಾರೆ. ಜಾಲೌನ್ ನಲ್ಲಿ ನೂನ್ ನದಿ ಎಂಬ ಒಂದು ಪಾರಂಪರಿಕ ನದಿಯಿತ್ತು. ನೂನ್ ಇಲ್ಲಿಯ ರೈತರಿಗೆ ನೀರಿನ ಪ್ರಮುಖ ಮೂಲವಾಗಿತ್ತು. ಆದರೆ ಕಾಲಕ್ರಮೇಣ ನೂನ್ ನದಿ ಬತ್ತಿ ಹೋಗಲಾರಂಭಿಸಿತು. ಅಲ್ಪ ಸ್ವಲ್ಪ ಉಳಿದಿದ್ದ ನದಿಯ ಅಸ್ತಿತ್ವ ಕಾಲುವೆ ರೂಪದಲ್ಲಿ ಬದಲಾಗಲಾರಂಭಿಸಿತ್ತು. ಇದರಿಂದ ರೈತರಿಗೆ ನೀರಾವರಿ ಸಂಕಷ್ಟ ಎದುರಾಗಲಾರಂಭಿಸಿತು. ಜಾಲೌನ್ ಜನತೆ ಈ ಸ್ಥಿತಿಯನ್ನು ಬದಲಾಯಿಸುವ ಪಣತೊಟ್ಟರು. ಇದೇ ವರ್ಷ ಮಾರ್ಚ್ ನಲ್ಲಿ ಇದಕ್ಕಾಗಿ ಒಂದು ಸಮಿತಿ ರಚಿಸಲಾಯಿತು. ಸಾವಿರಾರು ಗ್ರಾಮೀಣ ಮತ್ತು ಸ್ಥಳೀಯ ಜನತೆ ಸ್ವಯಂ ಪ್ರೇರಣೆಯಿಂದ ಈ ಆಂದೋಲನದಲ್ಲಿ ಪಾಲ್ಗೊಂಡರು. ಇಲ್ಲಿಯ ಪಂಚಾಯ್ತಿ ಗ್ರಾಮಸ್ಥರೊಂದಿಗೆ ಸೇರಿ ಕೆಲಸ ಮಾಡಲಾರಂಭಿಸಿತು ಮತ್ತು ಇಂದು ಅತ್ಯಂತ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಬಂಡವಾಳದಲ್ಲಿ ಈ ನದಿ ಮತ್ತೆ ಪುನರುಜ್ಜೀವನಗೊಂಡಿತು. ಅದೆಷ್ಟೋ ರೈತರಿಗೆ ಇದರ ಲಾಭ ದೊರೆಯುತ್ತಿದೆ. ಯುದ್ಧ ಭೂಮಿಯಿಂದ ಹೊರತಾಗಿರುವ ಶೌರ್ಯದ ಈ ಉದಾಹರಣೆ ನಮ್ಮ ದೇಶಬಾಂಧವರ ಸಂಕಲ್ಪ ಶಕ್ತಿಯನ್ನು ತೋರಿಸುತ್ತದೆ. ಅಲ್ಲದೆ ನಾವು ನಿರ್ಧಾರ ಕೈಗೊಂಡರೆ ಯಾವುದೂ ಅಸಂಭವವಲ್ಲ ಎಂಬುದನ್ನು ತೋರುತ್ತದೆ. ಆದ್ದರಿಂದಲೇ ನಾನು ಸಬ್ ಕಾ ಪ್ರಯಾಸ್ ಎಂದು ಹೇಳುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ನಾವು ಪ್ರಕೃತಿಯನ್ನು ಸಂರಕ್ಷಿಸಿದರೆ ಪ್ರಕೃತಿಯೂ ನಮಗೆ ಸುರಕ್ಷತೆ ಮತ್ತು ಸಂರಕ್ಷಣೆಯನ್ನು ನೀಡುತ್ತದೆ. ಈ ವಿಷಯವನ್ನು ನಾವು ನಮ್ಮ ಖಾಸಗಿ ಜೀವನದಲ್ಲೂ ಅನುಭವಿಸುತ್ತೇವೆ. ಇಂಥದೇ ಉದಾಹರಣೆಯನ್ನು ತಮಿಳುನಾಡಿನ ಜನತೆ ವ್ಯಾಪಕವಾಗಿ ಪ್ರಸ್ತುತಪಡಿಸಿದ್ದಾರೆ. ತೂತುಕುಡಿ ಜಿಲ್ಲೆಯ ಉದಾಹರಣೆ ಇದಾಗಿದೆ. ದಡದಲ್ಲಿರುವಂತಹ ಪ್ರದೇಶಗಳಲ್ಲಿ ಹಲವು ಬಾರಿ ಭೂಮಿ ಮುಳುಗಿ ಹೋಗುವಂತಹ ಆತಂಕ ಇರುತ್ತದೆ ಎಂಬುದು ನಮಗೆ ತಿಳಿದಿದೆ. ತೂತುಕುಡಿಯಲ್ಲಿ ಕೆಲವು ಪುಟ್ಟ ದ್ವೀಪಗಳು ಸಮುದ್ರದಲ್ಲಿ ಮುಳುಗುವ ಅಪಾಯ ಹೆಚ್ಚುತ್ತಿತ್ತು. ಇಲ್ಲಿಯ ಜನರು ಮತ್ತು ವಿಶೇಷ ತಜ್ಞರು ಈ ಪ್ರಾಕೃತಿಕ ವಿಕೋಪದಿಂದ ಪಾರಾಗುವ ಉಪಾಯವನ್ನು ಪ್ರಕೃತಿಯಿಂದಲೇ ಕಂಡುಕೊಂಡರು. ಈ ಜನರು ಈಗ ಈ ದ್ವೀಪಗಳಲ್ಲಿ ತಾಳೆ ಕೃಷಿ ಕೈಗೊಳ್ಳುತ್ತಿದ್ದಾರೆ. ಈ ಮರಗಳು ಚಂಡಮಾರುತ ಮತ್ತು ಬಿರುಗಾಳಿಯಲ್ಲೂ ಅಚಲವಾಗಿರುತ್ತವೆ ಮತ್ತು ಭೂಮಿಗೆ ಸುರಕ್ಷತೆಯನ್ನು ಒದಗಿಸುತ್ತವೆ. ಇದರಿಂದ ಈ ಪ್ರದೇಶವನ್ನು ರಕ್ಷಿಸುವ ಹೊಸ ಆಶಾಭಾವ ಮೂಡಿದೆ.
ಸ್ನೇಹಿತರೆ, ಪ್ರಕೃತಿಯ ಸಮತೋಲನವನ್ನು ಕೆದಕಿದಾಗ ಅಥವಾ ಅದರ ಪಾವಿತ್ರ್ಯಕ್ಕೆ ಧಕ್ಕೆ ತಂದಾಗ ಮಾತ್ರ ಪ್ರಕೃತಿಯಿಂದ ನಮಗೆ ವಿಪತ್ತು ಬಂದೆರಗುತ್ತದೆ. ಪ್ರಕೃತಿ ತಾಯಿಯಂತೆ ನಮ್ಮನ್ನು ಪೋಷಿಸುತ್ತಾಳೆ ಮತ್ತು ನಮ್ಮ ಜೀವನದಲ್ಲಿ ವಿಭಿನ್ನ ಬಣ್ಣಗಳನ್ನು ತುಂಬುತ್ತಾಳೆ.
ಮೇಘಾಲಯದಲ್ಲಿ ಒಂದು ಹಾರುವ ದೋಣಿಯ ಚಿತ್ರ ವೈರಲ್ ಆಗುತ್ತಿರುವುದನ್ನು ಇದೀಗ ನಾನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೆ. ಮೊದಲ ನೋಟದಲ್ಲೇ ಈ ಚಿತ್ರ ನಮ್ಮನ್ನು ಆಕರ್ಷಿಸುತ್ತದೆ. ನಿಮ್ಮಲ್ಲಿ ಬಹಳಷ್ಟು ಜನರು ಆನ್ಲೈನ್ ನಲ್ಲಿ ಇದನ್ನು ನೋಡಿರಬಹುದು. ಗಾಳಿಯಲ್ಲಿ ತೇಲುವ ಈ ದೋಣಿಯನ್ನು ಹತ್ತಿರದಿಂದ ನೋಡಿದಾಗ ನಮಗೆ ಇದು ವಾಸ್ತವದಲ್ಲಿ ನದಿ ನೀರಿನ ಮೇಲೆ ತೇಲುತ್ತಿದೆ ಎಂದು ತಿಳಯುತ್ತದೆ. ನದಿಯ ನೀರು ಎಷ್ಟು ಸ್ವಚ್ಛವಾಗಿದೆಯೆಂದರೆ ನಮಗೆ ಅದರ ತಳ ಕಾಣಿಸುತ್ತದೆ ಮತ್ತು ದೋಣಿ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತದೆ. ನಮ್ಮ ದೇಶದಲ್ಲಿ ಅನೇಕ ರಾಜ್ಯಗಳಿವೆ, ಅನೇಕ ಕ್ಷೇತ್ರಗಳಿವೆ. ಇಲ್ಲಿಯ ಜನರು ತಮ್ಮ ಪ್ರಾಕೃತಿಕ ಪರಂಪರೆಯನ್ನು ಜೀವಂತವಾಗುಳಿಸಿದ್ದಾರೆ. ಈ ಜನರು ಪ್ರಕೃತಿಯೊಂದಿಗೆ ಬೆರೆತು ಬಾಳುವ ಜೀವನಶೈಲಿಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದೆ. ನಮ್ಮ ಸುತ್ತಮುತ್ತ ಇರುವ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳೆಸೋಣ. ಅವುಗಳಿಗೆ ಮೊದಲಿನ ಸ್ವರೂಪವನ್ನು ನೀಡೋಣ. ಇದರಲ್ಲೇ ನಮ್ಮ ಮತ್ತು ವಿಶ್ವದ ಒಳಿತು ಅಡಗಿದೆ.
ನನ್ನ ಪ್ರಿಯ ದೇಶಬಾಂಧವರೆ, ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ, ಬಜೆಟ್ ನ್ನು ವ್ಯಯಿಸುತ್ತದೆ, ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂದಾಗ ಜನರಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅನ್ನಿಸುತ್ತದೆ. ಆದರೆ ಸರ್ಕಾರದ ಹಲವಾರು ಕೆಲಸಗಳಲ್ಲಿ ವಿಕಾಸದ ಅನೇಕ ಯೋಜನೆಗಳಲ್ಲಿ ಮಾನವೀಯ ಸಂವೇದನೆಗಳೊಂದಿಗೆ ಬೆರೆತಿರುವಂತಹ ವಿಷಯಗಳು ಎಂದೆಂದಿಗೂ ಒಂದು ವಿಭಿನ್ನ ಸಂತೋಷವನ್ನು ನೀಡುತ್ತದೆ. ಸರ್ಕಾರದ ಪ್ರಯತ್ನ ಮತ್ತು ಯೋಜನೆಗಳಿಂದ ಯಾರ ಜೀವನ ಹೇಗೆ ಬದಲಾಯಿತು ಮತ್ತು ಅವರ ಬದಲಾದ ಜೀವನದ ಅನುಭವ ಹೇಗಿದೆ ಎಂದು ಕೇಳಿದಾಗ ನಾವು ಕೂಡಾ ಭಾವಪರವಶರಾಗುತ್ತೇವೆ. ಇದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ ಮತ್ತು ಈ ಯೋಜನೆಯನ್ನು ಜನರಿಗೆ ತಲುಪಿಸುವ ಪ್ರೇರಣೆಯನ್ನೂ ನೀಡುತ್ತದೆ. ಒಂದು ರೀತಿಯಲ್ಲಿ ಇದು “ಸ್ವಾಂತಃ ಸುಖಾಯ” ಅಲ್ಲವೇ. ಆದ್ದರಿಂದ ಇಂದು ಮನದ ಮಾತಿನಲ್ಲಿ ನಮ್ಮ ಜೊತೆ ತಮ್ಮ ಧೃಡ ಸಂಕಲ್ಪದಿಂದ ಹೊಸ ಜೀವನವನ್ನು ಜಯಿಸಿರುವಂಥ ಇಬ್ಬರು ಸ್ನೇಹಿತರು ಮಾತನಾಡುತ್ತಿದ್ದಾರೆ. ಇವರು ಆಯುಷ್ಮಾನ್ ಭಾರತ್ ಯೋಜನೆಯ ಸಹಾಯದಿಂದ ಚಿಕಿತ್ಸೆ ಪಡೆದರು ಮತ್ತು ಹೊಸ ಜೀವನವನ್ನು ಆರಂಭಿಸಿದರು. ನಮ್ಮ ಇಂದಿನ ಮೊದಲ ಸ್ನೇಹಿತರು ರಾಜೇಶ್ ಕುಮಾರ್ ಪ್ರಜಾಪತಿ. ಇವರಿಗೆ ಹೃದ್ರೋಗ ಸಮಸ್ಯೆ ಇತ್ತು. ಬನ್ನಿ ರಾಜೇಶ್ ಅವರೊಂದಿಗೆ ಮಾತನಾಡೋಣ.
ಪ್ರಧಾನಿ: ರಾಜೇಶ್ ಅವರೇ ನಮಸ್ಕಾರ
ರಾಜೇಶ್: ನಮಸ್ಕಾರ ಸರ್ ನಮಸ್ಕಾರ…
ಪ್ರಧಾನಿ: ರಾಜೇಶ್ ಅವರೇ ನಿಮಗೆ ಏನು ಆರೋಗ್ಯ ಸಮಸ್ಯೆಯಿತ್ತು? ನೀವು ವೈದ್ಯರ ಬಳಿ ಹೋಗಿರಬಹುದು. ಸ್ಥಳೀಯ ವೈದ್ಯರ ಬಳಿ ನೀವು ಹೋಗಿರಬಹುದು, ಅವರು ಸಲಹೆಯಂತೆ ಬೇರೆ ವೈದ್ಯರ ಬಳಿ ಹೋಗುವ ನಿರ್ಣಯ ಕೈಗೊಂಡಿರಬಹುದು, ಕೈಗೊಳ್ಳದೇ ಇರಬಹುದು? ಏನೇನಾಯಿತು ಎಂದು ನನಗೆ ತಿಳಿಸುವಿರಾ.
ರಾಜೇಶ್: ಸರ್ ನನಗೆ ಹೃದಯ ರೋಗ ಬಾಧೆಯಿತ್ತು. ನನಗೆ ಎದೆಯುರಿಯಾಗುತ್ತಿತ್ತು. ನಾನು ವೈದ್ಯರನ್ನು ಸಂಪರ್ಕಿಸಿದೆ. ವೈದ್ಯರು ಬಹುಶಃ ಆಸಿಡಿಟಿ ಇರಬಹುದು ಎಂದರು. ಹಾಗಾಗಿ ಬಹಳಷ್ಟು ದಿನಗಳವರೆಗೆ ಆಸಿಡಿಟಿ ಔಷಧಿಗಳನ್ನು ತೆಗೆದುಕೊಂಡೆ. ಅದರಿಂದ ಯಾವ ಲಾಭವಾಗದಿದ್ದಾಗ ಡಾ.ಕಪೂರ್ ಅವರನ್ನು ಸಂಪರ್ಕಿಸಿದೆ. ಅವರು ನಿಮ್ಮ ಲಕ್ಷಣಗಳನ್ನು ನೋಡಿದರೆ ಆಂಜಿಯೊಗ್ರಾಫಿ ಮಾಡುವುದು ಉತ್ತಮ ಎಂದರು. ಅವರು ನನಗೆ ಶ್ರೀರಾಮ ಮೂರ್ತಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು. ನಂತರ ನಾವು ಅಮರೇಶ್ ಅಗರವಾಲ್ ಅವರನ್ನು ಭೇಟಿಯಾದೆವು. ಅವರು ನನ್ನ ಆಂಜಿಯೋಗ್ರಾಫಿ ತೆಗೆದರು. ಅವರು ನನಗೆ ನಿಮ್ಮ ರಕ್ತನಾಳದಲ್ಲಿ ಬ್ಲಾಕ್ ಇದೆ ಎಂದು ಹೇಳಿದರು. ನಾನು ಎಷ್ಟು ಖರ್ಚಾಗುತ್ತದೆ ಎಂದು ಕೇಳಿದೆ. ಅದಕ್ಕೆ ವೈದ್ಯರು ಪ್ರಧಾನಿಯವರು ಮಾಡಿಸಿಕೊಟ್ಟಂತಹ ಆಯುಷ್ಮಾನ್ ಕಾರ್ಡ್ ಇದೆಯೇ ಎಂದು ಕೇಳಿದರು. ನನ್ನ ಬಳಿ ಇದೆ ಎಂದು ನಾನು ಹೇಳಿದೆ. ಅದಕ್ಕೆ ಅವರು ನನ್ನ ಕಾರ್ಡ್ ತೆಗೆದುಕೊಂಡರು. ನನ್ನ ಸಂಪೂರ್ಣ ಚಿಕಿತ್ಸೆ ಅದೇ ಕಾರ್ಡ್ ನಿಂದ ಆಗಿದೆ. ಸರ್ ನೀವು ಮಾಡಿಸಿಕೊಟ್ಟ ಈ ಕಾರ್ಡ್ ಬಡವರಿಗೆ ಬಹಳ ಉಪಯುಕ್ತವಾಗಿದೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ. ನಾನು ನಿಮಗೆ ಹೇಗೆ ಕೃತಜ್ಞತೆ ಸಲ್ಲಿಸಲಿ…
ಪ್ರಧಾನಿ: ನೀವು ಏನು ಕೆಲಸ ಮಾಡುತ್ತೀರಿ ರಾಜೇಶ್ ಅವರೇ?
ರಾಜೇಶ್: ಸರ್ ಸದ್ಯಕ್ಕೆ ನಾನು ಪ್ರೈವೇಟ್ ಉದ್ಯೋಗದಲ್ಲಿದ್ದೇನೆ.
ಪ್ರಧಾನಿ: ನಿಮ್ಮ ವಯಸ್ಸೆಷ್ಟು?
ರಾಜೇಶ್: ನನಗೆ 49 ವರ್ಷ ಸರ್..
ಪ್ರಧಾನಿ: ಇಷ್ಟು ಕಡಿಮೆ ವಯಸ್ಸಿನಲ್ಲಿ ನಿಮಗೆ ಹೃದ್ರೋಗ ಖಾಯಿಲೆಯೇ?
ರಾಜೇಶ್: ಹೌದು ಸರ್..ಏನೆಂದು ಹೇಳಲಿ,
ಪ್ರಧಾನಿ: ನಿಮ್ಮ ಕುಟುಂಬದಲ್ಲಿ, ತಾಯಿ, ತಂದೆಯವರಿಗೆ ಇಂಥ ಸಮಸ್ಯೆಯಿತ್ತೇ? ಅಥವಾ ಇದೇ ಮೊದಲ ಬಾರಿಯೇ?
ರಾಜೇಶ್: ಇಲ್ಲ ಸರ್ ಯಾರಿಗೂ ಇರಲಿಲ್ಲ, ಮೊದಲ ಬಾರಿಗೆ ನನಗೆ ಈ ರೋಗ ಕಾಣಿಸಿಕೊಂಡಿದೆ.
ಪ್ರಧಾನಿ: ಆಯುಷ್ಮಾನ್ ಕಾರ್ಡ್ ನ್ನು ಭಾರತ ಸರ್ಕಾರ ನೀಡುತ್ತದೆ. ಬಡವರಿಗಾಗಿ ಇದು ಬಹುದೊಡ್ಡ ಯೋಜನೆಯಾಗಿದೆ. ಇದರ ಬಗ್ಗೆ ನಿಮಗೆ ಹೇಗೆ ತಿಳಿಯಿತು?
ರಾಜೇಶ್: ಇದು ಬಹು ದೊಡ್ಡ ಯೋಜನೆಯಾಗಿದೆ. ಬಡವರಿಗೆ ಇದರಿಂದ ಬಹಳ ಉಪಯೋಗವಾಗುತ್ತಿದೆ. ಬಹಳ ಸಂತೋಷವಾಗಿದೆ ಸರ್. ಈ ಕಾರ್ಡ್ ನಿಂದ ಅದೆಷ್ಟು ಜನರಿಗೆ ಲಾಭವಾಗುತ್ತಿದೆ ಎಂದು ನಾನು ಆಸ್ಪತ್ರೆಯಲ್ಲಿ ನೋಡಿದೆ. ನಾವು ವೈದ್ಯರಿಗೆ ನಮ್ಮ ಬಳಿ ಕಾರ್ಡ್ ಇದೆ ಎಂದು ಹೇಳಿದಾಗ ವೈದ್ಯರು ‘ಆ ಕಾರ್ಡ್ ತೆಗೆದುಕೊಂಡು ಬನ್ನಿ, ನಾನು ಅದರಿಂದಲೇ ನಿಮ್ಮ ಚಿಕಿತ್ಸೆ ಮಾಡುವೆ ಎಂದು ಹೇಳುತ್ತಾರೆ’
ಪ್ರಧಾನಿ: ಹೌದಾ, ಕಾರ್ಡ್ ಇಲ್ಲದಿದ್ದರೆ ನಿಮಗೆ ಎಷ್ಟು ಖರ್ಚಾಗತ್ತಿತ್ತು ಎಂದು ವೈದ್ಯರು ಹೇಳಿದ್ದರೆ?
ರಾಜೇಶ್: ವೈದ್ಯರು, ಕಾರ್ಡ್ ಇಲ್ಲದಿದ್ದರೆ ಬಹಳ ಖರ್ಚಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ನಾನು ನನ್ನ ಬಳಿ ಕಾರ್ಡ್ ಇದೆ ಎಂದು ಹೇಳಿದೆ. ಅದಕ್ಕೆ ಅವರು ಕೂಡಲೇ ಕಾರ್ಡ್ ತೋರಿಸುವಂತೆ ಹೇಳಿದರು. ನಾನು ಅದನ್ನು ತೋರಿಸಿದೆ. ಅದೇ ಕಾರ್ಡ್ ಬಳಸಿ ನನ್ನ ಸಂಪೂರ್ಣ ಚಿಕಿತ್ಸೆ ನಡಲಾಯಿತು. ನನ್ನಿಂದ ಒಂದು ಪೈಸೆಯೂ ಖರ್ಚಾಗಲಿಲ್ಲ. ಎಲ್ಲ ಔಷಧಿಗಳನ್ನೂ ಇದೇ ಕಾರ್ಡ್ ನಿಂದ ಪಡೆಯಲಾಯಿತು.
ಪ್ರಧಾನಿ: ಹಾಗಾದರೆ ರಾಜೇಶ್ ಅವರೆ, ನಿಮ್ಮ ಆರೋಗ್ಯ ಸುಧಾರಿಸಿದೆಯೇ, ಸಂತೋಷವಾಗಿದೆಯೇ?
ರಾಜೇಶ್: ಹೌದು ಸರ್, ತಮಗೆ ಅನಂತ ಧನ್ಯವಾದಗಳು ಸರ್… ನೀವು ಎಂದೆಂದಿಗೂ ಅಧಿಕಾರದಲ್ಲಿ ಮುಂದುವರಿಯುವಂತೆ ನಿಮಗೆ ದೀರ್ಘಾಯಸ್ಸು ಇರಲಿ. ನಿಮ್ಮಿಂದ ನಮ್ಮ ಕುಟುಂಬ ಕೂಡ ಬಹಳ ಸಂತೋಷಗೊಂಡಿದೆ.
ಪ್ರಧಾನಿ: ರಾಜೇಶ್ ಅವರೇ ಅಧಿಕಾರದಲ್ಲಿರುವ ಶುಭಾಷಯಗಳನ್ನು ನೀಡಬೇಡಿ. ಇಂದು ಕೂಡಾ ನಾನು ಅಧಿಕಾರದಲ್ಲಿಲ್ಲ ಮುಂದೆ ಕೂಡಾ ಅಧಿಕಾರದಲ್ಲಿರಲು ಬಯಸುವುದಿಲ್ಲ. ನಾನು ಕೇವಲ ಸೇವೆ ಮಾಡಬಯಸುತ್ತೇನೆ. ನನಗೆ ಈ ಪ್ರಧಾನಿ ಪಟ್ಟ, ಈ ಪದವಿ ಇದೆಲ್ಲ ಅಧಿಕಾರ ಚಲಾಯಿಸಲು ಅಲ್ಲ ಸೇವೆಗಾಗಿದೆ.
ರಾಜೇಶ್: ನಮಗೆ ಸೇವೆಯೇ ಬೇಕಲ್ಲವೇ…ಮತ್ತಿನ್ನೇನು
ಪ್ರಧಾನಿ: ನೋಡಿ ಬಡವರಿಗಾಗಿ ಈ ಆಯುಷ್ಮಾನ್ ಭಾರತ ಯೋಜನೆ ತನ್ನಲ್ಲಿಯೇ…
ರಾಜೇಶ್: ತುಂಬಾ ಅದ್ಭುತ ಕೊಡುಗೆ ಸರ್…
ಪ್ರಧಾನಿ: ಆದರೆ ರಾಜೇಶ್ ಅವರೆ ನಮಗಾಗಿ ಒಂದು ಕೆಲಸ ಮಾಡುವಿರಾ?
ರಾಜೇಶ್: ಖಂಡಿತ ಮಾಡುತ್ತೇನೆ ಸರ್
ಪ್ರಧಾನಿ: ಜನರಿಗೆ ಇದರ ಅರಿವಿರುವುದಿಲ್ಲ, ನಿಮ್ಮ ಸುತ್ತಮುತ್ತ ಇಂಥ ಅದೆಷ್ಟು ಬಡ ಕುಟುಂಬಗಳಿವೆಯೋ ಅವರಿಗೆ ನಿಮಗೆ ಇದರಿಂದ ಏನೆಲ್ಲ ಲಾಭವಾಯಿತು, ಹೇಗೆ ನೆರವು ದೊರೆಯಿತು ಎಂಬುದನ್ನು ಜವಾಬ್ದಾರಿಯುತವಾಗಿ ತಿಳಿಸಿ ಹೇಳುವಿರಾ?
ರಾಜೇಶ್: ಖಂಡಿತ ಹೇಳುತ್ತೇನೆ ಸರ್
ಪ್ರಧಾನಿ: ಅವರು ಕೂಡ ಇಂಥ ಕಾರ್ಡ್ ಮಾಡಿಸಿಕೊಳ್ಳಲಿ ಎಂದು ಅವರಿಗೆ ತಿಳಿಸಿ ಏಕೆಂದರೆ ಕುಟುಂಬದಲ್ಲಿ ಯಾವಾಗ ಎಂಥ ಸಂಕಷ್ಟ ಬಂದೊದಗುವುದೋ ಯಾರಿಗೆ ಗೊತ್ತು? ಇಂದು ಬಡವರು ಔಷಧಿಗಾಗಿ ಪರದಾಡುವುದು ಸೂಕ್ತವಲ್ಲ. ಈಗ ಹಣದ ಅಡಚಣೆಯಿಂದ ಬಡವರು ಔಷಧಿ ತೆಗೆದುಕೊಳ್ಳಲಾಗದಿರುವುದು ಅಥವಾ ಚಿಕಿತ್ಸೆ ಪಡೆಯಲಾಗದಿರುವುದು ಕೂಡಾ ಬಹಳ ಚಿಂತಾಜನಕ ವಿಷಯವಾಗಿದೆ. ಬಡವರಿಗೆ ಎಂಥ ಸಮಸ್ಯೆಯೆಂದರೆ! ನಿಮಗೆ ಈ ಹೃದ್ರೋಗ ಸಮಸ್ಯೆ ಆದಾಗ ಅದೆಷ್ಟೋ ತಿಂಗಳು ನೀವು ಕೆಲಸ ಮಾಡಲಾಗಿರಲಿಕ್ಕಿಲ್ಲ.
ರಾಜೇಶ್: ನಾನು 10 ಅಡಿ ನಡೆಯಲಾಗುತ್ತಿರಲಿಲ್ಲ. ಮೆಟ್ಟಿಲುಗಳನ್ನು ಏರಲಾಗುತ್ತಿರಲಿಲ್ಲ
ಪ್ರಧಾನಿ: ಹಾಗಾದರೆ, ರಾಜೇಶ್ ಅವರೇ ನನ್ನ ಉತ್ತಮ ಸ್ನೇಹಿತನಂತೆ ನೀವು ಎಷ್ಟು ಬಡ ಜನರಿಗೆ ಆಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ತಲುಪಿಸುತ್ತೀರಿ, ಅನಾರೋಗ್ಯವಂತರಿಗೆ ಸಹಾಯ ಮಾಡಬಲ್ಲಿರಿ ಎಂದು ಆಲೋಚಿಸಿ. ಇದರಿಂದ ನಿಮಗೂ ಸಂತೋಷವಾಗುತ್ತದೆ ನನಗೂ ಆನಂದವಾಗುತ್ತದೆ. ರಾಜೇಶ್ ಅವರ ಆರೋಗ್ಯವಂತೂ ಸುಧಾರಿಸಿತು ಅಂತೆಯೇ ರಾಜೇಶ್ ಅವರು ನೂರಾರು ಜನರ ಆರೋಗ್ಯವನ್ನೂ ಸುಧಾರಿಸುವಂತೆ ಮಾಡಿದರು ಎಂದು ನನಗನ್ನಿಸುತ್ತದೆ. ಈ ಆಯುಷ್ಮಾನ್ ಭಾರತ್ ಯೋಜನೆ ಬಡವರಿಗಾಗಿಯೇ ಇದೆ. ಮಧ್ಯಮವರ್ಗದವರಿಗಾಗಿದೆ. ಸಾಮಾನ್ಯ ಕುಟುಂಬಗಳಿಗಾಗಿಯೇ ಇದೆ. ನೀವು ಮನೆಮನೆಗೂ ಈ ವಿಷಯವನ್ನು ತಲುಪಿಸುವಿರಾ?
ರಾಜೇಶ್: ಖಂಡಿತ ತಲುಪಿಸುವೆ ಸರ್. ನಾನು ಮೂರು ದಿನ ಆಸ್ಪತ್ರೆಯಲ್ಲಿಯೇ ಇದ್ದಾಗ ಬಹಳ ಜನರು ಭೇಟಿಗೆ ಬಂದಿದ್ದರು. ಅವರೆಲ್ಲರಿಗೇ ಕಾರ್ಡ್ ಇದ್ದರೆ ಚಿಕಿತ್ಸೆ ಉಚಿತ ಎಂದು ತಿಳಿಸಿದೆ. ಕಾರ್ಡ್ ನ ಪ್ರಯೋಜನಗಳನ್ನು ಅವರಿಗೆ ತಿಳಿಸಿದೆ.
ಪ್ರಧಾನಿ: ಒಳ್ಳೆಯದು ರಾಜೇಶ್ ಅವರೇ ಆರೋಗ್ಯವನ್ನು ಕಾಪಾಡಿಕೊಳ್ಳಿ. ದೈಹಿಕವಾಗಿ ಸದೃಡರಾಗಿರಿ. ಮಕ್ಕಳ ಬಗ್ಗೆ ಯೋಚಿಸಿ. ಬಹಳಷ್ಟು ಪ್ರಗತಿಯನ್ನು ಸಾಧಿಸಿ. ನಿಮಗೆ ಅನಂತ ಶುಭ ಹಾರೈಕೆಗಳು
ಜತೆಗಾರರೇ, ನಾವು ರಾಜೇಶ್ ಅವರ ಮಾತುಗಳನ್ನು ಆಲಿಸಿದೆವು. ಬನ್ನಿ, ನಮ್ಮೊಂದಿಗೆ ಸುಖದೇವಿ ಅವರು ಸೇರಿಕೊಂಡಿದ್ದಾರೆ. ಮಂಡಿಗಳ ತೊಂದರೆ ಅವರನ್ನು ಅತೀವ ದುಃಖಿತರನ್ನಾಗಿ ಮಾಡಿತ್ತು. ಬನ್ನಿ, ನಾವು ಸುಖ ದೇವಿ ಅವರೊಂದಿಗೆ ಮಾತನಾಡೋಣ, ಮೊದಲು ಅವರು ಅನುಭವಿಸಿದ ದುಃಖದ ಬಗ್ಗೆ ಕೇಳೋಣ, ಬಳಿಕ ಸುಖ ಹೇಗೆ ಬಂತು ಎನ್ನುವುದನ್ನು ಅರ್ಥೈಸಿಕೊಳ್ಳೋಣ.
ಮೋದಿ: ಸುಖದೇವಿ ಜೀ, ನಮಸ್ತೆ. ತಾವು ಎಲ್ಲಿಂದ ಮಾತನಾಡುತ್ತಿರುವಿರಿ?
ಸುಖದೇವಿ: ದಾನ್ ದಪರಾದಿಂದ
ಮೋದಿ: ಎಲ್ಲಿ..ಎಲ್ಲಿ ಬರುತ್ತದೆ ಇದು?
ಸುಖದೇವಿ: ಮಥುರಾದಲ್ಲಿ.
ಮೋದಿ: ಮಥುರಾದಲ್ಲಿ, ಹಾಗಿದ್ದರೆ ಸುಖದೇವಿ ಅವರೇ, ತಮಗೆ ನಮಸ್ತೆಯನ್ನೂ ಹೇಳಬೇಕು, ಹಾಗೂ ಅದರೊಂದಿಗೆ ರಾಧೇ ರಾಧೇ ಯನ್ನೂ ಸಹ ಹೇಳಬೇಕಾಗುತ್ತದೆ.
ಸುಖದೇವಿ: ಹಾಂ, ರಾಧೇ ರಾಧೇ.
ಮೋದಿ: ಒಳ್ಳೆಯದು, ನಿಮಗೆ ಸಮಸ್ಯೆಯಾಗಿತ್ತೆಂದು ನಾವು ಕೇಳಿದ್ದೇವೆ, ತಮಗೆ ಯಾವುದೋ ಶಸ್ತ್ರಚಿಕಿತ್ಸೆ ಆಗಿದೆ. ಅದೇನು ವಿಚಾರವೆಂದು ಸ್ವಲ್ಪ ಹೇಳುತ್ತೀರಾ?
ಸುಖದೇವಿ: ಹೌದು, ನನ್ನ ಮಂಡಿಗಳು ಸವೆಯಲ್ಪಟ್ಟಿದ್ದವು. ಅವುಗಳಿಗೆ ಶಸ್ತ್ರಕ್ರಿಯೆ ಮಾಡಿಸಬೇಕಾಯಿತು. ಪ್ರಯಾಗ್ ಆಸ್ಪತ್ರೆಯಲ್ಲಿ ಮಾಡಿಸಿದೆವು.
ಮೋದಿ: ತಮಗೆ ಈಗ ಎಷ್ಟು ವರ್ಷ ಸುಖದೇವಿಯವರೇ?
ಸುಖದೇವಿ: ನನ್ನ ವಯಸ್ಸು 40 ವರ್ಷ.
ಮೋದಿ: 40 ವರ್ಷ ಹಾಗೂ ಸುಖದೇವ ಹೆಸರು. ಮತ್ತು ಸುಖದೇವಿಗೆ ಅನಾರೋಗ್ಯ ಉಂಟಾಯಿತು.
ಸುಖದೇವಿ: ರೋಗವು ನನಗೆ 15-16 ವರ್ಷಗಳಿಂದಲೂ ತಗುಲಿತ್ತು.
ಮೋದಿ: ಅರೇ, ಇಷ್ಟು ಕಡಿಮೆ ವಯಸ್ಸಿನಲ್ಲಿ ತಮ್ಮ ಮಂಡಿಗಳು ಸವೆಲ್ಪಟ್ಟಿದ್ದವು ಎನ್ನುವುದು ಆಶ್ಚರ್ಯ.
ಸುಖದೇವಿ: ಮಂಡಿಗಳ ಉರಿಯೂತ ಎನ್ನುತ್ತಾರಲ್ಲ, ಅದು ಕೀಲುಗಳ ನೋವಿನಿಂದ ಮಂಡಿಗಳು ಹಾಳಾದವು.
ಮೋದಿ: ಹಾಗಿದ್ದರೆ 16 ವರ್ಷಗಳಿಂದ 40 ವರ್ಷದ ವಯಸ್ಸಿನವರೆಗೂ ತಾವು ಇದಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳಲಿಲ್ಲ.
ಸುಖದೇವಿ: ಇಲ್ಲ, ಮಾಡಿಸಿಕೊಂಡಿರಲಿಲ್ಲ. ನೋವಿನ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಸಣ್ಣಪುಟ್ಟ ವೈದ್ಯರು ದೇಶಿ ಔಷಧ ನೀಡಿದರು. ಆ ಔಷಧವೇ ಅಂಥದ್ದು. ನಾಟಿ ವೈದ್ಯರು ಎಂತಹ ಔಷಧ ನೀಡಿದರೆಂದರೆ, ಅದರಿಂದ ನಡೆಯುವಷ್ಟು ಸಾಧ್ಯವಾಯಿತು ಹಾಗೂ ಮಂಡಿಗಳ ನೋವು ಇದ್ದೇ ಇತ್ತು. 1-2 ಕಿಲೋಮಿಟರ್ ನಡೆಯುವಷ್ಟರಲ್ಲಿ ನನಗೆ ಮಂಡಿಗಳಲ್ಲಿ ತೀವ್ರ ನೋವು ಉಂಟಾಗುತ್ತಿತ್ತು.
ಮೋದಿ: ಹಾಗಾದರೆ, ಸುಖದೇವಿ ಅವರೇ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವ ವಿಚಾರ ತಮಗೆ ಹೇಗೆ ಬಂತು? ಅದಕ್ಕಾಗಿ ಹಣದ ನಿರ್ವಹಣೆಯನ್ನು ಹೇಗೆ ಮಾಡಿದಿರಿ? ಹೇಗೆ ಎಲ್ಲವನ್ನೂ ನಿಭಾಯಿಸಿದಿರಿ?
ಸುಖದೇವಿ: ನಾನು ಆ ಆಯುಷ್ಮಾನ್ ಕಾರ್ಡ್ ನಿಂದ ಚಿಕಿತ್ಸೆ ಪಡೆದುಕೊಂಡೆ.
ಮೋದಿ: ಅಂದರೆ, ತಮಗೆ ಆಯುಷ್ಮಾನ್ ಕಾರ್ಡ್ ದೊರೆತಿತ್ತೇ?
ಸುಖದೇವಿ: ಹೌದು.
ಮೋದಿ: ಹಾಗೂ ಆಯುಷ್ಮಾನ್ ಕಾರ್ಡ್ ನಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದು ತಮಗೆ ತಿಳಿದಿತ್ತೇ?
ಸುಖದೇವಿ: ಶಾಲೆಯಲ್ಲಿ ಸಭೆ ನಡೆಯುತ್ತಿತ್ತು. ಅಲ್ಲಿ ನನ್ನ ಪತಿಯ ತಂದೆ ಹೋಗಿ ನನ್ನ ಹೆಸರಿನಲ್ಲೂ ಕಾರ್ಡ್ ಮಾಡಿಸಿದರು.
ಮೋದಿ: ಓಹೊ.
ಸುಖದೇವಿ: ಬಳಿಕ, ಕಾರ್ಡ್ ಮೂಲಕ ಚಿಕಿತ್ಸೆ ಮಾಡಿಸಿದೆವು. ಹಾಗೂ ನಾನು ಯಾವುದೇ ಹಣ ನೀಡಲಿಲ್ಲ. ಕಾರ್ಡ್ ನಿಂದಲೇ ನನ್ನ ಚಿಕಿತ್ಸೆ ಸಾಧ್ಯವಾಯಿತು. ತುಂಬ ಉತ್ತಮವಾದ ಚಿಕಿತ್ಸೆ ದೊರೆಯಿತು.
ಮೋದಿ: ಉತ್ತಮ. ವೈದ್ಯರು ಮೊದಲು ಕಾರ್ಡ್ ಇಲ್ಲವೆಂದಾದರೆ ಚಿಕಿತ್ಸೆಗೆ ಎಷ್ಟು ವೆಚ್ಚವಾಗುವುದಾಗಿ ಹೇಳಿದ್ದರು?
ಸುಖದೇವಿ: ಎರಡೂವರೆ ಲಕ್ಷ ರೂಪಾಯಿ-3 ಲಕ್ಷ ರೂಪಾಯಿ. 6-7 ವರ್ಷಗಳಿಂದ ಮಂಚದ ಮೇಲೆ ಮಲಗಿಯೇ ಜೀವನ ಕಳೆದೆ. “ಹೇ, ದೇವರೆ ನನ್ನನ್ನು ಕರೆಸಿಕೊ. ನನಗೆ ಈ ಜೀವನ ಬೇಡ’ವೆಂದು ಹೇಳುತ್ತಿದ್ದೆ.
ಮೋದಿ; 6-7 ವರ್ಷಗಳಿಂದ ಹಾಸಿಗೆ ಮೇಲೆಯೇ ಜೀವನ ಕಳೆದಿರಾ? ಅಬ್ಬಬ್ಬಾ.
ಸುಖದೇವಿ: ಹಾಂ
ಮೋದಿ: ಓಹೊ.
ಸುಖದೇವಿ: ಬಿಲ್ಕುಲ್ ಏಳಲು, ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಮೋದಿ: ಅಂದರೆ ಈಗ ತಮ್ಮ ಮಂಡಿಗಳು ಮೊದಲಿನಂತೆ ಚೆನ್ನಾಗಿವೆಯೇ?
ಸುಖದೇವಿ: ನಾನು ಈಗ ಚೆನ್ನಾಗಿ ಓಡಾಡುತ್ತೇನೆ. ಅಡ್ಡಾಡುತ್ತೇನೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತೇನೆ. ಮನೆಯ ಕೆಲಸ ನಿಭಾಯಿಸುತ್ತೇನೆ. ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತೇನೆ.
ಮೋದಿ: ಇದರರ್ಥ ಆಯುಷ್ಮಾನ್ ಭಾರತ್ ಕಾರ್ಡ್ ತಮ್ಮನ್ನು ನಿಜವಾಗಿಯೂ ಆಯುಷ್ಯವಂತರನ್ನಾಗಿ ಮಾಡಿತು.
ಸುಖದೇವಿ: ತಮ್ಮ ಈ ಯೋಜನೆಯಿಂದ ನಾನು ಆರೋಗ್ಯವಂತಳಾದೆ. ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳುವಂತಾದೆ, ಇದಕ್ಕಾಗಿ ತುಂಬ ತುಂಬ ಧನ್ಯವಾದಗಳು.
ಮೋದಿ: ಈಗ ಮಕ್ಕಳಿಗೂ ಅತ್ಯಂತ ಸಂತಸವಾಗಿರಬೇಕು.
ಸುಖದೇವಿ. ಹೌದು. ಹಿಂದೆ ಮಕ್ಕಳಿಗೆ ಅತೀವ ಚಿಂತೆಯಾಗಿತ್ತು. ಅಮ್ಮನಿಗೆ ಚಿಂತೆಯಾದರೆ, ಮಕ್ಕಳಿಗೂ ಚಿಂತೆಯಾಗುತ್ತದೆ.
ಮೋದಿ: ನೋಡಿ, ನಮ್ಮ ಜೀವನದಲ್ಲಿ ಅತ್ಯಂತ ದೊಡ್ಡ ಸುಖವೆಂದರೆ, ನಮ್ಮ ಆರೋಗ್ಯವೇ ಆಗಿರುತ್ತದೆ.ಆರೋಗ್ಯಪೂರ್ಣ ಸುಖವಾದ ಜೀವನ ಎಲ್ಲರಿಗೂ ಸಿಗಬೇಕು. ಇದೇ ಆಯುಷ್ಮಾನ್ ಭಾರತ ಯೋಜನೆಯ ಉದ್ದೇಶವಾಗಿದೆ. ಸರಿ, ಸುಖದೇವಿ ಅವರೇ, ತಮಗೆ ತುಂಬ ಶುಭಕಾಮನೆಗಳು. ಮತ್ತೊಮ್ಮೆ ಮತ್ತೊಂದು ಬಾರಿ ತಮಗೆ ರಾಧೇ, ರಾಧೇ.
ಸುಖದೇವಿ: ರಾಧೇ ರಾಧೇ. ನಮಸ್ತೆ.
ನನ್ನ ಪ್ರೀತಿಯ ದೇಶವಾಸಿಗಳೇ. ಯುವಕರಿಂದ ಸಮೃದ್ಧವಾಗಿರುವ ಪ್ರತಿ ದೇಶದಲ್ಲೂ ಮೂರು ಅಂಶಗಳು ಅತ್ಯಂತ ಮೌಲಿಕವಾದದ್ದಾಗಿರುತ್ತವೆ. ಈಗ ಅವುಗಳೇ ಕೆಲವು ಬಾರಿ ಯುವಕರ ನಿಜವಾದ ಗುರುತಾಗಿಬಿಡುತ್ತಿವೆ. ಮೊದಲನೆಯ ಅಂಶವೆಂದರೆ, ಚಿಂತನೆಗಳು ಅಥವಾ ಆವಿಷ್ಕಾರ. ಎರಡನೆಯದ್ದೆಂದರೆ, ಅಪಾಯವನ್ನು ಎದುರಿಸುವ ಎದೆಗಾರಿಕೆ ಮತ್ತು ಮೂರನೆಯದ್ದು ಎಲ್ಲವನ್ನೂ ಮಾಡುತ್ತೇನೆ ಎನ್ನುವ ಸ್ಥೈರ್ಯ, ಅಂದರೆ, ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ಬದ್ಧತೆ. ಪರಿಸ್ಥಿತಿಗಳು ಎಷ್ಟೇ ವಿಪರೀತಕ್ಕೆ ಹೋದರೂ, ಒಂದೊಮ್ಮೆ ಈ ಮೂರೂ ಅಂಶಗಳು ಒಂದಕ್ಕೊಂದು ಸೇರಿಕೊಂಡರೆ ಅಭೂತಪೂರ್ವವಾದ ಪರಿಣಾಮ ದೊರೆಯುತ್ತದೆ. ಚಮತ್ಕಾರವೇ ಆಗಿಬಿಡುತ್ತದೆ. ಇಂದಿನ ದಿನಗಳಲ್ಲಿ ನಾವು ನಾಲ್ಕೂ ಕಡೆಗಳಿಂದ ನವೋದ್ಯಮ, ನವೋದ್ಯಮ, ನವೋದ್ಯಮಗಳೆಂದು ಕೇಳುತ್ತಲೇ ಇದ್ದೇವೆ. ನಿಜವಾದ ಮಾತು ಏನೆಂದರೆ, ಇದು ನವೋದ್ಯಮಗಳ ಯುಗವಾಗಿದೆ. ಹಾಗೂ ಈ ನವೋದ್ಯಮದ ಯುಗದಲ್ಲಿ ಭಾರತ ವಿಶ್ವದಲ್ಲಿ ಒಂದು ರೀತಿಯಲ್ಲಿ ನೇತೃತ್ವ ವಹಿಸುತ್ತಿದೆ ಎನ್ನುವುದೂ ನಿಜವಾದ ಸಂಗತಿಯಾಗಿದೆ. ವರ್ಷದಿಂದ ವರ್ಷಕ್ಕೆ ನವೋದ್ಯಮಗಳಿಗೆ ದಾಖಲೆ ಮಟ್ಟದಲ್ಲಿ ಹೂಡಿಕೆಯಾಗುತ್ತಿದೆ. ಈ ಕ್ಷೇತ್ರವು ಅತ್ಯಂತ ವೇಗವಾಗಿ ಮುಂದೆ ಸಾಗುತ್ತಿದೆ. ದೇಶದ ಚಿಕ್ಕಪುಟ್ಟ ನಗರಗಳನ್ನೂ ನವೋದ್ಯಮಗಳು ತಲುಪುತ್ತಿವೆ. ಇಂದಿನ ದಿನಗಳಲ್ಲಿ ಯೂನಿಕಾರ್ನ್ ಶಬ್ದವು ಅತ್ಯಂತ ಚರ್ಚೆಯಲ್ಲಿದೆ. ತಾವೆಲ್ಲರೂ ಇದರ ಕುರಿತು ಕೇಳಿರಬಹುದು. ಯೂನಿಕಾರ್ನ್ ನವೋದ್ಯಮವೆಂದರೆ, ಇದರ ಮೌಲ್ಯ ಕಡಿಮೆಯೆಂದರೂ ಒಂದು ಬಿಲಿಯುನ್ ಡಾಲರ್ ಆಗಿದೆ. ಅಂದರೆ, ಹತ್ತಿರ ಹತ್ತಿರ ಏಳು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯವನ್ನು ಇಂತಹ ನವೋದ್ಯಮಗಳು ಹೊಂದಿರುತ್ತವೆ.
ಸ್ನೇಹಿತರೇ, 2015ನೇ ವರ್ಷದವರೆಗೆ ದೇಶದಲ್ಲಿ ಅಷ್ಟೇನೂ ಅಂದರೆ ಕೇವಲ 9ರಿಂದ 10 ಯೂನಿಕಾರ್ನ್ ನವೋದ್ಯಮಗಳು ಕಾರ್ಯ ನಿಭಾಯಿಸುತ್ತಿದ್ದವು. ಆದರೆ, ಈಗ ವಿಶ್ವದಲ್ಲಿಯೇ ಭಾರತವು ಯೂನಿಕಾರ್ನ್ ನವೋದ್ಯಮಗಳಲ್ಲೂ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ ಎನ್ನುವುದನ್ನು ಕೇಳಿದರೆ ತಮಗೆ ಸಂತಸವಾಗಬಹುದು. ಒಂದು ವರದಿಯ ಪ್ರಕಾರ, ಇದೇ ವರ್ಷ ಒಂದು ದೊಡ್ಡ ಬದಲಾವಣೆ ಉಂಟಾಗಿದೆ. ಕೇವಲ 10 ತಿಂಗಳಲ್ಲಿ ಭಾರತದಲ್ಲಿ ಪ್ರತಿ 10 ದಿನಗಳಿಗೆ ಒಂದರಂತೆ ಯೂನಿಕಾರ್ನ್ ನವೋದ್ಯಮ ಸೃಷ್ಟಿಯಾಗಿದೆ. ನಮ್ಮ ಯುವಜನತೆ ಕೊರೋನಾ ಮಹಾಮಾರಿಯ ಮಧ್ಯದಲ್ಲಿ ಈ ಯಶಸ್ಸನ್ನು ಗಳಿಸಿದ್ದಾರೆ ಎನ್ನುವುದರಿಂದಲೂ ಈ ಸಂಗತಿ ಅತ್ಯಂತ ಪ್ರಮುಖ ವಿಚಾರವಾಗುತ್ತದೆ. ಇಂದು ಭಾರತದಲ್ಲಿ 70ಕ್ಕೂ ಅಧಿಕ ಯೂನಿಕಾರ್ನ್ ನವೋದ್ಯಮಗಳಿವೆ. ಅಂದರೆ, 70ಕ್ಕೂ ಅಧಿಕ ನವೋದ್ಯಮಗಳು 1 ಬಿಲಿಯನ್ ಡಾಲರ್ ಗೂ ಅಧಿಕ ಮೌಲ್ಯವನ್ನು ಹೊಂದಿವೆ. ಸ್ನೇಹಿತರೇ, ನವೋದ್ಯಮಗಳ ಯಶಸ್ಸಿನ ಕಾರಣದಿಂದ ಪ್ರತಿಯೊಬ್ಬರ ಗಮನವೂ ಅತ್ತ ಹೋಗಿದೆ, ಹಾಗೂ ಎಷ್ಟು ಚೆನ್ನಾಗಿ ದೇಶದಿಂದ, ವಿದೇಶದಿಂದ, ಹೂಡಿಕೆದಾರರಿಂದ ಅದಕ್ಕೆ ಬೆಂಬಲ ಸಿಗುತ್ತಿದೆ ಎಂದರೆ,ಬಹುಶಃ ಕೆಲವು ವರ್ಷಗಳ ಮುನ್ನ ಯಾರೂ ಈ ಕುರಿತು ಕಲ್ಪನೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ.
ಸ್ನೇಹಿತರೇ, ನವೋದ್ಯಮಗಳ ಮೂಲಕ ಭಾರತೀಯ ಯುವಜನರು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿಯೂ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಇಂದು ನಾವು ಅಂಥ ಒಬ್ಬ ಯುವಕ ಮಯೂರ್ ಪಾಟೀಲ್ ಅವರೊಂದಿಗೆ ಮಾತನಾಡೋಣ. ಅವರು ತಮ್ಮ ಸ್ನೇಹಿತರೊಂದಿಗೆ ಸೇರಿ ಮಾಲಿನ್ಯದ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ.
ಮೋದಿ ಜೀ: ಮಯೂರ್ ಜೀ, ನಮಸ್ತೆ.
ಮಯೂರ್ ಪಾಟೀಲ್: ನಮಸ್ತೆ ಸರ್
ಮೋದಿ: ಮಯೂರ್, ತಾವು ಹೇಗಿದ್ದೀರಿ?
ಮಯೂರ್: ಉತ್ತಮ ಸರ್. ತಾವು ಹೇಗಿದ್ದೀರಿ?
ಮೋದಿ: ನಾನು ತುಂಬ ಖುಷಿಯಾಗಿದ್ದೇನೆ. ಒಳ್ಳೆಯದು, ನನಗೆ ಹೇಳಿ, ಇಂದು ನೀವು ನವೋದ್ಯಮಗಳ ಜಗದಲ್ಲಿದ್ದೀರಿ.
ಮಯೂರ್: ಹಾ, ಸರ್.
ಮೋದಿ: ಹಾಗೂ ತ್ಯಾಜ್ಯವಾಗಿ ಹೋಗುವುದರಿಂದ ಉತ್ತಮವಾದದ್ದನ್ನು ನಿರ್ಮಿಸುತ್ತಿದ್ದೀರಿ.
ಮಯೂರ್; ಹಾ ಸರ್.
ಮೋದಿ: ಪರಿಸರಕ್ಕಾಗಿಯೂ ಇದನ್ನು ನೀವು ಮಾಡುತ್ತಿರುವಿರಿ. ನನಗೂ ಸ್ವಲ್ಪ ನಿಮ್ಮ ಕುರಿತಾಗಿ ಹೇಳಿ. ತಮ್ಮ ಕೆಲಸದ ಕುರಿತು ತಿಳಿಸಿ. ಹಾಗೂ ಈ ಕಾರ್ಯವನ್ನು ಆರಂಭಿಸಬೇಕೆಂಬ ವಿಚಾರ ನಿಮಗೆ ಹೇಗೆ ಮೂಡಿತು?
ಮಯೂರ್: ಸರ್, ನಾನು ಕಾಲೇಜಿನಲ್ಲಿರುವ ಸಮಯದಲ್ಲೇ ನನ್ನ ಬಳಿ ಮೋಟಾರ್ ಸೈಕಲ್ ಇತ್ತು. ಅದರ ಮೈಲೇಜ್ ಅತಿ ಕಡಿಮೆ ಇತ್ತು ಹಾಗೂ ಅದರಿಂದ ಉತ್ಸರ್ಜನೆ ಪ್ರಮಾಣ ಅತ್ಯಂತ ಅಧಿಕವಾಗಿತ್ತು. ಅದು ಎರಡು ಸ್ಟ್ರೋಕ್ ಗಳ ಮೋಟಾರ್ ಸೈಕಲ್ ಆಗಿತ್ತು. ಹೀಗಾಗಿ, ಉತ್ಸರ್ಜನೆ ಕಡಿಮೆ ಮಾಡಲು ಹಾಗೂ ಅದರ ಮೈಲೇಜ್ ಅನ್ನು ಸ್ವಲ್ಪ ಹೆಚ್ಚಿಸಲು ನಾನು ಪ್ರಯತ್ನ ಆರಂಭಿಸಿದ್ದೆ. 2011-12ರ ಸಮಯದಲ್ಲಿ ನಾನು ಲೀಟರ್ ಗೆ ಸರಿಸುಮಾರು 62 ಕಿಲೋಮೀಟರ್ ವರೆಗೆ ಮೋಟಾರ್ ಸೈಕಲ್ಲಿನ ಮೈಲೇಜ್ ಅನ್ನು ಹೆಚ್ಚಿಸಿದ್ದೆ. ಆ ಹಂತದಲ್ಲಿ ನನಗೆ, ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವಂತಹ ಅಂಶವನ್ನು ನಿರ್ಮಾಣ ಮಾಡಬೇಕೆಂದು ಪ್ರೇರಣೆ ದೊರಕಿತು. ಅದರಿಂದ ಬಹಳಷ್ಟು ಜನರಿಗೆ ಪ್ರಯೋಜನವಾಗುತ್ತದೆ ಎಂದು ಅನ್ನಿಸಿತು. ಹೀಗಾಗಿ, 2017-18ರಲ್ಲಿ ನಾವು ಈ ಕುರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆವು. ಹಾಗೂ ವಲಯ ಸಾರಿಗೆ ಸಂಸ್ಥೆಗಳೊಂದಿಗೆ ಸೇರಿಕೊಂಡು 10 ಬಸ್ ಗಳಿಗೆ ಅದನ್ನು ಅಳವಡಿಸಿದೆವು. ಅದರ ಫಲಿತಾಂಶ ಪರೀಕ್ಷಿಸಿದಾಗ, ಹತ್ತಿರ ಹತ್ತಿರ ನಾವು ಆ ಬಸ್ಸುಗಳ ಶೇಕಡ 40ರಷ್ಟು ಉತ್ಸರ್ಜನೆಯನ್ನು ಕಡಿಮೆ ಮಾಡಿದ್ದೆವು ಎನ್ನುವುದು ತಿಳಿದುಬಂತು.
ಮೋದಿ: ಹಮ್. ಈಗ ಈ ತಂತ್ರಜ್ಞಾನವನ್ನು ತಾವು ಶೋಧಿಸಿದ್ದೀರಿ, ಅದರ ಹಕ್ಕನ್ನು ಪಡೆದುಕೊಂಡಿದ್ದೀರಿ.
ಮಯೂರ್: ಹಾ ಸರ್. ಪೇಟೆಂಟ್ ಪಡೆದುಕೊಂಡಿದ್ದೇವೆ. ಈ ವರ್ಷ ನಾವು ಈ ತಂತ್ರಜ್ಞಾನದ ಹಕ್ಕನ್ನು ನಮ್ಮದಾಗಿಸಿಕೊಂಡಿದ್ದೇವೆ.
ಮೋದಿ: ಹಾಗೂ ಮುಂದೆ ಇದನ್ನು ವೃದ್ಧಿಪಡಿಸಲು ನೀವು ಏನು ಯೋಜನೆ ಹಾಕಿಕೊಂಡಿದ್ದೀರಿ? ಬಸ್ ಗಳ ಫಲಿತಾಂಶ ಬಂದ ಮಾದರಿಯಲ್ಲಿ ಮುಂದೇನು ಮಾಡಬೇಕೆಂದು ಅಂದುಕೊಂಡಿದ್ದೀರಿ? ಅದರ ಬಗ್ಗೆಯೂ ನೀವು ಎಲ್ಲ ಯೋಚನೆ ಮಾಡಿರುತ್ತೀರಿ. ಮುಂದೆ ಏನು ಮಾಡಬೇಕೆಂಬ ವಿಚಾರವಿದೆ?
ಮಯೂರ್: ಸರ್, ಸ್ಟಾರ್ಟಪ್ ಇಂಡಿಯಾ ಮೂಲಕ, ನೀತಿ ಆಯೋಗದಿಂದ ಜಾರಿಯಲ್ಲಿರುವ “ಅಟಲ್ ನವಭಾರತ ಸವಾಲು’ ಅಭಿಯಾನವಿದೆಯಲ್ಲ, ಅದರ ಅಡಿಯಲ್ಲಿ ನಮಗೆ ಅನುದಾನ ದೊರೆತಿದೆ. ಹಾಗೂ ಆ ಅನುದಾನದ ನೆರವಿನಿಂದ ನಾವು ಈಗ ಏರ್ ಫಿಲ್ಟರ್ ಗಳನ್ನು ಉತ್ಪಾದನೆ ಮಾಡಲು ಸಾಧ್ಯವಾಗುವಂತಹ ಕೈಗಾರಿಕಾ ಘಟಕವನ್ನು ಆರಂಭಿಸಿದ್ದೇವೆ.
ಮೋದಿ: ಅಂದರೆ, ಭಾರತ ಸರ್ಕಾರದ ವತಿಯಿಂದ ನಿಮಗೆ ಎಷ್ಟು ಅನುದಾನ ದೊರೆಯಿತು?
ಮಯೂರ್: 90 ಲಕ್ಷ
ಮೋದಿ: 90 ಲಕ್ಷ
ಮಯೂರ್: ಹೌದು ಸರ್.
ಮೋದಿ: ಹಾಗೂ ಇದರಿಂದ ನಿಮ್ಮ ಕೆಲಸವಾಯಿತು.
ಮಯೂರ್: ಹೌದು. ಈಗಿನ್ನೂ ಆರಂಭವಾಗಿದೆ. ಪ್ರಕ್ರಿಯೆ ನಡೆಯುತ್ತಿದೆ.
ಮೋದಿ: ನೀವು ಎಷ್ಟು ಸ್ನೇಹಿತರು ಸೇರಿಕೊಂಡು ಇದನ್ನೆಲ್ಲ ಮಾಡುತ್ತಿದ್ದೀರಿ?
ಮಯೂರ್: ನಾವು ನಾಲ್ಕು ಜನರಿದ್ದೇವೆ ಸರ್.
ಮೋದಿ: ನೀವು ನಾಲ್ಕೂ ಮಂದಿ ಜತೆಯಾಗಿಯೇ ಓದಿದ್ದೀರಿ. ಹಾಗೂ ಅದರಿಂದಲೇ ತಮಗೆ ಈ ಬಗ್ಗೆ ಮುಂದೆ ಸಾಗುವ ವಿಚಾರ ಬಂದಿರಬೇಕು.
ಮಯೂರ್: ಹೌದು ಸರ್. ನಾವು ಕಾಲೇಜಿನಲ್ಲಿದ್ದೆವು. ಅಲ್ಲಿರುವಾಗಲೇ ನಾವು ಈ ಎಲ್ಲ ವಿಚಾರಗಳ ಕುರಿತು ಚಿಂತನೆ ನಡೆಸಿದ್ದೆವು. ನನ್ನ ಮೋಟಾರ್ ಸೈಕಲ್ ನಿಂದ ಕನಿಷ್ಠ ಮಾಲಿನ್ಯ ಹೊರಸೂಸುವಂತೆ ಮಾಡುವುದು ಹಾಗೂ ಅದರ ಮೈಲೇಜ್ ಹೆಚ್ಚಿಸುವುದು ನನ್ನ ಚಿಂತನೆಯೇ ಆಗಿತ್ತು.
ಮೋದಿ: ಒಳ್ಳೆಯದು, ಮಾಲಿನ್ಯ ಕಡಿಮೆಯಾಗುತ್ತದೆ, ಮೈಲೇಜ್ ಹೆಚ್ಚುತ್ತದೆ ಅಂದರೆ, ಸರಾಸರಿ ವೆಚ್ಚ ಎಷ್ಟು ಉಳಿತಾಯವಾಗಬಲ್ಲದು?
ಮಯೂರ್: ಸರ್. ಮೋಟಾರ್ ಸೈಕಲ್ ನಲ್ಲಿ ನಾವು ಪರೀಕ್ಷೆ ನಡೆಸಿದ್ದೆವು. ಅದರ ಮೈಲೇಜ್ ಒಂದು ಲೀಟರ್ ಪೆಟ್ರೋಲ್ ಗೆ 25 ಕಿಲೋಮೀಟರ್ ಇತ್ತು. ಅದನ್ನು ನಾವು ಏರಿಕೆ ಮಾಡಿ ಲಿಟರ್ ಗೆ 39 ಕಿಲೋಮೀಟರ್ ಚಲಿಸುವಂತೆ ಮಾಡಿದೆವು. ಇದರಿಂದ ಲೀಟರ್ ಗೆ ಹತ್ತಿರ ಹತ್ತಿರ 14 ಕಿಲೋಮೀಟರ್ ಹೆಚ್ಚುವರಿ ಲಾಭವಾಗುತ್ತದೆ. ಹಾಗೂ ಅದರಿಂದ ಶೇ.40ರಷ್ಟು ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಯಿತು. ಈ ತಂತ್ರಜ್ಞಾನವನ್ನು ವಲಯ ಸಾರಿಗೆ ಸಂಸ್ಥೆಗಳ ಬಸ್ ಗಳಿಗೆ ಅಳವಡಿಸಿದಾಗ ಅಲ್ಲಿ ಶೇ.10ರಷ್ಟು ಇಂಧನ ದಕ್ಷತೆ ಹೆಚ್ಚಿತು. ಹಾಗೂ ಶೇ.35-40ರಷ್ಟು ಉತ್ಸರ್ಜನೆ ಕಡಿಮೆಯಾಯಿತು.
ಮೋದಿ: ಮಯೂರ್, ನಿಮ್ಮೊಂದಿಗೆ ಮಾತನಾಡಿ ನನಗೆ ತುಂಬ ಖುಷಿಯಾಯಿತು. ನಿಮ್ಮ ಜತೆಗಾರರಿಗೂ ನನ್ನ ವತಿಯಿಂದ ಶುಭಾಶಗಳನ್ನು ತಿಳಿಸಿ. ಕಾಲೇಜ್ ಜೀವನದಲ್ಲಿ ಸ್ವಂತದ್ದೊಂದು ಸಮಸ್ಯೆ ಉಂಟಾಗಿತ್ತು. ಆ ಸಮಸ್ಯೆಗೆ ನೀವೇ ಖುದ್ದಾಗಿ ಪರಿಹಾರವನ್ನೂ ಶೋಧಿಸಿದಿರಿ. ಹಾಗೂ ಆ ಯಶಸ್ಸಿನಿಂದ ತೃಪ್ತರಾಗಿ ಈಗ ನೀವೇನು ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದೀರೋ ಅದರಿಂದ ಪರಿಸರದ ಸಮಸ್ಯೆಯನ್ನೂ ನಿವಾರಿಸುವ ದಿಶೆಯಲ್ಲಿ ಹೆಜ್ಜೆ ಇಟ್ಟಿದ್ದೀರಿ. ಇದು ನಮ್ಮ ದೇಶದ ಯುವಜನರ ಸಾಮರ್ಥ್ಯವೇ ಆಗಿದೆ. ಯಾವುದೇ ದೊಡ್ಡ ಸವಾಲವನ್ನು ಹೊತ್ತುಕೊಳ್ಳುತ್ತಾರೆ ಹಾಗೂ ದಾರಿಯನ್ನು ತಾವೇ ಪರಿಶೋಧಿಸುತ್ತಾರೆ. ನನ್ನ ಕಡೆಯಿಂದ ತಮಗೆ ಅತ್ಯಂತ ಶುಭಕಾಮನೆಗಳು. ತುಂಬ ಧನ್ಯವಾದಗಳು.
ಮಯೂರ್: ಧನ್ಯವಾದಗಳು ಸರ್, ಧನ್ಯವಾದಗಳು.
ಸ್ನೇಹಿತರೇ, ಕೆಲವು ವರ್ಷಗಳ ಮೊದಲು ಯಾರಾದರೂ ತಾವು ಸ್ವಂತ ವಹಿವಾಟು, ಉದ್ಯಮ ಆರಂಭಿಸಲು ಇಷ್ಟಪಡುವುದಾಗಿ ಹೇಳಿದ್ದರೆ ಅಥವಾ ಯಾರಾದರೂ ಹೊಸ ಸಂಸ್ಥೆಯನ್ನು ಆರಂಭಿಸಲು ಬಯಸಿದ್ದರೆ ಆಗ ಅವರಿಗೆ ಕುಟುಂಬದ ಹಿರಿಯರು ಉತ್ತರ ನೀಡುತ್ತಿದ್ದರು. “ನೀನೇಕೆ ನೌಕರಿ ಮಾಡಲು ಇಷ್ಟಪಡುವುದಿಲ್ಲ, ನೌಕರಿಯನ್ನು ಮಾಡು, ನೌಕರಿಯಲ್ಲಿ ಭದ್ರತೆ ಇರುತ್ತದೆ. ಸಂಬಳ ಇರುತ್ತದೆ. ಜಂಜಡವೂ ಕಡಿಮೆ ಇರುತ್ತದೆ’ ಎಂದು ಹೇಳುತ್ತಿದ್ದರು. ಆದರೆ, ಇಂದು ಒಂದು ವೇಳೆ, ಯಾರಾದರೂ ಕಂಪೆನಿಯನ್ನು ಆರಂಭಿಸಲು ಇಷ್ಟಪಟ್ಟರೆ, ಅವರ ಸುತ್ತಮುತ್ತಲಿನ ಎಲ್ಲ ಜನರೂ ಉತ್ಸಾಹಿತರಾಗುತ್ತಾರೆ. ಹಾಗೂ ಈ ಪ್ರಯತ್ನಕ್ಕೆ ಅವರ ಸಂಪೂರ್ಣ ಬೆಂಬಲವನ್ನೂ ನೀಡುತ್ತಾರೆ. ಸ್ನೇಹಿತರೇ, ಇದು ಭಾರತದ ಪ್ರಗತಿಯ ಗಾಥೆಯ ತಿರುವಿನ ಬಿಂದುವಾಗಿದೆ. ಇಲ್ಲೀಗ ಜನರು ಕೇವಲ ಉದ್ಯೋಗ ಹುಡುಕುವ ಕನಸನ್ನಷ್ಟೇ ಕಾಣುತ್ತಿಲ್ಲ, ಬದಲಿಗೆ, ಉದ್ಯೋಗದಾತರಾಗುವ, ಉದ್ಯೋಗ ಸೃಷ್ಟಿಸುವವರಾಗಲು ಇಚ್ಛಿಸುತ್ತಿದ್ದಾರೆ. ಇದರಿಂದಾಗಿ, ವಿಶ್ವದಲ್ಲಿ ಭಾರತದ ಸ್ಥಾನ ನ್ನಷ್ಟು ಸದೃಢಗೊಳ್ಳುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು “ಮನದ ಮಾತು’ ಕಾರ್ಯಕ್ರಮದಲ್ಲಿ ನಾವು ಅಮೃತ ಮಹೋತ್ಸವದ ಕುರಿತು ಮಾತನಾಡಿದೆವು. ಅಮೃತ ಕಾಲದಲ್ಲಿ ಹೇಗೆ ನಮ್ಮ ದೇಶವಾಸಿಗಳು ಹೊಸ ಹೊಸ ಸಂಕಲ್ಪಗಳನ್ನು ಪೂರ್ಣಗೊಳಿಸುತ್ತಿದ್ದಾರೆ ಎನ್ನುವುದರ ಕುರಿತು ನಾನು ಚರ್ಚೆ ನಡೆಸಿದೆ. ಹಾಗೂ ಜತೆಗೇ, ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸೇನೆಯ ಶೌರ್ಯದೊಂದಿಗೆ ಗುರುತಿಸಲ್ಪಡುವ ಸಂದರ್ಭದ ಕುರಿತೂ ನಾನು ಉಲ್ಲೇಖಿಸಿದ್ದೇನೆ. ಡಿಸೆಂಬರ್ ತಿಂಗಳಲ್ಲಿನಲ್ಲಿಯೇ ನಾವೆಲ್ಲರೂ ಪ್ರೇರಣೆ ಪಡೆಯುವಂತಹ ಮತ್ತೊಂದು ದೊಡ್ಡ ದಿನ ನಮ್ಮ ಎದುರು ಆಗಮಿಸುತ್ತಿದೆ. ಅದು ಡಿಸೆಂಬರ್ 6. ಈ ದಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ದಿನವಾಗಿದೆ. ಬಾಬಾ ಸಾಹೇಬರು ದೇಶ ಹಾಗೂ ಸಮಾಜಕ್ಕಾಗಿ, ತಮ್ಮ ಕರ್ತವ್ಯಗಳನ್ನು ನಿರ್ವಹಣೆ ಮಾಡುವುದಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಸಮರ್ಪಿತಗೊಳಿಸಿದ್ದರು. ನಮ್ಮ ಸಂವಿಧಾನದ ಮೂಲ ಆಶಯವೂ ಇದೇ ಆಗಿದೆ ಎನ್ನುವುದನ್ನು ನಾವು ದೇಶವಾಸಿಗಳು ಎಂದಿಗೂ ಮರೆಯಬಾರದು. ಸಂವಿಧಾನವು ಎಲ್ಲ ನಾಗರಿಕರು ತಮ್ಮ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಅಪೇಕ್ಷಿಸುತ್ತದೆ. ಹೀಗಾಗಿ, ಬನ್ನಿ, ಈ ಅಮೃತಮಹೋತ್ಸದ ಸಮಯದಲ್ಲಿ ನಮ್ಮ ಕರ್ತವ್ಯಗಳನ್ನು ಸಂಪೂರ್ಣ ನಿಷ್ಠೆಯಿಂದ ನಿಭಾಯಿಸಲು ಪ್ರಯತ್ನಿಸುವುದಾಗಿ ನಾವು ಸಹ ಸಂಕಲ್ಪ ಕೈಗೊಳ್ಳೋಣ. ಇದೇ, ನಾವು ಬಾಬಾ ಸಾಹೇಬರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.
ಸ್ನೇಹಿತರೇ, ನಾವು ಈಗ ಡಿಸೆಂಬರ್ ತಿಂಗಳಿಗೆ ಪದಾರ್ಪಣೆ ಮಾಡುತ್ತಿದ್ದೇವೆ. ಮುಂದಿನ “ಮನದ ಮಾತು’ 2021ನೇ ವರ್ಷದ ಕೊನೆಯ ಮನದ ಮಾತಾಗಿರುವುದು ಸ್ವಾಭಾವಿಕವೇ ಆಗಿದೆ. 2022ರಲ್ಲಿ ಮತ್ತೆ ಯಾತ್ರೆಯನ್ನು ಆರಂಭಿಸೋಣ. ಹಾಗೂ ನಾನು ತಮ್ಮಿಂದ ಬಹಳಷ್ಟು ಸಲಹೆಗಳನ್ನು ನಿರೀಕ್ಷಿಸುತ್ತೇನೆ ಹಾಗೂ ಅಪೇಕ್ಷೆ ಮಾಡುತ್ತಲೇ ಇರುತ್ತೇನೆ. ತಾವು ಈ ವರ್ಷಕ್ಕೆ ಹೇಗೆ ವಿದಾಯ ಹೇಳುತ್ತಿದ್ದೀರಿ, ಹೊಸ ವರ್ಷದಲ್ಲಿ ಏನೆಲ್ಲ ಮಾಡುವವರಿದ್ದೀರಿ ಇವುಗಳೆಲ್ಲವನ್ನೂ ಖಂಡಿತವಾಗಿ ಹೇಳಿ. ಹಾಗೂ ಕೊರೋನಾ ಇನ್ನೂ ಹೋಗಿಲ್ಲ ಎನ್ನುವುದನ್ನು ಎಂದೂ ಮರೆಯಬೇಡಿ, ಜಾಗ್ರತೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ತುಂಬಾ ತುಂಬಾ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ, ಕೋಟಿ ಕೋಟಿ ನಮನ. ನಾನು ಕೋಟಿ ಕೋಟಿ ನಮಸ್ಕಾರ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ ನೂರು ಕೋಟಿ ಲಸಿಕೆ ಡೋಸ್ ಗಳ ನಂತರ ಇಂದು ದೇಶ ಹೊಸ ಉತ್ಸಾಹ ಮತ್ತು ಹುರುಪಿನಿಂದ ಮುನ್ನಡೆಯುತ್ತಿದೆ. ನಮ್ಮ ಲಸಿಕೆ ಅಭಿಯಾನದ ಸಫಲತೆ, ಭಾರತದ ಸಾಮರ್ಥ್ಯವನ್ನು ತೋರುತ್ತದೆ. ಎಲ್ಲರ ಪ್ರಯತ್ನದ ಮಂತ್ರದ ಶಕ್ತಿಯನ್ನು ಸಾರುತ್ತದೆ.
ಸ್ನೇಹಿತರೆ, ನೂರು ಕೋಟಿ ಲಸಿಕೆಯ ಸಂಖ್ಯೆ ಬಹಳ ದೊಡ್ಡದಾಗಿದೆ. ಆದರೆ ಇದರಿಂದ ಲಕ್ಷಾಂತರ ಸಣ್ಣ ಪುಟ್ಟ ಪ್ರೇರಣಾತ್ಮಕ ಮತ್ತು ಹೆಮ್ಮೆಪಡುವಂತಹ ಅನೇಕ ಅನುಭವಗಳು ಮತ್ತು ಉದಾಹರಣೆಗಳು ಒಗ್ಗೂಡಿವೆ. ಬಹಳಷ್ಟು ಜನರು ಪತ್ರ ಬರೆದು ಲಸಿಕೀಕರಣದ ಆರಂಭದೊಂದಿಗೆಯೇ ಹೇಗೆ ನನಗೆ ಇದಕ್ಕೆ ಇಷ್ಟೊಂದು ಬೃಹತ್ ಸಫಲತೆ ದೊರೆಯುತ್ತದೆ ಎಂದು ತಿಳಿದಿತ್ತು ಎಂದು ನನ್ನನ್ನು ಕೇಳುತ್ತಿದ್ದಾರೆ. ನನಗೆ ಧೃಡ ವಿಶ್ವಾಸ ಇತ್ತು ಏಕೆಂದರೆ ನನ್ನ ದೇಶದ ಜನತೆಯ ಕ್ಷಮತೆ ನನಗೆ ಚೆನ್ನಾಗಿ ಗೊತ್ತು. ನಮ್ಮ ಆರೋಗ್ಯ ಕಾರ್ಯಕರ್ತರು ದೇಶದ ಜನರ ಲಸಿಕಾ ಅಭಿಯಾನದಲ್ಲಿ ಎಳ್ಳಷ್ಟೂ ಹಿಂದುಳಿಯುವುದಿಲ್ಲ ಎಂದು ನನಗೆ ಅರಿವಿತ್ತು. ನಮ್ಮ ಆರೋಗ್ಯ ಕಾರ್ಯಕರ್ತರು ನಿರಂತರ ಪರಿಶ್ರಮ ಮತ್ತು ಸಂಕಲ್ಪದೊಂದಿಗೆ ಹೊಸದೊಂದು ಮಾದರಿಯನ್ನು ಸೃಷ್ಟಿಸಿದರು. ಅವರು ನಾವೀನ್ಯತೆಯೊಂದಿಗೆ ತಮ್ಮ ಧೃಡ ನಿಶ್ಚಯದಿಂದ ಮಾನವೀಯತೆಯ ಸೇವೆಗಾಗಿ ಹೊಸ ಮಾನದಂಡವನ್ನೇ ರಚಿಸಿದ್ದಾರೆ. ಅವರ ಬಳಿ ಅಗಣಿತ ಉದಾಹರಣೆಗಳಿವೆ. ಅವರು ಹೇಗೆ ಎಲ್ಲ ಸವಾಲುಗಳನ್ನು ಮೀರಿ ಹೆಚ್ಚೆಚ್ಚು ಜನರಿಗೆ ಸುರಕ್ಷತೆಯ ಕವಚವನ್ನು ನೀಡಿದ್ದಾರೆ ಎಂಬುದನ್ನು ತೋರಿಸುತ್ತವೆ. ಈ ಕೆಲಸವನ್ನು ಮಾಡಲು ಇವರು ಅದೆಷ್ಟು ಪ್ರಯತ್ನಪಟ್ಟಿದ್ದಾರೆ ಎಂದು ನಾವು ಹಲವಾರು ಬಾರಿ ಪತ್ರಿಕೆಗಳಲ್ಲಿ ಓದಿದ್ದೇವೆ, ಇತರರಿಂದ ಕೇಳಿದ್ದೇವೆ. ಒಂದಕ್ಕಿಂತ ಒಂದರಂತೆ ಇಂತಹ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ. ಇಂದು ನಾನು ಮನದ ಮಾತಿನ ಶ್ರೋತೃಗಳಿಗೆ ಉತ್ತರಾಖಂಡದ ಬಾಗೇಶ್ವರ್ ನ ಒಬ್ಬ ಆರೋಗ್ಯ ಕಾರ್ಯಕರ್ತರಾದ ಪೂನಮ್ ನೌತಿಯಾಲ್ ಅವರೊಂದಿಗೆ ಭೇಟಿ ಮಾಡಿಸಬಯಸುತ್ತೇನೆ.
ಸ್ನೇಹಿತರೆ, ಉತ್ತರಾಖಂಡದಲ್ಲಿ ನೂರಕ್ಕೆ ನೂರರಷ್ಟು ಪ್ರಥಮ ಡೋಸ್ ಲಸಿಕೆಯನ್ನು ಹಾಕಲಾಗಿದೆ. ಇವರು ಅದೇ ಉತ್ತರಾಖಂಡ್ ನ ಬಾಗೇಶ್ವರ್ ಪ್ರದೇಶದವರಾಗಿದ್ದಾರೆ. ಉತ್ತರಾಖಂಡ ಸರ್ಕಾರ ಕೂಡ ಅಭಿನಂದನೆಗೆ ಪಾತ್ರವಾಗಿದೆ. ಏಕೆಂದರೆ ಇದು ಬಹಳ ದುರ್ಗಮ ಮತ್ತು ಕಠಿಣ ಪ್ರದೇಶವಾಗಿದೆ. ಅದೇ ರೀತಿ ಇಂಥದೇ ಸವಾಲುಗಳ ಮಧ್ಯೆ ಹಿಮಾಚಲ ಕೂಡಾ ನೂರಕ್ಕೆ ನೂರು ಲಸಿಕೆ ಡೋಸ್ ಗಳನ್ನು ಪೂರ್ಣಗೊಳಿಸಿದೆ. ಪೂನಂ ಅವರು ತಮ್ಮ ಕ್ಷೇತ್ರದ ಜನರ ಲಸಿಕೆ ಹಾಕುನ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ.
ಪ್ರಧಾನಿ: ಪೂನಂ ಅವರೇ ನಮಸ್ಕಾರ
ಪೂನಂ ನೌಟಿಯಾಲ್: ಸರ್, ನಮಸ್ತೆ
ಪ್ರಧಾನಿ: ಪೂನಂ ಅವರೇ ನಿಮ್ಮ ಬಗ್ಗೆ ದೇಶದ ಜನತೆಗೆ ತಿಳಿಸಿಕೊಡಿ
ಪೂನಂ ನೌಟಿಯಾಲ್: ಸರ್ ನನ್ನ ಹೆಸರು ಪೂನಂ ನೌತಿಯಾಲ್. ಸರ್, ಉತ್ತರಾಖಂಡ್ ನ ಬಾಗೇಶ್ವರ್ ಜಿಲ್ಲೆಯ ಚಾನಿಕೋರಾಲಿ ಕೇಂದ್ರದಲ್ಲಿ ಕಾರ್ಯನಿರ್ವಹಸುತ್ತಿದ್ದೇನೆ. ನಾನು ಎ ಎನ್ ಎಂ ಆಗಿದ್ದೇನೆ.
ಪ್ರಧಾನಿ: ಪೂನಂ ಅವರೇ ನನಗೆ ಬಾಗೇಶ್ವರ್ ಗೆ ಭೇಟಿ ನೀಡುವ ಅವಕಾಶ ಲಭಿಸಿದ್ದು ನನ್ನ ಸೌಭಾಗ್ಯವಾಗಿತ್ತು. ಅದು ಒಂದು ರೀತಿಯ ಪುಣ್ಯಕ್ಷೇತ್ರವಾಗಿದೆ. ಅಲ್ಲಿ ಪುರಾತನ ದೇವಾಲಯಗಳಿವೆ. ದಶಕಗಳ ಹಿಂದೆ ಜನರು ಹೇಗೆ ಕೆಲಸಮಾಡಿದ್ದರು ಎಂಬುದರ ಬಗ್ಗೆ ನಾನು ಬಹಳ ಪ್ರಭಾವಿತನಾಗಿದ್ದೆ.
ಪೂನಂ ನೌತಿಯಾಲ್: ಹೌದು ಸರ್
ಪ್ರಧಾನಿ: ಪೂನಂ ಅವರೇ ನಿಮ್ಮ ಕ್ಷೇತ್ರದ ಎಲ್ಲ ಜನರಿಗೆ ಲಸಿಕೆಯನ್ನು ಕೊಡಿಸಿದ್ದೀರಾ?
ಪೂನಂ ನೌಟಿಯಾಲ್: ಹೌದು ಸರ್, ಎಲ್ಲರಿಗೂ ಲಸಿಕೆ ನೀಡಲಾಗಿದೆ.
ಪ್ರಧಾನಿ: ನಿಮಗೆ ಯಾವುದೇ ರೀತಿ ಸಮಸ್ಯೆ ಎದುರಿಸಬೇಕಾಗಿತ್ತೇ?
ಪೂನಂ ನೌಟಿಯಾಲ್: ಹೌದು ಸರ್, ಮಳೆಯಾದಾಗಲೆಲ್ಲ ರಸ್ತೆ ತಡೆ ಆಗ್ತಾ ಇತ್ತು. ನಾವು ನದಿಯನ್ನು ದಾಟಿ ಹೋಗಿದ್ದೇವೆ, ಎನ್ ಹೆಚ್ ಸಿ ವಿ ಸಿ ಪ್ರಯುಕ್ತ ನಾವು ಮನೆಮನೆಗೆ ಹೋದಂತೆ ಈಗಲೂ ಮನೆ ಮನೆಗೆ ತೆರಳಿದ್ದೇವೆ, ವೃದ್ಧರು, ದಿವ್ಯಾಂಗರು, ಗರ್ಭವತಿಯರು, ಬಾಣಂತಿಯರು ಕೇಂದ್ರಕ್ಕೆ ಬರಲಾಗುತ್ತಿದ್ದಿಲ್ಲ
ಪ್ರಧಾನಿ: ಆದರೆ ಬೆಟ್ಟಪ್ರದೇಶದಲ್ಲಿ ಮನೆಗಳೂ ದೂರ ದೂರ ಇರುತ್ತವಲ್ಲವೇ
ಪೂನಂ ನೌಟಿಯಾಲ್: ಹೌದು ಸರ್,
ಪ್ರಧಾನಿ: ಹಾಗಾದರೆ ಒಂದು ದಿನಕ್ಕೆ ಎಷ್ಟು ಲಸಿಕೆ ನೀಡಲಾಗುತ್ತಿತ್ತು
ಪೂನಂ ನೌಟಿಯಾಲ್: ಸರ್ ಕಿ ಮೀಟರ್ ಲೆಕ್ಕದಲ್ಲಿ….ಸರ್ 10 ಕಿ ಮೀ ಕೆಲವೊಮ್ಮೆ 8 ಕಿ ಮೀ
ಪ್ರಧಾನಿ: ಸರಿ, ಇಳಿಜಾರು ಪ್ರದೇಶದಲ್ಲಿ 8-10 ಕಿ ಮೀ ಎಂದರೇನು ತಿಳಿದಿರುವುದಿಲ್ಲ. ಬೆಟ್ಟ ಪ್ರದೇಶದ 8-10 ಕಿ ಮೀ ಎಂದರೆ ಪೂರ್ತಿ ದಿನ ಕಳೆದುಹೋಗುತ್ತದೆ ಎಂದು ನನಗೆ ತಿಳಿದಿದೆ.
ಪೂನಂ ನೌಟಿಯಾಲ್: ಹೌದು ಸರ್,
ಪ್ರಧಾನಿ: ಆದರೆ ಇದು ಬಹಳ ಶ್ರಮದ ಕೆಲಸ, ಲಸಿಕೆಯ ಪರಿಕರಗಳನ್ನು ಹೊತ್ತೊಯ್ಯುವುದು ಕಷ್ಟ. ನಿಮಗೆ ಯಾರಾದರೂ ಸಹಾಯಕರಿದ್ದರೆ?
ಪೂನಂ ನೌಟಿಯಾಲ್: ಹೌದು ಸರ್, ತಂಡದಲ್ಲಿ ಐವರು ಇರುತ್ತಿದ್ದೆವು.
ಪ್ರಧಾನಿ: ಹೌದಾ!
ಪೂನಂ ನೌಟಿಯಾಲ್: ಅದರಲ್ಲಿ ವೈದ್ಯರು, ಎ ಎನ್ ಎಂ, ಔಷಧಿ ವಿತರಕರು, ಆಶಾ ಮತ್ತು ದತ್ತಾಂಶ ಭರ್ತಿ ಮಾಡುವವರು ಇರುತ್ತಿದ್ದರು.
ಪ್ರಧಾನಿ: ಹೌದಾ ದತ್ತಾಂಶ ಭರ್ತಿ ಮಾಡುತ್ತಿದ್ದರಾ? ಅಲ್ಲಿ ಸಂಪರ್ಕ ಸಾಧ್ಯವಿತ್ತೇ? ಅಲ್ಲೇ ಮಾಡುತ್ತಿದ್ದಿರೋ ಇಲ್ಲ ಭಾಗೇಶ್ವರಕ್ಕೆ ಬಂದು ಮಾಡುತ್ತಿದ್ದಿರೊ?
ಪೂನಂ ನೌಟಿಯಾಲ್: ಸರ್ ಕೆಲವು ಪ್ರದೇಶಗಳಲ್ಲಿ ಲಭ್ಯವಾಗುತ್ತಿತ್ತು ಕೆಲವೆಡೆಯ ದತ್ತಾಂಶವನ್ನು ಭಾಗೇಶ್ವರಕ್ಕೆ ಬಂದು ದಾಖಲಿಸುತ್ತಿದ್ದೆವು.
ಪ್ರಧಾನಿ: ಹೌದಾ, ನೀವು ಎಲ್ಲೆಗಳನ್ನು ಮೀರಿ ಜನರಿಗೆ ಲಸಿಕೆ ಹಾಕಿಸಿದ್ದೀರಿ ಎಂದು ನನಗೆ ತಿಳಿದುಬಂದಿದೆ. ನಿಮಗೆ ಈ ಆಲೋಚನೆ, ಈ ಕಲ್ಪನೆ ಹೇಗೆ ಬಂತು. ನೀವು ಹೇಗೆ ಸಾಧಿಸಿದಿರಿ?
ಪೂನಂ:ನಾವು ಸಂಪೂರ್ಣ ತಂಡದವರು ಒಬ್ಬ ವ್ಯಕ್ತಿಯೂ ಇದರಿಂದ ದೂರ ಉಳಿಯಬಾರದು, ನಮ್ಮ ದೇಶದಿಂದ ಕೊರೊನಾ ಹೊರ ಹಾಕಬೇಕು ಎಂದು ಸಂಕಲ್ಪ ಮಾಡಿದ್ದೆವು. ನಾನು ಮತ್ತು ಆಶಾ ಸೇರಿ ಗ್ರಾಮ ಮಟ್ಟದ ಪ್ರತಿಯೊಬ್ಬ ವ್ಯಕ್ತಿಯ ಲಸಿಕೆ ಬಾಕಿ ಇರುವ ದಾಖಲೆಯನ್ನು ಸಿದ್ಧಪಡಿಸಿದೆವು. ನಂತರ ಅದರ ಪ್ರಕಾರ ಯಾರು ಕೇಂದ್ರಕ್ಕೆ ಬಂದರೂ ಅವರಿಗೆ ಅಲ್ಲಿಯೇ ಲಸಿಕೆ ನೀಡಲಾಯಿತು. ನಂತರ ಮನೆ ಮನೆಗೆ ತೆರಳಿದೆವು. ನಂತರ ಬಾಕಿ ಉಳಿದವರು, ಕೇಂದ್ರಕ್ಕೆ ಬರಲಾಗದವರು….
ಪ್ರಧಾನಿ: ಸರಿ, ನೀವು ಜನರಿಗೆ ತಿಳಿ ಹೇಳಬೇಕಾಗುತ್ತಿತ್ತೇ?
ಪೂನಂ: ಹೌದು ಸರ್ ತಿಳಿಸಿ ಹೇಳಿದೆವು
ಪ್ರಧಾನಿ: ಜನರಲ್ಲಿ ಈಗಲೂ ಲಸಿಕೆ ಪಡೆಯುವ ಉತ್ಸಾಹವಿದೆಯೇ?
ಪೂನಂ: ಹೌದು ಸರ್, ಈಗ ಜನರಲ್ಲಿ ಅರಿವು ಮೂಡಿದೆ. ಆರಂಭದಲ್ಲಿ ನಮಗೆ ಬಹಳ ತೊಂದರೆಯಾಯಿತು. ಜನರಿಗೆ ಈ ಲಸಿಕೆ ಸುರಕ್ಷಿತವಾಗಿದೆ, ಪರಿಣಾಮಕಾರಿಯಾಗಿದೆ, ನಾವೂ ತೆಗೆದುಕೊಂಡಿದ್ದೇವೆ, ನಾವು ಆರೋಗ್ಯವಾಗೇ ಇದ್ದೇವೆ, ನಿಮ್ಮ ಕಣ್ಣೆದುರಿಗೇ ಇದ್ದೇವೆ. ನಮ್ಮ ಸಿಬ್ಬಂದಿ ಎಲ್ಲರೂ ಲಸಿಕೆ ಪಡೆದಿದ್ದಾರೆ. ಎಲ್ಲರೂ ಚೆನ್ನಾಗಿದ್ದಾರೆ ಎಂದು ತಿಳಿಸಿ ಹೇಳಬೇಕಾಗುತ್ತಿತ್ತು
ಪ್ರಧಾನಿ: ಲಸಿಕೆ ಹಾಕಿಸಿಕೊಂಡ ಮೇಲೆ ದೂರುಗಳೇನಾದರೂ ಇದ್ದವೇ?
ಪೂನಂ: ಇಲ್ಲ ಸರ್, ಯಾವ ಬಗೆಯ ದೂರೂ ಇರಲಿಲ್ಲ.
ಪ್ರಧಾನಿ: ಏನೂ ಆಗಲಿಲ್ಲವೆ?
ಪೂನಂ: ಇಲ್ಲ ಸರ್
ಪ್ರಧಾನಿ: ಎಲ್ಲರೂ ಸಂತಸಪಟ್ಟರೆ?
ಪೂನಂ: ಹೌದು ಸರ್
ಪ್ರಧಾನಿ: ಆರೋಗ್ಯ ಚೆನ್ನಾಗಿತ್ತೇ?
ಪೂನಂ: ಹೌದು ಸರ್
ಪ್ರಧಾನಿ: ತುಂಬಾ ಸಂತೋಷ ನೀವು ಬಹು ದೊಡ್ಡ ಕೆಲಸ ಮಾಡಿದ್ದೀರಿ. ಈ ಕ್ಷೇತ್ರ ಎಷ್ಟು ದುರ್ಗಮವಾದದ್ದು ಎಂದು ನನಗೆ ಗೊತ್ತು. ಬೆಟ್ಟ ಪ್ರದೇಶದ್ಲಲಿ ಕಾಲ್ನಡಿಗೆಯಲ್ಲಿ ಸಾಗುವುದು!, ಒಂದು ಬೆಟ್ಟ ಹತ್ತಬೇಕು ಮತ್ತೆ ಇಳಿಯಬೇಕು ಅದೂ ಅಲ್ಲದೆ ಮನೆಯೂ ದೂರ ದೂರ ಇರುತ್ತವೆ. ಇದೆಲ್ಲದರ ಹೊರತಾಗಿ ನೀವು ಅದ್ಭುತ ಕೆಲಸ ಮಾಡಿದ್ದೀರಿ.
ಪೂನಂ: ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಿದ್ದು ನನ್ನ ಸೌಭಾಗ್ಯ.
ಪ್ರಧಾನಿ: ನಿಮ್ಮಂತಹ ಲಕ್ಷಾಂತರ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಲೇ ನೂರು ಕೋಟಿ ಲಸಿಕೆ ನೀಡುವ ಗುರಿಯ ಮೈಲಿಗಲ್ಲು ಸಾಧನೆ ಸಾಧ್ಯವಾಗಿದೆ. ಇಂದು ನಾನು ಕೇವಲ ನಿಮಗೆ ಮಾತ್ರ ಕೃತಜ್ಞತೆ ಸಲ್ಲಿಸುತ್ತಿಲ್ಲ, ಹೊರತಾಗಿ ‘ಎಲ್ಲರಿಗೂ ಲಸಿಕೆ ಉಚಿತ ಲಸಿಕೆ’ ಅಭಿಯಾನವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದ ಮತ್ತು ಯಶಸ್ಸನ್ನು ತಂದುಕೊಟ್ಟ ಪ್ರತಿಯೊಬ್ಬ ಭಾರತೀಯನಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಅನಂತ ಶುಭಾಷಯಗಳು.
ನನ್ನ ಪ್ರಿಯ ದೇಶಬಾಂಧವರೆ, ಮುಂದಿನ ರವಿವಾರ 31 ಅಕ್ಟೋಬರ್ ಗೆ ಸರ್ದಾರ್ ಪಟೇಲರ ಜಯಂತಿಯಿದೆ ಎಂದು ನಿಮಗೆ ತಿಳಿದಿದೆ. ‘ಮನದ ಮಾತಿನ’ ಪ್ರತಿಯೊಬ್ಬ ಶ್ರೋತೃಗಳ ಪರವಾಗಿ ಮತ್ತು ನನ್ನ ಪರವಾಗಿ ನಾನು ಉಕ್ಕಿನ ಮನುಷ್ಯ ನಿಗೆ ನಮನ ಸಲ್ಲಿಸುತ್ತೇನೆ. ಸ್ನೇಹಿತರೆ, 31 ಅಕ್ಟೋಬರ್ ಅನ್ನು ‘ರಾಷ್ಟ್ರೀಯ ಏಕತೆಯ ದಿನ’ ವಾಗಿ ಆಚರಿಸುತ್ತೇವೆ. ಏಕತೆಯ ಸಂದೇಶವನ್ನು ಸಾರುವ ಒಂದಲ್ಲ ಒಂದು ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಛ್ ನ ಲಖಪತ್ ಕೋಟೆಯಿಂದ ಏಕತಾ ಪ್ರತಿಮೆವರೆಗೆ ಗುಜರಾತ್ ಪೋಲಿಸರು ಬೈಕ್ ರಾಲಿ ಆರಂಭಿಸಿರುವುದು ನಿಮಗೆ ತಿಳಿದಿರಬಹುದು. ತ್ರಿಪುರಾ ಪೋಲಿಸರು ಏಕತಾ ದಿನದಾಚರಣೆಗೆ ತ್ರಿಪುರಾದಿಂದ ಏಕತಾ ಪ್ರತಿಮೆವರೆಗೆ ಬೈಕ್ ರಾಲಿ ಹಮ್ಮಿಕೊಂಡಿದ್ದಾರೆ. ಅಂದರೆ ಪೂರ್ವದಿಂದ ಪಶ್ಚಿಮದವರೆಗೆ ದೇಶವನ್ನು ಒಗ್ಗೂಡಿಸುತ್ತಿದ್ದಾರೆ. ಜಮ್ಮು ಕಾಶ್ಮೀರದ ಪೋಲಿಸರು ಕೂಡ ಉರಿಯಿಂದ ಪಠಾನ್ ಕೋಟ್ ವರೆಗೆ ಇಂಥದ್ದೇ ಬೈಕ್ ರಾಲಿ ಹಮ್ಮಿಕೊಂಡು ದೇಶದ ಏಕತೆಯ ಸಂದೇಶ ನೀಡುತ್ತಿದ್ದಾರೆ. ಈ ಎಲ್ಲ ಪೋಲಿಸ್ ಪಡೆಗೆ ನಾನು ನಮನ ಸಲ್ಲಿಸುತ್ತೇನೆ. ಜಮ್ಮು ಕಾಶ್ಮೀರದ ಕುಪ್ವಾಡಾ ಜಿಲ್ಲೆಯ ಬಹಳಷ್ಟು ಸೋದರಿಯರ ಬಗ್ಗೆ ನನಗೆ ಒಂದು ವಿಷಯ ತಿಳಿದಿದೆ. ಈ ಸೋದರಿಯರು ಕಾಶ್ಮೀರದಲ್ಲಿ ಸೇನೆ ಮತ್ತು ಸರ್ಕಾರಿ ಕಚೇರಿಗಳಿಗಾಗಿ ತ್ರಿವರ್ಣ ಧ್ವಜವನ್ನು ಸಿ ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಕೆಲಸ ದೇಶ ಭಕ್ತಿಯ ಭಾವನೆಯಿಂದ ತುಂಬಿದೆ. ನಾನು ಈ ಸೋದರಿಯರ ಉತ್ಸಾಹವನ್ನು ಪ್ರಶಂಸಿಸುತ್ತೇನೆ. ನೀವೂ ಭಾರತದ ಏಕತೆಗಾಗಿ, ಭಾರತದ ಶ್ರೇಷ್ಠತೆಗಾಗಿ ಏನನ್ನಾದರೂ ಖಂಡಿತ ಮಾಡಬೇಕು. ನಿಮ್ಮ ಮನಸ್ಸಿಗೆ ಅದೆಷ್ಟು ಸಂತೃಪ್ತಿ ಸಿಗುತ್ತದೋ ನೀವೇ ನೋಡಿ.
ಸ್ನೇಹಿತರೆ, ಸರ್ದಾರ್ ಅವರು ಹೀಗೆ ಹೇಳುತ್ತಿದ್ದರು- “ನಾವು ನಮ್ಮ ಒಗ್ಗಟ್ಟಿನ ಪ್ರಯತ್ನದಿಂದಲೇ ದೇಶವನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಬಲ್ಲೆವು. ನಮ್ಮಲ್ಲಿ ಏಕತೆಯಿಲ್ಲದಿದ್ದರೆ ನಮಗೆ ನಾವೇ ಹೊಸ ವಿಪತ್ತುಗಳಿಗೆ ಒಡ್ಡಿಕೊಳ್ಳುತ್ತೇವೆ.” ಅಂದರೆ ರಾಷ್ಟ್ರೀಯ ಏಕತೆಯಿಂದಲೇ ಅಭಿವೃದ್ಧಿ ಸಾಧ್ಯ. ನಾವು ಸರ್ದಾರ್ ಪಟೇಲರ ವಿಚಾರಗಳು ಮತ್ತು ಜೀವನದಿಂದ ಬಹಳಷ್ಟು ಕಲಿಯಬಹುದು. ದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡ ಇತ್ತೀಚೆಗೆ ಸರ್ದಾರ್ ಅವರ ಕುರಿತು ಒಂದು ಚಿತ್ರ ರೂಪದ ಜೀವನ ಚರಿತ್ರೆಯನ್ನು ಮುದ್ರಿಸಿದೆ. ನಮ್ಮ ಎಲ್ಲ ಯುವಜನತೆ ಇದನ್ನು ಖಂಡಿತ ಓದಲಿ ಎಂದು ನಾನು ಬಯಸುತ್ತೇನೆ. ಇದರಿಂದ ನಿಮಗೆ ಆಸಕ್ತಿಕರ ರೂಪದಲ್ಲಿ ಸರ್ದಾರ್ ಅವರ ಬಗ್ಗೆ ತಿಳಿಯುವ ಅವಕಾಶ ದೊರೆಯುತ್ತದೆ.
ಪ್ರಿಯ ದೇಶಬಾಂಧವರೆ, ಜೀವನ ನಿರಂತರ ಪ್ರಗತಿಯನ್ನು ಬಯಸುತ್ತದೆ, ವಿಕಾಸವನ್ನು ಬಯಸುತ್ತದೆ. ಎತ್ತರಗಳನ್ನು ಸಾಧಿಸಬಯಸುತ್ತದೆ. ವಿಜ್ಞಾನ ಅದೆಷ್ಟೇ ಮುಂದುವರಿಯಲಿ, ಪ್ರಗತಿಯ ವೇಗ ಎಷ್ಟೇ ವೇಗವಾದರೂ, ಭವನಗಳು ಅದೆಷ್ಟೇ ಭವ್ಯವಾಗಿರಲಿ ಆದರೂ ಜೀವನ ಅಪೂರ್ಣವೆನಿಸುತ್ತದೆ. ಆದರೆ, ಇದರೊಂದಿಗೆ ಸಂಗೀತ-ಗಾಯನ, ಕಲೆ, ನೃತ್ಯ, ಸಾಹಿತ್ಯ ಬೆರೆತಾಗ ಇದರ ಸೆಳೆತ, ಜೀವಂತಿಕೆ ಬಹಳಷ್ಟು ಪಟ್ಟು ಹೆಚ್ಚಾಗುತ್ತದೆ. ಒಂದು ರೀತಿ ಜೀವನ ಸಾರ್ಥಕವಾಗಬೇಕಾದರೆ ಇವೆಲ್ಲವುಗಳ ಇರುವಿಕೆ ಅಷ್ಟೇ ಮಹತ್ವವಾಗುತ್ತದೆ. ಆದ್ದರಿಂದಲೇ ಇವೆಲ್ಲ ವಿಧಿ ವಿಧಾನಗಳು ನಮ್ಮ ಜೀವನದಲ್ಲಿ ವೇಗವರ್ಧಕಗಳಂತೆ ಕೆಲಸ ಮಾಡುತ್ತವೆ. ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಮಾನವನ ಮನದ ಅಂತರಂಗದ ವಿಕಾಸಕ್ಕೆ, ನಮ್ಮ ಅಂತರಂಗದ ಯಾತ್ರೆಯ ಪಯಣಕ್ಕೆ ಮಾರ್ಗ ರೂಪಿಸುವಲ್ಲಿಯೂ ಸಂಗೀತ-ಗಾಯನ ವಿವಿಧ ಕಲೆಗಳ ಬಹುದೊಡ್ಡ ಪಾತ್ರವಿರುತ್ತದೆ ಮತ್ತು ಇವುಗಳನ್ನು ಸಮಯ, ಸೀಮೆ, ಜಾತಿ ಮತ ಯಾವುದೂ ತಡೆಯಲಾಗದು ಎಂಬುದು ಇವುಗಳ ಬಹುದೊಡ್ಡ ಶಕ್ತಿಯಾಗಿದೆ. ಅಮೃತ ಮಹೋತ್ಸವದಲ್ಲಿಯೂ ನಮ್ಮ ಕಲೆ, ಸಂಸ್ಕೃತಿ, ಗೀತೆ, ಸಂಗೀತದ ಬಣ್ಣಗಳನ್ನು ಖಂಡಿತ ಬೆರೆಸಲೇಬೇಕು. ನಿಮ್ಮಿಂದ ನನಗೂ ಅಮೃತ ಮಹೋತ್ಸವ ಮತ್ತು ಕಲೆ, ಗೀತೆ, ಸಂಗೀತದ ಶಕ್ತಿಯ ಬಗೆಗಿನ ಹಲವಾರು ಸಲಹೆ ಸೂಚನೆಗಳು ಬರುತ್ತಿವೆ. ಈ ಸಲಹೆಗಳು ನನಗೆ ಬಹಳ ಅಮೂಲ್ಯವಾಗಿವೆ. ನಾನು ಅಧ್ಯಯನಕ್ಕೆ ಇವುಗಳನ್ನು ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಿದ್ದೆ. ಸಚಿವಾಲಯ ಈ ಸಲಹೆ ಸೂಚನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಇಷ್ಟೊಂದು ಕಡಿಮೆ ಸಮಯದಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದೆ ಎಂದು ಹೇಳಲು ಸಂತೋಷವೆನಿಸುತ್ತದೆ. ದೇಶಭಕ್ತಿ ಗೀತೆಗಳ ಸ್ಪರ್ಧೆ ಎಂಬುದು ಈ ಸಲಹೆಗಳಲ್ಲಿ ಒಂದಾಗಿದೆ! ಸ್ವಾತಂತ್ರ್ಯ ಹೋರಾಟದಲ್ಲಿ ವಿವಿಧ ಭಾಷೆಗಳಲ್ಲಿ ದೇಶಭಕ್ತಿ ಗೀತೆಗಳು ಮತ್ತು ಭಜನೆಗಳು ಸಂಪೂರ್ಣ ರಾಷ್ಟ್ರವನ್ನು ಒಗ್ಗೂಡಿಸಿದ್ದವು. ಈಗ ಅಮೃತ ಮಹೋತ್ಸವದಲ್ಲಿ ನಮ್ಮ ಯುವ ಜನತೆ ದೇಶಭಕ್ತಿಯ ಗೀತೆಗಳನ್ನು ಬರೆದು ಈ ಸ್ಪರ್ಧೆಗೆ ಮತ್ತಷ್ಟು ಮೆರುಗು ತುಂಬಬಲ್ಲಬಹುದಾಗಿದೆ. ದೇಶಭಕ್ತಿ ಗೀತೆಗಳು ರಾಷ್ಟ್ರ ಭಾಷೆ ಅಥವಾ ಮಾತೃಭಾಷೆ ಇಲ್ಲವೆ ಇಂಗ್ಲೀಷ್ ನಲ್ಲಿಯೂ ಬರೆಯಬಹುದಾಗಿದೆ. ಆದರೆ ಈ ರಚನೆಗಳು ನವಭಾರತದ ಹೊಸ ವಿಚಾರಗಳನ್ನು ಹೊಂದಿರಬೇಕು. ದೇಶದ ಪ್ರಸ್ತುತ ಸಫಲತೆಯಿಂದ ಪ್ರೇರಣೆ ಪಡೆದು ಭವಿಷ್ಯದಲ್ಲಿ ದೇಶ ಸಂಕಲ್ಪ ಕೈಗೊಳ್ಳುವಂತಿರಬೇಕು. ಗ್ರಾಮ ಪಂಚಾಯ್ತಿಯಿಂದ ರಾಷ್ಟ್ರಮಟ್ಟದಲ್ಲಿ ಇದಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸುವ ಸಿದ್ಧತೆ ಸಂಸ್ಕೃತಿ ಸಚಿವಾಲಯ ಮಾಡಿಕೊಳ್ಳುತ್ತಿದೆ.
ಸ್ನೇಹಿತರೆ, ಮನದ ಮಾತಿನ ಇಂಥ ಒಬ್ಬ ಶ್ರೋತೃ ಅಮೃತ ಮಹೋತ್ಸವದಲ್ಲಿ ರಂಗೋಲಿ ಕಲೆಯನ್ನು ಬೆರೆಸಬಹುದು ಎಂಬ ಸಲಹೆ ನೀಡಿದ್ದಾರೆ. ನಮ್ಮಲ್ಲಿ ಹಬ್ಬಹರಿದಿನಗಳಲ್ಲಿ ಬಣ್ಣದ ರಂಗೋಲಿ ಬಿಡಿಸುವ ಪರಂಪರೆ ಶತಮಾನಗಳಿಂದಲೂ ಇದೆ. ರಂಗೋಲಿ ಮೂಲಕ ದೇಶದ ವಿವಿಧತೆಯ ದರ್ಶನವಾಗುತ್ತದೆ. ವಿವಿಧ ರಾಜ್ಯಗಳನ್ನು ಭಿನ್ನ ಭಿನ್ನವಾದ ಹೆಸರಿನಿಂದ ಹಲವು ಪರಿಕಲ್ಪನೆಗಳಿಂದ ರಂಗೋಲಿ ಬಿಡಿಸಲಾಗುತ್ತದೆ. ಹಾಗಾಗಿ ಸಂಸ್ಕೃತಿ ಸಚಿವಾಲಯ ಇದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸ್ಪರ್ಧೆಯೊಂದನ್ನು ಆಯೋಜಿಸಲಿದೆ. ನೀವು ಕಲ್ಪಿಸಿಕೊಳ್ಳಿ ಈಗ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ರಂಗೋಲಿ ಬಿಡಿಸಿದಾಗ ಜನರು ತಮ್ಮ ಮನೆಯ ಮುಂದೆ. ಗೋಡೆಗಳ ಮೇಲೆ ಸ್ವಾತಂತ್ರ್ಯ ಯೋಧರ ಚಿತ್ರವನ್ನು ಬಿಡಿಸುತ್ತಾರೆ, ಸ್ವಾತಂತ್ರ್ಯ ಹೋರಾಟದ ಘಟನೆಯೊಂದನ್ನು ಬಣ್ಣಗಳಲ್ಲಿ ತೋರ್ಪಡಿಸುತ್ತಾರೆ ಎಂದಾಗ ಅಮೃತ ಮಹೋತ್ಸವದ ಮೆರುಗು ಮತ್ತಷ್ಟು ವೃದ್ಧಿಸುತ್ತದೆ.
ಸ್ನೇಹಿತರೆ, ನಮ್ಮಲ್ಲಿ ಜೋಗುಳದ ಪರಂಪರೆಯೂ ಇದೆ. ನಮ್ಮಲ್ಲಿ ಪುಟ್ಟ ಮಕ್ಕಳಿಗೆ ಜೋಗುಳ ಹಾಡಿ ಸಂಸ್ಕಾರದ ಧಾರೆ ಎರೆಯಲಾಗುತ್ತದೆ ಸಂಸ್ಕೃತಿಯ ಪರಿಚಯ ಮಾಡಿಸಲಾಗುತ್ತದೆ. ಜೋಗುಳಕ್ಕೂ ತನ್ನದೇ ವೈವಿಧ್ಯತೆಯಿದೆ. ನಾವು ಅಮೃತ ಮಹೋತ್ಸವದಲ್ಲಿ ಈ ಕಲೆಯನ್ನೂ ಪುನರುಜ್ಜೀವನ ಮಾಡಬಹುದಲ್ಲವೇ! ದೇಶಭಕ್ತಿಗೆ ಸಂಬಂಧಿಸಿದ, ತಾಯಂದಿರು ತಮ್ಮ ಮನೆಗಳಲ್ಲಿ ಪುಟ್ಟ ಮಕ್ಕಳಿಗೆ ಕಲಿಸುವಂತಹ ಇಂಥ ಜೋಗುಳ ಪದಗಳನ್ನು, ಗೀತೆ, ಕವಿತೆ ಏನನ್ನಾದರೂ ಖಂಡಿತ ಬರೆಯಬಹುದು, ಈ ಜೋಗುಳಗಳಲ್ಲಿ ಆಧುನಿಕ ಭಾರತದ ಘಟನೆಗಳಿರಲಿ, 21 ನೇ ಶತಮಾನದ ಭಾರತದ ಕನಸುಗಳ ದರ್ಶನವಾಗಲಿ. ಎಲ್ಲ ಶ್ರೋತೃಗಳ ಸಲಹೆ ಸೂಚನೆಗಳನ್ನು ಪರಿಗಣಿಸಿ ಸಚಿವಾಲಯ ಈ ಎಲ್ಲ ಸ್ಪರ್ಧೆಗಳನ್ನು ಏರ್ಪಡಿಸುವ ನಿರ್ಣಯ ಕೈಗೊಂಡಿದೆ.
ಸ್ನೇಹಿತರೆ, ಈ ಮೂರು ಸ್ಪರ್ಧೆಗಳು 31 ಅಕ್ಟೋಬರ್ ದಂದು ಸರ್ದಾರ್ ಪಟೇಲರ ಜಯಂತಿಯಂದು ಆರಂಭಗೊಳ್ಳಲಿವೆ. ಮುಂಬರುವ ದಿನಗಳಲ್ಲಿ ಸಂಸ್ಕೃತಿ ಸಚಿವಾಲಯ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಒದಗಿಸಲಿದೆ. ಈ ಮಾಹಿತಿ ಸಚಿವಾಲಯದ ಜಾಲತಾಣದಲ್ಲಿಯೂ ಲಭ್ಯವಿರಲಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ನೀಡಲಾಗುವುದು. ನೀವೆಲ್ಲರೂ ಇದರಲ್ಲಿ ಭಾಗವಹಿಸಲಿ ಎಂದು ನಾನು ಬಯಸುತ್ತೇನೆ. ನಮ್ಮ ಯುವಜನತೆ ಖಂಡಿತ ತಮ್ಮ ಕಲೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲಿ. ಇದರಿಂದ ನಿಮ್ಮ ಪ್ರದೇಶದ ಕಲೆ ಮತ್ತು ಸಂಸ್ಕೃತಿ ದೇಶದ ಮೂಲೆ ಮೂಲೆಗೂ ತಲುಪುತ್ತದೆ. ನಿಮ್ಮ ಕಥೆಗಳನ್ನು ಸಂಪೂರ್ಣ ದೇಶ ಆಲಿಸಲಿದೆ.
ಪ್ರೀತಿಯ ದೇಶವಾಸಿಗಳೇ, ಈಗ ನಾವು ಅಮೃತ ಮಹೋತ್ಸವದಲ್ಲಿ ದೇಶದ ವೀರ ಪುತ್ರ-ಪುತ್ರಿಯರನ್ನು, ಅವರ ಮಹಾನ್ ಪುಣ್ಯ ಆತ್ಮಗಳನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಮುಂದಿನ ತಿಂಗಳು ನವೆಂಬರ್ 15 ರಂದು ನಮ್ಮ ದೇಶದ ಇಂತಹ ಮಹಾಪುರುಷ, ವೀರ ಸೈನಿಕ, ಭಗವಾನ್ ಬಿರಸಾ ಮುಂಡಾ ಅವರ ಜನ್ಮ ಜಯಂತಿ ಬರಲಿದೆ. ಭಗವಾನ್ ಬಿರಸಾ ಮುಂಡಾ ಅವರನ್ನು ಧರತೀಆಬಾ ಎಂದು ಕೂಡಾ ಕರೆಯುತ್ತಾರೆ. ಇದರ ಅರ್ಥವೇನೆಂದು ನಿಮಗೆ ಗೊತ್ತೇ?ಇದರ ಅರ್ಥ ಭೂಮಿತ ತಂದೆ ಎಂದು. ಭಗವಾನ್ ಬಿರಸಾ ಮುಂಡಾ ಅವರು ನಮ್ಮ ಸಂಸ್ಕೃತಿ, ನಮ್ಮ ಅರಣ್ಯ, ಭೂಮಿ ರಕ್ಷಣೆಯನ್ನುಮಾಡುತ್ತಿದ್ದರೋ ಅಂತಹ ಕೆಲಸವನ್ನು ಮಾಡಲು ಭೂಮಿಯ ತಂದೆ ಮಾತ್ರಾಮಾಡಬಲ್ಲರು. ಅವರು ನಮಗೆ ನಮ್ಮ ಸಂಸ್ಕೃತಿ ಮತ್ತು ಬೇರುಗಳ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಸಿದರು. ವಿದೇಶೀ ಸರ್ಕಾರ ಅವರಿಗೆ ಎಷ್ಟೇ ಬೆದರಿಕೆ ಹಾಕಿದರೂ, ಎಷ್ಟೇ ಒತ್ತಡ ಹಾಕಿದರೂ, ಅವರು ತಮ್ಮ ಆದಿವಾಸಿ ಸಂಸ್ಕೃತಿಯನ್ನು ಬಿಡಲಿಲ್ಲ. ಪ್ರಕೃತಿ ಹಾಗೂ ಪರಿಸರವನ್ನು ಪ್ರೀತಿಸುವುದನ್ನು ನಾವು ಕಲಿಯಬೇಕೆಂದರೆ, ಅದಕ್ಕೆ ಕೂಡಾ ಧರತೀ ಆಬಾ ಭಗವಾನ್ ಬಿರಸಾ ಮುಂಡಾ ಅವರು ನಮಗೆ ಬಹಳ ದೊಡ್ಡ ಪ್ರೇರಣೆಯಾಗುತ್ತಾರೆ. ಪರಿಸರಕ್ಕೆ ಹಾನು ಉಂಟು ಮಾಡುವ ವಿದೇಶೀ ಆಡಳಿತ ಪ್ರತಿಯೊಂದು ನೀತಿಯನ್ನು ಕೂಡಾ ಅವರು ವಿರೋಧಿಸಿದರು. ಬಡವರು ಮತ್ತು ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಬಿರಸಾ ಮುಂಡಾ ಸದಾ ಮುಂದಾಗುತ್ತಿದ್ದರು. ಅವರು ಸಾಮಾಜಿಕ ಅನಿಷ್ಠಗಳನ್ನು ತೊಡೆದು ಹಾಕಲು ಸಮಾಜದಲ್ಲಿ ಜಾಗರೂಕತೆ ಮೂಡಿಸಿದರು. ಉಲ್ಗುಲಾನ್ ಚಳುವಳಿಯಲ್ಲಿ ಅವರ ಮುಂದಾಳತ್ವವನ್ನು ಯಾರು ತಾನೇ ಮರೆಯಲು ಸಾಧ್ಯ. ಈ ಚಳುವಳಿಯು ಬ್ರಿಟಿಷರನ್ನು ನಡುಗಿಸಿಬಿಟ್ಟಿತು. ಇದಾದ ನಂತರ ಬ್ರಿಟಿಷರು ಭಗವಾನ್ ಬಿರಸಾ ಮುಂಡಾ ಅವರ ಮೇಲೆ ಬಹುದೊಡ್ಡ ಬಹುಮಾನ ಘೋಷಿಸಿತು. ಬ್ರಿಟಿಷ್ ಸರ್ಕಾರವು ಅವರನ್ನು ಸೆರೆಮನೆಗೆ ಕಳುಹಿಸಿತು, ಅವರಿಗೆ ಎಷ್ಟೊಂದು ಚಿತ್ರಹಿಂಸೆ ನೀಡಿತೆಂದರೆ, ಅವರು ತಮ್ಮ 25 ನೇವರ್ಷದಲ್ಲೇ ನಮ್ಮನ್ನು ಅಗಲಿದರು. ಅವರು ಶಾರೀರಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ ಅಷ್ಟೇ. ಜನಮಾನಸದಲ್ಲಿ ಭಗವಾನ್ ಬಿರಸಾ ಅವರು ಚಿರಕಾಲ ನೆಲೆಸಿರುತ್ತಾರೆ. ಜನರಿಗೆ ಅವರ ಜೀವನ ಒಂದು ಪ್ರೇರಣಾ ಶಕ್ತಿಯಾಗಿದೆ. ಇಂದಿಗೂ ಅವರ ಸಾಹಸ ಮತ್ತು ಶೌರ್ಯ ಕುರಿತ ಜಾನಪದ ಗೀತೆಗಳು ಮತ್ತು ಕತೆಗಳು ಮಧ್ಯ ಭಾರತದಲ್ಲಿ ಬಹಳಷ್ಟು ಜನಪ್ರಿಯವಾಗಿವೆ. ನಾನು ಧರತೀ ಆಬಾ ಬಿರಸಾ ಮುಂಡಾ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ, ಅವರ ಬಗ್ಗೆ ತಿಳಿದುಕೊಳ್ಳಬೇಕೆಂದು ಮತ್ತು ಓದಬೇಕೆಂದು ಯುವಜನರಲ್ಲಿ ಮನವಿ ಮಾಡುತ್ತೇನೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಬುಡಕಟ್ಟು ಸಮುದಾಯದ ವಿಶಿಷ್ಟ ಕೊಡುಗೆಯ ಬಗ್ಗೆ ನೀವು ಎಷ್ಟು ತಿಳಿದುಕೊಳ್ಳುತ್ತೀರೋ ಅಷ್ಟೇ ಹಮ್ಮೆಯ ಭಾವನೆ ನಿಮ್ಮಲ್ಲಿ ಮೂಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಅಕ್ಟೋಬರ್ 24 ರಂದು, ಯುಎನ್ ದಿನ ಅಂದರೆ ವಿಶ್ವಸಂಸ್ಥೆಯ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆ ಸ್ಥಾಪನೆಯಾದ ದಿನ ಇಂದು. ವಿಶ್ವ ಸಂಸ್ಥೆ ಸ್ಥಾಪನೆಯಾದಾಗಿನಿಂದಲೂ ಭಾರತ ಇದರೊಂದಿಗೆ ಸೇರಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಮುನ್ನವೇ 1945 ರಲ್ಲ್ಲೇ ಭಾರತ ವಿಶ್ವ ಸಂಸ್ಥೆಯ ಚಾರ್ಟರ್ ಮೇಲೆ ತನ್ನ ಸಹಿ ಹಾಕಿದೆಯೆಂಬ ವಿಷಯ ನಿಮಗೆ ತಿಳಿದಿದೆಯೇ. ವಿಶ್ವ ಸಂಸ್ಥೆಗೆ ಸಂಬಂಧಿಸಿದಂತೆ ಮತ್ತೊಂದು ವಿಶಿಷ್ಠ ಅಂಶವಿದೆ ಅದೆಂದರೆ ವಿಶ್ವ ಸಂಸ್ಥೆಯ ಪ್ರಭಾವ ಮತ್ತು ಅದರ ಸಾಮರ್ಥ್ಯ ವರ್ಧನೆಯಲ್ಲಿ ಭಾರತದ ನಾರೀಶಕ್ತಿಯು ಬಹು ದೊಡ್ಡ ಪಾತ್ರ ವಹಿಸಿದೆ. 1947-48 ರಲ್ಲಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಸಿದ್ಧವಾಗುತ್ತಿರುವಾಗ, ಆ ಘೋಷಣೆಯಲ್ಲಿ ಹೀಗೆ ಬರೆಯಲಾಗುತ್ತಿತ್ತು, “All Men are Created Equal”. ಆದರೆ, ಭಾರತದ ಪ್ರತಿನಿಧಿಯೊಬ್ಬರು ಇದನ್ನು ಬಲವಾಗಿ ವಿರೋಧಿಸಿದರು ನಂತರ ಸಾರ್ವತ್ರಿಕ ಘೋಷಣೆಯಲ್ಲಿ“All Human Beings are Created Equal” ಎಂದು ಬರೆಯಲಾಯಿತು. ಇದು ಲಿಂಗ ಸಮಾನತೆಯ ಭಾರತದ ಶತಮಾನದಷ್ಟು ಹಳೆಯದಾದ ಪರಂಪರೆಗೆ ಅನುಗುಣವಾಗಿತ್ತು. ಇದು ಸಾಧ್ಯವಾಗಿಸಿದ ಆ ಪ್ರತಿನಿಧಿ ಶ್ರೀಮತಿ ಹಂಸಾಮೆಹತಾ ಎಂದು ನಿಮಗೆ ಗೊತ್ತೇ, ಅದೇ ಸಂದರ್ಭದಲ್ಲಿ ಮತ್ತೊಬ್ಬ ಪ್ರತಿನಿಧಿ ಶ್ರೀಮತಿ ಲಕ್ಷ್ಮಿ ಮೆನನ್ ಅವರು ಲಿಂಗ ಸಮಾನತೆ ವಿಷಯದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ಇಷ್ಟೇ ಅಲ್ಲ, 1953 ರಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಮೊದಲ ಮಹಿಳಾ ಅಧ್ಯಕ್ಷರು ಕೂಡಾ ಆಗಿದ್ದರು.
ಸ್ನೇಹಿತರೇ, ನಾವು ನಂಬುವ, ಈ ರೀತಿ ಪ್ರಾರ್ಥನೆ ಸಲ್ಲಿಸುವ ಭೂಮಿಯ ಮಕ್ಕಳಾಗಿದ್ದೇವೆ:
ಓಂ ದ್ಯೌಃಶಾಂತಿರಂತರಿಕ್ಷಂಶಾಂತಿಃ
ಪೃಥಿವೀಶಾಂತಿರಾಪಃಶಾಂತಿರೋಷಧಯಃಶಾಂತಿಃ|
ವನಸ್ಪತಯಃಶಾಂತಿರ್ವಿಶ್ವೇದೇವಾಃಶಾಂತಿರ್ಬ್ರಹ್ಮಶಾಂತಿಃ
ಸರ್ವಂಶಾಂತಿಃಶಾಂತಿರೇವಶಾಂತಿಃ ಸಾ ಮಾ ಶಾಂತಿರೇಧಿ||
ಓಂ ಶಾಂತಿಃಶಾಂತಿಃಶಾಂತಿಃ
ಭಾರತ ಯಾವಾಗಲೂ ವಿಶ್ವ ಶಾಂತಿಗಾಗಿ ಕೆಲಸ ಮಾಡಿದೆ. ಭಾರತ 1950 ರ ದಶಕದಿಂದ ಸತತವಾಗಿ ವಿಶ್ವ ಸಂಸ್ಥೆಯ ಶಾಂತಿ ಪಾಲನೆ ಮಿಶನ್ ನ ಭಾಗವಾಗಿದೆ ಎನ್ನುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ಬಡತನ ನಿವಾರಣೆ, ಹವಾಮಾನ ಬದಲಾವಣೆ, ಮತ್ತು ಕಾರ್ಮಿಕ ಸಂಬಂಧಿತ ಸಮಸ್ಯೆಗಳ ಪರಿಹಾರದಲ್ಲಿ ಕೂಡಾ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಇಷ್ಟೇ ಅಲ್ಲದೇ ಯೋಗ ಮತ್ತು ಆಯುಷ್ ಅನ್ನು ಜನಪ್ರಿಯಗೊಳಿಸಲು, ಭಾರತ WHOಅಂದರೆ World Health Organisation - ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೂಡಿ ಕೆಲಸ ಮಾಡುತ್ತಿದೆ. 2021 ರ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಸಾಂಪ್ರದಾಯಿಕ ಚಿಕಿತ್ಸೆಗಾಗಿ ಜಾಗತಿಕ ಕೇಂದ್ರ ಸ್ಥಾಪನೆ ಮಾಡಲಾಗುವುದೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು.
ಸ್ನೇಹಿತರೇ, ವಿಶ್ವ ಸಂಸ್ಥೆಯ ಬಗ್ಗೆ ಮಾತನಾಡುತ್ತಿರುವಾಗ ನನಗೆ ಇಂದು ಅಟಲ್ ಜಿ ಅವರ ಮಾತುಗಳು ನೆನಪಿಗೆ ಬರುತ್ತಿದೆ. ಅವರು 1977 ರಲ್ಲಿ ವಿಶ್ವ ಸಂಸ್ಥೆಯನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿ ಇತಿಹಾಸ ರಚಿಸಿದ್ದರು. ನಾನು ಇಂದು ಮನ್ ಕಿ ಬಾತ್ ನ ಶ್ರೋತೃಗಳಿಗೆ ಅಟಲ್ ಜಿ ಅವರ ಆ ಭಾಷಣದ ಕೆಲವು ಅಂಶವನ್ನು ಕೇಳಿಸಲುಬಯಸುತ್ತೇನೆ. ಕೇಳಿ, ಅಟಲ್ ಜಿ ಅವರ ಶಕ್ತಿಯುತ ಧ್ವನಿ -
``ಇಲ್ಲಿ ನಾನು ರಾಷ್ಟ್ರಗಳ ಶಕ್ತಿ ಮತ್ತು ಮಹತ್ವದ ಬಗ್ಗೆ ಯೋಚಿಸುತ್ತಿಲ್ಲ. ಸಾಮಾನ್ಯ ಮನುಷ್ಯನ ಪ್ರತಿಷ್ಠೆ ಮತ್ತು ಪ್ರಗತಿ ನನಗೆ ಹೆಚ್ಚು ಮಹತ್ವದ ವಿಷಯವಾಗಿದೆ. ಇಡೀ ಮಾನವ ಸಮಾಜಕ್ಕೆ, ವಾಸ್ತವದಲ್ಲಿ ಪ್ರತಿಯೊಬ್ಬ ಪುರುಷ, ಮಹಿಳೆ ಮತ್ತು ಮಗುವಿಗೆ ನ್ಯಾಯ ಮತ್ತು ಘನತೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಎಷ್ಟು ಮಾತ್ರ ಪ್ರಯತ್ನಶೀಲರಾಗಿದ್ದೇವೆ ಎಂಬ ಏಕೈಕ ಮಾನದಂಡದಿಂದ ಮಾತ್ರಾ ನಾವು ನಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ನಾವು ಅಳೆಯಬೇಕು.”
ಸ್ನೇಹಿತರೇ, ಅಟಲ್ ಜಿ ಅವರ ಈ ಮಾತುಗಳು ನಮಗೆ ಇಂದು ಕೂಡಾ ದಾರಿ ತೋರಿಸುತ್ತದೆ. ಈ ಭೂಮಿಯನ್ನು ಒಂದು ಉತ್ತಮ ಹಾಗು ಸುರಕ್ಷಿತ ಗ್ರಹವನ್ನಾಗಿ ಮಾಡುವಲ್ಲಿ ಭಾರತದ ಕೊಡುಗೆ, ವಿಶ್ವಾದ್ಯಂತ ಬಹು ದೊಡ್ಡ ಪ್ರೇರಣೆಯಾಗಿದೆ.
ನನ್ನ ಪ್ರೀತಿಯ ದೇಶಬಾಂಧವರೇ, ಈಗ ಕೆಲವು ದಿನಗಳ ಹಿಂದೆಯಷ್ಟೇ ಅಕ್ಟೋಬರ್ 21 ರಂದು ನಾವು ಪೊಲೀಸ್ ಸ್ಮೃತಿ ದಿನ ಆಚರಿಸಿದೆವು. ಈ ದಿನ ನಾವು ವಿಶೇಷವಾಗಿ ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಪೊಲೀಸ್ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತೇವೆ. ನಾನು ಇಂದು ನಮ್ಮ ಇಂತಹ ಪೊಲೀಸ್ ಸ್ನೇಹಿತರ ಕುಟುಂಬದವರನ್ನು ಕೂಡಾ ನೆನಪಿಸಿಕೊಳ್ಳಲು ಬಯಸುತ್ತೇನೆ. ಕುಟುಂಬದ ಸಹಕಾರ ಮತ್ತು ತ್ಯಾಗ ಇಲ್ಲದಿದ್ದರೆ ಇಂತಹ ಕಠಿಣ ಸೇವೆ ಬಹಳವೇ ಕಷ್ಟವಾಗುತ್ತದೆ. ಪೊಲೀಸ್ ಸೇವೆಗೆ ಸಂಬಂಧಿಸಿದಂತೆ ಮನ್ ಕಿ ಬಾತ್ ಶ್ರೋತೃಗಳಿಗೆ ನಾನು ಮತ್ತೊಂದು ಮಾತ ಹೇಳಲು ಬಯಸುತ್ತೇನೆ. ಸೇನೆ ಮತ್ತು ಪೊಲೀಸ್ ಸೇವೆಗಳು ಕೇವಲ ಪುರುಷರಿಗಾಗಿ ಮಾತ್ರಾ ಎಂಬ ನಂಬಿಕೆ ಒಂದು ಕಾಲದಲ್ಲಿತ್ತು, ಆದರೆ ಇಂದು ಹಾಗಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಮಹಿಳಾ ಪೊಲಿಸ್ ಸಿಬ್ಬಂದಿಯ ಸಂಖ್ಯೆ ದ್ವಿಗುಣವಾಗಿದೆ ಎಂದು Bureau of Police Research and Development ನ ಅಂತಿ ಸಂಖ್ಯೆ ಹೇಳುತ್ತದೆ. 2014 ರಲ್ಲಿ ಈ ಸಂಖ್ಯೆ ಸುಮಾರು 1 ಲಕ್ಷ 5 ಸಾವಿರವಿತ್ತು 2020 ರಲ್ಲಿ ಈ ಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ ಮತ್ತು ಈ ಸಂಖ್ಯೆ ಈಗ ಸುಮಾರು 2 ಲಕ್ಷ 15 ಸಾವಿರ ತಲುಪಿದೆ. Central Armed Police Forces ನಲ್ಲಿ ಕೂಡಾ ಕಳೆದ ಏಳು ವರ್ಷಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ನಾನು ಕೇವಲ ಸಂಖ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ, ಇಂದು ದೇಶದ ಹೆಣ್ಣುಮಕ್ಕಳು ಕಠಿಣ ಡ್ಯೂಟಿ ಕೂಡಾ ಸಂಪೂರ್ಣ ಸಾಮರ್ಥ್ಯ ಮತ್ತು ಭರವಸೆಯಿಂದ ಮಾಡುತ್ತಿದ್ದಾರೆ. ಉದಾಹರಣೆಗೆ, ಈಗ ಕೆಲವು ಹೆಣ್ಣು ಮಕ್ಕಳು ಅತ್ಯಂತ ಕಠಿಣವೆಂದು ನಂಬಲಾಗುವ ಒಂದು Specialized Jungle Warfare Commandos ನ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಇವರು ನಮ್ಮ Cobra Battalion ನ ಭಾಗವಾಗುತ್ತಾರೆ.
ಸ್ನೇಹಿತರೇ, ಇಂದು ನಾವು ವಿಮಾನ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳಿಗೆ ಹೋದಾಗ ಅಥವಾ ಸರ್ಕಾರಿ ಕಚೇರಿಗಳನ್ನು ನೋಡಿದಾಗ, ಅಂತಹ ಕಡೆಗಳಲ್ಲಿ CISF ನ ಧೈರ್ಯಶಾಲಿ ಮಹಿಳೆಯರು ಪ್ರತಿಯೊಂದು ಸೂಕ್ಷ್ಮ ಸ್ಥಳದ ಕಾವಲು ಕೆಲಸದಲ್ಲಿ ನಿರತರಾಗಿರುವುದು ಕಂಡು ಬರುತ್ತದೆ. ಇದರ ಅತ್ಯಂತ ಸಕಾರಾತ್ಮಕ ಪರಿಣಾಮವು ನಮ್ಮ ಪೊಲೀಸ್ ಪಡೆ ಹಾಗೂ ಸಮಾಜದ ನೈತಿಕತೆಯ ಮೇಲೂ ಕೂಡಾ ಉಂಟಾಗಿದೆ. ಮಹಿಳಾ ಭದ್ರತಾ ಸಿಬ್ಬಂದಿಯ ಉಪಸ್ಥಿತಿ ಸಹಜವಾಗಿಯೇ ಜನರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಅವರು ಸಹಜವಾಗಿಯೇ ಅವರೊಂದಿಗೆ ಸಂಪರ್ಕದ ಅನಿಸಿಕೆ ಹೊಂದುತ್ತಾರೆ. ನಮ್ಮ ಈ ಮಹಿಳಾ ಪೊಲೀಸ್ ಸಿಬ್ಬಂದಿ ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮಾದರಿ ಆಗುತ್ತಿದ್ದಾರೆ. ಶಾಲೆಗಳು ತೆರೆದ ನಂತರ ತಮ್ಮ ಕ್ಷೇತ್ರಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡಬೇಕೆಂದು ಮತ್ತು ಅಲ್ಲಿನ ಮಕ್ಕಳೊಂದಿಗೆ ಮಾತನಾಡಬೇಕೆಂದು ನಾನು ಮಹಿಳಾ ಪೊಲೀಸ್ ಸಿಬ್ಬಂದಿಯಲ್ಲಿ ಮನವಿ ಮಾಡುತ್ತಿದ್ದೇನೆ. ಈ ರೀತಿ ಮಾತುಕತೆ ನಡೆಸುವುದರಿಂದ ನಮ್ಮ ಹೊಸ ಪೀಳಿಗೆಗೆ ಹೊಸದೊಂದು ಮಾರ್ಗ ದೊರೆಯುತ್ತದೆಂಬ ವಿಶ್ವಾಸ ನನಗಿದೆ. ಇಷ್ಟೇ ಅಲ್ಲದೇ, ಇದರಿಂದಾಗಿ ಪೊಲೀಸರ ಮೇಲೆ ಜನರ ವಿಶ್ವಾಸ ನಂಬಿಕೆಯೂ ಹೆಚ್ಚಾಗುತ್ತದೆ. ಮುಂದೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೊಲೀಸ್ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆಂದು ಮತ್ತು ನಮ್ಮ ದೇಶದ New Age Policing ನ ಮುಂದಾಳತ್ವ ವಹಿಸುತ್ತಾರೆಂದೂ ನಾನು ನಿರೀಕ್ಷಿಸುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೇ, ಕಳೆದ ಕೆಲವು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಬಹಳ ವೇಗವಾಗಿ ಸಾಗುತ್ತಿದೆ ಮತ್ತು ಇದರ ಬಗ್ಗೆ ಮನ್ ಕಿ ಬಾತ್ ನ ಶ್ರೋತ್ರುಗಳು ನನಗೆ ಆಗಾಗ್ಗೆ ಪತ್ರ ಬರೆಯುತ್ತಿರುತ್ತಾರೆ. ಇಂದು ನಾನು ಅಂತಹ ನಮ್ಮ ಯುವಜನತೆ ಮತ್ತು ಚಿಕ್ಕ ಚಿಕ್ಕ ಮಕ್ಕಳ ಕಲ್ಪನೆಯಲ್ಲಿ ಮಿಳಿತವಾಗಿರುವ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅದೆಂದರೆ, ಡ್ರೋನ್ , ಡ್ರೋನ್ ತಂತ್ರಜ್ಞಾನದ ವಿಷಯ. ಕೆಲವು ವರ್ಷಗಳ ಹಿಂದೆ ಡ್ರೋನ್ ಎಂಬ ಹೆಸರು ಕೇಳಿದಾಗ ಜನರ ಮನದಲ್ಲಿ ಮೊದಲಿಗೆ ಯಾವ ಅನಿಸಿಕೆ ಮೂಡುತ್ತಿತ್ತು? ಸೇನೆ, ಶಸ್ತ್ರಾಸ್ತ್ರಗಳು, ಯುದ್ಧಗಳು. ಆದರೆ ಇಂದು ಯಾವುದೇ ವಿವಾಹ ಸಂಬಂಧಿತ ಮೆರವಣಿಗೆ ಅಥವಾ ಸಮಾರಂಭ ನಡೆದಾಗ ನಾವು ಡ್ರೋನ್ ನಿಂದ ಫೋಟೋ ಮತ್ತು ವಿಡಿಯೋ ಮಾಡುತ್ತಿರುವುದನ್ನು ಕಾಣುತ್ತೇವೆ. ಡ್ರೋನ್ ನ ಶ್ರೇಣಿ, ಅದರ ಸಾಮರ್ಥ್ಯ ಕೇವಲ ಇಷ್ಟು ಮಾತ್ರವಲ್ಲ. ಡ್ರೋನ್ ನ ಸಹಾಯದಿಂದ ತನ್ನ ಹಳ್ಳಿಗಳಲ್ಲಿ ಭೂಮಿಯ ಡಿಜಿಟಲ್ ರೆಕಾರ್ಡ್ ತಯಾರಿಸುತ್ತಿರುವ ವಿಶ್ವದ ಮೊದಲ ದೇಶಗಳಲ್ಲಿ ಭಾರತ ಕೂಡಾ ಒಂದೆನಿಸಿದೆ. ಭಾರತ ಡ್ರೋನ್ಅನ್ನು ಸಾಗಾಣಿಕೆಗಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವ್ಯಾಪಕ ವಿಧಾನದಲ್ಲಿ ಕೆಲಸ ಮಾಡುತ್ತಿದೆ. ಅದು ಗ್ರಾಮದಲ್ಲಿ ಕೃಷಿಗಾಗಿ ಅಥವಾ ಮನೆಗಳಿಗಾಗಿ ಸಾಮಾನುಗಳ ವಿತರಣೆಯಾಗಿರಲಿ, ತುರ್ತು ಪರಿಸ್ಥಿತಿಯಲ್ಲಿ ಸಹಾಯ ತಲುಪಿಸುವುದಿರಲಿ, ಅಥವಾ ಕಾನೂನು ಸುವ್ಯವಸ್ಥೆಯ ಮೇಲೆ ನಿಗಾ ವಹಿಸುವುದಿರಲಿ. ಡೋನ್ ನಮ್ಮ ಈ ಅಗತ್ಯಗಳಿಗಾಗಿ ನಿಯೋಜಿಸಲ್ಪಡುವುದನ್ನು ನೋಡುವ ದಿನ ದೂರವೇನಿಲ್ಲ. ಇವುಗಳಲ್ಲಿ ಹೆಚ್ಚಿನವುಗಳನ್ನು ಈಗಾಗಲೇ ಆರಂಭಿಸಲಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಗುಜರಾತ್ ನ ಭಾವನಗರದಲ್ಲಿ ಡ್ರೋನ್ ಮೂಲಕ ಹೊಲಗಳಲ್ಲಿ -ಯೂರಿಯಾ ಸಿಂಪರಣೆ ಮಾಡಲಾಯಿತು. ಕೋವಿಡ್ ಲಸಿಕೆ ಅಭಿಯಾನದಲ್ಲಿ ಕೂಡಾ ಡ್ರೋನ್ ಗಳು ತಮ್ಮ ಪಾತ್ರ ನಿರ್ವಹಿಸುತ್ತಿವೆ. ಇದರ ಒಂದು ಚಿತ್ರಣ ನಮಗೆ ಮಣಿಪುರದಲ್ಲಿ ಕಾಣಸಿಕ್ಕಿತು. ಇಲ್ಲಿ ಒಂದು ದ್ವೀಪಕ್ಕೆಡ್ರೋನ್ ಮೂಲಕ ಲಸಿಕೆ ತಲುಪಿಸಲಾಯಿತು. ತೆಲಂಗಾಣದಲ್ಲಿ ಕೂಡಾ ಡ್ರೋನ್ ಮೂಲಕ ಲಸಿಕೆ ಪೂರೈಕೆಗಾಗಿ ಪ್ರಯತ್ನಗಳು ನಡೆಯುತ್ತಿವೆ. ಇಷ್ಟೇ ಅಲ್ಲದೇ, ಈಗ ಮೂಲ ಸೌಕರ್ಯದ ಅನೇದ ದೊಡ್ಡ ದೊಡ್ಡ ಯೋಜನೆಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಕೂಡಾ ಡ್ರೋನ್ ಬಳಕೆ ಮಾಡಲಾಗುತ್ತಿದೆ. ತನ್ನ ಡ್ರೋನ್ ಸಹಾಯದಿಂದ ಮೀನುಗಾರರ ಜೀವ ಉಳಿಸುವ ಕೆಲಸ ಮಾಡಿದ ಓರ್ವ ಯುವ ವಿದ್ಯಾರ್ಥಿಯ ಬಗ್ಗೆ ಕೂಡಾ ನಾನು ಓದಿದ್ದೇನೆ.
ಸ್ನೇಹಿತರೇ, ಈ ಕ್ಷೇತ್ರದಲ್ಲಿ ಎಷ್ಟೊಂದು ನಿಬಂಧನೆ, ಕಾನೂನು ಮತ್ತು ನಿರ್ಬಂಧಗಳನ್ನು ಹೇರಲಾಗಿತ್ತೆಂದರೆ, ಡ್ರೋನ್ ನ ನಿಜವಾದ ಸಾಮರ್ಥ್ಯದ ಬಳಕೆ ಸಾಧ್ಯವೇ ಆಗುತ್ತಿರಲಿಲ್ಲ. ಅವಕಾಶವಾಗಿ ಕಾಣಬೇಕಿದ್ದ ತಂತ್ರಜ್ಞಾನವನ್ನು ಬಿಕ್ಕಟ್ಟಿನ ರೂಪದಲ್ಲಿ ಕಾಣಲಾಗುತ್ತಿತ್ತು. ನಿಮಗೆ ಯಾವುದೇ ಕೆಲಸಕ್ಕಾಗಿ ಡ್ರೋನ್ ಹಾರಿಸಬೇಕಾದರೆ ಅದಕ್ಕಾಗಿ ಪರವಾನಗಿ ಮತ್ತು ಅನುಮತಿಯ ಎಷ್ಟೊಂದು ಸಮಸ್ಯೆ ಎದುರಾಗುತ್ತಿದ್ದೆಂದರೆ, ಜನರು ಡ್ರೋನ್ ಹೆಸರು ಮಾತ್ರದಿಂದಲೇ ದೂರ ಸರಿಯುತ್ತಿದ್ದರು. ಈ ಮನೋಭಾವವನ್ನು ಬದಲಾಯಿಸಬೇಕೆಂದು ಮತ್ತು ಹೊಸ ಟ್ರೆಂಡ್ ನಮ್ಮದಾಗಿಸಿಕೊಳ್ಳಬೇಕೆಂದು ನಾವು ನಿರ್ಣಯಿಸಿದೆವು. ಆದ್ದರಿಂದ ಈ ವರ್ಷ ಆಗಸ್ಟ್ 25 ರಂದು ದೇಶ ಒಂದು ಹೊಸ ಡ್ರೋನ್ ನೀತಿ ಜಾರಿಗೆ ತಂದಿತು. ಡ್ರೋನ್ ಸಂಬಂಧಿತ ಪ್ರಸ್ತುತ ಮತ್ತು ಭವಿಷ್ಯದ ಸಂಭವನೀಯತೆಗಳಿಗೆ ಅನುಗುಣವಾಗಿ ಈ ನೀತಿಯನ್ನು ಸಿದ್ಧಪಡಿಸಲಾಗಿದೆ. ನ್ಯಾನೊ ಬಹಳಷ್ಟು ಫಾರಂ ಗಳನ್ನು ತುಂಬಬೇಕಿಲ್ಲ, ಮೊದಲಿನಷ್ಟು ಶುಲ್ಕವನ್ನೂ ತುಂಬಬೇಕಿಲ್ಲ. ಹೊಸ ಡ್ರೋನ್ ನೀತಿ ಬಂದಮೇಲೆ ಅನೇಕ ಡ್ರೋನ್ Start-ups ಗಳಲ್ಲಿ ವಿದೇಶೀ ಮತ್ತು ದೇಶೀಯ ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆಂಬ ವಿಷಯ ನಿಮಗೆ ತಿಳಿಸಲು ನನಗೆ ಹರ್ಷವೆನಿಸುತ್ತದೆ. ಅನೇಕ ಕಂಪೆನಿಗಳು ತಯಾರಿಕಾ ಘಟಕಗಳನ್ನು ಕೂಡಾ ಸ್ಥಾಪಿಸುತ್ತಿವೆ. Army, Navy ಮತ್ತು Air Force ಗಳು ಭಾರತೀಯ ಡ್ರೋನ್ ಕಂಪೆನಿಗಳಿಗೆ 500 ಕೋಟಿ ರೂಪಾಯಿಗಿಂತ ಹೆಚ್ಚಿನ ಆರ್ಡರ್ ಕೂಡಾ ನೀಡಿವೆ. ಇದಿನ್ನೂ ಆರಂಭ ಮಾತ್ರ. ನಾವು ಇಲ್ಲಿಗೇ ನಿಲ್ಲಬಾರದು. ನಾವು ಡ್ರೋನ್ ತಂತ್ರಜ್ಞಾನದಲ್ಲಿ ಅಗ್ರ ದೇಶವಾಗಬೇಕು. ಇದಕ್ಕಾಗಿ ಸರ್ಕಾರ ಸಾಧ್ಯವಿರುವ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಿದೆ. ಡ್ರೋನ್ ನೀತಿಯ ನಂತರ ಸೃಷ್ಟಿಯಾದ ಅವಕಾಶಗಳ ಪ್ರಯೋಜನ ಪಡೆದುಕೊಳ್ಳುವ ಕುರಿತು ಖಂಡಿತಾ ಯೋಚಿಸಬೇಕೆಂದು, ಮುಂದೆ ಬರಬೇಕೆಂದು ನಾನು ದೇಶದ ಯುವಜನತೆಯಲ್ಲಿ ಕೇಳುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಉತ್ತರ ಪ್ರದೇಶದ ಮೀರಟ್ ನಿಂದ ಮನ್ ಕಿ ಬಾತ್ ನ ಶ್ರೋತೃಗಳಲ್ಲಿ ಒಬ್ಬರಾದ ಶ್ರೀಮತಿ ಪ್ರಭಾ ಶುಕ್ಲಾ ಅವರು ಸ್ವಚ್ಛತೆಗೆ ಸಂಬಂಧಿಸಿದಂತೆ ನನಗೆ ಒಂದು ಪತ್ರ ಬರೆದಿದ್ದಾರೆ. ಅವರು ಹೀಗೆ ಬರೆದಿದ್ದಾರೆ – “ಭಾರತದಲ್ಲಿ ನಾವೆಲ್ಲರೂ ಹಬ್ಬಗಳಲ್ಲಿ ಸ್ವಚ್ಛತೆಯನ್ನು ಆಚರಿಸುತ್ತೇವೆ. ಹಾಗೆಯೇ ನಾವು ಸ್ವಚ್ಛತೆಯನ್ನು ಪ್ರತಿದಿನದ ಹವ್ಯಾಸವನ್ನಾಗಿ ಮಾಡಿಕೊಂಡರೆ ದೇಶ ಖಂಡಿತವಾಗಿಯೂ ಸ್ವಚ್ಛವಾಗುತ್ತದೆ.” ನನಗೆ ಪ್ರಭಾ ಅವರ ಮಾತುಗಳು ಬಹಳ ಮೆಚ್ಚುಗೆಯಾಯಿತು. ವಾಸ್ತವದಲ್ಲಿ, ಎಲ್ಲಿ ಸ್ವಚ್ಛತೆಯಿರುತ್ತದೆಯೋ ಅಲ್ಲಿ ಆರೋಗ್ಯವಿರುತ್ತದೆ ಮತ್ತು ಎಲ್ಲಿ ಆರೋಗ್ಯವಿರುತ್ತದೆಯೋ ಅಲ್ಲಿ ಸಾಮರ್ಥ್ಯ ಇರುತ್ತದೆ ಹಾಗೆಯೇ ಸಮೃದ್ಧಿಯೂ ಇರುತ್ತದೆ. ಆದ್ದರಿಂದಲೇ ಸ್ವಚ್ಛ ಭಾರತ ಅಭಿಯಾನಕ್ಕೆ ದೇಶ ಇಷ್ಟೊಂದು ಒತ್ತು ನೀಡುತ್ತಿದೆ.
ಸ್ನೇಹಿತರೇ, ರಾಂಚಿಯಲ್ಲಿನ ಒಂದು ಗ್ರಾಮ ಸಪಾರೋಮ್ನಯಾಸರಾಯ್ ಬಗ್ಗೆ ತಿಳಿದು ಬಹಳ ಸಂತೋಷವೆನಿಸಿತು. ಈ ಗ್ರಾಮದಲ್ಲಿ ಒಂದು ಕೆರೆ ಇತ್ತು. ಆದರೆ ಜನರು ಈ ಕೆರೆಯಪ್ರದೇಶವನ್ನು ಬಯಲು ಶೌಚಕ್ಕಾಗಿ ಉಪಯೋಗಿಸಲು ಆರಂಭಿಸಿದ್ದರು. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾದಾಗ ಗ್ರಾಮದ ಜನರು ಗ್ರಾಮವನ್ನು ಸ್ವಚ್ಛ ಮತ್ತು ಸುಂದರಗೊಳಿಸ ಬೇಕೆಂದು ಯೋಚಿಸಿದರು. ಅನಂತರ ಏನಾಯಿತು ಗೊತ್ತೇ, ಎಲ್ಲರೂ ಸೇರಿ ಕೆರೆಯಿದ್ದ ಜಾಗವನ್ನು ಸುಂದರವಾದ ಉದ್ಯಾನವನ ನಿರ್ಮಿಸಿದರು. ಇದು ಆ ಸ್ಥಳ ಜನರಿಗೆ, ಮಕ್ಕಳಿಗೆ, ಒಂದು ಸಾರ್ವಜನಿಕ ಸ್ಥಳವಾಗಿದೆ. ಇದರಿಂದಾಗಿ ಇಡೀ ಗ್ರಾಮದ ಜನಜೀವನದಲ್ಲಿ ಬಹು ದೊಡ್ಡ ಪರಿವರ್ತನೆಯಾಗಿದೆ. ನಾನು ನಿಮಗೆ ಛತ್ತೀಸ್ ಗಢದ ದೇವೂರ್ ಗ್ರಾಮದ ಮಹಳೆಯರ ಬಗ್ಗೆ ಕೂಡಾ ಹೇಳಲು ಬಯಸುತ್ತೇನೆ. ಇಲ್ಲಿನ ಮಹಿಳೆಯರು ಒಂದು ಸ್ವ ಸಹಾಯ ಗುಂಪು ನಡೆಸುತ್ತಾರೆ ಮತ್ತು ಒಗ್ಗೂಡಿ ಗ್ರಾಮದ ಚೌಕಗಳು, ವೃತ್ತಗಳು, ರಸ್ತೆಗಳು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ.
ಸ್ನೇಹಿತರೇ, ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ರಾಮ್ವೀರ್ ಅವರನ್ನು ಜನರು ‘ಪಾಂಡ್ ಮ್ಯಾನ್’ ಎಂಬ ಹೆಸರಿನಿಂದ ಗುರುತಿಸುತ್ತಾರೆ.
ರಾಮ್ವೀರ್ ಅವರು ಮೆಕ್ಯಾನಿಕಲ್ ಇಂಜನಿಯರಿಂಗ್ ಪದವಿ ಪಡೆದ ನಂತರ, ಉದ್ಯೋಗ ಮಾಡುತ್ತಿದ್ದರು. ಆದರೆ ಅವರ ಮನಸ್ಸಿನಲ್ಲಿ ಸ್ವಚ್ಛತೆಯ ಕುರಿತು ಬೇರೊಂದು ಯೋಚನೆ ಮೂಡಿತು, ಅವರು ತಾವು ಮಾಡುತ್ತಿದ್ದ ಉದ್ಯೋಗವನ್ನು ತೊರೆದು, ಕೆರೆಗಳನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ರಾಮ್ವೀರ್ ಅವರು ಇದುವರೆಗೂ ಹಲವು ಕೆರೆಗಳನ್ನು ಸ್ವಚ್ಛಗೊಳಿಸಿದ್ದಾರೆ ಮತ್ತು ಅವುಗಳನ್ನು ಪುನರುಜ್ಜೀವಗೊಳಿಸಿದ್ದಾರೆ.
ಸ್ನೇಹಿತರೇ, ಪ್ರತಿಯೊಬ್ಬ ನಾಗರಿಕನೂ ಸ್ವಚ್ಛತೆಯನ್ನು ತನ್ನ ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರಾ ಸ್ವಚ್ಛತೆಯ ಪ್ರಯತ್ನ ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ. ಈಗ ದೀಪಾವಳಿ ಹಬ್ಬದ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇವೆ. ಆದರೆ ಈ ಸಂದರ್ಭದಲ್ಲಿ ನಾವು ನಮ್ಮ ಮನೆಯ ಸ್ವಚ್ಛತೆಯ ಜೊತೆಗೆ ನಮ್ಮ ಸುತ್ತಮುತ್ತಲು ಕೂಡಾ ಸ್ವಚ್ಛವಾಗಿರಬೇಕೆಂದು ನಾವು ಗಮನ ಹರಿಸಬೇಕು. ನಾವು ನಮ್ಮ ಮನೆಯನ್ನೇನೋ ಸ್ವಚ್ಛಗೊಳಿಸುತ್ತೇವೆ ಆದರೆ ನಮ್ಮ ಮನೆಯ ಕಸಕಡ್ಡಿ ನಮ್ಮ ಮನೆಯ ಹೊರಗಡೆ, ರಸ್ತೆಗಳ ಮೇಲೆ ಬಿಸಾಡಬಾರದು. ಅಂದಹಾಗೆ, ನಾನು ಸ್ವಚ್ಛತೆಯ ಕುರಿತು ಮಾತನಾಡುವಾಗ ದಯವಿಟ್ಟು ಸಿಂಗಲ್ ಯೂಸ್ಡ್ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕೆನ್ನುವ ವಿಷಯ ದಯವಿಟ್ಟು ಮರೆಯಬಾರದು. ಹಾಗಾದರೆ ಬನ್ನಿ, ಸ್ವಚ್ಛ ಭಾರತ್ ಅಭಿಯಾನದ ಉತ್ಸಾಹವನ್ನು ಕಡಿಮೆಯಾಗಲು ಬಿಡುವುದಿಲ್ಲವೆಂಬ ಸಂಕಲ್ಪವನ್ನು ನಾವು ಕೈಗೊಳ್ಳೋಣ. ನಾವೆಲ್ಲರೂ ಒಟ್ಟಾಗಿ ಸೇರಿ ನಮ್ಮ ದೇಶವನ್ನು ಸಂಪೂರ್ಣವಾಗಿ ಸ್ವಚ್ಛವಾಗಿಸೋಣ ಮತ್ತು ಸ್ವಚ್ಛವಾಗಿ ಇರಿಸೋಣ.
ನನ್ನ ಪ್ರೀತಿಯ ದೇಶಬಾಂಧವರೇ, ಇಡೀ ಅಕ್ಟೋಬರ್ ತಿಂಗಳು ಹಬ್ಬಗಳ ಸಂಭ್ರಮದಿಂದ ರಂಗು ರಂಗಾಗಿದೆ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ದೀಪಾವಳಿಯ ನಂತರ ಗೋವರ್ಧನ್ ಪೂಜೆ ನಂತರ ಭಾಯಿ-ದೂಜ್ ಹಬ್ಬಗಳು ಬರಲಿವೆ. ಇವುಗಳ ಜೊತೆಯಲ್ಲೇ ಬರಲಿದೆ ಛತ್ ಪೂಜೆ. ನವೆಂಬರ್ ತಿಂಗಳಿನಲ್ಲಿ ಗುರುನಾನಕ್ ದೇವ್ ಅವರ ಜಯಂತಿಯೂ ಇದೆ. ಇಷ್ಟೊಂದು ಹಬ್ಬಗಳು ಒಟ್ಟೊಟ್ಟಾಗಿ ಬರುತ್ತವೆಂದರೆ ಅವುಗಳಿಗಾಗಿ ಸಿದ್ಧತೆಯೂ ಬಹಳ ಮುಂಚಿನಂದಲೇ ಆರಂಭವಾಗಿಬಿಡುತ್ತದೆ. ನೀವೆಲ್ಲರೂ ಈಗಿನಿಂದಲೇ ನಿಮ್ಮ ಖರೀದಿಯ ಯೋಜನೆಯಲ್ಲಿ ತೊಡಗಿರುತ್ತೀರಲ್ಲವೇ, ಆದರೆ, ಖರೀದಿ ಎಂದರೆ ವೋಕಲ್ ಫಾರ್ ಲ್ಲೋಕಲ್ ಎನ್ನುವುದು ನಿಮಗೆ ನೆನಪಿದೆಯಲ್ಲವೇ. ನೀವು ಸ್ಥಳೀಯ ವಸ್ತುಗಳನ್ನು ಖರೀದಿಸಿದಲ್ಲಿ, ನಿಮ್ಮ ಹಬ್ಬವು ಸಂಭ್ರಮದಿಂದ ಕೂಡಿರುತ್ತದೆ ಹಾಗೆಯೇ ಯಾರೋ ಒಬ್ಬ ಬಡ ಸೋದರ- ಸೋದರಿ, ಓರ್ವ ಕುಶಲಕರ್ಮಿ, ಓರ್ವ ನೇಕಾರನ ಮನೆಯಲ್ಲಿ ಕೂಡಾ ಹಬ್ಬದ ಬೆಳಕು ಮೂಡುತ್ತದೆ. ನಾವೆಲ್ಲರೂ ಸೇರಿ ಆರಂಭಿಸಿದ ಅಭಿಯಾನ ಈ ಬಾರಿ ಹಬ್ಬಗಳ ಸಾಲಿನಲ್ಲಿ ಮತ್ತಷ್ಟು ಬಲಿಷ್ಠವಾಗುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ನೀವಿರುವ ಪ್ರದೇಶದಲ್ಲಿ ದೊರೆಯುವ ಸ್ಥಳೀಯ ವಸ್ತುಗಳನ್ನು ಖರೀದಿಸಿ ಹಾಗೆಯೇ ಅವುಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ. ನಿಮ್ಮ ಜೊತೆಯಲ್ಲಿರುವ ಜನರಿಗೆ ಕೂಡಾ ಹೇಳಿ. ಮುಂದಿನ ತಿಂಗಳು ನಾವು ಮತ್ತೆ ಭೇಟಿಯಾಗೋಣ. ಹೀಗೆಯೇ ಮತ್ತಷ್ಟು ವಿಷಯಗಳ ಬಗ್ಗೆ ಮಾತನಾಡೋಣ.
ನಿಮಗೆಲ್ಲರಿಗೂ ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಒಂದು ತುರ್ತು ಕೆಲಸಕ್ಕಾಗಿ ನಾನು ಅಮೆರಿಕಾಗೆ ಹೋಗಬೇಕಾಗಿ ಬಂದಿದೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ ಅಲ್ಲಿಗೆ ಹೋಗುವುದಕ್ಕೂ ಮೊದಲೇ ಮನದ ಮಾತನ್ನು ಧ್ವನಿಮುದ್ರಿಸಲು ನಾನು ಯೋಚಿಸಿದೆ. ಸೆಪ್ಟೆಂಬರ್ ನಲ್ಲಿ ಮನದ ಮಾತು ಯಾವ ದಿನದಂದು ಇದೆಯೋ ಆದಿನ ಮತ್ತೊಂದು ಮಹತ್ವಪೂರ್ಣ ದಿನವಾಗಿದೆ. ಅಂದಹಾಗೆ, ನಾವು ಅನೇಕ ದಿನಗಳನ್ನು ನೆನಪಿಸಿಕೊಳ್ಳುತ್ತೇವೆ; ಬೇರೆ ಬೇರೆ ರೀತಿಯ ದಿನಗಳನ್ನು ಆಚರಿಸುತ್ತೇವೆ; ನಿಮ್ಮ ಮನೆಯಲ್ಲಿ ಯುವಕ– ಯುವತಿಯರು ಇದ್ದರೆ ಅವರನ್ನು ಕೇಳಿದರೆ, ಇಡೀ ವರ್ಷದಲ್ಲಿ ಯಾವ ದಿನ ಎಂದು ಬರುತ್ತದೆ ಎಂದು ಇಡೀ ಪಟ್ಟಿಯನ್ನು ನೀಡುತ್ತಾರೆ. ಆದರೆ ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ದಿನವಿದೆ ಮತ್ತು ಶತಮಾನಗಳಿಂದ ನಾವು ಯಾವ ಪರಂಪರೆಯೊಂದಿಗೆ ಬೆಸೆದುಕೊಂಡಿದ್ದೇವೆಯೋ ಆ ಪರಂಪರೆಯೊಂದಿಗೆ ಅದು ಕೂಡಿಕೊಂಡಿದೆ. ಅದು ಯಾವುದು ಅಂದರೆ ‘ವಲ್ರ್ಡ್ ರಿವರ್ ಡೇ’ ಅಂದರೆ ವಿಶ್ವ ನದಿ ದಿವಸ. ನಮ್ಮಲ್ಲಿ ಒಂದು ಮಾತಿದೆ:
ಪಿಬಂತಿ ನದ್ಯಃ ಸ್ವಯಮೇವ ನಾಂಭಃ
ಇದರ ಅರ್ಥ – ನದಿ ತನ್ನ ನೀರನ್ನು ತಾನೇ ಕುಡಿಯುವುದಿಲ್ಲ ಬದಲಾಗಿ ಪರರಿಗೆ ನೀಡುತ್ತದೆ ಎಂದು. ನಮಗೆ ನದಿಯು ಒಂದು ಭೌತಿಕ ವಸ್ತುವಲ್ಲ; ನಮಗೆ ನದಿಯು ಒಂದು ಜೀವಸೆಲೆ. ಆದ್ದರಿಂದಲೇ ನಾವು ನದಿಗಳನ್ನು ತಾಯಿ ಎಂದು ಕರೆಯುತ್ತೇವೆ. ನಮ್ಮಲ್ಲಿಯ ಹಲವಾರು ಪರ್ವಗಳು, ಹಬ್ಬಗಳು, ಉತ್ಸವಗಳು, ಆಚರಣೆಗಳು ಇವೆಲ್ಲವೂ ನಮ್ಮ ಈ ತಾಯಂದಿರ ಮಡಿಲಲ್ಲಿ ನಡೆಯುತ್ತವೆ. ಮಾಘ ಮಾಸ ಬಂದಾಗ, ನಮ್ಮ ದೇಶದಲ್ಲಿ ಅನೇಕ ಜನರು ಒಂದು ತಿಂಗಳು ಪೂರ್ತಿ ಗಂಗಾ ಮಾತೆ ಅಥವಾ ಇನ್ನಿತರ ನದಿಯ ದಡದಲ್ಲಿ ಕಳೆಯುತ್ತಾರೆ ಎಂದು ನಿಮಗೆಲ್ಲಾ ಗೊತ್ತೇ ಇದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಸ್ನಾನ ಮಾಡುವಾಗಲೂ ಸಹ ನದಿಗಳನ್ನು ಸ್ಮರಿಸುವ ಪದ್ಧತಿ ಇತ್ತು. ಈಗ ಈ ಪದ್ಧತಿ ಇಲ್ಲ ಅಥವಾ ಸ್ವಲ್ಪ ಮಾತ್ರವೇ ಉಳಿದುಕೊಂಡಿದೆ, ಆದರೆ ಈ ಪದ್ಧತಿಯು ಬೆಳಗ್ಗೆ ಸ್ನಾನ ಮಾಡುವ ಸಮಯದಲ್ಲೇ ಮಾನಸಿಕವಾಗಿ ವಿಶಾಲ ಭಾರತದ ಒಂದು ಯಾತ್ರೆಯನ್ನು ಮಾಡಿಸುತ್ತಿತ್ತು. ದೇಶದ ಮೂಲೆ ಮೂಲೆಯನ್ನೂ ಜೋಡಿಸುವ ಪ್ರೇರಣೆ ಆಗುತ್ತಿತ್ತು. ಅದೇನೆಂದರೆ ಭಾರತದಲ್ಲಿ ಸ್ನಾನ ಮಾಡುವ ಸಮಯದಲ್ಲಿ ಒಂದು ಶ್ಲೋಕವನ್ನು ಪಠಿಸುವ ಪರಿಪಾಠ ಇತ್ತು, ಅದು
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ !
ನರ್ಮದೇ ಸಿಂಧು ಕಾವೇರೀ ಜಲೇ ಅಸ್ಮಿನ್ ಸನ್ನಿಧಿಂ ಕುರು !!
ಹಿಂದೆ ನಮ್ಮ ಮನೆಗಳಲ್ಲಿ ಕುಟುಂಬದ ಹಿರಿಯರು ಈ ಶ್ಲೋಕವನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸುತ್ತಿದ್ದರು. ಇದರಿಂದ ನಮ್ಮ ದೇಶದ ನದಿಗಳ ಬಗ್ಗೆ ಗೌರವ ಮೂಡುತ್ತಿತ್ತು. ವಿಶಾಲ ಭಾರತದ ಒಂದು ನಕ್ಷೆ ಮನದಲ್ಲಿ ಅಚ್ಚೊತ್ತುತ್ತಿತ್ತು, ನದಿಗಳ ಜೊತೆ ಬಾಂಧವ್ಯ ಬೆಳೆಯುತ್ತಿತ್ತು. ಯಾವ ನದಿಯನ್ನು ತಾಯಿಯ ರೂಪದಲ್ಲಿ ನಾವು ತಿಳಿಯುತ್ತೇವೆಯೋ, ನೋಡುತ್ತೇವೆಯೋ, ಬದುಕುತ್ತೇವೆಯೋ ಅಂತಹ ನದಿಗಳ ಬಗೆಗೆ ಒಂದು ಗೌರವ ಭಾವನೆ ಮೂಡುತ್ತಿತ್ತು. ಇದೊಂದು ಸಂಸ್ಕಾರ ನೀಡುವ ಪ್ರಕ್ರಿಯೆಯಾಗಿತ್ತು.
ಮಿತ್ರರೇ, ನಾವು ನಮ್ಮ ದೇಶದ ನದಿಗಳ ಮಹಿಮೆಗಳ ಬಗ್ಗೆ ಮಾತನಾಡುತ್ತಿರುವಾಗ ಸ್ವಾಭಾವಿಕವಾಗಿ ಪ್ರತಿಯೊಬ್ಬರೂ ಒಂದು ಪ್ರಶ್ನೆಯನ್ನು ಕೇಳುತ್ತಾರೆ, ಪ್ರಶ್ನಿಸುವ ಹಕ್ಕೂ ಕೂಡ ಇದೆ – ಮತ್ತು ಇದಕ್ಕೆ ಉತ್ತರಿಸುವುದು ನಮ್ಮ ಜವಾಬ್ದಾರಿಯೂ ಕೂಡ ಆಗಿದೆ. “ನೀವು ನದಿಗಳನ್ನು ಕುರಿತು ಇಷ್ಟೊಂದು ಹಾಡಿ ಹೊಗಳುತ್ತಿದ್ದೀರಿ, ನದಿಯನ್ನು ತಾಯಿ ಎಂದು ಕರೆಯುತ್ತೀರಿ, ಹಾಗಿದ್ದ ಮೇಲೆ ಈ ನದಿಗಳು ಇಷ್ಟೊಂದು ಕಲುಷಿತವಾಗುತ್ತಿವೆ ಏಕೆ?” ಎನ್ನುವುದೇ ಯಾರಾದರೂ ಕೇಳಬಹುದಾದ ಆ ಪ್ರಶ್ನೆ. ನಮ್ಮ ಶಾಸ್ತ್ರಗಳಲ್ಲಂತೂ ಅಲ್ಪ ಪ್ರಮಾಣದಲ್ಲಿ ನದಿಗಳನ್ನು ಕಲುಷಿತಗೊಳಿಸುವುದೂ ಕೂಡ ತಪ್ಪು ಎಂದು ಹೇಳಲಾಗಿದೆ. ನಮ್ಮ ಭಾರತದ ಪಶ್ಚಿಮ ಭಾಗ, ಅದರಲ್ಲೂ ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಅಪಾರವಾದ ನೀರಿನ ಕೊರತೆಯಿದೆ ಎಂದು ನಿಮಗೆ ತಿಳಿದಿದೆ. ಅನೇಕ ಬಾರಿ ಬರಗಾಲ ಬರುತ್ತದೆ. ಹಾಗಾಗಿಯೇ ಅಲ್ಲಿನ ಸಾಮಾಜಿಕ ಜೀವನದಲ್ಲಿ ಒಂದು ಹೊಸ ಸಂಪ್ರದಾಯ ಬೆಳೆದು ಬಂದಿದೆ. ಗುಜರಾತ್ ನಲ್ಲಿ ಮಳೆ ಪ್ರಾರಂಭ ಆಗುತ್ತಿದ್ದಂತೆ ಅಲ್ಲಿ ಜಲ್–ಜೀಲ್ನಿ ಏಕಾದಶಿಯನ್ನು ಆಚರಿಸುತ್ತಾರೆ. ಅಂದರೆ ಇಂದಿನ ಕಾಲದಲ್ಲಿ ನಾವು ಯಾವುದನ್ನು ಮಳೆ ನೀರು ಕೊಯ್ಲು ಎಂದು ಕರೆಯುತ್ತೇವೆಯೋ ಅದು. ಪ್ರತಿಯೊಂದು ಮಳೆ ಹನಿಯನ್ನು ಕೂಡ ತಮ್ಮೊಳಗೆ ಹಿಡಿದಿಟ್ಟುಕೊಳ್ಳುವುದು. ಅದೇ ರೀತಿ ಮಳೆಗಾಲದ ನಂತರ ಬಿಹಾರ ಮತ್ತು ಪೂರ್ವ ಭಾಗಗಳಲ್ಲಿ ಛಟ್ ಪರ್ವವನ್ನು ಆಚರಿಸುತ್ತಾರೆ. ಛಟ್ ಉತ್ಸವವನ್ನು ಮುಂದಿಟ್ಟುಕೊಂಡು ಈಗಾಗಲೇ ನದೀ ತೀರಗಳು ಮತ್ತು ಸ್ನಾನ ಘಟ್ಟಗಳನ್ನು ಸ್ವಚ್ಛಗೊಳಿಸುವ ಮತ್ತು ದುರಸ್ತಿ ಮಾಡುವ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎನ್ನುವ ನಂಬಿಕೆ ನನಗಿದೆ. ನದಿಗಳನ್ನು ಸ್ವಚ್ಚಗೊಳಿಸುವ ಮತ್ತು ಅವುಗಳನ್ನು ಮಾಲಿನ್ಯಮುಕ್ತಗೊಳಿಸುವ ಕಾರ್ಯವನ್ನು ಎಲ್ಲರ ಪ್ರಯತ್ನ ಮತ್ತು ಸಹಯೋಗದೊಂದಿಗೆ ನಾವು ಮಾಡಬಹುದಾಗಿದೆ. ನಮಾಮಿ ಗಂಗೇ ಯೋಜನೆ ಈಗಲೂ ಮುಂದುವರೆಯುತ್ತಿದೆ ಎಂದರೆ ಇದರಲ್ಲಿ ಎಲ್ಲಾ ಜನರ ಪ್ರಯತ್ನ, ಒಂದು ರೀತಿಯಲ್ಲಿ ಜನ ಜಾಗೃತಿ, ಜನಾಂದೋಲನ ಇವುಗಳ ಪಾತ್ರ ದೊಡ್ಡದಿದೆ.
ಗೆಳೆಯರೇ, ನದಿಗಳ ವಿಷಯ ಬಂದಾಗ, ಗಂಗಾ ಮಾತೆಯ ಬಗ್ಗೆ ಮಾತನಾಡುತ್ತಿರುವಾಗ ಮತ್ತೊಂದು ವಿಚಾರದ ಕಡೆಗೆ ನಿಮ್ಮ ಗಮನ ಸೆಳೆಯಲು ನನಗೆ ಮನಸ್ಸಾಗುತ್ತಿದೆ. ನಮಾಮಿ ಗಂಗೆಯ ವಿಷಯ ಮಾತನಾಡುತ್ತಿರುವಾಗ ಒಂದು ವಿಚಾರದ ಬಗ್ಗೆ ನಿಮ್ಮ ಗಮನ ಹರಿದಿರಬಹುದು. ನಮ್ಮ ಯುವಕರಿಗಂತೂ ಖಂಡಿತವಾಗಿಯೂ ಗಮನಕ್ಕೆ ಬಂದಿರುತ್ತದೆ. ಇತ್ತೀಚಿಗೆ ಒಂದು ವಿಶೇಷವಾದ ಇಲೆಕ್ಟ್ರಾನಿಕ್-ಹರಾಜು ಪ್ರಕ್ರಿಯೆ ನಡೆಯುತ್ತಿದೆ. ನನಗೆ ಕಾಲ ಕಾಲಕ್ಕೆ ಜನರಿಂದ ದೊರಕಿರುವ ಉಡುಗೊರೆಗಳ ಇಲೆಕ್ಟ್ರಾನಿಕ್-ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಹರಾಜಿನಿಂದ ಎಷ್ಟು ಹಣ ಸಂಗ್ರಹವಾಗುತ್ತದೆಯೋ ಅದನ್ನು ನಮಾಮಿ ಗಂಗೇ ಅಭಿಯಾನಕ್ಕಾಗಿಯೇ ಸಮರ್ಪಿಸಲಾಗುತ್ತಿದೆ. ಈ ಅಭಿಯಾನವು, ನೀವು ಅತ್ಯಂತ ಆತ್ಮೀಯತೆಯಿಂದ ನನಗೆ ಉಡುಗೊರೆ ಕೊಡುವ ಆ ಭಾವನೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ.
ಸ್ನೇಹಿತರೇ, ದೇಶದೆಲ್ಲೆಡೆ ನದಿಗಳನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ, ನೀರಿನ ಸ್ವಚ್ಚತೆಗಾಗಿ ಸರ್ಕಾರ ಮತ್ತು ಸಮಾಜಸೇವಾ ಸಂಘಟನೆಗಳು ನಿರಂತರವಾಗಿ ಏನಾದರೂ ಮಾಡುತ್ತಲೇ ಇರುತ್ತವೆ. ಇದು ಇವತ್ತಿನದ್ದಲ್ಲ, ದಶಕಗಳಿಂದ ನಡೆಯುತ್ತಲೇ ಬಂದಿದೆ. ಕೆಲವು ಜನರಂತೂ ಇಂತಹ ಕೆಲಸಗಳಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುತ್ತಾರೆ. ಇದೇ ಪರಂಪರೆ, ಪ್ರಯತ್ನ, ಇದೇ ಗೌರವ ನಮ್ಮ ನದಿಗಳನ್ನು ಉಳಿಸುತ್ತಾ ಬಂದಿವೆ. ಭಾರತ ದೇಶದ ಯಾವುದೇ ಮೂಲೆಯಿಂದ ಇಂತಹ ಸಮಾಚಾರಗಳು ನನ್ನ ಕಿವಿಗೆ ತಲುಪಿದಾಗ ಇಂತಹ ಕೆಲಸಗಳನ್ನು ಮಾಡುತ್ತಿರುವ ಜನರ ಬಗ್ಗೆ ದೊಡ್ಡ ಗೌರವದ ಭಾವನೆ ನನ್ನ ಮನದಲ್ಲಿ ಮೂಡುತ್ತದೆ ಮತ್ತು ಆ ಮಾತುಗಳನ್ನು ನಿಮ್ಮೊಂದಿಗೆ ಹೇಳಬೇಕು ಎಂದು ನನ್ನ ಮನಸ್ಸಿಗೆ ಅನ್ನಿಸುತ್ತದೆ. ನೋಡಿ, ನಿಮಗೆ ತಮಿಳುನಾಡಿನ ವೆಲ್ಲೂರು ಮತ್ತು ತಿರುವಣ್ಣಾಮಲೈ ಜಿಲ್ಲೆಗಳ ಒಂದು ಉದಾಹರಣೆ ಕೊಡಲು ಬಯಸುತ್ತೇನೆ. ಇಲ್ಲಿ ನಾಗಾ ನದಿ ಎಂಬ ನದಿ ಹರಿಯುತ್ತದೆ. ಈ ನಾಗಾ ನದಿಯು ಬಹಳಷ್ಟು ವರ್ಷಗಳ ಹಿಂದೆ ಒಣಗಿಹೋಗಿತ್ತು. ಇದೇ ಕಾರಣದಿಂದಾಗಿ ಅಲ್ಲಿನ ಭೂಮಿಯಲ್ಲಿ ಅಂತರ್ಜಲ ಮಟ್ಟ ಕೂಡ ತುಂಬಾ ಕೆಳಗೆ ಹೋಗಿತ್ತು. ಆದರೆ, ಅಲ್ಲಿನ ಮಹಿಳೆಯರು ತಮ್ಮ ನದಿಯನ್ನು ಪುನರುಜ್ಜೀವನಗೊಳಿಸಲು ಸಂಕಲ್ಪ ಮಾಡಿದರು. ಆಮೇಲೇನು? ಅವರು ಜನರನ್ನು ಸೇರಿಸಿದರು, ಜನರ ಸಹಭಾಗಿತ್ವದಲ್ಲಿ ನಾಲೆಗಳನ್ನು ಅಗೆದರು, ಚೆಕ್ ಡ್ಯಾಮ್ ನಿರ್ಮಿಸಿದರು, ನೀರನ್ನು ಭೂಮಿಗೆ ಸೇರಿಸಲು ಇಂಗು ಗುಂಡಿಗಳನ್ನು ತೋಡಿದರು. ಇಂದು ಆ ನದಿ ನೀರಿನಿಂದ ತುಂಬಿದೆ ಎಂದು ತಿಳಿದರೆ ನಿಮಗೂ ಸಹ ಸಂತಸವಾಗುತ್ತದೆ ಮಿತ್ರರೇ. ಒಂದು ಬಾರಿ ನದಿ ನೀರಿನಿಂದ ತುಂಬಿದಾಗ ಅದು ಮನಸ್ಸಿಗೆ ಎಂತಹ ಸುಖದ ಅನುಭವ ನೀಡುತ್ತದೆ ಎನ್ನುವುದನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸಿದ್ದೇನೆ.
ಯಾವ ಸಬರಮತಿ ನದಿಯ ದಂಡೆಯಲ್ಲಿ ಮಹಾತ್ಮಾ ಗಾಂಧಿಯವರು ಸಬರಮತಿ ಆಶ್ರಮವನ್ನು ಕಟ್ಟಿದ್ದರೋ ಆ ಸಬರಮತಿ ನದಿಯು ಹಿಂದಿನ ಕೆಲವು ದಶಕಗಳಲ್ಲಿ ಒಣಗಿಹೋಗಿತ್ತು ಎನ್ನುವುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿರಬಹುದು. ವರ್ಷದಲ್ಲಿ ಆರರಿಂದ ಎಂಟು ತಿಂಗಳು ನೀರು ಕಾಣಿಸುತ್ತಲೇ ಇರಲಿಲ್ಲ. ಆದರೆ ನರ್ಮದಾ ಮತ್ತು ಸಬರಮತಿ ನದಿಗಳನ್ನು ಜೋಡಣೆ ಮಾಡಿದ ಮೇಲೆ ಈಗ ನೀವು ಅಹಮದಾಬಾದ್ ಗೆ ಹೋದರೆ ಸಬರಮತಿ ನದಿಯ ನೀರು ಮನಸ್ಸನ್ನು ಪ್ರಫುಲ್ಲಿತಗೊಳಿಸುತ್ತದೆ. ತಮಿಳುನಾಡಿನ ನಮ್ಮ ಸೋದರಿಯರು ಹೇಗೆ ಮಾಡಿದರೋ ಅದೇ ರೀತಿಯ ಬಹಳಷ್ಟು ಕೆಲಸಗಳು ದೇಶದ ಬೇರೆ ಬೇರೆ ಮೂಲೆಗಳಲ್ಲಿ ನಡೆಯುತ್ತಿವೆ. ನಮ್ಮ ಧಾರ್ಮಿಕ ಪರಂಪರೆಯಲ್ಲಿ ತೊಡಗಿಸಿಕೊಂಡಿರುವ ಹಲವಾರು ಸಂತರು, ಗುರುಜನರು ಕೂಡ ತಮ್ಮ ಅಧ್ಯಾತ್ಮಿಕ ಪಯಣದ ಜೊತೆಜೊತೆಗೆ ನೀರಿಗಾಗಿ, ನದಿಗಳಿಗಾಗಿ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ, ಕೆಲವು ನದಿಗಳ ದಂಡೆಗಳಲ್ಲಿ ಗಿಡಗಳನ್ನು ನೆಡುವ ಅಭಿಯಾನ ನಡೆಯುತ್ತಿದೆ, ಕೆಲವೆಡೆ ನದಿಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆಯುವ ಕೆಲಸ ಆಗುತ್ತಿದೆ ಎಂದು ನನಗೆ ತಿಳಿದಿದೆ.
ಸ್ನೇಹಿತರೇ, ನಾವು ಇಂದು ವಿಶ್ವ ನದಿ ದಿನ – ವಲ್ರ್ಡ್ ರಿವರ್ ಡೇ ಆಚರಿಸುತ್ತಿದ್ದೇವೆಂದರೆ ಆ ಕೆಲಸಕ್ಕೆ ಕಾರಣರಾದ ಎಲ್ಲರನ್ನೂ ನಾನು ಪ್ರಶಂಸಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಜೊತೆಗೆ ಭಾರತದಲ್ಲಿ ಮೂಲೆಮೂಲೆಯಲ್ಲಿ ವರ್ಷಕ್ಕೊಮ್ಮೆಯಾದರೂ ನದಿ ಉತ್ಸವ ಆಚರಿಸಬೇಕೆಂದು ನಾನು ಪ್ರತಿಯೊಂದು ನದಿ ತೀರದ ನಿವಾಸಿಗಳಲ್ಲಿ, ದೇಶದ ಜನತೆಯಲ್ಲಿ ಮನವಿ ಮಾಡುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೇ, ಯಾವುದೇ ಸಣ್ಣ ವಿಷಯವನ್ನು, ಸಣ್ಣ ವಸ್ತುವನ್ನು ಸಣ್ಣದೆಂದು ಭಾವಿಸುವ ತಪ್ಪು ಮಾಡಬಾರದು. ಸಣ್ಣ ಸಣ್ಣ ಪ್ರಯತ್ನಗಳಿಂದಲೇ ಕೆಲವೊಮ್ಮೆ ಬಹಳ ದೊಡ್ಡ ದೊಡ್ಡ ಪರಿವರ್ತನೆಗಳಾಗುತ್ತವೆ. ನಾವು ಗಾಂಧೀಜಿಯವರ ಜೀವನದತ್ತ ಕಣ್ಣು ಹಾಯಿಸಿದರೆ, ಅವರ ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳು ಎಷ್ಟು ಮಹತ್ವ ಹೊಂದಿದ್ದವು, ಮತ್ತು ಅವರು ಸಣ್ಣ ಸಣ್ಣ ವಿಚಾರಗಳನ್ನು ತೆಗೆದುಕೊಂಡು ಯಾವ ರೀತಿ ದೊಡ್ಡ ದೊಡ್ಡ ಸಂಕಲ್ಪಗಳನ್ನು ಸಾಕಾರಗೊಳಿಸಿದರು ಎಂಬುದು ನಮಗೆ ಪ್ರತಿ ಕ್ಷಣ ಅನುಭವಕ್ಕೆ ಬರುತ್ತದೆ. ಸ್ವಚ್ಛತಾ ಅಭಿಯಾನವು ಸ್ವಾತಂತ್ರ್ಯ ಚಳುವಳಿಗೆ ಯಾವರೀತಿ ನಿರಂತರ ಶಕ್ತಿಯಾಯಿತು ಎಂಬುದನ್ನು ನಮ್ಮ ಇಂದಿನ ಯುವಜನತೆ ಖಂಡಿತವಾಗಿಯೂ ಅರಿತುಕೊಳ್ಳಬೇಕು. ಸ್ವಚ್ಛತೆಯನ್ನು ಜನಾಂದೋಲನವನ್ನಾಗಿ ಮಾಡಿದ್ದು ಮಹಾತ್ಮಾ ಗಾಂಧಿಯವರು ತಾನೇ. ಮಹಾತ್ಮಾ ಗಾಂಧಿಯವರು ಸ್ವಚ್ಛತೆಯನ್ನು ಸ್ವಾತಂತ್ರ್ಯದ ಕನಸಿನೊಂದಿಗೆ ಬೆಸೆದರು. ಇಂದು ಇಷ್ಟೊಂದು ದಶಕಗಳ ನಂತರ, ಸ್ವಚ್ಛತಾ ಆಂದೋಲನವು ಮತ್ತೊಮ್ಮೆ ದೇಶದ ನವ ಭಾರತದ ಕನಸಿನೊಂದಿಗೆ ಬೆಸೆಯುವ ಕೆಲಸ ಮಾಡಿದೆ. ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮ ಮಾತ್ರವಲ್ಲ, ಇದು ನಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವ ಅಭಿಯಾನವೂ ಆಗುತ್ತಿದೆ ಎಂಬುದನ್ನು ನಾವು ಮರೆಯಬಾರದು. ಸ್ವಚ್ಛತೆ ಎನ್ನುವುದು ಪೀಳಿಗೆಯಿಂದ ಪೀಳಿಗೆಗೆ ಸಂಸ್ಕಾರವನ್ನು ವರ್ಗಾಯಿಸುವ ಜವಾಬ್ದಾರಿಯಾಗಿದೆ. ಪೀಳಿಗೆಯಿಂದ ಪೀಳಿಗೆಯವರೆಗೆ ಸ್ವಚ್ಛತಾ ಅಭಿಯಾನ ಮುಂದುವರಿದರೆ, ಆಗ ಸಂಪೂರ್ಣ ಸಮಾಜದ ಜೀವನದಲ್ಲಿ ಸ್ವಚ್ಛತೆಯ ಸ್ವಭಾವ ಬೆಳೆಯುತ್ತದೆ. ಆದ್ದರಿಂದ ಇದು ಒಂದೆರಡು ವರ್ಷ, ಈ ಸರಕಾರ ಆ ಸರಕಾರ ಎನ್ನುವಂತಹ ವಿಷಯವಲ್ಲ, ಪೀಳಿಗೆಯಿಂದ ಪೀಳಿಗೆಗೆ ನಾವು ಸ್ವಚ್ಛತೆಯ ಅರಿವಿನೊಂದಿಗೆ, ಸತತವಾಗಿ ಎಲ್ಲಿಯೂ ನಿಲ್ಲದೇ, ದಣಿಯದೇ, ಅತ್ಯಂತ ಶ್ರದ್ಧೆಯಿಂದ ಅಭಿಯಾನದೊಂದಿಗೆ ಕೂಡಿಕೊಳ್ಳಬೇಕು ಮತ್ತು ಅಭಿಯಾನ ಮುಂದುವರಿಸಿಕೊಂಡು ಹೋಗಬೇಕು. ಸ್ವಚ್ಛತೆ ಎನ್ನುವುದು ಪೂಜ್ಯ ಬಾಪೂ ಅವರಿಗೆ ನಮ್ಮ ದೇಶ ಸಲ್ಲಿಸಬಹುದಾದ ಬಹುದೊಡ್ಡ ಶ್ರದ್ಧಾಂಜಲಿಯಾಗಿದೆ ಮತ್ತು ಇದನ್ನು ನಾವು ಅವರಿಗೆ ಪ್ರತಿ ಬಾರಿ, ಸತತವಾಗಿ ಸಲ್ಲಿಸುತ್ತಲೇ ಇರಬೇಕೆಂದು ನಾನು ಈ ಮೊದಲು ಕೂಡಾ ಹೇಳಿದ್ದೆ.
ಸ್ನೇಹಿತರೇ, ನಾನು ಸ್ವಚ್ಛತೆಯ ಬಗ್ಗೆ ಮಾತನಾಡುವ ಅವಕಾಶವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎನ್ನುವುದು ಜನರಿಗೆ ತಿಳಿದಿದೆ. ಬಹುಶಃ ಅದರಿಂದಾಗಿಯೇ ನಮ್ಮ ಮನ್ ಕಿ ಬಾತ್ ಶ್ರೋತೃಗಳಲ್ಲಿ ಒಬ್ಬರಾದ ಶ್ರೀ ರಮೇಶ್ ಪಟೇಲ್ ಅವರು ಹೀಗೆ ಬರೆದಿದ್ದಾರೆ, ನಾವು ಬಾಪೂ ಅವರಿಂದ ಕಲಿಯುತ್ತಾ, ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಆರ್ಥಿಕ ಸ್ವಚ್ಛತೆಯ ಸಂಕಲ್ಪ ಕೂಡಾ ಮಾಡಬೇಕಿದೆ. ಶೌಚಾಲಯದ ನಿರ್ಮಾಣ ಬಡವರ ಘನತೆ ಹೆಚ್ಚಿಸಿದ ರೀತಿಯಲ್ಲೇ, ಆರ್ಥಿಕ ಸ್ವಚ್ಛತೆ ಬಡವರ ಅಧಿಕಾರವನ್ನು ಖಾತರಿ ಪಡಿಸುತ್ತದೆ, ಅವರ ಜೀವನವನ್ನು ಸುಗಮವಾಗಿಸುತ್ತದೆ. ದೇಶದಲ್ಲಿ ಜನ್ ಧನ್ ಖಾತೆ ತೆರೆಯುವ ಮೂಲಕ ಚಾಲನೆ ನೀಡಲಾದ ಅಭಿಯಾನದಿಂದಾಗಿ, ಇಂದು ಬಡವರಿಗೆ ಅವರ ಹಕ್ಕಿನ ಹಣ ನೇರವಾಗಿ ಅವರ ಖಾತೆಯನ್ನು ತಲುಪುತ್ತಿದೆ ಎಂದು ನಿಮಗೆ ತಿಳಿದಿದೆ. ಇದರಿಂದಾಗಿ ಭ್ರಷ್ಟಚಾರದಂತಹ ಅಡಚಣೆಗಳು ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿವೆ. ಆರ್ಥಿಕ ಸ್ವಚ್ಛತೆಯಲ್ಲಿ ತಂತ್ರಜ್ಞಾನ ಬಹಳಷ್ಟು ಸಹಾಯ ಮಾಡುತ್ತದೆ ಎನ್ನುವುದು ಸತ್ಯವಾದ ಮಾತು. ಇಂದು ಗ್ರಾಮ- ಗ್ರಾಮಗಳಲ್ಲಿ ಕೂಡಾ fin-techUPI ಮೂಲಕ ಡಿಜಿಟಲ್ ವಹಿವಾಟು ನಡೆಸುವ ದಿಕ್ಕಿನಲ್ಲಿ ಸಾಮಾನ್ಯ ನಾಗರೀಕರೂ ಜೊತೆಯಾಗಿದ್ದಾರೆ. ಇದರ ಪ್ರಚಾರ ಹೆಚ್ಚಾಗುತ್ತಿದೆ ಎನ್ನುವುದು ನಮಗೆ ಬಹಳ ಸಂತೋಷ ತರುವ ವಿಷಯವಾಗಿದೆ. ನಿಮಗೆ ನಿಜಕ್ಕೂ ಹೆಮ್ಮೆ ಎನಿಸುವ ಅಂಕಿಅಂಶವನ್ನು ನಾನು ತಿಳಿಸುತ್ತೇನೆ. ಕಳೆದ ಆಗಸ್ಟ್ ತಿಂಗಳಿನಲ್ಲಿ, ಒಂದೇ ತಿಂಗಳಿನಲ್ಲಿ UPI ನಿಂದ 355 ಕೋಟಿ ವಹಿವಾಟು ನಡೆದಿದೆ. ಅಂದರೆ ಸುಮಾರು 350 ಕೋಟಿಗಿಂತ ಅಧಿಕ ವಹಿವಾಟು, ಅಂದರೆ ಆಗಸ್ಟ್ ತಿಂಗಳಿನಲ್ಲಿ 350 ಕೋಟಿಗಿಂತ ಹೆಚ್ಚು ಬಾರಿ ಡಿಜಿಟಲ್ ವಹಿವಾಟಿಗಾಗಿ ಯುಪಿಐ ಉಪಯೋಗಿಸಲಾಗಿದೆ ಎಂದು ನಾವು ಹೇಳಬಹುದು. ಇಂದು ಸರಾಸರಿ 6 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಡಿಜಿಟಲ್ ಪಾವತಿ ಯುಪಿಐ ಮೂಲಕ ನಡೆಯುತ್ತಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆಯಲ್ಲಿ ಸ್ವಚ್ಛತೆ, ಪಾರದರ್ಶಕತೆ ಮೂಡುತ್ತಿದೆ ಮತ್ತು fin-techನ ಪ್ರಾಮುಖ್ಯತೆ ಹೆಚ್ಚಾಗುತ್ತಿದೆಯೆಂದು ನಮಗೆ ತಿಳಿದಿದೆ.
ಸ್ನೇಹಿತರೇ, ಬಾಪೂರವರು ಹೇಗೆ ಸ್ವಚ್ಛತೆಯನ್ನು ಸ್ವಾತಂತ್ರ್ಯದೊಂದಿಗೆ ಬೆಸೆದರೋ, ಅಂತೆಯೇ ಖಾದಿಯನ್ನೂ ಸ್ವಾತಂತ್ರ್ಯದ ಕುರುಹಾಗಿ ಮಾಡಿದರು. ಇಂದು ಸ್ವಾತಂತ್ರ್ಯದ 75 ವರ್ಷದಲ್ಲಿ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವಾಗ, ಸ್ವಾತಂತ್ರ್ಯದ ಚಳುವಳಿಯಲ್ಲಿ ಖಾದಿಗೆ ದೊರೆತಿದ್ದ ಮನ್ನಣೆಯನ್ನು ಇಂದು ನಮ್ಮ ಯುವ ಪೀಳಿಗೆ ಖಾದಿಗೆ ನೀಡುತ್ತಿದೆ ಎಂದು ನಾನು ಸಂತೋಷದಿಂದ ಹೇಳಬಹುದು. ಇಂದು ಸಾಕಷ್ಟು ಪ್ರಮಾಣದಲ್ಲಿ ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳಲ್ಲಿ ಹೆಚ್ಚಳವಾಗಿದೆ, ಅವುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ದೆಹಲಿಯ ಖಾದಿ ಶೋರೂಮ್ ನಲ್ಲಿ ಒಂದೇ ದಿನದಲ್ಲಿ ಒಂದು ಕೋಟಿಗೂ ಹೆಚ್ಚು ವ್ಯಾಪಾರ ನಡೆದಿರುವ ಅನೇಕ ಸಂದರ್ಭಗಳಿವೆ ಎಂದು ನಿಮಗೂ ತಿಳಿದಿರಬಹುದು. ಅಕ್ಟೋಬರ್ 2 ರಂದು ಬಾಪೂ ಅವರ ಜನ್ಮ ಜಯಂತಿಯಂದು ನಾವೆಲ್ಲರೂ ಮತ್ತೊಮ್ಮೆ ಹೊಸ ದಾಖಲೆ ನಿರ್ಮಿಸೋಣ ಎಂದು ನಾನು ನಿಮಗೆ ಪುನಃ ನೆನಪಿಸಲು ಬಯಸುತ್ತೇನೆ. ನೀವು ನಿಮ್ಮ ನಗರದಲ್ಲಿ ಖಾದಿ, ಕೈಮಗ್ಗದ ಉತ್ಪನ್ನ ಕರಕುಶಲ ವಸ್ತುಗಳ ಮಾರಾಟ ಎಲ್ಲೇ ನಡೆದಿರಲಿ ಅಲ್ಲಿ ಹೋಗಿ ಅವುಗಳನ್ನು ಖರೀದಿಸಿ. ದೀಪಾವಳಿ ಬರಲಿದೆ, ಹಬ್ಬಗಳ ಋತುವಿಗಾಗಿ ಖಾದಿ, ಕೈಮಗ್ಗ, ಮತ್ತು ಕರಕುಶಲ ವಸ್ತುಗಳು ಹೀಗೆ ಉಪಯೋಗಕ್ಕೆ ಬರುವ ಪ್ರತಿ ಖರೀದಿಯೂ ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಬಲಗೊಳಿಸುತ್ತದೆ, ಮತ್ತು ಹಿಂದಿನ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಸೃಷ್ಟಿಸುತ್ತದೆ ಎನ್ನುವ ಭರವಸೆ ನನಗಿದೆ.
ಸ್ನೇಹಿತರೇ, ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ, ದೇಶದಲ್ಲಿ ಸ್ವಾತಂತ್ರ್ಯದ ಇತಿಹಾಸದಲ್ಲಿ ಬೆಳಕಿಗೆ ಬಾರದೇ ಇರುವ ಕಥೆಗಳನ್ನು ಜನತೆಗೆ ತಲುಪಿಸುವ ಒಂದು ಅಭಿಯಾನ ಕೂಡಾ ನಡೆಯುತ್ತಿದೆ. ಇದಕ್ಕಾಗಿ ಉದಯೋನ್ಮುಖ ಲೇಖಕರನ್ನು ಮತ್ತು ವಿಶ್ವದ ಯುವಜನತೆಯನ್ನು ಆಹ್ವಾನಿಸಲಾಯಿತು. ಈ ಅಭಿಯಾನಕ್ಕಾಗಿ ಈವರೆಗೆ ವಿವಿಧ ಭಾಷೆಗಳ 13 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಅದೂ ಕೂಡ 14 ಬೇರೆ ಬೇರೆ ಭಾಷೆಗಳಲ್ಲಿ, 20 ಕ್ಕೂ ಅಧಿಕ ದೇಶಗಳಲ್ಲಿ. ಅನೇಕ ಅನಿವಾಸಿ ಭಾರತೀಯರು ಕೂಡಾ ಈ ಅಭಿಯಾನದೊಂದಿಗೆ ಸೇರುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ.
ಮತ್ತೊಂದು ಬಹಳ ಕುತೂಹಲಕಾರಿ ಮಾಹಿತಿ ಇದೆ. ಸುಮಾರು 5000 ಕ್ಕೂ ಅಧಿಕ ಉದಯೋನ್ಮುಖ ಲೇಖಕರು ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಅನ್ವೇಷಿಸುತ್ತಿದ್ದಾರೆ. ಅನಾಮಿಕರಾಗಿ ಉಳಿದಿರುವ, ಇತಿಹಾಸದ ಪುಟಗಳಲ್ಲಿ ಹೆಸರು ಕಾಣದಿರುವ ಅನ್ಸಂಗ್ ಹೀರೋಗಳ ವಿಷಯದ ಬಗ್ಗೆ, ಅವರ ಜೀವನದ ಬಗ್ಗೆ ಅಂತಹ ಘಟನೆಗಳ ಬಗ್ಗೆ ಸ್ವಲ್ಬ ಬರೆಯಲು ಸಂಕಲ್ಪ ಮಾಡಿದ್ದಾರೆ. ಅಂದರೆ ಸ್ವಾತಂತ್ರ್ಯದ 75 ವರ್ಷಗಳಲ್ಲಿ ಎಂದೂ ಚರ್ಚೆಯಾಗಿರದಂತಹ ಸ್ವಾತಂತ್ರ್ಯ ವೀರ ಸೈನಿಕರ ಚರಿತ್ರೆಯನ್ನು ಕೂಡಾ ದೇಶದ ಜನತೆಯ ಮುಂದೆ ತರಲು ನಿರ್ಧರಿಸಿದ್ದಾರೆ. ನೀವು ಕೂಡಾ ಯುವಜನತೆಯನ್ನು ಪ್ರೇರೇಪಿಸಿ ಎಂದು ಎಲ್ಲಾ ಶ್ರೋತೃಗಳಲ್ಲಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರಲ್ಲಿ ನನ್ನ ಮನವಿ. ನೀವು ಕೂಡಾ ಮುಂದೆ ಬನ್ನಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಇತಿಹಾಸ ಬರೆಯುವ ಕೆಲಸ ಮಾಡುತ್ತಿರುವ ಜನರು ಇತಿಹಾಸ ಸೃಷ್ಟಿಸುವವರು ಕೂಡಾ ಆಗಿರುತ್ತಾರೆ ಎನ್ನುವುದು ನನ್ನ ಖಚಿತ ನಂಬಿಕೆಯಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸಿಯಾಚಿನ್ ಗ್ಲೇಷಿಯರ್ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಅಲ್ಲಿನ ಚಳಿ ಎಷ್ಟು ಭಯಾನಕವಾಗಿದೆಯೆಂದರೆ, ಅಲ್ಲಿ ವಾಸಮಾಡುವುದು ಸಾಮಾನ್ಯ ಮನುಷ್ಯನಿಗೆ ಸಾಧ್ಯವಾಗುವುದೇ ಇಲ್ಲ. ದೂರದೂರವರೆಗೆ ಎಲ್ಲಿ ನೋಡಿದರೂ ಹಿಮವೇ ಹಿಮ ತುಂಬಿರುತ್ತದೆ. ಗಿಡಮರಗಳ ಸುಳಿವಂತೂ ಇರುವುದೇ ಇಲ್ಲ. ಇಲ್ಲಿ ತಾಪಮಾನ ಮೈನಸ್ 60 ಡಿಗ್ರಿ ಸೆಲ್ಷಿಯಸ್ ವರೆಗೂ ಕುಸಿಯುತ್ತದೆ. ಕೆಲವೇ ದಿನಗಳ ಹಿಂದೆ ಸಿಯಾಚಿನ್ ನ ಈ ದುರ್ಗಮ ಪ್ರದೇಶದಲ್ಲಿ 8 ದಿವ್ಯಾಂಗರ ತಂಡವೊಂದು ಮಾಡಿತೋರಿಸಿದ ಅದ್ಭುತ ಕಾರ್ಯವೊಂದು ಪ್ರತಿಯೊಬ್ಬ ದೇಶವಾಸಿಗೂ ಹೆಮ್ಮೆಯ ವಿಷಯವಾಗಿದೆ. ಈ ತಂಡ ಸಿಯಾಚಿನ್ ಗ್ಲೇಷಿಯರ್ ನ 15 ಸಾವಿರ ಅಡಿಗಿಂತ ಹೆಚ್ಚು ಎತ್ತರದಲ್ಲಿರುವ ಕುಮಾರ್ ಪೆÇೀಸ್ಟ್ ನಲ್ಲಿ ತಮ್ಮ ಧ್ವಜ ಹಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ದೈಹಿಕ ಸವಾಲುಗಳ ಹೊರತಾಗಿಯೂ ನಮ್ಮ ಈ ದಿವ್ಯಾಂಗರು ಮಾಡಿ ತೋರಿಸಿರುವ ಕಾರ್ಯವು ಇಡೀ ದೇಶಕ್ಕೆ ಪ್ರೇರಣೆಯಾಗಿದೆ ಮತ್ತು ಈ ತಂಡದ ಸದಸ್ಯರ ಕುರಿತು ತಿಳಿದುಕೊಂಡಾಗ ನನ್ನಂತೆಯೇ ನಿಮ್ಮಲ್ಲೂ ಧೈರ್ಯ ಮತ್ತು ಉತ್ಸಾಹ ಮೂಡುತ್ತದೆ. ಈ ಕೆಚ್ಚೆದೆಯ ದಿವ್ಯಾಂಗರ ಹೆಸರುಗಳು ಹೀಗಿವೆ. ಮಹೇಶ್ ನೆಹೆರಾ, ಉತ್ತರಾಖಂಡದ ಅಕ್ಷತ್ ರಾವತ್, ಮಹಾರಾಷ್ಟ್ರದ ಪುಷ್ಪಕ್ ಗವಾಂಡೆ, ಹರಿಯಾಣಾದ ಅಜಯ್ ಕುಮಾರ್, ಲಡಾಕ್ ನ ಲೋಬ್ಸಾಂಗ್ ಚೋಸ್ಪೇಲ್, ತಮಿಳುನಾಡಿನ ಮೇಜರ್ ದ್ವಾರಕೇಷ್, ಜಮ್ಮು ಕಾಶ್ಮೀರದ ಇರ್ಫಾನ್ ಅಹ್ಮದ್ ಮೀರ್ ಮತ್ತು ಹಿಮಾಚಲ್ ದೇಶದ ಚೋಂಜಿನ್ ಎಂಗ್ಮೋ. ಸಿಯಾಚಿನ್ ಗ್ಲೇಷಿಯರ್ ತಲುಪುವ ಈ ಕಾರ್ಯಾಚರಣೆಯು, ಭಾರತೀಯ ಸೇನೆಯ ವಿಶೇಷ ಪಡೆಗಳ ನೈಪುಣ್ಯತೆಯ ಸಹಾಯದಿಂದ ಸಫಲವಾಗಿದೆ. ನಾನು ಈ ಐತಿಹಾಸಿಕ ಮತ್ತು ಅಭೂತಪೂರ್ವ ಸಾಧನೆಗಾಗಿ ಈ ತಂಡವನ್ನು ಶ್ಲಾಘಿಸುತ್ತೇನೆ. ಇದು ನಮ್ಮ ದೇಶವಾಸಿಗಳ “Can Do Culture”, “Can Do Determination”, “Can Do Attitude” ಪ್ರವೃತ್ತಿಯೊಂದಿಗೆ ಪ್ರತಿ ಸವಾಲನ್ನೂ ಎದುರಿಸಿ ನಿಭಾಯಿಸುವ ಮನೋಭಾವವನ್ನು ಕೂಡಾ ವ್ಯಕ್ತಪಡಿಸುತ್ತದೆ.
ಮಿತ್ರರೇ, ಇಂದು ದೇಶದಲ್ಲಿ ದಿವ್ಯಾಂಗ ಜನರ ಕಲ್ಯಾಣಕ್ಕಾಗಿ ಬಹಳಷ್ಟು ಪ್ರಯತ್ನಗಳು ಆಗುತ್ತಿವೆ. ನನಗೆ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಇಂತಹ ಒಂದು ಪ್ರಯತ್ನ ‘ಒನ್ ಟೀಚರ್, ಒನ್ ಕಾಲ್’ ಇದರ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಬರೇಲಿಯಲ್ಲಿ ನಡೆಯುತ್ತಿರುವ ಇಂತಹ ಅನನ್ಯ ಪ್ರಯತ್ನ ದಿವ್ಯಾಂಗ ಮಕ್ಕಳಿಗೆ ಹೊಸ ದಾರಿ ತೋರಿಸುತ್ತಿದೆ. ಈ ಅಭಿಯಾನದ ನೇತೃತ್ವವನ್ನು ಡಭೌರಾ ಗಂಗಾಪುರದ ಒಂದು ಶಾಲೆಯ ಪ್ರಿನ್ಸಿಪಾಲ್ ಆದಂತಹ ದೀಪಮಾಲಾ ಪಾಂಡೇಯ್ ಅವರು ವಹಿಸಿಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಈ ಅಭಿಯಾನದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಆಗಿದ್ದಷೆ್ಟೀ ಅಲ್ಲದೆ ಸುಮಾರು 350 ಕ್ಕೂ ಅಧಿಕ ಶಿಕ್ಷಕರು ಕೂಡ ಸೇವಾ ಭಾವದಿಂದ ಈ ಅಭಿಯಾನದಲ್ಲಿ ಸೇರಿಕೊಂಡರು. ಈ ಶಿಕ್ಷಕರು ಹಳ್ಳಿ ಹಳ್ಳಿಗೆ ಹೋಗಿ ದಿವ್ಯಾಂಗ ಮಕ್ಕಳನ್ನು ಹುಡುಕುತ್ತಾರೆ ಮತ್ತು ಅವರನ್ನು ಯಾವುದಾದರೊಂದು ಶಾಲೆಗೆ ನಿಶ್ಚಿತವಾಗಿ ಸೇರಿಸುತ್ತಾರೆ. ದಿವ್ಯಾಂಗ ಜನರಿಗಾಗಿ ದೀಪಮಾಲಾ ಹಾಗೂ ಸಹ ಶಿಕ್ಷಕರ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಾನು ಮನದಾಳದಿಂದ ಪ್ರಶಂಸಿಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಪ್ರತೀ ಪ್ರಯತ್ನ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಮ್ಮೆಲ್ಲರ ಜೀವನದ ಪರಿಸ್ಥಿತಿ ಹೇಗಾಗಿದೆ ಎಂದರೆ ಒಂದು ದಿನದಲ್ಲಿ ನೂರಾರು ಬಾರಿ ಕೊರೊನಾ ಎನ್ನುವ ಶಬ್ದ ನಮ್ಮ ಕಿವಿಯಲ್ಲಿ ಘುಯ್ ಗುಡುತ್ತಿದೆ. ನೂರು ವರ್ಷಗಳಲ್ಲಿ ಬಂದಿರುವ ಅತೀ ದೊಡ್ಡ ಜಾಗತಿಕ ಮಹಾಮಾರಿ ಕೋವಿಡ್ 19 ಪ್ರತೀ ಭಾರತೀಯನಿಗೂ ಬಹಳಷ್ಟು ಕಲಿಸಿಕೊಟ್ಟಿದೆ. ಆರೋಗ್ಯಪಾಲನೆ ಮತ್ತು ಸ್ವಾಸ್ಥ್ಯದ ವಿಚಾರವಾಗಿ ಇಂದು ಚರ್ಚೆ ಕೂಡ ಹೆಚ್ಚಿದೆ, ಹಾಗೆಯೇ ಜಾಗರೂಕತೆಯೂ ಕೂಡ ಹೆಚ್ಚಿದೆ. ನಮ್ಮ ದೇಶದಲ್ಲಿ ಪರಂಪರಾಗತವಾಗಿ ಆರೋಗ್ಯಕ್ಕೆ ಸಹಕಾರಿಯಾಗುವಂತಹ ನೈಸರ್ಗಿಕ ಉತ್ಪನ್ನಗಳು ಹೇರಳವಾಗಿ ಲಭ್ಯವಿದ್ದು ಇವು ಅರೋಗ್ಯ ಕಾಪಾಡಿಕೊಳ್ಳಲು ಬಹಳ ಪ್ರಯೋಜನಕಾರಿಯಾಗಿದೆ. ಒಡಿಶಾದ ಕಾಲಾಹಾಂಡೀ ಯ, ನಾಂದೋಲ್ ಎಂಬಲ್ಲಿ ವಾಸವಿರುವ ಪತಾಯತ್ ಸಾಹೂಜೀ ಈ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಒಂದು ಹೊಸ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಒಂದೂವರೆ ಎಕರೆಯಷ್ಟು ಜಾಗದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಇದಿಷೆ್ಟೀ ಅಲ್ಲದೆ ಸಾಹೂಜೀ ಅವರು ಈ ಔಷಧೀಯ ಸಸ್ಯಗಳ ವಿವರಗಳನ್ನು ಕೂಡ ದಾಖಲಿಸಿದ್ದಾರೆ. ರಾಂಚಿಯಿಂದ ಸತೀಶ್ ಅವರು ಪತ್ರಮುಖೇನ ನನಗೆ ಇಂತಹುದೇ ಮತ್ತೊಂದು ವಿಚಾರವನ್ನು ತಿಳಿಸಿದ್ದಾರೆ. ಸತೀಶ್ ಅವರು ಝಾಖರ್ಂಡ್ ನ ಒಂದು ಆಲೋವೆರಾ ಹಳ್ಳಿಯ ಕಡೆಗೆ ನನ್ನ ಗಮನ ಬೀಳುವಂತೆ ಮಾಡಿದ್ದಾರೆ. ರಾಂಚಿಯ ಸಮೀಪದಲ್ಲೇ ಇರುವ ದೇವರೀ ಗ್ರಾಮದ ಮಹಿಳೆಯರು ಮಂಜೂ ಕಚ್ಚಪ್ ಅವರ ನೇತೃತ್ವದಲ್ಲಿ ಬಿರ್ಸಾ ಕೃಷಿ ವಿದ್ಯಾಲಯದಿಂದ ಆಲೋವೆರಾ ಕೃಷಿಯ ಬಗ್ಗೆ ಶಿಕ್ಷಣ ಪಡೆದುಕೊಂಡಿದ್ದರು. ನಂತರ ಅವರು ಆಲೋವೆರಾದ ಕೃಷಿ ಪ್ರಾರಂಭಿಸಿದರು. ಈ ಕೃಷಿಯಿಂದ ಬರೀ ಅರೋಗ್ಯ ಕ್ಷೇತ್ರದಲ್ಲಿ ಲಾಭವಾಗಿದ್ದಷೆ್ಟೀ ಅಲ್ಲದೆ ಈ ಮಹಿಳೆಯರ ಗಳಿಕೆ ಕೂಡ ಹೆಚ್ಚಾಯಿತು. ಕೋವಿಡ್ ಮಹಾಮಾರಿಯ ಕಾರಣವಿದ್ದಾಗ್ಯೂ ಇವರಿಗೆ ಹೆಚ್ಚಿನ ಗಳಿಕೆ ಆಯಿತು. ಇದಕ್ಕೆ ದೊಡ್ಡ ಕಾರಣ ಏನೆಂದರೆ ಸ್ಯಾನಿಟೈಸರ್ ತಯಾರಿಸುವ ಕಂಪನಿಗಳು ನೇರವಾಗಿ ಇವರಿಂದಲೇ ಆಲೋವೆರಾ ಖರೀದಿ ಮಾಡುತ್ತಿದ್ದರು. ಇಂದು ಈ ಕಾರ್ಯದಲ್ಲಿ ಸುಮಾರು ನಲವತ್ತು ಮಹಿಳೆಯರ ಒಂದು ತಂಡ ಸೇರಿಕೊಂಡಿದೆ ಮತ್ತು ಹಲವಾರು ಎಕರೆಗಳಲ್ಲಿ ಆಲೋವೆರಾದ ಕೃಷಿ ನಡೆಯುತ್ತಿದೆ. ಒಡಿಶಾದ ಪತಯಾತ್ ಸಾಹೂಜೀ ಅವರೇ ಆಗಲಿ, ಅಥವಾ ದೇವರೀ ಗ್ರಾಮದ ಮಹಿಳೆಯರ ಈ ತಂಡವೇ ಆಗಿರಲಿ ಕೃಷಿಯನ್ನು ಯಾವ ವಿಧವಾಗಿ ಅರೋಗ್ಯ ಕ್ಷೇತ್ರಕ್ಕೆ ಜೋಡಿಸಿದ್ದಾರೆ ಎನ್ನುವುದಕ್ಕೆ ಇದು ಒಂದು ದೊಡ್ಡ ಉದಾಹರಣೆ.
ಗೆಳೆಯರೇ, ಮುಂಬರುವ ಅಕ್ಟೋಬರ್ 2 ರಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿ ಕೂಡ ಇದೆ. ಅವರ ನೆನಪಿನಲ್ಲಿ ಈ ದಿನ, ನಮಗೆ ಕೃಷಿ ನೆಲದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಬಗ್ಗೆ ಕೂಡ ಕಲಿಸುತ್ತದೆ. ಔಷಧೀಯ ಸಸ್ಯಗಳ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಮೆಡಿ-ಹಬ್ ಟಿಬಿಐ ಎಂಬ ಹೆಸರಿನಲ್ಲಿ ಒಂದು ಇನ್ಕ್ಯುಬೇಟರ್ ಗುಜರಾತ್ ನ ಆನಂದ್ ನಲ್ಲಿ ಕೆಲಸ ಮಾಡುತ್ತಿದೆ. ಔಷಧ ಮತ್ತು ಸುಗಂಧ ಸಸ್ಯಗಳ ಜೊತೆ ಬೆಸೆದುಕೊಂಡಿರುವ ಈ ಇನ್ಕ್ಯುಬೇಟರ್ ಬಹಳ ಕಡಿಮೆ ಸಮಯದಲ್ಲೇ ಹದಿನೈದು ಹೊಸ ಉದ್ಯಮಿಗಳ ವ್ಯವಹಾರದ ಯೋಜನೆಗಳಲ್ಲಿ ಸಹಾಯಹಸ್ತ ನೀಡಿದೆ. ಈ ಇನ್ಕ್ಯುಬೇಟರ್ ನ ಸಹಾಯದಿಂದಲೇ ಸುಧಾ ಚೆಬ್ರೋಲೂ ಅವರು ತಮ್ಮ ನವೋದ್ಯಮವನ್ನು ಸ್ಥಾಪಿಸಿದ್ದಾರೆ. ಇವರ ಕಂಪನಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧಿತ್ವ ನೀಡಲಾಗುತ್ತದೆ ಮತ್ತು ಅವರ ಮೇಲೆಯೇ ಹೊಸ ಕಲ್ಪನೆಯ ಗಿಡಮೂಲಿಕೆಯ ಮಿಶ್ರಣಗಳನ್ನು ತಯಾರು ಮಾಡುವ ಜವಾಬ್ದಾರಿಯೂ ಕೂಡ ಇದೆ. ಮತ್ತೋರ್ವ ನವೋದ್ಯಮಿ ಸುಭಾಶ್ರೀ ಅವರಿಗೆ ಕೂಡ ಇದೇ ಔಷಧ ಮತ್ತು ಸುಗಂಧ ಸಸ್ಯಗಳ ಇನ್ಕ್ಯುಬೇಟರ್ ನಿಂದ ಸಹಾಯ ಸಿಕ್ಕಿದೆ. ಸುಭಾಶ್ರೀ ಅವರ ಕಂಪನಿಯು ಹರ್ಬಲ್ ರೂಂ ಮತ್ತು ಕಾರ್ ಫ್ರೆಶ್ ನರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಇವರು ಒಂದು ಹರ್ಬಲ್ ಟೆರೆಸ್ ಉದ್ಯಾನ ವನ್ನು ಕೂಡ ಮಾಡಿದ್ದಾರೆ. ಇದರಲ್ಲಿ 400 ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ.
ಮಿತ್ರರೇ, ಆಯುಷ್ ಸಚಿವಾಲಯವು ಮಕ್ಕಳಲ್ಲಿ ಔಷಧೀಯ ಮತ್ತು ಗಿಡಮೂಲಿಕೆಗಳ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಆಸಕ್ತಿದಾಯಕ ಕ್ರಮವನ್ನು ಕೈಗೊಂಡಿದೆ. ಇದರ ಜವಾಬ್ದಾರಿಯನ್ನು ಪೆÇ್ರಫೆಸರ್ ಆಯುಷ್ಮಾನ್ ಅವರು ವಹಿಸಿಕೊಂಡಿದ್ದಾರೆ. ಈ ಪೆÇ್ರಫೆಸರ್ ಆಯುಷ್ಮಾನ್ ಯಾರು ಎಂದು ನೀವು ಯೋಚಿಸುತ್ತಿರಬಹುದು. ವಾಸ್ತವವಾಗಿ ಪೆÇ್ರಫೆಸರ್ ಆಯುಷ್ಮಾನ್ ಒಂದು ಕಾಮಿಕ್ಸ್ ಪುಸ್ತಕದ ಹೆಸರು. ಇದರಲ್ಲಿ ಬೇರೆ ಬೇರೆ ಕಾರ್ಟೂನ್ ಪಾತ್ರಗಳ ಮೂಲಕ ಸಣ್ಣ ಸಣ್ಣ ಕಥೆಗಳನ್ನು ಚಿತ್ರಿಸಲಾಗಿದೆ. ಜೊತೆಯಲ್ಲಿ ತುಳಸಿ, ಆಲೋವೆರಾ, ನೆಲ್ಲಿಕಾಯಿ, ಅಮೃತಬಳ್ಳಿ, ಬೇವು, ಅಶ್ವಗಂಧ, ಬ್ರಾಹ್ಮೀ ಮುಂತಾದ ಆರೋಗ್ಯಕರ ಔಷಧೀಯ ಸಸ್ಯಗಳ ಉಪಯೋಗಗಳನ್ನು ತಿಳಿಸಲಾಗಿದೆ.
ರ ಅಪಾರ ಸಾಧ್ಯತೆಗಳಿವೆ. ಆಯುರ್ವೇದ ಮತ್ತು ಗಿಡಮೂಲಿಕೆ ಉತ್ಪನ್ನಗಳ ರಪ್ತು ಪ್ರಮಾಣದಲ್ಲಿ ಕೂಡಾ ಕಳೆದ ವರ್ಷಗಳಲ್ಲಿ ಸಾಕಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
ನಮ್ಮ ಜನರ ಯೋಗಕ್ಷೇಮ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ರೈತರ ಮತ್ತು ಯುವಜನತೆಯ ಆದಾಯವನ್ನು ಹೆಚ್ಚಿಸುವಲ್ಲಿ ಕೂಡಾ ಸಹಾಯ ಮಾಡುವ ರೀತಿ ಈ ಉತ್ಪನ್ನಗಳತ್ತ ಹೆಚ್ಚಿನ ಗಮನ ಹರಿಸಬೇಕೆಂದು ವಿಜ್ಞಾನಿಗಳಲ್ಲಿ, ಸಂಶೋಧಕರಲ್ಲಿ ಮತ್ತು ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಮನವಿ ಮಾಡುತ್ತೇನೆ.
ಸ್ನೇಹಿತರೇ, ಸಾಂಪ್ರದಾಯಿಕ ಕೃಷಿಗಿಂತ ಒಂದು ಹೆಜ್ಜೆ ಮುಂದೆ ಸಾಗಿ, ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳು, ಹೊಸ ಆಯ್ಕೆಗಳು, ಸತತವಾಗಿ ಸ್ವಉದ್ಯೋಗದ ಹೊಸ ಸಾಧನಗಳಾಗುತ್ತಿವೆ. ಪುಲ್ವಾಮಾದ ಇಬ್ಬರು ಸೋದರರ ಕತೆಯೊಂದು ಇದರ ಒಂದು ಉದಾಹರಣೆಯಾಗಿದೆ. ಜಮ್ಮು ಕಾಶ್ಮೀರದ ಬಿಲಾಲ್ ಅಹ್ಮದ್ ಶೇಖ್ ಮತ್ತು ಮುನೀರ್ ಅಹ್ಮದ್ ಶೇಖ್ ಸೋದರರು ತಮಗಾಗಿ ಹೊಸ ವಿಧಾನವೊಂದನ್ನು ಅನ್ವೇಷಿಸಿದ್ದು, ಇದು ನವಭಾರತದ ಒಂದು ಉದಾಹರಣೆಯಾಗಿದೆ. 39 ವರ್ಷದ ಬಿಲಾಲ್ ಅಹ್ಮದ್ ಅವರು ಉನ್ನತ ವಿದ್ಯಾರ್ಹತೆ ಹೊಂದಿದ್ದಾರೆ. ಅವರು ಅನೇಕ ಪದವಿಗಳನ್ನು ಗಳಿಸಿದ್ದಾರೆ. ತಮ್ಮ ಉನ್ನತ ಶಿಕ್ಷಣದಿಂದ ಗಳಿಸಿದ ಅನುಭವಗಳನ್ನು ಉಪಯೋಗಿಸಿ ಅವರಿಂದು ಕೃಷಿಯಲ್ಲಿ ಸ್ವಂತ ಸ್ಟಾರ್ಟ್ ಅಪ್ ಆರಂಭಿಸಿದ್ದಾರೆ. ಬಿಲಾಲ್ ಅವರು ತಮ್ಮ ಮನೆಯಲ್ಲೇ ವರ್ಮಿ ಕಂಪೆÇೀಸ್ಟಿಂಗ್ ಘಟಕವೊಂದನ್ನು ಸ್ಥಾಪಿಸಿದ್ದಾರೆ. ಈ ಘಟಕದಿಂದ ತಯಾರಾಗುವ ಜೈವಿಕ ರಸಗೊಬ್ಬರದಿಂದ ಹೊಲದಲ್ಲಿ ಸಾಕಷ್ಟು ಪ್ರಯೋಜನವಾಗಿದ್ದು ಮಾತ್ರವಲ್ಲ, ಇದು ಜನರಿಗೆ ಉದ್ಯೋಗಾವಕಾಶಗಳನ್ನು ಕೂಡಾ ಒದಗಿಸಿದೆ. ಪ್ರತಿ ವರ್ಷ ಈ ಸೋದರರ ಘಟಕದಿಂದ ರೈತರಿಗೆ ಸುಮಾರು ಮೂರು ಸಾವಿರ ಕ್ವಿಂಟಾಲ್ ವರ್ಮಿ ಕಂಪೆÇೀಸ್ಟ್ ದೊರೆಯುತ್ತಿದೆ. ಇಂದು ಅವರ ಈ ವರ್ಮಿ ಕಂಪೆÇೀಸ್ಟಿಂಗ್ ಘಟಕದಲ್ಲಿ 15 ಮಂದಿ ಕೆಲಸ ಕೂಡಾ ಮಾಡುತ್ತಿದ್ದಾರೆ. ಅವರ ಘಟಕವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಇಚ್ಛೆಯಿರುವ ಯವಜನತೆಯಾಗಿದ್ದಾರೆ. ಪುಲ್ವಾಮಾದ ಶೇಖ್ ಸೋದರರು ಉದ್ಯೋಗಾನ್ವೇಷಕರಾಗುವ ಬದಲು ಉದ್ಯೋಗ ಸೃಷ್ಟಿಸುವವರಾಗುವ ಸಂಕಲ್ಪ ತೊಟ್ಟರು ಮತ್ತು ಅವರಿಂದು ಜಮ್ಮು ಕಾಶ್ಮೀರ ಮಾತ್ರವಲ್ಲದೇ ಇಡೀ ದೇಶದ ಜನರಿಗೆ ಹೊಸದೊಂದು ದಾರಿ ತೋರಿಸುತ್ತಿದ್ದಾರೆ.
ನನ್ನ ಪ್ರೀತಿಯ ದೇಶಬಾಂಧವರೇ, ಸೆಪ್ಟೆಂಬರ್ 25 ದೇಶದ ಶ್ರೇಷ್ಠ ಪುತ್ರ ಪಂಡಿತ್ ದೀನ್ ದಯಾಲ್ ಉಪಾಧ್ಯಾಯ ಅವರ ಜಯಂತಿ. ದೀನ್ ದಯಾಳ್ ಅವರು, ಕಳೆದ ಶತಮಾನದ ಶ್ರೇಷ್ಠ ಚಿಂತಕರಲ್ಲಿ ಒಬ್ಬರು. ಅವರ ಅರ್ಥಶಾಸ್ತ್ರ ತತ್ವಗಳು, ಸಮಾಜವನ್ನು ಸಶಕ್ತಗೊಳಿಸುವ ಅವರ ನೀತಿಗಳು, ಅವರು ತೋರಿಸಿದ ಅಂತ್ಯೋದಯದ ಮಾರ್ಗ, ಇಂದಿಗೂ ಪ್ರಸ್ತುತ, ಅಷೆ್ಟೀ ಪ್ರೇರಣಾದಾಯಕವಾಗಿವೆ. ಮೂರು ವರ್ಷಗಳ ಹಿಂದೆ ಸೆಪ್ಟೆಂಬರ್ 25 ರಂದು ಅವರ ಜನ್ಮ ಜಯಂತಿಯಂದು ವಿಶ್ವದ ಅತಿ ದೊಡ್ಡ Health Assurance Scheme – ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಲಾಯಿತು. ಇಂದು ದೇಶದ ಎರಡೂಕಾಲು ಕೋಟಿಗೂ ಅಧಿಕ ಬಡಜನತೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ದೊರೆತಿದೆ. ಬಡವರಿಗಾಗಿ ಇಷ್ಟು ದೊಡ್ಡ ಯೋಜನೆಯನ್ನು, ದೀನ್ ದಯಾಳ್ ಅವರ ಅಂತ್ಯೋದಯ್ ತತ್ವಕ್ಕೆ ಸಮರ್ಪಿಸಲಾಗಿದೆ. ಇಂದಿನ ಯುವಜನತೆ ಅವರ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದರಿಂದ ಅವರಿಗೆ ಬಹಳಷ್ಟು ಸಹಾಯವಾಗುತ್ತದೆ. ಒಂದು ಬಾರಿ ಲಕ್ನೋದಲ್ಲಿ ದೀನ್ ದಯಾಳ್ ಅವರು ಹೀಗೆ ಹೇಳಿದ್ದರು. - “ಪ್ರಪಂಚದಲ್ಲಿ ಎಷೆ್ಟೂಂದು ಉತ್ತಮ ವಿಷಯಗಳು, ಉತ್ತಮ ಗುಣಗಳಿವೆ, ಇವೆಲ್ಲವೂ ನಮಗೆ ಸಮಾಜದಿಂದಲೇ ದೊರೆಯುತ್ತವೆ. ನಾವು ಸಮಾಜದ ಈ ಋಣವನ್ನು ತೀರಿಸಲೇ ಬೇಕು ಎನ್ನುವಂತಹ ವಿಚಾರಗಳನ್ನು ನಾವು ಯೋಚಿಸಬೇಕು.” ಅಂದರೆ ನಾವು ಸಮಾಜದಿಂದ, ದೇಶದಿಂದ ಏನೆಲ್ಲಾ ಪಡೆದುಕೊಳ್ಳುತ್ತೇವೋ ಅದು ದೇಶದ ಕಾರಣದಿಂದಲೇ ಪಡೆದುಕೊಳ್ಳುತ್ತೇವೆ. ಆದ್ದರಿಂದ ದೇಶದ ಈ ಋಣವನ್ನು ಹೇಗೆ ತೀರಿಸಬೇಕೆಂಬ ಕುರಿತು ಚಿಂತಿಸಬೇಕೆಂಬ ವಿಷಯವನ್ನು ನಮಗೆ ದೀನ್ ದಯಾಳ್ ಅವರು ಕಲಿಸಿದ್ದಾರೆ. ಇದು ಇಂದಿನ ಯುವಜನತೆಗೆ ದೊಡ್ಡ ಸಂದೇಶವಾಗಿದೆ.
ಸ್ನೇಹಿತರೇ, ದೀನ್ ದಯಾಳ್ ರವರ ಜೀವನದಿಂದ ನಮಗೆ ಎಂದಿಗೂ ಸೋಲೊಪ್ಪದ ಪಾಠವೂ ದೊರೆಯುತ್ತದೆ. ಗಂಭೀರ ರಾಜಕೀಯ ಮತ್ತು ಸೈದ್ಧಾಂತಿಕ ವೈಪರೀತ್ಯಗಳ ಹೊರತಾಗಿಯೂ ಭಾರತದ ಪ್ರಗತಿಗಾಗಿ ದೇಶೀಯ ಮಾದರಿಯ ದೃಷ್ಟಿಕೋನದಿಂದ ಅವರು ಹಿಂದೆ ಸರಿಯಲಿಲ್ಲ. ಇಂದು ಹೆಚ್ಚಿನ ಸಂಖ್ಯೆಯ ಯುವಜನತೆ ಸಿದ್ಧ ಮಾರ್ಗಗಳಲ್ಲದೇ ಪ್ರತ್ಯೇಕವಾಗಿ ಮುಂದೆ ಸಾಗಲು ಬಯಸುತ್ತಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ. ದೀನ್ ದಯಾಳ್ ಅವರ ಜೀವನದಿಂದ ಇಂತಹವರಿಗೆ ಸಾಕಷ್ಟು ಸಹಾಯ ದೊರೆಯಬಹುದು. ಆದ್ದರಿಂದಲೇ ಅವರ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಬೇಕೆಂದು ನಾನು ಯುವಜನತೆಯಲ್ಲಿ ಮನವಿ ಮಾಡುತ್ತೇನೆ.
ನನ್ನ ಪ್ರೀತಿಯ ದೇಶ ಬಾಂಧವರೇ, ನಾವಿಂದು ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಹೇಳುತ್ತಿದ್ದ ಹಾಗೆ, ಮುಂಬರುವ ದಿನಗಳು ಹಬ್ಬಗಳ ಸಮಯವಾಗಿದೆ. ಇಡೀ ದೇಶ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಸುಳ್ಳಿನ ವಿರುದ್ಧ ಸತ್ಯದ ವಿಜಯೋತ್ಸವವನ್ನು ಆಚರಿಸಲಿದೆ. ಆದರೆ ಈ ಉತ್ಸವಾಚರಣೆಯಲ್ಲಿ ನಾವು ಹೋರಾಟದ ಬಗ್ಗೆ ಕೂಡಾ ನೆನಪಿಟ್ಟುಕೊಳ್ಳಬೇಕು ಅದೇ ಕೊರೋನಾ ವಿರುದ್ಧದ ಹೋರಾಟ. ಟೀಮ್ ಇಂಡಿಯಾ ಈ ಹೋರಾಟದಲ್ಲಿ ಪ್ರತಿದಿನ ಹೊಸದೊಂದು ದಾಖಲೆ ಸೃಷ್ಟಿಸುತ್ತಿದೆ. ಲಸಿಕಾ ನೀಡಿಕೆಯಲ್ಲಿ ದೇಶವು ಇಂತಹ ಅನೇಕ ದಾಖಲೆಗಳನ್ನು ಮಾಡುತ್ತಿದೆ. ಇದರ ಬಗ್ಗೆ ಇಡೀ ವಿಶ್ವದಲ್ಲಿ ಚರ್ಚೆ ನಡೆಯುತ್ತಿದೆ. ಈ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಮಹತ್ವದ ಪಾತ್ರವಿದೆ. ನಮ್ಮ ಸರದಿ ಬಂದಾಗ ನಾವು ಲಸಿಕೆಯನ್ನು ಪಡೆಯಲೇ ಬೇಕು ಅದರೊಂದಿಗೆ ಈ ಸುರಕ್ಷತೆಯಿಂದ ಯಾರೂ ಹೊರತಾಗಬಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ನಿಮ್ಮ ಸುತ್ತ ಮುತ್ತ ಯಾರಾದರೂ ಇನ್ನೂ ಲಸಿಕೆ ಪಡೆದುಕೊಳ್ಳದವರು ಇದ್ದರೆ, ಅವರನ್ನು ಲಸಿಕಾ ಕೇಂದ್ರಕ್ಕೆ ಕರೆತರಬೇಕು. ಲಸಿಕೆ ಪಡೆದುಕೊಂಡ ನಂತರವೂ ಅಗತ್ಯ ಶಿಷ್ಟಾಚಾರದ ಪಾಲನೆ ಮಾಡಲೇ ಬೇಕು. ಈ ಹೋರಾಟದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ತಮ್ಮ ಧ್ವಜ ಹಾರಿಸಲಿದೆಯೆಂಬ ಭರವಸೆ ನನಗಿದೆ. ನಾವು ಮುಂದಿನ ಬಾರಿ ಬೇರೊಂದು ವಿಷಯದ ಬಗ್ಗೆ ಮನದ ಮಾತನಾಡೋಣ. ನಿಮ್ಮೆಲ್ಲರಿಗೂ, ಪ್ರತಿಯೊಬ್ಬ ದೇಶವಾಸಿಗೂ, ಹಬ್ಬಗಳಿಗಾಗಿ ಅನೇಕಾನೇಕ ಶುಭಾಶಯಗಳು.
ಧನ್ಯವಾದ.
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇಂದು ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಲ್ಲದೆ ನಮ್ಮ ದೇಶ ಅವರ ಸ್ಮರಣಾರ್ಥ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿಯೂ ಆಚರಿಸುತ್ತದೆ. ಇಂದು ಮೇಜರ್ ಧ್ಯಾನ್ ಚಂದ್ ಅವರ ಆತ್ಮ ಎಲ್ಲಿಯೇ ಇರಲಿ ಬಹಳ ಪ್ರಸನ್ನವಾಗಿರಬಹುದು ಎಂದು ನಾನು ಆಲೋಚಿಸುತ್ತಿದ್ದೇನೆ. ಏಕೆಂದರೆ ವಿಶ್ವದಲ್ಲಿ ಭಾರತದ ಹಾಕಿಯ ಧ್ವಜವನ್ನು ಹಾರಿಸಿದ್ದು ಧ್ಯಾನ್ ಚಂದ್. ನಾಲ್ಕು ದಶಕಗಳ ನಂತರ ಸುಮಾರು 41 ವರ್ಷಗಳ ನಂತರ ಭಾರತದ ಯುವಜನತೆ ಮಹಿಳಾ ಮತ್ತು ಪುರುಷ ಕ್ರೀಡಾಳುಗಳು ಮತ್ತೆ ಹಾಕಿಗೆ ಜೀವ ತುಂಬಿದ್ದಾರೆ. ಎಷ್ಟೇ ಪದಕಗಳು ದೊರೆತರೂ ಹಾಕಿಯಲ್ಲಿ ಭಾರತಕ್ಕೆ ಪದಕ ದೊರೆಯದಿದ್ದರೆ ದೇಶದ ಜನತೆ ವಿಜಯದ ಆನಂದವನ್ನು ಅನುಭವಿಸಲಾರರು. ಈ ಬಾರಿ ಒಲಿಂಪಿಕ್ ನಲ್ಲಿ ಹಾಕಿಯಲ್ಲಿ ಪದಕ ಲಭಿಸಿದೆ. ನಾಲ್ಕು ದಶಕಗಳ ನಂತರ ಪದಕ ದೊರೆತಿದೆ. ಮೇಜರ್ ಧ್ಯಾನ್ ಚಂದ್ ಅವರ ಮನಸ್ಸಿಗೆ, ಅವರ ಆತ್ಮಕ್ಕೆ, ಅವರು ಎಲ್ಲಿಯೇ ಇರಲಿ ಅವರಿಗೆ ಎಷ್ಟು ಆನಂದವಾಗುತ್ತಿದೆಯೋ ಎಂದು ನೀವು ಊಹಿಸಬಹುದು. ಮೇಜರ್ ಧ್ಯಾನ್ ಚಂದ್ ಅವರ ಸಂಪೂರ್ಣ ಜೀವನ ಕ್ರೀಡೆಗೆ ಸಮರ್ಪಿತವಾಗಿತ್ತು. ಆದ್ದರಿಂದಲೇ ಇಂದು ದೇಶದ ಯುವಜನತೆಯಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡುತ್ತಿದೆ. ತಂದೆ ತಾಯಿಯರಲ್ಲೂ ಮಕ್ಕಳು ಕ್ರೀಡೆಯಲ್ಲಿ ಮುಂದುವರಿಯುತ್ತಿದ್ದಾರೆ ಎಂದರೆ ಸಂತೋಷವಾಗುತ್ತಿದೆ. ಈ ಉತ್ಸಾಹವೇ ಮೇಜರ್ ಧ್ಯಾನ್ ಚಂದ್ ಅವರಿಗೆ ಸಲ್ಲಿಸುವ ದೊಡ್ಡ ಶೃದ್ಧಾಂಜಲಿಯಾಗಿದೆ ಎಂದು ನನಗೆ ಅನ್ನಿಸುತ್ತದೆ.
ಸ್ನೇಹಿತರೆ, ಕ್ರೀಡೆಯ ಬಗ್ಗೆ ಮಾತನಾಡುವಾಗ ಕಣ್ಣ ಮುಂದೆ ಯುವಜನತೆ ಕಾಣಿಸುವುದು ಸಹಜ. ಯುವಜನತೆಯತ್ತ ಗಮನವಿಟ್ಟು ನೋಡಿದಾಗ ಎಂಥ ದೊಡ್ಡ ಬದಲಾವಣೆಯಾಗುತ್ತಿದೆ ಎಂಬುದು ಕಾಣಿಸುತ್ತದೆ. ಯುವಜನತೆಯ ಮನಸ್ಸು ಬದಲಾಗಿದೆ. ಇಂದಿನ ಯುವ ಮನಸ್ಸು ಹಳೆಯ ಅಳಿದು ಹೋಗುತ್ತಿರುವ ಪದ್ಧತಿಗಳನ್ನು ಬಿಟ್ಟು ಹೊಸದನ್ನು ಮಾಡುವ ಬಯಕೆ ಹೊಂದಿದ್ದಾರೆ, ವಿಭಿನ್ನತೆಯನ್ನು ಬಯಸುತ್ತಾರೆ. ಇಂದಿನ ಯುವಜನತೆ ಸಿದ್ಧ ಮಾರ್ಗದಲ್ಲಿ ನಡೆಯಲು ಬಯಸುವುದಿಲ್ಲ. ಅವರು ಹೊಸ ಮಾರ್ಗವನ್ನು ನಿರ್ಮಿಸಬಯಸುತ್ತಾರೆ. ತಿಳಿಯದ ವಿಶ್ವಕ್ಕೆ ಕಾಲಿರಿಸಬಯಸುತ್ತಾರೆ. ಹೊಸ ಲಕ್ಷ್ಯ, ಗುರಿಯೂ ಹೊಸದು, ಮಾರ್ಗವೂ ಹೊಸದು ಬಯಕೆಯೂ ಹೊಸದು. ಒಂದು ಬಾರಿ ಯುವಜನತೆ ಮನಸ್ಸು ಮಾಡಿದರೆ ಜೀವವನ್ನೇ ಮುಡಿಪಾಗಿರಿಸುತ್ತಾರೆ. ಹಗಲಿರುಳು ಶ್ರಮಿಸುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಭಾರತ ತನ್ನ ಬಾಹ್ಯಾಕಾಶ ವಲಯವನ್ನು ತೆರೆದಿಟ್ಟಿದೆ. ನೋಡ ನೋಡುತ್ತಿದ್ದಂತೆ ಈ ಪೀಳಿಗೆ ಆ ಅವಕಾಶವನ್ನು ಬಾಚಿಕೊಳ್ಳುತ್ತಿದೆ. ಇದರ ಲಾಭ ಪಡೆಯಲು ಕಾಲೇಜು ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು, ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಕರು ಹುರುಪಿನಿಂದ ಮುಂದೆ ಬಂದಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ಉಪಗ್ರಹಗಳ ಸಂಖ್ಯೆ ಬಹಳ ಹೆಚ್ಚಲಿದೆ ಎಂದು ನನಗೆ ಖಂಡಿತ ವಿಶ್ವಾಸವಿದೆ. ಇದರಲ್ಲಿ ಕಾಲೇಜುಗಳು, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಖಾಸಗಿ ವಿದ್ಯಾರ್ಥಿಗಳು ಕೆಲಸಮಾಡಿದ್ದಾರೆ
ಇದೇ ರೀತಿ ಇಂದು ಎಲ್ಲಿಯೇ ನೋಡಿದರೂ, ಯಾವುದೇ ಕುಟುಂಬವನ್ನು ಗಮನಿಸಿದರೂ, ಅದು ಎಷ್ಟೇ ಅನುಕೂಲಸ್ಥ ಕುಟುಂಬವಾಗಿರಲಿ, ಶಿಕ್ಷಿತ ಕುಟುಂಬವಾಗಿರಲಿ, ಅಲ್ಲಿ ಯುವಜನರೊಂದಿಗೆ ಮಾತಾಡಿದಲ್ಲಿ ಅವರು ಏನೆಂದು ಹೇಳುತ್ತಾರೆ? ನಾನು ಪಾರಂಪರಿಕ ಕುಟುಂಬದ ವೃತ್ತಿಯನ್ನು ಹೊರತುಪಡಿಸಿ ಸ್ಟಾರ್ಟ್ ಅಪ್ ಆರಂಭಿಸುವೆ, ಸ್ಟಾರ್ಟ್ ಅಪ್ ನಲ್ಲಿ ತೊಡಗುವೆ ಎಂದು ಹೇಳುತ್ತಾರೆ. ಅಂದರೆ ರಿಸ್ಕ್ ತೆಗೆದುಕೊಳ್ಳಲು ಅವರ ಮನಸ್ಸು ಹಾತೊರೆಯುತ್ತಿದೆ. ಇಂದು ಸಣ್ಣ ಪುಟ್ಟ ನಗರಗಳಲ್ಲಿ ಕೂಡ ಸ್ಟಾರ್ಟ್ ಅಪ್ ಸಂಸ್ಕೃತಿ ವಿಸ್ತೃತಗೊಳ್ಳುತ್ತಿದೆ. ಅದರಲ್ಲಿ ನಾನು ಉಜ್ವಲ ಭವಿಷ್ಯದ ಸಂಕೇತವನ್ನು ಕಾಣುತ್ತಿದ್ದೇನೆ. ಇತ್ತೀಚೆಗೆ ಕೆಲ ದಿನಗಳ ಹಿಂದೆ ನಮ್ಮ ದೇಶದಲ್ಲಿ ಆಟಿಕೆಗಳ ಚರ್ಚೆ ನಡೆದಿತ್ತು. ನೋಡ ನೋಡುತ್ತಿದ್ದಂತೆ ನಮ್ಮ ಯುವಕರ ಮನದಲ್ಲಿ ಈ ವಿಚಾರ ಬಂದಿತು, ಅವರು ವಿಶ್ವದಲ್ಲಿ ಭಾರತದ ಆಟಿಕೆಗಳನ್ನು ಹೇಗೆ ಪರಿಚಯಿಸುವುದು ಎಂಬ ಬಗ್ಗೆ ನಿರ್ಧಾರ ಕೈಗೊಂಡರು. ಹಾಗಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ವಿಶ್ವದಲ್ಲಿ ಆಟಿಕೆಗಳಿಗೆ ಬೃಹತ್ ಮಾರುಕಟ್ಟೆಯಿದೆ. 6-7 ಲಕ್ಷ ಕೋಟಿ ರೂಪಾಯಿ ವ್ಯಾಪಾರವಾಗುತ್ತದೆ. ಅದರಲ್ಲಿ ಭಾರತದ ಪಾಲು ಬಹಳ ಕಡಿಮೆ. ಆದರೆ, ಆಟಿಕೆಗಳಳನ್ನು ಹೇಗೆ ತಯಾರಿಸುವುದು, ಆಟಿಕೆಗಳ ವೈವಿಧ್ಯತೆ ಏನಿರಬೇಕು, ಆಟಿಕೆಗಳಲ್ಲಿ ಎಂಥ ತಂತ್ರಜ್ಞಾನವಿರಬೇಕು, ಮಕ್ಕಳ ಮನಃಶಾಸ್ತ್ರದ ಪ್ರಕಾರ ಆಟಿಕೆಗಳು ಹೇಗಿರಬೇಕು ಎಂದು ಆಲೋಚಿಸುತ್ತಿದ್ದಾರೆ. ಇಂದು ನಮ್ಮ ದೇಶದ ಯುವಜನತೆ ಇದರತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ. ಕೊಡುಗೆ ನೀಡಬಯಸುತ್ತಿದ್ದಾರೆ. ಸ್ನೇಹಿತರೆ ಮತ್ತೊಂದು ವಿಷಯ ಮನಸ್ಸಿಗೆ ಮುದವನ್ನು ನೀಡುತ್ತದೆ ಮತ್ತು ವಿಶ್ವಾಸವನ್ನು ಮತ್ತಷ್ಟು ಧೃಡಗೊಳಿಸುತ್ತದೆ. ಅದೇನೆಂದು ನೀವು ಗಮನಿಸಿದ್ದೀರಾ? ಸಾಮಾನ್ಯವಾಗಿ ನಮ್ಮಲ್ಲಿ ಇರಲಿ ಬಿಡು ಎಂಬುದು ಸ್ವಭಾವವಾಗಿತ್ತು, ಸ್ವಭಾವವಾಗಿದೆ. ಆದರೆ ನಮ್ಮ ದೇಶದ ಯುವಮನಸ್ಸು ಈಗ ಸರ್ವಶ್ರೇಷ್ಠತೆಯತ್ತ ತಮ್ಮನ್ನು ಕೇಂದ್ರೀಕರಿಸುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಸರ್ವೋತ್ತಮ ರೀತಿಯಲ್ಲಿ ಸರ್ವೋತ್ತಮ ಸಾಧನೆ ಮಾಡಬಯಸುತ್ತಾರೆ. ಇದು ಕೂಡಾ ರಾಷ್ಟ್ರದ ಬಹು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ.
ಸ್ನೇಹಿತರೆ ಈ ಬಾರಿ ಒಲಿಂಪಿಕ್ ಕೂಡಾ ಬಹುದೊಡ್ಡ ಪ್ರಭಾವವನ್ನು ಬೀರಿದೆ. ಒಲಿಂಪಿಕ್ ಕ್ರೀಡೆ ಮುಗಿದು ಈಗ ಪ್ಯಾರಾಲಿಂಪಿಕ್ ಮುಂದುವರಿದಿದೆ. ಈ ಕ್ರೀಡಾ ವಿಶ್ವದಲ್ಲಿ ದೇಶಕ್ಕೆ ದೊರೆತ ಸಾಧನೆಯ ಪಟ್ಟು ಕಡಿಮೆ ಇರಬಹುದು ಆದರೆ ಭರವಸೆ ತುಂಬುವಲ್ಲಿ ಬಹುದೊಡ್ಡ ಪಾಲಿದೆ. ಇಂದು ಯುವಜನತೆ ಕ್ರೀಡೆಯತ್ತ ಮುಖಮಾಡುವುದಲ್ಲದೆ ಅದರೊಟ್ಟಿಗಿರುವ ಸಂಭಾವ್ಯತೆಗಳತ್ತಲೂ ನೋಡುತ್ತಿದ್ದಾರೆ. ಅದರ ಸಂಪೂರ್ಣ eco system ನ್ನು ಬಹಳಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಅದರ ಸಾಮರ್ಥ್ಯವನ್ನು ಅರಿಯುತ್ತಿದ್ದಾನೆ. ಒಂದಲ್ಲ ಒಂದು ರೀತಿ ಅದರೊಂದಿಗೆ ತನ್ನನ್ನು ತೊಡಗಿಸಿಕೊಳ್ಳಬಯಸುತ್ತಿದ್ದಾರೆ. ಈಗ ಅವರು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ತೊರೆದು ಹೊಸ ಶಿಸ್ತುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನನ್ನ ದೇಶವಾಸಿಗಳೇ, ಎಂಥ Momentum ತಲುಪಿದ್ದೇವೆ ಎಂದರೆ, ಪ್ರತಿ ಕುಟುಂಬದಲ್ಲಿ ಕ್ರೀಡೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನೀವೇ ಹೇಳಿ, ಈ Momentum ತಡೆಯಬಹುದೆ, ಅದು ಉಚಿತವೇ. ಇಲ್ಲ ನೀವು ಕೂಡ ನನ್ನಂತೆಯೇ ಯೋಚಿಸುತ್ತಿರಬೇಕು. ಈಗ ದೇಶದಲ್ಲಿ ಕ್ರೀಡೆ, ಆಟಪಾಟ, ಕ್ರೀಡಾ ಮನೋಭಾವಕ್ಕೆ ತಡೆಯೇ ಇರಬಾರದು ಈ Momentum ಅನ್ನು ಕೌಟುಂಬಿಕ ಜೀವನದಲ್ಲಿ, ಸಾಮಾಜಿಕ ಜೀವನದಲ್ಲಿ, ರಾಷ್ಟ್ರದ ಜೀವನಶೈಲಿಯಲ್ಲಿ ಶಾಶ್ವತಗೊಳಿಸಬೇಕು - ಶಕ್ತಿಯನ್ನು ತುಂಬಬೇಕಿದೆ, ನಿರಂತರವಾಗಿ ಹೊಸ ಚೈತನ್ಯ ತುಂಬಬೇಕಿದೆ. ಮನೆಯಾಗಲಿ, ಹೊರಗಾಗಲಿ, ಹಳ್ಳಿಯಾಗಲಿ, ನಗರವಾಗಲಿ, ನಮ್ಮ ಆಟದ ಮೈದಾನಗಳು ತುಂಬಿ ತುಳುಕಬೇಕು, ಎಲ್ಲರೂ ಆಡೋಣ - ಎಲ್ಲರೂ ಸಾಧಿಸೋಣ ಮತ್ತು ಕೆಂಪು ಕೋಟೆಯ ವೇದಿಕೆಯಲ್ಲಿ ನಾನು ಹೇಳಿದ್ದು ನಿಮಗೆ ನೆನಪಿದೆಯೇ - "ಸಬ್ಕಾ ಪ್ರಯಾಸ್" - ಹೌದು, ಎಲ್ಲರ ಪ್ರಯತ್ನ. ಎಲ್ಲರ ಪ್ರಯತ್ನದಿಂದಲೇ, ಭಾರತ ಕ್ರೀಡೆಯಲ್ಲಿ ಅರ್ಹ ಎತ್ತರಕ್ಕೇರಲು ಸಾಧ್ಯವಿದೆದೆ. ಮೇಜರ್ ಧ್ಯಾನಚಂದ್ ಅವರಂತಹ ಮಹನೀಯರು ತೋರಿದ ಮಾರ್ಗದಲ್ಲಿ ಮುನ್ನಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ವರ್ಷಗಳ ನಂತರ, ಕುಟುಂಬವಾಗಲಿ, ಸಮಾಜವಾಗಲಿ, ರಾಜ್ಯವಾಗಲಿ, ರಾಷ್ಟ್ರವಾಗಲಿ, ಎಲ್ಲ ಜನತೆ ಒಂದೇ ಮನಸ್ಸಿನಿಂದ ಕ್ರೀಡೆಯತ್ತ ಸಾಗುವ ದೇಶದಲ್ಲಿ ಕಾಲ ಬಂದಿದೆ.
ನನ್ನ ಪ್ರಿಯ ಯುವಕರೇ, ನಾವು ವಿವಿಧ ರೀತಿಯ ಕ್ರೀಡೆಗಳನ್ನು ಕರಗತ ಮಾಡಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಹಳ್ಳಿ-ಹಳ್ಳಿಗಳಲ್ಲಿ ಕ್ರೀಡಾ ಸ್ಪರ್ಧೆಗಳು ನಿರಂತರವಾಗಿ ನಡೆಯಬೇಕು. ಸ್ಪರ್ಧೆಯಿಂದಲೇ ಕ್ರೀಡೆ ವಿಸ್ತರಿಸುತ್ತದೆ, ಅದು ಅಭಿವೃದ್ಧಿಗೊಳ್ಳುತ್ತದೆ, ಆಟಗಾರರು ಕೂಡ ಅದರಿಂದಲೇ ಹೊರಹೊಮ್ಮುತ್ತಾರೆ. ಬನ್ನಿ, ಈ Momentum ಹೆಚ್ಚಿಸಲು ನಾವೆಲ್ಲರೂ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡೋಣ, ಈ ಮೂಲಕ 'ಸಬ್ಕಾ ಪ್ರಯಾಸ್' ಎಂಬ ಮಂತ್ರವನ್ನು ಸಾಧಿಸಿ ತೋರಿಸೋಣ.
ನನ್ನ ಪ್ರಿಯ ದೇಶವಾಸಿಗಳೇ, ನಾಳೆ ಜನ್ಮಾಷ್ಟಮಿಯ ದೊಡ್ಡ ಹಬ್ಬವಿದೆ. ಜನ್ಮಾಷ್ಟಮಿಯ ಈ ಹಬ್ಬ ಭಗವಾನ್ ಶ್ರೀ ಕೃಷ್ಣನ ಜನ್ಮದಿನವಾಗಿದೆ. ತುಂಟ ಕೃಷ್ಣನಿಂದ ಹಿಡಿದು ವಿರಾಟ ರೂಪವನ್ನು ತಾಳುವ ಕೃಷ್ಣನವರೆಗೆ, ಶಾಸ್ತ್ರಗಳ ಜ್ಞಾನವುಳ್ಳ ಕೃಷ್ಣನಿಂದ ಶಸ್ತ್ರಾಸ್ತ್ರಗಳಿಂದ ಸಮರ್ಥನಾದ ಭಗವಂತನ ಎಲ್ಲ ರೂಪಗಳ ಪರಿಚಯ ನಮಗಿದೆ. ಕಲೆಯಿರಲಿ, ಸೌಂದರ್ಯವಿರಲಿ, ಮಾಧುರ್ಯವಾಗಲಿ, ಎಲ್ಲೆಲ್ಲಿಯೂ ಕೃಷ್ಣನಿದ್ದಾನೆ. ಆದರೆ ನಾನು ಏಕೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆಂದರೆ ಜನ್ಮಾಷ್ಟಮಿಗೆ ಕೆಲ ದಿನಗಳ ಹಿಂದೆ, ನಾನು ಅಂತಹ ಆಸಕ್ತಿಕರ ಅನುಭವವನ್ನು ಹೊಂದಿದ್ದೇನೆ, ಹಾಗಾಗಿ ನಾನು ನಿಮಗೆ ಈ ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ಈ ತಿಂಗಳ 20 ರಂದು, ಸೋಮನಾಥ ದೇವಾಲಯದ ನಿರ್ಮಾಣ ಕಾರ್ಯವನ್ನು ಲೋಕಾರ್ಪಣೆಗೊಳಿಸಲಾಯಿತು ಎಂಬುದು ನಿಮಗೆ ನೆನಪಿರಬಹುದು,. ಸೋಮನಾಥ ದೇವಸ್ಥಾನದಿಂದ 3-4 ಕಿಲೋಮೀಟರ್ ದೂರದಲ್ಲಿಯೇ ಭಾಲ್ಕ ತೀರ್ಥವಿದೆ, ಈ ಭಾಲ್ಕ ತೀರ್ಥವು ಭೂಮಿಯ ಮೇಲೆ ಶ್ರೀಕೃಷ್ಣನು ಅಂತಿಮ ಕ್ಷಣಗಳನ್ನು ಕಳೆದ ಸ್ಥಳವಾಗಿದೆ. ಒಂದು ರೀತಿಯಲ್ಲಿ, ಈ ಪ್ರಪಂಚದಲ್ಲಿ ಭಗವಂತನ ಲೀಲೆಗಳು ಇಲ್ಲಿ ಮುಕ್ತಾಯಗೊಂಡಿದ್ದವು. ಸೋಮನಾಥ ಟ್ರಸ್ಟ್ ನಿಂದ ಈ ಸಂಪೂರ್ಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಭಾಲ್ಕ ತೀರ್ಥದ ಮತ್ತು ಅಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ನಾನು ಆಲೋಚಿಸುತ್ತಿರುವಾಗಲೇ ನನ್ನ ದೃಷ್ಟಿ ಒಂದು ಸುಂದರ ಕಲಾ-ಪುಸ್ತಕದತ್ತ ಹರಿಯಿತು. ನನ್ನ ನಿವಾಸದ ಹೊರಗೆ ಯಾರೋ ಈ ಪುಸ್ತಕವನ್ನು ಬಿಟ್ಟು ಹೋಗಿದ್ದರು.. ಅದರಲ್ಲಿ ಶ್ರೀಕೃಷ್ಣನ ಹಲವು ರೂಪಗಳು, ಅನೇಕ ಭವ್ಯ ಚಿತ್ರಗಳು ಇವೆ. ಮೋಹಕ ಮತ್ತು ಸಾಕಷ್ಟು ಅರ್ಥಪೂರ್ಣ ಚಿತ್ರಗಳಿದ್ದವು. ನಾನು ಪುಸ್ತಕದ ಪುಟಗಳನ್ನು ತಿರುಗಿಸಲಾರಂಭಿಸಿದೆ. ನನ್ನ ಕುತೂಹಲ ಮತ್ತಷ್ಟು ಹೆಚ್ಚಿತು. ನಾನು ಈ ಪುಸ್ತಕ ಮತ್ತು ಆ ಎಲ್ಲಾ ಚಿತ್ರಗಳನ್ನು ನೋಡಿದೆ ಮತ್ತು ಅದರ ಮೇಲೆ ನನಗಾಗಿ ಒಂದು ಸಂದೇಶವನ್ನು ಬರೆದಿತ್ತು. ಅಲ್ಲದೆ ನಾನು ಓದಿದಾಗ ಅವರನ್ನು ಭೇಟಿಯಾಗಲೇಬೇಕು ಎಂದು ನಿರ್ಧರಿಸಿದೆ ಈ ಪುಸ್ತಕವನ್ನು ನನ್ನ ನಿವಾಸದ ಹೊರಗೆ ಬಿಟ್ಟು ಹೋದವರನ್ನು ನಾನು ಭೇಟಿಯಾಗಲೇಬೇಕು ಎಂದುಕೊಂಡೆ. ಹಾಗಾಗಿ ನನ್ನ ಕಛೇರಿ ಸಿಬ್ಬಂದಿ ಅವರನ್ನು ಸಂಪರ್ಕಿಸಿತು. ಮರುದಿನವೇ ಅವರನ್ನು ಭೇಟಿಯಾಗಲು ಕರೆಯಲಾಯಿತು ಮತ್ತು ಆ ಕಲಾ ಪುಸ್ತಕವನ್ನು ನೋಡಿ ಶ್ರೀ ಕೃಷ್ಣನ ವಿಭಿನ್ನ ಅವತಾರಗಳನ್ನು ನೋಡಿ ನನ್ನ ಕುತೂಹಲ ಕೆರಳಿತ್ತು. ಇದೇ ಕುತೂಹಲದಿಂದಲೇ ನಾನು ಜದುರಾಣಿ ದಾಸಿ ಅವರೊಂದಿಗೆ ನನ್ನ ಭೇಟಿಯಾಯಿತು. ಅವರು ಅಮೇರಿಕನ್ನರು, ಜನನ ಅಮೇರಿಕದಲ್ಲಾಯಿತು, ಪಾಲನೆ ಪೋಷಣೆ ಅಮೇರಿಕದಲ್ಲಾಯಿತು. ಜದುರಾಣಿ ದಾಸಿ ಅವರು ಇಸ್ಕಾನ್ ನೊಂದಿಗೆ ಕೆಲಸ ಮಾಡುತ್ತಾರೆ. ಹರೆ ಕೃಷ್ಣ ಅಭಿಯಾನಕ್ಕೆ ಸೇರಿದವರಾಗಿದ್ದಾರೆ. ಅವರ ಒಂದು ದೊಡ್ಡ ವೈಶಿಷ್ಟ್ಯತೆಯೆಂದರೆ ಭಕ್ತಿ ಕಲೆಯಲ್ಲಿ ಅವರು ನಿಪುಣರು. ಕೇವಲ ಎರಡು ದಿನಗಳ ನಂತರ, ಸೆಪ್ಟೆಂಬರ್ 1 ರಂದು ಇಸ್ಕಾನ್ ಸಂಸ್ಥಾಪಕರಾದ ಶ್ರೀಲ ಪ್ರಭುಪಾದ ಸ್ವಾಮಿಯವರ 125 ನೇ ಜಯಂತಿಯಿದೆ ಎಂದು ನಿಮಗೆ ಗೊತ್ತೆ. ಜದುರಾಣಿ ದಾಸಿ ಅವರು ಇದೇ ಕೆಲಸದ ನಿಮಿತ್ತ ಭಾರತಕ್ಕೆ ಬಂದಿದ್ದರು. ಅಮೆರಿಕದಲ್ಲಿ ಜನಿಸಿದವರು, ಭಾರತೀಯ ಭಾವನೆಗಳಿಂದ ದೂರ ಇದ್ದವರು, ಶ್ರೀಕೃಷ್ಣನ ಸುಂದರ ಚಿತ್ರಗಳನ್ನು ಹೇಗೆ ಬಿಡಿಸುತ್ತಾರೆ ಎಂಬುದು ನನ್ನ ಮುಂದಿರುವ ದೊಡ್ಡ ಪ್ರಶ್ನೆ. ನಾನು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದೆ ಆದರೆ ಅದರ ಒಂದು ಭಾಗವನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
ಪಿ.ಎಂ. ಜದುರಾಣಿ ಅವರೆ, ಹರೆ ಕೃಷ್ಣ! ನಾನು ಭಕ್ತಿ ಕಲೆಯ ಬಗ್ಗೆ ಓದಿದ್ದೇನೆ. ಆದರೆ ನಮ್ಮ ಕೇಳುಗರಿಗೆ ಮತ್ತಷ್ಟು ತಿಳಿಸಿಕೊಡಿ. ಇದರತ್ತ ನಿಮ್ಮ ಒಲವು ಮತ್ತು ಆಸಕ್ತಿ ಬಹಳ ಮಹತ್ತರವಾದುದು.
ಜದುರಾಣಿ ಜಿ: ಭಕ್ತಿ ಕಲೆಯಲ್ಲಿ ಒಂದು ವಿಭಾಗವಿದೆ. ಅದು ಮನಸ್ಸು ಅಥವಾ ಕಲ್ಪನೆಯಿಂದಲ್ಲದೇ ಬ್ರಹ್ಮ ಸಂಹಿತೆಯಂತಹ ಪ್ರಾಚೀನ ವೇದ ಗ್ರಂಥಗಳಿಂದ ಬಂದಿರುವುದಾಗಿದೆ ಎಂದು ತಿಳಿಸುತ್ತದೆ. ವೆಂ “ಓಂಕಾರಾಯ ಪತಿತಂ, ಸ್ಕಿಲತಂ ಸಿಕಂದ್”, ಬೃಂದಾವನದ ಗೋಸ್ವಾಮಿಯಾದ ಭಗವಾನ್ ಬ್ರಹ್ಮನಿಂದಲೇ ಉಲ್ಲೇಖಿಸಲ್ಪಟ್ಟಿದ್ದು. “ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನಂದ ವಿಗ್ರಃ” ಆತನು ಕೊಳಲನ್ನು ಹೇಗೆ ಧರಿಸಿದ್ದಾನೆ, ಅವನ ಎಲ್ಲ ಇಂದ್ರಿಯಗಳು ಬೇರೆ ಇಂದ್ರಿಯಕ್ಕೆ ಹೇಗೆ ಸ್ಪಂದಿಸುತ್ತವೆ ಎನ್ನುತ್ತದೆ ಶ್ರೀಮದ್ ಭಾಗವತಮ್ (TCR 9.09): “ಬರ್ಹಾಪಿಂಡ್ ನಟವರವಪುಃ ಕರ್ಣಯೋಃ ಕರ್ಣಿಕಾರಂ” ಅವನು ಕಿವಿಯಲ್ಲಿ ಧರಿಸುವುದು ಕರ್ಣಿಕ ಹೂವು, ವೃಂದಾವನದ ಉದ್ದಗಲಕ್ಕೂ ಅವನ ಪಾದಕಮಲಗಳ ಛಾಯೆಯನ್ನು ಮೂಡಿಸುವನು. ಹಸುವಿನ ಹಿಂಡು ಅವನ ವೈಭವವನ್ನು ಹಾಡಿಹೊಗಳುತ್ತವೆ, ಅವನ ಕೊಳಲನಾದ ಎಲ್ಲಾ ಅದೃಷ್ಟವಂತ ಜೀವಿಗಳ ಹೃದಯವನ್ನು ಮತ್ತು ಮನಸ್ಸನ್ನು ಆಕರ್ಷಿಸುತ್ತದೆ. ಹಾಗಾಗಿ ಎಲ್ಲವೂ ಪ್ರಾಚೀನ ಪುರಾತನ ವೇದ ಗ್ರಂಥಗಳದ್ದಾಗಿದೆ. ಈ ಗ್ರಂಥಗಳ ಶಕ್ತಿ ಅತೀಂದ್ರಿಯ ವ್ಯಕ್ತಿಗಳಿಂದ ಬಂದಿವೆ ಮತ್ತು ಪರಿಶುದ್ಧ ಭಕ್ತರು ಈ ಕಲೆಗಾಗಿ ತಮ್ಮ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ ಆದ್ದರಿಂದ ಇದು ಪರಿವರ್ತನಾರೂಪಿಯಾಗಿದೆ, ಇದು ನನ್ನ ಶಕ್ತಿಯಲ್ಲ.
ಪಿ ಎಂ. : ಜದುರಾಣಿಯವರೆ ನಿಮಗೆ ಕೆಲವು ವಿವಿಧ ಪ್ರಶ್ನೆಗಳನ್ನು ಕೇಳಬೇಕಿದೆ. 1966 ರಿಂದ ಒಂದು ರೀತಿಯಲ್ಲಿ ಮತ್ತು 1976 ರಿಂದ ಭೌತಿಕವಾಗಿ ನೀವು ಭಾರತದೊಂದಿಗೆ ಸುದೀರ್ಘ ನಂಟನ್ನು ಹೊಂದಿದ್ದೀರಿ. ನಿಮಗೆ ಭಾರತದ ಬಗ್ಗೆ ಏನನ್ನಿಸುತ್ತದೆ ಎಂದು ಹೇಳುತ್ತೀರಾ.
ಜದುರಾಣಿ: ಪ್ರಧಾನಮಂತ್ರಿಗಳೇ ಭಾರತವೇ ನನಗೆ ಸರ್ವಸ್ವ. ಭಾರತ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬಹಳ ಸಾಧನೆಗೈದಿದೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಗಳಲ್ಲಿ, ಐ ಫೋನ್ ಮತ್ತು ಬೃಹತ್ ಕಟ್ಟಡಗಳ ವಿಷಯದಲ್ಲಿ ಹಾಗೂ ಹಲವಾರು ಸೌಲಭ್ಯಗಳ ವಿಷಯಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಕೆಲ ದಿನಗಳ ಹಿಂದೆ ಬಹುಶಃ ಸನ್ಮಾನ್ಯ ರಾಷ್ಟ್ರಪತಿಗಳ ಬಳಿಯೂ ಪ್ರಸ್ತಾಪಿಸಿದ್ದೆ. ಆದರೆ ಇದೆಲ್ಲ ಭಾರತದ ನಿಜವಾದ ವೈಭವವಲ್ಲ. ಅವತಾರ ಪುರುಷ ಶ್ರೀಕೃಷ್ಣ ಈ ಭೂಮಿಯ ಮೇಲೆ ಜನಿಸಿದ್ದ ಎಂಬುದು ನಿಜವಾದ ವೈಭವದ ವಿಷಯ ಮತ್ತು ಎಲ್ಲ ಅವತಾರಗಳು ಇಲ್ಲಿಯೇ ಜನ್ಮತಾಳಿದ್ದವು. ಭಗವಂತ ಶಿವ, ಭಗವಂತ ರಾಮ ಇಲ್ಲಿಯೇ ಅವತರಿಸಿದ್ದು. ಎಲ್ಲ ಪವಿತ್ರ ನದಿಗಳೂ ಇಲ್ಲಿವೆ. ವೈಷ್ಣವ ಸಂಸ್ಕೃತಿಯ ಎಲ್ಲ ಪವಿತ್ರ ಕ್ಷೇತ್ರಗಳೂ ಇಲ್ಲಿಯೇ ಇವೆ. ಹಾಗಾಗಿ ಭಾರತ ಅದರಲ್ಲೂ ವಿಶೇಷವಾಗಿ ವೃಂದಾವನ ವಿಶ್ವದಲ್ಲೇ ಅತ್ಯಂತ ಪ್ರಮುಖ ತಾಣವಾಗಿದೆ. ವೈಕುಂಠದ ಗ್ರಹಗಳಿಗೆಲ್ಲ ವೃಂದಾವನ ಮೂಲವಾಗಿದೆ. ದ್ವಾರಕೆಯ ಮೂಲ, ಸಂಪೂರ್ಣ ಭೌತ ಜಗತ್ತಿಗೆ ಮೂಲವಾಗಿದೆ. ಆದ್ದರಿಂದ ನನಗೆ ಭಾರತ ಎಂದರೆ ಒಲವು.
ಪಿ ಎಂ: ಧನ್ಯವಾದ ಜದುರಾಣಿಯವರೆ. ಹರೇ ಕೃಷ್ಣ
ಸ್ನೇಹಿತರೆ, ಇಂದು ವಿಶ್ವಾದ್ಯಂತ ಜನರು ಭಾರತದ ಆಧ್ಯಾತ್ಮ ಮತ್ತು ಭಾರತ ದರ್ಶನದ ಬಗ್ಗೆ ಯೋಚಿಸುತ್ತಿರಬೇಕಾದರೆ ನಮ್ಮ ಮಹಾನ್ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಭೂತಕಾಲವನ್ನು ಬಿಡಬೇಕು ಆದರೆ ಕಾಲಾತೀತವಾದುದನ್ನು ಮುಂದಕ್ಕೆ ಕೊಂಡೊಯ್ಯಬೇಕಾಗುತ್ತದೆ. ನಾವು ಹಬ್ಬಗಳನ್ನು ಆಚರಿಸೋಣ ಆದರೆ ಅದರಲ್ಲಡಗಿದ ವೈಜ್ಞಾನಿಕ ಅಂಶವನ್ನು ತಿಳಿಯೋಣ. ಅದರಲ್ಲಡಗಿದ ಅರ್ಥವನ್ನೂ ಅರಿಯೋಣ. ಇಷ್ಟೇ ಅಲ್ಲದೆ ಪ್ರತಿ ಹಬ್ಬದಲ್ಲೂ ಒಂದಲ್ಲ ಒಂದು ಸಂದೇಶವಿರುತ್ತದೆ. ಒಂದಲ್ಲ ಒಂದು ಸಂಸ್ಕಾರವಿರುತ್ತದೆ. ಇದನ್ನು ಅರಿಯಬೇಕು, ಅನುಭವಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಂಪರೆ ರೂಪದಲ್ಲಿ ಕೊಂಡೊಯ್ಯಬೇಕು. ದೇಶಬಾಂಧವರಿಗೆ ಮತ್ತೊಮ್ಮೆ ಜನ್ಮಾಷ್ಟಮಿಯ ಅನಂತ ಶುಭಾಷಯಗಳನ್ನು ಕೋರುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ಈ ಕೊರೊನಾ ಕಾಲಘಟ್ಟದಲ್ಲಿ ನಾನು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದರಲ್ಲಿ ಬಹುಶಃ ಕೊರತೆಯಿದೆ ಎನ್ನಿಸುತ್ತದೆ. ಸ್ವಚ್ಛತಾ ಆಂದೋಲನವನ್ನು ಎಳ್ಳಷ್ಟೂ ಕಡೆಗಣಿಸಬಾರದು ಎಂದು ನನಗೂ ಅನ್ನಿಸುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರ ಪ್ರಯತ್ನದಿಂದ ಹೇಗೆ ಎಲ್ಲರ ಏಳ್ಗೆಯಾಗುತ್ತದೆ ಎಂಬ ಉದಾಹರಣೆಗಳು ನಮಗೆ ಪ್ರೇರಣೆಯನ್ನು ನೀಡುತ್ತವೆ. ಏನನ್ನಾದರೂ ಮಾಡುವ ಹೊಸ ಉತ್ಸಾಹವನ್ನು ತುಂಬುತ್ತದೆ. ಹೊಸ ವಿಶ್ವಾಸವನ್ನು ಹುಟ್ಟುಹಾಕುತ್ತದೆ. ನಮ್ಮ ಸಂಕಲ್ಪಕ್ಕೆ ಜೀವ ತುಂಬುತ್ತದೆ. ಸ್ವಚ್ಛ ಭಾರತದ ಬಗ್ಗೆ ಮಾತಾಡಿದಾಗಲೆಲ್ಲ ಇಂದೋರ್ ಹೆಸರು ಪ್ರಸ್ತಾಪವಾಗೇ ಆಗುತ್ತದೆ ಎಂಬುದು ನಮಗೆಲ್ಲರಿಗೂ ತಿಳದ ವಿಷಯ. ಏಕೆಂದರೆ ಇಂದೋರ್ ಸ್ವಚ್ಛತೆಗೆ ಸಂಬಂಧಿಸಿದಂತೆ ತನ್ನದೇ ಆದ ಹೆಗ್ಗುರುತನ್ನು ಹೊಂದಿದೆ ಮತ್ತು ಇಂದೋರ್ ನಾಗರಿಕರು ಅಭಿನಂದನೆಗೆ ಪಾತ್ರರಾಗಿದ್ದಾರೆ. ಇಂದೋರ್ ಹಲವು ವರ್ಷಗಳಿಂದ ‘ಸ್ವಚ್ಛ ಭಾರತ್ ರಾಂಕಿಂಗ್’ ನಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಈಗ ಇಂದೋರ್ ಜನತೆ ಸ್ವಚ್ಛ ಭಾರತ್ ರಾಂಕಿಂಗ್ ನಿಂದ ಸಂತೋಷಗೊಂಡು ಕೈಕಟ್ಟಿ ಕೂರಲು ಇಷ್ಟಪಡುತ್ತಿಲ್ಲ. ಅವರು ಮುಂದುವರಿಯಬಯಸುತ್ತಾರೆ. ಹೊಸತನ್ನು ಮಾಡಬಯಸುತ್ತಾರೆ. ಅವರು ತಮ್ಮ ಮನದಲ್ಲಿ ಏನನ್ನು ನಿರ್ಧರಿಸಿದ್ದಾರೋ ‘Water Plus City’ ನಿರ್ಮಾಣಕ್ಕೆ ತನುಮನಧನದಿಂದ ತೊಡಗಿಸಿಕೊಂಡಿದ್ದಾರೆ ‘Water Plus City’ ಅಂದರೆ ಸಂಸ್ಕರಿಸದ ಚರಂಡಿ ನೀರನ್ನು ಸಾರ್ವಜನಿಕ ಜಲಮೂಲಗಳಲ್ಲಿ ಸೇರಿಸಲಾಗುವುದಿಲ್ಲ. ಇಲ್ಲಿಯ ನಾಗರಿಕರು ಸ್ವತಃ ಮುಂದುವರಿದು ತಮ್ಮ ಮನೆಯ ನಾಲೆಯ ಸಂಪರ್ಕವನ್ನು ಒಳಚರಂಡಿ ಲೈನ್ ನೊಂದಿಗೆ ಜೋಡಿಸಿದ್ದಾರೆ. ಸ್ವಚ್ಛತಾ ಅಭಿಯಾನವನ್ನೂ ಕೈಗೊಂಡಿದ್ದಾರೆ. ಹಾಗಾಗಿ ಸರಸ್ವತಿ ಮತ್ತು ಕಾನ್ಹಾ ನದಿಯಲ್ಲಿ ಸೇರುವ ಗಲೀಜು ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಸುಧಾರಣೆ ಕಂಡುಬರುತ್ತಿದೆ. ಇಂದು ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಸ್ವಚ್ಛ ಭಾರತ ಅಭಿಯಾನ ಮಂಕಾಗದಂತೆ ನೋಡಿಕೊಳ್ಳಬೇಕು.ನಮ್ಮ ದೇಶದಲ್ಲಿ ಹೆಚ್ಚೆಚ್ಚು ನಗರಗಳು ‘Water Plus City’ ಆದಷ್ಟೂ ಸ್ವಚ್ಛತೆಯೂ ಹೆಚ್ಚುತ್ತದೆ. ನಮ್ಮ ನದಿಗಳು ಸ್ವಚ್ಛವಾಗಿರುತ್ತವೆ. ನೀರು ಉಳಿತಾಯ ಮಾಡುವ ಒಂದು ಮಾನವೀಯ ಜವಾಬ್ದಾರಿಯನ್ನು ನಿಭಾಯಿಸುವ ಸಂಸ್ಕೃತಿಯೂ ಹೆಚ್ಚುತ್ತದೆ.
ಸ್ನೇಹಿತರೇ, ನನ್ನ ಮುಂದೆ ಬಿಹಾರದ ಮಧುಬನಿಯಿಂದ ಉದಾಹರಣೆಯೊಂದಿದೆ. ಮಧುಬನಿಯಲ್ಲಿ ಡಾಕ್ಟರ್ ರಾಜೇಂದ್ರ ಪ್ರಸಾದ್ ಕೃಷಿ ವಿಶ್ವವಿದ್ಯಾಲಯ ಮತ್ತು ಅಲ್ಲಿನ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರ ಒಗ್ಗೂಡಿ ಒಂದು ಬಹಳ ಉತ್ತಮ ಪ್ರಯತ್ನ ಮಾಡಿದೆ. ರೈತರಿಗೆ ಇದರಿಂದ ಪ್ರಯೋಜನವಾಗುತ್ತಿರುವುದು ಮಾತ್ರವಲ್ಲ ಇದರಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಹೊಸ ಬಲ ಬರುತ್ತಿದೆ. ವಿಶ್ವ ವಿದ್ಯಾಲಯದ ಈ ಉಪಕ್ರಮದ ಹೆಸರು - “ಸುಖೇತ್ ಮಾದರಿ” ಎಂದು. ಹಳ್ಳಿಗಳಲ್ಲಿ ಮಾಲಿನ್ಯ ಕಡಿಮೆ ಮಾಡುವುದು ಸುಖೇತ್ ಮಾದರಿಯ ಉದ್ದೇಶವಾಗಿದೆ. ಈ ಮಾದರಿಯ ಅಡಿಯಲ್ಲಿ ಹಳ್ಳಿಗಳಲ್ಲಿ ರೈತರಿಂದ ಗೊಬ್ಬರ ಮತ್ತು ಹೊಲಗಳಿಂದ–ಮನೆಗಳಿಂದಹೊರಬರುವ ಇತರ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅವುಗಳ ಬದಲಿಗೆ ಗ್ರಾಮಸ್ಥರಿಗೆ ಅಡುಗೆ ಅನಿಲ ಸಿಲಿಂಡರ್ ಗಾಗಿ ಹಣ ನೀಡಲಾಗುತ್ತದೆ. ಹಳ್ಳಿಯಿಂದ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕಾಗಿ ವರ್ಮಿ ಕಂಪೋಸ್ಟ್ ತಯಾರಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಅಂದರೆ ಸುಖೇತ್ ಮಾದರಿಯ ನಾಲ್ಕು ಪ್ರಯೋಜನಗಳಂತೂ ಕಣ್ಣಿಗೆ ಗೋಚರಿಸುತ್ತಿವೆ. ಒಂದು ಹಳ್ಳಿ ಮಾಲಿನ್ಯ ಮುಕ್ತವಾಗುತ್ತದೆ, ಎರಡನೆಯದು ಹಳ್ಳಿ ಕೊಳಕಿನಿಂದ ಮುಕ್ತವಾಗುತ್ತದೆ, ಮೂರನೆಯದು ಗ್ರಾಮಸ್ಥರಿಗೆ ಅಡುಗೆ ಅನಿಲ ಸಿಲಿಂಡರ್ ಗಾಗಿ ಹಣ ದೊರೆಯುತ್ತದೆ ಮತ್ತು ನಾಲ್ಕನೆಯದು ಗ್ರಾಮದ ರೈತರಿಗೆ ಸಾವಯವ ಗೊಬ್ಬರ ದೊರೆಯುತ್ತದೆ. ಇಂತಹ ಪ್ರಯತ್ನ ನಮ್ಮ ಗ್ರಾಮಗಳ ಶಕ್ತಿಯನ್ನು ಎಷ್ಟು ಹೆಚ್ಚಿಸಬಹುದೆಂದು ಯೋಚಿಸಿ ನೋಡಿ. ಇದೇ ಸ್ವಾವಲಂಬನೆಯ ವಿಷಯ. ಈ ರೀತಿಯ ಪ್ರಯತ್ನವನ್ನು ನೀವಿರುವಲ್ಲಿ ಕೂಡಾ ಮಾಡುವ ಕುರಿತು ಖಂಡಿತವಾಗಿಯೂ ಚಿಂತನೆ ನಡೆಸಬೇಕೆಂದು ದೇಶದ ಪ್ರತಿಯೊಂದು ಪಂಚಾಯಿತ್ ಗೂ ನಾನು ಹೇಳಲು ಬಯಸುತ್ತೇನೆ. ಮತ್ತು ಸ್ನೇಹಿತರೇ, ನಾವು ಯಾವಾಗ ಒಂದು ಗುರಿಯೊಂದಿಗೆ ಸಾಗುತ್ತೇವೋ ಆಗ, ಗುರಿ ಮುಟ್ಟುವುದು ಖಚಿತವಿದ್ದೇ ಇರುತ್ತದೆ.
ನಮ್ಮ ತಮಿಳುನಾಡಿನಲ್ಲಿ ಶಿವಗಂಗಾ ಜಿಲ್ಲೆಯ ಕಾಂಜೀರಂಗಾಲ್ ಪಂಚಾಯಿತ್ ನೋಡಿ. ಈ ಚಿಕ್ಕ ಪಂಚಾಯಿತ್ ಏನು ಮಾಡಿದೆಯೆಂದು ನೋಡಿ, ಇಲ್ಲಿ ನಿಮಗೆ ಕಸದಿಂದ ರಸದ ಮತ್ತೊಂದು ಮಾದರಿ ನೋಡಲು ಸಿಗುತ್ತದೆ. ಇಲ್ಲಿ ಗ್ರಾಮ ಪಂಚಾಯಿತಿಯು ಸ್ಥಳೀಯ ಜನತೆಯೊಂದಿಗೆ ಒಗ್ಗೂಡಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಒಂದು ಸ್ಥಳೀಯ ಯೋಜನೆಯನ್ನು ತಮ್ಮ ಗ್ರಾಮದಲ್ಲಿ ಆರಂಭಿಸಿಬಿಟ್ಟಿದೆ. ಸಂಪೂರ್ಣ ಗ್ರಾಮದಿಂದ ಸಂಗ್ರಹವಾಗುವ ತ್ಯಾಜ್ಯದಿಂದ ವಿದ್ಯುತ್ ತಯಾರಾಗುತ್ತದೆ ಮತ್ತು ಬಾಕಿ ಉಳಿದಿರುವ ಉತ್ಪನ್ನಗಳನ್ನು ಕೀಟನಾಶಕದ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರತಿ ದಿನ ಎರಡು ಟನ್ ತ್ಯಾಜ್ಯದ ವಿಲೇವಾರಿ ಮಾಡುವುದು ಗ್ರಾಮದ ಈ ವಿದ್ಯುತ್ ಸ್ಥಾವರದ ಸಾಮರ್ಥ್ಯವಾಗಿದೆ. ಇದರಿಂದ ಉತ್ಪಾದನೆಯಾಗುವ ವಿದ್ಯುತ್ ಗ್ರಾಮದ ಬೀದಿ ದೀಪಗಳು ಮತ್ತು ಇತರ ಅಗತ್ಯತೆಗಳಿಗೆ ವಿನಿಯೋಗವಾಗುತ್ತಿದೆ. ಇದರಿಂದಾಗಿ ಪಂಚಾಯಿತಿಯ ಹಣ ಉಳಿತಾಯವಾಗುತ್ತಿದ್ದು, ಈ ಹಣವು ಅಭಿವೃದ್ಧಿಯ ಇತರ ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಈಗ ಹೇಳಿ, ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಒಂದು ಚಿಕ್ಕ ಪಂಚಾಯಿತ್ ಎಲ್ಲಾ ದೇಶವಾಸಿಗಳಿಗೆ ಏನನ್ನಾದರೂ ಮಾಡುವ ಪ್ರೇರಣೆ ನೀಡುತ್ತದೆಯೋ ಇಲ್ಲವೋ? ಇವರುಗಳು ನಿಜಕ್ಕೂ ಅದ್ಭುತವನ್ನೇ ಮಾಡಿದ್ದಾರಲ್ಲವೇ?
ನನ್ನ ಪ್ರೀತಿಯ ದೇಶವಾಸಿಗಳೇ,
‘ಮನದ ಮಾತು’ ಈಗ ಭಾರತದ ಗಡಿಯೊಳಗೆ ಮಾತ್ರಾ ಸೀಮಿತವಾಗಿಲ್ಲ. ದೇಶದ ವಿವಿಧ ಮೂಲೆ ಮೂಲೆಗಳಲ್ಲಿ ಕೂಡಾ ‘ಮನದ ಮಾತಿನ’ ಚರ್ಚೆ ನಡೆಯುತ್ತದೆ. ಮತ್ತು ವಿದೇಶಗಳಲ್ಲಿ ನೆಲೆಸಿರುವ ನಮ್ಮ ಭಾರತೀಯ ಸಮುದಾಯದ ಜನರು ಕೂಡಾ ನನಗೆ ಹೊಸ ಹೊಸವಿಷಯಗಳ ಕುರಿತು ಮಾಹಿತಿಯನ್ನು ನೀಡುತ್ತಿರುತ್ತಾರೆ. ವಿದೇಶದಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮಗಳ ಬಗ್ಗೆ ‘ಮನದ ಮಾತಿನಲ್ಲಿ’ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೆ ಕೂಡಾ ಸಂತಸವೆನಿಸುತ್ತದೆ. ಇಂದು ಕೂಡಾ ನಾನು ನಿಮಗೆ ಅಂತಹ ಕೆಲವು ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಸುತ್ತೇನೆ ಆದರೆ ಅದಕ್ಕೂ ಮುನ್ನ ನಿಮಗೆ ಒಂದು ಆಡಿಯೋ ಕೇಳಿಸಲು ಬಯಸುತ್ತೇನೆ. ಗಮನವಿಟ್ಟುಆಲಿಸಿ.
##
[ರೇಡಿಯೋ ಯುನಿಟಿನೈಂಟಿಎಫ್.ಎಂ -2]
ನಮೋನಮಃಸರ್ವೇಭ್ಯಃ. ಮಮ ನಾಮ ಗಂಗಾ. ಭವಂತಃಶ್ರಣ್ವಂತು ರೇಡಿಯೋ - ಯುನಿಟಿ- ನವತಿ-ಎಫ್.ಎಂ. - ‘ಏಕ ಭಾರತಂ ಶ್ರೇಷ್ಠ ಭಾರತಂ. ಅಹಂ ಏಕತಾಮೂರ್ತೇಃ ಮಾರ್ಗದರ್ಶಿಕಾ ಏವಂ ರೇಡಿಯೋ-ಯುನಿಟಿ-ಮಾಧ್ಯಮೇ ಆರ್. ಜೆ. ಅಸ್ಮಿ. ಅದ್ಯ ಸಂಸ್ಕೃತ ದಿನಮ್ ಅಸ್ತಿ. ಸರ್ವೇಭ್ಯಃ ಬಹವ್ಯಃ ಶುಭಕಾಮನಃ ಸಂತಿ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಮಹೋದಯಃ‘ ಲೋಹಪುರುಷಃ’ ಇತ್ಯುಚ್ಯತೇ. 2013 –ತಮೇವರ್ಷೇ ಲೋಹಸಂಗ್ರಹಸ್ಯ ಅಭಿಯಾನಮ್ ಪ್ರಾರಂಭಮ್. 134 ಟನ್ ಪರಿಮಿತಸ್ಯ ಲೋಹಸ್ಯ ಗಲನಂ ಕೃತಮ್. ಜಾರ್ಖಂಡಸ್ಯ ಏಕಃ ಕೃಷಕಃ ಮುದ್ಗರಸ್ಯ ದಾನಂ ಕೃತವಾನ್. ಭವಂತಃ ಶೃಣ್ವಂತು ರೇಡಿಯೋ ಯುನಿಟೀ ನವತಿ ಎಫ್. ಎಂ. ‘ಏಕ ಭಾರತಂ ಶ್ರೇಷ್ಠ ಭಾರತಂ’.
[ರೇಡಿಯೋ ಯುನಿಟಿ ನೈಂಟಿ ಎಫ್.ಎಂ -2]
##
ಸ್ನೇಹಿತರೇ, ಭಾಷೆ ನಿಮಗೆ ಅರ್ಥವಾಗಿಯೇ ಇದೆ. ಇದು ರೇಡಿಯೋದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತನಾಡಲಾಗುತ್ತಿದೆ ಮತ್ತು ಮಾತನಾಡುತ್ತಿರುವವರು ಆರ್ ಜೆ ಗಂಗಾ. ಆರ್. ಜೆ. ಗಂಗಾ, ಗುಜರಾತಿನ ರೇಡಿಯೋ ಜಾಕಿಗಳ ಸಮೂಹದ ಓರ್ವ ಸದಸ್ಯೆಯಾಗಿದ್ದಾರೆ. ಅವರಿಗೆ ಇನ್ನೂ ಕೆಲವು ಸಹೋದ್ಯೋಗಿಗಳಿದ್ದಾರೆ, ಆರ್ ಜೆ ನೀಲಮ್, ಆರ್ ಜೆ ಗುರು ಮತ್ತು ಆರ್ ಜೆ ಹೇತಲ್. ಇವರೆಲ್ಲರೂ ಒಗ್ಗೂಡಿ ಗುಜರಾತ್ ನ ಕೇವಡಿಯಾದಲ್ಲಿ ಈಗ ಸಂಸ್ಕೃತ ಭಾಷೆಯ ಗೌರವ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮತ್ತು ವಿಶ್ವದ ಅತಿ ಎತ್ತರದ ವಿಗ್ರಹ, ನಮ್ಮ ದೇಶದ ಗೌರವವಾದ, ಏಕತಾ ಪ್ರತಿಮೆ (Statue of Unity ) ಸ್ಥಾಪಿತವಾಗಿರುವ ಸ್ಥಳವೇ ಕೇವಡಿಯಾ ಎಂದು ನಿಮಗೆಲ್ಲಾ ತಿಳಿದಿದೆಯಲ್ಲವೇ, ನಾನು ಈಗ ಮಾತನಾಡುತ್ತಿರುವುದು ಆ ಕೇವಡಿಯಾಕುರಿತಾಗಿಯೇ. ಈ ಎಲ್ಲಾ ರೇಡಿಯೋ ಜಾಕಿಗಳು, ಅನೇಕ ಪಾತ್ರಗಳನ್ನು ಜೊತೆ ಜೊತೆಯಾಗಿ ನಿರ್ವಹಿಸುತ್ತಾರೆ. ಇವರು ಮಾರ್ಗದರ್ಶಿಗಳಾಗಿಯೂ ತಮ್ಮ ಸೇವೆ ಸಲ್ಲಿಸುತ್ತಾರೆ ಮತ್ತು ಜೊತೆಯಲ್ಲಿಯೇ Community Radio Initiative, Radio Unity 90 FM, ಇವುಗಳನ್ನು ಕೂಡಾ ನಡೆಸುತ್ತಾರೆ. ಈ ಆರ್ ಜೆ ಗಳು ತಮ್ಮ ಶ್ರೋತೃಗಳೊಂದಿಗೆ ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತಾರೆ, ಅವರುಗಳಿಗೆ ಸಂಸ್ಕೃತದಲ್ಲಿ ಮಾಹಿತಿಯನ್ನು ಒದಗಿಸುತ್ತಾರೆ.
ಸ್ನೇಹಿತರೇ, ನಮ್ಮಲ್ಲಿ ಸಂಸ್ಕೃತ ಕುರಿತು ಹೀಗೆಂದು ಹೇಳಿದ್ದಾರೆ –
ಅಮೃತಮ್ಸಂಸ್ಕೃತಮ್ ಮಿತ್ರ, ಸರಸಮ್ ಸರಳಮ್ ವಚಃ
ಏಕತಾ ಮೂಲಕಮ್ರಾಷ್ಟ್ರೇ, ಜ್ಞಾನ ವಿಜ್ಞಾನ ಪೋಷಕಮ್
ಅಂದರೆ, ನಮ್ಮ ಸಂಸ್ಕೃತ ಭಾಷೆ ಸರಸವೂ ಹೌದು ಸರಳವೂ ಹೌದು.
ಸಂಸ್ಕೃತ ತನ್ನ ವಿಚಾರ, ತನ್ನ ಸಾಹಿತ್ಯದ ಮೂಲಕ ಜ್ಞಾನ ವಿಜ್ಞಾನ ಮತ್ತು ರಾಷ್ಟ್ರದ ಏಕತೆಯನ್ನು ಕೂಡಾ ರಕ್ಷಿಸುತ್ತದೆ, ಅದನ್ನು ಬಲಿಷ್ಠಗೊಳಿಸುತ್ತದೆ. ಸಂಸ್ಕೃತ ಸಾಹಿತ್ಯದಲ್ಲಿ ಮಾನವೀಯತೆ ಮತ್ತು ಜ್ಞಾನದ ಒಂದು ದಿವ್ಯ ದರ್ಶನವಿದ್ದು, ಯಾರನ್ನೇ ಆಗಲಿ ಇದು ಆಕರ್ಷಿಸುತ್ತದೆ. ಇತ್ತೀಚೆಗೆ, ವಿದೇಶದಲ್ಲಿ ಸಂಸ್ಕೃತ ಬೋಧಿಸುವ ಪ್ರೇರಣಾತ್ಮಕ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ನನಗೆ ತಿಳಿಯುವ ಅವಕಾಶ ದೊರೆಯಿತು. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಐರ್ಲೆಂಡ್ ನಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರು ಹಾಗೂ ಶಿಕ್ಷಕರಾದ, ಮಕ್ಕಳಿಗೆ ಸಂಸ್ಕೃತ ಕಲಿಸುತ್ತಿರುವ ಶ್ರೀ ರಟಗರ್ ಕೋರ್ಟನ್ ಹಾಸ್ಟ್. ಇತ್ತ ನಮ್ಮ ಪೂರ್ವದಲ್ಲಿ ಭಾರತ ಮತ್ತು ಥೈಲ್ಯಾಂಡ್ ನಡುವೆ ಸಾಂಸ್ಕೃತಿಕ ಬಾಂಧವ್ಯಗಳ ಬಲವರ್ಧನೆಯಲ್ಲಿ ಸಂಸ್ಕೃತ ಭಾಷೆಯ ಪ್ರಮುಖ ಪಾತ್ರವಿದೆ. ಡಾ. ಚಿರಾಪತ್ ಪ್ರಪಂಡವಿದ್ಯಾ ಮತ್ತು ಡಾ. ಕುಸುಮಾ ರಕ್ಷಾಮಣಿ ಇವರಿಬ್ಬರೂ ಥೈಲ್ಯಾಂಡ್ ನಲ್ಲಿ ಸಂಸ್ಕೃತ ಭಾಷೆಯ ಪ್ರಚಾರ-ಪ್ರಸಾರ ಕಾರ್ಯದಲ್ಲಿ ಗಣನೀಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಥಾಯ್ ಮತ್ತು ಸಂಸ್ಕೃತ ಭಾಷೆಯಲ್ಲಿ ತುಲನಾತ್ಮಕ ಸಾಹಿತ್ಯ ರಚನೆಯನ್ನು ಕೂಡಾ ಮಾಡಿದ್ದಾರೆ. ಅಂತಹ ಮತ್ತೊಬ್ಬ ವ್ಯಕ್ತಿಯೆಂದರೆ ರಷ್ಯಾದ ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಂಸ್ಕೃತ ಬೋಧನೆ ಮಾಡುತ್ತಿರುವ ಪ್ರೊಫೆಸರ್ ಬೋರಿಸ್ ಖಾರಿನ್. ಅವರು ಅನೇಕ ಸಂಶೋಧನಾ ಪ್ರಬಂಧಗಳು ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ಅನೇಕ ಸಂಸ್ಕೃತ ಭಾಷೆಯ ಪುಸ್ತಕಗಳನ್ನು ರಷ್ಯನ್ ಭಾಷೆಗೆ ಅನುವಾದ ಮಾಡಿದ್ದಾರೆ. ಇದೇ ರೀತಿ ಸಿಡ್ನಿ ಸಂಸ್ಕೃತ ಶಾಲೆಯು (Sydney Sanskrit School) ಆಸ್ಟ್ರೇಲಿಯಾದ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಒಂದೆನಿಸಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯನ್ನು ಕಲಿಸಲಾಗುತ್ತದೆ. ಇಲ್ಲಿ ಶಾಲೆ ಮಕ್ಕಳಿಗಾಗಿ ಸಂಸ್ಕೃತ ವ್ಯಾಕರಣ ಶಿಬಿರ (Sanskrit Grammar Camp), ಸಂಸ್ಕೃತ ನಾಟಕ ಮತ್ತು ಸಂಸ್ಕೃತ ದಿನಾಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗುತ್ತದೆ.
ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಆಗಿರುವ ಪ್ರಯತ್ನಗಳಿಂದಾಗಿ, ಸಂಸ್ಕೃತ ಭಾಷೆಯ ಕುರಿತು ಹೊಸದೊಂದು ಅರಿವು ಮೂಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಬೇಕಾದ ಸಮಯ ಇದಾಗಿದೆ. ನಮ್ಮ ಪರಂಪರೆಯ ಪಾಲನೆ ಮಾಡುವುದು, ಅವುಗಳನ್ನು ನಿರ್ವಹಿಸುವುದು, ಹೊಸ ಪೀಳಿಗೆಗೆ ನೀಡುವುದು ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಮತ್ತು ಭಾವೀಪೀಳಿಗೆಗೂ ಇದರ ಮೇಲೆ ಹಕ್ಕಿದೆ. ಈ ಕೆಲಸಗಳಿಗಾಗಿ ಕೂಡಾ ಎಲ್ಲರೂ ಪ್ರಯತ್ನ ಹೆಚ್ಚಿಸಬೇಕಾದ ಸಮಯ ಇದಾಗಿದೆ.
ಸ್ನೇಹಿತರೇ, ಇಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿರುವ ಇಂತಹ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದಿದ್ದಲ್ಲಿ, ಅಂತಹ ಯಾವುದೇ ಮಾಹಿತಿ ತಮ್ಮ ಬಳಿ ಇದ್ದಲ್ಲಿ, ದಯವಿಟ್ಟು #CelebratingSanskrit ನೊಂದಿಗೆ social media ದಲ್ಲಿ ಅಂತಹ ಸಂಬಂಧಿತ ಮಾಹಿತಿಯನ್ನು ಖಂಡಿತವಾಗಿಯೂ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ ‘ವಿಶ್ವಕರ್ಮ ಜಯಂತಿ’ ಕೂಡಾ ಬರಲಿದೆ. ವಿಶ್ವಕರ್ಮ ದೇವರನ್ನು ನಮ್ಮಲ್ಲಿ ವಿಶ್ವದ ಸೃಷ್ಟಿಯ ಶಕ್ತಿಯ ಸಂಕೇತವೆಂದು ಭಾವಿಸಲಾಗುತ್ತದೆ. ಹೊಲಿಗೆ-ಕಸೂತಿಯೇ ಆಗಿರಲಿ, ಸಾಫ್ಟ್ ವೇರ್ ಅಥವಾ ಉಪಗ್ರಹವೇ ಆಗಿರಲಿ, ತಮ್ಮ ನೈಪುಣ್ಯತೆಯಿಂದ ಯಾವುದೇ ವಸ್ತುವನ್ನು ರಚಿಸುತ್ತಾರೋಅವೆಲ್ಲವೂ ಭಗವಾನ್ ವಿಶ್ವಕರ್ಮನಅಭಿವ್ಯಕ್ತಿಯಾಗಿರುತ್ತದೆ. ಈಗ ವಿಶ್ವದಲ್ಲಿನೈಪುಣ್ಯವನ್ನು ಹೊಸದೊಂದು ರೀತಿಯಲ್ಲಿ ಗುರುತಿಸಲಾಗುತ್ತಿದ್ದರೂ, ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳಿಂದ ನೈಪುಣ್ಯ ಮತ್ತು ಪ್ರಮಾಣಕ್ಕೆ ಒತ್ತು ನೀಡಿದ್ದಾರೆ. ಅವರು ನೈಪುಣ್ಯವನ್ನು, ಪ್ರತಿಭೆಯನ್ನು, ಕೌಶಲ್ಯವನ್ನುನಂಬಿಕೆಯೊಂದಿಗೆ ಜೋಡಿಸಿ ನಮ್ಮ ಜೀವನದ ತತ್ವದಭಾಗವಾಗಿಸಿದ್ದಾರೆ. ನಮ್ಮ ವೇದಗಳು ಕೂಡಾ ಅನೇಕ ಸ್ತೋತ್ರಗಳನ್ನು ಭಗವಾನ್ ವಿಶ್ವಕರ್ಮನಿಗೆ ಸಮರ್ಪಣೆ ಮಾಡಿವೆ. ಬ್ರಹ್ಮಾಂಡದ ಎಲ್ಲಾ ಸೃಷ್ಟಿಗಳು, ಯಾವುದೇ ಹೊಸ ಮತ್ತು ಮಹಾನ್ ಕೆಲಸವಾಗಿರಲಿ, ನಮ್ಮ ಶಾಸ್ತ್ರಗಳಲ್ಲಿ ಅವುಗಳ ಶ್ರೇಯವನ್ನು ಭಗವಾನ್ ವಿಶ್ವಕರ್ಮನಿಗೆ ನೀಡಲಾಗಿದೆ. ವಿಶ್ವದಲ್ಲಿ ಯಾವುದೇ ಅಭಿವೃದ್ಧಿ ಮತ್ತು ಆವಿಷ್ಕಾರ ನಡೆದಾಗ, ಅದು ನೈಪುಣ್ಯಗಳ ಮೂಲಕವೇ ನಡೆಯುತ್ತದೆ ಎನ್ನುವುದು ಈ ಮಾತಿನ ಸಂಕೇತವಾಗಿದೆ. ಭಗವಾನ್ ವಿಶ್ವಕರ್ಮನ ಜಯಂತಿ ಮತ್ತು ಅವರ ಪೂಜೆಯ ಹಿಂದಿನ ಭಾವ ಇದೇ ಆಗಿದೆ. ಮತ್ತು ನಮ್ಮ ಶಾಸ್ತ್ರಗಳಲ್ಲಿ ಹೀಗೆಂದು ಕೂಡಾ ಹೇಳಲಾಗಿದೆ–
ವಿಶ್ವಸ್ಯ ಕೃತೇ ಯಸ್ಯ ಕರ್ಮವ್ಯಾಪಾರಃ ಸಃ ವಿಶ್ವಕರ್ಮಾ.
ಅಂದರೆ, ಸೃಷ್ಟಿ ಮತ್ತು ಸೃಷ್ಟಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡುವವನು ವಿಶ್ವಕರ್ಮ ಎಂದರ್ಥ. ನಮ್ಮ ಧರ್ಮಗ್ರಂಥಗಳ ದೃಷ್ಟಿಯಲ್ಲಿ ನಮ್ಮ ಸುತ್ತಮುತ್ತ ನಿರ್ಮಾಣ ಮತ್ತು ರಚನೆಯಲ್ಲಿ ತೊಡಗಿಕೊಂಡಿರುವ, ನೈಪುಣ್ಯತೆ ಹೊಂದಿರುವ ನುರಿತ ವ್ಯಕ್ತಿಗಳಿದ್ದಾರೋ, ಅವರೆಲ್ಲರೂ ವಿಶ್ವಕರ್ಮನ ಪರಂಪರೆಯವರು. ಇವರುಗಳಿಲ್ಲದ ಜೀವನವನ್ನು ನಾವು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಯೋಚಿಸಿ ನೋಡಿ, ನಿಮ್ಮ ಮನೆಯಲ್ಲಿ ಏನಾದರೂ ವಿದ್ಯುತ್ ಸಂಬಂಧಿತ ಸಮಸ್ಯೆ ಎದುರಾದರೆ ಮತ್ತು ನಿಮಗೆ ಯಾವೊಬ್ಬ ಎಲೆಕ್ಟ್ರಿಷಿಯನ್ ಕೂಡಾ ಸಿಗದೇ ಇದ್ದರೆ ಏನಾಗುತ್ತದೆ? ನೀವು ಎಷ್ಟು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ನಮ್ಮ ಜೀವನ ಇಂತಹ ಅದೆಷ್ಟೋ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳ ಕಾರಣದಿಂದಾಗಿ ನಡೆಯುತ್ತಿದೆ. ನೀವು ನಿಮ್ಮ ಸುತ್ತ ಮುತ್ತ ಒಮ್ಮೆ ನೋಡಿ, ಕಬ್ಬಿಣದ ಕೆಲಸ ಮಾಡುವವರಿರಲಿ, ಮಣ್ಣಿನಿಂದ ಪಾತ್ರೆ ತಯಾರಿಸುವವರಿರಲಿ, ಮರದ ಸಾಮಾನು ಮಾಡುವವರಿರಲಿ, ವಿದ್ಯುತ್ ಕೆಲಸ ಮಾಡುವವರೇ ಆಗಿರಲಿ, ಮನೆಗೆ ಬಣ್ಣ ಬಳಿಯುವವರೇ ಆಗಿರಲಿ, ಸ್ವಚ್ಛತಾ ಕೆಲಸ ಮಾಡುವವರೇ ಆಗಿರಲಿ, ಅಥವಾ ಮೊಬೈಲ್ –ಲ್ಯಾಪ್ಟಾಪ್ ದುರಸ್ತಿ ಮಾಡುವವರೇಆಗಿರಲಿಇವರೆಲ್ಲರೂ ತಮ್ಮ ನೈಪುಣ್ಯತೆಯಿಂದಲೇ ಜನರಲ್ಲಿ ಹೆಸರುವಾಸಿಯಾಗಿರುತ್ತಾರೆ. ಇವರೆಲ್ಲರೂ ಕೂಡಾ ಆಧುನಿಕ ರೂಪದ ವಿಶ್ವಕರ್ಮರೇ ಆಗಿದ್ದಾರೆ.
ಆದರೆ ಸ್ನೇಹಿತರೇ, ಇಲ್ಲಿ ಮತ್ತೊಂದು ಅಂಶವಿದೆ ಮತ್ತು ಇದರಿಂದ ಕೆಲವೊಮ್ಮೆ ಚಿಂತೆ ಮೂಡುತ್ತದೆ. ಯಾವ ದೇಶದಲ್ಲಿಯ ಯಾವ ಸಂಸ್ಕೃತಿಯಲ್ಲಿ, ಪರಂಪರೆಯಲ್ಲಿ, ಚಿಂತನೆಯಲ್ಲಿ, ಕೌಶಲ್ಯವನ್ನು, ನೈಪುಣ್ಯತೆ ಹೊಂದಿರುವ ಮಾನವಶಕ್ತಿಯನ್ನು ಭಗವಾನ್ ವಿಶ್ವಕರ್ಮನೊದಿಗೆಜೋಡಿಸಲಾಗುತ್ತದೆಯೋ, ಅಲ್ಲಿ ಪರಿಸ್ಥಿತಿಗಳು ಹೇಗೆ ಬದಲಾಗಿವೆ, ಒಂದು ಕಾಲದಲ್ಲಿ ನಮ್ಮ ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ರಾಷ್ಟ್ರ ಜೀವನದ ಮೇಲೆ ಕೌಶಲ್ಯದ ಅತಿ ಹೆಚ್ಚು ಪ್ರಭಾವವಿತ್ತು. ಆದರೆ, ಗುಲಾಮಗಿರಿಯ ಸುದೀರ್ಘ ಅವಧಿಯಲ್ಲಿ ಕೌಶಲ್ಯಕ್ಕೆ ಗೌರವ ನೀಡುವ ಇಂತಹ ಭಾವನೆ ಕ್ರಮೇಣ ಮರೆತೇ ಹೋಯಿತು. ಕೌಶಲ್ಯಾಧಾರಿತ ಕೆಲಸಗಳನ್ನು ಕಡೆಗಣಿಸಿನೋಡುವಂತಹ ಯೋಚನೆ ಮೂಡಿತು. ಈಗ ನೋಡಿ, ಸಂಪೂರ್ಣ ವಿಶ್ವ ಅತ್ಯಂತ ಕೌಶಲ್ಯ ಅಂದರೆ ನೈಪುಣ್ಯತೆಗೆ ಒತ್ತು ನೀಡುತ್ತಿದೆ. ಭಗವಾನ್ ವಿಶ್ವಕರ್ಮನ ಪೂಜೆ ಕೂಡಾ ಕೇವಲ ಔಪಚಾರಿಕತೆಯಿಂದ ಪೂರ್ಣವಾಗಿಲ್ಲ. ನಾವು ಕೌಶಲ್ಯಕ್ಕೆ ಗೌರವ ನೀಡಬೇಕು, ಕೌಶಲ್ಯ ಪಡೆದುಕೊಳ್ಳಲು ಕಷ್ಟ ಪಡಬೇಕಾಗುತ್ತದೆ. ಕುಶಲತೆ ಪಡೆದುಕೊಂಡಿದ್ದೇವೆಂದು ಹೆಮ್ಮೆ ಪಡಬೇಕು. ನಾವು ಹೊಸದೇನಾದರೂ ಮಾಡಿದರೆ, ಏನಾದರೂ ಆವಿಷ್ಕಾರ ಮಾಡಿದರೆ. ಸಮಾಜದ ಹಿತಕ್ಕಾಗಿ, ಜನರ ಜೀವನ ಸುಗಮಗೊಳಿಸುವುದಕ್ಕಾಗಿ, ಏನನ್ನಾದರೂ ಸೃಷ್ಟಿಸಿದರೆ, ಆಗ ವಿಶ್ವಕರ್ಮನಿಗೆ ನಾವು ಮಾಡುವ ಪೂಜೆ ಸಾರ್ಥಕವಾಗುತ್ತದೆ. ಈಗ ನೈಪುಣ್ಯತೆ ಹೊಂದಿರುವ ಜನರಿಗೆ ವಿಶ್ವದಲ್ಲಿ ಅವಕಾಶಗಳಿಗೆ ಯಾವುದೇ ಕೊರತೆಯಿಲ್ಲ. ಪ್ರಗತಿಯ ಎಷ್ಟೊಂದು ಹಾದಿಗಳು ಇಂದು ನೈಪುಣ್ಯದಿಂದಸಿದ್ಧವಾಗುತ್ತಿವೆ.
ಬನ್ನಿ, ಈ ಬಾರಿ ಭಗವಾನ್ ವಿಶ್ವಕರ್ಮನಪೂಜೆಯಲ್ಲಿಭರವಸೆಯೊಂದಿಗೆ ಆತನ ಸಂದೇಶವನ್ನು ಕೂಡಾ ನಮ್ಮದಾಗಿಸಿಕೊಳ್ಳುವ ಸಂಕಲ್ಪ ಮಾಡೋಣ. ನಾವು ನೈಪುಣ್ಯತೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳೋಣ, ಮತ್ತು ನೈಪುಣ್ಯತೆ ಹೊಂದಿರುವ ವ್ಯಕ್ತಿಗಳನ್ನು, ಅವರು ಯಾವುದೇ ಕೆಲಸ ಮಾಡುತ್ತಿರಲಿ, ನಾವು ಅವರಿಗೆ ಗೌರವ ಕೊಡೋಣ ಎನ್ನುವುದೇ ನಮ್ಮ ಪೂಜೆಯ ಹಿಂದಿನ ಭಾವನೆಯಾಗಿರಲಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇದು ದೇಶಕ್ಕೆ ಸ್ವಾತಂತ್ರ್ಯದ 75 ನೇವರ್ಷವಾಗಿದೆ. ಈ ವರ್ಷವಂತೂ ನಾವು ಪ್ರತಿದಿನವೂ ಒಂದು ಹೊಸ ಸಂಕಲ್ಪ ಮಾಡಬೇಕು, ಹೊಸ ಚಿಂತನೆ ನಮ್ಮಲ್ಲಿ ಮೂಡಬೇಕು ಮತ್ತು ಹೊಸದೇನನ್ನಾದರೂ ಮಾಡಬೇಕೆನ್ನುವ ನಮ್ಮ ಉತ್ಸಾಹವನ್ನು ಹೆಚ್ಚಿಸಬೇಕು. ನಮ್ಮ ಭಾರತ ಸ್ವಾತಂತ್ರ್ಯದ ನೂರು ವರ್ಷಗಳನ್ನು ಪೂರ್ಣಗೊಳಿಸಿದಾಗ, ನಮ್ಮ ಈ ಸಂಕಲ್ಪವೇ ಅದರ ಸಫಲತೆಯ ಅಡಿಪಾಯದಲ್ಲಿ ಗೋಚರಿಸುತ್ತದೆ. ಆದ್ದರಿಂದ, ಈ ಅವಕಾಶ ಕೈಜಾರದಂತೆ ನಾವು ನೋಡಿಕೊಳ್ಳಬೇಕು. ನಾವು ಇದಕ್ಕಾಗಿ ಹೆಚ್ಚು ಹೆಚ್ಚು ಕೊಡುಗೆ ನೀಡಬೇಕು. ಮತ್ತು ಈ ಪ್ರಯತ್ನಗಳ ನಡುವೆ, ಮತ್ತೊಂದು ಅಂಶವನ್ನು ಕೂಡಾ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಔಷಧವೂ ಬೇಕು, ಕಟ್ಟುನಿಟ್ಟಿನ ಎಚ್ಚರವೂ ಬೇಕು. ದೇಶದಲ್ಲಿ 62 ಕೋಟಿಗಿಂತಲೂ ಅಧಿಕ ಮಂದಿಗೆ ಲಸಿಕೆ ಡೋಸ್ ಗಳನ್ನು ನೀಡಿಯಾಗಿದೆ ಆದರೂ ಕೂಡಾ ನಾವು ಜಾಗರೂಕರಾಗಿರಬೇಕು, ಎಚ್ಚರಿಕೆಯಿಂದ ಇರಬೇಕು.
ಅಲ್ಲದೇ, ಎಂದಿನಂತೆಯೇ, ನೀವು ಹೊಸದೇನಾದರೂ ಮಾಡಿದಾಗ, ಹೊಸ ವಿಷಯವೇನಾದರೂ ಯೋಚಿಸಿದಾಗ, ಅದರಲ್ಲಿ ನನ್ನನ್ನು ಕೂಡಾ ಖಂಡಿತವಾಗಿಯೂ ಸೇರಿಸಿಕೊಳ್ಳಿ. ನಾನು ನಿಮ್ಮ ಪತ್ರಗಳು ಮತ್ತು ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ನೀವೆಲ್ಲರೂ ಮುಂಬರುವ ಹಬ್ಬಗಳಿಗಾಗಿ ನಿಮಗೆಲ್ಲರಿಗೂ ಮತ್ತೊಮ್ಮೆ ಶುಭಕಾಮನೆಗಳನ್ನು ಹೇಳುತ್ತಿದ್ದೇನೆ. ಅನೇಕಾನೇಕ ಧನ್ಯವಾದ.
ನಮಸ್ಕಾರ!
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ!
ಎರಡು ದಿನಗಳ ಹಿಂದೆ ಕೆಲವು ಅದ್ಭುತ ಚಿತ್ರಗಳು, ಕೆಲವು ಅಚ್ಚಳಿಯದ ನೆನಪುಗಳು, ಈಗಲೂ ನನ್ನ ಕಣ್ಣ ಮುಂದೆ ಅಚಲವಾಗಿವೆ. ಆದ್ದರಿಂದ, ಈ ಬಾರಿಯ ಮನದ ಮಾತನ್ನು ಆ ಕ್ಷಣಗಳೊಂದಿಗೆ ಆರಂಭಿಸೋಣ. Tokyo Olympics ನಲ್ಲಿ ಭಾರತೀಯ ಕ್ರೀಡಾಳಗಳು ತ್ರಿವರ್ಣ ಧ್ವಜವನ್ನು ಹಿಡಿದು ಪಥ ಸಂಚಲನದಲ್ಲಿ ಭಾಗವಹಿಸುವುದನ್ನು ನೋಡಿ ನಾನು ಮಾತ್ರವಲ್ಲ ಸಂಪೂರ್ಣ ದೇಶ ಪುಳಕಿತಗೊಂಡಿತು. ಸಂಪೂರ್ಣ ರಾಷ್ಟ್ರ ಒಗ್ಗೂಡಿ ಈ ಯೋಧರಿಗೆ
ವಿಜಯೀ ಭವ ವಿಜಯೀ ಭವ
ಎಂದು ಹೇಳಿದಂತಿತ್ತು. ಈ ಕ್ರೀಡಾಳುಗಳು ಭಾರತದಿಂದ ಹೊರಡುತ್ತಿದ್ದಾಗ ನನಗೆ ಅವರೊಂದಿಗೆ ಮಾತನಾಡುವ ಮತ್ತು ಅವರ ಬಗ್ಗೆ ತಿಳಿದುಕೊಳ್ಳುವ ಮತ್ತು ದೇಶಕ್ಕೆ ಈ ಬಗ್ಗೆ ತಿಳಿಸುವ ಅವಕಾಶ ಸಿಕ್ಕಿತ್ತು. ಈ ಕ್ರೀಡಾಳುಗಳು ಜೀವನದ ಅನೇಕ ಸವಾಲುಗಳನ್ನು ಎದುರಿಸುತ್ತಾ ಇಲ್ಲಿಗೆ ತಲುಪಿದ್ದಾರೆ. ಇಂದು ಅವರ ಬಳಿ ನಿಮ್ಮ ಪ್ರೀತಿ ಮತ್ತು ಸಹಕಾರದ ಶಕ್ತಿಯಿದೆ – ಆದ್ದರಿಂದ ಬನ್ನಿ ಜೊತೆಗೂಡಿ ನಮ್ಮ ಸ್ಪರ್ಧಾಳುಗಳಿಗೆ ಶುಭ ಹಾರೈಸೋಣ ಮತ್ತು ಅವರಿಗೆ ಸ್ಪೂರ್ತಿ ತುಂಬೋಣ. ಸಾಮಾಜಿಕ ಜಾಲತಾಣದಲ್ಲಿ ಒಲಿಂಪಿಕ್ ಕ್ರೀಡಾಳುಗಳಿಗೆ ಪ್ರೋತ್ಸಾಹಿಸಲು ನಮ್ಮ Victory Punch Campaign ಆರಂಭವಾಗಿದೆ. ನೀವು ನಿಮ್ಮ ತಂಡದೊಂದಿಗೆ ನಿಮ್ಮ Victory Punch share ಮಾಡಿ ಮತ್ತು ಭಾರತವನ್ನು ಪ್ರೋತ್ಸಾಹಿಸಿ.
ಸ್ನೇಹಿತರೆ, ಯಾರು ದೇಶಕ್ಕಾಗಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುತ್ತಾರೋ ಅವರ ಬಗ್ಗೆ ಮನಸ್ಸು ಗೌರವ, ಹೆಮ್ಮೆಯಿಂದ ತುಂಬಿ ಹೋಗುವುದು ಸಹಜ. ದೇಶಭಕ್ತಿಯ ಭಾವನೆ ನಮ್ಮನ್ನು ಒಗ್ಗೂಡಿಸುತ್ತದೆ. ನಾಳೆ ಅಂದರೆ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವೂ ಹೌದು. ಕಾರ್ಗಿಲ್ ಯುದ್ಧ ಇಡೀ ವಿಶ್ವವೇ ಕಂಡಂತಹ ಭಾರತೀಯ ಸೇನೆಯ ಶೌರ್ಯ ಮತ್ತು ಸಂಯಮದ ಪ್ರತೀಕವಾಗಿದೆ. ಈ ಬಾರಿ ಈ ಗೌರವಯುತ ದಿನವನ್ನು ಅಮೃತಮಹೋತ್ಸವದ ಸಂದರ್ಭದಲ್ಲಿಯೇ ಆಚರಿಸಲಾಗುವುದು. ಆದ್ದರಿಂದ ಇದು ಮತ್ತಷ್ಟು ವಿಶೇಷವೆನಿಸುತ್ತದೆ. ನೀವು ರೋಮಾಂಚಕಾರಿ ಕಾರ್ಗಿಲ್ ಯುದ್ಧದ ಕಥನವನ್ನು ಖಂಡಿತ ಓದಿರಿ ಎಂದು ನಾನು ಬಯಸುತ್ತೇನೆ. ಕಾರ್ಗಿಲ್ ವೀರರಿಗೆ ನಾವೆಲ್ಲ ನಮಿಸೋಣ.
ಸ್ನೇಹಿತರೆ, ಈ ಬಾರಿ ಅಗಸ್ಟ್ 15 ರಂದು ದೇಶ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಅಡಿಯಿರಿಸುತ್ತಿದೆ. ದೇಶ ದಶಕಗಳವರೆಗೆ ನಿರೀಕ್ಷಿಸಿದಂತಹ ಸ್ವಾತಂತ್ರ್ಯದ 75 ನೇ ಸಂಭ್ರಮದ ವರ್ಷವನ್ನು ನಾವು ಆಚರಿಸುತ್ತಿರುವುದು ನಮ್ಮ ಸೌಭಾಗ್ಯವೇ ಆಗಿದೆ. ಸ್ವಾತಂತ್ರ್ಯದ 75 ನೇ ಸಂಭ್ರಮಾಚರಣೆಗೆ ಮಾರ್ಚ್ 12 ರಂದು ಸಾಬರಮತಿಯ ಬಾಪು ಅವರ ಆಶ್ರಮದಿಂದ ಚಾಲನೆ ನೀಡಲಾಗಿತ್ತು ಎಂಬುದು ನಿಮಗೆ ನೆನಪಿರಬಹುದು. ಇದೇ ದಿನದಂದು ಬಾಪು ಅವರ ದಾಂಡಿ ಯಾತ್ರೆಯ ಆರಂಭದ ನೆನಪನ್ನೂ ಪುನರುಜ್ಜೀವನಗೊಳಿಸಲಾಗಿತ್ತು. ಅಂದಿನಿಂದ ಜಮ್ಮು ಕಾಶ್ಮೀರದಿಂದ ಪುದುಚೇರಿವರೆಗೆ ಮತ್ತು ಗುಜರಾತ್ ನಿಂದ ಈಶಾನ್ಯ ಭಾರತದವರೆಗೆ ದೇಶಾದ್ಯಂತ ಅಮೃತ ಮಹೋತ್ಸವ ಸಂಬಂಧಿತ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವೊಂದು ಘಟನೆಗಳು ಮತ್ತು ಸ್ವಾತಂತ್ರ್ಯ ಯೋಧರ ಕೊಡುಗೆ ಅಪಾರವಾಗಿದ್ದರೂ ಅವರ ಬಗ್ಗೆ, ಆ ಸ್ಥಳದ ಬಗ್ಗೆ ಅಷ್ಟೊಂದು ಚರ್ಚೆಯಾಗಿಲ್ಲ. ಇಂದು ಜನರು ಆ ಕುರಿತು ತಿಳಿಯುತ್ತಿದ್ದಾರೆ. ಈಗ ಮೊಯಿರಾಂಗ್ ಡೆ ಯನ್ನೇ ತೆಗೆದುಕೊಳ್ಳಿ. ಇದು ಮಣಿಪುರದ ಒಂದು ಪುಟ್ಟ ಗ್ರಾಮ. ಹಿಂದೊಮ್ಮೆ ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಅಂದರೆ ಐ ಎನ್ ಎ ಯ ಒಂದು ಪ್ರಮುಖ ತಾಣವಾಗಿತ್ತು. ಸ್ವಾತಂತ್ರ್ಯಕ್ಕೂ ಮೊದಲು ಇಲ್ಲಿ ಐ ಎನ್ ಎ ಯ ಕರ್ನಲ್ ಶೌಕತ್ ಮಲ್ಲಿಕ್ ಅವರು ಬಾವುಟ ಹಾರಿಸಿದ್ದರು. ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ 14 ಏಪ್ರಿಲ್ ಗೆ ಅದೇ ಮೊಯಿರಾಂಗ್ ನಲ್ಲಿ ಮತ್ತೊಮ್ಮೆ ತ್ರಿವರ್ಣ ಧ್ವಜ ಹಾರಿಸಲಾಯಿತು. ಹೀಗೆ ಅಮೃತ ಮಹೋತ್ಸವದಲ್ಲಿ ದೇಶ ಸ್ಮರಿಸುತ್ತಿರುವ ಅದೆಷ್ಟೋ ಸ್ವಾತಂತ್ರ್ಯ ಸೇನಾನಿಗಳು ಮತ್ತು ಮಹಾಪುರುಷರಿದ್ದಾರೆ. ಸರ್ಕಾರ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳ ಪರವಾಗಿ ಕೂಡಾ ನಿರಂತರವಾಗಿ ಇಂಥ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಥ ಕಾರ್ಯಕ್ರಮವನ್ನು ಅಗಸ್ಟ್ 15 ರಂದು ಆಯೋಜಿಸಲಾಗುತ್ತಿದೆ. ರಾಷ್ಟ್ರಗೀತೆಗೆ ಸಂಬಂಧಿಸಿದ ಒಂದು ಪ್ರಯತ್ನ ಇದಾಗಿದೆ. ಅಂದು ಹೆಚ್ಚೆಚ್ಚು ಭಾರತೀಯರು ಒಗ್ಗೂಡಿ ರಾಷ್ಟ್ರ ಗೀತೆಯನ್ನು ಹಾಡಲಿ ಎಂಬುದು ಸಾಂಸ್ಕೃತಿಕ ಸಚಿವಾಲಯದ ಪ್ರಯತ್ನವಾಗಿದೆ, ಇದಕ್ಕೆಂದು ಒಂದು ಜಾಲತಾಣವನ್ನು ಆರಂಭಿಸಲಾಗಿದೆ –rashtragana.in. ಈ ಜಾಲತಾಣದ ಮೂಲಕ ನೀವು ರಾಷ್ಟ್ರಗೀತೆ ಹಾಡಿರುವುದನ್ನು ಧ್ವನಿಮುದ್ರಿಸಬಹುದಾಗಿದೆ ಮತ್ತು ಈ ಅಭಿಯಾನದೊಂದಿಗೆ ಕೈಜೋಡಿಸಬಹುದಾಗಿದೆ. ಈ ವಿಶಿಷ್ಟ ಅಭಿಯಾನದಲ್ಲಿ ನೀವು ಖಂಡಿತ ಪಾಲ್ಗೊಳ್ಳುತ್ತೀರೆಂದು ನನಗೆ ವಿಶ್ವಾಸವಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಬಹಳಷ್ಟು ಕಾರ್ಯಕ್ರಮಗಳು ಮತ್ತು ಬಹಳಷ್ಟು ಪ್ರಯತ್ನಗಳು ನಿಮಗೆ ನೋಡಲು ಲಭಿಸುತ್ತವೆ. ‘ಅಮೃತ ಮಹೋತ್ಸವ’ ಯಾವುದೇ ಸರ್ಕಾರಿ ಕಾರ್ಯಕ್ರಮ ಅಲ್ಲ. ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದು ಕೋಟ್ಯಾಂತರ ಭಾರತೀಯರ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬ ಸ್ವತಂತ್ರ ಮತ್ತು ಕೃತಜ್ಞ ಭಾರತೀಯ ಸ್ವಾತಂತ್ರ್ಯ ಸೇನಾನಿಗಳಿಗೆ ಸಲ್ಲಿಸುವ ನಮನವಾಗಿದೆ ಮತ್ತು ಈ ಉತ್ಸವದ ಮೂಲಭಾವನೆಯ ವಿಸ್ತಾರ, ಬಹಳ ವಿಶಾಲವಾಗಿದೆ – ಅದೇನೆಂದರೆ ನಮ್ಮ ಸ್ವಾತಂತ್ರ್ಯ ಯೋಧರು ನಡೆದ ಪಥದಲ್ಲಿ ನಡೆಯುವುದು ಮತ್ತು ಅವರ ಕನಸಿನ ಭಾರತ ನಿರ್ಮಿಸುವುದು. ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ಹೇಗೆ ಒಗ್ಗೂಡಿದ್ದರೋ ಹಾಗೆಯೇ ದೇಶದ ಅಭಿವೃದ್ಧಿಗೆ ನಾವೆಲ್ಲ ಒಗ್ಗೂಡಬೇಕಿದೆ. ದೇಶಕ್ಕಾಗಿಯೇ ಜೀವಿಸಬೇಕು, ದೇಶಕ್ಕಾಗಿ ದುಡಿಯಬೇಕು ಮತ್ತು ಇದರಲ್ಲಿ ಸಣ್ಣ ಪುಟ್ಟ ಪ್ರಯತ್ನಗಳು ಬಹುದೊಡ್ಡ ಪ್ರತಿಫಲ ನೀಡುತ್ತವೆ. ನಿತ್ಯದ ಕೆಲಸ ಕಾರ್ಯಗಳೊಂದಿಗೆ ನಾವು ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬಹುದು. ಉದಾಹರಣಗೆ Vocal for Local. ನಮ್ಮ ದೇಶದ ಸ್ಥಳೀಯ ಉದ್ಯಮಿಗಳು, ಕಲಾವಿದರು, ಶಿಲ್ಪ ಕಲಾವಿದರು, ನೇಕಾರರನ್ನು ಪ್ರೋತ್ಸಾಹಿಸುವುದು ನಮ್ಮ ಸಹಜ ಸ್ವಭಾವವಾಗಬೇಕು. ಅಗಸ್ಟ್ 7 ರಂದು ಆಯೋಜಿಸಲಾಗಿರುವ National Handloom Day ಯಂದು ನಾವು ಇಂಥ ಪ್ರಯತ್ನ ಮಾಡಬಹುದಾಗಿದೆ. National Handloom Day ಗೆ ಐತಿಹಾಸಿಕ ಹಿನ್ನೆಲೆಯಿದೆ. ಈ ದಿನದಂದು 1905 ರಲ್ಲಿ ಸ್ವದೇಶಿ ಚಳುವಳಿ ಆರಂಭವಾಗಿತ್ತು.
ಸ್ನೇಹಿತರೆ, ನಮ್ಮ ದೇಶದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೈಮಗ್ಗ, ಉಪಜೀವನದ ಬಹುದೊಡ್ಡ ಸಾಧನವಾಗಿದೆ. ಇದು ಲಕ್ಷಾಂತರ ಮಹಿಳೆಯರು, ನೇಕಾರರು, ಲಕ್ಷಾಂತರ ಶಿಲ್ಪಿಗಳು ಒಗ್ಗೂಡಿದಂತಹ ಕ್ಷೇತ್ರವಾಗಿದೆ. ನಿಮ್ಮ ಸಣ್ಣ ಪುಟ್ಟ ಪ್ರಯತ್ನಗಳು, ನೇಕಾರರಲ್ಲಿ ಹೊಸ ಆಶಾಭಾವವನ್ನು ಹುಟ್ಟು ಹಾಕುತ್ತದೆ. ನೀವು ಸ್ವತಃ ಏನಾದರೂ ಖರೀದಿಸಿ ಮತ್ತು ಇತರರನ್ನೂ ಪ್ರೋತ್ಸಾಹಿಸಿ. ಸೋದರರೆ, ನಾವು ಸ್ವಾತಂತ್ರ್ಯದ 75 ನೇ ಸಂಭ್ರಮಾಚರಣೆಯಲ್ಲಿರುವಾಗ ಇಷ್ಟಾದರೂ ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. 2014 ರ ನಂತರ ಮನದ ಮಾತಿನಲ್ಲಿ ನಾವು ಖಾದಿ ಬಗ್ಗೆ ಮಾತನಾಡುವುದನ್ನು ನೀವು ಗಮನಿಸಿರಬಹುದು. ಇಂದು ದೇಶದಲ್ಲಿ ಖಾದಿ ವ್ಯಾಪಾರ ಬಹಳಷ್ಟು ಹೆಚ್ಚಾಗಿರುವುದು ನಿಮ್ಮದೇ ಪ್ರಯತ್ನದಿಂದಾಗಿದೆ. ಖಾದಿಯ ಒಂದು ಮಳಿಗೆಯಿಂದ ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ವ್ಯಾಪಾರವಾಗಬಲ್ಲದು ಎಂದು ಯಾರಾದರೂ ಊಹಿಸಿದ್ದರೆ! ಆದರೆ ನೀವು ಇದನ್ನು ಮಾಡಿ ತೋರಿದಿರಿ. ನೀವು ಎಲ್ಲಿಯೇ ಆಗಲಿ ಖಾದಿ ಖರೀದಿಸುತ್ತೀರಿ ಎಂದರೆ, ಅದರ ಲಾಭ ನಮ್ಮ ನೇಕಾರ ಸೋದರ ಸೋದರಿಯರಿಗೆ ಲಭಿಸುತ್ತದೆ. ಹಾಗಾಗಿ ಖಾದಿ ಖರೀದಿ ಒಂದು ರೀತಿಯಲ್ಲಿ ಜನಸೇವೆಯೂ ಆಗಿದೆ ಮತ್ತು ದೇಶ ಸೇವೆಯೂ ಆಗಿದೆ. ಸೋದರ ಸೋದರಿಯರೇ ಗ್ರಾಮೀಣ ಭಾಗದಲ್ಲಿ ಸಿದ್ಧಗೊಳ್ಳುವ ಕೈಮಗ್ಗದ ಉತ್ಪನ್ನಗಳನ್ನು ಖಂಡಿತ ಖರೀದಿಸಿ ಮತ್ತು ಅವನ್ನು #MyHandloomMyPride ನಲ್ಲಿ ಶೇರ್ ಮಾಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ.
ಸ್ನೇಹಿತರೇ, ಸ್ವಾತಂತ್ರ್ಯ ಚಳುವಳಿ ಮತ್ತು ಖಾದಿಯ ವಿಷಯ ಬಂದಾಗ, ಪೂಜ್ಯ ಬಾಪೂ ಅವರ ನೆನಪು ಬರುವುದು ಸಹಜ –ಯಾವರೀತಿ, ಬಾಪೂ ಅವರ ನೇತೃತ್ವದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳುವಳಿ ನಡೆಯಿತೋ, ಅಂತೆಯೇ ಇಂದು ಪ್ರತಿಯೊಬ್ಬ ಭಾರತೀಯನೂ ‘ಭಾರತವನ್ನು ಒಂದುಗೂಡಿಸಿ’ ಚಳುವಳಿಯ ನೇತೃತ್ವ ವಹಿಸಬೇಕಾಗಿದೆ. ವೈವಿಧ್ಯತೆಗಳಿಂದ ನಮ್ಮ ಭಾರತವನ್ನು ಒಂದುಗೂಡಿಸುವಂತಹ ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾದರೆ ಬನ್ನಿ, ದೇಶವೇ ನಮ್ಮ ಅತ್ಯಂತ ದೊಡ್ಡ ನಂಬಿಕೆ ಅತ್ಯಂತ ದೊಡ್ಡ ಆದ್ಯತೆ ಎಂಬ ಈ ಅಮೃತ ಸಂಕಲ್ಪವನ್ನು‘ಅಮೃತ ಮಹೋತ್ಸವದಲ್ಲಿ’ ಮಾಡೋಣ.“Nation First, Always First”ಮಂತ್ರದೊಂದಿಗೆ ನಾವು ಮುಂದೆ ಸಾಗಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತು ಆಲಿಸುತ್ತಿರುವ ನನ್ನ ಯುವ ಸ್ನೇಹಿತರಿಗೆ ವಿಶೇಷ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ. ಈಗ ಕೆಲವು ದಿನಗಳ ಹಿಂದೆಯಷ್ಟೇ, ಮೈ ಗೌ ಪರವಾಗಿ ಮನದ ಮಾತು ಶ್ರೋತೃಗಳ ಬಗ್ಗೆ ಒಂದು ಅಧ್ಯಯನ ನಡೆಸಲಾಯಿತು. ಮನದ ಮಾತಿಗಾಗಿ ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರ ಪೈಕಿ ಪ್ರಮುಖವಾಗಿ ಇರುವವರು ಯಾರು ಎಂದು ನೋಡಲಾಯಿತು. ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರಲ್ಲಿ ಸುಮಾರು ಶೇಕಡಾ 75 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅಧ್ಯಯನದ ನಂತರ ತಿಳಿದುಬಂದಿತು, ಅಂದರೆ, ಭಾರತದ ಯುವಶಕ್ತಿ ಮನದ ಮಾತಿಗೆ ದಾರಿ ತೋರಿಸುತ್ತಿದೆ ಎಂದಾಯಿತು. ನಾನು ಇದನ್ನು ಬಹಳ ಉತ್ತಮ ಸಂಕೇತದ ರೂಪದಲ್ಲಿ ನೋಡುತ್ತೇನೆ. ಸಕಾರಾತ್ಮಕತೆ–ಸಂವೇದನಾಶೀಲತೆ ಇರುವಂತಹ ಮಾಧ್ಯಮ ಮನ್ ಕಿ ಬಾತ್ ಆಗಿದೆ. ಮನದ ಮಾತಿನಲ್ಲಿ ನಾವು ಸಕಾರಾತ್ಮಕ ಮಾತುಗಳನ್ನು ಆಡುತ್ತೇವೆ. ಇದರ Character collective ಆಗಿದೆ. ಸಕಾರಾತ್ಮಕ ಚಿಂತನೆಗಳು ಮತ್ತು ಸಲಹೆಗಳಿಗಾಗಿ ಭಾರತದ ಯುವಜನತೆಯ ಈ ಕ್ರಿಯಾಶೀಲತೆ ನನಗೆ ಸಂತೋಷವನ್ನುಂಟುಮಾಡುತ್ತದೆ. “ಮನದ ಮಾತು” ಮಾಧ್ಯಮದ ಮೂಲಕ ನನಗೆ ಯುವಜನತೆಯ ಮನಸ್ಸನ್ನು ಅರಿಯುವ ಅವಕಾಶ ದೊರೆತಿರುವುದು ನನಗೆ ಸಂತೋಷದ ವಿಚಾರವಾಗಿದೆ.
ಸ್ನೇಹಿತರೇ, ನಿಮ್ಮಿಂದ ದೊರೆಯುವ ಸಲಹೆ ಸೂಚನೆಗಳೇ ಮನದ ಮಾತಿನ ನಿಜವಾದ ಶಕ್ತಿಯಾಗಿದೆ. ನಿಮ್ಮ ಸಲಹೆಗಳೇ ಮನದ ಮಾತಿನ ಮೂಲಕ ಭಾರತದ ವೈವಿಧ್ಯತೆಗಳನ್ನು ತೋರಿಸುತ್ತದೆ, ಭಾರತೀಯರ ಸೇವೆ ಮತ್ತು ತ್ಯಾಗದ ಸುಗುಂಧವನ್ನು ನಾಲ್ಕೂ ದಿಕ್ಕುಗಳಲ್ಲಿ ಹರಡುತ್ತದೆ, ಶ್ರಮವಹಿಸಿ ದುಡಿಯುವ ನಮ್ಮ ಯುವಜನತೆಯ ಆವಿಷ್ಕಾರದಿಂದ ಎಲ್ಲರಿಗೂ ಪ್ರೇರಣೆ ದೊರೆಯುತ್ತದೆ. ಮನದ ಮಾತಿನಲ್ಲಿ ನೀವು ಅನೇಕ ರೀತಿಯ ವಿಚಾರಗಳನ್ನು ಕಳುಹಿಸುತ್ತೀರಿ. ನಾವು ಎಲ್ಲದರ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಅವುಗಳಲ್ಲಿ ಬಹಳಷ್ಟು ಐಡಿಯಾಗಳನ್ನು ನಾನು ಸಂಬಂಧಿತ ಇಲಾಖೆಗಳಿಗೆ ಖಂಡಿತವಾಗಿಯೂ ಕಳುಹಿಸಿಕೊಡುತ್ತೇನೆ, ಏಕೆಂದರೆ ಅವುಗಳ ಕುರಿತು ಭವಿಷ್ಯದಲ್ಲಿ ಕೆಲಸ ಮಾಡಬಹುದಾಗಿದೆ.
ಸ್ನೇಹಿತರೆ, ನಾನು ನಿಮಗೆ “ಸಾಯಿ ಪ್ರಣೀತ್” ಅವರ ಪ್ರಯತ್ನಗಳ ಬಗ್ಗೆ ಹೇಳಲು ಬಯಸುತ್ತೇನೆ. ಸಾಯಿ ಪ್ರಣೀತ್ ಅವರು ಓರ್ವ ಸಾಫ್ಟ್ ವೇರ್ ಇಂಜನಿಯರ್ ಆಗಿದ್ದಾರೆ ಇವರು ಆಂಧ್ರಪ್ರದೇಶದ ನಿವಾಸಿಯಾಗಿದ್ದಾರೆ. ಕಳೆದ ವರ್ಷ ಅಲ್ಲಿ ಪ್ರತಿಕೂಲ ಹವಾಮಾನದ ಹೊಡೆತದಿಂದಾಗಿ ರೈತರಿಗೆ ಬಹಳಷ್ಟು ನಷ್ಟವಾಗಿದ್ದನ್ನು ಇವರು ನೋಡಿದರು. ಹವಾಮಾನ ವಿಜ್ಞಾನದಲ್ಲಿ ಇವರಿಗೆ ಬಹಳ ವರ್ಷಗಳಿಂದ ಆಸಕ್ತಿ ಇತ್ತು. ಆದ್ದರಿಂದ ಇವರು ತಮ್ಮ ಆಸಕ್ತಿ ಮತ್ತು ಪ್ರತಿಭೆಯನ್ನು ರೈತರ ಒಳಿತಿಗಾಗಿ ಉಪಯೋಗಿಸಬೇಕೆಂದು ನಿರ್ಧಾರ ಮಾಡಿದರು. ಅವರು ಈಗ ಬೇರೇ ಬೇರೆ ದತ್ತಾಂಶ ಮೂಲಗಳಿಂದ ಹವಾಮಾನ ದತ್ತಾಂಶ ಖರೀದಿಸುತ್ತಾರೆ, ಅದನ್ನು ವಿಶ್ಲೇಷಿಸುತ್ತಾರೆ ಮತ್ತು ಸ್ಥಳೀಯ ಭಾಷೆಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಅಗತ್ಯ ಮಾಹಿತಿಯನ್ನು ತಲುಪಿಸುತ್ತಾರೆ. ಹವಾಮಾನ ಅಪ್ಡೇಟ್ ಗಳು ಮಾತ್ರವಲ್ಲದೇ, ಪ್ರಣೀತ್ ಅವರು ವಿವಿಧ ವಾತಾವರಣ ಪರಿಸ್ಥಿತಿಗಳಲ್ಲಿ ಜನರು ಏನು ಮಾಡಬೇಕೆಂಬ ಕುರಿತು ಮಾರ್ಗದರ್ಶನ ಕೂಡಾ ನೀಡುತ್ತಾರೆ. ವಿಶೇಷವಾಗಿ ಪ್ರವಾಹದಿಂದ ರಕ್ಷಿಸಿಕೊಳ್ಳಲು ಅಥವಾ ಚಂಡಮಾರುತ ಅಪ್ಪಳಿಸಿದಾಗ ಅಥವಾ ಸಿಡಿಲು ಬಡಿದಾಗ ಯಾವರೀತಿ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂಬ ಕುರಿತು ಇವರು ಜನರಿಗೆ ತಿಳಿಸುತ್ತಿರುತ್ತಾರೆ.
ಸ್ನೇಹಿತರೇ, ಒಂದೆಡೆ ಈ ಯುವ ಸಾಫ್ಟ್ ವೇರ್ ಇಂಜಿನಿಯರ್ ನ ಪ್ರಯತ್ನ ಮನಮುಟ್ಟುವಂತಿದ್ದರೆ ಮತ್ತೊಂದೆಡೆ ನಮ್ಮ ಇನ್ನೊಬ್ಬ ಸ್ನೇಹಿತ ಮಾಡಿರುವ ತಂತ್ರಜ್ಞಾನದ ಬಳಕೆ ಕೂಡಾ ನಿಮ್ಮನ್ನು ಆಶ್ಟರ್ಯಚಕಿತರನ್ನಾಗಿಸುತ್ತದೆ. ಒಡಿಶ್ಶಾದ ಸಂಬಲ್ಪುರ್ ಜಿಲ್ಲೆಯ ಒಂದು ಗ್ರಾಮದ ನಿವಾಸಿ ಶ್ರೀಮಾನ್ ಇಸಾಕ್ ಮುಂಡಾ ಅವರೇ ಈ ಸ್ನೇಹಿತ. ಇಸಾಕ್ ಅವರು ಮೊದಲು ದಿನಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಆದರೆ ಅವರು ಈಗ ಒಂದು ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದಾರೆ. ತಮ್ಮ ಯೂಟ್ಯೂಬ್ ವಾಹಿನಿಯ ಮೂಲಕ ಅವರು ಅಪಾರ ಹಣ ಗಳಿಸುತ್ತಿದ್ದಾರೆ. ಅವರು ತಮ್ಮ ವಿಡಿಯೋಗಳಲ್ಲಿ ಸ್ಥಳೀಯ ತಿನಿಸು, ಸಾಂಪ್ರದಾಯಿಕ ಅಡುಗೆ ಮಾಡುವ ವಿಧಾನ, ತಮ್ಮ ಗ್ರಾಮ, ತಮ್ಮ ಜೀವನ ಶೈಲಿ, ಕುಟುಂಬ ಮತ್ತು ತಿಂಡಿ-ತಿನಿಸುಗಳ ಹವ್ಯಾಸವನ್ನು ಪ್ರಮುಖವಾಗಿ ತಿಳಿಸುತ್ತಾರೆ. ಒಡಿಶ್ಸಾದ ಪ್ರಸಿದ್ಧ ತಿನಿಸು ಪಖಾಲ್ ಸಂಬಂಧಿತ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದಾಗ, ಓರ್ವ ಯೂಟ್ಯೂಬರ್ ರೂಪದಲ್ಲಿ ಅವರ ಪಯಣ 2020 ರ ಮಾರ್ಚ್ ತಿಂಗಳಲ್ಲಿ ಆರಂಭವಾಯಿತು, ಆಗಿನಿಂದ ಅವರು ನೂರಾರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ಈ ಪ್ರಯತ್ನ ಅನೇಕ ಕಾರಣಗಳಿಂದಾಗಿ ವಿಭಿನ್ನವೆನಿಸಿದೆ. ಇದಕ್ಕೆ ವಿಶೇಷ ಕಾರಣವೆಂದರೆ ಇದರಿಂದಾಗಿ ನಗರಗಳಲ್ಲಿ ವಾಸಿಸುವ ಜನರಿಗೆ ತಮಗೆ ಸ್ವಲ್ಪ ಮಾತ್ರವೂ ತಿಳಿದಿರದ ಆ ಜೀವನ ಶೈಲಿ ನೋಡುವ ಅವಕಾಶ ದೊರೆಯುತ್ತದೆ. ಇಸಾಕ್ ಮುಂಡಾ ಅವರು ಸಂಸ್ಕೃತಿ ಮತ್ತು ಪಾಕಪದ್ಧತಿ ಎರಡನ್ನೂ ಸಮಾನವಾಗಿ ಬೆರೆಸಿ ಸೆಲೆಬ್ರೇಟ್ ಮಾಡುತ್ತಿದ್ದಾರೆ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿಯನ್ನೂ ನೀಡುತ್ತಿದ್ದಾರೆ.
ಸ್ನೇಹಿತರೇ, ನಾವು ತಂತ್ರಜ್ಞಾನ ಕುರಿತು ಚರ್ಚಿಸುತ್ತಿರುವಾಗ, ಮತ್ತೊಂದು ಆಸಕ್ತಿದಾಯಕ ವಿಷಯ ಹೇಳಲು ನಾನು ಬಯಸುತ್ತೇನೆ. ಇತ್ತೀಚೆಗೆ ಐಐಟಿ ಮದ್ರಾಸಿನ ವಿದ್ಯಾರ್ಥಿ ಆರಂಭಿಸಿದ ಒಂದು ಸ್ಟಾರ್ಟ್ ಅಪ್ ಕಂಪೆನಿಯು ಒಂದು 3D printed house ಮಾಡಿರುವ ವಿಷಯ ಕುರಿತು ನೀವು ಓದಿರಬಹುದು, ನೋಡಿರಬಹುದು. 3D printing ಮಾಡಿ ಮನೆಯ ನಿರ್ಮಾಣ, ಇದು ಸಾಧ್ಯವಾಗಿದ್ದಾದರೂ ಹೇಗೆ? ವಾಸ್ತವದಲ್ಲಿ ಈ start-up ಎಲ್ಲಕ್ಕಿಂತ ಮೊದಲು 3D printer ನಲ್ಲಿ ಒಂದು 3 ಆಯಾಮಗುಳುಳ್ಳ ವಿನ್ಯಾಸವನ್ನು ಫೀಡ್ ಮಾಡಿತು ಮತ್ತು ನಂತರ ವಿಶೇಷ ರೀತಿಯಲ್ಲಿ concrete ಮೂಲಕ ಒಂದರ ಮೇಲೆ ಒಂದರಂತೆ ಒಂದು 3D structure fabricate ಮಾಡಲಾಯಿತು. ದೇಶಾದ್ಯಂತ ಈ ರೀತಿಯ ಅನೇಕ ಪ್ರಯೋಗಗಳು ನಡೆಯುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಸಣ್ಣ ಸಣ್ಣ ಕಟ್ಟಡ ನಿರ್ಮಾಣಗಳಿಗೂ ಕೂಡಾ ವರ್ಷಗಳ ಸಮಯ ಹಿಡಿಯುತ್ತಿದ್ದಂತಹ ಕಾಲವೊಂದಿತ್ತು. ಆದರೆ ಈಗ ತಂತ್ರಜ್ಞಾನದ ಕಾರಣದಿಂದಾಗಿ, ಭಾರತದ ಸ್ಥಿತಿ ಬದಲಾಗುತ್ತಿದೆ. ಕೆಲವು ದಿನಗಳ ಹಿಂದೆ ನಾವು ಇಂತಹ ವಿಶ್ವದ ಆವಿಷ್ಕಾರಕ ಕಂಪೆನಿಗಳನ್ನು ಆಹ್ವಾನಿಸಲು ಒಂದು Global Housing Technology Challenge launch ಮಾಡಿದೆವು. ಇದು ದೇಶದಲ್ಲಿ ತನ್ನದೇ ಆದ ಬೇರೆ ಬೇರೆ ರೀತಿಯ ವಿಶೇಷ ಪ್ರಯಾಸವಾಗಿತ್ತು, ಆದ್ದರಿಂದ ನಾವು ಇದಕ್ಕೆ Light House Projects ಎಂಬ ಹೆಸರನ್ನು ಇಟ್ಟೆವು. ಪ್ರಸಕ್ತವಾಗಿ ದೇಶದಲ್ಲಿ 6 ಬೇರೆ ಬೇರೆ ಸ್ಥಳಗಳಲ್ಲಿ Light House Projects ಗಳಲ್ಲಿ ಶೀಘ್ರಗತಿಯಲ್ಲಿ ಕೆಲಸ ನಡೆಯುತ್ತಿದೆ. ಈ Light House Projectsನಲ್ಲಿ ನವೀನ ತಂತ್ರಜ್ಞಾನ ಮತ್ತು ಆವಿಷ್ಕಾರಾತ್ಮಕ ವಿಧಾನಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ನಿರ್ಮಾಣದ ಸಮಯಾವಧಿ ಕಡಿಮೆಯಾಗುತ್ತದೆ. ಇದರೊಂದಿಗೆ ನಿರ್ಮಾಣವಾಗುವ ಮನೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ, ಖರ್ಚು ಕಡಿಮೆ ಇರುತ್ತದೆ ಮತ್ತು ಆರಾಮದಾಯಕವಾಗಿರುತ್ತವೆ. ನಾನು ಇತ್ತೀಚೆಗೆ ಡ್ರೋನ್ ಗಳ ಮೂಲಕ ಈ ಯೋಜನೆಗಳನ್ನು ಪರಿಶೀಲಿಸಿದೆ ಮತ್ತು ಕಾರ್ಯದ ಪ್ರಗತಿಯನ್ನು ನೇರವಾಗಿ ವೀಕ್ಷಿಸಿದೆ.
ಇಂದೋರ್ ನ project ನಲ್ಲಿ ಇಟ್ಟಿಗೆ ಮತ್ತು ಮಾರ್ಟರ್ ಗೋಡೆಗಳ ಜಾಗದಲ್ಲಿ Pre-Fabricated Sandwich Panel System ನ ಉಪಯೋಗ ಮಾಡಲಾಗುತ್ತಿದೆ. ರಾಜ್ ಕೋಟ್ ನಲ್ಲಿ Light House, French Technology ನಿಂದ ತಯಾರಾಗುತ್ತಿದೆ ಇದರಲ್ಲಿ ಸುರಂಗದ ಮೂಲಕ Monolithic Concrete construction technology ಉಪಯೋಗಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ತಯಾರಿಸಲಾಗುವ ಮನೆಯು ಆಪತ್ತುಗಳನ್ನು ಎದುರಿಸಲು ಹೆಚ್ಚು ಸಮರ್ಥವಾಗಿರುತ್ತವೆ. ಚೆನ್ನೈನಲ್ಲಿ ಅಮೆರಿಕಾ ಮತ್ತು ಫಿನ್ಲ್ಯಾಂಡ್ ಗಳ ತಂತ್ರಜ್ಞಾನಗಳು, Pre-Cast Concrete System ಗಳ ಉಪಯೋಗ ಮಾಡಲಾಗುತ್ತಿದೆ. ಇದರಿಂದಾಗಿ ಮನೆಗಳು ಶೀಘ್ರವಾಗಿ ನಿರ್ಮಾಣವಾಗುತ್ತವೆ ಮತ್ತು ತಗಲುವ ವೆಚ್ಚ ಕೂಡಾ ಕಡಿಮೆ ಇರುತ್ತದೆ. ರಾಂಚಿಯಲ್ಲಿ ಜರ್ಮನಿಯ 3DConstruction System ಉಪಯೋಗಿಸಿ ಮನೆ ನಿರ್ಮಾಣವಾಗುತ್ತದೆ. ಇದರಲ್ಲಿ ಪ್ರತಿಯೊಂದು ಕೋಣೆಯನ್ನು ಭಿನ್ನವಾಗಿ ತಯಾರಿಸಲಾಗುತ್ತದೆ ಹೇಗೆಂದರೆ ಸಂಪೂರ್ಣ ನಿರ್ಮಾಣವನ್ನು ಬ್ಲಾಕ್ ಟಾಯ್ಸ್ ಜೋಡಿಸಿದ ರೀತಿಯಲ್ಲಿ ನಿರ್ಮಿಸಲಾಗುತ್ತದೆ. ಅಗರ್ತಲಾದಲ್ಲಿನ್ಯೂ ಜಿಲ್ಯಾಂಡ್ ನ ತಂತ್ರಜ್ಞಾನ ಉಪಯೋಗಿಸಿ, ಸ್ಟೀಲ್ ಫ್ರೇಮ್ ನಿಂದ ಮನೆಯನ್ನು ನಿರ್ಮಿಸಲಾಗುತ್ತದೆ ಇದು ಭಾರೀ ಭೂಕಂಪವನ್ನು ಕೂಡಾ ತಾಳಿಕೊಳ್ಳುತ್ತದೆ. ಹಾಗೆಯೇ ಲಕ್ನೋದಲ್ಲಿ ಕೆನಡಾದ ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ. ಇದರಲ್ಲಿ ಪ್ಲಾಸ್ಟರ್ ಮತ್ತು ಪೈಂಟ್ ನ ಅಗತ್ಯವಿರುವುದಿಲ್ಲ ಮತ್ತು ಮನೆಯನ್ನು ವೇಗವಾಗಿ ನಿರ್ಮಿಸಲು ಮೊದಲೆ ತಯಾರಿಸಲಾದ ಗೋಡೆಗಳನ್ನು ಉಪಯೋಗಿಸಲಾಗುತ್ತದೆ.
ಸ್ನೇಹಿತರೇ, ಇಂದು ಈ project Incubation Centres ನಂತೆ ಕೆಲಸ ಮಾಡಬೇಕೆಂದು ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಇದರಿಂದ ನಮ್ಮ Planners, Architects, Engineers ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಕುರಿತು ತಿಳಿದುಕೊಳ್ಳಬಹುದು ಮತ್ತು ಅವುಗಳನ್ನು ಪ್ರಯೋಗ ಮಾಡಿ ನೋಡಲೂ ಬಹುದು. ರಾಷ್ಟ್ರದ ಹಿತದೃಷ್ಟಿಯಿಂದ ನಮ್ಮ ಯುವಕರನ್ನು ತಂತ್ರಜ್ಞಾನದ ಹೊಸ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸಲು ನಾನು ನಾನು ಈ ಮಾತನ್ನು ವಿಶೇಷವಾಗಿ ನಮ್ಮ ಯುವ ಜನತೆಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನನ್ನ ಪ್ರಿಯ ದೇಶಬಾಂಧವರೆ, ನೀವು “To Learn is to Grow” ಎಂಬ ಇಂಗ್ಲೀಷ್ ನಾನ್ನುಡಿಯೊಂದನ್ನು ಕೇಳಿರಬಹುದು. ಅಂದರೆ ಕಲಿಕೆಯೇ ಅಭಿವೃದ್ಧಿಗೆ ಸೋಪಾನ. ನಾವು ಏನನ್ನಾದರೂ ಹೊಸತನ್ನು ಕಲಿತಾಗ ನಮಗೆ ಅಭಿವೃದ್ಧಿಯ ಹೊಸ ಮಾರ್ಗಗಳು ತೆರೆದುಕೊಳ್ಳಲಾರಂಭಿಸುತ್ತವೆ. ನಾವು ಗುಂಪಿನಿಂದ ಭಿನ್ನವಾಗಿ ಏನನ್ನಾದರೂ ಹೊಸತನ್ನು ಮಾಡುವ ಪ್ರಯತ್ನ ಮಾಡಿದಾಗಲೆಲ್ಲ ಮಾನವ ಕುಲಕ್ಕೆ ಹೊಸ ಮಾರ್ಗಗಳು ತೆರೆದುಕೊಂಡಿವೆ. ಒಂದು ನವಯುಗದ ಆರಂಭವಾಗಿದೆ. ಎಲ್ಲಿಯೇ ಹೊಸತು ಕಂಡುಬಂದಾಗ ಅದರ ಪರಿಣಾಮ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ ಎಂಬುದನ್ನು ನೀವು ನೋಡಿರಬಹದು.
ಸೇಬು -Apple ನೊಂದಿಗೆ ಸಂಬಂಧ ಕಲ್ಪಿಸುವ ಯಾವ ರಾಜ್ಯವಿದೆ ಎಂದು ನಾನು ನಿಮ್ಮನ್ನ ಕೇಳಿದರೆ, ಖಂಡಿತ ನಿಮ್ಮ ಮನದಲ್ಲಿ ಎಲ್ಲಕ್ಕಿಂತ ಮೊದಲು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದ ಹೆಸರು ಹೊಳೆಯುತ್ತದೆ. ಆದರೆ ಈ ಪಟ್ಟಿಯಲ್ಲಿ ಮಣಿಪುರವನ್ನೂ ಸೇರಿಸಿ ಎಂದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಹೊಸತೇನಾದರೂ ಮಾಡಬೇಕೆಂಬ ಹುರುಪಿನಿಂದ ಕೆಲ ಯುವಕರು ಮಣಿಪುರದಲ್ಲಿ ಇಂಥ ಸಾಹಸವನ್ನು ಮಾಡಿ ತೋರಿದ್ದಾರೆ. ಈ ಮಧ್ಯೆ ಮಣಿಪುರದ ಉಕ್ರೂಲ್ ಜಿಲ್ಲೆಯಲ್ಲಿ “ಸೇಬು ಕೃಷಿ” ವೇಗ ಪಡೆದುಕೊಂಡಿದೆ. ಇಲ್ಲಿಯ ರೈತರು ತಮ್ಮ ತೋಟಗಳಲ್ಲಿ ಸೇಬನ್ನು ಬೆಳೆಯುತ್ತಿದ್ದಾರೆ. ಇವರು ಹಿಮಾಚಲ ಪ್ರದೇಶಕ್ಕೆ ತೆರಳಿ ಸೇಬು ಕೃಷಿಯಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಟಿ ಎಸ್ ರಿಂಗ್ ಫಾಮೀ ಯಂಗ್ ಅವರು ಕೂಡಾ ಒಬ್ಬರು. ಇವರು ವೃತ್ತಿಯಿಂದ ಒಬ್ಬ Aeronautical Engineer. ತಮ್ಮ ಪತ್ನಿ ಟಿ ಎಸ್ ಎಂಜೆಲ್ ಅವರೊಂದಿಗೆ ಸೇರಿ ಸೇಬು ಕೃಷಿ ಕೈಗೊಂಡಿದ್ದಾರೆ. ಇದೇ ರೀತಿ ಅವುಂಗ್ಶಿ ಶಿಮರೆ ಆಗಸ್ಟೀನಾ (Avungshee Shimre Augasteena) ಅವರು ಕೂಡಾ ತಮ್ಮ ತೋಟದಲ್ಲಿ ಸೇಬನ್ನು ಬೆಳೆದಿದ್ದಾರೆ. ಅವುಂಗ್ಶಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಅದನ್ನು ತೊರೆದು ತಮ್ಮ ಗ್ರಾಮಕ್ಕೆ ಹಿಂದಿರುಗಿ ಸೇಬು ಕೃಷಿ ಆರಂಭಿಸಿದರು. ಮಣಿಪುರದಲ್ಲಿ ಇಂದು ಇಂಥ ಹಲವಾರು ಸೇಬು ಕೃಷಿಕರು ಹೊಸತನ್ನು ಮಾಡಿ ತೋರಿಸಿದ್ದಾರೆ.
ಸ್ನೇಹಿತರೆ, ನಮ್ಮ ಬುಡಕಟ್ಟು ಸಮುದಾಯದಲ್ಲಿ, ಬೋರೆಹಣ್ಣು ಬಹಳ ಜನಪ್ರಿಯ. ಬುಡಕಟ್ಟು ಸಮುದಾಯದವರು ಸದಾ ಬೋರೆಹಣ್ಣು ಕೃಷಿ ಕೈಗೊಳ್ಳುತ್ತಲೇ ಇದ್ದಾರೆ. ಕೊವಿಡ್ – 19 ಸಾಂಕ್ರಮಿಕ ರೋಗದ ನಂತರ ಈ ಕೃಷಿ ವಿಶೇಷವಾಗಿ ಹೆಚ್ಚುತ್ತಲೇ ಸಾಗಿದೆ. ತ್ರಿಪುರಾದ “ಉನಾಕೋಟಿ” ಯ ಇಂಥ 32 ರ ವಯೋಮಾನದ ನಮ್ಮ ಯುವ ಸ್ನೇಹಿತ ವಿಕ್ರಂಜೀತ್ ಚಕಮಾ ಅವರು ಬೋರೆಹಣ್ಣಿನ ಕೃಷಿ ಆರಂಭಿಸಿ ಬಹಳ ಆದಾಯವನ್ನೂ ಗಳಿಸಿದ್ದಾರೆ ಮತ್ತು ಇತರರನ್ನೂ ಬೋರೆಹಣ್ಣಿನ ಕೃಷಿ ಕೈಗೊಳ್ಳುವಂತೆ ಪ್ರೇರೆಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಇಂಥವರ ಸಹಾಯಕ್ಕಾಗಿ ಮುಂದೆ ಬಂದಿದೆ. ಬೋರೆಹಣ್ಣಿನ ಕೃಷಿಕರ ಬೇಡಿಕೆಯನ್ನು ಪೂರೈಸಲೆಂದೇ ಸರ್ಕಾರ ಇದಕ್ಕೆಂದೇ ವಿಶೇಷ ನರ್ಸರಿಗಳನ್ನು ಸಿದ್ಧಪಡಿಸಿದೆ. ಈ ಕೃಷಿಯಲ್ಲಿ ಆವಿಷ್ಕಾರಗಳು ಆಗುತ್ತಿರುವಂತೆ ಉಪ ಉತ್ಪನ್ನಗಳ ತಯಾರಿಕೆಯಲ್ಲೂ ಕ್ರೀಯಾಶೀಲತೆ ಕಂಡುಬರುತ್ತಿದೆ.
ಸ್ನೇಹಿತರೆ, ನನಗೆ ಉತ್ತರ ಪ್ರದೇಶದ ಲಖೀಂಪುರ್ ಖೀರಿಯಲ್ಲಿ ಕೈಗೊಳ್ಳಲಾದ ಒಂದು ಪ್ರಯತ್ನದ ಬಗ್ಗೆ ತಿಳಿದುಬಂದಿದೆ. ಕೊವಿಡ್ ಸಮಯದಲ್ಲಿ ಲಖೀಂಪುರ್ ಖೀರಿಯಲ್ಲಿ ಒಂದು ವಿನೂತನ ಪ್ರಯತ್ನ ನಡೆದಿದೆ. ಅಲ್ಲಿ ಮಹಿಳೆಯರಿಗೆ ಬಾಳೆಯ ತ್ಯಾಜ್ಯ ದಿಂಡುಗಳಿಂದ ನಾರು ಸಿದ್ಧಪಡಿಸುವ ತರಬೇತಿ ನೀಡಲಾಗುತ್ತಿದೆ. ಕಸದಿಂದ ರಸ ತಯಾರಿಸುವ ಮಾರ್ಗ ಇದಾಗಿದೆ. ಬಾಳೆ ದಿಂಡುಗಳನ್ನು ಕತ್ತರಿಸಿ ಯಂತ್ರದ ಸಹಾಯದಿಂದ ಬಾಳೆ ನಾರು ಸಿದ್ಧಪಡಿಸಲಾಗುತ್ತದೆ. ಇದು ಸೆಣಬಿನಂತಿರುತ್ತದೆ. ಈ ನಾರಿನಿಂದ handbag, ಚಾಪೆ, ಕಾರ್ಪೆಟ್ (ಕಂಬಳಿ) ಇಂಥ ಹಲವಾರು ವಸ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಿಂದ ಕೃಷಿ ತ್ಯಾಜ್ಯದ ಉಪಯೋಗ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮೀಣ ನಮ್ಮ ಸೋದರಿಯರು ಹೆಣ್ಣು ಮಕ್ಕಳಿಗೆ ಮತ್ತೊಂದು ದುಡಿಮೆಯ ಮಾರ್ಗ ದೊರೆತಿದೆ. ಬಾಳೆ ನಾರಿನ ಈ ಕೆಲಸದಿಂದ ಸ್ಥಳೀಯ ಮಹಿಳೆಯರಿಗೆ ದಿನಕ್ಕೆ 400 ರಿಂದ 600 ರೂಪಾಯಿಯ ದುಡಿಮೆ ಲಭಿಸುತ್ತದೆ. ಲಖೀಂಪುರ್ ಖೀರಿಯಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಬಾಳೆ ಕೃಷಿ ಕೈಗೊಳ್ಳಲಾಗುತ್ತದೆ. ಬಾಳೆ ಕೃಷಿ ನಂತರ ಬಾಳೆ ದಿಂಡನ್ನು ಕತ್ತರಿಸಿ ಸಾಗಿಸಲು ಕೃಷಿಕರು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತಿತ್ತು. ಈಗ ಅವರಿಗೆ ಈ ಹಣ ಉಳಿತಾಯವಾಗುತ್ತದೆ. ಅಂದರೆ ಆಮ್ ಕೆ ಆಮ್ ಗುಟಲಿಯೋಂಕೆ ದಾಮ್ (ಮಾವಿನ ಹಣ್ಣಿನ ಜೊತೆಗೆ ವಾಟೆಯೂ ಲಾಭ ನೀಡಿದಂತೆ) ಎಂಬ ನಾಣ್ಣುಡಿ ಇಲ್ಲಿ ಸೂಕ್ತವೆನಿಸುತ್ತದೆ.
ಸ್ನೇಹಿತರೆ, ಒಂದೆಡೆ ಬಾಳೆ ನಾರಿನಿಂದ ಉತ್ಪನ್ನವನ್ನು ತಯಾರಿಸಲಾಗುತ್ತಿದ್ದರೆ ಮತ್ತೊಂದೆಡೆ ಬಾಳೆ ಹಿಟ್ಟಿನಿಂದ ದೋಸೆ ಮತ್ತು ಗುಲಾಬ್ ಜಾಮೂನ್ ನಂತಹ ಸ್ವಾದಿಷ್ಟ ತಿಂಡಿಗಳನ್ನೂ ಸಿದ್ಧಪಡಿಸಲಾಗುತ್ತಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಹಿಳೆಯರು ಈ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಈ ಕೆಲಸವೂ ಕೊರೊನಾ ಸಮಯದಲ್ಲೇ ಆರಂಭವಾಯಿತು. ಈ ಮಹಿಳೆಯರು ಬಾಳೆ ಹಿಟ್ಟಿನಿಂದ ಕೇವಲ ದೋಸೆ ಮತ್ತು ಗುಲಾಬ್ ಜಾಮೂನ್ ನಂತಹ ಖಾದ್ಯಗಳನ್ನು ಸಿದ್ಧಪಡಿಸುವುದಲ್ಲದೆ ಇದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು. ಹೆಚ್ಚೆಚ್ಚು ಜನರಿಗೆ ಬಾಳೆ ಹಿಟ್ಟಿನ ಬಗ್ಗೆ ತಿಳಿದಾಗ ಅದರ ಬೇಡಿಕೆಯೂ ಹೆಚ್ಚಿತು ಮತ್ತು ಈ ಮಹಿಳೆಯರ ಆದಾಯವೂ ಹೆಚ್ಚಿತು. ಲಖೀಂ ಪುರ್ ಖೀರಿಯಂತೆ ಇಲ್ಲಿಯೂ ಈ ಆವಿಷ್ಕಾರಿ ಯೋಜನೆಯ ನಾಯಕತ್ವವನ್ನು ಮಹಿಳೆಯರೇ ವಹಿಸಿದ್ದಾರೆ.
ಸ್ನೇಹಿತರೆ, ಇಂಥ ಉದಾಹರಣೆಗಳು ಜೀವನದಲ್ಲಿ ಹೊಸತನ್ನು ಮಾಡುವ ಪ್ರೇರಣೆ ನೀಡುತ್ತವೆ. ನಿಮ್ಮ ಸುತ್ತ ಮುತ್ತ ಇಂಥ ಬಹಳಷ್ಟು ಜನರಿರಬಹುದು. ನಿಮ್ಮ ಕುಟುಂಬ ಮನದ ಮಾತನ್ನಾಡುವಾಗ ಇವರನ್ನೂ ನಿಮ್ಮ ಮಾತುಕತೆಯಲ್ಲಿ ಸೇರಿಸಿ. ಕಾಲಾವಕಾಶ ಮಾಡಿಕೊಂಡು ಮಕ್ಕಳೊಂದಿಗೆ ಇಂಥ ಪ್ರಯತ್ನಗಳನ್ನು ನೋಡಿ ಬನ್ನಿ. ಅವಕಾಶ ಸಿಕ್ಕರೆ ನೀವೂ ಇಂಥದ್ದನ್ನು ಮಾಡಿ. ಹಾಂ ಇದೆಲ್ಲವನ್ನು ನೀವು ನನ್ನ ಜೊತೆ, ನಮೋ ಆಪ್ ಅಥವಾ ಮೈ ಗೌ ನಲ್ಲಿ ಹಂಚಿಕೊಂಡರೆ ನನಗೆ ಅಪಾರ ಸಂತೋಷವಾಗುತ್ತದೆ.
ನನ್ನ ಪ್ರಿಯ ದೇಶಬಾಂಧವರೆ, ನಮ್ಮ ಸಂಸ್ಕೃತ ಗ್ರಂಥಗಳಲ್ಲಿ ಒಂದು ಶ್ಲೋಕವಿದೆ.
ಆತ್ಮಾರ್ಥಂ ಜೀವ ಲೋಕೆ ಅಸ್ಮಿನ್, ಕೊ ನ ಜೀವತಿ ಮಾನವಃ.
ಪರಮ್ ಪರೋಪಕಾರಾರ್ಥಂ, ಯೋ ಜೀವತಿ ಸ ಜೀವತಿ.
ಅಂದರೆ, ತಮಗಾಗಿ ಈ ಲೋಕದಲ್ಲಿ ಎಲ್ಲರೂ ಜೀವಿಸುತ್ತಾರೆ. ಆದರೆ ಯಾರು ಪರೋಪಕಾರಕ್ಕಾಗಿ ಜೀವಿಸುತ್ತಾರೋ ಅವರೇ ವಾಸ್ತವದಲ್ಲಿ ಜೀವಿಸಿದಂತೆ, ಭಾರತ ಮಾತೆಯ ಮಕ್ಕಳ ಪರೋಪಕಾರದ ಪ್ರಯತ್ನಗಳ ಮಾತೇ – ‘ಮನದ ಮಾತು’. ಇಂದು ಇಂಥ ಮತ್ತಷ್ಟು ಸ್ನೇಹಿತರ ಬಗ್ಗೆ ಮಾತನಾಡೋಣ. ಒಬ್ಬ ಸ್ನೇಹಿತರು ಚಂಡೀಗಡದವರಾಗಿದ್ದಾರೆ. ಚಂಡೀಗಡದಲ್ಲಿ ನಾನು ಕೆಲ ವರ್ಷಗಳು ವಾಸವಿದ್ದೆ. ಇದು ಬಹಳ ಸುಂದರ ಮತ್ತು ಆರಾಮದಾಯಕ ನಗರವಾಗಿದೆ. ಇಲ್ಲಿ ನೆಲೆಸಿರುವ ಜನರು ಹೃದಯವೈಶಾಲ್ಯ ಉಳ್ಳವರು. ನೀವು ಖಾದ್ಯಪ್ರಿಯರಾಗಿದ್ದರೆ ನಿಮಗೆ ಇಲ್ಲಿ ಪರಮಾನಂದವಾಗುತ್ತದೆ. ಇದೇ ಚಂಡೀಗಢದ ಸೆಕ್ಟರ್ 29 ರಲ್ಲಿ ಸಂಜಯ್ ರಾಣಾ ಅವರು ಆಹಾರ ಮಳಿಗೆ ಇಟ್ಟುಕೊಂಡಿದ್ದಾರೆ. ಸೈಕಲ್ ಮೇಲೆ ಛೋಲೆ ಬಟುರಾ ಮಾರಾಟ ಮಾಡುತ್ತಾರೆ. ಒಂದು ದಿನ ಅವರ ಮಗಳು ರಿದ್ಧಿಮಾ ಮತ್ತು ಸೋದರ ಸೊಸೆ ರಿಯಾ ಒಂದು ಆಲೋಚನೆಯೊಂದಿಗೆ ಅವರ ಬಳಿ ಬಂದರು. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತವಾಗಿ ಛೋಲೆ ಬಟುರಾ ವಿತರಿಸುವಂತೆ ಇಬ್ಬರೂ ಹೇಳಿದರು. ಇದಕ್ಕೆ ಅವರು ಸಂತೋಷದಿಂದ ಒಪ್ಪಿದರು. ಕೂಡಲೇ ಈ ಸತ್ಕಾರ್ಯವನ್ನು ಆರಂಭಿಸಿದರು. ಸಂಜಯ್ ರಾಣಾ ಅವರ ಛೋಲೆ ಬಟುರಾವನ್ನು ಉಚಿತವಾಗಿ ಸವಿಯಲು ಅಂದೇ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದು ತೋರಿಸಬೇಕು. ಲಸಿಕೆ ಸಂದೇಶವನ್ನು ತೋರಿಸಿದ ಕೂಡಲೇ ನಿಮಗೆ ಅವರು ಸ್ವಾದಿಷ್ಟವಾದ ಛೋಲೆ ಬಟುರಾ ಸವಿಯಲು ನೀಡುತ್ತಾರೆ. ಸಮಾಜದ ಒಳಿತಿಗೆ ಹಣಕ್ಕಿಂತ ಹೆಚ್ಚು ಸೇವಾ ಮನೋಭಾವ, ಕರ್ತವ್ಯಪರತೆ ಹೆಚ್ಚು ಅವಶ್ಯಕ ಎಂದು ಹೇಳಲಾಗುತ್ತದೆ. ನಮ್ಮ ಸೋದರ ಸಂಜಯ್ ಇದು ಸರಿ ಎಂದು ಸಾಬೀತುಪಡಿಸುತ್ತಿದ್ದಾರೆ.
ಸ್ನೇಹಿತರೆ, ಮತ್ತೊಂದು ಕೆಲಸದ ಬಗ್ಗೆ ನಾನು ಇಂದು ಚರ್ಚಿಸಲು ಬಯಸುತ್ತೇನೆ. ಈ ಕೆಲಸ ನಡೆಯುತ್ತಿರುವುದು ತಮಿಳುನಾಡಿನ ನೀಲಗಿರಿಯಲ್ಲಿ. ಅಲ್ಲಿ ರಾಧಿಕಾ ಶಾಸ್ರ್ತಿ ಅವರು AmbuRx(ಆಂಬುರೆಕ್ಸ್) ಯೋಜನೆ ಆರಂಭಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ಸುಲಭವಾದ ಸಾರಿಗೆ ವ್ಯವಸ್ಥೆ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ರಾಧಿಕಾ ಅವರು ಕೂನೂರಿನಲ್ಲಿ ಒಂದು Cafe ನಡೆಸುತ್ತಾರೆ. ಅವರು ತಮ್ಮ ಕೆಫೆಯ AmbuRx ಗಾಗಿ ಹಣ ಸಂಗ್ರಹಿಸಿದರು. ಇಂದು ನೀಲಗಿರಿಯ ಗುಡ್ಡಗಳಲ್ಲಿ 6 AmbuRx ಸೇವಾ ನಿರತವಾಗಿವೆ ಮತ್ತು ತುರ್ತು ಸಮಯದಲ್ಲಿ ದೂರದೂರದ ರೋಗಿಗಳಿಗೂ ಸೇವೆ ನೀಡುತ್ತಿವೆ. ಆಂಬುರೆಕ್ಸ್ ನಲ್ಲಿ Stretcher, Oxygen Cylinder, First Aid Box ನಂತಹ ಅನೇಕ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಗಿದೆ.
ಸ್ನೇಹಿತರೇ, ಸಂಜಯ್ ಆಗಲಿ ಅಥವಾ ರಾಧಿಕಾ ಅವರೇ ಆಗಲಿ, ನಾವು ನಮ್ಮ ಕೆಲಸ, ನಮ್ಮ ಉದ್ಯೋಗ ಮಾಡುತ್ತಲೇ ಸೇವಾ ಕಾರ್ಯ ಕೂಡಾ ಮಾಡಬಹುದು ಎನ್ನುವುದು ಇಂತಹ ಉದಾಹರಣೆಗಳಿಂದ ನಮಗೆ ತಿಳಿದುಬರುತ್ತದೆ.
ಸ್ನೇಹಿತರೇ, ಕೆಲವು ದಿನಗಳ ಹಿಂದೆ ಅತ್ಯಂತ ಆಸಕ್ತಿದಾಯಕ ಮತ್ತು ಭಾವನಾತ್ಮಕ ಘಟನೆಯೊಂದು ನಡೆಯಿತು, ಇದರಿಂದಾಗಿ ಭಾರತ-ಜಾರ್ಜಿಯಾ ಮೈತ್ರಿಗೆ ಒಂದು ಶಕ್ತಿ ತುಂಬಿದಂತಾಗಿದೆ. ಈ ಸಮಾರಂಭದಲ್ಲಿ ಭಾರತವು ಸೈಂಟ್ ಕ್ವೀನ್ ಕೆಟೆವಾನ್ (Saint Queen Ketevan) ಅವರ ಪವಿತ್ರ ರೆಲಿಕ್ (Holy Relic) ಅಂದರೆ ಅವರ ಪವಿತ್ರ ಸ್ಮರಣ ಚಿಹ್ನೆಯನ್ನು ಜಾರ್ಜಿಯಾ ಸರ್ಕಾರ ಮತ್ತು ಅದರ ಜನತೆಗೆ ಹಸ್ತಾಂತರಿಸಿತು, ಇದಕ್ಕಾಗಿ ನಮ್ಮ ವಿದೇಶಾಂಗ ಸಚಿವರು ಸ್ವತಃ ಅಲ್ಲಿಗೆ ತೆರಳಿದ್ದರು. ಬಹಳ ಭಾವನಾತ್ಮಕ ವಾತಾವರಣದಲ್ಲಿ ನಡೆದ ಈ ಸಮಾರಂಭದಲ್ಲಿ ಜಾರ್ಜಿಯಾದ ರಾಷ್ಟ್ರಪತಿ, ಪ್ರಧಾನಮಂತ್ರಿ, ಅನೇಕ ಧರ್ಮ ಗುರುಗಳು, ಮತ್ತು ಭಾರೀ ಸಂಖ್ಯೆಯಲ್ಲಿ ಜಾರ್ಜಿಯಾದ ಜನತೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರಶಂಸಿಸುತ್ತಾ ಆಡಿದ ಮಾತುಗಳು, ಬಹಳ ಸ್ಮರಣೀಯವಾಗಿವೆ. ಈ ಒಂದು ಸಮಾರಂಭವು ಉಭಯ ದೇಶಗಳೊಂದಿಗೆ, ಗೋವಾ ಮತ್ತು ಜಾರ್ಜಿಯಾ ನಡುವಿನ ಸಂಬಂಧವನ್ನು ಕೂಡಾ ಬಲಪಡಿಸಿದೆ. ಏಕೆಂದರೆ, ಸೈಂಟ್ ಕ್ವೀನ್ ಕೆಟೆವಾನ್ (Saint Queen Ketevan) ರವರ ಈ ಪವಿತ್ರ ಅವಶೇಷ 2005 ರಲ್ಲಿ ಗೋವಾದ Saint Augustine Church ನಿಂದ ದೊರೆತಿತ್ತು.
ಸ್ನೇಹಿತರೇ, ಇವೆಲ್ಲವೂ ಏನು, ಯಾವಾಗ ಮತ್ತು ಹೇಗಾಯಿತು ಎಂಬ ಪ್ರಶ್ನೆ ನಿಮ್ಮ ಮನದಲ್ಲಿರಬಹುದು. ವಾಸ್ತವದಲ್ಲಿ ಇದು ಸುಮಾರು ನಾಲ್ಕುನೂರರಿಂದ ಐದು ನೂರು ವರ್ಷಗಳಷ್ಟು ಹಳೆಯ ಮಾತು. ರಾಣಿ ಕೆಟೆವಾನ್ ಅವರು ಜಾರ್ಜಿಯಾದ ರಾಜಪರಿವಾರದ ಪುತ್ರಿಯಾಗಿದ್ದರು. ಹತ್ತು ವರ್ಷಗಳ ಕಾರಾಗೃಹವಾಸದ ನಂತರ ಅವರು 1624 ರಲ್ಲಿ ಹುತಾತ್ಮರಾದರು. ಒಂದು ಪ್ರಾಚೀನ ಪೋರ್ಚುಗೀಸ್ ದಾಖಲೆಯ ಪ್ರಕಾರ Saint Queen Ketevan ಅವರ ಚಿತಾಭಸ್ಮವನ್ನು ಹಳೆಯ ಗೋವಾದ Saint Augustine Convent ನಲ್ಲಿ ಇರಿಸಲಾಗಿತ್ತು. ಆದರೆ, ಗೋವಾದಲ್ಲಿ ಸಮಾಧಿ ಮಾಡಲಾದ ಅವರ ಅವಶೇಷಗಳು 1930 ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಕಾಣೆಯಾದವು ಎಂದು ಬಹಳ ಕಾಲದಿಂದ ನಂಬಲಾಗಿತ್ತು.
ಭಾರತ ಸರ್ಕಾರ ಮತ್ತು ಜಾರ್ಜಿಯಾದ ಇತಿಹಾಸ ತಜ್ಞರು, ಸಂಶೋಧಕರು, ಪುರಾತತ್ವ ಶಾಸ್ತ್ರಜ್ಞರು ಮತ್ತು ಜಾರ್ಜಿಯಾದ ಚರ್ಚಿನ ದಶಕಗಳ ದಣಿವರಿಯದ ಪ್ರಯತ್ನಗಳ ನಂತರ 2005 ರಲ್ಲಿ ಆ ಪವಿತ್ರ ಅವಶೇಷಗಳನ್ನು ಕಂಡುಹಿಡಿಯುವಲ್ಲಿ ಸಫಲತೆ ದೊರೆಯಿತು. ಇದು ಜಾರ್ಜಿಯಾದ ಜನತೆಗೆ ಬಹಳ ಭಾವನಾತ್ಮಕ ವಿಷಯವಾಗಿದೆ. ಆದ್ದರಿಂದ ಅವರ ಐತಿಹಾಸಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಈ ಅವಶೇಷಗಳ ಒಂದು ಭಾಗವನ್ನು ಜಾರ್ಜಿಯಾದ ಜನತೆಗೆ ಉಡುಗೊರೆಯಾಗಿ ನೀಡುವ ನಿರ್ಣಯ ಕೈಗೊಂಡಿತು. ಭಾರತ ಮತ್ತು ಜಾರ್ಜಿಯಾದ ಇತಿಹಾಸದ ಈ ವಿಶಿಷ್ಟ ಭಾಗವನ್ನು ಕಾಪಾಡಿಕೊಂಡಿದ್ದಕ್ಕಾಗಿ ನಾನು ಇಂದು ಗೋವಾದ ಜನತೆಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಗೋವಾ ಅನೇಕ ಮಹಾನ್ ಆಧ್ಯಾತ್ಮಿಕ ಪರಂಪರೆಯುಳ್ಳ ಭೂಮಿಯಾಗಿದೆ. Saint Augustine Church, UNESCOದ ವಿಶ್ವ ಪಾರಂಪರಿಕ ತಾಣ – ಗೋವಾದ ಚರ್ಚ್ ಗಳು ಮತ್ತು ಕಾನ್ವೆಂಟ್ ಗಳ ಒಂದು ಭಾಗವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೆ, ನಾನು ಈಗ ನಿಮ್ಮನ್ನು ಜಾರ್ಜಿಯಾದಿಂದ ನೇರವಾಗಿ ಸಿಂಗಪುರಕ್ಕೆ ಕರೆದೊಯ್ಯುತ್ತೇನೆ. ಇಲ್ಲಿ ಈ ತಿಂಗಳ ಆರಂಭದಲ್ಲಿ ಮತ್ತೊಂದು ಗೌರವನೀಯ ಅವಕಾಶ ಎದುರಾಯಿತು. ಸಿಂಗಪುರದ ಪ್ರಧಾನಮಂತ್ರಿ ನನ್ನ ಮಿತ್ರ ಲೀ ಸೇನ್ ಲೂಂಗ್ (Lee Hsien Loong)ಅವರು ಇತ್ತೀಚೆಗೆ ನವೀಕರಿಸಲಾದ ಸಿಲಾಟ್ ರೋಡ್ ಗುರುದ್ವಾರವನ್ನು ಉದ್ಘಾಟಿಸಿದರು. ಅವರು ಸಾಂಪ್ರದಾಯಿಕ ಸಿಖ್ ಪೇಟಾ ಕೂಡಾ ಧರಿಸಿದ್ದರು. ಈ ಗುರುದ್ವಾರವನ್ನು ಸುಮಾರು ನೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಮತ್ತು ಇಲ್ಲಿ ಸೋದರ ಮಹಾರಾಜ್ ಸಿಂಗ್ ಅವರಿಗೆ ಸಮರ್ಪಿಸಲಾದ ಒಂದು ಸ್ಮಾರಕ ಕೂಡಾ ಇದೆ. ಸೋದರ ಮಹಾರಾಜಾ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದರು ಮತ್ತು ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಸಂದರ್ಭದಲ್ಲಿ ಇದು ಮತ್ತಷ್ಟು ಪ್ರೇರಣಾದಾಯಕವಾಗಿದೆ. ಇಂತಹ ವಿಚಾರಗಳು, ಇಂತಹ ಪ್ರಯತ್ನಗಳು ಎರಡು ದೇಶಗಳ ನಡುವೆ, ಮತ್ತು ಜನತೆ ನಡುವಿನ ಸಂಪರ್ಕಕ್ಕೆ ಮತ್ತಷ್ಟು ಬಲ ತುಂಬುತ್ತವೆ. ಸೌಹಾರ್ದಪೂರ್ಣ ವಾತಾವರಣದಲ್ಲಿ ಜೀವಿಸುವುದು ಮತ್ತು ಪರಸ್ಪರರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಎಷ್ಟೊಂದು ಮಹತ್ವದ ವಿಷಯವಾಗಿರುತ್ತದೆ ಎನ್ನುವುದು ಇದರಿಂದ ತಿಳಿದುಬರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನದ ಮಾತಿನಲ್ಲಿ' ನಲ್ಲಿ ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ನನ್ನ ಮನಸ್ಸಿಗೆ ಬಹಳ ನಿಕಟವಾಗಿರುವ ಮತ್ತೊಂದು ವಿಷಯವಿದೆ, ಅದೆಂದರೆ ನೀರಿನ ಸಂರಕ್ಷಣೆಯ ವಿಷಯ. ನಾನು ನನ್ನ ಬಾಲ್ಯವನ್ನು ಕಳೆದ ಸ್ಥಳದಲ್ಲಿ ನೀರಿನ ಕೊರತೆ ಯಾವಾಗಲೂ ಇದ್ದೇ ಇರುತ್ತಿತ್ತು. ನಾವು ಮಳೆಗಾಗಿ ಹಂಬಲಿಸುತ್ತಿದ್ದೆವು ಮತ್ತು ಆದ್ದರಿಂದ ಪ್ರತಿಯೊಂದು ಹನಿ ನೀರನ್ನೂ ಉಳಿಸುವುದು ನಮ್ಮ ಸಂಸ್ಕಾರದ ಒಂದು ಭಾಗವಾಗಿದೆ. ಈಗ "ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ನೀರಿನ ಸಂರಕ್ಷಣೆ" ಎಂಬ ಈ ಮಂತ್ರವು ಅಲ್ಲಿನ ಜನಜೀವನದ ಚಿತ್ರವನ್ನೇ ಬದಲಾಯಿಸಿ ಬಿಟ್ಟಿದೆ. ನೀರಿನ ಪ್ರತಿಯೊಂದು ಹನಿಯನ್ನೂ ಉಳಿಸುವುದು, ಮತ್ತು ಯಾವುದೇ ರೀತಿಯಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯುವುದು, ಇದು ನಮ್ಮ ಜೀವನ ಶೈಲಿಯ ಸಹಜ ಭಾಗವಾಗಬೇಕು. ನಮ್ಮ ಕುಟುಂಬಗಳಲ್ಲಿ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ಇಂತಹ ಸಂಪ್ರದಾಯ ಆಚರಣೆಯಾಗಬೇಕು.
ಸ್ನೇಹಿತರೇ, ಪ್ರಕೃತಿ ಮತ್ತು ಪರಿಸರದ ರಕ್ಷಣೆ ಭಾರತದ ಸಾಂಸ್ಕೃತಿಕ ಜೀವನದಲ್ಲಿ, ನಮ್ಮ ದೈನಂದಿನ ಜೀವನದಲ್ಲಿ, ಹಾಸುಹೊಕ್ಕಾಗಿದೆ. ಹಾಗೆಯೇ, ಮಳೆ ಮತ್ತು ಮುಂಗಾರು ಯಾವಾಗಲೂ ನಮ್ಮ ಚಿಂತನೆಗಳಲ್ಲಿ, ನಮ್ಮ ತತ್ವಶಾಸ್ತ್ರದಲ್ಲಿ ಮತ್ತು ನಮ್ಮ ನಾಗರಿಕತೆಯನ್ನು ರೂಪಿಸುತ್ತಾ ಬಂದಿದೆ. ಋತುಸಂಹಾರ ಮತ್ತು ಮೇಘದೂತದಲ್ಲಿ ಮಹಾಕವಿ ಕಾಳಿದಾಸ ಮಳೆಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ. ಸಾಹಿತ್ಯ ಪ್ರೇಮಿಗಳ ನಡುವೆ ಈ ಕವಿತೆಗಳು ಇಂದಿಗೂ ಬಹಳ ಜನಪ್ರಿಯವಾಗಿವೆ. ಋಗ್ವೇದದ ಪರ್ಜನ್ಯ ಸೂಕ್ತಂನಲ್ಲಿ ಮಳೆಯ ಸೌಂದರ್ಯದ ಬಹಳ ಸುಂದರವಾದ ವರ್ಣನೆಯಿದೆ. ಇದೇ ರೀತಿ, ಶ್ರೀಮದ್ಭಾಗವತದಲ್ಲಿ ಕೂಡಾ ಕಾವ್ಯಾತ್ಮಕವಾಗಿ ಭೂಮಿ, ಸೂರ್ಯ ಮತ್ತು ಮಳೆಯ ನಡುವಿನ ಸಂಬಂಧಗಳ ಕುರಿತು ವಿಸ್ತಾರವಾಗಿ ವಿವರಿಸಲಾಗಿದೆ.
ಅಷ್ಟೌ ಮಾಸಾನ್ ನಿಪೀತಂ ಯದ್ಧ್, ಭೂಮ್ಯಾಃ, ಚ, ಓದ್-ಮಯಮ್ ವಸು.
ಸ್ವರ್ಗೋಭಿಃ ಮೋಕ್ತುಮ್ ಆರೇಭೇ, ಪರ್ಜನ್ಯಃ ಕಾಲ ಆಗತೇ.
(अष्टौ मासान् निपीतं यद्, भूम्याः च, ओद-मयम् वसु |
स्वगोभिः मोक्तुम् आरेभे, पर्जन्यः काल आगते ||)
ಅಂದರೆ, ಸೂರ್ಯನು ಎಂಟು ತಿಂಗಳ ಕಾಲ ನೀರಿನ ರೂಪದಲ್ಲಿ ಭೂಮಿಯ ಸಂಪತ್ತನ್ನು ಸಂಗ್ರಹಿಸಿದ್ದನು, ಈಗ ಮುಂಗಾರು ಋತುವಿನಲ್ಲಿ, ಸೂರ್ಯ ಈ ಸಂಗ್ರಹಗೊಂಡ ಸಂಪತ್ತನ್ನು ಭೂಮಿಗೆ ಹಿಂದಿರುಗಿಸುತ್ತಿದ್ದಾನೆ. ವಾಸ್ತವದಲ್ಲಿ, ಮುಂಗಾರು ಮತ್ತು ಮಳೆಯ ಋತು ಕೇವಲ ಸುಂದರ ಮತ್ತು ಆಹ್ಲಾದಕರ ಮಾತ್ರವಲ್ಲ, ಇದು ಪೋಷಣೆ ನೀಡುವ, ಜೀವನ ನೀಡುವಂತಹದ್ದೂ ಕೂಡಾ ಆಗಿದೆ. ನಮಗೆ ದೊರೆಯುವ ಮಳೆಯ ನೀರನ್ನು ನಮ್ಮ ಭಾವೀ ಪೀಳಿಗೆಗಾಗಿ ಉಳಿಸಬೇಕು ಈ ಅಂಶವನ್ನು ನಾವು ಯಾವಾಗಲೂ ಮರೆಯಬಾರದು.
ಇಂದಿನ ಮಾತನ್ನು ಇಂತಹ ರೋಚಕ ವಿಷಯಗಳೊಂದಿಗೆ ಏಕೆ ಮುಗಿಸಬಾರದೆಂದು ನನಗೆ ಅನ್ನಿಸಿತು, ನಿಮ್ಮೆಲ್ಲರಿಗೂ ಮುಂಬರುವ ಹಬ್ಬಗಳಿಗಾಗಿ ಅನೇಕಾನೇಕ ಶುಭಾಶಯಗಳು. ಹಬ್ಬ ಮತ್ತು ಉತ್ಸವಾಚರಣೆಗಳ ಸಮಯದಲ್ಲಿ, ಕೊರೋನಾ ಇನ್ನೂ ನಮ್ಮ ಮಧ್ಯದಿಂದ ಹೋಗಿಲ್ಲ ಎಂಬುದನ್ನು ಖಂಡಿತಾ ನೆನಪಿಟ್ಟುಕೊಳ್ಳಿ. ಕೊರೋನಾ ಸಂಬಂಧಿತ ಶಿಷ್ಠಾಚಾರಗಳನ್ನು ನೀವು ಮರೆಯಬಾರದು. ನೀವೆಲ್ಲರೂ ಆರೋಗ್ಯವಾಗಿರಿ ಮತ್ತು ಸಂತೋಷವಾಗಿ ಇರಿ.
ಅನೇಕಾನೇಕ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಸಾಮಾನ್ಯವಾಗಿ ಮನದ ಮಾತಿನಲ್ಲಿ ನಿಮ್ಮ ಪ್ರಶ್ನೆಗಳ ಸುರಿಮಳೆಯೇ ಇರುತ್ತದೆ. ಈ ಬಾರಿ ಸ್ವಲ್ಪ ಭಿನ್ನವಾದದ್ದೇನಾದರೂ ಮಾಡೋಣ ಎಂದು ನಾನು ಯೋಚಿಸಿದೆ. ನಾನು ನಿಮಗೆ ಪ್ರಶ್ನೆ ಕೇಳುತ್ತೇನೆ. ಹಾಗಾದರೆ ಗಮನವಿಟ್ಟು ನನ್ನ ಪ್ರಶ್ನೆ ಕೇಳಿ.
....Olympic ನಲ್ಲಿ ವೈಯಕ್ತಿಕ ಚಿನ್ನದ ಪದಕ ಸಾಧಿಸಿದ ಪ್ರಥಮ ಭಾರತೀಯ ಯಾರು?
....Olympic ನ ಯಾವ ಕ್ರೀಡೆಯಲ್ಲಿ ಭಾರತ ಇಲ್ಲಿವರೆಗೆ ಅತಿ ಹೆಚ್ಚು ಪದಕಗಳನ್ನು ಗಳಿಸಿದೆ…
....Olympic ನಲ್ಲಿ ಯಾವ ಕ್ರೀಡಾಳು ಅತಿ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ
ಸ್ನೇಹಿತರೆ, ನೀವು ನನಗೆ ಉತ್ತರ ಕಳುಹಿಸಿ ಕಳುಹಿಸದೇ ಇರಿ ಆದರೆ ಮೈಗೌನಲ್ಲಿ ಒಲಿಂಪಿಕ್ಸ್ ಬಗ್ಗೆ ಇರುವ ರಸಪ್ರಶ್ನೆಯ ಪ್ರಶ್ನೆಗಳಿಗೆ ಉತ್ತರಿಸಿದರೆ ಬಹಳಷ್ಟು ಬಹುಮಾನಗಳನ್ನು ಗೆಲ್ಲುವಿರಿ. ಇಂತಹ ಬಹಳಷ್ಟು ಪ್ರಶ್ನೆಗಳ ಮೈ ಗೌ ನ ‘ರೋಡ್ ಟು ಟೊಕೊಯೋ ಕ್ವಿಜ್ ನಲ್ಲಿದೆ. ನೀವು ‘ರೋಡ್ ಟು ಟೊಕೊಯೋ ಕ್ವಿಜ್ ನಲ್ಲಿ ಭಾಗವಹಿಸಿ. ಈ ಹಿಂದೆ ಭಾರತದ ಪ್ರದರ್ಶನ ಹೇಗಿತ್ತು? ‘ಟೊಕೊಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ನಮ್ಮ ಸಿದ್ಧತೆಗಳೇನು- ಇದೆಲ್ಲವನ್ನು ನೀವು ತಿಳಿಯಿರಿ ಇತರರಿಗೂ ತಿಳಿಸಿ. ಖಂಡಿತ ಈ ರಸಪ್ರಶ್ನೆಯಲ್ಲಿ ಭಾಗವಹಿಸಿ ಎಂದು ನಿಮ್ಮೆಲ್ಲರಿಗೆ ಆಗ್ರಹಿಸುತ್ತೇನೆ.
ಸ್ನೇಹಿತರೆ, ಟೊಕಿಯೋ ಒಲಿಂಪಿಕ್ಸ್ ಬಗ್ಗೆ ಮಾತನಾಡುತ್ತಿರುವಾಗ ಮಿಲ್ಕಾ ಸಿಂಗ್ ರಂತಹ ಭೂತಪೂರ್ವ ಆಟಗಾರನನ್ನು ಯಾರು ಮರೆಯಬಹುದು? ಕೆಲ ದಿನಗಳ ಹಿಂದೆಯೇ ಕೊರೊನಾ ಅವರನ್ನು ನಮ್ಮಿಂದ ಅಗಲಿಸಿತು. ಅವರು ಆಸ್ಪತ್ರೆಯಲ್ಲಿದ್ದಾಗ ಅವರೊಂದಿಗೆ ಮಾತನಾಡುವ ಅವಕಾಶ ನನಗೆ ಲಭಿಸಿತ್ತು. ಮಾತನಾಡುತ್ತಾ ನಾನು ಅವರನ್ನು ಆಗ್ರಹಿಸಿದ್ದೆ. ನೀವು 1964 ನಲ್ಲಿ ಟೊಕಿಯೋ ಒಲಿಂಪಿಕ್ಸ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಿರಿ. ಆದ್ದರಿಂದ ಈ ಬಾರಿ ನಮ್ಮ ಆಟಗಾರರು ಒಲಿಂಪಿಕ್ಸ್ ಗಾಗಿ ಟೊಕಿಯೋ ತೆರಳುತ್ತಿರುವುದರಿಂದ ನೀವು ನಮ್ಮ ಅಥ್ಲೀಟ್ ಗಳ ಆತ್ಮಸ್ಥೈರ್ಯವನ್ನು ವೃದ್ಧಿಸಬೇಕೆಂದು, ನಿಮ್ಮ ಸಂದೇಶದೊಂದಿಗೆ ಪ್ರೆರೇಪಿಸಬೇಕಿದೆ ಎಂದು ಕೇಳಿಕೊಂಡಿದ್ದೆ. ಅವರಿಗೆ ಕ್ರೀಡೆ ಬಗ್ಗೆ ಅದೆಷ್ಟು ಸಮರ್ಪಣಾ ಭಾವ ಮತ್ತು ಒಲವಿತ್ತೆಂದರೆ ಅನಾರೋಗ್ಯದಿಂದ ಬಳಲುತ್ತಿದ್ದರೂ ತಕ್ಷಣ ಒಪ್ಪಿಗೆ ಸೂಚಿಸಿದರು. ಆದರೆ ವಿಧಿಯ ವಿಧಾನ ಬೆರೆಯೇ ಆಗಿತ್ತು. ನನಗೆ ಇಂದಿಗೂ ನೆನಪಿದೆ. 2014 ರಲ್ಲಿ ಅವರು ಸೂರತ್ ಗೆ ಬಂದಿದ್ದರು. ನಾವು ಒಂದು ಇರುಳು ಮ್ಯಾರಾಥಾನ್ ಉದಘಾಟನೆ ಮಾಡಿದ್ದೆವು. ಆಗ ಅವರೊಂದಿಗೆ ನಡೆದ ಕ್ರೀಡೆ ಬಗ್ಗೆ ಮತ್ತು ಮಾತುಕತೆಯೊಂದಿಗೆ ನನಗೂ ಬಹಳ ಪ್ರೇರಣೆ ದೊರೆತಿತ್ತು. ಮಿಲ್ಕಾ ಸಿಂಗ್ ಅವರ ಸಂಪೂರ್ಣ ಕುಟುಂಬ ಕ್ರೀಡೆಗೆ ಸಮರ್ಪಿತವಾಗಿತ್ತು, ಭಾರತದ ಗೌರವವನ್ನು ವೃದ್ಧಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ.
ಸ್ನೇಹಿತರೆ, ಪ್ರತಿಭೆ, ಸಮರ್ಪಣಾಭಾವ, ಛಲ ಮತ್ತಿ ಕ್ರೀಡಾ ಮನೋಭಾವ ಒಗ್ಗೂಡಿದಾಗ ಮಾತ್ರ ಒಬ್ಬ ಚಾಂಪಿಯನ್ ಆಗಲು ಸಾಧ್ಯ. ನಮ್ಮ ದೇಶದಲ್ಲಿ ಹೆಚ್ಚಿನ ಕ್ರೀಡಾಳುಗಳು ಸಣ್ಣ ಪುಟ್ಟ ಗ್ರಾಮಗಳು, ಹೋಬಳಿಗಳು ಮತ್ತು ಪುಟ್ಟ ತಾಲೂಕುಗಳಿಂದಲೇ ಹೊರಹೊಮ್ಮುತ್ತಾರೆ. ಟೊಕೊಯೋಗೆ ತೆರಳುತ್ತಿರುವ ನಮ್ಮ ಒಲಿಂಪಿಕ್ ತಂಡದಲ್ಲೂ ಇಂತಹ ಹಲವಾರು ಕ್ರೀಡಾಳುಗಳಿದ್ದಾರೆ. ಇವರ ಜೀವನ ಪ್ರೇರಣಾದಾಯಕವಾಗಿದೆ. ನಮ್ಮ ಪ್ರವೀಣ್ ಜಾಧವ್ ಅವರ ಬಗ್ಗೆ ನೀವು ಕೇಳಿದರೆ ನಿಮಗೂ ಅವರು ಎಂಥ ಕಠಿಣ ಸಂಘರ್ಷವನ್ನು ಎದುರಿಸುತ್ತಾ ಇಲ್ಲಿಗೆ ತಲುಪಿದ್ದಾರೆ ಎಂದು ಅನ್ನಿಸುತ್ತದೆ. ಪ್ರವೀಣ್ ಜಾಧವ್ ಅವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಒಂದು ಗ್ರಾಮದನಿವಾಸಿಯಾಗಿದ್ದಾರೆ. ಅವರು ಬಿಲ್ಲುಗಾರಿಕೆಯ ಅದ್ಭುತ ಕ್ರೀಡಾಳು. ಅವರ ತಂದೆತಾಯಿ ಕೂಲಿ ಕೆಲಸ ಮಾಡಿ ಕುಟುಂಬ ಪಾಲನೆ ಮಾಡುತ್ತಾರೆ. ಈಗ ಅವರ ಪುತ್ರ ಪ್ರಥಮ ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಟೊಕೊಯೋಗೆ ತೆರಳುತ್ತಿದ್ದಾರೆ. ಕೇವಲ ಅವರ ತಂದೆತಾಯಿಗೆ ಮಾತ್ರವಲ್ಲ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಂಥ ಇನ್ನೊಬ್ಬ ಕ್ರೀಡಾಪಟು ನಮ್ಮ ನೇಹಾ ಗೋಯಲ್ ಅವರು. ನೇಹಾ ಟೊಕೊಯೋಗೆ ತೆರಳುತ್ತಿರುವ ಮಹಿಳಾ ಹಾಕಿ ತಂಡದ ಸದಸ್ಯರಾಗಿದ್ದಾರೆ. ಅವರ ತಾಯಿ ಮತ್ತು ಸೋದರಿ ಸೈಕಲ್ ಕಾರ್ಖಾನೆಯಲ್ಲಿ ಕೆಲಸ ಮಾಡಿ ಕುಟುಂಬದ ಖರ್ಚು ನಿಭಾಯಿಸುತ್ತಾರೆ. ನೇಹಾ ಅವರಂತೆಯೇ ದೀಪಿಕಾ ಕುಮಾರಿ ಅವರ ಜೀವನ ಪಯಣವೂ ಏರಿಳಿತಗಳಿಂದ ತುಂಬಿದೆ. ದೀಪಿಕಾ ಅವರ ತಂದೆ ಅಟೋ ರಿಕ್ಷಾ ಓಡಿಸುತ್ತಾರೆ ಅವರ ತಾಯಿ ಸುಶ್ರೂಷಕಿಯಾಗಿದ್ದಾರೆ. ಈಗ ದೀಪಿಕಾ ಭಾರತದ ಪರವಾಗಿ ಟೊಕಿಟೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಏಕಮಾತ್ರ ಬಿಲ್ಲುಗಾರಿಕೆಯ ಸ್ಪರ್ಧಾಳು ಆಗಿದ್ದಾರೆ. ಒಂದೊಮ್ಮೆ ವಿಶ್ವದ ಮುಂಚೂಣಿಯ ಕ್ರೀಡಾಳು ಆಗಿದ್ದ ದೀಪಿಕಾ ಅವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು.
ಸ್ನೇಹಿತರೆ, ಜೀವನದಲ್ಲಿ ನಾವು ಯಾವ ಹಂತಕ್ಕೆ ತಲುಪಿದರೂ, ಎಷ್ಟೇ ಎತ್ತರಕ್ಕೇರಿದರೂ ತಾಯ್ನೆಲದೊಂದಿಗಿನ ಈ ಬಂಧ ನಮ್ಮ ಬೇರುಗಳೊಂದಿಗೆ ನಮ್ಮನ್ನು ಎಂದೆಂದಿಗೂ ಬಂಧಿಸಿಡುತ್ತದೆ. ಸಂಘರ್ಷದ ದಿನಗಳ ನಂತರ ದೊರೆಯುವ ಸಫಲತೆಯ ಆನಂದ ಬೆರೆಯೇ ರೀತಿಯದ್ದಾಗಿರುತ್ತದೆ. ಇಂದು ಟೊಕಿಯೋಗೆ ತೆರಳುತ್ತಿರುವ ನಮ್ಮ ಕ್ರೀಡಾಳುಗಳು ಬಾಲ್ಯದಲ್ಲಿ ಸಾಧನಗಳು ಇತರ ಅನಾನುಕೂಲತೆಗಳನ್ನು ಎದುರಿಸಿದ್ದಾರೆ ಆದರೂ ಅವರು ಅಚಲವಾಗಿದ್ದರು, ನಿರಂತರ ಶ್ರಮಿಸುತ್ತಿದ್ದರು. ಉತ್ತರ ಪ್ರದೇಶದ ಮುಜಫರ್ ನಗರದ ಪ್ರಿಯಾಂಕಾ ಗೋಸ್ವಾಮಿಯವರ ಜೀವನ ಕೂಡ ಬಹಳಷ್ಟು ಕಲಿಸುತ್ತದೆ. ಪ್ರೀಯಾಂಕಾ ಅವರ ತಂದೆ ಬಸ್ ಕಂಡಕ್ಟರ್ ಆಗಿದ್ದಾರೆ. ಪ್ರೀಯಾಂಕಾ ಅವರಿಗೆ ಪದಕಗಳಿಸುವ ಕ್ರೀಡಾಳುಗಳಿಗೆ ನೀಡುವ ಬ್ಯಾಗ್ ಬಗ್ಗೆ ತುಂಬಾ ಆಸಕ್ತಿಯಿತ್ತು. ಇದರ ಆಕರ್ಷಣೆಯಿಂದಲೇ ಅವರು ಮೊದಲ ಬಾರಿಗೆ Race-Walking ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈಗ ಅವರು ಈ ನಿಟ್ಟಿನಲ್ಲಿ ಬಹುದೊಡ್ಡ ಚಾಂಪಿಯನ್ ಆಗಿದ್ದಾರೆ.
Javelin Throw ದಲ್ಲಿ ಭಾಗವಹಿಸುವ ಶಿವಪಾಲ್ ಸಿಂಹ ವರು ಬನಾರಸ್ ನಿವಾಸಿಯಾಗಿದ್ದಾರೆ. ಶಿವಪಾಲ್ ಅವರ ಸಂಪೂರ್ಣ ಕುಟುಂಬ ಈ ಕ್ರೀಡೆಯಲ್ಲಿ ತೊಡಗಿದೆ. ಇವರ ತಂದೆ, ಚಿಕ್ಕಪ್ಪ ಮತ್ತು ಸೋದರ, ಎಲ್ಲರೂ ಭರ್ಚಿ ಎಸೆತದಲ್ಲಿ ಅಪ್ರತಿಮರಾಗಿದ್ದಾರೆ. ಕುಟುಂಬದ ಈ ಅಡಿಪಾಯ Tokyo Olympics ನಲ್ಲಿ ಉಪಯುಕ್ತವಾಗಲಿದೆ. Tokyo Olympics ಗೆ ಹೋಗುತ್ತಿರುವ ಚಿರಾಗ್ ಶೆಟ್ಟಿ ಮತ್ತು ಅವರ ಜೊತೆ ಆಟಗಾರ ಸಾತ್ವಿಕ್ ಸಾಯಿರಾಜ್ ಅವರ ಹುಮ್ಮಸ್ಸು ಪ್ರೇರಣಾದಾಯಕವಾಗಿದೆ. ಇತ್ತೀಚೆಗೆ ಚಿರಾಗ್ ಅವರ ತಾತ ಕೊರೊನಾದಿಂದ ಮೃತರಾದರು. ಸಾತ್ವಿಕ್ ಕೂಡಾ ಸ್ವತಃ ಕಳೆದ ವರ್ಷ ಕೊರೊನಾ ಪಾಸಿಟಿವ್ ಆಗಿದ್ದರು. ಆದರೆ ಈ ಸಂಕಷ್ಟದ ನಂತರವೂ ಈ ಇಬ್ಬರೂ Men’s Double Shuttle Competition ನಲ್ಲಿ ತಮ್ಮ ಸರ್ವಶ್ರೇಷ್ಠ ಾಟವನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ.
ಮತ್ತೊಬ್ಬ ಕ್ರೀಡಾಳುವನ್ನು ನಿಮಗೆ ಪರಿಚಿಸಬಯಸುತ್ತೇನೆ. ಅವರು ಹರಿಯಾಣದ ಭಿವಾನಿಯ ಮನೀಷ್ ಕೌಶಿಕ್ ಅವರು. ಮನೀಷ್ ಅವರು ಕೃಷಿ ಕುಟುಂಬದ ಹಿನ್ನೆಲೆಯುಳ್ಳವರು. ಬಾಲ್ಯದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಾ ಬಾಕ್ಸಿಂಗ್ ಬಗ್ಗೆ ಒಲವು ಮೂಡಿತು. ಇಂದು ಇದೇ ಆಸಕ್ತಿ ಅವರನ್ನು ಟೊಕಿಯೋಗೆ ಕರೆದೊಯ್ಯುತ್ತಿದೆ. ಇಂಥ ಮತ್ತೊಬ್ಬ ಕ್ರೀಡಾಪಟು ಇದ್ದಾರೆ ಅವರೇ ಸಿ ಎ ಭವಾನಿದೇವಿಯವರು. ಹೆಸರು ಭವಾನಿ ಅಂತೆಯೇ ಇವರು ಕತ್ತಿವರಸೆಯಲ್ಲಿ ಪರಿಣಿತರು. ಚೆನ್ನೈ ನಿವಾಸಿ ಭವಾನಿ ಒಲಿಂಪಿಕ್ ಗೆ ಅರ್ಹತೆಗಳಿಸಿರುವ ಭಾರತದ ಪ್ರಥಮ ಕತ್ತಿವರಸೆ ಪಟುವಾಗಿದ್ದಾರೆ. ಭವಾನಿಯವರ ತರಬೇತಿ ನಿರಂತವಾಗಿರಲೆಂದು ಅವರ ತಾಯಿ ತಮ್ಮ ಆಭರಣಗಳನ್ನು ಅಡವಿಟ್ಟಿದ್ದರು ಎಂದು ನಾನು ಓದಿದ್ದೆ.
ಸ್ನೇಹಿತರೆ, ಹೀಗೆ ಹೆಸರುಗಳ ಪಟ್ಟಿ ದೊಡ್ಡದಿದೆ ಆದರೆ ‘ಮನದ ಮಾತಿನಲ್ಲಿ’ ನಾನು ಕೆಲವು ಹೆಸರುಗಳನ್ನು ಮಾತ್ರ ಪ್ರಸ್ತಾಪಿಸಲಾಯಿತು. ಟೊಕಿಯೋಗೆ ತೆರಳುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವಿನ ಸಂಘರ್ಷ ವಿಭಿನ್ನವಾಗಿದೆ. ವರ್ಷಗಳ ಪರಿಶ್ರಮವಿದೆ. ಅವರು ಕೇವಲ ತಮಗಾಗಿ ಮಾತ್ರವಲ್ಲ ದೇಶಕ್ಕಾಗಿಯೂ ಭಾಗವಹಿಸುತ್ತಿದ್ದಾರೆ. ಭಾರತದ ಗೌರವವನ್ನು ಹೆಚ್ಚಿಸುವುದು, ಜನರ ಮನ ಗೆಲ್ಲಬೇಕಿರುವುದು ಈ ಕ್ರೀಡಾಳುಗಳ ಜವಾಬ್ದಾರಿಯಾಗಿದೆ. ಆದ್ದರಿಂದ ದೇಶಬಾಂಧವರೆ ತಿಳಿದೊ ತಿಳಿಯದೆಯೋ ಈ ಕ್ರೀಡಾಪಟುಗಳ ಮೇಲೆ ಒತ್ತಡ ಹೇರಬಾರದು ಎಂದು ನಿಮಗೆ ಸಲಹೆ ನೀಡಬಯಸುತ್ತೇನೆ. ಬದಲಾಗಿ ಸ್ವಚ್ಛ ಮನಸ್ಸಿನಿಂದ ಇವರಿಗೆ ಬೆಂಬಲಿಸಿ. ಪ್ರತಿಯೊಬ್ಬ ಕ್ರೀಡಾಳುವಿನ ಉತ್ಸಾಹ ಹೆಚ್ಚಿಸಿ.
ಸಾಮಾಜಿಕ ಜಾಲತಾಣದಲ್ಲಿ #Cheer4India ನೊಂದಿಗೆ ಈ ಕ್ರೀಡಾಳುಗಳಿಗೆ ಶುಭಕೋರಬಹುದು. ಬೇರೆ ಏನಾದರೂ ವಿಭಿನ್ನವಾಗಿ ಮಾಡಬಯಸಿದಲ್ಲಿ ಅದನ್ನೂ ಮಾಡಬಹುದು. ದೇಶ ಈ ಕ್ರೀಡಾಳುಗಳಿಗಾಗಿ ಏನಾದರೂ ಒಗ್ಗೂಡಿ ಮಾಡಬಲ್ಲದು ಎಂಬ ಯಾವುದೇ ಆಲೋಚನೆ ನಿಮಗೆ ಬಂದರೆ ನನಗೆ ಬರೆದು ಕಳಿಸಿ. ನಾವೆಲ್ಲ ಸೇರಿ ಟೊಕಿಯೋ ಪ್ರವಾಸ ಕೈಗೊಳ್ಳಲಿರುವ ನಮ್ಮ ಕ್ರೀಡಾಳುಗಳಿಗೆ ನಾವು ಬೆಂಬಲಿಸೋಣ Cheer4India!!!Cheer4India!!!Cheer4India!!!
ನನ್ನ ಪ್ರೀತಿಯ ದೇಶಬಾಂಧವರೇ, ಕೊರೋನಾ ವಿರುದ್ಧ ನಮ್ಮ ದೇಶವಾಸಿಗಳ ಹೋರಾಟ ಮುಂದುವರಿದಿದೆ, ಆದರೆ ಈ ಹೋರಾಟದಲ್ಲಿ ನಾವೆಲ್ಲರೂ ಒಂದುಗೂಡಿ ಅನೇಕ ಅಸಾಧಾರಣ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದೇವೆ. ಈಗ ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ದೇಶ ಒಂದು ಅಭೂತಪೂರ್ವ ಕೆಲಸ ಮಾಡಿದೆ. ಜೂನ್ 21 ರಂದು ಲಸಿಕೆ ನೀಡಿಕೆ ಅಭಿಯಾನದ ಮುಂದಿನ ಹಂತ ಆರಂಭವಾಯಿತು ಮತ್ತು ಅದೇ ದಿನದಂದು ದೇಶದ 86 ಲಕ್ಷಕ್ಕೂ ಅಧಿಕ ಜನರು ಉಚಿತವಾಗಿ ಲಸಿಕೆ ಪಡೆದುಕೊಂಡು ದಾಖಲೆ ಸೃಷ್ಟಿಸಿದರು ಮತ್ತು ಅದು ಕೂಡಾ ಒಂದೇ ದಿನದಲ್ಲಿ!ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತ ಸರ್ಕಾರದ ವತಿಯಿಂದ ಉಚಿತ ಲಸಿಕೆ ನೀಡಿಕೆ ಮತ್ತು ಅದು ಕೂಡಾ ಒಂದೇ ದಿನದಲ್ಲಿ! ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆದಿದ್ದು ಸ್ವಾಭಾವಿಕವಾಗಿತ್ತು.
ಸ್ನೇಹಿತರೇ, ಒಂದು ವರ್ಷಕ್ಕೆ ಮುನ್ನ ಲಸಿಕೆ ಯಾವಾಗ ಬರುತ್ತದೆ? ಎಂಬ ಪ್ರಶ್ನೆ ಎಲ್ಲರ ಮುಂದಿತ್ತು. ಇಂದು ನಾವು ಒಂದು ದಿನದಲ್ಲಿ ಲಕ್ಷಾಂತರ ಜನರಿಗೆ ‘ಭಾರತದಲ್ಲೇ ತಯಾರಿಸಿದ’ (‘Made in India’) ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದೇವೆ ಮತ್ತು ಇದೇ ಅಲ್ಲವೇ ನವ ಭಾರತದ ಸಾಮರ್ಥ್ಯ.
ಸ್ನೇಹಿತರೇ, ಲಸಿಕೆಯ ಸುರಕ್ಷತೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊರೆಯಬೇಕು, ಇದಕ್ಕಾಗಿ ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಲಸಿಕೆ ಪಡೆಯುವುದಕ್ಕೆ ಅನೇಕ ಸ್ಥಳಗಳಲ್ಲಿ ಇರುವ ಹಿಂಜರಿಕೆಯನ್ನು ಹೋಗಲಾಡಿಸಲು ಅನೇಕ ಸಂಘಟನೆಗಳು, ನಾಗರಿಕ ಸಮಾಜದ ಜನರು ಮುಂದೆ ಬಂದಿದ್ದಾರೆ ಮತ್ತು ಎಲ್ಲರೂ ಸೇರಿ ಬಹಳ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಬನ್ನಿ, ನಾವು ಕೂಡಾ, ಇಂದು ಒಂದು ಗ್ರಾಮಕ್ಕೆ ಹೋಗೋಣ, ಮತ್ತು ಅಲ್ಲಿನ ಜನರೊಂದಿಗೆ ಲಸಿಕೆ ಕುರಿತು ಮಾತನಾಡೋಣ. ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯ ಡುಲಾರಿಯಾ ಗ್ರಾಮಕ್ಕೆ ಹೋಗೋಣ
ಪ್ರಧಾನಮಂತ್ರಿ: ಹಲೋ
ರಾಜೇಶ್ : ನಮಸ್ಕಾರ!
ಪ್ರಧಾನ ಮಂತ್ರಿ : ನಮಸ್ತೆ |
ರಾಜೇಶ್ : ನನ್ನ ಹೆಸರು ರಾಜೇಶ್ ಹಿರಾವೇ. ಡುಲಾರಿಯಾ ಗ್ರಾಮಪಂಚಾಯಿತಿ, ಭೀಮಾಪುರ್ ಬ್ಲಾಕ್
ಪ್ರಧಾನಮಂತ್ರಿ : ರಾಜೇಶ್ ಅವರೇ, ಈಗ ನಿಮ್ಮ ಗ್ರಾಮದಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ನಾನು ಕರೆ ಮಾಡುತ್ತಿದ್ದೇನೆ
ರಾಜೇಶ್: ಸರ್, ಇಲ್ಲಿ ಕೊರೋನಾದ ಸ್ಥಿತಿಯಂತೂ ಹಾಗೇನೂ ಇಲ್ಲ ಸರ್
ಪ್ರಧಾನಮಂತ್ರಿ : ಈಗ ಜನರಿಗೆ ಅನಾರೋಗ್ಯವಿಲ್ಲವೇ?
ರಾಜೇಶ್ : ಸರ್
ಪ್ರಧಾನಮಂತ್ರಿ: ಗ್ರಾಮದಲ್ಲಿ ಜನಸಂಖ್ಯೆ ಎಷ್ಟಿದೆ? ಗ್ರಾಮದಲ್ಲಿ ಎಷ್ಟು ಜನರಿದ್ದಾರೆ?
ರಾಜೇಶ್ : ಗ್ರಾಮದಲ್ಲಿ 462 ಪುರುಷರು ಮತ್ತು 332 ಮಹಿಳೆಯರು ಇದ್ದಾರೆ ಸರ್.
ಪ್ರಧಾನಮಂತ್ರಿ:ಹೌದಾ! ರಾಜೇಶ್ ಅವರೇ, ನೀವು ಲಸಿಕೆ ಪಡೆದುಕೊಂಡಿರುವಿರಾ?
ರಾಜೇಶ್: ಇಲ್ಲ ಸರ್, ಇನ್ನೂ ತೆಗೆದುಕೊಂಡಿಲ್ಲ
ಪ್ರಧಾನಮಂತ್ರಿ: ಅರೆ! ಏಕೆ ತೆಗೆದುಕೊಂಡಿಲ್ಲ?
ರಾಜೇಶ್ : ಸರ್, ಇಲ್ಲಂತೂ ಕೆಲವರು, ಕೆಲವು ವಾಟ್ಸಾಪ್ ಗಳಲ್ಲಿ ಎಂತೆಂತಹ ಗೊಂದಲಗಳ ಸುದ್ದಿಯನ್ನು ಹಾಕಿಬಿಟ್ಟಿದ್ದಾರೆಂದರೆ ಅದರಿಂದ ಜನರು ಗೊಂದಲಕ್ಕೊಳಗಾಗಿದ್ದಾರೆ ಸರ್.
ಪ್ರಧಾನಮಂತ್ರಿ : ಹಾಗಿದ್ದರೆ ನಿಮ್ಮ ಮನಸ್ಸಿನಲ್ಲಿಯೋ ಭಯವಿದೆಯೇ?
ರಾಜೇಶ್ : ಹೌದು ಸರ್, ಸಂಪೂರ್ಣ ಗ್ರಾಮದಲ್ಲಿ ಇಂತಹ ಗೊಂದಲ ಹರಡಿಬಿಟ್ಟಿದ್ದಾರೆ ಸರ್.
ಪ್ರಧಾನಮಂತ್ರಿ : ಅರೆರೆ, ನೀವು ಏನು ಹೇಳುತ್ತಿದ್ದೀರಿ ?ನೋಡಿ ರಾಜೇಶ್ ಅವರೇ...
ರಾಜೇಶ್ : ಹೇಳಿ ಸರ್
ಪ್ರಧಾನಮಂತ್ರಿ : ನಿಮಗೆ ಮತ್ತು ಗ್ರಾಮದ ನನ್ನೆಲ್ಲಾ ಸೋದರ-ಸೋದರಿಯರಿಗೆ ನಾನು ಹೇಳುವುದೇನೆಂದರೆ, ಭಯವಿದ್ದರೆ ಅದನ್ನು ತೆಗೆದುಹಾಕಿಬಿಡಿ.
ರಾಜೇಶ್ : ಸರಿ ಸರ್
ಪ್ರಧಾನಮಂತ್ರಿ : ನಮ್ಮ ಸಂಪೂರ್ಣ ದೇಶದಲ್ಲಿ 31 ಕೋಟಿಗಿಂತಲೂ ಹೆಚ್ಚಿನ ಜನರು ಲಸಿಕೆಯ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.
ರಾಜೇಶ್ : ಸರ್
ಪ್ರಧಾನಮಂತ್ರಿ : ನಾನು ಸ್ವತಃ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದೇನೆಂದು ನಿಮಗೆ ತಿಳಿದಿದೆಯಲ್ಲವೇ.
ರಾಜೇಶ್ : ಹೌದು ಸರ್
ಪ್ರಧಾನಮಂತ್ರಿ : ಅರೆ ನನ್ನ ತಾಯಿ ಸುಮಾರು 100 ವರ್ಷದವರು, ಅವರು ಕೂಡಾ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದಾರೆ. ಕೆಲವೊಮ್ಮೆ ಕೆಲವರಿಗೆ ಇದರಿಂದ ಜ್ವರ ಇತ್ಯಾದಿ ಬರಬಹುದು, ಆದರೆ ಅದು ಸಾಧಾರಣವಾಗಿರುತ್ತದೆ, ಅದು ಕೆಲವೇ ಗಂಟೆಗಳ ಕಾಲ ಇರುತ್ತದಷ್ಟೇ. ನೋಡಿ ಲಸಿಕೆ ಪಡೆದುಕೊಳ್ಳದೇ ಇರುವುದು ಬಹಳ ಅಪಾಯಕಾರಿಯಾಗಿರುತ್ತದೆ.
ರಾಜೇಶ್ : ಸರ್
ಪ್ರಧಾನಮಂತ್ರಿ : ಇದರಿಂದಾಗಿ ನಿಮ್ಮನ್ನು ನೀವು ಅಪಾಯಕ್ಕೆ ಒಡ್ಡಿಕೊಳ್ಳುವುದು ಮಾತ್ರವಲ್ಲದೇ, ಕುಟುಂಬ ಮತ್ತು ಗ್ರಾಮವನ್ನು ಕೂಡಾ ಅಪಾಯದಲ್ಲಿ ಸಿಲುಕಿಸುತ್ತೀರಿ.
ರಾಜೇಶ್ : ಸರ್
ಪ್ರಧಾನಮಂತ್ರಿ : ಮತ್ತು ರಾಜೇಶ್ ಅವರೇ, ಆದ್ದರಿಂದ ಸಾದ್ಯವಾದಷ್ಟು ಶೀಘ್ರವಾಗಿ ಲಸಿಕೆ ಹಾಕಿಸಿಕೊಳ್ಳಿ ಮತ್ತು ಭಾರತ ಸರ್ಕಾರದ ವತಿಯಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಮತ್ತು 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಇದು ಉಚಿತ ಲಸಿಕೆಯಾಗಿದೆ ಎಂಬುದನ್ನು ಗ್ರಾಮದಲ್ಲಿ ಎಲ್ಲರಿಗೂ ತಿಳಿಸಿ ಹೇಳಿ.
ರಾಜೇಶ್ : ಸರಿ ಸರ್. ಸರಿ
ಪ್ರಧಾನಮಂತ್ರಿ : ಸರಿ ಹಾಗಾದರೆ, ಗ್ರಾಮದಲ್ಲಿ ಭಯದ ಈ ವಾತಾವರಣಕ್ಕೆ ಯಾವುದೇ ಕಾರಣವಿಲ್ಲ ಎಂಬುದನ್ನು ನೀವೇ ಗ್ರಾಮದ ಜನರಿಗೆ ತಿಳಿಸಿಹೇಳಿ.
ರಾಜೇಶ್ :, ಜನರು ಬಹಳಷ್ಟು ಭಯಭೀತರಾಗಿದ್ದಾರೆ ಎನ್ನುವುದಕ್ಕೆ ಕಾರಣ ಕೆಲವು ಸುಳ್ಳು ವದಂತಿಯನ್ನು ಹರಡಿ ಬಿಟ್ಟಿರುವುದೇ ಆಗಿದೆ ಸರ್. ಉದಾಹರಣೆಗೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆ, ಜ್ವರದಿಂದಾಗಿ ರೋಗ ಮತ್ತಷ್ಟು ಹರಡುತ್ತದೆ ಅಂದರೆ ಮನುಷ್ಯ ಸಾವನ್ನಪ್ಪುತ್ತಾನೆ ಎಂಬಂತಹ ವದಂತಿಗಳನ್ನು ಹರಡಿರುವುದು ಸರ್.
ಪ್ರಧಾನಮಂತ್ರಿ : ಓಹೋಹೋ... ನೋಡಿ, ಈಗಂತೂ ಎಷ್ಟೊಂದು ರೇಡಿಯೋ, ಎಷ್ಟೊಂದು ಟಿವಿ, ಎಷ್ಟೊಂದು ಸುದ್ದಿ ದೊರೆಯುತ್ತದೆ ಮತ್ತು ಆದ್ದರಿಂದಲೇ ಜನರಿಗೆ ಅರ್ಥವಾಗುವಂತೆ ತಿಳಿಸಿಹೇಳುವುದು ಬಹಳ ಸುಲಭವಾಗುತ್ತದೆ ಮತ್ತು ಭಾರತದ ಅನೇಕ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಅಂದರೆ ಶೇಕಡಾ ನೂರರಷ್ಟು ಜನರು ಲಸಿಕೆ ಪಡೆದುಕೊಂಡಿದ್ದಾರೆ ಎಂದು ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ. ಹಾಗೆಯೇ ನಾನು ನಿಮಗೊಂದು ಉದಾಹರಣೆ ನೀಡುತ್ತೇನೆ...
ರಾಜೇಶ್ : ಸರ್
ಪ್ರಧಾನಮಂತ್ರಿ : ಕಾಶ್ಮೀರದಲ್ಲಿ ಬಾಂದೀಪುರ ಎಂಬ ಜಿಲ್ಲೆಯಿದೆ, ಈ ಬಾಂದೀಪುರ ಜಿಲ್ಲೆಯಲ್ಲಿ ವ್ಯವನ್ (Weyan) ಗ್ರಾಮದ ಜನರೆಲ್ಲರೂ ಸೇರಿ ಶೇಕಡಾ 100 ರಷ್ಟು ಲಸಿಕೆ ಪಡೆಯುವ ಗುರಿ ಹೊಂದಿದರು ಮತ್ತು ಆ ಗುರಿಯನ್ನು ತಲುಪಿದರು. ಇಂದು ಕಾಶ್ಮೀರದ ಈ ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡಾಗಿದೆ. ನಾಗಾಲ್ಯಾಂಡಿನ ಮೂರು ಗ್ರಾಮಗಳಲ್ಲಿನ ಜನರು ಶೇಕಡಾ 100 ರಷ್ಟು ಲಸಿಕೆ ಪಡೆದುಕೊಂಡಿರುವ ಬಗ್ಗೆ ಕೂಡಾ ನನಗೆ ತಿಳಿದುಬಂದಿದೆ.
ರಾಜೇಶ್ : ಸರಿ ...ಸರ್...
ಪ್ರಧಾನಮಂತ್ರಿ : ರಾಜೇಶ್ ಅವರೇ, ನೀವು ಕೂಡಾ ನಿಮ್ಮ ಗ್ರಾಮದಲ್ಲಿ, ಅಕ್ಕ ಪಕ್ಕದ ಗ್ರಾಮಗಳಲ್ಲಿ ಈ ವಿಷಯವನ್ನು ತಲುಪಿಸಬೇಕು ಹಾಗೆಯೇ ನೀವು ಹೇಳಿದಂತೆ ಇದೊಂದು ಭ್ರಮೆ ಅಷ್ಟೇ.
ರಾಜೇಶ್ : ಸರಿ ಸರ್...
ಪ್ರಧಾನಮಂತ್ರಿ : ಹಾಗಿದ್ದಲ್ಲಿ ಭ್ರಮೆಯ ಉತ್ತರವೆಂದರೆ ನೀವು ಸ್ವತಃ ಲಸಿಕೆ ಪಡೆದುಕೊಂಡು ಎಲ್ಲರಿಗೂ ತಿಳಿಸಿ ಹೇಳಬೇಕು. ಹೀಗೆ ಮಾಡುತ್ತೀರಲ್ಲವೇ ನೀವು ?
ರಾಜೇಶ್ : ಮಾಡುತ್ತೇನೆ ಸರ್
ಪ್ರಧಾನಮಂತ್ರಿ : ಖಂಡಿತವಾಗಿಯೂ ಮಾಡುತ್ತೀರಲ್ಲವೇ ?
ರಾಜೇಶ್: ಹೌದು ಸರ್, ಹೌದು ಸರ್. ನಿಮ್ಮ ಮಾತುಗಳಿಂದ ಸ್ವತಃ ಲಸಿಕೆ ಪಡೆದುಕೊಳ್ಳಬೇಕೆಂದು ಮತ್ತು ಜನರನ್ನು ಈ ವಿಷಯವಾಗಿ ಮುಂದೆ ಬರುವಂತೆ ಮಾಡಬೇಕೆಂದು ಅನಿಸುತ್ತಿದೆ ಸರ್.
ಪ್ರಧಾನಮಂತ್ರಿ : ಸರಿ ಒಳ್ಳೆಯದು, ಗ್ರಾಮದಲ್ಲಿ ನಾನು ಮಾತನಾಡಬಹುದಾದಂತಹ ಇನ್ಯಾರಾದರೂ ಇದ್ದಾರೆಯೇ?
ರಾಜೇಶ್ : ಇದ್ದಾರೆ ಸರ್
ಪ್ರಧಾನಮಂತ್ರಿ : ಯಾರು ಮಾತನಾಡುತ್ತಾರೆ?
ಕಿಶೋರಿಲಾಲ್: ಹಲೋ ಸರ್, …. ನಮಸ್ಕಾರ
ಪ್ರಧಾನಮಂತ್ರಿ : ನಮಸ್ಕಾರ, ಯಾರು ಮಾತನಾಡುತ್ತಿರುವುದು?
ಕಿಶೋರಿಲಾಲ್: ಸರ್ ನನನ್ ಹೆಸರು ಕಿಶೋರಿಲಾಲ್ ದುರ್ವೆ.
ಪ್ರಧಾನಮಂತ್ರಿ : ಹಾಗಾದರೆ ಕಿಶೋರಿಲಾಲ್ ಅವರೇ, ಈಗಷ್ಟೇ ರಾಜೇಶ್ ಅವರೊಂದಿಗೆ ಮಾತುಕತೆ ನಡೆದಿತ್ತು.
ಕಿಶೋರಿಲಾಲ್: ಹೌದು ಸರ್
ಪ್ರಧಾನಮಂತ್ರಿ : ಲಸಿಕೆ ಬಗ್ಗೆ ಜನರು ಬಗೆಬಗೆಯಾಗಿ ಮಾತನಾಡುತ್ತಿದ್ದಾರೆ ಎಂದು ಅವರು ಬಹಳ ದುಖಿಃತರಾಗಿ ಹೇಳುತ್ತಿದ್ದರು,
ಕಿಶೋರಿಲಾಲ್: ಹೌದು
ಪ್ರಧಾನಮಂತ್ರಿ : ನೀವೂ ಈ ಬಗ್ಗೆ ಕೇಳಿದ್ದೀರಾ?
ಕಿಶೋರಿಲಾಲ್: ಹೌದು, ಕೇಳಿದ್ದೀನ ಸರ್…
ಪ್ರಧಾನಮಂತ್ರಿ : ಏನು ಕೇಳಿದ್ದೀರಿ
ಕಿಶೋರಿಲಾಲ್ : ಹತ್ತರದಲ್ಲೇ ಮಹಾರಾಷ್ಟ್ರ ಇದೆ. ಅಲ್ಲಿಂದ ಕೆಲವರು ಬಂಧು ಬಾಂಧವರು ಲಸಿಕೆ ಪಡೆಯುವುದರಿಂದ ಕೆಲ ಜನರು ಮರಣವನ್ನಪ್ಪುತ್ತಿದ್ದಾರೆ, ಕೆಲವರು ರೋಗಗ್ರಸ್ತರಾಗುತ್ತಿದ್ದಾರೆ ಎಂದು ಕೆಲ ಬಗೆಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಜನರ ಮನದಲ್ಲಿ ಭ್ರಮೆಯಿದೆ. ಆದ್ದರಿಂದ ಲಸಿಕೆ ತೆಗೆದುಕೊಳ್ಳುತ್ತಿಲ್ಲ.
ಪ್ರಧಾನಮಂತ್ರಿ : ಜನರು ಈಗ ಏನು ಮಾತನಾಡುತ್ತಿದ್ದಾರೆ? ಕೊರೊನಾ ಹೊರಟು ಹೋಯಿತು ಎಂದೆನ್ನುತ್ತಿದ್ದಾರೆಯೇ?
ಕಿಶೋರಿಲಾಲ್ : ಹೌದು..
ಪ್ರಧಾನಮಂತ್ರಿ : ಕೊರೊನಾದಿಂದ ಏನೂ ಆಗೋಲ್ಲ ಎನ್ನುತ್ತಿದ್ದಾರೆಯೇ?
ಕಿಶೋರಿಲಾಲ್ : ಇಲ್ಲ ಸರ್, ಕೊರೊನಾ ಹೊರಟು ಹೋಯಿತು ಎಂದು ಹೇಳುವುದಿಲ್ಲ. ಕೊರೊನಾ ಇದೆ ಎನ್ನುತ್ತಾರೆ ಆದರೆ ಲಸಿಕೆ ತೆಗೆದುಕೊಳ್ಳುವುದರಿಂದ ರೋಗ ಬರುತ್ತದೆ, ಎಲ್ಲರೂ ಸಾಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಪ್ರಧಾನಮಂತ್ರಿ : ಹೌದಾ, ಲಸಿಕೆಯಿಂದ ಮೃತರಾಗುತ್ತಿದ್ದಾರೆಯೇ?
ಕಿಶೋರಿಲಾಲ್ : ನಮ್ಮದು ಬುಡಕಟ್ಟು ಕ್ಷೇತ್ರವಾಗಿದೆ ಸರ್, ಅಲ್ಲಿ ಜನರು ಬಹು ಬೇಗ ಭೀತಿಗೊಳ್ಳುತ್ತಾರೆ. ಭ್ರಮೆಯಿಂದಾಗಿ ಜನರು ಲಸಿಕೆ ಪಡೆಯುತ್ತಿಲ್ಲ ಸರ್.
ಪ್ರಧಾನಮಂತ್ರಿ : ನೋಡಿ ಕಿಶೋರಿಲಾಲ್ ಅವರೇ,
ಕಿಶೋರಿಲಾಲ್ : ಹೇಳಿ ಸರ್….
ಪ್ರಧಾನಮಂತ್ರಿ : ಈ ವದಂತಿಗಳನ್ನು ಹಬ್ಬಿಸುವ ಜನರು ಆ ಕೆಲಸವನ್ನು ಮಾಡುತ್ತಲೇ ಇರುತ್ತಾರೆ
ಕಿಶೋರಿಲಾಲ್ : ಹೌದು ಸರ್
ಪ್ರಧಾನಮಂತ್ರಿ : ನಾವು ಜೀವನ ಉಳಿಸಬೇಕಿದೆ, ನಾವು ಗ್ರಾಮಸ್ಥರನ್ನು ಉಳಿಸಿಕೊಳ್ಳಬೇಕಿದೆ. ದೇಶವಾಸಿಗಳನ್ನು ಕಾಪಾಡಬೇಕಿದೆ. ಕೊರೊನಾ ಹೊರಟುಹೋಯ್ತು ಎಂದು ಯಾರೇ ಹೇಳಿದರೂ ಇದೊಂದು ಭ್ರಮೆ. ಭ್ರಮೆಯಲ್ಲಿರಬೇಡಿ.
ಕಿಶೋರಿಲಾಲ್ : ಹೌದು ಸರ್
ಪ್ರಧಾನಮಂತ್ರಿ : ಇದು ಬಹುರೂಪಿ ರೋಗವಾಗಿದೆ
ಕಿಶೋರಿಲಾಲ್ : ಹೌದು ಸರ್
ಪ್ರಧಾನಮಂತ್ರಿ : ಇದು ರೂಪವನ್ನು ಬದಲಿಸುತ್ತದೆ. ಹೊಸ ಹೊಸ ರೂಪದಲ್ಲಿ ಬಂದೆರಗುತ್ತದೆ.
ಕಿಶೋರಿಲಾಲ್ : ಹೌದು ಸರ್
ಪ್ರಧಾನಮಂತ್ರಿ : ಅದರಿಂದ ಪಾರಾಗಲು ನಮ್ಮ ಬಳಿ 2 ದಾರಿಗಳಿವೆ. ಒಂದು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವುದು. ಮಾಸ್ಕ ಧರಿಸುವುದು, ಸಾಬೂನಿನಿಂದ ಪದೇ ಪದೇ ಕೈತೊಳೆಯುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು. ಜೊತೆಗೆ ಲಸಿಕೆ ಹಾಕಿಸಿಕೊಳ್ಳುವುದು. ಇದು ಕೂಡಾ ತುಂಬಾ ಒಳ್ಳೆಯ ಸುರಕ್ಷಾ ಕವಚವಾಗಿದೆ. ಇದರ ಬಗ್ಗೆ ಚಿಂತಿಸಿ.
ಕಿಶೋರಿಲಾಲ್ : ಆಯ್ತು ಸರ್
ಪ್ರಧಾನಮಂತ್ರಿ : ಕಿಶೋರಿಲಾಲ್ ಅವರೇ ಒಂದು ವಿಷಯ ಹೇಳಿ
ಕಿಶೋರಿಲಾಲ್ : ಆಯ್ತು ಸರ್
ಪ್ರಧಾನಮಂತ್ರಿ : ಜನರು ಪರಸ್ಪರ ಮಾತನಾಡುವಾಗ ನೀವು ಅವರಿಗೆ ಹೇಗೆ ತಿಳಿ ಹೇಳುತ್ತೀರಿ? ಜನರಿಗೆ ಬುದ್ಧಿವಾದ ಹೇಳುತ್ತೀರಾ ಇಲ್ಲ ನೀವೂ ಭ್ರಮೆಗೊಳಗಾಗುತ್ತೀರಾ?
ಕಿಶೋರಿಲಾಲ್: ಬುದ್ಧಿವಾದ ಹೇಳುವಿದೆಲ್ಲಿಂದ ಸರ್, ಬಹಳ ಜನ ಮಾತನಾಡುವುದರಿಂದ ನಾನೂ ಭಯಭೀತನಾಗುತ್ತೇನೆ ಅಲ್ಲವೇ ಸರ್…
ಪ್ರಧಾನಮಂತ್ರಿ : ನೋಡಿ ಕಿಶೋರಿಲಾಲ್ ಅವರೇ ನಿಮ್ಮೊಂದಿಗೆ ಇಂದು ನಾನು ಮಾತನಾಡಿದ್ದೇನೆ, ನೀವು ನನ್ನ ಜೊತೆಗಾರರಾಗಿದ್ದೀರಿ..
ಕಿಶೋರಿಲಾಲ್: ಹೌದು ಸರ್
ಪ್ರಧಾನಮಂತ್ರಿ : ನೀವು ಹೆದರಬೇಡಿ, ಜನರ ಭಯವನ್ನೂ ನಿವಾರಿಸಿ, ನಿವಾರಿಸುವಿರಲ್ಲವೇ?
ಕಿಶೋರಿಲಾಲ್: ಹೌದು ಸರ್, ಖಂಡಿತ ಹೋಗಲಾಡಿಸುವೆ. ಜನರ ಭಯವನ್ನು ಹೋಗಲಾಡಿಸುವೆ. ನಾನು ಕೂಡಾ ಲಸಿಕೆ ಪಡೆಯುವೆ.
ಪ್ರಧಾನಮಂತ್ರಿ : ನೋಡಿ ವದಂತಿಗಳಿಗೆ ಖಂಡಿತ ಕಿವಿಗೊಡಬೇಡಿ…
ಕಿಶೋರಿಲಾಲ್: ಆಯ್ತು ಸರ್
ಪ್ರಧಾನಮಂತ್ರಿ : ನಮ್ಮ ವಿಜ್ಞಾನಿಗಳು ಬಹಳ ಶ್ರಮವಹಿಸಿ ೀ ಲಸಿಕೆ ಸಿದ್ಧಪಡಿಸಿದ್ದಾರೆ ಎಂಬುದು ನಿಮಗೆ ತಿಳಿದಿದೆ.
ಕಿಶೋರಿಲಾಲ್: ಹೌದು ಸರ್
ಪ್ರಧಾನಮಂತ್ರಿ : ದೊಡ್ಡ ದೊಡ್ಡ ವಿಜ್ಞಾನಿಗಳು ವರ್ಷವಿಡೀ, ಹಗಲಿರುಳು ಕೆಲಸ ಮಾಡಿದ್ದಾರೆ ಆದ್ದರಿಂದ ನಾವು ಅವರ ಮೇಲೆ ಭರವಸೆ ಇಡಬೇಕು ಮತ್ತು “ನೋಡಿ ಹೀಗಾಗುವುದಿಲ್ಲ. ಎಷ್ಟೊಂದು ಜನರು ಲಸಿಕೆ ಪಡೆದಿದ್ದಾರೆ ಏನೂ ಆಗುವುದಿಲ್ಲ” ಎಂದು ಸುಳ್ಳು ಸುದ್ದಿಗಳನ್ನು ಹರಡುವ ಜನರಿಗೆ ಪದೇ ಪದೇ ಬುದ್ಧಿ ಹೇಳಬೇಕು.
ಕಿಶೋರಿಲಾಲ್: ಆಯ್ತು ಸರ್
ಪ್ರಧಾನಮಂತ್ರಿ : ವದಂತಿಗಳಿಂದ ಜಾಗೃತರಾಗಿರಿ, ಗ್ರಾಮವನ್ನೂ ಸುರಕ್ಷಿತವಾಗಿಡಿ.
ಕಿಶೋರಿಲಾಲ್: ಆಯ್ತು ಸರ್
ಪ್ರಧಾನಮಂತ್ರಿ : ರಾಜೇಶ್ ಅವರೇ, ಕಿಶೋರಿಲಾಲ್ ಅವರೇ ನಿಮ್ಮಂತಹ ಸ್ನೇಹಿತರಿಗೆ ಹೇಳಬಯಸುವುದೇನೆಂದರೆ ನೀವು ನಿಮ್ಮ ಗ್ರಾಮದಲ್ಲಿ ಮಾತ್ರವಲ್ಲದೇ ಬೇರೆ ಗ್ರಾಮಗಳಲ್ಲೂ ವದಂತಿ ಹರಡುವುದನ್ನು ತಪ್ಪಿಸಿ, ಮತ್ತು ಅವರೆಲ್ಲರಿಗೂ ನನ್ನೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿ.
ಕಿಶೋರಿಲಾಲ್: ಆಯ್ತು ಸರ್
ಪ್ರಧಾನಮಂತ್ರಿ : ನನ್ನ ಹೆಸರು ಹೇಳಿ…
ಕಿಶೋರಿಲಾಲ್: ಹೇಳುತ್ತೇನೆ ಸರ್, ಜನರಿಗೂ ತಿಳಿಸುತ್ತೇನೆ.. ಸ್ವತಃ ಲಸಿಕೆ ಹಾಕಿಸಿಕೊಳ್ಳುವೆ.
ಪ್ರಧಾನಮಂತ್ರಿ: ನೋಡಿ, ನಿಮ್ಮ ಸಂಪೂರ್ಣ ಗ್ರಾಮಕ್ಕೆ ನನ್ನ ಪರವಾಗಿ ಶುಭಹಾರೈಕೆಗಳನ್ನು ತಿಳಿಸಿ
ಕಿಶೋರಿಲಾಲ್: ಆಯ್ತು ಸರ್…
ಪ್ರಧಾನಮಂತ್ರಿ: ಎಲ್ಲರಿಗೂ ತಿಳಿಸಿ ತಮ್ಮ ಸರದಿ ಬಂದಾಗ …
ಕಿಶೋರಿಲಾಲ್ : ಆಯ್ತು ಸರ್
ಪ್ರಧಾನಮಂತ್ರಿ : ಖಂಡಿತ ಲಸಿಕೆ ಹಾಕಿಸಿಕೊಳ್ಳಿ
ಕಿಶೋರಿಲಾಲ್: ಆಯ್ತು ಸರ್
ಪ್ರಧಾನಮಂತ್ರಿ: ಗ್ರಾಮದ ಮಹಿಳೆಯರಿಗೆ, ನಮ್ಮ ತಾಯಂದಿರಿಗೆ, ಸೋದರಿಯರಿಗೆ .
ಕಿಶೋರಿಲಾಲ್: ಹೇಳಿ ಸರ್
ಪ್ರಧಾನಮಂತ್ರಿ: ಈ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಿ ಮತ್ತು ಸಕ್ರೀಯವಾಗಿ ಅವರನ್ನು ನಿಮ್ಮೊಂದಿಗೆ ಕೆಲಸದಲ್ಲಿ ನಿರತವಾಗಿಸಿ
ಕಿಶೋರಿಲಾಲ್: ಆಯ್ತು ಸರ್..
ಪ್ರಧಾನಮಂತ್ರಿ : ಕೆಲವೊಮ್ಮೆ ತಾಯಂದಿರು, ಸೋದರಿಯರು ಹೇಳಿದಾಗ ಜನರು ಮಾತು ಕೇಳುತ್ತಾರೆ.
ಕಿಶೋರಿಲಾಲ್ : ಆಯ್ತು ಸರ್
ಪ್ರಧಾನಮಂತ್ರಿ: ನಿಮ್ಮ ಗ್ರಾಮದಲ್ಲಿ ಲಸಿಕಾ ಅಭಿಯಾನ ಫೂರ್ಣಗೊಂಡ ನಂತರ ನನಗೆ ತಿಳಿಸುತ್ತೀರಾ?
ಕಿಶೋರಿಲಾಲ್: ತಿಳಿಸುತ್ತೇನೆ ಸರ್
ಪ್ರಧಾನಮಂತ್ರಿ : ಖಂಡಿತಾ ತಿಳಿಸುತ್ತೀರಾ?
ಕಿಶೋರಿಲಾಲ್: ಖಂಡಿತಾ ತಿಳಿಸುತ್ತೇನೆ ಸರ್
ಪ್ರಧಾನಮಂತ್ರಿ : ನಿಮ್ಮ ಪತ್ರಕ್ಕಾಗಿ ನಾನು ಕಾಯುತ್ತಿರುತ್ತೇನೆ
ಕಿಶೋರಿಲಾಲ್: ಆಯ್ತು ಸರ್
ಪ್ರಧಾನಮಂತ್ರಿ: ಸರಿ ರಾಜೇಶ್ ಅವರೇ.. ಕಿಶೋರಿಲಾಲ್ ಅವರೇ ನಿಮ್ಮೊಂದಿಗೆ ಮಾತನಾಡುವ ಅವಕಾಶ ದೊರೆಯಿತು. ಅನಂತ ಧನ್ಯವಾದಗಳು ..
ಕಿಶೋರಿಲಾಲ್ : ಧನ್ಯವಾದಗಳು ಸರ್ ನೀವು ನಮ್ಮೊಂದಿಗೆ ಮಾತನಾಡಿದಿರಿ. ನಿಮಗೂ ಅನಂತ ಧನ್ಯವಾದಗಳು …
ಸ್ನೇಹಿತರೆ, ಒಂದಲ್ಲಾ ಒಂದು ದಿನ ಭಾರತದ ಗ್ರಾಮಜನತೆ, ನಮ್ಮ ಬುಡಕಟ್ಟು ಸೋದರ ಸೋದರಿಯರು ಕೊರೊನಾ ಕಾಘಟ್ಟದಲ್ಲಿ ಹೇಗೆ ತಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸಿದರು ಎಂಬುದು ವಿಶ್ವಕ್ಕೆ case study ವಿಷಯವೂ ಆಗಬಹುದು. ಗ್ರಾಮದ ಜನತೆ ಕ್ವಾರಂಟೈನ್ ಕೇಂದ್ರಗಳನ್ನು ನಿರ್ಮಿಸಿದರು. ಸ್ಥಳೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕೊವಿಡ್ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದರು. ಗ್ರಾಮದ ಜನತೆ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಂಡರು, ಕೃಷಿ ಕೆಲಸ ನಿಲ್ಲದಂತೆ ನೋಡಿಕೊಂಡರು. ಹತ್ತರದ ನಗರಗಳಿಗೆ ಹಶಲು, ತರಕಾರಿ ನಿತ್ಯ ತಲುಪಿಸುತ್ತಿದ್ದರು. ಇದರತ್ತ ಕೂಡ ಗ್ರಾಮಗಳು ಗಮನಹರಿಸಿದವು. ಅಂದರೆ ತಮ್ಮನ್ನು ತಾವು ನಿಭಾಯಿಸಿದರು ಜೊತೆಗೆ ಇತರರ ಅವಶ್ಯಕತೆಗಳನ್ನೂ ಪೂರೈಸಿದರು. ಹೀಗೆ ಲಸಿಕಾ ಅಭಿಯಾನದಲ್ಲೂ ನಾವು ಪಾಲ್ಗೊಳ್ಳಬೇಕು. ನಾವು ಜಾಗರೂಕರಾಗಿರಬೇಕು ಮತ್ತು ಜಾಗೃತಿ ಮೂಡಿಸಲೂಬೇಕು. ಗ್ರಾಮಗಳಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ದೊರೆಯಲಿ ಎಂಬುದು ಪ್ರತಿ ಗ್ರಾಮದ ಗುರಿಯಾಗಬೇಕು. ನೆನಪಿಡಿ, ನಾನು ನಿಮಗೆ ವಿಶೇಷವಾಗಿ ಹೆಳಬಯಸುತ್ತೇನೆ- ನೀವು ನಿಮಗೇ ಒಂದು ಪ್ರಶ್ನೆ ಹಾಕಿಕೊಳ್ಳಿ - ಎಲ್ಲರೂ ಸಫಲತೆ ಹೊಂದಬಯಸುತ್ತಾರೆ ಆದರೆ ನಿರ್ಣಾಯಕ ಸಫಲತೆಯ ಸೂತ್ರ ಏನು? ನಿರ್ಣಾಯಕ ಸಫಲತೆಯ ಸೂತ್ರವೇನೆಂದರೆ ನಿರಂತರತೆ. ಆದ್ದರಿಂದ ನಾವು ವಿರಮಿಸಬಾರದು, ಯಾವುದೇ ಭ್ರಮೆಗೊಳಗಾಗಬಾರದು. ಸತತ ಪ್ರಯತ್ನ ಮಾಡುತ್ತಲೇ ಇರಬೇಕು. ಕೊರೊನಾ ವಿರುದ್ಧ ಜಯಗಳಿಸಬೇಕು.
ನನ್ನ ಪ್ರಿಯ ದೇಶಬಾಂಧವರೆ, ನಮ್ಮ ದೇಶದಲ್ಲಿ ಈಗ ಮುಂಗಾರು ಆರಂಭವಾಗಿದೆ. ಮೋಡಗಳು ಮಳೆಸುರಿಸಿದಾಗ ಕೇವಲ ನಮಗಾಗಿ ಮಾತ್ರ ಸುರಿಸುವುದಿಲ್ಲ. ವು ಮುಂಬರುವ ಪೀಳಿಗೆಗಳಿಗೂ ಸುರಿಸುತ್ತವೆ. ಮಳೆಯ ನೀರು ಭೂಮಿಯಲ್ಲಿ ಹೋಗಿ ಸಂಗ್ರಹಗೊಳ್ಳುತ್ತದೆ. ಭೂಮಿಯ ಅಂತರ್ಜಲ ಮಟ್ಟವನ್ನು ಸುಧಾರಿಸುತ್ತದೆ. ಆದ್ದರಿಂದ ಜಲ ಸಂರಕ್ಷಣೆಯನ್ನು ನಾನು ದೇಶ ಸೇವೆಯ ಒಂದು ರೂಪವೆಂದು ಭಾವಿಸುತ್ತೇನೆ. ನಮ್ಮಲ್ಲಿ ಅದೆಷ್ಟೋ ಜನ ಈ ಪುಣ್ಯದ ಕೆಲಸವನ್ನು ತಮ್ಮ ಜವಾಬ್ದಾರಿಯೆಂದು ಭಾವಿಸಿ ನಿಭಾಯಿಸುತ್ತಿರುವುದನ್ನ್ನು ನೀವೂ ನೋಡಿರಬಹುದು. ಹೀಗೆ ಒಬ್ಬ ವ್ಯಕ್ತಿಯಿದ್ದಾರೆ – ಅವರೇ ಉತ್ತರಾಖಂಡದ ಪೌಡಿ ಗಡ್ವಾಲದ ಸಚ್ಚಿದಾನಂದ ಭಾರತಿಯವರು. ಭಾರತಿಯವರು ಓರ್ವ ಶಿಕ್ಷಕರಾಗಿದ್ದಾರೆ ಅವರು ತಮ್ಮ ಕೆಲಸಗಳಿಂದ ಜನರಿಗೆ ಬಹಳ ಉತ್ತಮ ಶಿಕ್ಷಣ ನೀಡಿದ್ದಾರೆ. ಇಂದು ಅವರ ಪರಿಶ್ರಮದಿಂದ ಪೌಡಿ ಗಡ್ವಾಲದ ಉಫ್ರೆಂಖಾಲ್ ಕ್ಷೇತ್ರದಲ್ಲಿ ನೀರಿನ ಸಂಕಷ್ಟಕ್ಕೆ ಪರಿಹಾರ ದೊರೆತಿದೆ. ಜನರು ನೀರಿಗಾಗಿ ಪರಿತಪಿಸುತ್ತಿದ್ದ ಸ್ಥಳದಲ್ಲಿ ಇಂದು ವರ್ಷಪೂರ್ತಿ ನೀರಿನ ಲಭ್ಯತೆ ದೊರೆತಿದೆ.
ಸ್ನೇಹಿತರೆ, ಬೆಟ್ಟ ಪ್ರದೇಶಗಳಲ್ಲಿ ಜಲ ಸಂರಕ್ಷಣೆಯ ಪಾರಂಪರಿಕ ಪದ್ಧತಿಯಿದೆ. ಅದನ್ನು ಚಾಲ್ ಖಾಲ್ ಎಂದು ಕೂಡಾ ಕರೆಯುತ್ತಾರೆ. ಅಂದರೆ ನೀರಿನ ಶೇಖರಣೆಗೆ ದೊಡ್ಡ ಗುಂಡಿಯನ್ನು ತೋಡುವುದು. ಈ ಪರಂಪರೆಯಲ್ಲಿ ಭಾರತೀಯವರು ಕೆಲವು ಹೊಸ ರೀತಿನೀತಿಗಳನ್ನು ಸಂಯೋಜಿಸಿದರು. ಅವರು ನಿರಂತರವಾಗಿ ಕೆಲವು ಚಿಕ್ಕ ದೊಡ್ಡ ಹಳ್ಳ ಕೊಳ್ಳಗಳನ್ನು ನಿರ್ಮಿಸಿದರು. ಇದರಿಂದ ಕೇವಲ ಉಫ್ರೆಂಖಾಲ್ ಬೆಟ್ಟ ಪ್ರದೇಶ ಮಾತ್ರ ಹಸಿರಿನಿಂದ ಕಂಗೊಳಿಸುವುದಷ್ಟೇ ಅಲ್ಲ ಅಲ್ಲಿಯ ಜನರ ಕುಡಿಯುಬವ ನೀರಿನ ಸಮಸ್ಯೆ ಕೂಡಾ ಪರಿಹಾರವಾಯ್ತು. ಭಾರತಿಯವರು ಇಂಥ 30 ಸಾವಿರಕ್ಕೂ ಹೆಚ್ಚು ನೀರಿನ ಶೇಖರಣಾ ತಾಣಗಳನ್ನು ನಿರ್ಮಿಸಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯೆನ್ನಿಸಬಹುದು. ಅವರ ಈ ಭಗೀರಥ ಪ್ರಯತ್ನ ಇಂದಿಗೂ ಜಾರಿಯಲ್ಲಿದೆ. ಬಹಳಷ್ಟು ಜನರಿಗೆ ಪ್ರೇರಣಾದಾಯಕವಾಗಿದೆ.
ಸ್ನೇಹಿತರೇ, ಇದೇ ರೀತಿ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಅಂಧಾವಾ ಗ್ರಾಮದ ಜನರು ಕೂಡಾ ವಿಭಿನ್ನ ರೀತಿಯ ಪ್ರಯತ್ನ ಮಾಡಿದ್ದಾರೆ. ಅವರು ತಮ್ಮ ಅಭಿಯಾನಕ್ಕೆ ಬಹಳ ಆಸಕ್ತಿದಾಯಕ ಹೆಸರು ನೀಡಿದ್ದಾರೆ – ಹೊಲದ ನೀರು ಹೊಲದಲ್ಲಿ, ಗ್ರಾಮದ ನೀರು ಗ್ರಾಮದಲ್ಲಿ. ಈ ಅಭಿಯಾನದ ಮೂಲಕ ನೂರಾರು ದೊಡ್ಡ ಹೊಲಗಳಲ್ಲಿ ಎತ್ತರೆತ್ತರದ ಬದುಗಳನ್ನು ಮಾಡಲಾಗಿದೆ. ಇದರಿಂದಾಗಿ ಮಳೆಯ ನೀರು ಹೊಲದಲ್ಲಿ ಸಂಗ್ರಹವಾಗಲು ತೊಡಗಿತು ಮತ್ತು ಭೂಮಿಯೊಳಗೆ ಹೋಗತೊಡಗಿತು. ಈಗ ಎಲ್ಲರೂ ಹೊಲದ ಬದುಗಳ ಮೇಲೆ ಗಿಡಹನ್ನು ನೆಡಲು ಯೋಜಿಸುತ್ತಿದ್ದಾರೆ. ಅಂದರೆ ಈಗ ರೈತನಿಗೆ ನೀರು, ಮರ ಮತ್ತು ಹಣ ಮೂರೂ ದೊರೆಯುತ್ತದೆ. ಅವರ ಉತ್ತಮ ಕೆಲಸಗಳಿಂದ, ಅವರ ಗ್ರಾಮದ ಹೆಸರು ದೂರದೂರದವರೆಗೂ ಗುರುತಿಸಲ್ಪಟ್ಟಿದೆ.
ಸ್ನೇಹಿತರೇ, ಇವೆಲ್ಲವುಗಳಿಂದ ಪ್ರೇರಿತರಾಗುತ್ತಾ, ನಾವು ನಮ್ಮ ಸುತ್ತ ಮುತ್ತ ನೀರನ್ನು ಯಾವರೀತಿಯಲ್ಲಿ ಉಳಿಸಲು ಸಾಧ್ಯವೋ ಆ ರೀತಿಯಲ್ಲಿ ಖಂಡಿತಾ ಉಳಿಸಬೇಕು. ಮುಂಗಾರಿನ ಈ ಮಹತ್ವದ ಸಮಯವನ್ನು ನಾವು ವ್ಯರ್ಥ ಮಾಡಬಾರದು.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪುರಾಣಗಳಲ್ಲಿ ಹೀಗೆ ಹೇಳಲಾಗಿದೆ.
“नास्ति मूलम् अनौषधम्” ||
ಅಂದರೆ , ಯಾವುದಾದರೊಂದು ಔಷಧೀಯ ಗುಣ ಹೊಂದಿರದ ಯಾವುದೇ ಸಸ್ಯ ಭೂಮಿಯ ಮೇಲೆ ಇಲ್ಲ ಎಂದು. ನಮ್ಮ ಸುತ್ತ ಮುತ್ತ ಅನೇಕ ಅದ್ಭುತ ಔಷಧೀಯ ಗುಣ ಹೊಂದಿದ ಅನೇಕ ಗಿಡ ಮರಗಳಿವೆ, ಆದರೆ, ಅನೇಕ ಸಲ ಅವುಗಳ ಬಗ್ಗೆ ತಿಳಿದೇ ಇರುವುದಿಲ್ಲ. ನೈನಿತಾಲ್ ನಿಂದ ಓರ್ವ ಸ್ನೇಹಿತ, ಸೋದರ ಪರಿತೋಷ್ ಈ ಕುರಿತಂತೆ ಒಂದು ಪತ್ರವನ್ನು ನನಗೆ ಕಳುಹಿಸಿದ್ದಾರೆ. ಅವರು ಬರೆದಿದ್ದಾರೆ, ಅವರಿಗೆ ಗಿಲೋಯ್ ಮತ್ತು ಇತರ ಅನೇಕ ಸಸ್ಯಗಳ ಇಂತಹ ಪವಾಡಸದೃಶ ವೈದ್ಯಕೀಯ ಗುಣಗಳ ಬಗ್ಗೆ ಕೊರೊನಾ ಬಂದ ನಂತರವೇ ತಮಗೆ ತಿಳಿದು ಬಂದಿತೆಂದು. ಜನರು ತಮ್ಮ ಸುತ್ತಮುತ್ತಲಿನ ಸಸ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಮತ್ತು ಅದರ ಬಗ್ಗೆ ಇತರರಿಗೂ ತಿಳಿಸಬೇಕೆಂದು ನಾನು ಮನ್ ಕಿ ಬಾತ್ ನಲ್ಲಿ ಎಲ್ಲಾ ಶ್ರೋತೃಗಳೊಂದಿಗೆ ಹೇಳಬೇಕೆಂದು ಕೂಡಾ ಪರಿತೋಷ್ ನನ್ನಲ್ಲಿ ಮನವಿ ಮಾಡಿದ್ದಾರೆ. ವಾಸ್ತವದಲ್ಲಿ, ಇದು ನಮ್ಮ ಯುಗಯುಗಗಳ ಪುರಾತನ ಪರಂಪರೆಯಾಗಿದೆ, ಇದನ್ನು ನಾವು ಕಾಪಾಡಬೇಕಾಗಿದೆ. ಇದೇ ನಿಟ್ಟಿನಲ್ಲಿ ಮಧ್ಯಪ್ರದೇಶದ ಸತನಾದ ಓರ್ವ ಸ್ನೇಹಿತ ಶ್ರೀಮಾನ್ ರಾಮಲೋಟನ್ ಕುಶ್ವಾಹಾ ಅವರು, ಅತ್ಯಂತ ಶ್ಲಾಘನೀಯ ಕೆಲಸವೊಂದನ್ನು ಮಾಡಿದ್ದಾರೆ. ರಾಮ ಲೋಟನ್ ಅವರು ತಮ್ಮ ಹೊಲದಲ್ಲಿ ಒಂದು ದೇಶೀಯ ಸಂಗ್ರಹಾಲಯ ಮಾಡಿದ್ದಾರೆ. ಈ ಸಂಗ್ರಹಾಲಯದಲ್ಲಿ ಅವರು ನೂರಾರು ಔಷಧೀಯ ಸಸ್ಯಗಳು ಮತ್ತು ಬೀಜಗಳನ್ನು ಸಂಗ್ರಹಿಸಿದ್ದಾರೆ. ಅವರು ಇವುಗಳನ್ನು ದೂರ ದೂರದ ಪ್ರಾಂತ್ಯಗಳಿಂದ ತೆಗೆದುಕೊಂಡು ಬಂದಿದ್ದಾರೆ. ಇಷ್ಟೇ ಅಲ್ಲದೇ ಅವರು ಪ್ರತಿ ವರ್ಷ ಅನೇಕ ರೀತಿಯ ಭಾರತೀಯ ತರಕಾರಿಗಳನ್ನು ಕೂಡಾ ಬೆಳೆಯುತ್ತಾರೆ. ರಾಮ್ ಲೋಟನ್ ಅವರ ಈ ತೋಟ, ಈ ದೇಶೀಯ ಸಂಗ್ರಹಾಲಯ ನೋಡಲು ಜನರು ಕೂಡಾ ಬರುತ್ತಾರೆ ಮತ್ತು ಅದರಿಂದ ಬಹಳಷ್ಟನ್ನು ಕಲಿಯುತ್ತಾರೆ ಕೂಡಾ. ವಾಸ್ತವದಲ್ಲಿ ಇದು ವಿವಿಧ ಕ್ಷೇತ್ರಗಳಲ್ಲಿ ಪುನರಾವರ್ತಿಸಬಹುದಾದ ಒಂದು ಬಹಳ ಉತ್ತಮವಾದ ಪ್ರಯೋಗ ಕೂಡಾ ಆಗಿದೆ. ನಿಮ್ಮಲ್ಲಿ ಇಂತಹ ಪ್ರಯತ್ನ ಮಾಡಲು ಯಾರಿಗೆ ಸಾಧ್ಯವಾಗುತ್ತದೋ ದಯವಿಟ್ಟು ಖಂಡಿತಾ ಮಾಡಿ ಎಂದು ನಾನು ಆಶಿಸುತ್ತೇನೆ. ಇದರಿಂದ ನಿಮ್ಮ ಆದಾಯದ ಹೊಸ ಮೂಲ ಕೂಡಾ ತೆರೆದುಕೊಳ್ಳಬಹುದು. ಸ್ಥಳೀಯ ಸಸ್ಯವರ್ಗದ ಮೂಲಕ ನಿಮ್ಮ ಪ್ರದೇಶದ ಹೆಸರು ಕೂಡಾ ಎಲ್ಲೆಡೆ ತಿಳಿದುಬರುತ್ತದೆ ಎಂಬ ಪ್ರಯೋಜನವೂ ಇದರಲ್ಲಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜುಲೈ 1 ರಂದು ನಾವು ’ರಾಷ್ಟ್ರೀಯ ವೈದ್ಯರ ದಿನ’ ಆಚರಿಸಲಿದ್ದೇವೆ. ಈ ದಿನವನ್ನು ದೇಶದ ಶ್ರೇಷ್ಠ ವೈದ್ಯ ಮತ್ತು ರಾಜಕಾರಣೆ ಡಾಕ್ಟರ್ ಬಿಸಿ ರಾಯ್ ಅವರ ಜನ್ಮ ಜಯಂತಿಗೆ ಸಮರ್ಪಿಸಲಾಗುತ್ತದೆ. ಕೊರೋನಾ ಸಮಯದಲ್ಲಿ ವೈದ್ಯರು ನೀಡಿದ ಕೊಡುಗೆಗಾಗಿ ನಾವೆಲ್ಲರೂ ಕೃತಜ್ಞರಾಗಿದ್ದೇವೆ. ನಮ್ಮ ವೈದ್ಯರು ತಮ್ಮ ಜೀವನದ ಬಗ್ಗೆ ಚಿಂತಿಸದೆ ನಮ್ಮ ಸೇವೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯ ರಾಷ್ಟ್ರೀಯ ವೈದ್ಯರ ದಿನ ಮತ್ತಷ್ಟು ಮಹತ್ವದ್ದೆನಿಸುತ್ತದೆ.
ಸ್ನೇಹಿತರೆ, ವೈದ್ಯಕೀಯ ಕ್ಷೇತ್ರದ ಅತ್ಯಂತ ಗೌರವಾನ್ವಿತರಲ್ಲಿ ಒಬ್ಬರಾದ Hippocrates ಹೀಗೆಂದು ಹೇಳಿದ್ದಾರೆ :
“Wherever the art of Medicine is loved, there is also a love of Humanity.”
ಅಂದರೆ ‘ಎಲ್ಲಿ ಔಷಧ ಕಲೆಯಲ್ಲಿ ಪ್ರೀತಿ ಇರುತ್ತದೆಯೇ ಅಲ್ಲಿ ಮಾನವೀಯತೆಯ ಬಗ್ಗೆ ಪ್ರೀತಿಯೂ ಇರುತ್ತದೆ.’ ವೈದ್ಯರು ಇಂತಹ ಪ್ರೀತಿಯಿಂದಲೇ ನಮ್ಮ ಸೇವೆ ಮಾಡಲು ಸಾಧ್ಯವಾಗುತ್ತದೆ, ನಾವು ಅಷ್ಟೇ ಪ್ರೀತಿಯಿಂದ ಅವರಿಗೆ ಧನ್ಯವಾದ ಅರ್ಪಿಸುವುದು, ಅವರ ಸ್ಥೈರ್ಯವನ್ನು ಹೆಚ್ಚಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ದೇಶದಲ್ಲಿ ತಾವಾಗಿಯೇ ಮುಂದೆ ಬಂದು ವೈದ್ಯರಿಗೆ ಸಹಾಯ ಮಾಡುವ ಅನೇಕರಿದ್ದಾರೆ. ಶ್ರೀನಗರದಲ್ಲಿ ಅಂತಹ ಒಂದು ಪ್ರಯತ್ನದ ಬಗ್ಗೆ ನನಗೆ ತಿಳಿದುಬಂತು. ಇಲ್ಲಿನ ದಾಲ್ ಸರೋವರದಲ್ಲಿ ಒಂದು ಬೋಟ್ ಆಂಬುಲೆನ್ಸ್ ಸೇವೆ ಆರಂಭಿಸಲಾಯಿತು. ಈ ಸೇವೆಯನ್ನು ಶ್ರೀನಗರದಲ್ಲಿ ಒಂದು ಹೌಸ್ ಬೋಟ್ ಮಾಲೀಕರಾದ ತಾರೀಖ್ ಅಹಮದ್ ಪಟ್ಲೂ ಅವರು ಆರಂಭಿಸಿದರು. ಅವರು ಸ್ವತಃ ಕೋವಿಡ್ -19 ರೊಂದಿಗೆ ಹೋರಾಡಿದ್ದಾರೆ ಮತ್ತು ಇದರಿಂದಾಗಿಯೇ ಅವರಿಗೆ ಆಂಬುಲೆನ್ಸ್ ಸೇವೆ ಆರಂಭಿಸುವ ಪ್ರೇರಣೆ ದೊರೆಯಿತು. ಅವರ ಈ ಆಂಬುಲೆನ್ಸ್ ನಿಂದ ಜನರಿಗೆ ಅರಿವು ಮೂಡಿಸುವ ಅಭಿಯಾನ ಕೂಡಾ ನಡೆಯುತ್ತಿದೆ, ಅವರು ಸತತವಾಗಿ ಆಂಬುಲೆನ್ಸ್ ನಿಂದ ಘೋಷಣೆ ಮಾಡುತ್ತಿದ್ದಾರೆ. ಜನರು ಮಾಸ್ಕ್ ಧರಿಸುವುದರಿಂದ ಹಿಡಿದು ಪ್ರತಿಯೊಂದು ಮುನ್ನೆಚ್ಚರಿಕೆಗಳನ್ನೂ ಕೈಗೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.
ಸ್ನೇಹಿತರೇ, ಜುಲೈ ಒಂದರಂದು ವೈದ್ಯರ ದಿನದೊಂದಿಗೆ Chartered Accountants ದಿನವನ್ನು ಕೂಡಾ ಆಚರಿಸಲಾಗುತ್ತದೆ. ನಾನು ಕೆಲವು ವರ್ಷಗಳ ಹಿಂದೆ ದೇಶದ ಚಾರ್ಟೆರ್ಡ್ ಅಕೌಂಟೆಂಟ್ ಗಳಿಂದ, ಜಾಗತಿಕ ಮಟ್ಟದ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ಉಡುಗೊರೆಗಾಗಿ ಕೇಳಿದ್ದೆ. ಇಂದು ನಾನು ಅವರಿಗೆ ಇದರ ಬಗ್ಗೆ ನೆನಪಿಸಲು ಬಯಸುತ್ತೇನೆ. ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು Chartered Accountants ಬಹಳ ಉತ್ತಮ ಮತ್ತು ಸಕಾರಾತ್ಮಕ ಪಾತ್ರ ವಹಿಸಬಹುದು. ನಾನು ಎಲ್ಲಾ ಚಾರ್ಟೆರ್ಡ್ ಅಕೌಂಟೆಂಟ್ ಗಳು, ಅವರ ಕುಟುಂಬದ ಸದಸ್ಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೋನಾ ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ದೊಡ್ಡ ವಿಶೇಷತೆಯಿದೆ. ಈ ಹೋರಾಟದಲ್ಲಿ ದೇಶದ ಪ್ರತಿಯೊಬ್ಬರೂ ತಮ್ಮ ಪಾತ್ರ ನಿಭಾಯಿಸಿದ್ದಾರೆ. ನಾನು “ಮನದ ಮಾತಿನಲ್ಲಿ” ಅನೇಕ ಬಾರಿ ಇದನ್ನು ಉಲ್ಲೇಖಿಸಿದ್ದೇನೆ. ಆದರೆ ತಮ್ಮ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಕೆಲವರಿಂದ ದೂರು ಕೂಡಾ ಇದ್ದೇ ಇರುತ್ತದೆ. ಅನೇಕರು ಬ್ಯಾಂಕ್ ಸಿಬ್ಬಂದಿಯೇ ಆಗಿರಲಿ, ಶಿಕ್ಷಕರಿರಲಿ, ಸಣ್ಣ ವ್ಯಾಪಾರಿ ಅಥವಾ ಅಂಗಡಿ ಮಾಲೀಕರಾಗಿರಲಿ, ಅಂಗಡಿಯಲ್ಲಿ ಕೆಲಸ ಮಾಡುವ ಜನರಾಗಿರಲಿ, ಬೀದಿ ಬದಿ ತಳ್ಳುಗಾಡಿಯ ವ್ಯಾಪಾರಿಗಳಿರಲಿ, ಸೆಕ್ಯೂರಿಟಿ ವಾಚ್ ಮೆನ್ ಆಗಿರಲಿ ಅಥವಾ ಪೋಸ್ಟ್ ಮೆನ್ ಅಥವಾ ಅಂಚೆ ಕಚೇರಿಯ ಸಿಬ್ಬಂದಿಯೇ ಆಗಿರಲಿ, - ವಾಸ್ತವದಲ್ಲಿ ಈ ಪಟ್ಟಿ ಬಹಳ ದೊಡ್ಡದಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಕೂಡಾ ಎಷ್ಟೊಂದು ಜನರು ವಿಧ ವಿಧ ಹಂತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸ್ನೇಹಿತರೇ, ನೀವು ಬಹಶಃ ಭಾರತ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿದ್ದ ಗುರು ಪ್ರಸಾದ್ ಮಹಾಪಾತ್ರ ಅವರ ಹೆಸರನ್ನು ಕೇಳಿರಬಹುದು. ನಾನು ಇಂದು “ಮನದ ಮಾತಿನಲ್ಲಿ” ಅವರನ್ನು ಉಲ್ಲೇಖಿಸಲು ಬಯಸುತ್ತೇನೆ. ಗುರು ಪ್ರಸಾದ್ ಅವರಿಗೆ ಕೊರೋನಾ ಸೋಂಕು ತಗುಲಿತು, ಅವರು ಆಸ್ಪತ್ರೆಗೆ ದಾಖಲಾಗಿದ್ದರು, ಮತ್ತು ತಮ್ಮ ಕರ್ತವ್ಯವನ್ನು ಕೂಡಾ ನಿಭಾಯಿಸುತ್ತಿದ್ದರು. ದೇಶದಲ್ಲಿ ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಲು, ದೂರ ದೂರದ ಪ್ರದೇಶಗಳಿಗೆ ಆಮ್ಲಜನಕ ತಲುಪಿಸುವುದಕ್ಕಾಗಿ ಅವರು ಹಗಲು-ರಾತ್ರಿ ಕೆಲಸ ಮಾಡಿದರು. ಒಂದೆಡೆ ಕೋರ್ಟ್, ಕಚೇರಿಗಳ ಕೆಲಸ, ಮಾಧ್ಯಮದ ಒತ್ತಡ, ಅವರು ಏಕಕಾಲದಲ್ಲಿ ಅನೇಕ ರಂಗಗಳಲ್ಲಿ ಹೋರಾಡುತ್ತಿದ್ದರು, ಕಾಯಿಲೆಯ ಕಾರಣದಿಂದ ಅವರು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಬೇಡವೆಂದು ಹೇಳಿದರೂ ಕೇಳದೆ, ಹಠ ಹಿಡಿದು ಆಮ್ಲಜನಕ ಸಂಬಂಧಿತ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕೂಡಾ ಭಾಗಿಯಾಗುತ್ತಿದ್ದರು. ದೇಶದ ನಾಗರಿಕರ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿಯಿತ್ತು. ಅವರು ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗಲೂ ತಮ್ಮ ಬಗ್ಗೆ ಕಾಳಜಿ ವಹಿಸದೆ, ಅವರು ದೇಶದ ಜನರಿಗೆ ಆಮ್ಲಜನಕ ತಲುಪಿಸುವ ವ್ಯವಸ್ಥೆಯಲ್ಲಿ ತೊಡಗಿಕೊಂಡೇ ಇದ್ದರು. ಇಂತಹ ಕರ್ಮಯೋಗಿಯನ್ನು ಕೂಡಾ ದೇಶ ಕಳೆದುಕೊಂಡಿತು ಎನ್ನುವುದು ನಮ್ಮೆಲ್ಲರಿಗೂ ದುಃಖದ ಸಂಗತಿಯಾಗಿದೆ, ಕೊರೋನಾ ಅವರನ್ನು ನಮ್ಮೆಲ್ಲರಿಂದ ಕಸಿದುಕೊಂಡಿತು. ಎಂದಿಗೂ ಚರ್ಚೆ ಮಾಡಲಾಗದ ಇಂತಹ ಅಸಂಖ್ಯಾತ ಜನರಿದ್ದಾರೆ. ನಾವು ಕೋವಿಡ್ ಶಿಷ್ಟಾಚಾರವನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದು, ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳುವುದು ಇಂತಹ ಪ್ರತಿಯೊಬ್ಬ ವ್ಯಕ್ತಿಗೂ ನಾವು ತೋರಬಹುದಾದ ಶ್ರದ್ಧಾಂಜಲಿಯಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, “ಮನದ ಮಾತಿನ’ ಅತ್ಯಂತ ಉತ್ತಮವಾದ ಮಾತೆಂದರೆ, ಇದರಲ್ಲಿ ನನಗಿಂತ ಹೆಚ್ಚಾಗಿ ನಿಮ್ಮೆಲ್ಲರ ಕೊಡುಗೆ ಇರುತ್ತದೆ. ನಾನು ಈಗ MyGovನಲ್ಲಿ ಒಂದು ಪೋಸ್ಟ್ ನೋಡಿದೆ, ಇದು ಬಂದಿರುವುದು ಚೆನ್ನೈನ ತಿರು ಆರ್ ಗುರುಪ್ರಸಾದ್ ಅವರಿಂದ. ಅವರು ಬರೆದಿರುವುದು ಏನೆಂದು ತಿಳಿದರೆ ನಿಮಗೆ ಕೂಡಾ ಸಂತೋಷವೆನಿಸುತ್ತದೆ. ಅವರು ಬರೆದಿದ್ದಾರೆ ತಾವು “ಮನದ ಮಾತು” ಕಾರ್ಯಕ್ರಮದ ನಿಯಮಿತ ಕೇಳುಗರು ಎಂದು. ಗುರುಪ್ರಸಾದ್ ಅವರ ಪೋಸ್ಟ್ ನಿಂದ ನಾನು ಈಗ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಿದ್ದೇನೆ. ಅವರು ಹೀಗೆ ಬರೆದಿದ್ದಾರೆ,
ನೀವು ತಮಿಳುನಾಡಿನ ಬಗ್ಗೆ ಮಾತನಾಡಿದಾಗಲೆಲ್ಲಾ, ನನ್ನ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತದೆ.
ನೀವು ತಮಿಳು ಭಾಷೆ, ತಮಿಳು ಸಂಸ್ಕೃತಿಯ ಶ್ರೇಷ್ಠತೆ, ತಮಿಳು ಹಬ್ಬಗಳು ಮತ್ತು ತಮಿಳು ನಾಡಿನ ಪ್ರಮುಖ ಸ್ಥಳಗಳ ಬಗ್ಗೆ ಚರ್ಚಿಸಿದ್ದೀರಿ.
ಗುರುಪ್ರಸಾದ್ ಅವರು ಹೀಗೆ ಬರೆಯುತ್ತಾರೆ– “ಮನದ ಮಾತು” ನಲ್ಲಿ, ತಾವು ತಮಿಳು ನಾಡಿನ ಜನರ ಸಾಧನೆಯ ಬಗ್ಗೆ ಕೂಡಾ ಅನೇಕ ಬಾರಿ ಹೇಳಿದ್ದೀರಿ. ತಿರುಕ್ಕುರಲ್ ಅವರ ಬಗ್ಗೆ ನಿಮ್ಮ ಪ್ರೀತಿ ಮತ್ತು ತಿರುಕ್ಕುರುಲ್ ಅವರ ಬಗ್ಗೆ ನಿಮಗಿರುವ ಗೌರವದ ಬಗ್ಗೆ ಏನೆಂದು ಹೇಳಲಿ. ಆದ್ದರಿಂದಲೇ ನಾನು ಮನದ ಮಾತಿನಲ್ಲಿ ನೀವು ತಮಿಳುನಾಡಿನ ಬಗ್ಗೆ ಏನೇ ಹೇಳಿದರೂ, ಅವುಗಳೆಲ್ಲವನ್ನೂ ಸಂಕಲಿಸುವ ಮೂಲಕ ಒಂದು ಇ-ಪುಸ್ತಕ ಸಿದ್ಧಪಡಿಸಿದ್ದೇನೆ. ನೀವು ಈ ಪುಸ್ತಕ ಬಗ್ಗೆ ಏನಾದರೂ ಹೇಳಲು ಬಯಸುತ್ತೀರಾ ಮತ್ತು ಇದನ್ನು NamoAppನಲ್ಲಿ ಪ್ರಕಟಿಸುತ್ತೀರಾ? ಧನ್ಯವಾದ.
‘ನಾನು ಗುರುಪ್ರಸಾದ್ ಅವರ ಈ ಪತ್ರವನ್ನು ನಿಮ್ಮ ಮುಂದೆ ಓದುತ್ತಿದ್ದೆ’
ಗುರುಪ್ರಸಾದ್ ಅವರೇ, ನಿಮ್ಮ ಈ ಪೋಸ್ಟ್ ಓದಿ ಬಹಳ ಸಂತೋಷವಾಯಿತು. ಈಗ ನೀವು ನಿಮ್ಮ ಇ-ಪುಸ್ತಕದಲ್ಲಿ ಮತ್ತೊಂದು ಪುಟ ಸೇರಿಸಿಬಿಡಿ.
..’ನಾನ್ ತಮಿಳ್ ಕಲಾ ಚಾರಾಕ್ತಿನ್ ಪೇರಿಯೇ ಅಭಿಮಾನಿ
ನಾನ್ ಉಲಗತಲಯೇ ಪಲಮಾಯಾಂ ತಮಿಳ್ ಮೋಲಿಯನ್ ಪೇರಿಯೇ ಅಭಿಮಾನಿ’
ಉಚ್ಚಾರಣೆಯಲ್ಲಿ ಲೋಪದೋಷ ಖಂಡಿತಾ ಇರಬಹುದು ಆದರೆ, ನನ್ನ ಪ್ರಯತ್ನ ಮತ್ತು ನನ್ನ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ. ತಮಿಳು ಭಾಷಿಗರಲ್ಲದವರಿಗೆ ನಾನು ಹೇಳಬಯಸುತ್ತೇನೆ, ನಾನು ಗುರುಪ್ರಸಾದ್ ಅವರಿಗೆ ಹೇಳಿದ್ದು ಏನೆಂದರೆ –
ನಾನು ತಮಿಳು ಸಂಸ್ಕೃತಿಯ ಬಹು ದೊಡ್ಡ ಅಭಿಮಾನಿ.
ಪ್ರಪಂಚದ ಅತ್ಯಂತ ಪುರಾತನ ಭಾಷೆಯೆನಿಸಿದ ತಮಿಳು ಭಾಷೆಯ ಬಹು ದೊಡ್ಡ ಅಭಿಮಾನಿ.
ಸ್ನೇಹಿತರೇ, ಪ್ರಪಂಚದ ಅತ್ಯಂತ ಪುರಾತನ ಭಾಷೆ ನಮ್ಮ ದೇಶದ್ದಾಗಿದೆ ಎಂದು ಪ್ರತಿಯೊಬ್ಬ ಭಾರತೀಯನೂ ಗುಣಗಾನ ಮಾಡಬೇಕು ಮತ್ತು ಅದರ ಬಗ್ಗೆ ಹೆಮ್ಮೆ ಪಡಬೇಕು. ನಾನು ಕೂಡಾ ತಮಿಳು ಭಾಷೆಯ ಬಗ್ಗೆ ಬಹಳ ಹೆಮ್ಮೆ ಪಡುತ್ತೇನೆ. ಗುರುಪ್ರಸಾದ್ ಅವರೇ, ನಿಮ್ಮ ಈ ಪ್ರಯತ್ನ ನನಗೆ ಹೊಸದೊಂದು ದೃಷ್ಟಿಕೋನ ನೀಡಲಿದೆ. ಏಕೆಂದರೆ, ನಾನು ಮನದ ಮಾತು ಆಡುವಾಗ ಸಹಜ-ಸರಳ ರೀತಿಯಲ್ಲಿ ನನ್ನ ಮಾತನ್ನು ಆಡುತ್ತೇನೆ. ಇದು ಕೂಡಾ ಇದರ ಒಂದು ಎಲಿಮೆಂಟ್ ಎಂದು ನನಗೆ ತಿಳಿದಿರಲಿಲ್ಲ. ನೀವು ಯಾವಾಗ ಹಿಂದಿನ ಎಲ್ಲಾ ಮಾತುಗಳನ್ನು ಒಟ್ಟು ಮಾಡಿದಿರೋ, ಆಗ ನಾನು ಅದನ್ನು ಒಂದು ಬಾರಿಯಲ್ಲ ಅನೇಕ ಬಾರಿ ಓದಿದೆ. ಗುರುಪ್ರಸಾದ್ ಅವರೇ, ನಿಮ್ಮ ಈ ಪುಸ್ತಕವನ್ನು ನಾನು NamoAppನಲ್ಲಿ ಖಂಡಿತವಾಗಿಯೂ ಅಪ್ಲೋಡ್ ಮಾಡಿಸುತ್ತೇನೆ. ಭವಿಷ್ಯದ ಪ್ರಯತ್ನಗಳಿಗಾಗಿ ನಿಮಗೆ ಅನೇಕಾನೇಕ ಶುಭಾಕಾಂಕ್ಷೆಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಇಂದು ಕೊರೋನಾದಿಂದ ಉಂಟಾದ ತೊಂದರೆಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾತನಾಡಿದ್ದೇವೆ, ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಕೂಡಾ ಚರ್ಚಿಸಿದ್ದೇವೆ. ಈಗ ಮತ್ತೊಂದು ದೊಡ್ಡ ಅವಕಾಶವೂ ನಮ್ಮ ಮುಂದಿದೆ. ಆಗಸ್ಟ್ 15 ಕೂಡಾ ಬರಲಿದೆ. ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವ ನಮಗೆ ಬಹು ದೊಡ್ಡ ಪ್ರೇರಣೆಯಾಗಿದೆ. ದೇಶಕ್ಕಾಗಿ ಬದುಕುವುದನ್ನು ನಾವು ಕಲಿಯೋಣ. ಸ್ವಾತಂತ್ರ್ಯದ ಸಂಗ್ರಾಮ - ದೇಶಕ್ಕಾಗಿ ಮಡಿದವರ ಕಥೆಯಾಗಿದೆ. ಸ್ವಾತಂತ್ರ್ಯ ನಂತರದ ಈ ಸಮಯವನ್ನು ನಾವು ದೇಶಕ್ಕಾಗಿ ಬದುಕುವವರ ಕಥೆಯನ್ನಾಗಿಸಬೇಕು. ಭಾರತ ಮೊದಲು - India First ಎನ್ನುವುದು ನಮ್ಮ ಮಂತ್ರವಾಗಬೇಕು. ಭಾರತ ಮೊದಲು - India First ಎಂಬುದು ನಮ್ಮ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ನಿರ್ಣಯದ ಆಧಾರವಾಗಿರಬೇಕು.
ಸ್ನೇಹಿತರೇ, ಅಮೃತ ಮಹೋತ್ಸವದಲ್ಲಿ ದೇಶವು ಅನೇಕ ಸಾಮೂಹಿಕ ಗುರಿಗಳನ್ನು ಕೂಡಾ ಹೊಂದಿದೆ. ಅಂದರೆ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಾ, ಅವರಿಗೆ ಸಂಬಂಧಿಸಿದ ಚರಿತ್ರೆಯನ್ನು ಪುನರುಜ್ಜೀವಗೊಳಿಸಬೇಕು. ನಿಮಗೆ ನೆನಪಿರಬಹುದು, ಮನದ ಮಾತಿನಲ್ಲಿ ನಾನು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಂಶೋಧನೆ ಮಾಡಲು, ಚರಿತ್ರೆ ಬರೆಯಲು ಯುವಜನತೆಯಲ್ಲಿ ಮನವಿ ಮಾಡಿದ್ದೆ. ಯುವ ಪ್ರತಿಭೆಗಳು ಮುಂದೆ ಬರಬೇಕು, ಯುವ-ಚಿಂತನೆ, ಯುವ ವಿಚಾರಗಳು ಮುಂದೆ ಬರಬೇಕು, ಯುವ-ಲೇಖನಿ ಹೊಸ ಶಕ್ತಿಯೊಂದಿಗೆ ಬರವಣಿಗೆ ಮಾಡಬೇಕೆನ್ನುವುದು ಉದ್ದೇಶವಾಗಿತ್ತು. ಬಹಳ ಕಡಿಮೆ ಸಮಯದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಯುವ ಜನತೆ ಈ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಸ್ನೇಹಿತರೇ, ಆಸಕ್ತಿದಾಯಕ ವಿಷಯವೆಂದರೆ, 19ನೇ -20 ನೇ ಶತಮಾನದ ಸಂಗ್ರಾಮ ಕುರಿತ ಮಾತನ್ನು ಸಾಮಾನ್ಯವಾಗಿ ಆಡಲಾಗುತ್ತಿರುತ್ತದೆ ಆದರೆ, 21 ನೇ ಶತಮಾನದಲ್ಲಿ ಜನಿಸಿದ ಯುವಜನತೆ, 21 ನೇ ಶತಮಾನದಲ್ಲಿ ಜನಿಸಿದಂತಹ ನನ್ನ ಯುವ ಸ್ನೇಹಿತರು 19ನೇ ಮತ್ತು 20ನೇ ಶತಮಾನದ ಸ್ವಾತಂತ್ರ್ಯ ಸಂಗ್ರಾಮವನ್ನು ಜನರ ಮುಂದಿರಿಸುವ ಕಾರ್ಯ ನಿರ್ವಹಿಸಿದ್ದಾರೆ. ಇವರೆಲ್ಲರೂ MyGovನಲ್ಲಿ ಇದರ ಪೂರಾ ವಿವರವನ್ನು ಕಳುಹಿಸಿದ್ದಾರೆ. ಇವರು ಹಿಂದೀ, ಇಂಗ್ಲೀಷ್, ತಮಿಳು, ಕನ್ನಡ, ಬಂಗಾಳಿ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ, ಹೀಗೆ ದೇಶದ ವಿವಿಧ ಭಾಷೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮ ಕುರಿತು ಬರೆಯುತ್ತಾರೆ. ಒಬ್ಬರು ಸ್ವಾತಂತ್ರ್ಯ ಸಂಗ್ರಾಮದ ನಂಟು ಹೊಂದಿರುವ, ತಮ್ಮ ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕಿದರೆ ಮತ್ತೊಬ್ಬರು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ. ಇದೊಂದು ಉತ್ತಮ ಆರಂಭವಾಗಿದೆ. ಅಮೃತ ಮಹೋತ್ಸವದೊಂದಿಗೆ ಯಾವ ರೀತಿಯಲ್ಲಿ ಸೇರಲು ಸಾಧ್ಯವಾಗುತ್ತದೆಯೋ ಖಂಡಿತವಾಗಿಯೂ ಸೇರಿಕೊಳ್ಳಿ ಎನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿಯಾಗಿದೆ. ನಾವು ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯ ಸಾಕ್ಷಿಯಾಗುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. ಆದ್ದರಿಂದ, ಮುಂದಿನ ಸಲ ಮನದ ಮಾತು ಕಾರ್ಯಕ್ರಮದಲ್ಲಿ ನಾವು ಭೇಟಿಯಾದಾಗ, ಅಮೃತ ಮಹೋತ್ಸವದ ಸಿದ್ಧತೆಯ ಬಗ್ಗೆ ಕೂಡಾ ಮಾತನಾಡೋಣ. ನೀವೆಲ್ಲರೂ ಆರೋಗ್ಯವಾಗಿರಿ, ಕೊರೋನಾ ಸಂಬಂಧಿತ ನಿಯಮಗಳ ಪಾಲನೆ ಮಾಡುತ್ತಾ ಮುಂದೆ ಸಾಗಿ, ನಿಮ್ಮ ಹೊಸ ಹೊಸ ಪ್ರಯತ್ನಗಳಿಂದ ದೇಶಕ್ಕೆ ಹೊಸ ವೇಗ ತುಂಬುತ್ತಿರಿ. ಈ ಶುಭಾಕಾಂಕ್ಷೆಗಳೊಂದಿಗೆ, ಅನೇಕಾನೇಕ ಧನ್ಯವಾದ.
ನನ್ನ ಪ್ರಿಯ ದೇಶಬಾಂಧವರೆ ನಮಸ್ಕಾರ. ಕೋವಿಡ್ 19 ರ ವಿರುದ್ಧ ದೇಶ ಯಾವ ರೀತಿ ಸಂಪೂರ್ಣ ಶಕ್ತಿಯನ್ನು ಬಳಸಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ನಾವು ನೋಡುತ್ತಿದ್ದೇವೆ. ಕಳೆದ 100 ವರ್ಷಗಳಲ್ಲಿ ಇದೊಂದು ಬಹುದೊಡ್ಡ ಮಹಾಮಾರಿಯಾಗಿದೆ ಮತ್ತು ಇದೇ ಸಾಂಕ್ರಾಮಿಕದ ಮಧ್ಯೆ ಭಾರತ ಹಲವಾರು ಬಗೆಯ ಪ್ರಾಕೃತಿಕ ವಿಪತ್ತುಗಳನ್ನು ಕೂಡ ಬಲಯುತವಾಗಿ ಎದುರಿಸಿದೆ. ಈ ಸಮಯದಲ್ಲಿ ಅಂಫಾನ್ ಚಂಡಮಾರುತ ಮತ್ತು ನಿಸರ್ಗ ಚಂಡಮಾರುತ ಅಪ್ಪಳಿಸಿತು. ಅನೇಕ ರಾಜ್ಯಗಳಲ್ಲಿ ನೆರೆ ಬಂತು. ಸಣ್ಣ ಪುಟ್ಟ ಭೂಕಂಪಗಳು ಆದವು. ಭೂಮಿ ಕುಸಿಯಿತು. ಇದೀಗ ಕಳೆದ 10 ದಿನಗಳಲ್ಲಿ ದೇಶ 2 ದೊಡ್ಡ ಚಂಡಮಾರುತಗಳನ್ನು ಎದುರಿಸುತ್ತಿದೆ. ಪಶ್ಚಿಮ ಸಮುದ್ರ ತೀರದಲ್ಲಿ ಚಂಡಮಾರುತ ತಾವು-ತೆ ಮತ್ತು ಪೂರ್ವ ತಟದಲ್ಲಿ ಚಂಡಮಾರುತ ಯಾಸ್ ಅಪ್ಪಳಿಸಿದ್ದು ಹಲವಾರು ರಾಜ್ಯಗಳ ಮೇಲೆ ಪ್ರಭಾವ ಬೀರಿವೆ. ದೇಶ ಮತ್ತು ದೇಶದ ಜನತೆ ಇದರ ವಿರುದ್ಧ ಸಂಪೂರ್ಣ ಶಕ್ತಿಯಿಂದ ಹೋರಾಡಿ ಅತ್ಯಂತ ಕಡಿಮೆ ಸಾವು ನೋವುಗಳಾಗುವಂತೆ ನೋಡಿಕೊಂಡರು. ಈಗ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಹೆಚ್ಚೆಚ್ಚು ಜನರ ಜೀವವನ್ನು ಉಳಿಸುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಆಪತ್ತಿನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಚಂಡಮಾರುತದಿಂದ ತತ್ತರಿಸಿದ ಎಲ್ಲ ರಾಜ್ಯಗಳ ಜನತೆ ಅಪಾರ ಸಾಹಸವನ್ನು ತೋರ್ಪಡಿಸಿದ್ದಾರೆ, ಈ ಸಂಕಷ್ಟ ಸಮಯದಲ್ಲಿ ಸಂಮಯದಿಂದ ಧೈರ್ಯದಿಂದ ಅದನ್ನು ಎದುರಿಸಿದ್ದಾರೆಯೋ ಆ ಎಲ್ಲ ನಾಗರಿಕರಿಗೆ ನಾನು ಹೃದಯಪೂರ್ವಕ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಯಾರು ಮುಂದುವರಿದು ಪರಿಹಾರ ಮತ್ತು ಸಂರಕ್ಷಣಾ ಕಾರ್ಯದಲ್ಲಿ ಕೆಲಸದಲ್ಲಿ ಪಾಲ್ಗೊಂಡರೋ ಅವರೆಲ್ಲರಿಗೂ ಎಷ್ಟು ಮೆಚ್ಚುಗೆ ತೋರಿದರೂ ಅದು ಕಡಿಮೆಯೇ. ಅವರೆಲ್ಲರಿಗೂ ನಾನು ವಂದಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಎಲ್ಲರೂ ಒಗ್ಗೂಡಿ ಈ ಆಪತ್ತನ್ನು ಎದುರಿಸಲು ಮುಂದಾಗಿದ್ದಾರೆ. ತಮ್ಮ ಬಂಧುಗಳನ್ನು ಕಳೆದುಕೊಂಡವರೆಲ್ಲರ ಬಗ್ಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಈ ಆಪತ್ತನ್ನು ಎದುರಿಸಿದ ಎಲ್ಲರೊಂದಿಗೆ ನಾವೆಲ್ಲರೂ ಈ ಸಂಕಷ್ಟದ ಸಮಯದಲ್ಲಿ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದೇವೆ.
ನನ್ನ ಪ್ರಿಯ ದೇಶಬಾಂಧವರೆ ಸವಾಲು ಎಷ್ಟೇ ದೊಡ್ಡದಾಗಿರಲಿ ಭಾರತದ ವಿಜಯದ ಸಂಕಲ್ಪವೂ ಅಷ್ಟೇ ದೊಡ್ಡದಾಗಿದೆ. ದೇಶದ ಸಾಮೂಹಿಕ ಶಕ್ತಿ ಮತ್ತು ನಮ್ಮ ಸೇವಾಭಾವ ದೇಶವನ್ನು ಎಲ್ಲ ಸಂಕಷ್ಟದಿಂದ ಪಾರು ಮಾಡಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ವೈದ್ಯರು, ಸುಶ್ರೂಷಕಿಯರು ಮತ್ತು ಮುಂಚೂಣಿ ಹೋರಾಟಗಾರರು- ತಮ್ಮ ಬಗೆಗಿನ ಆಲೋಚನೆಯನ್ನು ತೊರೆದು ಹಗಲು ರಾತ್ರಿ ಕೆಲಸ ಮಾಡಿದ್ದಾರೆ ಮತ್ತು ಇಂದಿಗೂ ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಇದೆಲ್ಲದರ ಮಧ್ಯೆ ಕೊರೊನಾ 2ನೇ ಅಲೆಯ ವಿರುದ್ಧ ಹೋರಾಡುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಅದೆಷ್ಟೋ ಜನರಿದ್ದಾರೆ. ನಮೋ ಆಪ್ ಮತ್ತು ಪತ್ರಗಳ ಮೂಲಕ ಹಲವಾರು ಶ್ರೋತೃಗಳು ಮನದ ಮಾತಿನಲ್ಲಿ ನನ್ನೊಂದಿಗೆ ಈ ವಾರಿಯರ್ಸ್ ಬಗ್ಗೆ ಮಾತನಾಡುವ ಕುರಿತು ಆಗ್ರಹಿಸಿದ್ದಾರೆ.
ಸ್ನೇಹಿತರೆ, 2 ನೇ ಅಲೆ ಬಂದಾಗ ಇದ್ದಕ್ಕಿದ್ದಂತೆ ಆಮ್ಲಜನಕದ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ಇದು ಬಹುದೊಡ್ಡ ಸವಾಲಾಗಿತ್ತು. ವೈದ್ಯಕೀಯ ಆಮ್ಲಜನಕವನ್ನು ದೇಶದ ದೂರ ಪ್ರದೇಶಗಳಿಗೆ ತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆಮ್ಲಜನಕದ ಟ್ಯಾಂಕರ್ ಗಳು ಹೆಚ್ಚು ವೇಗವಾಗಿ ತಲುಪಬೇಕು. ಸ್ವಲ್ಪ ಅಲಕ್ಷವಾದರೂ ವಿಸ್ಪೋಟವಾಗುವಂತಹ ಆತಂಕವಿರುತ್ತದೆ. ಔದ್ಯಮಿಕ ಆಮ್ಲಜನಕವನ್ನು ಉತ್ಪಾದಿಸುವ ಅನೇಕ ಘಟಕಗಳು ದೇಶದ ಪೂರ್ವಭಾಗದಲ್ಲಿವೆ. ಅಲ್ಲಿಂದ ದೇಶದ ಇತರ ಭಾಗಗಳಿಗೆ ಆಮ್ಲಜನಕ ಸರಬರಾಜು ಮಾಡಲು ಕೂಡ ಹಲವು ದಿನಗಳು ಬೇಕಾಗುತ್ತವೆ.
ದೇಶದ ಎದುರಿಗಿರುವ ಈ ಸವಾಲಿನ ಸ್ಥಿತಿಯಲ್ಲಿ ದೇಶಕ್ಕೆ cryogenic tanker ವಾಹನ ಚಾಲಕರು, oxygen express, Air Force ನ pilot ಗಳು ಸಹಾಯ ಮಾಡಿದರು. ಇಂಥ ಅನೇಕ ಜನರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಲಕ್ಷಾಂತರ ಜನರ ಜೀವನ ಉಳಿಸಿದರು. ಇಂದು ಮನದ ಮಾತಿನಲ್ಲಿ ಇಂದು ನಮ್ಮೊಂದಿಗೆ ಇಂಥ ಒಬ್ಬ ಸ್ನೇಹಿತರು ಪಾಲ್ಗೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಜೌನ್ಪು ರದ ನಿವಾಸಿ ಶ್ರೀಯುತ ದಿನೇಶ್ ಉಪಾಧ್ಯಾಯ ಅವರು …
ಮೋದಿಯವರು: ದಿನೇಶ್ ಅವರೆ ನಮಸ್ಕಾರ
ದಿನೇಶ್ ಉಪಾಧ್ಯಾಯ: ಸರ್, ನಮಸ್ಕಾರ
ಮೋದಿಯವರು: ಎಲ್ಲಕ್ಕಿಂತ ಮೊದಲು ನಿಮ್ಮ ಬಗ್ಗೆ ನಮಗೆ ತಿಳಿಸಿ
ದಿನೇಶ್ ಉಪಾಧ್ಯಾಯ: ಸರ್ ನನ್ನ ಹೆಸರು ದಿನೇಶ್ ಬಾಬುಲ್ನಾಸಥ್ ಉಪಾಧ್ಯಾಯ. ನಾನು ಜೌನ್ಪುುರ ಜಿಲ್ಲೆಯ ಅಂಚೆ - ಜಮುವಾ ಹಸನ್ ಪುರ ಗ್ರಾಮದ ನಿವಾಸಿಯಾಗಿದ್ದೇನೆ.
ಮೋದಿಯವರು: ಉತ್ತರ ಪ್ರದೇಶದವರಾ?
ದಿನೇಶ್: ಹೌದು ಸರ್
ಮೋದಿಯವರು: ಹೌದಾ
ದಿನೇಶ್: ಸರ್ ನನಗೆ ಒಬ್ಬ ಮಗನಿದ್ದಾನೆ, ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಮತ್ತು ತಂದೆ ತಾಯಿ ಇದ್ದಾರೆ.
ಮೋದಿಯವರು: ನೀವು ಏನು ಕೆಲಸ ಮಾಡುತ್ತೀರಿ?
ದಿನೇಶ್: ಸರ್ ನಾನು ಆಮ್ಲಜನಕದ ಟ್ಯಾಂಕರ್ ಚಾಲಕನಾಗಿದ್ದೇನೆ. Liquid oxygen….
ಮೋದಿಯವರು: ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆದಿದೆಯೇ?
ದಿನೇಶ್: ಹಾಂ ಸರ್ ವಿದ್ಯಾಭ್ಯಾಸ ಚೆನ್ನಾಗಿ ನಡೆದಿದೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗ ಓದುತ್ತಿದ್ದಾರೆ.
ಮೋದಿಯವರು: ಆನ್ ಲೈನ್ ಅಭ್ಯಾಸ ಚೆನ್ನಾಗಿ ನಡೆದಿದೆಯೇ?
ದಿನೇಶ್: ಹಾಂ ಸರ್, ಚೆನ್ನಾಗಿ ಓದುತ್ತಿದ್ದಾರೆ. ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಸರ್, 15-17 ವರ್ಷಗಳಿಂದ ನಾನು ಆಮ್ಲಜನಕದ ಟ್ಯಾಂಕರ್ ಚಲಾಯಿಸುತ್ತಿದ್ದೇನೆ.
ಮೋದಿಯವರು: ಹೌದಾ! ನೀವು 15-17 ವರ್ಷಗಳಿಂದ ನಾನು ಆಮ್ಲಜನಕ ಹೊತ್ತೊಯ್ಯುತ್ತಿದ್ದೀರಿ ಎಂದಾದಲ್ಲಿ ನೀವು ಕೇವಲ ಒಬ್ಬ ಚಾಲಕನಲ್ಲ. ಲಕ್ಷಾಂತರ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೀರಿ.
ದಿನೇಶ್: ಸರ್ ನಮ್ಮ ಕೆಲಸವೇ ಅದಲ್ಲವೇ ಸರ್, ನಮ್ಮ ಆಮ್ಲಜನಕದ ಕಂಪನಿ ಐನಾಕ್ಸ ನಮ್ಮ ಬಗ್ಗೆ ಬಹಳ ಕಾಳಜಿವಹಿಸುತ್ತದೆ. ನಾವು ಎಲ್ಲಿಯೇ ಆಮ್ಲಜನಕವನ್ನು ತಲುಪಿಸುತ್ತೇವೆ ಎಂದಾಗ ನಮಗೆ ಬಹಳ ಸಂತೋಷವೆನಿಸುತ್ತದೆ.
ಮೋದಿಯವರು: ಆದರೆ ಪ್ರಸ್ತುತ ಕೊರೊನಾ ಸಮಯದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ?
ದಿನೇಶ್: ಹೌದು ಸರ್ ಬಹಳ ಹೆಚ್ಚಾಗಿದೆ.
ಮೋದಿಯವರು: ನೀವು ಟ್ರಕ್ನಳ ಚಾಲಕ ಆಸನದ ಮೇಲೆ ಕುಳಿತಾಗ ನಿಮ್ಮ ಭಾವನೆ ಹೇಗಿರುತ್ತದೆ? ಹಿಂದಕ್ಕೆ ಹೋಲಿಸಿದಲ್ಲಿ ಇಂದು ನಿಮ್ಮ ಅನುಭವದಲ್ಲಿ ಏನು ಬದಲಾವಣೆಯಾಗಿದೆ? ಬಹಳ ಒತ್ತಡ ಇರಬಹುದಲ್ಲವೇ? ಮಾನಸಿಕ ಒತ್ತಡ ಇರಬಹುದು? ಕುಟುಂಬದ ಚಿಂತೆ, ಕೊರೊನಾ ವಾತಾವರಣ, ಜನರಿಂದ ಒತ್ತಡ, ಬೇಡಿಕೆ? ಏನೇನಾಗುತ್ತದೆ.
ದಿನೇಶ್: ಸರ್ ನಮಗೆ ಚಿಂತೆಯೇನೂ ಇಲ್ಲ. ನಮ್ಮ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ, ನಮ್ಮ ಆಮ್ಲಜನಕದಿಂದ ಯಾರದೇ ಜೀವನ ಉಳಿಯುತ್ತದೆ ಎಂದರೆ ಬಹಳ ಹೆಮ್ಮೆಯೆನಿಸುತ್ತದೆ.
ಮೋದಿಯವರು: ಬಹಳ ಉತ್ತಮ ರೀತಿಯಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೀರಿ. ಇಂದು ಈ ಮಹಾಮಾರಿಯ ಸಂದರ್ಭದಲ್ಲಿ ಜನರು ನಿಮ್ಮ ಕೆಲಸದ ಮಹತ್ವವನ್ನು ಗಮನಿಸುತ್ತಿದ್ದಾರೆ. ಇದರ ಬಗ್ಗೆ ಈ ಹಿಂದೆ ಅಷ್ಟೊಂದು ಪರಿಗಣನೆ ಇರಲಿಲ್ಲ. ಇಂದು ನಿಮ್ಮ ಕೆಲಸದ ಬಗ್ಗೆ ಮತ್ತು ನಿಮ್ಮ ಬಗ್ಗೆ ಅವರ ಭಾವನೆಗಳು ಬದಲಾಗಿವೆಯೇ?
ದಿನೇಶ್: ಹೌದು ಸರ್, ಈ ಹಿಂದೆ ಆಮ್ಲಜನಕದ ಟ್ಯಾಂಕರ್ ಚಾಲಕರು ಎಲ್ಲಿಯೇ ವಾಹನ ದಟ್ಟಣೆಯ್ಲಲಿ ಸಿಲುಕಿರುತ್ತಿದ್ದೆವು ಆದರೆ ಇಂದು ಸರ್ಕಾರ ಕೂಡ ನಮಗೆ ಬಹಳ ಸಹಾಯ ಮಾಡುತ್ತಿದೆ. ನಾವು ಎಲ್ಲಿಗೆ ಪಯಣಿಸಿದರೂ ಎಷ್ಟು ಬೇಗ ತಲುಪಿ ಜನರ ಜೀವ ಉಳಿಸಬಲ್ಲೆವು ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ ಸರ್. ಊಟ ತಿಂಡಿ ಸಿಗಲಿ ಸಿಗದಿರಲಿ, ಯಾವುದೇ ಸಮಸ್ಯೆ ಬರಲಿ ನಾವು ಆಸ್ಪತ್ರೆಗೆ ಟ್ಯಾಂಕರ್ ತೆಗೆದುಕೊಂಡು ತಲುಪಿದಾಗ ಜನರು ನಮ್ಮನ್ನು ನೋಡಿ ಆಸ್ಪತ್ರೆಯವರು ಮತ್ತು ರೋಗಿಯ ಬಂಧುಗಳು ವಿಜಯದ ವಿ ಸಂಕೇತ ತೋರುತ್ತಾರೆ.
ಮೋದಿಯವರು: ಹೌದಾ ವಿಕ್ಟರಿಯ ವಿ ಸಂಕೇತ ತೋರುತ್ತಾರಾ?
ದಿನೇಶ್: ಹೌದು ಸರ್! ವಿ ಸಂಕೇತ ಇಲ್ಲ ಹೆಬ್ಬೆಟ್ಟಿನ ಸಂಕೇತ ತೋರಿದಾಗ ನಮಗೆ ಜೀವನದಲ್ಲಿ ಯಾವುದಾದರೂ ಒಳ್ಳೆ ಕೆಲಸ ಮಾಡಿದುದರಿಂದಲೇ ಈ ಜೀವ ಉಳಿಸುವ ಅವಕಾಶ ದೊರೆತಿದೆ ಎಂದು ಸಮಾಧಾನವಾಗುತ್ತದೆ
ಮೋದಿಯವರು: ಚಾಲನೆಯ ಸುಸ್ತು ನಿರಾಳವಾಗಬಹುದು
ದಿನೇಶ್: ಹೌದು ಸರ್. ಹೌದು ಸರ್
ಮೋದಿಯವರು: ಮನೆಗೆ ಬಂದ ಮೇಲೆ ಮಕ್ಕಳೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳುತ್ತೀರಾ?
ದಿನೇಶ್: ಇಲ್ಲ ಸರ್, ಮಕ್ಕಳು ಗ್ರಾಮದಲ್ಲಿರುತ್ತಾರೆ. ಇಲ್ಲಿ ನಾವು INOX Air Product ಚಾಲಕನ ಕೆಲಸ ಮಾಡುತ್ತಿದ್ದೇವೆ. 8-9 ತಿಂಗಳ ನಂತರ ಮನೆಗೆ ಹೋಗುತ್ತೇನೆ.
ಮೋದಿಯವರು: ಯಾವಾಗಲಾದರೂ ದೂರವಾಣಿ ಕರೆ ಮಾಡಿ ಮಕ್ಕಳೊಂದಿಗೆ ಮಾತಾಡುತ್ತೀರಲ್ಲವೆ?
ದಿನೇಶ್: ಹಾಂ ಸರ್ ಮಾತಾಡುತ್ತೇನೆ.
ಮೋದಿಯವರು: ಆಗ ಅವರ ಮನದಲ್ಲಿ ಅಪ್ಪಾ ಇಂಥ ಸಮಯದಲ್ಲಿ ಹುಷಾರಾಗಿರಿ ಎಂಬ ಭಾವನೆ ಇರಬಹುದಲ್ಲವೇ?
ದಿನೇಶ್: ಅಪ್ಪಾ ಕೆಲಸ ಮಾಡಿ ಆದರೆ ಸುರಕ್ಷತೆ ವಹಿಸಿ ಎಂದು ಹೇಳುತ್ತಾರೆ. ನಮ್ಮ ಮಾನ್ಗಾಂ ವ್ ಘಟಕ ಕೂಡ ಇದೆ. ಐನಾಕ್ಸ್ ನಮಗೆ ಬಹಳ ಸಹಾಯ ಮಾಡುತ್ತದೆ.
ಮೋದಿ - ಒಳ್ಳೆಯದು. ದಿನೇಶ್ ಅವರೆ ನನಗೂ ಕೂಡಾ ಬಹಳ ಸಂತೋಷವಾಯಿತು. ನಿಮ್ಮ ಮಾತುಗಳನ್ನು ಕೇಳಿ, ಮತ್ತು ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ಎಂತೆಂತಹ ಜನರು, ಯಾವ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ದೇಶದ ಜನತೆಗೆ ಕೂಡಾ ತಿಳಿದು ಬರುತ್ತದೆ. ಜನರ ಜೀವ ಉಳಿದರೆ ಸಾಕೆಂದು ನೀವು 8-9 ತಿಂಗಳುಗಳ ಕಾಲ ನಿಮ್ಮ ಮಕ್ಕಳನ್ನು ಭೇಟಿ ಮಾಡುತ್ತಿಲ್ಲ, ಕುಟುಂಬದವರನ್ನು ಭೇಟಿ ಮಾಡುತ್ತಿಲ್ಲ. ದೇಶದ ಜನತೆ ಈ ವಿಷಯ ಕೇಳಿದಾಗ, ಈ ಹೋರಾಟವನ್ನು ನಾವು ಗೆಲ್ಲುತ್ತೇವೆಂದು ದೇಶಕ್ಕೆ ಹೆಮ್ಮೆ ಉಂಟಾಗುತ್ತದೆ ಏಕೆಂದರೆ, ದಿನೇಶ್ ಉಪಾಧ್ಯಾಯರಂತಹ ಲಕ್ಷ ಲಕ್ಷ ಜನರು ಸಂಪೂರ್ಣವಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ.
ದಿನೇಶ್- ಸರ್, ನಾವೆಲ್ಲರೂ ಕೊರೋನಾವನ್ನು ಎಂದಾದರೊಂದು ದಿನ ಖಂಡಿತಾ ಸೋಲಿಸುತ್ತೇವೆ ಸರ್.
ಮೋದಿ - ಒಳ್ಳೆಯದು ದಿನೇಶ್ ಅವರೆ, ನಿಮ್ಮ ಈ ಭಾವನೆಯೇ ದೇಶದ ಶಕ್ತಿಯಾಗಿದೆ. ಬಹಳ ಧನ್ಯವಾದ ದಿನೇಶ್ ಅವರೆ, ನಿಮ್ಮ ಮಕ್ಕಳಿಗೆ ನನ್ನ ಆಶೀರ್ವಾದ ತಿಳಿಸಿ.
ದಿನೇಶ್- ಸರಿ ಸರ್. ನಮಸ್ಕಾರ
ಮೋದಿ -ಧನ್ಯವಾದ
ದಿನೇಶ್- ನಮಸ್ಕಾರ ನಮಸ್ಕಾರ
ಮೋದಿ -ಧನ್ಯವಾದ
ಸ್ನೇಹಿತರೆ, ದಿನೇಶ್ ಅವರು ಹೇಳಿದಂತೆ, ಒಬ್ಬ ಟ್ಯಾಂಕರ್ ಚಾಲಕ ಆಮ್ಲಜನಕ(tanker driver oxygen) ತೆಗೆದುಕೊಂಡು ಆಸ್ಪತ್ರೆ ತಲುಪಿದಾಗ ಅವರು ಪರಮಾತ್ಮ ಕಳುಹಿಸಿಕೊಟ್ಟ ದೂತನಂತೆಯೇ ಕಂಡುಬರುತ್ತಾರೆ. ಈ ಕೆಲಸ ಎಷ್ಟು ಜವಾಬ್ದಾರಿಯಿಂದ ಕೂಡಿರುತ್ತದೆ ಮತ್ತು ಇದರಲ್ಲಿ ಎಷ್ಟು ಮಾನಸಿಕ ಒತ್ತಡ ಕೂಡಾ ಇರುತ್ತದೆ ಎಂದು ನಾವು ಅರ್ಥ ಮಾಡಿಕೊಳ್ಳಬಲ್ಲೆವು.
ಸ್ನೇಹಿತರೆ, ಸವಾಲಿನ ಈ ಸಮಯದಲ್ಲಿ, ಆಮ್ಲಜನಕದ ರವಾನೆಯನ್ನು ಸುಲಭಗೊಳಿಸುವುದಕ್ಕಾಗಿ ಭಾರತೀಯ ರೈಲ್ವೇ ಕೂಡಾ ಮುಂದೆ ಬಂದಿದೆ. ಆಕ್ಸಿಜನ್ ಎಕ್ಸ್ ಪ್ರೆಸ್, ಆಕ್ಸಿಜನ್ ರೈಲ್ ಇವು ರಸ್ತೆಯ ಮೇಲೆ ಸಾಗುವ ಆಕ್ಸಿಜನ್ ಟ್ಯಾಂಕರ್ ಗಳಿಗಿಂತ ಅಧಿಕ ವೇಗದಲ್ಲಿ, ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದೆ. ಒಂದು ಆಕ್ಸಿಜನ್ ಎಕ್ಸ್ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳೆಯರು ಚಾಲನೆ ಮಾಡುತ್ತಿದ್ದಾರೆಂದು ಕೇಳಿ, ತಾಯಂದಿರಿಗೆ, ಸೋದರಿಯರಿಗೆ ಹೆಮ್ಮೆ ಎನಿಸುತ್ತದೆ. ದೇಶದ ಪ್ರತಿಯೊಬ್ಬ ಮಹಿಳೆಗೂ ಹಮ್ಮೆ ಎನಿಸುತ್ತದೆ. ಇಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯೆನಿಸುತ್ತದೆ. ನಾನು ಆಕ್ಸಿಜನ್ಎಬಕ್ಸ್ ಪ್ರೆಸ್ ನ ಓರ್ವ ಲೋಕೋ ಪೈಲಟ್ ಶಿರೀಷಾ ಗಜನಿ ಅವರನ್ನು ಮನ್ ಕಿ ಬಾತ್ ಗೆ ಆಹ್ವಾನಿಸಿದ್ದೇನೆ.
ಮೋದಿ - ಶಿರೀಷಾ ಅವರೆ ನಮಸ್ಕಾರ
ಶಿರೀಷಾ - ನಮಸ್ಕಾರ ಸರ್. ಹೇಗಿದ್ದೀರಿ?
ಮೋದಿ - ನಾನು ಚೆನ್ನಾಗಿದ್ದೇನೆ. ಶಿರೀಷಾ ಅವರೆ, ನೀವು ರೈಲ್ವೇ ಪೈಲಟ್ ಆಗಿ ಕೆಲಸ ಮಾಡುತ್ತಿದ್ದೀರೆಂದು ನಾನು ಕೇಳಿದ್ದೇನೆ ಮತ್ತು ನಿಮ್ಮ ಇಡೀ ಮಹಿಳಾ ತಂಡ ಈ ಆಕ್ಸಿಜನ್ ಎಕ್ಸ್ ಪ್ರೆಸ್ ಚಾಲನೆ ಮಾಡುತ್ತಿದೆಯೆಂದು ನನಗೆ ತಿಳಿಸಲಾಗಿದೆ. ಶಿರೀಷಾ ಅವರೆ ನೀವು ಬಹಳ ಉತ್ತಮ ಕೆಲಸ ಮಾಡುತ್ತಿರುವಿರಿ. ಕೊರೋನಾ ಕಾಲದಲ್ಲಿ ನಿಮ್ಮಂತಹ ಅನೇಕ ಮಹಿಳೆಯರು ಮುಂದೆ ಬಂದು ಕೊರೋನಾದೊಂದಿಗಿನ ಹೋರಾಟದಲ್ಲಿ ದೇಶಕ್ಕೆ ಶಕ್ತಿ ತುಂಬಿದ್ದೀರಿ. ನೀವು ಕೂಡಾ ನಾರಿ ಶಕ್ತಿಯ ಒಂದು ಬಹು ದೊಡ್ಡ ಉದಾಹರಣೆಯಾಗಿರುವಿರಿ. ಈ ಪ್ರೇರಣೆ ನಿಮಗೆ ದೊರೆಯುತ್ತಿರುವುದು ಎಲ್ಲಿಂದ ಎನ್ನುವುದನ್ನು ದೇಶ ತಿಳಿದುಕೊಳ್ಳಲು ಬಯಸುತ್ತದೆ, ನಾನು ತಿಳಿದುಕೊಳ್ಳಲು ಬಯಸುತ್ತೇನೆ.
ಶಿರೀಷಾ - ಸರ್, ನನಗೆ ಪ್ರೇರಣೆ ನನ್ನ ತಾಯಿ ತಂದೆಯರಿಂದ ದೊರೆಯುತ್ತದೆ. ನನ್ನ ತಂದೆ ಸರ್ಕಾರಿ ಉದ್ಯೋಗಿ ಸರ್. ವಾಸ್ತವದಲ್ಲಿ ನನಗೆ ಇಬ್ಬರು ಅಕ್ಕಂದಿರಿದ್ದಾರೆ ಸರ್. ನಾವು ಮೂವರು ಸದಸ್ಯರು, ಕೇವಲ ಮಹಿಳೆಯರು. ಆದರೆ ನನ್ನ ತಂದೆ ಕೆಲಸ ಮಾಡುವುದಕ್ಕೆ ಬಹಳ ಪ್ರೋತ್ಸಾಹ ನೀಡುತ್ತಾರೆ ಸರ್. ನನ್ನದೊಡ್ಡ ಅಕ್ಕ ಬ್ಯಾಂಕೊಂದರಲ್ಲಿ ಸರ್ಕಾರಿಉದ್ಯೋಗ ಮಾಡುತ್ತಿದ್ದಾಳೆ ಮತ್ತು ನಾನು ರೈಲ್ವೆಯಲ್ಲಿ ನಿಯೋಜನೆಗೊಂಡಿದ್ದೇನೆ. ನನ್ನ ತಾಯಿತಂದೆ ನನಗೆ ಪ್ರೋತ್ಸಾಹ ನೀಡುತ್ತಾರೆ. (Actually I am having two elder sister, sir. We are three members, ladies only but my father giving very encourage to work. My first sister doing government job in bank and I am settled in railway. My parents only encourage me.)
ಮೋದಿ - ಒಳ್ಳೆಯದು ಶಿರೀಷಾ ಅವರೆ, ನೀವು ಸಾಧಾರಣ ದಿನಗಳಲ್ಲಿ ಕೂಡಾ ರೈಲ್ವೇಗೆ ನಿಮ್ಮ ಸೇವೆ ಸಲ್ಲಿಸಿದ್ದೀರಿ. ಟ್ರೈನ್ ಅನ್ನು ಸಾಧಾರಣವಾಗಿ ಚಾಲನೆ ಮಾಡಿದ್ದೀರಿ ಆದರೆ, ಒಂದೆಡೆ ಆಮ್ಲಜನಕಕ್ಕೆ ಇಷ್ಟೊಂದು ಬೇಡಿಕೆ ಇರುವಾಗ, ಮತ್ತು ನೀವು ಆಮ್ಲಜನಕವನ್ನು ಕೊಂಡೊಯ್ಯುವಾಗ ಸ್ವಲ್ಪ ಜವಾಬ್ದಾರಿಯುತ ಕೆಲಸವಲ್ಲವೇ, ಸ್ವಲ್ಪ ಹೆಚ್ಚಿನ ಜವಾಬ್ದಾರಿ ಇರುತ್ತದೆ ಅಲ್ಲವೇ? ಸಾಮಾನ್ಯ ಸರಕುಗಳನ್ನು ಕೊಂಡೊಯ್ಯುವುದು ಬೇರೆ, ಆಮ್ಲಜನಕವಂತೂ ಬಹಳ ಸೂಕ್ಷ್ಮವೂ ಆಗಿರುತ್ತದೆ, ಇವೆಲ್ಲ ನಿಮ್ಮ ಅನುಭವಕ್ಕೆ ಬಂದಿವೆಯೇ?
ಶಿರೀಷಾ- ಈ ಕೆಲಸ ಮಾಡುವುದಕ್ಕೆ ನನಗೆ ಸಂತೋಷವೆನಿಸಿತು. ಆಮ್ಲಜನಕ ವಿಶೇಷ (Oxygen special) ನೀಡುವ ಸಮಯದಲ್ಲಿ ಎಲ್ಲಾ ವಿಷಯಗಳನ್ನೂ ಗಮನಿಸಲಾಯಿತು, ಸುರಕ್ಷತೆ, ರಚನೆ, ಎಲ್ಲಿಯಾದರೂ ಸೋರಿಕೆಯಿದೆಯೇ ಎಂದು ಪರೀಕ್ಷಿಸಿ ನೋಡಲಾಯಿತು. ನಂತರ, ಭಾರತೀಯ ರೈಲ್ವೇ ಕೂಡಾ ಬಹಳ ಬೆಂಬಲ ನೀಡುತ್ತದೆ ಸರ್. ಈ ಆಕ್ಸಿಜನ್ ಚಾಲನೆ ಮಾಡುವುದಕ್ಕೆ ನನಗೆ ಹಸಿರು ಮಾರ್ಗ(green path) ನೀಡಲಾಯಿತು. ಈ ರೈಲು ಒಂದೂವರೆ ಗಂಟೆಯಲ್ಲಿ 125 ಕಿಲೋಮೀಟರ್ ತಲುಪಿತು. ರೈಲ್ವೇ ಕೂಡಾ ಇಷ್ಟೊಂದು ಜವಾಬ್ದಾರಿ ತೆಗೆದುಕೊಂಡಿತು ಮತ್ತು ನಾನು ಕೂಡಾ ಜವಾಬ್ದಾರಿ ತೆಗೆದುಕೊಂಡೆ ಸರ್.
ಮೋದಿ - ವಾಹ್... ಒಳ್ಳೆಯದು ಶಿರೀಷಾ ಅವರೆ, ನಾನು ನಿಮ್ಮನ್ನು ಬಹಳ ಅಭಿನಂದಿಸುತ್ತೇನೆ ಮತ್ತು ಮೂರೂ ಹೆಣ್ಣು ಮಕ್ಕಳಿಗೆ ಇಷ್ಟೊಂದು ಪ್ರೇರಣೆ ನೀಡಿರುವ ಮತ್ತು ಅವರನ್ನು ಇಷ್ಟೊಂದು ಮುಂದೆ ತಂದಿರುವ ಈ ರೀತಿಯ ಪ್ರೋತ್ಸಾಹ ನೀಡಿರುವ ನಿಮ್ಮತಂದೆ- ತಾಯಿಗೆ ವಿಶೇಷವಾಗಿ ನನ್ನ ನಮನ ಸಲ್ಲಿಸುತ್ತೇನೆ. ಮತ್ತು ಇಂತಹ ತಾಯಿ ತಂದೆಗೆ ನಮಸ್ಕರಿಸುತ್ತೇನೆ ಮತ್ತು ಈ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಮತ್ತು ಉತ್ಸಾಹವನ್ನೂ ತೋರಿರುವ ಸೋದರಿಯರೆಲ್ಲರಿಗೂ ನಮಸ್ಕರಿಸುತ್ತೇನೆ. ಬಹಳ ಬಹಳ ಧನ್ಯವಾದ ಶಿರೀಷಾ ಅವರೆ.
ಶಿರೀಷಾ -ಧನ್ಯವಾದ ಸರ್. ಥ್ಯಾಂಕ್ಯೂ ಸರ್. ನನಗೆ ನಿಮ್ಮ ಆಶೀರ್ವಾದ ಬೇಕು ಸರ್.
ಮೋದಿ - ಪರಮಾತ್ಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ, ನಿಮ್ಮ ತಾಯಿತಂದೆಯ ಆಶೀರ್ವಾದವಿರಲಿ. ಧನ್ಯವಾದ.
ಶಿರೀಷಾ -ಧನ್ಯವಾದ ಸರ್.
ಸ್ನೇಹಿತರೆ, ನಾವು ಈಗಷ್ಟೇ ಶಿರೀಷಾ ಅವರ ಮಾತುಗಳನ್ನು ಕೇಳಿದೆವು. ಅವರ ಅನುಭವ ಪ್ರೇರಣೆಯನ್ನೂ ನೀಡುತ್ತದೆ, ಭಾವುಕರನ್ನಾಗಿ ಕೂಡಾ ಮಾಡುತ್ತದೆ. ವಾಸ್ತವದಲ್ಲಿ ಈ ಹೋರಾಟ ಎಷ್ಟು ದೊಡ್ಡದೆಂದರೆ, ಇದರಲ್ಲಿ ನಮ್ಮ ದೇಶವು ರೈಲ್ವೇಯಂತೆಯೇ, ಜಲ, ಭೂಮಿ, ಆಕಾಶ, ಈ ಮೂರೂ ಮಾರ್ಗಗಳ ಮೂಲಕ ಕೆಲಸ ಮಾಡುತ್ತಿದೆ. ಒಂದೆಡೆ ಖಾಲಿ ಟ್ಯಾಂಕರ್ ಗಳನ್ನು ವಾಯುಪಡೆಯ ವಿಮಾನಗಳ ಮೂಲಕ ಆಮ್ಲಜನಕದ ಘಟಕಗಳವರೆಗೆ ತಲುಪಿಸುವ ಕೆಲಸ ನಡೆಯುತ್ತಿದೆ, ಮತ್ತೊಂದೆಡೆ ಹೊಸ ಆಮ್ಲಜನಕ ಘಟಕಗಳ ಸ್ಥಾಪನೆಯ ಕೆಲಸವನ್ನುಕೂಡಾ ಪೂರ್ಣಗೊಳಿಸಲಾಗುತ್ತಿದೆ. ಇದರೊಂದಿಗೆ, ವಿದೇಶಗಳಿಂದ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು (oxygen concentrators)ಮತ್ತು ಕ್ರಯೋಜೆನಿಕ್ ಟ್ಯಾಂಕರ್(cryogenic tankers) ಗಳನ್ನು ದೇಶಕ್ಕೆ ತರಲಾಗುತ್ತಿದೆ. ಆದ್ದರಿಂದ, ಇದರಲ್ಲಿ ನೌಕಾಪಡೆಯೂ ಸೇರಿದೆ, ಭೂ ಸೇನೆಯೂ ಸೇರಿದೆ ಮತ್ತು ಡಿಆರ್ಡಿಒ (DRDO) ದಂತಹ ನಮ್ಮ ಸಂಸ್ಥೆಗಳೂ ತೊಡಗಿಕೊಂಡಿವೆ. ಇದರಲ್ಲಿ ನಮ್ಮ ಅನೇಕ ವಿಜ್ಞಾನಿಗಳು, ಉದ್ಯಮದ ತಜ್ಞರು, ಮತ್ತು ತಾಂತ್ರಿಕ ಸಿಬ್ಬಂದಿ ಕೂಡಾ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಕೆಲಸಗಳನ್ನು ತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಜಿಜ್ಞಾಸೆ ದೇಶವಾಸಿಗಳೆಲ್ಲರ ಮನದಲ್ಲಿದೆ. ಆದ್ದರಿಂದ, ನಮ್ಮೊಂದಿಗೆ ನಮ್ಮ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಪಟ್ನಾಯಕ್ ಅವರು ಸೇರಲಿದ್ದಾರೆ.
ಮೋದಿ - ಪಟ್ನಾಯಕ್ ಅವರೆ, ಜೈ ಹಿಂದ್.
ಗ್ರೂಪ್ ಕ್ಯಾಪ್ಟನ್ :ಸರ್ ಜೈ ಹಿಂದ್. ಸರ್ ನಾನು ಗ್ರೂಪ್ ಕ್ಯಾಪ್ಟನ್ ಎ.ಕೆ. ಪಟ್ನಾಯಕ್. ವಾಯು ಸೇನೆ ಸ್ಟೇಷನ್ ಹಿಂಡನ್ ನಿಂದ ಮಾತನಾಡುತ್ತಿದ್ದೇನೆ.
ಮೋದಿ - ಪಟ್ನಾಯಕ್ ಅವರೆ, ಕೊರೋನಾದೊಂದಿಗಿನ ಹೋರಾಟದಲ್ಲಿ ನೀವು ಬಹು ದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದೀರಿ. ವಿಶ್ವದೆಲ್ಲೆಡೆ ಹೋಗಿ ಟ್ಯಾಂಕರ್ ತರುವುದು, ಟ್ಯಾಂಕರ್ ಇಲ್ಲಿಗೆ ತಲುಪಿಸುವುದು. ಓರ್ವ ಸೈನಿಕನಾಗಿ ಒಂದು ಭಿನ್ನ ರೀತಿಯ ಕೆಲಸವನ್ನು ನೀವು ಮಾಡಿರುವಿರಿ. ಕೊಲ್ಲು ಇಲ್ಲವೇ ಮಡಿ ಎಂದು ಓಡಬೇಕಾಗಿತ್ತು, ನೀವು ಇಂದು ಜೀವಗಳನ್ನು ಉಳಿಸಲು ಓಡುತ್ತಿರುವಿರಿ. ನಿಮಗೆ ಹೇಗನಿಸುತ್ತಿದೆ ಎಂದು ನಾನು ತಿಳಿಯಬಯಸುತ್ತೇನೆ.
ಗ್ರೂಪ್ ಕ್ಯಾಪ್ಟನ್- ಸರ್, ಈ ಸಂಕಷ್ಟದ ಸಮಯದಲ್ಲಿ ನಮ್ಮ ದೇಶವಾಸಿಗಳಿಗೆ ಸಹಾಯ ಮಾಡುತ್ತಿದ್ದೇನೆ ಇದು ನಮ್ಮ ಅತಿದೊಡ್ಡ ಸೌಭಾಗ್ಯವಾಗಿದೆ ಸರ್ ಮತ್ತು ನಮಗೆ ಯಾವ ಅಭಿಯಾನ ದೊರೆತಿದೆಯೋ ಅದನ್ನು ನಾವು ಉತ್ತಮವಾಗಿ ನಿಭಾಯಿಸುತ್ತಿದ್ದೇವೆ. ನಮ್ಮ ತರಬೇತಿ ಮತ್ತು ಬೆಂಬಲ ಸೇವೆಗಳು ನಮಗೆ ಸಂಪೂರ್ಣ ಸಹಾಯ ಮಾಡುತ್ತಿವೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ನಮಗೆ ದೊರೆತಿರುವ ವೃತ್ತಿಪರ ಸಂತೃಪ್ತಿ ಬಹಳ ಉನ್ನತ ಮಟ್ಟದ್ದಾಗಿದೆ ಮತ್ತು ಇದರಿಂದಾಗಿಯೇ ನಿರಂತರ ಕಾರ್ಯಾಚರಣೆ ಮಾಡಲು ನಮಗೆ ಸಾಧ್ಯವಾಗುತ್ತಿದೆ.
ಮೋದಿ - ನೀವು ಇಂದಿನ ದಿನಗಳಲ್ಲಿ ಏನೇನು ಪ್ರಯತ್ನ ಮಾಡುತ್ತಿರುವಿರೋ ಅದು ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಎಲ್ಲ ಕೆಲಸ ಮಾಡಬೇಕಾಗಿ ಬಂತು. ಇಂಥ ಸಮಯದಲ್ಲಿ ಹೇಗಿತ್ತು ಪರಿಸ್ಥಿತಿ
ಗ್ರೂಪ್ ಕ್ಯಾಪ್ಟನ್-ಸರ್, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಆಮ್ಲಜನಕದ ಟ್ಯಾಂಕರ್ಗಳನ್ನು ಮತ್ತು ದ್ರವ ರೂಪದ ಆಮ್ಲಜನಕದ ಕಂಟೈನರ್ ಗಳನ್ನು ಸ್ಥಳೀಯವಾಗಿ ಮತ್ತು ಅಂತಾರಾಷ್ಟ್ರೀಯ ಮೂಲಗಳಿಂದ ಸಂಗ್ರಹಿಸುತ್ತಿದ್ದೇವೆ. ಸುಮಾರು 16 ಸಾವಿರ ಸಾರ್ಟಿಸ್ ಗೂ ಹೆಚ್ಚು ಏರ್ ಫೋರ್ಸ್ ಸಾಗಣೆ ಮಾಡಿದೆ. ಇದಕ್ಕಾಗಿ 3 ಸಾವಿರಕ್ಕೂ ಹೆಚ್ಚು ಕಿ ಮೀ ಹಾರಾಟ ಮಾಡಲಾಗಿದೆ. ಸುಮಾರು 160 ಅಂತಾರಾಷ್ಟ್ರೀಯ ಮಿಶನ್ ಕೈಗೊಳ್ಳಲಾಗಿದೆ. ಹಿಂದೆ ಸ್ಥಳೀಯ ಆಮ್ಲಜನಕದ ಟ್ಯಾಂಕರ್ಗಆಳನ್ನು ತಲುಪಿಸಲು 2-3 ದಿನಗಳು ಬೇಕಾಗುತ್ತಿದ್ದರೆ ಈಗ 2-3 ಗಂಟೆಗಳಲ್ಲಿ ತಲುಪಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಿಶನ್ ನಲ್ಲಿಯೂ 24 ಗಂಟೆ ನಿರಂತರ ಕೆಲಸ ಮಾಡಿ ದೇಶಕ್ಕೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೆಚ್ಚೆಚ್ಚು ಆಮ್ಲಜನಕದ ಸಿಲಿಂಡರ್ ತಲುಪಿಸುವ ಕೆಲಸವನ್ನು ಏರ್ ಫೋರ್ಸ್ನಿಂ ದ ಮಾಡಲಾಗುತ್ತಿದೆ ಸರ್.
ಮೋದಿಯವರು: ಕ್ಯಾಪ್ಟನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮಗೆ ಎಲ್ಲೆಲ್ಲಿ ಓಡಾಡಬೇಕಾಯಿತು.
ಗ್ರೂಪ್ ಕ್ಯಾಪ್ಟನ್: ಸರ್, ಕಡಿಮೆ ಅವಧಿಯ ಸೂಚನೆ ಮೇರೆಗೆ ನಮಗೆ ಸಿಂಗಪೂರ್, ದುಬೈ, ಬೆಲ್ಜಿಯಂ, ಜರ್ಮನ್ ಮತ್ತು ಬ್ರಿಟನ್ ಈ ಎಲ್ಲ ದೇಶಗಳಿಂದ ಇಂಡಿಯನ್ ಏರ್ ಫೋರ್ಸ್ ನ ವಿವಿಧ ಫ್ಲೀಟ್ ಗಳು Iಐ-76, ಅ-17 ಮತ್ತು ಎಲ್ಲ ಇತರ ವಿಮಾನಗಳು ಅ-130 ಗಾಗಿ ಹಾರಾಟ ನಡೆಸಿದ್ದವು. ನಮ್ಮ ತರಬೇತಿ ಮತ್ತು ಹುಮ್ಮಸ್ಸಿನಿಂದಾಗಿಯೇ ನಾವು ಸಕಾಲಕ್ಕೆ ಈ ಮಿಶನ್ ಪೂರ್ಣಗೊಳಿಸಲು ಸಾಧ್ಯವಾಯಿತು ಸರ್.
ಮೋದಿ: ಈ ಬಾರಿ ಭೂ ಸೇನೆ, ವಾಯು ಸೇನೆ, ನೌಕಾಪಡೆಯ ಎಲ್ಲ ಸೈನಿಕರು ಈ ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ ಎಂದು ದೇಶ ಹೆಮ್ಮೆಪಡಲಿದೆ. ಕ್ಯಾಪ್ಟನ್ ನೀವು ಕೂಡ ಬಹಳ ದೊಡ್ಡ ಜವಾಬ್ದಾರಿ ನಿರ್ವಹಿಸಿದ್ದೀರಿ. ಹಾಗಾಗಿ ನಿಮಗು ಕೂಡಾ ನಾನು ಅಭಿನಂದಿಸುತ್ತೇನೆ.
ಕ್ಯಾಪ್ಟನ್: ಧನ್ಯವಾದಗಳು ಸರ್. ನಾವು ತನುಮನದಿಂದ ಸಂಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ ಮತ್ತು ನನ್ನ ಮಗಳು ಅದಿತಿ ಕೂಡ ನನ್ನ ಜೊತೆಗಿದ್ದಾಳೆ ಸರ್.
ಮೋದಿ: ತುಂಬಾ ಒಳ್ಳೇದು!
ಅದಿತಿ: ನಮಸ್ತೆ ಮೋದಿಯವರೆ
ಮೋದಿ: ನಮಸ್ತೆ ಮಗು… ನಮಸ್ತೆ ಅದಿತಿ, ನೀವು ಎಷ್ಟು ವರ್ಷದವರು?
ಅದಿತಿ: ನಾನು 12 ವರ್ಷದವಳಾಗಿದ್ದೇನೆ. 8 ನೇ ತರಗತಿಯಲ್ಲಿ ಓದುತ್ತಿದ್ದೇನೆ.
ಮೋದಿ: ನಿಮ್ಮ ತಂದೆ ಹೊರಗಡೆ ಹೋದಾಗ ಸಮವಸ್ತ್ರದಲ್ಲಿರುತ್ತಾರೆಯೇ?
ಅದಿತಿ: ಹಾಂ! ಅವರ ಬಗ್ಗೆ ನನಗೆ ಬಹಳ ಹೆಮ್ಮೆಯೆನಿಸುತ್ತದೆ. ಅವರು ಇಷ್ಟೊಂದು ಮಹತ್ವಪೂರ್ಣ ಕೆಲಸ ಮಾಡುತ್ತಿರುವುದಕ್ಕೆ ಎಲ್ಲ ಕೊರೊನಾ ಪೀಡಿತರಿಗೆ ಸಹಾಯ ಮಾಡುತ್ತಿದ್ದಾರೆ, ಯಾವೆಲ್ಲ ದೇಶಗಳಿಂದ ಆಮ್ಲಜನಕದ ಟ್ಯಾಂಕರ್ ಗಳನ್ನು ತರುತ್ತಿದ್ದಾರೆ ಎಂಬುದಕ್ಕೆ ಬಹಳ ಹೆಮ್ಮೆಯೆನಿಸುತ್ತದೆ.
ಮೋದಿ: ಆದರೆ ಮಗಳು ಅಪ್ಪನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾಳಲ್ಲವೇ?
ಅದಿತಿ: ಹೌದು, ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಈ ಮಧ್ಯೆ ಅವರು ಮನೆಯಲ್ಲಿ ಇರುವುದು ಕಡಿಮೆಯಾಗಿದೆ ಏಕೆಂದರೆ ಬಹಳ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಹಾರಾಟ ಮಾಡುತ್ತಿದ್ದಾರೆ ಮತ್ತು ಕೊರೊನಾ ಪೀಡಿತರಿಗೆ ಸಕಾಲಕ್ಕೆ ಆಮ್ಲಜನಕ ದೊರೆಯಲೆಂದು, ಅವರ ಪ್ರಾಣ ಕಾಪಾಡಲೆಂದು ಆಮ್ಲಜನಕದ ಕಂಟೈನರ್ಗಳನ್ನು, ಟ್ಯಾಂಕರ್ ಗಳನ್ನು ಅವುಗಳ ಉತ್ಪಾದನಾ ಘಟಕಗಳಿಗೆ ತಲುಪಿಸುತ್ತಿದ್ದಾರೆ.
ಮೋದಿ: ಹಾಗಾದರೆ ಆಮ್ಲಜನಕದಿಂದಾಗಿ ಜೀವ ಉಳಿಸುತ್ತಿರುವ ವಿಷಯ ಈಗ ಮನೆ ಮನೆಗೆ ತಿಳಿದ ವಿಷಯವಾಗಿದೆಯಲ್ಲವೇ ಮಗು…
ಅದಿತಿ: ಹಾಂ.
ಮೋದಿ: ನಿಮ್ಮ ಸ್ನೇಹಿತರು, ನಿನ್ನ ಸಹಪಾಠಿಗಳು ನಿಮ್ಮ ತಂದೆ ಆಮ್ಲಜನಕದ ಸರಬರಾಜಿನ ಸೇವೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ನಿಮ್ಮನ್ನು ಬಹಳ ಆದರದಿಂದ ನೋಡುತ್ತಾರೆ ಅಲ್ಲವೆ?
ಅದಿತಿ: ಹಾಂ, ನನ್ನ ಎಲ್ಲ ಸ್ನೇಹಿತರು ನಿಮ್ಮ ತಂದೆ ಇಷ್ಟೊಂದು ಮಹತ್ವದ ಕೆಲಸ ಮಾಡುತ್ತಿದ್ದಾರೆ ಮತ್ತು ನಿನಗೆ ಬಹಳ ಹೆಮ್ಮೆ ಎನ್ನಿಸಬಹುದಲ್ಲವೇ ಎಂದು ಹೇಳುತ್ತಾರೆ. ಆಗ ನನಗೆ ಬಹಳ ಹೆಮ್ಮೆಯೆನ್ನಿಸುತ್ತದೆ. ನನ್ನ ಸಂಪೂರ್ಣ ಕುಟುಂಬ, ನನ್ನ ಅಜ್ಜಿ ತಾತ, ಎಲ್ಲರೂ ನನ್ನ ತಂದೆ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ. ನನ್ನ ತಾಯಿ ಮತ್ತು ಆ ಎಲ್ಲ ವೈದ್ಯರು, ಅವರೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಂಪೂರ್ಣ ಆರ್ಮ್ ಫೋರ್ಸ್, ನನ್ನ ಅಪ್ಪನ ಸ್ಕಾಡ್ರನ್ ನ ಎಲ್ಲ ಅಂಕಲ್ ಗಳು ಮತ್ತು ಸೇನೆ ಎಲ್ಲರೂ ಬಹಳ ಕೆಲಸ ಮಾಡುತ್ತಿದ್ದಾರೆ ಮತ್ತು ಕೊರೊನಾ ವಿರುದ್ಧದ ಈ ಹೋರಾಟವನ್ನು ಖಂಡಿತ ಗೆಲ್ಲುತ್ತಾರೆ ಎಂದು ನನಗೆ ವಿಶ್ವಾಸವಿದೆ.
ಮೋದಿ: ಹೆಣ್ಣು ಮಕ್ಕಳು ಮಾತಾಡಿದರೆ ಅವಳ ನಾಲಿಗೆ ಮೇಲೆ ಸರಸ್ವತಿ ವಾಸವಿರುತ್ತಾಳೆ ಎಂದು ನಮ್ಮಲ್ಲಿ ಹೇಳಲಾಗುತ್ತದೆ. ಖಂಡಿತ ನಾವು ಗೆಲ್ಲುತ್ತೇವೆ ಎಂದು ಅದಿತಿ ಹೇಳುತ್ತಿರಬೇಕಾದರೆ ಖಂಡಿತ ಇದು ದೇವರ ವಾಣಿ ಎನ್ನಬಹುದಾಗಿದೆ. ಅದಿತಿ ನೀವು ಈಗ ಆನ್ ಲೈನ್ ನಲ್ಲಿ ಓದುತ್ತಿರಬಹುದಲ್ಲವೇ?
ಅದಿತಿ: ಹಾಂ, ಈಗ ಎಲ್ಲವೂ ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿವೆ. ಈಗ ಮನೆಯಲ್ಲೂ ನಾವು ಎಲ್ಲ ಬಗೆಯ ಮುಂಜಾಗೃತೆ ವಹಿಸುತ್ತಿದ್ದೇವೆ. ಎಲ್ಲಿಯೇ ಹೊರಗಡೆ ಹೋಗಬೇಕಾದರೆ ಡಬಲ್ ಮಾಸ್ಕ್ ಧರಿಸಿ ಎಲ್ಲ ಬಗೆಯ ನೈರ್ಮಲ್ಯ ಕಾಪಾಡಿಕೊಳ್ಳುವತ್ತ ಗಮನಹರಿಸುತ್ತಿದ್ದೇವೆ.
ಮೋದಿ: ಅದಿತಿ ನಿಮ್ಮ ಹವ್ಯಾಸಗಳೇನು? ನಿಮಗೆ ಏನು ಇಷ್ಟ?
ಅದಿತಿ: ಈಜು ಮತ್ತು ಬಾಸ್ಕೆಟ್ ಬಾಲ್ ಆಡುವುದು ನನ್ನ ಹವ್ಯಾಸ ಆದರೆ ಈಗ ಕೊರೊನಾ ಸಮಯದಲ್ಲಿ ಅದು ಬಂದ್ ಆಗಿದೆ. ಬೇಕಿಂಗ್ ಮತ್ತು ಕುಕಿಂಗ್ ನನ್ನ ಆಸಕ್ತಿಯಾಗಿದೆ. ನಾನು ಬೇಕಿಂಗ್ ಮತ್ತು ಕುಕಿಂಗ್ ಮಾಡುತ್ತೇನೆ ಮತ್ತು ಅಪ್ಪ ಇಷ್ಟೆಲ್ಲ ಕೆಲಸ ಮಾಡಿ ಬಂದಾಗ ಅವರಿಗಾಗಿ ಕೇಕ್ ಮತ್ತು ಕುಕ್ಕೀಸ್ ತಯಾರಿಸುತ್ತೇನೆ.
ಮೋದಿ: ವಾವ್, ವ್ಹಾ.. ಒಳ್ಳೇದು ಅದಿತಿ, ಬಹಳ ದಿನಗಳ ನಂತರ ನಿಮಗೆ ಅಪ್ಪನ ಜೊತೆ ಸಮಯ ದೊರೆತಿದೆ. ಕ್ಯಾಪ್ಟನ್ ತುಂಬಾ ಸಂತೋಷವಾಯಿತು. ನಿಮಗೂ ಅನಂತ ಅಭಿನಂದನೆಗಳು. ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರೆ ನಮ್ಮ ಭೂ ಸೇನೆ, ವಾಯು ಸೇನೆ ಮತ್ತು ನೌಕಾಪಡೆಯ ಸಮಸ್ತ ಯೋಧರಿಗೂ ಸಲ್ಯೂಟ್ ಮಾಡುತ್ತೇನೆ. ಧನ್ಯವಾದ ಸೋದರ.
ಕ್ಯಾಪ್ಟನ್: ಧನ್ಯವಾದಗಳು ಸರ್
ಸ್ನೇಹಿತರೆ, ನಮ್ಮ ಯೋಧರು ಮಾಡಿದ ಕೆಲಸಕ್ಕೆ ದೇಶವೇ ನಮಿಸುತ್ತದೆ. ಇದೇ ರೀತಿ ಲಕ್ಷಾಂತರ ಜನರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅವರು ಮಾಡುತ್ತಿರುವ ಕೆಲಸ ಅವರ ದೈನಂದಿನ ಕೆಲಸದ ಭಾಗವಲ್ಲ. ಇಂಥ ವಿಪತ್ತನ್ನು ಜಗತ್ತು 100 ವರ್ಷಗಳ ನಂತರ ಎದುರಿಸುತ್ತಿದೆ. ಒಂದು ಶತಮಾನದ ನಂತರ ಇಂಥ ದೊಡ್ಡ ಸಂಕಷ್ಟ ಬಂದಿದೆ, ಹಾಗಾಗಿ ಇಂಥ ಕೆಲಸದ ಅನುಭವ ಯಾರ ಬಳಿಯೂ ಇರಲಿಲ್ಲ.
ಇದರ ಹಿಂದೆ ದೇಶಸೇವೆಯ ಛಲವಿದೆ ಮತ್ತು ಒಂದು ಸಂಕಲ್ಪಶಕ್ತಿಯಿದೆ. ಇದರಿಂದಲೇ ಹಿಂದೆಂದೂ ಆಗದ ಕೆಲಸವನ್ನು ದೇಶ ಮಾಡಿದೆ. ನೀವು ಅದನ್ನು ಅಂದಾಜಿಸಬಹುದು. ಸಾಮಾನ್ಯವಾಗಿ ನಮ್ಮ ಬಳಿ ದಿನಕ್ಕೆ 900 ಮೆಟ್ರಿಕ್ ಟನ್ ದ್ರಗವರೂಪದ ವೈದ್ಯಕೀಯ ಆಮ್ಲಜನಕದ ಉತ್ಪತ್ತಿಯಾಗುತ್ತಿತ್ತು. ಈಗ ಅದು ಶೇ 10 ಕ್ಕಿಂತಲೂ ಹೆಚ್ಚಾಗಿ ಪ್ರತಿದಿನಕ್ಕೆ 9500 ಮೆಟ್ರಿಕ್ ಟನ್ ನಷ್ಟು ಉತ್ಪಾದನೆಯಾಗುತ್ತಿದೆ. ಈ ಆಮ್ಲಜನಕವನ್ನು ನಮ್ಮ ಯೋಧರು ದೇಶದ ದೂರದ ಪ್ರದೇಶಗಳಿಗೆ ತಲುಪಿಸುತ್ತಿದ್ದಾರೆ.
ನನ್ನ ಪ್ರಿಯ ದೇಶಬಾಂಧವರೆ, ಆಮ್ಲಜನಕ ತಲುಪಿಸುವಲ್ಲಿ ದೇಶದಲ್ಲಿ ಎಷ್ಟೆಲ್ಲ ಪ್ರಯತ್ನಗಳು ನಡೆಯುತ್ತಿವೆ. ಎಷ್ಟೊಂದು ಜನರು ಕೈಜೋಡಿಸುತ್ತಿದ್ದಾರೆ, ನಾಗರಿಕನ ಮಟ್ಟದಲ್ಲಿ ಈ ಎಲ್ಲ ಕೆಲಸಗಳು ಪ್ರೇರಣಾದಾಯಕವಾಗಿವೆ. ಒಂದು ತಂಡದ ರೂಪದಲ್ಲಿ ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ನನಗೆ ಬೆಂಗಳೂರಿನ ಉರ್ಮಿಳಾ ಅವರ ಪತಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದಾರೆ ಮತ್ತು ಅವರು ಇಷ್ಟೊಂದು ಸವಾಲುಗಳ ಮಧ್ಯೆ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ತಿಳಿಸುತ್ತಾರೆ.
ಸ್ನೇಹಿತರೆ, ಕೊರೊನಾದ ಆರಂಭದಲ್ಲಿ ದೇಶದಲ್ಲಿ ಒಂದೇ ಪರೀಕ್ಷಾ ಪ್ರಯೋಗಾಲಯವಿತ್ತು. ಆದರೆ ಇಂದು ಎರಡೂವರೆ ಸಾವಿರಕ್ಕಿಂತ ಹೆಚ್ಚು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ದಿನಕ್ಕೆ ಕೇವಲ 100 ಪರೀಕ್ಷೆಗಳು ನಡೆಯುತ್ತಿದ್ದವು ಇಂದು ದಿನಕ್ಕೆ 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ. ಇಲ್ಲಿವರೆಗೆ ದೇಶದಲ್ಲಿ 33 ಕೋಟಿಗೂ ಹೆಚ್ಚು ಮಾದರಿ ಪರೀಕ್ಷೆ ನಡೆಸಲಾಗಿದೆ. ಇಂಥ ಸ್ನೇಹಿತರಿಂದಲೇ ಇಷ್ಟೊಂದು ಅಗಾಧ ಕೆಲಸ ಸಾಧ್ಯವಾಗುತ್ತಿದೆ. ಮುಂಚೂಣಿ ಕಾರ್ಯಕರ್ತರು ಮಾದರಿ ಸಂಗ್ರಹದ ಕೆಲಸದಲ್ಲಿ ತೊಡಗಿದ್ದಾರೆ. ಸೋಂಕಿತರ ಮಧ್ಯೆ ಹೋಗುವುದು, ಅವರ ಮಾದರಿ ಸಂಗ್ರಹಿಸುವುದು ಎಂಥ ದೊಡ್ಡ ಸೇವೆ ಅಲ್ಲವೆ. ತಮ್ಮ ಸುರಕ್ಷತೆಗಾಗಿ ಈ ಸ್ನೇಹಿತರು ಇಂಥ ಬಿಸಿಲಿನ ತಾಪದಲ್ಲಿಯೂ ನಿರಂತರವಾಗಿ ಪಿಪಿಇ ಕಿಟ್ ಧರಿಸಬೇಕಾಗಿರುತ್ತದೆ. ತದನಂತರ ಮಾದರಿ ಪ್ರಯೋಗಾಲಯಕ್ಕೆ ತಲುಪುತ್ತದೆ. ಆದ್ದರಿಂದಲೇ ನಾನು ನಿಮ್ಮ ಸಲಹೆ ಸೂಚನೆಗಳನ್ನು ಓದುವಾಗ ಈ ಸ್ನೇಹಿತರ ಪ್ರಸ್ತಾಪ ಮಾಡಬೇಕೆಂದು ನಿರ್ಧರಿಸಿದೆ. ಇವರ ಅನುಭವದಿಂದ ನಮಗೂ ಬಹಳಷ್ಟು ಕಲಿಯಲು ಸಿಗುತ್ತದೆ. ಹಾಗಾದರೆ ಬನ್ನಿ ದೆಹಲಿಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿರುವ ನಮ್ಮ ಸ್ನೇಹಿತ ಪ್ರಕಾಶ್ ಕಾಂಡ್ಪಾಈಲ್ ಅವರೊಂದಿಗೆ ಮಾತನಾಡೋಣ.
ಮೋದಿ - ಪ್ರಕಾಶ್ಅವರೇ ನಮಸ್ಕಾರ
ಪ್ರಕಾಶ್- ಗೌರವಾದರಣೀಯ ಪ್ರಧಾನಮಂತ್ರಿಯವರೇ ನಮಸ್ಕಾರ
ಮೋದಿ - ಪ್ರಕಾಶ್ಅವರೆ, ಎಲ್ಲಕ್ಕಿಂತ ಮೊದಲು ನೀವು ಮನ್ ಕಿ ಬಾತ್ ನ ನಮ್ಮ ಎಲ್ಲಾ ಶ್ರೋತೃಗಳಿಗೆ ನಿಮ್ಮ ಬಗ್ಗೆ ತಿಳಿಸಿಕೊಡಿ. ನೀವು ಎಷ್ಟು ಕಾಲದಿಂದ ಈ ಕೆಲಸ ಮಾಡುತ್ತಿರುವಿರಿ ಮತ್ತು ಕೊರೋನಾದ ಸಮಯದಲ್ಲಿ ನಿಮ್ಮ ಅನುಭವ ಹೇಗಿದೆ, ಏಕೆಂದರೆ ದೇಶದ ಇಂತಹ ಜನರಿಗೆ ಈ ರೀತಿಯಲ್ಲಿ ಇದು ಟಿವಿಯಲ್ಲಿ ಕಾಣಿಸುವುದಿಲ್ಲ ಅಥವಾ ದಿನಪತ್ರಿಕೆಗಳಲ್ಲಿ ಕಂಡುಬರುವುದಿಲ್ಲ. ಆದರೂ ಕೂಡಾ ಓರ್ವ ಋಷಿಯ ರೀತಿಯಲ್ಲಿ ಲ್ಯಾಬ್ ನಲ್ಲಿದ್ದು ಕೊಂಡು ಕೆಲಸ ಮಾಡುತ್ತಿರುವಿರಿ. ನೀವು ಈ ಕುರಿತು ಹೇಳಿದಾಗ, ದೇಶದಲ್ಲಿ ಯಾವ ರೀತಿಯಲ್ಲಿ ಕೆಲಸ ನಡೆಯುತ್ತಿದೆ ಎನ್ನುವ ಕುರಿತು ದೇಶವಾಸಿಗಳಿಗೆ ತಿಳಿದುಬರುತ್ತದೆ.
ಪ್ರಕಾಶ್- ನಾನು ದೆಹಲಿ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ Institute of Liver and Biliary Sciences ಹೆಸರಿನ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಆರೋಗ್ಯ-ಕ್ಷೇತ್ರದ ಅನುಭವ 22 ವರ್ಷಗಳದ್ದು. ಐಎಲ್ ಬಿ ಎಸ್ ಗಿಂತ ತ ಮೊದಲು ಕೂಡಾ ನಾನು ದೆಹಲಿಯ ಅಪೋಲೋ ಆಸ್ಪತ್ರೆ, ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆ ರೋಟರ್ ಬ್ಲಡ್ ಬ್ಯಾಂಕ್ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಸರ್, ನಾನು ಎಲ್ಲಾ ಜಾಗದಲ್ಲೂ ರಕ್ತ-ಕೋಶ ವಿಭಾಗದಲ್ಲಿ ನನ್ನ ಸೇವೆ ಸಲ್ಲಿಸಿದ್ದೇನೆ, ಆದರೆ ಕಳೆದ ವರ್ಷ 2020 ರ ಏಪ್ರಿಲ್ 1 ರಿಂದ ನಾನು ILBS Virology Department ಆಧರಿತ Covid testing lab ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಸ್ಸಂದೇಹವಾಗಿ, ಕೋವಿಡ್ ಮಹಾಮಾರಿಯಿಂದಾಗಿ ಆರೋಗ್ಯ ಮತ್ತು ಆರೋಗ್ಯ ಸಂಬಂಧಿತ ಎಲ್ಲಾ ಸಾಧನ- ಸಂಪನ್ಮೂಲಗಳ ಮೇಲೆ ಅತ್ಯಧಿಕ ಒತ್ತಡ ಬಿತ್ತು, ಆದರೆ ಈ ಸಂಘರ್ಷದ ಅವಧಿಯನ್ನು ನಾನು ನಿಜವಾದ ಅರ್ಥದಲ್ಲಿ ಒಂದು ಅವಕಾಶವೆಂದು ಭಾವಿಸುತ್ತೇನೆ. ರಾಷ್ಟ್ರ, ಮಾನವೀಯತೆ, ಸಮಾಜ ನಮ್ಮಿಂದ ಅಧಿಕ ಜವಾಬ್ದಾರಿ, ಸಹಯೋಗ, ನಮ್ಮಿಂದ ಹೆಚ್ಚು ಸಾಮಥ್ರ್ಯ ನಮ್ಮಿಂದ ಹೆಚ್ಚು ದಕ್ಷತೆಯ ಪ್ರದರ್ಶನ ನಿರೀಕ್ಷಿಸುತ್ತದೆ ಮತ್ತು ಆಶಿಸುತ್ತದೆ. ಅಲ್ಲದೇ ಸರ್, ನಾವು ನಮ್ಮದೇಶದ, ಮಾನವೀಯತೆಯ, ಸಮಾಜದ ಅಪೇಕ್ಷೆ ಮತ್ತು ನಿರೀಕ್ಷೆಗೆ ಅನುಗುಣವಾಗಿ ನಮ್ಮ ಮಟ್ಟದಲ್ಲಿ ಒಂದು ಹನಿಯಷ್ಟಾದರೂ ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ, ನನಸಾಗಿಸಿದಾಗ, ಒಂದು ಹೆಮ್ಮೆಯ ಭಾವನೆ ಮೂಡುತ್ತದೆ. ನಮ್ಮ ಕುಟುಂಬದವರು ಕೂಡಾ ಭಯಭೀತರಾಗಿದ್ದಾಗ ಮತ್ತು ಅವರಿಗೆ ಸ್ವಲ್ಪ ಅಂಜಿಕೆಯುಂಟಾದಾಗ, ಅಂತಹ ಸಂದರ್ಭದಲ್ಲಿ, ಕುಟುಂಬದಿಂದ ದೂರವಾಗಿ ಗಡಿಗಳಲ್ಲಿ ವಿಷಮ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ದೇಶದರಕ್ಷಣೆ ಮಾಡುತ್ತಿರುವ ನಮ್ಮದೇಶದ ಸೈನಿಕರನ್ನು ನೆನಪಿಸಿಕೊಳ್ಳುತ್ತೇನೆ. ಅವರಿಗೆ ಹೋಲಿಸಿದಲ್ಲಿ ನಮಗಿರುವ ಅಪಾಯ ಕಡಿಮೆ, ಬಹಳವೇ ಕಡಿಮೆ. ಅವರು ಕೂಡಾ ಈ ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಒಂದು ರೀತಿಯಲ್ಲಿ ನನ್ನ ಕೆಲಸದಲ್ಲಿ ಅವರು ಕೂಡಾ ಸಹಕಾರ ನೀಡುತ್ತಾರೆ ಮತ್ತು ಈ ಆಪತ್ತಿನ ಸಮಯದಲ್ಲಿ ಸಮಾನರೂಪದಲ್ಲಿ ಅವರಿಂದ ಸಾಧ್ಯವಾಗುವಷ್ಟು ಸಹಕಾರವನ್ನು ಅವರು ನಿಭಾಯಿಸುತ್ತಾರೆ.
ಮೋದಿ - ಪ್ರಕಾಶ್ ಅವರೇ, ಒಂದೆಡೆ ಸರ್ಕಾರ ಎಲ್ಲರಿಗೂ ಹೇಳುತ್ತಿದೆ ಅಂತರ ಕಾಯ್ದುಕೊಳ್ಳಿ, ಅಂತರ ಕಾಯ್ದುಕೊಳ್ಳಿ, ಕೊರೋನಾದಲ್ಲಿ ಪರಸ್ಪರರಿಂದ ದೂರವಿರಿ ಎಂದು. ಮತ್ತು ನೀವಂತೂ ಮುಂದೆ ನಿಂತು, ಕೊರೋನಾದ ಮಾರಕಗಳ ನಡುವೆಯೇ ಇರಬೇಕಾಗುತ್ತದೆ, ಅವುಗಳ ಮುಂದಿನಿಂದಲೇ ಹಾದು ಹೋಗಬೇಕಾಗುತ್ತದೆ. ಹಾಗಿರುವಾಗ, ಇದು ಇದೊಂದು ನಿಮ್ಮನ್ನು ನೀವೇ ಜೀವನದ ಸಂಕಷ್ಟಕ್ಕೆ ದೂಡಿಕೊಳ್ಳುವಂತಹ ವಿಷಯವಾಗಿರುತ್ತದೆ, ಹೀಗಾಗಿ ಕುಟುಂಬದವರಿಗೆ ಚಿಂತೆಯಾಗುವುದು ಸಹಜವೇ ಆಗಿದೆ. ಆದರೂ ಸಹ, ಈ lab technician ನ ಕೆಲಸ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ. ಮತ್ತು ಇಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಎರಡನೆಯದಾಗಿದೆ ಕೆಲಸದ ಗಂಟೆಗಳು ಕೂಡಾ ಹೆಚ್ಚಾಗಿರಬಹುದಲ್ಲವೇ? ರಾತ್ರಿಗಳನ್ನು ಪ್ರಯೋಗಾಲಯದಲ್ಲೇ ಕಳೆಯಬೇಕಾಗುತ್ತದಲ್ಲವೇ? ಏಕೆಂದರೆ ಇಷ್ಟೊಂದು ಕೋಟಿ ಜನರ ಟೆಸ್ಟಿಂಗ್ ನಡೆಯುತ್ತಿರುವಾಗ ಕೆಲಸದ ಹೊರೆ ಕೂಡಾ ಹೆಚ್ಚಾಗಿರಬಹುದಲ್ಲವೇ? ಆದರೆ ನಿಮ್ಮ ಸುರಕ್ಷತೆಗಾಗಿ ಕೂಡಾ ನೀವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೀರೋ ಅಥವಾ ತೆಗೆದುಕೊಳ್ಳುವುದಿಲ್ಲವೋ?
ಪ್ರಕಾಶ್-ಖಂಡಿತವಾಗಿಯೂ ತೆಗೆದುಕೊಳ್ಳುತ್ತೇವೆ ಸರ್. ನಮ್ಮ ILBS ನಲ್ಲಿರುವ ಪ್ರಯೋಗಾಲಯ, ಡಬ್ಲ್ಯು ಹೆಚ್ ಓ (WHO) ನಿಂದ ಮಾನ್ಯತೆ ಪಡೆದುಕೊಂಡಿದೆ. ಆದ್ದರಿಂದಎಲ್ಲಾ ಶಿಷ್ಟಾಚಾರಗಳು ಅಂತರರಾಷ್ಟ್ರೀಯ ಪ್ರಮಾಣದ್ದಾಗಿವೆ, ನಾವು ಲ್ಯಾಬ್ ನಲ್ಲಿ ಮೂರು-ಸ್ತರದ, ನಮ್ಮ ಉಡುಪನ್ನು ಧರಿಸಿಕೊಂಡು ನಮ್ಮ ಕೆಲಸ ಮಾಡುತ್ತೇವೆ. ಮತ್ತು ಅದಕ್ಕೆ ಪೂರ್ಣ discarding, labelling ಮತ್ತು testing ಸಂಬಂಧಿತ ಪೂರ್ಣ ಶಿಷ್ಟಾಚಾರವಿದ್ದು, ಆ ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ಸರ್ ಪರಮಾತ್ಮನ ಅನುಗ್ರಹದಿಂದ ನನ್ನ ಕುಟುಂಬ ಮತ್ತು ನನ್ನ ಪರಿಚಯಸ್ಥರಲ್ಲಿ ಹೆಚ್ಚಿನ ಮಂದಿ ಇದುವರೆಗೂ ಈ ಸಾಂಕ್ರಾಮಿಕಕ್ಕೆ ತುತ್ತಾಗಿಲ್ಲ. ಒಂದು ವಿಷಯವೆಂದರೆ ನೀವು ಮುನ್ನೆಚ್ಚರಿಕೆ ವಹಿಸಿದಲ್ಲಿ, ಮತ್ತು ಸಹನೆಯಿಂದ ಇದ್ದಲ್ಲಿ, ನೀವು ಇದರಿಂದ ಸ್ವಲ್ಪಮಟ್ಟಿಗೆ ತಪ್ಪಿಸಿಕೊಳ್ಳಬಹುದು.
ಮೋದಿ - ಪ್ರಕಾಶ್ ಅವರೆ, ನಿಮ್ಮಂತಹ ಸಾವಿರಾರು ಜನರು ಕಳೆದ ಒಂದು ವರ್ಷದಿಂದ ಲ್ಯಾಬ್ ನಲ್ಲಿ ಕುಳಿತಿದ್ದಾರೆ ಮತ್ತು ಇಷ್ಟೊಂದು ಶ್ರಮಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ದೇಶ ಇದನ್ನು ಅರ್ಥ ಮಾಡಿಕೊಳ್ಳುತ್ತಿದೆ. ಆದರೆ ಪ್ರಕಾಶ್ ಅವರೆ, ನಾನು ನಿಮ್ಮ ಮೂಲಕ ನಿಮ್ಮ ಕಾರ್ಯಕ್ಷೇತ್ರದ ಎಲ್ಲಾ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತಿದ್ದೇನೆ. ದೇಶವಾಸಿಗಳ ಪರವಾಗಿ ಧನ್ಯವಾದ ಹೇಳುತ್ತಿದ್ದೇನೆ ಮತ್ತು ನೀವು ಆರೋಗ್ಯದಿಂದಿರಿ, ನಿಮ್ಮ ಕುಟುಂಬ ಆರೋಗ್ಯದಿಂದಿರಲಿ. ನನ್ನ ಅನೇಕಾನೇಕ ಶುಭಾಶಯಗಳು.
ಪ್ರಕಾಶ್-ಧನ್ಯವಾದ ಪ್ರಧಾನ ಮಂತ್ರಿಗಳೇ. ನನಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಬಹಳ ಕೃತಜ್ಞನಾಗಿದ್ದೇನೆ.
ಮೋದಿ -ಧನ್ಯವಾದ ಸೋದರಾ.
ಸ್ನೇಹಿತರೆ, ಒಂದು ರೀತಿಯಲ್ಲಿ ನಾನು ಸೋದರ ಪ್ರಕಾಶ್ ಅವರೊಂದಿಗೆ ಮಾತನಾಡಿದೆನಾದರೂ, ಅವರ ಮಾತಿನಲ್ಲಿ ಸಾವಿರಾರು Lab technicians ಗಳ ಸೇವೆಯ ಪರಿಮಳ ನಮ್ಮನ್ನು ತಲಪುತ್ತಿದೆ. ಈ ಮಾತುಗಳಲ್ಲಿ ಕಂಡುಬರುತ್ತಿರುವ ಸಾವಿರಾರು- ಲಕ್ಷಾಂತರ ಜನರ ಸೇವಾಭಾವನೆಯು ನಮ್ಮೆಲ್ಲರಿಗೂ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಎಷ್ಟೊಂದು ಶ್ರಮ ಮತ್ತು ಸಮರ್ಪಣಾ ಭಾವದಿಂದ ಸೋದರ ಪ್ರಕಾಶ್ ನಂತಹ ನಮ್ಮ ಸ್ನೇಹಿತರು ಕೆಲಸ ಮಾಡುತ್ತಿದ್ದಾರೋ, ಅಷ್ಟೇ ನಿಷ್ಠೆಯಿಂದ ಅವರ ಸಹಕಾರವು ಕೊರೋನಾ ಸೋಲಿಸಲು ನಮಗೆ ಬಹಳ ಸಹಾಯ ಮಾಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಈಗಷ್ಟೇ ನಮ್ಮ `Corona Warriors' ಬಗ್ಗೆ ಚರ್ಚಿಸುತ್ತಿದ್ದೆವು. ಕಳೆದ ಒಂದೂವರೆ ವರ್ಷದಲ್ಲಿ ನಾವು ಇವರುಗಳ ಅನೇಕ ಸಮರ್ಪಣೆ ಮತ್ತು ಪರಿಶ್ರಮವನ್ನು ನೋಡಿದ್ದೇವೆ. ಆದರೆ ಈ ಹೋರಾಟದಲ್ಲಿದೇಶದ ಅನೇಕ ಕ್ಷೇತ್ರಗಳ ಅನೇಕ Warriors ಗಳ ಪಾತ್ರ ಕೂಡಾ ಬಹಳ ದೊಡ್ಡದಿದೆ. ಯೋಚಿಸಿ ನೋಡಿ, ನಮ್ಮ ದೇಶದ ಮೇಲೆ ಇಷ್ಟು ದೊಡ್ಡ ಸಂಕಟ ಬಂದೊದಗಿದೆ, ಇದರ ಪರಿಣಾಮ ದೇಶದ ಪ್ರತಿಯೊಂದು ವ್ಯವಸ್ಥೆಯ ಮೇಲೂ ಉಂಟಾಗಿದೆ. ಕೃಷಿ-ವ್ಯವಸ್ಥೆಯು ಈ ದಾಳಿಯಿಂದ ಸಾಕಷ್ಟು ಪ್ರಮಾಣದಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡಿದೆ. ಕೇವಲ ಸುರಕ್ಷಿತವಾಗಿ ಮಾತ್ರವಲ್ಲ, ಪ್ರಗತಿಯನ್ನು ಕೂಡಾ ಸಾಧಿಸಿದೆ, ಮುಂದೆ ಸಾಗಿದೆ ಕೂಡಾ. ಈ ಮಹಾಮಾರಿಯ ಕಾಲದಲ್ಲಿ ಕೂಡಾ ನಮ್ಮ ರೈತರು ದಾಖಲೆಯ ಉತ್ಪಾದನೆ ಮಾಡಿದ್ದಾರೆಂದು ನಿಮಗೆ ಗೊತ್ತೇ? ರೈತರು ದಾಖಲೆಯ ಉತ್ಪಾದನೆ ಮಾಡಿದ್ದಾರೆ, ಹೀಗಾಗಿ ದೇಶ ಈ ಬಾರಿ ದಾಖಲೆಯ ಖರೀದಿ ಕೂಡಾ ಮಾಡಿದೆ. ಈ ಬಾರಿ ಅನೇಕ ಪ್ರದೇಶಗಳಲ್ಲಂತೂ ಸಾಸಿವೆಗಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಗಿಂತಲೂ ಹೆಚ್ಚಿನ ಬೆಲೆ ದೊರೆತಿದೆ. ದಾಖಲೆಯ ಆಹಾರ ಧಾನ್ಯಗಳ ಉತ್ಪಾದನೆ ಕಾರಣದಿಂದಾಗಿಯೇ ನಮ್ಮದೇಶ ಪ್ರತಿಯೊಬ್ಬ ದೇಶವಾಸಿಗೂ ಬೆಂಬಲ ನೀಡಲು ಸಾಧ್ಯವಾಗಿದೆ. ಇಂದು ಈ ಬಿಕ್ಕಟ್ಟಿನ ಸಮಯದಲ್ಲಿ 80 ಕೋಟಿ ಬಡವರಿಗೆ ಉಚಿತ ಪಡಿತರ ಲಭ್ಯವಾಗುವಂತೆ ಮಾಡಲಾಗುತ್ತಿದ್ದು, ಬಡವನ ಮನೆಯಲ್ಲಿ ಒಲೆ ಹಚ್ಚದ ದಿನ ಎಂದಿಗೂ ಬಾರದಂತೆ ಮಾಡಲಾಗುತ್ತಿದೆ.
ಸ್ನೇಹಿತರೆ, ಇಂದು ನಮ್ಮ ದೇಶದ ರೈತರು, ಅನೇಕ ಕ್ಷೇತ್ರಗಳಲ್ಲಿ ಹೊಸ ವ್ಯವಸ್ಥೆಗಳ ಪ್ರಯೋಜನ ಪಡೆದು ಅದ್ಭುತಗಳನ್ನು ಮಾಡಿ ತೋರಿಸುತ್ತಿದ್ದಾರೆ. ಉದಾಹರಣೆಗೆ ಅಗರ್ತಲಾದ ರೈತರನ್ನೇ ನೋಡಿ! ಈ ರೈತರು ಬಹಳ ಉತ್ತಮವಾದ ಹಲಸಿನ ಹಣ್ಣು ಬೆಳೆಯುತ್ತಾರೆ. ಇದರ ಬೇಡಿಕೆ ದೇಶ ವಿದೇಶಗಳಲ್ಲೂ ಇರಬಹುದು, ಆದ್ದರಿಂದ ಈ ಬಾರಿ ಅಗರ್ತಲಾದ ರೈತರು ಹಲಸಿನ ಹಣ್ಣನ್ನು ರೈಲಿನ ಮೂಲಕ ಗುವಾಹಟಿವರೆಗೂ ತಂದರು. ಗುವಾಹಟಿಯಿಂದ ಈ ಹಲಸನ್ನು ಲಂಡನ್ ಗೆ ಕಳುಹಿಸುತ್ತಿದ್ದಾರೆ. ಹಾಗೆಯೇ ಬಿಹಾರದ `ಶಾಹಿ ಲೀಚಿ' ಹೆಸರನ್ನೂ ಕೇಳಿರಬಹುದು. ಇದರ ಗುರುತು ಬಲಿಷ್ಟವಾಗಿರಬೇಕೆಂದು ಮತ್ತು ರೈತರಿಗೆ ಹೆಚ್ಚು ಲಾಭದೊರೆಯಬೇಕೆಂದು, 2018 ರಲ್ಲಿ ಸರ್ಕಾರವು ಶಾಹಿ ಲೀಚಿಗೆ GI TAG ನೀಡಿತ್ತು. ಈ ಬಾರಿ ಬಿಹಾರದ ಈ ಶಾಹಿ ಲಿಚಿಯನ್ನು ಕೂಡಾ ವಿಮಾನದಲ್ಲಿ ಲಂಡನ್ಗೆ ಕಳುಹಿಸಿಕೊಡಲಾಗಿದೆ. ಪೂರ್ವದಿಂದ ಪಶ್ಚಿಮ, ಉತ್ತರದಿಂದ ದಕ್ಷಿಣಕ್ಕೆ ನಮ್ಮ ದೇಶವು ಇಂತಹ ವಿಶಿಷ್ಟ ರುಚಿ ಮತ್ತು ಉತ್ಪನ್ನಗಳಿಂದ ತುಂಬಿದೆ. ದಕ್ಷಿಣ ಭಾರತದಲ್ಲಿ, ವಿಜಯನಗರದ ಮಾವಿನ ಹಣ್ಣಿನ ಬಗ್ಗೆ ನೀವು ಖಂಡಿತಾ ಕೇಳಿರುತ್ತೀರಲ್ಲವೇ? ಈ ಹಣ್ಣನ್ನು ತಿನ್ನಬೇಕೆಂದು ಯಾರು ಬಯಸುವುದಿಲ್ಲ ಹೇಳಿ. ಆದ್ದರಿಂದ, ಈಗ ನೂರಾರು ಟನ್ ವಿಜಯನಗರದ ಮಾವಿನ ಹಣ್ಣನ್ನು ಕಿಸಾನ್-ರೈಲು ದೆಹಲಿಗೆ ತಲುಪಿಸುತ್ತಿದೆ. ದೆಹಲಿ ಮತ್ತು ಉತ್ತರ ಭಾರತದ ಜನರಿಗೆ ವಿಜಯನಗರದ ಮಾವಿನ ಹಣ್ಣು ಸವಿಯಲು ದೊರೆಯುತ್ತದೆ ಮತ್ತು ರೈತರಿಗೆ ಉತ್ತಮ ಆದಾಯವೂ ದೊರೆಯುತ್ತದೆ. ಕಿಸಾನ್-ರೈಲ್ ಈಗಿನವರೆಗೂ ಹತ್ತಿರ-ಹತ್ತಿರ 2 ಲಕ್ಷಟನ್ ಉತ್ಪನ್ನವನ್ನು ಸಾಗಿಸಿದೆ. ಈಗ ಹಣ್ಣು, ತರಕಾರಿಗಳು, ಬೇಳೆಕಾಳುಗಳನ್ನು ದೇಶದ ದೂರದೂರದ ಪ್ರದೇಶಗಳಿಗೆ ಬಹಳ ಕಡಿಮೆ ಖರ್ಚಿನಲ್ಲಿ ಕಳುಹಿಸಿಕೊಡಲು ರೈತರಿಗೆ ಸಾಧ್ಯವಾಗುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 30 ರಂದು ನಾವು ಮನದ ಮಾತು ಆಡುತ್ತಿದ್ದೇವೆ ಮತ್ತು ಕಾಕತಾಳೀಯವೆಂಬಂತೆ ಇದು ಸರ್ಕಾರದ 7 ವರ್ಷಗಳು ಪೂರ್ಣಗೊಳ್ಳುವ ಸಮಯವಾಗಿದೆ. ಈ ವರ್ಷಗಳಲ್ಲಿ, ದೇಶವು 'ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ, ಎಲ್ಲರ-ವಿಶ್ವಾಸ' ಮಂತ್ರವನ್ನು ಅನುಸರಿಸುತ್ತಿದೆ. ದೇಶದ ಸೇವೆಯಲ್ಲಿ ನಾವೆಲ್ಲರೂ ಪ್ರತಿಕ್ಷಣವೂ ಸಮರ್ಪಣಾ ಭಾವದೊಂದಿಗೆ ಕೆಲಸ ಮಾಡಿದ್ದೇವೆ. ಅನೇಕ ಸ್ನೇಹಿತರು ನನಗೆ ಪತ್ರಗಳನ್ನು ಬರೆದು ಕಳುಹಿಸಿದ್ದಾರೆ ಮತ್ತು 'ಮನ್ ಕಿ ಬಾತ್' ನಲ್ಲಿ, ನಮ್ಮ 7 ವರ್ಷಗಳ ಪಯಣದ ಬಗ್ಗೆಯೂ ಚರ್ಚಿಸಬೇಕುಎಂದು ಕೇಳಿದ್ದಾರೆ. ಸ್ನೇಹಿತರೇ, ಈ 7 ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಿದರೂ ಅದು ದೇಶದ್ದಾಗಿದೆ, ದೇಶವಾಸಿಗಳದ್ದಾಗಿದೆ. ಈ ವರ್ಷಗಳಲ್ಲಿ ನಾವು ರಾಷ್ಟ್ರೀಯ ಹೆಮ್ಮೆಯ ಅನೇಕ ಕ್ಷಣಗಳನ್ನು ಒಟ್ಟಿಗೆ ಅನುಭವಿಸಿದ್ದೇವೆ. ಈಗ ಭಾರತವು ಇತರ ದೇಶಗಳ ಚಿಂತನೆಯ ಪ್ರಕಾರ ಮತ್ತು ಅವರ ಒತ್ತಡದಂತೆ ನಡೆಯುವುದಿಲ್ಲ, ತನ್ನ ಮನೋ ನಿಶ್ಚಯದಂತೆ ನಡೆಯುತ್ತದೆ ಎನ್ನುವುದನ್ನು ಗಮನಿಸಿದಾಗ ನಮ್ಮೆಲ್ಲರಿಗೂ ಹೆಮ್ಮೆಯೆನಿಸುತ್ತದೆ. ನಮ್ಮ ವಿರುದ್ಧ ಸಂಚು ರೂಪಿಸುವವರಿಗೆ ಭಾರತ ಈಗ ಸೂಕ್ತ ಉತ್ತರವನ್ನು ನೀಡುತ್ತದೆ ಎಂದು ನಾವು ನೋಡಿದಾಗ, ನಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಭಾರತ ರಾಜಿ ಮಾಡಿಕೊಳ್ಳದಿದ್ದಾಗ, ನಮ್ಮ ಸೇನಾಪಡೆಗಳ ಬಲ ಹೆಚ್ಚಾದಾಗ, ಹೌದು, ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ನಮಗೆ ಭಾಸವಾಗುತ್ತದೆ.
ಸ್ನೇಹಿತರೆ, ನನಗೆ ದೇಶವಾಸಿಗಳಿಂದ ದೇಶದ ಮೂಲೆ ಮೂಲೆಗಳಿಂದ ಸಂದೇಶ, ಪತ್ರಗಳು ಬರುತ್ತವೆ. 70 ವರ್ಷಗಳ ನಂತರ ತಮ್ಮ ಗ್ರಾಮದಲ್ಲಿ ಮೊದಲ ಬಾರಿಗೆ ವಿದ್ಯುಚ್ಛಕ್ತಿ ಬಂದಿತೆಂದು, ಅವರ ಪುತ್ರ-ಪುತ್ರಿಯರು ಬೆಳಕಿನಲ್ಲಿ, ಫ್ಯಾನ್ ಅಡಿಯಲ್ಲಿ ಕುಳಿತು ಪಾಠ ಓದುತ್ತಿದ್ದಾರೆಂದು ಎಷ್ಟೊಂದು ಜನರು ದೇಶಕ್ಕೆ ಧನ್ಯವಾದ ಹೇಳುತ್ತಾರೆ. ನಮ್ಮ ಗ್ರಾಮ ಈಗ ಸುಸಜ್ಜಿತ ರಸ್ತೆಗಳ ಮೂಲಕ ನಗರದೊಂದಿಗೆ ಸಂಪರ್ಕಿಸಲಾಗಿದೆ ಎಂದು ಎಷ್ಟೊಂದು ಜನರು ಹೇಳುತ್ತಾರೆ. ರಸ್ತೆ ನಿರ್ಮಾಣವಾದ ನಂತರ, ಮೊದಲ ಬಾರಿಗೆ ತಾವು ಕೂಡಾ ವಿಶ್ವದ ಇತರ ಭಾಗಕ್ಕೆ ಸೇರಿದವರೆಂಬ ಭಾವನೆ ಮೂಡಿತೆಂದು ಒಂದು ಬುಡಕಟ್ಟು ಪ್ರದೇಶದ ಕೆಲವು ಸ್ನೇಹಿತರು ನನಗೆ ಸಂದೇಶ ಕಳುಹಿಸಿದ್ದರೆಂದು ನನಗೆ ನೆನಪಿದೆ. ಅಂತಯೇ ಕೆಲವರು ಬ್ಯಾಂಕ್ ಖಾತೆ ತೆರೆದ ಸಂತಸ ಹಂಚಿಕೊಂಡರೆ, ಕೆಲವು ವಿವಿಧ ಯೋಜನೆಗಳ ಸಹಾಯದಿಂದ ಹೊಸ ಉದ್ಯೋಗ ಆರಂಭಿಸಿದ ಸಂತಸ ಹಂಚಿಕೊಳ್ಳುತ್ತಾರೆ. ಆ ಸಂತೋಷದಲ್ಲಿ ಭಾಗಿಯಾಗಲು ನನ್ನನ್ನೂ ಆಮಂತ್ರಿಸುತ್ತಾರೆ. `ಪ್ರಧಾನ ಮಂತ್ರಿ ಆವಾಸ್ ಯೋಜನೆ' ಮೂಲಕ ಮನೆ ದೊರೆತ ನಂತರ ಗೃಹಪ್ರವೇಶಕ್ಕೆ ಬರಬೇಕೆಂದು ನಮ್ಮ ದೇಶವಾಸಿಗಳಿಂದ ನನಗೆ ಆಮಂತ್ರಣ ದೊರೆಯುತ್ತಲೇ ಇರುತ್ತದೆ. ಈ 7 ವರ್ಷಗಳಲ್ಲಿ, ನಿಮ್ಮೆಲ್ಲರ ಇಂತಹ ಕೋಟ್ಯಂತರ ಸಂತಸದಲ್ಲಿ ನಾನು ಕೂಡಾ ಭಾಗಿಯಾಗಿದ್ದೇನೆ. ಈಗ ಕೆಲವೇ ದಿನಗಳಿಗೆ ಮುನ್ನ, ಹಳ್ಳಿಯೊಂದರಿಂದ ಕುಟುಂಬವೊಂದು `ಜಲ್ ಜೀವನ್ ಮಿಶನ್' ಮುಖಾಂತರ ಮನೆಯಲ್ಲಿ ಅಳವಡಿಸಲಾದ ನಲ್ಲಿಯ ಒಂದು ಫೋಟೋ ತೆಗೆದು ಕಳುಹಿಸಿಕೊಟ್ಟಿತ್ತು. ಅವರು ಆ ಫೋಟೋ ಅಡಿಯಲ್ಲಿ ಹೀಗೆಂದು ಬರೆದಿದ್ದರು? `ನನ್ನ ಗ್ರಾಮದ ಜೀವನಾಧಾರ' ಹೀಗೆ ಎಷ್ಟೊಂದು ಕುಟುಂಬಗಳಿವೆ. ಸ್ವಾತಂತ್ರ್ಯ ದೊರೆತ 7 ದಶಕಗಳಲ್ಲಿ ನಮ್ಮ ದೇಶದ ಕೇವಲ ಮೂರೂವರೆ ಕೋಟಿ ಗ್ರಾಮದ ಮನೆಗಳಲ್ಲಿ ಮಾತ್ರಾ ನೀರಿನ ಸಂಪರ್ಕವಿತ್ತು. ಆದರೆ ಕಳೆದ 21 ತಿಂಗಳುಗಳಲ್ಲೇ, ಎಲ್ಲಾ ನಾಲ್ಕೂವರೆ ಕೋಟಿ ಮನೆಗಳಿಗೆ ಶುದ್ಧ ನೀರಿನ ಸಂಪರ್ಕ ಕಲ್ಪಿಸಲಾಯಿತು. ಇವುಗಳಲ್ಲಿ 15 ತಿಂಗಳುಗಳಂತೂ ಕೊರೋನಾ ಕಾಲವಾಗಿತ್ತು. ಇದೇ ರೀತಿಯಲ್ಲಿ ಆಯುಷ್ಮಾನ್ ಯೋಜನೆಯಿಂದ ಕೂಡಾ ದೇಶದಲ್ಲಿ ಹೊಸ ಭರವಸೆ ಮೂಡಿದೆ. ಬಡವನೊಬ್ಬ ಉಚಿತ ಚಿಕಿತ್ಸೆಯಿಂದ ಗುಣಮುಖನಾಗಿ ಮನೆಗೆ ಹಿಂದಿರುಗಿ ಬಂದಾಗ ಆತನಿಗೆ ಹೊಸ ಜೀವನ ದೊರೆತಂತೆ ಭಾಸವಾಗುತ್ತದೆ. ದೇಶ ತನ್ನೊಂದಿಗಿದೆ ಎಂಬ ವಿಶ್ವಾಸ ಆತನಲ್ಲಿ ಮೂಡುತ್ತದೆ. ಇಂತಹ ಎಷ್ಟೊಂದು ಕುಟುಂಬಗಳ ಆಶೀರ್ವಾದ, ಕೋಟ್ಯಂತರ ಮಾತೆಯರ ಆಶೀರ್ವಾದ ಪಡೆದು ನಮ್ಮದೇಶ ಬಲಿಷ್ಟವಾಗಿ, ಅಬಿವೃದ್ಧಿಯ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ.
ಸ್ನೇಹಿತರೆ, ಈ 7 ವರ್ಷಗಳಲ್ಲಿ, ಭಾರತವು ` ಡಿಜಿಟಲ್ ಪಾವತಿ ಮೂಲಕ ಕೊಡು-ಪಡೆಯುವಲ್ಲಿ (ಕೊಡುಕೊಳ್ಳುವಿಕೆಯಲ್ಲಿ)' ವಿಶ್ವಕ್ಕೆ ಹೊಸ ದಿಕ್ಕು ತೋರುವ ಕೆಲಸ ಮಾಡಿದೆ. ಇಂದು ಯಾವುದೇ ಸ್ಥಳದಿಂದಲೂ, ಬಹಳ ಸುಲಭವಾಗಿ ನೀವು ಕ್ಷಣ ಮಾತ್ರದಲ್ಲಿ ಡಿಜಿಟಲ್ ಪಾವತಿ ಮಾಡಿಬಿಡುತ್ತೀರಿ, ಕೊರೋನಾದ ಈ ಸಮಯದಲ್ಲಿ ಕೂಡಾ ಬಹಳ ಉಪಯುಕ್ತವೆಂದು ಸಾಬೀತಾಗುತ್ತಿದೆ. ಇಂದು ದೇಶವಾಸಿಗಳಲ್ಲಿ ಸ್ವಚ್ಛತೆಯ ಬಗ್ಗೆ ಗಂಬೀರತೆ ಮತ್ತು ಜಾಗರೂಕತೆ ಹೆಚ್ಚಾಗುತ್ತಿದೆ. ನಾವು ದಾಖಲೆಯ ಸಂಖ್ಯೆಯ ಉಪಗ್ರಹ ಕೂಡಾ ಯೋಜಿಸುತ್ತಿದ್ದೇವೆ ಮತ್ತು ದಾಖಲೆಯ ರಸ್ತೆಗಳನ್ನು ಕೂಡಾ ನಿರ್ಮಿಸುತ್ತಿದ್ದೇವೆ. ಈ 7 ವರ್ಷಗಳಲ್ಲಿ ದೇಶದ ಅನೇಕ ಹಳೆಯ ವಿವಾದಗಳನ್ನು ಕೂಡಾ ಸಂಪೂರ್ಣ ಶಾಂತಿ ಮತ್ತು ಸೌಹಾರ್ದದೊಂದಿಗೆ ಬಗೆಹರಿಸಲಾಗಿದೆ. ಈಶಾನ್ಯದಿಂದ ಕಾಶ್ಮೀರದವರೆಗೂ ಶಾಂತಿ ಮತ್ತು ಅಭಿವೃದ್ಧಿಯ ಒಂದು ಹೊಸ ಭರವಸೆ ಮೂಡಿದೆ. ಸ್ನೇಹಿತರೆ, ದಶಕಗಳಿಂದ ಆಗಿರದಂತಹ ಈ ಕೆಲಸಗಳು ಈ 7 ವರ್ಷಗಳಲ್ಲಿ ಹೇಗಾಯಿತೆಂದು ನೀವು ಯೋಚಿಸಿರುವಿರಾ? ಇವೆಲ್ಲವೂ ಹೇಗಾಯಿತೆಂದರೆ ಈ 7 ವರ್ಷಗಳಲ್ಲಿ ನಾವು ಸರ್ಕಾರ ಮತ್ತು ಜನತೆಗಿಂತ ಹೆಚ್ಚಾಗಿ ಒಂದು ದೇಶವಾಗಿ ಕೆಲಸ ಮಾಡಿದ್ದೇವೆ, ಒಂದು ತಂಡದಂತೆ ಕೆಲಸ ಮಾಡಿದ್ದೇವೆ, `ಟೀಂಇಂಡಿಯಾ' ರೂಪದಲ್ಲಿ ಕೆಲಸ ಮಾಡಿದ್ದೇವೆ. ಪ್ರತಿಯೊಬ್ಬ ನಾಗರಿಕನೂ ದೇಶವನ್ನು ಮುನ್ನಡೆಸಲು ಕೆಲವು ಹೆಜ್ಜೆ ಮುಂದಿಡುವ ಪ್ರಯತ್ನ ಪಟ್ಟಿದ್ದಾನೆ. ಹೌದು, ಎಲ್ಲಿ ಸಫಲತೆ ಇರುತ್ತದೆಯೋ ಅಲ್ಲಿ ಪರೀಕ್ಷೆಗಳು ಕೂಡಾ ಇರುತ್ತವೆ. ಈ 7 ವರ್ಷಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಅನೇಕ ಪರೀಕ್ಷೆಗಳನ್ನು ಎದುರಿಸಿದ್ದೇವೆ ಮತ್ತು ಪ್ರತಿಬಾರಿಯೂ ನಾವು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಕೊರೋನಾ ಮಹಾಮಾರಿಯ ರೂಪದಲ್ಲಿ, ಇಷ್ಟು ದೊಡ್ಡ ಪರೀಕ್ಷೆ ಸತತವಾಗಿ ಮುಂದುವರಿಯುತ್ತಿದೆ. ಸಂಪೂರ್ಣ ವಿಶ್ವವನ್ನೇ ತೊಂದರೆಗೆದೂಡಿದ ಬಿಕ್ಕಟ್ಟು ಇದಾಗಿದ್ದು, ಎಷ್ಟೊಂದು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ದೊಡ್ಡ ದೊಡ್ಡ ದೇಶಗಳು ಕೂಡಾ ಇದರ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ. ಈ ಜಾಗತಿಕ ಮಹಾಮಾರಿಯ ನಡುವೆಯೇ ಭಾರತ, `ಸೇವೆ ಮತ್ತು ಸಹಯೋಗ' ದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನಾವು ಮೊದಲ ಅಲೆಯಲ್ಲಿ ಕೂಡಾ ಸಂಪೂರ್ಣ ಹುರುಪಿನಿಂದ ಹೋರಾಟ ನಡೆಸಿದೆವು, ಈ ಬಾರಿಕೂಡಾ ವೈರಾಣುವಿನ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾರತ ವಿಜಯಿಯಾಗುತ್ತದೆ. `ಎರಡು ಗಜ ಅಂತರ', ಮಾಸ್ಕ್ ಧರಿಸುವ ನಿಯಮವೇ ಇರಲಿ, ಅಥವಾ ಲಸಿಕೆಯೇ ಆಗಿರಲಿ, ನಾವು ಸಡಿಲಗೊಳಿಸಬಾರದು. ಗೆಲುವಿಗೆ ಇದೇ ನಮ್ಮ ಹಾದಿಯಾಗಿದೆ. ಮುಂದಿನಬಾರಿ ನಾವು `ಮನದ ಮಾತು` ಸಂದರ್ಭದಲ್ಲಿ ಬೇಟಿಯಾದಾಗ, ದೇಶವಾಸಿಗಳ ಇನ್ನೂ ಅನೇಕ ಪ್ರೇರಣಾತ್ಮಕ ಉದಾಹರಣೆಗಳ ಕುರಿತು ಎಲ್ಲರೂ ಮಾತನಾಡೋಣ ಮತ್ತು ಹೊಸ ವಿಷಯಗಳ ಬಗ್ಗೆ ಚರ್ಚಿಸೋಣ. ನೀವು ನಿಮ್ಮ ಸಲಹೆ ಸೂಚನೆಗಳನ್ನು ನನಗೆ ಇದೇರೀತಿ ಕಳುಹಿಸುತ್ತಿರಿ. ನೀವೆಲ್ಲರೂ ಆರೋಗ್ಯವಾಗಿರಿ, ದೇಶವನ್ನು ಇದೇ ರೀತಿ ಮುನ್ನಡೆಸುತ್ತಿರಿ. ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಕೊರೊನಾ, ನಮ್ಮೆಲ್ಲರ ಧೈರ್ಯ ದುಖಃವನ್ನು ಭರಿಸುವ ಶಕ್ತಿಯನ್ನು ಪರೀಕ್ಷಿಸುತ್ತಿರುವ ಸಮಯದಲ್ಲಿ ನಿಮ್ಮೊಂದಿಗೆ ಮನದ ಮಾತನ್ನಾಡುತ್ತಿದ್ದೇನೆ. ನಮ್ಮ ಬಹಳಷ್ಟು ಪ್ರಿಯರು ಸಮಯಕ್ಕೂ ಮುನ್ನವೇ ನಮ್ಮಿಂದ ಅಗಲಿದ್ದಾರೆ. ಕೊರೊನಾದ ಮೊದಲ ಅಲೆಯ ವಿರುದ್ಧ ಯಶಸ್ವಿಯಾಗಿ ಹೋರಾಡಿ ಗೆದ್ದ ನಂತರ ದೇಶದ ವಿಶ್ವಾಸ ಹೆಚ್ಚಿತ್ತು. ಆತ್ಮ ವಿಶ್ವಾಸದಿಂದ ಕೂಡಿತ್ತು. ಆದರೆ ಈ ಬಿರುಗಾಳಿ ದೇಶವನ್ನು ತಲ್ಲಣಗೊಳಿಸಿದೆ.
ಸ್ನೇಹಿತರೆ, ಕಳೆದ ದಿನಗಳಲ್ಲಿ ಈ ಸಂಕಷ್ಟದಿಂದ ಹೊರಬರಲು ಬೇರೆ ಬೇರೆ ವಿಭಾಗದ ಪರಿಣಿತರೊಂದಿಗೆ, ತಜ್ಞರೊಂದಿಗೆ ನಾನು ಸುದೀರ್ಘ ಚರ್ಚೆ ನಡೆಸಿದ್ದೇನೆ. ನಮ್ಮ ಔಷಧೀಯ ಕ್ಷೇತ್ರದವರಾಗಲಿ, ಲಸಿಕೆ ತಯಾರಕರಾಗಲಿ, ಆಮ್ಲಜನಕ ಉತ್ಪಾದನಾ ಸಂಬಂಧಿ ಜನರಾಗಲಿ ಅಥವಾ ವೈದ್ಯಕೀಯ ಕ್ಷೇತ್ರದ ಪರಿಣಿತರಾಗಲಿ ಎಲ್ಲರೂ ಮಹತ್ವಪೂರ್ಣ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಪ್ರಸ್ತುತ ನಾವು ಈ ಹೋರಾಟದಲ್ಲಿ ಜಯಗಳಿಸಲು ತಜ್ಞರ ಮತ್ತು ವಿಜ್ಞಾನಿಗಳ ಸಲಹೆಗಳಿಗೆ ಆದ್ಯತೆ ನೀಡಬೇಕಿದೆ. ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಮುಂದುವರಿಸಲು ಭಾರತ ಸರ್ಕಾರ ಸಂಪೂರ್ಣ ಶಕ್ತಿಯೊಂದಿಗೆ ಸಿದ್ಧವಾಗಿದೆ. ರಾಜ್ಯ ಸರ್ಕಾರಗಳೂ ತಮ್ಮ ಕರ್ತವ್ಯ ನಿಭಾಯಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಿವೆ.
ಸ್ನೇಹಿತರೆ, ಈ ಸಂದರ್ಭದಲ್ಲಿ ಕೊರೊನಾ ವಿರುದ್ಧ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಬಹುದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರಿಗೆ ಈ ರೋಗದ ಬಗ್ಗೆ ಎಲ್ಲ ರೀತಿಯ ಅನುಭವಗಳಾಗಿವೆ. ನಮ್ಮೊಂದಿಗೆ ಈಗ ಮುಂಬೈಯಿಂದ ಪ್ರಸಿದ್ಧ ವೈದ್ಯರಾದ ಶಶಾಂಕ್ ಜೋಷಿ ಸಂಪರ್ಕದಲ್ಲಿದ್ದಾರೆ.
ಡಾಕ್ಟರ್ ಶಶಾಂಕ್ ಅವರಿಗೆ ಕೊರೊನಾ ಚಿಕಿತ್ಸೆ ಮತ್ತು ಇದಕ್ಕೆ ಸಂಬಂಧಿಸಿದ ಸಂಶೋಧನೆ ಕುರಿತು ಬಹಳ ಆಳವಾದ ಅನುಭವವಿದೆ. ಅವರು ‘ಇಂಡಿಯನ್ ಕಾಲೇಜ್ ಆಫ್ ಫಿಸಿಶಿಯನ್ಸ್’ ನ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬನ್ನಿ ಡಾಕ್ಟರ್ ಶಶಾಂಕ್ ಅವರೊಂದಿಗೆ ಮಾತನಾಡೋಣ
ಮೋದಿಯವರು: ಡಾಕ್ಟರ್ ಶಶಾಂಕ್ ಅವರೇ ನಮಸ್ಕಾರ
ಡಾ.ಶಶಾಂಕ್ : ನಮಸ್ಕಾರ ಸರ್
ಮೋದಿಯವರು: ಈಗ ಕೆಲ ದಿನಗಳ ಹಿಂದೆಯಷ್ಟೇ ನಿಮ್ಮೊಂದಿಗೆ ಮಾತನಾಡುವ ಅವಕಾಶ ಲಭಿಸಿತ್ತು. ನಿಮ್ಮ ವಿಚಾರಗಳಲ್ಲಿನ ಸ್ಪಷ್ಟತೆ ನನಗೆ ಬಹಳ ಇಷ್ಟವಾಯಿತು. ದೇಶದ ಸಮಸ್ತ ನಾಗರಿಕರು ನಿಮ್ಮ ವಿಚಾರಗಳನ್ನು ಅರಿಯಲಿ ಎಂದು ನನಗೆ ಅನ್ನಿಸಿತು. ಯಾವ ವಿಚಾರಗಳು ಕೇಳಿ ಬರುತ್ತಿವೆಯೋ ಅವನ್ನೇ ಒಂದು ಪ್ರಶ್ನೆಯ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಡಾ.ಶಶಾಂಕ್ ಅವರೇ ನೀವು ಹಗಲಿರುಳು ಜೀವನ ರಕ್ಷಣೆಯ ಕೆಲಸದಲ್ಲಿ ತೊಡಗಿದ್ದೀರಿ. ಎಲ್ಲಕ್ಕಿಂತ ಮೊದಲು 2 ನೇ ಅಲೆಯ ಬಗ್ಗೆ ನೀವು ಜನರಿಗೆ ಮಾಹಿತಿ ನೀಡಿ ಎಂದು ನಾನು ಬಯಸುತ್ತೇನೆ. ವೈದ್ಯಕೀಯವಾಗಿ ಇದು ಹೇಗೆ ಭಿನ್ನವಾಗಿದೆ ಮತ್ತು ಏನೇನು ಮುಂಜಾಗೃತೆಗಳನ್ನು ಕೈಗೊಳ್ಳಬೇಕು?
ಡಾ.ಶಶಾಂಕ್ : ಧನ್ಯವಾದಗಳು ಸರ್, ಈ 2 ನೇ ಅಲೆ ಬಹಳ ತೀವ್ರವಾಗಿ ಹರಡುತ್ತಿದೆ. ಮೊದಲನೇ ಅಲೆಗಿಂತಲೂ ವೇಗವಾಗಿ ವೈರಾಣು ಹರಡುತ್ತಿದೆ, ಆದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚೇತರಿಕೆ ಇದೆ ಮತ್ತು ಮೃತ್ಯು ದರ ಬಹಳ ಕಡಿಮೆ ಇದೆ ಎಂಬುದು ಒಳ್ಳೆಯ ವಿಷಯ. ಇದರಲ್ಲಿ 2-3 ವ್ಯತ್ಯಾಸಗಳಿವೆ, ಮೊದಲನೇಯದ್ದು ಯುವಜನತೆ ಮತ್ತು ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಅದರ ಲಕ್ಷಣಗಳು ಹಿಂದಿನಂತೆಯೇ ಉಸಿರಾಟದ ತೊಂದರೆ, ಒಣ ಕೆಮ್ಮು, ಜ್ವರ, ಎಲ್ಲವೂ ಇವೆ. ಆದರೆ ಅದರೊಂದಿಗೆ ರುಚಿ ಕಳೆದುಕೊಳ್ಳುತ್ತಾರೆ ಮತ್ತು ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಜನರು ಸ್ವಲ್ಪ ಭಯಭೀತರಾಗಿದ್ದಾರೆ. ಭೀತಿಗೊಳಗಾಗುವ ಅವಶ್ಯಕತೆ ಖಂಡಿತ ಇಲ್ಲ. ಶೇ 80-90 ಜನರಲಲಿ ಈ ಯಾವ ಲಕ್ಷಣಗಳು ಕಂಡುಬರುವುದಿಲ್ಲ. ಮ್ಯುಟೇಶನ್ ಎಂದು ಹೇಳುತ್ತಾರಲ್ಲವೇ ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಮ್ಯುಟೇಶನ್ ಆಗುತ್ತಲೇ ಇರುತ್ತದೆ, ನಾವು ಬಟ್ಟೆ ಬದಲಿಸಿದಂತೆ ವೈರಾಣು ತನ್ನ ಸ್ವರೂಪವನ್ನು ಬದಲಿಸುತ್ತಲೇ ಇರುತ್ತದೆ. ಆದ್ದರಿಂದ ಹೆದರುವ ಅವಶ್ಯಕತೆಯಿಲ್ಲ. ಈ ಅಲೆಯನ್ನೂ ನಾವು ದಾಟಿ ಬರಲಿದ್ದೇವೆ. ಅಲೆಗಳು ಬರುತ್ತಲೇ ಇರುತ್ತವೆ, ವೈರಾಣು ಕೂಡಾ ಬಂದು ಹೋಗುತ್ತಿರುತ್ತದೆ. ಇವೇ ಬೇರೆ ಬೇರೆ ಲಕ್ಷಣಗಳಾಗಿವೆ. ವೈದ್ಯಕೀಯವಾಗಿ ನಾವು ಸನ್ನದ್ಧರಾಗಿರಬೇಕು. 14 ರಿಂದ 21 ದಿನಗಳ ಕೋವಿಡ್ ಇರುತ್ತದೆ. ಈ ಸಮಯದಲ್ಲಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು
ಮೋದಿಯವರು: ಡಾ.ಶಶಾಂಕ್ ಅವರೇ ನಿಮ್ಮ ವಿಶ್ಲೇಷಣೆ ನನಗೂ ಬಹಳ ಆಸಕ್ತಿಕರವಾಗಿದೆ. ನನಗೆ ಬಹಳಷ್ಟು ಪತ್ರಗಳು ಬಂದಿವೆ. ಚಿಕಿತ್ಸೆ ಕುರಿತು ಜನರಲ್ಲಿ ಬಹಳ ಸಂದೇಹಗಳಿವೆ. ಕೆಲ ಔಷಧಿಗಳ ಬೇಡಿಕೆ ಹೆಚ್ಚಿದೆ. ಆದ್ದರಿಂದ ಕೋವಿಡ್ ಚಿಕಿತ್ಸೆ ಬಗ್ಗೆಯೂ ಸಹ ಖಂಡಿತ ನೀವು ತಿಳಿಸಬೇಕೆಂದು ನಾನು ಬಯಸುತ್ತೇನೆ
ಡಾ.ಶಶಾಂಕ್ : ಹಾಂ ಸರ್, ಕ್ಲಿನಿಕಲ್ ಚಿಕಿತ್ಸೆಯನ್ನು ಜನರು ಬಹಳ ತಡವಾಗಿ ಆರಂಭಿಸುತ್ತಾರೆ. ಹಾಗಾಗಿ ರೋಗ ತಂತಾನೇ ಹೊರಟುಹೋಗುತ್ತದೆ ಎಂಬ ಭರವಸೆಯಲ್ಲಿರುತ್ತಾರೆ ಮತ್ತು ಮೊಬೈಲ್ ನಲ್ಲಿ ಹರಿದಾಡುವ ಸುದ್ದಿಗಳನ್ನು ನಂಬುತ್ತಾರೆ. ಸರ್ಕಾರ ನೀಡಿದ ಸೂಚನೆಗಳನ್ನು ಪಾಲಿಸಿದರೆ ಇಂಥ ಸಂಕಷ್ಟಗಳು ಎದುರಾಗುವುದಿಲ್ಲ. ಹಾಗಾಗಿ ಕೋವಿಡ್ ಚಿಕಿತ್ಸೆ ವಿಧಾನದಲ್ಲಿ 3 ಬಗೆಯ ಹಂತಗಳಿವೆ. ಅಲ್ಪ ಅಥವಾ ಮೈಲ್ಡ್ ಕೋವಿಡ್, ಮಧ್ಯಮ ಅಥವಾ ಮಾಡರೇಟ್ ಕೋವಿಡ್ ಅಥವಾ ತೀವ್ರತರವಾದ ಕೋವಿಡ್ ಇದನ್ನು ಸಿವಿಯರ್ ಕೋವಿಡ್ ಎನ್ನುತ್ತಾರೆ. ಅಲ್ಪ ಕೋವಿಡ್ ರೋಗಿಗಳಿಗೆ ಆಕ್ಸಿಜೆನ್ ಮಾನಿಟರಿಂಗ್ ಮಾಡುತ್ತೇವೆ. ನಾಡಿ ಮಿಡಿತ, ಜ್ವರದ ಮೇಲೆ ನಿಗಾವಹಿಸುತ್ತೇವೆ. ಜ್ವರ ಹೆಚ್ಚಾಗುವಂತಿದ್ದರೆ ಕೆಲವೊಮ್ಮೆ ಪ್ಯಾರಾಸಿಟಮಾಲ್ ಔಷಧಿ ಬಳಸುತ್ತೇವೆ. ಮಾಡರೇಟ್ ಕೋವಿಡ್ ಇದ್ದಲ್ಲಿ ಅಥವಾ ತೀವ್ರತರವಾದ ಕೋವಿಡ್ ಇದ್ದಲ್ಲಿ ತಮ್ಮ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅವಶ್ಯಕ. ಸೂಕ್ತ ಮತ್ತು ಕಡಿಮೆ ದರದ ಔಷಧಿಗಳು ಲಭ್ಯವಿವೆ. ಇಂಥದ್ದರಲ್ಲಿ ಸ್ಟೆರಾಯ್ಡ್ ಗಳು ಜೀವರಕ್ಷಣೆ ಮಾಡಬಲ್ಲವು. ಇನ್ ಹೇಲರ್ಸ್ ನೀಡುತ್ತೇವೆ, ಮಾತ್ರೆಗಳನ್ನು ನೀಡಬಹುದು, ಇದರೊಟ್ಟಿಗೆ ಆಕ್ಸಿಜೆನ್ ಕೂಡ ಕೊಡಬೇಕಾಗುತ್ತದೆ. ಇದಕ್ಕೆ ಸಣ್ಣ ಪುಟ್ಟ ಚಿಕಿತ್ಸೆಗಳಿವೆ. ಆದರೆ ಒಂದು ಹೊಸ ಪ್ರಯೋಗಾತ್ಮಕ ಔಷಧಿಯೂ ಲಭ್ಯವಿದೆ. ಅದರ ಹೆಸರು ರೆಮ್ ಡೆಸಿವಿರ್. ಇದರಿಂದ ಆಸ್ಪತ್ರೆಯಲ್ಲಿ ಉಳಿಯಬೇಕಾಗುವ ಅವಧಿ 2-3 ದಿನ ಕಡಿಮೆ ಆಗುವ ಉಪಯೋಗವಿದೆ. ಉಪಯುಕ್ತತೆ ಇದೆ. ವೈದ್ಯಕೀಯ ಚಿಕಿತ್ಸೆಯಲ್ಲಿ ಸಹಾಯಕಾರಿಯಾಗಿದೆ. ಮೊದಲ 9-10 ದಿನಗಳೊಳಗೆ ನೀಡಿದಾಗ ಮಾತ್ರ ಈ ಔಷಧಿ ಕೆಲಸ ಮಾಡುತ್ತದೆ ಮತ್ತು ಇದನ್ನು 5 ದಿನ ಮಾತ್ರ ನೀಡಬೇಕಾಗುತ್ತದೆ. ರೆಮ್ ಡೆಸಿವಿರ್ ಹಿಂದೆ ಜನರು ಮುಗಿಬೀಳುತ್ತಿದ್ದಾರೆ. ಇದರ ಅವಶ್ಯಕತೆಯಿಲ್ಲ. ಈ ಔಷಧಿ ಸ್ವಲ್ಪ ಪರಿಣಾಮಕಾರಿಯಾಗಿದೆ. ಯಾರಿಗೆ ಪ್ರಾಣವಾಯು ಆಕ್ಸಿಜೆನ್ ನೀಡಲಾಗುತ್ತದೆಯೋ, ಆಸ್ಪತ್ರೆಯಲ್ಲಿ ಯಾರು ಭರ್ತಿಯಾಗುತ್ತಾರೋ ಅವರು ವೈದ್ಯರ ಸಲಹೆ ಮೇರೆಗೆ ಇದನ್ನು ತೆಗೆದುಕೊಳ್ಳಬೇಕು. ಇದನ್ನು ಎಲ್ಲರೂ ಅರಿತುಕೊಳ್ಳುವುದು ಬಹಳ ಅವಶ್ಯಕವಾಗಿದೆ. ನಾವು ಪ್ರಾಣಾಯಾಮ ಮಾಡೋಣ. ನಮ್ಮ ದೇಹದಲ್ಲಿರುವ ಶ್ವಾಸಕೋಶಗಳನ್ನು ಸ್ವಲ್ಪ ಹಿಗ್ಗಿಸೋಣ. ಹೆಪಾರಿನ್ ಎಂದು ಕರೆಯಲ್ಪಡುವ ರಕ್ತವನ್ನು ತೆಳುವಾಗಿಸುವ ಔಷಧಿಯಂಥ ಸಣ್ಣ ಪುಟ್ಟ ಔಷಧಿಗಳನ್ನು ನೀಡುವುದರಿಂದ ಶೇ 98 ರಷ್ಟು ಜನರು ಚೇತರಿಸಿಕೊಳ್ಳುತ್ತಾರೆ. ವೈದ್ಯಕೀಯ ಚಿಕಿತ್ಸೆಯನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಅವಶ್ಯಕ. ದುಬಾರಿ ಔಷಧಿಗಳ ಹಿಂದೆ ಬೀಳುವ ಅವಶ್ಯಕತೆಯಿಲ್ಲ ಸರ್. ನಮ್ಮ ಬಳಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಪ್ರಾಣವಾಯು ಆಕ್ಸಿಜೆನ್ ಲಭ್ಯವಿದೆ, ವೆಂಟಿಲೇಟರ್ ಸೌಲಭ್ಯವಿದೆ. ಎಲ್ಲವೂ ಇದೆ ಸರ್. ಈ ಔಷಧಿ ದೊರೆತಾಗ ಅದನ್ನು ಅವಶ್ಯಕತೆಯಿದ್ದವರಿಗೆ ಮಾತ್ರ ನೀಡಬೇಕು. ಇದರ ಬಗ್ಗೆ ಬಹಳಷ್ಟು ಭ್ರಮೆ ಆವರಿಸಿದೆ. ಆದ್ದರಿಂದಲೇ ನಮ್ಮ ಬಳಿ ವಿಶ್ವದ ಅತ್ಯುತ್ತಮ ಚಿಕಿತ್ಸಾ ಸೌಲಭ್ಯವಿದೆ ಎಂದು ಸ್ಪಷ್ಟೀಕರಣೆ ನೀಡಬಯಸುತ್ತೇನೆ ಸರ್. ಭಾರತದಲ್ಲಿ ಚೇತರಿಕೆ ಪ್ರಮಾಣ ಅತ್ಯಂತ ಹೆಚ್ಚಾಗಿದೆ ಎಂಬುದನ್ನು ನೀವು ನೋಡಬಹುದು. ನೀವು ಯುರೋಪ್, ಅಮೇರಿಕಕ್ಕೆ ಹೋಲಿಸಿದಲ್ಲಿ ನಮ್ಮ ಚಿಕಿತ್ಸಾ ಶಿಷ್ಠಾಚಾರದಿಂದ ರೋಗಿಗಳು ಗುಣಮುಖರಾಗುತ್ತಿದ್ದಾರೆ.
ಮೋದಿಯವರು: ಡಾ.ಶಶಾಂಕ್ ಅವರೇ ಅನಂತ ಧನ್ಯವಾದಗಳು. ನಮಗೆ ಡಾ.ಶಶಾಂಕ್ ಅವರು ನೀಡಿದ ಮಾಹಿತಿ ಬಹಳ ಅವಶ್ಯಕವಾಗಿದೆ ಮತ್ತು ಲಾಭದಾಯಕವಾಗಿದೆ.
ಸ್ನೇಹಿತರೆ, ನಿಮಗೆ ಯಾವುದೇ ಮಾಹಿತಿ ಬೇಕೆಂದಲ್ಲಿ, ಯಾವುದೇ ಅನುಮಾನಗಳಿದ್ದಲ್ಲಿ ವಿಶ್ವಾಸಾರ್ಹ ಮೂಲದಿಂದಲೇ ಮಾಹಿತಿ ಪಡೆಯಿರಿ ಎಂದು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ನಿಮ್ಮ ಕುಟುಂಬ ವೈದ್ಯರಾಗಲಿ, ಸಮೀಪದ ವೈದ್ಯರಿಂದಾಗಲಿ ಫೋನ್ ಮೂಲಕ ಸಂಪರ್ಕಿಸಿ ಸಲಹೆಗಳನ್ನು ಪಡೆಯಿರಿ. ನಮ್ಮ ವೈದ್ಯರು ಸ್ವತಃ ತಾವೇ ಜವಾಬ್ದಾರಿ ಹೊತ್ತು ಮುಂದೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದೆಷ್ಟೋ ವೈದ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮಾಹಿತಿ ಒದಗಿಸುತ್ತಿದ್ದಾರೆ. ಫೋನ್ ಮೂಲಕ, ವಾಟ್ಸಾಪ್ ಮೂಲಕ ಸಮಾಲೋಚನೆ ನಡೆಸುತ್ತಿದ್ದಾರೆ. ಹಲವಾರು ಆಸ್ಪತ್ರೆಗಳ ವೆಬ್ ಸೈಟ್ ಗಳಿವೆ ಅಲ್ಲಿ ಮಾಹಿತಿಯೂ ಲಭ್ಯ ಮತ್ತು ವೈದ್ಯರೊಂದಿಗೆ ಸಮಾಲೋಚನೆಗೂ ಅವಕಾಶವಿದೆ. ಇದು ತುಂಬಾ ಮೆಚ್ಚುಗೆಯ ವಿಷಯವಾಗಿದೆ
ನನ್ನೊಂದಿಗೆ ಶ್ರೀನಗರದಿಂದ ಡಾಕ್ಟರ್ ನಾವೀದ್ ನಜೀರ್ ಶಾ ಸಂಪರ್ಕದಲ್ಲಿದ್ದಾರೆ. ಡಾಕ್ಟರ್ ನಾವೀದ್ ಶ್ರೀನಗರದ ಒಂದು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ನಾವೀದ್ ತಮ್ಮ ಉಸ್ತುವಾರಿಯಲ್ಲಿ ಅನೇಕ ಕೊರೋನಾ ರೋಗಿಗಳನ್ನು ಗುಣಪಡಿಸಿದ್ದಾರೆ. ರಮ್ ಜಾನ್ ನ ಈ ಪವಿತ್ರ ಮಾಸದಲ್ಲಿ ಡಾ. ನಾವೀದ್ ತಮ್ಮ ಕಾರ್ಯವನ್ನೂ ನಿಭಾಯಿಸುತ್ತಿದ್ದಾರೆ ಹಾಗೂ ಅವರು ನಮ್ಮೊಂದಿಗೆ ಮಾತುಕತೆಗೆ ಸಮಯವನ್ನೂ ಮೀಸಲಿಟ್ಟಿದ್ದಾರೆ. ಬನ್ನಿ, ಅವರೊಂದಿಗೇ ಮಾತನಾಡೋಣ.
ಮೋದಿ: ಡಾ. ನಾವೀದ್ ಅವರೇ, ನಮಸ್ಕಾರ
ಡಾ.ನಾವೀದ್: ನಮಸ್ಕಾರ ಸರ್
ಮೋದಿ: ಡಾಕ್ಟರ್ ನಾವೀದ್, “ಮನದ ಮಾತು’ ಕಾರ್ಯಕ್ರಮದಲ್ಲಿ ನಮ್ಮ ಶ್ರೋತೃಗಳು ಈ ಕಠಿಣ ಕಾಲದಲ್ಲಿ ಭಯ ನಿರ್ವಹಣೆಯ ಪ್ರಶ್ನೆಯನ್ನು ಎತ್ತಿದ್ದಾರೆ. ತಾವು ತಮ್ಮ ಅನುಭವದಿಂದ ಅವರಿಗೆ ಏನು ಉತ್ತರ ನೀಡುತ್ತೀರಿ?
ಡಾ.ನಾವೀದ್: ನೋಡಿ, ಕೊರೋನಾ ಆರಂಭವಾದಾಗ ನಮ್ಮ ಸಿಟಿ ಆಸ್ಪತ್ರೆಯೇ ಕಾಶ್ಮೀರದ ಮೊಟ್ಟಮೊದಲ ಕೋವಿಡ್ ಆಸ್ಪತ್ರೆಯೆಂದು ಗುರುತಿಸಲ್ಪಟ್ಟಿತು. ವೈದ್ಯಕೀಯ ಕಾಲೇಜಿನಲ್ಲಿ ಆ ಸಮಯದಲ್ಲಿ ಒಂದು ಭಯದ ವಾತಾವರಣವಿತ್ತು. ಜನರಲ್ಲಂತೂ ಕೋವಿಡ್ ಸೋಂಕು ಯಾರಿಗಾದರೂ ಬಂದರೆ ಮರಣಶಿಕ್ಷೆಯೆಂದೇ ಪರಿಗಣಿಸುವ ಭಾವನೆಯಿತ್ತು. ಇಂಥದ್ದರಲ್ಲಿ ನಮ್ಮ ಆಸ್ಪತ್ರೆಯ ವೈದ್ಯವೃಂದ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಕೆಲಸ ಮಾಡುತ್ತಿದ್ದೆವು. ನಾವು ಈ ರೋಗಿಗಳನ್ನು ಹೇಗೆ ಎದುರಿಸಬೇಕು ಎಂದು ಅವರಲ್ಲೂ ಒಂದು ರೀತಿಯ ಆತಂಕದ ವಾತಾವರಣವಿತ್ತು. ನಮಗೆ ಸೋಂಕು ಉಂಟಾಗಬಹುದೆನ್ನುವ ಭಯ ಇರಲಿಲ್ಲ ಎಂದೇನಲ್ಲ. ಆದರೆ, ಆ ಸಮಯ ಕಳೆದಂತೆ . ಸಮರ್ಪಕವಾಗಿ ರಕ್ಷಣಾ ಸಲಕರಣೆ ಧರಿಸಿದರೆ, ನಿಯಮಗಳು, ನಿಖರವಾದ ಯೋಜನೆಯನ್ನು ಪರಿಪಾಲಿಸಿದರೆ ನಾವೂ ಸುರಕ್ಷಿತವಾಗಿ ಇರಬಹುದು. ಹಾಗೂ ಇತರ ಸಿಬ್ಬಂದಿಯೂ ಸುರಕ್ಷಿತವಾಗಿರಬಹುದು ಎಂಬುದನ್ನು ನಾವು ಮನಗಂಡೆವು. ರೋಗಿಗಳ ಕೆಲವು ಸಂಬಂಧಿಗಳು ಅನಾರೋಗ್ಯಕ್ಕೀಡಾದರು, ಅವರಿಗೆ ರೋಗದ ಯಾವ ಲಕ್ಷಣಗಳು ಇರಲಿಲ್ಲ. ಸರಿಸುಮಾರು ಶೇಕಡ 90-95ಕ್ಕೂ ಹೆಚ್ಚು ರೋಗಿಗಳು ಔಷಧಗಳಿಲ್ಲದೆಯೂ ಗುಣಮುಖರಾಗುತ್ತಿದ್ದುದನ್ನೂ ನಾವು ನೋಡಿದೆವು. ಸಮಯ ಕಳೆದಂತೆ ಜನರಲ್ಲಿ ಕೊರೋನಾ ಬಗ್ಗೆ ಇದ್ದ ಭಯ ಕಡಿಮೆಯಾಯಿತು. ಈಗ ಎರಡನೇ ಅಲೆ ನಮಗೆ ಬಂದೆರಗಿದೆ. ಈ ಸಮಯದಲ್ಲಿಯೂ ನಾವು ಭಯಪಡುವ ಅಗತ್ಯವಿಲ್ಲ. ಈ ಸಂದರ್ಭದಲ್ಲೂ ರಕ್ಷಣಾತ್ಮಕ ಮಾರ್ಗಗಳನ್ನು ಪಾಲನೆ ಮಾಡಬೇಕು. ಏನೇನು ಕೊರೋನಾ ಮಾರ್ಗಸೂಚಿಗಳಿವೆಯೋ ಅವುಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ಕೈಗಳಿಗೆ ಸ್ಯಾನಿಟೈಸರ್ ಬಳಕೆ ಮಾಡುವುದು, ಅಷ್ಟೇ ಅಲ್ಲದೆ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು, ಗುಂಪು ಸೇರುವುದನ್ನು ತಡೆಯಬೇಕು. ಇವುಗಳನ್ನು ಅನುಸರಿಸಿದರೆ ನಾವು ನಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಚೆನ್ನಾಗಿಯೇ ನಿಭಾಯಿಸಿಕೊಂಡು ಹೋಗಬಹುದು ಹಾಗೂ ಸೋಂಕಿನಿಂದ ರಕ್ಷಿಸಿಕೊಳ್ಳಲೂಬಹುದು.
ಮೋದಿ ಜಿ: ಡಾ.ನಾವೀದ್, ಲಸಿಕೆಯ ಕುರಿತಾಗಿಯೂ ಜನರಲ್ಲಿ ಹಲವಾರು ಪ್ರಶ್ನೆಗಳಿವೆ. ಲಸಿಕೆಯಿಂದ ಎಷ್ಟು ರಕ್ಷಣೆ ಸಿಗುತ್ತದೆ, ಲಸಿಕೆ ತೆಗೆದುಕೊಂಡ ಬಳಿಕ ಎಷ್ಟು ಅಸ್ವಸ್ಥರಾಗುತ್ತೇವೆ? ಈ ಬಗ್ಗೆ ಸ್ವಲ್ಪ ಹೇಳಿ, ಇದರಿಂದ ನಮ್ಮ ಕೇಳುಗರಿಗೂ ಸಾಕಷ್ಟು ಲಾಭವಾಗುತ್ತದೆ.
ಡಾ.ನಾವೀದ್: ಯಾವಾಗ ಕೊರೋನಾ ಸೋಂಕು ನಮಗೆ ಎದುರಾಯಿತೋ, ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ಕೋವಿಡ್-19 ಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲ. ಅಂದರೆ, ನಾವು ಈ ರೋಗದ ವಿರುದ್ಧ ಎರಡು ಮಾರ್ಗಗಳ ಮೂಲಕ ಮಾತ್ರ ಹೋರಾಟ ಮಾಡಬಹುದು. ಮೊದಲನೆಯದಾಗಿ, ರಕ್ಷಣಾ ವಿಧಾನಗಳನ್ನು ಪರಿಪಾಲಿಸುವುದು. ಯಾವುದೇ ಪರಿಣಾಮಕಾರಿ ಲಸಿಕೆ ನಮಗೆ ಸಿಕ್ಕರೂ ಈ ರೋಗದಿಂದ ನಮಗೆ ಮುಕ್ತಿ ದೊರೆಯುತ್ತದೆ ಎಂದು ನಾವು ಮೊದಲಿನಿಂದಲೂ ಹೇಳುತ್ತ ಬಂದಿದ್ದೇವೆ. ನಮ್ಮ ದೇಶದಲ್ಲಿ ಎರಡು ಲಸಿಕೆಗಳು ಈ ಸಮಯದಲ್ಲಿ ಲಭ್ಯ ಇವೆ. ಅವು ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್. ಇವು ನಮ್ಮಲ್ಲಿಯೇ ತಯಾರಿಸುತ್ತಿರುವ ಲಸಿಕೆಗಳು. ಇತರ ಸಂಸ್ಥೆಗಳು ಸಹ ತಮ್ಮ ಪ್ರಯೋಗಗಳನ್ನು ಮಾಡಿವೆ. ಅದರಲ್ಲಿ ಶೇ.60ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ. ನಾವು ಜಮ್ಮು ಕಾಶ್ಮೀರದ ಬಗ್ಗೆಯೇ ಹೇಳಿದರೆ, ನಮ್ಮ ಕೇಂದ್ರಾಡಳಿತ ಪ್ರದೇಶದಲ್ಲಿ ಈವರೆಗೆ 15ರಿಂದ 16 ಲಕ್ಷ ಜನ ಈ ಲಸಿಕೆ ಪಡೆದಿದ್ದಾರೆ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಬಗ್ಗೆ ಸಾಕಷ್ಟು ತಪ್ಪು ತಿಳಿವಳಿಕೆ ಅಥವಾ ಮಿಥ್ಯಗಳು ಪ್ರಚಲಿತದಲ್ಲಿವೆ. ಇಂತಿಂಥ ಅಡ್ಡ ಪರಿಣಾಮಗಳು ಇವೆ ಎಂದು ಹೇಳಲಾಗುತ್ತಿದ್ದರೂ ಇಲ್ಲಿಯವರೆಗೆ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಯಾವುದೇ ಇನ್ನಿತರ ಲಸಿಕೆ ಪಡೆದುಕೊಂಡಾಗಲೂ ಆಗುವ ಕೆಲವು ಅಡ್ಡಪರಿಣಾಮಗಳು ಮಾತ್ರ ಕಂಡುಬಂದಿವೆ. ಕೆಲವರಿಗೆ ಜ್ವರ ಬಂದಿರಬಹುದು, ಇಡೀ ದೇಹದಲ್ಲಿ ನೋವು, ಲಸಿಕೆ ಹಾಕಿಸಿಕೊಂಡ ಜಾಗದಲ್ಲಿ ನೋವು ಇವು ಸಾಮಾನ್ಯ. ಇವುಗಳನ್ನು ನಾವು ಪ್ರತಿಯೊಬ್ಬರಲ್ಲಿ ನೋಡಿದ್ದೇವೆ. ಆದರೆ, ಯಾವುದೇ ಅತಿಯಾದ ತೊಂದರೆ, ಕೆಟ್ಟ ಪರಿಣಾಮಗಳನ್ನು ನಾವು ನೋಡಿಲ್ಲ. ಜನರಲ್ಲಿ ಇನ್ನೊಂದು ಶಂಕೆಯಿದೆ. ಎರಡನೆಯದಾಗಿ ಲಸಿಕೆ ಪಡೆದುಕೊಂಡ ಬಳಿಕವೂ ಸೋಂಕು ಉಂಟಾಗುತ್ತಿದೆಯಲ್ಲ ಎನ್ನುವುದು. ಲಸಿಕೆ ಪಡೆದುಕೊಂಡ ಬಳಿಕವೂ ಸೋಂಕು ಉಂಟಾಗಬಹುದು ಎಂದು ಕಂಪೆನಿಗಳೇ ಸೂಚನೆ ನೀಡಿವೆ. ಅವರಲ್ಲೂ ಸೋಂಕು ದೃಢಪಡಬಹುದು. ಆದರೆ, ರೋಗದ ತೀವ್ರತೆ ಲಸಿಕೆ ಪಡೆದವರಲ್ಲಿ ಹೆಚ್ಚಾಗಿರುವುದಿಲ್ಲ. ಅಂದರೆ, ಸೋಂಕು ಬರಬಹುದು ಆದರೆ, ಜೀವಕ್ಕೆ ಎರವಾಗುವಷ್ಟರ ಮಟ್ಟಿಗೆ ಅನಾರೋಗ್ಯ ಉಂಟಾಗುವುದಿಲ್ಲ. ಹೀಗಾಗಿ, ಲಸಿಕೆಯ ಕುರಿತು ಇಂಥ ಯಾವುದೇ ತಪ್ಪು ತಿಳಿವಳಿಕೆಗಳಿದ್ದರೆ ಅವುಗಳನ್ನು ತಲೆಯಿಂದ ತೆಗೆದುಹಾಕುವುದು ಉತ್ತಮ. ಯಾರ್ಯಾರ ಪಾಳಿ ಬಂದಿದೆಯೋ ಅವರು ಲಸಿಕೆ ಹಾಕಿಸಿಕೊಳ್ಳಬೇಕು. ಮೇ 1ರಿಂದ ಇಡೀ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮ ಆರಂಭವಾಗುತ್ತಿದೆ. ಜನರಲ್ಲಿ ನಾನು ಮನವಿ ಮಾಡುವುದೇನೆಂದರೆ, ಎಲ್ಲರೂ ಬಂದು ಲಸಿಕೆ ಹಾಕಿಸಿಕೊಳ್ಳಿ. ಈ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಿ. ಆಗ ಒಟ್ಟಾರೆ ನಮ್ಮ ಸಮಾಜ, ಸಮುದಾಯವೂ ಕೋವಿಡ್-19 ಸೋಂಕಿನಿಂದ ರಕ್ಷಣೆ ಪಡೆಯುತ್ತದೆ.
ಮೋದಿ ಜಿ: ಡಾ.ನಾವೀದ್ ತುಂಬು ಹೃದಯದ ಧನ್ಯವಾದಗಳು. ತಮಗೆ ರಂಜಾನ್ ಪವಿತ್ರ ಮಾಸದ ಅನೇಕಾನೇಕ ಶುಭಕಾಮನೆಗಳು.
ಡಾ.ನಾವೀದ್: ಅನೇಕಾನೇಕ ಧನ್ಯವಾದಗಳು.
ಮೋದಿ ಜಿ: ಸ್ನೇಹಿತರೆ, ಕೊರೋನಾದ ಈ ಸಂಕಟ ಕಾಲದಲ್ಲಿ ಲಸಿಕೆಯ ಪ್ರಾಮುಖ್ಯತೆ ಬಗೆಗೆ ಎಲ್ಲರಿಗೂ ತಿಳಿಯುತ್ತಿದೆ. ಹೀಗಾಗಿ, ಲಸಿಕೆಯ ಕುರಿತು ಯಾವುದೇ ರೀತಿಯ ವದಂತಿಗೆ ಕಿವಿಗೊಡಬೇಡಿ ಎನ್ನುವುದು ನನ್ನ ಒತ್ತಾಯ. ಭಾರತ ಸರ್ಕಾರದ ವತಿಯಿಂದ ಎಲ್ಲ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ಕಳುಹಿಸಲಾಗಿದೆ. ಅದರ ಲಾಭವನ್ನು 45 ವರ್ಷ ಮೇಲ್ಪಟ್ಟವರು ಪಡೆದುಕೊಳ್ಳಬಹುದೆಂದು ತಮಗೆಲ್ಲರಿಗೂ ತಿಳಿದಿದೆ. ಇನ್ನು, ಮೇ 1ರಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೆ ಲಸಿಕೆ ಲಭ್ಯವಾಗುತ್ತದೆ. ಈಗ ದೇಶದ ಕಾರ್ಪೋರೇಟ್ ವಲಯ, ಕಂಪೆನಿಗಳು ಸಹ ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸುವ ಅಭಿಯಾನದಲ್ಲಿ ಭಾಗಿಯಾಗಲು ಸಾಧ್ಯವಿದೆ. ಪ್ರಸ್ತುತ ನಡೆಯುತ್ತಿರುವ ಭಾರತ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಮುಂದೆಯೂ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲು ನಾನು ಇಚ್ಛಿಸುತ್ತೇನೆ. ಕೇಂದ್ರದಿಂದ ದೊರೆಯುತ್ತಿರುವ ಈ ಉಚಿತ ಲಸಿಕೆಯ ಲಾಭವನ್ನು ತಮ್ಮ ರಾಜ್ಯಗಳಲ್ಲಿ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ನಾನು ರಾಜ್ಯಗಳಿಗೆ ಒತ್ತಾಯಿಸುತ್ತೇನೆ.
ಸ್ನೇಹಿತರೆ, ರೋಗವಿದ್ದಾಗ ನಮ್ಮ ಹಾಗೂ ನಮ್ಮ ಪರಿವಾರದ ಕಾಳಜಿ ವಹಿಸುವುದು ಮಾನಸಿಕವಾಗಿ ಎಷ್ಟು ಕಷ್ಟದ್ದೆಂದು ನಮಗೆ ತಿಳಿದಿದೆ. ಆದರೆ, ನಮ್ಮ ಆಸ್ಪತ್ರೆಗಳ ಶುಶ್ರೂಷಾ ಸಿಬ್ಬಂದಿ ಇದೇ ಕೆಲಸವನ್ನು ಏಕಕಾಲದಲ್ಲಿ ಅನೇಕ ಮಂದಿಗೆ ನಿರಂತರವಾಗಿ ಮಾಡಬೇಕಿರುತ್ತದೆ. ಈ ಸೇವಾ ಭಾವನೆ ನಮ್ಮ ಸಮಾಜದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಶುಶ್ರೂಷಾ ಸಿಬ್ಬಂದಿ ಮೂಲಕ ನಡೆಯುತ್ತಿರುವ ಈ ಸೇವೆ ಮತ್ತು ಪರಿಶ್ರಮದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಓರ್ವ ಸಿಬ್ಬಂದಿಯೇ ಚೆನ್ನಾಗಿ ಹೇಳಬಲ್ಲರು. ಹೀಗಾಗಿ, ನಾನು ರಾಯ್ ಪುರದ ಡಾ.ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಭಾವನಾ ಧ್ರುವ ಅವರೊಂದಿಗೆ “ಮನದ ಮಾತು’ ಕಾರ್ಯಕ್ರಮಕ್ಕೆ ಆಹ್ವಾನವಿತ್ತಿದ್ದೆ. ಅವರು ಅನೇಕ ಕೊರೋನಾ ರೋಗಿಗಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ, ಬನ್ನಿ, ಅವರೊಂದಿಗೆ ಮಾತನಾಡೋಣ.
ಮೋದಿ ಜಿ: ನಮಸ್ಕಾರ ಭಾವನಾ ಜೀ.
ಭಾವನಾ: ಆದರಣೀಯ ಪ್ರಧಾನಮಂತ್ರಿಯವರೇ, ನಮಸ್ಕಾರ
ಮೋದಿ : ಭಾವನಾ ಅವರೇ
ಭಾವನಾ: ಹಾ ಸರ್
ಮೋದಿ: ತಾವು ಪರಿವಾರದಲ್ಲಿ ಎಷ್ಟೆಲ್ಲ ಜವಾಬ್ದಾರಿ ನಿಭಾಯಿಸುತ್ತೀರಿ, ಎಷ್ಟು ವಿಧವಿಧವಾದ ಕೆಲಸ ಮಾಡುತ್ತೀರಿ, ಅದರೊಂದಿಗೇ ಕೊರೋನಾ ರೋಗಿಗಳ ಜತೆಗೂ ಕೆಲಸ ಮಾಡುತ್ತೀರಿ ಎನ್ನುವುದನ್ನು “ಮನದ ಮಾತು’ ಕಾರ್ಯಕ್ರಮದ ಕೇಳುಗರಿಗೆ ಹೇಳಿ. ಕೊರೋನಾ ರೋಗಿಗಳಿಗಾಗಿ ಮಾಡಿದ ಕೆಲಸದ ಅನುಭವವನ್ನು ದೇಶವಾಸಿಗಳು ಖಂಡಿತವಾಗಿ ಕೇಳಲು ಇಚ್ಛಿಸುತ್ತಾರೆ. ಏಕೆಂದರೆ, ಸಿಸ್ಟರ್ , ನರ್ಸ್ ಗಳು ರೋಗಿಗಳ ನಿಕಟ ಸಂಪರ್ಕದಲ್ಲಿರುವವರಾಗಿದ್ದಾರೆ. ಈ ಸಂಪರ್ಕ ದೀರ್ಘಕಾಲದವರೆಗೂ ಇರುತ್ತದೆ. ಅವರು ಪ್ರತಿಯೊಂದನ್ನೂ ಅತ್ಯಂತ ನಿಕಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಈಗ ಹೇಳಿ.
ಭಾವನಾ: ಹೌದು, ಸರ್. ಕೋವಿಡ್ ಸೋಂಕು ಚಿಕಿತ್ಸೆಯಲ್ಲಿ ನನ್ನ ಒಟ್ಟಾರೆ ಅನುಭವ 2 ತಿಂಗಳದ್ದು ಸರ್. ನಾವು 14 ದಿನಗಳ ಕಾಲ ಕರ್ತವ್ಯ ನಿಭಾಯಿಸುತ್ತೇವೆ, ಬಳಿಕ ನಮಗೆ 14 ದಿನಗಳ ಕಾಲ ವಿರಾಮ ನೀಡಲಾಗುತ್ತದೆ. ಪುನಃ ಎರಡು ತಿಂಗಳ ಬಳಿಕ ಕೋವಿಡ್ ಕರ್ತವ್ಯಪಾಳಿ ಪುನರಾವರ್ತನೆಯಾಗುತ್ತದೆ ಸರ್. ಯಾವಾಗ ನನ್ನನ್ನು ಮೊದಲ ಬಾರಿ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಯಿತೊ ಆಗ ಇದರ ಬಗ್ಗೆ ನನ್ನ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದೆ, ಇದು ಮೇ ತಿಂಗಳ ಮಾತು. ನಾನು ಈ ಮಾಹಿತಿ ನೀಡುತ್ತಿದ್ದಂತೆಯೇ ಎಲ್ಲರೂ ಹೆದರಿಕೊಂಡರು. ಗಾಬರಿಯಾದರು. “ಮಗಳೇ, ಜಾಗರೂಕತೆವಹಿಸಿ ಕೆಲಸ ಮಾಡು’ ಎಂದರು. ಅದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು ಸರ್. ಮಧ್ಯದಲ್ಲಿ ನನ್ನ ಮಗಳು ನನ್ನನ್ನು ಕೇಳಿದಳು, “ಅಮ್ಮಾ, ನೀವು ಕೋವಿಡ್ ಕರ್ತವ್ಯಕ್ಕೆ ಹೋಗುತ್ತಿದ್ದೀರಾ?’ ಎಂದು. ಆ ಸಮಯ ನನಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.
ಆದರೆ, ಕೋವಿಡ್ ರೋಗಿಗಳ ಬಳಿಗೆ ಹೋದಾಗ ಮನೆಯ ಜವಾಬ್ದಾರಿಯನ್ನು ಮನೆಯಲ್ಲೇ ಬಿಟ್ಟು ನಡೆದೆ. ನಾನು ಕೋವಿಡ್ ರೋಗಿಗಳೊಂದಿಗೆ ಬೆರೆತಾಗ ಅವರು ತೀವ್ರವಾಗಿ ಭಯಗೊಂಡಿದ್ದರು, ಆತಂಕಿತರಾಗಿದ್ದರು. ಕೋವಿಡ್ ಹೆಸರಿನಿಂದಲೇ ರೋಗಿಗಳು ಎಷ್ಟು ಕಂಗಾಲಾಗುತ್ತಿದ್ದರೆಂದರೆ, ತಮಗೇನು ಆಗುತ್ತಿದೆ ಎನ್ನುವುದು ಅವರಿಗೆ ತಿಳಿಯುತ್ತಿರಲಿಲ್ಲ. ಹಾಗೂ ಮುಂದೇನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ. ನಾವು ಅವರ ಭಯವನ್ನು ದೂರವಿಡಲು ಅವರೊಂದಿಗೆ ಆತ್ಮೀಯವಾಗಿ ಬೆರೆತು, ಅವರಿಗೆ ಆರೋಗ್ಯಪೂರ್ಣ ವಾತಾವರಣ ನೀಡಿದೆವು ಸರ್. ನಮಗೆ ಯಾವಾಗ ಕೋವಿಡ್ ಕರ್ತವ್ಯ ಆರಂಭವಾಯಿತೋ ಆಗ ಎಲ್ಲಕ್ಕಿಂತ ಮೊದಲು ಪಿಪಿಇ ಕಿಟ್ ಧರಿಸಲು ಸೂಚಿಸಲಾಯಿತು. ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಬಹಳ ಕಠಿಣ. ಸರ್, ನಮಗೆ ಅದು ನಮಗೆ ಬಹಳ ಕಷ್ಟವಾಗಿತ್ತು. ನಾನು 2 ತಿಂಗಳ ಕೆಲಸದಲ್ಲಿ ಪ್ರತಿ ಸ್ಥಳದಲ್ಲೂ 14-14 ದಿನಗಳ ಕಾಲ ಕರ್ತವ್ಯ ನಿಭಾಯಿಸಿದ್ದೇನೆ. ವಾರ್ಡಲ್ಲಿ, ತೀವ್ರ ನಿಗಾ ಘಟಕದಲ್ಲಿ, ಐಸೋಲೇಷನ್ ನಲ್ಲಿ ಕೆಲಸ ಮಾಡಿದ್ದೇನೆ ಸರ್.
ಮೋದಿ: ಅಂದರೆ, ಒಟ್ಟಾರೆಯಾಗಿ, ತಾವು ಒಂದು ವರ್ಷದಿಂದ ಇದೇ ಕೆಲಸವನ್ನು ಮಾಡುತ್ತಿದ್ದೀರಿ.
ಭಾವನಾ: ಹೌದು ಸರ್, ಅಲ್ಲಿಗೆ ಹೋಗುವ ಮುನ್ನ ನನ್ನ ಸಹೋದ್ಯೋಗಿಗಳು ಯಾರೆಂದು ತಿಳಿದಿರಲಿಲ್ಲ. ನಾವು ಒಂದು ತಂಡದ ಸದಸ್ಯರಂತೆ ಕೆಲಸ ಮಾಡಿದ್ದೇವೆ ಸರ್. ಏನೇ ಸಮಸ್ಯೆಗಳಿದ್ದರೂ ಅವರೊಂದಿಗೆ ಹಂಚಿಕೊಂಡೆವು. ನಾವು ರೋಗಿಗಳ ಭಯ ದೂರ ಮಾಡುವಲ್ಲಿ ನಿರತರಾದೆವು ಸರ್. ಕೆಲವು ಜನರು ಕೋವಿಡ್ ಹೆಸರು ಕೇಳಿದರೇ ಹೆದರುತ್ತಿದ್ದರು. ಅವರ ರೋಗ ಲಕ್ಷಣ ಪಟ್ಟಿ ಮಾಡುವಾಗಲೇ ಅವರಿಗೆ ಲಕ್ಷಣಗಳಿದ್ದವು ಎಂಬುದು ನಮಗೆ ತಿಳಿಯುತ್ತಿತ್ತು. ಆದರೆ, ಅವರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು, ಮಾಡಿಸಿಕೊಳ್ಳುತ್ತಿರಲಿಲ್ಲ. ನಾವು ಅವರಿಗೆ ಸಮಾಧಾನ, ತಿಳಿವಳಿಕೆ ಹೇಳುತ್ತಿದ್ದೆವು, ಮತ್ತು ಸರ್ ರೋಗದ ತೀವ್ರತೆ ಹೆಚ್ಚಾದಾಗ ಅವರ ಶ್ವಾಸಕೋಶಕ್ಕೂ ಸೋಂಕು ತಾಗಿರುತ್ತಿತ್ತು. ಆಗ ಅವರಿಗೆ ತೀವ್ರ ನಿಗಾ ಘಟಕದ ಅಗತ್ಯವುಂಟಾಗುತ್ತಿತ್ತು. ಜತೆಗೆ, ಸೋಂಕಿನಿಂದ ಅವರ ಪೂರ್ತಿ ಕುಟುಂಬ ಚಿಕಿತ್ಸೆಗಾಗಿ ಬರುತ್ತಿತ್ತು. ಇಂಥ 1-2 ಪ್ರಕರಣಗಳನ್ನು ನೋಡಿದ್ದೇವೆ ಸರ್. ಮತ್ತು ಎಲ್ಲ ವಯೋಮಾನದವರೊಂದಿಗೂ ನಾನು ಕೆಲಸ ಮಾಡಿದ್ದೇನೆ. ಅವರಲ್ಲಿ ಚಿಕ್ಕ ಮಕ್ಕಳಿದ್ದರು. ಮಹಿಳೆಯರು, ಪುರುಷರು, ಹಿರಿಯರು ಎಲ್ಲ ರೀತಿಯ ರೋಗಿಗಳೂ ಇರುತ್ತಿದ್ದರು. ಅವರಲ್ಲಿ ನಾವು ವಿಚಾರಿಸಿದಾಗ ಎಲ್ಲರೂ ಹೇಳುತ್ತಿದ್ದುದು ಒಂದೇ, ನಾವು ಭಯದಿಂದ ಮೊದಲೇ ಬರಲಿಲ್ಲ ಎಂದು. ಎಲ್ಲರಿಂದಲೂ ಇದೇ ಉತ್ತರ ದೊರೆತಿತ್ತು. ಭಯಪಡುವುದ ಏನೂ ಇಲ್ಲ, ನೀವು ನನಗೆ ಸಹಕಾರ ನೀಡಿ ನಾನು ನಿಮ್ಮ ಜತೆ ಇರುತ್ತೇನೆ, ನೀವು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ ಎಂದು ನಾನು ಅವರಿಗೆ ತಿಳಿಹೇಳಿದೆ ಸರ್. ನಾವು ಅವರಿಂದ ಇಷ್ಟನ್ನು ಮಾಡಿಸಿದೆವು ಸರ್.
ಮೋದಿ: ಭಾವನಾ ಅವರೇ, ನಿಮ್ಮೊಂದಿಗೆ ಮಾತನಾಡಿದ್ದು ನನಗೆ ಸಂತಸ ನೀಡಿದೆ. ತಾವು ಬಹಳಷ್ಟು ಉತ್ತಮ ಮಾಹಿತಿ ನೀಡಿದ್ದೀರಿ. ತಾವು ಸ್ವಂತ ಅನುಭವ ಹಂಚಿಕೊಂಡಿದ್ದೀರಿ. ಇದರಿಂದ ದೇಶವಾಸಿಗಳಿಗೆ ಒಂದು ಸಕಾರಾತ್ಮಕ ಸಂದೇಶ ಹೋಗುತ್ತದೆ. ತಮಗೆ ಅತ್ಯಂತ ಧನ್ಯವಾದಗಳು ಭಾವನಾ.
ಭಾವನಾ: ತುಂಬ ಧನ್ಯವಾದಗಳು ಸರ್. ತುಂಬ ಧನ್ಯವಾದಗಳು, ಜೈ ಹಿಂದ್ ಸರ್
ಮೋದಿ: ಜೈ ಹಿಂದ್
ಭಾವನಾ ಅವರೇ ಮತ್ತು ಶುಶ್ರೂಷೆ ಸಿಬ್ಬಂದಿ, ತಮ್ಮಂಥಹ ಸಾವಿರಾರು-ಲಕ್ಷಾಂತರ ಸಹೋದರ-ಸಹೋದರಿಯರು ಸರಿಯಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದೀರಿ. ಇದು ನಮಗೆಲ್ಲರಿಗೂ ಪ್ರೇರಣೆಯಾಗಿದೆ. ತಾವು ತಮ್ಮ ಆರೋಗ್ಯದ ಬಗೆಗೂ ಹೆಚ್ಚಿನ ಗಮನ ನೀಡಿ. ತಮ್ಮ ಕುಟುಂಬದ ಕುರಿತೂ ಕಾಳಜಿವಹಿಸಿ.
ಸ್ನೇಹಿತರೆ, ಈಗ ನಮ್ಮ ಜೊತೆಗೆ ಬೆಂಗಳೂರಿನಿಂದ ಸೋದರಿ ಸುರೇಖಾ ಸಂಪರ್ಕಕ್ಕೆ ಬರಲಿದ್ದಾರೆ. ಸುರೇಖಾ ಅವರು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬನ್ನಿ ಅವರ ಅನುಭವಗಳನ್ನು ಕೇಳೋಣ.
ಮೋದಿಯವರು: ಸುರೇಖಾ ಅವರೇ ನಮಸ್ಕಾರ
ಸುರೇಖಾ: ನಮ್ಮ ದೇಶದ ಪ್ರಧಾನಿಯವರೊಂದಿಗೆ ಮಾತನಾಡುತ್ತಿರುವುದು ನಿಜಕ್ಕೂ ಬಹಳ ಹೆಮ್ಮೆಯ ಮತ್ತು ಗೌರವದ ವಿಷಯ ಸರ್
ಮೋದಿಯವರು: ಸುರೇಖಾ ಅವರೇ ಎಲ್ಲ ಸುಶ್ರೂಷಕ ಸಿಬ್ಬಂದಿ ಮತ್ತು ಆಸ್ಪತ್ರೆಯ ಸಿಬ್ಬಂದಿ ಜೊತೆಗೆ ನೀವು ತುಂಬಾ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದೀರಿ. ಇಡೀ ದೇಶ ತಮಗೆ ಆಭಾರಿಯಾಗಿದೆ. ಕೋವಿಡ್ – 19 ರ ವಿರುದ್ಧದ ಹೋರಾಟದಲ್ಲಿ ಜನರಿಗೆ ನಿಮ್ಮ ಸಂದೇಶವೇನು?
ಸುರೇಖಾ: ಹೌದು ಸರ್…. ಒಬ್ಬ ಜವಾಬ್ದಾರಿಯುತ ನಾಗರಿಕಳಾಗಿ ನಾನು ಖಂಡಿತ ಕೆಲ ವಿಷಯ ಹೇಳಬಯಸುತ್ತೇನೆ. ನಿಮ್ಮ ನೆರೆಹೊರೆಯವರೊಂದಿಗೆ ಮಾನವೀಯತೆಯಿಂದ ವರ್ತಿಸಿ ಮತ್ತು ಬೇಗ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಸೂಕ್ತ ಅನುಸರಣೆ ನಮಗೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ ನಿಮಗೆ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ದಯವಿಟ್ಟು ನೀವು ಉಳಿದವರಿಂದ ದೂರ ಉಳಿಯಿರಿ. ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಎಷ್ಟು ಬೇಗ ಸಾಧ್ಯವೋ ಚಿಕಿತ್ಸೆ ಪಡೆಯಿರಿ.
ಸಮುದಾಯಕ್ಕೆ ಈ ರೋಗದ ಬಗ್ಗೆ ಜಾಗೃತಿ ಅವಶ್ಯಕವಾಗಿದೆ. ಸಕಾರಾತ್ಮಕ ಚಿಂತನೆ ಇರಲಿ, ಆತಂಕಕ್ಕೊಳಗಾಗಬೇಡಿ ಹಾಗೂ ಒತ್ತಡಕ್ಕೊಳಗಾಗಬೇಡಿ. ಇದು ರೋಗಿಯ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಲಸಿಕೆ ದೊರಕಿರುವುದಕ್ಕೆ ಹೆಮ್ಮೆ ಪಡುತ್ತೇವೆ ಮತ್ತು ಸರ್ಕಾರಕ್ಕೆ ಕೃತಜ್ಞರಾಗಿದ್ದೇವೆ. ನಾನು ಈಗಾಗಲೇ ಲಸಿಕೆ ಪಡೆದಿದ್ದೇನೆ. ನನ್ನ ಸ್ವಂತ ಅನುಭವವನ್ನು ಜನತೆಯೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಯಾವುದೇ ಲಸಿಕೆ ತಕ್ಷಣ ಶೇ 100 ರಷ್ಟು ಸುರಕ್ಷತೆಯನ್ನು ನೀಡಲಾರದು. ರೋಗನಿರೋಧಕ ಶಕ್ತಿ ಬೆಳೆಯಲು ಸಮಯ ಬೇಕಾಗುತ್ತದೆ. ಲಸಿಕೆ ಪಡೆಯಲು ಭಯಬೇಡ. ಎಲ್ಲರೂ ಲಸಿಕೆ ಪಡೆದುಕೊಳ್ಳಿ; ಸ್ವಲ್ಪ ಅಡ್ಡಪರಿಣಾಮ ಆಗಬಹುದು ಮನೆಯಲ್ಲೇ ಇರಿ, ಆರೋಗ್ಯವಾಗಿರಿ, ರೋಗಲಕ್ಷಣಗಳಿರುವವರಿಂದ ದೂರವಿರಿ ಮತ್ತು ಅನವಶ್ಯಕವಾಗಿ ಮೂಗು, ಕಣ್ಣುಗಳನ್ನು ಮತ್ತು ಬಾಯನ್ನು ಮುಟ್ಟಬೇಡಿ ಎಂಬ ಸಂದೇಶವನ್ನು ನಾನು ನೀಡಬಯಸುತ್ತೇನೆ. ದಯಮಾಡಿ ವೈಯಕ್ತಿಕ ಅಂತರ ಕಾಯ್ದುಕೊಳ್ಳಿ, ಸರಿಯಾಗಿ ಮುಖಗವಸು ಧರಿಸಿ, ನಿಯಮಿತವಾಗಿ ಕೈತೊಳೆಯಿರಿ ಮತ್ತು ಮನೆಯಲ್ಲಿಯೇ ಮನೆಮದ್ದುಗಳನ್ನು ಬಳಸಬಹುದಾಗಿದೆ. ದಯಮಾಡಿ ಆಯುರ್ವೇದ ಕಷಾಯ ಕುಡಿಯಿರಿ, ಆವಿ ತೆಗೆದುಕೊಳ್ಳಿ ಮತ್ತು ಪ್ರತಿದಿನ ಪದೇ ಪದೇ ಬಾಯಿ ಮುಕ್ಕಳಿಸಿ ಜೊತೆಗೆ ಉಸಿರಾಟದ ವ್ಯಾಯಾವನ್ನೂ ಮಾಡಿರಿ. ಕೊನೆಯದಾಗಿ ಮುಂಚೂಣಿ ಕಾರ್ಯಕರ್ತರು ಮತ್ತು ವೃತ್ತಿಪರರ ಬಗ್ಗೆ ಸಹಾನುಭೂತಿ ಇರಲಿ. ನಿಮ್ಮ ಸಹಕಾರ ಮತ್ತು ಬೆಂಬಲ ನಮಗೆ ಬೇಕು. ನಾವು ಒಗ್ಗೂಡಿ ಹೋರಾಡೋಣ. ನಾವು ಖಂಡಿತ ಕೊರೊನಾವನ್ನು ಹಿಮ್ಮೆಟ್ಟಿಸಬಲ್ಲೆವು. ಇದೇ ನಾನು ಜನರಿಗೆ ನೀಡುವ ಸಂದೇಶ ಸರ್.
ಮೋದಿಯವರು: ಧನ್ಯವಾದ ಸುರೇಖಾ ಅವರೇ
ಸುರೇಖಾ: ಧನ್ಯವಾದ ಸರ್
ಸುರೇಖಾ ಅವರೇ ಖಂಡಿತ ನೀವು ಸಂಕಷ್ಟದ ಸಮಯದಲ್ಲಿ ಚುಕ್ಕಾಣಿ ಹಿಡಿದಿದ್ದೀರಿ. ನಿಮ್ಮ ಬಗ್ಗೆ ಕಾಳಜಿ ಇರಲಿ. ನಿಮ್ಮ ಕುಟುಂಬದವರಿಗೂ ನನ್ನ ಅನಂತ ಶುಭಹಾರೈಕೆಗಳು. ಭಾವನಾ ಅವರು ಮತ್ತು ಸುರೇಖಾ ಅವರು ಹೇಳಿದಂತೆ ಕೊರೊನಾ ವಿರುದ್ಧ ಹೋರಾಟಕ್ಕೆ ಸಕಾರಾತ್ಮಕ ಭಾವನೆ ಬಹಳ ಅವಶ್ಯಕವಾದದ್ದು ಮತ್ತು ದೇಶಬಾಂಧವರು ಇದನ್ನು ಕಾಪಾಡಿಕೊಳ್ಳಬೇಕು ಎಂದು ದೇಶದ ಜನತೆಗೂ ನಾನು ಆಗ್ರಹಿಸುತ್ತೇನೆ.
ಸ್ನೇಹಿತರೆ, ವೈದ್ಯರು, ಶುಶ್ರೂಷಕ ಸಿಬ್ಬಂದಿ ಜೊತೆ ಜೊತೆಗೆ ಈ ಸಮಯದಲ್ಲಿ ಆಂಬುಲೆನ್ಸ್ ಚಾಲಕರು ಮತ್ತು ಪ್ರಯೋಗಾಲಯದ ತಂತ್ರಜ್ಞರಂತಹ ಮುಂಚೂಣಿ ಕಾರ್ಯಕರ್ತರು ಇದನ್ನು ದೇವರಂತೆ ಕೆಲಸ ಮಾಡುತ್ತಿದ್ದಾರೆ. ಒಬ್ಬ ರೋಗಿಯ ಬಳಿ ಒಂದು ಆಂಬುಲೆನ್ಸ್ ತಲುಪಿದರೆ ಅವನಿಗೆ ಆ ಚಾಲಕ ದೇವದೂತನಂತೆಯೇ ಕಾಣುತ್ತಾನೆ. ಈಎಲ್ಲ ಸೇವೆಗಳ ಬಗ್ಗೆ, ಅವರ ಅನುಭವದ ಬಗ್ಗೆ ದೇಶ ಖಂಡಿತ ತಿಳಿದುಕೊಳ್ಳಬೇಕು. ನಮ್ಮ ಜೊತೆ ಈಗ ಇಂಥ ಒಬ್ಬ ಸಜ್ಜನರಾದ ಶ್ರೀಯುತ ಪ್ರೇಮ್ ವರ್ಮಾ ಅವರಿದ್ದಾರೆ. ಅವರ ಹೆಸರಿಂದಲೇ ಅದರ ಅರಿವಾಗುತ್ತದೆ. ಅವರು ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೇಮ್ ವರ್ಮಾ ಅವರು ತಮ್ಮ ಕೆಲಸವನ್ನು ಸಂಪೂರ್ಣ ಶ್ರದ್ಧೆ ಮತ್ತು ಪ್ರೀತಿಯಿಂದ ನಿರ್ವಹಿಸುತ್ತಾರೆ, ಬನ್ನಿ ಅವರೊಂದಿಗೆ ಮಾತಾಡೋಣ
ಮೋದಿಯವರು: ನಮಸ್ತೆ ಪ್ರೇಮ್ ಅವರೇ..
ಪ್ರೇಮ್ ವರ್ಮಾ: ನಮಸ್ತೆ ಸರ್
ಮೋದಿಯವರು: ಸೋದರ ಪ್ರೇಮ್
ಪ್ರೇಮ್ ವರ್ಮಾ: ಹೇಳಿ ಸರ್
ಮೋದಿಯವರು: ನೀವು ನಿಮ್ಮ ಕೆಲಸದ ಬಗ್ಗೆ
ಪ್ರೇಮ್ ವರ್ಮಾ: ಹಾಂ ಸರ್
ಮೋದಿಯವರು: ಸ್ವಲ್ಪ ವಿಸ್ತಾರವಾಗಿ ಹೇಳುತ್ತೀರಾ, ನಿಮ್ಮ ಅನುಭವದ ಬಗ್ಗೆಯೂ ಹೇಳಿ ಪ್ರೇಮ್: ನಾನು CATS ಆಂಬುಲೆನ್ಸ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ನಮಗೆ ಕಂಟ್ರೋಲ್ ರೂಮಿನಿಂದ ಟ್ಯಾಬ್ ಗೆ ಕರೆ ಬರುತ್ತದೆ. 102 ರಿಂದ ಕರೆ ಬಂದ ಕೂಡಲೇ ನಾವು ರೋಗಿಯ ಬಳಿಗೆ ಹೋಗುತ್ತೇವೆ. 2 ವರ್ಷಗಳಿಂದ ನಿರಂತರವಾಗಿ ಈ ಕೆಲಸ ಮಾಡುತ್ತಿದ್ದೇನೆ. ನನ್ನ ಕಿಟ್ ಧರಿಸಿ, ಕೈಗವಸು, ಮುಖಗವಸು ಧರಿಸಿ, ರೋಗಿ ಎಲ್ಲಿಗೆ, ಯಾವ ಆಸ್ಪತ್ರೆಗೆ ಡ್ರಾಪ್ ಮಾಡು ಎಂದು ಹೇಳುತ್ತಾರೋ ಅಲ್ಲಿಗೆ ಆದಷ್ಟೂ ಬೇಗ ಡ್ರಾಪ್ ಮಾಡುತ್ತೇವೆ.
ಮೋದಿಯವರು: ನಿಮಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆಯೇ?
ಪ್ರೇಮ್: ಖಂಡಿತ ಸರ್
ಮೋದಿಯವರು: ಹಾಗಾದರೆ ಬೇರೆಯವರು ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ನಿಮ್ಮ ಅನಿಸಿಕೆಯೇನು? ಈ ಕುರಿತು ನಿಮ್ಮ ಸಂದೇಶವೇನು?
ಪ್ರೇಮ್: ಖಂಡಿತ ಸರ್. ಎಲ್ಲರೂ ಈ ಡೋಸ್ ಗಳನ್ನುಹಾಕಿಸಿಕೊಳ್ಳಲೇಬೇಕು. ಇದು ಅವರ ಕುಟುಂಬಕ್ಕೂ ಒಳ್ಳೆಯದು. ನನ್ನ ತಾಯಿಯೇ ನನಗೆ ಈ ಉದ್ಯೋಗವನ್ನು ಬಿಟ್ಟುಬಿಡು ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ಕೂಡ ಈ ಉದ್ಯೋಗ ಬಿಟ್ಟುಬಿಟ್ಟರೆ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಯಾರು ಹೋಗುತ್ತಾರೆ? ಎಂದು ಕೇಳಿದೆ. ಏಕೆಂದರೆ ಈ ಕೊರೊನಾ ಕಾಲಘಟ್ಟದಲ್ಲಿ ಎಲ್ಲರೂ ಪಲಾಯನಗೈಯ್ಯುತ್ತಿದ್ದಾರೆ. ಎಲ್ಲರೂ ಉದ್ಯೋಗ ತೊರೆಯುತ್ತಿದ್ದಾರೆ. ನಾನು ಉದ್ಯೋಗ ತೊರೆಯಲಾರೆ ಎಂದು ನನ್ನ ತಾಯಿಗೆ ಹೇಳಿದೆ.
ಮೋದಿಯವರು: ಪ್ರೇಮ್ ಅವರೆ ತಾಯಿಯನ್ನು ದುಖಿಃತಳಾಗಿಸಬೇಡಿ. ಅವರಿಗೆ ತಿಳಿಹೇಳಿ.
ಪ್ರೇಮ್: ಆಯ್ತು ಸರ್
ಮೋದಿಯವರು: ಆದರೆ ನೀವು ತಾಯಿಯ ಬಗ್ಗೆ ಹೇಳಿದಿರಲ್ಲ
ಪ್ರೇಮ್: ಹಾಂ ಸರ್
ಮೋದಿಯವರು: ಇದು ಮನಸ್ಸಿಗೆ ತಾಗುವ ವಿಷಯ
ಪ್ರೇಮ್: ಹಾಂ ಸರ್
ಮೋದಿಯವರು: ನಿಮ್ಮ ತಾಯಿಯವರಿಗೂ ನನ್ನ ನಮಸ್ಕಾರ ತಿಳಿಸಿ
ಪ್ರೇಮ್: ಖಂಡಿತ
ಮೋದಿಯವರು: ಹಾಂ
ಪ್ರೇಮ್: ಆಯ್ತು ಸರ್
ಮೋದಿಯವರು: ಪ್ರೇಮ್ ಅವರೆ ನಿಮ್ಮ ಮೂಲಕ
ಪ್ರೇಮ್: ಹಾಂ ಸರ್
ಮೋದಿಯವರು: ನಮ್ಮ ಆಂಬುಲೆನ್ಸ್ ಚಾಲಕರು
ಪ್ರೇಮ್: ಹಾಂ ಸರ್
ಮೋದಿಯವರು: ಎಷ್ಟೊಂದು ಅಪಾಯದ ಮಧ್ಯೆಯೇ ಕೆಲಸ ಮಾಡುತ್ತಿದ್ದಾರೆ
ಪ್ರೇಮ್: ಹೌದು ಸರ್
ಮೋದಿಯವರು: ಇವರೆಲ್ಲರ ತಾಯಿ ಏನು ಯೋಚಿಸುತ್ತಿರಬೇಕು?
ಪ್ರೇಮ್: ಖಂಡಿತ ಸರ್
ಮೋದಿಯವರು: ಈ ವಿಚಾರ ಶ್ರೋತೃಗಳಿಗೆ ತಲುಪಿದಾಗ
ಪ್ರೇಮ್: ಹಾಂ ಸರ್
ಮೋದಿಯವರು: ಖಂಡಿತ ಅವರ ಮನಸ್ಸಿಗೂ ಅದು ನಾಟುತ್ತದೆ.
ಪ್ರೇಮ್: ಹೌದು ಸರ್
ಮೋದಿಯವರು : ಪ್ರೇಮ್ ಅವರೆ ಅನಂತ ಧನ್ಯವಾದಗಳು ನೀವು ಒಂದು ರೀತಿಯಲ್ಲಿ ಪ್ರೀತಿಯ ಹೊಳೆಯನ್ನೇ ಹರಿಸುತ್ತಿದ್ದೀರಿ
ಪ್ರೇಮ್: ಧನ್ಯವಾದಗಳು ಸರ್
ಮೋದಿಯವರು : ಧನ್ಯವಾದಗಳು ಸೋದರ
ಪ್ರೇಮ್: ಧನ್ಯವಾದಗಳು
ಸ್ನೇಹಿತರೆ, ಪ್ರೇಮ್ ವರ್ಮಾ ಅವರು ಮತ್ತು ಇಂಥ ಸಾವಿರಾರು ಜನರು ಇಂದು ತಮ್ಮ ಜೀವವನ್ನು ಪಣಕ್ಕೊಡ್ಡಿ ಜನರ ಸೇವೆಗೈಯ್ಯುತ್ತಿದ್ದಾರೆ. ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಬದುಕುಳಿಯುತ್ತಿರುವ ಎಲ್ಲ ಜೀವಗಳ ರಕ್ಷಣೆಯಲ್ಲಿ ಆಂಬುಲೆನ್ಸ್ ಚಾಲಕರ ಪಾತ್ರವೂ ಹಿರಿದಾದುದು. ಪ್ರೇಮ್ ಅವರೇ ನಿಮಗೆ ಮತ್ತು ದೇಶಾದ್ಯಂತದ ನಿಮ್ಮ ಸಹೋದ್ಯೋಗಿಗಳಿಗೆ ನಾನು ಮನಃಪೂರ್ವಕ ಪ್ರೇಮ್: ಧನ್ಯವಾದಗಳು ತಿಳಿಸುತ್ತೇನೆ. ಸಕಾಲಕ್ಕೆ ತಲುಪುತ್ತಿರಿ ಜೀವಗಳನ್ನು ಉಳಿಸುತ್ತಿರಿ ಎಂದು ಹಾರೈಸುತ್ತೇನೆ
ನಮ್ಮ ಪ್ರೀತಿಯ ದೇಶವಾಸಿಗಳೇ, ಈಗ ಬಹಳಷ್ಟು ಜನರು ಕೊರೋನಾ ಸೋಂಕಿತರಾಗುತ್ತಿದ್ದಾರೆ. ಆದರೆ, ಕೊರೋನಾದಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಅದಕ್ಕಿಂತ ಹೆಚ್ಚಿದೆ ಎನ್ನುವುದು ಸತ್ಯವಾದ ವಿಚಾರ. ಗುರುಗ್ರಾಮದ ಪ್ರೀತಿ ಚತುರ್ವೇದಿ ಅವರೂ ಕೊರೋನಾವನ್ನು ಸೋಲಿಸಿದ್ದಾರೆ. ಪ್ರೀತಿ ಅವರು, “ಮನದ ಮಾತು’ ಕಾರ್ಯಕ್ರಮದಲ್ಲಿ ನಮ್ಮ ಜೊತೆಯಾಗಿದ್ದಾರೆ. ಅವರ ಅನುಭವ ಎಲ್ಲರಿಗೂ ಪ್ರಯೋಜನ ನೀಡಬಲ್ಲದು.
ಮೋದಿ: ಪ್ರೀತಿ ಅವರೇ, ನಮಸ್ತೆ
ಪ್ರೀತಿ: ನಮಸ್ತೆ ಸರ್, ತಾವು ಹೇಗಿದ್ದೀರಿ?
ಮೋದಿ: ನಾನು ಚೆನ್ನಾಗಿದ್ದೇನೆ. ಎಲ್ಲಕ್ಕಿಂತ ಮೊದಲು ನಾನು ತಮ್ಮ ಕೋವಿಡ್ -19 ಸೋಂಕಿನ
ಪ್ರೀತಿ: ಸರ್
ಮೋದಿ: ಪರಿಣಾಮಕಾರಿ ಹೋರಾಟ ನಡೆಸುತ್ತಿರುವ ಬಗ್ಗೆ
ಪ್ರೀತಿ: ಜೀ
ಮೋದಿ: ಮೆಚ್ಚುಗೆ ಸೂಸುತ್ತೇನೆ.
ಪ್ರೀತಿ: ತುಂಬ ಧನ್ಯವಾದಗಳು ಸರ್
ಮೋದಿ: ತಮ್ಮ ಆರೋಗ್ಯ ಇನ್ನಷ್ಟು ಶೀಘ್ರವಾಗಿ ಉತ್ತಮಗೊಳ್ಳಲಿ ಎಂದು ನಾನು ಆಶಿಸುತ್ತೇನೆ.
ಪ್ರೀತಿ: ಧನ್ಯವಾದಗಳು ಸರ್
ಮೋದಿ: ಪ್ರೀತಿ ಅವರೇ
ಪ್ರೀತಿ: ಹಾ ಸರ್
ಮೋದಿ: ತಮ್ಮ ಅಲೆಯಲ್ಲಿ ತಮ್ಮದೇ ಸಂಖ್ಯೆ ಭರ್ತಿಯಾಗಿದೆ, ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಇದಕ್ಕೆ ತುತ್ತಾಗಿದ್ದಾರೆ ಎನಿಸುತ್ತದೆ.
ಪ್ರೀತಿ: ಇಲ್ಲ..ಇಲ್ಲ ಸರ್. ನನಗೊಬ್ಬಳಿಗೇ ಬಂದಿತ್ತು.
ಮೋದಿ: ದೇವರ ಕೃಪೆ ಆಯಿತು. ಒಳ್ಳೆಯದಾಯಿತು.
ಪ್ರೀತಿ; ಹೌದು ಸರ್
ಮೋದಿ: ತಾವು ತಮ್ಮ ಸೋಂಕಿನ ಸ್ಥಿತಿ, ಅನುಭವದ ಬಗ್ಗೆ ಹೇಳಿದರೆ ಇಂಥ ಸಮಯದಲ್ಲಿ ಹೇಗೆ ತಮ್ಮನ್ನು ತಾವು ನಿಭಾಯಿಸಿಕೊಳ್ಳಬೇಕೆಂದು ನಮ್ಮ ಕೇಳುಗರಿಗೆ ಬಹುಶಃ ಮಾರ್ಗದರ್ಶನ ಸಿಗುತ್ತದೆ.
ಪ್ರೀತಿ: ಆಯಿತು ಸರ್. ನನಗೆ ಆರಂಭಿಕ ಹಂತದಲ್ಲಿ ಅತೀವ ಸುಸ್ತಾಯಿತು. ಅದಾದ ಬಳಿಕ, ಗಂಟಲಿನಲ್ಲಿ ಸ್ವಲ್ಪ ಕಿರಿಕಿರಿ ಆಗಲು ಆರಂಭವಾಯಿತು. ಆಗ ನನಗೆ ಇದು ಕೊರೋನಾ ಲಕ್ಷಣ ಎಂದೆನಿಸಿ ನಾನು ಪರೀಕ್ಷೆ ಮಾಡಿಸಿಕೊಂಡೆ. ಎರಡನೇ ದಿನ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ನಾಣು ಸ್ವಯಂ ಕ್ವಾರಂಟೈನ್ ಮಾಡಿಕೊಂಡೆ. ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿದ್ದು, ವೈದ್ಯರೊಂದಿಗೆ ಸಮಾಲೋಚನೆ ಮಾಡಿದೆ. ಅವರು ಸೂಚಿಸಿದ ಚಿಕಿತ್ಸೆ ಆರಂಭಿಸಿದೆ.
ಮೋದಿ: ಹಾಗಾದರೆ, ತಾವು ಶೀಘ್ರವಾಗಿ ಕಾರ್ಯತ್ಪರವಾಗಿದ್ದರಿಂದ ತಮ್ಮ ಕುಟುಂಬ ಬಚಾವಾಯಿತು.
ಪ್ರೀತಿ: ಹೌದು ಸರ್. ಕುಟುಂಬದ ಎಲ್ಲರಿಗೂ ಪರೀಕ್ಷೆ ಮಾಡಿಸಲಾಗಿತ್ತು. ಎಲ್ಲರದ್ದೂ ನೆಗೆಟಿವ್ ಬಂತು, ನಾನೊಬ್ಬಳೇ ಪಾಸಿಟಿವ್ ಆಗಿದ್ದುದು. ಅದಕ್ಕೂ ಮುನ್ನವೇ ನಾನೇ ಮುಂದಾಗಿ ಒಂದು ಕೋಣೆಯೊಳಗೆ ಪ್ರತ್ಯೇಕವಾಗಿದ್ದೆ. ನನಗೆ ಅಗತ್ಯವಾಗಿದ್ದ ಎಲ್ಲ ಸಾಮಗ್ರಿಗಳನ್ನು ಇರಿಸಿಕೊಂಡು ಸ್ವಯಂ ಬಂಧನ ವಿಧಿಸಿಕೊಂಡಿದ್ದೆ. ಅದರೊಂದಿಗೆ ನಾನು ವೈದ್ಯರೊಂದಿಗೆ ಸಮಾಲೋಚಿಸಿ ಚಿಕಿತ್ಸೆಯನ್ನೂ ಆರಂಭಿಸಿದೆ. ಸರ್. ನಾನು ಔಷಧದ ಜತೆ ಜತೆಗೇ ಯೋಗ, ಪ್ರಾಣಾಯಾಮ, ಆಯುರ್ವೇದವನ್ನೂ ಶುರು ಮಾಡಿದೆ. ರೋಗ ನಿರೋಧಕ ಶಕ್ತಿ ಹೆಚ್ಚಲು ಕಾಡಾವನ್ನೂ ತೆಗೆದುಕೊಳ್ಳಲು ಆರಂಭಿಸಿದೆ. ಅತ್ಯಂತ ಆರೋಗ್ಯಕರ ಆಹಾರವನ್ನೇ ಸೇವನೆ ಮಾಡುತ್ತಿದ್ದೆ. ಪ್ರೊಟೀನ್ ಭರಿತವಾಗಿರುವ ಆಹಾರ ಪದ್ಧತಿ ಅನುಸರಿಸಿದೆ. ಸಾಕಷ್ಟು ದ್ರವಾಹಾರ ಸೇವನೆ ಮಾಡಿದೆ. ಬಿಸಿನೀರಿನ ಆವಿ ತೆಗೆದುಕೊಂಡೆ. ಗಂಟಲಿನ ಗಾರ್ಗಲ್ ಮಾಡಿದೆ ಮತ್ತು ಬಿಸಿನೀರನ್ನೇ ಕುಡಿಯುತ್ತಿದ್ದೆ. ಪ್ರತಿದಿನ ಈ ಎಲ್ಲ ಕ್ರಮಗಳನ್ನು ಅನುಸರಿಸಿದೆ. ಮಾನಸಿಕ ದೃಢತೆ ಹೆಚ್ಚಿಸಿಕೊಳ್ಳಲು ಯೋಗದ ಮೊರೆ ಹೋಗಿದ್ದೆ. ಉಸಿರಾಟದ ವ್ಯಾಯಾಮಗಳನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದೆ. ಇದರಿಂದ ನನಗೆ ಆರಾಮವೆನಿಸುತ್ತಿತ್ತು.
ಮೋದಿ: ಹಾಂ, ಒಳ್ಳೆಯದು ಪ್ರೀತಿ, ತಮ್ಮ ಹಂತಹಂತದ ಪ್ರಕ್ರಿಯೆ ಮುಗಿದ ಬಳಿಕ ತಾವು ಈ ಸಂಕಟದಿಂದ ಹೊರಬಂದಿರಿ.
ಪ್ರೀತಿ: ಹೌದು ಸರ್
ಮೋದಿ: ಈಗ ತಮ್ಮ ನೆಗೆಟಿವ್ ವರದಿಯೂ ಬಂದಿದೆ
ಪ್ರೀತಿ: ಹೌದು ಸರ್
ಮೋದಿ: ಹಾಗಿದ್ದರೆ ತಾವು ತಮ್ಮ ಆರೋಗ್ಯಕ್ಕಾಗಿ ಹಾಗೂ ಅದರ ಕಾಳಜಿಗಾಗಿ ಈಗ ಏನು ಮಾಡುತ್ತಿರುವಿರಿ?
ಪ್ರೀತಿ: ಸರ್, ನಾನು ಯೋಗವನ್ನು ನಿಲ್ಲಿಸಿಯೇ ಇಲ್ಲ.
ಮೋದಿ: ಹಾಂ.
ಪ್ರೀತಿ: ಈ ಮೊದಲು ನನ್ನನ್ನು ನಾನು ಸಾಕಷ್ಟು ನಿರ್ಲಕ್ಷ್ಯ ಮಾಡುತ್ತಿದ್ದೆ. ಈಗ ಬಹಳಷ್ಟು ಗಮನ ನೀಡುತ್ತಿದ್ದೇನೆ.
ಮೋದಿ: ಧನ್ಯವಾದ ಪ್ರೀತಿ ಅವರೇ
ಪ್ರೀತಿ: ತುಂಬ ಧನ್ಯವಾದಗಳು ಸರ್
ಮೋದಿ: ತಾವು ಯಾವ ಮಾಹಿತಿ ನೀಡಿದ್ದೀರೋ ಅದು ಬಹಳಷ್ಟು ಜನರಿಗೆ ಉಪಯೋಗವಾಗುತ್ತದೆ. ತಾವು ಆರೋಗ್ಯದಿಂದಿರಿ, ತಮ್ಮ ಕುಟುಂಬದ ಜನರು ಆರೋಗ್ಯದಿಂದಿರಲಿ. ತಮಗೆ ಅತ್ಯಂತ ಶುಭಕಾಮನೆಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ವೈದ್ಯಕೀಯ ವಲಯದ ಜನರು, ಮುಂಚೂಣಿ ಕಾರ್ಯಕರ್ತರು ಹೇಗೆ ಹಗಲು –ರಾತ್ರಿ ಸೇವೆಯಲ್ಲಿ ನಿರತರಾಗಿದ್ದಾರೋ ಹಾಗೆಯೇ, ಸಮಾಜದ ಇತರ ಜನರು ಸಹ ಈ ಸಮಯದಲ್ಲಿ ಹಿಂದುಳಿದಿಲ್ಲ. ದೇಶ ಮತ್ತೊಂದು ಬಾರಿ ಒಂದಾಗಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ದಿನಗಳಲ್ಲಿ ಕ್ವಾರಂಟೈನ್ ನಲ್ಲಿರುವ ಕುಟುಂಬಗಳಿಗೆ ಔಷಧ ತಲುಪುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಯಾರೋ ತರಕಾರಿ, ಹಾಲು, ಹಣ್ಣುಗಳನ್ನು ಪೂರೈಸುತ್ತಿದ್ದಾರೆ. ಕೆಲವರು ಆಂಬುಲೆನ್ಸ್ ಅನ್ನು ಉಚಿತವಾಗಿ ರೋಗಿಗಳಿಗೆ ಒದಗಿಸುತ್ತಿದ್ದಾರೆ. ಈ ಸವಾಲಿನ ಸಮಯದಲ್ಲೂ ಸ್ವಯಂ ಸೇವಾ ಸಂಘಟನೆಗಳು ಮುಂದೆ ಬಂದು ದೇಶದ ಬೇರೆ ಬೇರೆ ಭಾಗಗಳಲ್ಲಿ ಇನ್ನೊಬ್ಬರಿಗೆ ಎಷ್ಟು ಸಾಧ್ಯವೋ ಅಷ್ಟು ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿವೆ. ಈ ಬಾರಿ, ಗ್ರಾಮಗಳಲ್ಲಿ ಹೊಸ ರೀತಿಯ ಜಾಗೃತಿ ಕಂಡುಬರುತ್ತಿದೆ. ಕೋವಿಡ್ ನಿಯಮಗಳನ್ನು ಶಿಸ್ತಾಗಿ ಪಾಲನೆ ಮಾಡುತ್ತಿರುವ ಜನರು ತಮ್ಮ ಗ್ರಾಮವನ್ನು ಕೊರೋನಾದಿಂದ ರಕ್ಷಿಸುತ್ತಿದ್ದಾರೆ. ಈ ಜನರು ಹೊರಗಡೆಯಿಂದ ಬರುತ್ತಿರುವ ಜನರಿಗೆ ಸರಿಯಾದ ವ್ಯವಸ್ಥೆಯನ್ನೂ ಕಲ್ಪಿಸುತ್ತಿದ್ದಾರೆ. ನಗರಗಳಲ್ಲೂ ಸಾಕಷ್ಟು ಸಂಖ್ಯೆಯ ಯುವಕರು ಮುಂದೆ ಬಂದು, ತಮ್ಮ ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚದಂತೆ ಸ್ಥಳೀಯ ನಿವಾಸಿಗಳ ಜತೆಗೂಡಿ ಪ್ರಯತ್ನಿಸುತ್ತಿದ್ದಾರೆ. ಅಂದರೆ, ಒಂದೆಡೆ ದೇಶವು ಹಗಲು-ರಾತ್ರಿ ಆಸ್ಪತ್ರೆ, ವೆಂಟಿಲೇಟರ್ ಹಾಗೂ ಔಷಧಗಳಿಗಾಗಿ ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ದೇಶವಾಸಿಗಳು ಸಹ ಮನಃಪೂರ್ವಕವಾಗಿ ಕೊರೋನಾ ಸವಾಲನ್ನು ಎದುರಿಸುತ್ತಿದ್ದಾರೆ. ಈ ಭಾವನೆ ನಮಗೆ ಎಷ್ಟು ಚೈತನ್ಯ ನೀಡುತ್ತದೆ, ವಿಶ್ವಾಸ ನೀಡುತ್ತದೆ. ಈಗ ನಡೆಯುತ್ತಿರುವ ಈ ಎಲ್ಲ ಪ್ರಯತ್ನಗಳು ಸಮಾಜದ ಅತಿ ದೊಡ್ಡ ಸೇವೆಯಾಗಿದೆ. ಇದು ಸಮಾಜದ ಶಕ್ತಿಯನ್ನು ಹೆಚ್ಚಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು “ಮನದ ಮಾತು’ ಕಾರ್ಯಕ್ರಮದ ಸಂಪೂರ್ಣ ಚರ್ಚೆಯನ್ನು ನಾವು ಕೊರೋನಾ ಮಹಾಮಾರಿ ಮೇಲೆಯೇ ಮಾಡಿದ್ದೇವೆ. ಏಕೆಂದರೆ, ಈ ರೋಗವನ್ನು ನಿರ್ಮೂಲನೆ ಮಾಡುವುದು ಇಂದು ನಮ್ಮ ಪ್ರಾಥಮಿಕ ಆದ್ಯತೆಯಾಗಿದೆ. ಇಂದು ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾನು ಎಲ್ಲ ದೇಶವಾಸಿಗಳಿಗೆ ಶುಭಾಶಯ ಕೋರುತ್ತೇನೆ. ಭಗವಾನ್ ಮಹಾವೀರರ ಸಂದೇಶ ನಮಗೆ ಸ್ಥಿರತೆ ಮತ್ತು ಆತ್ಮಸಂಯಮದ ಪ್ರೇರಣೆ ನೀಡುತ್ತದೆ. ಇದು ರಮ್ ಜಾನ್ ಪವಿತ್ರ ಮಾಸದ ಆಚರಣೆಯೂ ನಡೆಯುತ್ತಿದೆ, ಮುಂದೆ ಬುದ್ಧ ಪೂರ್ಣಿಮೆಯೂ ಇದೆ. ಗುರು ತೇಗ್ ಬಹಾದ್ದೂರ್ ಅವರ 400ನೇ ಜನ್ಮ ಶತಮಾನೋತ್ಸವದ ಪ್ರಕಾಶ ಪರ್ವವೂ ಇದೆ. ಇನ್ನೊಂದು ಮಹತ್ವಪೂರ್ಣ ದಿನ-ಪೋಚಿಶೆ ಬೋಯಿಶಾಕ್-ಅಂದರೆ, ಟ್ಯಾಗೋರ್ ಜಯಂತಿಯೂ ಇದೆ. ಇವರೆಲ್ಲರೂ ನಮಗೆ ನಮ್ಮ ಕರ್ತವ್ಯ ನಿಭಾಯಿಸಲು ಪ್ರೇರಣೆ ನೀಡುತ್ತಾರೆ. ಓರ್ವ ನಾಗರಿಕರಾಗಿ ನಾವು ನಮ್ಮ ಜೀವನದಲ್ಲಿ ಎಷ್ಟು ಕುಶಲತೆಯಿಂದ ನಮ್ಮ ಕರ್ತವ್ಯ ನಿಭಾಯಿಸುತ್ತೇವೋ ಅಷ್ಟು ಶೀಘ್ರ ನಾವು ಸಂಕಟದಿಂದ ಮುಕ್ತರಾಗಿ ಭವಿಷ್ಯದ ಪಥದಲ್ಲಿ ಮುಂದೆ ಹೆಜ್ಜೆ ಇಡಬಲ್ಲೆವು. ಈ ಆಶಯಗಳೊಂದಿಗೆ ನಾನು ತಮ್ಮೆಲ್ಲರಲ್ಲಿ ಮತ್ತೊಮ್ಮೆ ಒತ್ತಾಯಿಸುತ್ತೇನೆ, ಏನೆಂದರೆ, ಲಸಿಕೆಯನ್ನು ನಮಗೆಲ್ಲರಿಗೂ ಹಾಕಲಾಗುತ್ತದೆ. ಆದರೂ ಎಚ್ಚರಿಕೆಯಿಂದಿರಬೇಕು. ಔಷಧವೂ…ನಿಯಮವೂ. ಈ ಮಂತ್ರವನ್ನು ಎಂದಿಗೂ ಮರೆಯಬಾರದು. ನಾವೆಲ್ಲರೂ ಸೇರಿ ಬಹುಬೇಗ ಈ ಆಪತ್ತಿನಿಂದ ಹೊರಬರುತ್ತೇವೆ. ಈ ವಿಶ್ವಾಸದೊಂದಿಗೆ, ತಮಗೆಲ್ಲರಿಗೂ ಅತ್ಯಂತ ಧನ್ಯವಾದಗಳು, ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿಗೆ ಬಗೆ ಬಗೆಯ ಪತ್ರಗಳು, ಸಲಹೆ ಸೂಚನೆಗಳು ಬರುತ್ತವೆ. ಈ ಬಾರಿ ಬಂದವುಗಳನ್ನು ನೋಡುತ್ತಿದ್ದಾಗ ಬಹಳಷ್ಟು ಜನರುಒಂದು ಮಹತ್ವಪೂರ್ಣ ವಿಷಯದ ಬಗ್ಗೆ ನೆನಪು ಮಾಡಿದ್ದಾರೆ. ಮೈ ಗೌ ನಲ್ಲಿ ಆರ್ಯನ್ ಶ್ರೀ, ಬೆಂಗಳೂರಿನಿಂದ ಅನೂಪ್ ರಾವ್, ನೋಯ್ಡಾದಿಂದ ದೇವೇಶ್, ಠಾಣೆಯಿಂದ ಸುಜಿತ್ ಇವರೆಲ್ಲರೂ‘ಮೋದಿಯವರೇ ಈ ಬಾರಿ ಮನದ ಮಾತಿನ 75 ನೇ ಕಂತು, ಅದಕ್ಕಾಗಿ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ನೀವೆಲ್ಲರೂ ಇಷ್ಟು ಸೂಕ್ಷ್ಮವಾಗಿ ಫಾಲೊ ಮಾಡುತ್ತಿದ್ದೀರಿ ಮತ್ತು ಅದರ ಜೊತೆಗಿದ್ದೀರಿ ಅದಕ್ಕಾಗಿ ನಿಮ್ಮೆಲ್ಲರಿಗೂ ಅನಂತ ಧನ್ಯವಾದ ಹೇಳ ಬಯಸುತ್ತೇನೆ. ಇದು ನನಗೆ ಹೆಮ್ಮೆಯ ಮತ್ತು ಆನಂದದ ವಿಷಯವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸುವುದರ ಜೊತೆಗೆ ಮನದ ಮಾತಿನ ಎಲ್ಲ ಶ್ರೋತೃಗಳಿಗೂ ಕೃತಜ್ಞತೆ ತಿಳಿಸುತ್ತೇನೆ ಏಕೆಂದರೆ ನಿಮ್ಮ ಬೆಂಬಲವಿಲ್ಲದೆ ಈ ಯಾತ್ರೆ ಸಾಧ್ಯವೇ ಇರಲಿಲ್ಲ.
ನಿನ್ನೆ ಮೊನ್ನೆಯಷ್ಟೇ ನಾವೆಲ್ಲರೂ ಸೇರಿ ಈ ವೈಚಾರಿಕ ಸೈದ್ಧಾಂತಿಕ ಯಾತ್ರೆಯನ್ನು ಆರಂಭ ಮಾಡಿದಂತಿದೆ. 2014ರ ಅಕ್ಟೋಬರ್ 3 ರಂದು ವಿಜಯದಶಮಿಯ ಪವಿತ್ರ ದಿನವಾಗಿತ್ತು. ಕಾಕತಾಳೀಯವೆಂದರೆ ಇಂದು ಕಾಮದಹನದ ದಿನ ‘ದೀಪದಿಂದ ದೀಪ ಬೆಳಗಿದಂತೆ ನಮ್ಮ ರಾಷ್ಟ್ರವೂ ಬೆಳಗಲಿ’ ಎಂಬ ಭಾವನೆಯೊಂದಿಗೆ ನಡೆಯುತ್ತಾ ನಾವು ಈ ಮಾರ್ಗವನ್ನು ಸವೆಸಿದ್ದೇವೆ. ನಾವು ದೇಶದ ಮೂಲೆಮೂಲೆಯ ಜನರೊಂದಿಗೆ ಮಾತನಾಡಿದೆವು ಮತ್ತು ಅವರ ಅಸಾಧಾರಣ ಕೆಲಸದ ಬಗ್ಗೆ ಅರಿತೆವು. ನಮ್ಮ ದೇಶದದೂರದ ಪ್ರದೇಶಗಳಲ್ಲೂ ಅದ್ಭುತ ಸಾಮರ್ಥ್ಯ ಹುದುಗಿದೆ; ಭಾರತ ಮಾತೆಯ ಮಡಿಲಲ್ಲಿ ಎಂತೆಂಥ ರತ್ನಗಳು ಅರಳುತ್ತಿವೆ ಎಂಬುದು ನಿಮ್ಮ ಅನುಭವಕ್ಕೂ ಬಂದಿರಬಹುದು. ಸಮಾಜದತ್ತ ದೃಷ್ಟಿಕೋನ ಹರಿಸಲು, ಸಮಾಜವನ್ನು ಮತ್ತು ಸಮಾಜದ ಸಾಮರ್ಥ್ಯವನ್ನು ಅರಿಯಲು ಇದು ನನಗೊಂದು ಅದ್ಭುತ ಅನುಭವವಾಗಿದೆ. ಈ 75 ಕಂತುಗಳ ಅವಧಿಯಲ್ಲಿ ಎಷ್ಟೊಂದು ವಿಷಯಗಳ ಅವಲೋಕನವಾಯಿತು. ಕೆಲವೊಮ್ಮೆ ನದಿ ಬಗ್ಗೆ ಮಾತಾಡಿದರೆ, ಇನ್ನು ಕೆಲವೊಮ್ಮೆ ಹಿಮಾಲಯದ ಪರ್ವತಗಳ ಬಗ್ಗೆ. ಕೆಲವೊಮ್ಮೆ ಮರುಭೂಮಿ ಬಗ್ಗೆ, ಕೆಲವೊಮ್ಮೆ ಪ್ರಾಕೃತಿಕ ವಿಪತ್ತುಗಳ ಬಗ್ಗೆ. ಕೆಲವೊಮ್ಮೆ ಮಾನವ ಸೇವೆಯ ಅಸಂಖ್ಯ ಗಾಥೆಗಳ ಅನುಭೂತಿಯಾದರೆ ಇನ್ನೂ ಕೆಲವೊಮ್ಮೆ ತಂತ್ರಜ್ಞಾನದ ಆವಿಷ್ಕಾರ. ಮತ್ತೆ ಕೆಲವೊಮ್ಮೆ ಯಾವುದೋ ಒಂದು ಅರಿಯದ ಭಾಗದಿಂದ ಹೊಸತನ್ನು ಮಾಡಿ ತೋರಿದವರ ಅನುಭವದ ಕಥೆ.
ಈಗ ನೀವೇ ನೋಡಿ, ಸ್ವಚ್ಛತೆಯ ಮಾತಾಗಿರಲಿ ಅಥವಾ ನಮ್ಮ ಪರಂಪರೆಯನ್ನು ಉಳಿಸುವ ಚರ್ಚೆಯಾಗಿರಬಹುದು, ಇಷ್ಟೇ ಅಲ್ಲ ಆಟಿಕೆಗಳನ್ನು ತಯಾರಿಸುವುದೇ ಆಗಿರಲಿ ಅದರಲ್ಲಿ ಏನೆಲ್ಲ ಇರಲಿಲ್ಲ… ಅದೆಷ್ಟೋ ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ, ಬಹುಶಃಅವು ಅಸಂಖ್ಯವಾಗಬಹುದು. ಈ ಸಂದರ್ಭದಲ್ಲಿ ಭಾರತದ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆ ನೀಡಿದ ಅನೇಕ ಮಹನೀಯರಿಗೆ ನಾವು ಶೃದ್ಧಾಂಜಲಿ ಅರ್ಪಿಸಿದ್ದೇವೆ. ಅವರ ಬಗ್ಗೆ ತಿಳಿದುಕೊಂಡಿದ್ದೇವೆ. ಅದೆಷ್ಟೋ ಜಾಗತಿಕ ವಿಷಯಗಳ ಬಗ್ಗೆಯೂ ನಾವು ಮಾತನಾಡಿದ್ದೇವೆ. ಅವುಗಳಿಂದ ಪ್ರೇರಣೆ ಪಡೆಯುವ ಪ್ರಯತ್ನ ಮಾಡಿದ್ದೇವೆ. ನೀವು ಕೂಡಾ ನನಗೆ ಹಲವಾರು ವಿಷಯಗಳನ್ನು ತಿಳಿಸಿದಿರಿ ಹಲವಾರು ವಿಚಾರಗಳನ್ನೂ ಹಂಚಿಕೊಂಡಿರಿ. ಈ ವಿಚಾರ ಯಾತ್ರೆಯಲ್ಲಿ ನನ್ನೊಂದಿಗೆ ಜೊತೆಯಾಗಿ ಪಯಣಿಸಿದಿರಿ ಜೊತೆಗೂಡಿದಿರಿ, ಒಗ್ಗೂಡಿದಿರಿ ಮತ್ತು ಹೊಸತನ್ನು ಜೋಡಿಸುತ್ತಾ ಸಾಗಿದಿರಿ. ಇಂದು ಈ 75 ನೇ ಕಂತಿನ ಪ್ರಸಾರದ ಸಂದರ್ಭದಲ್ಲಿ ‘ಮನದ ಮಾತನ್ನು’ ಸಫಲಗೊಳಿಸಿ, ಸಮೃದ್ಧಗೊಳಿಸಿದ್ದಕ್ಕೆ ಮತ್ತು ಇದರೊಂದಿಗೆ ಒಗ್ಗೂಡಿರುವುದಕ್ಕೆ ಪ್ರತಿ ಶ್ರೋತೃವಿಗೂ ನಾನು ಅನಂತ ಕೃತಜ್ಞತೆ ಸಲ್ಲಿಸುತ್ತೇನೆ.
ನನ್ನ ಪ್ರಿಯದೇಶಬಾಂಧವರೆ, ಸ್ವಾತಂತ್ರ್ಯದ 75 ನೇ ‘ಅಮೃತ ಮಹೋತ್ಸವ’ ವರ್ಷದ ಮೊದಲ ಮಾಸದಲ್ಲೇ ಮನದ ಮಾತಿನ 75 ನೇ ಕಂತಿನಲ್ಲಿ ಮಾತನಾಡುವ ಅವಕಾಶ ಲಭಿಸಿರುವುದು ಎಂತಹ ದೊಡ್ಡ ಸಂತಸದ ಸಂಗಮವಾಗಿದೆ ನೋಡಿ. ಅಮೃತ ಮಹೋತ್ಸವ ದಂಡಿಯಾತ್ರೆಯ ದಿನದಂದು ಆರಂಭವಾಗಿತ್ತು ಮತ್ತು 15 ಆಗಸ್ಟ್ 2023 ರವರೆಗೆ ನಡೆಯಲಿದೆ. ಅಮೃತ ಮಹೋತ್ಸವಕ್ಕೆ ಸಂಬಧಿಸಿದ ಕಾರ್ಯಕ್ರಮಗಳು ದೇಶದಲ್ಲಿ ನಿರಂತರ ನಡೆಯುತ್ತಿವೆ. ಬೇರೆ ಬೇರೆ ಪ್ರದೇಶಗಳಿಂದ ಈ ಕಾರ್ಯಕ್ರಮಕುರಿತ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ನಮೋ ಆಪ್ನಲ್ಲಿ ಇಂಥವೇ ಕೆಲವು ಛಾಯಾ ಚಿತ್ರಗಳ ಜೊತೆಗೆ ಜಾರ್ಖಂಡ್ನ ನವೀನ್ ಅವರು ನನಗೆ ಒಂದು ಸಂದೇಶ ಕಳುಹಿಸಿದ್ದಾರೆ. ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತಾವು ನೋಡಿರುವುದಾಗಿಯೂ ಮತ್ತು ತಾವು ಕೂಡಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕನಿಷ್ಠ 10 ಸ್ಥಳಗಳಿಗೆ ಭೇಟಿ ನೀಡುವುದಾಗಿ ನಿರ್ಧರಿಸಿದ್ದಾರೆ ಎಂದು ಬರೆದಿದ್ದಾರೆ. ಅವರ ಪಟ್ಟಿಯಲ್ಲಿ ಮೊದಲನೆಯದಾಗಿ ಹೆಸರು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಇದೆ. ಜಾರ್ಖಂಡ್ನ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಸೇನಾನಿಗಳ ಕಥೆಯನ್ನು ದೇಶದ ಬೇರೆ ಬೇರೆ ಭಾಗಗಳಿಗೆ ತಲುಪಿಸುವುದಾಗಿ ನವೀನ್ ಬರೆದಿದ್ದಾರೆ. ಸೋದರ ನವೀನ್ ನಿಮ್ಮ ವಿಚಾರಕ್ಕಾಗಿ ನಾನು ನಿಮಗೆ ಅಭಿನಂದಿಸುತ್ತೇನೆ.
ಸ್ನೇಹಿತರೆ, ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಸಂಘರ್ಷದ ಕಥೆಯಾಗಿರಲಿ, ಯಾವುದೇ ಸ್ಥಳ ಇತಿಹಾಸವಾಗಿರಲಿ, ದೇಶದ ಯಾವುದೇ ಸಾಂಸ್ಕೃತಿಕ ಕಥೆಯಾಗಿರಲಿ ‘ಅಮೃತ ಮಹೋತ್ಸವ’ದ ಸಂದರ್ಭದಲ್ಲಿ ನೀವದನ್ನು ದೇಶಕ್ಕೆ ಪರಿಚಯಿಸಬಹುದಾಗಿದೆ. ದೇಶದ ಜನತೆಯನ್ನು ಅದರೊಂದಿಗೆ ಬೆರೆಸುವ ಮಾಧ್ಯಮವಾಗಬಹುದು. ನೋಡ ನೋಡುತ್ತಲೇ ‘ಅಮೃತ ಮಹೋತ್ಸವ’ ಇಂಥ ಅದೆಷ್ಟೋ ಪ್ರೇರಣಾದಾಯಕ ಅಮೃತ ಬಿಂದುಗಳಿಂದ ತುಂಬಿ ಹೋಗುತ್ತದೆ ಮತ್ತು ಭಾರತದ ಸ್ವಾತಂತ್ರ್ಯದ 100 ವರ್ಷಗಳವರೆಗೆ ನಮಗೆ ಪ್ರೇರಣೆ ನೀಡುವ ಅಮೃತಧಾರೆಯಾಗಿ ಹರಿಯುತ್ತದೆ ಎಂಬುದನ್ನು ನೀವು ನೋಡುತ್ತೀರಿ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಏನನ್ನಾದರೂ ಮಾಡಬೇಕೆಂಬ ಉತ್ಸಾಹ ತುಂಬುತ್ತದೆ. ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನವನ್ನು ತಮ್ಮ ಕರ್ತವ್ಯವೆಂದು ಭಾವಿಸಿದ್ದರು ಹಾಗಾಗಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಅಷ್ಟೊಂದು ಕಷ್ಟಗಳನ್ನು ಸಹಿಸಿದರು. ಅವರ ತ್ಯಾಗ ಮತ್ತು ಬಲಿದಾನದ ಅಮರ ಕಥೆಗಳು ಇಂದು ನಮಗೆ ಸತತವಾಗಿ ಕರ್ತವ್ಯ ಪಥದಲ್ಲಿ ನಡೆಯುವಂತೆ ಪ್ರೇರಣೆ ನೀಡಲಿ. ಗೀತೆಯಲ್ಲಿ ಭಗವಾನ್ ಕೃಷ್ಣ ಹೀಗೆ ಹೇಳಿದ್ದರು-
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೊಹ್ಯ ಕರ್ಮಣಃ
ಇದೇ ಭಾವದಿಂದ ನಾವೆಲ್ಲರೂ ನಮ್ಮ ನಿತ್ಯ ಕರ್ತವ್ಯಗಳನ್ನು ಸಂಪೂರ್ಣ ನಿಷ್ಠೆಯಿಂದ ಪಾಲಿಸೋಣ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅರ್ಥ ನಾವು ಹೊಸ ಸಂಕಲ್ಪ ಗೈಯ್ಯುವುದೇ ಅಲ್ಲವೇ. ಆ ಸಂಕಲ್ಪಗಳನ್ನು ಕಾರ್ಯರೂಪಕ್ಕೆ ತರಲು ತನುಮನದಿಂದ ತೊಡಗಿಕೊಳ್ಳುವುದು ಮತ್ತು ಆ ಸಂಕಲ್ಪ ಎಂಥದ್ದಿರ ಬೇಕೆಂದರೆ ಸಮಾಜದ ಒಳಿತಿಗಾಗಿರಬೇಕು. ದೇಶದ ಒಳಿತಿಗಾಗಿರಬೇಕು. ಭಾರತದ ಉಜ್ವಲ ಭವಿಷ್ಯಕ್ಕಾಗಿರಬೇಕು. ಸಂಕಲ್ಪ ಎಂಥದ್ದಾಗಿರಬೇಕೆಂದರೆ ಅದರಲ್ಲಿ ಸ್ವಲ್ಪವಾದರೂ ನಮ್ಮ ಸ್ವಂತ ಜವಾಬ್ದಾರಿಯಿರಬೇಕು. ನಮ್ಮ ಕರ್ತವ್ಯದಿಂದ ಕೂಡಿರಬೇಕು. ಗೀತೆಯ ಅನುಭಾವವನ್ನು ಜೀವಿಸುವ ಸುವರ್ಣಾವಕಾಶ ನಮ್ಮ ಬಳಿಯಿದೆ.
ನನ್ನ ಪ್ರಿಯ ದೇಶಬಾಂಧವರೆ, ಕಳೆದ ವರ್ಷ ಇದೇ ಮಾರ್ಚ್ ತಿಂಗಳಲ್ಲಿಯೇ ದೇಶ ಪ್ರಥಮ ಬಾರಿಗೆ ಜನತಾ ಕರ್ಫ್ಯೂ ಎಂಬ ಶಬ್ದವನ್ನು ಕೇಳಿತ್ತು. ಆದರೆ ಈ ಮಹಾನ್ ದೇಶದ ಮಹಾಶಕ್ತಿಯ ಅನುಭವ ಎಂಥದ್ದು ಎಂದರೆ ಜನತಾ ಕರ್ಫ್ಯೂ ಎಂಬುದು ಸಂಪೂರ್ಣ ವಿಶ್ವಕ್ಕೆ ಒಂದು ಆಶ್ಚರ್ಯವೆನಿಸಿತ್ತು.
ಶಿಸ್ತಿನ ಒಂದು ಅಭೂತಪೂರ್ವ ಉದಾಹರಣೆ ಇದಾಗಿತ್ತು. ಮುಂಬರುವ ಪೀಳಿಗೆ ಇದರ ಬಗ್ಗೆ ಖಂಡಿತ ಹೆಮ್ಮೆ ಪಡುತ್ತದೆ. ಅದೇ ರೀತಿ ನಮ್ಮ ಕೊರೊನಾ ಯೋಧರ ಕುರಿತು ಗೌರವಾದರ, ತಟ್ಟೆಜಾಗಟೆ, ಚಪ್ಪಾಳೆ ತಟ್ಟುವುದು, ದೀಪ ಬೆಳಗುವುದು ನಡೆದವು. ಇದೆಲ್ಲ ಕೊರೊನಾ ಯೋಧರ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿತ್ತು ಎಂಬುದು ನಿಮಗೆ ಅಂದಾಜಿರಲಿಕ್ಕಿಲ್ಲ. ಇದೇ ಕಾರಣದಿಂದಲೇ ಅವರು ವರ್ಷಪೂರ್ತಿ ದಣಿಯದೇ, ವಿಶ್ರಮಿಸದೇ ಕಾರ್ಯಪ್ರವೃತ್ತರಾಗಿದ್ದರು. ದೇಶದ ಪ್ರತಿಯೊಬ್ಬ ನಾಗರಿಕನ ಜೀವವನ್ನು ಉಳಿಸಲು ಕಠಿಣ ಹೋರಾಟ ನಡೆಸಿದರು.
ಕಳೆದ ವರ್ಷ ಈ ಸಮಯದಲ್ಲಿ ಕೊರೊನಾ ಲಸಿಕೆ ಯಾವಾಗ ದೊರೆಯುವುದು ಎಂಬ ಪ್ರಶ್ನೆಯಿತ್ತು. ಸ್ನೇಹಿತರೆ, ಇಂದು ಭಾರತ ವಿಶ್ವದಲ್ಲೇ ಅತ್ಯಂತ ದೊಡ್ಡ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಲಸಿಕಾ ಅಭಿಯಾನದ ಚಿತ್ರಗಳ ಬಗ್ಗೆ ಭುವನೇಶ್ವರದ ಪುಷ್ಪಾ ಶುಕ್ಲಾ ಅವರು ನನಗೆ ಬರೆದಿದ್ದಾರೆ. ಮನೆಯ ಹಿರಿಯರಲ್ಲಿ ಲಸಿಕೆ ಕುರಿತು ಕಾಣುತ್ತಿರುವ ಉತ್ಸಾಹದ ಬಗ್ಗೆ ನಾನು ಮನದ ಮಾತಿನಲ್ಲಿ ಮಾತನಾಡಲಿ ಎಂದು ಅವರು ಬರೆಯುತ್ತಾರೆ. ಸ್ನೇಹಿತರೆ, ಇದು ಸರಿಯಾಗಿಯೂ ಇದೆ. ದೇಶದ ಮೂಲೆ ಮೂಲೆಗಳಿಂದ ನಾವು ಕೇಳುತ್ತಿರುವ ಸುದ್ದಿಗಳು ಮತ್ತು ನೋಡುತ್ತಿರುವ ಚಿತ್ರಗಳು ನನ್ನ ಮನಕ್ಕೆ ಮುದ ನೀಡುತ್ತಿವೆ.
ಉತ್ತರ ಪ್ರದೇಶದ ಜೌನ್ಪುರದಲ್ಲಿ 109 ವರ್ಷದ ಹಿರಿಯ ತಾಯಿ ರಾಮ್ ದುಲೈಯ್ಯಾ ಅವರು, ಇದೇ ರೀತಿ ದೆಹಲಿಯಲ್ಲೂ 107 ವರ್ಷದ ಕೇವಲ್ ಕೃಷ್ಣ ಅವರು ಲಸಿಕೆಯ ಡೋಸ್ ಪಡೆದಿದ್ದಾರೆ. ಹೈದ್ರಾಬಾದ್ನಲ್ಲಿ 100 ವರ್ಷ ವಯೋಮಾನದ ಜೈಚೌಧರಿ ಅವರು ಲಸಿಕೆ ಹಾಕಿಸಿಕೊಂಡಿದ್ದಾರೆ ಮತ್ತು ಲಸಿಕೆ ಹಾಕಿಸಿಕೊಳ್ಳಿ ಎಂದು ಎಲ್ಲರಲ್ಲೂ ಮನವಿ ಇದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ನಲ್ಲಿಯೂ ಜನರು ತಮ್ಮ ಮನೆಯ ಹಿರಿಯರಿಗೆ ಲಸಿಕೆ ಹಾಕಿಸಿದ ನಂತರ ಅವರ ಫೋಟೊ ಅಪ್ಲೋಡ್ ಮಾಡ್ತಾ ಇರೋದನ್ನ ನಾನು ನೋಡುತ್ತಿದ್ದೇನೆ. ಕೇರಳದ ಆನಂದನ್ ನಾಯರ್ ಎಂಬ ಒಬ್ಬ ಯುವಕ ಇದಕ್ಕೆ ‘ಲಸಿಕೆ ಸೇವೆ’ ಎಂಬ ಹೊಸ ಪದ ನೀಡಿದ್ದಾರೆ. ದಿಲ್ಲಿಯಿಂದ ಶಿವಾನಿ, ಹಿಮಾಚಲದಿಂದ ಹಿಮಾಂಶು ಮತ್ತು ಇನ್ನೂ ಹಲವಾರು ಯುವಜನತೆ ಕೂಡ ಇಂಥದೇ ಸಂದೇಶವನ್ನು ಕಳುಹಿಸಿದ್ದಾರೆ. ಎಲ್ಲ ಶ್ರೋತೃಗಳ ಈ ವಿಚಾರಗಳಿಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಇದೆಲ್ಲದರ ಮಧ್ಯೆ ಕೊರೊನಾ ವಿರುದ್ಧ– ಔಷದಿ ಮತ್ರು–ಕಟ್ಟುನಿಟ್ಟಿನ ಕ್ರಮಗಳು ಎಂಬ ಹೋರಾಟದ ಮಂತ್ರವನ್ನು ಖಂಡಿತ ನೆನಪಿಡಿ. ನಾನು ಹೇಳುತ್ತೇನೆ ಎಂದು ಮಾತ್ರವಲ್ಲ. ಅದನ್ನು ನಾವು ಅಳವಡಿಸಿಕೊಳ್ಳಬೇಕು, ಹೇಳಬೇಕು ಮತ್ತು ಜನರನ್ನು ಔಷಧಿ–ಕಟ್ಟುನಿಟ್ಟಿನ ಕ್ರಮಗಳಿಗೆ–ಬದ್ಧರನ್ನಾಗಿಸುತ್ತಲೇ ಇರಬೇಕು.
ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾನು ಇಂದೋರ್ ನಿವಾಸಿ ಸೌಮ್ಯಾ ಅವರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಅವರು ಒಂದು ವಿಷಯದತ್ತ ನನ್ನ ಗಮನ ಸೆಳೆದಿದ್ದಾರೆ ಮತ್ತು ಅದರ ಬಗ್ಗೆ ‘ಮನದ ಮಾತಿನಲ್ಲಿ’ ಆ ಕುರಿತು ಪ್ರಸ್ತಾಪ ಮಾಡಲೆಂದು ಕೋರಿದ್ದಾರೆ. ಅದೇನೆಂದರೆ ಭಾರತೀಯ ಕ್ರಿಕೆಟರ್ ಮಿತಾಲಿ ರಾಜ್ ಅವರ ಹೊಸ ದಾಖಲೆ. ಮಿತಾಲಿಯವರು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹತ್ತು ಸಾವಿರ ರನ್ ಗಳಿಸಿದ ಪ್ರಥಮ ಭಾರತೀಯ ಮಹಿಳಾ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. ಅವರ ಈ ಸಾಧನೆಗೆ ಅನಂತ ಅಭಿನಂದನೆಗಳು. ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 7000 ರನ್ ಗಳಿಸಿದ ಏಕಮಾತ್ರ ಅಂತಾರಾಷ್ಟ್ರೀಯ ಕ್ರೀಡಾಳು ಕೂಡಾ ಆಗಿದ್ದಾರೆ. ಮಹಿಳಾ ಕ್ರಿಕೆಟ್ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅದ್ಭುತವಾಗಿದೆ. ಎರಡು ದಶಕಗಳಿಗಿಂತ ಹೆಚ್ಚಿನ ಕರಿಯರ್ ನಲ್ಲಿ ಮಿತಾಲಿ ರಾಜ್ ಸಾವಿರಾರು-ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಫಲತೆಯ ಕಥೆ ಕೇವಲ ಮಹಿಳಾ ಕ್ರಿಕೆಟಿಗರು ಮಾತ್ರವಲ್ಲ ಪುರುಷ ಕ್ರಿಕೆಟ್ ಪಟುಗಳಿಗೂ ಒಂದು ಪ್ರೇರಣೆಯಾಗಿದೆ.
ಸ್ನೇಹಿತರೆ, ಇದು ಆಸಕ್ತಿಕರವಾಗಿದೆ. ಇದೇ ಮಾರ್ಚ್ ತಿಂಗಳಲ್ಲಿ ನಾವು ಮಹಿಳಾ ದಿನ ಆಚರಣೆ ಮಾಡುತ್ತಿರುವಾಗ ಬಹಳಷ್ಟು ಮಹಿಳಾ ಕ್ರೀಡಾಳುಗಳು ಪದಕಗಳನ್ನು ಮತ್ತು ದಾಖಲೆಗಳನ್ನು ಸಾಧಿಸಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಅಗ್ರಸ್ಥಾನದಲ್ಲಿತ್ತು. ಚಿನ್ನದ ಮೆಡಲ್ ಸಂಖ್ಯೆಗಳ ವಿಷಯದಲ್ಲೂ ಭಾರತ ಮುಂಚೂಣಿಯಲ್ಲಿದೆ. ಭಾರತೀಯ ಮಹಿಳಾ ಮತ್ತು ಪುರುಷ ಶೂಟರ್ಗಳ ಅದ್ಭುತ ಪ್ರದರ್ಶನದಿಂದಲೇ ಇದು ಸಾಧ್ಯವಾಗಿದೆ. ಈ ಮಧ್ಯೆ ಪಿ ವಿ ಸಿಂಧು ಅವರು BWF Swiss Open Super 300 Tournament ನಲ್ಲಿ ಬೆಳ್ಳಿ ಪದಕಗೆದ್ದಿದ್ದಾರೆ. ಇಂದು ಶಿಕ್ಷಣದಿಂದ ಉದ್ಯಮ ಶೀಲತೆವರೆಗೆ, ಸಶಸ್ತ್ರ ಪಡೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನದವರೆಗೆ ಪ್ರತಿ ಕ್ಷೇತ್ರದಲ್ಲೂ ದೇಶದ ಹೆಣ್ಣು ಮಕ್ಕಳು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಹೆಣ್ಣುಮಕ್ಕಳು ಕ್ರೀಡೆಗಳಲ್ಲೂ ತಮ್ಮದೇ ಸ್ಥಾನ ಕಂಡುಕೊಳ್ಳುತ್ತಿರುವುದು ನನಗೆ ಸಂತಸದ ಸಂಗತಿಯಾಗಿದೆ. ವೃತ್ತಿಗಳ ಆಯ್ಕೆಯಲ್ಲಿ ಕ್ರೀಡೆ ಒಂದು ಆಯ್ಕೆಯಾಗಿ ಹೊರಹೊಮ್ಮತ್ತಿದೆ.
ನನ್ನ ಪ್ರಿಯದೇಶಬಾಂಧವರೆ, ಕೆಲ ದಿನಗಳ ಹಿಂದೆ ನಡೆದ Maritime India Summit ನಿಮಗೆ ನೆನಪಿದೆ ಅಲ್ಲವೇ? ಈ ಶೃಂಗಸಭೆಯಲ್ಲಿ ನಾನು ಏನು ಹೇಳಿದ್ದೆ ಎಂಬುದು ನಿಮಗೆ ನೆನಪಿದೆಯೇ? ಸಾಮಾನ್ಯವಾಗಿ ಎಷ್ಟೋ ಕಾರ್ಯಕ್ರಮಗಳು ಆಗುತ್ತಿರುತ್ತವೆ. ಎಷ್ಟೋ ಮಾತುಗಳು ಆಡುತ್ತಿರುತ್ತೇವೆ. ಎಲ್ಲ ಮಾತುಗಳು ಎಲ್ಲಿ ನೆನಪಿರುತ್ತವೆ ಮತ್ತು ಅಷ್ಟೊಂದು ಗಮನವೂ ಎಲ್ಲಿರುತ್ತದೆ – ಸಹಜ ಅಲ್ಲವೇ. ಆದರೆ ನನ್ನ ಒಂದು ಮನವಿಯನ್ನು ಗುರುಪ್ರಸಾದ್ ಅವರು ಬಹಳ ಆಸಕ್ತಿಯಿಂದ ಮುಂದೆ ಕೊಂಡೊಯ್ಯುತ್ತಿದ್ದಾರೆ. ನಾನು ಈ ಶೃಂಗಸಭೆಯಲ್ಲಿ ದೇಶದ Light House Complexes ಗಳ ಸುತ್ತಮುತ್ತ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಮಾತನಾಡಿದ್ದೆ. ಗುರು ಪ್ರಸಾದ್ ಅವರು ತಮಿಳು ನಾಡಿನ 2 ಲೈಟ್ ಹೌಸ್ಗಳಾದ ಚೆನ್ನೈ ಲೈಟ್ ಹೌಸ್ ಮತ್ತು ಮಹಾಬಲಿಪುರಂ ಲೈಟ್ ಹೌಸ್ಗೆ 2019 ರಲ್ಲಿ ತಾವು ಯಾತ್ರೆ ಗೈದಿರುವುದರ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಬಹಳ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ, ಮನದ ಮಾತಿನ ಕೇಳುಗರೆಲ್ಲರಿಗೂ ಕೂಡ ಇದು ಆಶ್ಚರ್ಯಗೊಳಿಸಲಿದೆ. ಚೆನ್ನೈ ಲೈಟ್ ಹೌಸ್, ಎಲಿವೇಟರ್ ಹೊಂದಿರುವವಿಶ್ವದ ಕೆಲವೇ ಲೈಟ್ ಹೌಸ್ಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ ಭಾರತದ ಏಕಮಾತ್ರ ಇಂಥ ಲೈಟ್ ಹೌಸ್ ಆಗಿದ್ದು ನಗರದ ಮಧ್ಯದಲ್ಲಿದೆ. ಇದರಲ್ಲಿ ವಿದ್ಯುತ್ಗಾಗಿ ಸೌರ ಫಲಕಗಳನ್ನೂ ಅಳವಡಿಸಲಾಗಿದೆ. ಗುರುಪ್ರಸಾದ್ ಅವರು ಲೈಟ್ ಹೌಸ್ನ ಪಾರಂಪರಿಕ ವಸ್ತು ಸಂಗ್ರಹಾಲಯದ ಬಗ್ಗೆಯೂ ಹೇಳಿದ್ದಾರೆ, ಇದು ಮರೈನ್ ನೆವಿಗೇಶನ್ನ ಇತಿಹಾಸವನ್ನು ಅನಾವರಣಗೊಳಿಸುತ್ತದೆ. ಸಂಗ್ರಹಾಲಯದಲ್ಲಿ ತೈಲದಿಂದ ಉರಿಯುವ ದೊಡ್ಡದೊಡ್ಡ ದೀಪಗಳು, ಸೀಮೆ ಎಣ್ಣೆ ದೀಪಗಳು, ಪೆಟ್ರೋಲಿಯಂ ವೇಪರ್, ಹಳೇ ಕಾಲದಲ್ಲಿ ಬಳಸಲ್ಪಡುತ್ತಿದ್ದ ವಿದ್ಯುತ್ ದೀಪಗಳನ್ನು ಪ್ರದರ್ಶಿಸಲಾಗಿದೆ. ಭಾರತದ ಅತ್ಯಂತ ಹಳೆಯ ಲೈಟ್ ಹೌಸ್ ಆಗಿರುವ ಮಹಾಬಲಿಪುರಂ ಲೈಟ್ ಹೌಸ್ ಬಗ್ಗೆಯೂ ಗುರುಪ್ರಸಾದ್ ಅವರು ವಿಸ್ತಾರವಾಗಿ ಬರೆದಿದ್ದಾರೆ. ಈ ಲೈಟ್ ಹೌಸ್ ಪಕ್ಕದಲ್ಲಿ ಸಾವಿರಾರು ವರ್ಷಗಳ ಹಿಂದೆ ಪಲ್ಲವರಾಜ ಮೊದಲನೇ ಮಹೇಂದ್ರ ವರ್ಮನ್ ಅವರಿಂದ ನಿರ್ಮಿಸಲ್ಪಟ್ಟ ಉಲ್ಕನೇಶ್ವರ ಮಂದಿರವಿದೆ ಎಂದು ಅವರು ಹೇಳಿದ್ದಾರೆ.
ಸ್ನೇಹಿತರೆ, ಮನದ ಮಾತಿನಲ್ಲಿ ನಾನು ಪ್ರವಾಸದ ವಿಭಿನ್ನ ಆಯಾಮಗಳ ಬಗ್ಗೆ ಅನೇಕ ಬಾರಿ ಮಾತನಾಡಿದ್ದೇನೆ. ಆದರೆ ಈ ಲೈಟ್ ಹೌಸ್ಗಳು ಪ್ರವಾಸದ ದೃಷ್ಟಿಯಿಂದ ವಿಶಿಷ್ಟವಾಗಿರುತ್ತವೆ. ತಮ್ಮ ಭವ್ಯ ರಚನೆಗಳಿಂದಾಗಿ ಲೈಟ್ ಹೌಸ್ಗಳು ಸದಾ ಜನರ ಆಕರ್ಷಣೆಯ ಕೇಂದ್ರವಾಗಿವೆ. ಪ್ರವಾಸವನ್ನು ಉತ್ತೇಜಿಸಲು ಭಾರತದಲ್ಲಿ 71 ಲೈಟ್ ಹೌಸ್ಗಳನ್ನು ಗುರುತಿಸಲಾಗಿದೆ. ಈ ಎಲ್ಲ ಲೈಟ್ ಹೌಸ್ಗಳಲ್ಲಿ ಅವುಗಳ ಸಾಮರ್ಥ್ಯಕ್ಕನುಗುಣವಾಗಿ ಸಂಗ್ರಹಾಲಯ, ಆಂಫಿ ಥಿಯೇಟರ್, ಓಪನ್ ಏರ್ ಥಿಯೇಟರ್, ಉಪಾಹಾರ ಗೃಹ, ಮಕ್ಕಳ ಪಾರ್ಕ್, ಪರಿಸರ ಸ್ನೇಹಿ ಕುಟೀರಗಳು ಮತ್ತು ವಿನ್ಯಾಸಿತ ಹೊರಾಂಗಣ ಸಿದ್ಧಗೊಳಿಸಲಾಗುವುದು.
ಲೈಟ್ ಹೌಸ್ಗಳ ಬಗ್ಗೆ ಮಾತನಾಡುತ್ತಿರುವಾಗ ನಾನು ಒಂದು ವಿಶಿಷ್ಟ ಲೈಟ್ ಹೌಸ್ ಬಗ್ಗೆ ನಿಮಗೆ ತಿಳಿಸ ಬಯಸುತ್ತೇನೆ. ಈ ಲೈಟ್ ಹೌಸ್ ಗುಜರಾತ್ನ ಸುರೇಂದ್ರ ನಗರ ಜಿಲ್ಲೆಯ ಜಿಂಝುವಾಡಾ ಎಂಬ ಸ್ಥಳದಲ್ಲಿದೆ. ಇದು ಏಕೆ ವಿಶಿಷ್ಟ ಎಂದುಗೊತ್ತೇ? ಏಕೆಂದರೆ ಈ ಲೈಟ್ ಹೌಸ್ ಇರುವ ಜಾಗದಿಂದ, ಸಮುದ್ರ ತೀರ 100 ಕ್ಕೂ ಹೆಚ್ಚು ಕಿಲೋಮೀಟರ್ ದೂರವಿದೆ. ಇಲ್ಲಿ ಒಂದು ಕಾರ್ಯ ನಿರತ ಬಂದರು ಇತ್ತೇನೋ ಎಂದು ಹೇಳುವಂತಹ ಬಂಡೆಗಳು ನಿಮಗೆ ಈ ಗ್ರಾಮದಲ್ಲಿ ಕಾಣಸಿಗುತ್ತವೆ. ಅಂದರೆ ಇದರರ್ಥ ಈ ಹಿಂದೆ ಸಮುದ್ರ ತೀರ ಜಿಂಝುವಾಡಾವರೆಗೆ ಇತ್ತು. ಸಮುದ್ರದ ವಿಸ್ತಾರ ಹೆಚ್ಚುವುದು, ಕುಗ್ಗುವುದು, ಇಷ್ಟು ದೂರ ಸರಿಯುವುದು ಎಲ್ಲ ಅದರ ಸ್ವರೂಪವೇ ಆಗಿದೆ. ಜಪಾನ್ಗೆ ಅಪ್ಪಳಿಸಿದ್ದ ಕರಾಳ ಸುನಾಮಿಗೆ ಈ ತಿಂಗಳಿಗೆ 10 ವರ್ಷಗಳಾಗುತ್ತವೆ. ಆ ಸುನಾಮಿಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಇಂಥ ಸುನಾಮಿ ಭಾರತದಲ್ಲಿ 2004 ರಲ್ಲಿ ಅಪ್ಪಳಿಸಿತ್ತು. ಸುನಾಮಿ ಸಮಯದಲ್ಲಿ ನಮ್ಮ ಲೈಟ್ ಹೌಸ್ಗಳಲ್ಲಿ ಕೆಲಸಮಾಡುವ ನಮ್ಮ 14 ಜನರನ್ನು ಕಳೆದುಕೊಂಡಿದ್ದೆವು. ಅಂಡಮಾನ್ ನಿಕೊಬಾರ್ನಲ್ಲಿ ಮತ್ತು ತಮಿಳುನಾಡಿನಲ್ಲಿ ಲೈಟ್ ಹೌಸ್ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಕಠಿಣ ಪರಿಶ್ರಮದ ನಮ್ಮ ಈ ಲೈಟ್ ಹೌಸ್ ಕೆಲಸಗಾರರಿಗೆ ನಾನು ಗೌರವಪೂರ್ಣ ಶೃದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ಲೈಟ್ಹೌಸ್ ಕೀಪರ್ಗಳ ಕೆಲಸವನ್ನು ಅಪಾರವಾಗಿ ಗೌರವಿಸುತ್ತೇನೆ.
ಪ್ರೀತಿಯ ದೇಶವಾಸಿಗಳೇ, ಹೊಸತನ, ಆಧುನಿಕತೆ ಎನ್ನುವುದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅನಿವಾರ್ಯವಾಗಿದೆ, ಇಲ್ಲದಿದ್ದರೆ, ಅದು ಕೆಲವೊಮ್ಮೆ ನಮಗೆ ಹೊರೆಯಾಗಿ ಪರಿಣಮಿಸುತ್ತದೆ. ಭಾರತದ ಕೃಷಿ ಜಗತ್ತಿನಲ್ಲಿ- ಆಧುನಿಕತೆ, ಎನ್ನುವುದು ಈ ಸಮಯದ ಬೇಡಿಕೆ, ಅಗತ್ಯವಾಗಿದೆ. ಈಗಾಗಲೇ ಬಹಳಷ್ಟು ತಡವಾಗಿದೆ. ನಾವು ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿಕೊಂಡಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿ, ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ, ಸಾಂಪ್ರದಾಯಿಕ ಕೃಷಿಯ ಜೊತೆಗೆ ಹೊಸ ಆಯ್ಕೆಗಳು, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಕೂಡಾ ಅಷ್ಟೇ ಅಗತ್ಯವಾಗಿರುತ್ತದೆ. ಶ್ವೇತಕ್ರಾಂತಿಯ ರೂಪದಲ್ಲಿ, ದೇಶಕ್ಕೆ ಇದರ ಅನುಭವವಾಗಿದೆ.
ಈಗ ಜೇನುನೊಣ ಸಾಕಾಣಿಕೆ ಅಂತಹ ಒಂದು ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಜೇನುನೊಣ ಸಾಕಾಣಿಕೆ ಎನ್ನುವುದು ದೇಶದಲ್ಲಿ ಜೇನುಕ್ರಾಂತಿ ಅಥವಾ ಸಿಹಿ ಕ್ರಾಂತಿ ಆಧರಿತವಾಗಿದೆ. ಹೆಚ್ಚಿನ ಸಂಖ್ಯೆಯ ರೈತರು ಇದಕ್ಕೆ ಸೇರಿಕೊಳ್ಳುತ್ತಿದ್ದಾರೆ. ಆವಿಷ್ಕಾರ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಗುರ್ದುಂ ಎಂಬ ಒಂದು ಗ್ರಾಮವಿದೆ. ಎತ್ತರದ ಪರ್ವತಗಳು, ಭೌಗೋಳಿಕ ಸಮಸ್ಯೆಗಳು ಇಲ್ಲಿವೆ, ಆದರೆ, ಇಲ್ಲಿನ ಜನರು ಜೇನುನೊಣ ಸಾಕಾಣಿಕೆ ಪ್ರಾರಂಭಿಸಿದರು ಮತ್ತು ಇಂದು, ಈ ಸ್ಥಳದಲ್ಲಿ ತಯಾರಿಸಿದ ಜೇನುತುಪ್ಪಕ್ಕೆ ಉತ್ತಮ ಬೇಡಿಕೆಯಿದೆ, ಜೇನು ಇಂದು ರೈತರ ಆದಾಯವನ್ನೂ ಹೆಚ್ಚಿಸುತ್ತಿದೆ.
ಪಶ್ಚಿಮ ಬಂಗಾಳದ ಸುಂದರ್ ಬನ್ಸ್ ಪ್ರದೇಶಗಳ ನೈಸರ್ಗಿಕ ಸಾವಯವ ಜೇನುತುಪ್ಪವನ್ನು ದೇಶವಿದೇಶಗಳಲ್ಲಿ ಜನರು ಇಷ್ಟ ಪಡುತ್ತಾರೆ. ಇಂತಹದ್ದೇ ಒಂದು ವ್ಯಕ್ತಿಗತ ಅನುಭವದ ಉದಾಹರಣೆ ನನಗೆ ಗುಜರಾತಿನಲ್ಲಿ ದೊರೆತಿದೆ. ಗುಜರಾತ್ನ ಬನಾಸ್ಕಾಂವತದಲ್ಲಿ 2016 ರಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ನಾನು ಜನರಲ್ಲಿ ಹೀಗೆ ಕೇಳಿದ್ದೆ, ಇಲ್ಲಿ ಅನೇಕ ಸಂಭಾವ್ಯತೆಗಳಿವೆ, ಬನಾಸ್ಕಾಂತಾ ಮತ್ತು ಇಲ್ಲಿನ ನಮ್ಮ ರೈತರು ಸಿಹಿ ಕ್ರಾಂತಿಯ ಹೊಸ ಅಧ್ಯಾಯವನ್ನು ಏಕೆ ಬರೆಯಬಾರದು? ಇಷ್ಟು ಕಡಿಮೆ ಸಮಯದಲ್ಲಿ ಜೇನು ಉತ್ಪಾದನೆಗೆ ಬನಾಸ್ಕಾಂತ ಪ್ರಮುಖ ಕೇಂದ್ರವಾಗಿದೆ ಎಂದು ಕೇಳಿ ನಿಮಗೆ ನಿಜಕ್ಕೂ ಸಂತೋಷವಾಗುತ್ತದೆ. ಇಂದು ಬನಾಸ್ಕಾಂತದಲ್ಲಿರುವ ರೈತರು ಜೇನುತುಪ್ಪದಿಂದ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಂತಹದ್ದೇ ಮತ್ತೊಂದು ಉದಾಹರಣೆ ಹರಿಯಾಣದ ಯಮುನಾ ನಗರದಲ್ಲಿಯೂ ಇದೆ. ಯಮುನಾ ನಗರದಲ್ಲಿ, ರೈತರು ಜೇನುನೊಣ ಸಾಕಾಣಿಕೆಯಿಂದ, ವಾರ್ಷಿಕವಾಗಿ ನೂರಾರು ಟನ್ ಜೇನುತುಪ್ಪವನ್ನು ಉತ್ಪಾದಿಸುತ್ತಿದ್ದಾರೆ, ಇದರಿಂದ ಅವರ ಆದಾಯ ಹೆಚ್ಚಾಗುತ್ತಿದೆ. ರೈತರ ಈ ಕಠಿಣ ಪರಿಶ್ರಮದ ಫಲವಾಗಿ, ದೇಶದಲ್ಲಿ ಜೇನುತುಪ್ಪದ ಉತ್ಪಾದನೆಯು ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಇದು ವಾರ್ಷಿಕವಾಗಿ ಸುಮಾರು ಒಂದೂ ಕಾಲು ಲಕ್ಷ ಟನ್ ತಲುಪಿದೆ, ಜೇನುತುಪ್ಪವನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಕೂಡಾ ಮಾಡಲಾಗುತ್ತಿದೆ.
ಸ್ನೇಹಿತರೇ, ಜೇನುನೊಣ ಸಾಕಾಣಿಕೆಯಿಂದ ಕೇವಲ ಜೇನುತುಪ್ಪದಿಂದ ಆದಾಯ ಬರುವುದು ಮಾತ್ರವಲ್ಲದೇ, ಜೇನು ಮೇಣವೂ ಸಹ ಒಂದು ಬೃಹತ್ ಆಂದಾಯದ ಮೂಲವಾಗಿದೆ. ಔಷಧ ಉದ್ಯಮ, ಆಹಾರೋದ್ಯಮ, ಜವಳಿ ಮತ್ತು ಸೌಂದರ್ಯ ವರ್ಧಕ ಉದ್ಯಮ ಹೀಗೆ ಹಲವೆಡೆ ಜೇನುಮೇಣಕ್ಕೆ ಬೇಡಿಕೆ ಇದೆ. ನಮ್ಮ ದೇಶ ಪ್ರಸ್ತುತ ಜೇನು ಮೇಣವನ್ನು ಆಮದು ಮಾಡಿಕೊಳ್ಳುತ್ತಿದೆ, ಆದರೆ ನಮ್ಮ ರೈತರು, ಈಗ ಈ ಪರಿಸ್ಥಿತಿಯನ್ನು ತ್ವರಿತಗತಿಯಲ್ಲಿ ಬದಲಾಯಿಸುತ್ತಿದ್ದಾರೆ. ಅಂದರೆ, ಒಂದು ರೀತಿಯಲ್ಲಿ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸಹಾಯ ಮಾಡುತ್ತಿದ್ದಾರೆ. ಇಂದು ಇಡೀ ಜಗತ್ತು ಆಯುರ್ವೇದ ಮತ್ತು ನೈಸರ್ಗಿಕ ಆರೋಗ್ಯ ಉತ್ಪನ್ನಗಳತ್ತ ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜೇನುತುಪ್ಪದ ಬೇಡಿಕೆ ಮತ್ತಷ್ಟು ವೇಗವಾಗಿ ಹೆಚ್ಚುತ್ತಿದೆ. ದೇಶದ ಹೆಚ್ಚು ಹೆಚ್ಚು ರೈತರು ತಮ್ಮ ವ್ಯವಸಾಯದ ಜೊತೆಜೊತೆಗೆ ಜೇನು ನೊಣ ಸಾಕಾಣಿಕೆಗೆ ಸೇರಬೇಕೆಂದು ನಾನು ಬಯಸುತ್ತೇನೆ. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನಕ್ಕೆ ಸಿಹಿ ಮಾಧುರ್ಯವನ್ನೂ ತುಂಬುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ World sparrow day ಆಚರಿಸಲಾಯಿತು. Sparrow ಎಂದರೆ ಗುಬ್ಬಚ್ಚಿ. ಕೆಲವೆಡೆ ಇದನ್ನು ಚಕಲಿ ಎಂದೂ, ಕೆಲವೆಡೆ ಇದನ್ನು ಚಿಮನಿ ಎಂದೂ ಮತ್ತೆ ಕೆಲವೆಡೆ ಇದನ್ನು ಘಾನ್ಚಿರಿಕಾ ಎಂದೂ ಕರೆಯುತ್ತಾರೆ. ಈ ಹಿಂದೆ ಗುಬ್ಬಚ್ಚಿಗಳು ನಮ್ಮ ಮನೆಗಳ ಗೋಡೆಗಳ ಮೇಲೆ ಕುಳಿತು, ಸುತ್ತಮುತ್ತಲಿನ ಗಿಡಮರಗಳ ಮೇಲೆ ಚಿಲಿಪಿಲಿ ಸದ್ದು ಮಾಡುತ್ತಿದ್ದವು. ಆದರೆ ಈಗ ಜನರು ಗುಬ್ಬಚ್ಚಿಯನ್ನು ನೋಡಿ ವರ್ಷಗಳೇ ಕಳೆದಿವೆ ಎಂದು ನೆನಪಿಸಿಕೊಳ್ಳುತ್ತಾರೆ. ಇಂದು ನಾವು ಆ ಗುಬ್ಬಚ್ಚಿಗಳನ್ನು ಸಂರಕ್ಷಿಸಲು ಪ್ರಯತ್ನ ಮಾಡಬೇಕಾಗಿದೆ. ನನ್ನ ಬೆನಾರಸ್ ಗೆಳೆಯರಾದ ಇಂದ್ರಪಾಲ್ ಸಿಂಗ್ ಬಾತ್ರಾ ಅವರು ಮನ್ ಕಿ ಬಾತ್ ಕೇಳುಗರಿಗೆ ಖಂಡಿತವಾಗಿಯೂ ಕೇಳಿಸಲು ಬಯಸುವಂತಹ ಕೆಲಸವನ್ನು ಮಾಡಿದ್ದಾರೆ. ಬಾತ್ರಾಅವರುತಮ್ಮ ಮನೆಯನ್ನೇ ಗುಬ್ಬಚ್ಚಿಗಳ ಗೂಡಾಗಿ ಮಾಡಿದ್ದಾರೆ. ಅವರು ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳು ಸುಲಭವಾಗಿ ವಾಸ ಮಾಡುವಂತಹ ಕಟ್ಟಿಗೆಯ ಗೂಡೊಂದನ್ನು ನಿರ್ಮಿಸಿದರು. ಇಂದು ಬೆನಾರಸ್ನ ಅನೇಕ ಮನೆಗಳು ಈ ಅಭಿಯಾನಕ್ಕೆ ಸೇರುತ್ತಿವೆ. ಇದರಿಂದಾಗಿ ಮನೆಗಳಲ್ಲಿ ಅದ್ಭುತ ನೈಸರ್ಗಿಕ ವಾತಾವರಣವೂ ಸೃಷ್ಟಿಯಾಗಿದೆ. ಪ್ರಕೃತಿ, ಪರಿಸರ, ಪ್ರಾಣಿಗಳು, ಪಕ್ಷಿಗಳಿಗಾಗಿ ಕೂಡಾ ನಾವು ಏನನ್ನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ. ನಾವು ಕೂಡಾ ಇಂತಹ ಪ್ರಯತ್ನಗಳನ್ನು ಮಾಡಬೇಕು.
ಇಂತಹ ನನ್ನ ಮತ್ತೊರ್ವ ಸ್ನೇಹಿತ ಬಿಜಯ್ಕುಮಾರ್ ಕಾಬಿ ಅವರು. ಬಿಜಯ್ ಅವರು ಒಡಿಶ್ಸಾದ ಕೇಂದ್ರಪಾರ ನಿವಾಸಿ. ಕೇಂದ್ರಪಾರ ಸಮುದ್ರದ ತೀರದಲ್ಲಿದೆ. ಆದ್ದರಿಂದ, ಸಮುದ್ರ ಎತ್ತರೆತ್ತರದ ಅಲೆಗಳು ಮತ್ತು ಚಂಡಮಾರುತಕ್ಕೆ ಗುರಿಯಾಗಬಹುದಾದ ಅನೇಕ ಗ್ರಾಮಗಳು ಈ ಜಿಲ್ಲೆಯಲ್ಲಿವೆ. ಇದರಿಂದ ಕೆಲವೊಮ್ಮೆ ಸಾಕಷ್ಟು ಹಾನಿ ಉಂಟಾಗುತ್ತದೆ. ಈ ನೈಸರ್ಗಿಕ ವಿಪತ್ತನ್ನು ತಡೆಯಲು ಯಾರಿಗಾದರೂ ಸಾಧ್ಯವಾಗುತ್ತದೆ ಎಂದಾದರೆ ಅದು ಪ್ರಕೃತಿಗೆ ಮಾತ್ರ ಎಂದು ಬಿಜೋಯ್ ಅರಿತರು. ಇನ್ನೇನು- ಬಿಜಯ್ ಅವರು ಬಡಾಕೋಟ್ ಗ್ರಾಮದಿಂದ ತಮ್ಮ ಕಾರ್ಯಾಚರಣೆ ಆರಂಭಿಸಿಯೇ ಬಿಟ್ಟರು. ಅವರು 12 ವರ್ಷ- ಸ್ನೇಹಿತರೇ, 12 ವರ್ಷಗಳ ಕಾಲ, ಕಷ್ಟಪಟ್ಟು, ಗ್ರಾಮದ ಹೊರಭಾಗದಲ್ಲಿ ಸಮುದ್ರದ ಕಡೆಗೆ 25 ಎಕರೆ Mangrove ಅರಣ್ಯವನ್ನು ಬೆಳೆಸಿಯೇ ಬಿಟ್ಟರು. ಇಂದು ಈ ಕಾಡು ಈ ಗ್ರಾಮವನ್ನು ರಕ್ಷಿಸುತ್ತಿದೆ. ಇಂತಹದ್ದೇ ಕೆಲಸವನ್ನು ಒಡಿಶ್ಸಾದ ಪಾರಾದೀಪ್ ಜಿಲ್ಲೆಯ ಓರ್ವ ಇಂಜಿನಿಯರ್ ಅಮ್ರೇಶ್ ಸುಮಂತ್ ಅವರು ಕೂಡಾ ಮಾಡಿದ್ದಾರೆ. ಅಮ್ರೆಶ್ ಅವರು ಸಣ್ಣ ಕಾಡುಗಳನ್ನು ಬೆಳೆಸಿದ್ದಾರೆ, ಇದರಿಂದ ಇಂದು ಅನೇಕ ಗ್ರಾಮಗಳು ರಕ್ಷಿಸಲ್ಪಡುತ್ತಿವೆ.
ಸ್ನೇಹಿತರೇ, ಈ ರೀತಿಯ ಕೆಲಸ ಕಾರ್ಯಗಳಲ್ಲಿ, ನಾವು ಸಮಾಜವನ್ನು ಜೊತೆಗೂಡಿಸಿಕೊಂಡಲ್ಲಿ, ಫಲಿತಾಂಶ ಬಹಳ ಉತ್ತಮವಾಗಿರುತ್ತದೆ. ಉದಾಹರಣೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮರಿಮುತ್ತು ಯೋಗನಾಥನ್ ಎಂಬ ವ್ಯಕ್ತಿ ಇದ್ದಾರೆ. ಯೋಗನಾಥನ್ ತಮ್ಮ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಾರೆ, ಮತ್ತು ಅದರೊಂದಿಗೆ ಒಂದು ಸಸ್ಯವನ್ನು ಸಹ ಉಚಿತವಾಗಿ ನೀಡುತ್ತಾರೆ. ಈ ರೀತಿಯಾಗಿ, ಯೋಗನಾಥನ್ ಅವರು ಅದೆಷ್ಟು ಮರಗಳನ್ನು ನೆಡಿಸಿದ್ದಾರೋ ಲೆಕ್ಕವೇ ಇಲ್ಲ. ಯೋಗನಾಥನ್ ಅವರು ತಮ್ಮ ವೇತನದ ಹೆಚ್ಚಿನ ಭಾಗವನ್ನು ಈ ಕಾರ್ಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಈಗ ಇದನ್ನು ಕೇಳಿದ ನಂತರ, ಮರಿಮುತ್ತು ಯೋಗನಾಥನ್ ಅವರ ಕೆಲಸವನ್ನು ಮೆಚ್ಚದ ನಾಗರಿಕ ಯಾರಿರುತ್ತಾರೆ ಹೇಳಿ-ಅವರ ಸ್ಪೂರ್ತಿದಾಯಕ ಕಾರ್ಯಕ್ಕಾಗಿ ನಾನು ಅವರ ಪ್ರಯತ್ನಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ‘ವೇಸ್ಟ್ ಸೇ ವೆಲ್ತ್’ ಅಂದರೆ ‘ಕಸದಿಂದ ರಸ’ತಯಾರಿಸುವ ಬಗ್ಗೆ ನೋಡಿದ್ದೇವೆ, ಕೇಳಿದ್ದೇವೆ ಮತ್ತು ಇತರರಿಗೂ ಹೇಳುತ್ತಲೇ ಇರುತ್ತೇವೆ. ಅದೇ ರೀತಿಯಲ್ಲಿ, ತ್ಯಾಜ್ಯವನ್ನು ಮೌಲ್ಯವಾಗಿ ಪರಿವರ್ತಿಸುವ ಕೆಲಸವೂ ನಡೆಯುತ್ತಿದೆ. ಅಂತಹ ಒಂದು ಉದಾಹರಣೆ ಕೇರಳದ ಕೊಚ್ಚಿಯ ಸೇಂಟ್ತೆರೇಸಾ ಕಾಲೇಜು. ನನಗೆ ನೆನಪಿದೆ 2017 ರಲ್ಲಿ ನಾನು ಈ ಕಾಲೇಜಿನ ಕ್ಯಾಂಪಸ್ನಲ್ಲಿ ಬುಕ್ರೀಡಿಂಗ್ ಆಧರಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಈ ಕಾಲೇಜಿನ ವಿದ್ಯಾರ್ಥಿಗಳು ಮರುಬಳಕೆ ಮಾಡಬಹುದಾದ ಆಟಿಕೆಗಳನ್ನು ತಯಾರಿಸುತ್ತಿದ್ದಾರೆ, ಅದೂ ತುಂಬಾ ಸೃಜನಶೀಲ ರೀತಿಯಲ್ಲಿ. ಈ ವಿದ್ಯಾರ್ಥಿಗಳು ಆಟಿಕೆಗಳನ್ನು ತಯಾರಿಸಲು ಹಳೆಯ ಬಟ್ಟೆಗಳು, ಬಿಸಾಡಲಾಗಿರುವ ಮರದ ತುಂಡುಗಳು, ಚೀಲಗಳು ಮತ್ತು ಪೆಟ್ಟಿಗೆಗಳನ್ನು ಬಳಸುತ್ತಿದ್ದಾರೆ. ಓರ್ವ ವಿದ್ಯಾರ್ಥಿ Puzzle ತಯಾರಿಸಿದರೆ, ಮತ್ತೋರ್ವ ವಿದ್ಯಾರ್ಥಿ ಕಾರು ಅಥವಾ ರೈಲು ತಯಾರಿಸುತ್ತಿದ್ದಾರೆ. ಆಟಿಕೆಗಳು ಸುರಕ್ಷಿತವಾಗಿರುವ ಜೊತೆಜೊತೆಗೆ ಮಕ್ಕಳಿಗೆ ಬಳಕೆ ಸ್ನೇಹಿಯಾಗಿರಬೇಕು ಎಂಬ ಅಂಶಕ್ಕೆ ಇಲ್ಲಿ ವಿಶೇಷ ಗಮನ ನೀಡಲಾಗುತ್ತದೆ. ಮತ್ತು ಈ ಸಂಪೂರ್ಣ ಪ್ರಯತ್ನದ ಒಂದು ಒಳ್ಳೆಯ ವಿಷಯವೆಂದರೆ ಈ ಆಟಿಕೆಗಳನ್ನು ಅಂಗನವಾಡಿ ಮಕ್ಕಳಿಗೆ ಆಟವಾಡಲು ನೀಡಲಾಗುತ್ತದೆ. ಇಂದು ಭಾರತ, ಆಟಿಕೆಗಳ ತಯಾರಿಕೆಯಲ್ಲಿ ಸಾಕಷ್ಟು ಮುಂದುವರಿಯುತ್ತಿದ್ದು, ‘ವೇಸ್ಟ್ ನಿಂದ ವ್ಯಾಲ್ಯೂ’, ‘ಕಸದಿಂದ ರಸ’ ಎಂಬ ಈ ಅಭಿಯಾನ, ಈ ಆಧುನಿಕ ಪ್ರಯತ್ನ ಬಹಳ ಮಹತ್ವದ್ದೆನಿಸುತ್ತದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಪ್ರೊಫೆಸರ್ ಶ್ರೀನಿವಾಸ್ ಪದಕಂಡಲಾ ಎನ್ನುವ ವ್ಯಕ್ತಿಯೊಬ್ಬರು ಇದ್ದಾರೆ. ಅವರು ಅತ್ಯಂತ ಆಸಕ್ತಿದಾಯಕ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಆಟೋಮೊಬೈಲ್ ಮೆಟಲ್ ಸ್ಕ್ರಾಪ್ಗಳಿಂದ ಶಿಲ್ಪಗಳನ್ನು ರಚಿಸಿದ್ದಾರೆ. ಅವರು ಸೃಷ್ಟಿಸಿರುವ ಈ ಬೃಹತ್ ಶಿಲ್ಪಗಳನ್ನು ಸಾರ್ವಜನಿಕ ಉದ್ಯಾನವನಗಳಲ್ಲಿ ಸ್ಥಾಪಿಸಲಾಗಿದೆ ಮತ್ತು ಜನರು ಅವುಗಳನ್ನು ಬಹಳ ಉತ್ಸಾಹದಿಂದ ನೋಡುತ್ತಿದ್ದಾರೆ. ಇದು ಎಲೆಕ್ಟ್ರಾನಿಕ್ ಮತ್ತು ಆಟೋಮೊಬೈಲ್ ತ್ಯಾಜ್ಯ ಮರುಬಳಕೆಯ ನವೀನ ಪ್ರಯೋಗವಾಗಿದೆ. ನಾನು ಕೊಚ್ಚಿ ಮತ್ತು ವಿಜಯವಾಡದ ಈ ಪ್ರಯತ್ನಗಳನ್ನು ಮತ್ತೊಮ್ಮೆ ಶ್ಲಾಘಿಸುತ್ತೇನೆ ಮತ್ತು ಅಂತಹ ಪ್ರಯತ್ನಗಳನ್ನು ಮಾಡುವುದಕ್ಕೆ ಹೆಚ್ಚಿನ ಜನರು ಮುಂದೆ ಬರುತ್ತಾರೆ ಎಂದು ಭಾವಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತೀಯರು ವಿಶ್ವದ ಯಾವುದೇ ಮೂಲೆಗೆ ಹೋದರೂ, ಅಲ್ಲಿ ಅವರು ತಾವು ಭಾರತೀಯರೆಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಮ್ಮ ಯೋಗ, ಆಯುರ್ವೇದ, ತತ್ತ್ವಶಾಸ್ತ್ರ ಹೀಗೆ ನಾವು ಹೆಮ್ಮೆ ಪಡುವಂತಹ ವಿಷಯಗಳು ನಮ್ಮಲ್ಲಿ ಏನೆಲ್ಲಾ ಇವೆಯೋ. ಹಾಗೆಯೇ ನಮ್ಮ ಸ್ಥಳೀಯ ಭಾಷೆ, ಮಾತು, ಗುರುತು, ಉಡುಗೆ-ತೊಡುಗೆ, ಆಹಾರ-ಪಾನೀಯ ಎಲ್ಲದರ ಬಗ್ಗೆಯೂ ನಮಗೆ ಹೆಮ್ಮೆ ಇದೆ. ನಾವು ಹೊಸದನ್ನು ಕಂಡುಕೊಳ್ಳಬೇಕು, ಜೀವನವೆಂದರೆ ಅದೇ, ಆದರೆ ಅದೇ ವೇಳೆ ಹಳೆಯದನ್ನು ಖಂಡಿತಾ ಕಳೆದುಕೊಳ್ಳಬಾರದು. ನಮ್ಮ ಸುತ್ತಮುತ್ತಲಿನ ಅಪಾರ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು, ಅವು ಹೊಸ ಪೀಳಿಗೆಯನ್ನು ತಲುಪಲು ಶ್ರಮಿಸಬೇಕು. ಈ ಕೆಲಸವನ್ನು ಅಸ್ಸಾಂ ನಿವಾಸಿಯಾಗಿರುವ ಸಿಕಾರಿ ಟಿಸ್ಸೌ ಬಹಳ ಸಮರ್ಪಣಾ ಭಾವದೊಂದಿಗೆ ಮಾಡುತ್ತಿದ್ದಾರೆ. ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ 'ಸಿಕಾರಿ ಟಿಸ್ಸೌ' ಕಳೆದ 20 ವರ್ಷಗಳಿಂದ ಕಾರ್ಬಿ ಭಾಷೆಯ ದಾಖಲೀಕರಣ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ, 'ಕಾರ್ಬಿ ಬುಡಕಟ್ಟು ಜನಾಂಗದ ಸೋದರ ಸೋದರಿಯರ ಭಾಷೆಯಾಗಿದ್ದ 'ಕಾರ್ಬಿ' ಇಂದು ಮುಖ್ಯವಾಹಿನಿಯಿಂದ ಕಣ್ಮರೆಯಾಗುತ್ತಿದೆ. ಸಿಕಾರಿ ಟಿಸ್ಸೌ ಅವರು ತಮ್ಮ ಈ ಅಸ್ಮಿತೆಯನ್ನು ಗುರುತನ್ನು ರಕ್ಷಿಸಬೇಕೆಂದು ನಿರ್ಧರಿಸಿದರು. ಮತ್ತು ಇಂದು ಅವರ ಪ್ರಯತ್ನಗಳ ಫಲವಾಗಿ ಕಾರ್ಬಿ ಭಾಷೆಕುರಿತ ಅನೇಕ ವಿಷಯಗಳು ದಾಖಲಿಸಲ್ಪಟ್ಟಿದೆ. ಅವರ ಈ ಪ್ರಯತ್ನದಿಂದಾಗಿ ಅನೇಕ ಸ್ಥಳಗಳಲ್ಲಿ ಅವರು ಮೆಚ್ಚುಗೆ ಗಳಿಸಿದ್ದಾರೆ ಮತ್ತು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಸಿಕಾರಿ ಟಿಸ್ಸೌಅವರನ್ನು 'ಮನ್ ಕಿ ಬಾತ್' ಮೂಲಕ ನಾನು ಅಭಿನಂದಿಸುತ್ತೇನೆ, ಆದರೆ ದೇಶದ ಅನೇಕ ಮೂಲೆಗಳಲ್ಲಿ, ಈ ರೀತಿಯ ಅನೇಕ ಅನ್ವೇಷಕರು ಒಂದಲ್ಲ ಒಂದು ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡುತ್ತಲೇ ಇರುತ್ತಾರೆ, ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಯಾವುದೇ ‘ಹೊಸ ಆರಂಭ’ ಅಂದರೆ ‘ನ್ಯೂ ಬಿಗಿನಿಂಗ್’ ಯಾವಾಗಲೂ ಬಹಳ ವಿಶೇಷವಾಗಿಯೇ ಇರುತ್ತದೆ. ಹೊಸ ಆರಂಭದ ಅರ್ಥ- ಹೊಸ ಸಂಭಾವ್ಯತೆಗಳು – ಹೊಸ ಪ್ರಯತ್ನಗಳು. ಮತ್ತು ಹೊಸ ಪ್ರಯತ್ನಗಳೆಂದರೆ, ಹೊಸ ಶಕ್ತಿ ಮತ್ತು ಹೊಸ ಚೈತನ್ಯ ಎಂದರ್ಥ. ಈ ಕಾರಣದಿಂದಾಗಿಯೇ, ಬೇರೆ ಬೇರೆ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ವೈವಿಧ್ಯತೆಯಿಂದ ತುಂಬಿದ ನಮ್ಮ ಸಂಸ್ಕೃತಿಯಲ್ಲಿ ಯಾವುದೇ “ಆರಂಭವನ್ನು” ಉತ್ಸವದಂತೆ ಆಚರಿಸುವುದು ಒಂದು ಸಂಪ್ರದಾಯವಾಗಿದೆ. ಮತ್ತು ವರ್ಷದ ಈ ಸಮಯ ಹೊಸ ಆರಂಭ ಹಾಗೂ ಹೊಸ ಉತ್ಸವದ ಆಗಮನ ಕೂಡಾಆಗಿದೆ. ಹೋಳಿ ಹಬ್ಬವನ್ನು ಕೂಡಾ ವಸಂತೋತ್ಸವದ ರೂಪದಲ್ಲಿ ಆಚರಿಸುವುದು ಸಂಪ್ರದಾಯವಾಗಿದೆ. ನಾವು ಬಣ್ಣಗಳಿಂದ ಹೋಳಿ ಹಬ್ಬವನ್ನು ಆಚರಿಸುವ ಸಮಯದಲ್ಲಿ, ವಸಂತ ಕೂಡಾ ನಮ್ಮ ನಾಲ್ಕೂ ದಿಕ್ಕಿನಲ್ಲಿ ಹೊಸ ಬಣ್ಣ ತುಂಬುತ್ತಿರುತ್ತಾನೆ. ಈ ಸಮಯದಲ್ಲಿ, ಹೂವುಗಳು ಅರಳಲು ಪ್ರಾರಂಭಿಸುತ್ತವೆ ಮತ್ತು ಪ್ರಕೃತಿಚಿಗುರಿ ನಿಲ್ಲುತ್ತದೆ. ಶೀಘ್ರದಲ್ಲೇ ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷವನ್ನು ಕೂಡಾ ಆಚರಿಸಲಾಗುವುದು. ಅದು ಯುಗಾದಿ ಅಥವಾ ಪುಥಂಡು ಆಗಿರಲಿ, ಗುಡಿ ಪಡ್ವಾ ಅಥವಾ ಬಿಹು, ಬೈಸಾಖಿ ಆಗಿರಲಿ – ಇಡೀ ದೇಶವು ಉತ್ಸಾಹ, ಉಲ್ಲಾಸ ಮತ್ತು ಹೊಸ ನಿರೀಕ್ಷೆಗಳ ಬಣ್ಣದಲ್ಲಿ ಮಿಂದಿರುವಂತೆ ಕಾಣುತ್ತದೆ. ಅದೇ ವೇಳೆ, ಕೇರಳವು ವಿಶು ಎಂಬ ಸುಂದರ ಹಬ್ಬವನ್ನು ಆಚರಿಸುತ್ತದೆ. ಇದರ ನಂತರ ಶೀಘ್ರದಲ್ಲೇ ಚೈತ್ರ ನವರಾತ್ರಿಯ ಪವಿತ್ರ ಸಂದರ್ಭವೂ ಬರಲಿದೆ. ಚೈತ್ರ ಮಾಸದ ಒಂಬತ್ತನೇ ದಿನ, ನಾವು ರಾಮ ನವಮಿಯ ಹಬ್ಬವನ್ನು ಆಚರಿಸುತ್ತೇವೆ. ಇದನ್ನು ಭಗವಾನ್ ರಾಮನ ಜನ್ಮದಿನ ಮತ್ತು ನ್ಯಾಯ ಮತ್ತು ಪರಾಕ್ರಮದ ಹೊಸ ಯುಗದ ಆರಂಭವಾಗಿಯೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಉತ್ಸಾಹ ಉಲ್ಲಾಸದೊಂದಿಗೆ ಭಕ್ತಿಯ ವಾತಾವರಣವೂ ಇರುತ್ತದೆ, ಅದು ಜನರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆ, ಅವರನ್ನು ಕುಟುಂಬ ಮತ್ತು ಸಮಾಜದೊಂದಿಗೆ ಜೋಡಿಸುತ್ತದೆ, ಪರಸ್ಪರ ಸಂಬಂಧಗಳನ್ನು ಬಲಪಡಿಸುತ್ತದೆ. ಈ ಹಬ್ಬಗಳ ಸಂದರ್ಭದಲ್ಲಿ, ದೇಶವಾಸಿಗಳಿಗೆ ನಾನು ಶುಭ ಹಾರೈಸುತ್ತೇನೆ.
ಸ್ನೇಹಿತರೇ, ಈ ಸಮಯದಲ್ಲಿ ಏಪ್ರಿಲ್ 4 ರಂದು ದೇಶವು ಈಸ್ಟರ್ ಹಬ್ಬವನ್ನು ಆಚರಿಸಲಿದೆ. ಈಸ್ಟರ್ ಹಬ್ಬವನ್ನು ಯೇಸು ಕ್ರಿಸ್ತನ ಪುನರುತ್ಥಾನದ ದಿನವಾಗಿ ಆಚರಿಸಲಾಗುತ್ತದೆ. ಸಾಂಕೇತಿಕವಾಗಿ, ಈಸ್ಟರ್ ಜೀವನದ ಹೊಸ ಆರಂಭದೊಂದಿಗೆ ಜೋಡಣೆಯಾಗಿದೆ. ಈಸ್ಟರ್ ಹಬ್ಬ ಆಶಯಗಳ ಪುನರುತ್ಥಾನವನ್ನು ಸಂಕೇತಿಸುತ್ತದೆ.
ಈ ಪವಿತ್ರ ದಿನದ ಸಂದರ್ಭದಂದು, ನಾನು ಕೇವಲ ಭಾರತದ ಕ್ರಿಶ್ಚಿಯನ್ ಸಮುದಾಯವರಿಗೆ ಮಾತ್ರವಲ್ಲದೇ, ವಿಶ್ವದ ಕ್ರಿಶ್ಚಿಯನ್ ಸಮುದಾಯಕ್ಕೆ ಶುಭಾಶಯ ಹೇಳಲು ಬಯಸುತ್ತೇನೆ. (On this holy and auspicious occasion, I greet not only the Christian Community in India, but also Christians globally.)
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನ್ ಕಿ ಬಾತ್' ನಲ್ಲಿ ನಾವು 'ಅಮೃತ್ ಮಹೋತ್ಸವ್' ಮತ್ತು ದೇಶಕ್ಕಾಗಿ ನಮ್ಮ ಕರ್ತವ್ಯ ಪಾಲನೆಯ ಬಗ್ಗೆ ಮಾತನಾಡಿದ್ದೇವೆ. ನಾವು ಹಬ್ಬ ಹರಿದಿನ, ಉತ್ಸವಗಳ ಬಗ್ಗೆಯೂ ಚರ್ಚಿಸಿದ್ದೇವೆ. ಏತನ್ಮಧ್ಯೆ, ನಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೆನಪಿಸುವ ಮತ್ತೊಂದು ಹಬ್ಬ ಬರಲಿದೆ. ಅದು ಏಪ್ರಿಲ್ 14 – ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ. ಈ ಬಾರಿ 'ಅಮೃತ ಮಹೋತ್ಸವ'ದಲ್ಲಿ ಈ ಸಂದರ್ಭ ಇದು ಇನ್ನಷ್ಟು ವಿಶೇಷವಾಗಿದೆ. ಬಾಬಾ ಸಾಹೇಬರ ಈ ಜನ್ಮ ದಿನಾಚರಣೆಯನ್ನು ನಾವು ಸ್ಮರಣೀಯವಾಗಿಸುತ್ತೇವೆ, ನಮ್ಮ ಕರ್ತವ್ಯ ಪಾಲನೆಯ ಸಂಕಲ್ಪ ಮಾಡುವ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸುತ್ತೇವೆ ಎಂಬ ಭರವಸೆ ನನಗಿದೆ. ಈ ವಿಶ್ವಾಸದೊಂದಿಗೆ, ನಿಮಗೆಲ್ಲರಿಗೂ ಹಬ್ಬದ ಸಂದರ್ಭಗಳಿಗಾಗಿ ಶುಭ ಹಾರೈಸುತ್ತೇನೆ. ನೀವೆಲ್ಲರೂ ಸಂತೋಷವಾಗಿರಿ, ಆರೋಗ್ಯವಾಗಿರಿ, ಮತ್ತು ಉತ್ಸಾಹದಿಂದ ಇರಿ. ಇದೇ ಹಾರೈಕೆಯೊಂದಿಗೆ, ಮತ್ತೊಮ್ಮೆ ನೆನಪಿಸುತ್ತಿದ್ದೇನೆ, ಔಷಧವೂ ಬೇಕು ಕಟ್ಟುನಿಟ್ಟಿನ ಎಚ್ಚರಿಕೆಯೂ ಇರಬೇಕು(ದವಾಯೀ ಭೀ, ಕಡಾಯೀ ಭೀ).
ಅನೇಕಾನೇಕ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ನಿನ್ನೆ ಮಾಘ ಪೌರ್ಣಮಿಯಿತ್ತು. ಮಾಘ ಮಾಸ ವಿಶೇಷವಾಗಿ ನದಿಗಳು, ಸರೋವರಗಳು ಮತ್ತು ಜಲಮೂಲಗಳಿಗೆ ಸಂಬಂಧಿಸಿದ್ದಾಗಿದೆ ಎಂದು ನಂಬಲಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಹೀಗೆ ಹೇಳಲಾಗಿದೆ :-
“ಮಾಘೆ ನಿಮಗ್ನಃ ಸಲಿಲೆ ಸುಶೀತೆ, ವಿಮುಕ್ತಪಾಪಾಃ ತ್ರಿದಿವಮ್ ಪ್ರಯಾಂತಿ”
ಇದರರ್ಥ ಮಾಘ ಮಾಸದಲ್ಲಿ ಯಾವುದೇ ಪವಿತ್ರ ಜಲಾಶಯದಲ್ಲಿ ಸ್ನಾನ ಮಾಡುವುದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶ್ವದ ಎಲ್ಲ ಸಮಾಜಗಳಲ್ಲೂ ನದಿಗೆ ಸಂಬಂಧಿಸಿದ ಒಂದಲ್ಲ ಒಂದು ಸಂಪ್ರದಾಯವಿದ್ದೇ ಇರುತ್ತದೆ. ನದಿತಟದಲ್ಲಿ ಅನೇಕ ನಾಗರಿಕತೆಗಳು ವಿಕಸನಗೊಂಡಿವೆ. ನಮ್ಮ ಸಂಸ್ಕೃತಿ ಸಾವಿರಾರು ವರ್ಷಗಳಷ್ಟು ಪುರಾತನವಾದ್ದರಿಂದ ಇದರ ವ್ಯಾಪ್ತಿ ನಮ್ಮಲ್ಲಿ ಸ್ವಲ್ಪ ಹೆಚ್ಚಾಗೇ ಇದೆ. ಭಾರತದ ಒಂದಲ್ಲಾ ಒಂದು ಮೂಲೆಯಲ್ಲಿ ಜಲಕ್ಕೆ ಸಂಬಂಧಿಸಿದ ಯಾವುದಾದರೊಂದು ಆಚರಣೆ ನಡೆಯದೇ ಇರುವಂತಹ ದಿನವೇ ಇಲ್ಲ. ಮಾಘ ಮಾಸದಲ್ಲಂತೂ ಜನರು ತಮ್ಮ ಮನೆ ಕುಟುಂಬ, ಸುಖ ಸೌಕರ್ಯಗಳನ್ನು ತೊರೆದು ತಿಂಗಳು ಪೂರ್ತಿ ನದೀತೀರಕ್ಕೆ ವಾಸಿಸಲು ತೆರಳುತ್ತಾರೆ. ಈ ಬಾರಿ ಹರಿದ್ವಾರದಲ್ಲಿ ಕುಂಭ ಮೇಳ ಜರುಗುತ್ತಿದೆ. ನೀರು ನಮಗೆ ಜೀವನ, ನಂಬಿಕೆ ಮತ್ತು ವಿಕಾಸದ ಮೂಲವಾಗಿದೆ. ನೀರು ಒಂದು ರೀತಿ ಸ್ಪರ್ಶಮಣಿಗಿಂತಲೂ ಮಹತ್ವಪೂರ್ಣವಾಗಿದೆ. ಸ್ಪರ್ಶಮಣಿಯ ಸ್ಪರ್ಶದಿಂದ ಕಬ್ಬಿಣವೂ ಬಂಗಾರವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ, ನೀರಿನ ಸ್ಪರ್ಶವೂ ಜೀವನಕ್ಕೆ, ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ. ಸ್ನೇಹಿತರೆ, ಮಾಘಮಾಸಕ್ಕೂ ಮತ್ತು ನೀರಿಗೂ ಇರುವ ಸಂಬಂಧಕ್ಕೆ ಇನ್ನೊಂದು ಕಾರಣವಿದೆ. ಇದರ ನಂತರ ಚಳಿಗಾಲ ಮುಗಿದುಹೋಗುತ್ತದೆ ಮತ್ತು ಬೇಸಿಗೆ ಅಡಿಯಿಡುತ್ತದೆ. ಆದ್ದರಿಂದ ಜಲಸಂರಕ್ಷಣೆಗೆ ನಾವು ಈಗಿನಿಂದಲೇ ಪ್ರಯತ್ನ ಮಾಡಬೇಕು. ಕೆಲ ದಿನಗಳ ನಂತರ ಇದೇ ಮಾರ್ಚ್ ತಿಂಗಳ 22 ರಂದು ‘ವಿಶ್ವ ಜಲ ದಿನಾಚರಣೆಯೂ’ ಇದೆ.
ನನಗೆ ಉತ್ತರ ಪ್ರದೇಶದ ಆರಾಧ್ಯ ಅವರು ಹೀಗೆ ಪತ್ರ ಬರೆದಿದ್ದಾರೆ–
ವಿಶ್ವದಲ್ಲಿ ಕೋಟ್ಯಂತರ ಜನರು ತಮ್ಮ ಜೀವನದ ಬಹಳಷ್ಟು ಸಮಯವನ್ನು ನೀರಿನ ಕೊರತೆಯನ್ನು ನೀಗಿಸುವುದರಲ್ಲೇ ವ್ಯಯಿಸುತ್ತಾರೆ. ‘ನೀರಿಲ್ಲದೆ ಎಲ್ಲವೂ ಬರಡು’ ಎಂದು ಸುಮ್ಮನೇ ಹೇಳಲಾಗಿಲ್ಲ. ನೀರಿನ ಸಂಕಷ್ಟವನ್ನು ಬಗೆಹರಿಸಲು ಪಶ್ಚಿಮ ಬಂಗಾಳದ ‘ಉತ್ತರ ದೀನಾಜ್ ಪುರ್’ ನಿಂದ ಸುಜೀತ್ ಜಿ ಅವರು ತುಂಬಾ ಒಳ್ಳೆಯ ಸಂದೇಶವನ್ನು ಕಳುಹಿಸಿದ್ದಾರೆ. ಸುಜೀತ್ ಅವರುಹೀಗೆ ಬರೆದಿದ್ದಾರೆ – ಪ್ರಕೃತಿ ಜಲರೂಪದಲ್ಲಿ ನಮಗೆ ಒಂದು ಸಾಮೂಹಿಕ ಕೊಡುಗೆಯನ್ನು ನೀಡಿದೆ. ಆದ್ದರಿಂದ ಅದನ್ನು ಸಂರಕ್ಷಿಸುವ ಜವಾಬ್ದಾರಿಯೂ ಎಲ್ಲರಿಗೂ ಸೇರಿದ್ದು. ಇವರು ಹೇಳಿದ್ದು ಸರಿಯೇ, ಸಾಮೂಹಿಕ ಕೊಡುಗೆಯಾದ್ದರಿಂದ ಸಾಮೂಹಿಕ ಜವಾಬ್ದಾರಿಯೂ ಇದೆ. ಸುಜೀತ್ ಅವರು ಸರಿಯಾಗೇ ಹೇಳಿದ್ದಾರೆ. ನದಿ, ಹಳ್ಳ ಕೊಳ್ಳ, ಮಳೆ ಅಥವಾ ಅಂತರ್ಜಲ, ಇವು ಎಲ್ಲರಿಗಾಗಿವೆ.
ಸ್ನೇಹಿತರೆ, ಒಂದು ಕಾಲದಲ್ಲಿ, ಗ್ರಾಮಗಳಲ್ಲಿ ಎಲ್ಲರೂ ಸೇರಿ ಬಾವಿಗಳು ಮತ್ತು ಹೊಂಡಗಳ ಸಂರಕ್ಷಣೆಯನ್ನು ಮಾಡುತ್ತಿದ್ದರು, ತಮಿಳುನಾಡಿನ ತಿರುಅಣ್ಣಾಮಲೈಯಲ್ಲಿ ಈಗ ಇಂಥದೇ ಒಂದು ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸ್ಥಳೀಯರು ತಮ್ಮ ಬಾವಿಗಳ ಸಂರಕ್ಷಣೆಗೆ ಆಂದೋಲನ ಕೈಗೊಂಡಿದ್ದಾರೆ. ಇವರು ತಮ್ಮ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಬಳಕೆಯಲ್ಲಿರದ ಬಾವಿಗಳ ಪುನರುಜ್ಜೀವನಕ್ಕೆ ಮುಂದಾಗಿದ್ದಾರೆ.
ಮಧ್ಯಪ್ರದೇಶದ ಅಗ್ರೋತಾ ಗ್ರಾಮದ ಬಬಿತಾ ರಾಜ್ ಪೂತ್ ಅವರು ಕೂಡಾ ಮಾಡುತ್ತಿರುವ ಕೆಲಸದಿಂದ ಕೂಡಾ ನಿಮಗೆಲ್ಲರಿಗೂ ಪ್ರೇರಣೆ ದೊರೆಯಲಿದೆ. ಬಬಿತಾ ಅವರ ಗ್ರಾಮ ಬುಂದೇಲ್ ಖಂಡದಲ್ಲಿದೆ. ಅವರ ಗ್ರಾಮದ ಬಳಿ ಹಿಂದೆ ಬಹುದೊಡ್ಡ ಕೊಳವಿತ್ತು. ಅದು ಒಣಗಿಹೋಗಿತ್ತು. ಅವರು ಗ್ರಾಮದ ಇತರ ಮಹಿಳೆಯರೊಡಗೂಡಿ ಕೊಳದವರೆಗೆ ನೀರನ್ನು ಹರಿಸಲು ಕಾಲುವೆಯೊಂದನ್ನು ನಿರ್ಮಿಸಿದರು. ಬಿದ್ದ ಮಳೆ ನೀರು ಈ ಕಾಲುವೆ ಮೂಲಕ ಕೊಳಕ್ಕೆ ಬಂದು ಸೇರುತ್ತಿತ್ತು. ಈಗ ಕೊಳ ನೀರಿನಿಂದ ತುಂಬಿ ತುಳುಕುತ್ತಿದೆ.
ಸ್ನೇಹಿತರೆ, ಉತ್ತರಾಖಂಡ್ ನ ಬಾಗೇಶ್ವರ್ ದಲ್ಲಿರುವ ಜಗದೀಶ್ ಕುನಿಯಾಲ್ ಅವರ ಕೆಲಸ ನಮಗೆ ಬಹಳಷ್ಟು ಕಲಿಸುತ್ತದೆ. ಜಗದೀಶ್ ಅವರ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶ ನೀರಿಗಾಗಿ ಪ್ರಾಕೃತಿಕ ಮೂಲವನ್ನು ಅವಲಂಬಿಸಿದ್ದವು. ಆದರೆ ಹಲವಾರು ವರ್ಷಗಳ ಹಿಂದೆ ಈ ನೀರಿನ ಮೂಲ ಒಣಗಿಹೋಗಿತ್ತು. ಇದರಿಂದ ಸಂಪೂರ್ಣ ಪ್ರದೇಶಕ್ಕೆ ನೀರಿನ ಸಮಸ್ಯೆ ಹೆಚ್ಚುತ್ತಲೇ ಹೋಯಿತು. ಜಗದೀಶ್ ಅವರು ಈ ಸಮಸ್ಯೆಗೆ ಗಿಡ ನೆಡುವ ಮೂಲಕ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದರು. ಅವರು ಸಂಪೂರ್ಣ ಪ್ರದೇಶದಲ್ಲಿ ಗ್ರಾಮದ ಜನರೊಂದಿಗೆ ಸೇರಿ ಸಾವಿರಾರು ಗಿಡಗಳನ್ನು ನೆಟ್ಟರು. ಆ ಪ್ರದೇಶದ ಒಣಗಿಹೋಗಿದ್ದ ನೀರಿನ ಮೂಲ ಇಂದು ಮತ್ತೆ ತುಂಬಿದೆ.
ಸ್ನೇಹಿತರೆ, ಈ ರೀತಿ ನೀರಿನ ಬಗ್ಗೆ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಭಾರತದ ಹೆಚ್ಚಿನ ಭಾಗಗಳಲ್ಲಿ ಮೇ–ಜೂನ್ ನಲ್ಲಿ ಮಳೆ ಆರಂಭವಾಗುತ್ತದೆ. ನಾವು ಈಗಿನಿಂದಲೇ ನಮ್ಮ ಸುತ್ತಮುತ್ತಲ ನೀರಿನ ಮೂಲಗಳ ಸ್ವಚ್ಛತೆಗೆ, ಮಳೆ ನೀರು ಸಂಗ್ರಹಕ್ಕೆ, 100 ದಿನಗಳ ಆಂದೋಲನವನ್ನು ಆರಂಭಿಸಬಹುದೇ? ಇದೇ ವಿಚಾರದೊಂದಿಗೆ ಕೆಲ ದಿನಗಳ ನಂತರ ಜಲಶಕ್ತಿ ಸಚಿವಾಲಯದಿಂದ ‘Catch the Rain’ ಎಂಬ ಆಂದೋಲನವನ್ನು ಆರಂಭಿಸಲಾಗುವುದು. ‘Catch the rain, where it falls, when it falls.’ ಎಂಬುದು ಈ ಆಂದೋಲನದ ಧ್ಯೇಯವಾಕ್ಯವಾಗಿದೆ. ನಾವು ಈಗಿನಿಂದಲೇ ಒಗ್ಗೂಡೋಣ. ಈಗಾಗಲೇ ಇರುವ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ದುರಸ್ಥಿ ಮಾಡಿಸೋಣ. ಗ್ರಾಮಗಳಲ್ಲಿ ಕೆರೆ ಕಾಲುವೆಗಳನ್ನು ಸ್ವಚ್ಛಗೊಳಿಸೋಣ. ಜಲಮೂಲಗಳಿಗೆ ಸಾಗುವ ನೀರಿನ ಮಾರ್ಗದಲ್ಲಿನ ಅಡೆತಡೆಗಳನ್ನು ತೊಡೆದುಹಾಕಿದರೆ ಹೆಚ್ಚೆಚ್ಚು ವರ್ಷಗಳವರೆಗೆ ಹೆಚ್ಚೆಚ್ಚು ಮಳೆ ನೀರನ್ನು ಸಂಗ್ರಹಿಸಬಹುದಾಗಿದೆ.
ನನ್ನ ಪ್ರಿಯ ದೇಶಬಾಂಧವರೆ, ಮಾಘಮಾಸ ಮತ್ತು ಅದರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮಹತ್ವದ ಕುರಿತು ಚರ್ಚೆಯಾದಾಗಲೆಲ್ಲ ಒಂದು ಹೆಸರು ಪ್ರಸ್ತಾಪವಾಗುತ್ತದೆ. ಆ ಹೆಸರು ಸಂತ ರವಿದಾಸ್ ಅವರದ್ದು. ಮಾಘ ಪೌರ್ಣಮಿಯಂದೇ ಸಂತ ರವಿದಾಸ್ ಅವರ ಜಯಂತಿ ಆಚರಿಸಲಾಗುತ್ತದೆ. ಇಂದಿಗೂ ಸಂತ ರವಿದಾಸ್ ಅವರ ಮಾತುಗಳು ಮತ್ತು ಜ್ಞಾನ ದಾರಿದೀಪವಾಗಿವೆ. ಅವರು ಹೀಗೆ ಹೇಳಿದ್ದರು…
ಏಕೈ ಮಾತಿ ಕೆ ಸಬ್ ಭಾಂಡೆ,
ಸಬ್ ಕಾ ಏಕೌ ಸಿರಜನಹಾರ್
ರವಿದಾಸ್ ವ್ಯಾಪೈ ಏಕೈ ಘಟ ಭೀತರ,
ಸಬಕೌ ಏಕೈ ಘಡೈ ಕುಮ್ಹಾರ್
ಅಂದರೆ, ನಾವೆಲ್ಲರೂ ಒಂದೇ ಮಣ್ಣಿನ ಪಾತ್ರೆಗಳಿದ್ದಂತೆ. ನಮ್ಮೆಲ್ಲರ ನಿರ್ಮಾತೃ ಒಬ್ಬನೇ, ಸಂತ ರವಿದಾಸ್ ಅವರು ಸಮಾಜದಲ್ಲಿ ವ್ಯಾಪಿಸಿರುವಂತಹ ವಿಕೃತಿಗಳ ಬಗ್ಗೆ ಎಂದಿಗೂ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಈ ವಿಕೃತಿಗಳನ್ನು ಸಮಾಜದ ಮುಂದಿಟ್ಟರು, ಅದರಿಂದ ಹೊರಬರುವ ಮಾರ್ಗ ಸೂಚಿಸಿದರು, ಮೀರಾಜಿ ಕೂಡಾ ಇದನ್ನೇ ಹೇಳಿದ್ದರು
‘ಗುರು ಮಿಲಿಯಾ ರೈದಾಸ್, ದೀನ್ಹಿ ಜ್ಞಾನ ಕಿ ಗುಟಕಿ’
ನಾನು ಸಂತ ರವಿದಾಸ್ ಅವರ ಜನ್ಮಸ್ಥಳ ವಾರಾಣಸಿಯೊಂದಿಗೆ ಸಂಬಂಧ ಹೊಂದಿರುವುದು ನನ್ನ ಸೌಭಾಗ್ಯ. ಆ ತೀರ್ಥಕ್ಷೇತ್ರದಲ್ಲಿ ಸಂತ ರವಿದಾಸ್ ಅವರ ಜೀವನದ ಆಧ್ಯಾತ್ಮಿಕ ಉತ್ತುಂಗದ ಮತ್ತು ಅವರ ಜ್ಞಾನದ ಬೆಳಕಿನ ಅನುಭವ ನನಗೆ ಆಗಿದೆ. ಸ್ನೇಹಿತರೆ, ರವಿದಾಸ್ ಅವರು ಹೀಗೆ ಹೇಳುತ್ತಿದ್ದರು–
ಕರಮ್ ಬಂಧನ್ ಮೆ ಬಂಧ ರಹಿಯೊ, ಫಲ್ ಕಿ ನಾ ತಜ್ಜಿಯೋ ಆಸ್
ಕರ್ಮ್ ಮಾನವ ಕಾ ಧರ್ಮ ಹೈ, ಸತ್ ಭಾಖೌ ರವಿದಾಸ್
ಅಂದರೆ ನಾವು ನಿರಂತರವಾಗಿ ನಮ್ಮ ಕರ್ಮಗಳನ್ನು ಮಾಡುತ್ತಿರಬೇಕು, ಅದಕ್ಕೆ ಫಲ ಖಂಡಿತ ದೊರೆಯುತ್ತದೆ. ಅಂದರೆ ಕರ್ಮದಿಂದ ಸಿದ್ಧಿ ಖಂಡಿತ ಸಾಧ್ಯ. ನಮ್ಮ ಯುವಕರು ಸಂತ ರವಿದಾಸ್ ರಿಂದ ಖಂಡಿತ ಕಲಿಯಬೇಕಿದೆ. ಯುವಕರು ಯಾವುದೇ ಕೆಲಸ ಮಾಡಲು ತಮ್ಮನ್ನು ತಾವು ಹಳೆಯ ಪದ್ಧತಿಗಳಿಂದ ಬಂಧಿಸಿಕೊಳ್ಳಬಾರದು. ನೀವು ನಿಮ್ಮ ಜೀವನವನ್ನು ಸ್ವತಃ ನಿರ್ಧರಿಸಿ. ನಿಮ್ಮ ಪದ್ಧತಿಗಳನ್ನು ಸ್ವತಃ ರೂಪಿಸಿ. ನಿಮ್ಮ ಗುರಿಗಳನ್ನು ನೀವೇ ನಿರ್ಧರಿಸಿಕೊಳ್ಳಿ. ನಿಮ್ಮ ವಿವೇಚನೆ ಮತ್ತು ಆತ್ಮವಿಶ್ವಾಸ ಧೃಡವಾಗಿದ್ದರೆ ನೀವು ವಿಶ್ವದಲ್ಲಿ ಯಾವುದೇ ವಿಷಯಕ್ಕೆ ಹೆದರಬೇಕಿಲ್ಲ. ನಾನು ಏಕೆ ಹೀಗೆ ಹೇಳುತ್ತೇನೆಂದರೆ, ಹಲವಾರು ಬಾರಿ ನಮ್ಮ ಯುವಕರು ರೂಢಿಯಲ್ಲಿರುವ ಆಲೋಚನೆಗಳ ಒತ್ತಡದಿಂದ ತಮಗೆ ಇಷ್ಟವಾದ ಕೆಲಸವನ್ನು ಮಾಡಲಾಗುತ್ತಿಲ್ಲ. ಆದ್ದರಿಂದ ಹೊಸತನ್ನು ಆಲೋಚಿಸುವಲ್ಲಿ ಮತ್ತು ಹೊಸತನ್ನು ಮಾಡಲು ನೀವು ಎಂದಿಗೂ ಸಂಕೋಚಪಟ್ಟುಕೊಳ್ಳಬಾರದು. ಇದೇ ರೀತಿ ಸಂತ ರವಿದಾಸ್ ಅವರು ಮತ್ತೊಂದು ಮಹತ್ವಪೂರ್ಣ ಸಂದೇಶ ನೀಡಿದ್ದಾರೆ. ಅದು –‘ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ’ ಎಂಬುದಾಗಿದೆ. ನಾವು ನಮ್ಮ ಕನಸುಗಳಿಗಾಗಿ ಬೇರೆಯವರನ್ನು ಅವಲಂಬಿಸುವುದು ಒಳ್ಳೆಯದಲ್ಲ.ಯಾವುದು ಹೇಗಿದೆಯೋ ಅದು ಹಾಗೆಯೇ ಮುಂದುವರಿಯಲಿ. ಸಂತ ರವಿದಾಸ್ ಅವರು ಎಂದಿಗೂ ಇದನ್ನು ಪ್ರೋತ್ಸಾಹಿಸಲಿಲ್ಲ. ದೇಶದ ನಮ್ಮ ಯುವಜನತೆ ಕೂಡ ಹೀಗೆ ಮಾಡುತ್ತಿಲ್ಲ ಎಂಬುದನ್ನು ನಾವು ಕಾಣಬಹುದು. ಇಂದು ನಾನು ದೇಶದ ಯುವಜನತೆಯಲ್ಲಿ ನವ ಚೈತನ್ಯವನ್ನು ಕಂಡಾಗ ಸಂತ ರವಿದಾಸ್ ಅವರು ನಮ್ಮ ಯುವಜನತೆ ಬಗ್ಗೆ ಖಂಡಿತ ಹೆಮ್ಮೆಪಡುತ್ತಿದ್ದರು ಎಂದು ನನಗೆ ಅನ್ನಿಸುತ್ತದೆ.
ನನ್ನ ಪ್ರಿಯ ದೇಶಬಾಂಧವರೆ, ಇಂದು ‘ರಾಷ್ಟ್ರೀಯ ವಿಜ್ಞಾನ ದಿನ’ವೂ ಹೌದು. ಇಂದು ಭಾರತದ ಮಹಾನ್ ವಿಜ್ಞಾನಿ ಡಾ ಸಿ ವಿ ರಾಮನ್ ಅವರ ಸಂಶೋಧನೆ ‘ರಾಮನ್ ಎಫೆಕ್ಟ್’ ಗೆ ಅರ್ಪಿತವಾಗಿದೆ. ರಾಮನ್ ಎಫೆಕ್ಟ್ ಸಂಶೋಧನೆ ವಿಜ್ಞಾನದ ದಿಕ್ಕನ್ನೇ ಬದಲಿಸಿದೆ ಎಂದು ಕೇರಳದಿಂದ ಯೋಗೇಶ್ವರನ್ ಅವರು ನಮೋ ಆಪ್ ನಲ್ಲಿ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ಅತ್ಯುತ್ತಮ ಸಂದೇಶವನ್ನು ನಾಸಿಕ್ ನಿಂದ ಸ್ನೇಹಿಲ್ ಅವರು ಕಳುಹಿಸಿದ್ದಾರೆ. ನಮ್ಮ ದೇಶದಲ್ಲಿ ಅಸಂಖ್ಯಾತ ವಿಜ್ಞಾನಿಗಳಿದ್ದಾರೆ. ಅವರ ಕೊಡುಗೆಯಿಲ್ಲದೇ ವಿಜ್ಞಾನ ಇಷ್ಟೊಂದು ಸಾಧನೆ ಮಾಡಲಾಗದು ಎಂದು ಸ್ನೇಹಿಲ್ ಅವರು ಬರೆದಿದ್ದಾರೆ. ನಾವು ವಿಶ್ವದ ಇತರ ವಿಜ್ಞಾನಿಗಳ ಬಗ್ಗೆ ಹೇಗೆ ತಿಳಿದಿದ್ದೆವೆಯೋ ಹಾಗೆಯೇ ನಾವು ಭಾರತದ ವಿಜ್ಞಾನಿಗಳ ಬಗ್ಗೆಯೂ ಅರಿಯಬೇಕು. ನಾನೂ ಮನದ ಮಾತಿನ ಈ ಶ್ರೋತೃಗಳ ಮಾತನ್ನು ಒಪ್ಪುತ್ತೇನೆ. ನಮ್ಮ ಯುವಜನತೆ ಭಾರತದ ವೈಜ್ಞಾನಿಕ ಇತಿಹಾಸ ಹಾಗೂ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳಲಿ, ಅರ್ಥೈಸಿಕೊಳ್ಳಲಿ ಮತ್ತು ಚೆನ್ನಾಗಿ ಓದಲಿ ಎಂದು ನಾನು ಕೂಡ ಬಯಸುತ್ತೇನೆ. ಸ್ನೇಹಿತರೆ, ನಾವು ವಿಜ್ಞಾನದ ಬಗ್ಗೆ ಮಾತನಾಡುವಾಗ ಜನರು ಇದನ್ನು ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ ಮತ್ತು ಪ್ರಯೋಗಾಲಯಗಳಿಗೆ ಸೀಮಿತಗೊಳಿಸುತ್ತಾರೆ, ಆದರೆ ವಿಜ್ಞಾನದ ವಿಸ್ತಾರ ಇದಕ್ಕಿಂತ ಬಹಳ ದೊಡ್ಡದಾಗಿದೆ ಮತ್ತು ‘ಆತ್ಮನಿರ್ಭರ್ ಭಾರತ್’ / ಸ್ವಾವಲಂಬಿ ಭಾರತ ಆಂದೋಲನದಲ್ಲಿ ವಿಜ್ಞಾನದ ಕೊಡುಗೆ ಬಹಳ ದೊಡ್ಡದು. ನಾವು ವಿಜ್ಞಾನವನ್ನು ಲ್ಯಾಬ್ ಟು ಲ್ಯಾಂಡ್ ಎಂಬ ಮಂತ್ರದೊಂದಿಗೆ ಮುಂದುವರಿಸಬೇಕಿದೆ.
ಉದಾಹರಣೆಗೆ ಹೈದ್ರಾಬಾದ್ ನ ಚಿಂತಲ ವೆಂಕಟ ರೆಡ್ಡಿಯವರಿದ್ದಾರೆ –
ರೆಡ್ಡಿಯವರ ವೈದ್ಯ ಮಿತ್ರರೊಬ್ಬರು ‘ವಿಟಮಿನ್ ಡಿ’ ಕೊರತೆಯಿಂದಾಗುವ ರೋಗಗಳು ಮತ್ತು ಅಪಾಯಗಳ ಬಗ್ಗೆ ಹೇಳಿದ್ದರು. ರೆಡ್ಡಿಯವರು ಒಬ್ಬ ಕೃಷಿಕ. ಈ ಸಮಸ್ಯೆಯ ಪರಿಹಾರಕ್ಕೆ ಏನು ಮಾಡಬಹುದು ಎಂದು ಯೋಚಿಸಿದರು. ನಂತರ ಅವರು ಶ್ರಮಪಟ್ಟು ‘ವಿಟಮಿನ್ ಡಿ’ ಯುಕ್ತ ಗೋಧಿ ಮತ್ತು ಅಕ್ಕಿಯ ತಳಿಗಳನ್ನು ಸಿದ್ಧಪಡಿಸಿದರು. ಇದೇ ತಿಂಗಳು ಅವರಿಗೆ ಜಿನೀವಾದ ವಿಶ್ವದ ಬೌದ್ಧಿಕ ಸ್ವತ್ತು ಸಂಸ್ಥೆಯಿಂದ, ಪೇಟೆಂಟ್ ಕೂಡಾ ದೊರೆತಿದೆ. ಕಳೆದ ವರ್ಷ ವೆಂಕಟ ರೆಡ್ಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ನಮ್ಮ ಸರ್ಕಾರದ ಸೌಭಾಗ್ಯ.
ಇದೇ ರೀತಿ, ಲದ್ದಾಖ್ ನ ಉರಗೆನ್ ಫುತ್ಸೌಗ್ ಅವರು ಕೂಡಾ ನಾವೀನ್ಯಪೂರ್ಣ ಕೆಲಸ ಮಾಡುತ್ತಿದ್ದಾರೆ. ಇಷ್ಟೊಂದು ಎತ್ತರದ ಪ್ರದೇಶದಲ್ಲಿ ಕೃಷಿ ಕೈಗೊಂಡು ಸೈಕ್ಲಿಕ್ ರೀತಿಯಲ್ಲಿ ಸಾವಯವ ಕೃಷಿಯಿಂದ ಸುಮಾರು 20 ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಂದರೆ ಅವರು ಒಂದು ಬೆಳೆಯ ತ್ಯಾಜ್ಯಗಳನ್ನು ಮತ್ತೊಂದು ಬೆಳೆಗೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಇದು ಅದ್ಭುತ ವಿಷಯವಲ್ಲವೇ.
ಇದೇ ರೀತಿ ಗುಜರಾತ್ ನ ಪಾಟನ್ ಜಿಲ್ಲೆಯಲ್ಲಿ ಕಾಮರಾಜ್ ಭಾಯಿ ಚೌಧರಿಯವರು ಮನೆಯಲ್ಲೇ ನುಗ್ಗೆಕಾಯಿಯ ಉತ್ಕೃಷ್ಟ ಬೀಜಗಳನ್ನು ಉತ್ಪಾದಿಸಿದ್ದಾರೆ. ಇದನ್ನು ಕೆಲವು ಜನರು ಸರ್ಗವಾ, ಮೋರಿಂಗಾ, ಡ್ರಮ್ ಸ್ಟಿಕ್ ಎಂದು ಕೂಡಾ ಕರೆಯುತ್ತಾರೆ. ಉತ್ತಮ ಬೀಜಗಳಿಂದ ಬೆಳೆಯುವ ನುಗ್ಗೆಯ ಗುಣಮಟ್ಟ ಕೂಡಾ ಉತ್ತಮವಾಗಿರುತ್ತದೆ. ತಮ್ಮ ಫಸಲನ್ನು ಅವರು ಈಗ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಸ್ನೇಹಿತರೆ, ಇತ್ತೀಚೆಗೆ ಚಿಯಾ ಸೀಡ್ಸ್ ಹೆಸರನ್ನು ಬಹಳ ಕೇಳಿರುತ್ತೀರಿ. ಆರೋಗ್ಯ ಜಾಗೃತಿ ಹೊಂದಿರುವರು ಇದಕ್ಕೆ ಬಹಳ ಮಹತ್ವ ನೀಡುತ್ತಾರೆ. ವಿಶ್ವದಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ. ಭಾರತದಲ್ಲಿ ಇದನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಆದರೆ ಈಗ ಚಿಯಾ ಬೀಜಗಳಲ್ಲೂ ಸ್ವಾವಲಂಬನೆಗೆ ಜನರು ಮುಂದಾಗಿದ್ದಾರೆ. ಇದೇ ರೀತಿ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಹರಿಶ್ಚಂದ್ರ ಅವರು ಚಿಯಾ ಬೀಜಗಳ ಕೃಷಿ ಮಾಡುತ್ತಿದ್ದಾರೆ. ಚಿಯಾ ಬೀಜಗಳ ಕೃಷಿ ಅವರ ಆದಾಯ ಹೆಚ್ಚಿಸುತ್ತದೆ ಮತ್ತು ಸ್ವಾವಲಂಬಿ ಭಾರತಕ್ಕೂ ಸಹಕಾರಿಯಾಗಲಿದೆ.
ಸ್ನೇಹಿತರೆ, ಕೃಷಿ ತ್ಯಾಜ್ಯದಿಂದಲೂ ಆದಾಯ ಹೆಚ್ಚಳದ ಪ್ರಯತ್ನಗಳು ದೇಶಾದ್ಯಂತ ಯಶಸ್ವಿಯಾಗಿ ಸಾಗಿವೆ. ಮಧುರೈನ ಮುರುಗೇಸನ್ ಅವರು ಬಾಳೆ ತ್ಯಾಜ್ಯದಿಂದ ಹಗ್ಗವನ್ನು ತಯಾರಿಸುವ ಯಂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಮುರುಗೇಸನ್ ಅವರ ಈ ಆವಿಷ್ಕಾರದಿಂದ ಪರಿಸರ ಮತ್ತು ತ್ಯಾಜ್ಯಕ್ಕೂ ಪರಿಹಾರ ಸಿಗುತ್ತದೆ. ಅಲ್ಲದೆ ರೈತರಿಗೆ ಹೆಚ್ಚಿನ ಆದಾಯದ ಮಾರ್ಗವಾಗುವುದು.
ಸ್ನೇಹಿತರೆ, ‘ಮನದ ಮಾತಿನ’ ಶ್ರೋತೃಗಳಿಗೆ ಇಷ್ಟೊಂದು ಸಾಧಕರ ಬಗ್ಗೆ ಹೇಳುವ ನನ್ನ ಉದ್ದೇಶ ಏನು ಎಂದರೆ, ನಾವೆಲ್ಲರೂ ಇವರಿಂದ ಸ್ಪೂರ್ತಿ ಪಡೆಯಬೇಕು. ದೇಶದ ಪ್ರತಿಯೊಬ್ಬ ನಾಗರಿಕನೂ ತಮ್ಮ ಜೀವನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡಾಗ ಪ್ರತಿ ಕ್ಷೇತ್ರದಲ್ಲೂ, ಪ್ರಗತಿಗೆ ಮಾರ್ಗಗಳು ಹುಟ್ಟಿಕೊಳ್ಳುತ್ತವೆ ಮತ್ತು ದೇಶ ಕೂಡ ಸ್ವಾವಲಂಬಿಯಾಗುತ್ತದೆ. ದೇಶದ ಪ್ರತಿ ನಾಗರಿಕನೂ ಇದನ್ನು ಮಾಡಬಲ್ಲ ಎಂಬ ವಿಶ್ವಾಸ ನನಗಿದೆ.
ನನ್ನ ಪ್ರಿಯ ದೇಶಬಾಂಧವರೆ, ಕೋಲ್ಕತ್ತಾದ ರಂಜನ್ ಅವರು ತಮ್ಮ ಪತ್ರದಲ್ಲಿ ಬಹಳ ಆಸಕ್ತಿಕರ ಮತ್ತು ಮೂಲಭೂತ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಜೊತೆಗೆ ಬಹಳ ಉತ್ತಮ ರೀತಿಯಲ್ಲಿ ಅದಕ್ಕೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ. ನಾವು ಸ್ವಾವಲಂಬಿಯಾಗುವ ಕುರಿತು ಮಾತನಾಡುವಾಗ ಇದು ನಮಗೆ ಅನ್ವಯಿಸುವ ಬಗೆಯನ್ನು ಅವರು ವಿವರಿಸಿದ್ದಾರೆ. ಇದೇ ಪ್ರಶ್ನೆಗೆ ಉತ್ತರ ರೂಪದಲ್ಲಿ ಅವರು ಸ್ವತಃ ಹೀಗೆ ಬರೆದಿದ್ದಾರೆ – “ಸ್ವಾವಲಂಬಿ ಭಾರತ ಆಂದೋಲನ" ಕೇವಲ ಸರ್ಕಾರಿ ನೀತಿಯಲ್ಲ ಬದಲಿಗೆ ಅದು ಒಂದು ರಾಷ್ಟ್ರೀಯ ಚೈತನ್ಯವಾಗಿದೆ.” ಸ್ವಾವಲಂಬಿಯಾಗುವುದು ಎಂದರೆ ತಮ್ಮ ಅದೃಷ್ಟದ ಬಗ್ಗೆ ತಾವೇ ನಿರ್ಧರಿಸುವುದು ಎಂದು ಅವರು ನಂಬಿದ್ದಾರೆ. ರಂಜನ್ ಬಾಬು ಅವರ ಮಾತು ನೂರಕ್ಕೆ ನೂರು ಸತ್ಯ. ಅವರ ಮಾತನ್ನು ಮುಂದುವರಿಸಿ, ಸ್ವಾವಲಂಬನೆಯ ಮೊದಲ ಶರತ್ತು ನಮ್ಮ ದೇಶೀಯ ಉತ್ಪನ್ನಗಳ ಬಗ್ಗೆ ಹೆಮ್ಮೆ, ಸ್ವದೇಶಿಯರಿಂದ ಸಿದ್ಧಗೊಳಿಸಲಾದ ವಸ್ತುಗಳ ಬಗ್ಗೆ ಹೆಮ್ಮೆ ಎಂದು ಹೇಳಬಯಸುತ್ತೇನೆ. ಪ್ರತಿಯೊಬ್ಬ ದೇಶವಾಸಿಯೂ ಹೆಮ್ಮಪಟ್ಟಾಗ, ಪ್ರತಿಯೊಬ್ಬ ದೇಶವಾಸಿಯೂ ಕೈಜೋಡಿಸಿದಾಗ ಸ್ವಾವಲಂಬಿ ಭಾರತ ಎಂಬುದು ಕೇವಲ ಆರ್ಥಿಕ ಆಂದೋಲನವಾಗಿರದೇ ರಾಷ್ಟ್ರೀಯ ಚೈತನ್ಯವಾಗಿ ಬದಲಾಗುತ್ತದೆ. ಆಕಾಶದಲ್ಲಿ ಸ್ವದೇಶಿ ಯುದ್ಧ ವಿಮಾನ ತೇಜಸ್ ಕಸರತ್ತು ತೋರುವುದನ್ನು ನಾವು ನೋಡಿದಾಗ, ಭಾರತದಲ್ಲಿ ತಯಾರಿಸಲಾದ ಟ್ಯಾಂಕ್, ಭಾರತದಲ್ಲಿ ತಯಾರಿಸಲಾದ ಮಿಸೈಲ್ ನಮ್ಮ ಹೆಮ್ಮೆಯನ್ನು ಹೆಚ್ಚಿಸುತ್ತವೆ. ಸಮೃದ್ಧ ದೇಶಗಳಲ್ಲಿ ನಾವು ಮೆಟ್ರೋ ರೈಲುಗಳ ಕೋಚ್ ಗಳನ್ನು ನೋಡಿದಾಗ, ಡಜನ್ ಗಟ್ಟಲೆ ದೇಶಗಳಿಗೆ ಭಾರತದಲ್ಲಿ ಸಿದ್ಧವಾದ ಕೊರೊನಾ ವೈರಾಣು ಲಸಿಕೆ ತಲುಪಿಸುವುದನ್ನು ಕಂಡಾಗ ಸ್ವಾಭಿಮಾನದಿಂದ ಬೀಗುತ್ತೇವೆ. ಕೇವಲ ದೊಡ್ಡ ವಸ್ತುಗಳೇ ನಮ್ಮ ದೇಶವನ್ನು ಸ್ವಾವಲಂಬಿಗೊಳಿಸುತ್ತವೆ ಎಂದಲ್ಲ. ಭಾರತದಲ್ಲಿ ಸಿದ್ಧಗೊಳ್ಳುವ ವಸ್ತ್ರಗಳು, ಭಾರತದ ಕೌಶಲ್ಯಯುತ ಕುಶಲಕರ್ಮಿಗಳಿಂದ ತಯಾರಿಸಲಾದ ಕರಕುಶಲ ವಸ್ತುಗಳು, ಭಾರತದ ಎಲೆಕ್ಟ್ರಾನಿಕ್ ಉಪಕರಣಗಳು, ಭಾರತದ ಮೊಬೈಲ್ ಗಳು, ಎಲ್ಲ ಕ್ಷೇತ್ರದಲ್ಲೂ ಹೆಮ್ಮೆಪಡುವಂತಾಗಬೇಕಿದೆ. ನಾವು ಇದೇ ಆಲೋಚನೆಯೊಂದಿಗೆ ಮುಂದುವರಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಸ್ವಾವಲಂಬಿಯಾಗಬಲ್ಲೆವು. ಸ್ನೇಹಿತರೆ, ಸ್ವಾವಲಂಬಿ ಭಾರತದ ಈ ಮಂತ್ರ ದೇಶದ ಪ್ರತಿಯೊಂದು ಗ್ರಾಮವನ್ನು ತಲುಪುತ್ತಿದೆ ಎಂಬುದು ನನಗೆ ಸಂತಸ ತಂದಿದೆ. ಬಿಹಾರದ ಬೇತಿಯಾದಲ್ಲೂ ಇದೇ ಆಗಿದೆ. ಇದರ ಬಗ್ಗೆ ನಾನು ಮಾಧ್ಯಮದಲ್ಲಿ ಓದಿದೆ.
ಬೇತಿಯಾದ ನಿವಾಸಿ ಪ್ರಮೋದ್ ಅವರು ದಿಲ್ಲಿಯಲ್ಲಿ ಒಬ್ಬ ಟೆಕ್ನಿಶಿಯನ್ ಆಗಿ LED Bulb ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಬಲ್ಬ್ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅರಿತರು. ಆದರೆ ಕೊರೊನಾದಿಂದಾಗಿ ಅವರು ತಮ್ಮ ಮನೆಗೆ ಹಿಂದಿರುಗಬೇಕಾಯಿತು. ಹಿಂದಿರುಗಿದ ಮೇಲೆ ಪ್ರಮೋದ್ ಅವರು ಏನು ಮಾಡಿದರು ನಿಮಗೆ ಗೊತ್ತೇ? ಅವರು ಸ್ವತಃ LED Bulb ತಯಾರಿಸುವ ಚಿಕ್ಕ ಘಟಕವನ್ನು ಸ್ಥಾಪಿಸಿದರು. ಅವರು ತಮ್ಮ ಕ್ಷೇತ್ರದ ಕೆಲ ಯುವಕರ ಸಹಾಯ ಪಡೆದು ಕೆಲವೇ ತಿಂಗಳುಗಳಲ್ಲಿ ತಮ್ಮ ಮನೆಯಲ್ಲೇ ಇದ್ದುಕೊಂಡು ಕಾರ್ಖಾನೆಯ ಕೆಲಸಗಾರನಿಂದ ಮಾಲೀಕನಾಗುವ ಪಯಣವನ್ನು ಪೂರ್ಣಗೊಳಿಸಿದರು.
ಮತ್ತೊಂದು ಉದಾಹರಣೆ–ಉತ್ತರ ಪ್ರದೇಶದ ಗಢಮುಕ್ತೇಶ್ವರದ್ದು. ಗಢಮುಕ್ತೇಶ್ವರ್ ನ ಶ್ರೀ ಸಂತೋಷ್ ಅವರು ಕೊರೊನಾ ಕಾಲದಲ್ಲಿ ಅವರು ಸಂಕಷ್ಟವನ್ನು ಅವಕಾಶವನ್ನಾಗಿ ಹೇಗೆ ಪರಿವರ್ತಿಸಿದರು ಎಂಬ ಬಗ್ಗೆ ಬರೆಯುತ್ತಾರೆ. ಸಂತೋಷ್ ಅವರ ಪೂರ್ವಜರು ಅದ್ಭುತ ಕುಶಲಕರ್ಮಿಗಳಾಗಿದ್ದರು, ಅವರು ಚಾಪೆ ಹೆಣೆಯುತ್ತಿದ್ದರು. ಕೊರೊನಾ ಸಮಯದಲ್ಲಿ ಬಾಕಿ ಕೆಲಸಗಳೆಲ್ಲ ನಿಂತುಹೋದಾಗ ಇವರು ಉತ್ಸಾಹ ಮತ್ತು ಹುರುಪಿನಿಂದ ಚಾಪೆ ಹೆಣೆಯುವ ಕೆಲಸ ಆರಂಭಿಸಿದರು. ಬಹುಬೇಗ ಅವರಿಗೆ ಉತ್ತರ ಪ್ರದೇಶ ಮಾತ್ರವಲ್ಲ ಬೇರೆ ರಾಜ್ಯಗಳಿಂದ ಚಾಪೆಗಳಿಗೆ ಬೇಡಿಕೆ ಬರಲಾರಂಭಿಸಿತು. ಬಹಳ ವರ್ಷಗಳ ಹಳೆಯ ಈ ಸುಂದರ ಕಲೆಗೆ ಹೊಸ ಶಕ್ತಿ ದೊರೆತಿದೆ ಎಂದೂ ಸಂತೋಷ್ ಅವರು ಹೇಳಿದ್ದಾರೆ.
ಸ್ನೇಹಿತರೆ, ದೇಶದಲ್ಲಿ ‘ಸ್ವಾವಲಂಬಿ ಭಾರತ ಆಂದೋಲನಕ್ಕೆ’ ಹೀಗೆ ಕೊಡುಗೆ ನೀಡಿದ ಇಂಥ ಉದಾಹರಣೆಗಳು ಬಹಳಷ್ಟಿವೆ. ಇಂದು ಸಾಮಾನ್ಯ ಜನರ ಮನದಲ್ಲಿ ಹರಿವ ಒಂದು ಭಾವನೆಯಾಗಿ ಇದು ನೆಲೆಸಿದೆ.
ನನ್ನ ಪ್ರಿಯ ದೇಶಬಾಂಧವರೆ, ನಾನು ನಮೋ ಆಪ್ ನಲ್ಲಿ ಗುಡಗಾಂವ್ ನಿವಾಸಿ ಮಯೂರ್ ಅವರ ಒಂದು ಆಸಕ್ತಿಕರ ಪೋಸ್ಟ್ ನೋಡಿದೆ. ಅವರು ಪ್ರಕೃತಿ ಮತ್ತು ಪಕ್ಷಿ ವೀಕ್ಷಣೆಯ ಒಲವು ಹೊಂದಿದವರಾಗಿದ್ದಾರೆ. ನಾನು ಹರಿಯಾಣದಲ್ಲಿರುತ್ತೇನೆ. ಆದರೆ ನೀವು ಅಸ್ಸಾಂ ಜನತೆ ಬಗ್ಗೆ ಅದರಲ್ಲೂ ವಿಶೇಷವಾಗಿ ಕಾಜಿರಂಗಾ ಜನತೆ ಬಗ್ಗೆ ಮಾತನಾಡಿ ಎಂದು ಬಯಸುತ್ತೇನೆ ಎಂದು ಮಯೂರ್ ಅವರು ಬರೆದಿದ್ದಾರೆ. ಮಯೂರ್ ಅವರು ಆ ಪ್ರದೇಶದ ಹೆಮ್ಮೆ ಎಂದು ಕರೆಯಲ್ಪಡುವ ಘೇಂಡಾಮೃಗಗಳ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಮಯೂರ್ ಅವರು ಕಾಜಿರಂಗಾದಲ್ಲಾದ ವಾಟರ್ ಫೌಲ್ ಗಳ ಸಂಖ್ಯೆಯಲ್ಲಾದ ಹೆಚ್ಚಳದ ಬಗ್ಗೆ ಅಸ್ಸಾಂ ಜನತೆಯನ್ನು ಪ್ರಶಂಸಿಸಬೇಕೆಂದು ಕೇಳಿಕೊಂಡಿದ್ದಾರೆ. ವಾಟರ್ ಫೌಲ್ ಗಳನ್ನು ಸಾಮಾನ್ಯ ಶಬ್ದಗಳಲ್ಲಿ ಏನೆಂದು ಕರೆಯಬಹುದು ಎಂದು ನಾನು ಹುಡುಕುತ್ತಿದ್ದೆ. ಆಗ ಒಂದು ಶಬ್ದ ದೊರೆಯಿತು –ಜಲಪಕ್ಷಿ. ಇವು ಮರದ ಮೇಲಲ್ಲದೆ ಬಾತುಕೋಳಿಯಂತೆ ನೀರಿನಲ್ಲಿ ವಾಸಿಸುತ್ತವೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಪ್ರಾಧಿಕಾರ ವಾರ್ಷಿಕ ಜಲಪಕ್ಷಿಗಳ ಗಣತಿ ಮಾಡುತ್ತಾ ಬಂದಿದೆ. ಈ ಗಣತಿಯಿಂದ ಜಲಪಕ್ಷಿಗಳ ಸಂಖ್ಯೆ ಬಗ್ಗೆ ತಿಳಿಯುತ್ತದೆ. ಅಲ್ಲದೆ ಅವುಗಳ ನೆಚ್ಚಿನ ವಾಸಸ್ಥಾನದ ಬಗ್ಗೆ ಕೂಡ ಮಾಹಿತಿ ದೊರೆಯುತ್ತದೆ. ಈಗ 2-3 ವಾರಗಳ ಹಿಂದೆ ಮತ್ತೊಮ್ಮೆ ಸಮೀಕ್ಷೆ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಜಲಪಕ್ಷಿಗಳ ಸಂಖ್ಯೆ ಸುಮಾರು ಶೇ 175 ರಷ್ಟು ಹೆಚ್ಚಾಗಿದೆ ಎಂದು ಕೇಳಿ ನಿಮಗೂ ಸಂತೋಷವಾಗಬಹುದು. ಈ ಗಣತಿ ಸಮಯದಲ್ಲಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 112 ತಳಿಯ ಪಕ್ಷಿಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ 58 ತಳಿಗಳು ಯುರೋಪ್, ಮಧ್ಯ ಏಷ್ಯಾ ಮತ್ತು ಪೂರ್ವ ಏಷ್ಯಾದ ವಿವಿಧ ಪ್ರದೇಶಗಳಿಂದ ಬಂದಂತಹ ಚಳಿಗಾಲದ ವಲಸಿಗ ಪಕ್ಷಿಗಳಾಗಿವೆ. ಇಲ್ಲಿ ಉತ್ತಮ ಜಲಸಂರಕ್ಷಣೆ ಜೊತೆಗೆ ಮಾನವ ಚಟುವಟಿಕೆ ಅತ್ಯಂತ ಕಡಿಮೆ ಇರುವುದೇ ಇದಕ್ಕೆ ಮಹತ್ವಪೂರ್ಣ ಕಾರಣವಾಗಿವೆ. ಕೆಲವು ವಿಷಯಗಳಲ್ಲಿ ಸಕಾರಾತ್ಮಕ ಮಾನವ ಹಸ್ತಕ್ಷೇಪವೂ ಪ್ರಮುಖ ಕಾರಣವಾಗಿರುತ್ತದೆ.
ಅಸ್ಸಾಂನ ಶ್ರೀ ಜಾದವ್ ಪಾಯೆಂಗ್ ಅವರನ್ನೇ ನೋಡಿ. ನಿಮ್ಮಲ್ಲಿ ಕೆಲವರಿಗೆ ಅವರ ಬಗ್ಗೆ ಗೊತ್ತಿರಬಹುದು. ಅವರ ಕೆಲಸಗಳಿಗೆ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಶ್ರೀ ಜಾದವ್ ಪಾಯೆಂಗ್ ಅವರು ಅಸ್ಸಾಂನ ಮಜೂಲಿ ದ್ವೀಪದಲ್ಲಿ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಕೃಷಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ವನ ಸಂರಕ್ಷಣೆಗಾಗಿ ಕೆಲಸ ಮಾಡುತ್ತಾರೆ ಮತ್ತು ಜನರಿಗೆ ಸಸಿ ನೆಡುವ ಹಾಗೂ ಜೀವವೈವಿಧ್ಯ ಸಂರಕ್ಷಣೆಗೆ ಉತ್ತೇಜಿಸುವಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಸ್ನೇಹಿತರೆ, ಅಸ್ಸಾಂನಲ್ಲಿ ನಮ್ಮ ದೇಗುಲಗಳು ಕೂಡ ಪ್ರಕೃತಿ ಸಂರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರವಹಿಸುತ್ತಿವೆ. ನೀವು ದೇವಾಲಯಗಳಿಗೆ ಭೇಟಿ ನೀಡಿದರೆ ಪ್ರತಿ ದೇವಾಲಯದಲ್ಲೂ ಪುಷ್ಕರಣಿ ಇರುವುದನ್ನು ನೋಡುತ್ತೀರಿ. ಹಜೊನಲ್ಲಿರುವ ಹಯಗ್ರೀವ ಮದೇಬ್ ಮಂದಿರ, ಸೋನಿತ್ ಪುರದಲ್ಲಿರುವ ನಾಗಶಂಕರ ಮಂದಿರ ಮತ್ತು ಗುವಾಹಾಟಿಯಲ್ಲಿರುವ ಉಗ್ರತಾರಾ ಮಂದಿಗಳ ಬಳಿ ಇಂಥ ಪುಷ್ಕರಣಿಗಳು ಬಹಳಷ್ಟಿವೆ. ಅಳಿವಿನ ಅಂಚಿನಲ್ಲಿರುವ ಆಮೆಗಳ ತಳಿಗಳ ಸಂರಕ್ಷಣೆಗೆ ಇವುಗಳನ್ನು ಬಳಸಲಾಗುತ್ತಿದೆ. ಅಸ್ಸಾಂನಲ್ಲಿ ಅತ್ಯಂತ ಹೆಚ್ಚು ತಳಿಗಳ ಆಮೆಗಳನ್ನು ಕಾಣಬಹುದು. ದೇವಾಲಯಗಳ ಈ ಪುಷ್ಕರಣಿಗಳು ಆಮೆಗಳ ಸಂರಕ್ಷಣೆಗೆ, ಸಂತಾನೋತ್ಪತ್ತಿಗೆ ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಅತ್ಯುತ್ತಮ ಸ್ಥಳವಾಗಬಲ್ಲವು.
ನನ್ನ ಪ್ರಿಯ ದೇಶಬಾಂಧವರೆ, ಆವಿಷ್ಕಾರಕ್ಕೆ ವಿಜ್ಞಾನಿಗಳಾಗಿರಬೇಕೆಂದು ಕೆಲ ಜನರು ಅಂದುಕೊಂಡಿದ್ದಾರೆ. ಇತರರಿಗೆ ಪಾಠ ಮಾಡಲು ಅಧ್ಯಾಪಕರಾಗುವುದು ಅವಶ್ಯಕ ಎಂದು ಇನ್ನು ಕೆಲವರು ಯೋಚಿಸುತ್ತಾರೆ. ಇಂಥ ವಿಚಾರಗಳಿಗೆ ಸವಾಲೆಸೆಯುವವರು ಎಂದಿಗೂ ಪ್ರಶಂಸೆಗೆ ಪಾತ್ರರು. ಸೈನಿಕನಾಗಲು ಯಾರಿಗಾದರೂ ತರಬೇತಿ ನೀಡಿದರೆ, ಅವನು ಸೈನಿಕನೇ ಅಗುವುದು ಅವಶ್ಯಕವೇ? ಹೌದು, ಅದು ಅಗತ್ಯ ಎಂದು ನೀವು ಯೋಚಿಸಬಹುದು. ಆದರೆ ಇಲ್ಲಿ ಸ್ವಲ್ಪ ಬದಲಾವಣೆಯಾಗಿದೆ
ಮೈಗೌ ನಲ್ಲಿ ಕಮಲ್ ಕಾಂತ್ ಅವರು ಮಾಧ್ಯಮದ ಒಂದು ವರದಿಯನ್ನು ಹಂಚಿಕೊಂಡಿದ್ದಾರೆ, ಅದು ಸ್ವಲ್ಪ ಭಿನ್ನವಾಗಿದೆ. ಒಡಿಶಾದ ಅರಾಖುಡಾದಲ್ಲಿ ಒಬ್ಬ ಸಜ್ಜನರಿದ್ದಾರೆ – ಅವರೇ ನಾಯಕ್ ಸರ್. ಇವರ ಹೆಸರು ಸಿಲು ನಾಯಕ್ ಆದರೆ ಎಲ್ಲರೂ ಅವರನ್ನು ನಾಯಕ್ ಸರ್ ಎಂದೇ ಕರೆಯುತ್ತಾರೆ. ವಾಸ್ತವದಲ್ಲಿ ಅವರು Man on a Mission ಆಗಿದ್ದಾರೆ. ಅವರು ಸೇನೆಯಲ್ಲಿ ಸೇರಬೇಕೆಂದು ಕೊಳ್ಳುವವರಿಗೆ ಇವರು ತರಬೇತಿ ನೀಡುತ್ತಾರೆ. ನಾಯಕ್ ಸರ್ ಅವರ ಸಂಸ್ಥೆ ಹೆಸರು ಮಹಾಗುರು ಬೆಟಾಲಿಯನ್ ಎಂದಿದೆ. ಇದರಲ್ಲಿ ದೈಹಿಕ ಸದೃಢತೆಯಿಂದ ಸಂದರ್ಶನದವರೆಗೆ ಮತ್ತು ಬರೆಯುವುದರಿಂದ ತರಬೇತಿವರೆಗೆ, ಎಲ್ಲ ಅಂಶಗಳ ಬಗ್ಗೆ ತಿಳಿಸಲಾಗುತ್ತದೆ. ಇವರಿಂದ ತರಬೇತಿ ಪಡೆದವರು ಭೂಸೇನೆ, ನೌಕಾಪಡೆ, ವಾಯುಪಡೆ, ಸಿಆರ್ ಪಿ ಎಫ್, ಬಿ ಎಸ್ ಎಫ್ ಹೀಗೆ ವಿವಿಧ ಸೇನಾಪಡೆಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಿಲು ನಾಯಕ್ ಅವರು ಸ್ವತಃ ಒಡಿಶಾ ಪೋಲಿಸ್ ಪಡೆಯಲ್ಲಿ ಭರ್ತಿಯಾಗಲು ಪ್ರಯತ್ನಿಸಿದ್ದರು ಆದರೆ ಅವರು ಸಫಲರಾಗಿರಲಿಲ್ಲ. ಇದರ ಹೊರತಾಗಿ ಅವರು ತಾವು ಪಡೆದ ತರಬೇತಿಯಿಂದ ಹಲವು ಯುವಜನರನ್ನು ರಾಷ್ಟ್ರಸೇವೆಗೆ ಯೋಗ್ಯರಾಗಿಸಿದ್ದಾರೆ ಎಂದು ತಿಳಿದು ನಿಮಗೆ ಮತ್ತಷ್ಟು ಆಶ್ಚರ್ಯವಾಗಬಹುದು. ಬನ್ನಿ, ಅವರು ನಮ್ಮ ದೇಶಕ್ಕಾಗಿ ಮತ್ತಷ್ಟು ನಾಯಕರನ್ನು ಸೃಷ್ಟಿಸಲಿ ಎಂದು ನಾವೆಲ್ಲ ಶುಭಹಾರೈಸೋಣ
ಸ್ನೇಹಿತರೆ, ಕೆಲವೊಮ್ಮೆ ಬಹಳ ಸಣ್ಣ ಮತ್ತು ಸಾಧಾರಣ ಸವಾಲುಗಳೂ ಮನಸ್ಸನ್ನು ಹಿಂಡಿಬಿಡುತ್ತವೆ. ಈ ಪ್ರಶ್ನೆಗಳು ದೊಡ್ಡವೇ ಇರಬೇಕೆಂದೇನಿಲ್ಲ ಬಹಳ ಸರಳವಾಗಿರಬಹುದು. ಆದರೂ ಅವು ನಮ್ಮನ್ನು ಚಿಂತನೆಗೊಳಪಡಿಸುತ್ತವೆ. ಕೆಲ ದಿನಗಳ ಹಿಂದೆ ಹೈದ್ರಾಬಾದ್ ನ ಅಪರ್ಣಾ ರೆಡ್ಡಿಯವರು ನನಗೆ ಇಂಥದೇ ಪ್ರಶ್ನೆ ಕೇಳಿದ್ದರು. ಅವರು – ನೀವು ಇಷ್ಟೊಂದು ವರ್ಷಗಳಿಂದ ಪ್ರಧಾನಮಂತ್ರಿಯಾಗಿದ್ದೀರಿ, ಹಲವು ವರ್ಷ ಮುಖ್ಯಮಂತ್ರಿಗಳಾಗಿದ್ದಿರಿ, ನಿಮಗೆ ಮಾಡುವುದು ಇನ್ನೂ ಏನಾದರೂ ಬಾಕಿಯಿದೆ ಎಂದೆನ್ನಿಸಿದೆಯೇ? ಎಂದು ಕೇಳಿದ್ದರು. ಅಪರ್ಣಾ ಅವರ ಪ್ರಶ್ನೆ ಬಹಳ ಸಹಜವಾದದ್ದು ಆದರೆ ಅಷ್ಟೇ ಕಠಿಣವಾದದ್ದು. ನಾನು ಈ ಪ್ರಶ್ನೆ ಬಗ್ಗೆ ಆಲೋಚಿಸಿದೆ ಮತ್ತು ನನನ್ನೇ ಕೇಳಿಕೊಂಡೆ – ನಾನು ವಿಶ್ವದ ಪ್ರಾಚೀನ ಭಾಷೆ ತಮಿಳು ಕಲಿಯಲು ಹೆಚ್ಚಿನ ಪ್ರಯತ್ನ ನಡೆಸಲಿಲ್ಲ ಹಾಗಾಗಿ ಕಲಿಯಲಾಗಲಿಲ್ಲ. ಇದು ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ಸುಂದರ ಭಾಷೆಯಾಗಿದೆ. ಬಹಳ ಜನರು ನನಗೆ ತಮಿಳು ಸಾಹಿತ್ಯದ ಗುಣಮಟ್ಟ ಮತ್ತು ಇದರಲ್ಲಿ ಬರೆಯಲಾದ ಕವಿತೆಗಳ ಗಹನವಾದ ಅರ್ಥಗಳ ಬಗ್ಗೆ ಹೇಳಿದ್ದಾರೆ. ಭಾರತ ನಮ್ಮ ಸಂಸ್ಕೃತಿ ಮತ್ತು ಗೌರವದ ಪ್ರತೀಕವಾಗಿರುವ ಇಂಥ ಹಲವಾರು ಭಾಷೆಗಳ ತವರಾಗಿದೆ. ಭಾಷೆಗಳ ಬಗ್ಗೆ ಮಾತನಾಡುತ್ತಿರುವಾಗ ನಾನು ನಿಮಗೆ ಒಂದು ಪುಟ್ಟ ಆಸಕ್ತಿಕರ ಸೌಂಡ್ ಕ್ಲಿಪ್ ಕೇಳಿಸಬಯಸುತ್ತೇನೆ
## (sound clip Statue of Unity-no need to transcribe the byte)
ಈಗ ನೀವು ಕೇಳಿದ್ದು– ಏಕತಾ ಪ್ರತಿಮೆ ಬಗ್ಗೆ ಒಬ್ಬ ಗೈಡ್ ಸಂಸ್ಕೃತದಲ್ಲಿ ವಿಶ್ವದಲ್ಲೇ ಅತಿ ಎತ್ತರದ ಸರ್ದಾರ್ ಪಟೇಲರ ಪ್ರತಿಮೆ ಬಗ್ಗೆ ಜನರಿಗೆ ವಿವರಿಸುತ್ತಿದ್ದಾರೆ. ಕೇವಾಡಿಯಾದಲ್ಲಿ 15 ಕ್ಕೂ ಹೆಚ್ಚು ಗೈಡ್ ಗಳು ಸುಲಲಿತವಾಗಿ ಸಂಸ್ಕೃತದಲ್ಲಿ ಜನರಿಗೆ ವಿವರಿಸುತ್ತಾರೆ. ಈಗ ನಾನು ಮತ್ತೊಂದು ಧ್ವನಿ ಕೇಳಿಸುತ್ತೇನೆ
## (sound clip Cricket commentary- no need to transcribe the byte)
ಇದನ್ನು ಕೇಳಿ ನೀವು ಕೂಡ ಆಶ್ಚರ್ಯಗೊಂಡಿರಬಹುದು. ಇದು ಸಂಸ್ಕೃತದಲ್ಲಿ ಹೇಳುತ್ತಿರುವ ಕ್ರಿಕೆಟ್ ಕಾಮೆಂಟ್ರಿ. ವಾರಾಣಸಿಯಲ್ಲಿ ಸಂಸ್ಕೃತ ಮಹಾವಿದ್ಯಾಲಯಗಳಲ್ಲಿ ಕ್ರಕೆಟ್ ಸ್ಪರ್ಧೆ ನಡೆಯುತ್ತದೆ. ಅವುಗಳೆಂದರೆ, ಶಾಸ್ತ್ರಾರ್ಥ ಮಹಾವಿದ್ಯಾಲಯ, ಸ್ವಾಮಿ ವೇದಾಂತಿ ವೇದ ವಿದ್ಯಾಪೀಠ, ಶ್ರೀ ಬ್ರಹ್ಮವೇದ ವಿದ್ಯಾಲಯ ಮತ್ತು ಅಂತಾರಾಷ್ಟ್ರೀಯ ಚಂದ್ರಮೌಳಿ ದತ್ತಿ ಸಂಸ್ಥೆ ಮಹಾ ವಿದ್ಯಾಲಯಗಳಾಗಿವೆ. ಈ ಪಂದ್ಯಾವಳಿಯ ಮ್ಯಾಚ್ ಗಳಲ್ಲಿ ಸಂಸ್ಕೃತದಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತದೆ, ನಿಮಗೆ ಈ ವಿವರಣೆಯ ಪುಟ್ಟ ಭಾಗವನ್ನು ನಿಮಗೆ ಕೇಳಿಸಿದೆ. ಇದಷ್ಟೇ ಅಲ್ಲ ಈ ಪಂದ್ಯಾವಳಿಯಲ್ಲಿ ಕ್ರಿಕೆಟಿಗರು ಮತ್ತು ವೀಕ್ಷಕ ವಿವರಣಾಕಾರರು ಪಾರಂಪರಿಕ ಉಡುಪುಗಳಲ್ಲಿ ಕಾಣಿಸುತ್ತಾರೆ. ನಿಮಗೆ ಚೈತನ್ಯ, ರೋಮಾಂಚನ ಮತ್ತು ಕುತೂಹಲ ಎಲ್ಲವೂ ಒಂದೇ ಬಾರಿ ಬೇಕೆಂದುಕೊಂಡಲ್ಲಿ ನೀವು ಪಂದ್ಯಗಳ ವೀಕ್ಷಕ ವಿವರಣೆಯನ್ನು ಕೇಳಬೇಕು. ಟಿವಿಗಳು ಬಳಕೆಗೆ ಬರುವ ಮೊದಲು ಕ್ರಿಕೆಟ್ ಮತ್ತು ಹಾಕಿಯಂತಹ ಕ್ರೀಡೆಗಳ ರೋಮಾಂಚನವನ್ನು ಅನಭವಿಸಲು ಕ್ರೀಡಾ ವೀಕ್ಷಕ ವಿವರಣೆಯೊಂದೇ ಮಾಧ್ಯಮವಾಗಿತ್ತು. ಟೆನ್ನಿಸ್ ಮತ್ತು ಫುಟ್ ಬಾಲ್ ವೀಕ್ಷಕ ವಿವರಣೆಯನ್ನು ಬಹಳ ಉತ್ತಮವಾಗಿ ಪ್ರಸ್ತುತಪಡಿಸಲಾಗುತ್ತದೆ. ಯಾವ ಕ್ರೀಡೆಗಳಲ್ಲಿ ವೀಕ್ಷಕ ವಿವರಣೆ ಬಹಳ ಉತ್ತಮವಾಗಿ ಪ್ರಸ್ತುತಪಡಿಸಲಾಗುತ್ತದೆಯೋ ಅವುಗಳ ಪ್ರಚಾರ–ಪ್ರಸಾರ ಕೂಡಾ ಅಷ್ಟೇ ವೇಗವಾಗಿ ಆಗುತ್ತದೆ. ನಮ್ಮಲ್ಲಿ ಕೂಡ ಬಹಳಷ್ಟು ಭಾರತೀಯ ಕ್ರೀಡೆಗಳಿವೆ ಆದರೆ ಅವುಗಳಲ್ಲಿ ವೀಕ್ಷಕ ವಿವರಣೆಯ ಪರಂಪರೆಯಿಲ್ಲ. ಹಾಗಾಗಿ ಅವು ಅಳಿವಿನ ಅಂಚಿಗೆ ಸರಿಯುತ್ತಿವೆ. ಬೇರೆ ಬೇರೆ ಕ್ರೀಡೆಗಳ – ಅದರಲ್ಲೂ ವಿಶೇಷವಾಗಿ ಭಾರತೀಯ ಕ್ರೀಡೆಗಳ ಉತ್ತಮ ವೀಕ್ಷಕ ವಿವರಣೆಯನ್ನು ಹೆಚ್ಚೆಚ್ಚು ಭಾಷೆಗಳಲ್ಲಿ ಏಕೆ ಅಳವಡಿಸಿಕೊಳ್ಳಬಾರದು ಎಂದು ನನ್ನ ಮನದಲ್ಲಿ ಒಂದು ವಿಚಾರವಿದೆ. ಇದನ್ನು ಪ್ರೋತ್ಸಾಹಿಸುವ ಕುರಿತು ನಾವು ಖಂಡಿತ ಯೋಚಿಸಬೇಕು. ನಾನು ಕ್ರೀಡಾ ಸಚಿವಾಲಯ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಈ ಕುರಿತು ಚರ್ಚಿಸುವ ಬಗ್ಗೆ ಆಗ್ರಹಿಸುತ್ತೇನೆ.
ನನ್ನ ಪ್ರಿಯ ಯುವಜನರೆ, ಮುಂದಿನ ಕೆಲ ತಿಂಗಳುಗಳು ನಿಮ್ಮೆಲ್ಲರ ಜೀವನದಲ್ಲಿ ವಿಶೇಷವಾಗಿವೆ. ಹೆಚ್ಚಿನ ಯುವಜನರು ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ನೀವೆಲ್ಲ Warrior ಆಗಬೇಕು worrier ಅಲ್ಲ ಎಂಬುದು ನಿಮಗೆ ನೆನಪಿದೆ ತಾನೆ, ನಗುನಗುತ್ತಾ ಪರೀಕ್ಷೆ ಬರೆಯಲು ಹೋಗಬೇಕು ಮತ್ತು ಮುಗುಳುನಗುತ್ತಾ ಹಿಂದಿರುಗಬೇಕು. ಬೇರಾರೊಂದಿಗೆ ಅಲ್ಲದೆ ನಿಮ್ಮೊಂದಿಗೆ ನೀವು ಸ್ಪರ್ಧಿಸಬೇಕು. ಅಗತ್ಯವಿರುವಷ್ಟು ನಿದ್ದೆಯನ್ನು ಮಾಡಬೇಕು ಮತ್ತು ಸಮಯ ಪಾಲನೆಯನ್ನೂ ಮಾಡಬೇಕು. ಆಟ ಆಡುವುದನ್ನೂ ಬಿಡಬಾರದು ಏಕೆಂದರೆ ಯಾರು ಆಡುತ್ತಾರೋ ಅವರು ಬೆಳೆಯುತ್ತಾರೆ. Revision ಮತ್ತು ನೆನಪಿಟ್ಟುಕೊಳ್ಳುವ ಜಾಣ್ಮೆಯನ್ನು ತೋರಬೇಕು, ಅಂದರೆ ಒಟ್ಟಾರೆ ಪರೀಕ್ಷೆಯಲ್ಲಿ ನಿಮ್ಮ ಅತ್ಯುತ್ತಮವಾದುದನ್ನು ಪ್ರದರ್ಶಿಸಬೇಕು. ಇದೆಲ್ಲ ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿರಬಹುದು. ನಾವೆಲ್ಲ ಸೇರಿ ಇದನ್ನು ಸಾಧಿಸಲಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ನಾವೆಲ್ಲರೂ ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಭಾಗಿಯಾಗೋಣ. ಆದರೆ ಮಾರ್ಚ್ ನಲ್ಲಿ ನಡೆಯುವ ‘ಪರೀಕ್ಷಾ ಪೆ ಚರ್ಚಾ’ ಗಿಂತ ಮೊದಲು ಎಲ್ಲ exam warriors, ಪೋಷಕರು ಮತ್ತು ಶಿಕ್ಷಕರು, ತಮ್ಮ ಅನುಭವಗಳನ್ನು, ಸಲಹೆಗಳನ್ನು ಖಂಡಿತ ಹಂಚಿಕೊಳ್ಳಿ ಎಂಬುದು ನನ್ನ ಮನವಿ. ನೀವು ಮೈ ಗೌ ನಲ್ಲಿ ಹಂಚಿಕೊಳ್ಳಬಹುದು. ನರೇಂದ್ರ ಮೋದಿ ಆಪ್ ನಲ್ಲಿ ಹಂಚಿಕೊಳ್ಳಬಹುದು. ಈ ಬಾರಿಯ ‘ಪರೀಕ್ಷಾ ಪೆ ಚರ್ಚಾ’ ಸಭೆಗೆ ಯುವಜನತೆಯ ಜೊತೆಗೆ ಪೋಷಕರು ಮತ್ತು ಶಿಕ್ಷಕರೂ ಆಹ್ವಾನಿತರು. ಹೇಗೆ ಭಾಗವಹಿಸಬೇಕು, ಬಹುಮಾನ ಗೆಲ್ಲಬೇಕು, ಹೇಗೆ ನನ್ನ ಜೊತೆಗೆ ಚರ್ಚೆಗೆ ಅವಕಾಶ ಪಡೆಯಬೇಕು ಎಂಬ ಮಾಹಿತಿ ನಿಮಗೆ ಮೈ ಗೌ ನಲ್ಲಿ ಲಭ್ಯವಿದೆ. ಇಲ್ಲಿವರೆಗೆ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸುಮಾರು 40 ಸಾವಿರ ಪೋಷಕರು ಮತ್ತು 10 ಸಾವಿರ ಶಿಕ್ಷಕರು ಭಾಗವಹಿಸಿದ್ದಾರೆ. ನೀವು ಕೂಡ ಭಾಗವಹಿಸಿ. ಈ ಕೊರೊನಾ ಸಮಯದಲ್ಲಿ ನಾನು ಸ್ವಲ್ಪ ಬಿಡುವು ಮಾಡಿಕೊಂಡು exam warrior ಪುಸ್ತಕದಲ್ಲೂ ಕೆಲವು ಹೊಸ ಸೂತ್ರಗಳನ್ನು ಬರೆದಿದ್ದೇನೆ. ಇದರಲ್ಲಿ ಪೋಷಕರಿಗಾಗಿಯೂ ಕೆಲ ಸೂತ್ರಗಳನ್ನು ಸೇರಿಸಲಾಗಿದೆ. ಈ ಸೂತ್ರಗಳಿಗೆ ಸಂಬಂಧಿಸಿದ ಹಲವಾರು ಆಸಕ್ತಿಕರ ಚಟುವಟಿಕೆಗಳು ನರೇಂದ್ರ ಮೋದಿ ಆಪ್ ನಲ್ಲಿ ಲಭ್ಯವಿವೆ. ಅವು ನಿಮ್ಮಲ್ಲಿರುವ exam warrior ನನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನೀವು ಖಂಡಿತ ಇವುಗಳನ್ನು ಪ್ರಯತ್ನಿಸಿ ನೋಡಿ. ಎಲ್ಲ ಯುವ ಸ್ನೇಹಿತರಿಗೆ ಮುಂಬರುವ ಪರೀಕ್ಷೆಗಳಿಗೆ ಅನಂತ ಶುಭಹಾರೈಕೆಗಳು.
ನನ್ನ ಪ್ರಿಯ ದೇಶಬಾಂಧವರೆ, ಮಾರ್ಚ್ ನಮ್ಮ ಆರ್ಥಿಕ ವರ್ಷದ ಕೊನೆಯ ಮಾಸವಾಗಿರುತ್ತದೆ. ಆದ್ದರಿಂದ ನಿಮ್ಮಲ್ಲಿ ಬಹಳಷ್ಟು ಜನರು ಬಹಳ ಕಾರ್ಯನಿರತರಾಗಿರುತ್ತೀರಿ. ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆಯುತ್ತಿರುವುದರಿಂದ ನಮ್ಮ ವ್ಯಾಪಾರಿಗಳು ಮತ್ತು ಉದ್ಯಮಿ ಸ್ನೇಹಿತರು ಕೂಡಾ ಕಾರ್ಯನಿರತರಾಗಿದ್ದಾರೆ. ಈ ಎಲ್ಲ ಕೆಲಸಗಳ ಮಧ್ಯೆ ನಾವು ಕೊರೊನಾ ಬಗ್ಗೆ ಎಚ್ಚರವಹಿಸುವುದನ್ನು ಮರೆಯಬಾರದು. ನೀವೆಲ್ಲರೂ ಆರೋಗ್ಯದಿಂದಿರುತ್ತೀರಿ. ಸಂತೋಷದಿಂದಿರುತ್ತೀರಿ, ಕರ್ತವ್ಯಪಾಲನೆ ಮಾಡುತ್ತೀರಿ ಎಂದಾದಲ್ಲಿ ದೇಶ ತ್ವರಿತವಾಗಿ ಮುನ್ನಡೆಯುತ್ತಿರುತ್ತದೆ. ನಿಮ್ಮೆಲ್ಲರಿಗೂ ಮುಂಚಿತವಾಗಿಯೇ ಹಬ್ಬಗಳ ಹಾರ್ದಿಕ ಶುಭಾಶಯಗಳು. ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಉದಾಸೀನ ಸಲ್ಲದು.
ಅನಂತ ಅನಂತ ಧನ್ಯವಾದಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ನಾನು ಮನದ ಮಾತುಗಳನ್ನು ಆಡುವಾಗ, ನಿಮ್ಮ ಮಧ್ಯದಲ್ಲಿ, ನಾನು ನಿಮ್ಮ ಕುಟುಂಬದ ಓರ್ವ ಸದಸ್ಯನಾಗಿರುವಂತೆ ನನಗೆ ಭಾಸವಾಗುತ್ತದೆ. ನಮ್ಮ ಚಿಕ್ಕ ಚಿಕ್ಕ ಮಾತುಗಳು, ಪರಸ್ಪರರಿಗೆ ಸ್ವಲ್ಪ ಕಲಿಸುವಂತಹ, ಮನಸ್ಫೂರ್ತಿಯಾಗಿ ಜೀವಿಸುವ ಪ್ರೇರಣೆ ನೀಡುವ ಜೀವನದ ಹುಳಿ–ಸಿಹಿ ಅನುಭವ ಇದೇ ಅಲ್ಲವೇ ಮನದ ಮಾತುಗಳು.
ಇಂದು ಜನವರಿ ತಿಂಗಳ ಕೊನೆಯ ದಿನ. ನೀವು ಕೂಡಾ ನನ್ನಂತೆಯೇ ಕೆಲವೇ ದಿನಗಳ ಹಿಂದೆ 2021 ಶುರುವಾಯಿತೆಂದು ಯೋಚಿಸುತ್ತಿದ್ದೀರಾ? ಜನವರಿಯ ತಿಂಗಳು ಪೂರ್ತಿ ಕಳೆದುಹೋಯಿತೆಂದು ಅನಿಸುವುದೇ ಇಲ್ಲ – ಇದನ್ನೇ ಅಲ್ಲವೇ ಸಮಯದ ಚಲನೆ ಎಂದು ಕರೆಯುವುದು. ನಾವು ಪರಸ್ಪರರಿಗೆ ಶುಭಾಶಯ ಕೋರಿದ್ದು ಕೆಲವು ದಿನಗಳ ಹಿಂದೆಯಷ್ಟೇ ಅಲ್ಲವೇ, ನಂತರ ನಾವು ಲೋರಿ ಆಚರಿಸಿದೆವು, ಮಕರ ಸಂಕ್ರಾಂತಿ ಆಚರಿಸಿದೆವು, ಪೊಂಗಲ್, ಬಿಹು ಆಚರಿಸಿದೆವು. ದೇಶದ ಬೇರೆ ಬೇರೆ ಭಾಗಗಳಲ್ಲಿ ಹಬ್ಬದ ಸಡಗರವಿತ್ತು. ಜನವರಿ 23 ರಂದು ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನದ ರೂಪದಲ್ಲಿ ಆಚರಿಸಿದೆವು ಮತ್ತು ಜನವರಿ 26 ರಂದು ಗಣರಾಜ್ಯೋತ್ಸವದ ಅದ್ಭುತ ಪಥಸಂಚಲನವನ್ನೂ ನೋಡಿದೆವು.
ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ‘ಬಜೆಟ್ ಅಧಿವೇಶನ’ ಕೂಡಾ ಆರಂಭವಾಗಿದೆ. ಇವುಗಳ ನಡುವೆಯೇ ನಾವೆಲ್ಲರೂ ಬಹಳವಾಗಿ ನಿರೀಕ್ಷಿಸುತ್ತಿದ್ದ ಮತ್ತೊಂದು ಕೆಲಸವೂ ನಡೆಯಿತು – ಅದೆಂದರೆ ಪದ್ಮ ಪ್ರಶಸ್ತಿಗಳ ಘೋಷಣೆ. ಅಸಾಧಾರಣ ಕೆಲಸ ಮಾಡಿದ ಜನರ ಸಾಧನೆಗಾಗಿ ಮತ್ತು ಮಾನವೀಯತೆಯ ನಿಟ್ಟಿನಲ್ಲಿ ಅವರು ನೀಡಿದ ಕೊಡುಗೆಗಾಗಿ ರಾಷ್ಟ್ರ ಅವರನ್ನು ಸನ್ಮಾನಿಸಿತು. ಈ ವರ್ಷ ಕೂಡಾ, ಪ್ರಶಸ್ತಿಗೆ ಭಾಜನರಾದವರಲ್ಲಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಧಾರಣ ಕಾರ್ಯ ಮಾಡಿದವರು, ತಮ್ಮ ಕಾರ್ಯಗಳಿಂದ ಬೇರೆಯವರ ಜೀವನ ಬದಲಾಯಿಸಿದವರು, ದೇಶವನ್ನು ಮುನ್ನಡೆಸಿದವರು ಸೇರಿದ್ದಾರೆ. ಅಂದರೆ, ತಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಪ್ರಚಾರಕ್ಕೆ ಬಾರದ ಹೀರೋಗಳಿಗೆ ಪದ್ಮ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ದೇಶ ಕೆಲ ವರ್ಷಗಳ ಹಿಂದೆ ಪ್ರಾರಂಭಿಸಿತ್ತು, ಇದನ್ನು ಈಗಲೂ ಕೂಡಾ ಮುಂದುವರಿಸಿಕೊಂಡು ಬರಲಾಗಿದೆ. ಈ ಜನರ ಬಗ್ಗೆ, ಅವರು ನೀಡಿದ ಕೊಡುಗೆಯ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಿ, ಕುಟುಂಬದಲ್ಲಿ ಅವರ ಬಗ್ಗೆ ಚರ್ಚಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಇದರಿಂದ ಎಲ್ಲರಿಗೂ ಎಷ್ಟು ಪ್ರೇರಣೆ ದೊರೆಯುತ್ತದೆ ಎಂದು ನೋಡಿ.
ಈ ಬಾರಿ ಕ್ರಿಕೆಟ್ ಮೈದಾನದಿಂದಲೂ ಬಹಳ ಉತ್ತಮ ಸಮಾಚಾರ ಬಂತು. ನಮ್ಮ ಕ್ರಿಕೆಟ್ ತಂಡವು ಆರಂಭಿಕ ತೊಂದರೆಗಳ ನಂತರ, ಪುನಃ ಉತ್ತಮತೆ ತಂದುಕೊಂಡು ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವು ಸಾಧಿಸಿತು. ನಮ್ಮ ಆಟಗಾರರ ಕಠಿಣ ಶ್ರಮ ಮತ್ತು ಟೀಮ್ ವರ್ಕ್, ಪ್ರೇರಣೆ ಒದಗಿಸುವಂತಹದ್ದಾಗಿದೆ. ಇವುಗಳ ನಡುವೆಯೇ ಜನವರಿ 26 ರಂದು ದೆಹಲಿಯಲ್ಲಿ ತ್ರಿವರ್ಣ ಧ್ವಜಕ್ಕಾದ ಅವಮಾನವನ್ನು ನೋಡಿದ ದೇಶ ಬಹಳ ದುಃಖಿಯೂ ಆಯಿತು. ಮುಂಬರುವ ಸಮಯವನ್ನು ನಾವು ಹೊಸ ಭರವಸೆ ಮತ್ತು ನಾವೀನ್ಯತೆಯಿಂದ ತುಂಬಬೇಕು. ನಾವು ಕಳೆದ ವರ್ಷ ಅಸಾಧಾರಣ ಸಹನೆ ಮತ್ತು ಸಾಹಸದ ಪರಿಚಯ ನೀಡಿದೆವು. ಈ ವರ್ಷ ಕೂಡಾ ನಾವು ಕಠಿಣ ಪರಿಶ್ರಮದಿಂದ ನಮ್ಮ ಸಂಕಲ್ಪಗಳನ್ನು ಸಾಬೀತುಪಡಿಸಬೇಕು. ನಮ್ಮ ದೇಶವನ್ನು ಕ್ಷಿಪ್ರ ಗತಿಯಿಂದ ಮುಂದೆ ಕೊಂಡೊಯ್ಯಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ಈ ವರ್ಷದ ಆರಂಭದೊಂದಿಗೇ, ಕೊರೋನಾ ವಿರುದ್ಧದ ನಮ್ಮ ಹೋರಾಟಕ್ಕೆ ಕೂಡಾ ಸುಮಾರು ಒಂದು ವರ್ಷ ಪೂರ್ಣವಾಯಿತು. ಕೊರೋನಾ ವಿರುದ್ಧ ಭಾರತದ ಸಮರ ಯಾವರೀತಿ ಒಂದು ಉದಾಹರಣೆಯಾಯಿತೋ ಅದೇ ರೀತಿಯಲ್ಲಿ, ಈಗ ನಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮ ಕೂಡಾ ಪ್ರಪಂಚದಲ್ಲಿ ಒಂದು ನಿದರ್ಶನವಾಗುತ್ತಿದೆ. ಇಂದು ಭಾರತ ವಿಶ್ವದ ಅತಿ ದೊಡ್ಡ ಕೋವಿಡ್ ವ್ಯಾಕ್ಸಿನ್ ಕಾರ್ಯಕ್ರಮ ನಡೆಸುತ್ತಿದೆ. ಇದಕ್ಕಿಂತ ಹೆಮ್ಮೆಯ ವಿಷಯ ಇನ್ನೇನಿದೆ ಎಂದು ನಿಮಗೆ ತಿಳಿದೇ ಇದೆ. ನಾವು ಅತಿ ದೊಡ್ಡ ವ್ಯಾಕ್ಸಿನ್ ಕಾರ್ಯಕ್ರಮದೊಂದಿಗೇ ವಿಶ್ವದಲ್ಲಿ ಎಲ್ಲರಿಗಿಂತ ವೇಗವಾಗಿ ನಮ್ಮ ನಾಗರಿಕರಿಗೆ ಲಸಿಕೆ ನೀಡುತ್ತಿದ್ದೇವೆ. ಕೇವಲ 15 ದಿನಗಳಲ್ಲಿ, ಭಾರತ ತನ್ನ 30 ಲಕ್ಷಕ್ಕೂ ಅಧಿಕ ಕೊರೋನಾ ಯೋಧರಿಗೆ ಲಸಿಕೆ ನೀಡಿಯಾಗಿದೆ. ಆದರೆ ಅಮೇರಿಕಾದಂತಹ ಶ್ರೀಮಂತ ದೇಶಕ್ಕೆ ಇದೇ ಕಾರ್ಯದಲ್ಲಿ, 18 ದಿನಗಳು ಬೇಕಾದವು ಮತ್ತು ಬ್ರಿಟನ್ ಗೆ 36 ದಿನಗಳು ಬೇಕಾದವು.
ಸ್ನೇಹಿತರೇ, ‘ಭಾರತದಲ್ಲಿ ತಯಾರಿಸಲಾದ ಲಸಿಕೆ’ (‘Made-in-India Vaccine’) ಇಂದು ಭಾರತದ ಸ್ವಾವಲಂಬನೆಯ ಸಂಕೇತವಾಗಿದೆ ಮಾತ್ರವಲ್ಲದೆ ಭಾರತದ ಆತ್ಮಗೌರವದ ಪ್ರತೀಕವೂ ಆಗಿದೆ. NaMo App ನಲ್ಲಿ ಉತ್ತರ ಪ್ರದೇಶದ ಸೋದರ ಹಿಮಾಂಶು ಯಾದವ್ ಅವರು, ಭಾರತದಲ್ಲಿ ತಯಾರಿಸಲಾದ ಲಸಿಕೆಯಿಂದ ಮನಸ್ಸಿನಲ್ಲಿ ಒಂದು ಹೊಸ ಆತ್ಮವಿಶ್ವಾಸ ಮೂಡಿದೆ ಎಂದು ಬರೆದಿದ್ದಾರೆ. ಮಧುರೈನಿಂದ ಕೀರ್ತಿ ಅವರು, ವಿದೇಶದಲ್ಲಿರುವ ತಮ್ಮ ಅನೇಕ ಸ್ನೇಹಿತರು, ಸಂದೇಶ ಕಳುಹಿಸುತ್ತಾ, ಭಾರತಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆಂದು ಬರೆದಿದ್ದಾರೆ. ಭಾರತ ಯಾವರೀತಿ ಕೊರೋನಾದೊಂದಿಗಿನ ಹೋರಾಟದಲ್ಲಿ ವಿಶ್ವದ ಸಹಾಯ ಮಾಡುತ್ತಿದೆಯೋ, ಅದರಿಂದಾಗಿ ಭಾರತದ ಬಗ್ಗೆ, ಅವರ ಮನಸ್ಸಿನಲ್ಲಿ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಕೀರ್ತಿಯವರ ಸ್ನೇಹಿತರು ಅವರಿಗೆ ಬರೆದಿದ್ದಾರೆ. ಕೀರ್ತಿ ಅವರೆ, ದೇಶದ ಈ ಗೌರವಗಾನ ಕೇಳಿ, ಮನದ ಮಾತಿನ ಶ್ರೋತೃಗಳಿಗೆ ಕೂಡಾ ಹೆಮ್ಮೆ ಎನಿಸುತ್ತದೆ. ಈ ನಡುವೆ ಬೇರೆ ಬೇರೆ ದೇಶಗಳ ರಾಷ್ಟ್ರಾಧ್ಯಕ್ಷರು ಹಾಗೂ ಪ್ರಧಾನ ಮಂತ್ರಿಗಳ ಕಡೆಯಿಂದ ಭಾರತಕ್ಕೆ ಇಂತಹದ್ದೇ ಸಂದೇಶಗಳು ನನಗೆ ಕೂಡಾ ಬರುತ್ತಿವೆ. ನೀವು ಕೂಡಾ ನೋಡಿರಬಹುದು, ಈಗ ಬ್ರೆಜಿಲ್ ನ ರಾಷ್ಟ್ರಾಧ್ಯಕ್ಷರು ಟ್ವೀಟ್ ಮೂಲಕ ಭಾರತಕ್ಕೆ ಧನ್ಯವಾದ ಹೇಳಿರುವ ರೀತಿಯನ್ನು ನೋಡಿ ಪ್ರತಿ ಭಾರತೀಯನಿಗೆ ಎಷ್ಟು ಹೆಮ್ಮೆಯೆನಿಸುತ್ತದೆ. ಸಾವಿರಾರು ಕಿಲೋಮೀಟರ್ ದೂರ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ನಿವಾಸಿಗಳಿಗೆ ರಾಮಾಯಣದ ಆ ಸಂದರ್ಭದ ಬಗ್ಗೆ ಬಹಳ ಆಳವಾದ ಅರಿವಿದೆ, ಅವರ ಮನದಲ್ಲಿ ಆಳವಾದ ಪ್ರಭಾವವಿದೆ – ಇದು ನಮ್ಮ ಸಂಸ್ಕೃತಿಯ ವೈಶಿಷ್ಠ್ಯವಾಗಿದೆ.
ಸ್ನೇಹಿತರೆ, ಈ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ, ನೀವು ಮತ್ತೊಂದು ವಿಷಯದ ಬಗ್ಗೆ ಖಂಡಿತಾ ಗಮನ ಹರಿಸಿರಬಹುದು. ಸಂಕಷ್ಟದ ಸಮಯದಲ್ಲಿ ಭಾರತ ಏಕೆ ವಿಶ್ವಕ್ಕೆ ಸೇವೆ ಸಲ್ಲಿಸುತ್ತಿದೆಯೆಂದರೆ, ಭಾರತ ಇಂದು ಔಷಧಗಳು ಮತ್ತು ಲಸಿಕೆಯ ವಿಷಯದಲ್ಲಿ ಸಮರ್ಥವಾಗಿದೆ ಮತ್ತು ಸ್ವಾವಲಂಬಿಯಾಗಿದೆ. ಸ್ವಾವಲಂಬಿ ಭಾರತ ಅಭಿಯಾನದ ಚಿಂತನೆಯೂ ಇದೇ ಆಗಿದೆ. ಭಾರತ ಎಷ್ಟು ಸಮರ್ಥವಾಗುತ್ತದೆಯೋ, ಅಷ್ಟು ಅಧಿಕವಾಗಿ ಮಾನವಿಯತೆಗೆ ಸೇವೆ ಸಲ್ಲಿಸುತ್ತದೆ, ಇದರಿಂದ ಪ್ರಪಂಚಕ್ಕೆ ಅಷ್ಟೇ ಪ್ರಯೋಜನವೂ ದೊರೆಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೆ, ನನಗೆ ಪ್ರತಿಬಾರಿಯೂ ನಿಮ್ಮ ಅನೇಕ ಪತ್ರಗಳು ಕೈಸೇರುತ್ತವೆ. ನಮೋ ಆಪ್ ನಲ್ಲಿ ಮತ್ತು ಮೈ ಗೌ ನಲ್ಲಿ ನಿಮ್ಮ ಸಂದೇಶಗಳು, ದೂರವಾಣಿ ಕರೆಗಳ ಮೂಲಕ ನಿಮ್ಮ ಮಾತುಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯುತ್ತದೆ. ಈ ಸಂದೇಶಗಳ ಪೈಕಿ ಒಂದು ಸಂದೇಶ ನನ್ನ ಗಮನ ಸೆಳೆಯಿತು – ಆ ಸಂದೇಶವೆಂದರೆ, ಸೋದರಿ ಪ್ರಿಯಾಂಕಾ ಪಾಂಡೆಯ ಅವರಿಂದ ಬಂದಂತಹ ಸಂದೇಶ. 23 ವರ್ಷ ವಯಸ್ಸಿನ ಪುತ್ರಿ ಪ್ರಿಯಾಂಕ ಹಿಂದಿ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾರೆ, ಮತ್ತು ಬಿಹಾರದ ಸೀವಾನ್ ನಲ್ಲಿ ವಾಸವಾಗಿದ್ದಾರೆ. ಪ್ರಿಯಾಂಕ ಅವರು ನಮೋ ಆಪ್ ನಲ್ಲಿ ಹೀಗೆ ಬರೆದಿದ್ದಾರೆ – ದೇಶದ, ತಾವಿರುವ ಸ್ಥಳಕ್ಕೆ ಸಮೀಪವಿರುವಂತಹ ದೇಶದ 15 ಪ್ರವಾಸಿ ತಾಣಗಳಿಗೆ ಹೋಗಿ ಬನ್ನಿ ಎನ್ನುವ ನನ್ನ ಸಲಹೆಯಿಂದ ತುಂಬಾ ಪ್ರೇರಿತರಾಗಿದ್ದು, ಜನವರಿ 1 ರಂದು ಬಹಳ ವಿಶೇಷವಾಗಿದ್ದ ತಾಣವೊಂದಕ್ಕೆ ತೆರಳಿದರು. ಆ ಸ್ಥಳ ಅವರ ಮನೆಯಿಂದ 15 ಕಿಲೋಮೀಟರ್ ದೂರದಲ್ಲಿತ್ತು ಮತ್ತು ಅದು ದೇಶದ ಮೊದಲ ರಾಷ್ಟ್ರಪತಿ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರ ಪೂರ್ವಜರ ನಿವಾಸವಾಗಿತ್ತು. ಪ್ರಿಯಾಂಕಾ ಅವರು, ನಮ್ಮ ದೇಶದ ಮಹಾನ್ ವ್ಯಕ್ತಿತ್ವಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದು ಅವರ ಮೊದಲ ಹೆಜ್ಜೆ ಎಂಬ ಸುಂದರ ವಿಷಯವನ್ನು ಬರೆದಿದ್ದಾರೆ. ಪ್ರಿಯಾಂಕಾ ಅವರಿಗೆ ಅಲ್ಲಿ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರು ಬರೆದ ಪುಸ್ತಕಗಳು ದೊರಕಿದವು, ಅನೇಕ ಐತಿಹಾಸಿಕ ಚಿತ್ರಗಳು ದೊರೆತವು. ನಿಜಕ್ಕೂ, ಪ್ರಿಯಾಂಕಾ ಅವರೆ ನಿಮ್ಮ ಈ ಅನುಭವ, ಬೇರೆಯವರಿಗೆ ಕೂಡಾ ಸ್ಫೂರ್ತಿಯಾಗುತ್ತದೆ.
ಸ್ನೇಹಿತರೆ, ಈ ವರ್ಷದಿಂದ ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆ – ಅಮೃತ ಮಹೋತ್ಸವವನ್ನು ಪ್ರಾರಂಭಿಸಲಿದೆ. ಇಂತಹದರಲ್ಲಿ, ನಮಗೆ ಸ್ವಾತಂತ್ರ್ಯ ಲಭಿಸಲು ಕಾರಣೀಭೂತರಾದ ಮಹಾನ್ ನಾಯಕರಿಗೆ ಸಂಬಂಧಿಸಿದ ಸ್ಥಳೀಯ ಜಾಗಗಳನ್ನು ಅನ್ವೇಷಿಸುವ ಅತ್ಯುತ್ತಮ ಸಮಯ ಇದಾಗಿದೆ.
ಸ್ನೇಹಿತರೆ, ನಾವು ಸ್ವಾತಂತ್ರ್ಯದ ಆಂದೋಲನ ಮತ್ತು ಬಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದೇವೆ ಆದ್ದರಿಂದ ನಾನು ನಮೋ ಆಪ್ ನಲ್ಲಿ ಬಂದಿರುವ ಮತ್ತೊಂದು ಟಿಪ್ಪಣಿಯ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಮುಂಗೇರ್ ನ ನಿವಾಸಿಯಾದ ಜಯರಾಮ್ ವಿಪ್ಲವ್ ಅವರು ನನಗೆ ತಾರಾಪುರ್ ಹುತಾತ್ಮ ದಿನದ ಬಗ್ಗೆ ಬರೆದಿದ್ದಾರೆ. 1932 ರ ಫೆಬ್ರವರಿ 15ರಂದು ದೇಶ ಭಕ್ತರ ಒಂದು ಗುಂಪಿನ ಅನೇಕ ವೀರ ಯೋಧರನ್ನು ಬ್ರಿಟಿಷರು ಬಹಳ ಕ್ರೂರವಾಗಿ ಹತ್ಯೆಗೈದಿದ್ದರು. ‘ವಂದೇ ಮಾತರಂ’ ಮತ್ತು ‘ಭಾರತ ಮಾತೆಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದುದೇ ಅವರು ಮಾಡಿದ್ದ ಒಂದೇ ಒಂದು ಅಪರಾಧ. ನಾನು ಆ ಹುತಾತ್ಮರಿಗೆ ನಮನ ಸಲ್ಲಿಸುತ್ತೇನೆ ಮತ್ತು ಅವರ ಸಾಹಸವನ್ನು ಶ್ರದ್ಧಾಪೂರ್ವಕವಾಗಿ ಸ್ಮರಿಸುತ್ತೇನೆ. ನಾನು ಜಯರಾಮ್ ವಿಪ್ಲವ್ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಎಷ್ಟು ಚರ್ಚೆಯಾಗಬೇಕೋ ಅಷ್ಟು ಚರ್ಚೆಯಾಗದ ಘಟನೆಯೊಂದನ್ನು ದೇಶದ ಮುಂದೆ ತಂದಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಪ್ರತಿಯೊಂದು ಭಾಗದಲ್ಲೂ, ಪ್ರತಿ ನಗರ, ತಾಲ್ಲೂಕು ಮತ್ತು ಗ್ರಾಮದಲ್ಲೂ ಸ್ವಾತಂತ್ರ್ಯದ ಸಂಗ್ರಾಮವನ್ನು ಸಂಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡಲಾಯಿತು. ಭರತ ಭೂಮಿಯ ಪ್ರತಿ ಮೂಲೆಯಲ್ಲಿ ಇಂತಹ ಮಹಾನ್ ಪುತ್ರರು ಮತ್ತು ವೀರಾಂಗನೆಯರು ಜನ್ಮ ತಾಳಿದ್ದಾರೆ, ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರ ಹೋರಾಟ ಮತ್ತು ಅದಕ್ಕೆ ಸಂಬಂಧಿಸಿದ ನೆನಪುಗಳನ್ನು ನಾವು ಸಂರಕ್ಷಿಸಿ ಇಡಬೇಕಾಗಿರುವುದು ಬಹಳ ಮುಖ್ಯವಾಗಿದೆ. ಮತ್ತು ಇದಕ್ಕಾಗಿ ಅವರ ಬಗ್ಗೆ ಬರೆದು ನಮ್ಮ ಮುಂದಿನ ಪೀಳಿಗೆಗಾಗಿ ಅವರ ಸ್ಮೃತಿಗಳನ್ನು ಜೀವಂತವಾಗಿ ಇರಿಸಬಹುದಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಬರೆಯಿರೆಂದು ನಾನು ಎಲ್ಲಾ ದೇಶವಾಸಿಗಳಲ್ಲಿ ಮತ್ತು ವಿಶೇಷವಾಗಿ ನನ್ನ ಯುವ ಸ್ನೇಹಿತರಿಗೆ ಕರೆ ನೀಡುತ್ತೇನೆ. ನಿಮ್ಮ ಪ್ರದೇಶದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆಗಳ ಬಗ್ಗೆ ಪುಸ್ತಕ ಬರೆಯಿರಿ. ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಮಾಡುವಾಗ, ನಿಮ್ಮ ಲೇಖನವು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಅತ್ಯುತ್ತಮ ಶ್ರದ್ಧಾಂಜಲಿ ಎನಿಸುತ್ತದೆ. ಯುವ ಲೇಖಕರಿಗಾಗಿ ಭಾರತ ಎಪ್ಪತ್ತೈದು (India Seventy Five) ಅಭಿಯಾನ ಆರಂಭಿಸಲಾಗುತ್ತಿದೆ. ಇದರಲ್ಲಿ ಎಲ್ಲಾ ರಾಜ್ಯಗಳ ಮತ್ತು ಭಾಷೆಗಳ ಯುವ ಲೇಖಕರಿಗೆ ಉತ್ತೇಜನ ದೊರೆಯುತ್ತದೆ. ದೇಶದಲ್ಲಿ ಇಂತಹ ವಿಷಯಗಳ ಬಗ್ಗೆ ಬರೆಯುವ ಲೇಖಕರು ಅಪಾರ ಸಂಖ್ಯೆಯಲ್ಲಿ ಸಿದ್ಧರಾಗುತ್ತಾರೆ, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಯಲಿದೆ. ಇಂತಹ ಉದಯೋನ್ಮುಖ ಪ್ರತಿಭೆಗಳಿಗೆ ನಾವು ಪೂರ್ಣ ಸಹಕಾರ ಒದಗಿಸಬೇಕು. ಇದರಿಂದ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಚಿಂತನಾ ನಾಯಕರ ಪಡೆ ಸಿದ್ಧವಾಗುತ್ತದೆ. ನನ್ನ ಯುವ ಸ್ನೇಹಿತರನ್ನು ಈ ಉಪಕ್ರಮದ ಭಾಗವಾಗಲು ಮತ್ತು ತಮ್ಮ ಸಾಹಿತ್ಯಕ ನೈಪುಣ್ಯವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸುವುದಕ್ಕಾಗಿ ನಾನು ಆಹ್ವಾನಿಸುತ್ತಿದ್ದೇನೆ. ಇದಕ್ಕೆ ಸಂಬಂಧಿಸಿ ಮಾಹಿತಿ ಶಿಕ್ಷಣ ಸಚಿವಾಲಯದ ಜಾಲತಾಣದಲ್ಲಿ ಪಡೆದುಕೊಳ್ಳಬಹುದು.
ನನ್ನ ಪ್ರೀತಿಯ ದೇಶವಾಸಿಗಳೇ, ಮನದ ಮಾತಿನ ಕೇಳುಗರಿಗೆ ಏನು ಇಷ್ಟವಾಗುತ್ತದೆ ಎನ್ನುವುದು ನಿಮಗೇ ಚೆನ್ನಾಗಿ ಗೊತ್ತು. ಆದರೆ, ಮನದ ಮಾತಿನಲ್ಲಿ ನನಗೆ ಅತ್ಯಂತ ಇಷ್ಟವಾಗುವುದು ಏನೆಂದರೆ, ನನಗೆ ಬಹಳಷ್ಟು ವಿಷಯಗಳನ್ನು ಅರಿಯುವ, ಕಲಿಯುವ ಮತ್ತು ಓದುವ ಅವಕಾಶ ದೊರೆಯುತ್ತದೆ. ಒಂದು ರೀತಿಯಲ್ಲಿ ಪರೋಕ್ಷವಾಗಿ, ನಿಮ್ಮೆಲ್ಲರೊಂದಿಗೆ ಸೇರುವ ಅವಕಾಶ ದೊರೆಯುತ್ತದೆ. ಕೆಲವರ ಪ್ರಯತ್ನ, ಕೆಲವರ ಉತ್ಸಾಹ, ದೇಶಕ್ಕಾಗಿ ಏನನ್ನಾದರೂ ಮಾಡಿ ಹೋಗಬೇಕೆಂಬ ಸಂಕಲ್ಪ –ಇವುಗಳೆಲ್ಲವೂ ನನಗೆ ಬಹಳ ಸ್ಫೂರ್ತಿ ನೀಡುತ್ತವೆ, ನನ್ನಲ್ಲಿ ಉತ್ಸಾಹ ತುಂಬುತ್ತವೆ.
ಹೈದರಾಬಾದ್ ನ ಬೋಯಿನಪಲ್ಲಿಯಲ್ಲಿ ಒಂದು ಸ್ಥಳೀಯ ತರಕಾರಿ ಮಾರುಕಟ್ಟೆ ಯಾವರೀತಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದೆ ಎಂದು ಓದಿ ನನಗೆ ಬಹಳ ಸಂತೋಷವೆನಿಸಿತು. ತರಕಾರಿ ಮಾರುಕಟ್ಟೆಗಳಲ್ಲಿ ಅನೇಕ ಕಾರಣಗಳಿಂದ ಸಾಕಷ್ಟು ತರಕಾರಿ ಹಾಳಾಗುತ್ತವೆ ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಈ ತರಕಾರಿ ಅಲ್ಲಿ ಇಲ್ಲಿ ಹರಡಿ ಹೋಗಿರುತ್ತದೆ, ಕೊಳಕೂ ಹರಡುತ್ತದೆ ಆದರೆ, ಬೋಯಿನಪಲ್ಲಿಯ ತರಕಾರಿ ಮಾರುಕಟ್ಟೆಯು, ಪ್ರತಿ ದಿನ ಉಳಿಯುವಂತಹ ಇಂತಹ ತರಕಾರಿಗಳನ್ನು ಈ ರೀತಿ ಬಿಸಾಡಬಾರದೆಂದು ನಿರ್ಧರಿಸಿತು. ತರಕಾರಿ ಮಾರುಕಟ್ಟೆಗೆ ಸಂಬಂಧಿಸಿದ ವ್ಯಕ್ತಿಗಳು, ಇದರಿಂದ ವಿದ್ಯುಚ್ಛಕ್ತಿ ತಯಾರಿಸಬೇಕೆಂದು ನಿರ್ಧರಿಸಿದರು. ತ್ಯಾಜ್ಯವೆಂದು ಎಸೆಯುವ ತರಕಾರಿಗಳಿಂದ ವಿದ್ಯುತ್ ತಯಾರಿಸುವ ಕುರಿತು ನೀವು ಅಷ್ಟೇನೂ ಕೇಳಿರಲಾರಿರಿ. –ಇದೇ ಆವಿಷ್ಕಾರದ ಸಾಮರ್ಥ್ಯ. ಇಂದು ಬೋಯನಪಲ್ಲಿಯ ಮಾರುಕಟ್ಟೆಯಲ್ಲಿ ಮೊದಲು ತ್ಯಾಜ್ಯವಾಗಿದ್ದುದು ಈಗ ಅದರಿಂದಲೇ ಸಂಪತ್ತು ಸೃಷ್ಟಿಯಾಗುತ್ತಿದೆ. – ಇದೇ ಕಸವನ್ನು ರಸವಾಗಿಸುವ ಪ್ರಯಾಣವಾಗಿದೆ. ಅಲ್ಲಿ ಪ್ರತಿನಿತ್ಯ ಸುಮಾರು 10 ಟನ್ ತ್ಯಾಜ್ಯ ಹೊರಬೀಳುತ್ತದೆ. ಇದನ್ನು ಒಂದು ಘಟಕದಲ್ಲಿ ಒಟ್ಟುಗೂಡಿಸಲಾಗುತ್ತದೆ. ಘಟಕದಲ್ಲಿ ಇಂತಹ ತ್ಯಾಜ್ಯದಿಂದ ಪ್ರತಿದಿನ 500 ಯೂನಿಟ್ ವಿದ್ಯುತ್ ತಯಾರಾಗುತ್ತದೆ ಮತ್ತು ಸುಮಾರು 30 ಕಿಲೋ ಜೈವಿಕ ಅನಿಲ ಕೂಡಾ ತಯಾರಾಗುತ್ತದೆ. ಈ ವಿದ್ಯುತ್ತಿನಿಂದಲೇ ತರಕಾರಿ ಮಾರುಕಟ್ಟೆ ಬೆಳಗುತ್ತದೆ ಮತ್ತು ತಯಾರಾಗುವ ಜೈವಿಕ ಇಂಧನದಿಂದ ಮಾರುಕಟ್ಟೆಯ ಪಾಕಶಾಲೆಯಲ್ಲಿ ಅಡುಗೆ ತಯಾರಿಸಲಾಗುತ್ತದೆ. – ಅದ್ಭುತ ಪ್ರಯತ್ನವಲ್ಲವೇ!
ಇಂತಹದ್ದೇ ಒಂದು ಅದ್ಭುತ ಸಾಧನೆಯನ್ನು, ಹರಿಯಾಣಾದ ಪಂಚಕುಲಾದ ಬಡೌತ್ ಗ್ರಾಮ ಪಂಚಾಯಿತಿ ಮಾಡಿ ತೋರಿಸಿದೆ. ಈ ಪಂಚಾಯತ್ ಕ್ಷೇತ್ರದಲ್ಲಿ, ಕೊಳಚೆ ನೀರಿನ ಸಮಸ್ಯೆ ಇತ್ತು. ಈ ಕಾರಣದಿಂದಾಗಿ ಕೊಳಕು ನೀರು ಅಲ್ಲಿ ಇಲ್ಲಿ ಹರಿದಾಡುತ್ತಿತ್ತು. ರೋಗ ವ್ಯಾಪಿಸುತ್ತಿತ್ತು. ಆದರೆ, ಬಡೌತ್ ನ ಜನರು ಈ ತ್ಯಾಜ್ಯ ನೀರಿನಿಂದ ಕೂಡಾ ಸಂಪತ್ತು ಸೃಷ್ಟಿಸೋಣವೆಂದು ನಿರ್ಧರಿಸಿದರು. ಗ್ರಾಮ ಪಂಚಾಯಿತಿಯು ಇಡೀ ಗ್ರಾಮದಿಂದ ಬರುವ ಒಟ್ಟಾರೆ ಕೊಳಕು ನೀರನ್ನು ಒಂದು ಜಾಗದಲ್ಲಿ ಸಂಗ್ರಹಿಸಿ ಶೋಧಿಸಲು ಆರಂಭಿಸಿತು, ಮತ್ತು ಶೋಧಿಸಲ್ಪಟ್ಟ ನೀರನ್ನು ಈಗ ಗ್ರಾಮದ ರೈತರು ಹೊಲಗಳಲ್ಲಿ ನೀರಾವರಿಗಾಗಿ ಉಪಯೋಗಿಸುತ್ತಿದ್ದಾರೆ ಅಂದರೆ ಮಾಲಿನ್ಯ, ಕೊಳಚೆ ಮತ್ತು ರೋಗಗಳಿಂದ ಮುಕ್ತಿಯೂ ದೊರೆತಿದೆ ಮತ್ತು ಹೊಲಗಳಲ್ಲಿ ನೀರಾವರಿಯೂ ವ್ಯವಸ್ಥೆಯೂ ಆಗಿದೆ .
ಗೆಳೆಯರೆ, ಪರಿಸರದ ರಕ್ಷಣೆಯಿಂದ ಆದಾಯದ ಮಾರ್ಗ ಯಾವರೀತಿ ತೆರೆದುಕೊಳ್ಳುತ್ತದೆ ಎನ್ನುವ ಉದಾಹರಣೆ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಕೂಡಾ ನೋಡಲು ದೊರೆತಿದೆ. ಅರುಣಾಚಲ ಪ್ರದೇಶದ ಈ ಗುಡ್ಡಗಾಡು ಪ್ರದೇಶದಲ್ಲಿ ‘ಮೋನ ಶುಗು’ ಹೆಸರಿನ ಕಾಗದವನ್ನು ಶತಮಾನದಿಂದಲೂ ತಯಾರಿಸಲಾಗುತ್ತಿದೆ. ಈ ಕಾಗದ ಇಲ್ಲಿನ ಸ್ಥಳೀಯ ಶುಗು ಶೇಂಗ್ ಹೆಸರಿನ ಒಂದು ಮರದ ತೊಗಟೆಯಿಂದ ತಯಾರಿಸಲಾಗುತ್ತದೆ, ಆದ್ದರಿಂದ ಈ ಕಾಗದವನ್ನು ತಯಾರಿಸಲು ಮರಗಳನ್ನು ಕಡಿಯಬೇಕಾಗುವುದಿಲ್ಲ. ಅಷ್ಟೇ ಅಲ್ಲ ಇದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕದ ಬಳಕೆ ಕೂಡಾ ಮಾಡಲಾಗುವುದಿಲ್ಲ. ಅಂದರೆ, ಈ ಕಾಗದ ಪರಿಸರಕ್ಕೆ ಕೂಡಾ ಸುರಕ್ಷಿತವಾಗಿದೆ ಮತ್ತು ಆರೋಗ್ಯಕ್ಕೆ ಕೂಡಾ. ಈ ಕಾಗದವನ್ನು ರಫ್ತು ಮಾಡುತ್ತಿದ್ದ ಸಮಯವೂ ಒಂದಿತ್ತು, ಆದರೆ ನವೀನ ತಂತ್ರಜ್ಞಾನದ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ಕಾಗದ ತಯಾರಿಕೆ ಶುರುವಾದಾಗ, ಈ ಸ್ಥಳೀಯ ಕಲೆ ಅಳಿವಿನ ಅಂಚಿಗೆ ಬಂದಿತು. ಈಗ ಓರ್ವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗೊಂಬು ಅವರು ಈ ಕಲೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಮಾಡಿದ್ದು, ಇದರಿಂದ ಬುಡಕಟ್ಟು ಸೋದರ–ಸೋದರಿಯರಿಗೆ ಉದ್ಯೋಗ ಕೂಡಾ ದೊರೆಯುತ್ತಿದೆ.
ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವಂತೆ ಮಾಡುವ ಮತ್ತೊಂದು ವಿಷಯವನ್ನು ಕೇರಳದಲ್ಲಿ ನೋಡಿದ್ದೇನೆ. ಕೇರಳದ ಕೊಟ್ಟಾಯಂನಲ್ಲಿ ಓರ್ವ ದಿವ್ಯಾಂಗ ವೃದ್ಧರಿದ್ದಾರೆ – ಅವರ ಹೆಸರು ಎನ್ ಎಸ್. ರಾಜಪ್ಪನ್ ಸಾಹಬ್. ರಾಜಪ್ಪನ್ ಅವರು ಪಾರ್ಶ್ವವಾಯುವಿನ ಕಾರಣದಿಂದಾಗಿ ನಡೆಯಲು ಅಸಮರ್ಥರಾಗಿದ್ದಾರೆ, ಆದರೆ ಇದರಿಂದಾಗಿ ಸ್ವಚ್ಛತೆಯ ವಿಷಯವಾಗಿ ಅವರ ಸಮರ್ಪಣಾ ಭಾವನೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಅವರು ಕಳೆದ ಅನೇಕ ವರ್ಷಗಳಿಂದ ದೋಣಿಯಲ್ಲಿ ವೆಂಬನಾಡ್ ಸರೋವರಕ್ಕೆ ಹೋಗುತ್ತಾರೆ ಮತ್ತು ಸರೋವರದಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಹೊರಗೆ ತೆಗೆದುಕೊಂಡು ಬರುತ್ತಾರೆ. ರಾಜಪ್ಪನ್ ಅವರ ಯೋಚನೆ ಎಷ್ಟು ಉತ್ಕೃಷ್ಠವಾಗಿದೆ ಯೋಚಿಸಿ, ನಾವು ಕೂಡಾ ರಾಜಪ್ಪನ್ ಅವರಿಂದ ಪ್ರೇರೇಪಿತರಾಗಿ, ಸ್ವಚ್ಛತೆಗಾಗಿ, ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿ ನಮ್ಮ ಕೊಡುಗೆ ನೀಡಬೇಕು
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಮೊದಲು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಆಗಮಿಸಿದ ತಡೆರಹಿತ ವಿಮಾನವೊಂದನ್ನು ಭಾರತದ ನಾಲ್ವರು ಮಹಿಳಾ ಪೈಲೆಟ್ ಗಳು ನಿಭಾಯಿಸಿದ್ದರು. ಈ ಬಗ್ಗೆ ತಾವು ತಿಳಿದಿರಬಹುದು. ಹತ್ತು ಸಾವಿರ ಕಿಲೋಮೀಟರ್ ಗೂ ಅಧಿಕ ದೂರವನ್ನು ಕ್ರಮಿಸಿ ಈ ವಿಮಾನ ಸುಮಾರು ಇನ್ನೂರ ಇಪ್ಪತೈದಕ್ಕೂ ಹೆಚ್ಚು ಪ್ರಯಾಣಿಕರನ್ನು ಭಾರತಕ್ಕೆ ಕರೆತಂದಿತು. ತಾವು ಈ ಬಾರಿಯ ಜನವರಿ 26ರ ಪಥಸಂಚಲನದಲ್ಲೂ ಗಮನಿಸಿದ್ದಿರಬಹುದು, ಅಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಮಹಿಳಾ ಪೈಲೆಟ್ ಗಳು ಇತಿಹಾಸ ಸೃಷ್ಟಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ದೇಶದ ಮಹಿಳೆಯರ ಸಹಭಾಗಿತ್ವ ನಿರಂತರವಾಗಿ ಏರಿಕೆಯಾಗುತ್ತಿದೆ. ಆದರೆ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಬದಲಾವಣೆಗಳ ಬಗ್ಗೆ ಅಷ್ಟು ಚರ್ಚೆ ನಡೆಯುವುದಿಲ್ಲ ಎನ್ನುವುದನ್ನು ನಾವು ಪ್ರತಿದಿನ ನೋಡುತ್ತೇವೆ. ಹೀಗಾಗಿ, ಮಧ್ಯಪ್ರದೇಶದ ಜಬಲ್ಪುರದ ಒಂದು ಸುದ್ದಿ ಕೇಳಿದಾಗ “ಮನದ ಮಾತುʼ ಕಾರ್ಯಕ್ರಮದಲ್ಲಿ ಅದನ್ನು ಅಗತ್ಯವಾಗಿ ಹಂಚಿಕೊಳ್ಳಬೇಕೆಂದೆನಿಸಿತು. ಈ ಸುದ್ದಿ ಬಹಳ ಪ್ರೇರಣೆ ನೀಡುವಂಥದ್ದಾಗಿದೆ. ಜಬಲ್ಪುರದ ಚಿಚಗಾಂವ್ ಎಂಬಲ್ಲಿ ಕೆಲವು ಆದಿವಾಸಿ ಮಹಿಳೆಯರು ಒಂದು ಅಕ್ಕಿ ಗಿರಣಿಯಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕೊರೋನಾ ಜಾಗತಿಕ ಮಹಾಮಾರಿ ಹೇಗೆ ವಿಶ್ವದ ಪ್ರತಿ ವ್ಯಕ್ತಿಯ ಮೇಲೆ ಪರಿಣಾಮ ಬೀರಿತೋ, ಅದೇ ರೀತಿ ಈ ಮಹಿಳೆಯರ ಮೇಲೂ ಪರಿಣಾಮ ಬೀರಿತು. ಅವರ ಅಕ್ಕಿ ಗಿರಣಿ ಕೆಲಸ ಸ್ಥಗಿತಗೊಳಿಸಿತು. ಸ್ವಾಭಾವಿಕವಾಗಿ ಇವರ ದೈನಂದಿನ ಬದುಕಿಗೂ ಸಮಸ್ಯೆ ಎದುರಾಯಿತು. ಆದರೆ, ಇವರು ನಿರಾಶರಾಗಲಿಲ್ಲ, ಸೋಲನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ, ಎಲ್ಲರೂ ಜತೆಗೂಡಿ ತಾವೇ ಖುದ್ದಾಗಿ ಅಕ್ಕಿ ಗಿರಣಿ ಆರಂಭಿಸಬೇಕೆಂದು ನಿರ್ಧರಿಸಿಕೊಂಡರು. ಯಾವ ಗಿರಣಿಯಲ್ಲಿ ಇವರೆಲ್ಲ ಕೆಲಸ ಮಾಡುತ್ತಿದ್ದರೋ ಅವರು ತಮ್ಮ ಯಂತ್ರಗಳನ್ನು ಸಹ ಮಾರಾಟ ಮಾಡಲು ಮುಂದಾಗಿದ್ದರು. ಇವರಲ್ಲಿ ಮೀನಾ ರಾಹಂಗಡಾಲೆ ಎನ್ನುವವರು ಎಲ್ಲ ಮಹಿಳೆಯರನ್ನೂ ಒಂದುಗೂಡಿಸಿ “ಸ್ವಸಹಾಯ ಸಮೂಹʼ ರಚಿಸಿದರು. ಮತ್ತು ಎಲ್ಲರೂ ತಾವು ಉಳಿಸಿದ ಹಣವನ್ನು ಇದಕ್ಕೆ ಹಾಕಿದರು. ಕಡಿಮೆ ಬಿದ್ದ ಹಣಕ್ಕಾಗಿ ಅವರು “ಆಜೀವಿಕಾ ಮಿಷನ್ʼ ಅಡಿಯಲ್ಲಿ ಬ್ಯಾಂಕ್ ನಿಂದ ಸಾಲ ಪಡೆದರು. ಈಗ ಇವರನ್ನು ನೋಡಿ. ಮೊದಲು ತಾವು ಕೆಲಸ ಮಾಡುತ್ತಿದ್ದ ಅಕ್ಕಿ ಗಿರಣಿಯನ್ನೇ ಈ ಆದಿವಾಸಿ ಮಹಿಳೆಯರು ಖರೀದಿಸಿದ್ದಾರೆ. ಇಷ್ಟು ದಿನಗಳಲ್ಲೇ ಈ ಗಿರಣಿ ಸರಿಸುಮಾರು ಮೂರು ಲಕ್ಷ ರೂಪಾಯಿಗಳಷ್ಟು ಲಾಭವನ್ನೂ ಗಳಿಸಿದೆ. ಈ ಲಾಭದ ಹಣದಿಂದ ಮೀನಾ ಮತ್ತು ಅವರ ಜತೆಗಾರರು ಎಲ್ಲಕ್ಕಿಂತ ಮೊದಲು ಬ್ಯಾಂಕ್ ಸಾಲ ತೀರಿಸಿದರು. ಹಾಗೂ ತಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಪಡಿಸಲು ಸಿದ್ಧತೆ ನಡೆಸಿದ್ದಾರೆ. ಕೊರೋನಾ ಸೋಂಕು ನಿರ್ಮಿಸಿದ ಪರಿಸ್ಥಿತಿ ಎದುರಿಸಲು ದೇಶದ ಮೂಲೆಮೂಲೆಯಲ್ಲಿ ಇಂಥ ಅದ್ಭುತ ಕೆಲಸಗಳು ನಡೆದಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾನೊಮ್ಮೆ ಬುಂದೇಲಖಂಡದ ಬಗ್ಗೆ ಹೇಳಿದರೆ ತಮ್ಮ ಮನಸ್ಸಿನಲ್ಲಿ ಅದೆಂಥ ಭಾವನೆ ಮೂಡಬಹುದು ಎನಿಸುತ್ತದೆ. ಇತಿಹಾಸದಲ್ಲಿ ಆಸಕ್ತಿ ಇರುವವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಜತೆಗೆ ಇವರನ್ನೂ ಹೋಲಿಸಬಹುದು. ಹಾಗೆಯೇ ಕೆಲವು ಜನ ಸುಂದರ ಮತ್ತು ಶಾಂತ ಓರ್ಚಾ ಬಗ್ಗೆ ಯೋಚಿಸಬಹುದು. ಇನ್ನು ಕೆಲವರಿಗೆ ಈ ಪ್ರದೇಶದ ಅತ್ಯಧಿಕ ತಾಪಮಾನದ ನೆನಪೂ ಬರಬಹುದು. ಆದರೆ, ಈ ದಿನ, ಇಲ್ಲಿ ಅತ್ಯಂತ ಉತ್ಸಾಹ ಮೂಡಿಸುವಂಥ ಬೇರೆಯದೇ ಚಟುವಟಿಕೆ ನಡೆಯುತ್ತಿದೆ. ಮತ್ತು ಇದರ ಬಗ್ಗೆ ನಾವು ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ. ಕಳೆದ ಕೆಲ ದಿನಗಳ ಹಿಂದೆ ಝಾನ್ಸಿಯಲ್ಲಿ ಒಂದು ತಿಂಗಳವರೆಗೆ ನಡೆಯುವ “ಸ್ಟ್ರಾಬೆರಿ ಹಬ್ಬʼ ಆರಂಭವಾಗಿದೆ. “ಸ್ಟ್ರಾಬೆರಿ ಮತ್ತು ಬುಂದೇಲ್ ಖಂಡʼ ಎಂದು ಪ್ರತಿಯೊಬ್ಬರಿಗೂ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಈಗ ಬುಂದೇಲಖಂಡದಲ್ಲಿ ಸ್ಟ್ರಾಬೆರಿ ಕೃಷಿಯ ಉತ್ಸಾಹ ವರ್ಧಿಸುತ್ತಿದೆ. ಮತ್ತು ಇದರಲ್ಲಿ ಝಾನ್ಸಿಯ ಓರ್ವ ಪುತ್ರಿ ಮಹತ್ವದ ಪಾತ್ರ ನಿಭಾಯಿಸಿದ್ದಾಳೆ. ಆಕೆ, ಗುರ್ಲೀನ್ ಚಾವ್ಲಾ. ಕಾನೂನು ಓದುತ್ತಿರುವ ಗುರ್ಲೀನ್ ಮೊದಲು ತಮ್ಮ ಮನೆ ಹಾಗೂ ತಮ್ಮ ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆಯ ಪ್ರಯೋಗ ಮಾಡಿ ಯಶಸ್ವಿಯಾದರು. ಝಾನ್ಸಿಯಲ್ಲೂ ಸ್ಟ್ರಾಬೆರಿ ಬೆಳೆ ಬೆಳೆಯಬಹುದೆನ್ನುವ ವಿಶ್ವಾಸ ಮೂಡಿಸಿದರು. ಈಗ ಝಾನ್ಸಿಯ “ಸ್ಟ್ರಾಬೆರಿ ಹಬ್ಬʼವು “ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡುವʼ ಸಿದ್ಧಾಂತಕ್ಕೆ STAY AT HOME CONCEPT ಗೆ ಆದ್ಯತೆ ನೀಡುತ್ತದೆ. ಈ ಮಹೋತ್ಸವದ ಮೂಲಕ ಸ್ಥಳೀಯ ರೈತರು ಮತ್ತು ಯುವಕರಿಗೆ ತಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ಸ್ಥಳ ಮತ್ತು ಮನೆಯ ಮೇಲ್ಛಾವಣಿಯಲ್ಲಿ ಟೆರೇಸ್ ಉದ್ಯಾನ ನಿರ್ಮಿಸಿ ಸ್ಟ್ರಾಬೆರಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ನೂತನ ತಂತ್ರಜ್ಞಾನಗಳ ಮೂಲಕ ಇಂಥ ಹಲವಾರು ಪ್ರಯತ್ನಗಳು ದೇಶದ ಇತರ ಭಾಗಗಳಲ್ಲೂ ನಡೆಯುತ್ತಿವೆ. ಈ ಮೊದಲು ಗುಡ್ಡಗಾಡಿನ ಗುರುತಾಗಿದ್ದ ಸ್ಟ್ರಾಬೆರಿ, ಈಗ ಕಛ್ ಪ್ರದೇಶದ ಮರುಳುಮಿಶ್ರಿತ ಜಮೀನಿನಲ್ಲೂ ಬೆಳೆಯಬಹುದಾಗಿದ್ದುದರಿಂದ ರೈತರ ಆದಾಯ ಹೆಚ್ಚುತ್ತಿದೆ.
ಜತೆಗಾರರೇ, ಸ್ಟ್ರಾಬೆರಿ ಹಬ್ಬದಂಥ ಪ್ರಯೋಗ ಆವಿಷ್ಕಾರದ ಸ್ಥೈರ್ಯವನ್ನು ತೋರುತ್ತದೆ. ಜತೆಗೇ, ನಮ್ಮ ದೇಶದ ಕೃಷಿ ಕ್ಷೇತ್ರ ನೂತನ ತಂತ್ರಜ್ಞಾನವನ್ನು ಹೇಗೆ ತನ್ನದಾಗಿಸಿಕೊಳ್ಳುತ್ತಿದೆ ಎನ್ನುವುದನ್ನೂ ತೋರಿಸಿಕೊಡುತ್ತಿದೆ.
ಜತೆಗಾರರೇ, ಕೃಷಿಯನ್ನು ಆಧುನಿಕಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮತ್ತು ಈ ದಿಸೆಯಲ್ಲಿ ಹೆಜ್ಜೆಯನ್ನೂ ಇಟ್ಟಿದೆ. ಸರ್ಕಾರದ ಈ ಪ್ರಯತ್ನ ಮುಂದೆಯೂ ಜಾರಿಯಲ್ಲಿರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ ನಾನೊಂದು ವಿಡಿಯೋ ನೋಡಿದೆ. ಆ ವಿಡಿಯೋ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ “ನಯಾ ಪಿಂಗ್ಲಾʼ ಗ್ರಾಮದ ಚಿತ್ರ ಕಲಾವಿದ ಸರಮುದ್ದೀನ್ ಅವರದ್ದಾಗಿತ್ತು. ರಾಮಾಯಣ ಕುರಿತು ರಚಿಸಿದ್ದ ಅವರ ಪೇಂಟಿಂಗ್ ಎರಡು ಲಕ್ಷ ರೂಪಾಯಿಗೆ ಮಾರಾಟವಾಗಿದ್ದರ ಬಗ್ಗೆ ವಿಡಿಯೋದಲ್ಲಿ ಅವರು ಸಂತಸ ವ್ಯಕ್ತಪಡಿಸಿದ್ದರು. ಇದರಿಂದ ಗ್ರಾಮದ ಬಹುಜನರಿಗೂ ಬಹಳ ಸಂತಸವಾಗಿದೆ. ಈ ವಿಡಿಯೋ ನೋಡಿದ ಬಳಿಕ ಇದರ ಬಗ್ಗೆ ಇನ್ನಷ್ಟು ಅರಿತುಕೊಳ್ಳುವ ಉತ್ಸುಕತೆ ನನ್ನಲ್ಲಿ ಮೂಡಿತು. ಇದರ ಫಲವಾಗಿ ಪಶ್ಚಿಮ ಬಂಗಾಲದೊಂದಿಗೆ ಗುರುತಿಸಿಕೊಂಡಿರುವ ಅತ್ಯಂತ ಉತ್ತಮ ವಿಚಾರದ ಬಗ್ಗೆ ನನಗೆ ಮಾಹಿತಿ ದೊರಕಿತು. ಅದನ್ನು ನಾನು ತಮ್ಮೊಂದಿಗೆ ಅಗತ್ಯವಾಗಿ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಪ್ರವಾಸೋದ್ಯಮ ಸಚಿವಾಲಯದ ವಲಯ ಕಚೇರಿಯು ಈ ತಿಂಗಳ ಆರಂಭದಲ್ಲೇ ಬಂಗಾಳದ ಗ್ರಾಮಗಳಲ್ಲಿ ಒಂದು “ಇನ್ ಕ್ರೆಡಿಬಲ್ ಇಂಡಿಯಾ–WEEK END GATEWAYʼ ಕಾರ್ಯಕ್ರಮವನ್ನು ಆರಂಭಿಸಿದೆ. ಇದರಲ್ಲಿ ಪಶ್ಚಿಮ ಮಿಡ್ನಾಪುರ, ಬಾಂಕುರಾ, ಬಿರ್ಭೂಮ್, ಪುರೂಲಿಯಾ, ಪೂರ್ವ ವರ್ಧಮಾನ್ ಗಳ ಶಿಲ್ಪ ಕಲಾವಿದರಿಂದ ಕರಕುಶಲ ಮೇಳವನ್ನು ಆಯೋಜಿಸಲಾಯಿತು. ಈ ಇನ್ ಕ್ರೆಡಿಬಲ್ ಇಂಡಿಯಾ –WEEK END GATEWAY ಕಾರ್ಯಕ್ರಮದ ಮೂಲಕ ಕರಕುಶಲ ವಸ್ತುಗಳ ಮಾರಾಟ ಅತ್ಯುತ್ತಮವಾಗಿ ನಡೆಯಿತು ಎಂದು ನನಗೆ ತಿಳಿಸಲಾಗಿದೆ. ಇದು ಕರಕುಶಲ ಕಲಾವಿದರಿಗೆ ಪ್ರೋತ್ಸಾಹ ನೀಡುವ ಅತ್ಯುತ್ತಮ ಕಾರ್ಯಕ್ರಮವಾಗಿದೆ. ದೇಶದೆಲ್ಲೆಡೆಯ ಜನರು ಕೂಡ ಹೊಸ ಹೊಸ ವಿಧಾನಗಳ ಮೂಲಕ ನಮ್ಮ ಕಲೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ.
ಒಡಿಶಾದ ರಾವುರ್ಕೆಲಾದ ಭಾಗ್ಯಶ್ರೀ ಸಾಹೂ ಎಂಬಾಕೆಯನ್ನೇ ನೋಡಿ. ಈಕೆ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ. ಆದರೆ, ಕಳೆದ ಕೆಲವು ತಿಂಗಳಿಂದ ಪಟಚಿತ್ರ ಕಲೆಯನ್ನು ಕಲಿತುಕೊಳ್ಳಲು ಆರಂಭಿಸಿದರು ಹಾಗೂ ಅದರಲ್ಲಿ ನೈಪುಣ್ಯತೆಯನ್ನೂ ಗಳಿಸಿದರು. ಆದರೆ, ಅವರು ಎಲ್ಲಿ ಪೇಂಟ್ ಮಾಡಿದ್ದಾರೆಂದು ತಮಗೆ ಗೊತ್ತೇ? ಅವರು ಮಾಡಿರುವುದು ಮೃದುವಾದ ಶಿಲೆಗಳ ಮೇಲೆ! ಮೃದುವಾದ ಶಿಲೆಗಳ ಮೇಲೆ. ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಭಾಗ್ಯಶ್ರೀಗೆ ಮೃದುವಾದ ಶಿಲೆಗಳು ದೊರೆತವು. ಅವುಗಳನ್ನು ಅವರು ಒಂದೆಡೆ ಕೂಡಿಸಿ ಸ್ವಚ್ಛಗೊಳಿಸಿದರು. ನಂತರ, ಪ್ರತಿದಿನವೂ ಗಂಟೆಗಳ ಕಾಲ ಶಿಲೆಗಳ ಮೇಲೆ ಪಚಿತ್ರ ಮಾದರಿಯಲ್ಲಿ ಪೇಂಟಿಂಗ್ ಮಾಡಿದರು. ಶಿಲೆಗಳ ಮೇಲೆ ಮಾಡಿದ ಪೇಂಟಿಂಗ್ ಗಳನ್ನು ತಮ್ಮ ಸ್ನೇಹಿತರಿಗೆ ಉಡುಗೊರೆ ನೀಡಲು ಆರಂಭಿಸಿದರು. ಲಾಕ್ ಡೌನ್ ಅವಧಿಯಲ್ಲಿ ಅವರು ಬಾಟಲಿಗಳ ಮೇಲೆಯೂ ಪೇಂಟಿಂಗ್ ಮಾಡಲು ಪ್ರಾರಂಭಿಸಿದರು. ಈಗ ಅವರು ಈ ಕಲೆಯ ಮೇಲೆ ಕಾರ್ಯಾಗಾರವನ್ನೂ ಆಯೋಜಿಸುತ್ತಾರೆ. ಕೆಲವು ದಿನಗಳ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯಂದು ಭಾಗ್ಯಶ್ರೀ ಅವರು ಶಿಲೆಯ ಪೇಂಟಿಂಗ್ ಮೂಲಕವೇ ವಿಶಿಷ್ಟ ಮಾದರಿಯಲ್ಲಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭವಿಷ್ಯದ ಅವರ ಪ್ರಯತ್ನಗಳಿಗೆ ನಾನು ಶುಭಕಾಮನೆಗಳನ್ನು ಕೋರುತ್ತೇನೆ. ಕಲೆ ಮತ್ತು ಬಣ್ಣಗಳಲ್ಲಿ ಬಹಳಷ್ಟು ಹೊಸತನ್ನು ಕಲಿಯಲು ಸಾಧ್ಯ, ಮಾಡಲು ಸಾಧ್ಯ.
ಜಾರ್ಖಂಡ್ ರಾಜ್ಯದ ದುಮ್ಕಾ ಎಂಬಲ್ಲಿ ಮಾಡಲಾದ ಇಂಥದ್ದೇ ಅನುಪಮ ಪ್ರಯತ್ನದ ಕುರಿತು ನನಗೆ ತಿಳಿದುಬಂದಿದೆ. ಇಲ್ಲಿ ಮಾಧ್ಯಮಿಕ ಶಾಲೆಯ ಒಬ್ಬರು ಮುಖ್ಯೋಪಾಧ್ಯಾಯರು ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡಲೆಂದು, ಕಲಿಸಲೆಂದು ಹಳ್ಳಿಗಳ ಗೋಡೆಗಳ ಮೇಲೆಯೇ ಹಿಂದಿ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿ ಪೇಂಟಿಂಗ್ ಮಾಡಿಸಿದ್ದಾರೆ. ಜತೆಗೇ, ವಿಭಿನ್ನ ಚಿತ್ರಗಳನ್ನೂ ರಚಿಸಿದ್ದಾರೆ. ಇದರಿಂದ ಗ್ರಾಮದ ಮಕ್ಕಳ ಸಹಾಯವೂ ಸಾಕಷ್ಟು ದೊರೆಯುತ್ತಿದೆ. ಇಂತಹ ಪ್ರಯತ್ನಗಳಲ್ಲಿ ನಿರತರಾಗಿರುವ ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ, ಹಲವು ಮಹಾಸಾಗರಗಳು, ಮಹಾದ್ವೀಪಗಳ ಆಚೆ ಚಿಲಿ ದೇಶವಿದೆ. ಭಾರತದಿಂದ ಚಿಲಿ ತಲುಪಲು ಬಹಳ ಸಮಯ ತಗುಲುತ್ತದೆ. ಆದರೆ, ಅಲ್ಲಿ ಬಹಳ ಹಿಂದಿನಿಂದಲೂ ಭಾರತೀಯ ಸಂಸ್ಕೃತಿಯ ಪರಿಮಳ ಪಸರಿಸುತ್ತಿದೆ. ಇನ್ನೊಂದು ಮುಖ್ಯವಾದ ಮಾತೆಂದರೆ, ಅಲ್ಲಿ ಯೋಗವು ಬಹಳ ಜನಪ್ರಿಯವಾಗಿದೆ. ತಮಗೆ ಈ ಸಂಗತಿ ತಿಳಿದರೆ ಖುಷಿಯಾಗಬಹುದು, ಚಿಲಿಯ ರಾಜಧಾನಿ ಸ್ಯಾಂಟಿಯಾಗೋದಲ್ಲಿ 30ಕ್ಕೂ ಹೆಚ್ಚು ಯೋಗ ವಿದ್ಯಾಲಯಗಳಿವೆ. ಚಿಲಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಹ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಚಿಲಿಯ ಸಂಸತ್ತಿನ ಹೌಸ್ ಆಫ್ ಡೆಪ್ಯೂಟಿಸ್ ನಲ್ಲಿ ಯೋಗ ದಿನದಂದು ಉತ್ಸಾಹದಾಯಕ ವಾತಾವರಣ ಇರುತ್ತದೆ ಎಂದು ನನಗೆ ಮಾಹಿತಿ ಇದೆ. ಕೊರೋನಾ ಸೋಂಕಿನ ಈ ಕಾಲದಲ್ಲಿ ರೋಗನಿರೋಧಕ ಶಕ್ತಿಗೆ ಒತ್ತು ನೀಡುವಲ್ಲಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಯೋಗದ ತಾಕತ್ತನ್ನು ನೋಡಿ ಯೋಗದ ವಿಷಯವಾಗಿ ಅವರು ಇನ್ನಷ್ಟು ಮಹತ್ವ ನೀಡುತ್ತಿದ್ದಾರೆ. ಚಿಲಿಯ ಕಾಂಗ್ರೆಸ್ ಅಂದರೆ ಅಲ್ಲಿನ ಸಂಸತ್ತು ಒಂದು ಪ್ರಸ್ತಾವ ಮಂಡಿಸಿತ್ತು, ಫಲವಾಗಿ, ಅಲ್ಲಿ ನವೆಂಬರ್ 4ರಂದು ರಾಷ್ಟ್ರೀಯ ಯೋಗ ದಿನವೆಂದು ಘೋಷಿಸಲಾಗಿದೆ. ನವೆಂಬರ್ 4ರಂದು ಅಂಥದ್ದೇನಿದೆ ಎಂದು ನೀವು ಯೋಚಿಸುತ್ತಿರಬಹುದು. 1962 ರ ನವೆಂಬರ್ 4ರಂದೇ ಚಿಲಿಯ ಪ್ರಥಮ ಯೋಗ ಸಂಸ್ಥಾನ ಹೋಜೆ ರಫಾಲ್ ಎಸ್ಟ್ರಡಾ ಅವರಿಂದ ಸ್ಥಾಪನೆಯಾಗಿತ್ತು. ಈ ದಿನವನ್ನು ರಾಷ್ಟ್ರೀಯ ಯೋಗ ದಿನವೆಂದು ಪ್ರಕಟಿಸುವ ಮೂಲಕ ಎಸ್ಟ್ರಡಾ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಿಲಿಯ ಸಂಸತ್ತಿನ ಮೂಲಕ ಇದೊಂದು ವಿಶೇಷ ಗೌರವ ಸಂದಿರುವುದು ಪ್ರತಿಯೋರ್ವ ಭಾರತೀಯನೂ ಹೆಮ್ಮೆ ಪಡುವಂಥದ್ದಾಗಿದೆ. ಅಂದ ಹಾಗೆ, ಚಿಲಿಯ ಸಂಸದರ ಕುರಿತಾದ ಇನ್ನೊಂದು ವಿಚಾರ ತಮ್ಮ ಮನಸೂರೆಗೊಳ್ಳಬಹುದು. ಚಿಲಿಯ ಸೆನೇಟ್ ನ ಉಪಾಧ್ಯಕ್ಷರ ಹೆಸರು ರವೀಂದ್ರನಾಥ ಕ್ವಿಂಟೆರಾಸ್ ಎಂದು. ವಿಶ್ವಕವಿ ಗುರುದೇವ ಟ್ಯಾಗೋರ್ ಅವರಿಂದ ಪ್ರೇರಿತರಾಗಿ ಅವರಿಗೆ ಈ ಹೆಸರು ಇಡಲಾಗಿದೆ.
ನನ್ನ ಪ್ರೀತಿಯ ಸಹವಾಸಿಗಳೇ, “ಮನದ ಮಾತುʼ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ಕುರಿತಾಗಿಯೂ ಮಾತಾಡುವಂತೆ ಮಹಾರಾಷ್ಟ್ರದ ಜಾಲ್ನಾದ ಡಾ.ಸ್ವಪ್ನಿಲ್ ಮಂತ್ರಿ ಹಾಗೂ ಕೇರಳದ ಪಾಲಕ್ಕಾಡ್ ನ ಪ್ರಹ್ಲಾದ ರಾಜಗೋಪಾಲನ್ ಅವರು “ಮೈಗವ್ʼ ವೇದಿಕೆಯ ಮೂಲಕ ಒತ್ತಾಯಿಸಿದ್ದಾರೆ. ಈ ತಿಂಗಳ 18ರಿಂದ ಫೆಬ್ರವರಿ 17ರವರೆಗೆ ನಮ್ಮ ದೇಶ “ರಸ್ತೆ ಸುರಕ್ಷತಾ ಮಾಸಿಕʼವನ್ನು ಆಚರಿಸುತ್ತಿದೆ. ರಸ್ತೆ ಅಪಘಾತಗಳು ಇಂದು ನಮ್ಮ ದೇಶದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲಿ ಚಿಂತೆಯ ವಿಷಯವಾಗಿದೆ. ಇಂದು ಭಾರತದಲ್ಲಿ ರಸ್ತೆ ಸುರಕ್ಷತೆಗಾಗಿ ಸರ್ಕಾರದೊಂದಿಗೆ ವ್ಯಕ್ತಿಗತ ಹಾಗೂ ಸಾಮೂಹಿಕ ಸ್ತರದಲ್ಲೂ ಹಲವಾರು ರೀತಿಯ ಪ್ರಯತ್ನಗಳು ಜಾರಿಯಲ್ಲಿವೆ. ಜೀವ ರಕ್ಷಿಸುವ ಈ ಪ್ರಯತ್ನದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ.
ಜತೆಗಾರರೇ, Border road organization ನಿರ್ಮಿಸುವ ರಸ್ತೆಗಳಲ್ಲಿ ಪ್ರಯಾಣಿಸುವಾಗ ಅತ್ಯಂತ ಆವಿಷ್ಕಾರಿ, ಅನ್ವೇಷಣಾತ್ಮಕ ಘೋಷವಾಕ್ಯಗಳು ಅಲ್ಲಲ್ಲಿ ಕಾಣುವುದು ತಮ್ಮ ಗಮನಕ್ಕೆ ಬಂದಿರಬಹುದು. “THIS IS HIGHWAY NOT RUNWAYʼ, ಅಥವಾ “Be Mr.Late than Late Mr. ʼ ಎನ್ನುವಂಥ ಘೋಷವಾಕ್ಯಗಳನ್ನು ನೋಡಿರಬಹುದು. ಇಂಥ ಘೋಷವಾಕ್ಯಗಳು ರಸ್ತೆಗಳಲ್ಲಿ ಸಮಾಧಾನದಿಂದ ಚಲಿಸಬೇಕು ಎನ್ನುವ ಜಾಗೃತಿಯನ್ನು ಜನರಲ್ಲಿ ಮೂಡಿಸಲು ಪ್ರಭಾವಿಯಾಗಿರುತ್ತವೆ. ಈಗ ತಾವೂ ಸಹ ಅನ್ವೇಷಣಾತ್ಮಕ ಘೋಷಣೆಗಳು ಅಥವಾ ಗಮನ ಸೆಳೆಯುವ ನುಡಿಗಟ್ಟುಗಳನ್ನು ಕೇಂದ್ರ ಸರ್ಕಾರದ “ಮೈಗವ್ʼ ವೇದಿಕೆಗೆ ಕಳುಹಿಸಬಹುದು. ತಮ್ಮ ಅತ್ಯುತ್ತಮ ಘೋಷವಾಕ್ಯಗಳನ್ನು ಈ ಅಭಿಯಾನದಲ್ಲಿ ಬಳಸಿಕೊಳ್ಳಲಾಗುವುದು.
ಜತೆಗಾರರೇ, ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡುವಾಗ ನಮೋ ಆ್ಯಪ್ ನಲ್ಲಿ ಕೋಲ್ಕತ್ತಾದ ಅಪರ್ಣಾ ದಾಸ್ ಅವರು ಮಾಡಿರುವ ಒಂದು ಸಂದೇಶದ ಬಗ್ಗೆ ನಾನು ಚರ್ಚೆ ಮಾಡಲು ಬಯಸುತ್ತೇನೆ. ಅಪರ್ಣಾ ಅವರು ನನಗೆ ಫಾಸ್ಟ್ ಟ್ಯಾಗ್ ಕಾರ್ಯಕ್ರಮದ ಬಗ್ಗೆ ಮಾತನಾಡಲು ಸಲಹೆ ನೀಡಿದ್ದಾರೆ. ಫಾಸ್ಟ್ ಟ್ಯಾಗ್ ನಿಂದ ಪ್ರಯಾಣದ ಅನುಭವವೇ ಬದಲಾಗಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸಮಯದ ಉಳಿತಾಯವಂತೂ ಆಗುತ್ತದೆ, ಜತೆಗೇ, ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ, ನಗದು ಹಣ ಪಾವತಿ ಮಾಡುವ ಚಿಂತೆಗಳೆಲ್ಲ ದೂರವಾಗಿವೆ ಎಂದಿದ್ದಾರೆ, ಅಪರ್ಣಾ ಅವರ ಮಾತು ಸತ್ಯವಾದದ್ದು. ಮೊದಲು ನಮ್ಮ ಟೋಲ್ ಪ್ಲಾಜಾಗಳಲ್ಲಿ ಒಂದು ವಾಹನ ಸುಮಾರು 7ರಿಂದ 8 ನಿಮಿಷ ನಿಲ್ಲಬೇಕಾಗುತ್ತಿತ್ತು. ಈಗ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಜಾರಿಯಾದಾಗಿನಿಂದ ಕಾಯಬೇಕಾದ ಸಮಯ ಈಗ ಎರಡೂವರೆ ನಿಮಿಷಗಳಿಗೆ ಇಳಿಕೆಯಾಗಿದೆ. ಕಾದು ನಿಲ್ಲಬೇಕಾದ ಸಮಯ ಕಡಿಮೆಯಾಗಿರುವುದರಿಂದ ವಾಹನಗಳ ಇಂಧನವೂ ಉಳಿತಾಯವಾಗುತ್ತಿದೆ. ಇದರಿಂದ ನಾಗರಿಕರ ಸರಿಸುಮಾರು 21 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಅಂದರೆ, ಹಣದಲ್ಲೂ ಉಳಿತಾಯ, ಸಮಯದಲ್ಲೂ ಉಳಿತಾಯ. ಎಲ್ಲರೂ ರಸ್ತೆ ಮಾರ್ಗಸೂಚಿಗಳನ್ನು ಪಾಲನೆ ಮಾಡುವಾಗ ತಮ್ಮ ಬಗ್ಗೆಯೂ ಗಮನ ನೀಡಿ ಹಾಗೂ ಇನ್ನೊಬ್ಬರ ಜೀವನವನ್ನೂ ರಕ್ಷಿಸಿ ಎನ್ನುವುದು ನನ್ನ ಆಗ್ರಹ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ “ಜಲಬಿಂದು ನಿಪಾತೇನ ಕ್ರಮಶಃ ಪೂರ್ಯತೇ ಘಟಃ – ಹನಿಹನಿಗೂಡಿದರೆ ಹಳ್ಳʼ ಎನ್ನುವ ಒಂದು ಮಾತಿದೆ. ನಮ್ಮ ಒಂದೊಂದು ಪ್ರಯತ್ನಗಳಿಂದಲೇ ನಮ್ಮ ಸಂಕಲ್ಪವು ಈಡೇರುತ್ತದೆ. ಇದರಿಂದಾಗಿ,2021ರ ಆರಂಭದಲ್ಲಿ ನಾವು ಯಾವ ಗುರಿ ನಿಗದಿಪಡಿಸಿಕೊಂಡಿದ್ದೇವೋ ನಾವೆಲ್ಲರೂ ಸೇರಿ ಅವುಗಳನ್ನು ಈಡೇರಿಸಿಕೊಳ್ಳಬೇಕಾಗಿದೆ. ಬನ್ನಿ, ನಾವೆಲ್ಲರೂ ಸೇರಿ ಈ ವರ್ಷವನ್ನು ಸಾರ್ಥಕವನ್ನಾಗಿಸುವ ನಿಟ್ಟಿನಲ್ಲಿ ನಮ್ಮ ನಮ್ಮ ಹೆಜ್ಜೆಗಳನ್ನಿರಿಸೋಣ. ತಾವು ತಮ್ಮ ಸಂದೇಶ, ತಮ್ಮ ವಿಚಾರಗಳನ್ನು ಅಗತ್ಯವಾಗಿ ಕಳುಹಿಸುತ್ತಿರಿ. ಮುಂದಿನ ತಿಂಗಳು ಮತ್ತೆ ಭೇಟಿಯಾಗೋಣ.
ಇತಿ– ಪುನರ್ಮಿಲನಕ್ಕಾಗಿ ವಿದಾಯ!
ನನ್ನ ಪ್ರಿಯ ದೇಶವಾಸಿಗಳೆ ನಮಸ್ಕಾರ. ಇಂದು ಡಿಸೆಂಬರ್ 27. ನಾಲ್ಕು ದಿನಗಳ ನಂತರ 2021 ಆರಂಭವಾಗಲಿದೆ. ಇಂದಿನ ಮನದ ಮಾತು ಒಂದು ರೀತಿಯಲ್ಲಿ 2020 ರ ಕೊನೆಯ ಮನದ ಮಾತಾಗಿದೆ. ಮುಂದಿನ ಮನದ ಮಾತು 2021 ರಲ್ಲಿ ಆರಂಭವಾಗುತ್ತದೆ. ಸ್ನೇಹಿತರೆ, ನನ್ನ ಮುಂದೆ ನೀವು ಬರೆದಂತಹ ಹಲವಾರು ಪತ್ರಗಳಿವೆ. ಮೈ ಗೌ ನಲ್ಲಿ ನೀವು ಕಳುಹಿಸುವಂತಹ ಸಲಹೆಗಳು ಕೂಡ ನನ್ನ ಮುಂದಿವೆ. ಅದೆಷ್ಟೋ ಜನರು ಫೋನ್ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಹಳಷ್ಟು ಸಂದೇಶಗಳಲ್ಲಿ ಕಳೆದ ವರ್ಷದ ಅನುಭವ, ಮತ್ತು 2021 ರ ಸಂಕಲ್ಪದ ಬಗ್ಗೆ ಬರೆಯಲಾಗಿದೆ. ಕೊಲ್ಹಾಪುರದಿಂದ ಅಂಜಲಿಯವರು ಹೀಗೆ ಬರೆದಿದ್ದಾರೆ, ನೂತನ ವರ್ಷಕ್ಕೆ ನಾವು ಬೇರೆಯವರಿಗೆ ಶುಭಾಷಯ ಕೋರುತ್ತೇವೆ, ಈ ಬಾರಿ ನಾವು ಹೊಸದೊಂದು ಕೆಲಸ ಮಾಡೋಣ. ನಾವು ನಮ್ಮ ದೇಶಕ್ಕೆ ಏಕೆ ಶುಭಕೋರಬಾರದು? ಅಂಜಲಿಯವರೇ, ನಿಮ್ಮದು ನಿಜಕ್ಕೂ ತುಂಬಾ ಒಳ್ಳೆಯ ವಿಚಾರ. ನಮ್ಮ ದೇಶ 2021 ರಲ್ಲಿ ಸಫಲತೆಯ ಹೊಸ ಶಿಖರವನ್ನು ಮುಟ್ಟಲಿ, ಭಾರತ ಸಶಕ್ತವಾಗಲಿ ಮತ್ತು ವಿಶ್ವದಲ್ಲಿ ಅದನ್ನು ಗುರುತಿಸುವಂತಾಗಲಿ. ಇದಕ್ಕಿಂತ ದೊಡ್ಡ ಹಾರೈಕೆ ಇನ್ನಾವುದಿರಲು ಸಾಧ್ಯ.
ಸ್ನೇಹಿತರೆ ನಮೊ ಆಪ್ ನಲ್ಲಿ ಮುಂಬೈಯ ಅಭಿಷೇಕ್ ಅವರು ಒಂದು ಸಂದೇಶವನ್ನು ಕಳುಹಿಸಿದ್ದಾರೆ. 2020 ನಮಗೆ ಏನೆಲ್ಲ ತೋರಿಸಿತು, ಏನೆಲ್ಲಾ ಕಲಿಸಿತು ಅದನ್ನು ನಾವೆಂದೂ ಊಹಿಸಿರಲೂ ಇಲ್ಲ. ಕೊರೊನಾಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಅವರು ಬರೆದಿದ್ದಾರೆ. ಈ ಪತ್ರಗಳಲ್ಲಿ, ಈ ಸಂದೇಶಗಳಲ್ಲಿ ನನಗೆ ಒಂದು ಸಾಮಾನ್ಯ ಸಂಗತಿ ಕಂಡುಬರುತ್ತಿದೆ. ವಿಶೇಷವೆನಿಸುತ್ತಿದೆ ಅದನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಹೆಚ್ಚಿನ ಪತ್ರಗಳಲ್ಲಿ ಜನರು ದೇಶದ ಸಾಮರ್ಥ್ಯ, ದೇಶವಾಸಿಗಳ ಸಾಮೂಹಿಕ ಶಕ್ತಿಯನ್ನು ಮನಃದುಂಬಿ ಹೊಗಳಿದ್ದಾರೆ. ಜನತಾ ಕರ್ಫ್ಯೂದಂತಹ ಹೊಚ್ಚಹೊಸ ಪ್ರಯೋಗ ಸಂಪೂರ್ಣ ವಿಶ್ವಕ್ಕೆ ಸ್ಪೂರ್ತಿಯಾಯಿತು. ಜನರು ಚಪ್ಪಾಳೆ, ತಟ್ಟೆ, ಜಾಗಟೆ ಬಾರಿಸಿ ನಮ್ಮ ಕೊರೊನಾ ಯೋಧರಿಗೆ ಗೌರವ ಸಲ್ಲಿಸಿದರು, ಒಗ್ಗಟ್ಟನ್ನು ತೋರ್ಪಡಿಸಿದರು ಅದನ್ನು ಕೂಡ ಬಹಳಷ್ಟು ಜನರು ನೆನಪಿಸಿಕೊಂಡಿದ್ದಾರೆ.
ಸ್ನೇಹಿತರೆ, ದೇಶದ ಸಾಮಾನ್ಯ ಜನರು ಕೂಡ ಈ ಬದಲಾವಣೆಯನ್ನು ಅನುಭವಿಸಿದ್ದಾರೆ. ನಾನು ದೇಶದಲ್ಲಿ ಒಂದು ಸದಾಶಯದ ಪ್ರವಾಹವನ್ನೂ ಕಂಡಿದ್ದೇನೆ. ಹಲವಾರು ಸವಾಲುಗಳು ಎದುರಾದವು. ಹಲವಾರು ಸಂಕಷ್ಟಗಳು ಎದುರಾದವು. ಅನೇಕ ತೊಂದರೆಗಳು ಎದುರಾದವು. ಕೊರೊನದಿಂದಾಗಿ ವಿಶ್ವದಲ್ಲಿ ಸರಬರಾಜು ಸರಪಳಿಯಲ್ಲಿ ಅನೇಕ ತೊಂದರೆಗಳು ಎದುರಾದವು. ಆದರೆ ನಾವು ಪ್ರತಿಯೊಂದು ಸಂಕಷ್ಟದಿಂದಲೂ ಹೊಸತೊಂದು ಪಾಠವನ್ನು ಕಲಿತೆವು. ದೇಶದಲ್ಲಿ ಹೊಸ ಸಾಮರ್ಥ್ಯವೂ ಸೃಷ್ಟಿಯಾಯಿತು. ಶಬ್ದಗಳಲ್ಲಿ ಹೇಳಬೇಕೆಂದರೆ ಈ ಸಾಮರ್ಥ್ಯದ ಹೆಸರು ಸ್ವಾವಲಂಬನೆ.
ಸ್ನೇಹಿತರೆ, ದಿಲ್ಲಿಯ ಅಭಿನವ್ ಬ್ಯಾನರ್ಜಿಯವರು ನನಗೆ ಬರೆದು ಕಳುಹಿಸಿದ ತಮ್ಮ ಅನುಭವ ಬಹಳ ರೋಚಕವಾಗಿದೆ. ಅಭಿನವ್ ಅವರಿಗೆ ತಮ್ಮ ಸಂಬಂಧಿಕರ ಮಕ್ಕಳಿಗೆ ಉಡುಗೊರೆ ನೀಡಲು ಕೆಲ ಆಟಿಕೆಗಳನ್ನು ಖರೀದಿಸಬೇಕಿತ್ತಂತೆ. ಹಾಗಾಗಿ ಅವರು ದೆಹಲಿಯ ಝಂಡೆವಾಲಾ ಮಾರುಕಟ್ಟೆಗೆ ಹೋಗಿದ್ದರು. ದೆಹಲಿಯಲ್ಲಿ ಈ ಮಾರುಕಟ್ಟೆ ಸೈಕಲ್ ಗಳು ಮತ್ತು ಆಟಿಕೆಗಳಿಗೆ ಬಹಳ ಪ್ರಸಿದ್ಧ ಎಂಬುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರಬಹುದು. ಹಿಂದೆ ಅಲ್ಲಿ ದುಬಾರಿ ಆಟಿಕೆಗಳು ಎಂದರೆ ವಿದೇಶಿ ಆಟಿಕೆಗಳು ಎಂಬುದಾಗಿತ್ತು. ಅಗ್ಗದ ಆಟಿಕೆಗಳು ಕೂಡಾ ಹೊರದೇಶದಿಂದಲೇ ಬರುತ್ತಿದ್ದವು. ಆದರೆ ಇಂದು ಅಲ್ಲಿಯ ಅಂಗಡಿಕಾರರು ಗ್ರಾಹಕರಿಗೆ ಒಳ್ಳೆ ಗುಣಮಟ್ಟದ ಆಟಿಕೆ ಏಕೆಂದರೆ ಇದು ಭಾರತದಲ್ಲಿ ಸಿದ್ಧವಾದದ್ದು ಮೇಡ್ ಇನ್ ಇಂಡಿಯಾ ಎಂದು ಕೂಗಿ ಕೂಗಿ ಮಾರಾಟ ಮಾಡುತ್ತಿದ್ದಾರೆ ಎಂದು ಅಭಿನವ್ ಅವರು ಪತ್ರದಲ್ಲಿ ಬರೆದಿದ್ದಾರೆ. ಗ್ರಾಹಕರು ಕೂಡಾ ಭಾರತದಲ್ಲಿ ತಯಾರಿಸಿದ ಆಟಿಕೆಗಳ ಬೇಡಿಕೆ ಇಡುತ್ತಿದ್ದಾರೆ. ಈ ಒಂದು ಆಲೋಚನೆಯಲ್ಲಿ ಎಂಥ ದೊಡ್ಡ ಪರಿವರ್ತನೆ ಆಗಿದೆ ಎಂಬುದ್ಕೆ ಇದು ಜ್ವಲಂತ ನಿದರ್ಶನವಾಗಿದೆ. ದೇಶದ ಜನತೆಯ ವಿಚಾರಗಳಲ್ಲಿ ಎಷ್ಟು ದೊಡ್ಡ ಬದಲವಣೆ ಆಗುತ್ತಿದೆ. ಅದು ಕೂಡಾ ಒಂದೇ ವರ್ಷದೊಳಗೆ. ಈ ಪರಿವರ್ತನೆಯನ್ನು ಅಳೆಯುವುದು ಅಷ್ಟು ಸುಲಭವಲ್ಲ. ಅರ್ಥಶಾಸ್ತ್ರಜ್ಞರೂ ಇದನ್ನು ತಮ್ಮ ಮಾಪಕಗಳಲ್ಲಿ ಅಳೆಯಲು ಸಾಧ್ಯವಿಲ್ಲ.
ಸ್ನೇಹಿತರೇ, ವಿಶಾಖಪಟ್ಟಣಂ ನಿಂದ ವೆಂಕಟ್ ಮುರಳೀಪ್ರಸಾದ್ ಅವರು ನನಗೆ ಬರೆದಿರುವದರಲ್ಲೂ ವಿಭಿನ್ನವಾದ idea ಇದೆ. ನಿಮಗಾಗಿ twenty, twenty one ಗಾಗಿ, ಎರಡು ಸಾವಿರದ ಇಪ್ಪತ್ತೊಂದಕ್ಕಾಗಿ ನಾನು ABC ಲಗತ್ತಿಸುತ್ತಿದ್ದೇನೆ ಎಂದು ವೆಂಕಟ್ ಅವರು ಬರೆದಿದ್ದಾರೆ. ಇಷ್ಟಕ್ಕೂ ABC ಇಂದ ಜೊತೆಗೆ ಅವರಿಗಿರುವ ನಂಟೇನೆಂದು ನನಗೆ ಅರ್ಥವಾಗಲಿಲ್ಲ. ಆದರೆ, ವೆಂಕಟ್ ಅವರು ತಮ್ಮ ಪತ್ರದ ಜೊತೆಗೆ ಒಂದು ಚಾರ್ಟನ್ನೂ ಲಗತ್ತಿಸಿದಿರುವುದನ್ನು ನಾನು ನೋಡಿದೆ. ನಾನು ಆ ಚಾರ್ಟನ್ನು ನೋಡಿದೆ, ಆಗ ನನಗೆ ತಿಳಿಯಿತು ಅವರು ಹೇಳಿದ ABC ಅರ್ಥವೇನೆಂದು – ಸ್ವಾವಲಂಬಿ ಭಾರತದ ಚಾರ್ಟ್ – ABC (ಆತ್ಮ ನಿರ್ಭರ್ ಭಾರತ್ ಚಾರ್ಟ್). ಇದು ಬಹಳ ಆಸಕ್ತಿಕರವಾಗಿದೆ. ವೆಂಕಟ್ ಅವರು, ತಾವು ದಿನ ನಿತ್ಯ ಬಳಸುವಂಥ ಎಲ್ಲ ವಸ್ತುಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅದರಲ್ಲಿ, electronics, stationery, ವೈಯಕ್ತಿಕ ಬಳಕೆಯ ಸಾಮಗ್ರಿಗಳಲ್ಲದೇ, ಇನ್ನೂ ಹಲವಾರು ವಸ್ತುಗಳು ಆ ಪಟ್ಟಿಯಲ್ಲಿವೆ. ನಾವು ತಿಳಿದೋ–ತಿಳಿಯದೇನೋ, ಕೆಲವು ವಿದೇಶಿ ವಸ್ತುಗಳನ್ನು ಬಳಸುತ್ತಿದ್ದೇವೆ ಆದರೆ, ಅವುಗಳ ಪರ್ಯಾಯ ವಸ್ತುಗಳು ನಮ್ಮ ಭಾರತದಲ್ಲಿ ಸುಲಭವಾಗಿ ಲಭ್ಯವಿವೆ ಎಂದು ವೆಂಕಟ್ ಹೇಳಿದ್ದಾರೆ. ನಮ್ಮ ದೇಶವಾಸಿಗಳ ಪರಿಶ್ರಮ ಮತ್ತು ಪ್ರತಿಫಲ ಇರುವಂಥ ಉತ್ಪನ್ನಗಳನ್ನೇ ಬಳಸುವುದಾಗಿ ಅವರು ಪ್ರಮಾಣ ಮಾಡಿದ್ದಾರೆ.
ಗೆಳೆಯರೇ, ಆದರೆ ಅವರು ಇದರ ಜೊತೆಗೆ ಹೇಳಿದಂತಹ ಮತ್ತೊಂದು ವಿಷಯ ನನಗೆ ಬಹಳ ರೋಚಕವೆನಿಸಿತು. ನಾವು ಸ್ವಾವಲಂಬಿ ಭಾರತವನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ, ಆದರೆ, ನಮ್ಮ ಉತ್ಪಾದಕರು, ಅವರು ತಮ್ಮ ಉತ್ಪನ್ನಗಳ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಸಂದೇಶವೂ ಇರಬೇಕು ಎಂಬ ಮಾತನ್ನೂ ಅವರು ಹೇಳಿದ್ದಾರೆ. ಅವರು ಹೇಳಿದ್ದೂ ಸರಿಯೇ. Zero effect, zero defect ಯೋಚನೆಯೊಂದಿಗೆ ಕೆಲಸ ಮಾಡುವ ಸಮಯ ಇದಾಗಿದೆ. ನಾನು ದೇಶದ ಉದ್ಯಮಿಗಳು ಮತ್ತು ಸರಕು ಉತ್ಪಾದಕರಲ್ಲಿ ಆಗ್ರಹಿಸುವುದೇನೆಂದರೆ ದೇಶದ ಜನತೆ ದೃಢ ಸಂಕಲ್ಪಗೈದಿದ್ದಾರೆ, ದೃಢವಾದ ಹೆಜ್ಜೆ ಮುಂದಿಟ್ಟಿದ್ದಾರೆ. Vocal for local ಎಂಬುದು ಈಗ ಪ್ರತಿ ಮನೆಯಲ್ಲಿಯೂ ಪ್ರತಿಧ್ವನಿಸುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಉತ್ಪನ್ನಗಳೂ ಅಂತಾರಾಷ್ಟ್ರೀಯ ಮಟ್ಟದ್ದಾಗಿವೆ ಎಂಬುದನ್ನ ನಾವು ಖಚಿತಪಡಿಸಿಕೊಳ್ಳಬೇಕು. ಜಾಗತಿಕವಾಗಿ ಅತ್ಯುತ್ತಮವಾಗಿರುವುದನ್ನ, ನಾವು ಭಾರತದಲ್ಲಿ ತಯಾರಿಸಿ ತೋರಿಸೋಣ. ಇದಕ್ಕಾಗಿ ನಮ್ಮ ಉದ್ಯಮಿ ಮಿತ್ರರೆಲ್ಲಾ ಮುಂದೆ ಬರಬೇಕು. Start-up ಗಳೂ ಮುಂದೆ ಬರಬೇಕು ಎಂದು ನಾನು ದೇಶದ ಸರಕು ಉತ್ಪಾದಕರನ್ನು ಆಗ್ರಹಿಸುತ್ತೇನೆ. ನಾನು ಮತ್ತೊಮ್ಮೆ ವೆಂಕಟ್ ಅವರ ಉತ್ತಮ ಪ್ರಯತ್ನಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ, ನಾವು ಈ ಭಾವನೆಯನ್ನು ನಿರಂತರವಾಗಿರಿಸಬೇಕು, ಜೋಪಾನವಾಗಿರಿಸಬೇಕು ಮತ್ತು ವೃದ್ಧಿಸುತ್ತಲೇ ಸಾಗಬೇಕು. ನಾನು ಹಿಂದೆಯೂ ಹೇಳಿದ್ದೆ. ಇಂದು ಮತ್ತೊಮ್ಮೆ ದೇಶದ ಜನತೆಯನ್ನು ಆಗ್ರಹಿಸುತ್ತಿದ್ದೇನೆ. ನೀವು ಒಂದು ಪಟ್ಟಿ ಮಾಡಿ. ನಾವು ದಿನಪೂರ್ತಿ ಬಳಸುವಂತಹ ವಸ್ತುಗಳ ಬಗ್ಗೆ ಆಲೋಚಿಸಿ ಮತ್ತು ನಮಗೆ ತಿಳಿಯದೆಯೇ ಯಾವ ವಿದೇಶದಲ್ಲಿ ಸಿದ್ಧವಾದ ವಸ್ತುಗಳು ನಮ್ಮ ಜೀವನದಲ್ಲಿ ಪ್ರವೇಶಿಸಿವೆ ಎಂಬುದನ್ನು ಗಮನಿಸಿ. ಒಂದು ರೀತಿಯಲ್ಲಿ ನಮ್ಮನ್ನು ಅವಲಂಬಿತರನ್ನಾಗಿ ಮಾಡಿವೆ. ಭಾರತದಲ್ಲಿ ಸಿದ್ಧಗೊಳ್ಳುವ ವಸ್ತುಗಳನ್ನು ಆಯ್ಕೆಮಾಡಿಕೊಳ್ಳಿ, ಮತ್ತು ಭಾರತದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ದುಡಿಯುವ ಜನರು ತಯಾರಿಸಿದ ಉತ್ಪನ್ನಗಳನ್ನು ನಾವು ಬಳಸಬೇಕೆಂದು ನಿರ್ಧರಿಸಿಕೊಳ್ಳಿ. ನೀವು ಪ್ರತಿವರ್ಷ ಹೊಸ ವರ್ಷದ ಸಂಕಲ್ಪ ಕೈಗೊಳ್ಳುತ್ತೀರಲ್ಲವೆ, ಈ ಬಾರಿ ನಿಮ್ಮ ದೇಶಕ್ಕೊಸ್ಕರವೂ ಒಂದು ಸಂಕಲ್ಪ ಕೈಗೊಳ್ಳಿ.
ನನ್ನ ಪ್ರಿಯ ದೇಶಬಾಂಧವರೆ, ಭಯೋತ್ಪಾದಕರಿಂದ, ಅತ್ಯಾಚಾರಿಗಳಿಂದ, ದೇಶದ ಸಹಸ್ರಾರು ವರ್ಷಗಳ ಸಂಸ್ಕೃತಿ, ಸಭ್ಯತೆ, ನಮ್ಮ ರೀತಿ ನೀತಿಗಳನ್ನು ಉಳಿಸಿಕೊಳ್ಳಲು ಎಷ್ಟು ದೊಡ್ಡ ಬಲಿದಾನಗೈಯ್ಯಲಾಗಿದೆ ಎಂಬುದನ್ನು ನೆನೆಯುವ ದಿನವೂ ಇದಾಗಿದೆ. ಇಂದಿನ ದಿನವೇ ಗುರು ಗೋವಿಂದರ ಪುತ್ರರು, ಸಾಹಿಬ್ ಜಾದೆ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಅವರನ್ನು ಗೋಡೆಯಲ್ಲಿ ಜೀವಂತ ಸಮಾಧಿ ಮಾಡಲಾಗಿತ್ತು. ಸಾಹಿಬ್ ಜಾದೆ ತಮ್ಮ ನಂಬಿಕೆಯನ್ನು ಬಿಟ್ಟುಬಿಡಲಿ, ಮಹಾನ್ ಗುರು ಪರಂಪರೆಯ ಕಲಿಕೆಯನ್ನು ಬಿಟ್ಟುಬಿಡಲಿ ಎಂದು ದುಷ್ಕರ್ಮಿಗಳು ಬಯಸಿದ್ದರು. ಆದರೆ ನಮ್ಮ ಸಾಹಿಬ್ ಜಾದೆಯವರು ಇಂಥ ಪುಟ್ಟ ವಯಸ್ಸಿನಲ್ಲೂ ಅದ್ಭುತವಾದ ಸಾಹಸವನ್ನು ತೋರಿದರು. ಇಚ್ಛಾಶಕ್ತಿಯನ್ನು ತೋರಿದರು. ಗೋಡೆಯಲ್ಲಿ ಸಮಾಧಿ ಮಾಡುತ್ತಿರುವಾಗ, ಕಲ್ಲುಗಳನ್ನು ಜೋಡಿಸಲಾಗುತ್ತಿತ್ತು, ಗೋಡೆ ಎತ್ತರಕ್ಕೆ ಏರುತ್ತಿತ್ತು, ಆದರೂ ಅವರು ಧೃತಿಗೆಡಲಿಲ್ಲ. ಇಂದಿನ ದಿನವೇ ಗುರುಗೋವಿಂದರ ತಾಯಿ – ಮಾತಾ ಗುಜ್ಜರಿಯವರೂ ದೈವಾಧೀನರಾದರು. ಸುಮಾರು ಒಂದು ವಾರದ ಹಿಂದೆ, ಶ್ರೀ ಗುರು ತೇಗ್ ಬಹಾದೂರ್ ಅವರ ಬಲಿದಾನದ ದಿನವಿತ್ತು. ಇಲ್ಲಿ ದೆಹಲಿಯಲ್ಲಿ ರಕಾಬ್ ಗಂಜ್ ಗುರುದ್ವಾರಕ್ಕೆ ತೆರಳಿ ಗುರು ತೇಗ್ ಬಹಾದೂರ್ ಅವರಿಗೆ ಶೃದ್ಧಾ ಸಮರ್ಪಪಣೆ ಸಲ್ಲಿಸುವ ಮತ್ತು ನಮಿಸುವ ಅವಕಾಶ ದೊರೆಯಿತು. ಇದೇ ತಿಂಗಳು ಶ್ರೀ ಗುರು ಗೋವಿಂದ್ ಸಿಂಗ್ ಜಿ ಅವರಿಂದ ಪ್ರೇರಿತರಾದ ಅನೇಕರು ನೆಲದ ಮೇಲೆ ಮಲಗುತ್ತಾರೆ. ಜನರು ಶ್ರೀ ಗುರು ಗೋವಿಂದ್ ಸಿಂಗ್ ಜಿ ಅವರ ಕುಟುಂಬದವರ ಈ ಬಲಿದಾನವನ್ನು ಬಹಳ ಭಾವನಾತ್ಮಕವಾಗಿ ನೆನೆಯುತ್ತಾರೆ. ಈ ತ್ಯಾಗ ಇಡೀ ಮಾನವತೆಗೆ, ದೇಶಕ್ಕೆ ಹೊಸ ಪಾಠವನ್ನು ಕಲಿಸಿದೆ. ಈ ಬಲಿದಾನ ನಮ್ಮ ನಾಗರಿಕತೆಯನ್ನು ಸುರಕ್ಷಿತವಾಗಿಡುವ ಮಹಾನ್ ಕೆಲಸವನ್ನು ಮಾಡಿದೆ. ಈ ತ್ಯಾಗ–ಬಲಿದಾನಕ್ಕೆ ಹುತಾತ್ಮತೆಗೆ ನಾವೆಲ್ಲ ಋಣಿಯಾಗಿದ್ದೇವೆ. ನಾನು ಮತ್ತೊಮ್ಮೆ, ಶ್ರೀ ಗುರು ತೇಗ್ ಬಹಾದೂರ್ ಜಿ, ಮಾತೆ ಗುಜ್ಜರಿಜಿ, ಗುರು ಗೋವಿಂದ್ ಸಿಂಗ್ ಜಿ, ಮತ್ತು ನಾಲ್ವರೂ ಮಕ್ಕಳಿಗೆ ನನ್ನ ನಮನ ಸಲ್ಲಿಸುತ್ತೇನೆ. ಹೀಗೆಯೇ, ಬಹಳಷ್ಟು ಜನ ಹುತಾತ್ಮರು ಇಂದಿನ ಭಾರತದ ಸ್ವರೂಪವನ್ನು ಸಂರಕ್ಷಿಸಿದ್ದಾರೆ ಮತ್ತು ಉಳಿಸಿಕೊಂಡು ಬಂದಿದ್ದಾರೆ.
ನನ್ನ ಪ್ರಿಯ ದೇಶ ಬಾಂಧವರೇ, ಈಗ ನಾನು ನಿಮಗೆ ಸಂತೋಷ ತರುವ ಮತ್ತು ಹೆಮ್ಮೆಯಾಗುವಂಥ ಒಂದು ವಿಷಯವನ್ನು ಹೇಳಲಿದ್ದೇನೆ. ಭಾರತದಲ್ಲಿ, 2014 ರಿಂದ 2018 ರ ಅವಧಿಯ ನಡುವೆ ಚಿರತೆಗಳ ಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಏರಿಕೆಯಾಗಿದೆ. 2014 ರಲ್ಲಿ ನಮ್ಮ ದೇಶದಲ್ಲಿ ಚಿರತೆಗಳ ಸಂಖ್ಯೆ ಸುಮಾರು 7,900 ಆಗಿತ್ತು. ಆದರೆ, 2019 ರಲ್ಲಿ ಅವುಗಳ ಸಂಖ್ಯೆ 12,852 ಕ್ಕೆ ತಲುಪಿದೆ. “ಯಾವ ಜನರು ಚಿರತೆಗಳು ಪಕೃತಿಯಲ್ಲಿ ಆನಂದವಾಗಿ ವಿಹರಿಸುವುದನ್ನು ನೋಡಿಲ್ಲವೋ, ಅವರು ಅವುಗಳ ಸೌಂದರ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ” ಎಂದು ಜಿಮ್ ಕಾರ್ಬೆಟ್ ಹೇಳಿದಂತಹ ಆ ಚಿರತೆಗಳು ಇವೇ ಆಗಿವೆ. ಅವುಗಳಿಗಿರುವ ಬಣ್ಣಗಳ ಸೌಂದರ್ಯ ಮತ್ತು ಅವುಗಳ ಮೋಹಕ ನಡಿಗೆಯನ್ನು, ಊಹಿಸಲೂ ಸಾಧ್ಯವಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯ ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಚಿರತೆಗಳು ಹೆಚ್ಚಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ಅಗ್ರ ಸ್ಥಾನಗಳಲ್ಲಿವೆ. ಇದೊಂದು ಮಹತ್ತರವಾದ ಸಾಧನೆಯಾಗಿದೆ. ಇಡೀ ವಿಶ್ವದಲ್ಲೇ ಚಿರತೆಗಳು ಅಪಾಯವನ್ನು ಎದುರಿಸುತ್ತಲೇ ಬಂದಿವೆ. ಅವುಗಳ ಆವಾಸಸ್ಥಾನಗಳು ಕುಗ್ಗುತ್ತಿವೆ, ಜಗತ್ತಿನೆಲ್ಲೆಡೆ ಅವುಗಳ ಸಂತತಿ ವಿನಾಶದ ಅಂಚನ್ನು ತಲುಪುತ್ತಿದೆ. ಇಂಥ ಪರಿಸ್ಥಿತಿಯಲ್ಲಿ, ಭಾರತ, ಚಿರತೆಗಳ ಸಂಖ್ಯೆಯ ನಿರಂತರ ಹೆಚ್ಚಳದಿಂದ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ, ಹುಲಿಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ ಜೊತೆಗೆ ಭಾರತದ ಅರಣ್ಯ ಪ್ರದೇಶದ ವಿಸ್ತೀರ್ಣವೂ ಹೆಚ್ಚಿದೆ ಎಂಬ ವಿಷಯಗಳು ಬಹುಶಃ ನಿಮಗೆ ಗೊತ್ತಿರಬಹುದು. ಇದು ಕೇವಲ ಸರ್ಕಾರದ ಪ್ರಯತ್ನಗಳಿಂದಷ್ಟೇ ಅಲ್ಲ ಬದಲಿಗೆ, ಹಲವಾರು ನಾಗರಿಕ ಸಮಾಜಗಳು, ಹಲವಾರು ಸಂಸ್ಥೆಗಳು, ನಮ್ಮ ಗಿಡ–ಮರಗಳು ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಗಾಗಿ ಕಾರ್ಯನಿರತವಾಗಿರುವುದರಿಂದ ಸಾಧ್ಯವಾಗಿದೆ. ಅವರೆಲ್ಲರೂ ಅಭಿನಂದನಾರ್ಹರು.
ಸ್ನೇಹಿತರೇ, ನಾನು ತಮಿಳುನಾಡಿನ ಕೊಯಂಬತ್ತೂರಿನ, ಒಂದು ಹೃದಯ ಸ್ಪರ್ಶಿ ಪ್ರಯತ್ನದ ಬಗ್ಗೆ ಓದಿದ್ದೆ. ನೀವೂ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ನೋಡಿರಬಹುದು. ನಾವೆಲ್ಲರೂ ಮನುಷ್ಯರಿಗಾಗಿ wheelchair ಬಳಸುವುದನ್ನು ನೋಡಿದ್ದೇವೆ, ಆದರೆ, ಕೊಯಂಬತ್ತೂರಿನ ಗಾಯತ್ರಿ ಎಂಬ ಹುಡುಗಿ, ಅವಳ ತಂದೆಯ ಜೊತೆಗೆ, ಒಂದು ಗಾಯಗೊಂಡ ನಾಯಿಗೂ wheelchair ತಯಾರಿಸಿದ್ದಾಳೆ. ಈ ಸಂವೇದನೆಶೀಲತೆ, ಸ್ಫೂರ್ತಿ ನೀಡುವಂಥದ್ದಾಗಿದೆ ಹಾಗೂ ಇದು ಒಬ್ಬ ವ್ಯಕ್ತಿ ಪ್ರತಿ ಜೀವಿಯೆಡೆಗೆ ಕರುಣೆ ಮತ್ತು ಸಹಾನುಭೂತಿ ತೋರಿದಾಗ ಮಾತ್ರ ಸಾಧ್ಯವಾಗುತ್ತದೆ. ದೆಹಲಿಯ ಎನ್ ಸಿ ಆರ್ ಮತ್ತು ದೇಶದ ಇತರ ನಗರಗಳಲ್ಲಿ ಕೊರೆಯುತ್ತಿರುವ ಚಳಿಯ ನಡುವೆಯೂ, ನಿರಾಶ್ರಿತ ಪ್ರಾಣಿಗಳ ಆರೈಕೆಗಾಗಿ ಅನೇಕ ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು, ಆ ಪ್ರಣಿಗಳ ಊಟ–ನೀರಿನ ವ್ಯವಸ್ಥೆ ಹಾಗೂ ಅವುಗಳಿಗೆ ಸ್ವೆಟರ್ ಮತ್ತು ಹಾಸಿಗೆಯ ವ್ಯವಸ್ಥೆಯನ್ನೂ ಕಲ್ಪಿಸಲು ಮುಂದಾಗಿದ್ದಾರೆ. ಇನ್ನು ಕೆಲವರು, ಇಂತಹ ನೂರಾರು ಪ್ರಾಣಿಗಳಿಗೆ ದಿನ ನಿತ್ಯದ ಊಟದ ವ್ಯವಸ್ಥೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂತಹ ಪ್ರಯತ್ನಗಳನ್ನು ಮೆಚ್ಚಲೇ ಬೇಕು. ಉತ್ತರ ಪ್ರದೇಶದ ಕೌಶಂಬಿಯಲ್ಲೂ ಇಂತಹ ಉದಾತ್ತ ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿಯ ಕಾರಾಗೃಹದಲ್ಲಿರುವ ಕೈದಿಗಳು, ಹಸುಗಳನ್ನು ಕೊರೆಯುವ ಚಳಿಯಿಂದ ರಕ್ಷಿಸಲು, ಹಳೆಯ ಮತ್ತು ಹರಿದ ಕಂಬಳಿಗಳಿಂದ ಹೊದಿಕೆ ತಯಾರಿಸುತ್ತಿದ್ದಾರೆ. ಈ ಹೊದಿಕೆಗಳನ್ನು ಕೌಶಂಬಿ ಸೇರಿದಂತೆ ಇತರ ಜಿಲ್ಲೆಗಳ ಕಾರಾಗೃಹಗಳಿಂದಲೂ ಸಂಗ್ರಹಿಸಲಾಗುತ್ತಿದೆ ಮತ್ತು ಅವುಗಳನ್ನು ಹೊಲಿದು ಗೋಶಾಲೆಗೆ ಕಳುಹಿಸಲಾಗುತ್ತದೆ. ಕೌಶಂಬಿ ಕಾರಾಗೃಹದ ಕೈದಿಗಳು ಪ್ರತಿ ವಾರ ಅವುಗಳಿಗಾಗಿ ಹೊದಿಕೆ ತಯಾರಿಸುತ್ತಿದ್ದಾರೆ. ಬನ್ನಿ ಇತರರ ಬಗ್ಗೆ ಕಾಳಜಿವಹಿಸಲು, ಇಂತಹ ಸೇವಾ ಮನೋಭಾವ ತುಂಬಿದ ಪ್ರಯತ್ನಗಳನ್ನು ಪ್ರೋತ್ಸಾಹಿಸೋಣ. ಇದು ನಿಜವಾಗಿಯೂ, ಸಮಾಜದ ಸಂವೇದನೆಗಳನ್ನು ಬಲಿಷ್ಠಗೊಳಿಸುವ ಒಂದು ಶ್ರೇಷ್ಠ ಕೆಲಸವಾಗಿದೆ.
ನನ್ನ ಪ್ರಿಯ ದೇಶಬಾಂಧವರೆ, ಈಗ ನನ್ನ ಮುಂದೆ ಇರುವ ಪತ್ರದಲ್ಲಿ 2 ದೊಡ್ಡ ಫೊಟೋಗಳಿವೆ. ಇವು ದೇವಾಲಯವೊಂದರ before ಮತ್ತು after ಫೊಟೋಗಳು. ಈ ಫೊಟೋಗಳೊಂದಿಗಿರುವ ಪತ್ರದಲ್ಲಿ ತಮ್ಮನ್ನು ತಾವು ಯುವಾ ಬ್ರಿಗೇಡ್ ಎಂದು ಕರೆದುಕೊಳ್ಳುವ ಯುವಕರ ಒಂದು ತಂಡದ ಬಗ್ಗೆ ಬರೆಯಲಾಗಿದೆ. ಈ ಯುವಾ ಬ್ರಿಗೇಡ್ ಕರ್ನಾಟಕದಲ್ಲಿರುವ ಶ್ರೀರಂಗಪಟ್ಟಣದ ಹತ್ತಿರ ವೀರಭದ್ರ ಸ್ವಾಮಿ ಎಂಬ ಹೆಸರಿನ ಪ್ರಾಚೀನ ಶಿವಾಲಯದ ಪುನರುಜ್ಜೀವನ ಕೈಗೊಂಡಿದ್ದಾರೆ. ದಾರಿಹೋಕರು ಕೂಡಾ ಇಲ್ಲಿ ಒಂದು ದೇವಾಲಯವಿದೆ ಎಂದು ಹೇಳಲಾಗದಷ್ಟು ದೇವಾಲಯದಲ್ಲಿ ಮತ್ತು ಸುತ್ತಲೂ ಗಿಡಗಂಟಿಗಳು ಹಾಗೂ ಹುಲ್ಲು ಬೆಳೆದಿತ್ತು. ಒಂದು ದಿನ ಕೆಲ ಪಯಣಿಗರು ಈ ಪುರಾತನ ದೇವಾಲಯದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಯುವಾ ಬ್ರಿಗೇಡ್ ಗೆ ಸುಮ್ಮನಿರಲಾಗಲಿಲ್ಲ ಮತ್ತು ಈ ತಂಡ ಒಗ್ಗೂಡಿ ಈ ದೇವಾಲಯದ ಜೀರ್ಣೋದ್ಧಾರ ಮಾಡುವ ನಿರ್ಣಯ ಕೈಗೊಂಡರು. ಅವರು ದೇವಾಲಯದ ಸುತ್ತಮುತ್ತ ಬೆಳೆದಂತಹ ಮುಳ್ಳಿನ ಗಿಡಗಳು, ಹುಲ್ಲು ಮತ್ತು ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು. ಎಲ್ಲಿ ರಿಪೇರಿಯ ಮತ್ತು ಕಟ್ಟುವ ಅವಶ್ಯಕತೆಯಿದೆಯೋ ಅದನ್ನು ಮಾಡಿದರು. ಅವರ ಒಳ್ಳೆಯ ಕೆಲಸಗಳನ್ನು ನೋಡಿ ಸ್ಥಳೀಯರು ಸಹಾಯ ಹಸ್ತ ಚಾಚಿದರು. ಒಬ್ಬರು ಸಿಮೆಂಟ್ ಕೊಟ್ಟರೆ, ಇನ್ನೊಬ್ಬರು ಬಣ್ಣವನ್ನು ನೀಡಿದರು. ಇಂಥ ಹಲವಾರು ವಸ್ತುಗಳನ್ನು ನೀಡುವ ಮೂಲಕ ಜನರು ತಮ್ಮ ತಮ್ಮ ಕೊಡುಗೆ ನೀಡಿದರು. ಈ ಎಲ್ಲ ಯುವಕರೂ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಥದ್ದರಲ್ಲಿ ವಾರಾಂತ್ಯದಲ್ಲಿ ಇವರೆಲ್ಲರೂ ಸಮಯವನ್ನು ಮುಡಿಪಾಗಿಟ್ಟು ದೇವಾಲಯಕ್ಕಾಗಿ ಕೆಲಸ ಮಾಡಿದರು. ಯುವಕರು ದೇವಾಲಯಕ್ಕೆ ಬಾಗಿಲು ವ್ಯವಸ್ಥೆ ಮಾಡುವ ಮೂಲಕ ವಿದ್ಯುತ್ ವ್ಯವಸ್ಥೆಯನ್ನೂ ಕಲ್ಪಿಸಿದರು. ಹೀಗೆ ಅವರು ದೇವಾಲಯದ ಪುರಾತನ ವೈಭವವನ್ನು ಪುನರ್ ಸ್ಥಾಪಿಸುವ ಕೆಲಸ ಮಾಡಿದರು. ಉತ್ಸಾಹ ಮತ್ತು ಧೃಡನಿಶ್ಚಯ ಎಂಬ ಎರಡು ಗುಣಗಳಿಂದ ಜನರು ಯಾವುದೇ ಗುರಿಯನ್ನು ತಲುಪಬಹುದಾಗಿದೆ. ನಾನು ಭಾರತದ ಯುವಜನತೆಯನ್ನು ನೋಡಿದಾಗ ಬಹಳ ಆನಂದವನ್ನು ಅನುಭವಿಸುತ್ತೇನೆ ಮತ್ತು ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಆನಂದ ಮತ್ತು ಆತ್ಮವಿಶ್ವಾಸ ಏಕೆಂದರೆ ನನ್ನ ದೇಶದ ಯುವಜನತೆಯಲ್ಲಿ ಮಾಡಬಲ್ಲೆವು ಎಂಬ ಮನಸ್ಥಿತಿಯಿದೆ ಮತ್ತು ಮಾಡುತ್ತೇವೆ ಎಂಬ ಚೈತನ್ಯವಿದೆ. ಅವರಿಗೆ ಯಾವುದೇ ಸವಾಲು ದೊಡ್ಡದಲ್ಲ. ಯಾವುದೂ ಅವರಿಗೆ ಅಸಾಧ್ಯವಲ್ಲ. ನಾನು ತಮಿಳುನಾಡಿನ ಒಬ್ಬ ಶಿಕ್ಷಕಿಯ ಬಗ್ಗೆ ಓದಿದೆ. ಅವರ ಹೆಸರು ಹೇಮಲತಾ ಎನ್ ಕೆ. ಅವರು ವಿಡುಪುರಂ ನ ಒಂದು ಶಾಲೆಯಲ್ಲಿ ವಿಶ್ವದ ಅತ್ಯಂತ ಪುರಾತನ ಭಾಷೆಯಾದ ತಮಿಳ್ ಕಲಿಸುತ್ತಾರೆ. ಕೋವಿಡ್ – 19 ಮಹಾಮಾರಿ ಅವರ ಕಲಿಸುವ ಕೆಲಸಕ್ಕೆ ಎಂದಿಗೂ ಅಡ್ಡಿಯಾಗಲಿಲ್ಲ. ಹಾಂ, ಅವರೆದುರು ಸವಾಲುಗಳು ಇದ್ದವು. ಆದರೆ, ಅವರು ಒಂದು ಆವಿಷ್ಕಾರಕ ಮಾರ್ಗವನ್ನು ಕಂಡುಕೊಂಡರು. ಅವರು ಪಠ್ಯದ ಎಲ್ಲ 53 ಚಾಪ್ಟರ್ ಗಳನ್ನು ಧ್ವನಿಮುದ್ರಿಸಿದರು, ಅನಿಮೆಟೆಡ್ ವಿಡಿಯೋ ತಯಾರಿಸಿದರು ಮತ್ತು ಅದನ್ನು ಒಂದು ಪೆನ್ ಡ್ರೈವ್ ನಲ್ಲಿ ತೆಗೆದುಕೊಂಡು ತಮ್ಮ ವಿದ್ಯಾರ್ಥಿಗಳಿಗೆ ಹಂಚಿದರು. ಇದರಿಂದ ಅವರ ವಿದ್ಯಾರ್ಥಿಗಳಿಗೆ ಬಹಳ ಸಹಾಯವಾಯಿತು. ಅವರು ಪಠ್ಯಗಳನ್ನು ದೃಶ್ಯರೂಪದಲ್ಲಿ ತಿಳಿದುಕೊಳ್ಳುವಂತಾಯಿತು. ಇದರೊಂದಿಗೆ ದೂರವಾಣಿ ಮೂಲಕವೂ ತನ್ನ ವಿದ್ಯಾರ್ಥಿಗಳೊಂದಿಗ ಅವರು ಸಂಭಾಷಣೆ ಮಾಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಬಹಳ ಆಸಕ್ತಿದಾಯಕವಾಯಿತು. ದೇಶದಾದ್ಯಂತ ಕೊರೊನಾದ ಈ ಸಮಯದಲ್ಲಿ ಶಿಕ್ಷಕರು ಅನುಸರಿಸಿದ ನೂತನ ಆವಿಷ್ಕಾರಕ ಪದ್ಧತಿಗಳು, ಸಿದ್ಧಪಡಿಸಿದ ಸೃಜನಾತ್ಮಕ ಕೋರ್ಸ್ ಮಟಿರಿಯಲ್, ಆನ್ ಲೈನ್ ಓದಿನ ಈ ದಿನಮಾನದಲ್ಲಿ ಬಹಳ ಅಮೂಲ್ಯವಾಗಿವೆ. ಈ ಮಟಿರೀಯಲ್ ನ್ನು ಶಿಕ್ಷಣ ಸಚಿವಾಲಯದ ದೀಕ್ಷಾ ಪೋರ್ಟಲ್ ಲ್ಲಿ ಖಂಡಿತ ಅಪ್ ಲೋಡ್ ಮಾಡಿರಿ ಎಂದು ಎಲ್ಲ ಶಿಕ್ಷಕರಿಗೆ ಆಗ್ರಹಿಸುತ್ತೇನೆ. ಇದರಿಂದ ದೂರ ದೂರದ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಬಹಳ ಲಾಭವಾಗುತ್ತದೆ
ಗೆಳೆಯರೇ, ಬನ್ನಿ ಈಗ ಜಾರ್ಖಂಡ್ ನ ಕೊರವಾ ಜನಾಂಗದ ಹೀರಾಮನ್ ಅವರ ಬಗ್ಗೆ ಮಾತಾಡೋಣ. ಹೀರಾಮನ್ ಅವರು ಗಢ್ವಾ ಜಿಲ್ಲೆಯ ಸಿಂಜೋ ಗ್ರಾಮದ ನಿವಾಸಿಯಾಗಿದ್ದಾರೆ. ಕೊರವಾ ಜನಾಂಗದ ಜನಸಂಖ್ಯೆ ಕೇವಲ 6,000 ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು, ಇವರು ನಗರಗಳಿಂದ ದೂರ, ಬೆಟ್ಟಗಳಲ್ಲಿ ಮತ್ತು ಕಾಡಿನಲ್ಲಿ ವಾಸಿಸುತ್ತಾರೆ. ತಮ್ಮ ಸಮುದಾಯದ ಸಂಸ್ಕೃತಿ ಮತ್ತು ಅಸ್ಮಿತತೆಯನ್ನು ಉಳಿಸಲು ಹೀರಾಮನ್ ಅವರು ಮುಂದಾಳತ್ವವಹಿಸಿದ್ದಾರೆ. ಅವರು 12 ವರ್ಷಗಳ ಸತತ ಪ್ರಯತ್ನದ ನಂತರ ಅಳಿವಿನಂಚಿನಲ್ಲಿರುವ ಕೊರವಾ ಭಾಷೆಯ ನಿಘಂಟನ್ನು ಸಿದ್ಧಪಡಿಸಿದ್ದಾರೆ. ಅವರು ಈ ನಿಘಂಟಿನಲ್ಲಿ ಪ್ರತಿ ದಿನ ಮನೆಯಲ್ಲಿ ಬಳಸುವ ಪದಗಳಿಂದ ಹಿಡಿದು, ದೈನಂದಿನ ಜೀವನದಲ್ಲಿ ಬಳಸುವಂತಹ ಕೊರವಾ ಭಾಷೆಯ ಅನೇಕ ಪದಗಳನ್ನು ಅರ್ಥದೊಂದಿಗೆ ಬರೆದಿದ್ದಾರೆ. ಕೊರವಾ ಜನಾಂಗಕ್ಕಾಗಿ ಹೀರಾಮನ್ ಅವರು ಮಾಡಿದ ಈ ಕಾರ್ಯ ದೇಶಕ್ಕೇ ಒಂದು ಮಾದರಿಯಾಗಿದೆ.
ನನ್ನ ಪ್ರಿಯ ದೇಶ ಬಾಂಧವರೇ, ಅಕ್ಬರನ ಸಭೆಯಲ್ಲಿ ಅಬುಲ್ ಫಜಲ್ ಎಂಬ ಪ್ರಮುಖ ಸದಸ್ಯರೊಬ್ಬರಿದ್ದರು ಎಂದು ಹೇಳಲಾಗುತ್ತದೆ. ಅವರೊಮ್ಮೆ ಕಾಶ್ಮೀರ್ ನ ಯಾತ್ರೆಯ ನಂತರ, ಕಾಶ್ಮೀರದಲ್ಲಿ ಎಂತಹ ಪ್ರಾಕೃತಿಕ ಸೌಂದರ್ಯವಿದೆಯೆಂದರೆ, ಅದನ್ನು ನೋಡಿ ಕಿರಿ–ಕಿರಿ ಆಗುವ ಅಥವಾ ಕೋಪಮಾಡಿಕೊಳ್ಳುವವರೂ ಸಂತೋಷದಿಂದ ಕುಣಿಯುತ್ತಾರೆ ಎಂದು ಹೇಳಿದ್ದರು. ನಿಜಕ್ಕೆ ಅವರು, ಕಾಶ್ಮೀರದ ಕೇಸರಿ ಹೊಲಗಳನ್ನು ಉಲ್ಲೇಖಿಸುತ್ತಿದ್ದರು. ಕೇಸರಿ, ಶತಮಾನಗಳಿಂದಲೂ ಕಾಶ್ಮೀರದೊಂದಿಗೆ ನಂಟನ್ನು ಹೊಂದಿದೆ. ಕಾಶ್ಮೀರದ ಕೇಸರಿಯನ್ನು ಪ್ರಮುಖವಾಗಿ ಪುಲ್ವಾಮಾ, ಬಡಗಾಂ ಮತ್ತು ಕಿಶತ್ ವಾಡ್ ನಂತಹ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಆದ್ದರಿಂದಲೇ, ಈ ವರ್ಷದ ಮೇ ತಿಂಗಳಲ್ಲಿ, ಕಾಶ್ಮೀರದ ಕೇಸರಿಗೆ Geographical Indication Tag ಅಂದರೆ, GI Tag ನೀಡಲಾಗಿದೆ. ಈ ಮೂಲಕ ನಾವು ಕಾಶ್ಮೀರದ ಕೇಸರಿಯನ್ನು ಜಾಗತಿಕವಾಗಿ ಒಂದು ಜನಪ್ರಿಯ ಬ್ರಾಂಡಾಗಿ ಪರಿವರ್ತಿಸಲು ಬಯಸುತ್ತಿದ್ದೇವೆ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಮಸಾಲೆಯಾಗಿ ಕಾಶ್ಮೀರದ ಕೇಸರಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇದು ಬಹಳ ಪರಿಮಳವನ್ನು ಹೊಂದಿದೆ, ಇದರ ಬಣ್ಣ ಗಾಢವಾಗಿರುತ್ತದೆ ಮತ್ತು ಇದರ ಎಳೆಗಳು ಉದ್ದ ಮತ್ತು ದಪ್ಪವಾಗಿರುತ್ತವೆ. ಇದು, ಅದರ ಔಷಧೀಯ ಗುಣವನ್ನು ಹೆಚ್ಚಿಸುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಗುಣಮಟ್ಟದ ಬಗ್ಗೆ ಹೇಳುವುದಾದರೆ, ಕಾಶ್ಮೀರದ ಕೇಸರಿ ಬಹಳ ವಿಶಿಷ್ಠವಾದದ್ದು ಮತ್ತು ಇತರ ದೇಶಗಳ ಕೆಸರಿಗಿಂತ ವಿಭಿನ್ನವಾದದ್ದಾಗಿದೆ. ಕಾಶ್ಮೀರದ ಕೇಸರಿಗೆ GI Tag ಮಾನ್ಯತೆಯಿಂದ ಒಂದು ಹೊಸ ಗುರುತು ದೊರೆತಿದೆ. ಕಾಶ್ಮೀರದ ಕೇಸರಿಗೆ GI ಪ್ರಮಾಣಪತ್ರ ದೊರೆತ ನಂತರ, ದುಬೈನ ಸೂಪರ್ ಮಾರ್ಕೆಟ್ ಒಂದರಲ್ಲಿ ಇದರ ವ್ಯಾಪಾರವನ್ನು ಪ್ರಾರಂಭಿಸಲಾಯಿತು ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಈಗ ಇದರ ರಫ್ತು ಹೆಚ್ಚಾಗಲಿದೆ. ಇದು ಸ್ವಾವಲಂಬಿ ಭಾರತವನ್ನಾಗಿಸುವ ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಪುಷ್ಠಿ ನೀಡಲಿದೆ. ಕೇಸರಿ ಬೆಳೆಗಾರರಿಗೆ ಇದರಿಂದ ವಿಶಿಷ್ಠ ಲಾಭದೊರೆಯಲಿದೆ. ಪುಲ್ವಾಮಾದ ತ್ರಾಲ್ ನ ಶಾರ್ ಪ್ರದೇಶದ ನಿವಾಸಿಯಾದ ಅಬ್ದುಲ್ ಮಜೀದ್ ವಾನಿಯನ್ನು ನೋಡಿ. ಅವರು GI Tag ಮಾಡಲಾದ ತಮ್ಮ ಕೇಸರಿಯನ್ನು, ರಾಷ್ಟ್ರೀಯ ಸ್ಯಾಫ್ರನ್ ಮಿಷನ್ ಸಹಾಯದಿಂದ, ಪಂಪೋರ್ ವ್ಯಾಪಾರ ಕೇಂದ್ರದಲ್ಲಿ ಇ–ಟ್ರೇಡಿಂಗ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇವರಂತೆಯೇ ಅನೇಕರು ಕಾಶ್ಮೀರದಲ್ಲಿ ಈ ಕೆಲಸವನ್ನು ಮಾಡುತ್ತಿದ್ದಾರೆ. ಮುಂದಿನ ಬಾರಿ ನೀವು ಕೇಸರಿಯನ್ನು ಖರೀದಿಸಲು ನಿರ್ಧರಿಸಿದರೆ, ಕೇವಲ ಕಾಶ್ಮೀರದ ಕೇಸರಿಯನ್ನು ಖರೀದಿಸಿ. ಕಾಶ್ಮೀರದ ಜನರಲ್ಲಿ ಎಷ್ಟು ಹುಮ್ಮಸ್ಸು ಇದೆಯೆಂದರೆ ಅಲ್ಲಿಯ ಕೇಸರಿಯ ಸ್ವಾದವೇ ವಿಭಿನ್ನವಾಗಿರುತ್ತದೆ
ನನ್ನ ಪ್ರಿಯ ದೇಶ ಬಾಂಧವರೇ, ಈಗ 2 ದಿನಗಳ ಹಿಂದೆಯಷ್ಟೇ ಗೀತಾ ಜಯಂತಿ ಇತ್ತು. ಭಗವದ್ಗೀತೆ ಜೀವನದ ಎಲ್ಲ ಸಂದರ್ಭಗಳಲ್ಲೂ ಪ್ರೇರಣೆಯನ್ನು ನೀಡುತ್ತದೆ. ಆದರೆ ಭಗವದ್ಗೀತೆ ಇಂಥ ಅದ್ಭುತ ಗ್ರಂಥ ಯಾಕಾಗಿದೆ ಎಂಬುದನ್ನು ನೀವು ಆಲೋಚಿಸಿದ್ದೀರಾ? ಏಕೆಂದರೆ ಇದು ಸ್ವಯಂ ಶ್ರೀ ಕೃಷ್ಣನ ಮುಖವಾಣಿಯಾಗಿದೆ. ಇದು ಅರಿಯುವ ಜಿಜ್ಞಾಸೆಯಿಂದ ಆರಂಭವಾಗುವುದು ಗೀತೆಯ ವಿಶಿಷ್ಠತೆಯಾಗಿದೆ. ಪ್ರಶ್ನೆಗಳಿಂದ ಆರಂಭವಾಗುತ್ತದೆ. ಅರ್ಜುನ ಭಗವಂತ ಕೃಷ್ಣನಿಗೆ ಪ್ರಶ್ನಿಸುತ್ತಾನೆ, ಜಿಜ್ಞಾಸೆಯನನ್ಉ ತೋರುತ್ತಾನೆ, ಆದ್ದರಿಂದಲೇ ಗೀತೆಯ ಜ್ಞಾನ ಜಗತ್ತಿಗೆ ದೊರೆಯಿತು. ಗೀತೆಯಂತೆಯೇ ನಮ್ಮ ಸಂಸ್ಕೃತಿಯಲ್ಲಿ ಎಷ್ಟೆಲ್ಲ ಜ್ಞಾನವಿದೆಯೋ ಎಲ್ಲವೂ ಜಿಜ್ಞಾಸೆಯಿಂದಲೇ ಆರಂಭವಾಗುತ್ತದೆ. ವೇದಾಂತದಲ್ಲಿ ಮೊದಲ ಮಂತ್ರವೇ ‘ಅಥಾತೊ ಬ್ರಹ್ಮಮ್ ಜಿಜ್ಞಾಸಾ’ ಎಂಬುದಾಗಿದೆ. ಇದರರ್ಥ, ಬನ್ನಿ ನಾವು ಬ್ರಹ್ಮನನ್ನು ಅರಿಯುವ ಕುತೂಹಲ ತೋರಿಸೋಣ. ಆದ್ದರಿಂದಲೇ ನಮ್ಮಲ್ಲಿ ಬ್ರಹ್ಮಾನ್ವೇಷಣೆಯ ಮಾತನ್ನು ಹೇಳಲಾಗಿದೆ. ಜಿಜ್ಞಾಸೆಯ ಶಕ್ತಿಯೇ ಅಂಥದ್ದು. ಜಿಜ್ಞಾಸೆ ನಿಮ್ಮನ್ನು ಸದಾ ಹೊಸದರತ್ತ ಪ್ರೇರೆಪಿಸುತ್ತದೆ. ನಮ್ಮಲ್ಲಿ ಜಿಜ್ಞಾಸೆಯಿದೆಯೆಂದೇ ನಾವು ಬಾಲ್ಯದಲ್ಲಿ ಕಲಿಯುತ್ತೇವೆ. ಅಂದರೆ ಅರಿಯುವ ಹಂಬಲ ಇರುವವರೆಗೆ ಜೀವನವಿದೆ. ಜಿಜ್ಞಾಸೆಯಿರುವವರೆಗೆ ಹೊಸತನ್ನು ಕಲಿಯುವ ಕ್ರಮ ಮುಂದುವರಿಯುತ್ತದೆ. ಇದಕ್ಕೆ ವಯಸ್ಸು, ಪರಿಸ್ಥಿತಿ ಎಂಬುದು ಅಪ್ರಸ್ತುತ. ಜಿಜ್ಞಾಸೆಯ ಇಂಥದೇ ಒಂದು ಶಕ್ತಿ ತಮಿಳುನಾಡಿನ ಹಿರಿಯರಾದ ಶ್ರೀ ಟಿ ಶ್ರೀನಿವಾಸಾಚಾರ್ಯ ಸ್ವಾಮಿಗಳ ಬಗ್ಗೆ ನನಗೆ ಗೊತ್ತಾಯಿತು. ಶ್ರೀ ಟಿ ಶ್ರೀನಿವಾಸಾಚಾರ್ಯ ಸ್ವಾಮಿಯವರಿಗೆ 92 ವರ್ಷ ವಯಸ್ಸು. ಈ ವಯಸ್ಸಲ್ಲೂ ಅವರು ಕಂಪ್ಯೂಟರ್ ನಲ್ಲಿ ಪುಸ್ತಕವೊಂದನ್ನು ಬರೆಯುತ್ತಿದ್ದಾರೆ ಅದು ಸ್ವತಃ ಟೈಪ್ ಮಾಡ್ತಾ ಇದ್ದಾರೆ. ಪುಸ್ತಕ ಬರೆಯುವುದೇನೋ ಸರಿ ಆದರೆ ಶ್ರೀನಿವಾಸಾಚಾರ್ಯ ಅವರ ಸಮಯದಲ್ಲಿ ಕಂಪ್ಯೂಟರ್ ಇರಲು ಸಾಧ್ಯವೇ ಇರಲಿಕ್ಕಿಲ್ಲ ಎಂದು ನೀವು ಆಲೋಚಿಸುತ್ತಿರಬಹುದು. ಅಂದ ಮೇಲೆ ಅವರು ಕಂಪ್ಯೂಟರ್ ಯಾವಾಗ ಕಲಿತರು? ಅವರು ಕಾಲೇಜು ಓದುವಾಗ ಕಂಪ್ಯೂಟರ್ ಇರಲಿಲ್ಲ ಎಂಬುದು ನಿಜ. ಆದರೆ, ಅವರ ಯೌವ್ವನದಲ್ಲಿದ್ದಷ್ಟೇ ಜಿಜ್ಞಾಸೆ ಮತ್ತು ಆತ್ಮವಿಶ್ವಾಸ ಇಂದಿಗೂ ಅವರಲ್ಲಿದೆ. ಶ್ರೀನಿವಾಸಾಚಾರ್ಯ ಸ್ವಾಮಿ ಅವರು ಸಂಸ್ಕೃತ ಮತ್ತು ತಮಿಳ್ ಭಾಷೆಯ ವಿದ್ವಾಂಸರಾಗಿದ್ದಾರೆ. ಇಲ್ಲಿವರೆಗೆ ಅವರು ಸುಮಾರು 16 ಆಧ್ಯಾತ್ಮಿಕ ಗ್ರಂಥಗಳನ್ನು ಬರೆದಿದ್ದಾರೆ. ಆದರೆ, ಕಂಪ್ಯೂಟರ್ ಬಂದ ಮೇಲೆ, ಈಗ ಪುಸ್ತಕಳನ್ನು ಬರೆಯುವ ಮತ್ತು ಮುದ್ರಿಸುವ ರೀತಿ ಬದಲಾಗಿದೆ ಎಂದು ಅವರಿಗೆ ಅನ್ನಿಸಿದ ಮೇಲೆ ಅವರು 86 ನೇ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತರು, ತಮಗೆ ಬೇಕಾದ ಅವಶ್ಯಕ ಸಾಫ್ಟ ವೇರ್ ಗಳನ್ನು ಕಲಿತರು. ಈಗ ಅವರು ತಮ್ಮ ಪುಸ್ತಕವನ್ನು ಪೂರ್ಣಗೊಳಿಸುತ್ತಿದ್ದಾರೆ.
ಸ್ನೇಹಿತರೆ, ಜೀವನದಲ್ಲಿ ಎಲ್ಲಿಯವರೆಗೆ ಜಿಜ್ಞಾಸೆ ಜಾಗೃತವಾಗಿರುತ್ತದೆಯೋ, ಕಲಿಯಬೇಕೆಂಬ ಬಯಕೆ ಜೀವಂತವಾಗಿರುತ್ತದೆಯೋ ಅಲ್ಲಿವರೆಗೆ ಜೀವನ ಉತ್ತೇಜಿತವಾಗಿರುತ್ತದೆ ಎಂಬುದಕ್ಕೆ ಶ್ರೀ ಟಿ ಶ್ರೀನಿವಾಸಾಚಾರ್ಯ ಸ್ವಾಮಿ ಅವರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿದೆ. ಆದ್ದರಿಂದ ನಾವು ಹಿಂದೆ ಉಳಿದುಬಿಟ್ಟೆವು, ತಪ್ಪು ಮಾಡಿದೆವು, ಬಹುಶಃ! ನಾವೂ ಇದನ್ನು ಕಲಿಯಬಹುದಿತ್ತು ಎಂದು ಯಾವತ್ತೂ ಯೋಚಿಸಬಾರದು. ನಾವು ಕಲಿಯಲಾಗುವುದಿಲ್ಲ, ಮುಂದುವರಿಯಲಾಗುವುದಿಲ್ಲ ಎಂದು ಕೂಡಾ ನಾವು ಯೋಚಿಸಬಾರದು.
ನನ್ನ ಪ್ರಿಯ ದೇಶ ಬಾಂಧವರೇ, ಈಗ ನಾವು ಜಿಜ್ಞಾಸೆಯಿಂದ ಹೊಸತನ್ನು ಕಲಿಯುವ ಮತ್ತು ಹೊಸತ್ನೇನಾದರೂ ಮಾಡುವ ಕುರಿತು ಮಾತನಾಡುತ್ತಿದ್ದೆವು. ಹೊಸ ವರ್ಷಕ್ಕೆ ಹೊಸ ಸಂಕಲ್ಪದ ಬಗ್ಗೆಯೂ ಮಾತನಾಡುತ್ತಿದ್ದೆವು. ಆದರೆ ಕೆಲ ಜನರು ನಿರಂತರ ಹೊಸತು ಏನನ್ನಾದರೂ ಮಾಡುತ್ತಲೇ ಇರುವವರು ಇರುತ್ತಾರೆ. ಹೊಸ ಹೊಸ ಸಂಕಲ್ಪಗಳನ್ನು ಪೂರೈಸುತ್ತಲೇ ಇರುತ್ತಾರೆ. ನಾವು ಸಮಾಜಕ್ಕಾಗಿ ಏನನ್ನಾದರೂ ಮಾಡಿದಾಗ ಬಹಳಷ್ಟು ಸಾಧಿಸುವ ಶಕ್ತಿಯನ್ನು ಸ್ವತಃ ಸಮಾಜ ನಮಗೆ ನೀಡುತ್ತದೆ ಎಂಬುದನ್ನು ನೀವು ಕೂಡಾ ನಿಮ್ಮ ಜೀವನದಲ್ಲಿ ಅನುಭವಿಸಿರಬಹುದು. ಸಾಮಾನ್ಯವೆಂದೆನ್ನಿಸುವ ಪ್ರೇರಣೆಯಿಂದ ಕೂಡಾ ಬಹುದೊಡ್ಡ ಕೆಲಸಗಳಾಗುತ್ತವೆ. ಪ್ರದೀಪ್ ಸಂಗವಾನ್ ಇಂಥದೇ ಒಬ್ಬ ಯುವಕರಾಗಿದ್ದಾರೆ. ಗುರುಗ್ರಾಮ್ ನ ಪ್ರದೀಪ್ ಸಂಗವಾನ್ 2016 ರಲ್ಲಿ Healing Himalayas ಎಂಬ ಹೆಸರಿನ ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ. ಅವರು ತಮ್ಮ ತಂಡ ಮತ್ತು ಸ್ವಯಂ ಸೇವಕರೊಂದಿಗೆ ಹಿಮಾಲಯದ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತಾರೆ ಮತ್ತು ಅಲ್ಲಿ ಪ್ರವಾಸಿಗರು ಬಿಟ್ಟು ಹೋಗುವಂತಹ ಪ್ಲಾಸ್ಟಿಕ್ ಕಸವನ್ನು ಸ್ವಚ್ಛಗೊಳಿಸುತ್ತಾರೆ. ಪ್ರದೀಪ್ ಅವರು ಇಲ್ಲಿವರೆಗೆ ಹಿಮಾಲಯದ ಬೇರೆ ಬೇರೆ ಪ್ರವಾಸಿ ತಾಣಗಳಿಂದ ಟನ್ ಗಟ್ಟಲೇ ಪ್ಲಾಸ್ಟಿಕ್ ಕಸವನ್ನು ಸ್ವಚ್ಛಗೊಳಿಸಿದ್ದಾರೆ. ಹೀಗೆಯೇ, ಅನುದೀಪ್ ಮತ್ತು ಮಿನುಷಾ ಎಂಬ ಕರ್ನಾಟಕದ ಯುವ ದಂಪತಿ ಇದ್ದಾರೆ. ಅನುದೀಪ್ ಮತ್ತು ಮಿನುಷಾ ಅವರು ಕಳೆದ ತಿಂಗಳು ನವೆಂಬರ್ ನಲ್ಲಿ ವಿವಾಹವಾಗಿದ್ದಾರೆ. ವಿವಾಹದ ನಂತರ ಬಹಳಷ್ಟು ಯುವಜನತೆ ಸುತ್ತಾಡಲು ಹೋಗುತ್ತಾರೆ. ಆದರೆ ಇವರಿಬ್ಬರು ವಿಭಿನ್ನವಾದದ್ದನ್ನು ಮಾಡಿದ್ದಾರೆ. ಜನರು ತಮ್ಮ ಮನೆಗಳಿಂದ ಹೊರಗೆ ಸುತ್ತಾಡಲು ಹೋಗುತ್ತಾರೆ ಆದರೆ ಹೋದಲ್ಲೆಲ್ಲ ಸಾಕಷ್ಟು ಕಸವನ್ನು ಬಿಟ್ಟು ಬರುತ್ತಾರೆ ಎಂಬುದನ್ನು ಇವರು ಗಮನಿಸಿದ್ದರು. ಕರ್ನಾಟಕದ ಸೋಮೇಶ್ವರ ಕಡಲತೀರದಲ್ಲೂ ಇದೇ ಸ್ಥಿತಿಯಿತ್ತು. ಸೋಮೇಶ್ವರ ಕಡಲತೀರದಲ್ಲಿ ಜನರು ಬಿಟ್ಟು ಹೋದ ಕಸವನ್ನು ಸ್ವಚ್ಛಗೊಳಿಸುವುದಾಗಿ ಅನುದೀಪ್ ಮತ್ತು ಮಿನುಷಾ ನಿರ್ಧರಿಸಿದ್ದರು. ವಿವಾಹದ ನಂತರ ಪತಿಪತ್ನಿಯರಿಬ್ಬರೂ ಇದನ್ನೇ ತಮ್ಮ ಪ್ರಥಮ ಸಂಕಲ್ಪವಾಗಿ ಕೈಗೊಂಡರು. ಇಬ್ಬರೂ ಜೊತೆಗೂಡಿ ಸಮುದ್ರತೀರದ ಸಾಕಷ್ಟು ಕಸವನ್ನು ಸ್ವಚ್ಛಗೊಳಿಸಿದರು. ತಮ್ಮ ಈ ಸಂಕಲ್ಪದ ಕುರಿತು ಸಾಮಾಜಿಕ ಜಾಲತಾಣದಲ್ಲೂ ಅನುದೀಪ್ ಹಂಚಿಕೊಂಡರು. ಇನ್ನೇನು, ಅವರ ಈ ಅದ್ಭುತ ವಿಚಾರದಿಂದ ಪ್ರೇರಿತರಾಗಿ ಸಾಕಷ್ಟು ಜನರು ಅವರೊಂದಿಗೆ ಕೈಜೋಡಿಸಿದರು. ಇವರೆಲ್ಲರೂ ಸೇರಿ ಸೋಮೇಶ್ವರ ಕಡಲತೀರದಲ್ಲಿ 800 ಕಿಲೋಗಿಂತ ಹೆಚ್ಚು ಕಸವನ್ನು ಸ್ವಚ್ಛಗೊಳಿಸಿದರು ಎಂಬುದನ್ನು ಕೇಳಿ ನೀವು ಆಶ್ಚರ್ಯಚಕಿತಗೊಳ್ಳುತ್ತೀರಿ.
ಸ್ನೇಹಿತರೆ, ಈ ಪ್ರಯತ್ನಗಳ ಮಧ್ಯೆ, ಈ ಕಸ ಈ ಬೀಚ್ ಗಳ ಮೇಲೆ, ಈ ಬೆಟ್ಟಗಳ ಮೇಲೆ ಹೇಗೆ ತಲುಪಿತು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ನಮ್ಮಿಲ್ಲಿರುವ ಯಾರಾದರೊಬ್ಬರು ಈ ಕಸವನ್ನು ಅಲ್ಲಿ ಬಿಟ್ಟುಬರುತ್ತೇವೆ. ಪ್ರದೀಪ್, ಅನುದೀಪ್–ಮೀನುಷಾ ಅವರಂತೆ ನಾವು ಸ್ವಚ್ಛತಾ ಅಭಿಯಾನವನ್ನು ಆರಂಭಿಸಬೇಕಿದೆ. ಆದರೆ ಅದಕ್ಕೂ ಮುಂಚೆ ನಾವು ಕಸವನ್ನು ಹರಡುವುದಿಲ್ಲ ಎಂದು ಸಂಕಲ್ಪಗೈಯ್ಯಬೇಕಿದೆ. ಏಕೆಂದರೆ ಸ್ವಚ್ಛ ಭಾರತದ ಆಂದೋಲನದ ಸಂಕಲ್ಪವೂ ಇದೇ ಆಗಿತ್ತು. ಹಾಂ…ಮತ್ತೊಂದು ವಿಷಯವನ್ನು ನಿಮಗೆ ನೆನಪಿಸಬಯಸುತ್ತೇನೆ. ಕೊರೊನಾದಿಂದಾಗಿ ಇದರ ಬಗ್ಗೆ ಈ ವರ್ಷ ಅಷ್ಟೊಂದು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ನಾವು ನಮ್ಮ ದೇಶವನ್ನು ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಂದ ಮುಕ್ತಗೊಳಿಸಲೇಬೇಕಿದೆ. 2021 ರ ಸಂಕಲ್ಪಗಳಲ್ಲಿ ಇದೂ ಒಂದಾಗಿದೆ. ಕೊನೆಯದಾಗಿ ನಿಮ್ಮೆಲ್ಲರಿಗೂ ಹೊಸ ವರ್ಷದ ಅನಂತ ಶುಭಹಾರೈಕೆಗಳನ್ನು ತಿಳಿಸಬಯಸುತ್ತೇನೆ. ಸ್ವತಃ ನೀವು ಆರೋಗ್ಯದಿಂದಿರಿ. ನಿಮ್ಮ ಕುಟುಂಬದ ಆರೋಗ್ಯವನ್ನು ರಕ್ಷಿಸಿ. ಮುಂದಿನ ವರ್ಷ ಜನವರಿಯಲ್ಲಿ ಹೊಸ ವಿಷಯಗಳ ಬಗ್ಗೆ ‘ಮನದ ಮಾತುಗಳ’ನ್ನಾಡೋಣ.
ಅನಂತ ಅನಂತ ಧನ್ಯವಾದಗಳು
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿನ ಆರಂಭದಲ್ಲಿಯೇ, ಇಂದು ನಾನು ನಿಮ್ಮೆಲ್ಲರೊಂದಿಗೆ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಬಯಸುತ್ತೇನೆ. ದೇವಿ ಅನ್ನಪೂರ್ಣೆಯ ಒಂದು ಪುರಾತನ ಪ್ರತಿಮೆ ಕೆನಡಾದಿಂದ ಭಾರತಕ್ಕೆ ಮರಳಿ ಬರುತ್ತಿದೆ ಎಂದು ಕೇಳಿ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯೆನಿಸುತ್ತದೆ. ಈ ಮೂರ್ತಿಯನ್ನು ಸುಮಾರು 100 ವರ್ಷಕ್ಕೂ ಹಿಂದೆ 1913 ರ ಆಸುಪಾಸು ವಾರಣಾಸಿಯ ಒಂದು ದೇವಾಲಯದಿಂದ ಕಳ್ಳತನ ಮಾಡಿ ದೇಶದಿಂದ ಹೊರಕ್ಕೆ ರವಾನಿಸಲಾಗಿತ್ತು. ಈ ಪುಣ್ಯ ಕಾರ್ಯವನ್ನು ಯಶಸ್ವಿಗೊಳಿಸಲು ಕೈಜೋಡಿಸಿದ ಕೆನಡಾ ಸರ್ಕಾರ ಮತ್ತು ಎಲ್ಲ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕಾಶಿಯೊಂದಿಗೆ ಮಾತೆ ಅನ್ನಪೂರ್ಣೆಯ ಸಂಬಂಧ ವಿಶೇಷವಾದದ್ದು. ಈಗ ಆ ಪ್ರತಿಮೆ ಮರಳಿ ಬರುತ್ತಿರುವುದು ನಮ್ಮೆಲ್ಲರಿಗೂ ನೆಮ್ಮದಿ ತಂದಿದೆ. ತಾಯಿ ಅನ್ನಪೂರ್ಣೆ ಪ್ರತಿಮೆಯಂತೆಯೇ ನಮ್ಮ ಪರಂಪರೆಯ ಅನೇಕ ಬಹುಮೂಲ್ಯ ಸಂಪತ್ತು ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರ ಪಾಲಾಗುತ್ತಲೇ ಇದೆ. ಇಂಥ ಗುಂಪುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವನ್ನು ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತವೆ. ಈಗ ಇವುಗಳ ಮೇಲೆ ಕಟ್ಟುನಿಟ್ಟು ಹೇರಲಾಗಿದೆ. ನಮ್ಮ ಬಹುಮೂಲ್ಯ ಸಂಪತ್ತನ್ನು ಮರಳಿ ತರಲು ಭಾರತ ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ. ಇಂಥ ಪ್ರಯತ್ನಗಳ ಪರಿಣಾಮ ಕಳೆದ ಕೆಲವು ವರ್ಷಗಳಲ್ಲಿ ಭಾರತ ಹಲವಾರು ಪ್ರತಿಮೆಗಳು ಮತ್ತು ಕಲಾಕೃತಿಗಳನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ತಾಯಿ ಅನ್ನಪೂರ್ಣೆಯ ಪ್ರತಿಮೆಯನ್ನು ಹಿಂಪಡೆಯುವಿಕೆ ಜೊತೆಗೆ ಕೆಲ ದಿನಗಳ ಹಿಂದೆಯಷ್ಟೇ ವಿಶ್ವ ಪರಂಪರಾ ಸಪ್ತಾಹ ಆಚರಿಸಿರುವುದು ಕಾಕತಾಳೀಯವೆನಿಸಿದೆ. ವಿಶ್ವ ಪರಂಪರಾ ಸಪ್ತಾಹ, ಸಂಸ್ಕೃತಿ ಪ್ರೀಯರಿಗೆ ಹಿಂದಿನ ಕಾಲಕ್ಕೆ ಹೋಗಲು ಮತ್ತು ಅವುಗಳ ಐತಿಹಾಸಿಕ ಮಹತ್ವದ ಮಜಲುಗಳನ್ನು ಅರಿಯಲು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಕೊರೊನಾ ಸಾಂಕ್ರಾಮಿಕದ ಹೊರತಾಗಿಯೂ ಈ ಬಾರಿ ವಿಶಿಷ್ಟ ರೀತಿಯಲ್ಲಿ ಈ ಪರಂಪರಾ ಸಪ್ತಾಹ ಆಚರಿಸಿರುವುದನ್ನು ನಾವು ಕಂಡಿದ್ದೇವೆ. ಸಂಕಷ್ಟದಲ್ಲಿ ಸಂಸ್ಕೃತಿ ಬಹಳ ಉಪಯೋಗಕ್ಕೆ ಬರುತ್ತದೆ. ಇದರಿಂದ ಮುಕ್ತಿ ಹೊಂದಲು ಪ್ರಮುಖ ಪಾತ್ರ ವಹಿಸುತ್ತದೆ. ತಂತ್ರಜ್ಞಾನದ ಮಾಧ್ಯಮದಿಂದಲೂ ಸಂಸ್ಕೃತಿ ಒಂದು ಭಾವನಾತ್ಮಕ ಚೈತನ್ಯದಂತೆ ಕೆಲಸ ಮಾಡುತ್ತದೆ. ಇಂದು ದೇಶದಲ್ಲಿ ಎಷ್ಟೋ ವಸ್ತು ಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳು ತಮ್ಮ ಸಂಗ್ರಹವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವಲ್ಲಿ ಕೆಲಸ ಮಾಡುತ್ತಿವೆ. ದೆಹಲಿಯಲ್ಲಿ ನಮ್ಮ ರಾಷ್ಟ್ರೀಯ ಸಂಗ್ರಹಾಲಯ ಈ ನಿಟ್ಟಿನಲ್ಲಿ ಪ್ರಶಂಸನೀಯ ಪ್ರಯತ್ನಗಳನ್ನು ಮಾಡಿದೆ. ರಾಷ್ಟ್ರೀಯ ಸಂಗ್ರಹಾಲಯದ ಮೂಲಕ ಸುಮಾರು 10 ವರ್ಚುವಲ್ ಗ್ಯಾಲರಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ – ತುಂಬಾ ಮಜವಾಗಿದೆಯಲ್ಲವೇ! ಈಗ ನೀವು ಮನೆಯಲ್ಲಿಯೇ ಕುಳಿತು ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯದ ಗ್ಯಾಲರಿಗಳ ಪ್ರವಾಸ ಕೈಗೊಳ್ಳಬಹುದು. ಇಲ್ಲಿ ಒಂದೆಡೆ ಸಂಸ್ಕೃತಿಯ ಪರಂಪರೆಯನ್ನು ತಂತ್ರಜ್ಞಾನದ ಸಹಾಯದಿಂದ ಹೆಚ್ಚೆಚ್ಚು ಜನರಿಗೆ ತಲುಪಿಸುವುದು ಎಷ್ಟು ಮುಖ್ಯವೋ ಅದೇ ರೀತಿ ಮತ್ತೊಂದೆಡೆ ಇಂತಹ ಅಮೂಲ್ಯ ವಸ್ತುಗಳ ಸಂರಕ್ಷಣೆಗೆ ತಂತ್ರಜ್ಞಾನದ ಬಳಕೆಯೂ ಅಷ್ಟೇ ಮಹತ್ವಪೂರ್ಣವಾಗಿದೆ. ಇತ್ತೀಚೆಗೆ ಒಂದು ಆಸಕ್ತಿಕರ ಪ್ರಾಜೆಕ್ಟ್ ಬಗ್ಗೆ ಓದುತ್ತಿದ್ದೆ. ನಾರ್ವೆಯ ಉತ್ತರದಲ್ಲಿ ಸ್ವಾಲ್ ಬಾರ್ಡ್ ಎಂಬ ಹೆಸರಿನ ದ್ವೀಪವಿದೆ. ಈ ದ್ವೀಪದಲ್ಲಿ ಆರ್ಕ್ಟಿಕ್ ವರ್ಲ್ಡ್ ಆರ್ಕೈವ್ ಎಂಬ ಯೋಜನೆಯನ್ನು ರೂಪಿಸಲಾಗಿದೆ. ಯಾವುದೇ ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಪತ್ತು ಯಾವುದೇ ಪ್ರಭಾವ ಬೀರದಂತೆ ಈ ಆರ್ಕೈವ್ ನಲ್ಲಿ ಅಮೂಲ್ಯ ಪರಂಪರಾ ದತ್ತಾಂಶವನ್ನು ಸಂರಕ್ಷಿಸಲಾಗಿದೆ. ಅಜಂತಾ ಗುಹೆಗಳ ಪರಂಪರೆಯನ್ನು ಡಿಜಿಟಲೀಕರಣಗೊಳಿಸಿ ಈ ಯೋಜನೆಯಲ್ಲಿ ಸೇರಿಸಲಾಗುತ್ತಿದೆ ಎಂದು ಇತ್ತೀಚೆಗೆ ಮಾಹಿತಿ ಲಭಿಸಿದೆ. ಇದರಲ್ಲಿ ಅಜಂತಾ ಗುಹೆಗಳ ಸಂಪೂರ್ಣ ನೋಟ ಲಭಿಸಲಿದೆ. ಇದರಲ್ಲಿ ಡಿಜಿಟಲೀಕರಣಗೊಳಿಸಿದ ಮತ್ತು ಪುನರುಜ್ಜೀವ ನೀಡಲಾದ ವರ್ಣಚಿತ್ರಗಳ ಜೊತೆಗೆ ಇದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಉಲ್ಲೇಖಗಳು ಲಭ್ಯವಿವೆ. ಸ್ನೇಹಿತರೆ, ಮಹಾಮಾರಿ ಒಂದೆಡೆ ನಮ್ಮ ಕೆಲಸ ಮಾಡುವ ರೀತಿ ನೀತಿಗಳನ್ನು ಬದಲಾಯಿಸಿದ್ದರೆ ಮತ್ತೊಂದೆಡೆ ಪ್ರಕೃತಿಯನ್ನು ಹೊಸ ಬಗೆಯಲ್ಲಿ ಅನುಭವಿಸುವ ಅವಕಾಶವನ್ನೂ ನೀಡಿದೆ. ಪ್ರಕೃತಿಯನ್ನು ನೋಡುವ ನಮ್ಮ ದೃಷ್ಟಿಕೋನ ಕೂಡ ಬದಲಾಗಿದೆ. ಈಗ ನಾವು ಚಳಿಗಾಲಕ್ಕೆ ಕಾಲಿಡುತ್ತಿದ್ದೇವೆ. ನಮಗೆ ಪ್ರಕೃತಿಯ ವಿಭಿನ್ನ ಬಣ್ಣಗಳು ನೋಡಲು ಸಿಗುತ್ತವೆ. ಕೆಲ ದಿನಗಳಿಂದ ಅಂತರ್ಜಾಲದಲ್ಲಿ ಚೆರ್ರಿ ಬ್ಲಾಸಮ್ ಗಳ ಚಿತ್ರಗಳು ವೈರಲ್ ಆಗಿವೆ. ನಾನು ಚೆರ್ರಿ ಬ್ಲಾಸಮ್ ಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದಾದರೆ ಜಪಾನಿನ ಈ ಪ್ರಸಿದ್ಧ ಪ್ರತೀಕದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನೀವು ಆಲೋಚಿಸುತ್ತಿರಬಹುದು. ಆದರೆ ಹಾಗಿಲ್ಲ – ಇವು ಜಪಾನ್ ನ ಚಿತ್ರಗಳಲ್ಲ. ಇವು ನಮ್ಮ ಮೇಘಾಲಯದ ಶಿಲ್ಲಾಂಗ್ ಚಿತ್ರಗಳಾಗಿವೆ. ಮೇಘಾಲಯದ ಸೌಂದರ್ಯವನ್ನು ಈ ಚೆರ್ರಿ ಬ್ಲಾಸಮ್ ಗಳು ಮತ್ತಷ್ಟು ಹೆಚ್ಚಿಸಿವೆ.
ಸ್ನೇಹಿತರೆ, ಈ ತಿಂಗಳು 12 ನವೆಂಬರ್ ನಿಂದ ಡಾಕ್ಟರ್ ಸಲೀಂ ಅಲಿ ಅವರ 125 ನೇ ಜಯಂತಿ ಸಮಾರಂಭ ಆರಂಭಗೊಂಡಿದೆ. ಡಾಕ್ಟರ್ ಸಲೀಂ ಅವರು ಪಕ್ಷಿಗಳ ವಿಶ್ವದಲ್ಲಿ ಪಕ್ಷಿವೀಕ್ಷಣೆ ಕುರಿತು ಗಮನಾರ್ಹ ಕೆಲಸ ಮಾಡಿದ್ದಾರೆ. ವಿಶ್ವದ ಪಕ್ಷಿವೀಕ್ಷಣೆ ಆಸಕ್ತರನ್ನು ಭಾರತದೆಡೆಗೆ ಆಕರ್ಷಿಸುವ ಕೆಲಸವನ್ನೂ ಮಾಡಿದ್ದಾರೆ. ನಾನು ಎಂದಿನಿಂದಲೂ ಪಕ್ಷಿವೀಕ್ಷಣೆ ಆಸಕ್ತರ ಪ್ರಶಂಸಕನಾಗಿದ್ದೇನೆ. ಬಹಳ ಧೈರ್ಯದಿಂದ ಅವರು ತಾಸುಗಟ್ಟಲೆ ಬೆಳಿಗ್ಗೆಯಿಂದ ಸಂಜೆವರೆಗೆ ಪಕ್ಷಿವೀಕ್ಷಣೆ ಮಾಡಬಲ್ಲರು, ಪ್ರಕೃತಿಯ ಅಮೂಲ್ಯ ದೃಶ್ಯಾವಳಿಗಳ ಆನಂದವನ್ನು ಅನುಭವಿಸಬಲ್ಲರು ಮತ್ತು ತಮ್ಮ ಜ್ಞಾನವನ್ನು ನಮ್ಮೆಲ್ಲರಿಗೂ ತಲುಪಿಸುತ್ತಿರುತ್ತಾರೆ. ಭಾರತದಲ್ಲೂ ಬಹಳಷ್ಟು ಪಕ್ಷಿವೀಕ್ಷಣೆ ಸಂಘಗಳು ಸಕ್ರಿಯವಾಗಿವೆ. ನೀವೂ ಈ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ನನ್ನ ಓಡಾಟದ ಜೀವನದಲ್ಲಿ ನನಗೂ ಕೆಲ ದಿನಗಳ ಹಿಂದೆ ಕೆವಡಿಯಾದಲ್ಲಿ ಪಕ್ಷಿಗಳೊಂದಿಗೆ ಕಾಲ ಕಳೆಯುವ ಬಹಳ ಸ್ಮರಣೀಯ ಅವಕಾಶ ದೊರೆಯಿತು. ಪಕ್ಷಿಗಳೊಂದಿಗೆ ಕಳದೆ ಸಮಯ ನಿಮ್ಮನ್ನು ಪ್ರಕೃತಿಯೊಂದಿಗೆ ಬೆರೆಸುತ್ತದೆ, ಪರಿಸರದ ಬಗ್ಗೆಯೂ ಪ್ರೇರಣೆಯನ್ನು ಜಾಗೃತಗೊಳಿಸುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ, ಭಾರತದ ಸಂಸ್ಕೃತಿ ಮತ್ತು ಶಾಸ್ತ್ರ ಎಂದೆಂದಿಗೂ ಸಂಪೂರ್ಣ ವಿಶ್ವಕ್ಕೆ ಆಕರ್ಷಣೆಯ ಕೇಂದ್ರವಾಗಿದೆ. ಹಲವಾರು ಜನರು ಇವುಗಳನ್ನು ಅರಸುತ್ತಾ ಭಾರತಕ್ಕೆ ಬಂದಿದ್ದಾರೆ ಮತ್ತು ಎಂದೆಂದಿಗೂ ಇಲ್ಲಿಯವರೇ ಆಗಿ ಉಳಿದಿದ್ದಾರೆ. ಅದರಲ್ಲಿ ಕೆಲವರು ತಮ್ಮ ದೇಶಗಳಿಗೆ ಮರಳಿ ಈ ಸಂಸ್ಕೃತಿಯ ಸಂವಹನಕಾರರಾಗಿದ್ದಾರೆ. ನನಗೆ “ಜೊನಾಸ್ ಮಸೆಟ್ಟಿ” ಅವರ ಕೆಲಸದ ಬಗ್ಗೆ ಅರಿಯುವ ಅವಕಾಶ ದೊರೆಯಿತು. ಇವರನ್ನು ‘ವಿಶ್ವನಾಥ’ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಜೊನಾಸ್ ಬ್ರೆಜಿಲ್ ನಲ್ಲಿ ಜನರಿಗೆ ವೇದಾಂತ ಮತ್ತು ಭಗವದ್ಗೀತೆಯ ಪಾಠ ಮಾಡುತ್ತಾರೆ. ಅವರು ವಿಶ್ವವಿದ್ಯಾ ಎಂಬ ಹೆಸರಿನ ಸಂಸ್ಥೆಯ ಸಂಚಾಲಕರಾಗಿದ್ದಾರೆ. ಅದು ರಿಯೋ ಡಿ ಜನೈರೊದಿಂದ ಒಂದು ಗಂಟೆಯ ದೂರದಲ್ಲಿ ಪೆಟ್ರೊಪೋಲಿಸ್ ಬೆಟ್ಟದ ಮೇಲಿದೆ. ಜೊನಾಸ್ ಮೆಕ್ಯಾನಿಕಲ್ ಇಂಜೀನಿಯರಿಂಗ್ ಓದಿ ಶೇರು ಮಾರುಕಟ್ಟೆಯಲ್ಲಿ ತನ್ನದೇ ಕಂಪನಿಯಲ್ಲಿ ಕೆಲಸ ಮಾಡಿದ ನಂತರ, ಅವರ ಧ್ಯಾನ ಭಾರತೀಯ ಸಂಸ್ಕೃತಿ ಮೇಲೆ ಅದರಲ್ಲೂ ವಿಶೇಷವಾಗಿ ವೇದಾಂತದೆಡೆಗೆ ಆಕರ್ಷಿತವಾಯಿತು. ಶೇರು ಪೇಟೆಯಿಂದ ಆಧ್ಯಾತ್ಮಿಕದೆಡೆಗೆ ನಿಜಕ್ಕೂ ಅವರ ಯಾತ್ರೆ ಬಹು ಸುದೀರ್ಘವಾದದ್ದು. ಜೊನಾಸ್ ಭಾರತದಲ್ಲಿ ವೇದಾಂತ ದರ್ಶನದ ಅಧ್ಯಯನ ಮಾಡಿದರು. 4 ವರ್ಷಗಳವರೆಗೆ ಅವರು ಕೊಯಂಬತ್ತೂರಿನ ಆರ್ಷ ವಿದ್ಯಾ ಗುರುಕುಲದಲ್ಲಿದ್ದರು. ಜೊನಾಸ್ ಅವರ ಮತ್ತೊಂದು ವಿಶೇಷತೆಯಿದೆ. ಅವರು ತಮ್ಮ ಸಂದೇಶವನ್ನು ಪಸರಿಸಲು ತಂತ್ರಜ್ಞಾನ ಬಳಸುತ್ತಿದ್ದಾರೆ. ಅವರು ನಿಯಮಿತವಾಗಿ ಆನ್ ಲೈನ್ ಕಾರ್ಯಕ್ರಮವನ್ನು ನೀಡುತ್ತಾರೆ. ಅವರು ಪ್ರತಿದಿನ ಪಾಡ್ ಕಾಸ್ಟ್ ಮಾಡುತ್ತಾರೆ. ಕಳೆದ 7 ವರ್ಷಗಳಲ್ಲಿ ಜೊನಾಸ್ ಅವರು ವೇದಾಂತದ ಬಗ್ಗೆ ತಮ್ಮ ಉಚಿತ ಮುಕ್ತ ಕೋರ್ಸ್ ಗಳ ಮೂಲಕ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಜೊನಾಸ್ ಒಂದು ದೊಡ್ಡ ಕೆಲಸವನ್ನು ಮಾತ್ರ ಮಾಡುತ್ತಿಲ್ಲ ಜೊತೆಗೆ ಅದನ್ನು ಬಹು ದೊಡ್ಡ ಸಂಖ್ಯೆಯ ಜನರು ಅರ್ಥೈಸಿಕೊಳ್ಳುವ ಭಾಷೆಯಲ್ಲಿ ಮಾಡುತ್ತಿದ್ದಾರೆ. ಜನರಿಗೆ ಕೊರೊನಾ ಮತ್ತು ಕ್ವಾರೆಂಟೈನ್ ನ ಈ ಸಮಯದಲ್ಲಿ ವೇದಾಂತ ಹೇಗೆ ಸಹಾಯಮಾಡಬಲ್ಲದು ಎಂಬುದರ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲವಿದೆ. ‘ಮನದ ಮಾತು’ ಮೂಲಕ ನಾನು ಜೊನಾಸ್ ಅವರನ್ನು ಅವರ ಪರಿಶ್ರಮಕ್ಕೆ ಅಭಿನಂದಿಸುತ್ತೇನೆ. ಮತ್ತು ಭವಿಷ್ಯದ ಪ್ರಯತ್ನಗಳಿಗೂ ಶುಭಹಾರೈಸುತ್ತೇನೆ.
ಸ್ನೇಹಿತರೆ, ಇದೇ ರೀತಿ , ಮತ್ತೊಂದು ಸುದ್ದಿಯ ಮೇಲೂ ನಿಮ್ಮ ಗಮನಹರಿದಿರಬಹುದು. ನ್ಯೂಜಿಲೆಂಡ್ ನಲ್ಲಿ ಅಲ್ಲಿಯ ಹೊಸದಾಗಿ ಆಯ್ಕೆಯಾದ ಎಂ ಪಿ ಡಾ|| ಗೌರವ್ ಶರ್ಮಾ ಅವರು ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಒಬ್ಬ ಭಾರತೀಯನಾಗಿ ಭಾರತೀಯ ಸಂಸ್ಕೃತಿಯ ಈ ಪ್ರಸಾರ ನಮಗೆಲ್ಲ ಹೆಮ್ಮೆ ತರುತ್ತದೆ. ‘ಮನದ ಮಾತು’ ಮೂಲಕ ನಾನು ಗೌರವ್ ಶರ್ಮಾ ಅವರಿಗೆ ಶುಭಹಾರೈಸುತ್ತೇನೆ. ಅವರು ನ್ಯೂಜಿಲೆಂಡ್ ಜನತೆಯ ಸೇವೆಯಲ್ಲಿ ಹೊಸ ಅನುಕೂಲಗಳನ್ನು ಕಲ್ಪಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, ನಾಳೆ 30 ನವೆಂಬರ್ ನಂದು ನಾವು ಶ್ರೀ ಗುರುನಾನಕ್ ದೇವ್ ಜಿ ಅವರ 551 ನೇ ಪ್ರಕಾಶ ಪರ್ವವನ್ನು ಆಚರಿಸಲಿದ್ದೇವೆ. ಸಂಪೂರ್ಣ ವಿಶ್ವದಲ್ಲಿ ಗುರುನಾನಕ್ ಜಿ ಅವರ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ.
ವ್ಯಾಂಕೋವರ್ ನಿಂದ ವೆಲ್ಲಿಂಗ್ಟನ್ ವರೆಗೆ, ಸಿಂಗಾಪೂರ್ ದಿಂದ ದಕ್ಷಿಣ ಆಫ್ರಿಕಾವರೆಗೆ ಅವರ ಸಂದೇಶ ಎಲ್ಲೆಡೆ ಕೇಳಿಬರುತ್ತದೆ. ಗುರುಗ್ರಂಥ ಸಾಹೀಬ್ ದಲ್ಲಿ ಹೀಗೆ ಹೇಳಿದೆ – “ಸೇವಕ ಕೊ ಸೇವಾ ಬನ ಆಯಿ” ಅಂದರೆ ಸೇವೆ ಮಾಡುವುದೇ ಸೇವಕನ ಕೆಲಸ. ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ಮಹತ್ವದ ಘಟ್ಟಗಳು ಎದುರಾದವು ಮತ್ತು ಒಬ್ಬ ಸೇವಕನಾಗಿ ನನಗೆ ಬಹಳಷ್ಟು ಕೆಲಸ ಮಾಡುವ ಅವಕಾಶ ದೊರೆಯಿತು. ಗುರು ಸಾಹೇಬರು ನಮ್ಮಿಂದ ಸೇವೆಯನ್ನು ಪಡೆದರು. ಗುರುನಾನಕ್ ದೇವ್ ಜಿ ಅವರ 550 ನೇ ಪ್ರಕಾಶ ಪರ್ವ, ಶ್ರೀ ಗುರು ಗೋವಿಂದ್ ಸಿಂಗ್ ಅವರ 350 ನೇ ಪ್ರಕಾಶ ಪರ್ವ, ಮುಂದಿನ ವರ್ಷ ಶ್ರೀ ಗುರು ತೇಗ್ ಬಹಾದ್ದೂರ್ ಅವರ 400 ನೇ ಪ್ರಕಾಶ ಪರ್ವವೂ ಇದೆ. ಗುರು ಸಾಹೇಬರ ವಿಶೇಷ ಕೃಪೆ ನನ್ನ ಮೇಲಿದೆ, ಅವರು ನನ್ನನ್ನು ತಮ್ಮ ಕಾರ್ಯಗಳಲ್ಲಿ ಬಹಳ ನಿಕಟವಾಗಿದ್ದು ಮಾಡಿಕೊಡುವಂತೆ ಮಾಡಿದ್ದಾರೆ ಎಂದು ನನಗೆ ಭಾಸವಾಗುತ್ತದೆ.
ಸ್ನೇಹಿತರೆ, ನಿಮಗೆ ಕಛ್ ನಲ್ಲಿ ಲಖಪತ್ ಗುರುದ್ವಾರ ಸಾಹೀಬ್ ಎಂಬ ಒಂದು ಗುರುದ್ವಾರ ಇದೆಯೆಂದು ನಿಮಗೆ ಗೊತ್ತೆ? ಶ್ರೀ ಗುರುನಾನಕ್ ಜಿ ಅವರು ತಮ್ಮ ಬೇಸರದ ಸಮಯದಲ್ಲಿ ಲಖಪತ್ ಗುರುದ್ವಾರ ಸಾಹೀಬ್ ನಲ್ಲಿ ತಂಗಿದ್ದರು. 2001 ರ ಭೂಕಂಪದಲ್ಲಿ ಈ ಗುರುದ್ವಾರಕ್ಕೂ ಹಾನಿಯಾಗಿತ್ತು. ಗುರು ಸಾಹೇಬರ ಕೃಪೆಯಿಂದಲೇ ಇದರ ಜೀರ್ಣೋದ್ಧಾರವನ್ನು ಖಚಿತಪಡಿಸಲು ನನ್ನಿಂದ ಸಾಧ್ಯವಾಯಿತು. ಗುರುದ್ವಾರ ದುರಸ್ಥಿಯನ್ನು ಮಾತ್ರ ಮಾಡುವುದಲ್ಲದೇ ಅದರ ಗೌರವ ಮತ್ತು ಭವ್ಯತೆ ಮರುಕಳಿಸುವಂತೆ ಮಾಡಲಾಯಿತು. ನಮ್ಮೆಲ್ಲರಿಗೂ ಗುರು ಸಾಹೇಬರ ಆಶೀರ್ವಾದವೂ ದೊರೆಯಿತು. 2004 ರಲ್ಲಿ ಯುನೆಸ್ಕೋ ಏಷ್ಯಾ ಪೆಸಿಫಿಕ್ ಪಾರಂಪರಿಕ ಪ್ರಶಸ್ತಿಗಳಲ್ಲಿ ಲಖಪತ್ ಗುರುದ್ವಾರ ಸಂರಕ್ಷಣೆಯ ಪ್ರಯತ್ನಗಳಿಗಾಗಿ ಅವಾರ್ಡ್ ಆಫ್ ಡಿಸ್ಟಿಂಕ್ಷನ್ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯನ್ನು ನೀಡಿದ ತೀರ್ಪುಗಾರರು ಜೀರ್ಣೋದ್ಧಾರ ಸಮಯದಲ್ಲಿ ಶಿಲ್ಪಕಲೆಯ ಸೂಕ್ಷ್ಮ ಅಂಶಗಳತ್ತ ಕೂಡಾ ಗಮನಹರಿಸಲಾಗಿದೆ ಎಂಬುದನ್ನು ಮನಗಂಡರು. ಗುರುದ್ವಾರದ ಪುನರ್ ನಿರ್ಮಾಣ ಕಾರ್ಯದಲ್ಲಿ ಸಿಖ್ ಸಮುದಾಯದವರು ಸಕ್ರಿಯವಾಗಿ ಭಾಗವಹಿಸುವುದಲ್ಲದೆ ಅವರ ಮಾರ್ಗದರ್ಶನದಲ್ಲೇ ಈ ಕಾರ್ಯವನ್ನು ಪೂರ್ತಿಗೊಳಿಸಲಾಯಿತು ಎಂಬುದನ್ನು ತೀರ್ಪುಗಾರರು ಗಮನಿಸಿದರು. ನಾನು ಮುಖ್ಯಮಂತ್ರಿಯೂ ಆಗಿರಲಿಲ್ಲ, ಆಗಲೂ ನನಗೆ ಲಖಪತ್ ಗುರುದ್ವಾರಕ್ಕೆ ಹೋಗುವ ಅವಕಾಶ ಲಭಿಸಿತ್ತು. ನನಗೆ ಅಲ್ಲಿಗೆ ಹೋಗಿ ಅನಂತ ಶಕ್ತಿ ಲಭಿಸಿತ್ತು. ಗುರುದ್ವಾರಕ್ಕೆ ಹೋಗಿ ಎಲ್ಲರೂ ಧನ್ಯತಾಭಾವವನ್ನು ಹೊಂದುತ್ತಾರೆ. ಗುರು ಸಾಹೇಬರು ನನ್ನಿಂದ ನಿರಂತರ ಸೇವೆ ಸ್ವೀಕರಿಸುತ್ತಿದ್ದಾರೆ ಎಂಬ ವಿಷಯಕ್ಕೆ ನಾನು ಬಹಳ ಕೃತಜ್ಞನಾಗಿದ್ದೇನೆ. ಕಳೆದ ವರ್ಷ ನವೆಂಬರ್ ನಲ್ಲಿ ಕರ್ತಾರ್ ಪುರ್ ಸಾಹೀಬ್ ಕಾರಿಡಾರ್ ತೆರೆದದ್ದು ಬಹಳ ಐತಿಹಾಸಿಕವಾಗಿತ್ತು. ಈ ವಿಷಯವನ್ನು ನಾನು ಜೀವನಪೂರ್ತಿ ನನ್ನ ಹೃದಯದಲ್ಲಿ ಜೋಪಾನವಾಗಿರಿಸುತ್ತೇನೆ. ನಮಗೆ ಶ್ರೀ ದರ್ಬಾರ್ ಸಾಹೇಬರ ಸೇವೆಗೆ ಮತ್ತೊಂದು ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ವಿದೇಶದಲ್ಲಿ ನೆಲೆಸಿರುವ ನಮ್ಮ ಸಿಖ್ ಸೋದರ ಸೋದರಿಯರು ಈಗ ದರ್ಬಾರ್ ಸಾಹೀಬ್ ಅವರ ಸೇವೆಗೆ ದೇಣಿಗೆ ನೀಡಲು ಈಗ ಮತ್ತಷ್ಟು ಸುಲಭವಾಗಿದೆ. ಈ ನಡೆಯಿಂದ ವಿಶ್ವಾದ್ಯಂತದ ಭಕ್ತಸಮೂಹ ದರ್ಬಾರ್ ಸಾಹೇಬರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಸ್ನೇಹಿತರೆ, ಲಂಗರ್ ಪರಂಪರೆಯನ್ನು ಆರಂಭಿಸಿದವರು ಗುರುನಾನಕ್ ಜಿ ಅವರೇ ಆಗಿದ್ದಾರೆ ಮತ್ತು ಇಂದು ವಿಶ್ವಾದ್ಯಂತ ಸಿಖ್ ಸಮುದಾಯದವರು ಕೊರೊನಾದ ಈ ಸಮಯದಲ್ಲಿ ಜನರಿಗೆ ಊಟ ಮಾಡಿಸುವ ಪರಂಪರೆಯನ್ನು ಹೇಗೆ ಮುಂದುವರೆಸಿದ್ದಾರೆ, ಮಾನವ ಜನಾಂಗದ ಸೇವೆಗೈದಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಈ ಪರಂಪರೆ ನಮಗೆಲ್ಲರಿಗೂ ಸದಾ ಪ್ರೇರಣಾತ್ಮಕ ಕೆಲಸ ಮಾಡುತ್ತದೆ. ನಾವೆಲ್ಲರೂ ಸೇವಕರಂತೆ ಕೆಲಸ ಮಾಡುತ್ತಲೇ ಇರೋಣ ಎಂಬುದು ನನ್ನ ಇಚ್ಛೆಯಾಗಿದೆ. ಗುರು ಸಾಹೇಬರು ನನ್ನಿಂದ ಮತ್ತು ದೇಶ ಬಾಂಧವರಿಂದ ಹೀಗೆ ಸೇವೆಯನ್ನು ಸ್ವೀಕರಿಸುತ್ತಿರಲಿ. ಮತ್ತೊಮ್ಮೆ ಗುರುನಾನಕ್ ಜಯಂತಿ ಸಂದರ್ಭದಲ್ಲಿ ನನ್ನ ಅನಂತ ಶುಭಾಷಯಗಳು.
ನನ್ನ ಪ್ರಿಯ ದೇಶವಾಸಿಗಳೇ, ಕಳೆದ ದಿನಗಳಲ್ಲಿ ದೇಶಾದ್ಯಂತದ ಹಲವಾರು ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ, ಅವರ ಶೈಕ್ಷಣಿಕ ಪಯಣದ ಮಹತ್ವಪೂರ್ಣ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. ತಂತ್ರಜ್ಞಾನ ಬಳಸಿ ನಾನು ಐಐಟಿ ಗುವಾಹಾಟಿ, ಐಐಟಿ ದೆಹಲಿ, ಗಾಂಧಿನಗರದ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವ ವಿದ್ಯಾಲಯ, ದೆಹಲಿಯಯ ಜೆ ಎನ್ ಯು, ಮೈಸೂರು ವಿಶ್ವ ವಿದ್ಯಾಲಯ ಮತ್ತು ಲಖನೌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಯಿತು. ದೇಶದ ಯುವಜನತೆಯೊಂದಿಗೆ ಇರುವುದು ಬಹಳ ಉತ್ಸಾಹ ಮತ್ತು ಚೈತನ್ಯ ತುಂಬುವಂಥದ್ದಾಗಿದೆ. ವಿಶ್ವ ವಿದ್ಯಾಲಯದ ಪರಿಸರ ಒಂದು ರೀತಿಯಲ್ಲಿ ಪುಟ್ಟ ಭಾರತವಿದ್ದಂತೆ. ಒಂದೆಡೆ ಈ ಆವರಣದಲ್ಲಿ ಭಾರತದ ವೈವಿಧ್ಯತೆಯ ದರ್ಶನವಾದರೆ ಮತ್ತೊಂದೆಡೆ ನವ ಭಾರತಕ್ಕೆ ದೊಡ್ಡ ದೊಡ್ಡ ಬದಲಾವಣೆಗಳ ಒಲವು ಕಾಣಿಸುತ್ತದೆ. ಕೊರೊನಾಗಿಂತ ಮೊದಲು ಯಾವುದೇ ಸಂಸ್ಥೆಯ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಭಾಗವಹಿಸಿದಾಗ, ಸುತ್ತಮುತ್ತಲ ಶಾಲೆಗಳ ಬಡ ಮಕ್ಕಳಿಗೆ ಆ ಸಮಾರಂಭಕ್ಕೆ ಆಹ್ವಾನಿಸಿ ಎಂದು ಆಗ್ರಹಿಸುತ್ತಿದ್ದೆ. ಆ ಮಕ್ಕಳು ಸಮಾರಂಭದಲ್ಲಿ ನನ್ನ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದರು. ಒಂದು ಪುಟ್ಟ ಮಗು ಆ ಭವ್ಯ ಸಮಾರಂಭದಲ್ಲಿ ಯುವಕರು ಡಾಕ್ಟರ್, ಇಂಜಿನೀಯರ್, ವಿಜ್ಞಾನಿಯಾಗುವುದನ್ನು ನೋಡಿದಾಗ, ಒಬ್ಬರು ಪದಕ ಸ್ವೀಕರಿಸುವುದನ್ನು ನೋಡಿದಾಗ ಅವನಲ್ಲಿ ಹೊಸ ಕನಸುಗಳು ಜಾಗೃತಗೊಳ್ಳುತ್ತವೆ! ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಕಲ್ಪದ ಪ್ರೇರಣೆ ಲಭಿಸುತ್ತದೆ.
ಸ್ನೇಹಿತರೆ, ಇದರ ಹೊರತಾಗಿಯೂ ಮತ್ತೊಂದು ವಿಷಯ ಆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಯಾರು, ಆ ಸಂಸ್ಥೆಗಳಿಗೆ ತನ್ನ ಹಳೆಯ ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂಪರ್ಕದ ವ್ಯವಸ್ಥೆಯನ್ನು ಅದು ಹೊಂದಿದೆಯೇ, ಅವರ ಹಳೆಯ ವಿದ್ಯಾರ್ಥಿಗಳ ಜಾಲ ಎಷ್ಟು ಸಕ್ರೀಯವಾಗಿದೆ ಎಂದು ತಿಳಿದುಕೊಳ್ಳುವಲ್ಲಿ ನನಗೆ ಸದಾ ಆಸಕ್ತಿಯಿರುತ್ತದೆ.
ನನ್ನಯುವ ಮಿತ್ರರೇ, ನೀವು ಎಲ್ಲಿಯವರೆಗೆ ಒಂದು ಸಂಸ್ಥೆಯಲ್ಲಿ ಓದುತ್ತೀರೋ ಅಲ್ಲಿಯವರೆಗೆ ನೀವು ಆ ಸಂಸ್ಥೆಯ ವಿದ್ಯಾರ್ಥಿಗಳಾಗಿರುತ್ತೀರಿ, ಆದರೆ, ಅಲ್ಲಿಯ ಅಲುಮಿನಿ ಆಗಿ ನೀವು ಜೀವನವಿಡಿ ಇರಬಹುದಾಗಿದೆ. ಶಾಲೆ ಕಾಲೇಜುಗಳಿಂದ ಹೊರಬಂದ ನಂತರ ಎರಡು ವಿಷಯಗಳು ಎಂದಿಗೂ ಮುಗಿಯುವದಿಲ್ಲ– ಮೊದಲನೆಯದು, ನಿಮ್ಮ ಶಿಕ್ಷಣದ ಪ್ರಭಾವ ಮತ್ತು ಎರಡನೆಯದು, ನಿಮ್ಮ ನಿಮ್ಮದೇ ಆದ ಸ್ಕೂಲು, ಕಾಲೇಜಿನೊಂದಿಗೆ ಸಂಬಂಧ. ನೀವು ಅಲುಮಿನಿ ಜೊತೆ ಯಾವಾಗ ಮಾತನಾಡುತ್ತೀರೋ, ಆಗ, ಸ್ಕೂಲು, ಕಾಲೇಜಿನ ದಿನಗಳ ತಮ್ಮ ನೆನಪುಗಳು, ಪುಸ್ತಕಗಳು, ಅಧ್ಯಯನಕ್ಕಿಂತ ಹೆಚ್ಚು ಕ್ಯಾಂಪಸ್ ನಲ್ಲಿ ಸಮಯ ಹೇಗೆ ಕಳೆದಿರಿ ಎಂಬುದು, ಗೆಳೆಯರೊಂದಿಗೆ ಕಳೆದ ಕ್ಷಣಗಳು ಅದರಲ್ಲಿ ಅಡಗಿರುತ್ತವೆ. ಇವೇ ನೆನಪುಗಳೊಂದಿಗೆ ತಮ್ಮ ಸಂಸ್ಥೆಗೆ ಏನಾದರೊಂದು ಮಾಡಬೇಕೆನ್ನುವ ಭಾವನೆ ಹುಟ್ಟುತ್ತದೆ. ಎಲ್ಲಿ ನಿಮ್ಮ ವ್ಯಕ್ತಿತ್ವದ ವಿಕಾಸವಾಗಿದೆಯೋ, ಆ ಸ್ಥಳವನ್ನು ಒಂದಿಷ್ಟು ವಿಕಾಸ ಮಾಡುವುದರಿಂದ ಸಿಗುವ ಸಂತಸ ಮತ್ತೆಲ್ಲಿಂದ ಸಿಕ್ಕೀತು? ನಾನು ಅಂತಹ ಕೆಲವು ಪ್ರಯತ್ನಗಳ ಬಗ್ಗೆ ಓದಿದ್ದೇನೆ, ಅಲ್ಲಿ ಪೂರ್ವ ವಿದ್ಯಾರ್ಥಿಗಳು ತಮ್ಮ ಹಳೆಯ ಸಂಸ್ಥೆಗಳಿಗೆ ತಾ ಮುಂದು–ನಾ ಮುಂದೆ ಎಂದು ಕೊಡುಗೆ ನೀಡಿದ್ದಾರೆ. ಇಂದು ಅಲುಮಿನಿ ಇದಕ್ಕೆ ಸಂಬಂಧಿಸಿದಂತೆ ಬಹಳ ಸಕ್ರಿಯವಾಗಿವೆ. ಐಐಟಿ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಿಗೆ ಕಾನ್ಫರನ್ಸ ಸೆಂಟರ್ಗಳು, ಮ್ಯಾನೇಜ್ಮೆಂಟ್ ಸೆಂಟರ್ಗಳು, ಇನ್ ಕ್ಯುಬೇಶನ್ ಸೆಂಟರ್ಗಳು ಹೀಗೆ ವಿವಿಧ ವ್ಯವಸ್ಥೆಗಳನ್ನು ಸ್ವತ: ಮಾಡಿಸಿ ಕೊಟ್ಟಿದ್ದಾರೆ. ಈ ಎಲ್ಲ ಪ್ರಯತ್ನಗಳು ವರ್ತಮಾನದ ವಿದ್ಯಾರ್ಥಿಗಳಿಗೆ ಲರ್ನಿಂಗ್ ಎಕ್ಸಪೀರಿಯನ್ಸನ್ನು ಹೆಚ್ಚಿಸುತ್ತವೆ. ಐಐಟಿ ದಿಲ್ಲಿಯು ಒಂದು ಎಂಡೋಮೆಂಟ್ ಫಂಡನ್ನು ಪ್ರಾರಂಭಿಸಿದೆ, ಇದೊಂದು ಉತ್ತಮ ವಿಚಾರವಾಗಿದೆ. ವಿಶ್ವದ ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ಈ ತರಹದ ಎಂಡೋಮೆಂಟ್ಗಳನ್ನು ಮಾಡುವ ಸಂಸ್ಕೃತಿಯಿದೆ, ಅವು ವಿದ್ಯಾರ್ಥಿಗಳಿಗೆ ಸಹಾಯ ಒದಗಿಸುತ್ತವೆ. ಭಾರತೀಯ ವಿಶ್ವವಿದ್ಯಾಲಯಗಳು ಈ ಸಂಸ್ಕೃತಿಯನ್ನು ತಮ್ಮ ಅಧೀನ ಸಂಸ್ಥೆಗಳೊಂದಿಗೆ ಬೆಳೆಸಿಕೊಳ್ಳಲು ಸಮರ್ಥವಾಗಿವೆಯೆಂದು ನನಗನಿಸುತ್ತದೆ.
ಯಾವಾಗ ಸ್ವಲ್ಪ ಮರಳಿಸಬೇಕೆಂಬ ಮಾತು ಬರುತ್ತದೆಯೋ ಯಾವುದೂ ಸಣ್ಣದು–ದೊಡ್ಡದೆಂದು ಬರುವುದಿಲ್ಲ. ಸಣ್ಣಕಿಂತ ಸಣ್ಣ ಸಹಾಯವೂ ಪ್ರಮುಖವಾಗುತ್ತದೆ. ಪ್ರತಿಯೊಂದು ಪ್ರಯತ್ನವೂ ಮಹತ್ವಪೂರ್ಣವಾದುದಾಗುತ್ತದೆ. ಸಾಮಾನ್ಯವಾಗಿ ಪೂರ್ವ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಿಗೆ ತಂತ್ರಜ್ಞಾನ ಉನ್ನತೀಕರಣಕ್ಕಾಗಿ, ಕಟ್ಟಡ ನಿರ್ಮಿಸಲು, ಪ್ರಶಸ್ತಿಗಳು ಮತ್ತು ವಿದ್ಯಾರ್ಥಿ ವೇತನಗಳನ್ನು ನೀಡಲು, ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಬಹಳ ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಸ್ಕೂಲುಗಳ ಹಳೇ ವಿದ್ಯಾರ್ಥಿಗಳ ಸಂಘಟನೆಗಳು ಮೆಂಟರ್ಶಿಪ್ ಕಾರ್ಯಕ್ರಮ ಆರಂಭಿಸಿವೆ. ಇದರಲ್ಲಿಅವರು ಬೇರೆ–ಬೇರೆ ಬ್ಯಾಚ್ಗಳ ವಿದ್ಯಾರ್ಥಿಗಳನ್ನು ಗೈಡ್ ಮಾಡುತ್ತಾರೆ, ಅದರೊಂದಿಗೆನೇ ಶಿಕ್ಷಣದ ನಿರೀಕ್ಷೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಹಲವಾರು ಸ್ಕೂಲುಗಳಲ್ಲಿ ಅದರಲ್ಲಿಯೂ ಬೋರ್ಡಿಂಗ್ ಸ್ಕೂಲುಗಳಲ್ಲಿ ಅಲುಮಿನಿ ಸಂಘಗಳು ಬಹಳ ಸ್ಟ್ರಾಂಗ್ ಆಗಿವೆ. ಅವು ಆಟೋಟ ಸ್ಪರ್ಧೆ ಮತ್ತು ಸಮುದಾಯ ಸೇವೆ ನಂತಹ ಚಟುವಟಿಕೆಗಳನ್ನು ಆಯೋಜನೆ ಮಾಡುತ್ತವೆ. ನಾನು ಪೂರ್ವ ವಿದ್ಯಾರ್ಥಿಗಳಿಗೆ ಆಗ್ರಹಿಸುವುದೇನಂದರೆ, ಯಾವ ಸಂಸ್ಥೆಯಲ್ಲಿ ಅವರು ಓದಿರುತ್ತಾರೋ ಅವುಗಳೊಂದಿಗೆ ತಮ್ಮ ಸಂಬಂಧ ಗಟ್ಟಿಗೊಳಿಸಿಕೊಳ್ಳಿರಿ. ಅದು ಸ್ಕೂಲೇ ಆಗಿರಲಿ, ಕಾಲೇಜೇ ಆಗಿರಲಿ ಇಲ್ಲವೆ ವಿಶ್ವವಿದ್ಯಾಲಯವೇ ಆಗಿರಲಿ. ಸಂಸ್ಥೆಗಳಿಗೂ ನನ್ನ ಆಗ್ರಹ ಏನೆಂದರೆ ಅಲುಮಿನಿ ಎಂಗೇಜ್ಮೆಂಟ್ ಮಾಡಲು ಹೊಸ ಹೊಸ ವಿಧಾನಗಳ ಮೂಲಕ ಕೆಲಸ ಮಾಡಿರಿ. ಕ್ರಿಯೇಟಿವ್ ಪ್ಲಾಟ್ಫಾರ್ಮಗಳನ್ನು ವಿಕಾಸಗೊಳಿಸಿ ಅದರಿಂದ ಅಲುಮಿನಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದಾಗಿದೆ. ಕೇವಲ ದೊಡ್ಡ ಕಾಲೇಜು, ವಿಶ್ವವಿದ್ಯಾಲಯಗಳಷ್ಟೇ ಅಲ್ಲ, ಹಳ್ಳಿಗಳ ಶಾಲೆಗಳು ಕೂಡ ಸಶಕ್ತ ಕ್ರೀಯಾಶೀಲ ಚಟುವಟಿಕೆಗಳಿಂದ ಕೂಡಿದ ಅಮೂಲ್ಯ ಜಾಲ ಹೊಂದಿದವುಗಳಾಗಿರಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ೫ ನೇ ಡಿಸೆಂಬರ್ರಂದು ಶ್ರೀ ಅರವಿಂದರ ಪುಣ್ಯತಿಥಿಯಿದೆ. ಶ್ರೀ ಅರವಿಂದರನ್ನು ನಾವು ಓದಿದಷ್ಟು ಆಳವಾದ ಜ್ಞಾನ ನಮಗೆ ಸಿಗುತ್ತಲೇ ಹೋಗುತ್ತದೆ. ನನ್ನ ಯುವ ಮಿತ್ರರು ಶ್ರೀ ಅರವಿಂದರನ್ನು ಎಷ್ಟು ತಿಳಿದುಕೊಳ್ಳುತ್ತಾರೋ ಅಷ್ಟೇ ತಮ್ಮನ್ನು ತಾವು ಅರಿತುಕೊಳ್ಳುತ್ತಾರೆ. ಸ್ವತ: ಸಮೃದ್ಧರಾಗುತ್ತಾರೆ. ಜೀವನದ ಯಾವ ಭಾವ, ಅವಸ್ಥೆಯಲ್ಲಿ ತಾವು ಇದ್ದೀರೋ, ಯಾವ ಸಂಕಲ್ಪವನ್ನು ಸಿದ್ಧಗೊಳಿಸಲು ತಾವು ಪ್ರಯತ್ನದಲ್ಲಿದ್ದೀರೋ ಅವುಗಳ ಮಧ್ಯೆ ತಾವು ಯಾವಾಗಲೂ ಶ್ರೀ ಅರವಿಂದರು ನಿಮಗೆ ಹೊಸ ಪ್ರೇರಣೆ ನೀಡುತ್ತಿದ್ದಾರೆಂದೇ ಭಾವಿಸುವಿರಿ, ಒಂದು ಹೊಸ ಮಾರ್ಗ ತೋರಿಸಿತ್ತಿದ್ದಾರೆಂದು ಅರಿಯುವಿರಿ. ಉದಾಹರಣೆಗೆ, ಇಂದು ನಾವು ಯಾವ ‘ವೋಕಲ್ ಫಾರ್ ವೋಕಲ್’ ಈ ಅಭಿಯಾನದೊಂದಿಗೆ ಮುಂದೆ ಸಾಗುತ್ತಿದ್ದೇವೆಯೋ ಅಲ್ಲಿ ಶ್ರೀ ಅರವಿಂದರ ಸ್ವದೇಶೀ ದರ್ಶನ ನಮಗೆ ಮಾರ್ಗ ತೋರಿಸುತ್ತದೆ. ಬಂಗಾಳಿಯಲ್ಲಿ ಒಂದು ಬಹಳ ಪ್ರಭಾವಿ ಕವಿತೆಯಿದೆ.
ಛುಯಿಶುತೊ ಪಾಯಮಾಂತೋ ಆಶೇ ತುಂಗ ಹೋತೆ
ದಿಯ ಶಲಾಯಿ ಕಾಠೀ, ತಾವು ಆಶೇ ಪೋತೆ
ಪ್ರೊ ದೀಪ್ತಿ ಜಾಲಿತೆಖೆತೆ, ಶುತೆ, ಜೆತೆ
ಕಿಛುತೆ ಲೋಕ ನಾಯ ಶಾಧೀನ.
ಅಂದರೆ, ನಮ್ಮಲ್ಲೀಗ ಸೂಜಿಯಂದ ಹಿಡಿದು ಬೆಂಕಿಪೊಟ್ಟಣದವರೆಗೂ ವಿದೇಶೀ ಹಡಗುಗಳಿಂದ ಬರುತ್ತವೆ. ಉಣ್ಣಲು, ಕುಡಿಯಲು, ಮಲಗಲು ಯಾವುದೇ ವಿಷಯ ತೆಗೆದುಕೊಳ್ಳಿ ಜನರು ಸ್ವತಂತ್ರರಾಗಿಲ್ಲ.
ಅವರು ಹೇಳುತ್ತಲೂ ಇದ್ದರು, ಸ್ವದೇಶಿಯ ಅರ್ಥ ಏನೆಂದರೆ, ನಮ್ಮ ಭಾರತೀಯ ಕೆಲಸಗಾರರಿಂದ, ಕುಶಲಕರ್ಮಿಗಳಿಂದ ನಿರ್ಮಿಸಿದ ವಸ್ತುಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಹಾಗಿದ್ದರೂ, ಶ್ರೀ ಅರವಿಂದರು ವಿದೇಶಿಗರಿಂದ ಕಲಿಯಲು ಎಂದೂ ವಿರೋಧಿಸಲಿಲ್ಲ. ಎಲ್ಲಿ ಹೊಸತನವಿದೆಯೋ ಅಲ್ಲಿಂದ ನಾವು ಕಲಿಯೋಣ, ನಮ್ಮ ದೇಶಕ್ಕೆ ಒಳಿತಾಗುವುದಾದರೆ ಅದಕ್ಕೆ ನಾವು ಸಹಕರಿಸೋಣ ಮತ್ತು ಪ್ರೋತ್ಸಾಹಿಸೋಣ. ಇದೇ ಆತ್ಮನಿರ್ಭರ ಭಾರತದಲ್ಲಿ ‘ವೋಕಲ್ ಫಾರ್ ಲೋಕಲ್’ ಮಂತ್ರದ ಭಾವನೆಯಾಗಿದೆ. ಮುಖ್ಯವಾಗಿ, ಸ್ವದೇಶಿ ತಮ್ಮದಾಗಿಸುವುದರೊಂದಿಗೆ ಅವರು ಏನನ್ನು ಹೇಳಿದರು ಅದನ್ನು ಇಂದು ದೇಶದ ಪ್ರತಿಯೊಬ್ಬ ನಾಗರಿಕನು ಓದಬೇಕಾಗಿದೆ. ಮಿತ್ರರೆ, ಇದೇ ರೀತಿ ಶಿಕ್ಷಣದ ಬಗ್ಗೆಯೂ ಶ್ರೀ ಅರವಿಂದರ ವಿಚಾರಗಳು ಬಹಳ ಸ್ಪಷ್ಟವಾಗಿದ್ದವು. ಅವರ ಪ್ರಕಾರ ಶಿಕ್ಷಣ, ಕೇವಲ ಪುಸ್ತಕದ ಜ್ಞಾನ, ಪದವಿ ಅಥವಾ ನೌಕರಿ ಪಡೆಯುವುದು ಮಾತ್ರ ಸೀಮಿತವಾಗಿರಲಿಲ್ಲ. ಅರವಿಂದರು ಹೇಳುತ್ತಿದ್ದುದೇನಂದರೆ ನಮ್ಮ ರಾಷ್ಟ್ರೀಯ ಶಿಕ್ಷಣವು, ನಮ್ಮ ಯುವ ಪೀಳಿಗೆಯ ಮನಸ್ಸಿಗೆ ಮತ್ತು ಮೆದುಳಿಗೆ ತರಬೇತಿ ನೀಡುವಂತಾಗಬೇಕು. ಅಂದರೆ, ಮೆದುಳಿನಿಂದ ವೈಜ್ಞಾನಿಕ ವಿಕಾಸ ಮತ್ತು ಮನಸ್ಸಿನಿಂದ ಭಾರತೀಯ ಭಾವನೆಗಳೂ ಇರಬೇಕು. ಆಗಲೇ ಒಬ್ಬ ಯುವಕ ದೇಶದ ಒಳ್ಳೆಯ ನಾಗರಿಕನಾಗಬಲ್ಲ. ಶ್ರೀ ಅರವಿಂದರು ರಾಷ್ಟ್ರೀಯ ಶಿಕ್ಷಣವನ್ನು ಕುರಿತು ಏನು ಹೇಳಿದ್ದಾರೆ, ಏನನ್ನು ಅಪೇಕ್ಷ್ಷಿಸಿದ್ದರೋ ಅದನ್ನು ಇಂದು ದೇಶವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪೂರ್ಣಗೊಳಿಸುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದವುಗಳೊಂದಿಗೆ ಹೊಸ ಆಯಾಮ ಸೇರಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಡಲಾದ ಕೃಷಿ ಸುಧಾರಣೆಗಳಲ್ಲಿ ರೈತರಿಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆದಿರಿಸಿದೆ. ಹಲವು ವರ್ಷಗಳಿಂದ ರೈತರ ಬೇಡಿಕೆಯೇನಿತ್ತು, ಅವರ ಬೇಡಿಕೆಗಳನ್ನು ಪೂರ್ಣಗೊಳಿಸಲು ಒಂದಲ್ಲ ಒಂದು ಹಂತದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆಶ್ವಾಸನೆಯನ್ನು ನೀಡಿದ್ದವು, ಆ ಬೇಡಿಕೆಗಳು ಈಡೇರಿವೆ. ತುಂಬಾ ವಿಚಾರ–ವಿಮರ್ಶೆಯ ನಂತರ ಭಾರತದ ಸಂಸತ್ತು ಕೃಷಿ ಸುಧಾರಣೆಗಳಿಗೆ ಒಂದು ಕಾನೂನಿನ ರೂಪ ನೀಡಿದೆ. ಈ ಸುಧಾರಣೆಗಳಿಂದ ಕೇವಲ ರೈತರ ಹಲವು ಬಂಧನಗಳಿಂದ ಮುಕ್ತವಾಗುವುದಲ್ಲದೆ ಅವರಿಗೆ ಹಲವು ಅಧಿಕಾರಗಳು ಲಭಿಸಿವೆ, ಹೊಸ ಅವಕಾಶಗಳು ಲಭಿಸಿವೆ. ಈ ಅಧಿಕಾರಗಳು ಬಹಳ ಕಡಿಮೆ ಸಮಯದಲ್ಲಿ ರೈತರ ಸಂಕಟಗಳನ್ನು ಕಡಿಮೆಗೊಳಿಸಲು ಪ್ರಾರಂಭಿಸಿವೆ. ಮಹಾರಾಷ್ಟ್ರದ ಧುಳೆ ಜಿಲ್ಲೆಯ ರೈತ ಜಿತೆಂದ್ರ ಭೋಯಿ ಅವರು ಹೊಸ ಕೃಷಿ ಕಾನೂನುಗಳನ್ನು ಹೇಗೆ ಉಪಯೋಗಿಸಿಕೊಂಡರು ಎಂಬುದನ್ನು ನೀವೂ ತಿಳಿದುಕೊಳ್ಳಬೇಕು. ಜಿತೇಂದ್ರ ಭೋಯಿ ಅವರು ಮೆಕ್ಕೆಜೋಳ ಬೆಳೆದಿದ್ದರು. ಅದಕ್ಕೆ ಒಳ್ಳೆ ಬೆಲೆ ಸಿಗಲು ವ್ಯಾಪಾರಿಗಳಿಗೆ ಮಾರಲು ಸಿದ್ಧರಾಗಿದ್ದರು. ಬೆಳೆಯ ಒಟ್ಟು ಬೆಲೆ ಸುಮಾರು ಮೂರು ಲಕ್ಷ ಮೂವತ್ತೆರಡು ಸಾವಿರ ಎಂದು ನಿಗದಿಪಡಿಸಲಾಯಿತು. ಜಿತೇಂದ್ರ ಭೋಯಿ ಅವರಿಗೆ ಇದಕ್ಕೆ ಮುಂಗಡವಾಗಿ ಇಪ್ಪತ್ತೈದು ಸಾವಿರ ರೂಪಾಯಿ ನೀಡಲಾಗಿತ್ತು. ಉಳಿದ ಹಣವನ್ನು ಮುಂದಿನ ಹದಿನೈದು ದಿನಗಳ ಒಳಗೆ ನೀಡಲು ಮಾತಾಗಿತ್ತು. ಮುಂದೆ ವಿಪರೀತ ಪರಿಸ್ಥಿತಿ ನಿರ್ಮಾಣವಾದ ಕಾರಣ ಅವರಿಗೆ ಬಾಕಿ ಮೊತ್ತ ಬರಲಿಲ್ಲ. ರೈತರಿಂದ ಬೆಳೆದ ಬೆಳೆಯನ್ನು ಖರೀದಿಸುವುದು ತಿಂಗಳುಗಟ್ಟಲೇ ಅವರಿಗೆ ಹಣ ಕೊಡದೇ ಇರುವುದು. ಹೀಗೆ ಸಾಮಾನ್ಯವಾಗಿ ಮೆಕ್ಕೆಜೋಳ ಬೆಳೆದ ರೈತರಿಗೆಲ್ಲ ಮಾಡುವ ಪರಂಪರೆ ಬೆಳೆದು ಬಂದಿತ್ತು. ಅದೇ ರೀತಿ ಜಿತೇಂದ್ರ ಅವರ ಪೇಮೆಂಟ್ ನಾಲ್ಕು ತಿಂಗಳವರೆಗೆ ಆಗಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್ನಲ್ಲಿ ಜಾರಿಯಾದ ಕೃಷಿ ಕಾನೂನು ಅವರಿಗೆ ಸಹಾಯಕ್ಕೆ ಬಂದಿತು. ಈ ಕಾನೂನಿನ ಪ್ರಕಾರ ಬೆಳೆಯನ್ನು ಖರೀದಿಸಿದವರು ಖರೀದಿ ಮಾಡಿದ ಮೂರು ದಿನಗಳಲ್ಲಿಯೇ ಎಲ್ಲ ಪೇಮೆಂಟ್ ಮಾಡಬೇಕು. ಒಂದು ವೇಳೆ ಪೇಮೆಂಟ್ ಆಗದೇ ಹೋದರೆ ರೈತನು ದೂರು ನೀಡಬಹುದಾಗಿದೆ. ಕಾನೂನಿನಲ್ಲಿ ಇನ್ನೊಂದು ಮಹತ್ವಪೂರ್ಣ ಮಾತಿದೆ, ಈ ಕಾನೂನಿನ ಅನುಸಾರ ಆ ಕ್ಷೇತ್ರದ ಎಸ್ಡಿಎಂ ನವರು ದೂರು ದಾಖಲಾದ ಒಂದು ತಿಂಗಳೊಳಗಾಗಿ ಅದನ್ನು ಬಗೆಹರಿಸಬೇಕೆಂಬ ನಿಯಮವಿದೆ. ಈಗ, ಇಂತಹ ಒಂದು ಕಾನೂನು ನಮ್ಮ ರೈತ ಸಹೋದರರಿಗೆ ದೊರಕಿರಬೇಕಾದರೆ ಅವರ ಸಮಸ್ಯೆಗೆ ಪರಿಹಾರ ದೊರಕಲೇಬೇಕು. ಅವರು ದೂರು ನೀಡಿದಲ್ಲಿ ಅದರ ಫಲವಾಗಿ ಕೆಲವೇ ದಿನಗಳಲ್ಲಿ ಅವರ ಬಾಕಿ ಮೊತ್ತವನ್ನು ನೀಡಲಾಯಿತು. ಅಂದರೆ ಇಲ್ಲಿ ಕಾನೂನಿನ ಸರಿಯಾದ ಹಾಗೂ ಪೂರ್ತಿ ತಿಳುವಳಿಕೆ ಇಲ್ಲಿ ಜಿತೇಂದ್ರ ಅವರ ಶಕ್ತಿಯಾಯಿತು. ಕ್ಷೇತ್ರ ಯಾವುದೇ ಆಗಲಿ ಎಲ್ಲ ಬಗೆಯ ಭ್ರಮೆ ಮತ್ತು ಸುಳ್ಳು ಸುದ್ದಿಗಳಿಂದ ದೂರವಿದ್ದು, ಸರಿಯಾದ ತಿಳುವಳಿಕೆ ಪಡೆದು ಮುನ್ನಡೆದರೆ ಪ್ರತಿಯೊಬ್ಬ ವ್ಯಕ್ತಿಗೆ ಬಹಳ ಸಹಾಯಕವಾಗುತ್ತದೆ. ರೈತರಲ್ಲಿ ತಿಳುವಳಿಕೆ ಮೂಡಿಸಲು ಇಂತಹುದೇ ಒಂದು ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜಸ್ಥಾನದ ಬಾರಾಂ ಜಿಲ್ಲೆಯಲ್ಲಿ ಮೊಹಮ್ಮದ ಅಸ್ಲಮ ಅವರಿಂದ ನಡೆಯುತ್ತಿದೆ. ಇವರು ಒಂದು ರೈತರ ಉತ್ಪಾದಕ ಸಂಘದ ಸಿಈಓ ಕೂಡಾ ಆಗಿದ್ದಾರೆ. ಹೌದು, ತಾವು ಸರಿಯಾಗಿ ಕೇಳಿಸಿಕೊಂಡಿರಿ, ರೈತ ಉತ್ಪಾದನಾ ಸಂಘದ ಸಿಈಓ. ದೊಡ್ಡ ದೊಡ್ಡ ಕಂಪನಿಗಳ ಸಿಈಓ ಗಳಿಗೆ ಇದನ್ನು ಕೇಳಿ ಖುಷಿಯಾಗಬಹುದು, ಇನ್ನು ಮುಂದೆ ದೇಶದ ದೂರದೂರುಗಳಲ್ಲಿ ವಾಸಿಸುವ ಕೆಲಸ ಮಾಡುವ ರೈತ ಸಂಘಗಳಲ್ಲಿಯೂ ಕೂಡಾ ಸಿಈಓ ಆಗುತ್ತಿದ್ದಾರೆ ಎಂಬುದನ್ನು ಕೇಳಿ ಸಂತೋಷವಾಗುತ್ತದೆ. ಅಲ್ಲದೆ, ಮಿತ್ರರೇ, ಮೊಹಮ್ಮದ ಅಸ್ಲಮ ಅವರು ತಮ್ಮ ಕ್ಷೇತ್ರದ ಹಲವವಾರು ರೈತರನ್ನು ಸೇರಿಸಿಕೊಂಡು ಒಂದು ವಾಟ್ಸಪ್ ಗ್ರುಪ್ ಮಾಡಿಕೊಂಡಿದ್ದಾರೆ. ಈ ಗ್ರುಪ್ನಲ್ಲಿ ಅವರು ಪ್ರತಿ ದಿನ ಸಮೀಪದ ಯಾವ ಯಾವ ಮಾರುಕಟ್ಟೆಗಳಲ್ಲಿ ಬೆಳೆಗಳ ದರದ ಬಗ್ಗೆ, ಯಾವ ದರದಲ್ಲಿ ಸಾಮಾನುಗಳನ್ನು ಖರೀದಿಸುತ್ತಿದ್ದಾರೆ ಎಂಬ ಬಗ್ಗೆ ತಿಳುವಳಿಕೆಯನ್ನು ರೈತರಿಗೆ ನೀಡುತ್ತಾರೆ. ಸ್ವತ: ಎಫ್ಪಿಓ ಅವರೂ ರೈತರ ಬೆಳೆ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಆದ್ದರಿಂದ ಅವರ ಪ್ರಯತ್ನದ ಫಲವಾಗಿ ಇಂದು ರೈತರಿಗೆ ನಿರ್ಣಯ ತೆಗೆದುಕೊಳ್ಳಲು ಸಹಾಯವಾಗುತ್ತಿದೆ.
ಸ್ನೇಹಿತರೆ, ಜಾಗರೂಕತೆಯಿದ್ದಲ್ಲಿ ಜೀವಂತಿಕೆಯಿದೆ. ಶ್ರೀ ವಿರೇಂದ್ರ ಯಾದವ್ ಅವರು ತಮ್ಮ ಜಾಗರೂಕತೆಯಿಂದ ಸಾವಿರಾರು ಜನರ ಜೀವನದ ಮೇಲೆ ಪ್ರಭಾವ ಬೀರಿದ ಒಬ್ಬ ಕೃಷಿ ಉದ್ಯಮಿ. ವಿರೇಂದ್ರ ಯಾದವ್ ಅವರು ಹಿಂದೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. 2 ವರ್ಷಗಳ ಹಿಂದೆ ಅವರು ಭಾರತಕ್ಕೆ ಬಂದಿದ್ದಾರೆ ಮತ್ತು ಈಗ ಹರಿಯಾಣದ ಕೈಥಲ್ ನಲ್ಲಿ ಇದ್ದಾರೆ. ಇತರರಂತೆ ಕೃಷಿಯಲ್ಲಿ ಕೃಷಿ ತ್ಯಾಜ್ಯ ಅವರಿಗೆ ಒಂದು ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆ ಪರಿಹಾರ ಹುಡುಕುವ ಕೆಲಸ ವ್ಯಾಪಕವಾಗಿ ನಡೆದಿದೆ. ಆದರೆ, ಇಂದು ಮನದ ಮಾತಿನಲ್ಲಿ ನಾನು ವಿರೇಂದ್ರ ಜಿ ಅವರ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸುತ್ತಿದ್ದೇನೆ ಏಕೆಂದರೆ ಅವರ ಪ್ರಯತ್ನ ವಿಭಿನ್ನವಾಗಿದೆ. ಒಂದು ಹೊಸ ಮಾರ್ಗವನ್ನು ತೋರಿಸುತ್ತಿದೆ. ತ್ಯಾಜ್ಯ ಸಮಸ್ಯೆಯ ಪರಿಹಾರಕ್ಕೆ ವಿರೇಂದ್ರ ಅವರು ಒಣ ಹುಲ್ಲಿನ ಮೂಟೆಯನ್ನು ಕಟ್ಟುವಂಥ ಸ್ಟ್ರಾ ಬೇಲರ್ ಯಂತ್ರವನ್ನು ಖರೀದಿಸಿದರು. ಇದಕ್ಕಾಗಿ ಅವರಿಗೆ ಕೃಷಿ ಇಲಾಖೆಯಿಂದ ಆರ್ಥಿಕ ಸಹಾಯವೂ ಲಭಿಸಿತು. ಈ ಯಂತ್ರದಿಂದ ಅವರು ಒಣ ಹುಲ್ಲಿನ ಬ್ಲಾಕ್ ಗಳನ್ನು ತಯಾರಿಸಲಾರಂಭಿಸಿದರು. ಬ್ಲಾಕ್ ಗಳನ್ನು ತಯಾರಿಸಿದ ನಂತರ ಆ ತ್ಯಾಜ್ಯವನ್ನು ಪೇಪರ್ ಮಿಲ್ ಗಳು ಮತ್ತು ಆಗ್ರೊ ಎನರ್ಜಿ ಘಟಕಗಳಿಗೆ ಮಾರಾಟ ಮಾಡಿದರು. ವಿರೇಂದ್ರ ಅವರು ತ್ಯಾಜ್ಯದಿಂದ ಕೇವಲ 2 ವರ್ಷಗಳಲ್ಲಿ ಒಂದೂವರೆ ಕೋಟಿಗಿಂತ ಹೆಚ್ಚು ವ್ಯಾಪಾರ ಮಾಡಿದ್ದಾರೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಅದರಲ್ಲೂ ಸುಮಾರು 50 ಲಕ್ಷದಷ್ಟು ಲಾಭಗಳಿಸಿದ್ದಾರೆ. ಯಾರ ಹೊಲಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೋ ಆ ರೈತರಿಗೂ ಇದರ ಲಾಭವಾಗುತ್ತಿದೆ. ನಾವು ಕಸದಿಂದ ರಸ ಎಂಬುದನ್ನು ಬಹಳ ಕೇಳಿದ್ದೇವೆ. ಆದರೆ ತ್ಯಾಜ್ಯಕ್ಕೆ ಪರಿಹಾರ ಒದಗಿಸಿ ಹಣ ಮತ್ತು ಪುಣ್ಯ ಎರಡನ್ನೂ ಗಳಿಸುವ ಒಂದು ಉತ್ತಮ ಉದಾಹರಣೆ ಇದಾಗಿದೆ. ನನ್ನ ಯುವಜನತೆಯೇ, ವಿಶೇಷವಾಗಿ ಕೃಷಿ ಅಧ್ಯಯನ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ – ನಿಮ್ಮ ಸುತ್ತಮುತ್ತ ಗ್ರಾಮಗಳಲ್ಲಿರುವ ರೈತರಿಗೆ ಆಧುನಿಕ ಕೃಷಿ ಬಗ್ಗೆ ಮತ್ತು ಪ್ರಸಕ್ತ ಕೃಷಿ ಸುಧಾರಣೆ ಬಗ್ಗೆ ಖಂಡಿತ ತಿಳಿಸಿ ಎಂದು ಆಗ್ರಹಿಸುತ್ತೇನೆ. ಹೀಗೆ ಮಾಡುವ ಮೂಲಕ ನೀವು ದೇಶದಲ್ಲಾಗುತ್ತಿರುವ ಬಹುದೊಡ್ಡ ಬದಲಾವಣೆಯ ಭಾಗವಾಗುತ್ತೀರಿ.
ನನ್ನ ಪ್ರಿಯ ದೇಶಬಾಂಧವರೆ,
‘ಮನದ ಮಾತು’ ನಲ್ಲಿ ನಾವು ಬೇರೆ ಬೇರೆ, ವಿಭಿನ್ನ ವಿಷಯಗಳ ಕುರಿತು ನಾವು ಚರ್ಚಿಸುತ್ತೇವೆ. ಆದರೆ ನಾವು ಸಂತೋಷದಿಂದ ಸ್ಮರಿಸಿಕೊಳ್ಳಲು ಬಯಸದ ಇಂಥ ಒಂದು ವಿಷಯಕ್ಕೆ ಒಂದು ವರ್ಷ ತುಂಬುತ್ತಿದೆ. ವಿಶ್ವಕ್ಕೆ ಕೊರೊನಾದ ಮೊದಲ ಸೋಂಕಿನ ಪ್ರಕರಣದ ಬಗ್ಗೆ ತಿಳಿದು ಸುಮಾರು ಒಂದು ವರ್ಷವಾಗುತ್ತಿದೆ. ಅಂದಿನಿಂದ ಇಲ್ಲಿವರೆಗೆ ಸಂಪೂರ್ಣ ವಿಶ್ವ ಅನೇಕ ಏರಿಳಿತಗಳನ್ನು ಕಂಡಿದೆ. ಲಾಕ್ ಡೌನ್ ನಿಂದ ಹೊರಬಂದು ಈಗ ಲಸಿಕೆ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಕೊರೊನಾ ಕುರಿತು ಯಾವುದೇ ಬಗೆಯ ನಿರ್ಲಕ್ಷ ಈಗಲೂ ಅಪಾಯಕಾರಿ. ಕೊರೊನಾ ವಿರುದ್ಧದ ನಮ್ಮ ಸಮರವನ್ನು ಈಗಲೂ ಧೃಡವಾಗಿ ಮುಂದುವರಿಸಬೇಕಿದೆ.
ಸ್ನೇಹಿತರೆ, ಕೆಲ ದಿನಗಳ ನಂತರ ಡಿಸೆಂಬರ್ 6 ಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯಿದೆ. ಅಂದು ಬಾಬಾ ಸಾಹೇಬ್ ಅವರಿಗೆ ಶೃದ್ಧಾಂಜಲಿ ಅರ್ಪಿಸುವುದುರ ಜೊತೆಗೆ, ದೇಶದ ಬಗೆಗಿನ ನಮ್ಮ ಸಂಕಲ್ಪಗಳನ್ನು ಹಾಗೂ ಸಂವಿಧಾನ ಒಬ್ಬ ನಾಗರಿಕನಾಗಿ ನಮಗೆ ನೀಡಿದ ಕರ್ತವ್ಯಗಳನ್ನು ನಿಭಾಯಿಸುವುದನ್ನು ಪುನರುಚ್ಛರಿಸಬೇಕಿದೆ. ದೇಶದ ಹೆಚ್ಚಿನ ಭಾಗದಲ್ಲಿ ಚಳಿ ಹೆಚ್ಚುತ್ತಿದೆ. ಬಹಳಷ್ಟು ಸ್ಥಳಗಳಲ್ಲಿ ಹಿಮ ಬೀಳುತ್ತಿದೆ. ಈ ಋತುವಿನಲ್ಲಿ ನಮಗೆ ಕುಟುಂಬದ ಮಕ್ಕಳು ಮತ್ತು ಹಿರಿಯರ, ರೋಗಿಗಳ ಬಗ್ಗೆ ವಿಶೇಷ ಗಮನಹರಿಸಬೇಕಿದೆ. ಸ್ವತಃ ಕೂಡಾ ಎಚ್ಚರವಹಿಸಬೇಕು. ಜನರು ನೆರೆಹೊರೆಯಲ್ಲಿ ಅವಶ್ಯಕತೆಯಿರುವವರ ಬಗ್ಗೆಯೂ ಚಿಂತಿಸುವುದನ್ನು ಕಂಡು, ಬೆಚ್ಚನೆಯ ಬಟ್ಟೆಗಳನ್ನು ನೀಡಿ ಅವರಿಗೆ ಸಹಾಯ ಮಾಡುವುದನ್ನು ಕಂಡು ನನಗೆ ಸಂತೋಷವಾಗುತ್ತದೆ. ನಿಸ್ಸಹಾಯಕ ಜಾನುವರುಗಳಿಗೂ ಚಳಿ ಬಹಳ ಕಷ್ಟಗಳನ್ನು ತಂದೊಡ್ಡುತ್ತದೆ. ಅವುಗಳ ಸಹಾಯಕ್ಕೂ ಬಹಳಷ್ಟು ಜನ ಮುಂದೆ ಬರುತ್ತಾರೆ. ನಮ್ಮ ಯುವಜನತೆ ಇಂಥ ಕೆಲಸಗಳಲ್ಲಿ ಬಹಳ ಹುರುಪಿನಿಂದ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಸ್ನೇಹಿತರೆ ಮುಂದಿನ ‘ಮನದ ಮಾತಿನಲ್ಲಿ’ ನಾವು ಭೇಟಿಯಾದಾಗ 2020 ರ ಈ ವರ್ಷ ಮುಕ್ತಾಯದ ಹಂತದಲ್ಲಿರುತ್ತದೆ. ಹೊಸ ಆಶಯಗಳು, ಹೊಸ ವಿಶ್ವಾಸದೊಂದಿಗೆ ನಾವು ಮುಂದೆ ಸಾಗೋಣ. ಏನೇ ಸಲಹೆಗಳಿದ್ದರೆ, ಹೊಸ ವಿಚಾರಗಳಿದ್ದರೆ ಖಂಡಿತ ನನಗೆ ತಲುಪಿಸುತ್ತಲೇ ಇರಿ. ನಿಮ್ಮೆಲ್ಲರಿಗೂ ಅನಂತ ಶುಭಹಾರೈಕೆಗಳು. ನೀವೆಲ್ಲರೂ ಆರೋಗ್ಯದಿಂದಿರಿ, ದೇಶಕ್ಕಾಗಿ ಸೇವೆ ಸಲ್ಲಿಸಿ. ಅನಂತ ನಂತ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ವಿಜಯದಶಮಿ ಅಂದರೆ ದಸರಾ ಹಬ್ಬ. ಈ ಪವಿತ್ರ ದಿನದಂದು ನಿಮ್ಮೆಲ್ಲರಿಗೂ ಅನಂತ ಶುಭಾಷಯಗಳು. ದಸರಾ ಹಬ್ಬಅಸತ್ಯದ ಮೇಲೆ ಸತ್ಯದ ಜಯದ ಹಬ್ಬವಾಗಿದೆ. ಆದರೆ ಇದರ ಜೊತೆಗೆ ಒಂದರ್ಥದಲ್ಲಿಸಂಕಷ್ಟ ಕಾಲದಲ್ಲಿ ಧೈರ್ಯ ಜಯಿಸಿದ ಹಬ್ಬವೂ ಆಗಿದೆ. ನೀವೆಲ್ಲರೂ ಬಹಳ ಸಂಯಮದಿಂದ ಜೀವನ ನಡೆಸುತ್ತಿದ್ದೀರಿ. ಇತಿಮಿತಿಯಲ್ಲಿದ್ದುಕೊಂಡು ಹಬ್ಬದಾಚರಣೆ ಮಾಡುತ್ತಿದ್ದೀರಿ, ನಮ್ಮ ಹೋರಾಟದಲ್ಲಿ ಜಯ ಸುನಿಶ್ಚಿತವಾಗಿದೆ. ಹಿಂದೆ ದುರ್ಗಾ ಪೆಂಡಾಲ್ ಗಳಲ್ಲಿ ದೇವಿಯ ದರ್ಶನಕ್ಕೆ ಎಷ್ಟೊಂದು ಗುಂಪು ಸೇರುತ್ತಿತ್ತು ಎಂದರೆ ಒಂಥರಾ ಜಾತ್ರೆಯ ವಾತಾವರಣದಂತಿರುತ್ತಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಹಿಂದೆ ದಸರಾ ಸಂದರ್ಭದಲ್ಲಿ ದೊಡ್ಡ ದೊಡ್ಡ ಜಾತ್ರೆಗಳಾಗುತ್ತಿದ್ದವು. ಆದರೆ ಈ ಬಾರಿ ಅದರ ಸ್ವರೂಪ ಬದಲಾಗಿದೆ. ರಾಮಲೀಲಾ ಹಬ್ಬವೂ ಹಾಗೆ. ಅದು ಬಹಳ ಆಕರ್ಷಕವಾಗಿರುತ್ತಿತ್ತು. ಆದರೆ ಅದರ ಮೇಲೆ ಒಂದಷ್ಟು ನಿರ್ಭಂಧನೆಗಳನ್ನು ಹೇರಲಾಗಿದೆ. ಹಿಂದೆ ನವರಾತ್ರಿಯಲ್ಲಿ ಗುಜರಾತ್ ನ ಗರಭಾ ಸದ್ದು ಎಲ್ಲೆಡೆ ರಿಂಗಣಿಸುತ್ತಿತ್ತು. ಈ ಬಾರಿ ದೊಡ್ಡ ದೊಡ್ಡ ಆಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಂದೆಯೂ ಇನ್ನು ಹಲವಾರು ಹಬ್ಬಗಳು ಬರಲಿವೆ. ಇನ್ನು ಈದ್ ಇದೆ, ಶರತ್ ಪೌರ್ಣಮಿ ಇದೆ, ವಾಲ್ಮೀಕಿ ಜಯಂತಿಯಿದೆ, ನಂತರ ಧನ್ ತೇರಸ್ ಇದೆ. ದೀಪಾವಳಿ, ಭಾವನ ಬಿದಿಗೆ, ಛಟಿ ಮಾತಾ ಪೂಜೆ ಇದೆ. ಗುರುನಾನಕ್ ದೇವ್ ರ ಜಯಂತಿಯಿದೆ – ಕೊರೊನಾದ ಈ ಸಂಕಷ್ಟ ಸ್ಥಿತಿಯಲ್ಲಿ ನಾವು ಸಂಮಯದಿಂದಿರಬೇಕು. ಮಿತಿಗಳಲ್ಲೇ ಇರಬೇಕು.
ಸ್ನೇಹಿತರೇ, ನಾವು ಹಬ್ಬಗಳ ಕುರಿತು ಮಾತನಾಡುವಾಗ, ಸಿದ್ಧತೆ ಮಾಡಿಕೊಳ್ಳುವಾಗ ಎಲ್ಲಕ್ಕಿಂತ ಮೊದಲು ಮಾರುಕಟ್ಟೆಗೆ ಯಾವಾಗ ಹೋಗುವುದು, ಏನೇನು ಖರೀದಿಸಬೇಕು ಎಂಬುದೇ ಆಲೋಚನೆಯಾಗಿರುತ್ತದೆ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಈ ಬಾರಿ ಹಬ್ಬದಂದು ಹೊಸತೇನು ಸಿಗತ್ತೆ? ಎಂಬ ವಿಶಿಷ್ಟ ಉತ್ಸಾಹವಿರುತ್ತದೆ. ಹಬ್ಬಗಳ ಈ ಉತ್ಸಾಹ ಮತ್ತು ಮಾರುಕಟ್ಟೆಯ ಈ ಆಕರ್ಷಣೆ ಒಂದಕ್ಕೊಂದು ಮಿಳಿತವಾಗಿವೆ. ಆದರೆ ಈ ಬಾರಿ ನೀವು ಖರೀದಿಗೆ ಹೋದಾಗ, ‘ವೋಕಲ್ ಫಾರ್ ಲೋಕಲ್’ ಎಂಬ ಸಂಕಲ್ಪ ಖಂಡಿತ ನೆನಪಿರಲಿ. ಮಾರುಕಟ್ಟೆಯಿಂದ ವಸ್ತುಗಳನ್ನು ಖರೀದಿಸುವಾಗ ನಮ್ಮ ಸ್ಥಳೀಯ ಉತ್ಪನ್ನಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು.
ಸ್ನೇಹಿತರೇ, ಹಬ್ಬಗಳ ಈ ಹರ್ಷೋಲ್ಲಾಸದ ಮಧ್ಯೆ ಲಾಕ್ ಡೌನ್ ಸಮಯವನ್ನೂ ನೆನಪಿಸಿಕೊಳ್ಳಬೇಕು. ಲಾಕ್ ಡೌನ್ ನಲ್ಲಿ ಸ್ವಚ್ಛತಾ ಕರ್ಮಚಾರಿಗಳ ಬಗ್ಗೆ, ಮನೆಗೆಲಸ ಮಾಡುವ ಸೋದರ ಸೋದರಿಯರು, ಸ್ಥಳೀಯ ತರಕಾರಿ ಮಾರಾಟಗಾರರು, ಹಾಲು ಮಾರುವವರು, ಸುರಕ್ಷತಾ ಸಿಬ್ಬಂದಿ ಹೀಗೆ ಸಮಾಜದ ಈ ಸ್ನೇಹಿತರನ್ನು ಮತ್ತಷ್ಟು ಹತ್ತಿರದಿಂದ ಅರಿತಿದ್ದೇವೆ. ಇವರಿಲ್ಲದೆ ನಮ್ಮ ಜೀವನ ಬಹಳ ಕಷ್ಟದಾಯಕವಾಗುತ್ತಿತ್ತು. ನಮ್ಮ ಜೀವನದಲ್ಲಿ ಇವರೆಲ್ಲರ ಪಾತ್ರ ಏನು ಎಂಬುದನ್ನು ನಾವೀಗ ಅಕ್ಷರಶಃ ಅರಿತಿದ್ದೇವೆ. ಕಷ್ಟಕಾಲದಲ್ಲಿ ಇವರು ನಮ್ಮೆಲ್ಲರ ಜೊತೆಗಿದ್ದರು. ಈಗ ನಮ್ಮ ಹಬ್ಬಗಳಲ್ಲೂ, ಸಂತೋಷದಲ್ಲೂ ಇವರನ್ನು ಭಾಗಿಯಾಗಿಸಿಕೊಳ್ಳೋಣ. ಸಾಧ್ಯವಾದ ರೀತಿಯಲ್ಲಿ ಇವರನ್ನು ನಿಮ್ಮ ಸಂಭ್ರಮದಲ್ಲಿ ಭಾಗಿಯಾಗಿಸಿಕೊಳ್ಳಿ, ಕುಟುಂಬದ ಸದಸ್ಯರಂತೆ ಪರಿಗಣಿಸಿ ಎಂಬುದು ನನ್ನ ಆಗ್ರಹ. ಆಗ ನೋಡಿ ನಿಮ್ಮ ಸಂಭ್ರಮ ಎಷ್ಟು ವೃದ್ಧಿಸುತ್ತದೆ ಎಂದು.
ಸ್ನೇಹಿತರೇ, ಈ ಹಬ್ಬಗಳ ಸಂದರ್ಭದಲ್ಲೂ ಗಡಿಗಳಲ್ಲಿ ಅಚಲವಾಗಿ ನಿಂತಿರುವ ಭಾರತ ಮಾತೆಯ ಸೇವೆ ಮತ್ತು ಸುರಕ್ಷತೆಯಲ್ಲಿ ತೊಡಗಿರುವ, ನಮ್ಮ ವೀರ ಸೈನಿಕರನ್ನು ನಾವು ನೆನಪಿನಲ್ಲಿಡಬೇಕು. ಅವರನ್ನು ನೆನೆಸಿಕೊಂಡೇ ಹಬ್ಬಗಳನ್ನು ಆಚರಿಸಬೇಕು. ಭಾರತ ಮಾತೆಯ ವೀರ ಸುಪುತ್ರರು ಮತ್ತು ಸುಪುತ್ರಿಯರ ಸನ್ಮಾನದಲ್ಲಿ ಮನೆಯಲ್ಲಿ ಒಂದು ದೀಪವನ್ನು ಬೆಳಗಬೇಕು. ನಮ್ಮ ವೀರ ಯೋಧರಿಗೂ ನಾನು ಹೇಳಬಯಸುವುದೇನೆಂದರೆ– ನೀವು ಗಡಿಯಲ್ಲಿರಬಹುದು ಆದರೆ ಸಂಪೂರ್ಣ ರಾಷ್ಟ್ರ ನಿಮ್ಮೊಂದಿಗಿದೆ. ನಿಮಗಾಗಿ ಪ್ರಾರ್ಥಿಸುತ್ತಿದೆ/ಶುಭಹಾರೈಸುತ್ತಿದೆ. ಯಾರ ಸುಪುತ್ರರು ಮತ್ತು ಸುಪುತ್ರಿಯರು ಇಂದು ಗಡಿಗಳಲ್ಲಿ ಕರ್ತವ್ಯನಿರತರಾಗಿದ್ದಾರೋ ಆ ಕುಟುಂಬಗಳ ತ್ಯಾಗಕ್ಕೂ ನಾನು ವಂದಿಸುತ್ತೇನೆ. ದೇಶದ ಒಂದಲ್ಲಾ ಒಂದು ಜವಾಬ್ದಾರಿ ನಿಭಾಯಿಸಲು ಯಾರು ತಮ್ಮ ಮನೆಯಲ್ಲಿರದೇ ಕುಟುಂಬದಿಂದ ದೂರವಿದ್ದಾರೋ ಅಂಥ ಪ್ರತಿ ವ್ಯಕ್ತಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ಇಂದು ನಾವು ಸ್ಥಳೀಯ ವಸ್ತುಗಳಿಗಾಗಿ ಧ್ವನಿ ಎತ್ತುತ್ತಿರುವಾಗ ವಿಶ್ವವೂ ನಮ್ಮ ಸ್ಥಳೀಯ ವಸ್ತುಗಳಿಗೆ ಅಭಿಮಾನ ಬೆಳೆಸಿಕೊಳ್ಳುತ್ತಿದೆ. ನಮ್ಮ ಬಹಳಷ್ಟು ಸ್ಥಳೀಯ ವಸ್ತುಗಳಿಗೆ ಜಾಗತಿಕ ಮಟ್ಟಕ್ಕೇರುವ ಸಾಮರ್ಥ್ಯವಿದೆ. ಉದಾಹರಣೆಗೆ ಖಾದಿ – ಸುದೀರ್ಘಾವಧಿವರೆಗೆ ಖಾದಿ ಸರಳತೆಯ ಸಂಕೇತವಾಗಿತ್ತು, ಆದರೆ ಇಂದು ನಮ್ಮ ಖಾದಿ ಪರಿಸರ ಸ್ನೇಹಿ ಬಟ್ಟೆಯ ರೂಪದಲ್ಲಿ ಜನಜನಿತವಾಗಿದೆ. ಆರೋಗ್ಯದ ದೃಷ್ಟಿಯಿಂದಲೂ ದೇಹಕ್ಕೆ ಹಿತವಾಗುವ ಬಟ್ಟೆಯಾಗಿದೆ, ಎಲ್ಲ ಋತುಗಳ ಬಟ್ಟೆಯಾಗಿದೆ. ಇಂದು ಖಾದಿ ಫ್ಯಾಷನ್ ವಿಶ್ವಕ್ಕೂ ಲಗ್ಗೆ ಇಡುತ್ತಿದೆ. ಖಾದಿ ಖ್ಯಾತಿ ಬೆಳೆಯುವುದರ ಜೊತೆಗೆ ವಿಶ್ವದ ಹಲವೆಡೆ ಖಾದಿ ಉತ್ಪಾದಿಸಲಾಗುತ್ತಿದೆ. ಮೆಕ್ಸಿಕೊದಲ್ಲಿ ಒಹಾಕಾ ಎಂಬ ಒಂದು ಸ್ಥಳವಿದೆ. ಈ ಪ್ರದೇಶದಲ್ಲಿ ಹಲವಾರು ಗ್ರಾಮಗಳಲ್ಲಿ ಸ್ಥಳೀಯರು ಗ್ರಾಮೀಣ ಖಾದಿ ನೇಯುವ ಕೆಲಸ ಮಾಡುತ್ತಾರೆ. ಇಂದು ಇಲ್ಲಿಯ ಖಾದಿ ‘ಒಹಾಕಾ ಖಾದಿ’ ಎಂದು ಪ್ರಸಿದ್ಧವಾಗಿದೆ. ಒಹಾಕಾಗೆ ಖಾದಿ ಹೇಗೆ ತಲುಪಿತು ಎಂಬುದು ಕೂಡ ಕುತೂಹಲಕಾರಿ ಸಂಗತಿ. ಮೆಕ್ಸಿಕೊದ ಒಬ್ಬ ಯುವಕ ಮಾರ್ಕ್ ಬ್ರೌನ್, ಒಮ್ಮೆ ಮಹಾತ್ಮಾ ಗಾಂಧಿಯವರ ಕುರಿತು ಒಂದು ಚಿತ್ರವನ್ನು ನೋಡಿದ. ಈ ಚಿತ್ರದಿಂದ ಬಹಳ ಪ್ರಭಾವಿತನಾದ ಬ್ರೌನ್ ಭಾರತದಲ್ಲಿ ಬಾಪು ಅವರ ಆಶ್ರಮಕ್ಕೆ ಬಂದರು ಮತ್ತು ಬಾಪು ಅವರ ಬಗ್ಗೆ ಮತ್ತಷ್ಟು ಆಳ ಅಧ್ಯಯನ ಮಾಡಿದರು. ಆಗ ಬ್ರೌನ್ ಅವರಿಗೆ ಖಾದಿ ಎಂಬುದು ಒಂದು ವಸ್ತ್ರವಲ್ಲ ಒಂದು ಸಂಪೂರ್ಣ ಜೀವನಪದ್ಧತಿ ಎಂಬುದು ಅರ್ಥವಾಯಿತು. ಗ್ರಾಮೀಣ ಅರ್ಥವ್ಯವಸ್ಥೆ ಮತ್ತು ಸ್ವಾವಲಂಬನೆ ಹೇಗೆ ಇದರೊಂದಿಗೆ ಬೆರೆತುಕೊಂಡಿದೆ ಎಂದರಿತ ಬ್ರೌನ್ ಬಹಳ ಪ್ರಭಾವಿತರಾದರು. ಆಗಲೇ ಮೆಕ್ಸಿಕೊಗೆ ತೆರಳಿ ಖಾದಿ ಕೆಲಸವನ್ನು ಆರಂಭಿಸುವುದಾಗಿ ಬ್ರೌನ್ ನಿರ್ಧರಿಸಿದರು. ಅವರು ಮೆಕ್ಸಿಕೊದ ಒಹಾಕಾದಲ್ಲಿ ಗ್ರಾಮಸ್ಥರಿಗೆ ಖಾದಿ ಕೆಲಸವನ್ನು ಕಲಿಸಿದರು. ಅವರಿಗೆ ತರಬೇತಿ ನೀಡಿದರು. ಇಂದು ‘ಒಹಾಕಾ ಖಾದಿ’ ಒಂದು ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಈ ಯೋಜನೆಯ ವೆಬ್ ಸೈಟ್ ನಲ್ಲಿ – ‘ದಿ ಸಿಂಬಲ್ ಆಫ್ ಧರ್ಮ ಇನ್ ಮೋಶನ್’ ಎಂದು ಬರೆದಿದೆ. ಈ ವೆಬ್ ಸೈಟ್ ನಲ್ಲಿ ಮಾರ್ಕ್ ಬ್ರೌನ್ ಅವರ ಒಂದು ಆಸಕ್ತಿಕರ ಸಂದರ್ಶನವೂ ಲಭ್ಯವಿದೆ. ಆರಂಭದಲ್ಲಿ ಜನರು ಖಾದಿ ಕುರಿತು ಸಂದೇಹ ಹೊಂದಿದ್ದರು. ಆದರೆ ಕೊನೆಗೆ ಇದರಲ್ಲಿ ಜನರ ಆಸಕ್ತಿ ಬೆಳೆಯಿತು ಮತ್ತು ಇದಕ್ಕೆ ಮಾರುಕಟ್ಟೆ ಸಿದ್ಧವಾಯಿತು ಎಂದು ಅವರು ಹೇಳುತ್ತಾರೆ. ಇವು ರಾಮರಾಜ್ಯಕ್ಕೆ ಸಂಬಂಧಿಸಿದ ಮಾತುಗಳು, ನೀವು ಜನರ ಅವಶ್ಯಕತೆಗಳನ್ನು ಪೂರೈಸಿದಾಗ ಜನರು ನಿಮ್ಮೊಂದಿಗೆ ಬೆರೆಯಲು ಮುಂದೆ ಬರುತ್ತಾರೆ ಎಂದು ಅವರು ಹೇಳುತ್ತಾರೆ.
ಸ್ನೇಹಿತರೇ, ದೆಹಲಿಯ ಕನ್ನಾಟ್ ಪ್ಲೇಸ್ ನ ಖಾದಿ ಅಂಗಡಿಯಲ್ಲಿ ಈ ಬಾರಿ ಗಾಂಧಿ ಜಯಂತಿಯಂದು ಒಂದೇ ದಿನ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಖರೀದಿಯಾಗಿದೆ. ಇದೇ ರೀತಿ ಕೊರೊನಾ ಸಮಯದಲ್ಲಿ ಖಾದಿ ಮಾಸ್ಕ್ ಗಳು ಬಹಳ ಜನಪ್ರೀಯವಾಗುತ್ತಿವೆ. ದೇಶಾದ್ಯಂತ ಬಹಳ ಸ್ಥಳಗಳಲ್ಲಿ ಸ್ವಸಹಾಯ ಗುಂಪುಗಳು ಮತ್ತು ಬೇರೆ ಸಂಸ್ಥೆಗಳು ಖಾದಿ ಮುಖಗವಸುಗಳನ್ನು ತಯಾರಿಸುತ್ತಿವೆ. ಉತ್ತರ ಪ್ರದೇಶದಲ್ಲೂ ಬಾರಾಬಂಕಿಯಲ್ಲಿ ಸುಮನ್ ದೇವಿ ಎಂಬ ಓರ್ವ ಮಹಿಳೆ ಇದ್ದಾರೆ. ಸುಮನ್ ಅವರು ತಮ್ಮ ಸ್ವಸಹಾಯ ಗುಂಪಿನ ಇತರ ಮಹಿಳೆಯರೊಡಗೂಡಿ ಖಾದಿ ಮುಖಗವಸುಗಳನ್ನು ತಯಾರಿಸಲಾರಂಭಿಸಿದರು. ಕ್ರಮೇಣ ಅವರೊಂದಿಗೆ ಇತರ ಮಹಿಳೆಯರು ಒಗ್ಗೂಡಲಾರಂಭಿಸಿದರು. ಈಗ ಅವರೆಲ್ಲರೂ ಸೇರಿ ಸಾವಿರಾರು ಖಾದಿ ಮುಖಗವಸುಗಳನ್ನು ತಯಾರಿಸುತ್ತಿದ್ದಾರೆ. ನಮ್ಮ ಸ್ಥಳೀಯ ಉತ್ಪನ್ನಗಳ ವಿಶೇಷತೆಯೇನೆಂದರೆ ಅವುಗಳ ಜೊತೆಗೆ ಒಂದು ಅದ್ಭುತವಾದ ದರ್ಶನವೂ ಬೆಸೆದುಕೊಂಡಿರುತ್ತದೆ.
ನನ್ನ ಪ್ರಿಯ ದೇಶಬಾಂಧವರೆ, ನಮ್ಮ ವಸ್ತುಗಳ ಮೇಲೆ ನಮಗೆ ಅಭಿಮಾನವಿದ್ದಾಗ ವಿಶ್ವದಲ್ಲೂ ಅವುಗಳ ಬಗ್ಗೆ ಜಿಜ್ಞಾಸೆ ಮೂಡುತ್ತದೆ. ನಮ್ಮ ಆಧ್ಯಾತ್ಮ, ಯೋಗ, ಆಯುರ್ವೇದ ಸಂಪೂರ್ಣ ವಿಶ್ವವನ್ನು ಆಕರ್ಷಿಸಿದಂತೆ ನಮ್ಮ ಹಲವಾರು ಕ್ರೀಡೆಗಳೂ ವಿಶ್ವವನ್ನು ಆಕರ್ಷಿಸುತ್ತಿವೆ. ಈ ಮಧ್ಯೆ ನಮ್ಮ ಮಲ್ಲಕಂಬವೂ ಅನೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಅಮೇರಿಕದಲ್ಲಿ ಚಿನ್ಮಯ ಪಾಠನ್ ಕರ್ ಮತ್ತು ಪ್ರಜ್ಞಾ ಪಾಠನ್ ಕರ್ ತಮ್ಮ ಮನೆಯಿಂದಲೇ ಮಲ್ಲಕಂಬ ಕಲಿಯಲಾರಂಭಿಸಿದಾಗ ಅವರಿಗೂ ಇದಕ್ಕೆ ಇಷ್ಟೊಂದು ಸಫಲತೆ ದೊರೆಯುತ್ತದೆ ಎಂಬುದರ ಅರಿವಿರಲಿಲ್ಲ. ಅಮೆರಿಕದಲ್ಲಿ ಇಂದು ಬಹಳಷ್ಟು ಸ್ಥಳಗಳಲ್ಲಿ ಮಲ್ಲಕಂಬ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದೊಡ್ಡ ಸಂಖ್ಯೆಯಲ್ಲಿ ಅಮೇರಿಕದ ಯುವಜನತೆ ಇದರೊಂದಿಗೆ ಬೆರೆಯುತ್ತಿದ್ದಾರೆ. ಮಲ್ಲಕಂಬ ಕಲಿಯುತ್ತಿದ್ದಾರೆ. ಇಂದು ಜರ್ಮನಿಯಾಗಲಿ, ಪೋಲ್ಯಾಂಡ್ ಆಗಲಿ, ಮಲೇಷ್ಯಾ ಆಗಲಿ ಹೀಗೆ ಸುಮಾರು 20 ಬೇರೆ ದೇಶಗಳಲ್ಲಿ ಮಲ್ಲಕಂಬ ಪ್ರಸಿದ್ಧಗೊಳ್ಳುತ್ತಿದೆ. ಈಗಂತೂ ಇದರ ವಿಶ್ವ ಚಾಂಪಿಯನ್ ಶಿಪ್ ಆರಂಭಿಸಲಾಗಿದೆ. ಇದರಲ್ಲಿ ಹಲವಾರು ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಾರೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಅಸಾಧಾರಣ ವಿಕಾಸವನ್ನು ಮೂಡಿಸುವಂತಹ ಇಂಥ ಹಲವಾರು ಕ್ರೀಡೆಗಳು ಇವೆ. ಇವು ನಮ್ಮ ಮನಸ್ಸು ಮತ್ತು ದೇಹದ ಸಮತೋಲನವನ್ನು ಒಂದು ನೂತನ ಆಯಾಮಕ್ಕೆ ಕೊಂಡೊಯ್ಯುತ್ತವೆ. ಆದರೆ ಹೊಸ ಪೀಳಿಗೆಯ ನಮ್ಮ ಯುವಜನತೆ ಮಲ್ಲಕಂಬಕ್ಕೆ ಅಷ್ಟೊಂದು ಪರಿಚಿತರಾಗಿರಲಿಕ್ಕಿಲ್ಲ. ಇದನ್ನು ಅಂತರ್ಜಾಲದಲ್ಲಿ ಹುಡುಕಿ ಮತ್ತು ನೋಡಿ.
ಸ್ನೇಹಿತರೇ, ನಮ್ಮ ದೇಶದಲ್ಲಿ ಹಲವಾರು ಸಮರ ಕಲೆಗಳಿವೆ. ನಮ್ಮ ಯುವ ಸ್ನೇಹಿತರು ಇವುಗಳ ಬಗ್ಗೆಯೂ ತಿಳಿಯಲಿ, ಇವುಗಳನ್ನು ಕಲಿಯಲಿ ಮತ್ತು ಸಮಯಕ್ಕೆ ತಕ್ಕಂತೆ ಹೊಸ ಆವಿಷ್ಕಾರವನ್ನೂ ಮಾಡಲಿ ಎಂದು ನಾನು ಬಯಸುತ್ತೇನೆ. ನಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಸವಾಲುಗಳು ಎದುರಾಗದಿದ್ದಲ್ಲಿ, ವ್ಯಕ್ತಿತ್ವದ ಸರ್ವೋತ್ಕೃಷ್ಟತೆ ಹೊರಹೊಮ್ಮುವುದಿಲ್ಲ. ಆದ್ದರಿಂದ, ಎಂದಿಗೂ ನಿಮಗೆ ನೀವೇ ಸವಾಲು ಹಾಕಿಕೊಳ್ಳುತ್ತಿರಿ
ನನ್ನ ಪ್ರಿಯ ದೇಶಬಾಂಧವರೆ, ‘Learning is Growing’ ಎಂದು ಹೇಳಲಾಗುತ್ತದೆ. ಇಂದು ಮನದಾಳದ ಮಾತಿನಲ್ಲಿ ನಾನು ನಿಮಗೆ, ಒಂದು ವಿಶಿಷ್ಠವಾದ ಹುಮ್ಮಸ್ಸು ಹೊಂದಿರುವ ವ್ಯಕ್ತಿಯೊಬ್ಬರ ಪರಿಚಯ ಮಾಡಿಕೊಡುತ್ತೇನೆ. ಇತರರೊಂದಿಗೆ ಓದುವ ಮತ್ತು ಕಲಿಯುವ ಹುಮ್ಮಸ್ಸು ಹಂಚಿಕೊಳ್ಳುವ ಅಭ್ಯಾಸ ಇವರಲ್ಲಿದೆ. ಇವರು ಪೊನ್ ಮರಿಯಪ್ಪನ್, ಇವರು ತಮಿಳುನಾಡಿನ ತೂತ್ತುಕುಡಿಯಲ್ಲಿ ಇರುತ್ತಾರೆ. ತೂತ್ತುಕುಡಿ ಪರ್ಲ್ ಸಿಟಿ ಅಂದರೆ ಮುತ್ತಿನ ನಗರಿಯೆಂದೂ ಪ್ರಸಿದ್ಧವಾಗಿದೆ. ಒಂದೊಮ್ಮೆ ಇದು ಪಾಂಡ್ಯನ್ ಸಾಮ್ರಾಜ್ಯದ ಮಹತ್ವಪೂರ್ಣ ಕೇಂದ್ರವಾಗಿತ್ತು. ಇಲ್ಲಿರುವ ನನ್ನ ಸ್ನೇಹಿತ ಪೊನ್ ಮರಿಯಪ್ಪನ್, ಕ್ಷೌರಿಕ ವೃತ್ತಿಯಲ್ಲಿ ನಿರತರಾಗಿದ್ದು ಸಲೂನ್ ಒಂದನ್ನು ಹೊಂದಿದ್ದಾರೆ. ಬಹಳ ಚಿಕ್ಕ ಸಲೂನ್ ಇದೆ. ಅವರು ಒಂದು ವಿಶಿಷ್ಟ ಮತ್ತು ಪ್ರೇರಣಾತ್ಮಕ ಕೆಲಸವನ್ನು ಮಾಡಿದ್ದಾರೆ. ತಮ್ಮ ಸಲೂನ್ ನ ಒಂದು ಭಾಗವನ್ನು ಗ್ರಂಥಾಲಯ ಮಾಡಿದ್ದಾರೆ. ಯಾರೇ ಆಗಲಿ ಸಲೂನ್ ನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿರುವಾಗ ಅಲ್ಲಿ ಏನಾದರೂ ಓದುತ್ತಾರೆ, ಅಥವಾ ಓದಿರುವ ಬಗ್ಗೆ ಏನಾದರೂ ಬರೆಯುತ್ತಾರಾದರೆ ಅಂಥ ಗ್ರಾಹಕರಿಗೆ ಪೊನ್ ಮರಿಯಪ್ಪನ್ ಅವರು ರಿಯಾಯಿತಿ ನೀಡುತ್ತಾರೆ – ಇದು ಆಸಕ್ತಿಕರವಲ್ಲವೇ .
ಬನ್ನಿ ತೂತ್ತುಕುಡಿಗೆ ಹೊಗೋಣ. ಪೊನ್ ಮರಿಯಪ್ಪನ್ ಅವರೊಂದಿಗೆ ಮಾತಾಡೋಣ
ಪ್ರಧಾನ ಮಂತ್ರಿ: ಪೊನ್ ಮರಿಯಪ್ಪನ್ ಅವರೆ ವಣಕ್ಕಂ….ಚೆನ್ನಾಗಿದ್ದೀರಾ
ಪೊನ್ ಮರಿಯಪ್ಪನ್ : ಮಾನ್ಯ ಪ್ರಧಾನ ಮಂತ್ರಿಗಳೇ ವಣಕ್ಕಂ
ಪ್ರಧಾನ ಮಂತ್ರಿ: ವಣಕ್ಕಂ, ವಣಕ್ಕಂ… … ನಿಮಗೆ ಗ್ರಂಥಾಲಯದ ಯೋಚನೆ ಯಾವಾಗ ಬಂತು
ಪೊನ್ ಮರಿಯಪ್ಪನ್ : ನಾನು 8 ನೇ ತರಗತಿವರೆಗೆ ಓದಿದ್ದೇನೆ. ಅದರ ನಂತರ ಪಾರಿವಾರಿಕ ಸ್ಥಿತಿಯಿಂದಾಗಿ ಓದನ್ನು ಮುಂದುವರಿಸಲಾಗಲಿಲ್ಲ. ನಾನು ಓದಿದವರನ್ನು ನೋಡಿದಾಗ ನನ್ನ ಮನದಲ್ಲಿ ಏನೋ ಕೊರತೆ ಕಾಡುತ್ತಿತ್ತು. ಆದ್ದರಿಂದ ನನ್ನ ಮನದಲ್ಲಿ ಒಂದು ಗ್ರಂಥಾಲಯವನ್ನು ಏಕೆ ಸ್ಥಾಪಿಸಬಾರದು ಎಂಬ ಆಲೋಚನೆ ಬಂತು. ಅದರಿಂದ ಬಹಳಷ್ಟು ಜನರಿಗೆ ಇದರಿಂದ ಲಾಭವಾಗುತ್ತದೆ ಎಂಬುದೇ ನನಗೆ ಪ್ರೇರಣೆ ನೀಡಿತು.
ಪ್ರಧಾನ ಮಂತ್ರಿ: ನಿಮಗೆ ಯಾವ ಪುಸ್ತಕ ಬಹಳ ಇಷ್ಟ?
ಪೊನ್ ಮರಿಯಪ್ಪನ್ : ‘ನನಗೆ ತಿರುಕ್ಕುರುಳ್’ ಬಹಳ ಇಷ್ಟ
ಪ್ರಧಾನ ಮಂತ್ರಿ: ನಿಮ್ಮೊಂದಿಗೆ ಮಾತನಾಡಿ ಬಹಳ ಆನಂದವಾಯಿತು. ತಮಗೆ ಅನಂತ ಶುಭಹಾರೈಕೆಗಳು
ಪೊನ್ ಮರಿಯಪ್ಪನ್ : ನನಗೂ ಮಾನ್ಯ ಪ್ರಧಾನ ಮಂತ್ರಿಗಳೊಂದಿಗೆ ಮಾತನಾಡುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ.
ಪ್ರಧಾನ ಮಂತ್ರಿ: ಅನಂತ ಶುಭಹಾರೈಕೆಗಳು
ಪೊನ್ ಮರಿಯಪ್ಪನ್ : ಧನ್ಯವಾದಗಳು ಪ್ರಧಾನ ಮಂತ್ರಿಯವರೇ
ಪ್ರಧಾನ ಮಂತ್ರಿ: ಧನ್ಯವಾದಗಳು
ನಾವು ಇದೀಗ ಪೊನ್ ಮರಿಯಪ್ಪನ್ ಅವರೊಂದಿಗೆ ಮಾತನಾಡಿದೆವು. ಅವರು ಜನರ ಕೇಶವಿನ್ಯಾಸವನ್ನಂತೂ ಮಾಡುತ್ತಾರೆ ಅದರ ಜೊತೆಗೆ ಜೀವನ ವಿನ್ಯಾಸಗೊಳಿಸಿಕೊಳ್ಳಲೂ ಅವಕಾಶ ನೀಡುತ್ತಾರೆ. ತಿರುಕ್ಕುರುಳ್ ನ ಜನಪ್ರೀಯತೆಯ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ತಿರುಕ್ಕುರುಳ್ ಜನಪ್ರೀಯತೆಯ ಬಗ್ಗೆ ನೀವೆಲ್ಲರೂ ಕೇಳಿದಿರಿ. ಇಂದು ಭಾರತದ ಎಲ್ಲ ಭಾಷೆಗಳಲ್ಲಿ ತಿರುಕ್ಕುರುಳ್ ಲಭ್ಯವಿದೆ. ಅವಕಾಶ ಸಿಕ್ಕರೆ ಖಂಡಿತ ಓದಬೇಕು. ಒಂದು ರೀತಿಯಲ್ಲಿ ಅದು ಜೀವನಕ್ಕೆ ಮಾರ್ಗದರ್ಶಿಯಿದ್ದಂತಿದೆ.
ಸ್ನೇಹಿತರೇ, ಜ್ಞಾನವನ್ನು ಹರಡುವ ಮೂಲಕ ಅಪಾರ ಸಂತೋಷ ಪಡೆದುಕೊಳ್ಳುವ ಅನೇಕ ಮಂದಿ ಭಾರತದಾದ್ಯಂತ ಇದ್ದಾರೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಓದಬೇಕೆಂದು ಪ್ರತಿಯೊಬ್ಬರೂ ಪ್ರೇರೇಪಿತರಾಗಬೇಕೆಂದು ಬಯಸುವ ಜನರು ಇವರಾಗಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿಯ ಶಿಕ್ಷಕಿ ಉಷಾ ದುಬೆ ಅವರು ತಮ್ಮ ಸ್ಕೂಟಿಯನ್ನೇ ಸಂಚಾರಿ ಗ್ರಂಥಾಲಯವನ್ನಾಗಿ (mobile library) ಬದಲಾಯಿಸಿಬಿಟ್ಟಿದ್ದಾರೆ. ಅವರು ಪ್ರತಿದಿನ ತಮ್ಮ ಚಲಿಸುವ ಗ್ರಂಥಾಲಯದೊಂದಿಗೆ ಯಾವುದಾದರೊಂದು ಹಳ್ಳಿಗೆ ತಲುಪುತ್ತಾರೆ ಮತ್ತು ಅಲ್ಲಿನ ಮಕ್ಕಳಿಗೆ ಓದು ಕಲಿಸುತ್ತಾರೆ. ಮಕ್ಕಳು ಆಕೆಯನ್ನು ಪ್ರೀತಿಯಿಂದ ಪುಸ್ತಕದ ಅಕ್ಕಾ ಎಂದು ಕರೆಯುತ್ತಾರೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಅರುಣಾಚಲ ಪ್ರದೇಶದ ನಿರ್ಜುಲಿಯ ರೆಯೋ(Rayo) ಗ್ರಾಮದಲ್ಲಿ ಒಂದು ಸ್ವ–ಸಹಾಯ ಗ್ರಂಥಾಲಯ (Self Help Library) ನಿರ್ಮಿಸಲಾಯಿತು. ವಾಸ್ತವದಲ್ಲಿ, ಇಲ್ಲಿನ ಮೀನಾ ಗುರಂಗ್ ಮತ್ತು ದಿವಾಂಗ್ ಹೊಸಾಯಿ ಅವರುಗಳಿಗೆ ಅಲ್ಲಿ ಯಾವುದೇ ಗ್ರಂಥಾಲಯವಿಲ್ಲ ಎಂದು ತಿಳಿದುಬಂದಾಗ ಅದರ ನಿಧಿಗಾಗಿ ಅವರು ಸಹಾಯ ಹಸ್ತ ಚಾಚಿದರು. ಈ ಗ್ರಂಥಾಲಯದಲ್ಲಿ ಯಾವುದೇ ಸದಸ್ಯತ್ವ ಇಲ್ಲ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಯಾರೇ ಆದರೂ ಎರಡು ವಾರಗಳಿಗಾಗಿ ಪುಸ್ತಕ ಕೊಂಡೊಯ್ಯಬಹುದು. ಓದಿಯಾದ ನಂತರ ಅದನ್ನು ಹಿಂದಿರುಗಿಸಬೇಕಾಗುತ್ತದೆ. ಈ ಗ್ರಂಥಾಲಯ ವಾರದ ಏಳೂ ದಿನ, ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ತೆರೆದೇ ಇರುತ್ತದೆ. ನೆರೆಹೊರೆಯ ಪೋಷಕರು ತಮ್ಮ ಮಕ್ಕಳು ಪುಸ್ತಕ ಓದುವುದರಲ್ಲಿ ನಿರತರಾಗಿರುವುದನ್ನು ನೋಡಿ ಬಹಳ ಸಂತೋಷಗೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಶಾಲೆಗಳು ಕೂಡಾ ಆನ್ಲೈನ್ ತರಗತಿಗಳು ಆರಂಭಿಸಿರುವ ಸಮಯದಲ್ಲಿ. ಚಂಡೀಗಢದಲ್ಲಿ ಒಂದು ಸರ್ಕಾರೇತರ ಸಂಸ್ಥೆ (NGO) ನಡೆಸುವ ಸಂದೀಪ್ ಕುಮಾರ್ ಅವರು ಮಿನಿ ವ್ಯಾನೊಂದರಲ್ಲಿ (mini van) ಸಂಚಾರಿ ಗ್ರಂಥಾಲಯ ನಿರ್ಮಿಸಿದ್ದು, ಇದರ ಮೂಲಕ ಬಡ ಮಕ್ಕಳಿಗೆ ಓದಲು ಉಚಿತವಾಗಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಇದರೊಂದಿಗೇ ಗುಜರಾತ್ ನ ಭಾವನಗರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಎರಡು ಸಂಸ್ಥೆಗಳ ಬಗ್ಗೆ ಕೂಡಾ ತಿಳಿದುಕೊಂಡಿದ್ದೇನೆ. ಅವುಗಳಲ್ಲಿ ಒಂದು ‘ವಿಕಾಸ್ ವರ್ತುಲ್ ಟ್ರಸ್ಟ್’. ಈ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಬಹಳ ಸಹಾಯಕವಾಗಿದೆ. ಈ ಸಂಸ್ಥೆ 1975 ರಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಇದು 5,000 ಪುಸ್ತಕಗಳ ಜೊತೆಯಲ್ಲಿ 140 ಕ್ಕಿಂತ ಹೆಚ್ಚು ನಿಯತಕಾಲಿಕೆಗಳನ್ನು (magazine) ಒದಗಿಸುತ್ತದೆ. ಇಂತಹದ್ದೇ ಒಂದು ಸಂಸ್ಥೆ ‘ಪುಸ್ತಕ್ ಪರಬ್. ಇದೊಂದು ನವೀನ ಯೋಜನೆಯಾಗಿದ್ದು, ಸಾಹಿತ್ಯಾತ್ಮಕ ಪುಸ್ತಕಗಳೊಂದಿಗೆ ಮತ್ತೊಂದು ಪುಸ್ತಕವನ್ನು ಉಚಿತವಾಗಿ ಒದಗಿಸುತ್ತದೆ. ಈ ಗ್ರಂಥಾಲಯದಲ್ಲಿ ಆಧ್ಯಾತ್ಮಿಕ, ಆಯುರ್ವೇದ ಚಿಕಿತ್ಸೆ ಮತ್ತು ಇನ್ನೂ ಅನೇಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಕೂಡಾ ಇವೆ. ನಿಮಗೇನಾದರೂ ಇಂತಹ ಅಥವಾ ಇಂತಹ ಪ್ರಯತ್ನಗಳ ಬಗ್ಗೆ ತಿಳಿದಿದ್ದರೆ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ (social media) ಖಂಡಿತವಾಗಿಯೂ ಹಂಚಿಕೊಳ್ಳಬೇಕೆಂದು ನಿಮ್ಮಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಈ ಉದಾಹರಣೆ ಕೇವಲ ಪುಸ್ತಕ ಓದುವುದು ಅಥವಾ ಗ್ರಂಥಾಲಯ ಪ್ರಾರಂಭಿಸುವುದಕ್ಕೆ ಮಾತ್ರ ಸೀಮಿತವಲ್ಲ, ಇದು ನವ ಭಾರತದ ಭಾವನೆಯ ಪ್ರತೀಕವೂ ಆಗಿದ್ದು, ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿ ವರ್ಗದ ಜನರು ಹೊಸ ಹೊಸ ಮತ್ತು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ
ನ ಹೀ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ (न हि ज्ञानेन सदृशं पवित्रमिह विद्यते)
ಅಂದರೆ, ಜ್ಞಾನಕ್ಕೆ ಸಮಾನವಾದ ಪವಿತ್ರವಾದ ವಿಷಯ ಮತ್ಯಾವುದೂ ಇಲ್ಲ. ಜ್ಞಾನವನ್ನು ಹರಡುವವರಿಗೆ, ಇಂತಹ ಉತ್ತಮ ಪ್ರಯತ್ನ ಮಾಡುವವರಿಗೆ, ಎಲ್ಲಾ ಮಹಾನುಭಾವರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜಯಂತಿಯಾದ, ಅಕ್ಟೋಬರ್ 31 ರಂದು ನಾವೆಲ್ಲರೂ ‘ರಾಷ್ಟ್ರೀಯ ಏಕತಾ ದಿವಸ್’ ಆಚರಿಸುತ್ತೇವೆ. ‘ಮನದ ಮಾತಿ’ನಲ್ಲಿ ನಾವು ಈ ಮೊದಲು ಸರ್ದಾರ್ ಪಟೇಲ್ ಅವರ ಬಗ್ಗೆ ವಿವರವಾಗಿ ಮಾತನಾಡಿದ್ದೇವೆ. ಅವರ ಶ್ರೇಷ್ಠ ವ್ಯಕ್ತಿತ್ವದ ಹಲವು ಆಯಾಮಗಳ ಬಗ್ಗೆ ಚರ್ಚಿಸಿದ್ದೇವೆ. ಏಕಕಾಲದಲ್ಲಿ ಹಲವು ಸಿದ್ಧಾಂತಗಳನ್ನೊಳಗೊಂಡ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಬಹಳ ವಿರಳವಾಗಿ ಸಿಗುತ್ತಾರೆ – ಆಳವಾದ ವೈಚಾರಿಕತೆ. ನೈತಿಕ ಸ್ಥೈರ್ಯ, ರಾಜಕೀಯ ಕುಶಾಗ್ರಮತಿ, ಕೃಷಿ ಕ್ಷೇತ್ರದಲ್ಲಿ ಆಳವಾದ ಜ್ಞಾನ ಮತ್ತು ರಾಷ್ಟ್ರೀಯ ಏಕತೆಗೆ ಸಮರ್ಪಣೆಯ ಭಾವನೆ. ಸರ್ದಾರ್ ಪಟೇಲ್ ಅವರ ಹಾಸ್ಯ ಪ್ರಜ್ಞೆಯನ್ನು (sense of humour) ಪ್ರತಿಬಿಂಬಿಸುವ ಒಂದು ವಿಷಯ ನಿಮಗೆ ತಿಳಿದಿದೆಯೇ? ರಾಜರು – ರಾಜಮನೆತನದೊಂದಿಗೆ ಮಾತುಕತೆ ನಡೆಸುತ್ತಿದ್ದರು, ಪೂಜ್ಯ ಬಾಪೂ ಅವರ ಜನಾಂದೋಲನದ ನಿರ್ವಹಣೆ ಮಾಡುತ್ತಿದ್ದರು, ಬ್ರಿಟಿಷರೊಂದಿಗೆ ಯುದ್ಧವನ್ನು ಕೂಡಾ ಮಾಡುತ್ತಿದ್ದರು. ಅದರ ಮಧ್ಯದಲ್ಲಿಯೇ ಹಾಸ್ಯ ಪ್ರಜ್ಞೆ ಕೂಡಾ ಪ್ರದರ್ಶಿಸುತ್ತಿದ್ದ ಆ ಉಕ್ಕಿನ ಮನುಷ್ಯನ ವ್ಯಕ್ತಿತ್ವವನ್ನು ಸ್ವಲ್ಪ ಕಲ್ಪನೆ ಮಾಡಿಕೊಳ್ಳಿ. ಬಾಪೂ ಅವರು ಸರ್ದಾರ್ ಪಟೇಲ್ ಅವರ ಬಗ್ಗೆ ಹೀಗೆಂದಿದ್ದರು – ಅವರ ಹಾಸ್ಯಪೂರ್ಣ ಮಾತುಗಳು ನನ್ನನ್ನು ಎಷ್ಟು ನಗಿಸುವುದೆಂದರೆ, ನಕ್ಕೂ ನಕ್ಕೂ ನನಗೆ ಹೊಟ್ಟೆ ಹುಣ್ಣಾಗುತ್ತಿತ್ತು, ಹೀಗೆ ದಿನದಲ್ಲಿ ಒಂದು ಬಾರಿಯಲ್ಲ, ಅನೇಕ ಬಾರಿ ಆಗುತ್ತಿತ್ತು. ಇದರಲ್ಲಿ ನಮಗೊಂದು ಪಾಠವೂ ಇದೆ, ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ನಿಮ್ಮ ಹಾಸ್ಯ ಪ್ರಜ್ಞೆಯನ್ನು ಜೀವಂತವಾಗಿರಿಸಿಕೊಳ್ಳಿ, ಇದು ನಮ್ಮನ್ನು ಆರಾಮವಾಗಿರಿಸುತ್ತದೆ, ಮತ್ತು ನಾವು ನಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಸರ್ದಾರ್ ಅವರು ಮಾಡಿದ್ದು ಕೂಡಾ ಇದನ್ನೇ.
ನನ್ನ ಪ್ರೀತಿಯ ದೇಶವಾಸಿಗಳೇ, ಸರ್ದಾರ್ ಪಟೇಲ್ ಅವರು ತಮ್ಮ ಸಂಪೂರ್ಣ ಜೀವನವನ್ನು ದೇಶದ ಒಗ್ಗಟ್ಟಿಗಾಗಿ ಮೀಸಲಿಟ್ಟರು. ಅವರು ಭಾರತದ ಜನರನ್ನು ಸ್ವಾತಂತ್ರ್ಯದ ಚಳುವಳಿಗೆ ಸೇರಿಸಿದರು. ಅವರು ಸ್ವಾತಂತ್ರ್ಯದೊಂದಿಗೆ ರೈತರ ಸಮಸ್ಯೆಗಳನ್ನು ಜೋಡಿಸುವ ಕೆಲಸ ಮಾಡಿದರು. ಅವರು ರಾಜ–ರಾಜ ಮನೆತನಗಳನ್ನುನಮ್ಮ ದೇಶದೊಂದಿಗೆ ಒಂದುಗೂಡಿಸುವ ಕೆಲಸ ಮಾಡಿದರು. ಅವರು ವಿವಿಧತೆಯಲ್ಲಿ ಏಕತೆ ಮಂತ್ರವನ್ನು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಜಾಗೃತಗೊಳಿಸುತ್ತಿದ್ದರು.
ಸ್ನೇಹಿತರೇ, ನಾವಿಂದು ನಮ್ಮ ಮಾತು, ನಮ್ಮ ನಡವಳಿಕೆ, ನಮ್ಮ ಕಾರ್ಯಗಳಿಂದ, ನಮ್ಮನ್ನು ‘ಒಂದುಗೂಡಿಸುವ’ ಹಾಗೂ ದೇಶದ ಒಂದು ಭಾಗದಲ್ಲಿ ವಾಸಿಸುವ ನಾಗರಿಕನ ಮನಸ್ಸಿನಲ್ಲಿ, ಮತ್ತೊಂದು ಭಾಗದಲ್ಲಿ ವಾಸಿಸುವ ನಾಗರಿಕನಿಗಾಗಿ ಸ್ವಾಭಾವಿಕತೆ ಮತ್ತುಆತ್ಮೀಯತೆಯ ಭಾವನೆ ಜಾಗೃತಗೊಳಿಸುವ ಆ ಎಲ್ಲಾ ಕಾರ್ಯಗಳನ್ನೂ ಪ್ರತಿ ಕ್ಷಣವೂ ಮುನ್ನಡೆಸಬೇಕಾಗಿದೆ. ನಮ್ಮ ಪೂರ್ವಜರು ಈ ಪ್ರಯತ್ನಗಳನ್ನು ಶತಮಾನಗಳಿಂದಲೂ ನಿರಂತರವಾಗಿ ಮಾಡಿದ್ದಾರೆ. ಈಗ ನೋಡಿ, ಕೇರಳದಲ್ಲಿ ಜನ್ಮತಾಳಿದ ಪೂಜ್ಯ ಆದಿ ಶಂಕರಾಚಾರ್ಯರು, ಭಾರತದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು ಸ್ಥಾಪಿಸಿದರು – ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪೂರಿ, ದಕ್ಷಿಣದಲ್ಲಿ ಶೃಂಗೇರಿ ಮತ್ತು ಪಶ್ಚಿಮದಲ್ಲಿ ದ್ವಾರಕಾ. ಅವರು ಶ್ರೀನಗರಕ್ಕೂ ಯಾತ್ರೆ ಬೆಳೆಸಿದ್ದರು. ಇದರಿಂದಾಗಿಯೇ ಅಲ್ಲಿ ಒಂದು ಶಂಕರಾಚಾರ್ಯ ಬೆಟ್ಟ (‘Shankracharya Hill’) ಇದೆ. ತೀರ್ಥಯಾತ್ರೆಯು ಭಾರತವನ್ನು ಒಂದು ಸೂತ್ರದಲ್ಲಿ ಬಂಧಿಸುತ್ತದೆ. ಜ್ಯೋತಿರ್ಲಿಂಗಗಳು ಮತ್ತು ಶಕ್ತಿಪೀಠಗಳು ಭಾರತವನ್ನು ಒಂದು ಸೂತ್ರದಲ್ಲಿ ಬಂಧಿಸುತ್ತವೆ. ತ್ರಿಪುರಾದಿಂದ ಗುಜರಾತ್ ವರೆಗೆ, ಜಮ್ಮು ಕಾಶ್ಮೀರದಿಂದ ತಮಿಳುನಾಡಿನವರೆಗೆ ಸ್ಥಾಪನೆಯಾಗಿರುವ ನಮ್ಮ ಶೃದ್ಧಾ ಕೇಂದ್ರಗಳು ನಮ್ಮನ್ನು ‘ಒಂದುಗೂಡಿಸುತ್ತವೆ’. ಭಕ್ತಿ ಆಂದೋಲನವು ಸಂಪೂರ್ಣ ಭಾರತದಲ್ಲಿ ಒಂದು ದೊಡ್ಡ ಜನಾಂದೋಲನವಾಗಿಬಿಟ್ಟಿತು, ಇದು ನಮ್ಮನ್ನು ಭಕ್ತಿಯ ಮುಖಾಂತರ ಒಂದುಗೂಡಿಸಿತು. ಏಕತೆಯ ಶಕ್ತಿಯಿರುವ ಈ ವಿಷಯಗಳು ನಮ್ಮ ನಿತ್ಯ ಜೀವನದಲ್ಲಿ ಬೆರೆತುಹೋದವು. ಪ್ರತಿ ಆಚರಣೆಗೆ ಮೊದಲು ವಿವಿಧ ನದಿಗಳನ್ನು ಆಹ್ವಾನಿಸಲಾಗುತ್ತದೆ – ಇದರಲ್ಲಿ ದೂರದ ಉತ್ತರದಲ್ಲಿರುವ ಸಿಂಧು ನದಿಯಿಂದ ದಕ್ಷಿಣ ಭಾರತದ ಜೀವನದಿ ಕಾವೇರಿಯವರೆಗೂ ಒಳಗೊಂಡಿದೆ. ಇಲ್ಲಿ ನಮ್ಮ ಜನರು ಹೀಗೆಂದು ಹೇಳುತ್ತಾರೆ –ಸ್ನಾನ ಮಾಡುವ ಸಮಯದಲ್ಲಿ ಪವಿತ್ರ ಭಾವನೆಯಿಂದ ಏಕತೆಯ ಮಂತ್ರವನ್ನೇ ಹೇಳಲಾಗುತ್ತದೆ:
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
(गंगे च यमुने चैव गोदावरि सरस्वती I
नर्मदे सिन्धु कावेरि जलेSस्मिन् सन्निधिं कुरु II)
ಅಂತೆಯೇ ಸಿಖ್ಖರ ಪವಿತ್ರ ಸ್ಥಳಗಳಲ್ಲಿ ‘ನಾಂದೇಡ್ ಸಾಹಿಬ್’ ಮತ್ತು ‘ಪಠನಾ ಸಾಹಿಬ್’ ಗುರುದ್ವಾರಗಳೂ ಸೇರಿವೆ. ನಮ್ಮ ಸಿಖ್ ಗುರುಗಳು ಕೂಡಾ ತಮ್ಮ ಜೀವನ ಮತ್ತು ಸತ್ಕಾರ್ಯಗಳ ಮೂಲಕ ಏಕತೆಯ ಭಾವನೆಯನ್ನು ಹೆಚ್ಚಿಸಿದ್ದಾರೆ. ಕಳೆದ ಶತಮಾನದಲ್ಲಿ, ನಮ್ಮ ದೇಶದಲ್ಲಿ, ಡಾ. ಬಾಬಾಸಾಹೆಬ್ ಅಂಬೇಡ್ಕರ್ ರವರಂತಹ ಮಹಾನ್ ವ್ಯಕ್ತಿಗಳು ಸಂವಿಧಾನದ ಮುಖಾಂತರ ನಮ್ಮೆಲ್ಲರನ್ನೂ ಒಂದುಗೂಡಿಸಿದ್ದಾರೆ.
ಸ್ನೇಹಿತರೆ,
ಒಗ್ಗಟ್ಟೇ ಶಕ್ತಿ, ಒಗ್ಗಟ್ಟೇ ಬಲ,
ಒಗ್ಗಟ್ಟೇ ಪ್ರಗತಿ, ಒಗ್ಗಟ್ಟೇ ಸಬಲೀಕರಣ,
ಒಗ್ಗಟ್ಟಿನಿಂದ ನಾವು ಹೊಸ ಎತ್ತರಗಳನ್ನು ಅಧಿಗಮಿಸುತ್ತೇವೆ
(Unity is Power, Unity is strength,
Unity is Progress, Unity is Empowerment,
United we will scale new heights )
ಹಾಗೆಯೇ, ನಿರಂತರವಾಗಿ ಅನುಮಾನದ ಬೀಜಗಳನ್ನು ನಮ್ಮ ಮನದಲ್ಲಿ ಬಿತ್ತುವ ಪ್ರಯತ್ನ ಮಾಡುತ್ತಿರುವ, ದೇಶವನ್ನು ವಿಭಜಿಸಲು ಪ್ರಯತ್ನಿಸುವಂತಹ ಶಕ್ತಿಗಳು ಕೂಡಾ ಇರುತ್ತವೆ. ಇಂತಹ ದುರುದ್ದೇಶಗಳಿಗೆ ತಕ್ಕ ಉತ್ತರವನ್ನು ಪ್ರತಿಬಾರಿಯೂ ದೇಶ ಕೊಟ್ಟಿದೆ. ನಾವು ನಿರಂತರವಾಗಿ ನಮ್ಮ ಸೃಜನಾತ್ಮಕವಾಗಿ, ಪ್ರೀತಿಯಿಂದ, ಪ್ರತಿ ಕ್ಷಣ ಪ್ರಯತ್ನಪೂರ್ವಕವಾಗಿ ನಮ್ಮ ಚಿಕ್ಕ ಚಿಕ್ಕ ಕೆಲಸ ಕಾರ್ಯಗಳಲ್ಲಿ, ‘ಏಕ್ ಭಾರತ – ಶ್ರೇಷ್ಠ ಭಾರತ’ದ ಆಕರ್ಷಕ ಬಣ್ಣಗಳನ್ನು ತುಂಬಬೇಕು, ಒಗ್ಗಟ್ಟಿನ ಹೊಸ ಬಣ್ಣ ತುಂಬಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಇದಕ್ಕೆ ಬಣ್ಣ ತುಂಬಬೇಕು. ಈ ಸಮಯದಲ್ಲಿ ನಾನು ಒಂದು ಜಾಲತಾಣ ವೀಕ್ಷಿಸಬೇಕೆಂದು ನಿಮ್ಮಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ – ekbharat.gov.in (ಏಕ್ ಭಾರತ್ ಡಾಟ್ ಗೌ ಡಾಟ್ ಇನ್) ಇದರಲ್ಲಿ, ರಾಷ್ಟ್ರೀಯ ಏಕೀಕರಣದ (national integration) ನಮ್ಮ ಅಭಿಯಾನವನ್ನು ಮುನ್ನಡೆಸುವ ಹಲವು ಪ್ರಯತ್ನಗಳು ಕಂಡುಬರುತ್ತವೆ. ಇದರಲ್ಲಿ ಒಂದು ಆಸಕ್ತಿದಾಯಕ ಭಾಗವಿದೆ –ಅದೇ ‘ಇಂದಿನ ವಾಕ್ಯ’. ಈ ವಿಭಾಗದಲ್ಲಿ ನಾವು, ಪ್ರತಿದಿನ, ಒಂದು ವಾಕ್ಯವನ್ನು, ಬೇರೆ ಬೇರೆ ಭಾಷೆಗಳಲ್ಲಿ ಹೇಗೆ ನುಡಿಯುತ್ತಾರೆ ಎನ್ನುವುದನ್ನು ಕಲಿಯಬಹುದಾಗಿದೆ. ನೀವು ಈ ಜಾಲತಾಣಕ್ಕಾಗಿ (website) ನಿಮ್ಮ ಕೊಡುಗೆಯನ್ನೂ ನೀಡಬಹುದು. ಹೇಗೆಂದರೆ ಪ್ರತಿಯೊಂದು ರಾಜ್ಯ ಮತ್ತು ಸಂಸ್ಕೃತಿಯಲ್ಲಿ ವಿಭಿನ್ನ ರೀತಿಯ ಆಹಾರ–ಪಾನೀಯ ಇರುತ್ತದೆ. ಈ ತಿನಿಸುಗಳನ್ನು ಸ್ಥಳೀಯತೆಗೆ ಅನುಗುಣವಾಗಿ ವಿಶೇಷ ಪದಾರ್ಥಗಳು, ಅಂದರೆ ಧಾನ್ಯ ಮತ್ತು ಸಾಂಬಾರ ದಿನಿಸುಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ನಾವು ಈ ಸ್ಥಳೀಯ ಆಹಾರದ ಪಾಕ ವಿಧಾನವನ್ನು ಸ್ಥಳೀಯ ಪದಾರ್ಥಗಳ ಹೆಸರಿನೊಂದಿಗೆ, ‘ಏಕ ಭಾರತ್ –ಶ್ರೇಷ್ಠ ಭಾರತ್’ (‘एक भारत–श्रेष्ठ भारत’)ಜಾಲತಾಣದಲ್ಲಿ ಒಗ್ಗಟ್ಟಿನ ಶಕ್ತಿ ಹಂಚಿಕೊಳ್ಳಬಹುದೇ? ಮತ್ತು ರೋಗನಿರೋಧಕ ಶಕ್ತಿ (Unity andImmunity) ಹೆಚ್ಚಿಸಿಕೊಳ್ಳುವುದಕ್ಕಾಗಿ ಇದಕ್ಕಿಂತ ಉತ್ತಮ ವಿಧಾನ ಮತ್ಯಾವುದಿದೆ.
ಸ್ನೇಹಿತರೆ, ಈ ತಿಂಗಳ 31 ರಂದು ನನಗೆ ಕೇವಡಿಯಾದಲ್ಲಿ ಐತಿಹಾಸಿಕ ಏಕತಾ ಪ್ರತಿಮೆ (Statue of Unity) ಯ ಸ್ಥಳದಲ್ಲಿ ನಡೆಯಲಿರುವ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ನೀವು ಕೂಡಾ ಖಂಡಿತವಾಗಿಯೂ ಸೇರಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ಅಕ್ಟೋಬರ್ 31 ರಂದು ನಾವು ವಾಲ್ಮೀಕಿ ಜಯಂತಿ ಕೂಡಾ ಆಚರಿಸುತ್ತೇವೆ. ನಾನು ಮಹರ್ಷಿ ವಾಲ್ಮೀಕಿ ಅವರಿಗೆ ನಮಿಸುತ್ತೇನೆ ಮತ್ತು ಈ ವಿಶೇಷ ಸಂದರ್ಭದಲ್ಲಿ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳನ್ನೂ ಕೋರುತ್ತೇನೆ. ಮಹರ್ಷಿ ವಾಲ್ಮೀಕಿಯ ಶ್ರೇಷ್ಠ ವಿಚಾರಗಳು ಕೋಟ್ಯಂತರ ಜನರಿಗೆ ಪ್ರೇರಣೆ ನೀಡುತ್ತವೆ, ಅವರಲ್ಲಿ ಬಲ ತುಂಬುತ್ತವೆ. ಅವು ಲಕ್ಷಾಂತರ–ಕೋಟ್ಯಂತರ ಬಡವರಿಗೆ ಮತ್ತು ಶೋಷಿತರಿಗೆ ದೊಡ್ಡ ಭರವಸೆಯಾಗಿವೆ. ಅವರಲ್ಲಿ ಆಸೆ ಮತ್ತು ನಂಬಿಕೆಯ ಬೆಳಕು ಮೂಡಿಸುತ್ತದೆ. ಅವು ಹೀಗೆನ್ನುತ್ತವೆ – ಯಾರಿಗೇ ಆಗಲಿ ಇಚ್ಛಾಶಕ್ತಿ ಇದ್ದರೆ, ಅವರು ಯಾವುದೇ ಕೆಲಸವನ್ನಾದರೂ ಬಹಳ ಸುಲಭವಾಗಿ ಮಾಡಬಹುದು ಎಂದು. ಅನೇಕ ಯುವಕ–ಯುವತಿಯರಿಗೆ ಅಸಾಧಾರಣ ಕಾರ್ಯ ಮಾಡುವಂತಹ ಶಕ್ತಿ ನೀಡುವುದು ಇದೇ ಸಂಕಲ್ಪ ಶಕ್ತಿ (ಇಚ್ಛಾಶಕ್ತಿ). ಮಹರ್ಷಿ ವಾಲ್ಮೀಕಿ ಸಕಾರಾತ್ಮಕ ಚಿಂತನೆಗಳಿಗೆ ಒತ್ತು ನೀಡಿದರು– ಅವರಿಗೆ ಸೇವೆ ಮತ್ತು ಮಾನವೀಯತೆ ಸರ್ವಶ್ರೇಷ್ಠವಾಗಿತ್ತು. ಮಹರ್ಷಿ ವಾಲ್ಮೀಕಿಯ ಆಚಾರ, ವಿಚಾರ ಮತ್ತು ಆದರ್ಶ ಇಂದು ನವ ಭಾರತದ ನಮ್ಮ ಸಂಕಲ್ಪಕ್ಕೆ ಸ್ಫೂರ್ತಿಯೂ ಆಗಿದೆ ಮತ್ತು ದಿಕ್ಸೂಚಿಯೂ ಆಗಿದೆ. ಭವಿಷ್ಯದ ಪೀಳಿಗೆಗಳಿಗೆ ಮಾರ್ಗದರ್ಶನಕ್ಕಾಗಿ ರಾಮಾಯಣದಂತಹ ಶ್ರೇಷ್ಠ ಗ್ರಂಥ ರಚಿಸಿದ ಮಹರ್ಷಿ ವಾಲ್ಮೀಕಿಯವರಿಗೆ ನಾವು ಸದಾಕಾಲ ಕೃತಜ್ಞರಾಗಿರೋಣ.
ಅಕ್ಟೋಬರ್ 31 ರಂದು ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ನಾವು ಕಳೆದುಕೊಂಡೆವು. ನಾನು ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಕಾಶ್ಮೀರದ ಪುಲ್ವಾಮಾ ಸಂಪೂರ್ಣ ಭಾರತಕ್ಕೆ ಶಿಕ್ಷಣ ನೀಡುವಲ್ಲಿ ಗಣನೀಯ ಪಾತ್ರ ವಹಿಸುತ್ತಿದೆ. ಇಂದು ದೇಶಾದ್ಯಂತ ಮಕ್ಕಳು ತಮ್ಮ ಹೋಮ್ ವರ್ಕ್ ಮಾಡುವಾಗ, ನೋಟ್ಸ್ ಸಿದ್ಧಪಡಿಸುವಾಗ ಇದರ ಹಿಂದೆ ಎಲ್ಲೋ ಒಂದುಬ ಕಡೆ ಪುಲ್ವಾಮಾದ ಜನತೆಯ ಕಠಿಣ ಶ್ರಮ ಖಂಡಿತಾ ಅಡಗಿರುತ್ತದೆ. ಕಾಶ್ಮೀರ ಕಣಿವೆಯು, ಸಂಪೂರ್ಣ ದೇಶದ, ಸರಿ ಸುಮಾರು ಶೇಕಡಾ 90 ರಷ್ಟು ಪೆನ್ಸಿಲ್ ಸ್ಲೇಟ್, ಮರದ ಪಟ್ಟಿಯ ಬೇಡಿಕೆಯನ್ನು ಪೂರೈಸುತ್ತದೆ, ಅದರಲ್ಲಿ ಬಹುದೊಡ್ಡ ಪಾಲುದಾರಿಕೆ ಪುಲ್ವಾಮಾ ಪ್ರದೇಶದ್ದಾಗಿದೆ. ಒಂದು ಕಾಲದಲ್ಲಿ ನಾವು ಪೆನ್ಸಿಲ್ ಗಾಗಿ ವಿದೇಶಗಳಿಂದ ಕಟ್ಟಿಗೆ ತರಿಸಿಕೊಳ್ಳುತ್ತಿದ್ದೆವು, ಆದರೆ ಈಗ ನಮ್ಮ ಪುಲ್ವಾಮಾ, ಈ ವಿಷಯದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುತ್ತಿದೆ. ವಾಸ್ತವದಲ್ಲಿ, ಪುಲ್ವಾಮಾದ ಈ ಪೆನ್ಸಿಲ್ ಸ್ಲೇಟ್ ಗಳು ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ. ಕಣಿವೆಯ ಚಿನಾರ್ ನ ಕಟ್ಟಿಗೆಯಲ್ಲಿ ಅಧಿಕ ತೇವಾಂಶ ಮತ್ತು ಮೃದುತ್ವ ಇರುತ್ತದೆ, ಈ ಗುಣವೇ ಅದನ್ನು ಪೆನ್ಸಿಲ್ ತಯಾರಿಕೆಗೆ ಸೂಕ್ತವಾಗಿಸುತ್ತದೆ. ಪುಲ್ವಾಮಾದ, ಉಕ್ಖೂವನ್ನು, ಪೆನ್ಸಿಲ್ ಗ್ರಾಮದ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಪೆನ್ಸಿಲ್ ಸ್ಲೇಟ್ ತಯಾರಿಸುವ ಅನೇಕ ಘಟಕಗಳಿದ್ದು ಉದ್ಯೋಗಾವಕಾಶ ಒದಗಿಸುತ್ತಿವೆ ಮತ್ತು ಇವುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ.
ಸ್ನೇಹಿತರೇ, ಇಲ್ಲಿನ ಜನರು ಏನಾದರೊಂದು ಹೊಸತನ್ನು ಮಾಡುವ ನಿರ್ಧಾರ ಕೈಗೊಂಡಾಗ, ಕೆಲಸದ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾದಾಗ, ಮತ್ತು ತಮ್ಮನ್ನು ತಾವು ಈ ಕೆಲಸಕ್ಕೆ ಸಮರ್ಪಿಸಿಕೊಂಡಾಗ ಪುಲ್ವಾಮಾಗೆ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅಂತೆಯೇ ಕಷ್ಟಪಟ್ಟು ದುಡಿಯುವ ವ್ಯಕ್ತಿಗಳಲ್ಲಿ ಒಬ್ಬರು – ಮಂಜೂರ್ ಅಹ್ಮದ್ ಅಲಾಯಿ. ಮೊದಲಿಗೆ ಮಂಜೂರ್ ಅವರು ಕಟ್ಟಿಗೆ ಕಡಿಯುವ ಓರ್ವ ಸಾಮಾನ್ಯ ಕೂಲಿಕಾರರಾಗಿದ್ದರು. ತಮ್ಮ ಮುಂದಿನ ಪೀಳಿಗೆ ಬಡತನದ ಬವಣೆ ಅನುಭವಿಸದಂತೆ ಮಾಡಲು, ಏನಾದರೂ ಹೊಸದನ್ನು ಮಾಡಬೇಕೆಂದು ಮಂಜೂರ್ ಬಯಸುತ್ತಿದ್ದರು. ಅವರು ತಮ್ಮ ಬಳಿಯಿದ್ದ ಭೂಮಿಯನ್ನು ಮಾರಾಟ ಮಾಡಿ Apple Wooden Box, ಅಂದರೆ ಸೇಬು ಇರಿಸುವ ಮರದ ಪೆಟ್ಟಿಗೆ ತಯಾರಿಸುವ ಘಟಕ ಪ್ರಾರಂಭಿಸಿದರು. ತಮ್ಮ ಸಣ್ಣ ವ್ಯಾಪಾರದಲ್ಲಿ ತೊಡಗಿಕೊಂಡಿರುವಾಗ, ಮಂಜೂರ್ ಅವರಿಗೆ ಪೆನ್ಸಿಲ್ ತಯಾರಿಕೆಯಲ್ಲಿ ಚಿನಾರ್ ಮರದ ಉಪಯೋಗ ಪ್ರಾರಂಭಿಸಲಾಗಿದೆ ಎಂಬ ವಿಚಾರ ಎಲ್ಲಿಂದಲೋ ತಿಳಿದು ಬಂತು. ಈ ವಿಷಯ ತಿಳಿದುಬಂದ ನಂತರ ಮಂಜೂರ್ ಅವರು, ತಮ್ಮ ಉದ್ಯಮಶೀಲತೆಯನ್ನು ಪರಿಚಯಿಸುತ್ತಾ, ಕೆಲವು ಪ್ರಸಿದ್ಧ ಪೆನ್ಸಿಲ್ ತಯಾರಿಕಾ ಘಟಕಗಳಿಗೆ ಚಿನಾರ್ ಮರದ ಪೆಟ್ಟಿಗೆಗಳನ್ನು ಪೂರೈಕೆ ಮಾಡಲು ಆರಂಭಿಸಿದರು. ಮಂಜೂರ್ ಅವರಿಗೆ ಇದು ಬಹಳ ಲಾಭದಾಯಕವಾಗಿ ಕಂಡುಬಂತು ಮತ್ತು ಅವರ ಆದಾಯವೂ ಉತ್ತಮ ರೀತಿಯಲ್ಲಿ ಹೆಚ್ಚುತ್ತಾ ಹೋಯಿತು. ಕಾಲಕ್ರಮೇಣ ಅವರು ಪೆನ್ಸಿಲ್ ಸ್ಲೇಟ್ ತಯಾರಿಕಾ ಯಂತ್ರೋಪಕರಣ ಖರೀದಿಸಿದರು ಮತ್ತು ನಂತರ ದೇಶದ ದೊಡ್ಡ ದೊಡ್ಡ ಕಂಪೆನಿಗಳಿಗೆ ಪೆನ್ಸಿಲ್ ಸ್ಲೇಟ್ ಸರಬರಾಜು ಮಾಡಲಾರಂಭಿಸಿದರು. ಇಂದು ಮಂಜೂರ್ ಅವರ ಈ ವ್ಯಾಪಾರದ ವಹಿವಾಟು ಕೋಟಿಗಳಲ್ಲಿದೆ ಮತ್ತು ಅವರು ಸುಮಾರು ಇನ್ನೂರು ಮಂದಿಗೆ ಜೀವನೋಪಾಯ ಒದಗಿಸುತ್ತಿದ್ದಾರೆ. ಇಂದಿನ ಮನದ ಮಾತಿನ ಮುಖಾಂತರ, ಸಮಸ್ತ ದೇಶವಾಸಿಗಳ ಪರವಾಗಿ ನಾನು ಮಂಜೂರ್ ಅವರೂ ಸೇರಿದಂತೆ, ಪುಲ್ವಾಮಾದಲ್ಲಿ ದುಡಿಯುವ ಸೋದರ–ಸೋದರಿಯರ ಜೊತೆಗೆ ಅವರ ಕುಟುಂಬದವರನ್ನು ಪ್ರಶಂಸಿಸುತ್ತೇನೆ –ನೀವೆಲ್ಲರೂ, ದೇಶದ ಯುವ ಜನತೆಯ ಮನಸ್ಸುಗಳಿಗೆ ಶಿಕ್ಷಣ ನೀಡುವಲ್ಲಿ ನಿಮ್ಮ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವಿರಿ.
ನನ್ನ ಪ್ರೀತಿಯ ದೇಶವಾಸಿಗಳೇ, ಲಾಕ್ಡೌನ್ ಸಮಯದಲ್ಲಿ ತಂತ್ರಜ್ಞಾನ–ಆಧರಿತ ಸೇವಾ ಪೂರೈಕೆಯ (Technology-Based service delivery) ಹಲವು ಪ್ರಯೋಗಗಳು ನಮ್ಮ ದೇಶದಲ್ಲಿ ಆಗಿವೆ, ಮತ್ತು ಈಗ ಇವುಗಳನ್ನು ಬಹಳ ದೊಡ್ಡ ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ ಕಂಪೆನಿಗಳೇ ಮಾಡಬಹುದು ಎಂದೇನಿಲ್ಲ. ಜಾರ್ಖಂಡ್ ನಲ್ಲಿ ಈ ಕೆಲಸವನ್ನು ಮಹಿಳೆಯರ ಸ್ವ–ಸಹಾಯ ಗುಂಪು ಮಾಡಿ ತೋರಿಸಿದೆ. ಈ ಮಹಿಳೆಯರು ರೈತರ ಹೊಲಗಳಿಂದ ತರಕಾರಿ ಮತ್ತು ಹಣ್ಣುಗಳನ್ನು ತೆಗೆದುಕೊಂಡುಹೋಗಿ ನೇರವಾಗಿ ಮನೆಗಳಿಗೆ ತಲುಪಿಸಿದರು. ಈ ಮಹಿಳೆಯರು ‘ಆಜೀವಿಕಾ ಫಾರ್ಮ್ ಫ್ರೆಷ್’ (‘आजीविका farm fresh’)ಎಂಬ ಹೆಸರಿನ ಒಂದು ಆಪ್ (app)ತಯಾರಿಸಿದರು ಮತ್ತು ಅದರ ಮುಖಾಂತರ ಜನರು ಸುಲಭವಾಗಿ ತರಕಾರಿ ತರಿಸಿಕೊಳ್ಳಬಹುದಾಗಿತ್ತು. ಈ ಪ್ರಯತ್ನದಿಂದಾಗಿ ರೈತರಿಗೆ ತಮ್ಮ ತರಕಾರಿ ಮತ್ತು ಹಣ್ಣುಗಳಿಗೆ ಉತ್ತಮ ಬೆಲೆ ದೊರೆಯಿತು ಮತ್ತು ಜನರಿಗೆ ಕೂಡಾ ತಾಜಾ ತರಕಾರಿಗಳು ದೊರೆಯಲಾರಂಭಿಸಿತು. ಅಲ್ಲಿ ‘ಆಜೀವಿಕಾ ಫಾರ್ಮ್ ಫ್ರೆಷ್’ (‘आजीविका farm fresh’) ಆಪ್ (app)ನ ಉಪಾಯ ಬಹಳ ಪ್ರಸಿದ್ಧಿಯಾಗುತ್ತಿದೆ. ಲಾಕ್ಡೌನ್ ಸಮಯದಲ್ಲಿ ಇವರುಗಳು 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ಹಣ್ಣು–ತರಕಾರಿಗಳನ್ನು ಜನರಿಗೆ ತಲುಪಿಸಿದ್ದಾರೆ. ಸ್ನೇಹಿತರೆ, ಕೃಷಿ ಕ್ಷೇತ್ರದಲ್ಲಿ ಹೊಸ ಸಂಭಾವ್ಯತೆಗಳನ್ನು ನೋಡಿ ನಮ್ಮ ಯುವ ಜನತೆ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಸೇರುತ್ತಿದ್ದಾರೆ. ಮಧ್ಯಪ್ರದೇಶದ ಬಡವಾಸಿಯದ ಅತುಲ್ ಪಾಟೀದಾರ್ ಅವರು ತಮ್ಮ ಕ್ಷೇತ್ರದ ಸುಮಾರು ನಾಲ್ಕು ಸಾವಿರ ರೈತರನ್ನು ಡಿಜಿಟಲ್ ರೂಪದಲ್ಲಿ ಒಂದುಗೂಡಿಸಿದ್ದಾರೆ. ಈ ರೈತ ಅತುಲ್ ಪಾಟೀದಾರ್ ಅವರ ಇ ಪ್ಲಾಟ್ ಫಾರಂ ಫಾರ್ಮ ಕಾರ್ಡ್ (E-platform farm card) ಮೂಲಕ, ಜನರು ಕೃಷಿ ಪರಿಕರ ಅಂದರೆ ಗೊಬ್ಬರ, ಬೀಜ, ಕೀಟನಾಶಕ, ಶೀಲೀಂಧ್ರನಾಶಕ ಇತ್ಯಾದಿಗಳ ಪೂರೈಕೆಯನ್ನು ಮನೆ ಬಾಗಿಲಿನಲ್ಲೇ ಪಡೆದುಕೊಳ್ಳುತ್ತಿದ್ದಾರೆ ಅಂದರೆ, ರೈತರ ಅಗತ್ಯ ವಸ್ತುಗಳು ಅವರ ಮನೆ ಬಾಗಿಲಿನಲ್ಲೇ ದೊರೆಯುತ್ತಿವೆ. ಈ ಡಿಜಿಟಲ್ ವೇದಿಕೆಯಲ್ಲಿ ಆಧುನಿಕ ಕೃಷಿ ಉಪಕರಣಗಳು ಕೂಡಾ ಬಾಡಿಗೆಗೆ ದೊರೆಯುತ್ತವೆ. ಲಾಕ್ಡೌನ್ ಸಮಯದಲ್ಲಿ ಕೂಡಾ ಈ ಡಿಜಿಟಲ್ ವೇದಿಕೆಯ ಮುಖಾಂತರ ರೈತರಿಗೆ ಸಾವಿರಾರು ಪಾಕೆಟ್ ಡೆಲಿವರಿ ಮಾಡಲಾಗಿದ್ದು, ಅವುಗಳಲ್ಲಿ ಹತ್ತಿ ಮತ್ತು ತರಕಾರಿಗಳ ಬೀಜಗಳು ಕೂಡಾ ಇದ್ದವು. ಅತುಲ್ ಮತ್ತು ಅವರ ತಂಡ ರೈತರಲ್ಲಿ ತಂತ್ರಜ್ಞಾನದ ಅರಿವು ಮೂಡಿಸುತ್ತಿದೆ, ಆನ್ಲೈನ್ ಪಾವತಿ ಮತ್ತು ಖರೀದಿ ಕುರಿತು ಕಲಿಸುತ್ತಿದೆ.
ಸ್ನೇಹಿತರೆ, ಈ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಒಂದು ಘಟನೆಯ ಮೇಲೆ ನನ್ನ ಗಮನ ಹರಿಯಿತು. ಅಲ್ಲಿ ಒಂದು ಫಾರ್ಮರ್ ಪ್ರೊಡ್ಯೂಸರ್ ಕಂಪೆನಿಯು ಮೆಕ್ಕೆ ಜೋಳ ಬೆಳೆಯುವ ರೈತರಿಂದ ಮೆಕ್ಕೆ ಜೋಳ ಖರೀದಿಸಿತು. ಕಂಪೆನಿ ಈ ಬಾರಿ ರೈತರಿಗೆ ಮೂಲ ಬೆಲೆಗಿಂತ ಹೆಚ್ಚುವರಿಯಾಗಿ ಬೋನಸ್ ಕೂಡಾ ನೀಡಿತು. ರೈತರಿಗೆ ಇದರಿಂದ ಸಂತೋಷದೊಂದಿಗೆ ಆಶ್ಚರ್ಯವೂ ಆಯಿತು. ಕಂಪೆನಿಯನ್ನು ಕೇಳಿದಾಗ, ಭಾರತ ಸರ್ಕಾರ ತಂದಿರುವ ಹೊಸ ಕೃಷಿ ಕಾನೂನಿನ ಪ್ರಕಾರ, ರೈತ ಭಾರತದಲ್ಲಿ ಎಲ್ಲಿಯಾದರೂ ಬೆಳೆಯನ್ನು ಮಾರಲು ಸಾಧ್ಯವಾಗುತ್ತಿದೆ ಮತ್ತು ಅವರಿಗೆ ಉತ್ತಮ ಬೆಲೆ ದೊರೆಯುತ್ತಿದೆ, ಆದ್ದರಿಂದ ಈ ಹೆಚ್ಚುವರಿ ಲಾಭವನ್ನು ರೈತರೊಂದಿಗೆ ಹಂಚಿಕೊಳ್ಳಬೇಕೆಂಬ ವಿಷಯ ತಿಳಿದು ಬಂದಿತು. ಇದರಲ್ಲಿ ಅವರ ಹಕ್ಕು ಕೂಡಾ ಇದೆ ಆದ್ದರಿಂದಲೇ ಅವರು ರೈತರಿಗೆ ಬೋನಸ್ ನೀಡಿದರು. ಸ್ನೇಹಿತರೆ, ಬೋನಸ್ ಕಡಿಮೆಯಾಗಿರಬಹುದು, ಆದರೆ ಇದು ಬಹಳ ದೊಡ್ಡ ಆರಂಭವಾಗಿದೆ. ಹೊಸ ಕೃಷಿ–ಕಾನೂನಿನಿಂದ ತಳ ಮಟ್ಟದಲ್ಲಿ ಯಾವ ರೀತಿಯ ಬದಲಾವಣೆಗಳು ರೈತರ ಪರವಾಗಿ ಸಾಧ್ಯವಾಗಲಿದೆ ಎನ್ನುವುದು ನಮಗೆ ಇದರಿಂದ ತಿಳಿದುಬರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತಿನಲ್ಲಿ, ದೇಶವಾಸಿಗಳ ಅಸಾಧಾರಣ ಸಾಧನೆಗಳು, ನಮ್ಮ ದೇಶ, ನಮ್ಮ ಸಂಸ್ಕೃತಿಯ ವಿವಿಧ ಆಯಾಮಗಳ ಬಗ್ಗೆ, ನಿಮ್ಮೆಲ್ಲರೊಂದಿಗೆ ಮಾತನಾಡುವ ಅವಕಾಶ ದೊರೆಯಿತು. ನಮ್ಮ ದೇಶ ಪ್ರತಿಭಾವಂತ ವ್ಯಕ್ತಿಗಳಿಂದ ತುಂಬಿದೆ. ಇಂತಹ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿದಿದ್ದರೆ, ಅವರ ಕುರಿತು ಮಾತನಾಡಿ, ಬರೆಯಿರಿ ಮತ್ತು ಅವರ ಸಫಲತೆಗಳ ಬಗ್ಗೆ ಹಂಚಿಕೊಳ್ಳಿ. ಮುಂಬರುವ ಹಬ್ಬಗಳಿಗಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನೇಕಾನೇಕ ಶುಭಾಕಾಂಕ್ಷೆಗಳು. ಆದರೆ, ಒಂದು ಮಾತು ನೆನಪಿಡಿ, ಹಬ್ಬಗಳಲ್ಲಿ, ಈ ವಿಷಯಗಳನ್ನು ವಿಶೇಷವಾಗಿ ನೆನಪಿಟ್ಟುಕೊಳ್ಳಿ – ಮಾಸ್ಕ್ ಧರಿಸಬೇಕು, ಕೈಗಳನ್ನು ಸಾಬೂನಿನಿಂದ ತೊಳೆಯುತ್ತಿರಬೇಕು, ಎರಡು ಗಜಗಳ ಅಂತರವನ್ನು ಕಾಪಾಡಿಕೊಳ್ಳಬೇಕು.
ಸ್ನೇಹಿತರೆ, ಮುಂದಿನ ತಿಂಗಳು ಮತ್ತೊಮ್ಮೆ ನಿಮ್ಮೊಂದಿಗೆ ಮನದ ಮಾತು ಆಡುತ್ತೇನೆ, ಅನೇಕಾನೇಕ ಧನ್ಯವಾದ.
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ.
ಕೊರೊನಾದ ಈ ಕಾಲಘಟ್ಟದಲ್ಲಿ ಸಂಪೂರ್ಣ ಜಗತ್ತು ಅನೇಕ ಪರಿವರ್ತನೆಗಳನ್ನು ಎದುರಿಸುತ್ತಿದೆ. ಇಂದು, ಎರಡು ಗಜಗಳ ಅಂತರವು ಅನಿವಾರ್ಯ ಅಗತ್ಯವಾಗಿಬಿಟ್ಟಿದೆ, ಆದರೆ ಇದೇ ಸಂಕಟದ ಸಮಯವು ಕುಟುಂಬದ ಸದಸ್ಯರನ್ನು ಪರಸ್ಪರ ಬಾಂಧವ್ಯದಲ್ಲಿ ಕಟ್ಟಿಹಾಕಿದೆ ಮತ್ತು ಹತ್ತಿರಕ್ಕೆ ತರುವ ಕೆಲಸವನ್ನೂ ಮಾಡಿದೆ. ಆದರೆ ಇಷ್ಟು ದೀರ್ಘ ಸಮಯದವರೆಗೆ ಒಟ್ಟಿಗೆ ಇರುವುದು, ಹೇಗೆ ಬಾಳುವುದು, ಸಮಯ ಹೇಗೆ ಕಳೆಯುವುದು, ಪ್ರತಿ ಕ್ಷಣವೂ ಸಂತೋಷವಾಗಿರುವುದು ಹೇಗೆ? ಆದ್ದರಿಂದ ಅನೇಕ ಕುಟುಂಬಗಳಲ್ಲಿ ಸಮಸ್ಯೆಗಳು ಎದುರಾದವು ಅದಕ್ಕೆ ಕಾರಣವೆಂದರೆ, ಕುಟುಂಬದಲ್ಲಿ ಒಂದೇ ರೀತಿಯಾಗಿ ಸಂಸ್ಕಾರ ಪರವಾಗಿ ನಡೆಯುತ್ತಿದ್ದ ನಮ್ಮ ಸಂಪ್ರದಾಯಗಳು ಕಾಣೆಯಾಗಿರುವುದು. ಅನೇಕ ಕುಟುಂಬಗಳಲ್ಲಿ ಇಂತಹವುಗಳು ಕೊನೆಗೊಂಡಿವೆ ಮತ್ತು ಇದರಿಂದಾಗಿ, ಆ ಕೊರತೆಯಿಂದಾಗಿ, ಈ ಬಿಕ್ಕಟ್ಟಿನ ಸಮಯದಲ್ಲಿ ಕುಟುಂಬಗಳಿಗೆ ಸಮಯ ಕಳೆಯುವುದು ಸ್ವಲ್ಪ ಕಷ್ಟವಾಯಿತು ಮತ್ತು ಅದರಲ್ಲಿದ್ದ ಮುಖ್ಯವಾದ ವಿಷಯ ಯಾವುದು? ಪ್ರತಿ ಕುಟುಂಬದಲ್ಲಿ ಯಾರಾದರೊಬ್ಬ ವೃದ್ಧರು, ಕುಟುಂಬದ ಹಿರಿಯರು, ಕತೆಗಳನ್ನು ಹೇಳುತ್ತಿದ್ದರು ಮತ್ತು ಮನೆಯಲ್ಲಿ ಹೊಸ ಸ್ಫೂರ್ತಿ ಹೊಸ ಶಕ್ತಿ ತುಂಬುತ್ತಿದ್ದರು. ನಮ್ಮ ಪೂರ್ವಿಕರು ರೂಪಿಸಿದ ವಿಧಿ ವಿಧಾನಗಳು ಇಂದಿಗೂ ಎಷ್ಟು ಮಹತ್ವಪೂರ್ಣವಾಗಿವೆ ಮತ್ತು ಅವುಗಳು ಇಲ್ಲದಿರುವಾಗ ಅವುಗಳ ಕೊರತೆಯ ಅನುಭವವಾಗುತ್ತದೆ ಎಂದು ನಾವು ಅರಿತುಕೊಂಡಿರಬೇಕು. ನಾನು ಹೇಳಿದಂತೆ ಅಂತಹದ್ದೇ ಒಂದು ಪ್ರಕಾರವೆಂದರೆ ಕತೆಹೇಳುವ (ಸ್ಟೋರಿ ಟೆಲ್ಲಿಂಗ್) ಕಲೆಗಾರಿಕೆ. ಸ್ನೇಹಿತರೆ, ಕತೆಗಳ ಇತಿಹಾಸ ಮಾನವನ ನಾಗರಿಕತೆಯಷ್ಟೇ ಪುರಾತನವಾದದ್ದು.
ಎಲ್ಲಿ ಒಂದು ಆತ್ಮವಿರುತ್ತದೋ ಅಲ್ಲಿ ಒಂದು ಕತೆಯಿರುತ್ತದೆ. (`where there is a soul there is a story') ಕತೆಗಳು ಜನರ ಸೃಜನಾತ್ಮಕ ಮತ್ತು ಸಂವೇದನಾಶೀಲ ಭಾಗವನ್ನು ಹೊರತರುತ್ತವೆ, ಅವುಗಳನ್ನು ಬಹಿರಂಗಪಡಿಸುತ್ತವೆ. ಕತೆಯ ಶಕ್ತಿಯನ್ನು ಅನುಭವಿಸಬೇಕಾದರೆ, ತಾಯಿಯೊಬ್ಬಳು ತನ್ನ ಚಿಕ್ಕ ಮಗುವನ್ನು ಮಲಗಿಸುವುದಕ್ಕೆ ಅಥವಾ ಅದಕ್ಕೆ ಊಟ ಮಾಡಿಸುವುದಕ್ಕಾಗಿ ಕತೆ ಹೇಳುತ್ತಿರುವಾಗ ಆಕೆಯನ್ನು ನೋಡಬೇಕು. ನಾನು ನನ್ನ ಜೀವನದಲ್ಲಿ ಬಹಳ ದೀರ್ಘ ಕಾಲದವರೆಗೆ ಅಲೆದಾಡುವ ಮುನಿಯಂತಿದ್ದೆ. (A wandering ascetic) ಅಲ್ಲಿಂದಿಲ್ಲಿಗೆ ಅಲೆದಾಡುವುದೇ ನನ್ನ ಜೀವನವಾಗಿತ್ತು. ಪ್ರತಿ ದಿನ ಹೊಸ ಗ್ರಾಮ, ಹೊಸ ಜನರು, ಹೊಸ ಕುಟುಂಬ, ಆದರೆ, ನಾನು ಕುಟುಂಬಗಳಿಗೆ ಭೇಟಿ ನೀಡುತ್ತಿದ್ದಾಗ, ಮಕ್ಕಳೊಂದಿಗೆ ಖಂಡಿತವಾಗಿಯೂ ಮಾತನಾಡುತ್ತಿದ್ದೆ, ಮತ್ತು ಕೆಲವೊಮ್ಮೆ ಅವರನ್ನು ಮಕ್ಕಳೇ ನನಗೆ ಯಾವುದಾದರೊಂದು ಕತೆ ಹೇಳಿ ಎಂದು ಕೇಳುತ್ತಿದ್ದೆ, ನನಗೆ ಆಶ್ಚರ್ಯವಾಗುತ್ತಿತ್ತು, ಮಕ್ಕಳು ನನಗೆ ಹೇಳುತ್ತಿದ್ದರು, ಇಲ್ಲ ಅಂಕಲ್ ಕತೆ ಬೇಡಾ, ನಾವು ನಿಮಗೆ ಹಾಸ್ಯದ ಪ್ರಸಂಗ ಹೇಳುತ್ತೇವೆ. ಮತ್ತು ಅವರು ನನಗೆ ಕೂಡಾ ಇದೇ ಹೇಳುತ್ತಿದ್ದರು ಅಂಕಲ್ ನಮಗೆ ಹಾಸ್ಯ ವಿಷಯ ಹೇಳಿ ಎಂದು. ಅಂದರೆ ಅವರಿಗೆ ಕತೆಯ ಪರಿಚಯವೇ ಇರಲಿಲ್ಲ. ಹೆಚ್ಚುಕಡಿಮೆ ಅವರ ಜೀವನದಲ್ಲಿ ಹಾಸ್ಯ ಸಮ್ಮಿಳಿತವಾಗಿತ್ತು.
ಸ್ನೇಹಿತರೆ, ಭಾರತದಲ್ಲಿ ಕತೆ ಹೇಳುವ, ಉಪಾಖ್ಯಾನ ಹೇಳುವ ಶ್ರೀಮಂತ ಪರಂಪರೆ ಇದೆ. ಹಿತೋಪದೇಶ ಮತ್ತು ಪಂಚತಂತ್ರದ ಪರಂಪರೆಯಿರುವ ದೇಶವಾಸಿಗಳೆಂಬ ಹೆಮ್ಮೆ ನಮಗಿದೆ. ಕತೆಗಳಲ್ಲಿ ಪಶು–ಪಕ್ಷಿಗಳು ಮತ್ತು ಯಕ್ಷಿಣಿಯರ ಕಾಲ್ಪನಿಕ ಪ್ರಪಂಚವನ್ನು ಸೃಷ್ಟಿಸಲಾಗಿದೆ, ಇದರಿಂದಾಗಿ ವಿವೇಕ ಮತ್ತು ಬುದ್ಧಿಶಕ್ತಿಯ ಮಾತುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ನಮ್ಮಲ್ಲಿ ಕತೆಯ ಪರಂಪರೆಯಿದೆ. ಇದು ಧಾರ್ಮಿಕ ಕತೆಗಳನ್ನು ಹೇಳುವ ಪ್ರಾಚೀನ ಪದ್ಧತಿಯಾಗಿದೆ. ಇದರಲ್ಲಿ `ಕಥಾಕಾಲಕ್ಷೇಪವೂ' ಸೇರಿದೆ. ನಮ್ಮಲ್ಲಿ ವಿಧ ವಿಧವಾದ ಜಾನಪದ ಕತೆಗಳು ಚಾಲ್ತಿಯಲ್ಲಿವೆ. ತಮಿಳುನಾಡು ಮತ್ತು ಕೇರಳದಲ್ಲಿ ಕತೆ ಹೇಳುವ ಬಹಳ ಕುತೂಹಲಕಾರಿ ವಿಧಾನವಿದೆ. ಇದನ್ನು `ವಿಲ್ಲೂ ಪಾಟ್' ಎಂದು ಕರೆಯುತ್ತಾರೆ. ಇದರಲ್ಲಿ ಕತೆ ಮತ್ತು ಸಂಗೀತದ ಬಹಳ ಆಕರ್ಷಕ ಸಾಮರಸ್ಯವಿರುತ್ತದೆ. ಭಾರತದಲ್ಲಿ ತೊಗಲುಬೊಂಬೆಯಾಟದ ಜೀವಂತ ಪರಂಪರೆಯಿದೆ. ಇಂದಿನ ದಿನಗಳಲ್ಲಿ ವಿಜ್ಞಾನ (Science)ಮತ್ತು ವೈ ಜ್ಞಾನಿಕ ಕಲ್ಪನೆಯ (Science fiction) ಕತೆಗಳು ಮತ್ತು ಕತೆ ಹೇಳುವ ವಿಧಾನ ಜನಪ್ರಿಯವಾಗುತ್ತಿದೆ. ಕೆಲವರು ಕತೆ ಹೇಳುವ ಕಲೆಯನ್ನು ಮುಂದುವರಿಸಲು ಶಾಘನೀಯ ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನನಗೆ gaathastory.in ನಂತಹ website ನ ಬಗ್ಗೆ ತಿಳಿದುಬಂತು, ಇದನ್ನು ಅಮರ್ ವ್ಯಾಸ್ ಇತರರೊಂದಿಗೆ ಸೇರಿ ನಡೆಸುತ್ತಾರೆ. ಅಮರ್ ವ್ಯಾಸ್ ಅವರು ಐಐಎಂ (IIM) ಅಹಮದಾಬಾದ್ ನಲ್ಲಿ ಎಂಬಿಎ (IBM) ಓದಿದ ನಂತರ ವಿದೇಶಕ್ಕೆ ತೆರಳಿದ್ದರು, ಮತ್ತು ಪುನಃ ಹಿಂದಿರುಗಿ ಬಂದರು. ಈಗ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮತ್ತು ತಮ್ಮ ಸಮಯವನ್ನು ಮೀಸಲಿಟ್ಟು ಕತೆಗಳಿಗೆ ಸಂಬಂಧಿಸಿದಂತೆ ಇಂತಹ ಆಸಕ್ತಿಪೂರ್ಣ ಕೆಲಸ ಮಾಡುತ್ತಿದ್ದಾರೆ. ಇಂತಹ ಅನೇಕ ಪ್ರಯತ್ನಗಳು ಗ್ರಾಮೀಣ ಭಾರತದ ಕತೆಗಳನ್ನು ಉತ್ತಮವಾಗಿ ಪ್ರಚಾರ ಮಾಡುತ್ತಿರುವೆ. ವೈಶಾಲಿ ವ್ಯವಹಾರೇ ದೇಶಪಾಂಡೆಯಂತಹ ಅನೇಕ ವ್ಯಕ್ತಿಗಳು ಇದನ್ನು ಮರಾಠಿ ಭಾಷೆಯಲ್ಲಿ ಜನಪ್ರಿಯಗೊಳಿಸುತ್ತಿದ್ದಾರೆ.
ಚೆನ್ನೈನ ಶ್ರೀವಿದ್ಯಾ ವೀರ ರಾಘವನ್ ಅವರು ಕೂಡಾ ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಕತೆಗಳನ್ನು ಪ್ರಚಾರ, ಪ್ರಸಾರ ಮಾಡುವುದರಲ್ಲಿ ತೊಡಗಿಕೊಂಡಿದ್ದರೆ, ಕಥಾಲಯ್ ಮತ್ತು The Indian story telling network ಹೆಸರಿನ ಎರಡು website ಗಳು ಕೂಡಾ ಈ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿವೆ. ಗೀತಾ ರಾಮಾನುಜನ್ ಅವರು kathalaya.org ನಲ್ಲಿ ಕತೆಗಳನ್ನು ಕ್ರೋಢೀಕರಿಸಿದ್ದರೆ, The Indian story telling network ಮುಖಾಂತರ ಕೂಡಾ ಬೇರೆ ಬೇರೆ ನಗರಗಳ ಕತೆಗಾರರ (story tellers) network ಸಿದ್ಧಪಡಿಸಲಾಗುತ್ತಿದೆ. ಬಾಪೂರವರ ಕುರಿತ ಕತೆಗಳಲ್ಲಿ ಬಹಳ ಉತ್ಸಾಹಿತರಾಗಿರುವ ವಿಕ್ರಮ್ ಶ್ರೀಧರ್ ಎನ್ನುವ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿದ್ದಾರೆ. ಅಲ್ಲದೇ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇನ್ನೂ ಅನೇಕರಿರಬಹುದು, –ನೀವು ಅವರುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಖಂಡಿತವಾಗಿಯೂ ಹಂಚಿಕೊಳ್ಳಿ.
ಇಂದು ನಮ್ಮೊಂದಿಗೆ ಬೆಂಗಳೂರು Story telling society ಯ ಸೋದರಿ ಅಪರ್ಣಾ ಆತ್ರೇಯ ಮತ್ತು ಇತರ ಕೆಲವು ಸದಸ್ಯರಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡೋಣ ಮತ್ತು ಅವರ ಅನುಭವ ತಿಳಿದುಕೊಳ್ಳೋಣ.
ಪ್ರಧಾನಮಂತ್ರಿ:- ಹಲೋ
ಅಪರ್ಣಾ :- ಆದರಣೀಯ ಪ್ರಧಾನಮಂತ್ರಿಗಳೇ ನಮಸ್ಕಾರ. ನೀವು ಹೇಗಿದ್ದೀರಿ ?
ಪ್ರಧಾನ ಮಂತ್ರಿ :- ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ ಅಪರ್ಣಾ ಅವರೇ?
ಅಪರ್ಣಾ :- ಬಹಳ ಚೆನ್ನಾಗಿದ್ದೇನೆ ಸರ್. ನಮ್ಮಂತಹ ಕಲಾವಿದರನ್ನು ಈ ವೇದಿಕೆಗೆ ಕರೆದಿದ್ದೀರಿ ಮತ್ತು ನಮ್ಮೊಂದಿಗೆ ಮಾತನಾಡುತ್ತಿರುವುದಕ್ಕೆ ಎಲ್ಲಕ್ಕಿಂತ ಮೊದಲು Bangalore Story Telling Society ಪರವಾಗಿ ಧನ್ಯವಾದ ಹೇಳಲು ಬಯಸುತ್ತೇನೆ.
ಪ್ರಧಾನ ಮಂತ್ರಿ:- ಇಂದು ಬಹಶಃ ನಿಮ್ಮ ಪೂರ್ತಿ ತಂಡ ನಿಮ್ಮೊಂದಿಗೆ ಕುಳಿತಿದೆ ಎಂದು ನಾನು ಕೇಳಿದ್ದೇನೆ.
ಅಪರ್ಣಾ :- ಹೌದು.. ನಿಜ | ನಿಜ ಸರ್ |
ಪ್ರಧಾನ ಮಂತ್ರಿ :- ಸರಿ ನಿಮ್ಮ ತಂಡದ ಪರಿಚಯ ಮಾಡಿಸಿದರೆ ಚೆನ್ನಾಗಿರುತ್ತದೆ. ಇದರಿಂದ ಮನ್ ಕಿ ಬಾತ್ ನ ಶ್ರೋತೃಗಳಿಗೆ ನೀವು ನಡೆಸುತ್ತಿರುವ ಇಷ್ಟು ದೊಡ್ಡ ಅಭಿಯಾನದ ಪರಿಚಯವಾಗುತ್ತದೆ.
ಅಪರ್ಣಾ:- ಸರ್. ನನ್ನ ಹೆಸರು ಅಪರ್ಣಾ ಆತ್ರೇಯ. ನಾನು ಇಬ್ಬರು ಮಕ್ಕಳ ತಾಯಿ, ಭಾರತೀಯ ವಾಯುಸೇನೆಯ ಅಧಿಕಾರಿಯ ಪತ್ನಿ ಮತ್ತು ಓರ್ವ passionate storyteller ಆಗಿದ್ದೇನೆ ಸರ್. ಕತೆ ಹೇಳುವ ಅಭ್ಯಾಸ 15 ವರ್ಷಗಳ ಹಿಂದೆ ನಾನು ಸಾಫ್ಟ್ ವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾಗ ಆರಂಭವಾಯಿತು. ಆಗ ನಾನು CSR projects ನಲ್ಲಿ voluntary ಕೆಲಸ ಮಾಡುವುದಕ್ಕಾಗಿ ಹೋಗಿದ್ದಾಗ ಸಾವಿರಾರು ಮಕ್ಕಳಿಗೆ ಕತೆಗಳ ಮುಖಾಂತರ ಶಿಕ್ಷಣ ನೀಡುವ ಅವಕಾಶ ದೊರೆತಿತ್ತು ಮತ್ತು ನಾನು ಹೇಳುತ್ತಿದ್ದ ಈ ಕತೆ ಅವರು ತಮ್ಮ ಅಜ್ಜಿಯಿಂದ ಕೇಳಿದ್ದರು. ಆದರೆ ಕತೆ ಕೇಳುವ ಸಮಯದಲ್ಲಿ ನಾನು ಆ ಮಕ್ಕಳ ಮುಖದಲ್ಲಿ ಕಂಡ ಸಂತೋಷ ನಾನು ನಿಮಗೆ ಏನೆಂದು ಹೇಳಲಿ, ಎಷ್ಟೊಂದು ಮಂದಹಾಸವಿತ್ತು, ಎಷ್ಟೊಂದು ಸಂತೋಷವಿತ್ತು, ನನ್ನ ಜೀವನದಲ್ಲಿ ಕತೆ ಹೇಳುವುದು (Storytelling) ನನ್ನ ಜೀವನದ ಒಂದು ಗುರಿಯಾಗಬೇಕೆಂದು ನಾನು ಆಗಲೇ ನಿರ್ಧರಿಸಿಬಿಟ್ಟೆ ಸರ್.
ಪ್ರಧಾನ ಮಂತ್ರಿ:- ನಿಮ್ಮ ತಂಡದಲ್ಲಿ ಮತ್ಯಾರಿದ್ದಾರೆ?
ಅಪರ್ಣಾ:- ನನ್ನೊಂದಿಗೆ ಶೈಲಜಾ ಸಂಪತ್ ಇದ್ದಾರೆ.
ಶೈಲಜಾ:- ನಮಸ್ಕಾರ ಸರ್ |
ಪ್ರಧಾನ ಮಂತ್ರಿ:- ನಮಸ್ತೇ |
ಶೈಲಜಾ:- ನಾನು ಶೈಲಜಾ ಸಂಪತ್ ಮಾತನಾಡುತ್ತಿದ್ದೇನೆ. ನಾನು ಮೊದಲು ಶಿಕ್ಷಕಿಯಾಗಿದ್ದೆ. ನಂತರ ನನ್ನ ಮಕ್ಕಳು ದೊಡ್ಡವರಾದಾಗ ನಾನು ಥಿಯೇಟರ್ ನಲ್ಲಿ ಕೆಲಸ ಆರಂಭಿಸಿದೆ ಮತ್ತು ಅಂತಿಮವಾಗಿ ಕತೆಗಳನ್ನು ಕೇಳಿಸುವುದರಲ್ಲಿ ಅತ್ಯಂತ ಹೆಚ್ಚು ಸಂತೃಪ್ತಿ ದೊರೆಯಿತು.
ಪ್ರಧಾನ ಮಂತ್ರಿ:- ಧನ್ಯವಾದ !
ಶೈಲಜಾ:- ನನ್ನೊಂದಿಗೆ ಸೌಮ್ಯಾ ಇದ್ದಾರೆ |
ಸೌಮ್ಯಾ:- ನಮಸ್ಕಾರ ಸರ್ !
ಪ್ರಧಾನಮಂತ್ರಿ:- ನಮಸ್ತೇ!
ಸೌಮ್ಯಾ:- ನನ್ನ ಹೆಸರು ಸೌಮ್ಯಾ ಶ್ರೀನಿವಾಸನ್ | ನಾನು ಓರ್ವ psychologist ಆಗಿದ್ದೇನೆ. ಮಕ್ಕಳು ಮತ್ತು ದೊಡ್ಡವರೊಂದಿಗೆ ನಾನು ಕೆಲಸ ಮಾಡುವಾಗ, ನಾನು ಕತೆಗಳ ಮುಖಾಂತರ ಮನುಷ್ಯನ ನವರಸಗಳನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತೇನೆ ಮತ್ತು ಅವರುಗಳೊಂದಿಗೆ ಚರ್ಚಿಸುತ್ತೇನೆ ಕೂಡಾ. `ಗುಣಪಡಿಸುವುದು ಮತ್ತು ಪರಿವರ್ತನಾತ್ಮಕ ಕತೆ ಹೇಳುವುದು' (`Healing and transformative storytelling') ಇದು ನನ್ನ ಗುರಿಯಾಗಿದೆ.
ಅಪರ್ಣಾ:- ನಮಸ್ತೇ ಸರ್ !
ಪ್ರಧಾನ ಮಂತ್ರಿ:- ನಮಸ್ತೇ.
ಅಪರ್ಣಾ: ನನ್ನ ಹೆಸರು ಅಪರ್ಣಾ ಜೈಶಂಕರ್. ಅಂದಹಾಗೆ ನಾನು ನನ್ನ ತಾಯಿಯ ಅಪ್ಪ–ಅಮ್ಮನ ಮತ್ತು ತಂದೆಯ ತಾಯಿಯ (ಅಜ್ಜ–ಅಜ್ಜಿಯರ) ಜೊತೆಯಲ್ಲಿ ಈ ದೇಶದ ಅನೇಕ ಭಾಗಗಳಲ್ಲಿ ಬೆಳೆದು ದೊಡ್ಡವಳಾಗಿರುವುದು ನನ್ನ ಸೌಭಾಗ್ಯವಾಗಿದೆ. ಆದ್ದರಿಂದ ರಾಮಾಯಣ, ಪುರಾಣ ಮತ್ತು ಗೀತೆಯ ಕತೆಗಳು ನನಗೆ ಅನುವಂಶಿಕವಾಗಿ ಪ್ರತಿ ದಿನ ಕೇಳಲು ಸಿಗುತ್ತಿತ್ತು ಮತ್ತು Bangalore Storytelling Society ನಂತಹ ಸಂಸ್ಥೆಯಿರುವಾಗ ನಾನು storyteller ಆಗಲೇ ಬೇಕಿತ್ತು. ನನ್ನೊಂದಿಗೆ ನನ್ನ ಒಡನಾಡಿ ಲಾವಣ್ಯ ಪ್ರಸಾದ್ ಇದ್ದಾರೆ.
ಪ್ರಧಾನ ಮಂತ್ರಿ:- ಲಾವಣ್ಯಾ ಅವರೇ, ನಮಸ್ತೇ!
ಲಾವಣ್ಯ:- ನಮಸ್ತೇ ಸರ್. ನಾನು ಓರ್ವ ಎಲೆಕ್ಟ್ರಿಕ್ ಇಂಜನಿಯರ್ ಈಗ ವೃತ್ತಿಪರ ಸ್ಟೋರಿಟೆಲ್ಲರ್ ಆಗಿದ್ದೇನೆ. ನಾನು ನನ್ನ ತಾತನವರಿಂದ ಕತೆಗಳನ್ನು ಕೇಳುತ್ತಲೇ ಬೆಳೆದು ದೊಡ್ಡವಳಾದೆ. ನಾನು ಹಿರಿಯ ನಾಗರಿಕರೊಂದಿಗೆ ಕೆಲಸ ಮಾಡುತ್ತೇನೆ. ಬೇರುಗಳು ಎಂದು ಕರೆಯುವ ನನ್ನ ವಿಶೇಷ ಪ್ರಾಜೆಕ್ಟ್ ನಲ್ಲಿ ನಾನು ಹಿರಿಯ ನಾಗರಿಕರು ತಮ್ಮ ಜೀವನದ ಕತೆಗಳನ್ನು ತಮ್ಮ ಕುಟುಂಬಗಳಿಗಾಗಿ ದಾಖಲಿಸಲು ನಾನು ಅವರಿಗೆ ಸಹಾಯ ಮಾಡುತ್ತೇನೆ. (I am an Electrical Engineer turned professional storyteller. Sir, I grew up listening to stories from my grandfather. I work with senior citizens. In my special project called `Roots' where I help them document their life stories for their families.)
ಪ್ರಧಾನ ಮಂತ್ರಿ:- ಲಾವಣ್ಯಾ ಅವರಿಗೆ, ನಿಮಗೆ ಅಭಿನಂದನೆಗಳು. ನೀವು ಹೇಳಿದ ಹಾಗೆ ನಾನು ಕೂಡಾ ಒಮ್ಮೆ `ಮನದ ಮಾತಿನಲ್ಲಿ' ಎಲ್ಲರಿಗೂ ಹೇಳಿದ್ದೆ, ನೀವುಗಳು ಕೂಡಾ ಕುಟುಂಬದಲ್ಲಿ ನಿಮ್ಮ ಅಜ್ಜ–ಅಜ್ಜಿಯರಿದ್ದರೆ, ಅವರುಗಳಿಂದ ಅವರ ಬಾಲ್ಯದ ಕತೆಗಳನ್ನು ಹೇಳಿರೆಂದು ಕೇಳಿ ಮತ್ತು ಅವುಗಳನ್ನು ರೆಕಾರ್ಡ್ ಮಾಡಿಕೊಳ್ಳಿ, ಮುಂದೆ ಬಹಳ ಉಪಯೋಗಕ್ಕೆ ಬರುತ್ತದೆ ಎಂದು. ನೀವೆಲ್ಲರೂ ನಿಮ್ಮ ಮತ್ತು ನಿಮ್ಮ ಕಲೆ, ನಿಮ್ಮ ಸಂವಹನ ಕೌಶಲ್ಯ (communication skill) ಮತ್ತು ಕಡಿಮೆ ಶಬ್ದಗಳಲ್ಲಿ ಬಹಳ ಉತ್ತಮ ರೀತಿಯಲ್ಲಿ ನಿಮ್ಮ ನಿಮ್ಮ ಪರಿಚಯ ಮಾಡಿಕೊಂಡಿರಿ ಇದಕ್ಕಾಗಿ ಕೂಡಾ ನಾನು ನಿಮಗೆ ಅಭಿನಂದನೆ ಹೇಳುತ್ತೇನೆ.
ನನ್ನ ನಲ್ಮೆಯ ದೇಶವಾಸಿಗಳೇ, ಬನ್ನಿ! ಈಗ ಕಥಾಪ್ರಪಂಚದಿಂದ ಮುಂದಕ್ಕೆ ಸಪ್ತಸಮುದ್ರಗಳ ಆಚೆ ಪಯಣಿಸೋಣ. ಈ ಧ್ವನಿಯನ್ನು ಕೇಳಿರಿ.
“ನಮಸ್ಕಾರ, ನನ್ನ ಸಹೋದರ, ಸಹೋದರಿಯರೇ! ನನ್ನ ಹೆಸರು ಸೇದೂ ದೆಂಬೇಲೆ. ನಾನು ಪಶ್ಚಿಮ ಆಫ್ರಿಕಾದ `ಮಾಲಿ’ ದೇಶದವನು. ನನಗೆ ಫೆಬ್ರವರಿ ತಿಂಗಳಿನಲ್ಲಿ ಭಾರತದ ಬೃಹತ್ ಧಾರ್ಮಿಕ ಉತ್ಸವ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಯಿತು. ನನಗಂತೂ ಇದು ಅತಿ ಹೆಮ್ಮೆ ತರುವ ವಿಷಯ. ನನಗೆ ಕುಂಭಮೇಳದಲ್ಲಿ ಪಾಲ್ಗೊಂಡು ತುಂಬಾ ಒಳ್ಳೆಯ ಅನುಭವಗಳಾದವುಹಾಗೂ ಭಾರತೀಯ ಸಂಸ್ಕøತಿಯನ್ನು ನೋಡಿ ಬಹಳಷ್ಟು ಕಲಿಯಲು ಸಾಧ್ಯವಾಯಿತು. ಭಾರತದ ಬಗ್ಗೆ ಇನ್ನೂ ಹೆಚ್ಚಿನ ಅರಿವು ದೊರೆಯಲು ಮತ್ತೊಮ್ಮೆ ನಮಗೆ ಭಾರತಕ್ಕೆ ಭೇಟಿ ಕೊಡುವ ಅವಕಾಶ ಕಲ್ಪಿಸಿ ಎಂದು ವಿನಂತಿಸುತ್ತೇನೆ. ನಮಸ್ಕಾರ. ’’
ಪ್ರಧಾನಮಂತ್ರಿ: ಇದು ಸ್ವಾರಸ್ಯಕರವಾಗಿತ್ತಲ್ಲವೇ! ಇದು ಮಾಲಿ ದೇಶದ ಸೇದೂ ದೆಂಬೇಲೆಯ ವೃತ್ತಾಂತ. ಮಾಲಿಯು, ಭಾರತದಿಂದ ದೂರವಿರುವ ಪಶ್ಚಿಮ ಆಫ್ರಿಕಾದ ಒಂದು ದೊಡ್ಡ ಮತ್ತು ಬರೀ ಭೂಪ್ರದೇಶದಿಂದ ಸುತ್ತುವರಿದ ಒಂದು ದೇಶ. ಸೇದೂ ದೆಂಬೇಲೆ, ಮಾಲಿ ದೇಶದ ಕಿಟಾ ನಗರದ ಒಂದು ಪಬ್ಲಿಕ್ ಸ್ಕೂಲ್ನ ಶಿಕ್ಷಕ. ಮಕ್ಕಳಿಗೆ ಅವರು ಇಂಗ್ಲೀಷ್ ಭಾಷೆ, ಸಂಗೀತ ಮತ್ತು ಚಿತ್ರಕಲೆ ಹಾಗೂ ಪೈಂಟಿಂಗ್ ವಿಷಯಗಳನ್ನು ಹೇಳಿಕೊಡುತ್ತಾರೆ. ಆದರೆ ಇದರೊಂದಿಗೆ ಅವರ ಇನ್ನೊಂದು ಮುಖವೂ ಇದೆ. ಜನರು ಅವರನ್ನು ಮಾಲಿಯ `ಹಿಂದೂಸ್ತಾನಿ ಬಾಬು’ ಎಂದು ಕರೆಯುತ್ತಾರೆ. ಹಾಗೂ ಹೀಗೆ ಕರೆಸಿಕೊಳ್ಳುವುದರಿಂದಅವರಿಗೆ ಹೆಮ್ಮೆಯ ಅನುಭವವಾಗುತ್ತದೆ. ಪ್ರತಿ ಭಾನುವಾರ ಮಧ್ಯಾಹ್ನದ ನಂತರ ಮಾಲಿ ದೇಶದಲ್ಲಿ ಒಂದು ಗಂಟೆಯ ರೇಡಿಯೋ ಕಾರ್ಯಕ್ರಮ ಪ್ರಸ್ತುತಪಡಿಸುತ್ತಾರೆ. ಈ ಕಾರ್ಯಕ್ರಮದ ಹೆಸರು `ಇಂಡಿಯನ್ ಫ್ರೀಕೆನ್ಸಿ ಆನ್ ಬಾಲಿವುಡ್ ಸಾಂಗ್ಸ್’ ಎಂದು. ಇದನ್ನು ಕಳೆದ 23 ವರ್ಷಗಳಿಂದ ಪ್ರಸಾರ ಮಾಡುತ್ತಾ ಬಂದಿರುತ್ತಾರೆ! ಈ ಕಾರ್ಯಕ್ರಮದಲ್ಲಿ ಅವರು ಫ್ರೆಂಚ್ ಭಾಷೆಯ ಜೊತೆಗೆ ಮಾಲಿಯ ಸ್ಥಳೀಯ ಭಾಷೆ `ಬಂಬಾರಾ’ದಲ್ಲಿಯೂ ಸಹ ತಮ್ಮ ವಿವರಣೆಯನ್ನು ಅದರಲ್ಲೂ ಅತ್ಯಂತ ನಾಟಕೀಯ ರೀತಿಯಲ್ಲಿ ನೀಡುತ್ತಾರೆ. ಭಾರತದ ಬಗ್ಗೆ ಅವರ ಮನದಲ್ಲಿ ಅಗಾಧ ಪ್ರೇಮ! ಭಾರತದೊಂದಿಗೆ ಅವರ ಗಾಢಸಂಬಂಧ ಏರ್ಪಡಲು ಒಂದು ಕಾರಣವೂ ಇದೆ. ಅದೇನೆಂದರೆ ಸೇದೂಜಿ ಅವರ ಜನ್ಮವೂ 15ನೇ ಆಗಸ್ಟ್ನಲ್ಲಿ ಆಯಿತು. ಸೇದೂಜೀ ಅವರು ಎರಡು ಗಂಟೆ ಅವಧಿಯ ಮತ್ತೊಂದು ಕಾರ್ಯಕ್ರಮವನ್ನು ಪ್ರತಿ ಭಾನುವಾರ ರಾತ್ರಿ 9 ಗಂಟೆಯಿಂದ ಆರಂಭಿಸಿದ್ದಾರೆ. ಇದರಲ್ಲಿ ಅವರು ಒಂದು ಬಾಲಿವುಡ್ ಚಲನಚಿತ್ರದ ಇಡೀ ಕಥೆಯನ್ನು ಫ್ರೆಂಚ್ ಮತ್ತು ಬಂಬಾರಾ ಭಾಷೆಯಲ್ಲಿ ಶ್ರೋತೃಗಳಿಗೆ ಕೇಳಿಸುತ್ತಾರೆ. ಒಮ್ಮೊಮ್ಮೆ ಕೆಲವು ಭಾವನಾತ್ಮಕ ದೃಶ್ಯಗಳ ಕುರಿತು ಹೇಳುವ ಸಮಯದಲ್ಲಿ, ಶ್ರೋತೃಗಳೊಂದಿಗೆ ಅವರೂ ಭಾವಪರವಶರಾಗಿ ಅತ್ತಿದ್ದೂ ಉಂಟು. ಸೇದೂಜೀ ಅವರ ತಂದೆಯವರೂ ಕೂಡ ಭಾರತೀಯ ಸಂಸ್ಕøತಿಯೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವವರೇ. ಅವರ ತಂದೆ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಭಾರತೀಯ ಚಲನಚಿತ್ರಗಳನ್ನೂ ಪ್ರದರ್ಶಿಸಲಾಗುತ್ತಿತ್ತು. ಈ 15ನೇ ಆಗಸ್ಟ್ರಂದು ಅವರು ಒಂದು ವೀಡಿಯೋ ಮೂಲಕ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಹಾರೈಕೆಯನ್ನು ಹಿಂದಿಯಲ್ಲಿ ತಿಳಿಸಿದ್ದರು. ಇಂದು ಅವರ ಮಕ್ಕಳು ಭಾರತದ ರಾಷ್ಟ್ರಗೀತೆಯನ್ನು ಬಹಳ ಸಲೀಸಾಗಿ ಹಾಡುತ್ತಾರೆ. ನೀವು ಈ ಎರಡೂ ವೀಡಿಯೋಗಳನ್ನು ತಪ್ಪದೆ ನೋಡಿ. ಅವರ ಭಾರತಪ್ರೇಮದ ಅನುಭವವನ್ನು ಸ್ವತಃ ಕಂಡುಕೊಳ್ಳಿ.
ಸೇದೂ ಅವರು ನಿಯೋಗವೊಂದರ ಭಾಗವಾಗಿ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾಗ, ನಾನು ಅವರನ್ನು ಭೇಟಿ ಮಾಡಿದೆ. ಭಾರತ ಕುರಿತ ಈ ಬಗೆಯ ಅವರ ಅಭಿಮಾನ, ಸ್ನೇಹ ಮತ್ತು ಪ್ರೀತಿ ನಿಜಕ್ಕೂ ನಮಗೆಲ್ಲಾ ಹೆಮ್ಮೆ ತರುವ ವಿಷಯ.
ನನ್ನ ಪ್ರೀತಿಯ ದೇಶವಾಸಿಗಳೇ,
ನಮ್ಮಲ್ಲಿ ಒಂದು ನಾಣ್ಣುಡಿಯಿದೆ. `ಯಾರು ಭೂಮಿಯ ಜೊತೆ ಗಾಢಸಂಬಂಧ ಹೊಂದಿರುತ್ತಾರೋ, ಅವರು ದೊಡ್ಡ ದೊಡ್ಡ ಚಂಡಮಾರುತದ ಕಾಲದಲ್ಲೂ ಅಷ್ಟೇ ನಿಶ್ಚಲರಾಗಿರುತ್ತಾರೆ ಎಂದು. ಕೊರೊನಾಸಂಕಷ್ಟದ ಈ ಸಮಯದಲ್ಲಿ ನಮ್ಮ ಕೃಷಿ ಕ್ಷೇತ್ರ, ನಮ್ಮ ಕೃಷಿಕರು ಇದಕ್ಕೆ ಜೀವಂತ ಉದಾಹರಣೆ. ಸಂಕಷ್ಟದ ಈ ಕಾಲದಲ್ಲೂ ಸಹ ನಮ್ಮ ದೇಶದಲ್ಲಿ ಕೃಷಿಕ್ಷೇತ್ರ ಮತ್ತೆ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಬಾಂಧವರೇ, ದೇಶದ ಕೃಷಿಕ್ಷೇತ್ರ, ನಮ್ಮ ರೈತರು, ನಮ್ಮ ಹಳ್ಳಿಗಳು ಸ್ವಾವಲಂಬಿ ಭಾರತದ ಆಧಾರವಾಗಿದೆ.
ಕಳೆದ ಕೆಲಸಮಯದಲ್ಲಿ ಈ ಕ್ಷೇತ್ರಗಳು ತಮ್ಮನ್ನು ತಾವು ಅನೇಕ ಬಂಧನಗಳಿಂದ ಮುಕ್ತವಾಗಿಸಿಕೊಂಡು ಸ್ವತಂತ್ರವಾಗಿದೆ. ಅನೇಕ ಮಿಥ್ಯೆಗಳನ್ನು ಮುರಿಯುವ ಪ್ರಯತ್ನಗಳನ್ನು ಮಾಡಿದೆ. ನನಗೆ ಕೆಲವು ರೈತರ ಪತ್ರಗಳು ತಲುಪಿವೆ. ನಾನು ಹಲವಾರು ರೈತರ ಸಂಘಟನೆಗಳೊಂದಿಗೆ ಸಂವಾದ ಮಾಡಿರುತ್ತೇನೆ. ಆಗ ಅವರು, ಹೇಗೆ ಕೃಷಿಯಲ್ಲಿ ಹೊಸ ಹೊಸ ಆಯಾಮಗಳನ್ನು ಅಳವಡಿಸಲಾಗುತ್ತಿದೆ? ಹೇಗೆ ಬೇಸಾಯದಲ್ಲಿ ಪರಿವರ್ತನೆಗಳು ಆಗುತ್ತಿವೆ ಎಂದು ಹೇಳುತ್ತಾರೆ. ನಾನು ಅವರಿಂದ ಕೇಳಿದ್ದು ಹಾಗೂ ಅನ್ಯರಿಂದ ಕೇಳಿದ್ದು; ಹಾಗೂ ನನಗೆ ಅನಿಸಿದ್ದನ್ನು ನಾನು ನಿಮಗೆ ಇಂದಿನ ಮನ್–ಕಿ–ಬಾತ್ನಲ್ಲಿ ನಿಮ್ಮೊಂದಿಗೆ ರೈತರ ಬಗೆಗಿನ ಕೆಲವು ಮಾತುಗಳನ್ನು ಹಂಚಿಕೊಳ್ಳೋಣ ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಮೂಡಿದೆ.
ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ನಮ್ಮ ಓರ್ವ ರೈತಬಾಂಧವರಿದ್ದಾರೆ. ಅವರ ಹೆಸರು ಕವರ್ ಚೌಹಾನ್! ಒಂದು ಸಮಯದಲ್ಲಿ ಹಣ್ಣು, ತರಕಾರಿಗಳನ್ನು ಮಂಡಿಯಲ್ಲಿ ಮಾರಾಟ ಮಾಡಲು ಬಹಳ ಕಷ್ಟವಾಗುತ್ತಿತ್ತು ಎಂಬುದನ್ನು ಅವರು ತಿಳಿಸಿದ್ದಾರೆ. ಆದರೆ ಅವರು ಮಂಡಿಯ ಹೊರಗೆ ತಮ್ಮ ಹಣ್ಣು, ತರಕಾರಿಗಳನ್ನು ಮಾರಿದರೆ, ಅವರ ಹಣ್ಣು–ತರಕಾರಿಗಳು ಹಾಗೂ ಗಾಡಿಯೂ ಜಪ್ತಿಯಾಗುತ್ತಿತ್ತು. ಆದರೆ 2014ರಲ್ಲಿ ಹಣ್ಣು–ತರಕಾರಿಯನ್ನು ಎಪಿಎಂಸಿ ಕಾನೂನಿನಿಂದ ಪ್ರತ್ಯೇಕ ಮಾಡಲಾಯಿತು. ಇದರಿಂದ ಅವರಿಗೂ, ಅವರ ಸುತ್ತಮುತ್ತಲ ಇತರ ರೈತರಿಗೂ ಹೆಚ್ಚಿನ ಪ್ರಯೋಜನವಾಯಿತು. 4 ವರ್ಷಗಳ ಹಿಂದೆ ಅವರು ತಮ್ಮ ಹಳ್ಳಿಯ ಇನ್ನಿತರ ರೈತರ ಜೊತೆ ಸೇರಿ ಒಂದು `ರೈತ ಉತ್ಪಾದಕರ ಒಕ್ಕೂಟ’ದ ಸ್ಥಾಪನೆಯನ್ನು ಮಾಡಿರುತ್ತಾರೆ. ಇಂದು ಹಳ್ಳಿಯ ರೈತನೂ ಸಹ ಸ್ವೀಟ್ಕಾರ್ನ್ ಮತ್ತು ಬೇಬಿಕಾರ್ನ್ ಕೃಷಿ ಮಾಡುತ್ತಾರೆ. ಅವರ ಉತ್ಪಾದನೆ ಇಂದು ದೆಹಲಿಯ ಅeóÁದ್ಪುರ ಮಂಡಿ ಹಾಗೂ ದೊಡ್ಡ ರೀಟೈಲ್ ಜಾಲ ಹಾಗೂ ಪಂಚತಾರಾ ಹೋಟೆಲುಗಳಿಗೂ ಸಹ ನೇರ ಪೂರೈಕೆ ಆಗುತ್ತಿದೆ. ಇಂದು ಹಳ್ಳಿಯ ರೈತರು ಸ್ವೀಟ್ಕಾರ್ನ್ ಮತ್ತು ಬೇಬಿಕಾರ್ನ್ ಕೃಷಿಯಿಂದ ಪ್ರತಿ ಎಕರೆಯೊಂದಕ್ಕೆ ಎರಡೂವರೆ ಲಕ್ಷದಿಂದ 3 ಲಕ್ಷ ಹಣವನ್ನು ಗಳಿಸುವಂತಾಗಿದೆ. ಅಷ್ಟೇ ಅಲ್ಲದೆ, ಇದೇ ಹಳ್ಳಿಯ 60ಕ್ಕೂ ಹೆಚ್ಚು ರೈತರು `ನೆಟ್ಹೌಸ್’ ಹಾಗೂ `ಪಾಲಿಹೌಸ್’ಗಳನ್ನು ಮಾಡಿಕೊಂಡು ಟೊಮೊಟೊ, ಸೌತೆಕಾಯಿ, ದೊಣ್ಣೆ ಮೆಣಸಿನಕಾಯಿಗಳ ವಿವಿಧ ಪ್ರಬೇಧಗಳನ್ನು ಬೆಳೆಯುತ್ತಿದ್ದಾರೆ. ಹಾಗೂ ಪ್ರತಿ ವರ್ಷ ಎಕರೆಯೊಂದಕ್ಕೆ 10 ರಿಂದ 12 ಲಕ್ಷ ರೂ.ಗಳ ಆದಾಯವನ್ನು ಪಡೆಯುತ್ತಿದ್ದಾರೆ. ಈ ರೈತರಲ್ಲಿನ ವಿಭಿನ್ನತೆ ಏನು ಗೊತ್ತಾಯಿತೆ? ಈ ರೈತನಿಗೆ ಉತ್ಪಾದನೆಗಳಾದ ಹಣ್ಣು, ತರಕಾರಿಗಳನ್ನು ಯಾರಿಗೆ ಬೇಕಾದರೂ, ಎಲ್ಲಿಗೆ ಬೇಕಾದರೂ ಮಾರಾಟ ಮಾಡುವ ಶಕ್ತಿ ಇದೆ. ಈ ಶಕ್ತಿಯೇಅವರ ಈ ಪ್ರಗತಿಗೆ ಆಧಾರ. ಅವರ ಇದೇ ಸಾಮಥ್ರ್ಯ ಇಂದು ದೇಶದ ಇತರ ರೈತರಿಗೂಲಭ್ಯವಾಗಿದೆ. ಕೇವಲ ಹಣ್ಣು–ತರಕಾರಿಯನ್ನಷ್ಟೇ ಅಲ್ಲ; ಅವರು ತಮ್ಮ ಹೊಲಗಳಲ್ಲಿ ವಿವಿಧ ಧಾನ್ಯ, ಸಾಸಿವೆ, ಗೋಧಿ, ಕಬ್ಬು ಇತ್ಯಾದಿ ಏನೆಲ್ಲಾ ಬೆಳೆಯುತ್ತಿದ್ದಾರೋ, ಅವೆಲ್ಲವನ್ನೂ ತಮ್ಮ ಇಚ್ಛಾನುಸಾರ, ಎಲ್ಲಿ ಹೆಚ್ಚಿನ ಬೆಲೆ ದೊರಕುವುದೋ ಅಲ್ಲಿ ಮಾರಾಟ ಮಾಡಲು ಅವರಿಗೆ ಸ್ವಾತಂತ್ರ್ಯ ಸಿಕ್ಕಿದೆ.
ಆತ್ಮೀಯರೇ, 3-4 ವರ್ಷಗಳ ಹಿಂದೆಯೇ, ಮಹಾರಾಷ್ಟ್ರದಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈ ಬದಲಾವಣೆಯಿಂದ ಹೇಗೆ ಮಹಾರಾಷ್ಟ್ರದ ಹಣ್ಣು ಮತ್ತು ತರಕಾರಿ ಬೆಳೆಗಾರರ ಸ್ಥಿತಿ ಬದಲಾಯಿತು ಎಂಬುದಕ್ಕೆ ಉದಾಹರಣೆ: `ಶ್ರೀ ಸ್ವಾಮಿ ಸಮರ್ಥ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’. ಇದು ರೈತರ ಒಕ್ಕೂಟ. ಪುಣೆ ಮತ್ತು ಮುಂಬಯಿಯಲ್ಲಿ ರೈತರೇ ವಾರದ ಸಂತೆಯನ್ನು ಖುದ್ದಾಗಿ ನಡೆಸುತ್ತಿದ್ದಾರೆ. ಈ ಮಾರುಕಟ್ಟೆಗೆ ಸರಿಸುಮಾರು 70 ಹಳ್ಳಿಗಳ 4500 ರೈತರ ಉತ್ಪಾದನೆ ನೇರವಾಗಿ ಮಾರಾಟ ಮಾಡಲಾಗುತ್ತದೆ. ಯಾವ ಮಧ್ಯವರ್ತಿಯೂ ಇಲ್ಲದೆ ಗ್ರಾಮೀಣ ಯುವಕರು ನೇರವಾಗಿ ಈಮಾರುಕಟ್ಟೆಯಲ್ಲಿ, ಕೃಷಿ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ನೇರ ಲಾಭ ರೈತರಿಗೆ ಸೇರುತ್ತದೆ. ಹಾಗೂ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಉಂಟಾಗುತ್ತದೆ.
ಮತ್ತೊಂದು ಉದಾಹರಣೆ, ತಮಿಳುನಾಡಿನ ಥೇಣಿ ಜಿಲ್ಲೆಯದು. ಇಲ್ಲಿ ತಮಿಳುನಾಡು ಬಾಳೆಹಣ್ಣು ಉತ್ಪಾದಕರ ಕಂಪನಿ ಇದೆ. ಇದು ಹೇಳಿಕೊಳ್ಳಲು ರೈತ ಉತ್ಪಾದಕರ ಕಂಪನಿ, ವಾಸ್ತವದಲ್ಲಿ ರೈತರೆಲ್ಲರೂ ಸೇರಿ ರಚಿಸಿರುವ ಒಂದು ಸಂಸ್ಥೆ. ಒಳ್ಳೆಯ ಹೊಂದಾಣಿಕೆ ಇರುವ ವ್ಯವಸ್ಥೆ ಇದೆ. ಇದೂ ಸಹ 5-6 ವರ್ಷಗಳ ಹಿಂದೆ ಸ್ಥಾಪನೆವಾದದ್ದು! ಈ ರೈತರ ಒಕ್ಕೂಟವು, ಲಾಕ್ಡೌನ್ ಸಮಯದಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ನೂರಾರು ಮೆಟ್ರಿಕ್ ಟನ್ ತರಕಾರಿ, ಹಣ್ಣು ಹಾಗೂ ಬಾಳೆ ಉತ್ಪನ್ನಗಳನ್ನು ಖರೀದಿಸಿತು. ಮತ್ತು ಚೆನ್ನೈ ನಗರದಲ್ಲಿ `ತರಕಾರಿಗಳ ಕೊಂಬೋ ಕಿಟ್’ ನೀಡಿತು. ಇದರಿಂದ ಎಷ್ಟೊಂದು ನವಯುವಕರಿಗೆ ಉದ್ಯೋಗ ಲಭಿಸಿತು, ಯೋಚಿಸಿ! ಮತ್ತು ಸ್ವಾರಸ್ಯವೆಂದರೆ, ಮಧ್ಯವರ್ತಿಗಳಿಲ್ಲದ ಕಾರಣ, ರೈತರಿಗೂ ಹೆಚ್ಚಿನ ಲಾಭ ದೊರಕಿತು. ಬಳಕೆದಾರನಿಗೂ ಲಾಭ ಲಭ್ಯವಾಯಿತು.
ಇದರಂತೆಯೇ, ಇನ್ನೊಂದು ರೈತರ ಒಕ್ಕೂಟ ಲಕ್ನೋದಲ್ಲಿದೆ. ಅವರು `ಇರಾದಾ ಫಾರ್ಮರ್ಸ್ ಪ್ಯೊಡ್ಯೂಸರ್ಸ್’ ಎಂದು ಹೆಸರಿಟ್ಟಿದ್ದಾರೆ. ಇವರೂ ಕೂಡ ಲಾಕ್ಡೌನ್ ಸಮಯದಲ್ಲಿ ರೈತರ ಹೊಲದಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿದರು. ಹಾಗೂ ನೇರವಾಗಿ ಲಕ್ನೋದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು. ಮಧ್ಯವರ್ತಿಗಳಿಂದ ಮುಕ್ತರಾದರು. ಹಾಗೂ ತಮ್ಮ ಇಚ್ಛಾನುಸಾರ ಬೆಲೆಯನ್ನು ನಿಗದಿಪಡಿಸಿ ಯಶಸ್ವಿಯಾದರು.
ಬಂಧುಗಳೇ, ಗುಜರಾತ್ನಲ್ಲಿ ಬನಾಸಕಾಂಠಾದ ರಾಮಪುರ ಹಳ್ಳಿಯಲ್ಲಿ ರೈತ ಇಸ್ಮಾಯಿಲ್ಭಾಯಿ ಇದ್ದಾರೆ. ಅವರ ಕಥೆಯೂ ರೋಚಕವಾಗಿದೆ. ಇಸ್ಮಾಯಿಲ್ ಭಾಯಿಯವರು ಕೃಷಿಕರಾಗಲು ಬಯಸಿದ್ದರು. ಆದರೆ, ಸಾಮಾನ್ಯವಾಗಿ ಹೆಚ್ಚಿನ ಜನರು ಯೋಚಿಸುವಂತೆ, ಅವರ ಪರಿವಾರದವರಿಗೆ ಇಸ್ಮಾಯಿಲ್ ಅವರ ಈ ಯೋಜನೆ ಇಷ್ಟವಾಗಿರಲಿಲ್ಲ. ಇಸ್ಮಾಯಿಲ್ ಅವರ ತಂದೆಯೂ ಕೃಷಿಕರಾಗಿದ್ದರು. ಆದರೆ ಅದರಲ್ಲಿ ಅವರು ನಷ್ಟ ಅನುಭವಿಸಿದ್ದರು. ಹೀಗಾಗಿ ತಂದೆಯೂ ಕೂಡ ಕೃಷಿ ಬೇಡ ಎಂದಿದ್ದರು. ಇಡೀ ಪರಿವಾರದ ವಿರೋಧದ ನಡುವೆಯೂ ಕೃಷಿಕರಾಗಲು ಇಸ್ಮಾಯಿಲ್ ದೃಢಸಂಕಲ್ಪ ಮಾಡಿದರು. “ಕೃಷಿ ಇಂದು ನಷ್ಟದ ಕೆಲಸವಾಗಿದೆ. ಆದರೂ ಆ ಮನೋಭಾವ ಹಾಗೂ ವಸ್ತುಸ್ಥಿತಿ ಎರಡನ್ನೂ ಬದಲಾಯಿಸಿ, ಆ ಮೂಲಕ ಕೃಷಿಯ ದಿಕ್ಕನ್ನೇ ಪರಿವರ್ತಿಸುತ್ತೇನೆ’’ ಎಂದು ಇಸ್ಮಾಯಿಲ್ಭಾಯಿ ದೀಕ್ಷೆ ತೊಟ್ಟರು. ಅವರು ಕ್ರಿಯಾಶೀಲ ನೆಲೆಯಲ್ಲಿ ಆವಿಷ್ಕಾರ ಮನೋಭಾವದಿಂದ ಹೊಸ ವಿಧಾನದಿಂದ ಕೃಷಿಯನ್ನು ಆರಂಭಿಸಿದರು. ಹನಿನೀರಾವರಿ ಯನ್ನು ಜಮೀನಿಗೆ ಅಳವಡಿಸಿ ಆಲೂಗೆಡ್ಡೆ ಕೃಷಿ ಮಾಡಿದರು. ಇಂದು ಅವರು ಬೆಳೆಯುವ ಆಲೂಗೆಡ್ಡೆ ಅತ್ಯುತ್ತಮ ಗುಣಮಟ್ಟದ ಹೆಗ್ಗುರುತಾಗಿದೆ. ಇಸ್ಲಾಯಿಲ್ ಭಾಯಿ, ಉತ್ಕøಷ್ಟ ದರ್ಜೆಯ ಆಲೂಗೆಡ್ಡೆಯನ್ನು ಬೆಳೆದು ನೇರವಾಗಿ ದೊಡ್ಡ ದೊಡ್ಡ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳ ಲವಲೇಶವೂ ಮಧ್ಯಪ್ರವೇಶವಿಲ್ಲದೆ! ಅದರ ಪರಿಣಾಮ, ಹೆಚ್ಚಿನ ಆದಾಯ ಲಭ್ಯವಾಗುತ್ತಿದೆ. ಅಲ್ಲದೆ, ಇಸ್ಮಾಯಿಲ್ ತಮ್ಮ ತಂದೆಯ ಎಲ್ಲಾ ಸಾಲಗಳನ್ನೂ ತೀರಿಸಿದ್ದಾರೆ ಎಂಬುದು ಅತ್ಯಂತ ಗಮನಾರ್ಹವಾದ ಅಂಶ. ಸ್ವಾರಸ್ಯಕರ ವಿಷಯವೆಂದರೆ, ಇಸ್ಮಾಯಿಲ್ ಭಾಯಿ, ನೆರೆಯ ಇನ್ನಿತರ ಹಲವಾರು ರೈತರಿಗೂ ನೆರವಾಗುತ್ತಿದ್ದಾರೆ. ಅವರೆಲ್ಲರ ಜೀವನವನ್ನೂ ಬದಲಾಯಿಸುತ್ತಿದ್ದಾರೆ.
ಬಂಧುಗಳೇ, ಇಂದಿನ ದಿನಮಾನಗಳಲ್ಲಿ ನಾವು ಕೃಷಿಗೆ ಎಷ್ಟು ಅತ್ಯಾಧುನಿಕ ಸ್ಪರ್ಶ ನೀಡುತ್ತೇವೆಯೋ, ಅದು ಅಷ್ಟು ಪ್ರಗತಿ ಕಾಣುತ್ತೇವೆ. ಅದರಲ್ಲಿ ನವವೀನ ವಿಧಿವಿಧಾನಗಳು ಬರುತ್ತವೆ. ಹೊಸ ಹೊಸ ಆವಿಷ್ಕಾರಗಳು ಸೇರ್ಪಡೆಗೊಳ್ಳಲಿದೆ. ಮಣಿಪುರದಲ್ಲಿ ವಾಸವಾಗಿರುವ ಬಿಜಯಶಾಂತಿ, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸುದ್ದಿಯಲ್ಲಿದ್ದಾರೆ. ಅವರು ಕಮಲದ ಹೂವಿನ ನಾಳದಿಂದ ದಾರವನ್ನು ಉತ್ಪಾದಿಸುವ `ಸ್ಟಾರ್ಟ್ಅಪ್’ ಆರಂಭಿಸಿದ್ದಾರೆ. ಇಂದು ಅವರ ಆವಿಷ್ಕಾರದಿಂದ ಕಮಲಪುಷ್ಪದ ಕೃಷಿ ಮತ್ತು ಜವಳಿ ಕ್ಷೇತ್ರದಲ್ಲಿ ಒಂದು ಹೊಸ ಪಥವೇ ನಿರ್ಮಾಣವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನಾನು ನಿಮ್ಮನ್ನು ಸ್ವಲ್ಪ ಗತಕಾಲಕ್ಕೆ ಕರೆದುಕೊಂಡು ಹೋಗಲು ಇಚ್ಛಿಸುತ್ತೇನೆ. 101 ವರ್ಷಗಳ ಹಿಂದಿನ ವಿಚಾರ. 1919ರಲ್ಲಿ ಜಲಿಯನ್ ವಾಲಾಬಾಗ್ನಲ್ಲಿ ಬ್ರಿಟಿಷರು ಅಮಾಯಕರನ್ನು ಹತ್ಯೆ ಮಾಡಿದರು. ಈ ನರಮೇಧದ ನಂತರ 12 ವರ್ಷದ ಓರ್ವ ಬಾಲಕ ಆ ಘಟನೆ ನಡೆದ ಸ್ಥಳಕ್ಕೆ ಹೋದ. ಸಾಮಾನ್ಯವಾಗಿ ಹರ್ಷಚಿತ್ತದ, ಚಂಚಲ ಮನಸ್ಸಿನ ಹುಡುಗ ಅಲ್ಲಿ ಏನನ್ನು ನೋಡಿದನೋ ಅದು ಅವನ ಆಲೋಚನೆಗೆ ಮೀರಿದ್ದಾಗಿತ್ತು. ಯಾರೇ ಆದರೂ ಇಷ್ಟೊಂದು ನಿರ್ದಯಿ ಆಗಿರಲು ಹೇಗೆ ಸಾಧ್ಯ? ಎಂಬ ಯೋಚನೆಯೊಂದಿಗೆಆ ಪುಟ್ಟ ಬಾಲಕ ಸ್ತಬ್ದನಾಗಿದ್ದ. ಅವನು ಮುಗ್ಧ ಕೋಪದ ಬೆಂಕಿಯಲ್ಲಿ ಬೇಯುತ್ತಿದ್ದ. ಅದೇ ಜಲಿಯನ್ ವಾಲಾಬಾಗ್ನಲ್ಲಿ ಅವನು ಬ್ರಿಟಿಷ್ ಶಾಸನದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದ. ನಿಮಗೆ ಗೊತ್ತಾಯಿತೇ, ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂದು? ಹೌದು; ನಾನು ಹುತಾತ್ಮ ವೀರಯೋಧ ಭಗತ್ಸಿಂಗ್ ಬಗ್ಗೆಯೇ ಹೇಳುತ್ತಿರುವುದು. ನಾಳೆ 28ನೇ ಸೆಪ್ಟೆಂಬರ್ದಂದು ನಾವು ವೀರಯೋಧ ಭಗತ್ಸಿಂಗ್ ಜಯಂತಿಯನ್ನು ಆಚರಿಸುತ್ತಿದ್ದೇವೆ. ನಾನು ಸಮಸ್ತ ದೇಶವಾಸಿಗಳೊಂದಿಗೆ ಸಾಹಸ ಮತ್ತು ಶೌರ್ಯದ ಪ್ರತಿಮೂರ್ತಿ ಹುತಾತ್ಮವೀರ ಭಗತ್ಸಿಂಗ್ಗೆ ನಮಿಸುತ್ತೇನೆ. ನಿಮಗೆ ಕಲ್ಪನೆ ಇದೆಯೇ? ಒಂದು ಸಾಮ್ರಾಜ್ಯಶಾಹಿ ಆಡಳಿತ; ಯಾವುದು ಪ್ರಪಂಚದ ಒಂದು ದೊಡ್ಡ ಭಾಗವನ್ನು ಆಳುತ್ತಿತ್ತೋ; ಯಾವುದರ ಬಗ್ಗೆ ಜನರು `ಸೂರ್ಯ ಮುಳುಗದ ಸಂಸ್ಥಾನ’ ಎಂದು ಮಾತಾಡಿಕೊಳ್ಳುತ್ತಿದ್ದಾರೋ, ಅಂತಹ ಶಕ್ತಿಶಾಲಿ ಬ್ರಿಟಿಷ್ ಸಂಸ್ಥಾನ ಒಬ್ಬ 23 ವರ್ಷದ ಯುವಕನ ಬಗ್ಗೆ ಭಯಭೀತವಾಗಿತ್ತು ಎಂದು! ಹುತಾತ್ಮ ಭಗತ್ಸಿಂಗ್ ಪರಾಕ್ರಮಿಯಾಗಿದ್ದರ ಜೊತೆಗೆ ವಿದ್ವಾಂಸರೂ, ಚಿಂತಕರೂ ಆಗಿದ್ದರು. ತನ್ನ ಸ್ವಂತಜೀವನದ ಬಗ್ಗೆ ಲೆಕ್ಕಿಸದೆ ಭಗತ್ಸಿಂಗ್ ಮತ್ತು ಅವರ ಸಹಚರರು ಎಂತಹ ಸಾಹಸ ಕಾರ್ಯಕ್ಕೆ ಆರಂಭ ಕೊಟ್ಟರೆಂದರೆ, ಅದು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ಯೋಗದಾನವಾಯಿತು. ಹುತಾತ್ಮ ಭಗತ್ಸಿಂಗ್ರ ಇನ್ನೊಂದು ಸುಂದರ ವಿಷಯವೆಂದರೆ, ಒಂದು ತಂಡವಾಗಿ ಕೆಲಸ ಮಾಡುವಲ್ಲಿ ಅವರು ಇಟ್ಟಿರುವ ನಂಬಿಕೆ. ಸಾಮೂಹಿಕ ಪ್ರಯತ್ನದಲ್ಲಿ ಇರುವ ಶಕ್ತಿಯನ್ನು ಅವರು ಮನಗಂಡಿದ್ದರು. ಲಾಲಾ ಲಜಪತ್ರಾಯ್ ಬಗೆಗೆ ಅವರ ಸಮರ್ಪಣಾ ಭಾವ; ಚಂದ್ರಶೇಖರ ಅಜಾದ್, ಸುಖದೇವ್, ರಾಜಗುರು ಅವರಂಥ ಕ್ರಾಂತಿಕಾರಿಗಳೊಂದಿಗಿನ ಅವರ ಒಡನಾಟ. ಅವರಿಗೆ ವ್ಯಕ್ತಿಗತ ಗೌರವ ಮುಖ್ಯವಾಗಿರಲಿಲ್ಲ. ತಾವು ಜೀವಿಸಿರುವವರೆಗೆ ತಾವು ನಂಬಿದ ಗುರಿಗಾಗಿ ಹೋರಾಡಿದರು. ಹಾಗೂ ಅದಕ್ಕಾಗಿಯೇ ತಮ್ಮ ಬಲಿದಾನವನ್ನು ದೇಶಕ್ಕೆ ಸಮರ್ಪಿಸಿದರು. “ಭಾರತವನ್ನು ನ್ಯಾಯಸಮ್ಮತವಲ್ಲದ ಬ್ರಿಟಿಷ್ ಶಾಸನಗಳಿಂದ ಮುಕ್ತಗೊಳಿಸುವುದೇ’’ ಅವರ ಗುರಿಯಾಗಿತ್ತು.
ನಾನು `ನಮೋ ಆಪ್’ನಲ್ಲಿ ಹೈದರಾಬಾದ್ನ ಎಸ್.ಜಿ. ಅಜಯ್ ಅವರ ಪ್ರತಿಕ್ರಿಯೆ ಓದಿದೆ. ಅಜಯ್ ಅವರು ಬರೆಯುತ್ತಾರೆ: ಇಂದಿನ ಯುವಕರು ಹೇಗೆ ಭಗತ್ಸಿಂಗ್ರಂತೆ ಆಗಬಹುದು? ಎಂದಿದ್ದಾರೆ. ನಾವು ಭಗತ್ಸಿಂಗ್ರಂತೆ ಆಗುವೆವೋ ಇಲ್ಲವೋ, ಆದರೆ ಭಗತ್ಸಿಂಗ್ರವರ ದೇಶಪ್ರೇಮ, ದೇಶಕ್ಕಾಗಿ ಏನನ್ನಾದರೂ ಮಾಡುವ ಛಲ–ಸಂಕಲ್ಪವನ್ನಂತೂ ಖಂಡಿತವಾಗಿಯೂ ನಮ್ಮೆಲ್ಲರ ಹೃದಯದಲ್ಲಿ ಹೊಂದಿರಬೇಕು. ಹುತಾತ್ಮ ಭಗತ್ಸಿಂಗ್ರಿಗೆ ಇದೇ ನಾವು ಸಲ್ಲಿಸುವ ಅತಿ ದೊಡ್ಡ ಶ್ರದ್ಧಾಂಜಲಿ ಆಗುತ್ತದೆ.
ನಾಲ್ಕು ವರ್ಷಗಳ ಹಿಂದೆ ಸರಿಸುಮಾರು ಇದೇ ಸಮಯದಲ್ಲಿ, `ಸರ್ಜಿಕಲ್ ಸ್ಟ್ರೈಕ್’ ಮೂಲಕ ನಮ್ಮ ಸಾಹಸಿ ಸೈನಿಕರ ಧೈರ್ಯ–ಸ್ಥೈರ್ಯವನ್ನು ಇಡೀ ಪ್ರಪಂಚವೇ ಕಂಡಿತು. ನಮ್ಮ ವೀರ ಸೈನಿಕರ ಒಂದೇ ಒಂದು ಗುರಿ ಹಾಗೂ ಲಕ್ಷ್ಯ, ಯಾವುದೇ ಬೆಲೆ ತೆತ್ತಾದರೂ, ಭಾರತ ಮಾತೆಯ ಗೌರವ ಮತ್ತು ಸಮ್ಮಾನ–ಸಂರಕ್ಷಣೆ ಮಾಡುವುದು. ಅವರು ತಮ್ಮ ಜೀವನದ ಬಗ್ಗೆ ಲವಲೇಶವೂ ಚಿಂತೆಮಾಡಲಿಲ್ಲ. ಅವರು ತಮ್ಮ ಕರ್ತವ್ಯನಿಷ್ಠೆಯ ಲಕ್ಷ್ಯದತ್ತ ದೃಷ್ಟಿನೆಟ್ಟು ಮುನ್ನಡೆದಿದ್ದರು. ಅವರು ಹೇಗೆ ಜಯಶೀಲರಾದರು ಎಂಬುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಭಾರತ ಮಾತೆಯ ಗೌರವವನ್ನು ಅವರು ಇಮ್ಮಡಿಸಿದರು.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂಬರುವ ದಿನಗಳಲ್ಲಿ ನಾವು ಮಹಾನ್ ಚೇತನಗಳ ಸ್ಮರಣೆಯನ್ನು ಮಾಡಲಿದ್ದೇವೆ. ಭಾರತ ನಿರ್ಮಾಣದಲ್ಲಿ ಅಂತಹ ಮಹಾನ್ ವ್ಯಕ್ತಿಗಳ ಯೋಗದಾನವನ್ನು ನಾವು ಸ್ಮರಿಸಲಿದ್ದೇವೆ. 2ನೇ ಅಕ್ಟೋಬರ್, ನಮ್ಮೆಲ್ಲರಿಗೆ ಪವಿತ್ರ ಮತ್ತು ಪ್ರೇರಣದಾಯಕ ದಿವಸವಾಗಿದೆ. ಆ ದಿನ ಭಾರತ ಮಾತೆಯ ಇಬ್ಬರು ಸುಪುತ್ರರಾದ ಮಹಾತ್ಮಾ ಗಾಂಧಿ ಮತ್ತು ಲಾಲ್ಬಹದ್ದೂರ್ ಶಾಸ್ತ್ರಿಯವರ ಸ್ಮರಣೆ ಮಾಡುವ ದಿನವಾಗಿದೆ.
ಪೂಜ್ಯ ಬಾಪು ಅವರ ವಿಚಾರ ಮತ್ತು ಆದರ್ಶಗಳು ಮೊದಲಿಗಿಂತಲೂ ಇಂದು ಅತ್ಯಂತ ಪ್ರಸ್ತುತವಾಗಿದೆ. ಮಹಾತ್ಮಾ ಗಾಂಧಿಯವರ ಆರ್ಥಿಕ ಚಿಂತನೆಯನ್ನು ಅರ್ಥ ಮಾಡಿಕೊಂಡು, ಅದರ ಮೌಲ್ಯವನ್ನು ಅರ್ಥಮಾಡಿಕೊಂಡು ಆ ಪ್ರೇರಣೆಯ ಪಥದಲ್ಲೇ ಮುನ್ನಡೆದಿದ್ದರೆ ಇಂದು ಭಾರತದ `ಆತ್ಮನಿರ್ಭರ’ ಯೋಜನೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. ಗಾಂಧಿಯವರು, ಆರ್ಥಿಕ ಚಿಂತನೆಯಲ್ಲಿ ಭಾರತದ ನರನಾಡಿಗಳ ಅರಿವಿತ್ತು. ಭಾರತದ ಕಂಪಿತ್ತು. ಪೂಜ್ಯ ಬಾಪು ಅವರ ಜೀವನವು, ಬಡವರಲ್ಲಿ ಬಡವರಾದವರ ಒಳಿತು, ಏಳ್ಗೆ ಹಾಗೂ ಉನ್ನತಿಗೆ ನಮ್ಮ ಕಾರ್ಯ ನಿಶ್ಚಿತವಾಗಿರಬೇಕು ಎಂಬುದನ್ನು ನೆನಪಿಸುತ್ತದೆ.
ಅಂತೆಯೇ ಲಾಲ್ಬಹದ್ದೂರ್ ಶಾಸ್ತ್ರೀಯವರ ಜೀವನವು ನಮಗೆ ವಿನಮ್ರತೆಯನ್ನು ಮತ್ತು ಸರಳ ಜೀವನದ ಸಂದೇಶವನ್ನು ನೀಡುತ್ತದೆ. 11ನೇ ಅಕ್ಟೋಬರ್ ದಿನವೂ ನಮಗೆ ಬಹಳ ವಿಶೇಷದ ದಿನವಾಗಿದೆ. ಈ ದಿನ ನಾವು `ಭಾರತರತ್ನ’ ಲೋಕನಾಯಕ ಜಯಪ್ರಕಾಶ ನಾರಾಯಣ್ ಜಯಂತಿ ಹಿನ್ನೆಲೆ ಅವರ ಸ್ಮರಣೆಯನ್ನೂ ಮಾಡುತ್ತಿದ್ದೇವೆ. ಜೆ.ಪಿ.ಯವರು ನಮ್ಮ ಲೋಕತಾಂತ್ರಿಕ ಮೌಲ್ಯಗಳ ರಕ್ಷಣೆಯಲ್ಲಿ ಅಗ್ರಮಾನ್ಯ ಭೂಮಿಕೆಯನ್ನು ನಿರ್ವಹಿಸಿದರು. ಇದೇ ದಿನ ನಾವು `ಭಾರತರತ್ನ’ ನಾನಾಜಿ ದೇಶಮುಖ್ ಅವರನ್ನೂ ಸ್ಮರಿಸುತ್ತಿದ್ದೇವೆ. ನಾನಾಜಿಯವರ ಜಯಂತಿಯೂ ಕೂಡ ಅಕ್ಟೋಬರ್ 11ರಂದು. ನಾನಾಜಿ ದೇಶ್ಮುಖ್ ಅವರು ಜಯಪ್ರಕಾಶ್ ನಾರಾಯಣ್ ಅವರ ಅತ್ಯಂತ ನಿಕಟವರ್ತಿ ಕೂಡ ಆಗಿದ್ದರು. ಜೆಪಿ ಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವಾಗ, ಪಾಟ್ನಾದಲ್ಲಿ ಅವರ ಮೇಲೆ ಪ್ರಾಣಾಂತಿಕ ಹಲ್ಲೆ ಕೂಡ ಆಗಿತ್ತು. ಆಗ ನಾನಾಜಿ ದೇಶ್ಮುಖ್ರವರು ಜೆ.ಪಿ.ಯವರನ್ನು ರಕ್ಷಿಸಿದರು. ಹಲ್ಲೆಯಲಿ ನಾನಾಜಿಯವರಿಗೂ ಬಹಳಷ್ಟು ಗಾಯಗಳಾದವು. ಆದರೂ ಜೆ.ಪಿ.ಯವರ ಜೀವವನ್ನು ಉಳಿಸುವುದರಲ್ಲಿ ನಾನಾಜಿ ಯಶಸ್ವಿಯಾದರು.
ಇದೇ 12ನೇ ಅಕ್ಟೋಬರ್ದಂದು ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜಯಂತಿಯೂ ಆಗಿರುತ್ತದೆ. ಅವರು ತಮ್ಮ ಇಡೀ ಜೀವನವನ್ನು ಜನರ ಸೇವೆಗೇ ಸಮರ್ಪಿಸಿದ್ದರು. ಅವರು ಒಂದು ರಾಜಪರಿವಾರಕ್ಕೆ ಸೇರಿದವರಾಗಿದ್ದರೂ, ಅವರ ಬಳಿ ಸಂಪತ್ತು, ಶಕ್ತಿ ಹಾಗೂ ಇತರೆ ಸಾಧನಗಳ ಕೊರತೆ ಇರಲಿಲ್ಲವಾದರೂ, ಅವರು ತಮ್ಮ ಜೀವನವನ್ನು ಒಂದು ತಾಯಿಯ ರೀತಿ, ಮಾತೃವಾತ್ಸಲ್ಯದ ಭಾವದಿಂದ ಜನಸೇವೆಗೆ ಮುಡಿಪಾಗಿಟ್ಟರು. ಅವರು ಉದಾರಹೃದಯಿಗಳು. ಈ 12ನೇ ಅಕ್ಟೋಬರ್ ಅವರ ಜನ್ಮಶತಾಬ್ದಿ ವರ್ಷದ ಸಮಾರೋಪ ಸಮಾರಂಭದ ದಿನ. ನಾನು ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ವಿಚಾರ ಮಾತನಾಡುತ್ತಿರುವಂತೆಯೇ ಭಾವುಕವಾದ ಒಂದು ಘಟನೆ ನೆನಪಾಗುತ್ತಿದೆ.
ಅವರೊಂದಿಗೆ ಬಹಳ ವರ್ಷಗಳ ಕಾಲ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಬಹಳಷ್ಟು ಘಟನೆಗಳಿವೆ. ಆದರೆ ನನ್ನ ಮನಸ್ಸಿನಲ್ಲಿ ಒಂದು ವಿಷಯ ಹೇಳಬೇಕೆನಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಾವು ಏಕತಾ ಯಾತ್ರೆ ಆರಂಭಿಸಿದ್ದೆವು. ಡಾ. ಮುರಳೀಮನೋಹರ ಜೋಷಿ ಅವರ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿತ್ತು. ಡಿಸೆಂಬರ್–ಜನವರಿ ತಿಂಗಳು ತೀವ್ರ ಚಳಿಗಾಲದ ದಿನಗಳಾಗಿದ್ದವು. ನಾವು ರಾತ್ರಿ ಸುಮಾರು 12.00-1.00 ಗಂಟೆ ಹೊತ್ತಿಗೆ ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ಶಿವಪುರಿ ತಲುಪಿದೆವು. ಅತಿಥಿಗೃಹಕ್ಕೆ ತೆರಳಿ ದಿನದ ಆಯಾಸ ಪರಿಹರಿಸುವ ಸಲುವಾಗಿ ಸ್ನಾನ ಮಾಡಿ, ಮಾರನೇ ದಿನದ ತಯಾರಿ ಮಾಡಿಕೊಳ್ಳುತ್ತಿದ್ದೆವು. ರಾತ್ರಿ 2 ಗಂಟೆ ವೇಳೆ, ಮಲಗುವ ತಯಾರಲ್ಲಿದ್ದೆ. ಆಗ ಯಾರೋ ಬಾಗಿಲು ಬಡಿದ ಶಬ್ದವಾಯಿತು. ಬಾಗಿಲು ತೆಗೆದಾಗ ರಾಜಮಾತೆ ಸಹ ಬಾಗಿಲ ಮುಂದೆ ನಿಂತಿದ್ದರು. ಆ ಚಳಿಯ ರಾತ್ರಿಯಲ್ಲೂ ರಾಜಮಾತೆಯನ್ನು ಕಂಡಾಗ ಆ ನನಗೆ ಸಖೇದಾಶ್ಚರ್ಯವಾಯಿತು. ನಾನು ಅವರಿಗೆ ನಮಸ್ಕರಿಸಿ, “ಈಗಾಗಲೇ ಮಧ್ಯರಾತ್ರಿಯಾಗಿದೆ’’ ಎಂದಾಗ, ರಾಜಮಾತೆ, “ಬೇಟ, ಮೋದೀಜೀ, ಪರವಾಗಿಲ್ಲ. ನೀವು ಬಿಸಿ ಅರಿಶಿನ ಬೆರೆಸಿದ ಹಾಲು ಕುಡಿದು, ನಂತರ ಮಲಗಿ’’ ಎಂದು ಅರಿಶಿನ ಬೆರೆಸಿದ ಹಾಲನ್ನು ಸ್ವತಃ ಅವರೇ ತಂದಿದ್ದರು. ಮಾರನೇ ದಿನ ತಿಳಿದುಬಂದ ವಿಷಯವೆಂದರೆ, ಅಲ್ಲಿದ್ದ 30 ಜನರಿಗೆಲ್ಲರಿಗೂ ಅವರು ಅರಿಶಿನ ಬೆರೆಸಿದ ಹಾಲು ನೀಡಿ ಸತ್ಕರಿಸಿದ್ದರು. ಅದರಲ್ಲಿ ಡ್ರೈವರ್ಗಳಿದ್ದರು, ಕಾರ್ಯಕರ್ತರೂ ಇದ್ದರು. ಪ್ರತಿಯೊಬ್ಬರ ಕೋಣೆಗೆ ರಾತ್ರಿ 2 ಗಂಟೆಗೆ ಹೋಗಿ ಸ್ವತಃ ಹಾಲು ವಿತರಿಸಿದ್ರು. ತಾಯಿಯ ಪ್ರೀತಿ ಏನು? ವಾತ್ಸಲ್ಯವೆಂದರೇನು ಎಂಬುದನ್ನ ಆಗ ನಾನು ಅರಿತೆನು. ಈ ಘಟನೆಯನ್ನು ನಾನು ಎಂದೂ ಮರೆಯಲಾರೆ.
ಇಂತಹ ಮಹನೀಯರು ನಮ್ಮ ಭೂಮಿಯಲ್ಲಿ ಜನ್ಮವೆತ್ತಿದ್ದು ನಮ್ಮ ಸೌಭಾಗ್ಯ. ಅವರ ತ್ಯಾಗ–ಬಲಿದಾನಗಳ ಸಿಂಚನ ಈ ಭೂಮಿಯ ಮೇಲಾಗಿದೆ. ಬನ್ನಿ ನಾವೆಲ್ಲರೂ ಸೇರಿ ಈ ಮಹನೀಯರು ಹೆಮ್ಮೆಪಡುವಂತಹ ರಾಷ್ಟ್ರನಿರ್ಮಾಣ ಮಾಡೋಣ. ಅವರ ಕನಸುಗಳನ್ನು ನಮ್ಮ ಸಂಕಲ್ಪವಾಗಿಸೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾದ ಈ ಸಂಕಷ್ಟ ಕಾಲದಲ್ಲಿ ನಾನು ನಿಮಗೆ ಮತ್ತೊಮ್ಮೆ ಜ್ಞಾಪಿಸುತ್ತೇನೆ. ಮಾಸ್ಕನ್ನು ಅವಶ್ಯಕವಾಗಿ ಧರಿಸಿ. ಮುಖಮುಚ್ಚಿಕೊಳ್ಳದೆ ಹೊರಗೆ ಓಡಾಡದಿರಿ. ಪರಸ್ಪರ ಎರಡು ಗಜಗಳ ಅಂತರದ ನಿಯಮವು ನಿಮ್ಮನ್ನೂ, ನಿಮ್ಮ ಪರಿವಾರವನ್ನೂ ಉಳಿಸಬಲ್ಲುದು. ಈ ಕೆಲವು ನಿಯಮಗಳು ಕೊರೊನಾದ ವಿರುದ್ಧ ಹೋರಾಡುವ ನಮ್ಮ ಆಯುಧಗಳು. ಇದು ಪ್ರತಿಯೊಬ್ಬ ನಾಗರೀಕನ ಜೀವನವನ್ನೂ ರಕ್ಷಿಸುವ ಬಲವಾದ ಸಾಧನಗಳು. ನೆನಪಿರಲಿ: ಎಲ್ಲಿಯತನಕ ಔಷಧಿ ಇಲ್ಲವೋ, ಅಲ್ಲಿಯ ತನಕ ನಿರ್ಲಕ್ಷ್ಯ ಸಲ್ಲ. ಈ ನಿಬಂಧನೆ–ನಿರ್ಬಂಧಗಳಿಂದ ಬಿಡುಗಡೆಯಿಲ್ಲ. ನೀವು ಆರೋಗ್ಯವಾಗಿರಿ; ನಿಮ್ಮ ಪರಿವಾರವೂ ಆರೋಗ್ಯದಿಂದಿರಲಿ. ಇದೇ ಶುಭಕಾಮನೆಗಳೊಂದಿಗೆ ನಿಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.ಸಾಮಾನ್ಯವಾಗಿ ಇದು ಉತ್ಸವಗಳ ಸಮಯ. ಅಲ್ಲಲ್ಲಿ ಜಾತ್ರೆಗಳನ್ನು ಆಯೋಜಿಸಲಾಗಿದೆ, ಧಾರ್ಮಿಕ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಕೊರೊನಾದ ಈ ಸಂಕಟದ ಸ್ಥಿತಿಯಲ್ಲಿ ಜನರಲ್ಲಿ ಸಂಭ್ರಮವಂತೂ ಇದೆ, ತ್ಸಾಹವೂ ಇದೆ ಆದರೆ ನಮ್ಮೆಲ್ಲರ ಮನಸ್ಸನ್ನು ಕಲಕುವಂತಹ ಶಿಸ್ತೂ ಇದೆ. ಒಟ್ಟಾರೆ ನೋಡುವುದಾದರೆ ನಾಗರಿಕರಲ್ಲಿ ಕರ್ತವ್ಯದ ಅರಿವಿದೆ. ಜನರು ತಮ್ಮ ಬಗ್ಗೆ ಎಚ್ಚರಿಕೆ ವಹಿಸುತ್ತಲೇ, ಬೇರೆಯವರ ಬಗ್ಗೆ ಎಚ್ಚರಿಕೆವಹಿಸಿ ತಮ್ಮ ದೈನಂದಿನ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ. ದೇಶದಲ್ಲಿ ಆಯೋಜಿಸಲಾಗುತ್ತಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಈ ಬಾರಿ ಸರಳತೆ ಮತ್ತು ಸಂಯಮವನ್ನು ಕಾಯ್ದುಕೊಳ್ಳಲಾಗುತ್ತಿರುವುದು ಅಭುತಪೂರ್ವವಾಗಿದೆ. ಕೆಲವೆಡೆ ಗಣೇಶ ಉತ್ಸವವನ್ನು ಆನ್ ಲೈನ್ ನಲ್ಲಿ ಆಚರಿಸಲಾಗುತ್ತಿದೆ ಇದೇ ವೇಳೆ ಹಲವೆಡೆ ಈ ಬಾರಿ ನೈಸರ್ಗ ಸ್ನೇಹಿ ಗಣೇಶ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸ್ನೇಹಿತರೆ, ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಹಬ್ಬಗಳು ಮತ್ತು ಪರಿಸರದ ಕುರಿತು ಖಂಡಿತ ನಮ್ಮ ಮನದಲ್ಲಿ ಒಂದು ವಿಷಯ ಮೂಡುತ್ತದೆ. ಇವೆರಡ ಮಧ್ಯೆ ಬಹಳ ಗಾಢವಾದ ಸಂಬಂಧವಿದೆ. ಒಂದೆಡೆ ನಮ್ಮ ಹಬ್ಬಹರಿದಿನಗಳಲ್ಲಿ ಪರಿಸರ ಮತ್ತು ಪ್ರಕೃತಿಯ ಜೊತೆಗೆ ಸಹಜೀವನದ ಸಂದೇಶ ಅಡಗಿದ್ದರೆ ಮತ್ತೊಂದೆಡೆ ಹಲವಾರು ಹಬ್ಬಗಳನ್ನು ಪ್ರಕೃತಿಯ ರಕ್ಷಣೆಗೆಂದೇ ಆಚರಿಸಲಾಗುತ್ತದೆ. ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿ ಯುಗ ಯುಗಗಳಿಂದ ಥಾರು ಬುಡಕಟ್ಟು ಸಮಾಜದ ಜನರು 60 ಗಂಟೆಗಳ ಲಾಕ್ ಡೌನ್ ಅಥವಾ ಅವರದೇ ಭಾಷೆಯಲ್ಲಿ ಹೇಳುವುದಾದರೆ 60 ಗಂಟೆಗಳ ನಿಷೇಧ ವನ್ನು ಆಚರಿಸುತ್ತಾರೆ. ಪ್ರಕೃತಿಯ ರಕ್ಷಣೆಗಾಗಿ ಥಾರು ಸಮಾಜದ ಜನತೆ ನಿಷೇಧವನ್ನು ತಮ್ಮ ಪರಂಪರೆಯ ಒಂದು ಭಾಗವನ್ನಾಗಿಸಿಕೊಂಡಿದೆ ಮತ್ತು ಯುಗಗಳಿಂದ ಅದನ್ನು ಪಾಲಿಸುತ್ತಾ ಬಂದಿದೆ. ಈ ಅವಧಿಯಲ್ಲಿ ಯಾರೂ ಗ್ರಾಮದೊಳಗೆ ಪ್ರವೇಶಿಸುವುದಿಲ್ಲ ಮತ್ತು ಯಾರೂ ತಮ್ಮ ಮನೆಯಿಂದ ಹೊರಬೀಳುವುದಿಲ್ಲ. ಅಲ್ಲದೆ ತಾವು ಹೊರ ಹೋದರೆ ಅಥವಾ ಯಾರಾದರೂ ಹೊರಗಿನಿಂದ ಬಂದರೆ ಅವರು ಬಂದು ಹೋಗುವುದರಿಂದ ಮತ್ತು ಜನರ ದೈನಂದಿನ ಕೆಲಸಕಾರ್ಯಗಳಿಂದ ಹೊಸ ಗಿಡ ಮರಗಳಿಗೆ ನಷ್ವಾಗಬಹುದು ಎಂದು ಅವರು ನಂಬುತ್ತಾರೆ. ನಿಷೇಧದ ಆರಂಭಕ್ಕೂ ಮೊದಲು ನಮ್ಮ ಬುಡಕಟ್ಟು ಸಮುದಾಯದ ಸೋದರ ಸೋದರಿಯರು ಭವ್ಯವಾದ ರೀತಿಯಲ್ಲಿ ಪೂಜೆ ಪ್ರವಚನ ನಡೆಸುತ್ತಾರೆ ಮತ್ತು ಮುಕ್ತಾಯದಲ್ಲಿ ಬುಡಕಟ್ಟು ಸಾಂಪ್ರದಾಯಿಕ ಗೀತೆ, ಸಂಗೀತ, ನೃತ್ಯದ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಸ್ನೇಹಿತರೆ, ಇಂದು ಓನಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಬ್ಬ ಚಿಂಗಂ ಮಾಸದಲ್ಲಿ ಬರುತ್ತದೆ. ಈ ಸಮಯದಲ್ಲಿ ಜನರು ಏನನ್ನಾದರೂ ಹೊಸ ವಸ್ತುವನ್ನು ಖರೀದಿಸುತ್ತಾರೆ. ತಮ್ಮ ಮನೆಗಳನ್ನು ಸಿಂಗರಿಸುತ್ತಾರೆ. ಹೂವಿನ ರಂಗೋಲಿ ಹಾಕುತ್ತಾರೆ. ಓಣಂ ಹಬ್ಬದ ಆನಂದವನ್ನು ಅನುಭವಿಸುತ್ತಾರೆ. ವಿವಿಧ ಬಗೆಯ ಕ್ರೀಡೆಗಳು, ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಓಣಂ ಹಬ್ಬದ ಸಡಗರ ಇಂದು ದೂರದ ವಿದೇಶಗಳಿಗೂ ಹಬ್ಬಿದೆ. ಅಮೇರಿಕಾ ಆಗಲಿ, ಯುರೋಪ್ ಆಗಲಿ ಅಥವಾ ಖಾಡಿ ದೇಶವೇ ಆಗಲಿ ಓಣಂ ಹಬ್ಬದ ಉಲ್ಲಾಸ ನಿಮಗೆ ಎಲ್ಲೆಡೆ ನೋಡಲು ಸಿಗುತ್ತದೆ. ಓಣಂ ಈಗ ಒಂದು ಅಂತಾರಾಷ್ಟ್ರೀಯ ಹಬ್ಬವಾಗುತ್ತಾ ಸಾಗಿದೆ.
ಸ್ನೇಹಿತರೆ, ಓಣಂ ನಮ್ಮ ಕೃಷಿಗೆ ಸಂಬಂಧಸಿದ ಹಬ್ಬವಾಗಿದೆ. ಇದು ನಮ್ಮ ಗ್ರಾಮೀಣ ಅರ್ಥವ್ಯವಸ್ಥೆಗೆ ಒಂದು ಹೊಸ ಆರಂಭದ ಸಮಯವಾಗಿರುತ್ತದೆ. ಕೃಷಿಕರ ಶಕ್ತಿಯಿಂದಲೇ ನಮ್ಮ ಜೀವನ, ನಮ್ಮ ಸಮಾಜ ಸಾಗುತ್ತದೆಯಲ್ಲವೇ. ನಮ್ಮ ಹಬ್ಬಗಳು ಕೃಷಿಕರ ಪರಿಶ್ರಮದಿಂದಲೇ ವರ್ಣಮಯವಾಗುತ್ತವೆ. ನಮ್ಮ ಅನ್ನದಾತರ, ಕೃಷಿಕರ ಜೀವನಧಾರೆಯ ಶಕ್ತಿಗೆ ವೇದಗಳಲ್ಲೂ ಗೌರವಪೂರ್ಣ ನಮನ ಸಲ್ಲಿಸಲಾಗಿದೆ.
ಋಗ್ವೇದದಲ್ಲಿ ಮಂತ್ರವೊಂದಿದೆ –
ಅನ್ನಾನಾಂ ಪತಯೇ ನಮಃ, ಕ್ಷೇತ್ರಾಣಾಂ ಪತಯೇ ನಮಃ,
ಅಂದರೆ ಅನ್ನದಾತನಿಗೆ ನಮಸ್ಕಾರಗಳು ಕೃಷಿಕನಿಗೆ ನಮಸ್ಕಾರಗಳು. ನಮ್ಮ ಕೃಷಿಕರು ಕೊರೊನಾದ ಈ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ನಮ್ಮ ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಮುಂಗಾರು ಬೆಳೆಯ ಬಿತ್ತನೆ ಶೇ 7 ರಷ್ಟು ಹೆಚ್ಚಾಗಿದೆ. ಧಾನ್ಯಗಳ ಬಿತ್ತನೆ ಈ ಬಾರಿ ಸುಮಾರು ಶೇ 10 ರಷ್ಟು, ಬೇಳೆಕಾಳುಗಳ ಬಿತ್ತನೆ ಸುಮಾರು ಶೇ 5 ರಷ್ಟು, ಪ್ರಧಾನ ಧಾನ್ಯಗಳು ಸುಮಾರು ಶೇ 3 ರಷ್ಟು ಹೆಚ್ಚಾಗಿ ಬಿತ್ತನೆಯಾಗಿವೆ. ಇದಕ್ಕಾಗಿ ದೇಶದ ಕೃಷಿಕ ಬಂಧುಗಳನ್ನು ಅಭಿನಂದಿಸುತ್ತೇನೆ. ಅವರ ಪರಿಶ್ರಮಕ್ಕೆ ನಮಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧರೆ, ಕೊರೊನಾದ ಈ ಕಾಲಘಟ್ಟದಲ್ಲಿ ದೇಶ ಹಲವಾರು ವಿಷಯಗಳ ವಿರುದ್ಧ ಒಟ್ಟೊಟ್ಟಿಗೇ ಹೋರಾಡುತ್ತಿದೆ. ಆದರೆ ಇದರ ಜೊತೆಗೆ ಹಲವಾರು ಬಾರಿ ಇಷ್ಟೊಂದು ಸುದೀರ್ಘಾವಧಿ ಮನೆಯಲ್ಲೇ ಉಳಿಯುವುದರಿದ ನನ್ನ ಪುಟ್ಟ ಬಾಲಮಿತ್ರರ ಸಮಯ ಹೇಗೆ ಕಳೆಯುತ್ತಿರಬಹುದು ಎಂಬ ಪ್ರಶ್ನೆಯೂ ಮನದಲ್ಲಿ ಮೂಡುತ್ತದೆ. ಇದರಿಂದಾಗಿಯೇ ವಿಶ್ವದಲ್ಲೇ ಒಂದು ವಿಭಿನ್ನ ಪ್ರಯತ್ನವಾಗಿರುವ ಗಾಂಧಿನಗರದಲ್ಲಿರುವ ಮಕ್ಕಳ ವಿಶ್ವ ವಿದ್ಯಾಲಯ, ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಣ್ಣ, ಲಘು ಮತ್ತು ಮಧ್ಯಮ ಉದ್ಯೋಗಗಳ ಸಚಿವಾಲಯಗಳೊಂದಿಗೆ ಸೇರಿ ನಾವು ಮಕ್ಕಳಿಗಾಗಿ ಏನು ಮಾಡಬಹುದು, ಇದರ ಬಗ್ಗೆ ಚಿಂತನ ಮಂಥನಗಳು ನಡೆದವು. ಇದು ನನಗೆ ಬಹಳ ಆಹ್ಲಾದಕರ ಮತ್ತು ಲಾಭದಾಯಕವಾಗಿತ್ತು ಏಕೆಂದರೆ ಒಂದು ರೀತಿಯಲ್ಲಿ ಇದು ನನಗೆ ಹೊಸತನ್ನು ಅರಿಯುವ, ಹೊಸತನ್ನು ಕಲಿಯುವಂಥ ಅವಕಾಶವಾಗಿತ್ತು.
ಸ್ನೇಹಿತರೆ, ಆಟಿಕೆಗಳು ಅದರಲ್ಲೂ ವಿಶೇಷವಾಗಿ ಭಾರತೀಯ ಆಟಿಕೆಗಳು ಎಂಬುದು ನಮ್ಮ ಚಿಂತನೆಯ ವಿಷಯವಾಗಿತ್ತು. ಭಾರತೀಯ ಮಕ್ಕಳಿಗೆ ಹೊಸ ಹೊಸ ಆಟಿಕೆಗಳು ಹೇಗೆ ಸಿಗಬೇಕು, ಭಾರತ ಆಟಿಕೆಗಳ ಉತ್ಪಾದನಾ ಕೇಂದ್ರ ಹೇಗೆ ಆಗಬೇಕು ಎಂಬುದರ ಕುರಿತು ವಿಚಾರ ವಿಮರ್ಶೆ ನಡೆಯಿತು. ಅಂದ ಹಾಗೆ ಮನದ ಮಾತನ್ನು ಕೇಳುತ್ತಿರುವ ಎಲ್ಲ ಮಕ್ಕಳ ತಂದೆತಾಯಿಯರಲ್ಲಿ ಕ್ಷಮೆ ಕೇಳುತ್ತೇನೆ ಏಕೆಂದರೆ ಬಹುಶಃ ಈ ಮನದ ಮಾತನ್ನು ಕೇಳಿದ ನಂತರ ಆಟಿಕೆಗಳ ಹೊಸ ಹೊಸ ಬೇಡಿಕೆಗಳನ್ನು ಕೇಳುವಂತಹ ಹೊಸತೊಂದು ಕೆಲಸ ಅವರ ಮನಸ್ಸಲ್ಲಿ ಮೂಡಬಹುದು.
ಸ್ನೇಹಿತರೆ, ಆಟಿಕೆಗಳು ಚಟುವಟಿಕೆಯನ್ನು ವೃದ್ಧಿಸುವಂತಹವಾಗಿರುವುದರ ಜೊತೆಗೆ ನಮ್ಮ ಆಕಾಂಕ್ಷೆಗಳಿಗೂ ರೆಕ್ಕೆ ಮೂಡಿಸುತ್ತವೆ. ಆಟಿಕೆಗಳು ಕೇವಲ ಮನಸ್ಸನ್ನು ಉಲ್ಲಸಿತಗೊಳಿಸುವುದಲ್ಲದೆ ಮನಸ್ಸುಗಳನ್ನು ರೂಪಿಸುತ್ತವೆ ಮತ್ತು ಗುರಿಗಳನ್ನು ಗಟ್ಟಿಗೊಳಿಸುತ್ತವೆ. ಆಟಿಕೆಗಳ ಕುರಿತು ಗುರುದೇವ ರವೀಂದ್ರನಾಥ ಟ್ಯಾಗೋರರು ಯಾವ ಆಟಿಕೆ ಅಪೂರ್ಣವಾದುದಾಗಿರುತ್ತದೆ ಅದೇ ಅತ್ಯುತ್ತಮವಾದುದಾಗಿರುತ್ತದೆ, ಅದು ಎಂಥ ಆಟಿಕೆಯಾಗಿರಬೇಕೆಂದರೆ ಅದು ಅಪೂರ್ಣವಾಗಿರಬೇಕು ಮತ್ತು ಮಕ್ಕಳೆಲ್ಲ ಸೇರಿ ಅದನ್ನು ಪೂರ್ತಿಗೊಳಿಸಬೇಕು ಎಂದು ಹೇಳಿರುವುದನ್ನು ನಾನು ಎಲ್ಲೋ ಓದಿದ್ದೆ. ಗುರುದೇವ ಟ್ಯಾಗೋರರು ತಾವು ಚಿಕ್ಕವರಾಗಿದ್ದಾಗ ತಮ್ಮದೇ ಕಲ್ಪನೆಯಿಂದ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ, ತಮ್ಮ ಸ್ನೇಹಿತರೊಂದಿಗೆ ಸೇರಿ ತಮ್ಮ ಆಟಿಕೆಗಳನ್ನು ಮಾಡುತ್ತಿದ್ದರು ಮತ್ತು ಆಟವನ್ನು ಆಡುತ್ತಿದ್ದರು. ಆದರೆ ಒಂದು ದಿನ ಬಾಲ್ಯದ ಆ ಮೋಜಿನ ಕ್ಷಣಗಳಲ್ಲಿ ಹಿರಿಯರ ಹಸ್ತಕ್ಷೇಪವಾಯಿತು. ಅವರ ಒಬ್ಬ ಸ್ನೇಹಿತ, ಒಂದು ದೊಡ್ಡ, ಸುಂದರ ವಿದೇಶದ ಆಟಿಕೆಯನ್ನು ತೆಗೆದುಕೊಂಡು ಬಂದ. ಆಟಿಕೆಯನ್ನು ತೋರಿಸುತ್ತಾ ಗರ್ವದಿಂದ ಬೀಗುತ್ತಿರುವಾಗ ಆಟಕ್ಕಿಂತ ಹೆಚ್ಚು ಆಟಿಕೆಯ ಮೇಲೆ ಎಲ್ಲ ಸ್ನೇಹಿತರ ಗಮನ ಕೇಂದ್ರೀಕೃತವಾಗಿತ್ತು. ಎಲ್ಲರ ಆಕರ್ಷಣೆಯ ಕೇಂದ್ರ ಆಟದ ಬದಲಿಗೆ ಆಟಿಕೆಯಾಗಿತ್ತು. ಯಾವ ಮಗು ನಿನ್ನೆವರೆಗೆ ಎಲ್ಲ ಮಕ್ಕಳೊಂದಿಗೆ ಆಡುತ್ತಿದ್ದನೋ, ಎಲ್ಲರೊಂದಿಗೆ ಇರುತ್ತಿದ್ದನೋ, ಬೆರೆತುಹೋಗುತ್ತಿದ್ದನೋ, ಆಟದಲ್ಲಿ ಮುಳುಗಿಹೋಗುತ್ತಿದ್ದನೋ, ಈಗ ಆತ ದೂರ ಉಳಿಯಲಾರಂಭಿಸಿದ. ಒಂದು ರೀತಿಯಲ್ಲಿ ಬೇರೆ ಮಕ್ಕಳಿಗಿಂತ ಭಿನ್ನ ಎನ್ನುವ ಭಾವ ಅವನ ಮನದಲ್ಲಿ ಬೇರೂರಿತು. ದುಬಾರಿ ಆಟಿಕೆಯಲ್ಲಿ ಮಾಡಲು ಏನೂ ಇರಲಿಲ್ಲ, ಕಲಿಯಲೂ ಏನೂ ಇರಲಿಲ್ಲ. ಅಂದರೆ, ಒಂದು ಆಕರ್ಷಕ ಆಟಿಕೆ ಪ್ರತಿಭಾವಂತ ಮಗುವೊಂದನ್ನು ಎಲ್ಲೋ ತುಳಿದುಹಾಕಿತು. ಹುದುಗಿಸಿಟ್ಟಿತು, ಬಡವಾಗಿಸಿತು. ಈ ಆಟಿಕೆ ಹಣದ, ಸಂಪತ್ತಿನ, ದೊಡ್ಡಸ್ತಿಕೆಯ ಪ್ರಸರ್ಶನ ಮಾಡಿತು ಆದರೆ, ಆ ಮಗುವಿನ ಸೃಜನಶೀಲ ಮನೋಭಾವ ಬೆಳೆಯುವುದನ್ನು ಮತ್ತು ವಿಕಸನಗೊಳ್ಳುವುದನ್ನು ನಿರ್ಬಂಧಿಸಿತು. ಆಟಿಕೆಯೇನೋ ಬಂತು ಆದರೆ ಆಟವೇ ಮುಗಿದುಹೋಯಿತು, ಮಗುವಿನ ಬೆಳವಣಿಗೆಯೂ ಕುಂಠಿತವಾಯಿತು. ಆದ್ದರಿಂದ ಗುರುದೇವ ಹೇಳುತ್ತಿದ್ದರು ಆಟಿಕೆ ಹೇಗಿರಬೇಕೆಂದರೆ ಮಕ್ಕಳ ಬಾಲ್ಯವನ್ನು ಹೊರಹೊಮ್ಮಿಸುವಂತಿರಬೇಕು. ಅವರ ಸೃಜನಶೀಲತೆಯನ್ನು ಬಿಂಬಿಸುವಂತಿರಬೇಕು. ಮಕ್ಕಳ ಬೇರೆ ಬೇರೆ ಆಯಾಮಗಳ ಮೇಲೆ ಆಟಿಕೆಗಳ ಪ್ರಭಾವದ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹಳಷ್ಟು ಗಮನಹರಿಸಲಾಗಿದೆ. ಆಡುತ್ತಾ ಕಲಿಯುವುದು, ಆಟಿಕೆಗಳನ್ನು ತಯಾರಿಸುವುದನ್ನು ಕಲಿಯುವುದು, ಟಿಕೆಗಳನ್ನು ಸಿದ್ಧಪಡಿಸುವ ಸ್ಥಳಕ್ಕೆ ಭೇಟಿ ನೀಡುವುದು, ಇವೆಲ್ಲವನ್ನು ಕಲಿಕೆಯ ಭಾಗವನ್ನಾಗಿಸಿದೆ.
ಸ್ನೇಹಿತರೆ, ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಸಮೃದ್ಧ ಪರಂಪರೆಯಿದೆ. ಅತ್ಯುತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾದ ಬಹಳಷ್ಟು ಪ್ರತಿಭಾವಂತ ಕುಶಲಕರ್ಮಿಗಳಿದ್ದಾರೆ. ಭಾರತದಲ್ಲಿ ಕೆಲವೊಂದು ಕ್ಷೇತ್ರಗಳು ಟಾಯ್ ಕ್ಲಸ್ಟರ್ ಅಂದರೆ ಆಟಿಕೆಗಳ ಕೇಂದ್ರಗಳಾಗಿಯೂ ವಿಕಸಿತಗೊಳ್ಳುತ್ತಿವೆ. ಉದಾಹರಣೆಗೆ ಕರ್ನಾಟಕದ ರಾಮನಗರದ ಚನ್ನಪಟ್ಟಣ, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೊಂಡಪಲ್ಲಿ, ತಮಿಳುನಾಡಿನ ತಂಜಾವೂರ್, ಅಸ್ಸಾಂನ ದುಭರಿ, ಉತ್ತರ ಪ್ರದೇಶದ ವಾರಣಾಸಿ, ಇಂಥ ಅದೆಷ್ಟೋ ಸ್ಥಳಗಳಿವೆ, ಬಹಳಷ್ಟು ಹೆಸರುಗಳನ್ನು ಪಟ್ಟಿ ಮಾಡಬಹಯದಾಗಿದೆ. ಜಾಗತಿಕ ಆಟಿಕೆಗಳ ಉದ್ಯಮ ರೂ 7 ಲಕ್ಷ ಕೋಟಿ ಗಿಂತ ಅಧಿಕ ವ್ಯವಹಾರ ಹೊಂದಿದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ರೂ 7 ಲಕ್ಷ ಕೋಟಿ ಗಿಂತ ಹೆಚ್ಚಿನ ವ್ಯವಹಾರದ ಇಷ್ಟು ದೊಡ್ಡ ಉದ್ಯಮವಾದರೂ ಭಾರತದ ಪಾಲುದಾರಿಕೆ ಇದರಲ್ಲಿ ಬಹಳ ಕಡಿಮೆಯಿದೆ. ಯಾವ ರಾಷ್ಟ್ರದ ಬಳಿ ಇಷ್ಟು ಅಗಾಧವಾದ ಬಳುವಳಿ ಇದೆ, ಪರಂಪರೆಯಿದೆ, ವಿವಿಧತೆಯಿದೆ, ಯುವಜನತೆಯಿದೆ, ಆಟಿಕೆಗಳ ಮಾರುಕಟ್ಟೆಯಲ್ಲಿ ಅದರ ಪಾಲುದಾರಿಕೆ ಇಷ್ಟು ಕಡಿಮೆಯಿದೆ ಎಂದರೆ ನಮಗೆ ಖುಷಿಯೆನಿಸುತ್ತದೆಯೇ? ಇಲ್ಲ, ಇದನ್ನು ಕೇಳಿದ ಮೇಲೆ ನಿಮಗೂ ಖುಷಿಯೆನಿಸುವುದಿಲ್ಲ. ನೋಡಿ ಸ್ನೇಹಿತರೆ, ಆಟಿಕೆಗಳ ಉದ್ಯಮ ಬಹಳ ವ್ಯಾಪಕವಾದುದು. ಗೃಹ ಉದ್ಯೋಗವಾಗಲಿ, ಸಣ್ಣ ಪುಟ್ಟ ಅಥವಾ ಲಘು ಉದ್ಯೋಗಗಳಾಗಲಿ, ಎಂ ಎಸ್ ಎಂ ಇ ಗಳಾಗಲಿ, ಇದರ ಜೊತೆ ಜೊತೆಗೆ ದೊಡ್ಡ ಉದ್ಯೋಗಗಳು, ಖಾಸಗಿ ಉದ್ಯಮಗಳು ಈ ವಲಯದ ಪರೀಧಿಗೆ ಬರುತ್ತವೆ. ಇದನ್ನು ಮುಂದುವರಿಸಲು ದೇಶ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶ್ರೀಯುತ ಸಿ ವಿ ರಾಜು ಅವರಿದ್ದಾರೆ. ಅವರ ಗ್ರಾಮದ ಎತಿ–ಕೊಪ್ಪಕಾ ಆಟಿಕೆಗಳು ಒಂದು ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದವು. ಈ ಆಟಿಕೆಗಳನ್ನು ಕಟ್ಟಿಗೆಯಿಂದ ತಯಾರಿಸಿದ್ದು ಅದರ ವಿಶೇಷವಾಗಿತ್ತು. ಈ ಆಟಿಕೆಗಳಲ್ಲಿ ಎಲ್ಲಿಯೂ ಯಾವುದೇ ರೀತಿಯ ಕೋನಗಳು ನೋಡಲು ಸಿಗುತ್ತಿರಲಿಲ್ಲ ಎಂಬುದು ಮತ್ತೊಂದು ವಿಶೇಷತೆಯಾಗಿತ್ತು. ಈ ಆಟಿಕೆಗಳು ಎಲ್ಲ ಕೋನಗಳಿಂದಲೂ ದುಂಡಗೆ ಇರುತ್ತಿದ್ದವು. ಆದ್ದರಿಂದ ಮಕ್ಕಳಿಗೆ ಪೆಟ್ಟಾಗುವ ಸಮಸ್ಯೆ ಇರುತ್ತಿರಲಿಲ್ಲ. ಸಿ ವಿ ರಾಜು ಅವರು ಎತಿ–ಕೊಪ್ಪಿಕಾ ಆಟಿಕೆಗಳಿಗಾಗಿ ಈಗ ತಮ್ಮ ಗ್ರಾಮದ ಕುಶಲಕರ್ಮಿಗಳ ಜೊತೆ ಒಗ್ಗೂಡಿ ಒಂದು ರೀತಿಯ ಹೊಸ ಆಂದೋಲನವನ್ನು ಆರಂಭಿಸಿದ್ದಾರೆ. ಅತ್ಯುತ್ತಮ ಗುಣಮಟ್ಟದ ಎತಿ–ಕೊಪ್ಪಿಕಾ ಆಟಿಕೆಗಳನ್ನು ತಯಾರಿಸಿ ಸ್ಥಳೀಯ ಆಟಿಕೆಗಳ ಕುಂದಿಹೋದ ಗೌರವವನ್ನು ಸಿವಿ ರಾಜು ಅವರು ಮತ್ತೆ ತಂದುಕೊಟ್ಟಿದ್ದಾರೆ. ಆಟಿಕೆಗಳ ಬಗ್ಗೆ ನಾವು ಎರಡು ವಿಷಯಗಳನ್ನು ಯೋಚಿಸಬಹುದು. ನಿಮ್ಮ ಗೌರವಪೂರ್ಣ ಇತಿಹಾಸವನ್ನು ನಿಮ್ಮ ಜೀವನದಲ್ಲಿ ಮತ್ತೆ ಅಳವಡಿಸಿಕೊಳ್ಳಬಹುದು ಹಾಗೂ ನಿಮ್ಮ ಸ್ವರ್ಣಮಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ನಾನು ನನ್ನ ಸ್ಟಾರ್ಟ್ ಅಪ್ ಮಿತ್ರರಿಗೆ, ನಮ್ಮ ಹೊಸ ಉದ್ಯಮಿಗಳಿಗೆ – Team up for toys… ಎಂದು ಹೇಳುತ್ತೇನೆ. ಬನ್ನಿ ಒಗ್ಗೂಡಿ ಆಟಿಕೆಗಳನ್ನು ತಯಾರಿಸೋಣ. ಈಗ ಎಲ್ಲರಿಗೂ ಸ್ಥಳೀಯ ಆಟಿಕೆಗಳಿಗಾಗಿ ಧ್ವನಿ ಎತ್ತುವ ಸಮಯ ಬಂದಿದೆ. ಬನ್ನಿ, ನಾವು ನಮ್ಮ ಯುವಜನತೆಗಾಗಿ, ಹೊಸತನದ, ಉತ್ತಮ ಗುಣಮಟ್ಟದ, ಆಟಿಕೆಗಳನ್ನು ತಯಾರಿಸೋಣ. ಆಟಿಕೆಗಳು ಬಾಲ್ಯ ಅರಳಿಸುವಂತಹವು ಮತ್ತು ನಲಿಸುವಂತಹವಾಗಿರಬೇಕು. ಪರಿಸರಕ್ಕೂ ಅನುಕೂಲಕರವಾದಂತಹ ಆಟಿಕೆಗಳನ್ನು ನಾವು ತಯಾರಿಸೋಣ.
ಸ್ನೇಹಿತರೆ, ಇದೇ ರೀತಿ, ಈಗ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಈ ಯುಗದಲ್ಲಿ ಕಂಪ್ಯೂಟರ್ ಗೇಮ್ಸ್ ಗಳ ಟ್ರೆಂಡ್ ಕೂಡ ಇದೆ. ಈ ಆಟಗಳನ್ನು ಮಕ್ಕಳೂ ಆಡುತ್ತಾರೆ. ಆದರೆ ಇದರಲ್ಲಿ ಎಷ್ಟು ಆಟಗಳಿರುತ್ತವೆಯೋ ಅವುಗಳ ಥೀಮ್ ಗಳು ಕೂಡಾ ಹೆಚ್ಚಾಗಿ ವಿದೇಶಗಳದ್ದೇ ಆಗಿರುತ್ತವೆ. ನಮ್ಮ ದೇಶದಲ್ಲಿ ಎಷ್ಟೊಂದು ಐಡಿಯಾಗಳಿವೆ, ಎಷ್ಟೊಂದು ಕಾನ್ಸೆಪ್ಟ್ ಗಳಿವೆ ಎಂದರೆ ನಮ್ಮ ಇತಿಹಾಸ ಬಹಳ ಸಮೃದ್ಧವಾಗಿದೆ. ನಾವು ಅವುಗಳ ಮೇಲೆ ಗೇಮ್ಸ್ ಸಿದ್ಧಪಡಿಸಬಹುದೇ? ನೀವೂ ಭಾರತದಲ್ಲೂ ಗೇಮ್ಸ್ ಸಿದ್ಧಪಡಿಸಿ, ಎಂದು ನಾನು ದೇಶದ ಯುವಪ್ರತಿಭೆಗೆ ಹೇಳುತ್ತೇನೆ. Let the games begin ಎಂದೂ ಹೇಳಲಾಗುತ್ತದೆ. ಹಾಗಾದರೆ ಬನ್ನಿ ಆಟ ಆರಂಭಿಸೋಣ.
ಸ್ನೇಹಿತರೆ, ಸ್ವಾವಲಂಬಿ ಭಾರತ ಆಂದೋಲನದಲ್ಲಿ ವರ್ಚುವಲ್ ಗೇಮ್ಸ್ ಆಗಲಿ, ಆಟಿಕೆಗಳ ಕ್ಷೇತ್ರವಾಗಲಿ, ಎಲ್ಲವೂ ಬಹಳ ಮಹತ್ವಪೂರ್ಣ ಪಾತ್ರವನ್ನು ವಹಿಸಬೇಕಿದೆ ಮತ್ತು ಇದೊಂದು ಅವಕಾಶವೂ ಆಗಿದೆ. ಇಂದಿನಿಂದ 100 ವರ್ಷ ಹಿಂದೆ ಅಸಹಕಾರ ಆಂದೋಲನ ಆರಂಭವಾಗಿತ್ತು. ಆಗ ಗಾಂಧೀಜಿ ಬರೆದಿದ್ದರು – “ಅಸಹಕಾರ ಆಂದೋಲನ ದೇಶದ ಜನತೆಗೆ ಸ್ವಾಭಿಮಾನ ಮತ್ತು ತಮ್ಮ ಶಕ್ತಿಯ ಅರಿವು ಮೂಡಿಸುವ ಒಂದು ಪ್ರಯತ್ನ” ಎಂದು.
ಇಂದು ನಾವು ದೇಶವನ್ನು ಸ್ವಾವಲಂಬಿಯಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ, ಅಂದರೆ ಸಂಪೂರ್ಣ ಸ್ವಾಭಿಮಾನದೊಂದಿಗೆ ಮುಂದೆ ಸಾಗಬೇಕಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿ ಮಾಡಬೇಕಿದೆ. ಅಸಹಕಾರ ಆಂದೋಲನದ ರೂಪದಲ್ಲಿ ಯಾವ ಬೀಜವನ್ನು ಬಿತ್ತಲಾಗಿತ್ತೊ ಅದನ್ನು ಈಗ ಸ್ವಾವಲಂಬಿ ಭಾರತದ ವಟವೃಕ್ಷದಂತೆ ಪರಿವರ್ತನೆಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತೀಯರ ಅನ್ವೇಷಣೆ ಮತ್ತು ಪರಿಹಾರ ನೀಡುವ ಸಾಮರ್ಥ್ಯದ ಬಲವನ್ನು ಪ್ರತಿಯೊಬ್ಬರೂ ಮಾನ್ಯ ಮಾಡುತ್ತಾರೆ. ಮತ್ತು ಎಲ್ಲಿ ಸಮರ್ಪಣಾ ಭಾವವಿದೆಯೋ, ಸಂವೇದನೆ ಇದೆಯೋ ಅಲ್ಲಿ ಈ ಶಕ್ತಿ ಅಪರಿಮಿತವಾಗುತ್ತದೆ. ಈ ತಿಂಗಳ ಆರಂಭದಲ್ಲಿ ದೇಶದ ಯುವಜನತೆಯ ಎದುರು ಆ್ಯಪ್ ಆವಿಷ್ಕಾರದ ಸವಾಲೊಂದನ್ನು ಇಡಲಾಗಿತ್ತು. ಈ ಸ್ವಾವಲಂಬಿ ಭಾರತ ಆ್ಯಪ್ ಆವಿಷ್ಕಾರದ ಸವಾಲಿನಲ್ಲಿ ನಮ್ಮ ಯುವಜನರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಸುಮಾರು 7 ಸಾವಿರ entry ಗಳು ಬಂದಿದ್ದವು. ಅವುಗಳಲ್ಲಿ, ಮೂರನೇ ಎರಡರಷ್ಟು ಆ್ಯಪ್ ಗಳು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳ ಯುವಕರು ಅಭಿವೃದ್ಧಿಪಡಿಸಿರುವಂಥವುಗಳಾಗಿವೆ. ಇದು ಸ್ವಾವಲಂಬಿ ಭಾರತ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಶುಭ ಸಂಕೇತವಾಗಿದೆ. ಸ್ವಾವಲಂಬಿ ಭಾರತ ಆ್ಯಪ್ ಆವಿಷ್ಕಾರ ಸವಾಲಿನ ಫಲಿತಾಂಶವನ್ನು ನೋಡಿದರೆ ತಾವು ಖಂಡಿತವಾಗಿ ಪ್ರಭಾವಿತರಾಗುತ್ತೀರಿ. ಸಾಕಷ್ಟು ವಿಚಾರ ವಿನಿಮಯಗಳ ನಂತರ ಬೇರೆ ಬೇರೆ ವಿಭಾಗಗಳಲ್ಲಿ ಸರಿಸುಮಾರು 2 ಡಜನ್ ಆ್ಯಪ್ ಗಳಿಗೆ ಪ್ರಶಸ್ತಿಯನ್ನೂ ನೀಡಲಾಗಿದೆ. ತಾವೆಲ್ಲರೂ ಈ ಆ್ಯಪ್ ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಬಳಕೆ ಮಾಡಿಕೊಳ್ಳಿ. ಇದರಿಂದ ತಮಗೂ ಇಂಥದ್ದೇನಾದರೂ ಮಾಡಲು ಪ್ರೇರಣೆಯಾಗಬಹುದು. ಇವುಗಳಲ್ಲಿ ಕುಟುಕೀ ಎನ್ನುವ ಮಕ್ಕಳ ಕಲಿಕಾ ಆ್ಯಪ್ ಒಂದಿದೆ. ಚಿಕ್ಕಮಕ್ಕಳಿಗೆ ಉತ್ತಮ ಸಂವಾದಿಯಾಗಿರುವ ಈ ಆ್ಯಪ್ ನಲ್ಲಿ ಹಾಡುಗಳನ್ನು, ಕಥೆಗಳನ್ನು ಕೇಳಿಸಲಾಗುತ್ತದೆ. ಈ ಮೂಲಕವೇ ಮಕ್ಕಳು ಸಾಕಷ್ಟು ಗಣಿತ ಹಾಗೂ ವಿಜ್ಞಾನದ ಹಲವಾರು ಅಂಶಗಳನ್ನು ಕಲಿತುಕೊಳ್ಳುತ್ತಾರೆ. ಇದರಲ್ಲಿ ಚಟುವಟಿಕೆಗಳೂ ಇವೆ, ಆಟವೂ ಇದೆ. ಇದೇ ರೀತಿಯಲ್ಲಿ ಒಂದು ಮೈಕ್ರೊ ಬ್ಲಾಗಿಂಗ್ ವೇದಿಕೆಯಾಗಿರುವ ಆ್ಯಪ್ ಕೂಡ ಇದೆ. ಇದರ ಹೆಸರು ಕೆಒಒ ಅಂದರೆ ಕೂ. ಇದರಲ್ಲಿ ನಾವು ನಮ್ಮ ಮಾತೃಭಾಷೆಯಲ್ಲಿ ಬರಹ, ವಿಡಿಯೋ ಹಾಗೂ ಧ್ವನಿಯ ಮೂಲಕ ನಮ್ಮ ಮಾತುಗಳನ್ನು ದಾಖಲಿಸಬಹುದು, ಸಂವಾದ ನಡೆಸಬಹುದು. ಇದೇ ರೀತಿ, ಚಿಂಗಾರಿ ಎನ್ನುವ ಆ್ಯಪ್ ಸಹ ಯುವಜನತೆಯಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. “ಆಸ್ಕ್ ಸರ್ಕಾರ್’ ಎನ್ನುವ ಆ್ಯಪ್ ಇದೆ. ಇದರಲ್ಲಿ ಚಾಟ್ ಬೋಟ್ ಮೂಲಕ
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಜುಲೈ 26, ಮತ್ತು ಇಂದಿನ ದಿನ ಬಹಳ ವಿಶೇಷವಾದದ್ದು. ಇಂದು ಕಾರ್ಗಿಲ್ ವಿಜಯ ದಿನ. 21 ವರುಷಗಳ ಹಿಂದೆ ಇಂದಿನ ದಿನವೇ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೇನೆ ಭಾರತದ ವಿಜಯ ಧ್ವಜವನ್ನು ಹಾರಿಸಿತ್ತು. ಸ್ನೇಹಿತರೆ, ಕಾರ್ಗಿಲ್ ಯುದ್ಧ ನಡೆದಂತಹ ಪರಿಸ್ಥಿತಿಯನ್ನು ಭಾರತ ಎಂದಿಗೂ ಮರೆಯಲಾರದು. ಪಾಕಿಸ್ತಾನ ದೊಡ್ಡ ಪ್ರಮಾಣದ ಸಂಚು ಹೂಡಿ ಭಾರತದ ನೆಲವನ್ನು ಕಬಳಿಸುವ ಮತ್ತು ಅವರಲ್ಲಿನ ಆಂತರಿಕ ಕಲಹಗಳಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವಂತಹ ದುಸ್ಸಾಹಸಕ್ಕೆ ಕೈಹಾಕಿತ್ತು. ಭಾರತ ಅಂದು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧಗಳಿಸುವ ಪ್ರಯತ್ನದಲ್ಲಿತ್ತು. ಆದರೆ
“ಬಯರೂ ಅಕಾರಣ್ ಸಬ್ ಕಾಹೂ ಸೊ. ಜೊ ಕರ್ ಹಿತ್ ಅನಹಿತ್ ತಾಹು ಸೊ” ಎಂದು ಹೇಳುತ್ತಾರಲ್ಲವೆ.
ಅಂದರೆ, ಪ್ರತಿಯೊಬ್ಬರ ಜೊತೆಯೂ ವಿನಾಕಾರಣ ವೈರತ್ವ ಸಾಧಿಸುವುದು ದುಷ್ಟರ ಸ್ವಭಾವವೇ ಆಗಿರುತ್ತದೆ. ಇಂಥ ಸ್ವಭಾವದವರು ಒಳಿತನ್ನು ಬಯಸುವವರಿಗೂ ಕೆಡುಕನ್ನೇ ಮಾಡುತ್ತಾರೆ. ಆದ್ದರಿಂದ ಭಾರತದ ಸ್ನೇಹ ಹಸ್ತಕ್ಕೆ ಬೆನ್ನಿಗೆ ಚೂರಿ ಇರಿಯುವ ಮೂಲಕ ಪಾಕಿಸ್ತಾನ ಉತ್ತರ ನೀಡುವ ಪ್ರಯತ್ನ ಮಾಡಿತ್ತು. ಆದರೆ ಭಾರತದ ವೀರ ಸೈನಿಕರು ತೋರಿದ ಪರಾಕ್ರಮ, ಭಾರತ ತೋರಿದ ಶೌರ್ಯಕ್ಕೆ ವಿಶ್ವವೇ ಸಾಕ್ಷಿಯಾಯಿತು. ಎತ್ತರದ ಪರ್ವತ ಪ್ರದೇಶದ ಮೇಲೆ ಕುಳಿತ ವೈರಿ ಮತ್ತು ಕೆಳಗಿನಿಂದ ಹೋರಾಡುತ್ತಿರುವ ನಮ್ಮ ಸೇನೆ, ನಮ್ಮ ವೀರ ಸೇನಾನಿಗಳ ಬಗ್ಗೆ ನೀವು ಊಹಿಸಬಹುದೇ! ಗೆಲುವು ಪರ್ವತದ ಅಗಾಧತೆಯದ್ದಲ್ಲ, ಗೆಲುವು ಭಾರತದ ಸೇನೆಯ ಉಚ್ಚ ಮಟ್ಟದ ಸ್ಥೈರ್ಯ ಮತ್ತು ನಿಜವಾದ ಶೌರ್ಯದ್ದಾಗಿತ್ತು. ಸ್ನೇಹಿತರೆ, ಆಗ ನನಗೂ ಕಾರ್ಗಿಲ್ ಗೆ ಹೋಗುವ ಮತ್ತು ನಮ್ಮ ಸೈನಿಕರ ಶೌರ್ಯದ ದರ್ಶನ ಭಾಗ್ಯ ಲಭಿಸಿತ್ತು. ಆ ದಿನ ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಇಂದು ದೇಶದೆಲ್ಲೆಡೆ ಜನರು ಕಾರ್ಗಿಲ್ ವಿಯಜವನ್ನು ಸ್ಮರಿಸುತ್ತಿದ್ದಾರೆ ಎಂಬುದನ್ನು ನಾನು ನೋಡುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಒಂದು hashtag #courageinkargil ನಲ್ಲಿ ಜನರು ನಮ್ಮ ವೀರರಿಗೆ ನಮಿಸುತ್ತಿದ್ದಾರೆ. ಹುತಾತ್ಮರಾದವರಿಗೆ ಶೃದ್ಧಾಂಜಲಿ ಅರ್ಪಪಿಸುತ್ತಿದ್ದಾರೆ. ಇಂದು ನಾನು ಸಮಸ್ತ ದೇಶಬಾಂಧವರ ಪರವಾಗಿ ನಮ್ಮ ಈ ವೀರ ಯೋಧರ ಜೊತೆ ಜೊತೆಗೆ ತಾಯಿ ಭಾರತಿಯ ನಿಜವಾದ ಸುಪುತ್ರರಿಗೆ ಜನ್ಮ ನೀಡಿದ ಆ ವೀರ ಮಾತೆಯರಿಗೂ ನಮಿಸುತ್ತೇನೆ. ಇಂದು ದಿನಪೂರ್ತಿ ಕಾರ್ಗಿಲ್ ವಿಜಯಕ್ಕೆ ಸಂಬಂಧಿಸಿದ ನಮ್ಮ ವೀರರ ಕಥೇಗಳನ್ನು, ವೀರ ಮಾತೆಯರ ತ್ಯಾಗದ ಬಗ್ಗೆ ಪರಸ್ಪರ ವಿಚಾರಗಳನ್ನು ಹಂಚಿಕೊಳ್ಳಿ ಎಂದು ನನ್ನ ದೇಶದ ಯುವಜನತೆಗೆ ಆಗ್ರಹಿಸುತ್ತೇನೆ. ಸ್ನೇಹಿತರೆ, www.gallantryawards.gov.in ಎಂಬ ಜಾಲತಾಣವಿದೆ, ಇದನ್ನು ಖಂಡಿತ ನೋಡಿರಿ ಎಂದು ನಿಮ್ಮನ್ನು ಒತ್ತಾಯಿಸುತ್ತೇನೆ. ಅಲ್ಲಿ ನಿಮಗೆ ನಮ್ಮ ವೀರ ಪರಾಕ್ರಮಿ ಯೋಧರ ಬಗ್ಗೆ, ಅವರ ಪರಾಕ್ರಮದ ಬಗ್ಗೆ ಬಹಳಷ್ಟು ಮಾಹಿತಿ ಲಭಿಸುತ್ತದೆ. ಈ ಮಾಹಿತಿಯ ಬಗ್ಗೆ ನೀವು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿದಾಗ ಅದು ಅವರಿಗೂ ಪ್ರೇರಣೆಯನ್ನು ನೀಡುತ್ತದೆ. ಖಂಡಿತ ನೀವು ಈ ಜಾಲತಾಣಕ್ಕೆ ಭೇಟಿ ನೀಡಿ ಅಷ್ಟೇ ಅಲ್ಲ ಮತ್ತೆ ಮತ್ತೆ ಭೇಟಿ ನೀಡಿ ಎಂದು ನಾನು ಹೇಳಬಯಸುತ್ತೇನೆ
ಸ್ನೇಹಿತರೆ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಂದು ಅಟಲ್ ಜಿಯವರು ಕೆಂಪು ಕೋಟೆಯಿಂದ ಹೇಳಿದ್ದು ಇಂದಿಗೂ ನಮ್ಮೆಲ್ಲರಿಗೂ ಪ್ರಸ್ತುತವಾಗಿದೆ. ಅಂದು ಅಟಲ್ ಜಿಯವರು ದೇಶಕ್ಕೆ ಗಾಂಧೀಜಿಯವರ ಒಂದು ಮಂತ್ರದ ಕುರಿತು ನೆನಪಿಸಿದ್ದರು. ಯಾರಿಗೇ ಆಗಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಕುರಿತು ದ್ವಂದ್ವವಿದ್ದಲ್ಲಿ ಅವರು ಭಾರತದ ಕಡುಬಡವ ಮತ್ತು ಅಸಹಾಯಕ ವ್ಯಕ್ತಿಯ ಕುರಿತು ಆಲೋಚಿಸಬೇಕು ಎಂಬುದು ಮಹಾತ್ಮಾ ಗಾಂಧಿಯವರ ಮಂತ್ರವಾಗಿತ್ತು. ತಾನು ಏನು ಮಾಡುತ್ತಿರುವೆನೋ ಅದರಿಂದ ಆ ವ್ಯಕ್ತಿಯ ಒಳಿತು ಆಗುವುದೋ ಇಲ್ಲವೋ ಎಂಬುದನ್ನು ಆಲೋಚಿಸಬೇಕು. ಗಾಂಧೀಜಿಯವರ ಈ ವಿಚಾರದಿಂದಲೂ ಮುಂದುವರಿದು ಅಟಲ್ ಜಿಯವರು ಹೀಗೆ ಹೇಳಿದ್ದರು, ಕಾರ್ಗಿಲ್ ಯುದ್ಧ, ನಮಗೆ ಮತ್ತೊಂದು ಮಂತ್ರವನ್ನು ನೀಡಿದೆ – ಅದೇನೆಂದರೆ ಯಾವುದೇ ಮಹತ್ವಪೂರ್ಣ ನಿರ್ಣಯ ಕೈಗೊಳ್ಳುವ ಮೊದಲು, ನಾವು ಕೈಗೊಳ್ಳುವ ಈ ಕ್ರಮ ಆ ದುರ್ಗಮ ಪರ್ವತ ಪ್ರದೇಶಗಳಲ್ಲಿ ತನ್ನ ಪ್ರಾಣದ ಆಹುತಿಯನ್ನು ನೀಡಿದ ಆ ಸೈನಿಕರ ಗೌರವಕ್ಕೆ ತಕ್ಕುದಾಗಿದೆಯೇ ಎಂಬುದನ್ನು ಆಲೋಚಿಸುವುದಾಗಿದೆ. ಬನ್ನಿ ಅಟಲ್ ಜಿಯವರ ಧ್ವನಿಯಲ್ಲೇ ಅವರ ಈ ಭಾವನೆಯನ್ನು ನಾವೆಲ್ಲ ಕೇಳೋಣ, ಅರಿತುಕೊಳ್ಳೋಣ ಮತ್ತು ಅದನ್ನು ಸ್ವೀಕರಿಸುವುದು ಪ್ರಸ್ತುತ ಸಮಯದ ಅವಶ್ಯಕತೆಯೂ ಆಗಿದೆ
“ಗಾಂಧೀಜಿಯವರು ಒಂದು ಮಂತ್ರವನ್ನು ನೀಡಿದ್ದು ನಮ್ಮೆಲ್ಲರಿಗೂ ನೆನಪಿದೆ. ನೀವು ಏನು ಮಾಡಬೇಕು, ಎಂಬ ಕುರಿತು ದ್ವಂದ್ವವಿದ್ದಲ್ಲಿ ಭಾರತದ ಅಸಹಾಯಕ ವ್ಯಕ್ತಿಯ ಕುರಿತು ಆಲೋಚಿಸಿ ಮತ್ತು ನೀವು ಏನು ಮಾಡುತ್ತಿರುವಿರೋ ಅದರಿಂದ ಆ ವ್ಯಕ್ತಿಯ ಒಳಿತು ಆಗುವುದೇ ಎಂಬುದನ್ನು ಆಲೋಚಿಸಬೇಕು” ಎಂದು ಅವರು ಹೇಳಿದ್ದರು. “ಕಾರ್ಗಿಲ್ ನಮಗೆ ಮತ್ತೊಂದು ಮಂತ್ರವನ್ನು ನೀಡಿದೆ –ಯಾವುದೇ ಮಹತ್ವಪೂರ್ಣ ನಿರ್ಣಯ ಕೈಗೊಳ್ಳುವ ಮೊದಲು, ನಾವು ಕೈಗೊಳ್ಳುವ ಈ ಕ್ರಮ ಆ ದುರ್ಗಮ ಪರ್ವತ ಪ್ರದೇಶಗಳಲ್ಲಿ ತನ್ನ ಪ್ರಾಣದ ಆಹುತಿಯನ್ನು ನೀಡಿದ ಆ ಸೈನಿಕನ ಗೌರವಕ್ಕೆ ತಕ್ಕುದಾಗಿದೆಯೇ”
ಸ್ನೇಹಿತರೆ, ಯುದ್ಧ ಸ್ಥಿತಿಯಲ್ಲಿ ನಾವು ಏನು ಮಾತನಾಡುತ್ತೇವೆಯೋ, ಮಾಡುತ್ತೆವೆಯೋ, ಅದರಿಂದ ಗಡಿಯಲ್ಲಿ ಹೋರಾಡುತ್ತಿರುವ ಸೈನಿಕರ ಆತ್ಮ ಸ್ಥೈರ್ಯದ ಮೇಲೆ ಮತ್ತು ಅವರ ಕುಟುಂಬದ ಆತ್ಮ ಸ್ಥೈರ್ಯದ ಮೇಲೆ ಬಹಳ ಗಾಢ ಪರಿಣಾಮ ಬೀರುತ್ತದೆ. ಈ ಮಾತನ್ನು ನಾವು ಎಂದಿಗೂ ಮರೆಯಬಾರದು. ಹಾಗಾಗಿ ನಮ್ಮ ಆಚಾರ ವಿಚಾರಗಳು ಮತ್ತು ನಡೆ, ನುಡಿ, ನಮ್ಮ ಗೌರವ ನಮ್ಮ ಗುರಿ ಎಲ್ಲವೂ ಪರೀಕ್ಷೆಗೊಳಪಡುತ್ತವೆ. ನಾವು ಏನು ಮಾಡುತ್ತೇವೆಯೋ, ಮಾತನಾಡುತ್ತೇವೆಯೋ ಅದರಿಂದ ಸೈನಿಕರ ಮನಸ್ಥೈರ್ಯ ವೃದ್ಧಿಸಬೇಕು. ಅವರ ಗೌರವ ವೃದ್ಧಿಸಬೇಕು. ರಾಷ್ಟ್ರವೇ ಎಲ್ಲಕ್ಕಿಂತ ಮಿಗಿಲು ಎಂಬ ಮಂತ್ರದೊಂದಿಗೆ ಏಕತೆಯ ಸೂತ್ರದಲ್ಲಿ ಹೆಣೆದಂತಿರುವ ದೇಶವಾಸಿಗಳು ನಮ್ಮ ಸೈನಿಕರ ಶಕ್ತಿಯನ್ನು ಸಾವಿರ ಪಟ್ಟು ಹೆಚ್ಚಿಸುತ್ತಾರೆ. ಅದಕ್ಕೆಂದೇ ನಮ್ಮಲ್ಲಿ ‘ಸಂಘೆ ಶಕ್ತಿ ಕಲೌ ಯುಗೆ’ ಎಂದು ಹೇಳುತ್ತಾರಲ್ಲವೇ.
ಕೆಲವೊಮ್ಮೆ ನಾವು ಈ ಮಾತನ್ನು ಅರಿಯದೇ ನಮ್ಮ ದೇಶಕ್ಕೆ ಬಹಳಷ್ಟು ನಷ್ಟವನ್ನು ಉಂಟು ಮಾಡುವಂತಹ ವಿಷಯಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಒತ್ತು ನೀಡುತ್ತೇವೆ. ಕೆಲವೊಮ್ಮೆ ಜಿಜ್ಞಾಸೆಗೆ ಒಳಪಟ್ಟು ಫಾರ್ವರ್ಡ್ ಕೂಡಾ ಮಾಡುತ್ತೇವೆ. ಇದು ತಪ್ಪು ಎಂಬುದು ಗೊತ್ತು – ಆದರೂ ಮಾಡ್ತಾನೇ ಇರುತ್ತೇವೆ. ಈ ಮಧ್ಯೆ ಯುದ್ಧ, ಕೇವಲ ಗಡಿ ಭಾಗದಲ್ಲಿ ಮಾತ್ರನಡೆಯುವುದಿಲ್ಲ ಹಲವಾರು ರಂಗಗಳಲ್ಲೂ ಜೊತೆ ಸೇರಿ ಹೋರಾಡಲಾಗುತ್ತದೆ ಮತ್ತು ಪ್ರತಿಯೊಬ್ಬ ದೇಶವಾಸಿಯೂ ತನ್ನ ಪಾತ್ರವನ್ನು ನಿರ್ಧರಿಸಬೇಕಾಗುತ್ತದೆ. ನಾವೂ ನಮ್ಮ ಪಾತ್ರವನ್ನು, ದೇಶದ ಗಡಿ ಭಾಗದಲ್ಲಿ ದುರ್ಗಮ ಪರಿಸ್ಥಿತಿಯಲ್ಲಿ ಹೋರಾಡುತ್ತಿರುವ ಸೈನಿಕರನ್ನು ನೆನೆದು ನಿರ್ಧರಿಸಬೇಕಾಗುತ್ತದೆ.
ನನ್ನ ಪ್ರಿಯ ದೇಶಬಾಂಧವರೇ, ಕಳೆದ ಕೆಲ ತಿಂಗಳುಗಳಿಂದ ಸಂಪೂರ್ಣ ರಾಷ್ಟ್ರ ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಡುತ್ತಿರುವುದು ಹಲವಾರು ಶಂಕೆಗಳನ್ನು ತಪ್ಪು ಎಂದು ಸಾಬೀತುಪಡಿಸಿದೆ. ಇಂದು ನಮ್ಮ ದೇಶದಲ್ಲಿ ಚೇತರಿಕೆ ದರ ಬೇರೆ ದೇಶಗಳಿಗೆ ಹೋಲಿಸಿದಲ್ಲಿ ಉತ್ತಮವಾಗಿದೆ. ಜೊತೆಗೆ ನಮ್ಮ ದೇಶದಲ್ಲಿ ಕೊರೊನಾದಿಂದಾದ ಮರಣ ಪ್ರಮಾಣ ಕೂಡ ವಿಶ್ವದ ಹೆಚ್ಚಿನ ದೇಶಗಳಿಗಿಂತ ಅತ್ಯಂತ ಕಡಿಮೆಯಿದೆ. ಒಬ್ಬ ವ್ಯಕ್ತಿಯನ್ನು ಕಳೆದುಕೊಳ್ಳುವುದು ಖಂಡಿತ ದುಃಖದ ಸಂಗತಿ. ಆದರೆ, ಲಕ್ಷಾಂತರ ದೇಶಬಾಂಧವರ ಜೀವನವನ್ನು ರಕ್ಷಿಸುವಲ್ಲಿ ಭಾರತ ಸಫಲವೂ ಆಗಿದೆ. ಆದರೆ ಸ್ನೇಹಿತರೆ, ಕೊರೊನಾ ಆತಂಕ ಇನ್ನೂ ಹೋಗಿಲ್ಲ. ಕೆಲವೊಂದು ಸ್ಥಳಗಳಲ್ಲಿ ಇದು ಬಹಳಷ್ಟು ವೇಗವಾಗಿ ಹರಡುತ್ತಿದೆ. ನಾವು ಬಹಳಷ್ಟು ಜಾಗೃತರಾಗಿರುವುದು ಅವಶ್ಯಕವಾಗಿದೆ. ಇಂದಿಗೂ ಕೊರೊನಾ ಆರಂಭದಲ್ಲಿದ್ದಷ್ಟೇ ಆಘಾತಕಾರಿಯಾಗಿದೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಅದಕ್ಕಾಗಿಯೇ, ನಾವು ಸಂಪೂರ್ಣ ಜಾಗೃತೆವಹಿಸಬೇಕು. ಮುಖಕ್ಕೆ ಮಾಸ್ಕ ಹಾಕಿಕೊಳ್ಳಬೇಕು ಅಥವಾ ಟವಲ್ ಬಳಸಬೇಕು. 2 ಗಜ ದೂರವನ್ನು ಪಾಲಿಸಬೇಕು. ನಿರಂತರ ಕೈತೊಳೆಯಬೇಕು, ಎಲ್ಲಿಯೂ ಉಗುಳಬಾರದು. ಸ್ವಚ್ಛತೆಯ ಕುರಿತು ಸಂಪೂರ್ಣ ಗಮನಹರಿಸಬೇಕು. ಇವೇ ನಮ್ಮನ್ನು ಕೊರೊನಾದಿಂದ ರಕ್ಷಿಸುವ ಅಸ್ತ್ರಗಳಾಗಿವೆ. ಒಮ್ಮೊಮ್ಮೆ ನಮಗೆ ಮಾಸ್ಕ್ ಧರಿಸುವುದರಿಂದ ಕಷ್ಟವಾಗಬಹುದು ಮತ್ತು ಮಾಸ್ಕ ತೆಗೆದುಬಿಡೋಣ ಎಂದೆನ್ನಿಸಬಹುದು. ಮಾತನಾಡಲು ಆರಂಭಿಸುತ್ತೇವೆ. ಮಾಸ್ಕ ಅತ್ಯವಶ್ಯವಾಗಿರುವಾಗಲೇ ತೆಗೆದುಬಿಡುತ್ತೇವೆ. ಇಂಥ ಸಮಯದಲ್ಲಿ ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಿಮಗೆ ಮಾಸ್ಕ್ ಧರಿಸುವುದರಿಂದ ಕಷ್ಟವಾದಾಗ ಮತ್ತು ಮಾಸ್ಕ ತೆಗೆದುಬಿಡೋಣ ಎಂದೆನ್ನಿಸಿದಾಗ ಒಂದು ಕ್ಷಣ ಆ ವೈದ್ಯರನ್ನು ಸ್ಮರಿಸಿಕೊಳ್ಳಿ, ಆ ಸುಶ್ರೂಷಕಿಯರನ್ನು ಸ್ಮರಿಸಿಕೊಳ್ಳಿ, ನಮ್ಮ ಕೊರೊನಾ ಯೋಧರನ್ನು ಸ್ಮರಿಸಿಕೊಳ್ಳಿ. ನಿರಂತರವಾಗಿ ನಮ್ಮೆಲ್ಲರ ಜೀವನ ಸಂರಕ್ಷಣೆಗೆ ಅವರು ಮಾಸ್ಕ್ ಧರಿಸಿ ಗಂಟೆಗಳಗಟ್ಟಲೆ ಇರುತ್ತಾರೆ. 8 – 10 ಗಂಟೆವರೆಗೆ ಮಾಸ್ಕ್ ಧರಿಸಿಯೇ ಇರುತ್ತಾರೆ. ಅವರಿಗೆ ಕಷ್ಟವಾಗಲಿಕ್ಕಿಲ್ಲವೇ? ಅವರನ್ನು ಸ್ವಲ್ಪ ಸ್ಮರಿಸಿಕೊಳ್ಳಿ, ಒಬ್ಬ ನಾಗರಿಕನಾಗಿ ಒಂದಿಷ್ಟೂ ಅಲಕ್ಷ್ಯವಹಿಸಬಾರದು, ಬೇರೆಯವರೂ ಅಲಕ್ಷ್ಯಮಾಡದಂತೆ ನೋಡಿಕೊಳ್ಳಬೇಕೆಂದು ನಿಮಗೂ ಅನ್ನಿಸುತ್ತದೆ. ಒಂದೆಡೆ ಕೊರೊನಾ ವಿರುದ್ಧದ ಯುದ್ಧವನ್ನು ಸಂಪೂರ್ಣ ಸಿದ್ಧತೆಯೊಂದಿಗೆ ಮತ್ತು ಜಾಗೃತೆಯಿಂದ ಹೋರಾಡಬೇಕಿದೆ. ಮತ್ತೊಂದೆಡೆ ಕಠಿಣ ಪರಿಶ್ರಮದಿಂದ ವ್ಯವಸಾಯ, ಉದ್ಯೋಗ, ಓದು ಯಾವುದೇ ಕರ್ತವ್ಯವನ್ನು ನಿಭಾಯಿಸುತ್ತೇವೆಯೋ ಅದರಲ್ಲಿ ವೇಗವನ್ನು ವೃದ್ಧಿಸಬೇಕಿದೆ. ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಸ್ನೇಹಿತರೆ, ಕೊರೊನಾ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಕ್ಷೇತ್ರ ಸಂಪೂರ್ಣ ದೇಶಕ್ಕೆ ಮಾರ್ಗ ತೋರಿದೆ. ಗ್ರಾಮಗಳ ಸ್ಥಳೀಯ ನಾಗರಿಕರ, ಗ್ರಾಮ ಪಂಚಾಯ್ತಿಗಳ, ಹಲವಾರು ಉತ್ತಮ ಪ್ರಯತ್ನಗಳು ನಿರಂತರವಾಗಿ ಕಂಡುಬರುತ್ತಿವೆ. ಜಮ್ಮುದಲ್ಲಿ ತ್ರೆವಾ ಎಂಬ ಗ್ರಾಮವಿದೆ. ಬಲಬೀರ್ ಕೌರ್ ಅವರು ಅಲ್ಲಿಯ ಸರಪಂಚರು. ಬಲಬೀರ್ ಕೌರ್ ಅವರು ತಮ್ಮ ಪಂಚಾಯ್ತಿಯಲ್ಲಿ 30 ಹಾಸಿಗೆಗಳ ಕ್ವಾರಂಟೈನ್ ಕೇಂದ್ರವನ್ನು ಸ್ಥಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಜನರಿಗೆ ಕೈತೊಳೆಯಲು ತೊಂದರೆಯಾಗದಂತೆ ಪಂಚಾಯ್ತಿಗೆ ಬರುವ ಮಾರ್ಗಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಸ್ವತಃ ಬಲಬೀರ್ ಕೌರ್ ಅವರು ತಮ್ಮ ಹೆಗಲ ಮೇಲೆ ಸ್ಪ್ರೇ ಪಂಪ್ ಹೊತ್ತುಕೊಂಡು ಸ್ವಯಂ ಸೇವಕರೊಂದಿಗೆ ಸೇರಿ ಸಂಪೂರ್ಣ ಪಂಚಾಯ್ತಿಯಲ್ಲಿ, ಸುತ್ತ ಮುತ್ತಲ ಪ್ರದೇಶದಲ್ಲಿ ಸ್ಯಾನಿಟೈಸೇಶನ್ ಕೆಲಸವನ್ನೂ ಮಾಡುತ್ತಾರೆ. ಇಂಥ ಇನ್ನೊಬ್ಬ ಕಾಶ್ಮೀರಿ ಮಹಿಳಾ ಸರಪಂಚರಿದ್ದಾರೆ. ಗಾಂದರ್ ಬಲ್ ನ ಚೌಂಟಲೀವಾರ್ ನ ಜೈತೂನಾ ಬೇಗಂ. ತಮ್ಮ ಪಂಚಾಯ್ತಿ ಕೊರೊನಾ ವಿರುದ್ಧ ಹೋರಾಡಲಿದೆ ಮತ್ತು ಜೀವನೋಪಾಯಕ್ಕೆ ಅವಕಾಶಗಳನ್ನೂ ಶೋಧಿಸಲಿದೆ ಎಂದು ಜೈತೂನಾ ಬೇಗಂ ಅವರು ನಿರ್ಧರಿಸಿದರು. ಅವರು ಸಂಪೂರ್ಣ ಪ್ರದೇಶದಲ್ಲಿ ಉಚಿತವಾಗಿ ಮಾಸ್ಕ ವಿತರಿಸಿದರು. ಉಚಿತ ಪಡಿತರ ಹಂಚಿದರು. ಜೊತೆಗೆ ಜನರಿಗೆ ಕೃಷಿಯಲ್ಲಿ ತೋಟಗಾರಿಕೆಯಲ್ಲಿ ತೊಂದರೆಯಾಗದಂತೆ ಬೀಜಗಳನ್ನು ಮತ್ತು ಸೇಬಿನ ಸಸಿಗಳನ್ನು ನೀಡಿದರು. ಸ್ನೇಹಿತರೆ, ಕಾಶ್ಮೀರದ ಮತ್ತೊಂದು ಪ್ರೇರಣಾದಾಯಕ ಘಟನೆಯಿದೆ. ಇಲ್ಲಿಯ ಅನಂತನಾಗ್ ನಗರಸಭೆ ಅಧ್ಯಕ್ಷರು ಶ್ರೀಯುತ ಮೊಹಮ್ಮದ್ ಇಕ್ಬಾಲ್ ಅವರು. ತಮ್ಮ ಪ್ರದೇಶದಲ್ಲಿ ಸ್ಯಾನಿಟೈಸೇಶನ್ ಗಾಗಿ ಸ್ಪ್ರೇಯರ್ ಅವಶ್ಯಕತೆಯಿತ್ತು. ಅವರು ಮಾಹಿತಿ ಕಲೆಹಾಕಿದಾಗ ಬೇರೆ ನಗರದಿಂದ ಯಂತ್ರವನ್ನು ತರಬೇಕೆಂದು ಮತ್ತು ಅದರ ಬೆಲೆ 6 ಲಕ್ಷ ರೂಪಾಯಿ ಎಂದು ತಿಳಿಯಿತು. ಶ್ರೀಯುತ ಇಕ್ಬಾಲ್ ಅವರು. ಸ್ವತಃ ಪ್ರಯತ್ನದಿಂದ ತಾವೇ ಕೇವಲ 50 ಸಾವಿರ ರೂಪಾಯಿಯಲ್ಲಿ ಸ್ಪ್ರೇಯರ್ ಯಂತ್ರವನ್ನು ಸಿದ್ಧಪಡಿಸಿಕೊಂಡರು. ದೇಶದಲ್ಲಿ ಇಂಥ ಇನ್ನೂ ಹಲವಾರು ವಿಷಯಗಳಿವೆ. ಇಂಥ ಪ್ರೇರಣಾತ್ಮಕ ಘಟನೆಗಳು ಪ್ರತಿದಿನ ನಮ್ಮ ಮುಂದೆ ಕಂಡುಬರುತ್ತವೆ. ಇವರೆಲ್ಲರೂ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸವಾಲುಗಳು ಎದುರಾದವು ಆದರೆ ಜನರು ಅಷ್ಟೇ ಶಕ್ತಿಯಿಂದ ಅದನ್ನು ಎದುರಿಸಿದರು.
ನನ್ನ ಪ್ರಿಯ ದೇಶಬಾಂಧವರೆ, ಸೂಕ್ತ ಸ್ಪಂದನೆಯಿಂದ ಮತ್ತು ಸಕಾರಾತ್ಮಕ ಕ್ರಮಗಳಿಂದ ಸದಾ ಆಪತ್ತನ್ನು ಅವಕಾಶಗಳಾಗಿ ಮತ್ತು ವಿಪತ್ತನ್ನು ವಿಕಾಸದ ರೂಪದಲ್ಲಿ ಬದಲಿಸಲು ಬಹಳ ಸಹಾಯಕವಾಗುತ್ತದೆ. ಇದೀಗ ಕೊರೊನಾ ಸಮಯದಲ್ಲಿ ಹೇಗೆ ನಮ್ಮ ದೇಶದ ಯುವಜನತೆ ಮತ್ತು ಮಹಳೆಯರು ತಮ್ಮ ಕೌಶಲ್ಯದಿಂದ ಕೆಲವಾರು ಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆಕಾಣುತ್ತಿದ್ದೇವೆ. ಬಿಹಾರದ ಕೆಲವೊಂದು ಮಹಿಳಾ ಸ್ವಸಹಾಯ ಗುಂಪುಗಳು ಮಧುಬನಿ ಪೇಂಟಿಂಗ್ ಇರುವ ಮಾಸ್ಕಗಳ ತಯಾರಿಕೆಗೆ ಮುಂದಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಅವರು ಬಹಳ ಪ್ರಸಿದ್ಧಿಯನ್ನು ಪಡೆದರು. ಈ ಮಧುಬನಿ ಮಾಸ್ಕ್ ಗಳು ಒಂದು ರೀತಿ ನಮ್ಮ ಪರಂಪರೆಯನ್ನು ಸಾರುತ್ತವೆ ಜೊತೆಗೆ ಜನರಿಗೆ ಆರೋಗ್ಯದೊಂದಿಗೆ ಉದ್ಯೋಗವನ್ನೂ ದೊರಕಿಸಿಕೊಟ್ಟಿದೆ.
ಈಶಾನ್ಯ ಭಾಗದಲ್ಲಿ ಬಿದಿರು ಎಷ್ಟು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತದೆ ಎಂಬುದು ನಿಮಗೆನಿಮಗೆ ಗೊತ್ತು. ಈಗ ಇದೇ ಬಿದಿರಿನಿಂದ ಅಸ್ಸಾಂ, ತ್ರಿಪುರಾ ಮತ್ತು ಮಣಿಪುರದ ಜನತೆ ಉತ್ತಮ ಗುಣಮಟ್ಟದ ನೀರಿನ ಬಾಟಲಿಗಳು ಮತ್ತು ಊಟದ ಡಬ್ಬಿಗಳನ್ನು ತಯಾರಿಸುತ್ತಿದ್ದಾರೆ. ಇದರ ಗುಣಮಟ್ಟವನ್ನು ನೀವು ನೋಡಿದಲ್ಲಿ ಇಷ್ಟು ಉತ್ತಮ ಮಟ್ಟದ ಬಿದಿರಿನ ಉತ್ಪನ್ನಗಳಿರಲು ಸಾಧ್ಯವೇ ಎಂದು ಆಶ್ಚರ್ಯವಾಗಬಹುದು. ಈ ಬಾಟಲಿಗಳು ಪರಿಸರ ಸ್ನೇಹಿಯೂ ಆಗಿವೆ. ಇವುಗಳನ್ನು ಸಿದ್ಧಪಡಿಸುವಾಗ, ಬಿದಿರನ್ನು ಬೇವು ಮತ್ತು ಇತರ ಔಷಧೀಯ ಸಸ್ಯಗಳಲ್ಲಿ ಕುದಿಸಲಾಗುತ್ತದೆ. ಇದರಿಂದ ಇವುಗಳಲ್ಲಿ ಔಷಧೀಯ ಗುಣಗಳೂ ಸೇರಿಕೊಳ್ಳುತ್ತವೆ.
ಸಣ್ಣ ಸಣ್ಣ ಸ್ಥಳೀಯ ಉತ್ಪನ್ನಗಳಿಂದ ಹೇಗೆ ದೊಡ್ಡ ಸಫಲತೆ ದೊರೆಯುತ್ತದೆ ಎಂಬುದಕ್ಕೆ ಜಾರ್ಖಂಡ್ ನಿಂದಲೂ ಒಂದು ಉದಾಹರಣೆ ನಮಗೆ ದೊರೆಯುತ್ತದೆ. ಜಾರ್ಖಂಡ್ ನ ಬಿಶುನ್ ಪುರ್ ನಲ್ಲಿ ಈ ಮಧ್ಯೆ 30 ಕ್ಕಿಂತ ಹೆಚ್ಚು ಸಂಘಗಳು ಸೇರಿ ಲೆಮನ್ ಗ್ರಾಸ್ ಕೃಷಿಯಲ್ಲಿ ತೊಡಗಿದ್ದಾರೆ. ಲೆಮನ್ ಗ್ರಾಸ್ 4 ತಿಂಗಳಲ್ಲಿ ಕಟಾವಿಗೆ ಸಿದ್ಧಗೊಳ್ಳುತ್ತದೆ. ಇದರ ತೈಲಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭ್ಯ. ಈ ಮಧ್ಯೆ ಇದರ ಬೇಡಿಕೆಯೂ ಹೆಚ್ಚಿದೆ. ನಾನು, ದೇಶದ 2 ಸ್ಥಳಗಳ ಬಗ್ಗೆಯೂ ಮಾತನಾಡಬಯಸುತ್ತೇನೆ. ಎರಡೂ ಒಂದಕ್ಕೊಂದು ಸಾವಿರಾರು ಕೀ ಮೀ ದೂರವಿವೆ. ತಮ್ಮದೇ ರೀತಿಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿವೆ. ಒಂದು ಲದ್ದಾಖ್ ಮತ್ತೊಂದು ಕಛ್. ಲೇಹ್-ಲದ್ದಾಖ್ ಹೆಸರು ಬಂದರೆ ಸಾಕು ಸುಂದರ ಪರ್ವತ ಶ್ರೇಣಿ ಮತ್ತು ಎತ್ತರದ ಬೆಟ್ಟ ಪ್ರದೇಶಗಳ ನೋಟ ಕಣ್ಣ ಮುಂದೆ ತೇಲುತ್ತವೆ. ತಾಜಾ ತಂಗಾಳಿಯ ತಂಪು ಅನುಭವವಾಗುತ್ತದೆ, ಕಛ್ ಹೆಸರು ಕೇಳಿದರೆ ಸಾಕು ದೂರ ದೂರದವರೆಗೆ ಮರುಭೂಮಿ, ಎಲ್ಲೂ ಗಿಡಮರಗಳ ಕುರುಹೂ ಕಾಣುವುದಿಲ್ಲ. ಇದೆಲ್ಲವೂ ಕಣ್ಣ ಮುಂದೆ ಸುಳಿಯುತ್ತದೆ. ಲದ್ದಾಖ್ ನಲ್ಲಿ ಒಂದು ವಿಶಿಷ್ಟ ಹಣ್ಣಿದೆ. ಅದರ ಹೆಸರು ಚೂಲೀ ಅಥವಾ ಏಪ್ರಿಕಾಟ್ ಅಥವಾ ಖುಬಾನಿ. ಈ ಫಸಲು, ಈ ಕ್ಷೇತ್ರದ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ ಆದರೆ, ಸರಬರಾಜು ಸರಪಳಿ, ವಾತಾವರಣದ ಏರುಪೇರಿನಂಥ ಹಲವಾರು ಸವಾಲುಗಳನ್ನು ಎದುರಿಸುತ್ತಿರುತ್ತದೆ ಎಂಬುದು ವಿಷಾದದ ಸಂಗತಿ. ಇದರಿಂದಾಗುವ ನಷ್ಟವನ್ನು ತಗ್ಗಿಸಲು ಈ ಮಧ್ಯೆ ಒಂದು ಹೊಸ ಆವಿಷ್ಕಾರ ಬಳಕೆಗೆ ಬಂದಿದೆ. ಇದು ಒಂದು ಡುವೆಲ್ ಸಿಸ್ಟೆಮ್ ಆಗಿದೆ. ಇದರ ಹೆಸರು ಸೋಲಾರ್ ಏಪ್ರಕಾಟ್ ಡ್ರೈಯರ್ ಮತ್ತು ಸ್ಪೇಸ್ ಹೀಟರ್. ಇದು ಖುಬಾನಿ, ಇತರ ಹಣ್ಣುಗಳು ಮತ್ತು ತರಕಾರಿಗಳನ್ನು ಅವಶ್ಯಕತೆಗನುಸಾರ ಹೈಜಿನಿಕ್ ರೂಪದಲ್ಲಿ ಒಣಗಿಸುತ್ತದೆ. ಈ ಹಿಂದೆ ಖುಬಾನಿಯನ್ನು ಗದ್ದೆಗಳ ಪಕ್ಕದಲ್ಲಿ ಒಣಗಿಸುವಾಗ ನಷ್ಟವಂತೂ ಆಗುತ್ತಿತ್ತು ಜೊತೆಗೆ ಧೂಳು ಮತ್ತು ಮಳೆ ನೀರಿನಿಂದಾಗಿ ಹಣ್ಣಿನ ಗುಣಮಟ್ಟದ ಮೇಲೂ ಪ್ರಭಾವ ಬೀರುತ್ತಿತ್ತು. ಇನ್ನೊಂದೆಡೆ ಈ ಮಧ್ಯೆ ಕಛ್ ನಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿಗಾಗಿ ಅಭಿನಂದನಾರ್ಹ ಪ್ರಯತ್ನ ಮಾಡುತ್ತಿದ್ದಾರೆ. ಕಛ್-ಡ್ರ್ಯಾಗನ್ ಹಣ್ಣು ಎಂದು ಕೇಳಿದಾಗ ಬಹಳಷ್ಟು ಜನರು ಆಶ್ಚರ್ಯಪಡುತ್ತಾರೆ. ಆದರೆ ಇಂದು ಅಲ್ಲಿ ಹಲವಾರು ಕೃಷಿಕರು ಈ ಕೆಲಸದಲ್ಲಿ ತೊಡಗಿದ್ದಾರೆ. ಹಣ್ಣಿನ ಗುಣಮಟ್ಟ ಮತ್ತು ಕಡಿಮೆ ಭೂಮಿಯಲ್ಲಿ ಹೆಚ್ಚಿನ ಉತ್ಪಾದನೆ ಸಾಧಿಸಲು ಸಾಕಷ್ಟು ಆವಿಷ್ಕಾರಗಳು ನಡೆದಿವೆ. ಡ್ರ್ಯಾಗನ್ ಹಣ್ಣಿನ ಜನಪ್ರೀಯತೆ ನಿರಂತರವಾಗಿ ಹೆಚ್ಚುತ್ತಾ ಸಾಗಿದೆ ಎಂದು ನನಗೆ ತಿಳಿಸಲಾಗಿದೆ. ವಿಶೇಷವಾಗಿ ತಿಂಡಿಗಳಲ್ಲಿ ಇದರ ಬಳಕೆ ಹೆಚ್ಚಿದೆ. ದೇಶಕ್ಕೆ ಡ್ರ್ಯಾಗನ್ ಹಣ್ಣು ಆಮದು ಮಾಡಿಕೊಳ್ಳುವ ಪ್ರಮೇಯ ಬರಬಾರದು ಎಂಬುದು ಕಛ್ ನ ಕೃಷಿಕರ ಸಂಕಲ್ಪವಾಗಿದೆ. ಇದೇ ಸ್ವಾವಲಂಬನೆಯ ಮಾತಲ್ಲವೇ!
ಸ್ನೇಹಿತರೆ, ನಾವು ಏನಾದರೂ ಹೊಸತನ್ನು ಮಾಡಲು ಯೋಚಿಸಿದಾಗ ಆವಿಷ್ಕಾರಕವಾದದ್ದನ್ನು ಆಲೋಚಿಸುತ್ತೇವೆ. ಆಗ ಸಾಮಾನ್ಯವಾಗಿ ಯಾರೂ ಊಹಿಸಲಾರದಂಥ ಕೆಲಸ ಕೂಡ ಸಾಧ್ಯವಾಗುತ್ತದೆ, ಬಿಹಾರದ ಕೆಲ ಯುವಕರನ್ನೇ ತೆಗೆದುಕೊಳ್ಳಿ. ಹಿಂದೆ ಇವರು ಸಾಮಾನ್ಯ ಉದ್ಯೋಗದಲ್ಲಿದ್ದರು. ಒಂದು ದಿನ ಅವರು ಮುತ್ತಿನ ಕೃಷಿ ಬಗ್ಗೆ ಆಲೋಚಿಸಿದರು. ಅವರ ಕ್ಷೇತ್ರದಲ್ಲಿ ಜನರಿಗೆ ಈ ಕುರಿತು ಹೆಚ್ಚು ಮಾಹಿತಿಯೇನೂ ಇರಲಿಲ್ಲ. ಆದರೆ ಇವರು ಮೊದಲು ಎಲ್ಲ ಮಾಹಿತಿ ಕಲೆಹಾಕಿದರು. ಜೈಪುರ ಮತ್ತು ಭುವನೇಶ್ವರಕ್ಕೆ ತೆರಳಿ ತರಬೇತಿ ಪಡೆದರು ಮತ್ತು ತಮ್ಮ ಗ್ರಾಮದಲ್ಲೇ ಮುತ್ತಿನ ಕೃಷಿ ಆರಂಭಿಸಿದರು. ಇಂದು ಸ್ವತಃ ಅವರು ಇದರಿಂದ ಸಾಕಷ್ಟು ಆದಾಯಗಳಿಸುತ್ತಿದ್ದಾರೆ, ಅಲ್ಲದೇ ಮುಝಫರ್ ಪುರ್, ಬೇಗೂಸರಾಯ್ ಮತ್ತು ಪಾಟ್ನಾದಲ್ಲಿ ಬೇರೆ ರಾಜ್ಯಗಳಿಂದ ಮರಳಿ ಬಂದ ವಲಸಿಗ ಕಾರ್ಮಿಕರಿಗೆ ಇದರ ತರಬೇತಿ ನೀಡುವುದನ್ನೂ ಆರಂಭಿಸಿದ್ದಾರೆ. ಎಷ್ಟೋ ಜನರಿಗೆ ಇದರಿಂದ ಸ್ವಾವಲಂಬಿ ಮಾರ್ಗ ತೆರೆದಂತಾಗಿದೆ.
ಸ್ನೇಹಿತರೆ, ಕೆಲ ದಿನಗಳ ನಂತರ ರಕ್ಷಾ ಬಂಧನದ ಪವಿತ್ರ ಹಬ್ಬ ಬರುತ್ತಿದೆ. ಈ ಮಧ್ಯೆ ಬಹಳಷ್ಟು ಜನರು ಮತ್ತು ಸಂಸ್ಥೆಗಳು ಈ ಬಾರಿ ರಕ್ಷಾ ಬಂಧನವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಅಭಿಯಾನವನ್ನು ಆರಂಭಿಸಿದ್ದಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಹಲವಾರು ಜನರು ಇದನ್ನು ವೋಕಲ್ ಫಾರ್ ಲೋಕಲ್ (ಸ್ಥಳೀಯತೆಗಾಗಿ ಧ್ವನಿ ಎತ್ತಿ) ನೊಂದಿಗೂ ಜೋಡಿಸುತ್ತಿದ್ದಾರೆ. ಇದು ಸೂಕ್ತವಾಗಿಯೂ ಇದೆ. ನಮ್ಮ ಹಬ್ಬಗಳು, ನಮ್ಮ ಸಮಾಜದ, ನಮ್ಮ ಮನೆಯ ಹತ್ತಿರದ ಯಾವುದೇ ವ್ಯಕ್ತಿಯ ವ್ಯಾಪಾರ ವೃದ್ಧಿಸಿದಲ್ಲಿ ಅವರ ಹಬ್ಬವೂ ಸಂತೋಷದಾಯಕವಾಗುತ್ತದೆ ಎಂದಾದಲ್ಲಿ ಹಬ್ಬದ ಆನಂದ ಇಮ್ಮಡಿಗೊಳ್ಳುತ್ತದೆ. ಸಮಸ್ತ ದೇಶಬಾಂಧವರಿಗೆ ರಕ್ಷಾ ಬಂಧನದ ಶುಭಹಾರೈಕೆಗಳು.
ಸ್ನೇಹಿತರೆ, ಆಗಸ್ಟ್ 7 ಕ್ಕೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಿದೆ. ಭಾರತದ ಕೈಮಗ್ಗ ಮತ್ತು ನಮ್ಮ ಕರಕುಶಲ ವಸ್ತುಗಳು ಹಲವಾರು ವರ್ಷಗಳ ಗೌರವಯುತ ಇತಿಹಾಸವನ್ನು ಹೊಂದಿವೆ. ಭಾರತೀಯ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಹೆಚ್ಚೆಚ್ಚು ಬಳಕೆ ಮಾಡುವುದಷ್ಟೇ ಅಲ್ಲ ಇದರ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಸುವುದು ನಮ್ಮೆಲ್ಲರ ಪ್ರಯತ್ನವಾಗಬೇಕು. ಭಾರತದ ಕೈಮಗ್ಗ, ಮತ್ತು ಕರಕುಶಲ ವಸ್ತುಗಳು ಬಹಳ ಶ್ರೀಮಂತವಾಗಿವೆ, ಇವುಗಳಲ್ಲಿ ಬಹಳಷ್ಟು ವಿವಿಧತೆಯಿದೆ, ವಿಶ್ವ ಹೆಚ್ಚೆಚ್ಚು ಇವುಗಳ ಬಗ್ಗೆ ಅರಿತಂತೆ ಅಷ್ಟಷ್ಟು ಸ್ಥಳೀಯ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಲಾಭವಾಗುತ್ತದೆ.
ಸ್ನೇಹಿತರೆ, ಅದರಲ್ಲೂ ವಿಶೇಷವಾಗಿ ನನ್ನ ಯುವ ಸ್ನೇಹಿತರೆ, ನಮ್ಮ ದೇಶ ಬದಲಾಗುತ್ತಿದೆ. ಹೇಗೆ ಬದಲಾಗುತ್ತಿದೆ? ಎಷ್ಟು ವೇಗವಾಗಿ ಬದಲಾಗುತ್ತಿದೆ? ಎಂಥೆಂಥ ಕ್ಷೇತ್ರಗಳಲ್ಲಿ ಬದಲಾಗುತ್ತಿದೆ? ಒಂದು ಸಕಾರಾತ್ಮಕ ವಿಚಾರದೊಂದಿಗೆ ಅವಲೋಕನಗೈದಾಗ ನಾವೇ ಸ್ವತಃ ಆಶ್ಚರ್ಯಚಕಿತಗೊಳ್ಳುತ್ತೇವೆ. ಒಂದು ಕಾಲದಲ್ಲಿ ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಹೆಚ್ಚು ಜನರು ದೊಡ್ಡ ದೊಡ್ಡ ನಗರಗಳಿಂದ ಬಂದವರಾಗಿರುತ್ತಿದ್ದರು ಇಲ್ಲವೆ ದೊಡ್ಡ ಕುಟುಂಬಗಳ ಅಥವಾ ಹೆಸರಾಂತ ಶಾಲೆ ಕಾಲೇಜುಗಳಿಂದ ಬಂದವರಾಗಿರುತ್ತಿದ್ದರು. ಈಗ ದೇಶ ಬದಲಾಗುತ್ತಿದೆ. ಗ್ರಾಮಗಳಿಂದ, ಸಣ್ಣ ಪುಟ್ಟ ನಗರಗಳಿಂದ ಸಾಮಾನ್ಯ ಕುಟುಂಬಗಳಿಂದ ನಮ್ಮ ಯುವಜನತೆ ಮುಂದೆ ಬರುತ್ತಿದ್ದಾರೆ. ಸಫಲತೆಯ ಹೊಸ ಉತ್ತುಂಗವನ್ನು ತಲುಪುತ್ತಿದ್ದಾರೆ. ಇವರು ಸಂಕಷ್ಟಗಳ ಮಧ್ಯೆಯೂ ಹೊಸ ಕನಸುಗಳನ್ನು ಹೆಣೆಯುತ್ತಾ ಮುಂದೆ ಸಾಗಿದ್ದಾರೆ. ಇತ್ತೀಚೆಗೆ ಬಂದ ಬೋರ್ಡ್ ಪರೀಕ್ಷೆಯ ಫಲಿತಾಂಶದಲ್ಲಿಯೂ ಇದು ಕಂಡುಬಂದಿದೆ. ಇಂದು ಮನದ ಮಾತಿನಲ್ಲಿ ನಾವು ಇಂಥ ಕೆಲವು ಪ್ರತಿಭಾವಂತ ಮಕ್ಕಳೊಂದಿಗೆ ಮಾತನಾಡೋಣ. ಇಂಥ ಒಬ್ಬ ಪ್ರತಿಭಾವಂತ ಹೆಣ್ಣು ಮಗಳು ಕೃತ್ತಿಕಾ ನಾಂದಲ್. ಕೃತ್ತಿಕಾ ಹರಿಯಾಣದ ಪಾಣಿಪತ್ ನಿವಾಸಿ
ಮೋದಿಜಿ: ಹಲೋ ಕೃತ್ತಿಕಾ ಅವರೆ ನಮಸ್ಕಾರ
ಕೃತ್ತಿಕಾ: ನಮಸ್ತೆ ಸರ್
ಮೋದಿಜಿ: ಇಷ್ಟೊಂದು ಉತ್ತಮ ಫಲಿತಾಂಶಕ್ಕೆ ನಿಮಗೆ ಅನಂತ ಅನಂತ ಶುಭಾಷಯಗಳು
ಕೃತ್ತಿಕಾ: ಧನ್ಯವಾದ ಸರ್
ಮೋದಿಜಿ: ನಿಮಗೆ ಈ ಮಧ್ಯೆ ಫೋನ್ ರಿಸೀವ್ ಮಾಡಿ ದಣಿದಿರಬಹುದು. ಬಹಳಷ್ಟು ಜನರ ಫೋನ್ ಬರುತ್ತಿರಬಹುದು
ಕೃತ್ತಿಕಾ: ಹೌದು ಸರ್
ಮೋದಿಜಿ: ಶುಭಾಷಯ ಕೋರುವವರು ನೀವು ಅವರಿಗೆ ಪರಿಚಯ ಎಂಬ ಬಗ್ಗೆ ಹೆಮ್ಮೆ ಪಡುತ್ತಿರಬಹುದು. ನಿಮಗೆ ಹೇಗನ್ನಿಸುತ್ತದೆ.
ಕೃತ್ತಿಕಾ: ಸರ್ ತುಂಬಾ ಖುಷಿಯಾಗುತ್ತದೆ. ಪಾಲಕರಿಗೆ ಹೆಮ್ಮೆಯೆನಿಸುವಂತೆ ನನಗೂ ತುಂಬಾ ಹೆಮ್ಮೆಯೆನಿಸುತ್ತದೆ.
ಮೋದಿಜಿ: ಆಗಲಿ ನಿಮಗೆ ಪ್ರೇರಣೆ ನೀಡಿದವರಾರು?
ಕೃತ್ತಿಕಾ: ನನ್ನ ಪ್ರೇರಣೆ ನನ್ನ ತಾಯಿ ಸರ್
ಮೋದಿಜಿ: ಹೌದಾ, ನೀವು ನಿಮ್ಮ ತಾಯಿಯಿಂದ ನೀವು ಏನೇನು ಕಲಿಯುತ್ತಿದ್ದೀರಿ?
ಕೃತ್ತಿಕಾ: ಸರ್, ಅವರು ತಮ್ಮ ಜೀವನದಲ್ಲಿ ಎಷ್ಟೊಂದು ಕಷ್ಟ ನುಭವಿಸಿದ್ದಾರೆ ಆದರೂ ಅವರು ತುಂಬಾ ಧೈರ್ಯವಂತರೂ ಮತ್ತು ಆತ್ಮ ಸ್ಥೈರ್ಯ ಹೊಂದಿದವರಾಗಿದ್ದಾರೆ ಸರ್. ಅವರಿಂದ ನಾನು ಎಷ್ಟು ಪ್ರೇರಿತಳಾಗಿದ್ದೇನೆ ರಣೆ ದೊರೆಯುತ್ತಿದೆ ಎಂದರೆ ನಾನೂ ಅವರಂತಾಗಬಯಸುತ್ತೇನೆ.
ಮೋದಿಜಿ: ನಿಮ್ಮ ತಾಯಿ ಎಷ್ಟು ಓದಿದ್ದಾರೆ
ಕೃತ್ತಿಕಾ: ಸರ್ ಅವರು ಬಿ ಎ ಓದಿದ್ದಾರೆ
ಮೋದಿಜಿ : ಬಿ ಎ ಓದಿದ್ದಾರೆ
ಕೃತ್ತಿಕಾ: ಹೌದು ಸರ್
ಮೋದಿಜಿ: ಹೌದಾ, ಹಾಗಾದರೆ ಅಮ್ಮ ನಿಮಗೆ ಪಾಠವನ್ನೂ ಹೇಳಿಕೊಡುತ್ತಾರೆ.
ಕೃತ್ತಿಕಾ: ಹೌದು ಸರ್, ವ್ಯಾವಹಾರಿಕ ಜ್ಞಾನವನ್ನು ಹೇಳಿಕೊಡುತ್ತಾರೆ
ಮೋದಿಜಿ: ಗದರುತ್ತಲೂ ಇರಬಹುದಲ್ಲವೆ
ಕೃತ್ತಿಕಾ : ಹೌದು ಸರ್, ಗದರುತ್ತಾರೆ
ಮೋದಿಜಿ: ಮುಂದೆ ನೀವೇನು ಮಾಡಬಯಸುತ್ತೀರಾ?
ಕೃತ್ತಿಕಾ : ನಾನು ವೈದ್ಯಳಾಗಬಯಸುತ್ತೇನೆ.
ಮೋದಿಜಿ : ತುಂಬಾ ಒಳ್ಳೆಯದು
ಕೃತ್ತಿಕಾ: ಎಂ ಬಿ ಬಿ ಎಸ್
ಮೋದಿಜಿ : ನೋಡಿ ವೈದ್ಯರಾಗುವುದು ಸುಲಭದ ಮಾತಲ್ಲ!
ಕೃತ್ತಿಕಾ : ಹೌದು ಸರ್,
ಮೋದಿಜಿ : ಡಿಗ್ರಿಯಂತೂ ನಿಮಗೆ ಲಭಿಸುತ್ತದೆ. ಏಕೆಂದರೆ ನೀವು ತುಂಬಾ ಮೇಧಾವಿ. ಆದರೆ ವೈದ್ಯರ ಜೀವನ ಸಮಾಜಕ್ಕೆ ಸಮರ್ಪಿತವಾಗಿರುತ್ತದೆ
ಕೃತ್ತಿಕಾ : ಹೌದು ಸರ್,
ಮೋದಿ – ಅವರಿಗಂತೂ ರಾತ್ರಿಗಳಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರೋಗಿಯಿಂದ ದೂರವಾಣಿ ಕರೆ ಬರುತ್ತದೆ, ಕೆಲವೊಮ್ಮೆ ಆಸ್ಪತ್ರೆಯಿಂದ ಕರೆ ಬರುತ್ತದೆ ಆಗ ಅಲ್ಲಿಗೆ ಓಡಬೇಕಾಗುತ್ತದೆ. ಒಂದುರೀತಿಯಲ್ಲಿ ಹೇಳಬೇಕೆಂದರೆ, ದಿನದ 24 ಗಂಟೆಗಳ ಕಾಲ, ವರ್ಷದ 365 ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೈದ್ಯರ ಜೀವನ ಯಾವಾಗಲೂ ಜನರ ಸೇವೆಯಲ್ಲಿ ತೊಡಗಿರುವುದೇ ಆಗಿದೆ.
ಕೃತ್ತಿಕಾ – ಹೌದು ಸರ್
ಮೋದಿ – ಮತ್ತು ಅಪಾಯವೂ ಇರುತ್ತದೆ, ಏಕೆಂದರೆ ಯಾವ ರೀತಿಯ ಕಾಯಿಲೆ ಇರುತ್ತದೆಯೆಂದು ಗೊತ್ತೇ ಆಗುವುದಿಲ್ಲ, ವೈದ್ಯರ ಎದುರು ಕೂಡಾ ಬಹಳ ದೊಡ್ಡ ಬಿಕ್ಕಟ್ಟು ಇರುತ್ತದೆ.
ಕೃತ್ತಿಕಾ – ಹೌದು ಸರ್
ಮೋದಿ – ನೋಡಿ ಕೃತ್ತಿಕಾ, ಹರಿಯಾಣಾ ಯಾವಾಗಲೂ ಕ್ರೀಡೆಗಳಲ್ಲಿ ಇಡೀ ಭಾರತ ದೇಶಕ್ಕೆ ಪ್ರೇರಣೆ ನೀಡುವ, ಪ್ರೋತ್ಸಾಹ ನೀಡುವ ರಾಜ್ಯವಾಗಿದೆ.
ಕೃತ್ತಿಕಾ – ನಿಜ ಸರ್
ಮೋದಿ – ನೀವು ಕೂಡಾ ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸುತ್ತಿರುತ್ತೀರಾ, ನಿಮಗೆ ಕೆಲವು ಕ್ರೀಡೆಗಳೆಂದರೆ ಇಷ್ಟವೇ?
ಕೃತ್ತಿಕಾ – ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿದ್ದೆ
ಮೋದಿ – ಹೌದಾ, ನಿಮ್ಮ ಎತ್ತರ ಎಷ್ಟು, ಎತ್ತರ ಹೆಚ್ಚೇ
ಕೃತ್ತಿಕಾ – ಇಲ್ಲ ಸರ್, ಐದು ಎರಡು ಇದ್ದೇನೆ
ಮೋದಿ – ಹೌದಾ, ಆಟದಲ್ಲಿ ನಿಮ್ಮನ್ನು ಇಷ್ಟ ಪಡುತ್ತಾರಾ?
ಕೃತ್ತಿಕಾ – ಸರ್ ನನಗೆ ಆಟದಲ್ಲಿ ಒಲವಿದೆ, ಅದಕ್ಕೆ ಆಡುತ್ತೇನೆ ಅಷ್ಟೇ
ಮೋದಿ – ಸರಿ ಸರಿ. ಕೃತ್ತಿಕಾ ಅವರೆ ನಿಮ್ಮ ಮಾತೃಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಅವರು ನಿಮ್ಮನ್ನು ಇಷ್ಟು ಯೋಗ್ಯರನ್ನಾಗಿ ಮಾಡಿದ್ದಾರೆ. ನಿಮ್ಮ ಜೀವನವನ್ನು ರೂಪಿಸಿದ್ದಾರೆ. ನಿಮ್ಮ ತಾಯಿಯವರಿಗೆ ನಮನಗಳು ಮತ್ತು ನಿಮಗೆ ಅನೇಕಾನೇಕ ಅಭಿನಂದನೆ ಮತ್ತು ಶುಭಾಕಾಂಕ್ಷೆಗಳು.
ಕೃತ್ತಿಕಾ – ಧನ್ಯವಾದ ಸರ್
ಬನ್ನಿ . ಈಗ ನಾವು ಕೇರಳದ ಎರ್ನಾಕುಲಮ್ ಗೆ ಹೋಗೋಣ. ಕೇರಳದ ಯುವಕನೊಂದಿಗೆ ಮಾತನಾಡೋಣ.
ಮೋದಿ – ಹಲೋ
ವಿನಾಯಕ್ – ಹಲೋ ಸರ್ ನಮಸ್ಕಾರ
ಮೋದಿ – ವಿನಾಯಕ್ ಅವರೇ, ಅಭಿನಂದನೆ
ವಿನಾಯಕ್ – ಸರ್, ಧನ್ಯವಾದ ಸರ್
ಮೋದಿ – ಶಭಾಷ್ ವಿನಾಯಕ್, ಶಭಾಷ್
ವಿನಾಯಕ್ – ಸರ್, ಧನ್ಯವಾದ ಸರ್,
ಮೋದಿ –ಉತ್ಸಾಹ ಹೇಗಿದೆ (how is the जोश)
ವಿನಾಯಕ್ – ಅತ್ಯಂತ ಹೆಚ್ಚಾಗಿದೆ ಸರ್ (High sir)
ಮೋದಿ – ನೀವು ಯಾವುದಾದರೂ ಕ್ರೀಡೆ ಆಡುತ್ತೀರಾ?(Do you play any sport?)
ವಿನಾಯಕ್ – ಬ್ಯಾಡ್ಮಿಂಟನ್.
ಮೋದಿ – ಬ್ಯಾಡ್ಮಿಂಟನ್
ವಿನಾಯಕ್ – ಹೌದು ಸರ್.
ಮೋದಿ – ಶಾಲೆಯಲ್ಲಿ ಅಥವಾ ಯಾವುದಾದರೂ ತರಬೇತಿ ಪಡೆಯಲು ನಿಮಗೆ ಅವಕಾಶ ದೊರೆತಿತ್ತೇ? (In a school or you have any chance to take a training ? )
ವಿನಾಯಕ್ – ಇಲ್ಲ, ಶಾಲೆಯಲ್ಲಿ ನಮಗೆ ಈಗಾಗಲೇ ಸ್ವಲ್ಪ ತರಬೇತಿ ದೊರೆತಿರುತ್ತದೆ) (No, In school we have already get some training)
ಮೋದಿ – ಸರಿ ಸರಿ
ವಿನಾಯಕ್ – ನಮ್ಮ ಶಿಕ್ಷಕರುಗಳಿಂದ (from our teachers.)
ಮೋದಿ – ಸರಿ ಸರಿ
ವಿನಾಯಕ್ –ಇದರಿಂದಾಗಿ ನಮಗೆ ಹೊರಗಡೆ ಭಾಗವಹಿಸಲು ಅವಕಾಶ ದೊರೆಯುತ್ತದೆ (So that we get opportunity to participate outside )
ಮೋದಿ – ವ್ಹಾವ್
ವಿನಾಯಕ್ – ಶಾಲೆಯ ಕಡೆಯಿಂದಲೇ (From the school itself)
ಮೋದಿ – ನೀವು ಎಷ್ಟು ರಾಜ್ಯಗಳಿಗೆ ಭೇಟಿ ನೀಡಿದ್ದೀರಿ? (How many states you have visited ?)
ವಿನಾಯಕ್ – ನಾನು ಕೇವಲ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ (I have visited only Kerala and Tamilnadu)
ಮೋದಿ – ಕೇವಲ ಕೇರಳ ಮತ್ತು ತಮಿಳುನಾಡು (Only Kerala and Tamilnadu),
ವಿನಾಯಕ್ – ಹೌದು (Oh yes)
ಮೋದಿ – ಹಾಗಾದರೆ, ದೆಹಲಿಗೆ ಭೇಟಿ ನೀಡಲು ಇಷ್ಟಪಡುತ್ತೀರಾ? (So, would you like to visit Delhi ?)
ವಿನಾಯಕ್ – ಹೌದು ಸರ್, ಈಗ ನಾನು ನನ್ನ ಉನ್ನತ ವ್ಯಾಸಂಗಕ್ಕಾಗಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದೇನೆ (Sir, now, I am applying in Delhi University for my Higher Studies.)
ಮೋದಿ – ವ್ಹಾವ್, ಹಾಗಾದರೆ ನೀವು ದೆಹಲಿಗೆ ಬರುತ್ತಿದ್ದೀರಿ (Wah, so you are coming to Delhi )
ವಿನಾಯಕ್ – ಹೌದು ಸರ್. (yes sir.)
ಮೋದಿ – ಹೇಳಿ, ಭವಿಷ್ಯದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಸಹ ವಿದ್ಯಾರ್ಥಿಗಳಿಗೆ ಯಾವುದಾದರೂ ಸಂದೇಶ ನೀಡಬಯಸುತ್ತೀರಾ (tell me, do you have any message for fellow students who will give Board Exams in future)
ವಿನಾಯಕ್ – ಕಠಿಣ ಪರಿಶ್ರಮ ಮತ್ತು ಸಮಯದ ಸದ್ಬಳಕೆ (hard work and proper time utilization )
ಮೋದಿ – ಹಾಗಾದರೆ ಸಮಯದ ಸೂಕ್ತ ನಿರ್ವಹಣೆ (So perfect time management )
ವಿನಾಯಕ್ – ಹೌದು ಸರ್ (हाँ, sir)
ಮೋದಿ – ವಿನಾಯಕ್, ನಿಮ್ಮ ಹವ್ಯಾಸಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ (Vinayak, I would like to know your hobbies.)
ವಿನಾಯಕ್ – ಬ್ಯಾಡ್ಮಿಂಟನ್ ಮತ್ತು ರೋಯಿಂಗ್ (……Badminton and thanrowing).
ಮೋದಿ – ಹಾಗಿದ್ದಲ್ಲಿ ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದೀರಿ (So, you are active on social media)
ವಿನಾಯಕ್ – ಇಲ್ಲ, ಶಾಲೆಯಲ್ಲಿ ಯಾವುದೇ ವಿದ್ಯುನ್ಮಾನ ವಸ್ತುಗಳನ್ನಾಗಲೀ ಗ್ಯಾಜೆಟ್ ಗಳನ್ನಾಗಲೀ ಉಪಯೋಗಿಸುವುದಕ್ಕೆ ನಮಗೆ ಅನುಮತಿ ಇಲ್ಲ (Not, we are not allowed to use any electronic items or gadgets in the school)
ಮೋದಿ – ಹಾಗಿದ್ದಲ್ಲಿ ನೀವು ಅದೃಷ್ಟವಂತರು (So you are lucky)
ವಿನಾಯಕ್ – ಹೌದು ಸರ್ (Yes Sir,)
ಮೋದಿ – ಒಳ್ಳೆಯದು, ವಿನಾಯಕ್, ನಿಮಗೆ ಮತ್ತೊಮ್ಮೆ ಅಭಿನಂದನೆಗಳು ಮತ್ತು ನಿಮಗೆ ಎಲ್ಲವೂ ಒಳಿತಾಗಲಿ (Well, Vinayak, congratulations again and wish you all the best.)
ವಿನಾಯಕ್ – ಧನ್ಯವಾದ ಸರ್ (Thank you sir.)
ಬನ್ನಿ. ನಾವು ಉತ್ತರ ಪ್ರದೇಶಕ್ಕೆ ಹೋಗೋಣ. ಉತ್ತರ ಪ್ರದೇಶದಲ್ಲಿ ಅಮ್ರೋಹಾದ ಶ್ರೀ ಉಸ್ಮಾನ್ ಸೈಫಿ ಅವರೊಂದಿಗೆ ಮಾತನಾಡೋಣ.
ಮೋದಿ – ಹಲೋ ಉಸ್ಮಾನ್, ಅನೇಕಾನೇಕ ಅಭಿನಂದನೆ, ಬಹಳ ಬಹಳ ಅಭಿನಂದನೆ
ಉಸ್ಮಾನ್ – ಧನ್ಯವಾದ ಸರ್ (Thank you sir.)
ಮೋದಿ – ಹೇಳಿ ಉಸ್ಮಾನ್ ಅವರೇ, ನೀವು ಬಯಸಿದ ಅದೇ ಫಲಿತಾಂಶ ದೊರೆತಿದೆಯೇ ಅಥವಾ ಕಡಿಮೆ ಬಂದಿದೆಯೇ
ಉಸ್ಮಾನ್ – ಇಲ್ಲ, ಬಯಸಿದಷ್ಟೇ ಬಂದಿದೆ. ನನ್ನ ತಂದೆತಾಯಿ ಕೂಡಾ ಬಹಳ ಸಂತೋಷದಿಂದ ಇದ್ದಾರೆ
ಮೋದಿ – ವ್ಹಾವ್, ಹೌದಾ, ಮನೆಯಲ್ಲಿ ನಿಮ್ಮ ಸೋದರನೂ ಇಷ್ಟೇ ಪ್ರತಿಭಾವಂತನೇ ಅಥವಾ ನೀವು ಮಾತ್ರ ಇಷ್ಟು ಪ್ರತಿಭಾವಂತರೋ
ಉಸ್ಮಾನ್ –ನಾನು ಮಾತ್ರಾ. ನನ್ನ ಸೋದರ ಸ್ವಲ್ಪ ತುಂಟ
ಮೋದಿ – ಸರಿ ಸರಿ
ಉಸ್ಮಾನ್ –ಆದರೆ ನನ್ನ ಜೊತೆ ಬಹಳ ಸಂತೋಷದಿಂದ ಇರುತ್ತಾನೆ
ಮೋದಿ – ಹೌದಾ, ಸರಿ. ಉಸ್ಮಾನ್ ಅವರೆ ನೀವು ಓದುತ್ತಿದ್ದಾಗ ನಿಮ್ಮ ಇಷ್ಟದ ವಿಷಯ ಯಾವುದಾಗಿತ್ತು?
ಉಸ್ಮಾನ್ – ಗಣಿತ (Mathematics )
ಮೋದಿ – ಅರೆ ವ್ಹಾವ್ . ಹಾಗಿದ್ದರೆ ಗಣಿತದಲ್ಲಿ ಯಾವುದು ಇಷ್ಟವಾಗುತ್ತಿತ್ತು?ಇದು ಹೇಗಾಯಿತು? ಯಾವ ಶಿಕ್ಷಕರು ನಿಮಗೆ ಸ್ಫೂರ್ತಿ ತುಂಬಿದರು?
ಉಸ್ಮಾನ್ – ಸರ್ ನಮ್ಮ ಓರ್ವ ಶಿಕ್ಷಕರು. ರಜತ್ ಸರ್. ಅವರು ನನಗೆ ಪ್ರೇರಣೆ ತುಂಬಿದರು ಮತ್ತು ಬಹಳ ಚೆನ್ನಾಗಿ ಪಾಠ ಮಾಡುತ್ತಾರೆ ಮತ್ತು ಗಣಿತದಲ್ಲಿ ನಾನು ಮೊದಲಿನಿಂದಲೂ ಉತ್ತಮವಾಗಿದ್ದೆ ಮತ್ತು ಅದು ಬಹಳ ಆಸಕ್ತಿಕರ ವಿಷಯವೂ ಹೌದು.
ಮೋದಿ – ಹೌದು ಹೌದು
ಉಸ್ಮಾನ್ – ಎಷ್ಟು ಹೆಚ್ಚಾಗಿ ಮಾಡಿದರೆ ಅಷ್ಟು ಆಸಕ್ತಿ ಮೂಡುತ್ತದೆ ಆದ್ದರಿಂದಲೇ ಅದು ನನ್ನ ಇಷ್ಟದ ವಿಷಯ
ಮೋದಿ – ಹಾ. ಹಾ. ಆನ್ಲೈನ್ ವೇದಿಕ್ ಮ್ಯಾಥಮೆಟಿಕ್ಸ್ ತರಗತಿಗಳು ನಡೆಯುತ್ತವೆಂದು ನಿಮಗೆ ಗೊತ್ತೇ
ಉಸ್ಮಾನ್ – ಹೌದು ಸರ್
ಮೋದಿ – ಹೌದು, ಯಾವಾಗಲಾದರೂ ಇದನ್ನು ಪ್ರಯತ್ನಿಸಿದ್ದೀರಾ?
ಉಸ್ಮಾನ್ – ಇಲ್ಲ ಸರ್, ಇಲ್ಲಿಯವರೆಗೂ ಮಾಡಿಲ್ಲ
ಮೋದಿ – ನೋಡಿ, ನಿಮ್ಮ ಬಹಳಷ್ಟು ಗೆಳೆಯರಿಗೆ ನೀವೊಬ್ಬರು ಜಾದೂಗಾರರೆಂದು ಅನ್ನಿಸಬಹುದು ಏಕೆಂದರೆ ನೀವು ವೇದಿಕ್ ಮ್ಯಾಥಮ್ಯಾಟಿಕ್ಸ್ ಅನ್ನು ಕಂಪ್ಯೂಟರ್ ವೇಗದಲ್ಲಿ ಮಾಡಬಲ್ಲಿರಿ. ಬಹಳ ಸರಳ ತಂತ್ರಗಳು ಮತ್ತು ಇವು ಇಂದಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಕೂಡಾ ಲಭ್ಯವಿವೆ.
ಉಸ್ಮಾನ್ – ಸರಿ ಸರ್.
ಮೋದಿ – ನಿಮಗೆ ಗಣಿತದಲ್ಲಿ ಆಸಕ್ತಿ ಇರುವುದರಿಂದ, ಬಹಳಷ್ಟು ಹೊಸ ಹೊಸ ವಿಷಯಗಳನ್ನು ಕೂಡಾ ನೀವು ನೀಡಬಹುದಾಗಿದೆ.
ಉಸ್ಮಾನ್ – ಸರಿ ಸರ್
ಮೋದಿ – ಸರಿ ಉಸ್ಮಾನ್, ನೀವು ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಿ
ಉಸ್ಮಾನ್ – ಬಿಡುವಿನ ವೇಳೆಯಲ್ಲಿ ನಾನು ಏನನ್ನಾದರೂ ಬರೆಯುತ್ತಾ ಇರುತ್ತೇನೆ. ನನಗೆ ಬರವಣಿಗೆಯಲ್ಲಿ ಬಹಳ ಆಸಕ್ತಿ ಇದೆ.
ಮೋದಿ – ಅರೆ ವ್ಹಾವ್. ನಿಮಗೆ ಗಣಿತದಲ್ಲೂ ಆಸಕ್ತಿ ಇದೆ ಮತ್ತು ಸಾಹಿತ್ಯದಲ್ಲೂ ಆಸಕ್ತಿ ಇದೆ.
ಉಸ್ಮಾನ್ – ಹೌದು ಸರ್.
ಮೋದಿ – ಏನು ಬರೆಯುತ್ತೀರಿ? ಕವಿತೆಗಳನ್ನು ಬರೆಯುತ್ತೀರಾ, ಶಾಯರಿ ಬರೆಯುತ್ತೀರಾ
ಉಸ್ಮಾನ್ –ಪ್ರಸಕ್ತ ವಿದ್ಯಮಾನಗಳಿಗೆ ಸಂಬಂಧಿಸಿದ ಯಾವುದಾದರೂ ವಿಷಯವಿದ್ದರೆ ಅದರ ಬಗ್ಗೆ ಬರೆಯುತ್ತಿರುತ್ತೇನೆ.
ಮೋದಿ – ಸರಿ ಸರಿ
ಉಸ್ಮಾನ್ – ಹೊಸ ಹೊಸ ವಿಷಯಗಳು ತಿಳಿದುಬರುತ್ತಿರುತ್ತವೆ ಅಂದರೆ ಜಿಎಸ್ ಟಿ ಇತ್ತು ಮತ್ತು ನಮ್ಮ ನೋಟ್ ರದ್ದು – ಎಲ್ಲಾ ವಿಷಯಗಳು.
ಮೋದಿ – ಅರೆ ವ್ಹಾವ್ . ಹಾಗಾದರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವುದಕ್ಕಾಗಿ ನೀವು ಮುಂದೆ ಯಾವ ಯೋಜನೆ ಮಾಡಿದ್ದೀರಿ?
ಉಸ್ಮಾನ್ – ಕಾಲೇಜು ವ್ಯಾಸಂಗ, ಸರ್ ನನ್ನ ಜೆಇಇ ಮೈನ್ಸ್ ನಲ್ಲಿ ಮೊದಲ ಪ್ರಯತ್ನ ಸಫಲವಾಗಿದೆ ಮತ್ತು ನಾನು ಸೆಪ್ಟೆಂಬರ್ ನಲ್ಲಿ ಮುಂದಿನ ಹಂತದ ಪರೀಕ್ಷೆ ಬರೆಯಲಿದ್ದೇನೆ. ನನ್ನ ಮುಖ್ಯ ಗುರಿ, ನಾನು ಮೊದಲು ಐಐಟಿ ಯಿಂದ ಮೊದಲ ಪದವಿ ಪಡೆಯಬೇಕು ಮತ್ತು ನಂತರ, ನಾಗರಿಕ ಸೇವೆಗಳಿಗೆ ಹೋಗಬೇಕು ಮತ್ತು ಐಎಎಸ್ ಅಧಿಕಾರಿ ಆಗಬೇಕು.
ಮೋದಿ – ಅರೆ ವ್ಹಾವ್ . ನಿಮಗೆ ತಂತ್ರಜ್ಞಾನದಲ್ಲೂ ಕೂಡಾ ಆಸಕ್ತಿ ಇದೆಯೇ?
ಉಸ್ಮಾನ್ – ಹೌದು ಸರ್. ನನ್ನ ಆಯ್ಕೆ ಐ ಟಿ ಕ್ಷೇತ್ರ – ಅತ್ಯುತ್ತಮಮ ಐಐಟಿ ನಲ್ಲಿ ಮೋದಿ – ಒಳ್ಳೆಯದು ಉಸ್ಮಾನ್. ನನ್ನ ಕಡೆಯಿಂದ ಬಹಳ ಶುಭಾಕಾಂಕ್ಷೆಗಳು ಮತ್ತು ನಿಮ್ಮ ಸೋದರ ತುಂಟನಾಗಿರುವುದರಿಂದ ನಿಮಗೆ ಸಮಯ ಉತ್ತಮವಾಗಿ ಕಳೆಯುತ್ತದೆ ಮತ್ತು ನಿಮ್ಮ ತಂದೆ ತಾಯಿಗೆ ಕೂಡಾ ನನ್ನ ಕಡೆಯಿಂದ ನಮನಗಳನ್ನು ತಿಳಿಸಿಬಿಡಿ. ಅವರು ನಿಮಗೆ ಇಂತಹ ಅವಕಾಶ ನೀಡಿದ್ದಾರೆ, ನಿಮ್ಮ ಆತ್ಮವಿಶ್ವಾಸಕ್ಕೆ ಬಲತುಂಬಿದ್ದಾರೆ, ಮತ್ತು ನೀವು ಓದಿನ ಜೊತೆ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅಧ್ಯಯನ ಮಾಡುತ್ತೀರಿ ಮತ್ತು ಬರೆಯುತ್ತೀರಿ ಕೂಡಾ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. ನೋಡಿ, ಬರೆಯುವುದರಿಂದ ಆಗುವ ಪ್ರಯೋಜನವೆಂದರೆ ಅದು ನಿಮ್ಮ ಚಿಂತನೆಗಳಲ್ಲಿ ಚುರುಕುತನ ತುಂಬುತ್ತದೆ. ಬರೆಯುವುದರಿಂದ ಬಹಳ ಬಹಳ ಲಾಭ ದೊರೆಯುತ್ತದೆ. ಸರಿ ಹಾಗಾದರೆ, ನನ್ನ ಕಡೆಯಿಂದ ಬಹಳ ಬಹಳ ಅಭಿನಂದನೆ
ಉಸ್ಮಾನ್ – ಧನ್ಯವಾದ ಸರ್ (Thank you sir.)
ಬನ್ನಿ. ಈಗ ನೇರವಾಗಿ ದಕ್ಷಿಣದತ್ತ ಸಾಗೋಣ. ತಮಿಳುನಾಡಿನ ನಾಮಕ್ಕಲ್ ನ ಮಗಳು ಕನ್ನಿಗಾಳೊಂದಿಗೆ ಮಾತನಾಡೋಣ ಮತ್ತು ಕನ್ನಿಗಾಳ ಮಾತಂತೂ ಬಹಳವೇ ಪ್ರೇರಣಾದಾಯಕವಾಗಿರುತ್ತದೆ.
ಮೋದಿ – ಕನ್ನಿಗಾ ಅವರೆ ವಣಕ್ಕಂ
ಕನ್ನಿಗಾ – ವಣಕ್ಕಂ ಸರ್
ಮೋದಿ – ಹೇಗಿದ್ದೀರಿ (How are you )
ಕನ್ನಿಗಾ – ಚೆನ್ನಾಗಿದ್ದೇನೆ ಸರ್ (Fine sir)
ಮೋದಿ – ಮೊಟ್ಟ ಮೊದಲಿಗೆ ನಿಮ್ಮ ಯಶಸ್ಸಿಗಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ.
ಕನ್ನಿಗಾ – ಧನ್ಯವಾದ ಸರ್ (Thank you sir.)
ಮೋದಿ -ನಾನು ನಾಮಕ್ಕಲ್ ಹೆಸರು ಕೇಳಿದಾಗ ನನಗೆ ಆಂಜನೇಯ ದೇವಾಲಯ ನೆನಪಿಗೆ ಬರುತ್ತದೆ.
ಕನ್ನಿಗಾ – ಸರಿ ಸರ್ (Yes sir).
ಮೋದಿ – ನಿಮ್ಮೊಂದಿಗಿನ ಮಾತುಕತೆಯನ್ನು ಕೂಡಾ ಇನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ.
ಕನ್ನಿಗಾ – ಸರಿ ಸರ್ (Yes sir.)
ಮೋದಿ – ನಿಮಗೆ ಮತ್ತೊಮ್ಮೆ ಅಭಿನಂದನೆಗಳು (So, Congratulations again. )
ಕನ್ನಿಗಾ – ಧನ್ಯವಾದ ಸರ್ (Thank you sir.)
ಮೋದಿ – ಪರೀಕ್ಷೆಗಳಿಗಾಗಿ ನೀವು ಬಹಳ ಕಷ್ಟಪಟ್ಟಿರಬೇಕು, ಸಿದ್ಧತೆ ಮಾಡಿಕೊಳ್ಳುವ ನಿಮ್ಮ ಅನುಭವ ಹೇಗಿತ್ತು
ಕನ್ನಿಗಾ – ಸರ್, ಆರಂಭದಿಂದಲೇ ನಾವು ಕಷ್ಟಪಡುತ್ತಿದ್ದೆವು. ಈ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ನಾನು ಚೆನ್ನಾಗಿ ಬರೆದಿದ್ದೆ ಆದ್ದರಿಂದ ಉತ್ತಮ ಫಲಿತಾಂಶ ದೊರೆತಿದೆ. (Sir, we are working hard from the start so, I didn’t expect this result but I have written well so I get a good result. )
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. 2020ರಲ್ಲಿ ಮನದ ಮಾತು ತನ್ನ ಪಯಣದ ಅರ್ಧ ದಾರಿಯನ್ನು ಕ್ರಮಿಸಿದೆ. ಇದರ ಮೂಲಕ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಜಾಗತಿಕ ಮಹಾಮಾರಿ ಬಂತು, ಮಾನವ ಜನಾಂಗಕ್ಕೆ ಇದರಿಂದ ಯಾವ ರೀತಿಯ ಸಂಕಟ ಬಂತೋ ಅದರ ಬಗ್ಗೆ ನಮ್ಮ ಮಾತುಕತೆ ಸ್ವಾಭಾವಿಕವಾಗಿ ಸ್ವಲ್ಪ ಹೆಚ್ಚೇ ಆಗಿದೆ. ಆದರೆ ಈ ದಿನಗಳಲ್ಲಿ “ಈ ವರ್ಷ ಯಾವಾಗ ಮುಗಿಯುವುದು?” ಎನ್ನುವ ಒಂದು ವಿಷಯದ ಬಗ್ಗೆ ಜನರ ಮಧ್ಯೆ ಸತತವಾಗಿ ಚರ್ಚೆಗಳು ಆಗುತ್ತಲೇ ಇವೆ. ಯಾರಾದರೂ ಮತ್ತೊಬ್ಬರಿಗೆ ದೂರವಾಣಿ ಕರೆ ಮಾಡಿದರೂ ಸಹ ‘ಈ ವರ್ಷ ಯಾಕೆ ಬೇಗ ಮುಗಿಯುತ್ತಿಲ್ಲ’ ಎನ್ನುವ ವಿಷಯದಿಂದಲೇ ಸಂಭಾಷಣೆ ಶುರುವಾಗುತ್ತದೆ. ‘ಈ ವರ್ಷ ಒಳ್ಳೆಯದಲ್ಲ’ ಎಂದು ಯಾರೋ ಬರೆಯುತ್ತಿದ್ದಾರೆ, ಗೆಳೆಯರ ಜೊತೆ ಮಾತನಾಡುತ್ತಿದ್ದಾರೆ; ‘2020 ಶುಭವಾದ ವರ್ಷವಲ್ಲ’ ಎಂದು ಇನ್ಯಾರೋ ಹೇಳುತ್ತಿದ್ದಾರೆ. ಯಾವುದಾದರೂ ರೀತಿಯಲ್ಲಿ ಈ ವರ್ಷ ಅತೀ ವೇಗವಾಗಿ ಮುಗಿದು ಹೋಗಲಿ ಎಂದೇ ಎಲ್ಲರೂ ಆಶಿಸುತ್ತಿದ್ದಾರೆ.
ಸ್ನೇಹಿತರೇ, ಹೀಗೆ ಏಕೆ ಆಗುತ್ತಿದೆ, ಇಂತಹ ಸಂಭಾಷಣೆಗಳಿಗೆ ಏನಾದರೂ ಕಾರಣವಿರಲೇ ಬೇಕು ಎಂದು ನಾನು ಕೆಲವೊಮ್ಮೆ ಯೋಚಿಸುತ್ತೇನೆ. ಕೊರೋನಾದಂತಹ ಸಂಕಟ ಬರುತ್ತದೆ ಮತ್ತು ಇದರ ವಿರುದ್ಧದ ಹೋರಾಟ ಇಷ್ಟು ಧೀರ್ಘವಾಗಿರುತ್ತದೆ ಎಂದು ಆರೇಳು ತಿಂಗಳುಗಳ ಕೆಳಗೆ ನಮಗೇನು ಗೊತ್ತಿತ್ತು? ಈ ಸಂಕಟವಂತೂ ಹೆಚ್ಚುತ್ತಲೇ ಇದೆ, ಇದರ ಜೊತೆಗೆ ದೇಶದಲ್ಲಿ ದಿನವೂ ಹೊಸ ರೀತಿಯ sಸವಾಲುಗಳು ನಮ್ಮ ಮುಂದೆ ಬರುತ್ತಲೇ ಇವೆ. ಕೆಲವೇ ದಿನಗಳ ಹಿಂದೆ ದೇಶದ ಪೂರ್ವ ಸಮುದ್ರ ತೀರಕ್ಕೆ ಅಮ್ಫಾನ್ ಚಂಡಮಾರುತ ಅಪ್ಪಳಿಸಿದರೆ ಪಶ್ಚಿಮ ತೀರಕ್ಕೆ ನಿಸರ್ಗ ಚಂಡಮಾರುತ ಅಪ್ಪಳಿಸಿತು. ಎಷ್ಟೊಂದು ರಾಜ್ಯಗಳಲ್ಲಿ ನಮ್ಮ ರೈತ ಸೋದರ ಸೋದರಿಯರು ಮಿಡತೆಗಳ ದಾಳಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ದೇಶದ ಹಲವಾರು ಪ್ರದೇಶಗಳಲ್ಲಿ ಆಗುತ್ತಿರುವ ಭೂಕಂಪಗಳು ಸಹ ನಿಲ್ಲುವ ಲಕ್ಷಣಗಳನ್ನೇ ತೋರಿಸುತ್ತಿಲ್ಲ. ಇವೆಲ್ಲವುಗಳ ಮಧ್ಯೆ ನಮ್ಮ ಕೆಲವು ನೆರೆಹೊರೆಯವರಿಂದ ಏನಾಗುತ್ತಿದೆಯೋ ಅದರ ಸವಾಲುಗಳನ್ನೂ ದೇಶವು ಎದುರಿಸುತ್ತಿದೆ. ವಾಸ್ತವವಾಗಿ ಒಂದೇ ಬಾರಿಗೆ ಈ ಪ್ರಮಾಣದ ವಿಪತ್ತುಗಳು ಅಪರೂಪವಾಗಿ ನೋಡಲು ಮತ್ತು ಕೇಳಲು ಸಿಗುತ್ತವೆ. ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಯಾವುದಾದರೂ ಚಿಕ್ಕ ಪುಟ್ಟ ಘಟನೆಗಳು ಸಂಭವಿಸಿದರೂ ಜನರು ಅವುಗಳನ್ನೂ ಕೂಡ ಈ ಸವಾಲುಗಳ ಜೊತೆಗೆ ಸೇರಿಸಿ ನೋಡುತ್ತಿದ್ದಾರೆ.
ಗೆಳೆಯರೇ, ಕಷ್ಟಗಳು ಬರುತ್ತವೆ, ಸಂಕಟಗಳು ಬರುತ್ತವೆ, ಆದರೆ ಈ ವಿಪತ್ತುಗಳ ಕಾರಣದಿಂದ ನಾವು 2020 ನೇ ವರ್ಷವನ್ನು ಕೆಟ್ಟದ್ದು ಎಂದು ಭಾವಿಸಬೇಕೆ? ಯಾವ ಕಾರಣದಿಂದ ಮೊದಲಿನ ಆರು ತಿಂಗಳುಗಳು ಹೀಗೆ ಕಳೆದಿದೆಯೋ ಅದೇ ಕಾರಣದಿಂದ ಇಡೀ ವರ್ಷ ಹೀಗೆಯೇ ಇರುತ್ತದೆ ಎಂದು ಯೋಚಿಸುವುದು ಸರಿಯೇ? ಖಂಡಿತ ಅಲ್ಲ. ನನ್ನ ಪ್ರೀತಿಯ ದೇಶವಾಸಿಗಳೇ, ಖಂಡಿತವಾಗಿಯೂ ಬೇಡ. ಒಂದು ವರ್ಷದಲ್ಲಿ ಒಂದು ಸವಾಲು ಎದುರಾಗಲಿ ಅಥವಾ 50 ಸವಾಲುಗಳು ಬರಲಿ, ಸಂಖ್ಯೆಗಳು ಹೆಚ್ಚು ಕಡಿಮೆ ಆಗುವುದರಿಂದ ಆ ವರ್ಷವು ಕೆಟ್ಟದ್ದಾಗುವುದಿಲ್ಲ. ಭಾರತದ ಇತಿಹಾಸವೇ ವಿಪತ್ತುಗಳು ಮತ್ತು ಸವಾಲುಗಳ ವಿರುದ್ಧ ಗೆಲುವು ಸಾಧಿಸಿ ಹೆಚ್ಚು ಪ್ರಕಾಶಮಾನವಾಗಿ ಬೆಳಗುವುದಾಗಿದೆ. ನೂರಾರು ವರ್ಷಗಳಿಂದ, ಬಹಳಷ್ಟು ಆಕ್ರಮಣಕಾರರು ಭಾರತದ ಮೇಲೆ ದಾಳಿ ಮಾಡಿದರು, ನಮ್ಮನ್ನು ಬಿಕ್ಕಟ್ಟಿಗೆ ಸಿಲುಕಿಸಿದರು, ಭಾರತ ದೇಶ ನಾಶವಾಗುತ್ತದೆ, ಭಾರತದ ಸಂಸ್ಕೃತಿ ಕೊನೆಗೊಳ್ಳುತ್ತದೆ ಎಂದು ಜನರು ಭಾವಿಸಿದ್ದರು, ಆದರೆ, ಈ ಬಿಕ್ಕಟ್ಟುಗಳಿಂದ ಭಾರತವು ಮುಂದೆ ಇನ್ನಷ್ಟು ಭವ್ಯವಾಗಿ ಬೆಳೆಯಿತು.
ಸ್ನೇಹಿತರೇ, ನಮ್ಮಲ್ಲಿ ‘ಸೃಷ್ಟಿ ಶಾಶ್ವತ, ಸೃಷ್ಟಿ ನಿರಂತರ’ ಎನ್ನುವ ಮಾತಿದೆ.
ನನಗೆ ಒಂದು ಹಾಡಿನ ಕೆಲವು ಸಾಲುಗಳು ನೆನಪಾಗುತ್ತಿವೆ –
ದಿನ ದಿನವೂ ಝುಳು ಝುಳು ಹರಿಯುವ ಗಂಗೆಯ ಧಾರೆ ಏನು ಹೇಳುತ್ತಿದೆ,
ಯುಗಯುಗಾಂತರಗಳಿಂದ ಹರಿಯುತ್ತಿರುವ ಈ ಪುಣ್ಯ ಧಾರೆ ನಮ್ಮದೆಂದು
ಅದೇ ಹಾಡಿನಲ್ಲಿ ಮುಂದೆ ಹೀಗೆ ಬರೆಯಲಾಗಿದೆ:
ಕ್ಷಯಿಸುವುದು ಕ್ಷಯಿಸುತ್ತದೆ, ಬಂಡೆ ಕಲ್ಲುಗಳ ಒಡ್ಡು ಕಟ್ಟಿ ನೀವದನ್ನು ನಿಲ್ಲಿಸಬಲ್ಲಿರಾ?
ಭಾರತದಲ್ಲಿ ಕೂಡ ಒಂದು ಕಡೆ ದೊಡ್ಡ ದೊಡ್ಡ ಸಂಕಟಗಳು ಬರುತ್ತಲೇ ಇವೆ, ಅಲ್ಲಿಯೇ ಎಲ್ಲಾ ಸಂಕಟಗಳನ್ನೂ ದೂರ ಮಾಡುತ್ತಾ ಹಲವು ಹೊಸ ಸೃಷ್ಟಿಗಳು ಕೂಡ ಆಗಿದೆ. ಹೊಸ ಹೊಸ ಸಾಹಿತ್ಯಗಳ ರಚನೆಯಾಗಿದೆ, ಹೊಸ ಸಂಶೋಧನೆಗಳಾಗಿವೆ, ಹೊಸ ಸಿದ್ಧಾಂತಗಳ ಸ್ಥಾಪನೆಯಾಗಿವೆ. ಅಂದರೆ ಸಂಕಟದ ಹೊರತಾಗಿಯೂ ಪ್ರತಿ ಕ್ಷೇತ್ರದಲ್ಲೂ ಸೃಜನಶೀಲತೆಯ ಪ್ರಕ್ರಿಯೆ ಮುಂದುವರೆದಿದೆ; ನಮ್ಮ ಸಂಸ್ಕೃತಿ ಹೂವಾಗಿ ಅರಳಿ ಏಳ್ಗೆ ಕಾಣುತ್ತಿದೆ ಮತ್ತು ದೇಶ ಮುಂದುವರೆಯುತ್ತಲೇ ಇದೆ. ಭಾರತವು ಯಾವಾಗಲೂ ಸಂಕಟಗಳನ್ನು ಸಫಲತೆಯ ಏಣಿಯನ್ನಾಗಿ ಬದಲಾಯಿಸಿದೆ. ಇದೇ ಭಾವನೆಯೊಂದಿಗೆ ನಾವು ಇಂದೂ ಕೂಡ ಈ ಎಲ್ಲಾ ಸಂಕಟಗಳ ಮಧ್ಯೆ ಮುಂದುವರೆಯುತ್ತಲೇ ಇರಬೇಕು. ನೀವೂ ಕೂಡ ಈ ವಿಚಾರಗಳೊಂದಿಗೆ ಮುಂದುವರೆಯುತ್ತೀರಿ, 130 ಕೋಟಿ ದೇಶವಾಸಿಗಳು ಪ್ರಗತಿ ಹೊಂದಿದಾಗ ಈ ವರ್ಷ ದೇಶಕ್ಕೆ ಹೊಸ ಕೀರ್ತಿಯನ್ನು ತಂದುಕೊಟ್ಟ ವರ್ಷವೆಂಬುದು ಸಾಬೀತಾಗುತ್ತದೆ. ಇದೇ ವರ್ಷದಲ್ಲಿ ದೇಶವು ಹೊಸ ಗುರಿಯನ್ನು ಪಡೆದುಕೊಳ್ಳುತ್ತದೆ. ಹೊಸ ಆಕಾಂಕ್ಷೆಗಳನ್ನು ತುಂಬಿಕೊಂಡು ಹೊಸ ಎತ್ತರಕ್ಕೆ ಏರುತ್ತದೆ. 130 ಕೋಟಿ ದೇಶವಾಸಿಗಳ ಶಕ್ತಿಯ ಮೇಲೆ, ನಿಮ್ಮೆಲ್ಲರ ಮೇಲೆ ಮತ್ತು ದೇಶದ ಮಹಾನ್ ಪರಂಪರೆಯ ಬಗ್ಗೆ ನನಗೆ ಸಂಪೂರ್ಣ ಭರವಸೆ ಇದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕಷ್ಟ ಎಷ್ಟೇ ದೊಡ್ಡದಾಗಿದ್ದರೂ ಭಾರತದ ಸಂಸ್ಕಾರ, ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡುವ ಪ್ರೇರಣೆಯನ್ನು ನೀಡುತ್ತದೆ. ಕಷ್ಟದ ಸಮಯದಲ್ಲಿ ಭಾರತವು ಜಗತ್ತಿಗೆ ಸಹಾಯ ಮಾಡಿದ ರೀತಿ, ಇಂದು ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಭಾರತದ ಪಾತ್ರವನ್ನು ಬಲಪಡಿಸಿದೆ. ಇದರಿಂದ ಜಗತ್ತು ಭಾರತದ ವಿಶ್ವ ಬಂಧುತ್ವದ ಭಾವನೆಯನ್ನು ಸ್ವತಃ ಅನುಭವಿಸಿದೆ ಮತ್ತು ಇದರ ಜೊತೆಯಲ್ಲೇ ವಿಶ್ವವು ನಮ್ಮ ಸಾರ್ವಭೌಮತ್ವ ಮತ್ತು ಗಡಿ ರಕ್ಷಣೆಯಲ್ಲಿ ಭಾರತದ ಶಕ್ತಿ ಮತ್ತು ಬದ್ಧತೆಯನ್ನು ಸಹಾ ನೋಡಿದೆ. ಲಡಾಖ್ನಲ್ಲಿ ಭಾರತದ ಭೂಭಾಗದತ್ತ ಕಣ್ಣೆತ್ತಿ ನೋಡುವವರಿಗೆ ಸರಿಯಾದ ಉತ್ತರ ಸಿಕ್ಕಿದೆ. ಭಾರತಕ್ಕೆ ಸ್ನೇಹ ನಿಭಾಯಿಸುವುದೂ ತಿಳಿದಿದೆ, ಹಾಗೆಯೇ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸರಿಯಾದ ಉತ್ತರ ಕೊಡುವುದೂ ತಿಳಿದಿದೆ. ತಾಯಿ ಭಾರತಿಯ ಗೌರವಕ್ಕೆ ಎಂದಿಗೂ ಚ್ಯುತಿ ಬರಲು ಬಿಡುವುದಿಲ್ಲ ಎನ್ನುವುದನ್ನು ನಮ್ಮ ವೀರ ಸೈನಿಕರು ತೋರಿಸಿಕೊಟ್ಟಿದ್ದಾರೆ.
ಸ್ನೇಹಿತರೇ, ಲಡಾಖ್ನಲ್ಲಿ ಹುತಾತ್ಮರಾದ ನಮ್ಮ ವೀರ ಸೈನಿಕರ ಶೌರ್ಯಕ್ಕೆ ಇಡೀ ದೇಶವು ನಮಿಸುತ್ತಿದೆ, ಶ್ರದ್ಧಾಂಜಲಿ ಅರ್ಪಿಸುತ್ತಿದೆ. ಇಡೀ ದೇಶ ಅವರಿಗೆ ಕೃತಜ್ಞವಾಗಿದೆ, ಅವರಿಗೆ ತಲೆಬಾಗಿದೆ. ಈ ಗೆಳೆಯರ ಬಂಧು ಬಾಂಧವರಂತೆಯೇ ಪ್ರತಿ ಭಾರತೀಯನೂ ಇವರನ್ನು ಕಳೆದುಕೊಂಡಿರುವ ದುಖಃವನ್ನು ಅನುಭವಿಸುತ್ತಿದ್ದಾನೆ. ತಮ್ಮ ವೀರ ಮಕ್ಕಳ ಬಲಿದಾನಕ್ಕೆ ಅವರ ಸಂಬಂಧಿಗಳಲ್ಲಿ ಇರುವ ಹೆಮ್ಮೆಯ ಭಾವನೆ, ದೇಶಕ್ಕಾಗಿ ತೋರಿಸುವ ಹುರುಪು – ಇದುವೇ ದೇಶದ ಶಕ್ತಿ. ಯಾರ ಮಕ್ಕಳು ಹುತಾತ್ಮರಾಗಿದ್ದಾರೋ, ಅವರ ತಂದೆ ತಾಯಿಯರು ತಮ್ಮ ಇನ್ನೊಬ್ಬ ಮಗನನ್ನೂ, ಕುಟುಂಬದ ಬೇರೆ ಮಕ್ಕಳನ್ನೂ ಸಹ ಸೇನೆಗೆ ಕಳುಹಿಸುವ ಮಾತನ್ನು ಆಡುತ್ತಿದ್ದಾರೆ, ಇದನ್ನು ನೀವೂ ನೋಡಿರಬಹುದು. ಬಿಹಾರ ರಾಜ್ಯದ ವಾಸಿ ಹುತಾತ್ಮ ಕುಂದನ್ ಕುಮಾರ್ ಅವರ ತಂದೆಯ ಮಾತುಗಳಂತೂ ಕಿವಿಯಲ್ಲಿ ಗುಯ್ಗುಡುತ್ತಿವೆ. ತಮ್ಮ ಮೊಮ್ಮಕ್ಕಳನ್ನೂ ಕೂಡ ದೇಶದ ರಕ್ಷಣೆಗಾಗಿ ಸೇನೆಗೆ ಕಳುಹಿಸುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಇದೇ ಹುಮ್ಮಸ್ಸು, ಪ್ರತೀ ಹುತಾತ್ಮರ ಪರಿವಾರದ್ದಾಗಿದೆ. ವಾಸ್ತವದಲ್ಲಿ ಈ ನಾಗರೀಕರ ತ್ಯಾಗ ಪೂಜನೀಯವಾದುದು. ಭಾರತ ಮಾತೆಯ ರಕ್ಷಣೆಗಾಗಿ ಯಾವ ಸಂಕಲ್ಪದಿಂದ ನಮ್ಮ ಸೈನಿಕರು ಬಲಿದಾನಗೈದರೋ ಅದೇ ಸಂಕಲ್ಪವನ್ನು ನಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಳ್ಳಬೇಕು, ಪ್ರತಿಯೊಬ್ಬ ದೇಶವಾಸಿಯೂ ಮಾಡಿಕೊಳ್ಳಬೇಕು. ನಮ್ಮ ಪ್ರತಿ ಪ್ರಯತ್ನವೂ ಇದೇ ದಿಕ್ಕಿನಲ್ಲಿ ಇರಬೇಕಾಗಿದೆ. ಇದರಿಂದ ಗಡಿ ರಕ್ಷಣೆಗಾಗಿ ದೇಶದ ಬಲ ಹೆಚ್ಚಿ, ದೇಶವು ಮತ್ತಷ್ಟು ಕ್ಷೇಮವಾಗಿ ಆತ್ಮನಿರ್ಭರವಾಗಬೇಕು. ಇದೇ ನಮ್ಮ ಹುತಾತ್ಮರಿಗೆ ನಾವು ನೀಡುವ ನಿಜವಾದ ಶ್ರದ್ಧಾಂಜಲಿ ಕೂಡ ಆಗಿದೆ.
ಅಸ್ಸಾಂನಿಂದ ರಜನಿಯವರು – “ಪೂರ್ವ ಲಡಾಖ್ನಲ್ಲಿ ಆದ ಘಟನೆಗಳನ್ನು ನೋಡಿದ ಮೇಲೆ ಸ್ವದೇಶೀ ವಸ್ತುಗಳನ್ನೇ ಖರೀದಿ ಮಾಡುತ್ತೇನೆ ಅಷ್ಟೆ ಅಲ್ಲ, ಲೋಕಲ್ಗಾಗಿ ವೋಕಲ್ ಆಗುತ್ತೇನೆ ಎಂದು ಪ್ರಮಾಣ ಮಾಡಿದ್ದೇನೆ” ಎಂದು ನನಗೆ ಬರೆದು ತಿಳಿಸಿದ್ದಾರೆ. ಈ ರೀತಿಯ ಸಂದೇಶಗಳು ನನಗೆ ದೇಶದ ಮೂಲೆ ಮೂಲೆಗಳಿಂದ ಬರುತ್ತಿವೆ. ಬಹಳಷ್ಟು ಜನರು ಈ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇವೆ ಎಂದು ನನಗೆ ಪತ್ರ ಬರೆದು ತಿಳಿಸಿದ್ದಾರೆ. ಇದೇ ರೀತಿ ತಮಿಳುನಾಡಿನ ಮಧುರೈನಿಂದ ಮೋಹನ್ ರಾಮಮೂರ್ತಿ ಅವರು “ನಾನು ಭಾರತವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಹೊಂದುವುದನ್ನು ನೋಡಲು ಇಚ್ಚಿಸುತ್ತೇನೆ” ಎಂದು ಬರೆದಿದ್ದಾರೆ.
ಗೆಳೆಯರೇ, ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ದೇಶವು ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನ ಬಹಳಷ್ಟು ದೇಶಗಳಿಗಿಂತ ಮುಂದೆ ಇತ್ತು. ನಮ್ಮಲ್ಲಿ ಬಹಳಷ್ಟು ಶಸ್ತ್ರಾಸ್ತ್ರ ಕಾರ್ಖಾನೆಗಳು ಇದ್ದವು. ಆ ಸಮಯದಲ್ಲಿ ಎಷ್ಟೋ ದೇಶಗಳು ನಮಗಿಂತ ತುಂಬಾ ಹಿಂದೆ ಇದ್ದವು. ಅವೆಲ್ಲಾ ಈಗ ನಮಗಿಂತ ಮುಂದಿವೆ. ಸ್ವಾತಂತ್ರ್ಯ ಬಂದ ನಂತರ ರಕ್ಷಣಾ ಕ್ಷೇತ್ರದಲ್ಲಿ ನಾವು ಎಷ್ಟು ಪ್ರಯತ್ನ ಮಾಡಬೇಕಿತ್ತೋ, ನಮ್ಮ ಹಳೆಯ ಅನುಭವಗಳ ಲಾಭ ಪಡೆದುಕೊಳ್ಳಬೇಕಿತ್ತೋ ಅದನ್ನು ನಾವು ಪಡೆದುಕೊಳ್ಳಲಿಲ್ಲ. ಆದರೆ ಇಂದು ರಕ್ಷಣಾ ಕ್ಷೇತ್ರದಲ್ಲಿ, ತಾಂತ್ರಿಕತೆಯ ಕ್ಷೇತ್ರದಲ್ಲಿ ಭಾರತವು ಮುಂದುವರೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ, ಭಾರತವು ಆತ್ಮನಿರ್ಭರತೆಯತ್ತ ಹೆಜ್ಜೆ ಇಡುತ್ತಿದೆ.
ಸ್ನೇಹಿತರೆ, ಯಾವುದೇ ಧ್ಯೇಯ people’s participation ಅಂದರೆ ಜನರ ಸಹಭಾಗಿತ್ವ ಇಲ್ಲದೆ ಸಂಪೂರ್ಣವಾಗಲಾರದು, ಸಫಲವಾಗಲಾರದು. ಆದ್ದರಿಂದ ಆತ್ಮನಿರ್ಭರ ಭಾರತದ ದಿಕ್ಕಿನಲ್ಲಿ ಒಬ್ಬ ನಾಗರೀಕನಾಗಿ ನಮ್ಮೆಲ್ಲರ ಸಂಕಲ್ಪ, ಸಮರ್ಪಣೆ ಮತ್ತು ಸಹಕಾರ ಬಹಳ ಮುಖ್ಯ. ಮತ್ತು ಅದು ಅನಿವಾರ್ಯವೂ ಕೂಡ. ನೀವು local ವಸ್ತುಗಳನ್ನು ಖರೀದಿಸಿ, local ಗಾಗಿ vocal ಆಗಿ. ಹಾಗಾದಾಗ ಮಾತ್ರ ನೀವು ದೇಶವನ್ನು ಬಲಿಷ್ಠ್ಟವನ್ನಾಗಿ ಮಾಡುವುದರಲ್ಲಿ ನಿಮ್ಮ ಪಾತ್ರವನ್ನು ವಹಿಸುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ಇದೂ ಕೂಡ ಒಂದು ರೀತಿಯ ದೇಶಸೇವೆಯೇ ಆಗಿದೆ. ನೀವು ಯಾವುದೇ ವೃತ್ತಿಯಲ್ಲಿರಲಿ, ಪ್ರತಿಯೊಂದರಲ್ಲಿ ಸಹ ದೇಶ ಸೇವೆ ಮಾಡುವುದಕ್ಕೆ ಬಹಳಷ್ಟು ಅವಕಾಶ ಇರುತ್ತದೆ. ದೇಶದ ಅವಶ್ಯಕತೆಯನ್ನು ಅರ್ಥೈಸಿಕೊಂಡು ಯಾವುದೇ ಕೆಲಸವನ್ನು ಮಾಡಿದರೂ ಅದು ದೇಶಸೇವೆಯೇ ಆಗುತ್ತದೆ. ನಿಮ್ಮ ಈ ಸೇವೆ ದೇಶವನ್ನು ಯಾವುದೋ ಒಂದು ರೀತಿಯಲ್ಲಿ ಶಕ್ತಿಶಾಲಿಯನ್ನಾಗಿ ಮಾಡುತ್ತದೆ, ಮತ್ತು ನಮ್ಮ ದೇಶವು ಎಷ್ಟು ಬಲಿಷ್ಠವಾಗುತ್ತದೆಯೋ, ಜಗತ್ತಿನಲ್ಲಿ ಶಾಂತಿಯ ಸಂಭಾವ್ಯತೆ ಕೂಡ ಬಲಿಷ್ಠವಾಗುತ್ತದೆ ಎನ್ನುವುದನ್ನು ಸಹ ನಾವು ನೆನಪಿಟ್ಟು ಕೊಂಡಿರಬೇಕು.
ನಮ್ಮಲ್ಲಿ ಒಂದು ಮಾತಿದೆ.
ವಿದ್ಯಾ ವಿವಾದಾಯ ಧನಂ ಮದಾಯ, ಶಕ್ತಿಹಿ ಪರೆಷಾನ್ ಪರಿಪೀಡನಾಯ !
ಖಲಸ್ಯ ಸಾಧೋ ವಿಪರೀತಂ ಏತತ್, ಜ್ಞಾನಾಯ ದಾನಾಯ ಚ ರಕ್ಷಣಾಯ !!
ಅಂದರೆ, ಒಂದುವೇಳೆ ಸ್ವಭಾವದಿಂದ ಯಾವುದೇ ವ್ಯಕ್ತಿಯು ದುಷ್ಟನಾಗಿದ್ದರೆ ಅವನು ವಿದ್ಯೆಯ ಪ್ರಯೋಗವನ್ನು ವಿವಾದದಲ್ಲಿ, ಧನವನ್ನು ಅಹಂಕಾರದಲ್ಲಿ ಮತ್ತು ಶಕ್ತಿಯ ಪ್ರಯೋಗವನ್ನು ಇನ್ನೊಬ್ಬರಿಗೆ ತೊಂದರೆ ಕೊಡುವುದರಲ್ಲಿ ವಿನಿಯೋಗಿಸುತ್ತಾನೆ. ಆದರೆ ಸಜ್ಜನರ ವಿದ್ಯೆಯು ಜ್ಞಾನಕ್ಕಾಗಿ, ಹಣವು ಸಹಾಯಕ್ಕಾಗಿ, ಮತ್ತು ಶಕ್ತಿಯು ರಕ್ಷಣೆ ಮಾಡುವುದಕ್ಕಾಗಿ ಉಪಯೋಗಿಸಲ್ಪಡುತ್ತದೆ ಎಂದು ಅರ್ಥ.
ಭಾರತದ ಸಂಕಲ್ಪ – ಭಾರತದ ಸ್ವಾಭಿಮಾನ ಮತ್ತು ಸಾರ್ವಭೌಮತ್ವದ ಸಂರಕ್ಷಣೆ; ಭಾರತದ ಗುರಿ – ಆತ್ಮನಿರ್ಭರತೆಯ ಭಾರತ; ಭಾರತದ ಪರಂಪರೆ – ನಂಬಿಕೆ ಮತ್ತು ಸ್ನೇಹ; ಭಾರತದ ಭಾವನೆ – ಬಂಧುತ್ವ. ನಾವು ಇದೇ ಆದರ್ಶಗಳ ಜೊತೆಗೆ ಮುನ್ನಡೆಯೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾದ ಸಂಕಷ್ಟದ ಸಮಯದಲ್ಲಿ ದೇಶವು ಲಾಕ್ಡೌನ್ನಿಂದ ಹೊರಗೆ ಬಂದಿದೆ. ಈಗ ನಾವು ಅನ್ಲಾಕ್ ಹಂತದಲ್ಲಿ ಇದ್ದೇವೆ. ಅನ್ಲಾಕ್ನ ಈ ಸಮಯದಲ್ಲಿ ಕೊರೋನಾವನ್ನು ಸೋಲಿಸುವುದು, ಆರ್ಥಿಕತೆಯನ್ನು ಬಲಿಷ್ಠಗೊಳಿಸುವುದು ಮತ್ತು ಅದಕ್ಕೆ ಶಕ್ತಿಯನ್ನು ತುಂಬುವುದು – ಈ ಎರಡು ವಿಷಯಗಳ ಕುರಿತು ನಾವು ಬಹಳಷ್ಟು ಗಮನ ಹರಿಸಬೇಕಾಗಿದೆ. ಸ್ನೇಹಿತರೇ, ಲಾಕ್ಡೌನ್ಗಿಂತ ಹೆಚ್ಚು ಎಚ್ಚರಿಕೆಯನ್ನು ನಾವು ಅನ್ಲಾಕ್ ಹಂತದಲ್ಲಿ ತೆಗೆದುಕೊಳ್ಳಬೇಕಿದೆ. ನಿಮ್ಮ ಎಚ್ಚರಿಕೆಯೇ ನಿಮ್ಮನ್ನು ಕೊರೋನಾ ದಿಂದ ರಕ್ಷಿಸುತ್ತದೆ. ಒಂದು ವೇಳೆ ನೀವು ಮಾಸ್ಕ್ ಧರಿಸದಿದ್ದರೆ, 2 ಗಜಗಳ ಅಂತರವನ್ನು ಪಾಲಿಸದಿದ್ದರೆ ಅಥವಾ ಅಗತ್ಯವಿರುವ ಬೇರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ನೀವು ನಿಮ್ಮ ಜೊತೆಗೆ ಬೇರೆಯವರನ್ನೂ ಮುಖ್ಯವಾಗಿ ಮನೆಯಲ್ಲಿರುವ ಮಕ್ಕಳು ಮತ್ತು ವೃದ್ಧರನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೀರಿ ಎಂದರ್ಥ. ಆದ್ದರಿಂದ ಎಲ್ಲಾ ದೇಶವಾಸಿಗಳಲ್ಲಿ ನನ್ನ ವಿನಂತಿ ಏನೆಂದರೆ ನೀವು ಅಸಡ್ಡೆ ತೋರಿಸಬೇಡಿ, ನಿಮ್ಮ ರಕ್ಷಣೆ ಮಾಡಿಕೊಳ್ಳಿ ಜೊತೆಗೆ ಬೇರೆಯವರನ್ನೂ ರಕ್ಷಿಸಿ. – ನಾನು ಇದನ್ನು ಮತ್ತೆ ಮತ್ತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಗೆಳೆಯರೇ, ಅನ್ಲಾಕ್ನ ಈ ಸಮಯದಲ್ಲಿ ಭಾರತದಲ್ಲಿ ದಶಕಗಳಿಂದ ಬಂಧಿಯಾಗಿದ್ದ ಕೆಲವು ವಿಷಯಗಳೂ ಅನ್ಲಾಕ್ ಆಗುತ್ತಿವೆ. ಬಹಳ ವರ್ಷಗಳಿಂದ ನಮ್ಮ ಗಣಿಗಾರಿಕೆ ಕ್ಷೇತ್ರವು ಲಾಕ್ಡೌನ್ ಆಗಿತ್ತು. ವಾಣಿಜ್ಯ ಹರಾಜಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಕೆಲವೇ ದಿನಗಳ ಹಿಂದೆ ಅಂತರಿಕ್ಷ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಮಾಡಲಾಗಿದೆ. ಆ ಸುಧಾರಣೆಯ ಸಹಾಯದಿಂದ ವರ್ಷಗಳಿಂದ ಲಾಕ್ಡೌನ್ನಲ್ಲಿ ಸಿಕ್ಕಿಕೊಂಡಿದ್ದ ಈ ಕ್ಷೇತ್ರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇದರಿಂದ ಆತ್ಮನಿರ್ಭರತೆಯ ಭಾರತದ ಅಭಿಯಾನಕ್ಕೆ ಬರೀ ವೇಗ ಸಿಗುವುದಷ್ಟೆ ಅಲ್ಲದೇ ದೇಶವು ತಾಂತ್ರಿಕತೆಯಲ್ಲಿ ಕೂಡ ಮುಂದುವರೆಯುತ್ತದೆ.
ನೀವು ಕೃಷಿ ಕ್ಷೇತ್ರವನ್ನೇ ನೋಡಿ, ಈ ಕ್ಷೇತ್ರದಲ್ಲಿಯೂ ಕೂಡ ಬಹಳಷ್ಟು ವಿಚಾರಗಳು ದಶಕಗಳಿಂದ ಲಾಕ್ಡೌನ್ನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಈ ಕ್ಷೇತ್ರವನ್ನೂ ಸಹ ಈಗ ಅನ್ಲಾಕ್ ಮಾಡಲಾಗಿದೆ. ಇದರಿಂದ ಒಂದುಕಡೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ, ಯಾರಿಗಾದರೂ ಮಾರುವ ಸ್ವಾತಂತ್ರ್ಯ ಸಿಕ್ಕಿದೆ, ಮತ್ತೊಂದು ಕಡೆ ಅವರಿಗೆ ಹೆಚ್ಚು ಲಾಭ ಸಿಗುವುದು ಸಹ ನಿಶ್ಚಿತವಾಗಿದೆ. ಹೀಗೆ ಅನೇಕ ಕ್ಷೇತ್ರಗಳಲ್ಲಿ ನಮ್ಮ ದೇಶವು ಈ ಎಲ್ಲಾ ಸಂಕಟಗಳ ಮಧ್ಯೆ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡು ಪ್ರಗತಿಯ ಹೊಸ ಪಥವನ್ನು ತೆರೆಯುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ತಿಂಗಳೂ ನಾವು ನಮ್ಮನ್ನು ಭಾವುಕರನ್ನಾಗಿಸುವ
ಕೆಲವು ವಿಷಯಗಳನ್ನು ಓದಿರುತ್ತೇವೆ, ನೋಡಿರುತ್ತೇವೆ. ಅವು, ಹೇಗೆ ಪ್ರತಿಯೊಬ್ಬ ಭಾರತೀಯನೂ ಪರಸ್ಪರ ಸಹಾಯ ಮಾಡಲು ಸಿದ್ಧನಾಗಿದ್ದಾನೆ, ಹೇಗೆ ತನ್ನಿಂದ ಸಾಧ್ಯವಾದಷ್ಟು ಮಾಡುವಲ್ಲಿ ನಿರತನಾಗಿದ್ದಾನೆ ಎಂಬುದನ್ನು ನಮಗೆ ನೆನಪಿಸುತ್ತದೆ.
ಅರುಣಾಚಲ ಪ್ರದೇಶದ ಇಂತಹುದೇ ಒಂದು ಪ್ರೇರಣೆ ನೀಡುವ ವಿಷಯ ಮಾಧ್ಯಮದಲ್ಲಿ ನನಗೆ ಓದಲು ಸಿಕ್ಕಿತು. ಇಲ್ಲಿನ ಸಿಯಾಂಗ್ ಜಿಲ್ಲೆಯ ಮಿರೆಮ್ ಗ್ರಾಮ ಒಂದು ವಿಶಿಷ್ಟವಾದ ಕೆಲಸ ಮಾಡಿ ತೋರಿಸಿದೆ ಮತ್ತು ಅದು ಸಮಸ್ತ ಭಾರತಕ್ಕೆ ಒಂದು ಉದಾಹರಣೆಯಾಗಿದೆ. ಈ ಗ್ರಾಮದ ಬಹಳಷ್ಟು ಜನರು ಹೊರಗೆ ಇದ್ದು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಅವರೆಲ್ಲ ತಮ್ಮ ಗ್ರಾಮದತ್ತ ಹಿಂತಿರುಗಿ ಬರುವುದನ್ನು ಈ ಗ್ರಾಮದ ಜನರು ನೋಡಿದರು. ಅವರು ಗ್ರಾಮಕ್ಕೆ ಬರುವ ಮೊದಲೇ ಗ್ರಾಮದ ಹೊರಗೆ quarantine ಮಾಡುವ ನಿರ್ಧಾರ ಮಾಡಿದರು. ಅವರೆಲ್ಲರೂ ಒಟ್ಟುಗೂಡಿ ಹಳ್ಳಿಯಿಂದ ಸ್ವಲ್ಪ ದೂರದಲ್ಲಿ 14 ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿದರು. ತಮ್ಮ ಜನ ಹಿಂತಿರುಗಿ ಬಂದಾಗ ಅವರನ್ನು ಈ ಗುಡಿಸಲುಗಳಲ್ಲಿ ಕೆಲವು ದಿನ quarantine ನಲ್ಲಿ ಇರಿಸುವ ನಿರ್ಧಾರ ಮಾಡಿದರು. ಈ ಗುಡಿಸಲುಗಳಲ್ಲಿ ಶೌಚಾಲಯ, ವಿದ್ಯುತ್, ನೀರು ಸೇರಿದಂತೆ ದಿನನಿತ್ಯದ ಅವಶ್ಯಕತೆಗಳಿಗಾಗಿ ಪ್ರತಿಯೊಂದು ರೀತಿಯ ಸೌಲಭ್ಯಗಳೂ ಸಿಗುವಂತೆ ಮಾಡಿದ್ದರು. ನಿಸ್ಸಂಶಯವಾಗಿ, ಮಿರೆಮ್ ಗ್ರಾಮದ ಜನರ ಈ ಸಾಮೂಹಿಕ ಪ್ರಯತ್ನ ಮತ್ತು ಅರಿವು ಎಲ್ಲರ ಗಮನವನ್ನು ಸೆಳೆಯಿತು.
ಸ್ನೇಹಿತರೇ, ನಮ್ಮಲ್ಲಿ ಒಂದು ಮಾತನ್ನು ಹೇಳುತ್ತಾರೆ –
ಸ್ವಭಾವಂ ನ ಜಹಾತಿ ಏವ ಸಾಧು ಆಪದ್ರತೋಪಿ ಸನ !
ಕರ್ಪೂರ ಪಾವಕ ಸ್ಪೃಷ್ಟ ಸೌರಭಂ ಲಭತೆತರಾಮ್ !!
ಅಂದರೆ, ಹೇಗೆ ಕರ್ಪೂರವು ಬೆಂಕಿಯಲ್ಲಿ ಉರಿಯುತ್ತಿದ್ದರೂ ತನ್ನ ಸುಗಂಧವನ್ನು ಬಿಡುವುದಿಲ್ಲವೋ ಹಾಗೆಯೆ ಸಜ್ಜನರು ಆಪತ್ಕಾಲದಲ್ಲಿ ಕೂಡ ತಮ್ಮ ಗುಣ, ಸ್ವಭಾವವನ್ನು ಬಿಡುವುದಿಲ್ಲ. ಇಂದು ನಮ್ಮ ದೇಶದ ಕಾರ್ಮಿಕ ಶಕ್ತಿ, ಶ್ರಮಿಕ ಸ್ನೇಹಿತರು ಇದ್ದಾರಲ್ಲ, ಅವರೂ ಕೂಡ ಇದಕ್ಕೆ ಜೀವಂತ ಉದಾಹರಣೆ. ಇತ್ತೀಚಿನ ದಿನಗಳಲ್ಲಿ ಇಡೀ ದೇಶಕ್ಕೆ ಪ್ರೇರಣೆ ನೀಡುವಂತಹ ನಮ್ಮ ವಲಸೆ ಕಾರ್ಮಿಕರ ಇಂತಹ ಕಥೆಗಳು ಬರುತ್ತಿವೆ. ಉತ್ತರಪ್ರದೇಶದ ಬಾರಾಬಂಕಿ ಗ್ರಾಮದಲ್ಲಿ ಹಿಂತಿರುಗಿ ಬಂದ ಕಾರ್ಮಿಕರು ಕಲ್ಯಾಣಿ ನದಿಯು ಪ್ರಾಕೃತಿಕ ಸ್ವರೂಪ ಮತ್ತೆ ಪಡೆದುಕೊಳ್ಳುವಂತೆ ಮಾಡಲು ಕೆಲಸ ಪ್ರಾರಂಭಿಸಿದ್ದಾರೆ. ನದಿಯ ಜೀರ್ಣೋದ್ಧಾರ ಆಗುವುದನ್ನು ನೋಡಿ ಅಕ್ಕಪಕ್ಕದ ರೈತರು, ನೆರೆಹೊರೆಯ ಜನರು ಕೂಡ ಉತ್ಸಾಹಿತರಾಗಿದ್ದಾರೆ. ಹಳ್ಳಿಗೆ ಬಂದ ಮೇಲೆ isolation ಅಥವಾ quarantine centres ನಲ್ಲಿ ಇರುತ್ತಲೇ ನಮ್ಮ ಕಾರ್ಮಿಕ ಗೆಳೆಯರು ಯಾವ ರೀತಿ ತಮ್ಮ ಕೌಶಲ್ಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದರೆ ತಮ್ಮ ಸುತ್ತಮುತ್ತಲ ವಸ್ತುಸ್ಥಿತಿಯನ್ನು ಅದ್ಭುತವಾಗಿ ಬದಲಾಯಿಸುತ್ತಿದ್ದಾರೆ. ಆದರೆ ಸ್ನೇಹಿತರೆ, ಇಂತಹ ಯಶೋಗಾಥೆಗಳು ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಆಗುತ್ತಿವೆ ಅವು ನಮ್ಮ ಬಳಿಗೆ ತಲುಪುತ್ತಿಲ್ಲ. ನಮ್ಮ ದೇಶದ ಸ್ವಭಾವ ಹೇಗಿದೆ ಎಂದರೆ ನಿಮ್ಮ ಹಳ್ಳಿಯಲ್ಲಿ, ನಿಮ್ಮ ಸುತ್ತಮುತ್ತಲಿನಲ್ಲಿ ಇಂತಹ ಅನೇಕ ಘಟನೆಗಳು ಆಗಿರಬಹುದು. ಒಂದುವೇಳೆ ನಿಮ್ಮ ಗಮನಕ್ಕೆ ಇಂತಹ ವಿಷಯಗಳು ಬಂದರೆ ನೀವು ಇಂತಹ ಪ್ರೇರಣೆ ನೀಡುವ ವಿಷಯಗಳನ್ನು ನನಗೆ ಖಂಡಿತವಾಗಿಯೂ ಬರೆದು ತಿಳಿಸಿ. ಸಂಕಟದ ಈ ಸಮಯದಲ್ಲಿ ಇಂತಹ ಸಕಾರಾತ್ಮಕ ಘಟನೆಗಳು, ಕಥೆಗಳು ಬೇರೆಯವರಿಗೆ ಕೂಡ ಪ್ರೇರಣೆ ನೀಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೋನಾ ವೈರಸ್ ನಿಶ್ಚತವಾಗಿಯೂ ನಮ್ಮ ಬದುಕಿನ ಶೈಲಿಯನ್ನೇ ಬದಲಿಸಿದೆ. ಲಂಡನ್ ನಿಂದ ಮುದ್ರಣವಾಗುವ ಫೈನಾನ್ಸಿಯಲ್ ಟೈಮ್ಸ್ ನಲ್ಲಿ ಒಂದು ಆಸಕ್ತಿದಾಯಕ ಲೇಖನವನ್ನು ನಾನು ಓದಿದೆ. ಈ ಕೊರೋನಾ ಹಿನ್ನೆಲೆಯಲ್ಲಿ, ಶುಂಠಿ, ಅರಿಶಿಣ ಸೇರಿದಂತೆ ಇತರ ಮಸಾಲೆ ವಸ್ತುಗಳಿಗೆ ಏಷ್ಯಾ ಮಾತ್ರವಲ್ಲದೆ ಅಮೆರಿಕದಲ್ಲೂ ಬೇಡಿಕೆ ಹೆಚ್ಚಿದೆ ಎಂದು ಅದರಲ್ಲಿ ಬರೆಯಲಾಗಿತ್ತು. ಈಗ, ಇಡೀ ಜಗತ್ತಿನ ಧ್ಯಾನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಇದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ವಸ್ತುಗಳೊಂದಿಗೆ ನಮ್ಮ ಸಂಬಂಧ ಸಾಕಷ್ಟಿದೆ. ಇದರ ಸಹಾಯದೊಂದಿಗೆ ನಾವೀಗ ಅತ್ಯಂತ ಸಹಜ ಮತ್ತು ಸರಳ ಭಾಷೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕುರಿತು ಸುಲಭವಾಗಿ ಅರ್ಥವಾಗುವಂತೆ ವಿಶ್ವದ ಜನರಿಗೆ ತಿಳಿಸಬೇಕಿದೆ. ಈ ಮೂಲಕ, ನಾವು ಆರೋಗ್ಯಕರ ವಿಶ್ವದ ನಿರ್ಮಾಣಕ್ಕೆ ನಮ್ಮ ಕೊಡುಗೆಯನ್ನೂ ನೀಡಲು ಸಾಧ್ಯವಾಗುವಂತೆ ಮಾಡಬೇಕಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೋನಾದಂಥ ಸಂಕಟ ಬರದಿದ್ದರೆ, ಜೀವನವೆಂದರೆ ಏನು, ಜೀವನ ಯಾತಕ್ಕಾಗಿ ಹಾಗೂ ಜೀವನ ಹೇಗೆ ಎನ್ನುವ ಕುರಿತು ನಾವು ಯೋಚಿಸುತ್ತಿರಲಿಲ್ಲ. ಬಹುಶಃ ನಮಗೆ ಈ ಕುರಿತು ನೆನಪೂ ಬರುತ್ತಿರಲಿಲ್ಲ. ಇದೇ ಕಾರಣದಿಂದ ಬಹಳಷ್ಟು ಜನರು ಇಂದು ಮಾನಸಿಕ ಉದ್ವೇಗದಿಂದ ಬದುಕುತ್ತಿದ್ದಾರೆ. ಇನ್ನೊಂದು ಕಡೆ, ಲಾಕ್ಡೌನ್ ಕಾರಣದಿಂದ ಖುಷಿಯ ಸಣ್ಣ ಸಣ್ಣ ಕ್ಷಣಗಳನ್ನು ಬದುಕಿನಲ್ಲಿ ಮರು ಪಡೆದಿರುವ ಕುರಿತಾಗಿಯೂ ಜನರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅನೇಕ ಜನರು ಪಾರಂಪರಿಕ ಒಳಾಂಗಣ ಆಟಗಳನ್ನು ಆಡಿದ ಬಗ್ಗೆ ಹಾಗೂ ಇಡೀ ಕುಟುಂಬದೊಂದಿಗೆ ಆನಂದವಾಗಿದ್ದ ಅನುಭವಗಳನ್ನು ಸಹ ತಿಳಿಸಿದ್ದಾರೆ.
ಸಹವಾಸಿಗಳೇ, ನಮ್ಮ ದೇಶದಲ್ಲಿ ಪಾರಂಪರಿಕ ಆಟಗಳ ಸಮೃದ್ಧ ಆನುವಂಶಿಕತೆಯೇ ಇದೆ. ಅವುಗಳಲ್ಲಿ ಒಂದು ಆಟದ ಹೆಸರನ್ನು ನೀವು ಕೇಳಿದ್ದಿರಬಹುದು–ಅದು ಪಗಡೆ. ಈ ಆಟವನ್ನು ತಮಿಳುನಾಡಿನಲ್ಲಿ “ಪಲ್ಲಾಂಗುಳಿ’ ಎಂದು, ಕರ್ನಾಟಕದಲ್ಲಿ “ಅಳಿಗುಳಿ ಮಣೆ’ ಎಂದು ಮತ್ತು ಆಂಧ್ರಪ್ರದೇಶದಲ್ಲಿ “ವಾಮನ ಗುಂಟಲೂ’ ಎನ್ನುವ ಹೆಸರಿನಲ್ಲಿ ಆಡಲಾಗುತ್ತದೆ. ಇದೊಂದು ರೀತಿಯ ತಂತ್ರಗಾರಿಕೆಯ ಆಟವಾಗಿದೆ. ಇದರಲ್ಲಿ ಮಣೆಯ ಉಪಯೋಗ ಮಾಡಲಾಗುತ್ತದೆ. ಅನೇಕ ಗುಳಿಗಳಿರುತ್ತವೆ, ಅವುಗಳಲ್ಲಿ ಬಳಸುವ ಗೋಲಿ ಅಥವಾ ಬೀಜಗಳನ್ನು ಆಟಗಾರರು ಹಿಡಿಯಬೇಕಿರುತ್ತದೆ. ಈ ಆಟವನ್ನು ದಕ್ಷಿಣ ಭಾರತದಿಂದ ದಕ್ಷಿಣ–ಪೂರ್ವ ಏಷ್ಯಾ ಹಾಗೂ ಇಡೀ ಜಗತ್ತಿನಲ್ಲಿ ಆಡಲಾಗುತ್ತದೆ ಎಂದು ಹೇಳಲಾಗುತ್ತದೆ.
ಜತೆಗಾರರೇ, ಇಂದು ಪ್ರತಿಯೊಂದು ಮಗುವೂ ಹಾವು–ಏಣಿ ಆಟವನ್ನು ಆಡುವುದನ್ನು ತಿಳಿದಿದೆ. ಆದರೆ, ಇದು ಸಹ ಭಾರತೀಯ ಪಾರಂಪರಿಕ ರೂಪದ ಆಟವೇ ಆಗಿದ್ದು, ಇದಕ್ಕೆ ಮೋಕ್ಷ ಪಟ ಅಥವಾ ಪರಮಪದ ಎಂದು ಹೇಳಲಾಗುತ್ತದೆ. ನಮ್ಮಲ್ಲಿನ ಇನ್ನೊಂದು ಪಾರಂಪರಿಕ ಆಟವೆಂದರೆ, ಹರಳಿನ ಆಟ. ಇದನ್ನು ದೊಡ್ಡವರು ಚಿಕ್ಕವರೆಲ್ಲರೂ ಆಡುತ್ತಾರೆ. ಒಂದೇ ಗಾತ್ರದ ಐದು ಕಲ್ಲಿನ ಹರಳುಗಳನ್ನು ಆಯ್ದುಕೊಂಡು ಈ ಆಟವನ್ನು ಆಡಲು ಸಿದ್ಧರಾಗಬಹುದು. ಒಂದು ಕಲ್ಲನ್ನು ಮೇಲಕ್ಕೆ ಎಸೆದು ಅದು ಮೇಲೆ ಗಾಳಿಯಲ್ಲಿರುವ ಅಲ್ಪ ಅವಧಿಯಲ್ಲೇ ಕೆಳಗ್ಗೆ ಬಿದ್ದಿರುವ ಉಳಿದ ಕಲ್ಲುಗಳನ್ನು ಆರಿಸಬೇಕಿರುತ್ತದೆ. ಸಾಮಾನ್ಯವಾಗಿ, ನಮ್ಮ ನೆಲದ ಒಳಾಂಗಣ ಆಟಗಳನ್ನು ಆಡಲು ಯಾವುದೇ ದೊಡ್ಡ ಸಾಧನಗಳ ಅಗತ್ಯವಿಲ್ಲ. ಯಾರಾದರೂ ಒಂದು ಚಾಕ್ ಪೀಸ್ ಅಥವಾ ಕಲ್ಲನ್ನು ತಂದರೂ ಅದರಿಂದಲೇ ನೆಲದ ಮೇಲೆ ಒಂದು ಚಿತ್ರ ಬಿಡಿಸಿ ಆಡವಾಡಲು ಆರಂಭಿಸುತ್ತಾರೆ. ಯಾವ ಆಟದಲ್ಲಿ ದಾಳಗಳ ಅಗತ್ಯವಿದೆಯೋ ಅಲ್ಲೆಲ್ಲ ಕವಡೆಗಳು ಅಥವಾ ಹುಣಸೆಹಣ್ಣಿನ ಬೀಜಗಳಿಂದಲೇ ಕೆಲಸವಾಗುತ್ತದೆ.
ಸ್ನೇಹಿತರೇ, ಈ ಮಾತುಗಳನ್ನು ನಾನು ಆಡುತ್ತಿದ್ದಂತೆಯೇ ನಿಮ್ಮಲ್ಲಿ ಎಷ್ಟೋ ಜನರು ನಿಮ್ಮ ಬಾಲ್ಯಕ್ಕೆ ಹೋಗಿದ್ದಿರಬಹುದು, ನಿಮಗೆಷ್ಟು ಬಾಲ್ಯದ ದಿನಗಳ ನೆನಪು ಬರುತ್ತಿರಬಹುದು ಎಂಬುದು ನನಗೆ ಅರಿವಾಗುತ್ತಿದೆ. ನಾನೇನು ಹೇಳುತ್ತೇನೆಂದರೆ, ಆ ದಿನಗಳನ್ನು ತಾವು ಮರೆತಿದ್ದಾದರೂ ಯಾಕೆ? ಅಂಥ ಆಟಗಳನ್ನೆಲ್ಲ ಯಾಕೆ ಮರೆತಿರಿ? ಮನೆಯ ಅಜ್ಜ–ಅಜ್ಜಿ, ಅಪ್ಪ–ಅಮ್ಮಂದಿರು ಹಾಗೂ ಇತರ ಹಿರಿಯರಲ್ಲಿ ನನ್ನ ಒತ್ತಾಯವೆಂದರೆ, ಹೊಸ ಪೀಳಿಗೆಗೆ ಈ ಆಟಗಳ ಬಗ್ಗೆ ತಾವು ತಿಳಿಸಿಕೊಡದಿದ್ದರೆ ಇನ್ಯಾರು ತಿಳಿಸಿಯಾರು? ಹೀಗಾಗಿ, ಇವುಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡಿ. ಆನ್ ಲೈನ್ ಶಿಕ್ಷಣದ ಬಗ್ಗೆ ಚರ್ಚೆ ನಡೆದಿರುವ ಸಂದರ್ಭದಲ್ಲಿ, ಸಮನ್ವಯ ಸಾಧಿಸಲು ಅನುಕೂಲವಾಗುವಂತೆ, ಆನ್ ಲೈನ್ ಆಟಗಳಿಂದ ಮುಕ್ತಿ ಪಡೆದು ನಾವು ನಮ್ಮ ಪರಂಪರಾಗತ ಆಟಗಳನ್ನು ಆಡಲೇಬೇಕಾಗಿದೆ. ನಮ್ಮ ಯುವ ಪೀಳಿಗೆಗೆ, ನಮ್ಮ ಸ್ಟಾರ್ಟ್ ಅಪ್ಗಳಿಗೂ ಇಲ್ಲಿ ಒಂದು ಹೊಸ ಅವಕಾಶವಿದೆ. ಬಹಳ ಉತ್ತಮ ಅವಕಾಶ ಇದಾಗಿದೆ. ನಾವು ಭಾರತದ ಪಾರಂಪರಿಕ ಒಳಾಂಗಣ ಆಟಗಳನ್ನು ಹೊಸ ಹಾಗೂ ಆಕರ್ಷಕ ರೂಪದಲ್ಲಿ ಪ್ರಸ್ತುತಪಡಿಸೋಣ. ಇದಕ್ಕೆ ಸಂಬಂಧಿಸಿದ ಆಟಿಕೆಗಳನ್ನು ತಯಾರಿಸುವವರು, ಪೂರೈಕೆ ಮಾಡುವವರು, ಸ್ಟಾರ್ಟ್ ಅಪ್ ಆರಂಭಿಸುವವರು ಸಾಕಷ್ಟು ಜನಪ್ರಿಯವಾಗುತ್ತಾರೆ. ಮತ್ತು ನಾವು ಇದನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ, ನಮ್ಮ ಭಾರತೀಯ ಆಟಗಳು ಸ್ಥಳೀಯವಾಗಿವೆ, ಲೋಕಲ್ಗೆ ವೋಕಲ್ ಬಗ್ಗೆ ನಾವು ಹಿಂದೆಯೇ ಪ್ರತಿಜ್ಞೆ ಮಾಡಿದ್ದೇವೆ. ನನ್ನ ಬಾಲ ಸ್ನೇಹಿತರಿಗೆ, ಪ್ರತಿ ಮನೆಯ ಮಕ್ಕಳಿಗೆ ಹಾಗೂ ಪುಟ್ಟ ಜತೆಗಾರರಿಗೆ ನಾನೊಂದು ಒತ್ತಾಯ ಮಾಡುತ್ತೇನೆ. ಮಕ್ಕಳೇ, ನೀವು ನನ್ನ ಮಾತನ್ನು ಒಪ್ಪಿಕೊಳ್ಳುತ್ತೀರಿ ಅಲ್ಲವೇ? ನೋಡಿ, ನಾನೇನು ಹೇಳುತ್ತೀನೋ ಅದನ್ನು ಖಂಡಿತವಾಗಿ ಮಾಡಿ. ಯಾವಾಗ ಸ್ವಲ್ಪ ಸಮಯ ಸಿಗುತ್ತದೆಯೋ ಆಗ ಪಾಲಕರಲ್ಲಿ ಕೇಳಿಕೊಂಡು ಮೊಬೈಲ್ ತೆಗೆದುಕೊಳ್ಳಿ. ತಮ್ಮ ಅಪ್ಪ–ಅಮ್ಮ ಹಾಗೂ ಅಜ್ಜ–ಅಜ್ಜಿ ಮತ್ತು ಮನೆಯಲ್ಲಿ ಯಾರೆಲ್ಲ ಹಿರಿಯರು ಇರುತ್ತಾರೋ ಅವರನ್ನೆಲ್ಲ ಮಾತನಾಡಿಸಿ, ಸಂದರ್ಶನ ಮಾಡಿ, ತಮ್ಮ ಮೊಬೈಲ್ ಫೆÇೀನ್ ನಲ್ಲಿ ರೆಕಾರ್ಡ್ ಮಾಡಿ. ನೀವು ಟಿವಿಯಲ್ಲಿ ನೋಡಿರುತ್ತೀರಿ. ಪತ್ರಕರ್ತ ಹೇಗೆ ಸಂದರ್ಶನ ಮಾಡುತ್ತಾರೋ ಹಾಗೆಯೇ ನೀವೂ ಸಂದರ್ಶನ ಮಾಡಿ. ನೀವು ಅವರಿಗೆ ಏನು ಪ್ರಶ್ನೆ ಕೇಳುತ್ತೀರಿ? ಈ ಬಗ್ಗೆ ನಾನು ಸಲಹೆ ಕೊಡುತ್ತೇನೆ. ಬಾಲ್ಯದಲ್ಲಿ ಅವರ ಜೀವನಶೈಲಿ ಹೇಗಿತ್ತು? ಅವರು ಯಾವ ಯಾವ ಆಟಗಳನ್ನು ಆಡುತ್ತಿದ್ದರು? ಯಾವಾಗಲಾದರೂ ನಾಟಕ ನೋಡಲು ಹೋಗುತ್ತಿದ್ದರಾ? ಸಿನಿಮಾ ನೋಡಲು ಹೋಗುತ್ತಿದ್ದರಾ? ಯಾವಾಗಲಾದರೂ ರಜೆಯಲ್ಲಿ ಮಾವನ ಮನೆಗೆ ಹೋಗುತ್ತಿದ್ದರಾ? ಹೊಲಕ್ಕೆ ಹೋಗುತ್ತಿದ್ದರಾ? ಹಬ್ಬಗಳನ್ನು ಹೇಗೆ ಮಾಡುತ್ತಿದ್ದರು? ಎಂದೆಲ್ಲ ಅನೇಕ ಪ್ರಶ್ನೆಗಳನ್ನು ಅವರಿಗೆ ಕೇಳಬಹುದು. ಅವರಿಗೂ 40, 50, 60 ವರ್ಷಗಳ ಹಿಂದಕ್ಕೆ ಹೋಗಿ ತಮ್ಮ ಜೀವನವನ್ನು ನೆನಪಿಸಿಕೊಳ್ಳಲು ಬಹಳ ಆನಂದವಾಗುತ್ತದೆ. ಮತ್ತು ಈ ಮೂಲಕ ನಿಮಗೂ 40-50 ವರ್ಷಗಳ ಹಿಂದಿನ ಹಿಂದುಸ್ತಾನ ಹೇಗಿತ್ತು, ನೀವು ವಾಸಿಸುತ್ತಿರುವ ಪ್ರದೇಶ ಹೇಗಿತ್ತು? ಅಲ್ಲಿನ ಪರಿಸರ ಹೇಗಿತ್ತು? ಜನರ ಜೀವನ ವಿಧಾನಗಳು ಹೇಗಿದ್ದವು? ಎನ್ನುವ ಎಲ್ಲ ಮಾಹಿತಿಯನ್ನು ಅತ್ಯಂತ ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನೀವೇ ನೋಡಿ, ನಿಮಗೆ ಇದು ಬಹಳ ಮೋಜೆನಿಸುತ್ತದೆ. ಅಲ್ಲದೆ, ಕುಟುಂಬದ ಈ ಅಮೂಲ್ಯ ನೆನಪಿನ ಖಜಾನೆಯನ್ನು ನೀವು ಒಂದೊಳ್ಳೆಯ ವಿಡಿಯೋ ಆಲ್ಬಮ್ ನಂತೆಯೂ ನಿರ್ಮಿಸಬಹುದು.
ಸಂಗಾತಿಗಳೇ, ಆತ್ಮಕತೆ ಅಥವಾ ಜೀವನಚರಿತ್ರೆಗಳು ಇತಿಹಾಸದ ಸತ್ಯವನ್ನು ಬಹಳ ಸಮೀಪದಿಂದ ಅರಿಯಲು ಬಹಳ ಉಪಯೋಗವಾಗುತ್ತವೆ ಎನ್ನುವುದು ದಿಟ. ತಾವೂ ಸಹ ತಮ್ಮ ಹಿರಿಯರೊಂದಿಗೆ ಮಾತನಾಡಿದರೆ, ಅವರ ಕಾಲ, ಅವರ ಬಾಲ್ಯ, ಯೌವನದ ದಿನಗಳ ಕುರಿತು ಸುಲಭವಾಗಿ ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಹಿರಿಯರಿಗೂ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ತಾವು ತಮ್ಮ ಬಾಲ್ಯ, ಬದುಕಿನ ಬಗ್ಗೆ ತಮ್ಮ ಮನೆಯ ಮಕ್ಕಳಿಗೆ ಈ ರೀತಿ ತಿಳಿಸಬಹುದಾಗಿದೆ.
ಸಹವಾಸಿಗಳೇ, ದೇಶದ ಬಹುತೇಕ ಭಾಗದಲ್ಲಿ ಈಗ ಮುಂಗಾರು ಆಗಮಿಸಿದೆ. ಹವಾಮಾನ ವಿಜ್ಞಾನಿಗಳೂ ಈ ಬಾರಿಯ ಮಳೆಯ ಕುರಿತು ಸಾಕಷ್ಟು ಉತ್ಸಾಹಿತರಾಗಿದ್ದಾರೆ, ಸಾಕಷ್ಟು ಭರವಸೆಯನ್ನೂ ಇರಿಸಲಾಗಿದೆ. ಉತ್ತಮ ಮಳೆಯಾದರೆ ನಮ್ಮ ರೈತರ ಬೆಳೆಯೂ ಸಹ ಉತ್ತಮವಾಗುತ್ತದೆ, ವಾತಾವರಣವೂ ಹಸಿರಿನಿಂದ ತುಂಬುತ್ತದೆ. ಮಳೆಯ ಕಾಲದಲ್ಲಿ ಪ್ರಕೃತಿ ಕೂಡ ತನ್ನನ್ನು ತಾನು ನವೀಕರಿಸಿಕೊಳ್ಳುತ್ತದೆ. ಮಾನವ ಪ್ರಾಕೃತಿಕ ಸಂಪನ್ಮೂಲಗಳನ್ನು ಎಷ್ಟೆಲ್ಲ ದುರ್ಬಳಕೆ ಮಾಡುತ್ತಾನೆ, ಪ್ರಕೃತಿ ಒಂದು ರೀತಿಯಲ್ಲಿ ಮಳೆಗಾಲದಲ್ಲಿ ಈ ನಷ್ಟವನ್ನು ಭರಿಸಿಕೊಳ್ಳುತ್ತದೆ. ಮರುಪೂರಣ ಮಾಡಿಕೊಳ್ಳುತ್ತದೆ. ಆದರೆ, ನಾವೂ ಭೂ ಮಾತೆಗೆ ಸಹಕಾರ ನೀಡಿದರೆ ಮಾತ್ರ ಈ ಮರುಪೂರಣ ಕಾರ್ಯ ನಡೆಯಲು ಸಾಧ್ಯ. ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ. ನಮ್ಮಿಂದ ನಡೆಯುವ ಕಿರು ಪ್ರಯತ್ನವೂ ಸಹ ಪ್ರಕೃತಿಗೆ, ಪರಿಸರಕ್ಕೆ ಬಹಳ ಸಹಾಯ ಮಾಡುತ್ತದೆ. ನಮ್ಮ ಅನೇಕ ದೇಶ ಬಾಂಧವರು ಈ ದಿಸೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದ ಮಂಡ್ಯದಲ್ಲಿ 80-85 ವಯೋಮಾನದ ಒಬ್ಬ ಹಿರಿಯರಿದ್ದಾರೆ. ಅವರು ಕಾಮೇಗೌಡ, ಅವರೊಬ್ಬ ಸಾಮಾನ್ಯ ರೈತ. ಆದರೆ ಅವರ ವ್ಯಕ್ತಿತ್ವ ಅಸಾಧಾರಣ. ಅವರು ಮಾಡಿರುವ ಕೆಲಸವನ್ನು ಕೇಳಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. 80-85 ವರ್ಷದ ಕಾಮೇಗೌಡರು ತಮ್ಮ ಜಾನುವಾರುಗಳನ್ನು ಮೇಯಿಸುತ್ತಾರೆ, ಆದರೆ, ಜತೆಜತೆಗೇ ತಮ್ಮ ಜಮೀನಿನಲ್ಲಿ ಹೊಸ ಕೆರೆಯೊಂದನ್ನು ನಿರ್ಮಿಸುವ ಕೈಂಕರ್ಯವನ್ನೂ ಮಾಡುತ್ತಾರೆ. ಅವರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಬಯಸುತ್ತಾರೆ. ಜಲ ಸಂರಕ್ಷಣೆಗಾಗಿ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸುವ ಕಾಯಕದಲ್ಲಿ ಅವರು ತಲ್ಲೀನರಾಗಿರುತ್ತಾರೆ. 80-85 ವಯೋಮಾನದ ಕಾಮೇಗೌಡರು ಇಲ್ಲಿಯವರೆಗೆ ಸುಮಾರು 16 ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಕೇಳಿದರೆ ನೀವು ಚಕಿತರಾಗುತ್ತೀರಿ. ಇವೆಲ್ಲವನ್ನೂ ಅವರು ತಮ್ಮ ಪ್ರಯತ್ನದಿಂದ, ಪರಿಶ್ರಮದಿಂದಲೇ ನಿರ್ಮಿಸಿದ್ದಾರೆ. ಅವರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು. ಇವರ ಕೆರೆಗಳಿಂದ ಇಂದು ಆ ಇಡೀ ಪ್ರದೇಶಕ್ಕೆ ಹೊಸ ಜೀವನ ಸಿಕ್ಕಿದೆ.
ಸ್ನೇಹಿತರೇ, ಗುಜರಾತಿನ ವಡೋದರದಲ್ಲೂ ಒಂದು ಉದಾಹರಣೆ ಬಹಳ ಪ್ರೇರಣಾದಾಯಕವಾಗಿದೆ. ಇಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನ ಸೇರಿ ಒಂದು ಹೃದಯಂಗಮ ಅಭಿಯಾನವನ್ನು ನಡೆಸಿದರು. ಈ ಅಭಿಯಾನದ ಕಾರಣದಿಂದ ಇಂದು ವಡೋದರಲ್ಲಿ ಒಂದು ಸಾವಿರ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವಾಗಿದೆ. ಈ ಮೂಲಕ, ಪ್ರತಿ ವರ್ಷ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಸರಿಸುಮಾರು 10 ಕೋಟಿ ಲೀಟರ್ ನೀರನ್ನು ರಕ್ಷಿಸಿ ಸಂಗ್ರಹಿಸಲಾಗುತ್ತಿದೆ.
ಸ್ನೇಹಿತರೇ, ಈ ಮಳೆಗಾಲದಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಗೆಂದು ನಾವೂ ಸಹ ಇದೇ ರೀತಿಯಲ್ಲಿ ಚಿಂತನೆ ಮಾಡುವ, ಕಾರ್ಯಪ್ರವೃತ್ತರಾಗುವ ನಿಟ್ಟಿನಲ್ಲಿ ಸಾಗಬೇಕಿದೆ. ಈಗ ಬಹಳಷ್ಟು ಕಡೆಗಳಲ್ಲಿ ಗಣೇಶ ಚತುರ್ಥಿಯ ಸಿದ್ಧತೆಗಳು ನಡೆದಿರಬೇಕು. ಈ ಬಾರಿ, ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ನಿರ್ಮಿಸುವ ಬಗ್ಗೆ ನಾವು ಪ್ರಯತ್ನಿಸಬಹುದಲ್ಲವೇ? ಹಾಗೂ ಅವುಗಳನ್ನು ಪೂಜಿಸಬಹುದಲ್ಲವೇ? ಹೀಗೆ ಮಾಡುವ ಮೂಲಕ ನಾವು ನದಿ, ಕೆರೆಗಳಲ್ಲಿ ವಿಸರ್ಜಿಸಿದ ಬಳಿಕ ನೀರಿಗೆ ಹಾಗೂ ನೀರಿನಲ್ಲಿ ವಾಸಿಸುವ ಜೀವಿಗಳಿಗೆ ಸಂಕಟ ತರುವ ಗಣೇಶ ಮೂರ್ತಿಗಳನ್ನು ಪೂಜೆ ಮಾಡುವುದರಿಂದ ದೂರವಿರಬಹುದು. ತಾವು ಇದನ್ನು ಖಂಡಿತವಾಗಿ ನೆರವೇರಿಸುತ್ತೀರಿ ಎನ್ನುವ ವಿಶ್ವಾಸ ನನಗಿದೆ. ಈ ಎಲ್ಲ ಮಾತುಗಳ ಮಧ್ಯೆ, ಮಳೆಗಾಲದಲ್ಲಿ ಅನೇಕ ರೋಗಗಳು ಬರುತ್ತವೆ ಎನ್ನುವುದನ್ನೂ ನಾವು ನೆನಪಿಡಬೇಕಿದೆ. ಕೊರೋನಾ ಕಾಲದಲ್ಲಿ ಇವುಗಳಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಆಯುರ್ವೇದದ ಔಷಧಗಳು, ಕಷಾಯಗಳು, ಬಿಸಿ ನೀರು…ಇವುಗಳನ್ನು ಬಳಕೆ ಮಾಡುತ್ತ ಆರೋಗ್ಯದಿಂದಿರಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಜೂನ್ 28ರಂದು ಭಾರತ ದೇಶವು ನಮ್ಮ ಹಿಂದಿನ ಪ್ರಧಾನಮಂತ್ರಿಯೊಬ್ಬರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರು ಅತ್ಯಂತ ಸೂಕ್ಷ್ಮ ಸಮಯದಲ್ಲಿ ದೇಶವನ್ನು ಮುನ್ನಡೆಸಿದ್ದಾರೆ. ಅವರೇ ಹಿಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್. ಅವರ ಜನ್ಮಶತಾಬ್ದಿ ವರ್ಷ ಇಂದಿನಿಂದ ಆರಂಭವಾಗುತ್ತಿದೆ. ಪಿ.ವಿ. ನರಸಿಂಹರಾವ್ ಅವರ ಬಗ್ಗೆ ಮಾತನಾಡುವಾಗ, ಸ್ವಾಭಾವಿಕ ರೂಪದಲ್ಲಿ ಹಾಗೂ ರಾಜಕೀಯ ನೇತಾರನ ರೂಪದಲ್ಲಿ ಅವರ ಚಿತ್ರ ಕಣ್ಮುಂದೆ ಬರುತ್ತದೆ. ಅವರು ಅನೇಕ ಭಾμÉಗಳನ್ನು ಅರಿತಿದ್ದರು ಎನ್ನುವುದೂ ಸತ್ಯ. ಭಾರತೀಯ ಹಾಗೆಯೇ ವಿದೇಶಿ ಭಾಷೆಗಳಲ್ಲಿಯೂ ಅವರು ಮಾತನಾಡುತ್ತಿದ್ದರು. ಒಂದು ರೀತಿಯಲ್ಲಿ ಅವರು ಭಾರತೀಯ ಮೌಲ್ಯಗಳಿಂದ ರೂಪುಗೊಂಡಿದ್ದರೆ, ಇನ್ನೊಂದು ಕಡೆ ಪಾಶ್ಚಾತ್ಯ ಸಾಹಿತ್ಯದ ಹಾಗೂ ವಿಜ್ಞಾನದ ಬಗ್ಗೆಯೂ ಜ್ಞಾನ ಹೊಂದಿದ್ದರು. ಅವರು ಭಾರತದ ಅತ್ಯಂತ ಅನುಭವಿ ನೇತಾರರಲ್ಲಿ ಒಬ್ಬರಾಗಿದ್ದರು. ಅವರ ಜೀವನದ ಮತ್ತೊಂದು ಅಂಶವೂ ಉಲ್ಲೇಖನೀಯವಾಗಿದೆ, ಅದರ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಸ್ನೇಹಿತರೇ, ನರಸಿಂಹರಾವ್ ಅವರು ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಹೈದರಾಬಾದ್ ನಿಜಾಮ ವಂದೇ ಮಾತರಂ ಗೀತೆಗೆ ಅನುಮತಿ ನೀಡಲು ನಿರಾಕರಿಸಿದ್ದ ಸಮಯದಲ್ಲಿ ಆತನ ವಿರುದ್ಧ ನಡೆದಿದ್ದ ಆಂದೋಲನದಲ್ಲಿ ನರಸಿಂಹರಾವ್ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಸಣ್ಣ ವಯಸ್ಸಿನಿಂದಲೇ ಶ್ರೀಮಾನ್ ನರಸಿಂಹ ರಾವ್ ಅವರು ಅನ್ಯಾಯದ ವಿರುದ್ಧ ದನಿ ಎತ್ತುವಲ್ಲಿ ಮುಂಚೂಣಿಯಲ್ಲಿದ್ದರು. ತಮ್ಮ ದನಿಯನ್ನು ಎತ್ತುವಲ್ಲಿ ಅವರು ಯಾವುದೇ ಪ್ರಯತ್ನವನ್ನೂ ಬಾಕಿ ಉಳಿಸುತ್ತಿರಲಿಲ್ಲ. ನರಸಿಂಹ ರಾವ್ ಅವರು ಇತಿಹಾಸವನ್ನು ಸಹ ಬಹಳ ಚೆನ್ನಾಗಿ ಅರಿತಿದ್ದರು. ಅತ್ಯಂತ ಸಾಧಾರಣ ಹಿನ್ನೆಲೆಯಿಂದ ಮೇಲೆ ಬಂದಿದ್ದು, ಶಿಕ್ಷಣದ ಮೇಲೆ ಅವರ ಹಿಡಿತ, ಕಲಿಯುವ ಪ್ರವೃತ್ತಿ ಹಾಗೂ ಇವೆಲ್ಲದರ ಜತೆಗೆ, ಅವರ ನೇತೃತ್ವ ಸಾಮಥ್ರ್ಯ ಎಲ್ಲವೂ ಸ್ಮರಣೀಯ. ನರಸಿಂಹ ರಾವ್ ಅವರ ಜನ್ಮಶತಾಬ್ದಿ ವರ್ಷದಲ್ಲಿ ತಾವೆಲ್ಲ ಅವರ ಜೀವನ ಹಾಗೂ ವಿಚಾರಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿ ಎಂದು ನಾನು ಆಗ್ರಹಿಸುತ್ತೇನೆ. ನಾನು ಮತ್ತೊಮ್ಮೆ, ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿ “ಮನ್ ಕಿ ಬಾತ್’ ನಲ್ಲಿ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಯಿತು. ಮುಂದಿನ ಬಾರಿ ನಾವು ಇನ್ನಷ್ಟು ಹೊಸ ವಿಷಯಗಳ ಬಗ್ಗೆ ಮಾತಾಡೋಣ. ತಾವು, ತಮ್ಮ ಸಂದೇಶ ಹಾಗೂ ಅನ್ವೇಷಣಾತ್ಮಕ ಹೊಸ ವಿಚಾರಧಾರೆಗಳನ್ನು ನನಗೆ ಖಂಡಿತವಾಗಿ ಕಳಿಸಿ. ನಾವೆಲ್ಲರೂ ಸೇರಿ ಮುಂದೆ ಸಾಗೋಣ. ಮುಂದಿನ ದಿನಗಳು ಇನ್ನಷ್ಟು ಸಕಾರಾತ್ಮಕವಾಗುತ್ತವೆ. ನಾನು ಮೊದಲೇ ಹೇಳಿದಂತೆ, ಇದೇ ವರ್ಷವನ್ನು ಅಂದರೆ, 2020ರಲ್ಲಿಯೇ ನಾವು ಸಾಧನಗೈಯ್ಯೋಣ, ನಾವು ಉತ್ತಮವಾಗಿಸೋಣ, ನಾವೂ ಮುಂದೆ ಸಾಗೋಣ, ದೇಶವೂ ಹೊಸ ಔನ್ನತ್ಯವನ್ನು ಸಾಧಿಸಲಿ. ಭಾರತಕ್ಕೆ ಈ ದಶಕ ಹೊಸ ದಿಕ್ಕನ್ನು ನೀಡುವ ವರ್ಷವಾಗಿ 2020 ಸಾಬೀತಾಗುತ್ತದೆ ಎನ್ನುವ ಭರವಸೆ ನನಗಿದೆ. ಇದೇ ಭರವಸೆಯೊಂದಿಗೆ ತಾವೂ ಮುಂದೆ ಸಾಗಿ ಆರೋಗ್ಯವಂತರಾಗಿರಿ, ಧನಾತ್ಮಕ ದೃಷ್ಟಿಕೋನದಿಂದಿರಿ. ಈ ಶುಭಕಾಮನೆಗಳೊಂದಿಗೆ ತಮಗೆಲ್ಲರಿಗೂ ಅಪಾರ ಧನ್ಯವಾದಗಳು.
ನಮಸ್ಕಾರ.
‘ಮನ್ ಕಿ ಬಾತ್ 2.0’ ನ 12 ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ಸಾಮೂಹಿಕ ಪ್ರಯತ್ನಗಳ ಮೂಲಕ ದೇಶದಲ್ಲಿ ಕೊರೊನಾ ವಿರುದ್ಧದ ಯುದ್ಧವನ್ನು ತೀವ್ರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ಆರ್ಥಿಕತೆಯ ಪ್ರಮುಖ ವಿಭಾಗವನ್ನು ತೆರೆಯಲಾಗಿದ್ದರೂ ಸಹ ಜನರು ಕೋವಿಡ್ ಸಾಂಕ್ರಾಮಿಕದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಹೆಚ್ಚು ಮತ್ತು ಜಾಗರೂಕಕತೆಯಿಂದ ಇರಬೇಕು ಎಂದು ಅವರು ಹೇಳಿದರು.
ಶ್ರಮಿಕ್ ವಿಶೇಷ ರೈಲುಗಳು ಮತ್ತು ವಿಶೇಷ ರೈಲುಗಳು ಸೇರಿದಂತೆ ರೈಲು ಸೇವೆಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪುನರಾರಂಭಗೊಂಡಿವೆ ಎಂದು ಪ್ರಧಾನಿ ಹೇಳಿದರು. ವಿಮಾನ ಸೇವೆಗಳು ಪುನರಾರಂಭಗೊಂಡಿವೆ ಮತ್ತು ಉದ್ಯಮವೂ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಅವರು ಹೇಳಿದರು. ಆದರೂ ಯಾವುದೇ ಅಲಕ್ಷ್ಯ ತೋರಿಸಬಾರದು ಎಂದು ಅವರು ಎಚ್ಚರಿಸಿದರು ಮತ್ತು ಜನರು ‘ದೋ ಗಜ್ ಕಿ ದೂರಿ’ (ಎರಡು ಗಜಗಳಷ್ಟು ದೂರ) ಪಾಲಿಸಲು, ಮುಖಗವಸುಗಳನ್ನು ಧರಿಸಲು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲಿಯೇ ಇರಲು ಜನರಿಗೆ ಸೂಚಿಸಿದರು. ಅನೇಕ ಸಂಕಷ್ಟಗಳ ನಡುವೆ ದೇಶದ ಪರಿಸ್ಥಿತಿಯನ್ನು ನಿಭಾಯಿಸಿರುವುದು ಈಗ ವ್ಯರ್ಥವಾಗಬಾರದು ಎಂದು ಅವರು ಒತ್ತಿ ಹೇಳಿದರು.
ಜನತೆಯು ತೋರಿಸಿದ ಸೇವಾ ಮನೋಭಾವವನ್ನು ಶ್ಲಾಘಿಸಿದ ಪ್ರಧಾನಿಯವರು, ಇದೊಂದು ದೊಡ್ಡ ಶಕ್ತಿ ಎಂದು ಕರೆದರು. ನಾವು ಸೇವೆಯೇ ಪರಮ ಧರ್ಮ ಎಂದು ನಂಬಿದ್ದೇವೆ; ಸೇವೆಯು ಸ್ವತಃ ಒಂದು ಸಂತೋಷವಾಗಿದೆ. ಸೇವೆ ಸ್ವತಃ ತೃಪ್ತಿದಾಯಕವಾದದ್ದು ಎಂದರು. ದೇಶಾದ್ಯಂತದ ವೈದ್ಯಕೀಯ ಸೇವೆಗಳ ಸಿಬ್ಬಂದಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಪ್ರಧಾನಿ, ವೈದ್ಯರು, ಶುಶ್ರೂಷಾ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಮತ್ತು ದೇಶದ ಮಾಧ್ಯಮದವರ ಸೇವೆಯ ಉತ್ಸಾಹವನ್ನು ಶ್ಲಾಘಿಸಿದರು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಗಮನಾರ್ಹ ಕಾರ್ಯವನ್ನು ಅವರು ಶ್ಲಾಘಿಸಿದರು.
ಈ ಬಿಕ್ಕಟ್ಟಿನ ಸಮಯದಲ್ಲಿ ಇತರರಿಗೆ ನೆರವಾಗಲು ಶ್ರಮಿಸಿದ ತಮಿಳುನಾಡಿನ ಕೆ.ಸಿ.ಮೋಹನ್, ಅಗರ್ತಲಾದ ಗೌತಮ್ ದಾಸ್, ಪಠಾಣ್ಕೋಟ್ನ ದಿವ್ಯಾಂಗ ರಾಜು ಅವರಂತಹ ಜನಸಾಮಾನ್ಯರ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳ ಪರಿಶ್ರಮದ ಹಲವಾರು ಕಥೆಗಳು ದೇಶದ ಮೂಲೆ ಮೂಲೆಗಳಿಂದ ಮುನ್ನೆಲೆಗೆ ಬರುತ್ತಿವೆ ಎಂದು ಅವರು ಹೇಳಿದರು.
ಈ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ವ್ಯಕ್ತಿಗತವಾಗಿ ಸಕ್ರಿಯ ಪಾತ್ರ ವಹಿಸಿದ್ದಕ್ಕಾಗಿ ಪ್ರಧಾನಿಯವರು ಅನೇಕರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್ಗೆ ಜೋಡಿಸಲಾಗುವ ನೈರ್ಮಲ್ಯ ಯಂತ್ರವನ್ನು ರೂಪಿಸಿದ ನಾಸಿಕ್ನ ರಾಜೇಂದ್ರ ಯಾದವ್ ಅವರ ಉದಾಹರಣೆಯನ್ನು ಅವರು ನೀಡಿದರು. ‘ದೋ ಗಜ್ ಕಿ ದೂರಿ’ ಯನ್ನು ಪಾಲಿಸಲು ಅನೇಕ ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ದೊಡ್ಡ ಪೈಪ್ ಲೈನ್ಗಳನ್ನು ಸ್ಥಾಪಿಸಿದ್ದಾರೆ ಎಮದು ಅವರು ಹೇಳಿದರು.
ಸಾಂಕ್ರಾಮಿಕ ರೋಗದಿಂದಾಗಿ ಜನರಿಗಾಗಿರುವ ನೋವು ಮತ್ತು ಸಂಕಷ್ಟಗಳ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡ ಪ್ರಧಾನಿಯವರು, ಕೊರೊನಾ ವೈರಸ್ ಸಮಾಜದ ಎಲ್ಲಾ ವರ್ಗದವರನ್ನು ಬಾಧಿಸಿದೆ ಆದರೆ ಬಡಕಾರ್ಮಿಕರು ಮತ್ತು ಕೆಲಸಗಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೇಂದ್ರ, ರಾಜ್ಯ ಸರ್ಕಾರಗಳು, ಪ್ರತಿಯೊಂದು ಇಲಾಖೆ ಮತ್ತು ಸಂಸ್ಥೆಗಳು ಪರಿಹಾರಕ್ಕಾಗಿ ಸಂಪೂರ್ಣವಾಗಿ ಕೈ ಜೋಡಿಸಿವೆ ಎಂದು ಪ್ರಧಾನಿ ಹೇಳಿದರು. ಅವರು ಎಂತಹ ಪರಿಸ್ಥಿಯಲ್ಲಿದ್ದಾರೆಂದು ಇಡೀ ದೇಶವು ಅರ್ಥಮಾಡಿಕೊಳ್ಳುತ್ತದೆ ಮತ್ತು ಅವರ ನೆರವಿಗೆ ಕೇಂದ್ರ, ರಾಜ್ಯಗಳು, ಸ್ಥಳೀಯ ಆಡಳಿತಗಳೆಲ್ಲವೂ ದಿನದ 24 ಗಂಟೆಯೂ ಶ್ರಮಿಸುತ್ತಿವೆ ಎಂದು ಅವರು ಹೇಳಿದರು. ರೈಲು ಮತ್ತು ಬಸ್ಗಳಲ್ಲಿ ಲಕ್ಷಾಂತರ ಕಾರ್ಮಿಕರನ್ನು ಸುರಕ್ಷಿತವಾಗಿ ಸಾಗಿಸುವುದು, ಅವರಿಗೆ ಆಹಾರವನ್ನು ಒದಗಿಸುವುದು ಮತ್ತು ಪ್ರತಿ ಜಿಲ್ಲೆಯಲ್ಲೂ ಅವರಿಗೆ ಕ್ವಾರಂಟೈನ್ ಕೇಂದ್ರಗಳನ್ನು ಏರ್ಪಡಿಸುವಲ್ಲಿ ಶ್ರಮಪಡುತ್ತಿರುವವರನ್ನು ಅವರು ಶ್ಲಾಘಿಸಿದರು.
ಸಮಯದ ಅಗತ್ಯವು ಹೊಸ ಪರಿಹಾರವನ್ನು ಹುಡುಕುತ್ತದೆ ಎಂದು ಪ್ರಧಾನಿ ಹೇಳಿದರು. ಈ ದಿಕ್ಕಿನಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು. ಕೇಂದ್ರವು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳು ಗ್ರಾಮೋದ್ಯೋಗ, ಸ್ವಯಂ ಉದ್ಯೋಗ ಮತ್ತು ಸಣ್ಣ ಪ್ರಮಾಣದ ಉದ್ಯಮದಲ್ಲಿ ವ್ಯಾಪಕ ಸಾಧ್ಯತೆಗಳನ್ನು ತೆರೆದಿವೆ ಎಂದು ಅವರು ಹೇಳಿದರು. ಆತ್ಮನಿರ್ಭರ ಭಾರತ್ ಅಭಿಯಾನವು ಈ ದಶಕದಲ್ಲಿ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಎಲ್ಲೆಡೆ ಜನರು ‘ಯೋಗ’ ಮತ್ತು ‘ಆಯುರ್ವೇದ’ದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅದನ್ನು ಜೀವನ ವಿಧಾನವಾಗಿ ಅಳವಡಿಸಿಕೊಳ್ಳಲು ಬಯಸಿದ್ದಾರೆ ಎಂದರು. ಅವರು “ಸಮುದಾಯಕ್ಕೆ, ನಿರೋಧಕ ಶಕ್ತಿಗೆ ಮತ್ತು ಏಕತೆ” ಗಾಗಿ ಯೋಗವನ್ನು ಪ್ರತಿಪಾದಿಸಿದರು. ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ, ಯೋಗವು ಹೆಚ್ಚು ಮಹತ್ವದ್ದಾಗಿದೆ, ಏಕೆಂದರೆ ಈ ವೈರಸ್ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಯೋಗದಲ್ಲಿ, ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುವ ಅನೇಕ ರೀತಿಯ ಪ್ರಾಣಾಯಾಮಗಳಿವೆ ಮತ್ತು ಪ್ರಯೋಜನಕಾರಿ ಪರಿಣಾಮಗಳು ದೀರ್ಘಕಾಲದವರೆಗೆ ಇರುತ್ತವೆ ಎಂದರು.
ಇದಲ್ಲದೆ, ಆಯುಷ್ ಸಚಿವಾಲಯ ಆಯೋಜಿಸಿರುವ ಇಂಟರ್ನ್ಯಾಷನಲ್ ವಿಡಿಯೋ ಬ್ಲಾಗ್ ಸ್ಪರ್ಧೆ ‘ಮೈ ಲೈಫ್, ಮೈ ಯೋಗ’ ಗಾಗಿ ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳಬೇಕೆಂದು ಪ್ರಧಾನಿಯವರು ಜನರಿಗೆ ಕೋರಿದರು. ಈ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿ, ಮುಂಬರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಭಾಗವಾಗಬೇಕೆಂದು ಪ್ರಧಾನಿ ಮೋದಿ ವಿನಂತಿಸಿದರು.
ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಸರ್ಕಾರದ ಪ್ರಯತ್ನವನ್ನು ಪ್ರಧಾನಿಯವರು ಶ್ಲಾಘಿಸಿದರು ಮತ್ತು ‘ಆಯುಷ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳು ಒಂದು ಕೋಟಿಯನ್ನು ದಾಟಿರುವುದನ್ನು ಹೆಮ್ಮೆಯಿಂದ ಹಂಚಿಕೊಂಡರು. ‘ಆಯುಷ್ಮಾನ್ ಭಾರತ್’ ನ ಫಲಾನುಭವಿಗಳ ಜೊತೆಗೆ ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.
ನಾವು ಕೊರೊನಾವೈರಸ್ ವಿರುದ್ಧ ಹೋರಾಡುತ್ತಿದ್ದೇವೆ ಮತ್ತು ಆಂಫಾನ್ ಚಂಡಮಾರುತದಂತಹ ಅನಾಹುತಗಳನ್ನೂ ಎದುರಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು. ಆಂಫಾನ್ ಎಂಬ ಸೂಪರ್ ಚಂಡಮಾರುತದ ಸಮಯದಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಜನರು ತೋರಿದ ಧೈರ್ಯ ಮತ್ತು ಶೌರ್ಯವನ್ನು ಅವರು ಶ್ಲಾಘಿಸಿದರು. ಈ ರಾಜ್ಯಗಳಲ್ಲಿನ ರೈತರು ಅನುಭವಿಸಿದ ನಷ್ಟದ ಬಗ್ಗೆ ಅವರು ಸಹಾನುಭೂತಿ ವ್ಯಕ್ತಪಡಿಸಿದ ಪ್ರಧಾನಿವರು, ಆದರೆ ಅವರು ಎದುರಿಸಿದ ಅಗ್ನಿಪರೀಕ್ಷೆ ಮತ್ತು ತೋರಿಸಿದ ದಿಟ್ಟತನ ಶ್ಲಾಘನೀಯವಾದುದು ಎಂದರು.
ಚಂಡಮಾರುತದ ದುರಂತವಲ್ಲದೇ, ಮಿಡತೆ ದಾಳಿಯಿಂದ ದೇಶದ ಅನೇಕ ಭಾಗಗಳು ಸಮಸ್ಯೆ ಎದುರಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಹೇಗೆ ಪಟ್ಟುಬಿಡದೆ ಕೆಲಸ ಮಾಡುತ್ತಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು, ಇದರಿಂದಾಗಿ ದೇಶದಾದ್ಯಂತದ ಜನಸಾಮಾನ್ಯರು ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿಲ್ಲ ಎಂದರು. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳವರೆಗೆ, ಕೃಷಿ ಇಲಾಖೆಯಿಂದ ಆಡಳಿತದವರೆಗೆ ಎಲ್ಲ ಪ್ರಯತ್ನಗಳು ನಡೆಯುತ್ತಿವೆ, ಪ್ರತಿಯೊಬ್ಬರೂ ಆಧುನಿಕ ತಂತ್ರಗಳನ್ನು ಬಳಸಿ ರೈತರಿಗೆ ಸಹಾಯ ಮಾಡಲು ಮತ್ತು ಈ ಬಿಕ್ಕಟ್ಟಿನಿಂದ ಬೆಳೆ ನಷ್ಟವನ್ನು ಕಡಿಮೆ ಮಾಡಲು ತೊಡಗಿಸಿಕೊಂಡಿದ್ದಾರೆ ಎಂದರು.
ನೀರನ್ನು ಉಳಿಸುವ ಜವಾಬ್ದಾರಿಯ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದ್ದಾರೆ. ಮಳೆ ನೀರನ್ನು ಉಳಿಸುವ ಅಗತ್ಯದ ಬಗ್ಗೆ ಹೇಳಿದ ಅವರು, ಎಲ್ಲರೂ ನೀರಿನ ಸಂರಕ್ಷಣೆಗಾಗಿ ಶ್ರಮಿಸಬೇಕು ಎಂದರು. ಪ್ರಕೃತಿಯೊಂದಿಗೆ ದೈನಂದಿನ ಸಂಬಂಧವನ್ನು ರೂಪಿಸುವ ಸಲುವಾಗಿ ಕೆಲವು ಸಸಿಗಳನ್ನು ನೆಟ್ಟು ನಿರ್ಣಯಗಳನ್ನು ಮಾಡುವ ಮೂಲಕ ಈ ‘ಪರಿಸರ ದಿನ’ದಂದು ನಿಸರ್ಗದ ಸೇವೆ ಮಾಡುವಂತೆ ಅವರು ದೇಶವಾಸಿಗಳನ್ನು ವಿನಂತಿಸಿದರು. ಲಾಕ್ಡೌನ್ ಜೀವನವನ್ನು ನಿಧಾನಗೊಳಿಸಿದೆ ಆದರೆ ಪ್ರಕೃತಿಯನ್ನು ಸರಿಯಾಗಿ ನೋಡುವ ಅವಕಾಶವನ್ನು ಇದು ಕಲ್ಪಿಸಿದೆ ಮತ್ತು ಕಾಡು ಪ್ರಾಣಿಗಳು ಹೆಚ್ಚು ಹೊರಬರಲು ಪ್ರಾರಂಭಿಸಿವೆ ಎಂದು ಅವರು ಹೇಳಿದರು.
ಅಜಾಗರೂಕತೆ ಅಥವಾ ಜಡತೆ ಒಂದು ಆಯ್ಕೆಯಾಗಿರಬಾರದು ಎಂದ ಪ್ರಧಾನಿಯವರು ಕೊರೊನಾ ವಿರುದ್ಧದ ಹೋರಾಟ ಈಗಲೂ ಮೊದಲಿನಷ್ಟೇ ಗಂಭೀರವಾಗಿದೆ ಎಂದು ತಿಳಿಸಿದರು.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ನೀವೆಲ್ಲ ಲಾಕ್ ಡೌನ್ ನಲ್ಲಿ ಈ ಮನದ ಮಾತುಗಳನ್ನು ಕೇಳುತ್ತಿದ್ದೀರಿ. ಈ ಮನದ ಮಾತಿಗೆ ಬರುವ ಸಲಹೆಗಳು ಮತ್ತು ದೂರವಾಣಿ ಕರೆಗಳು ಸಾಮಾನ್ಯಕ್ಕಿಂತ ಬಹಳ ಹೆಚ್ಚಿಗೆ ಬಂದಿವೆ. ನಿಮ್ಮಲ್ಲೇ ಹುದುಗಿಸಿಕೊಂಡ ಬಹಳಷ್ಟು ವಿಷಯಗಳು ಮನದ ಮಾತಿನ ಮೂಲಕ ನನ್ನವರೆಗೂ ಬಂದು ತಲುಪಿವೆ. ಇವುಗಳಲ್ಲಿ ಬಹಳಷ್ಟನ್ನು ಓದುವ ಮತ್ತು ಕೇಳುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ನಿಮ್ಮ ಮಾತಿನಿಂದ ಇಂಥ ಅದೆಷ್ಟೋ ಆಯಾಮಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆತಿದೆ. ಇಂಥವುಗಳತ್ತ ಈ ಆತುರದ ಸಮಯದಲ್ಲಿ ನಾವು ಗಮನಹರಿಸುವುದಿಲ್ಲ. ಸಮರದ ನಡುವೆ ಬಂದಿರುವ ಈ ಮನದ ಮಾತಿನಲ್ಲಿ ಆ ಕೆಲವು ಕ್ಷಣಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ,
ಸ್ನೇಹಿತರೆ ಭಾರತದ ಕೊರೊನಾ ವಿರುದ್ಧದ ಹೋರಾಟ ನಿಜವಾದ ಅರ್ಥದಲ್ಲಿ ಜನಸಂಘರ್ಷವಾಗಿದೆ. ಭಾರತದ ಕೊರೊನಾ ವಿರುದ್ಧದ ಹೋರಾಟವನ್ನು ಜನರೇ ಮುಂದುವರಿಸುತ್ತಿದ್ದಾರೆ. ನೀವು ಹೋರಾಡುತ್ತಿದ್ದೀರಿ. ಜನತೆಯೊಂದಿಗೆ ಸೇರಿ ಶಾಸನ ಮತ್ತು ಆಡಳಿತವೂ ಹೋರಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ವಿಶಾಲವಾದ ದೇಶ ಬಡತನದೊಂದಿಗೆ ನಿರ್ಣಾಯಕ ಹೋರಾಟ ನಡೆಸಿದೆ. ಅದರ ಬಳಿ ಕೊರೊನಾ ವಿರುದ್ಧ ಹೋರಾಡಿ ಗೆಲ್ಲಲು ಇದೊಂದೇ ಉಪಾಯವಿದೆ. ನಾವು ಭಾಗ್ಯವಂತರು. ಇಂದು ಸಂಪೂರ್ಣ ದೇಶದ ಪ್ರತಿ ನಾಗರಿಕ, ಪ್ರತಿಯೊಬ್ಬ ವ್ಯಕ್ತಿ, ಈ ಹೋರಾಟದ ಸೈನಿಕರಾಗಿದ್ದಾನೆ, ಹೋರಾಟದ ನೇತೃತ್ವವಹಿಸುತ್ತಿದ್ದಾರೆ. ನೀವೂ ಎಲ್ಲಿಯೇ ನೋಡಿ, ನಿಮಗೆ ಭಾರತದ ಹೋರಾಟ ಜನಸಂಘರ್ಷವಾಗಿದೆ ಎಂಬುದರ ಅನುಭವವಾಗುತ್ತದೆ. ಸಂಪೂರ್ಣ ವಿಶ್ವವೇ ಈ ಮಹಾಮಾರಿಯ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಭವಿಷ್ಯದಲ್ಲಿ ಇದರ ಕುರಿತು ಚರ್ಚೆಯಾದಾಗ, ಈ ಸಮಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆಯಾದಾಗ, ಭಾರತದ ಜನಸಂಘರ್ಷದ ಕುರಿತು ಖಂಡಿತ ಚರ್ಚೆಯಾಗುತ್ತದೆ ಎಂಬ ವಿಶ್ವಾಸ ನನಗಿದೆ. ಸಂಪೂರ್ಣ ದೇಶದಲ್ಲಿ, ಪ್ರತಿ ಬೀದಿ, ಬೀದಿಗಳಲ್ಲಿ ಇಂದು ಜನರು ಪರಸ್ಪರರ ನೆರವಿಗೆ ಮುಂದೆ ಬಂದಿದ್ದಾರೆ. ಬಡವರ ಊಟದ ವ್ಯವಸ್ಥೆಯಿಂದ ಹಿಡಿದು ಪಡಿತರ ವ್ಯವಸ್ಥೆ, ಲಾಕ್ ಡೌನ್ ಪಾಲಿಸುವುದಾಗಲಿ, ಆಸ್ಪತ್ರೆಗಳ ವ್ಯವಸ್ಥೆಯಾಗಲಿ, ದೇಶದಲ್ಲಿ ವೈದ್ಯಕೀಯ ಉಪಕರಣಗಳ ಉತ್ಪಾದನೆಯಾಗಲಿ – ಸಂಪೂರ್ಣ ದೇಶ ಇಂದು ಒಂದೇ ಗುರಿ, ಒಂದೇ ದಿಕ್ಕಿನೆಡೆ ಒಗ್ಗೂಡಿ ಮುನ್ನಡೆದಿದೆ. ಚಪ್ಪಾಳೆ, ಜಾಗಟೆ, ದೀಪ, ಮೇಣದ ಬತ್ತಿ ಇವೆಲ್ಲವೂ ಮೂಡಿಸಿದಂತಹ ಭಾವನೆಗಳು, ದೇಶಬಾಂಧವರಲ್ಲಿ ಏನನ್ನಾದರೂ ಮಾಡಲೇಬೇಕೆಂಬ ಹಠವನ್ನು ಹುಟ್ಟುಹಾಕಿವೆ. ಪ್ರತಿಯೊಬ್ಬರನ್ನೂ ಇವು ಪ್ರೆರೇಪಿಸಿವೆ. ಗ್ರಾಮವಿರಲಿ, ನಗರವೇ ಆಗಿರಲಿ, ಎಲ್ಲಿ ನೋಡಿದರೂ ದೇಶದಲ್ಲಿ ಒಂದು ಮಹಾಯಜ್ಞ ನಡೆದಂತೆ ಭಾಸವಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಲು ಕಾತುರರಾಗಿದ್ದಾರೆ. ನಮ್ಮ ರೈತ ಸೋದರ ಸೋದರಿಯರನ್ನೇ ನೋಡಿ! ಒಂದೆಡೆ ಅವರು ಈ ಮಹಾಮರಿಯ ಮಧ್ಯೆಯೇ ತಮ್ಮ ತೋಟಗದ್ದೆಗಳಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಚಿಂತಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಈ ಹೋರಾಟ ನಡೆಸುತ್ತಿದ್ದಾರೆ. ಯಾರೋ ಬಾಡಿಗೆಯನ್ನು ಮನ್ನಾ ಮಾಡಿದರೆ, ಇನ್ನಾರೋ ತಮ್ಮ ಪಿಂಚಣಿ ಅಥವಾ ಪ್ರಶಸ್ತಿ ಮೌಲ್ಯವನ್ನು ಪಿ ಎಂ ಕೇರ್ಸ್ ನಿಧಿಗೆ ಜಮಾ ಮಾಡುತ್ತಿದ್ದಾರೆ. ಯಾರೋ ತೋಟದ ಎಲ್ಲ ತರಕಾರಿಗಳನ್ನು ದಾನ ಮಾಡುತ್ತಿದ್ದಾರೆ ಮತ್ತೊಬ್ಬರು ಪ್ರತಿದಿನ ಸಾವಿರಾರು ಬಡವರಿಗೆ ಉಚಿತ ಭೋಜನ ನೀಡುತ್ತಿದ್ದಾರೆ. ಯಾರೋ ಮಾಸ್ಕ್ ಸಿದ್ಧಪಡಿಸುತ್ತಿದ್ದರೆ, ಬಹಳಷ್ಟು ನಮ್ಮ ಕಾರ್ಮಿಕ ಸೋದರ ಸೋದರಿಯರು, ಯಾವ ಶಾಲೆಯಲ್ಲಿ ಕ್ವಾರೆಂಟೈನ್ ಆಗಿರುವರೋ ಆ ಶಾಲೆಯ ಸುಣ್ಣ ಬಣ್ಣದ ಕೆಲಸ ಮಾಡುತ್ತಿದ್ದಾರೆ.
ಸ್ನೇಹಿತರೆ, ಮತ್ತೊಬ್ಬರ ಸಹಾಯಕ್ಕಾಗಿ ನಿಮ್ಮ ಹೃದಯದ ಯಾವುದೋ ಮೂಲೆಯಲ್ಲಿ ಉಕ್ಕುತ್ತಿರುವ ಭಾವನೆಯೇನಿದೆಯೋ ಅದೇ ಕೊರೊನಾ ವಿರುದ್ಧದ ಭಾರತದ ಈ ಹೋರಾಟಕ್ಕೆ ಶಕ್ತಿ ತುಂಬುತ್ತಿದೆ, ಅದೇ ಈ ಹೋರಾಟವನ್ನು ನಿಜವಾದ ಅರ್ಥದಲ್ಲಿ ಜನಸಂಘರ್ಷವನ್ನಾಗಿಸುತ್ತಿದೆ. ಅಲ್ಲದೆ ಕಳೆದ ಕೆಲವು ವರ್ಷಗಳಿಂದ ನಮ್ಮ ದೇಶದಲ್ಲಿ ಈ ಮನಸ್ಥಿತಿ ರೂಪುಗೊಳ್ಳುತ್ತಿದೆ ಮತ್ತು ಅದು ನಿರಂತರವಾಗಿ ಸದೃಡಗೊಳ್ಳುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಅದು ಕೋಟ್ಯಾಂತರ ಜನರು ಗ್ಯಾಸ್ ಸಬ್ಸಿಡಿ ಬಿಟ್ಟುಕೊಡುವುದಾಗಲಿ, ಲಕ್ಷಾಂತರ ಹಿರಿಯ ನಾಗರಿಕರು ತಮ್ಮ ರೈಲ್ವೇ ಸಬ್ಸಿಡಿ ಬಿಟ್ಟುಕೊಡುವುದಾಗಲಿ, ಸ್ವಚ್ಛ ಬಾರತ ಆಂದೋಲನದ ನೇತೃತ್ವವಹಿಸುವುದಾಗಲಿ, ಶೌಚಾಲಯಗಳನ್ನು ನಿರ್ಮಿಸುವುದಾಗಲಿ –ಲೆಕ್ಕವಿಲ್ಲದಷ್ಟು ಇಂಥ ವಿಷಯಗಳಿವೆ. ಇವೆಲ್ಲವುಗಳಿಂದ ನಮಗೆ ತಿಳಿಯುವುದೇನೆಂದರೆ – ಒಂದೇ ಸೂತ್ರದಲ್ಲಿ ನಮ್ಮೆಲ್ಲರ ಮನಸ್ಸುಗಳನ್ನು ಬಂಧಿಸಲಾಗಿದೆ. ಒಗ್ಗೂಡಿ ದೇಶಕ್ಕಾಗಿ ಏನಾದರೂ ಮಾಡುವಂತೆ ಪ್ರೇರೆಪಿಸಿದೆ.
ನನ್ನ ಪ್ರಿಯ ದೇಶಬಾಂಧವರೆ, ನಾನು ವಿನಮ್ರನಾಗಿ ಬಹಳ ಗೌರವದಿಂದ 130 ಕೋಟಿ ದೇಶವಾಸಿಗಳ ಈ ಭಾವನೆಗೆ ಇಂದು ತಲೆ ಬಾಗುತ್ತೇನೆ. ನಿಮ್ಮ ಭಾವನೆಯ ಪ್ರಕಾರ ದೇಶಕ್ಕೆ ನಿಮ್ಮ ಆಸಕ್ತಿಯನುಸಾರ, ನಿಮ್ಮ ಸಮಯದ ಲಭ್ಯತೆಗೆ ತಕ್ಕಂತೆ ಏನನ್ನಾದರೂ ಮಾಡಲು ಸರ್ಕಾರವು ಒಂದು ಡಿಜಿಟಲ್ ವೇದಿಕೆಯನ್ನು ಸಿದ್ಧಪಡಿಸಿದೆ. ಈ ವೇದಿಕೆ – covidwarriors.gov.in. ನಾನು ಮತ್ತೊಮ್ಮೆ ಹೇಳುತ್ತೇನೆ covidwarriors.gov.in. ಈ ವೇದಿಕೆ ಎಲ್ಲ ಸಾಮಾಜಿಕ ಸಂಸ್ಥೆಗಳ ಸ್ವಯಂಸೇವಕರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಸ್ಥಳೀಯ ಆಡಳಿತಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸಿದೆ. ಬಹಳ ಕಡಿಮೆ ಸಮಯದಲ್ಲಿ, 1 ಕೋಟಿ 25 ಲಕ್ಷ ಜನರು ಈ ಪೋರ್ಟಲ್ ನಲ್ಲಿ ಸೇರಿದ್ದಾರೆ. ಇವರಲ್ಲಿ ವೈದ್ಯರು, ಶುಶ್ರೂಷಕಿಯರಿಂದ ಹಿಡಿದು ನಮ್ಮ ಆಶಾ, ಎಎನ್ಎಂ ಸಹೋದರಿಯರು , ನಮ್ಮ ಎನ್ಸಿಸಿ , ಎನ್ಎಸ್ಎಸ್ ಸ್ನೇಹಿತರು, ವಿವಿಧ ಕ್ಷೇತ್ರಗಳ ಎಲ್ಲ ವೃತ್ತಿಪರರು , ಈ ವೇದಿಕೆಯನ್ನು ತಮ್ಮ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಇವರೆಲ್ಲರೂ ಸ್ಥಳೀಯ ಮಟ್ಟದಲ್ಲಿ ಬಿಕ್ಕಟ್ಟು ನಿರ್ವಹಣಾ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಅದನ್ನು ಕಾರ್ಯಗತಗೊಳಿಸುವುದರಲ್ಲಿ ಬಹಳಷ್ಟು ಸಹಾಯ ಮಾಡುತ್ತಿದ್ದಾರೆ. ನೀವು covidwarriors.gov.in ಗೆ ಸೇರಿ, ದೇಶಕ್ಕೆ ಸೇವೆ ಸಲ್ಲಿಸಬಹುದು, ಕೋವಿಡ್ ವಾರಿಯರ್ ಆಗಬಹುದು.
ಸ್ನೇಹಿತರೆ, ಪ್ರತಿ ಸಂಕಷ್ಟದ ಸ್ಥಿತಿ ಪ್ರತಿ ಹೋರಾಟ ಏನಾದರೂ ಪಾಠ ಕಲಿಸುತ್ತದೆ. ಏನಾದರೂ ಹೊಸತನ್ನು ಕಲಿಸಿ ಹೋಗುತ್ತದೆ ಮತ್ತು ತಿಳಿವಳಿಕೆ ಮೂಡಿಸುತ್ತದೆ. ಕೆಲವು ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಕೆಲ ಹೊಸ ಗುರಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಈ ಪರಿಸ್ಥಿತಿಯಲ್ಲಿ, ಎಲ್ಲಾ ದೇಶವಾಸಿಗಳು ತೋರಿಸಿದ ಸಂಕಲ್ಪ ಶಕ್ತಿಯೊಂದಿಗೆ, ಭಾರತದಲ್ಲಿ ಹೊಸ ಬದಲಾವಣೆಯೂ ಪ್ರಾರಂಭವಾಗಿದೆ. ನಮ್ಮ ವ್ಯವಹಾರ, ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕ್ಷೇತ್ರ, ಎಲ್ಲವೂ ವೇಗವಾಗಿ, ಹೊಸ ತಾಂತ್ರಿಕ ಬದಲಾವಣೆಗಳತ್ತ ಸಾಗುತ್ತಿವೆ. ನಿಜವಾಗಿಯೂ ತಂತ್ರಜ್ಞಾನದ ಕ್ಷೇತ್ರದಲ್ಲಿ ದೇಶದ ಪ್ರತಿಯೊಬ್ಬ ಆವಿಷ್ಕಾರಿಯೂ ಹೊಸ ಸಂದರ್ಭಗಳಿಗೆ ಅನುಗುಣವಾಗಿ ಏನನ್ನಾದರೂ ಹೊಸತನ್ನು ನಿರ್ಮಿಸುತ್ತಿದ್ದಾನೆ ಎಂದು ಅನ್ನಿಸುತ್ತಿದೆ.
ಸ್ನೇಹಿತರೇ, ದೇಶವೇ ಒಂದು ತಂಡವಾಗಿ ಕಾರ್ಯನಿರ್ವಹಿಸಿದಾಗ, ಏನೆಲ್ಲಾ ಮಾಡಬಹುದು ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ. ಇಂದು, ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ, ಇವುಗಳ ಪ್ರತಿಯೊಂದು ಇಲಾಖೆ ಮತ್ತು ಸಂಸ್ಥೆ ಪರಿಹಾರಕ್ಕಾಗಿ ಒಗ್ಗೂಡಿ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶದ ಜನತೆಗೆ ಸಮಸ್ಯೆಯ ಬಿಸಿ ತಟ್ಟದಿರಲೆಂದು ನಮ್ಮ ವಾಯುಯಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು, ರೈಲ್ವೆ ನೌಕರರು, ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ‘ಲೈಫ್ಲೈನ್ ಉಡಾನ್’ ಎಂಬ ವಿಶೇಷ ಆಂದೋಲನ ದೇಶದ ಪ್ರತಿಯೊಂದು ಭಾಗಕ್ಕೂ ಔಷಧಿಗಳನ್ನು ತಲುಪಿಸುವ ಕಾರ್ಯನಿರ್ವಹಿಸುತ್ತಿದೆ ಎಂಬುದು ಬಹುಶಃ ನಿಮ್ಮಲ್ಲಿ ಹಲವರಿಗೆ ತಿಳಿದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ನಮ್ಮ ಈ ಸ್ನೇಹಿತರು ದೇಶದೊಳಗೆಯೇ ಮೂರು ಲಕ್ಷ ಕಿಲೋಮೀಟರ್ ನಷ್ಟು ವಿಮಾನ ಹಾರಾಟ ನಡೆಸಿ 500 ಟನ್ಗಿಂತಲೂ ಹೆಚ್ಚು ವೈದ್ಯಕೀಯ ಸಾಮಗ್ರಿಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ನಿಮಗೆ ತಲುಪಿಸಿದ್ದಾರೆ. ಹಾಗೆಯೇ, ದೇಶದ ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ಕೊರತೆಯಾಗದಿರಲೆಂದು ರೈಲ್ವೆ ಸ್ನೇಹಿತರು ಕೂಡಾ ಲಾಕ್ಡೌನ್ ಸಮಯದಲ್ಲಿ ಎಡೆಬಿಡದೇ ಶ್ರಮಿಸುತ್ತಿದ್ದಾರೆ. ಈ ಕೆಲಸಕ್ಕಾಗಿ, ಭಾರತೀಯ ರೈಲ್ವೆ ಸುಮಾರು 60 ಕ್ಕೂ ಹೆಚ್ಚು ರೈಲ್ವೆ ಮಾರ್ಗಗಳಲ್ಲಿ 100 ಕ್ಕೂ ಹೆಚ್ಚು ಪಾರ್ಸೆಲ್ ರೈಲುಗಳನ್ನು ಓಡಿಸುತ್ತಿದೆ. ಇದರಂತೆ ನಮ್ಮ ಅಂಚೆ ಇಲಾಖೆಯವರು ಔಷಧಿಗಳ ಸರಬರಾಜಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ನಮ್ಮ ಈ ಎಲ್ಲ ಸ್ನೇಹಿತರು ನಿಜವಾದ ಕೊರೋನಾ ಯೋಧರಾಗಿದ್ದಾರೆ.
ಸ್ನೇಹಿತರೇ, ‘ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್’ ಅಡಿಯಲ್ಲಿ ಹಣವನ್ನು ನೇರವಾಗಿ ಬಡವರ ಖಾತೆಗೆ ವರ್ಗಾಯಿಸಲಾಗುತ್ತಿದೆ. ‘ವೃದ್ಧಾಪ್ಯ ಪಿಂಚಣಿ’ ನೀಡಲಾಗಿದೆ. ಬಡವರಿಗೆ ಮೂರು ತಿಂಗಳ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಪಡಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಎಲ್ಲ ಕೆಲಸಗಳಿಗಾಗಿ ಸರ್ಕಾರದ ವಿವಿಧ ಇಲಾಖೆಗಳ ಜನರು, ಬ್ಯಾಂಕಿಂಗ್ ಕ್ಷೇತ್ರದವರು ಒಂದೇ ತಂಡದಂತೆ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಈ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸುವಲ್ಲಿ ನಮ್ಮ ರಾಜ್ಯ ಸರ್ಕಾರಗಳು ಅತ್ಯಂತ ಸಕ್ರಿಯ ಪಾತ್ರ ವಹಿಸುತ್ತಿವೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರಗಳು ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಅವರ ಕಠಿಣ ಶ್ರಮ ಅತ್ಯಂತ ಪ್ರಶಂಸನೀಯವಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, ದೇಶಾದ್ಯಂತ ಆರೋಗ್ಯ ಸೇವೆಗಳಲ್ಲಿ ತೊಡಗಿರುವವರು ಇತ್ತೀಚೆಗೆ ಘೋಷಿಸಿದ ಸುಗ್ರೀವಾಜ್ಞೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಸುಗ್ರೀವಾಜ್ಞೆಯಲ್ಲಿ, ಕರೋನಾ ಯೋಧರಿಗೆ ಹಿಂಸೆ, ಕಿರುಕುಳ ಮತ್ತು ಯಾವುದೇ ರೀತಿಯಲ್ಲಿ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ. ದೇಶವನ್ನು ‘ಕೊರೋನಾ ಮುಕ್ತ’ವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿರುವ ನಮ್ಮ ವೈದ್ಯರು, ಸುಶ್ರೂಷಕಿಯರು, ಅರೆ-ವೈದ್ಯಕೀಯ ಸಿಬ್ಬಂದಿ, ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಅಂತಹ ಎಲ್ಲರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳುವುದು ಬಹಳ ಅವಶ್ಯಕವಾಗಿತ್ತು.
ನನ್ನ ಪ್ರೀತಿಯ ದೇಶವಾಸಿಗಳೇ, ಸಾಂಕ್ರಾಮಿಕ ರೋಗದ ವಿರುದ್ಧದ ಈ ಹೋರಾಟದ ಸಮಯದಲ್ಲಿ, ನಮ್ಮ ಜೀವನ, ಸಮಾಜ, ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಕಾಶ ಸಿಕ್ಕಿದೆ ಎಂದು ನಾವೆಲ್ಲರೂ ಭಾವಿಸುತ್ತಿದ್ದೇವೆ. ಸಮಾಜದ ಮನೋಭಾವದಲ್ಲಿ ದೊಡ್ಡ ಬದಲಾವಣೆಯಾಗಿದೆ. ಇಂದು, ನಮ್ಮ ಜೀವನದೊಂದಿಗೆ ಬೆರೆತಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರಾಮುಖ್ಯತೆಯ ಬಗ್ಗೆ ನಮಗೆ ಅರಿವಾಗಿದೆ. ನಮ್ಮ ಮನೆಗಳಲ್ಲಿ ಕೆಲಸ ಮಾಡುವವರಾಗಲಿ, ನಮ್ಮ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡುವ ಸಾಮಾನ್ಯ ಕಾರ್ಮಿಕರಾಗಲಿ, ನೆರೆಹೊರೆಯ ಅಂಗಡಿಗಳಲ್ಲಿ ಕೆಲಸ ಮಾಡುವವರಾಗಲಿ, ಅವರೆಲ್ಲರ ಪಾತ್ರ ಎಷ್ಟು ಮಹತ್ತರವಾದದ್ದು ಎಂಬುದು ಈಗ ನಮ್ಮ ಅನುಭವಕ್ಕೆ ಬರುತ್ತಿದೆ. ಹೀಗೆ ಅಗತ್ಯ ಸೇವೆಗಳನ್ನು ತಲುಪಿಸುವವರು, ಮಾಧ್ಯಮಗಳಲ್ಲಿ ದುಡಿಯುವ ಕಾರ್ಮಿಕ ಸಹೋದರ ಸಹೋದರಿಯರು, ನಮ್ಮ ನೆರೆಹೊರೆಯಲ್ಲಿರುವ ಆಟೋ ಡ್ರೈವರ್ಗಳು, ರಿಕ್ಷಾ ಎಳೆಯುವವರು ಇಲ್ಲದೆ ನಮ್ಮ ಜೀವನ ಎಷ್ಟು ಕಷ್ಟಕರ ಎಂದು ನಮಗೆ ಅರಿವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಲಾಕ್ಡೌನ್ ಸಮಯದಲ್ಲಿ ಜನರು ತಮ್ಮ ಈ ಸ್ನೇಹಿತರನ್ನು ನೆನಪಿಸಿಕೊಳ್ಳುವುದು, ಅವರ ಅಗತ್ಯತೆಗಳನ್ನು ನೋಡಿಕೊಳ್ಳುವುದಷ್ಟೇ ಅಲ್ಲ ಅವರ ಬಗ್ಗೆ ಬಹಳ ಗೌರವದಿಂದ ಬರೆಯುತ್ತಿರುವುದನ್ನೂ ನಾವೆಲ್ಲ ಕಂಡಿದ್ದೇವೆ. ಇಂದು, ದೇಶದ ಮೂಲೆ ಮೂಲೆಯಿಂದ ಜನರು ಸ್ವಚ್ಛತಾ ಕಾರ್ಮಿಕರ ಮೇಲೆ ಪುಷ್ಪ ಧಾರೆ ಎರೆಯುತ್ತಿರುವ ಚಿತ್ರಗಳು ಕಂಡು ಬರುತ್ತಿವೆ. ಈ ಹಿಂದೆ, ಅವರ ಕೆಲಸವನ್ನು ಬಹುಶಃ ನೀವೂ ಗಮನಿಸಿರಲಿಕ್ಕಿಲ್ಲ. ವೈದ್ಯರಾಗಲಿ, ಸ್ವಚ್ಛತಾ ಸಿಬ್ಬಂದಿಯಾಗಲಿ, ಇತರ ಸೇವೆಗಳನ್ನು ನೀಡುವವರಾಗಲಿ, ಇಷ್ಟೇ ಅಲ್ಲ ನಮ್ಮ ಪೊಲೀಸ್ ವ್ಯವಸ್ಥೆಯ ಬಗ್ಗೆ ಕೂಡಾ ಸಾಮಾನ್ಯ ಜನರ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಮೊದಲು, ಪೊಲೀಸರ ಬಗ್ಗೆ ಆಲೋಚಿಸಿದರೆ ಸಾಕು ನಕಾರಾತ್ಮಕ ಭಾವನೆ ಹೊರತುಪಡಿಸಿ ಬೇರೆ ಯಾವುದೂ ತೋಚುತ್ತಿರಲಿಲ್ಲ. ನಮ್ಮ ಪೊಲೀಸ್ ಸಿಬ್ಬಂದಿ ಇಂದು ಬಡವರಿಗೆ, ನಿರ್ಗತಿಕರಿಗೆ ಆಹಾರವನ್ನು ಮತ್ತು ಔಷಧಿಗಳನ್ನು ತಲುಪಿಸುತ್ತಿದ್ದಾರೆ. ಪ್ರತಿ ಸಹಾಯಕ್ಕೂ ಪೊಲೀಸರು ಮುಂದೆ ಬರುತ್ತಿರುವ ರೀತಿಯನ್ನು ಕಂಡರೆ, ಪೋಲಿಸ್ ವೃತ್ತಿಯ ಮಾನವೀಯತೆ ಮತ್ತು ಸಂವೇದನಶೀಲತೆಯು ನಮ್ಮ ಮುಂದೆ ಅನಾವರಣಗೊಳ್ಳುತ್ತಿದೆ. ನಮ್ಮ ಮನಸ್ಸನ್ನು ತಾಕಿದೆ, ನಮ್ಮ ಹೃದಯವನ್ನು ತಟ್ಟಿದೆ. ಸಾಮಾನ್ಯ ಜನರು ಭಾವನಾತ್ಮಕವಾಗಿ ಪೊಲೀಸರೊಂದಿಗೆ ಬೆರೆಯುವಂಥ ಸಂದರ್ಭ ಇದಾಗಿದೆ. ನಮ್ಮ ಪೊಲೀಸರು ಇದನ್ನು ಸಾರ್ವಜನಿಕರ ಸೇವೆಯ ರೂಪದಲ್ಲಿ ಸ್ವೀಕರಿಸಿದ್ದಾರೆ. ಈ ಘಟನೆಗಳು ಮುಂಬರುವ ಸಮಯದಲ್ಲಿ, ನಿಜವಾದ ಅರ್ಥದಲ್ಲಿ ಬಹಳ ಸಕಾರಾತ್ಮಕ ಬದಲಾವಣೆಯನ್ನು ತರಬಲ್ಲವು ಎಂಬ ವಿಶ್ವಾಸ ನನಗಿದೆ. ಮತ್ತು ನಾವೆಲ್ಲರೂ ಈ ಸಕಾರಾತ್ಮಕತೆಯನ್ನು ಎಂದಿಗೂ ನಕಾರಾತ್ಮಕವಾಗಿ ಬದಲಾಗಲು ಬಿಡಬಾರದು
ಸ್ನೇಹಿತರೇ, ನಾವು ಆಗಾಗ್ಗೆ ಕೇಳುತ್ತಿರುತ್ತೇವೆ – ಪ್ರಕೃತಿ, ವಿಕೃತಿ ಮತ್ತು ಸಂಸ್ಕೃತಿ, ಈ ಪದಗಳನ್ನು ಒಟ್ಟಿಗೆ ನೋಡಿದಾಗ ಮತ್ತು ಅದರಲ್ಲಡಗಿರುವ ಭಾವನೆಯನ್ನು ನೋಡಿದಾಗ, ಜೀವನವನ್ನು ಅರ್ಥಮಾಡಿಕೊಳ್ಳಲು ಹೊಸ ದ್ವಾರ ತೆರೆಯುವುದನ್ನು ಕಾಣಬಹುದು. ಮಾನವ ಪ್ರಕೃತಿಯ ಬಗ್ಗೆ ಮಾತನಾಡಿದರೆ, ‘ಇದು ನನ್ನದು’, ‘ನಾನು ಇದನ್ನು ಬಳಸುತ್ತೇನೆ’ ಎಂಬ ಭಾವನೆಯನ್ನು ಬಹಳ ಸಹಜವೆಂದು ಪರಿಗಣಿಸಲಾಗುತ್ತದೆ. ಯಾರಿಗೂ ಇದರ ಬಗ್ಗೆ ಆಕ್ಷೇಪವಿರುವುದಿಲ್ಲ. ಇದನ್ನು ನಾವು ‘ಪ್ರಕೃತಿ’ ಎನ್ನಬಹುದು. ಆದರೆ ‘ನನ್ನದಲ್ಲದ್ದು’, ‘ನನಗೆ ಅದರ ಮೇಲೆ ಯಾವ ಹಕ್ಕೂ ಇಲ್ಲದಿರುವುದನ್ನು’, ನಾನು ಅದನ್ನು ಇನ್ನೊಬ್ಬರಿಂದ ಕಸಿದುಕೊಂಡಾಗ ಮತ್ತು ಅದರ ಉಪಯೋಗ ಪಡೆದಾಗ ಅದನ್ನು ‘ವಿಕೃತಿ’ ಎಂದು ಹೇಳಬಹುದು. ಈ ಎರಡನ್ನು ಹೊರತುಪಡಿಸಿ, ಪ್ರಕೃತಿ ಮತ್ತು ವಿಕೃತಿಗಿಂತ ಹೆಚ್ಚಾಗಿ, ಸಂಸ್ಕಾರಯುತ ಮನಸ್ಸು ಯೋಚಿಸಿದಾಗ ಅಥವಾ ವ್ಯವಹರಿಸಿದಾಗ, ನಮಗೆ ‘ಸಂಸ್ಕೃತಿ’ ಕಂಡುಬರುತ್ತದೆ. ಯಾರಾದರೂ ತನ್ನ ಹಕ್ಕಿನ ವಸ್ತುವನ್ನು ಅಥವಾ ಪರಿಶ್ರಮದಿಂದ ಗಳಿಸಿದ ವಸ್ತುವನ್ನು, ತಮಗೆ ಅವಶ್ಯವಿರುವುದನ್ನು, ಕಡಿಮೆ ಅಥವಾ ಹೆಚ್ಚು ಎಂಬುದನ್ನು ಲೆಕ್ಕಿಸದೆ, ಒಬ್ಬ ವ್ಯಕ್ತಿಯ ಅವಶ್ಯಕತೆಯನ್ನು ಮನಗಂಡು ತಮ್ಮ ಯೋಚನೆಯನ್ನು ಬಿಟ್ಟು ತನ್ನ ಸ್ವಯಾರ್ಜಿತವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುತ್ತಾರೋ ಅದೇ ‘ಸಂಸ್ಕೃತಿ’ ಯಾಗಿದೆ. ಸ್ನೇಹಿತರೇ, ಪರೀಕ್ಷಾ ಅವಧಿಯಲ್ಲಿ ಈ ಗುಣಗಳು ಒರೆಗೆ ಹಚ್ಚಲ್ಪಡುತ್ತವೆ.
ನೀವು ಇತ್ತೀಚಿನ ದಿನಗಳಲ್ಲಿ ನೋಡಿರಬಹುದು, ಭಾರತವು ತನ್ನ ಸಂಸ್ಕಾರಗಳಿಗೆ ಅನುಗುಣವಾಗಿ, ನಮ್ಮ ಚಿಂತನೆಗಳಿಗೆ ಅನುಗುಣವಾಗಿ, ನಮ್ಮ ಸಂಸ್ಕೃತಿಯನ್ನು ನಿರ್ವಹಿಸುತ್ತಾ ಕೆಲವು ನಿರ್ಣಯಗಳನ್ನು ಕೈಗೊಂಡಿದೆ. ಬಿಕ್ಕಟ್ಟಿನ ಈ ಸಮಯದಲ್ಲಿ, ಶ್ರೀಮಂತ ದೇಶಗಳೂ ಸೇರಿದಂತೆ ವಿಶ್ವಕ್ಕೆ ಔಷಧಗಳ ಬಿಕ್ಕಟ್ಟು ಬಹಳವೇ ಹೆಚ್ಚಾಗಿತ್ತು. ಇದು ಎಂತಹ ಸಮಯವೆಂದರೆ, ಭಾರತ ವಿಶ್ವಕ್ಕೆ ಔಷಧಗಳನ್ನು ನೀಡದೇ ಇದ್ದರೂ ಕೂಡಾ ಯಾರೂ ಭಾರತವನ್ನು ಆರೋಪಿಸುತ್ತಿರಲಿಲ್ಲ. ತನ್ನ ದೇಶದ ನಾಗರಿಕರ ಜೀವ ಉಳಿಸುವುದು ಭಾರತಕ್ಕೆ ಕೂಡಾ ಮುಖ್ಯ ಎನ್ನುವುದನ್ನು ಪ್ರತಿಯೊಂದು ದೇಶವೂ ಅರ್ಥ ಮಾಡಿಕೊಂಡಿದೆ. ಆದರೆ ಸ್ನೇಹಿತರೇ, ಭಾರತವು ಪ್ರಕೃತಿ, ವಿಕೃತಿಯ ಚಿಂತನೆಯನ್ನು ಮೀರಿ ನಿರ್ಣಯ ಕೈಗೊಂಡಿತು. ಭಾರತ ತನ್ನ ಸಂಸ್ಕೃತಿಗೆ ಅನುಗುಣವಾಗಿ ನಿರ್ಣಯ ತೆಗೆದುಕೊಂಡಿತು. ಭಾರತದ ಅಗತ್ಯಗಳಿಗಾಗಿ ಏನು ಮಾಡಬೇಕೋ ಅದರ ಪ್ರಯತ್ನವನ್ನು ನಾವು ಖಂಡಿತವಾಗಿಯೂ ಹೆಚ್ಚಿಸಿದ್ದೇವೆ, ಆದರೆ ವಿಶ್ವದೆಲ್ಲೆಡೆಯಿಂದ ಬರುತ್ತಿರುವ ಮಾನವೀಯತೆಯ ರಕ್ಷಣೆಯ ಕರೆಗೆ ಕೂಡಾ ಸಂಪೂರ್ಣ ಗಮನ ನೀಡಿದ್ದೇವೆ. ವಿಶ್ವದಲ್ಲಿ ಅಗತ್ಯವಿರುವ ಪ್ರತಿಯೊಂದು ದೇಶಕ್ಕೂ ಔಷಧಗಳನ್ನು ತಲುಪಿಸುವ ಕ್ರಮವನ್ನು ನಾವು ಕೈಗೊಂಡೆವು ಮತ್ತು ಮಾನವೀಯತೆಯ ಈ ಕೆಲಸ ಮಾಡಿ ತೋರಿಸಿದೆವು. ಈಗ ನಾನು ಅನೇಕ ದೇಶಗಳ ರಾಷ್ಟಾಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವಾಗ ಅವರೆಲ್ಲರೂ ಭಾರತದ ಜನತೆಗೆ ತಮ್ಮ ಕೃತಜ್ಞತೆ ತಪ್ಪದೇ ವ್ಯಕ್ತಪಡಿಸುತ್ತಾರೆ. ಅವರುಗಳು ‘ಧನ್ಯವಾದ ಭಾರತ’, ‘ಭಾರತದ ಜನತೆಗೆ ಧನ್ಯವಾದ’(‘Thank You India , Thank You People of India’)ಎಂದು ಹೇಳಿದಾಗ ದೇಶದ ಬಗ್ಗೆ ಹೆಮ್ಮೆ ಹೆಚ್ಚಾಗುತ್ತದೆ. ಇದೇ ರೀತಿ, ಈಗ ವಿಶ್ವಾದ್ಯಂತ ಜನರು ಭಾರತದ ಆಯುರ್ವೇದ ಮತ್ತು ಯೋಗದ ಪ್ರಾಮುಖ್ಯತೆಯ ಬಗ್ಗೆ ಕೂಡಾ ಬಹಳ ವಿಶೇಷ ಭಾವನೆಯಿಂದ ನೋಡುತ್ತಿದ್ದಾರೆ. ರೋಗ ನಿರೋಧಕತೆ (immunity) ಹೆಚ್ಚಿಸುವುದಕ್ಕಾಗಿ, ಯಾವ ರೀತಿ ಭಾರತದ ಆಯುರ್ವೇದ ಮತ್ತು ಯೋಗ ಕುರಿತು ಚರ್ಚೆ ನಡೆಯುತ್ತಿದೆ ಎನ್ನುವುದನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ನೋಡಿ. ಕೊರೋನಾ ದೃಷ್ಟಿಯಲ್ಲಿಟ್ಟುಕೊಂಡು, ಆಯುಷ್ ಸಚಿವಾಲಯವು ರೋಗನಿರೋಧಕತೆ (ಇಮ್ಯೂನಿಟಿ) ಹೆಚ್ಚಿಸುವುದಕ್ಕಾಗಿ ಯಾವ ಪ್ರೋಟೋಕಾಲ್ ನೀಡಿತ್ತೋ, ಅದನ್ನು ತಾವೆಲ್ಲರೂ ಅನುಸರಿಸುತ್ತಿದ್ದೀರಿ ಎಂಬ ನಂಬಿಕೆ ನನಗಿದೆ. ಆಯುಷ್ ಸಚಿವಾಲಯ ಜಾರಿಗೊಳಿಸಿರುವ ಬಿಸಿನೀರು, ಕಷಾಯ ಸೇವನೆ ಮತ್ತು ಇತರ ಮಾರ್ಗಸೂಚಿಗಳನ್ನು ನೀವು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳ ಪ್ರಯೋಜನವಾಗುತ್ತದೆ.
ಸ್ನೇಹಿತರೇ, ಅನೇಕ ಬಾರಿ ನಾವು ನಮ್ಮ ಸಾಮರ್ಥ್ಯ ಮತ್ತು ಶ್ರೀಮಂತ ಪರಂಪರೆಯನ್ನು ಗುರುತಿಸಲು ನಿರಾಕರಿಸುವುದು ಒಂದು ದುರದೃಷ್ಟವಾಗಿದೆ. ಆದರೆ, ಪ್ರಪಂಚದ ಬೇರೊಂದು ದೇಶ, ಪುರಾವೆ ಆಧರಿತ ಸಂಶೋಧನೆಯ (evidence based research) ಆಧಾರದ ಮೇಲೆ ಅದೇ ಮಾತನ್ನು ಹೇಳುತ್ತದೆಯೋ, ನಮ್ಮದೇ ಸೂತ್ರವನ್ನು ನಮಗೇ ಕಲಿಸುತ್ತದೆಯೋ, ಆಗ ನಾವು ಅದನ್ನು ಕೈನೀಡಿ ತೆಗೆದುಕೊಳ್ಳುತ್ತೇವೆ. ಬಹಶಃ ಇದರ ಹಿಂದೆ ಬಹುದೊಡ್ಡ ಕಾರಣವಿರಬಹುದು – ನೂರಾರು ವರ್ಷಗಳು ನಾವು ಗುಲಾಮಗಿರಿಯಲ್ಲಿದ್ದೆವು. ಈ ಕಾರಣದಿಂದಾಗಿ ಕೆಲವೊಮ್ಮೆ, ನಮಗೆ ನಮ್ಮದೇ ಸಾಮರ್ಥ್ಯದ ಬಗ್ಗೆ ನಂಬಿಕೆ ಇರುವುದಿಲ್ಲ. ನಮ್ಮ ಆತ್ಮ ವಿಶ್ವಾಸ ಕಡಿಮೆ ಎನಿಸಿಬಿಡುತ್ತದೆ. ಆದ್ದರಿಂದ, ನಾವು ನಮ್ಮ ದೇಶದ ಉತ್ತಮ ವಿಷಯಗಳನ್ನು, ನಮ್ಮ ಸಾಂಪ್ರದಾಯಿಕ ಸಿದ್ಧಾಂತಗಳನ್ನು, ಪುರಾವೆ ಆಧರಿತ ಸಂಶೋಧನೆಯ ಆಧಾರದಲ್ಲಿ, ಮುಂದುವರಿಸುವ ಬದಲು, ಅದನ್ನು ಬಿಟ್ಟು ಬಿಡುತ್ತೇವೆ ಮತ್ತು, ಕೀಳೆಂದು ಭಾವಿಸುತ್ತೇವೆ. ಭಾರತದ ಯುವಪೀಳಿಗೆ ಈಗ ಈ ಸವಾಲನ್ನು ಸ್ವೀಕರಿಸಬೇಕಿದೆ. ಪ್ರಪಂಚ ಯಾವರೀತಿ ಯೋಗವನ್ನು ಸಂತೋಷದಿಂದ ಸ್ವೀಕರಿಸಿದೆಯೋ ಅದೇರೀತಿಯಲ್ಲಿ, ಸಾವಿರಾರು ವರ್ಷಗಳಷ್ಟು ಹಳೆಯದಾದ, ನಮ್ಮ ಆಯುರ್ವೇದದ ಸಿದ್ಧಾಂತಗಳನ್ನು ಕೂಡಾ ಪ್ರಪಂಚ ಖಂಡಿತವಾಗಿಯೂ ಸ್ವೀಕರಿಸುತ್ತದೆ. ಹೌದು. ಇದಕ್ಕಾಗಿ ಯುವ ಪೀಳಿಗೆ ಸಂಕಲ್ಪ ಮಾಡಬೇಕಿದೆ ಮತ್ತು ವಿಶ್ವಕ್ಕೆ ಅರ್ಥವಾಗುವ ಅದೇ ವೈಜ್ಞಾನಿಕ ಭಾಷೆಯಲ್ಲಿ ನಾವು ತಿಳಿಸಿ ಹೇಳಬೇಕಾಗುತ್ತದೆ, ಮಾಡಿ ತೋರಿಸಲೇಬೇಕಾಗುತ್ತದೆ.
ಸ್ನೇಹಿತರೆ, ಕೋವಿಡ್ -19 ಕಾರಣದಿಂದಾಗಿ, ನಾವು ಕೆಲಸ ಮಾಡುವ ರೀತಿಯಲ್ಲಿ, ನಮ್ಮ ಜೀವನ ಶೈಲಿಯಲ್ಲಿ ಮತ್ತು ನಮ್ಮ ಅಭ್ಯಾಸಗಳ ಮೇಲೆ ಕೂಡಾ ಸಹಜ ರೀತಿಯಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತಿವೆ. ಈ ಬಿಕ್ಕಟ್ಟು ವಿವಿಧ ವಿಷಯಗಳ ಕುರಿತು ನಮ್ಮ ತಿಳಿವಳಿಕೆ ಮತ್ತು ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದೆ ಎನ್ನುವುದು ನಿಮ್ಮೆಲ್ಲರಿಗೂ ಅನುಭವವಾಗಿರಬಹುದು. ನಮ್ಮ ಸುತ್ತಮುತ್ತಲೂ ನಾವು ನೋಡುತ್ತಿರುವ ಪರಿಣಾಮಗಳಲ್ಲಿ ಮೊದಲನೆಯದೆಂದರೆ – ಮಾಸ್ಕ್ ಧರಿಸುವುದು ಮತ್ತು ನಮ್ಮ ಮುಖವನ್ನು ಮುಚ್ಚಿಕೊಂಡಿರುವುದು. ಕೊರೋನಾದಿಂದಾಗಿ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಮಾಸ್ಕ್ ಕೂಡಾ ನಮ್ಮ ಜೀವನದ ಒಂದು ಭಾಗವೇ ಆಗಿಹೋಗಿದೆ. ಅಂದಹಾಗೆ ನಮ್ಮ ಸುತ್ತಮುತ್ತಲಿನ ಬಹಳಷ್ಟು ಜನರು ಮಾಸ್ಕ್ ಧರಿಸಿ ಕಾಣಿಸಿಕೊಳ್ಳಬಹುದೆಂಬ ಅಭ್ಯಾಸ ನಮಗೆಂದೂ ಇರಲಿಲ್ಲ, ಆದರೆ ಈಗ ಇದೇ ಅಭ್ಯಾಸವಾಗುತ್ತಿದೆ. ಅಂದಹಾಗೆ, ಮಾಸ್ಕ್ ಧರಿಸುವವರೆಲ್ಲಾ ರೋಗಿಗಳು ಎಂದರ್ಥವಲ್ಲ. ಮತ್ತು, ನಾನು ಮಾಸ್ಕ್ ಕುರಿತು ಮಾತನಾಡುವಾಗ, ನನಗೆ ಒಂದು ಹಳೆಯ ಮಾತು ನೆನಪಿಗೆ ಬರುತ್ತದೆ. ನಿಮಗೆಲ್ಲರಿಗೂ ನೆನಪಿರಬಹುದು. ಯಾರಾದರೊಬ್ಬ ನಾಗರಿಕ ಹಣ್ಣುಗಳನ್ನು ಖರೀದಿಸುತ್ತಿದ್ದರೆ, ಅಕ್ಕ ಪಕ್ಕದವರು, ನೆರೆಹೊರೆಯವರು ಅವರನ್ನು – ನಿಮ್ಮ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವೇ? ಎಂದು ಖಂಡಿತವಾಗಿಯೂ ಕೇಳುತ್ತಿದ್ದಂತಹ ಅನೇಕ ಸ್ಥಳಗಳು ನಮ್ಮ ದೇಶದಲ್ಲಿದ್ದ ಕಾಲವೊಂದಿತ್ತು. ಅಂದರೆ,ಹಣ್ಣನ್ನು ಕೇವಲ ಅನಾರೋಗ್ಯದ ಸಮಯದಲ್ಲಿ ಮಾತ್ರಾ ತಿನ್ನುತ್ತಾರೆ ಎನ್ನುವ ಕಲ್ಪನೆಯಿತ್ತು. ಆದಾಗ್ಯೂ, ಕಾಲ ಬದಲಾಯಿತು ಮತ್ತು ಈ ಕಲ್ಪನೆಯೂ ಬದಲಾಯಿತು. ಅಂತೆಯೇ, ಮಾಸ್ಕ್ ಕುರಿತ ಕಲ್ಪನೆ ಕೂಡಾ ಈಗ ಬದಲಾಗುತ್ತದೆ. ಮಾಸ್ಕ್ ಈಗ ಸಭ್ಯ ಸಮಾಜದ ಪ್ರತೀಕವೆನಿಸಿಕೊಳ್ಳುತ್ತದೆ. ರೋಗದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕೆಂದರೆ, ಮತ್ತು ಇತರರನ್ನು ಕೂಡಾ ರಕ್ಷಿಸಬೇಕೆಂದರೆ, ನೀವು ಮಾಸ್ಕ್ ಧರಿಸಲೇ ಬೇಕು ಮತ್ತು ನನ್ನದೊಂದು ಸರಳ ಸಲಹೆ ಇದೆ – ಮಡಿಚಿ, ಮುಖ ಮುಚ್ಚಿಕೊಳ್ಳಲೇಬೇಕು.
ಸ್ನೇಹಿತರೇ ನಮ್ಮ ಸಮಾಜದಲ್ಲಿ ಮತ್ತೊಂದು ದೊಡ್ಡ ಜಾಗೃತಿ ಉಂಟಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಉಂಟಾಗುವ ಹಾನಿ ಏನು ಎಂದು ಈಗ ಎಲ್ಲರೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ-ಇಲ್ಲಿ, ಎಲ್ಲಿಯಾದರೂ ಉಗುಳುವುದು ಕೆಟ್ಟ ಅಭ್ಯಾಸಗಳ ಒಂದು ಭಾಗವಾಗಿತ್ತು. ಇದು ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಗಂಭೀರ ಸವಾಲನ್ನು ಒಡ್ಡುತ್ತದೆ. ಒಂದು ರೀತಿಯಲ್ಲಿ ನೋಡಿದರೆ, ನಮಗೆ ಯಾವಾಗಲೂ ಈ ಸಮಸ್ಯೆಯ ಬಗ್ಗೆ ತಿಳಿದೇ ಇತ್ತು, ಆದರೆ ಈ ಸಮಸ್ಯೆ ಸಮಾಜದಲ್ಲಿ ಅಂತ್ಯವಾಗುವಂತೆ ಕಾಣುತ್ತಲೇ ಇರಲಿಲ್ಲ – ಈ ಕೆಟ್ಟ ಅಭ್ಯಾಸವನ್ನು, ಶಾಶ್ವತವಾಗಿ ಅಂತ್ಯಗೊಳಿಸುವ ಸಮಯ ಈಗ ಬಂದಿದೆ. “better late than never” ಎಂದು ಹೇಳುತ್ತಾರಲ್ಲವೇ. ವಿಳಂಬ ಖಂಡಿತವಾಗಿಯೂ ಆಗಿರಬಹುದು, ಆದರೆ, ಈ ಉಗುಳುವ ಅಭ್ಯಾಸವನ್ನು ಈಗ ಬಿಡಲೇ ಬೇಕು. ಈ ವಿಷಯ ಮೂಲಭೂತ ನೈರ್ಮಲ್ಯದ (basic hygiene) ಮಟ್ಟವನ್ನು ಯಾವಾಗ ಹೆಚ್ಚಿಸುತ್ತದೆಯೋ, ಆಗ ಕೋರೊನಾ ಸೋಂಕು ಹರಡದಂತೆ ತಡೆಯವುದಕ್ಕೆ ಕೂಡಾ ಸಹಾಯವಾಗುತ್ತದೆ.
ನನ್ನ ಪ್ರೀತಿಯ ದೇಶಬಾಂಧವರೇ, ಇಂದು ನಾನು ನಿಮ್ಮೊಂದಿಗೆ ‘ಮನದ ಮಾತು’ಆಡುತ್ತಿರುವ ಈ ದಿನ ಅಕ್ಷಯ ತೃತೀಯ ಪವಿತ್ರ ಹಬ್ಬವೂ ಆಗಿರುವುದು ಸಂತೋಷದ ಕಾಕತಾಳೀಯ ವಿಷಯವೂ ಹೌದು. ಸ್ನೇಹಿತರೆ, ‘ಕ್ಷಯ’ ಎನ್ನುವುದರ ಅರ್ಥ ವಿನಾಶ ಎಂದು, ಆದರೆ ಯಾವುದು ಎಂದಿಗೂ ನಾಶವಾಗುವುದಿಲ್ಲವೋ, ಯಾವುದು ಎಂದಿಗೂ ಅಂತ್ಯವಾಗುವುದಿಲ್ಲವೋ, ಅದೇ ‘ಅಕ್ಷಯ’. ನಾವೆಲ್ಲರೂ ನಮ್ಮ ಮನೆಗಳಲ್ಲಿ ಪ್ರತಿ ವರ್ಷ ಈ ಹಬ್ಬವನ್ನು ಆಚರಿಸುತ್ತೇವೆ ಆದರೆ, ಈ ವರ್ಷ ಇದು ನಮಗೆ ವಿಶೇಷ ಮಹತ್ವದ್ದಾಗಿದೆ. ಇಂತಹ ಕಠಿಣ ಸಮಯದಲ್ಲಿ ನಮ್ಮ ಆತ್ಮ, ನಮ್ಮ ಭಾವನೆ, ‘ಅಕ್ಷಯ’ ಎನ್ನುವುದನ್ನು ನಮಗೆ ನೆನಪಿಸುವಂತಹ ದಿನ ಇದಾಗಿದೆ. ಎಷ್ಟೇ ತೊಂದರೆಗಳು ಹಾದಿಯಲ್ಲಿ ತಡೆಯುಂಟುಮಾಡಿದರೂ, ಎಷ್ಟೇ ವಿಪತ್ತುಗಳು ಎದುರಾದರೂ, ಎಷ್ಟೇ ರೋಗಗಳನ್ನು ಎದುರಿಸಬೇಕಾಗಿ ಬಂದರೂ, – ಇವುಗಳೊಂದಿಗೆ ಹೋರಾಡುವ ಮತ್ತುಎದುರಿಸುವ ನಮ್ಮ ಮಾನವೀಯ ಭಾವನೆಗಳು ಅಕ್ಷಯ ಎನ್ನುವುದನ್ನು ಈ ದಿನ ನಮಗೆ ನೆನಪಿಸುತ್ತದೆ. ಇದೇ ದಿನದಂದು ಶ್ರೀಕೃಷ್ಣ ಪರಮಾತ್ಮ ಮತ್ತು ಸೂರ್ಯದೇವರ ಆಶೀರ್ವಾದದಿಂದ ಪಾಂಡವರಿಗೆ ಅಕ್ಷಯ ಪಾತ್ರೆ ದೊರಕಿತೆಂದು ನಂಬಲಾಗುತ್ತದೆ. ಅಕ್ಷಯ ಪಾತ್ರೆ ಅಂದರೆ, ಅದರಲ್ಲಿ ಭೋಜನ ಎಂದಿಗೂ ಖಾಲಿಯಾಗದಂತಹ ಪಾತ್ರೆ ಎಂದರ್ಥ. ನಮ್ಮ ಅನ್ನದಾತ ರೈತರು ಪ್ರತಿಯೊಂದು ಪರಿಸ್ಥಿತಿಯಲ್ಲೂ, ದೇಶಕ್ಕಾಗಿ, ನಮ್ಮೆಲ್ಲರಿಗಾಗಿ ಇದೇ ಭಾವನೆಯಿಂದ ಶ್ರಮಿಸುತ್ತಾರೆ. ಇವರ ಶ್ರಮದಿಂದಲೇ, ಇಂದು ನಮ್ಮೆಲ್ಲರಿಗಾಗಿ, ಬಡವರಿಗಾಗಿ, ದೇಶದಲ್ಲಿ ಅಕ್ಷಯ ಅನ್ನದ-ಖಜಾನೆಯಿದೆ. ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಮ್ಮ ಪರಿಸರ, ಅರಣ್ಯ, ನದಿಗಳು ಮತ್ತು ಸಂಪೂರ್ಣ ಪರಿಸರ ವ್ಯವಸ್ಥೆಯ (Ecosystem) ರಕ್ಷಣೆ ಬಗ್ಗೆ ಕೂಡಾ ಈ ಅಕ್ಷಯ ತೃತೀಯ ದಿನದಂದುನಾವೆಲ್ಲರೂ ಯೋಚಿಸಬೇಕಾಗಿದೆ. ನಾವು ಅಕ್ಷಯವಾಗಿ ಉಳಿಯಬೇಕೆಂದರೆ ನಾವು ಮೊದಲು ನಮ್ಮ ಭೂಮಿ ‘ಅಕ್ಷಯ’ವಾಗಿ ಇರಬೇಕು ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ.
ಅಕ್ಷಯ ತೃತೀಯಾದ ಈ ಹಬ್ಬವು ದಾನದ ಶಕ್ತಿ ಅಂದರೆ Power of Giving ಸಂದರ್ಭ ಕೂಡಾ ಆಗಿದೆ ಎಂದು ನಿಮಗೆ ತಿಳಿದಿದೆಯೇ. ನಾವು ಮನಃಪೂರ್ವಕವಾಗಿ ಏನನ್ನೇ ನೀಡಿದರೂ, ಅದು ನಿಜವಾದ ಮಹತ್ವ ಹೊಂದಿರುತ್ತದೆ. ನಾವು ಏನು ನೀಡುತ್ತೇವೆ ಮತ್ತು ಎಷ್ಟು ನೀಡುತ್ತೇವೆ ಎನ್ನುವುದು ಮುಖ್ಯವಲ್ಲ. ಬಿಕ್ಕಟ್ಟಿನ ಈ ಸಮಯದಲ್ಲಿ, ನಮ್ಮ ಚಿಕ್ಕದೊಂದು ಪ್ರಯತ್ನ, ನಮ್ಮ ಸುತ್ತ ಮುತ್ತಲಿನ ಬಹಳಷ್ಟು ಜನರಿಗೆ ಬಹು ದೊಡ್ಡ ಬೆಂಬಲವಾಗುತ್ತದೆ. ಸ್ನೇಹಿತರೆ, ಜೈನ ಸಂಪ್ರದಾಯದಲ್ಲಿ ಕೂಡಾ ಇದು ಬಹಳ ಪವಿತ್ರ ದಿನವಾಗಿದೆ ಏಕೆಂದರೆ, ಇದು ಪ್ರಥಮ ತೀರ್ಥಂಕರ ಭಗವಾನ್ ವೃಷಭದೇವ್ ಅವರ ಜೀವನದಲ್ಲಿ ಒಂದು ಪ್ರಮುಖ ದಿನವಾಗಿತ್ತು. ಇದರಿಂದಾಗಿ ಜೈನ ಸಮಾಜ ಇದನ್ನು ಒಂದು ಹಬ್ಬದ ರೂಪದಲ್ಲಿ ಆಚರಿಸುತ್ತಾರೆ ಮತ್ತು ಈ ದಿನವನ್ನು ಜನರು ಯಾವುದೇ ಶುಭ ಕಾರ್ಯ ಆರಂಭಿಸಲು ಇಷ್ಟ ಪಡುತ್ತಾರೆ ಎನ್ನುವುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಇಂದು ಏನಾದರೂ ಹೊಸದನ್ನು ಆರಂಭಿಸುವ ದಿನವಾಗಿರುವುದರಿಂದ, ನಾವೆಲ್ಲರೂ ಸೇರಿ, ನಮ್ಮ ಪ್ರಯತ್ನಗಳಿಂದ, ನಮ್ಮ ಭೂಮಿಯನ್ನು ಅಕ್ಷಯ ಮತ್ತು ಅವಿನಾಶಿ ಮಾಡುವ ಸಂಕಲ್ಪ ಮಾಡಬಹುದಲ್ಲವೇ? ಸ್ನೇಹಿತರೇ, ಇಂದು ಭಗವಾನ್ ಬಸವೇಶ್ವರ ಜಯಂತಿ ಕೂಡಾ. ಭಗವಾನ್ ಬಸವೇಶ್ವರರನ್ನು ಮತ್ತು ಅವರ ಸಂದೇಶಗಳನ್ನು ಆಗಿಂದಾಗ್ಗೆ ಸ್ಮರಿಸಲು ಮತ್ತು ಕಲಿಯಲು ನನಗೆ ಅವಕಾಶ ದೊರೆಯುತ್ತಿರುವುದು ನನ್ನ ಸೌಭಾಗ್ಯವಾಗಿದೆ. ದೇಶ ಮತ್ತು ವಿದೇಶಗಳಲ್ಲಿರುವ ಭಗವಾನ್ ಬಸವೇಶ್ವರರ ಅನುಯಾಯಿಗಳಿಗೆ ಈ ಜಯಂತಿಯಂದು ಅನೇಕಾನೇಕ ಶುಭಾಶಯಗಳು.
ಸ್ನೇಹಿತರೇ, ರಂಜಾನಿನ ಪವಿತ್ರ ಮಾಸವೂ ಕೂಡಾ ಆರಂಭವಾಗಿದೆ. ಕಳೆದ ಬಾರಿ ರಂಜಾನ್ ಆಚರಿಸಿದಾಗ, ಈ ಬಾರಿ ರಂಜಾನ್ ಸಮಯದಲ್ಲಿ ಇಷ್ಟು ದೊಡ್ಡ ಕಷ್ಟ ಎಂದುರಿಸಬೇಕಾಗುತ್ತದೆ ಎಂದು ಯಾರೂ ಕೂಡಾ ಯೋಚಿಸಿರಲಿಲ್ಲ. ಆದರೆ, ಈಗ ಸಂಪೂರ್ಣ ವಿಶ್ವದಲ್ಲಿ ಈ ಕಷ್ಟ ಎದುರಾಗಿರುವಾಗ, ಈ ರಂಜಾನ್ ಅನ್ನು ಸಂಯಮ, ಸದ್ಭಾವನೆ, ಸಂವೇದನಾಶೀಲತೆ, ಮತ್ತು ಸೇವಾ ಭಾವದ ಪ್ರತೀಕವಾಗಿ ಮಾಡುವ ಅವಕಾಶ ನಮ್ಮ ಮುಂದಿದೆ. ಈ ಬಾರಿ ನಾವು, ಈದ್ ಬರುವುದಕ್ಕೆ ಮುನ್ನವೇ ಪ್ರಪಂಚ ಕೊರೋನಾದಿಂದ ಮುಕ್ತವಾಗಲಿ ಮತ್ತು ನಾವು ಮೊದಲಿನಂತೆಯೇ ಭರವಸೆ ಮತ್ತು ಉತ್ಸಾಹದಿಂದ ಈದ್ ಆಚರಣೆ ಮಾಡುವಂತಾಗಲಿ ಎಂದು ಮೊದಲಿಗಿಂತ ಹೆಚ್ಚು ಪ್ರಾರ್ಥನೆ ಮಾಡೋಣ. ರಂಜಾನಿನ ಈ ದಿನಗಳಲ್ಲಿ ಸ್ಥಳೀಯ ಆಡಳಿತದ ಮಾರ್ಗಸೂಚಿಗಳನ್ನು ಅನುಸರಣೆ ಮಾಡುತ್ತಾ, ಕೋರೊನಾ ವಿರುದ್ಧ ನಡೆಯುತ್ತಿರುವ ಈ ಯುದ್ಧವನ್ನು ನಾವು ಮತ್ತಷ್ಟು ಬಲಪಡಿಸುತ್ತೇವೆ ಎಂಬ ನಂಬಿಕೆ ನನಗಿದೆ. ರಸ್ತೆಗಳಲ್ಲಿ, ಮಾರುಕಟ್ಟೆಗಳಲ್ಲಿ, ಮೊಹಲ್ಲಾಗಳಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳುವ ನಿಯಮಗಳ ಪಾಲನೆ ಮಾಡುವುದು ಈಗ ಬಹಳ ಅಗತ್ಯವಾಗಿದೆ. ಎರಡು ಗಜ ಅಂತರ ಮತ್ತು ಮನೆಯಿಂದ ಹೊರಗೆ ಬರಬಾರದೆನ್ನುವ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಎಲ್ಲಾ ಸಮುದಾಯ ಮುಖಂಡರಿಗೆ (Community leaders) ನಾನು ಇಂದು ಕೃತಜ್ಞತೆ ಅರ್ಪಿಸುತ್ತಿದ್ದೇನೆ. ವಾಸ್ತವದಲ್ಲಿ, ಈ ಬಾರಿ ಭಾರತ ಸೇರಿದಂತೆ, ವಿಶ್ವಾದ್ಯಂತ ಹಬ್ಬದ ಆಚರಣೆಯ ಸ್ವರೂಪವನ್ನೇ ಕೊರೋನಾ ಬದಲಾಯಿಸಿಬಿಟ್ಟಿದೆ, ವಿಧಾನವನ್ನೇ ಬದಲಾಯಿಸಿಬಿಟ್ಟಿದೆ. ಇತ್ತೀಚೆಗೆ ಇಲ್ಲಿ ಕೂಡಾ ಬಿಹು, ಬೈಸಾಖೀ, ಪುಥಂಡೂ, ವಿಶೂ, ಒಡಿಯಾ ಹೊಸ ವರ್ಷ ಹೀಗೆ ಅನೇಕ ಹಬ್ಬಗಳು ಬಂದಿದ್ದವು. ಜನರು ಈ ಹಬ್ಬಗಳನ್ನು ಮನೆಯಲ್ಲೇ ಇದ್ದುಕೊಂಡು, ಬಹಳ ಸರಳವಾಗಿ ಮತ್ತು ಸಮಾಜದ ಪರ ಶುಭ ಚಿಂತನೆಯೊಂದಿಗೆ ಹಬ್ಬಗಳನ್ನು ಆಚರಿಸಿದರು ಎನ್ನುವುದನ್ನು ನಾವು ನೋಡಿದೆವು. ಸಾಧಾರಣವಾಗಿ, ಈ ಹಬ್ಬಗಳಂದು ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಬಹಳಷ್ಟು ಉತ್ಸಾಹ ಮತ್ತು ಭರವಸೆಯೊಂದಿಗೆ ಆಚರಿಸುತ್ತಿದ್ದರು. ಮನೆಯಿಂದ ಹೊರಗೆ ಬಂದು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈ ಬಾರಿ, ಪ್ರತಿಯೊಬ್ಬರೂ ಸಂಯಮದಿಂದ ಇದ್ದರು. ಲಾಕ್ ಡೌನ್ ನಿಯಮಗಳನ್ನು ಪಾಲಿಸಿದರು. ಈ ಬಾರಿ ನಮ್ಮ ಕ್ರಿಶ್ಚಿಯನ್ ಸ್ನೇಹಿತರು ಕೂಡಾ ಮನೆಯಲ್ಲೇ ‘ಈಸ್ಟರ್’ ಆಚರಿಸಿದ್ದನ್ನು ನಾವು ನೋಡಿದೆವು. ನಮ್ಮ ಸಮಾಜ, ನಮ್ಮ ದೇಶಕ್ಕಾಗಿ ಈ ಜವಾಬ್ದಾರಿ ನಿಭಾಯಿಸುವುದು ಇಂದಿನ ಅತ್ಯಂತ ಅಗತ್ಯವಾಗಿದೆ. ಆಗಲೇ ನಾವು ಕೊರೊನಾ ಹರಡುವಿಕೆಯನ್ನು ತಡೆಗಟ್ಟುವುದರಲ್ಲಿ ಸಫಲರಾಗುತ್ತೇವೆ. ಕೊರೊನಾದಂತಹ ಜಾಗತಿಕ ಮಹಾಮಾರಿಯನ್ನು ಸೋಲಿಸಲು ನಮಗೆ ಸಾಧ್ಯವಾಗುತ್ತದೆ.
ನನ್ನ ಪ್ರೀತಿಯ ದೇಶ ಬಾಂಧವರೆ, ಈ ಜಾಗತಿಕ ಮಹಾಮಾರಿಯ ಬಿಕ್ಕಟ್ಟಿನ ಸಮಯದಲ್ಲಿ, ನಾನು ನಿಮ್ಮ ನಡುವೆ ನಿಮ್ಮ ಕುಟುಂಬದ ಓರ್ವ ಸದಸ್ಯನಾಗಿರುವುದರಿಂದ, ಮತ್ತು ನೀವೆಲ್ಲರೂ ನನ್ನ ಕುಟುಂಬದವರೇ ಆಗಿರುವುದರಿಂದ ಕೆಲವು ಸೂಚನೆಗಳನ್ನು ನೀಡುವುದು, ಕೆಲವು ಸಲಹೆ ನೀಡುವುದು, ನನ್ನ ಜವಾಬ್ದಾರಿಯೂ ಆಗಿದೆ. ನನ್ನ ದೇಶ ಬಾಂಧವರಲ್ಲಿ, ನಿಮ್ಮಲ್ಲಿ ನಾನು ಮನವಿ ಮಾಡುವುದೇನೆಂದರೆ, – ನಮ್ಮ ನಗರದಲ್ಲಿ, ನಮ್ಮ ಗ್ರಾಮದಲ್ಲಿ, ನಮ್ಮ ಬೀದಿಯಲ್ಲಿ, ನಮ್ಮ ಕಚೇರಿಯಲ್ಲಿ, ಇದುವರೆಗೂ ಕೊರೊನಾ ಬಂದಿಲ್ಲ, ಆದ್ದರಿಂದ ಇನ್ನು ಬರುವುದಿಲ್ಲ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಸಿಲುಕಬೇಡಿ, ಇಂತಹ ವಿಚಾರಗಳನ್ನು ಮನದಲ್ಲಿ ಇಟ್ಟುಕೊಳ್ಳಬೇಡಿ. ನೋಡಿ ಇಂತಹ ತಪ್ಪು ಎಂದಿಗೂ ಮಾಡಬೇಡಿ. ಪ್ರಪಂಚದ ಅನುಭವ ನಮಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತಿದೆ. ಮತ್ತು, ನಮ್ಮಲ್ಲಿ ಮೇಲಿಂದ ಮೇಲೆ ಹೇಳಲಾಗುತ್ತದೆ –‘ಎಚ್ಚರ ತಪ್ಪಿದರೆ ದುರ್ಘಟನೆ ತಪ್ಪದು’ ಎಂದು. ನೆನಪಿಡಿ, ನಮ್ಮ ಪೂರ್ವಜರು ಈ ಎಲ್ಲಾ ವಿಷಯಗಳಲ್ಲೂ ನಮಗೆ ಬಹಳ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಪೂರ್ವಜರು ಹೀಗೆ ಹೇಳಿದ್ದಾರೆ. –
‘ಅಗ್ನಿಃ ಶೇಷಮ್ ಋಣಃ, ಶೇಷಮ್ ,
ವ್ಯಾಧಿಃ, ಶೇಷಮ್ ತಥೈವಚ.
ಪುನಃ ಪುನಃ ಪ್ರವರ್ಧೇತ್
ತಸ್ಮಾತ್ ಶೇಷಮ್ ನ ಕಾರಯೇತ್.
ಅರ್ಥಾತ್, ಲಘುವಾಗಿ ತೆಗೆದುಕೊಂಡ ಬೆಂಕಿ, ಸಾಲ ಮತ್ತು ರೋಗ, ಸಮಯ ದೊರೆತ ತಕ್ಷಣ, ಪುನಃ ಹೆಚ್ಚಾಗಿ ಅಪಾಯಕಾರಿಯಾಗುತ್ತದೆ. ಆದ್ದರಿಂದ ಇದಕ್ಕೆ ಪೂರ್ಣ ರೀತಿಯ ಚಿಕಿತ್ಸೆ ಅತ್ಯಗತ್ಯ. ಆದ್ದರಿಂದ ಅತಿಯಾದ ಉತ್ಸಾಹದಲ್ಲಿ, ಸ್ಥಳೀಯ ಮಟ್ಟದಲ್ಲಿ ಎಲ್ಲಿಯೂ ಕೂಡಾ ಯಾವುದೇ ನಿರ್ಲಕ್ಷ್ಯ ಸಲ್ಲದು. ಇದನ್ನು ಸದಾಕಾಲವೂ ಗಮನದಲ್ಲಿ ಇಟ್ಟುಕೊಂಡಿರಲೇ ಬೇಕು. ಮತ್ತು, ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ – ಎರಡು ಗಜ ಅಂತರ ಇರಿಸಿಕೊಳ್ಳಿ, ಆರೋಗ್ಯವಾಗಿರಿ – ಎರಡು ಗಜ ಅಂತರ, ಬಹಳ ಅಗತ್ಯ – (“दोगजदूरी, बहुतहैज़रूरी”) . ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ ಬಯಸುತ್ತಾ, ನಾನು ನನ್ನ ಮಾತನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಮುಂದಿನ ‘ಮನ್ ಕಿ ಬಾತ್’ ಸಮಯದಲ್ಲಿ ನಾವು ಭೇಟಿಯಾದಾಗ, ಈ ಜಾಗತಿಕ ಮಹಾಮಾರಿಯಿಂದ ಸ್ವಲ್ಪ ಮುಕ್ತಿಯ ವಿಷಯ ವಿಶ್ವದೆಲ್ಲೆಡೆಯಿಂದ ಬರಲಿ, ಮಾನವ ಜನಾಂಗ ಈ ಕಷ್ಟದಿಂದ ಹೊರ ಬರಲಿ – ಎನ್ನುವ ಈ ಪ್ರಾರ್ಥನೆಯೊಂದಿಗೆ ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದ.
ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿ’ ಸಾಮಾನ್ಯವಾಗಿ ನಾನು ಹಲವಾರು ವಿಷಯಗಳನ್ನು ಚರ್ಚಿಸುತ್ತೇನೆ. ಆದರೆ ಇಂದು ದೇಶ ಮತ್ತು ವಿಶ್ವದ ಮನದಲ್ಲಿ ಕೇವಲ ಒಂದೇ ಒಂದು ಮಾತಿದೆ – ‘ಕರೋನಾ ಜಾಗತಿಕ ಮಹಾಮಾರಿ’ ಯಿಂದ ಬಂದಂತಹ ಈ ಭಯಾನಕ ಸಂಕಟ. ಇಂಥದರಲ್ಲಿ ನಾನು ಬೇರೆ ವಿಷಯಗಳ ಬಗ್ಗೆ ಮಾತನಾಡುವುದು ಉಚಿತವಲ್ಲ. ಆದರೆ ಎಲ್ಲಕ್ಕಿಂತ ಮೊದಲು ದೇಶಬಾಂಧವರಲ್ಲಿ ಕ್ಷಮೆ ಕೇಳುತ್ತೇನೆ. ನೀವು ನನ್ನನ್ನು ಖಂಡಿತ ಕ್ಷಮಿಸುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ಏಕೆಂದರೆ ನೀವು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುವಂತಹ ನಿರ್ಣಯಗಳನ್ನು ಕೈಗೊಳ್ಳಬೇಕಾಯಿತು. ವಿಶೇಷವಾಗಿ ನನ್ನ ಬಡ ಸೋದರ ಸೋದರಿಯರಿಗೆ ಎಂಥ ಪ್ರಧಾನ ಮಂತ್ರಿ ಇವರು, ನಮ್ಮನ್ನು ಸಂಕಷ್ಟಕ್ಕೆ ಈಡು ಮಾಡಿದ್ದಾರೆ ಎಂದೆನಿಸಬಹುದು. ಅವರಲ್ಲೂ ನಾನು ವಿಶೇಷವಾಗಿ ಕ್ಷಮೆ ಯಾಚಿಸುತ್ತೇನೆ. ಬಹುಶಃ ಬಹಳಷ್ಟು ಜನರು ಹೇಗೆ ನಮ್ಮನ್ನು ಮನೆಯಲ್ಲಿ ಕೂಡಿಹಾಕಿದ್ದಾರೆ ಎಂದು ನನ್ನ ಮೇಲೆ ಬೇಸರಗೊಂಡಿರಬಹುದು. ನಿಮ್ಮ ಕಷ್ಟವನ್ನು ನಾನು ಬಲ್ಲೆ, ನಿಮ್ಮ ಚಿಂತೆಯನ್ನೂ ನಾನು ಬಲ್ಲೆ. ಆದರೆ ಭಾರತದಂತಹ 130 ಕೋಟಿ ಜನಸಂಖ್ಯೆಯ ದೇಶಕ್ಕೆ ಕರೋನಾ ವಿರುದ್ಧದ ಹೋರಾಟಕ್ಕೆ ಈ ಮಾರ್ಗ ಬಿಟ್ಟು ಬೇರಾವ ದಾರಿಯೂ ಇರಲಿಲ್ಲ. ಕರೋನಾ ವಿರುದ್ಧದ ಯುದ್ಧ ಜೀವನ ಮತ್ತು ಮೃತ್ಯುವಿನೊಡನೆಯ ಯುದ್ಧವಾಗಿದೆ. ಈ ಯುದ್ಧದಲ್ಲಿ ನಾವು ಗೆಲ್ಲಬೇಕಿದೆ. ಆದ್ದರಿಂದಲೇ ಈ ಕಠೋರ ಕ್ರಮ ಕೈಗೊಳ್ಳುವುದು ಬಹಳ ಅವಶ್ಯಕವಾಗಿತ್ತು. ಇಂಥ ಕ್ರಮ ಕೈಗೊಳ್ಳಲು ಯಾರಿಗೂ ಮನಸ್ಸಿರುವುದಿಲ್ಲ. ಆದರೆ ವಿಶ್ವದ ಪರಿಸ್ಥಿತಿಯನ್ನು ನೋಡಿದ ಮೇಲೆ ಇದೊಂದೇ ಉಳಿದಿರುವ ಮಾರ್ಗ ಎಂದೆನ್ನಿಸುತ್ತದೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಬೇಕು. ನಾನು ಮತ್ತೊಮ್ಮೆ ನಿಮಗೆ ಉಂಟಾದ ಸಮಸ್ಯೆ ಮತ್ತು ಅನಾನುಕೂಲತೆಗೆ ಕ್ಷಮೆ ಯಾಚಿಸುತ್ತೇನೆ.
ಸ್ನೇಹಿತರೇ, ನಮ್ಮಲ್ಲಿ ಹೀಗೆ ಹೇಳಲಾಗಿದೆ: ‘ಏವಂ ಏವಂ ವಿಕಾರಃ : ಅಪಿ ತರುನ್ಹಾ ಸಾಧ್ಯತೆ ಸುಖಂ’ ಅಂದರೆ ರೋಗ ಮತ್ತು ಅದರ ಪ್ರಕೋಪವನ್ನು ಆರಂಭದಲ್ಲೇ ನಿಭಾಯಿಸಬೇಕು. ನಂತರ ರೋಗ ಅಸಾಧ್ಯವಾಗಿಬಿಡುತ್ತದೆ. ಆಗ ಚಿಕಿತ್ಸೆಯೂ ಅಸಾಧ್ಯವಾಗುತ್ತದೆ. ಮತ್ತು ಇಂದು ಸಂಪೂರ್ಣ ಭಾರತ, ಪ್ರತಿ ಭಾರತೀಯ ಅದನ್ನೇ ಮಾಡುತ್ತಿದ್ದಾನೆ. ಸೋದರ ಸೋದರಿಯರೇ, ಮಾತೆಯರೇ, ಹಿರಿಯರೇ ಕೊರೊನಾ ವೈರಸ್ ವಿಶ್ವವನ್ನೇ ಬಂಧಿಸಿಬಿಟ್ಟಿದೆ. ಇದು ಜ್ಞಾನ, ವಿಜ್ಞಾನ, ಬಡವ, ಬಲ್ಲಿದ, ಅಶಕ್ತ, ಶಕ್ತಿವಂತ ಎಲ್ಲರಿಗೂ ಸವಾಲೆಸೆಯುತ್ತಿದೆ. ಇದು ಕೇವಲ ರಾಷ್ಟ್ರದ ಗಡಿಯಲ್ಲಿ ಉಳಿದಿಲ್ಲ, ಯಾವುದೇ ಕ್ಷೇತ್ರವನ್ನು ಯಾವುದೇ ಋತುಮಾನವನ್ನು ಪರಿಗಣಿಸುವುದಿಲ್ಲ. ಈ ವೈರಾಣು ಮಾನವನನ್ನು ಕೊಂದು ಬಿಡುವ, ನಾಶ ಮಾಡುವ ಹಠ ತೊಟ್ಟಿದೆ. ಅದಕ್ಕಾಗಿಯೇ ವೈರಾಣುವನ್ನು ನಾಶ ಮಾಡಲು ಎಲ್ಲರೂ, ಸಂಪೂರ್ಣ ಮಾನವ ಜಾತಿ ಒಗ್ಗಟ್ಟಾಗಿ ಸಂಕಲ್ಪ ಮಾಡಲೇಬೇಕಿದೆ. ತಾವು ಲಾಕ್ ಡೌನ್ ಪಾಲನೆ ಮಾಡುವ ಮೂಲಕ ಯಾರಿಗೋ ಉಪಕಾರ ಮಾಡುತ್ತಿದ್ದೇವೆ ಎಂದು ಕೆಲ ಜನರಿಗೆ ಅನ್ನಿಸುತ್ತಿದೆ. ಸೋದರರೇ ಈ ಭ್ರಮೆಯಲ್ಲಿರುವುದು ಉಚಿತವಲ್ಲ. ಈ ಲಾಕ್ ಡೌನ್ ನಿಮ್ಮನ್ನು ನೀವು ಕಾಪಾಡಿಕೊಳ್ಳುವ ಸಲುವಾಗಿ. ನೀವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕಿದೆ. ಮುಂಬರುವ ಕೆಲ ದಿನಗಳವರೆಗೆ ಈ ಧೈರ್ಯವನ್ನು ತೋರಲೇಬೇಕಿದೆ. ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕಿದೆ. ಸ್ನೇಹಿತರೇ, ಯಾರೂ ಕಾನೂನಿಗೆ ವಿರುದ್ಧವಾಗಿ ಹೋಗಲು ಬಯಸುವುದಿಲ್ಲ, ನಿಯಮ ಉಲ್ಲಂಘನೆ ಮಾಡಬಯಸುವುದಿಲ್ಲ ಎಂದು ನನಗೆ ಗೊತ್ತು. ಆದರೆ ಕೆಲ ಜನರು ಹೀಗೆ ಮಾಡುತ್ತಿದ್ದಾರೆ. ಏಕೆಂದರೆ ಅವರಿಗೆ ಈಗಲೂ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಅರಿವಿಲ್ಲ. ಲಾಕ್ ಡೌನ್ ನಿಯಮ ಪಾಲಿಸದಿದ್ದಲ್ಲಿ ಕರೋನಾ ವೈರಾಣುವಿನಿಂದ ಪಾರಾಗುವುದು ಕಷ್ಟ ಎಂದು ಇಂಥಹ ಜನರಿಗೆ ಹೇಳಬಯಸುತ್ತೇನೆ. ವಿಶ್ವದೆಲ್ಲೆಡೆ ಬಹಳಷ್ಟು ಜನರಿಗೆ ಇಂಥದೇ ಭ್ರಮೆ ಇತ್ತು. ಇಂದು ಅವರೆಲ್ಲ ಪಶ್ಚಾತ್ತಾಪಪಡುತ್ತಿದ್ದಾರೆ. ಸ್ನೇಹಿತರೇ, ನಮ್ಮಲ್ಲಿ ಹೀಗೆ ಹೇಳಲಾಗಿದೆ – ‘ಆರೋಗ್ಯಂ ಪರಮ ಭಾಗ್ಯಂ, ಸ್ವಾಸ್ಥ್ಯಂ ಸರ್ವಾರ್ಥ ಸಾಧನಂ’ ಅಂದರೆ ಆರೋಗ್ಯವೇ ಭಾಗ್ಯ. ವಿಶ್ವದಲ್ಲಿ ಎಲ್ಲ ಸುಖಕ್ಕೆ ಆರೋಗ್ಯವೇ ಸಾಧನವಾಗಿದೆ. ಇಂಥದ್ದರಲ್ಲಿ ನಿಯಮ ಉಲ್ಲಂಘನೆ ಮಾಡುವವರು ತಮ್ಮ ಜೀವನದೊಂದಿಗೆ ಬಹು ದೊಡ್ಡ ಚೆಲ್ಲಾಟ ಆಡುತ್ತಿದ್ದಾರೆ. ಸ್ನೇಹಿತರೇ, ಈ ಯುದ್ಧದ ಅನೇಕ ಯೋಧರು ಮನೆಯಲ್ಲಿರದೇ ಮನೆಯಿಂದ ಹೊರಬಂದು ಕರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರು ನಮ್ಮ ಮುಂಚೂಣಿಯ ಸೇನಾನಿಗಳಾಗಿದ್ದಾರೆ. ವಿಶೇಷವಾಗಿ ನಮ್ಮ ಸುಶ್ರೂಷಕ ಸೋದರಿಯರು. ಸುಶ್ರೂಷಕ ಕೆಲಸ ಮಾಡುವ ಸೋದರರು, ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ. ಇಂಥ ಸ್ನೇಹಿತರು, ಕರೋನಾವನ್ನು ಮೆಟ್ಟಿ ನಿಂತಿದ್ದಾರೆ. ಇಂದು ಅವರಿಂದ ನಾವು ಸ್ಪೂರ್ತಿ ಪಡೆಯಬೇಕಿದೆ. ಕಳೆದ ದಿನಗಳಲ್ಲಿ ನಾನು ಇಂಥ ಕೆಲ ಜನರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರ ಉತ್ಸಾಹವನ್ನು ಹೆಚ್ಚಿಸಿದ್ದೇನೆ. ಅವರೊಂದಿಗೆ ಮಾತನಾಡಿ ನನಗೂ ಹೊಸ ಹುಮ್ಮಸ್ಸು ಲಭಿಸಿದೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಈ ಬಾರಿ ಮನದ ಮಾತಿನಲ್ಲಿ ಇಂಥ ಸ್ನೇಹಿತರ ಅನುಭವ, ಅವರೊಂದಿಗೆ ನಡೆದ ಮಾತುಕತೆ, ಆ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ನನ್ನ ಮನಸ್ಸು ಬಯಸಿತ್ತು. ಎಲ್ಲಕ್ಕಿಂತ ಮೊದಲು ನಮ್ಮೊಂದಿಗೆ ಶ್ರೀ ರಾಮ್ ಗಂಪಾ ತೇಜಾ ಅವರು ಮಾತನಾಡಲಿದ್ದಾರೆ. ಅವರು ಐ ಟಿ ಉದ್ಯೋಗಿ. ಬನ್ನಿ ಅವರ ಅನುಭವವನ್ನು ಕೇಳೋಣ. ಹೇಳಿ ರಾಮ್
ರಾಮ್ ಗಂಪಾ ತೇಜಾ : ನಮಸ್ತೆ ಸರ್
ಮೋದಿಜಿ: ಹಾಂ ರಾಮ್ ನಮಸ್ತೆ
ರಾಮ್ ಗಂಪಾ ತೇಜಾ : ನಮಸ್ತೆ.. ನಮಸ್ತೆ..
ಮೋದಿಜಿ: ನೀವು ಕರೋನಾ ವೈರಾಣುವಿನ ಈ ಗಂಭೀರ ಸಂಕಷ್ಟದಿಂದ ಪಾರಾಗಿದ್ದೀರಿ ಎಂದು ನಾನು ಕೇಳಿದ್ದೇನೆ.
ರಾಮ್ ಗಂಪಾ ತೇಜಾ: ಹೌದು ಸರ್…
ಮೋದಿಜಿ: ನಾನು ಖಂಡಿತ ನಿಮ್ಮೊಂದಿಗೆ ಮಾತನಾಡ ಬಯಸಿದ್ದೆ. ಈ ಎಲ್ಲ ಸಂಕಷ್ಟದಿಂದ ನೀವು ಪಾರಾಗಿದ್ದೀರಲ್ಲವೇ ನಿಮ್ಮ ಅನುಭವ ತಿಳಿದುಕೊಳ್ಳಬಯಸುವೆ.
ರಾಮ್ ಗಂಪಾ ತೇಜಾ: ನಾನು ಐ ಟಿ ಸೆಕ್ಟರ್ ಉದ್ಯೋಗಿಯಾಗಿದ್ದೇನೆ. ಕೆಲಸದ ನಿಮಿತ್ತ ದುಬೈಗೆ ಮೀಟಿಂಗ್ ಗಾಗಿ ತೆರಳಿದ್ದೆ. ಅಲ್ಲಿ ನನಗೆ ಅರಿವಿಲ್ಲದೇ ಹೀಗಾಯಿತು. ಮರಳಿ ಬಂದಾಗ ಜ್ವರ ಮುಂತಾದ ತೊಂದರೆಯಾಯ್ತು. 5-6 ದಿನಗಳ ನಂತರ ವೈದ್ಯರು ಕರೋನಾ ವೈರಾಣು ಪರೀಕ್ಷೆ ಮಾಡಿದರು. ಆಗ ಪಾಸಿಟಿವ್ ಬಂದಿತ್ತು. ಆಗ ಹೈದ್ರಾಬಾದ್ ನ ಗಾಂಧಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯಲ್ಲಿ ನನ್ನನ್ನು ಸೇರಿಸಿದರು. 14 ದಿನಗಳ ನಂತರ ಹುಷಾರಾಗಿದ್ದೆ, ಡಿಸ್ಚಾರ್ಜ ಆಗಿದ್ದೆ. ಇವೆಲ್ಲ ನನಗೆ ಹೆದರಿಕೆಯಾಗುವಂತಿತ್ತು.
ಮೋದಿಜಿ: ಅಂದರೆ ನಿಮಗೆ ರೋಗ ಪತ್ತೆಯಾದ ನಂತರ..
ರಾಮ್ ಗಂಪಾ ತೇಜಾ : ಹೌದು
ಮೋದಿಜಿ : ಅದಕ್ಕೂ ಮೊದಲು ಈ ವೈರಾಣು ಬಹಳ ಭಯಂಕರವಾದದ್ದು ಎಂದು ನಿಮಗೆ ತಿಳಿದಿರಬೇಕಲ್ಲವೇ?
ರಾಮ್ ಗಂಪಾ ತೇಜಾ : ಹೌದು
ಮೋದಿಜಿ : ಹಾಗಾದರೆ ನಿಮಗೆ ಸೋಂಕು ತಗುಲಿದಾಗ ನಿಮ್ಮ ತಕ್ಷಣದ ಪ್ರತಿಕ್ರಿಯೆ ಏನು?
ರಾಮ್ ಗಂಪಾ ತೇಜಾ : ಮೊದಲು ಬಹಳ ಹೆದರಿದ್ದೆ, ಆರಂಭದಲ್ಲಿ ನನಗೆ ಸೋಂಕು ತಗುಲಿದೆ ಎಂಬುದನ್ನು ನಂಬಿರಲೂ ಇಲ್ಲ. ಏಕೆಂದರೆ ಭಾರತದಲ್ಲಿ ಇಬ್ಬರು ಮೂವರಿಗೆ ಮಾತ್ರ ಬಂದಿತ್ತು. ಹಾಗಾಗಿ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆಸ್ಪತ್ರೆಯಲ್ಲಿ ದಾಖಲಿಸಿದಾಗ ನನ್ನನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಆಗಂತೂ ಮೊದಲ 2-3 ದಿನ ಹೀಗೆ ಸಾಗಿದ್ದವು. ಆದರೆ ಅಲ್ಲಿಯ ವೈದ್ಯರು ಮತ್ತು ಸುಶ್ರೂಷಕರು.
ಮೋದಿಯವರು : ಹಾಂ
ರಾಮ್ ಗಂಪಾ ತೇಜಾ: ಅವರು ನನ್ನೊಂದಿಗೆ ಚೆನ್ನಾಗಿ ವರ್ತಿಸುತ್ತಿದ್ದರು. ಪ್ರತಿದಿನ ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಏನೂ ಆಗುವುದಿಲ್ಲ ನೀವು ಗುಣಮುಖರಾಗುತ್ತೀರಿ ಎಂದು ಭರವಸೆ ನೀಡುತ್ತಿದ್ದರು. ದಿನಕ್ಕೆ ಒಂದೆರಡು ಬಾರಿ ವೈದ್ಯರು ಮತ್ತು ಸುಶ್ರೂಷಕರು ಮಾತನಾಡುತ್ತಿದ್ದರು. ಹಾಗಾಗಿ ಆರಂಭದಲ್ಲಿ ಭಯ ಇತ್ತು ನಂತರ ಇಂಥ ಸ್ನೇಹಮಯ ಜನರೊಂದಿಗೆ ಇದ್ದೇನೆ, ಅವರಿಗೆ ಏನು ಮಾಡಬೇಕೆಂದು ತಿಳಿದಿದೆ ಮತ್ತು ನಾನು ಗುಣಮುಖನಾಗುತ್ತೇನೆ ಎಂದೆನ್ನಿಸಿತ್ತು.
ಮೋದಿಜಿ: ಕುಟುಂಬದವರ ಮನಸ್ಥಿತಿ ಹೇಗಿತ್ತು?
ರಾಮ್ ಗಂಪಾ ತೇಜಾ: ನಾನು ಆಸ್ಪತ್ರೆಯಲ್ಲಿ ದಾಖಲಾದಾಗ ಎಲ್ಲರೂ ಬಹಳ ಆತಂಕದಲ್ಲಿದ್ದರು. ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿತ್ತು. ಆದರೆ ಎಲ್ಲಕ್ಕಿಂತ ಮೊದಲು ಕುಟುಂಬದವರ ಪರೀಕ್ಷೆಯನ್ನೂ ಮಾಡಲಾಗಿತ್ತು. ಎಲ್ಲರ ಫಲಿತಾಂಶ ನೆಗೆಟಿವ್ ಬಂದಿತ್ತು. ಇದು ನಮಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಸುತ್ತಮುತ್ತ ಇರುವವರಿಗೆ ದೊಡ್ಡ ವರದಾನವಾಗಿತ್ತು. ತದನಂತರ ಪ್ರತಿದಿನ ಚೇತರಿಕೆ ಕಂಡುಬಂತು. ವೈದ್ಯರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಕುಟುಂಬದವರಿಗೂ ತಿಳಿಸುತ್ತಿದ್ದರು.
ಮೋದಿಜಿ: ಸ್ವತಃ ನೀವು ಏನೇನು ಮುಂಜಾಗೃತಾ ಕ್ರಮ ಕೈಗೊಂಡಿರಿ? ಕುಟುಂಬದವರಿಗಾಗಿ ಏನು ಮುಂಜಾಗೃತೆ ವಹಿಸಿದಿರಿ?
ರಾಮ್ ಗಂಪಾ ತೇಜಾ: ಕುಟುಂಬದವರಿಗೆ ವಿಷಯ ತಿಳಿದಾಗ ನನ್ನನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಆದರೆ ಕ್ವಾರಂಟೈನ್ ನಂತರವೂ 14 ದಿನಗಳವರೆಗೆ ಮನೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿರಬೇಕು ಮತ್ತು ಸ್ವತಃ ನನ್ನನ್ನು ಕ್ವಾರಂಟೈನ್ ನಲ್ಲಿರಿಸಿಕೊಳ್ಳುವಂತೆ ವೈದ್ಯರು ತಿಳಿಸಿದ್ದರು. ಹಾಗಾಗಿ ಆಸ್ಪತ್ರೆಯಿಂದ ಬಂದ ನಂತರವೂ ಮನೆಯಲ್ಲೇ ಇದ್ದೇನೆ. ಹೆಚ್ಚಾಗಿ ನನ್ನ ಕೋಣೆಯಲ್ಲೇ ಇರುತ್ತೇನೆ. ದಿನಪೂರ್ತಿ ಮಾಸ್ಕ್ ಹಾಕಿಕೊಂಡೇ ಇರುತ್ತೇನೆ. ಎನನ್ನೇ ತಿನ್ನಬೇಕೆಂದಿದ್ದರೂ ಸಾಬೂನಿನಿಂದ ಸ್ವಚ್ಛವಾಗಿ ಕೈ ತೊಳೆಯುವುದು ಅವಶ್ಯಕ.
ಮೋದಿಯವರು : ಆಯ್ತು ರಾಮ್ ನೀವು ಸ್ವಸ್ಥರಾಗಿ ಬಂದಿದ್ದೀರಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಅನಂತ ಶುಭಾಷಯಗಳು
ರಾಮ್ ಗಂಪಾ ತೇಜಾ : ಧನ್ಯವಾದಗಳು
ಮೋದಿಯವರು : ಆದರೆ ನಿಮ್ಮ ಈ ಅನುಭವವನ್ನು…
ರಾಮ್ ಗಂಪಾ ತೇಜಾ : ಹಾಂ. .
ಮೋದಿಯವರು : ನೀವು ಐ ಟಿ ವೃತ್ತಿಯಲ್ಲಿದ್ದೀರಿ ಅಲ್ಲವೇ?
ರಾಮ್ ಗಂಪಾ ತೇಜಾ : ಹಾಂ. . .
ಮೋದಿಯವರು : ಹಾಗಾಗಿ ನಿಮ್ಮ ಅನುಭವವನ್ನು ಧ್ವನಿ ಮುದ್ರಿಸಿ…
ರಾಮ್ ಗಂಪಾ ತೇಜಾ : ಹಾಂ. . .
ಮೋದಿಯವರು : ಜನರೊಂದಿಗೆ ಹಂಚಿಕೊಳ್ಳಿ. ಸಾಕಷ್ಟು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿ. ಇದರಿಂದ ಜನರು ಹೆದರುವುದೂ ಇಲ್ಲ ಮತ್ತು ಅದೇ ಸಮಯದಲ್ಲಿ ಸೂಕ್ತ ಕಾಳಜಿವಹಿಸುವುದರಿಂದ ಹೇಗೆ ಕಾಪಾಡಿಕೊಳ್ಳಬಹುದು ಎಂಬುದು ಜನರಿಗೆ ತಲುಪುತ್ತದೆ.
ರಾಮ್ ಗಂಪಾ ತೇಜಾ : ಹೌದು ಸರ್..ನಾನು ಹೊರಗೆ ಬಂದು ನೋಡಿದಾಗ ಕ್ವಾರಂಟೈನ್ ಎಂದರೆ ಜೈಲಿಗೆ ಹೋದಂತೆ ಎಂದು ಜನರು ಯೋಚಿಸುತ್ತಿದ್ದಾರೆ. ಆದರೆ ಅದು ಹಾಗಿಲ್ಲ. ಸರ್ಕಾರಿ ಕ್ವಾರಂಟೈನ್ ತಮಗೆ ಮತ್ತು ತಮ್ಮ ಕುಟುಂಬಕ್ಕಾಗಿಯೇ ಇದೆ ಎಂದು ಎಲ್ಲರಿಗೂ ತಿಳಿಯಬೇಕು. ಹಾಗಾಗಿ ಈ ವಿಷಯದ ಕುರಿತು ಜನರಿಗೆ ಪರೀಕ್ಷೆ ಮಾಡಿಸಿಕೊಳ್ಳಿ, ಕ್ವಾರಂಟೈನ್ ನಿಂದ ಹೆದರಬೇಡಿ, ಗಾಬರಿಯಾಗಬೇಡಿ ಎಂದು ಹೇಳಬಯಸುತ್ತೇನೆ.
ಮೋದಿಯವರು : ಆಯ್ತು ರಾಮ್, ನಿಮಗೆ ಅನಂತ ಶುಭ ಹಾರೈಕೆಗಳು
ರಾಮ್ ಗಂಪಾ ತೇಜಾ : ಧನ್ಯವಾದಗಳು ಸರ್,
ಸ್ನೇಹಿತರೆ, ರಾಮ್ ಅವರು ಹೇಳಿದಂತೆ ಅವರು ಕರೋನಾ ಸೋಂಕು ಪತ್ತೆಯಾದ ಮೇಲೆ ವೈದ್ಯರು ನೀಡಿದ ಪ್ರತಿಯೊಂದು ನಿರ್ದೇಶನಗಳ ಪಾಲನೆ ಮಾಡಿದರು. ಪರಿಣಾಮ ಇಂದು ಅವರು ಆರೋಗ್ಯದಿಂದ ಸಹಜ ಜೀವನ ನಡೆಸುತ್ತಿದ್ದಾರೆ. ಕರೋನಾವನ್ನು ಸೋಲಿಸಿದಂತಹ ಇಂಥ ಮತ್ತೊಬ್ಬ ವ್ಯಕ್ತಿ ಇಂದು ನಮ್ಮೊಂದಿಗಿದ್ದಾರೆ. ಅವರ ಸಂಪೂರ್ಣ ಕುಟುಂಬವೇ ಈ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಮಗನೂ ಈ ಸಂಕಷ್ಟಕ್ಕೆ ಸಿಲುಕಿದ್ದ. ಬನ್ನಿ ಆಗ್ರಾದ ಶ್ರೀಯುತ ಅಶೋಕ್ ಕಪೂರ್ ಅವರೊಂದಿಗೆ ಮಾತಾಡೋಣ.
ಮೋದಿಯವರು : ಅಶೋಕ್ ಅವರೇ ನಮಸ್ತೆ.
ಅಶೋಕ್ ಕಪೂರ್ : ನಮಸ್ತೆ ಸರ್, ನಿಮ್ಮೊಂದಿಗೆ ಮಾತಾಡುತ್ತಿರುವುದು ನನ್ನ ಸೌಭಾಗ್ಯ
ಮೋದಿಯವರು : ಇದು ನನ್ನ ಸೌಭಾಗ್ಯವೂ ಹೌದು. ನಿಮ್ಮ ಸಂಪೂರ್ಣ ಕುಟುಂಬವೇ ಈ ಸಂಕಷ್ಟಕ್ಕೆ ಸಿಲುಕಿತ್ತು ಎಂಬುದರ ಕುರಿತು ನಾನು ಕರೆ ಮಾಡಿದ್ದೇನೆ.
ಅಶೋಕ್ ಕಪೂರ್ : ಹೌದು ಸರ್…
ಮೋದಿಯವರು : ಹಾಗಾಗಿ, ನಿಮಗೆ ಈ ಸಮಸ್ಯೆ, ಈ ಸೋಂಕಿನ ಬಗ್ಗೆ ಹೇಗೆ ತಿಳಿಯಿತು? ಏನಾಯಿತು? ಆಸ್ಪತ್ರೆಯಲ್ಲಿ ಏನಾಯಿತು? ಎಂದು ತಿಳಿಯಬಯಸುತ್ತೇನೆ. ನಿಮ್ಮ ಮಾತುಗಳನ್ನು ಕೇಳಿ ದೇಶಕ್ಕೆ ಏನಾದರೂ ವಿಷಯ ತಿಳಿಸಬಹುದಾಗಿದ್ದರೆ ಅದನ್ನು ಹಂಚಿಕೊಳ್ಳುತ್ತೇನೆ.
ಅಶೋಕ್ ಕಪೂರ್ : ಖಂಡಿತ ಸರ್. ನನಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಅವರು ಇಟಲಿಗೆ ಹೋಗಿದ್ದರು. ಅಲ್ಲಿ ಶೂ ಮೇಳ ನಡೆಯುತ್ತಿತ್ತು. ನಾವು ಇಲ್ಲಿ ಪಾದರಕ್ಷೆಗಳನ್ನು ತಯಾರಿಸುವ ಕಾರ್ಖಾನೆ ಹೊಂದಿದ್ದೇವೆ.
ಮೋದಿಯವರು : ಹಾಂ…
ಅಶೋಕ್ ಕಪೂರ್ : ಹಾಗಾಗಿ ಇಟಲಿಗೆ ಮೇಳಕ್ಕೆ ಹೋಗಿದ್ದರು. ಇವರು ಮರಳಿ ಬಂದ ಮೇಲೆ …
ಮೋದಿಯವರು : ಹಾಂ…
ಅಶೋಕ್ ಕಪೂರ್ : ನನ್ನ ಅಳಿಯನೂ ಹೋಗಿದ್ದ. ಅವರು ದೆಹಲಿಯಲ್ಲಿರುತ್ತಾರೆ. ಅವರಿಗೆ ಸ್ವಲ್ಪ ತೊಂದರೆಯಾಗಿತ್ತು. ಹಾಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿದ್ದರು.
ಮೋದಿಯವರು : ಹಾಂ…
ಅಶೋಕ್ ಕಪೂರ್ : ಅಲ್ಲಿ ಅವರಿಗೆ ಪಾಸಿಟಿವ್ ಎಂದು ಹೇಳಲಾಯಿತು. ಅವರನ್ನು ಸಫ್ದರ್ ಜಂಗ್ ಗೆ ವರ್ಗಾಯಿಸಿದರು.
ಮೋದಿಯವರು : ಹಾಂ…
ಅಶೋಕ್ ಕಪೂರ್ : ನೀವೂ ಅವರೊಂದಿಗೆ ಹೋಗಿದ್ದಿರಿ, ನೀವೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಲು ಅಲ್ಲಿಂದ ನಮಗೆ ಫೆÇೀನ್ ಬಂದಿತ್ತು. ಹಾಗಾಗಿ ಇಲ್ಲಿಯ ಆಗ್ರಾ ಜಿಲ್ಲಾ ಆಸ್ಪತ್ರೆಗೆ ಇಬ್ಬರೂ ಮಕ್ಕಳು ಪರೀಕ್ಷೆ ಮಾಡಿಸಲು ಹೋದರು. ಆಗ್ರಾ ಜಿಲ್ಲಾ ಆಸ್ಪತ್ರೆಯವರು ಇವರಿಗೆ ಕುಟುಂಬದವರನ್ನೂ ಕರೆಸಲು ಹೇಳಿದರು. ಕೊನೆಗೆ ನಾವೆಲ್ಲರೂ ಹೋದೆವು.
ಮೋದಿಯವರು : ಹಾಂ…
ಅಶೋಕ್ ಕಪೂರ್ : ಹಾಗಾಗಿ ಮಾರನೆ ದಿನ ನನ್ನ ಇಬ್ಬರು ಮಕ್ಕಳು, ನಾನು ನನ್ನ ಮಡದಿ… ಅಂದ ಹಾಗೆ ನಾನು 73 ವರ್ಷದವನಿದ್ದೇನೆ. ನನ್ನ ಮಡದಿ ಮತ್ತು ನನ್ನ ಸೊಸೆ ಹಾಗೂ ನನ್ನ 16 ವರ್ಷದ ಮೊಮ್ಮಗ ಹೀಗೆ 6 ಜನರಿಗೆ ಅವರು ಪಾಸಿಟಿವ್ ಎಂದು ಹೇಳಿದರು ಮತ್ತು ದೆಹಲಿಗೆ ಕರೆದೊಯ್ಯಬೇಕೆಂದು ತಿಳಿಸಿದರು.
ಮೋದಿಯವರು : ಓ ಮೈ ಗಾಡ್
ಅಶೋಕ್ ಕಪೂರ್ : ನಾವು ಹೆದರಲಿಲ್ಲ ಸರ್, ನಮಗೆ ತಿಳಿದಿದ್ದು ಒಳ್ಳೆಯದೇ ಆಯಿತು ಎಂದೆವು. ನಾವು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಹೋದೆವು. ಆಗ್ರಾದವರೇ 2 ಆಂಬುಲೆನ್ಸ್ ನೀಡಿ ನಮ್ಮನ್ನು ಕಳುಹಿಸಿದರು. ಯಾವುದೇ ಶುಲ್ಕವನ್ನೂ ವಿಧಿಸಲಿಲ್ಲ. ಆಗ್ರಾದ ವೈದ್ಯರು, ಆಡಳಿತ ಸಿಬ್ಬಂದಿಗೆ ನಾವು ಆಭಾರಿಯಾಗಿದ್ದೇವೆ. ಅವರು ನಮಗೆ ಸಂಪೂರ್ಣ ಸಹಕಾರ ನೀಡಿದರು.
ಮೋದಿಯವರು : ನೀವು ಆಂಬುಲೆನ್ಸ್ ನಲ್ಲಿ ಬಂದಿರಾ?
ಅಶೋಕ್ ಕಪೂರ್ : ಹೌದು ಆಂಬುಲೆನ್ಸ್ ನಲ್ಲಿ. ಆರಾಮಾಗೇ ಕುಳಿತುಕೊಂಡು ಬಂದೆವು. ನಮ್ಮೊಂದಿಗೆ ವೈದ್ಯರೂ ಬಂದಿದ್ದರು. ನಮ್ಮನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ತಲುಪಿಸಿದರು. ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು ಆಗಲೇ ಗೇಟ್ ಬಳಿ ಕಾಯುತ್ತಿದ್ದರು. ಅವರು ನಮ್ಮನ್ನು ಮೀಸಲಿಟ್ಟ ವಾರ್ಡ್ ಗಳಿಗೆ ವರ್ಗಾಯಿಸಿದರು. 6 ಜನರಿಗೆ ಪ್ರತ್ಯೇಕ ಕೋಣೆಗಳನ್ನು ನೀಡಿದರು. ಕೊಠಡಿಗಳು ಚೆನ್ನಾಗಿದ್ದವು. ಸರ್, ನಾವು ಆಸ್ಪತ್ರೆಯಲ್ಲಿ 14 ದಿನ ಏಕಾಂಗಿಯಾಗಿದ್ದೆವು. ವೈದ್ಯರು ಬಹಳ ಸಹಕಾರಿಯಾಗಿದ್ದರು. ಸಿಬ್ಬಂದಿ ಸೇರಿದಂತೆ ಎಲ್ಲರೂ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಅವರು ತಮ್ಮ ಸಮವಸ್ತ್ರ ಧರಿಸಿ ಬರುತ್ತಿದ್ದುದರಿಂದ ಅವರು ವೈದ್ಯರೇ, ನರ್ಸೆ, ಅಥವಾ ವಾರ್ಡ್ ಬಾಯ್ ಎಂದು ತಿಳಿಯುತ್ತಿರಲಿಲ್ಲ. ಅವರು ಹೇಳುವುದನ್ನು ನಾವು ಪಾಲಿಸುತ್ತಿದ್ದೆವು. ನಮಗೆ ಅಲ್ಲಿ ಶೇಕಡಾ ಒಂದರಷ್ಟೂ ಸಮಸ್ಯೆ ಇರಲಿಲ್ಲ.
ಮೋದಿಯವರು : ನಿಮ್ಮ ಆತ್ಮವಿಶ್ವಾಸವೂ ಬಹಳ ಧೃಡವಾಗಿದೆ.
ಅಶೋಕ್ ಕಪೂರ್ : ಹೌದು ಸರ್, ನಾನು ಪರ್ಫೆಕ್ಟ್ ಆಗಿದ್ದೀನಿ. ನಾನು ನನ್ನ ಮೊಣಗಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಆದರೂ ಆರಾಮಾಗಿದ್ದೇನೆ.
ಮೋದಿಯವರು : ಆದರೂ ಇಂಥ ದೊಡ್ಡ ವಿಪತ್ತು ಇಡೀ ಕುಟುಂಬಕ್ಕೆ ಬಂದೆರಗಿದಾಗ ಅಲ್ಲದೇ 16 ರ ವಯಸ್ಸಿನ ಮೊಮ್ಮಗನಿಗೂ ಬಂದಿತ್ತು. . .
ಅಶೋಕ್ ಕಪೂರ್ : ಅವನ ಪರೀಕ್ಷೆ ಇತ್ತು ಸರ್, ಐ ಸಿ ಎಸ್ ಸಿ ಪರೀಕ್ಷೆ ನಡೆಯುತ್ತಿದ್ದವು. ಆದರೂ ನಾವು ಪರೀಕ್ಷೆಗೆ ಹಾಜರುಪಡಿಸಲಿಲ್ಲ. ನಂತರ ಬರೆದರಾಯಿತು ಎಂದು ನಾನು ಹೇಳಿದೆ. ಜೀವಂತವಿದ್ದರೆ ಎಲ್ಲ ಪರೀಕ್ಷೆಗಳು ಬರೆಯಬಹುದು, ಚಿಂತಿಸಬೇಡ ಎಂದೆ.
ಮೋದಿಯವರು : ಸರಿಯಾಗಿ ಹೇಳಿದಿರಿ. . . ನಿಮ್ಮ ಅನುಭವ ಇಲ್ಲಿ ನೆರವಾಯಿತು. ಸಂಪೂರ್ಣ ಕುಟುಂಬಕ್ಕೆ ವಿಶ್ವಾಸ ನೀಡಿತು ಮತ್ತು ಧೈರ್ಯವನ್ನೂ ತುಂಬಿತು.
ಅಶೋಕ್ ಕಪೂರ್ : ಹೌದು, ಸಂಪೂರ್ಣ ಕುಟುಂಬದವರು ಹೋಗಿದ್ದೆವು, ಒಬ್ಬೊರಿಗೊಬ್ಬರು ನೆರವಾಗಿದ್ದೆವು ಆದರೆ ಭೇಟಿ ಮಾಡುತ್ತಿರಲಿಲ್ಲ. ಫೋನ್ ನಲ್ಲಿ ಮಾತನಾಡುತ್ತಿದ್ದೆವು. ಭೇಟಿಯಾಗುತ್ತಿರಲಿಲ್ಲ. ಆದರೆ ವೈದ್ಯರು ನಮಗೆ ಸಾಧ್ಯವಾದಷ್ಟು ಉಪಚಾರ ಮಾಡಿದರು. ನಾವು ಅವರಿಗೆ ಋಣಿಯಾಗಿದ್ದೇವೆ. ಸ್ಟಾಫ್ ನರ್ಸ್ಗಳು ನಮಗೆ ಸಂಪೂರ್ಣ ಸಹಕಾರ ನೀಡಿದರು.
ಮೋದಿಯವರು : ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನಂತ ಅನಂತ ಶುಭ ಹಾರೈಕೆಗಳು
ಅಶೋಕ್ ಕಪೂರ್ : ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಿ ನನಗೆ ಬಹಳ ಸಂತೋಷವಾಗಿದೆ.
ಮೋದಿಯವರು : ನನಗೂ ಸಂತೋಷವಾಗಿದೆ
ಅಶೋಕ್ ಕಪೂರ್ : ತದನಂತರವೂ ಜಾಗೃತಿ ಮೂಡಿಸಲು ಎಲ್ಲಿಗೇ ಹೋಗಬೇಕಾದಲ್ಲಿ ನಾವು ಸದಾಸಿದ್ಧರಿದ್ದೇವೆ.
ಮೋದಿಯವರು : ನೀವು ನಿಮ್ಮದೇ ಶೈಲಿಯಲ್ಲಿ ಆಗ್ರಾದಲ್ಲಿ ಸೇವೆ ಸಲ್ಲಿಸಿ. ಯಾರಾದರೂ ಹಸಿವಿನಿಂದಿದ್ದರೆ ಊಟ ಮಾಡಿಸಿ,
ಅಶೋಕ್ ಕಪೂರ್ : ಖಂಡಿತ ಖಂಡಿತ….
ಮೋದಿಯವರು: ಬಡವರ ಬಗ್ಗೆ ಕಾಳಜಿವಹಿಸಿ, ನಿಯಮಗಳನ್ನು ಜನರು ಪಾಲಿಸುವಂತೆ ತಿಳಿ ಹೇಳಿ. ನಿಮ್ಮ ಕುಟುಂಬ ಈ ಸಂಕಷ್ಟದಲ್ಲಿ ಸಿಲುಕಿತ್ತು, ಆದರೆ ನಿಯಮಗಳನ್ನು ಪಾಲಿಸಿ ಹೇಗೆ ನಿಮ್ಮ ಕುಟುಂಬದವರನ್ನು ರಕ್ಷಿಸಿದಿರಿ ಎಂದು ಜನರಿಗೆ ತಿಳಿಸಿ. ಎಲ್ಲರೂ ನಿಯಮಗಳನ್ನು ಪಾಲಿಸಿದರೆ ದೇಶವು ಸುರಕ್ಷಿತವಾಗಿರುತ್ತದೆ.
ಅಶೋಕ್ ಕಪೂರ್ : ಮೋದಿಯವರೇ, ನಾವು ನಮ್ಮ ವಿಡಿಯೋ ಚಿತ್ರಿಕರಿಸಿ ಚಾನಲ್ ಗಳಿಗೆ ನೀಡಿದ್ದೇವೆ.
ಮೋದಿಯವರು : ಹೌದಾ. . .
ಅಶೋಕ್ ಕಪೂರ್ : ಜನರಲ್ಲಿ ಜಾಗೃತಿ ಮೂಡಿಸಲು ಚಾನಲ್ ನವರು ಇದನ್ನು ಬಿತ್ತರಿಸಿದ್ದಾರೆ.
ಮೋದಿಯವರು : ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಸಿದ್ಧಿಗೊಳಿಸಬೇಕು.
ಅಶೋಕ್ ಕಪೂರ್ : ಹೌದು, ನಾವಿರುವ ನಮ್ಮ ಕಾಲೋನಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಿದ್ದೇವೆ ಮತ್ತು ನಾವು ಮರಳಿ ಬಂದಿದ್ದೇವೆ, ಹೆದರಬೇಡಿ, ಯಾರಿಗೆ ಏನೇ ಸಮಸ್ಯೆ ಇದ್ದರೂ ಪರೀಕ್ಷೆ ಮಾಡಿಸಿಕೊಳ್ಳಿ ನಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದೇವೆ. ಮತ್ತು ದೇವರ ದಯೆಯಿಂದ ಎಲ್ಲರೂ ಕ್ಷೇಮವಾಗಿರಲಿ.
ಮೋದಿಯವರು : ಸರಿ, ಎಲ್ಲರಿಗೂ ಅನಂತ ಶುಭ ಹಾರೈಕೆಗಳು
ಸ್ನೇಹಿತರೆ, ನಾವು ಅಶೋಕ್ರವರು ಮತ್ತು ಅವರ ಕುಟುಂಬದವರ ದಿರ್ಘಾಯುಷ್ಯಕ್ಕೆ ಪ್ರಾರ್ಥಿಸುತ್ತೇವೆ, ಅವರು ಹೇಳಿದಂತೆ ಆತಂಕಗೊಳ್ಳದೇ ಹೆದರದೇ, ಸೂಕ್ತ ಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ. ಸರಿಯಾದ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿ ಮತ್ತು ಸೂಕ್ತ ಮುಂಜಾಗೃತೆ ಕೈಗೊಳ್ಳುವ ಮೂಲಕ ಈ ಮಹಾಮಾರಿಯನ್ನು ಸೋಲಿಸಬಹುದಾಗಿದೆ. ಸ್ನೇಹಿತರೆ, ನಾವು ವೈದ್ಯಕೀಯ ಮಟ್ಟದಲ್ಲಿ ಈ ಮಹಾಮಾರಿಯನ್ನು ಹೇಗೆ ನಿಭಾಯಿಸುತ್ತಿದ್ದೇವೆ ಎಂದು ತಿಳಿದುಕೊಳ್ಳಲು ಈ ಸಮರದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ಕೆಲವು ವೈದ್ಯರೊಂದಿಗೂ ನಾನು ಮಾತನಾಡಿದೆ. ಪ್ರತಿದಿನದ ಅವರ ಕಾರ್ಯದಲ್ಲಿ ಇಂಥ ರೋಗಿಗಳನ್ನು ಅವರು ನಿಭಾಯಿಸಬೇಕು. ಬನ್ನಿ ದಿಲ್ಲಿಯಿಂದ ಡಾ. ನಿತೇಶ್ ಗುಪ್ತಾ ನಮ್ಮೊಂದಿಗಿದ್ದಾರೆ.
ಮೋದಿಯವರು : ನಮಸ್ತೆ ಡಾಕ್ಟರ್
ಡಾ. ನಿತೇಶ್ ಗುಪ್ತಾ : ನಮಸ್ತೆ ಸರ್
ಮೋದಿಯವರು : ನಮಸ್ತೆ ನಿತೇಶ್ ಅವರೇ… ನೀವಂತೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೀರಿ. ಹಾಗಾಗಿ ಆಸ್ಪತ್ರೆಯಲ್ಲಿ ನಿಮ್ಮ ಸಹೋದ್ಯೋಗಿಗಳ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬಯಸುತ್ತೇನೆ? ನೀವು ಸ್ವಲ್ಪ …
ಡಾ. ನಿತೇಶ್ ಗುಪ್ತಾ : ಎಲ್ಲರ ಮನಃಸ್ಥಿತಿ ಹುರುಪಿನಿಂದಿದೆ. ಎಲ್ಲರ ಮೇಲೆ ನಿಮ್ಮ ಆಶೀರ್ವಾದವಿದೆ. ನೀವು ಎಲ್ಲಾ ಆಸ್ಪತ್ರೆಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದೀರಿ. ನಾವು ಕೇಳುವುದೆಲ್ಲವನ್ನೂ ನೀವು ನೀಡುತ್ತಿದ್ದೀರಿ. ಹಾಗಾಗಿ ನಾವು ಸೇನೆ ಗಡಿಯಲ್ಲಿ ಹೋರಾಡುವಂತೆ ಇಲ್ಲಿ ಕಾರ್ಯನಿರ್ವಹಿಸುತ್ತೀದ್ದೇವೆ ಮತ್ತು ರೋಗಿ ಆರೋಗ್ಯವಂತರಾಗಿ ಮನೆಗೆ ತೆರಳಲಿ ಎಂಬುದೊಂದೇ ನಮ್ಮ ಏಕೈಕ ಕರ್ತವ್ಯವಾಗಿದೆ
ಮೋದಿಯವರು : ನಿಮ್ಮ ಮಾತು ಸರಿಯಾಗಿಯೇ ಇದೆ. ಇದೊಂದು ಯುದ್ಧದಂತಹ ಸ್ಥಿತಿ ಮತ್ತು ನೀವೆಲ್ಲರೂ ಸಹ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೀರಿ.
ಡಾ. ನಿತೇಶ್ ಗುಪ್ತಾ : ಹೌದು ಸರ್.
ಮೋದಿಯವರು : ನೀವು ಚಿಕಿತ್ಸೆಯ ಜೊತೆ ಜೊತೆಗೆ ರೋಗಿಯ ಆಪ್ತ ಸಮಾಲೋಚನೆಯನ್ನೂ ಮಾಡಬೇಕಾಗುತ್ತದಲ್ಲವೇ?
ಡಾ. ನಿತೇಶ್ ಗುಪ್ತಾ : ಹೌದು ಸರ್. ಅದು ಎಲ್ಲಕ್ಕಿಂತ ಮಹತ್ವದ ವಿಷಯವಾಗಿದೆ. ಏಕೆಂದರೆ, ರೋಗಿ ವಿಷಯ ತಿಳಿದ ಕೂಡಲೇ ತನಗೆ ಏನಾಗುತ್ತಿದೆ ಎಂದು ಹೆದರಿ ಬಿಡುತ್ತಾನೆ. ಅವರಿಗೆ ಏನೂ ಆಗಿಲ್ಲ, ಮುಂದಿನ 14 ದಿನಗಳಲ್ಲಿ ನೀವು ಹುμÁರಾಗಿ ಮನೆಗೆ ಹೋಗುತ್ತೀರಿ ಎಂದು ತಿಳಿ ಹೇಳಬೇಕಾಗುತ್ತದೆ. ನಾವು ಇಲ್ಲಿಯವರೆಗೆ ಇಂಥ 16 ರೋಗಿಗಳನ್ನು ಮನೆಗೆ ಕಳುಹಿಸಿದ್ದೇವೆ.
ಮೋದಿಯವರು : ನೀವು ಮಾತನಾಡಿದಾಗ ಒಟ್ಟಾರೆ ಏನು ತಿಳಿದು ಬರುತ್ತದೆ, ಹೆದರಿದ ಜನರಿಗೆ ಯಾವ ರೀತಿಯ ಚಿಂತೆ ಸತಾಯಿಸುತ್ತದೆ?
ಡಾ. ನಿತೇಶ್ ಗುಪ್ತಾ : ಮುಂದೆ ಏನಾಗುತ್ತದೆ? ಈಗ ಏನಾಗುವುದು? ಎಂಬುದೇ ಅವರ ಚಿಂತೆ. ಹೊರಗಿನ ಜಗತ್ತಿನಲ್ಲಿ ಇμÉ್ಟೂಂದು ಜನ ಸಾವನ್ನಪ್ಪುತ್ತಿದ್ದಾರಾದ್ದರಿಂದ ನಮಗೂ ಅಂಥದ್ದೇ ಸ್ಥಿತಿ ಬರಬಹುದು ಎಂದು ಅವರಿಗೆ ಅನ್ನಿಸುತ್ತದೆ. ನಾವು ಅವರಿಗೆ ನಿಮಗೆ ಯಾವ ತೊಂದರೆ ಇದೆ, ಯಾವಾಗ ಆರಾಮವಾಗುತ್ತದೆ ಎಂಬುದನ್ನು ತಿಳಿಹೇಳುತ್ತೇವೆ. ನಿಮ್ಮ ಕೇಸ್ ಬಹಳ ಮೈಲ್ಡ್ ಆದದ್ದು. ಸಾಮಾನ್ಯ ಕೆಮ್ಮು ನೆಗಡಿಯಂತಹ ಕೇಸ್ ಆಗಿದೆ. ಹಾಗಾಗಿ 5-6 ದಿನಗಳಲ್ಲಿ ಗುಣವಾದ ನಂತರ ನೀವು ಆರಾಮದಿಂದಿರುತ್ತೀರಿ. ನಂತರ ನಾವು ನಿಮ್ಮ ಪರೀಕ್ಷೆ ಮಾಡುತ್ತೇವೆ. ಅದು ನೆಗಟಿವ್ ಬಂದಲ್ಲಿ ನಿಮ್ಮನ್ನು ಮನೆಗೆ ಕಳುಹಿಸುತ್ತೇವೆ ಎಂದು ಸಾಂತ್ವಾನ ನೀಡುತ್ತೇವೆ. ದಿನದಲ್ಲಿ 2-3-4 ಗಂಟೆಗಳಿಗೊಮ್ಮೆ ರೋಗಿಯ ಬಳಿ ಹೋಗುತ್ತೇವೆ, ಭೇಟಿಯಾಗುತ್ತೇವೆ, ಮಾತನಾಡಿಸುತ್ತೇವೆ. ಅವರಿಗೆ ದಿನ ಪೂರ್ತಿ ಅನುಕೂಲವಾದಲ್ಲಿ ಅವರು ಸಂತೋಷದಿಂದಿರುತ್ತಾರೆ.
ಮೋದಿಯವರು : ಅವರ ಆತ್ಮ ವಿಶ್ವಾಸ ಹೆಚ್ಚುತ್ತದೆ. ಆರಂಭದಲ್ಲಿ ಹೆದರುತ್ತಾರೆಯೇ?
ಡಾ. ನಿತೇಶ್ ಗುಪ್ತಾ : ಆರಂಭದಲ್ಲಿ ಹೆದರುತ್ತಾರೆ. ಆದರೆ, ನಾವು ತಿಳಿಸಿ ಹೇಳಿದಾಗ, 2-3 ದಿನಗಳ ನಂತರ ಅವರು ಚೇತರಿಸಿಕೊಳ್ಳುವುದನ್ನು ಕಂಡಾಗ, ಅವರಿಗೆ ನಾವು ಗುಣಮುಖರಾಗುತ್ತೇವೆ ಎಂದು ಭರವಸೆ ಮೂಡಲಾರಂಭಿಸುತ್ತದೆ.
ಮೋದಿಯವರು : ಎಲ್ಲ ವೈದ್ಯರಿಗೆ, ಜೀವನದಲ್ಲಿ ಸೇವೆ ಮಾಡುವ ಬಹು ದೊಡ್ಡ ಕೆಲಸ ತಮ್ಮ ಜಾವಾಬ್ದಾರಿಯಾಗಿ ಬಂದಿದೆ ಎಂದು ಅನ್ನಿಸುತ್ತದೆಯೇ?
ಡಾ. ನಿತೇಶ್ ಗುಪ್ತಾ : ಹೌದು ಸರ್. ಖಂಡಿತಾ ಅದೇ ಭಾವನೆ ಇದೆ. ನಾವು ನಮ್ಮ ತಂಡವನ್ನು ಹೆದರುವ ಅವಶ್ಯಕತೆ ಇಲ್ಲ ಎಂದು ಪೆÇ್ರೀತ್ಸಾಹಿಸುತ್ತಲೇ ಇರುತ್ತೇವೆ. ನಾವು ಸಂಪೂರ್ಣ ಮುಂಜಾಗ್ರತೆವಹಿಸಿದಲ್ಲಿ, ನೀವು ಹೀಗೆ ಮಾಡಿದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ರೋಗಿಗೂ ಅಚ್ಚುಕಟ್ಟಾಗಿ ಮುಂಜಾಗ್ರತೆ ಕುರಿತು ತಿಳಿಸುತ್ತೇವೆ.
ಮೋದಿಯವರು : ವೈದ್ಯರೇ, ನಿಮ್ಮ ಬಳಿ ಬಹು ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ ಮತ್ತು ನೀವು ಮನಸಾರೆ ಕಾರ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮೊಂದಿಗೆ ಮಾತನಾಡಿ ಸಂತೋಷವಾಯಿತು. ಸಮರ ಮುಂದುವರೆಸಿ. ನಿಮ್ಮೊಂದಿಗೆ ನಾನಿದ್ದೇನೆ.
ಡಾ. ನಿತೇಶ್ ಗುಪ್ತಾ : ನಿಮ್ಮ ಆಶೀರ್ವಾದವಿರಲಿ ಎಂದು ನಾವು ಬಯಸುತ್ತೇವೆ.
ಮೋದಿಯವರು : ಅನಂತ ಅನಂತ ಶುಭಹಾರೈಕೆಗಳು ಸೋದರ.
ಡಾ. ನಿತೇಶ್ ಗುಪ್ತಾ : ಸರ್. ಧನ್ಯವಾದಗಳು
ಮೋದಿಯವರು : ಧನ್ಯವಾದಗಳು. ನಿತೇಶ್ ಅವರೇ ನಿಮಗೆ ಅನಂತ ಅನಂತ ಧನ್ಯವಾದಗಳು. ನಿಮ್ಮಂಥವರ ಪ್ರಯತ್ನಗಳಿಂದಲೇ ಭಾರತ, ಕೊರೊನಾ ವಿರುದ್ಧ ಹೋರೋಟದಲ್ಲಿ ಖಂಡಿತಾ ಜಯಗಳಿಸುತ್ತದೆ. ನೀವು ನಿಮ್ಮ ಬಗ್ಗೆ ಕಾಳಜಿವಹಿಸಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಕಾಳಜಿವಹಿಸಿ, ನಿಮ್ಮ ಕುಟುಂಬದವರ ಬಗ್ಗೆ ಕಾಳಜಿವಹಿಸಿ. ಈ ರೋಗದ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ ಎಂದು ವಿಶ್ವವೇ ತನ್ನ ಅನುಭವದಿಂದ ಸಾರುತ್ತಿದೆ. ಇದ್ದಕ್ಕಿದ್ದಂತೆ ರೋಗ ವೃದ್ಧಿಸುತ್ತಿರುವುದರಿಂದ ವಿದೇಶಗಳಲ್ಲಿ ಅತ್ಯುತ್ತಮ ಆರೋಗ್ಯ ಕೇಂದ್ರಗಳು ಕೈಚೆಲ್ಲಿ ಕೂತಿರುವುದನ್ನು ನಾವು ಕಂಡಿದ್ದೇವೆ. ಭಾರತದಲ್ಲಿ ಇಂಥ ಪರಿಸ್ಥಿತಿ ಬರದಿರಲಿ ಎಂಬುದಕ್ಕಾಗಿ ನಾವು ನಿರಂತರ ಪ್ರಯತ್ನ ಮಾಡಬೇಕಿದೆ. ಪುಣೆಯಿಂದ ಮತ್ತೊಬ್ಬ ವೈದ್ಯರು ನಮ್ಮ ಸಂಪರ್ಕದಲ್ಲಿದ್ದಾರೆ… ಶ್ರೀಯುತ ಡಾ. ಭೋರ್ಸೆ
ಮೋದಿಯವರು: ನಮಸ್ತೆ ಡಾಕ್ಟರ್
ಡಾ. ಭೋರ್ಸೆ: ನಮಸ್ತೆ.. ನಮಸ್ತೆ..
ಮೋದಿಯವರು: ನಮಸ್ತೆ. ನೀವಂತೂ ಜನಸೇವೆಯೇ ಜನಾರ್ಧನ ಸೇವೆ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೀರಿ. ಇಂದು ನಿಮ್ಮೊಂದಿಗೆ ಕೆಲ ವಿಷಯಗಳನ್ನು ಮಾತನಾಡಬಯಸುತ್ತೇನೆ. ದೇಶಬಾಂಧವರಿಗಾಗಿ ನಿಮ್ಮ ಸಂದೇಶ ತಿಳಿಸಿ. ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಯವಾಗ ಕರೋನಾ ಪರೀಕ್ಷೆ ಮಾಡಿಸಬೇಕು ಎಂಬ ಪ್ರಶ್ನೆ ಅನೇಕ ಜನರಲ್ಲಿದೆ. ಒಬ್ಬ ವೈದ್ಯರಾಗಿ ನೀವು ನಿಮ್ಮನ್ನು ಸಂಪೂರ್ಣವಾಗಿ ಕರೋನಾ ರೋಗಿಗಳಿಗೆಂದೇ ಸಮರ್ಪಿಸಿಕೊಂಡಿದ್ದೀರಿ. ಹಾಗಾಗಿ ನಿಮ್ಮ ಮಾತಿನಲ್ಲಿ ಬಹಳ ಶಕ್ತಿಯಿದೆ. ನಾನು ಕೇಳಬಯಸುತ್ತೇನೆ.
ಡಾ. ಭೋರ್ಸೆ: ಸರ್, ಇಲ್ಲಿಯ ಬಿ ಜೆ ಮೆಡಿಕಲ್ ಕಾಲೇಜ್ ಪುಣೆಯಲ್ಲಿ ನಾನು ಫೆÇ್ರಫೆಸರ್ ಆಗಿದ್ದೇನೆ ಮತ್ತು ನಮ್ಮ ಪುಣೆಯಲ್ಲಿ ನಾಯ್ಡು ಆಸ್ಪತ್ರೆ ಹೆಸರಿನಲ್ಲಿ ಪುರಸಭೆ ಆಸ್ಪತ್ರೆಯಿದೆ. ಅಲ್ಲಿ ಜನವರಿ 2020 ರಿಂದಲೇ ಪರಿವೀಕ್ಷಣಾ ಕೇಂದ್ರ ಆರಂಭಗೊಂಡಿದೆ. ಇಲ್ಲಿವರೆಗೆ 16 ಕೋವಿಡ್ – 19 ರ ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ 16 ಕೋವಿಡ್ – 19 ರ ಪಾಸಿಟಿವ್ ಪ್ರಕರಣಗಳ ರೋಗಿಗಳನ್ನು ನಾವು ಕ್ವಾರೆಂಟೈನ್ ಮಾಡಿ, ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಿ, 7 ಜನರನ್ನು ಈಗಾಗಲೇ ಡಿಸ್ಚಾರ್ಜ್ ಮಾಡಿದ್ದೀವಿ ಸರ್. ಇನ್ನುಳಿದ 9 ಪ್ರಕರಣಗಳ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ವೈರಾಣು ದೇಹದಲ್ಲಿದ್ದರೂ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಕರೋನಾದಿಂದ ಗುಣಮುಖರಾಗುತ್ತಿದ್ದಾರೆ. ಈಗ ಪ್ರಸ್ತುತ ನೀಡಿದ ಉದಾಹರಣೆ ಪ್ರಮಾಣ ಅಂದರೆ 16 ಪ್ರಕರಣಗಳ ಸಂಖ್ಯೆ ಬಹಳ ಕಡಿಮೆಯಾದದ್ದು ಆದರೆ ಯುವ ಪೀಳಿಗೆಯೂ ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಯುವ ಜನತೆಗೆ ಹರಡುತ್ತಿರುವ ಈ ರೋಗ ಅಂಥ ಗಂಭೀರವಾದದ್ದೇನಲ್ಲ. ಅದು ಬಹಳ ಮೈಲ್ಡ್ ಆಗಿದೆ. ಅವರೆಲ್ಲರೂ ಗುಣಮುಖರಾಗುತ್ತಿದ್ದಾರೆ ಮತ್ತು ಇಲ್ಲಿ ಬಾಕಿ ಇರುವ 9 ಜನರೂ ಗುಣಮುಖರಾಗಲಿದ್ದಾರೆ. ಅವರ ಮೇಲೆ ನಿತ್ಯವೂ ನಿಗಾ ಇಡುತ್ತಿದ್ದೇವೆ. ಮುಂಬರುವ 4-5 ದಿನಗಳಲ್ಲಿ ಅವರು ಸಂಪೂರ್ಣ ಚೇತರಿಸಿಕೊಳ್ಳುವ ಸಂಭವವಿದೆ. ನಮ್ಮಲ್ಲಿ ಸೋಂಕಿನ ಸಂಶಯದಿಂದ ಬರುವವರು ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಸೋಂಕು ತಗುಲಿದವರ ಸ್ವಾಬ್ ಮಾದರಿ ಪಡೆಯುತ್ತಿದ್ದೇವೆ. oropharyngeal ಮತ್ತು nasal ಮಾದರಿಯನ್ನು ಪರೀಕ್ಷೆಗೆ ಪಡೆಯಲಾಗುತ್ತಿದೆ. ಇವರ ಫಲಿತಾಂಶ ಪಾಸಿಟಿವ್ ಬಂದಲ್ಲಿ ಪಾಸಿಟಿವ್ ವಾರ್ಡ್ ಗಳಿಗೆ ದಾಖಲಿಸಲಾಗುತ್ತಿದೆ. ನೆಗೆಟಿವ್ ಫಲಿತಾಂಶ ಬಂದಲ್ಲಿ ಹೋಂ ಕ್ವಾರೆಂಟೈನ್ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದೇವೆ. ಜೊತೆಗೆ ಹೋಂ ಕ್ವಾರೆಂಟೈನ್ ಹೇಗೆ ಮಾಡಿಕೊಳ್ಳಬೇಕು, ಮನೆಯಲ್ಲಿ ಏನೇನು ಮಾಡಬೇಕು ಎಂಬ ಸಲಹೆ ನೀಡಿ ಮನೆಗೆ ಕಳುಹಿಸುತ್ತಿದ್ದೇವೆ.
ಮೋದಿಯವರು: ಮನೆಯಲ್ಲಿರಲು ಏನೇನು ಮಾಡಬೇಕೆಂದು ನೀವು ಸಲಹೆ ನೀಡುತ್ತೀರಿ? ತಿಳಿಸಿ
ಡಾ. ಭೋರ್ಸೆ: ಮನೆಯಲ್ಲಿಯೇ ಇರುವುದಾದರೆ ಮನೆಯಲ್ಲೇ ಕ್ವಾರೆಂಟೈನ್ ಮಾಡಿಕೊಳ್ಳಬೇಕಾಗುತ್ತದೆ. ಮೊದಲನೇದಾಗಿ ಕನಿಷ್ಟ 6 ಅಡಿ ಅಂತರ ಕೈಗೊಳ್ಳಬೇಕು. ಎರಡನೇದಾಗಿ ಮಾಸ್ಕ ಬಳಸಿಕೊಳ್ಳಬೇಕು ಮತ್ತು ಪದೇ ಪದೇ ಕೈ ತೊಳೆಯಬೇಕು. ನಿಮ್ಮ ಬಳಿ ಸ್ಯಾನಿಟೈಸರ್ ಇಲ್ಲದಿದ್ದರೆ ಸಾಮಾನ್ಯ ಸಾಬೂನಿನಿಂದಲೇ ಪದೇ ಪದೇ ಕೈತೊಳೆಯಿರಿ. ನಿಮಗೆ ಕೆಮ್ಮು ಬಂದರೆ, ಕರವಸ್ತ್ರ, ಸಾಮಾನ್ಯ ಕರವಸ್ತ್ರವನ್ನೇ ಅಡ್ಡವಾಗಿಟ್ಟು ಕೆಮ್ಮಿರಿ. ಇದರಿಂದ ಡ್ರಾಪ್ ಲೆಟ್ಸ್ ದೂರದವರೆಗೆ ಹರಡುವುದಿಲ್ಲ ಮತ್ತು ಭೂಮಿಯ ಮೇಲೆ ಬೀಳುವುದಿಲ್ಲವಾದ್ದರಿಂದ ಹೆಚ್ಚು ಜನರು ಸ್ಪರ್ಷಿಸುವುದಿಲ್ಲ ಮತ್ತು ಹೆಚ್ಚು ಜನರಿಗೆ ಹರಡುವುದು ಸಾಧ್ಯವಾಗುವುದಿಲ್ಲ ಎಂದು ತಿಳುವಳಿಕೆ ನೀಡುತ್ತಿದ್ದೇವೆ ಸರ್. 2 ನೇ ದಾಗಿ ಅವರು ಮನೆಯಲ್ಲೇ ಕ್ವಾರೆಂಟೈನ್ ಆಗಿರಬೇಕು ಮತ್ತು ಮನೆಯಿಂದ ಹೊರಗೆಲ್ಲೂ ಹೋಗಕೂಡದು ಎಂದು ತಿಳಿಹೇಳುತ್ತಿದ್ದೇವೆ. ಈಗಂತೂ ಲಾಕ್ಡೌನ್ ಘೋಷಿಸಲಾಗಿದೆ. ಆದರೂ ಅವರು 14 ದಿನಗಳವರೆಗೆ ಸೂಕ್ತ ರೀತಿಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಇರಬೇಕು ಎಂದು ಅವರಿಗೆ ಸೂಚಿಸುತ್ತಿದ್ದೇವೆ, ಸಂದೇಶ ನೀಡುತ್ತಿದ್ದೇವೆ ಸರ್…
ಮೋದಿಯವರು: ಸರಿ ಡಾಕ್ಟರ್, ನೀವು ಸಮರ್ಪಣಾಭಾವದಿಂದ ತುಂಬಾ ಒಳ್ಳೆಯ ಸೇವೆ ಮಾಡುತ್ತಿದ್ದೀರಿ. ನಿಮ್ಮ ಸಂಪೂರ್ಣ ತಂಡ ಸೇವೆಯಲ್ಲಿ ತೊಡಗಿರುವುದರಿಂದ ಎಲ್ಲಾ ರೋಗಿಗಳು ಗುಣಮುಖರಾಗಿ ಸುರಕ್ಷಿತವಾಗಿ ಮನೆಗೆ ಹಿಂದಿರುಗುತ್ತಾರೆ ಎಂಬ ವಿಶ್ವಾಸ ನನಗಿದೆ. ನಿಮ್ಮೆಲ್ಲರ ಸಹಕಾರದಿಂದ ದೇಶದಲ್ಲೂ ಈ ಸಮರದಲ್ಲಿ ನಾವು ವಿಜಯಿಯಾಗಲಿದ್ದೇವೆ.
ಡಾ. ಭೋರ್ಸೆ: ಈ ಸಮರವನ್ನು ನಾವು ಜಯಿಸಲಿದ್ದೇವೆ ಎಂಬ ವಿಶ್ವಾಸ ನನಗಿದೆ.
ಮೋದಿಯವರು: ಡಾಕ್ಟರ್ ನಿಮಗೆ ಅನಂತ ಶುಭಹಾರೈಕೆಗಳು. ಧನ್ಯವಾದಗಳು ಡಾಕ್ಟರ್.
ಡಾ. ಭೋರ್ಸೆ: ಧನ್ಯವಾದಗಳು ಸರ್.
ಸ್ನೇಹಿತರೆ, ನಮ್ಮ ಎಲ್ಲ ಸ್ನೇಹಿತರು ನಿಮ್ಮನ್ನು, ಇಡೀ ದೇಶವನ್ನು ಈ ಸಂಕಷ್ಟದಿಂದ ಪಾರು ಮಾಡುವಲ್ಲಿ ತೊಡಗಿದ್ದಾರೆ. ಇವರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳುವುದ್ಷ್ಟೇ ಅಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಇಂದು ವೈದ್ಯರ ತ್ಯಾಗ, ತಪಸ್ಸು, ಸಮರ್ಪಣೆಯನ್ನು ನೋಡುತ್ತಿದ್ದರೆ, ಆಚಾರ್ಯ ಚರಕರು ಹೇಳಿದ ಹಲವಾರು ಮಾತುಗಳು ನೆನಪಿಗೆ ಬರುತ್ತಿವೆ. ಆಚಾರ್ಯ ಚರಕರು ವೈದ್ಯರಿಗಾಗಿ ನಿಖರವಾದ ಮಾತನ್ನು ಹೇಳಿದ್ದರು ಮತ್ತು ಇಂದು ನಾವು ಅದನ್ನು ವೈದ್ಯರ ಜೀವನದಲ್ಲಿ ಕಾಣುತ್ತಿದ್ದೇವೆ. ಆಚಾರ್ಯ ಚರಕರು ಹೀಗೆ ಹೇಳಿದ್ದರು.
ನ ಆತ್ಮಾಥರ್ಂ ನ ಅಪಿ ಕಾಮಾಥರ್ಂ ಅತಭೂತ ದಯಾಂ ಪ್ರತಿ
ವತರ್ತೆ ಯತ್ ಚಿಕಿತ್ಸಾಯಾಂ ಸ ಸವರ್ಂ ಇತಿ ವರ್ತತೆ
…ಅಂದರೆ ಧನ ಅಥವಾ ವಿಶೇಷ ಬಯಕೆಯಿಂದಲ್ಲ, ಬದಲಾಗಿ ರೋಗಿಯ ಸೇವೆಗಾಗಿ ದಯೆಯ ಭಾವನೆಯಿಂದ ಯಾರು ಕಾರ್ಯನಿರ್ವಹಿಸುತ್ತಾರೋ ಅವರೇ ಸರ್ವಶ್ರೇಷ್ಠ ಚಿಕಿತ್ಸಕರಾಗಿರುತ್ತಾರೆ.
ಮಿತ್ರರೇ, ಮಾನವತೆ ತುಂಬಿಕೊಂಡಿರುವ ಪ್ರತಿಯೊಬ್ಬ ಶುಶ್ರೂಶಕಿಗೂ ನಾನು ಇಂದು ನಮಸ್ಕರಿಸುತ್ತೇನೆ. ನೀವೆಲ್ಲ ಯಾವ ಸೇವಾ ಮನೋಭಾವದಿಂದ ಕೆಲಸ ಮಾದುತ್ತಿರುವಿರೋ ಅದು ಅಸಾಮಾನ್ಯವಾದುದು. ಇದರ ಜೊತೆಗೆ ಇಡೀ ವಿಶ್ವವು 2020 ನೆ ಇಸವಿಯನ್ನು International year of the Nurse and Midwife ಎಂದು ಆಚರಿಸುತ್ತಿದೆ. ಇದರ ಸಂಬಂಧ 200 ವರ್ಷದ ಕೆಳಗೆ 1820 ರಲ್ಲಿ ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜೊತೆ ಸೇರಿಕೊಂಡಿದೆ. ಇವರು ಮಾನವ ಸೇವೆಗೆ, ನಸಿರ್ಂಗ್ ಗೆ ಒಂದು ಹೊಸ ಅಸ್ಮಿತೆಯನ್ನು ನೀಡಿದರು. ಒಂದು ಹೊಸ ಎತ್ತರಕ್ಕೆ ತಲುಪಿಸಿದರು. ಜಗತ್ತಿನ ಪ್ರತಿ ಶುಶ್ರೂಷಕಿಯ ಸೇವಾಭಾವನೆಗೆ ಸಮರ್ಪಿತವಾದ ಈ ವರ್ಷ ಇಡೀ ನಸಿರ್ಂಗ್ ಸಮುದಾಯಕ್ಕೆ ಬಹು ದೊಡ್ಡ ಪರೀಕ್ಷೆಯ ಸಮಯವಾಗಿ ಬಂದಿದೆ. ನೀವೆಲ್ಲರೂ ಈ ಪರೀಕ್ಷೆಯಲ್ಲಿ ಸಫಲರಾಗುತ್ತೀರಿ ಮತ್ತು ಅನೇಕ ಜೀವಗಳನ್ನು ಉಳಿಸುತ್ತೀರಿ ಎನ್ನುವ ಭರವಸೆ ನನಗಿದೆ.
ನಿಮ್ಮಂತಹ ಎಲ್ಲ ಸ್ನೇಹಿತರ ಧೈರ್ಯ ಮತ್ತು ಉತ್ಸಾಹದ ಕಾರಣದಿಂದಲೇ ಇಂತಹ ದೊಡ್ಡ ಯುದ್ಧವನ್ನು ನಾವು ಎದುರಿಸುತ್ತಿದ್ದೇವೆ. ನಿಮ್ಮಂತಹ ಜೊತೆಗಾರರು – ಅವರು ವೈದ್ಯರಾಗಿರಲಿ, ನರ್ಸ್ ಆಗಿರಲಿ, ಅರೆ ವೈದ್ಯಕೀಯ ಸಹಾಯಕರಾಗಿರಲಿ, ಆಶಾ ಮತ್ತು ಎ ಎನ್ ಎಂ ಕಾರ್ಯಕರ್ತರು, ಪೌರ ಕಾರ್ಮಿಕರಾಗಿರಲಿ, – ನಿಮ್ಮ ಆರೋಗ್ಯದ ಬಗ್ಗೆ ದೇಶಕ್ಕೆ ಬಹಳ ಯೋಚನೆ ಇದೆ. ಇದನ್ನು ಗಮನಿಸಿಯೇ ನೀವು ಈ ಯುದ್ಧದಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ದೇಶದ ನೇತೃತ್ವ ವಹಿಸಿಕೊಳ್ಳಲಿ ಎನ್ನುವ ಆಶಯದೊಂದಿಗೆ ನಿಮ್ಮಂತಹ ಸುಮಾರು 20 ಲಕ್ಷ ಮಿತ್ರರಿಗೆ 50 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಸರ್ಕಾರ ಘೋಷಿಸಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ವೈರಸ್ನ ವಿರುದ್ಧದ ಈ ಯುದ್ಧದಲ್ಲಿ, ಇಂತಹ ಪರಿಸ್ಥಿತಿಯಲ್ಲೂ ಸಹ ಎಲ್ಲರಿಗಿಂತ ಮುಂದೆ ನಿಂತಿರುವ ಸಮಾಜದ ನಿಜವಾದ ಹೀರೋಗಳು ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಜನರಿದ್ದಾರೆ. ಬೆಂಗಳೂರಿನ ನಿರಂಜನ್ ಸುಧಾಕರ್ ಹೆಬ್ಬಾಲೆ ಅವರು “ಇಂತಹ ಜನರು ನಿಜ ಜೀವನದ ಹೀರೋಗಳು” ಎಂದು ನನಗೆ Namo App ನಲ್ಲಿ ಬರೆದು ತಿಳಿಸಿದ್ದಾರೆ. ಈ ಮಾತು ನಿಜ ಕೂಡ. ಇವರುಗಳ ಕಾರಣದಿಂದಲೇ ನಮ್ಮ ದಿನನಿತ್ಯದ ಜೀವನ ಬಹಳ ಸುಲಭವಾಗಿ ನಡೆಯುತ್ತಿದೆ. ಒಂದು ದಿನ ನಿಮ್ಮ ಮನೆಯಲ್ಲಿ ನಲ್ಲಿಯಲ್ಲಿ ಬರುತ್ತಿರುವ ನೀರು ನಿಂತು ಹೋದಂತೆ, ನಿಮ್ಮ ಮನೆಯ ವಿದ್ಯುತ್ ಹಠಾತ್ತಾಗಿ ಕಟ್ ಆದಂತೆ ನೀವು ಒಂದು ಬಾರಿ ಕಲ್ಪನೆ ಮಾಡಿಕೊಳ್ಳಿ. ಅಂತಹ ಸಮಯದಲ್ಲಿ ನಮ್ಮ ಕಷ್ಟಗಳನ್ನು ದೂರ ಮಾಡುವವರು ಈ ನಿಜಜೀವನದ ಹೀರೋಗಳೇ.. ನಿಮ್ಮ ನೆರೆಹೊರೆಯಲ್ಲಿರುವ ಸಣ್ಣ ಕಿರಾಣಿ ಅಂಗಡಿಯ ಬಗ್ಗೆ ಯೋಚಿಸಿ. ಇಂದಿನ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಆ ಅಂಗಡಿಯವನೂ ಸಹ ಅಪಾಯವನ್ನು ಹೊತ್ತುಕೊಳ್ಳುತ್ತಿದ್ದಾನೆ. ಆದರೆ ಯಾರಿಗಾಗಿ? ನಿಮಗೆ ಅವಶ್ಯಕ ವಸ್ತುಗಳು ಸಿಗುವುದಕ್ಕೆ ಕಷ್ಟವಾಗದಿರಲಿ ಎಂದು ಅಲ್ಲವೇ? ಇದೇ ರೀತಿ ದೇಶದೆಲ್ಲೆಡೆ ಅವಶ್ಯಕ ವಸ್ತುಗಳ supply chain ನಲ್ಲಿ ಯಾವುದೇ ಅಡೆತಡೆ ಬರಬಾರದು ಎಂದು ತಮ್ಮ ಕೆಲಸದಲ್ಲಿ ತೊಡಗಿಕೊಂಡಿರುವ ಆ ಚಾಲಕರು, ಕೆಲಸಗಾರರು ಇವರುಗಳ ಬಗ್ಗೆ ಯೋಚಿಸಿ. ಬ್ಯಾಂಕಿಂಗ್ ಸೇವೆಗಳನ್ನು ಸರ್ಕಾರ ತೆರೆದಿಟ್ಟಿದೆ ಎನ್ನುವುದನ್ನು ನೀವು ನೋಡಿರಬಹುದು. ಬ್ಯಾಂಕಿಂಗ್ ಕ್ಷೇತ್ರದ ನಮ್ಮ ಜನರು ಸಂಪೂರ್ಣ ಉತ್ಸಾಹದಿಂದ, ಪೂರ್ಣ ಮನಸ್ಸಿನಿಂದ ಈ ಯುದ್ಧದ ನೇತೃತ್ವ ವಹಿಸುತ್ತ ಬ್ಯಾಂಕ್ಗಳನ್ನು ನಡೆಸುತ್ತಿದ್ದಾರೆ, ನಿಮ್ಮ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಈ ಸೇವೆ ಸಣ್ಣದಲ್ಲ. ಆ ಬ್ಯಾಂಕ್ ಕೆಲಸಗಾರರಿಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಅದು ಕಡಿಮೆಯೇ. ಬಹಳಷ್ಟು ಜನ ನಮ್ಮ ಸ್ನೇಹಿತರು e-Commerce ನಲ್ಲಿ ತೊಡಗಿಕೊಂಡ ಕಂಪನಿಗಳಲ್ಲಿ delivery personnel ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇವರೂ ಸಹ ಇಂತಹ ಕಠಿಣ ಪರಿಸ್ಥಿತಿಯಲ್ಲಿ ದಿನಸಿ ಸಾಮಾನುಗಳ delivery ನೀಡುವುದರಲ್ಲಿ ವ್ಯಸ್ತರಾಗಿದ್ದಾರೆ. ಸ್ವಲ್ಪ ಯೋಚಿಸಿ – ನೀವು ಲಾಕ್ಡೌನ್ ನಮಯದಲ್ಲಿ ಕೂಡ ಟಿವಿ ನೋಡುತ್ತಿದ್ದೀರಿ, ಮನೆಯಲ್ಲಿ ಇದ್ದರೂ ಕೂಡ ಫೆÇೀನ್ ಮತ್ತು ಇಂಟರ್ನೆಟ್ ಉಪಯೋಗಿಸುತ್ತಿದ್ದೀರಿ. ಇವೆಲ್ಲವನ್ನೂ ಸರಿಯಾಗಿ ಇಟ್ಟಿರುವುದಕ್ಕೆ ಬೇರೆ ಯಾರಾದರೂ ತಮ್ಮ ಜೀವನವನ್ನು ಪಣವಾಗಿ ಇಟ್ಟಿದ್ದಾರೆ. ಇಂದಿನ ದಿನಗಳಲ್ಲಿ ನಿಮ್ಮಲ್ಲಿ ಬಹಳಷ್ಟು ಜನ ಡಿಜಿಟಲ್ ಪೇಮೆಂಟ್ ಬಹಳ ಸುಲಭವಾಗಿ ಮಾಡುತ್ತಿದ್ದೀರಿ, ಅದರ ಹಿಂದೆ ಕೂಡ ಬಹಳಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ನ ಈ ಸಮಯದಲ್ಲಿ ಇಂತಹ ಜನರೇ ಇಡೀ ದೇಶದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇಂದು ಎಲ್ಲಾ ದೇಶವಾಸಿಗಳ ಪರವಾಗಿ, ನಾನು ಈ ಎಲ್ಲಾ ಜನರಿಗೆ ವಂದನೆಗಳನ್ನು ಹೇಳುತ್ತಿದ್ದೇನೆ. ಹಾಗೆಯೇ, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಿ, ನಿಮ್ಮ ಬಗ್ಗೆಯೂ ಕಾಳಜಿ ವಹಿಸಿ, ನಿಮ್ಮ ಪರಿವಾರದವರ ಬಗ್ಗೆಯೂ ಕೂಡ ಕಾಳಜಿ ವಹಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ವೈರಸ್ ವಿಷಯದಲ್ಲಿ ಯಾರನ್ನು home quarantine ನಲ್ಲಿ ಇರಲು ಹೇಳಿದ್ದೆವೋ ಅವರ ಜೊತೆ ಕೆಲವರು ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಕೆಲವು ಘಟನೆಗಳು ನನಗೆ ಗೊತ್ತಾಗಿವೆ. ಇಂತಹ ಮಾತುಗಳನ್ನು ಕೇಳಿ ನನಗೆ ಅತ್ಯಂತ ನೋವಾಗುತ್ತಿದೆ. ಇದು ತುಂಬಾ ದೌರ್ಭಾಗ್ಯಪೂರ್ಣವಾದುದು. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲ ಒಬ್ಬರಿಗೊಬ್ಬರು Social distance ಕಾಪಾಡಿ ಕೊಳ್ಳಬೇಕೇ ಹೊರತು emotional ಅಥವಾ human distance ಅಲ್ಲ. ಈ ಜನರು ಅಪರಾಧಿಗಳಲ್ಲ, ಆದರೆ ವೈರಸ್ ನಿಂದ ಪೀಡಿತರಾದ ಸಂಭಾವಿತರು. ಈ ಜನರು ಬೇರೆಯವರಿಗೆ ವೈರಸ್ ಹರಡುವುದನ್ನು ತಡೆಯಲು ತಾವೇ ದೂರವಾಗಿದ್ದಾರೆ ಮತ್ತು quarantine ನಲ್ಲಿ ಇದ್ದಾರೆ. ಜನರು ತಮ್ಮ ಈ ಜವಾಬ್ದಾರಿಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೂ ವೈರಸ್ ನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಅವರೆಲ್ಲ ತಮ್ಮನ್ನು ತಾವೇ quarantine ಮಾಡಿಕೊಂಡಿದ್ದಾರೆ. ಅವರು ಏಕೆ ಹೀಗೆ ಮಾಡಿಕೊಂಡಿದ್ದಾರೆ ಎಂದರೆ ಅವರು ವಿದೇಶದಿಂದ ಹಿಂತಿರುಗಿ ಬಂದಿದ್ದಾರೆ ಮತ್ತು ಎರಡನೆಯದಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ. ಎಂತಹ ಸಂದರ್ಭದಲ್ಲೂ ಯಾವುದೇ ವ್ಯಕ್ತಿಯೂ ಈ ವೈರಸ್ನಿಂದ ಸೋಂಕಿತರಾಗಬಾರದು ಎನ್ನುವುದನ್ನು ಅವರು ಖಾತ್ರಿ ಮಾಡಿಕೊಳ್ಳಲು ಬಯಸುತ್ತಾರೆ. ಆದ್ದರಿಂದ ಸ್ವತಃ ಈ ಜನರು ಇಷ್ಟೊಂದು ಜವಾಬ್ದಾರಿ ತೋರಿಸುತ್ತಿದ್ದಾಗ ಅವರ ಜೊತೆ ಕೆಟ್ಟದ್ದಾಗಿ ವ್ಯವಹರಿಸುವುದು ಯಾವುದೇ ರೀತಿಯ ಸಮರ್ಥನೆಗೂ ಯೋಗ್ಯವಾದುದಲ್ಲ. ಬದಲಾಗಿ ಅವರ ಜೊತೆ ಸಹಾನುಭೂತಿಯಿಂದ ಕೈಜೋಡಿಸುವ ಅವಶ್ಯಕತೆ ಇದೆ.
ಕೊರೊನಾ ವೈರಸ್ ವಿರುದ್ಧ ಹೋರಾಡುವ ಎಲ್ಲಕ್ಕಿಂತ ಸುಲಭ ವಿಧಾನ Social distancing ಆಗಿದೆ, ಆದರೆ Social distancing ನ ಅರ್ಥ social interaction ಸಂಪೂರ್ಣವಾಗಿ ನಿಲ್ಲಿಸುವುದು ಎನ್ನುವುದಲ್ಲ ಎಂದು ನಾವು ತಿಳಿದುಕೊಳ್ಳಬೇಕಿದೆ. ವಾಸ್ತವದಲ್ಲಿ ಇದು ನಮ್ಮ ಎಲ್ಲಾ ಹಳೆಯ ಸಾಮಾಜಿಕ ಸಂಬಂಧಗಳಿಗೆ ಹೊಸ ಜೀವ ತುಂಬುವ ಸಮಯವಾಗಿದೆ, ಆ ಸಂಬಂಧಗಳನ್ನು ಹೊಚ್ಚ ಹೊಸದಾಗಿ ಮಾಡುವುದಾಗಿದೆ. ಒಂದು ರೀತಿಯಲ್ಲಿ ಈ ಸಮಯವು “Social distancing ಹೆಚ್ಚಿಸಿ ಮತ್ತು emotional distance ಕಡಿಮೆ ಮಾಡಿ” ಎನ್ನುವುದನ್ನು ಸಹಾ ಹೇಳುತ್ತಿದೆ. ನಾನು ಮತ್ತೆ ಹೇಳುತ್ತಿದ್ದೇನೆ – “Social distancing ಹೆಚ್ಚಿಸಿ ಮತ್ತು emotional distance ಕಡಿಮೆ ಮಾಡಿ”.
ಕೋಟಾದಿಂದ ಯಶ್ವರ್ಧನ್ ಹಾಗೂ ಮೇಘ್ ಅವರು Namo app ನಲ್ಲಿ “ನಾವು ಲಾಕ್ಡೌನ್ ಸಮಯದಲ್ಲಿ family bonding ಗಟ್ಟಿ ಮಾಡಿಕೊಳ್ಳುತ್ತಿದ್ದೇವೆ,” ಎಂದು ಬರೆದಿದ್ದಾರೆ. ಮಕ್ಕಳ ಜೊತೆ board games ಮತ್ತು ಕ್ರಿಕೆಟ್ ಆಡುತ್ತಿದ್ದಾರೆ, ಅಡುಗೆಮನೆಯಲ್ಲಿ ಹೊಸ ಹೊಸ ಅಡುಗೆಗಳನ್ನು ಮಾಡುತ್ತಿದ್ದಾರೆ. ಜಬಲ್ಪುರದ ನಿರುಪಮಾ ಅವರು Namo App ಏನು ಬರೆದಿದ್ದಾರೆ ಎಂದರೆ ಅವರಿಗೆ ಮೊದಲ ಬಾರಿಗೆ ರಜಾಯಿ ತಯಾರಿಸುವ ಅವರ ಹವ್ಯಾಸವನ್ನು ಪೂರ್ಣಗೊಳಿಸಿಕೊಳ್ಳುವ ಅವಕಾಶ ಸಿಕ್ಕಿದೆಯಂತೆ, ಇದರ ಜೊತೆಗೆ ತೋಟಗಾರಿಕೆಯ ಹವ್ಯಾಸವನ್ನೂ ಪೂರ್ಣಗೊಳಿಸಿಕೊಳ್ಳುತ್ತಿದ್ದಾರಂತೆ. ಹಾಗೆಯೇ ರಾಯಪುರದ ಪರೀಕ್ಷಿತ್, ಗುರುಗ್ರಾಮದ ಆರ್ಯಮನ್ ಮತ್ತು ಝಾಖರ್ಂಡ್ ನ ಸೂರಜ್ ಇವರುಗಳ ಪೊಸ್ಟ್ ಗಳೂ ಓದುವುದಕ್ಕೆ ಸಿಕ್ಕಿದವು. ಇದರಲ್ಲಿ ಅವರುಗಳು ಶಾಲೆಯ ಸ್ನೇಹಿತರ e-reunion ಮಾಡುವ ಚರ್ಚೆ ಮಾಡಿದ್ದಾರೆ. ಇವರ ಈ ಐಡಿಯಾ ಬಹಳ ರೋಚಕವಾಗಿದೆ. ನಿಮಗೂ ಸಹ ದಶಕಗಳಿಂದ ನಿಮ್ಮ ಶಾಲಾ ಕಾಲೇಜುಗಳ ಸ್ನೇಹಿತರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿಲ್ಲದೆ ಇರಬಹುದು. ನೀವೂ ಸಹ ಈ ಮಾರ್ಗವನ್ನು ಅನುಸರಿಸಿ ನೋಡಿ. ಭುವನೇಶ್ವರದ ಪ್ರತ್ಯೂಶ್ ಮತ್ತು ಕೊಲ್ಕತ್ತಾದ ವಸುಧಾ ಅವರು – ಈ ದಿನಗಳಲ್ಲಿ ಇವತ್ತಿನವರೆಗೂ ಓದಲು ಸಾಧ್ಯವಾಗದ ಪುಸ್ತಕಗಳನ್ನು ಓದುತ್ತಿದ್ದೇವೆ ಎಂದು ಹೇಳಿದ್ದಾರೆ. ಕೆಲವರು ವರ್ಷಗಳಿಂದ ಮನೆಯಲ್ಲಿ ಇಟ್ಟಿರುವ ತಬಲಾ, ವೀಣೆ ಮುಂತಾದ ಸಂಗೀತ ವಾದ್ಯಗಳನ್ನು ಹೊರತೆಗೆದು ಅಭ್ಯಾಸ ಮಾಡಲು ತೊಡಗಿದ್ದಾರೆ, ಇದನ್ನು ನಾನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದೇನೆ. ನೀವೂ ಸಹ ಹೀಗೆಯೇ ಮಾಡಬಹುದು. ಇದರಿಂದ ನಿಮಗೆ ಸಂಗೀತದ ಆನಂದ ಸಿಗುವುದರ ಜೊತೆಗೆ ಹಳೆಯ ನೆನಪುಗಳು ಕೂಡ ಹೊಸದಾಗಿ ಹೊರಹೊಮ್ಮುತ್ತದೆ. ಅಂದರೆ, ಕಷ್ಟದ ಈ ಸಮಯದಲ್ಲಿ ಬಹಳ ಕಷ್ಟದಿಂದ ನಿಮಗೆ ಇಂತಹ ಒಂದು ಕ್ಷಣ ಸಿಗುತ್ತಿದೆ, ಇದರಿಂದ ಬರೀ ನಿಮ್ಮೊಂದಿಗೆ ನೀವು ಬೆಸೆದುಕೊಳ್ಳುವ ಅವಕಾಶ, ನೀವು ನಿಮ್ಮ ಉತ್ಕಟಾಪೇಕ್ಷೆಯೊಂದಿಗೆ ಕೂಡ ಬೆಸೆದುಕೊಳ್ಳುತ್ತೀರಿ. ನಿಮಗೆ ನಿಮ್ಮ ಹಳೆಯ ಸ್ನೇಹಿತರು ಮತ್ತು ಪರಿವಾರದವರ ಜೊತೆಗೆ ಸೇರಿಕೊಳ್ಳುವ ಸಂಪೂರ್ಣ ಅವಕಾಶ ಸಿಗುತ್ತದೆ.
ನಮೋ ಆಪ್ ನಲ್ಲಿ ರೂರ್ಕಿ ಯಿಂದ ಶಶಿ ಅವರು “ಲಾಕ್ಡೌನ್ ಸಮಯದಲ್ಲಿ ನಾನು ನನ್ನ ಫಿಟ್ನೆಸ್ ಗಾಗಿ ಏನು ಮಾಡುತ್ತೇನೆ? ಈ ಪರಿಸ್ಥಿತಿಯಲ್ಲಿ ನವರಾತ್ರಿಯ ಉಪವಾಸ ಹೇಗೆ ಮಾಡುತ್ತೇನೆ?” ಎಂದು ಕೇಳಿದ್ದಾರೆ. ನಾನು ನಿಮಗೆ ಮತ್ತೊಮ್ಮೆ ಹೇಳುತ್ತಿದ್ದೇನೆ – ನಾನು ನಿಮಗೆ ಹೊರಗೆ ಬರುವುದಕ್ಕೆ ಅನುಮತಿ ನೀಡಿಲ್ಲ, ಆದರೆ ನಿಮಗೆ ನಿಮ್ಮೊಳಗೆ ಇಣುಕಿ ನೋಡಿಕೊಳ್ಳುವುದಕ್ಕೆ ಅವಕಾಶ ಕೂಡ ಮಾಡಿಕೊಟ್ಟಿದ್ದೇನೆ. ಹೊರಗೆ ಬರಬೇಡಿ, ಆದರೆ ನಿಮ್ಮೊಳಗೆ ನೀವು ಪ್ರವೇಶಿಸಿ, ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಇನ್ನು ನವರಾತ್ರಿಯ ಉತ್ಸವದ ವಿಷಯಕ್ಕೆ ಬಂದರೆ ಇದು ನನ್ನ ಶಕ್ತಿ ಮತ್ತು ಭಕ್ತಿಯ ನಡುವಿನ ವಿಷಯ. ಇನ್ನು ಫಿಟ್ನೆಸ್ ವಿಷಯಕ್ಕೆ ಬಂದರೆ ಮಾತು ಉದ್ದವಾಗುತ್ತದೆ ಎಂದು ನನಗನ್ನಿಸುತ್ತದೆ – ನಾನು ಹೀಗೆ ಮಾಡುತ್ತೇನೆ – ನಾನು ಏನು ಮಾಡುತ್ತೇನೆ ಎನ್ನುವ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೊಗಳನ್ನು ಹಾಕುತ್ತೇನೆ. Namo App ನಲ್ಲಿ ನೀವು ಆ ವೀಡಿಯೊಗಳನ್ನು ಅವಶ್ಯಕವಾಗಿ ನೋಡಬಹುದು. ನಾನೇನು ಮಾಡುತ್ತೇನೆ ಎನ್ನುವುದರಲ್ಲಿ ಕೆಲವು ವಿಷಯಗಳು ಬಹುಶಃ ನಿಮಗೆ ಉಪಯೋಗವಾಗಬಹುದು, ಆದರೆ ನಾನು ಫಿಟ್ನೆಸ್ ಎಕ್ಸ್ಪರ್ಟ್ ಅಲ್ಲ ಅಥವಾ ನಾನು ಯೋಗ ಗುರು ಅಲ್ಲ, ಕೇವಲ ಒಬ್ಬ ಅಭ್ಯಾಸಿ ಎನ್ನುವ ಒಂದು ಮಾತನ್ನು ಮಾತ್ರ ನೀವು ತಿಳಿದುಕೊಳ್ಳಿ. ಯೋಗದ ಕೆಲವು ಆಸನಗಳಿಂದ ನನಗೆ ಬಹಳ ಲಾಭವಾಗಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಲಾಕ್ಡೌನ್ ದೆಸೆಯಿಂದ ನಿಮಗೂ ಸಹ ಈ ಮಾತುಗಳು ಸ್ವಲ್ಪ ಉಪಯೋಗಕ್ಕೆ ಬರಬಹುದು.
ಮಿತ್ರರೇ, ಕೊರೊನಾದ ವಿರುದ್ಧದ ಈ ಯುದ್ಧ ಅಭೂತಪೂರ್ವವಾದುದು ಮತ್ತು ಸವಾಲಿನದು. ಆದ್ದರಿಂದ ಇದರ ಸಲುವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಕೂಡ ಹೇಗಿವೆ ಎಂದರೆ ಜಗತ್ತಿನ ಇತಿಹಾಸದಲ್ಲೇ ಎಂದಿಗೂ ನೋಡುವುದಕ್ಕೂ, ಕೇಳುವುದಕ್ಕೂ ಸಿಕ್ಕಿರುವುದಿಲ್ಲ, ಹಾಗಿವೆ. ಕೊರೊನಾವನ್ನು ತಡೆಗಟ್ಟುವ ಸಲುವಾಗಿ ಸಮಸ್ತ ಭಾರತೀಯರು ತೆಗೆದುಕೊಂಡಿರುವ, ಈಗ ನಾವು ಏನು ಪ್ರಯತ್ನಿಸುತ್ತಿದ್ದೇವೆ ಆ ಹೆಜ್ಜೆ – ಅದೇ ಭಾರತಕ್ಕೆ ಕೊರೊನಾ ಮಹಾಮಾರಿಯ ವಿರುಧ್ಧ ಜಯ ತಂದುಕೊಡುತ್ತದೆ. ಪ್ರತಿಯೊಬ್ಬ ಭಾರತೀಯನ ಸಂಯಮ ಮತ್ತು ಸಂಕಲ್ಪ ಕೂಡ ನಮ್ಮನ್ನು ಕಡುಕಷ್ಟದ ಸ್ಥಿತಿಯಿಂದ ಹೊರಗೆ ತರುತ್ತದೆ. ಜೊತೆಜೊತೆಗೆ ಬಡವರಿಗಾಗಿ ನಮ್ಮ ಸಂವೇದನೆ ಇನ್ನಷ್ಟು ಹೆಚ್ಚಾಗಬೇಕು. ಎಲ್ಲಿಯಾದರೂ ಯಾರಾದರೂ ಬಡವ ದುಃಖದಿಂದ, ಹೊಟ್ಟೆ ಹಸಿವಿನಿಂದ ಕಾಣಸಿಕ್ಕರೆ ಇಂತಹ ಸಂಕಷ್ಟದ ಸಮಯದಲ್ಲಿ ಮೊದಲು ನಾವು ಅವರ ಹೊಟ್ಟೆ ತುಂಬಿಸೋಣ, ಅವನ ಅವಶ್ಯಕತೆಗಳ ಬಗ್ಗೆ ಯೋಚಿಸೋಣ, ನಮ್ಮ ಮಾನವೀಯತೆಯ ಗಮ್ಯ ಇದರಲ್ಲಿದೆ. ಇದನ್ನು ಹಿಂದುಸ್ತಾನವು ಮಾಡಬಹುದು, ಮಾಡುತ್ತದೆ. ಇದು ನಮ್ಮ ಸಂಸ್ಕಾರ, ಇದು ನಮ್ಮ ಸಂಸ್ಕೃತಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಪ್ರತಿಯೊಬ್ಬ ಭಾರತೀಯನೂ ತಮ್ಮ ಜೀವನದ ರಕ್ಷಣೆಗಾಗಿ ಮನೆಯಲ್ಲಿ ಬಂದಿಯಾಗಿದ್ದಾನೆ, ಆದರೆ ಮುಂಬರುವ ಸಮಯದಲ್ಲಿ ಇದೇ ಭಾರತೀಯರು ತಮ್ಮ ದೇಶದ ಅಭಿವೃದ್ಧಿಗಾಗಿ ಎಲ್ಲಾ ಅಡೆತಡೆಗಳನ್ನೂ ದಾಟಿ ಮುಂದೆ ನಡೆದರೆ ದೇಶವನ್ನು ಮುಂದೆ ತೆಗೆದುಕೊಂಡು ಹೋಗುತ್ತೀರಿ. ನೀವು ನಿಮ್ಮ ಕುಟುಂಬದವರೊಂದಿಗೆ ಮನೆಯಲ್ಲೇ ಇರಿ, ಸುರಕ್ಷಿತವಾಗಿ ಮತ್ತು ಸಮಾಧಾನದಿಂದ ಇರಿ, ನಾವು ಈ ಯುದ್ಧವನ್ನು ಗೆಲ್ಲಬೇಕಿದೆ, ಖಂಡಿತವಾಗಿಯೂ ಗೆಲ್ಲುತ್ತೇವೆ. ಅನಂತಾನಂತ ಧನ್ಯವಾದಗಳು. ಮನದ ಮಾತಿಗಾಗಿ ಮತ್ತೆ ಮುಂದಿನ ತಿಂಗಳು ಭೇಟಿಯಾಗೋಣ ಮತ್ತು ಅಲ್ಲಿಯವರೆಗೆ ಈ ಸಂಕಟವನ್ನು ಹೊಡೆದೋಡಿಸಲು ನಾವು ಸಫಲರಾಗಿರುತ್ತೇವೆ ಎನ್ನುವ ಒಂದು ಯೋಚನೆಯೊಂದಿಗೆ, ಈ ಒಂದು ಆಶಾವಾದದೊಂದಿಗೆ ನಿಮಗೆಲ್ಲಾ ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನ’ ಮೂಲಕ, ಕಛ್ ನಿಂದ ಕೊಹಿಮಾವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದೇಶದ ಸಮಸ್ತ ನಾಗರಿಕರಿಗೆ ಮತ್ತೊಮ್ಮೆ ನಮಸ್ಕಾರ ಮಾಡಲು ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ತಮ್ಮೆಲ್ಲರಿಗೂ ನಮಸ್ಕಾರ. ನಮ್ಮ ದೇಶದ ವೈಶಾಲ್ಯತೆ ಮತ್ತು ವೈವಿಧ್ಯತೆಯನ್ನು ನೆನೆಯುವುದು, ಅದಕ್ಕೆ ತಲೆ ಬಾಗುವುದು, ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯನ್ನು ಮೂಡಿಸುತ್ತದೆ ಮತ್ತು ಈ ವೈವಿಧ್ಯತೆಯ ಅನುಭವದ ಅವಕಾಶ ಹೊಸ ಅನುಭೂತಿ ನೀಡುವ, ಆನಂದವನ್ನು ತುಂಬುವ ಹಾಗೂ ಒಂದು ಬಗೆಯ ಪ್ರೇರಣೆಯ ಪುಷ್ಪದಂತಿದೆ. ಕೆಲ ದಿನಗಳ ಹಿಂದೆ, ದೆಹಲಿಯ ಹುನರ್ ಹಾಟ್ ನಲ್ಲಿ, ಒಂದು ಪುಟ್ಟ ಸ್ಥಳದಲ್ಲಿ, ನನಗೆ ನಮ್ಮ ದೇಶದ ವಿಶಾಲತೆ, ಸಂಸ್ಕೃತಿ, ಪರಂಪರೆಗಳು, ಊಟ-ಉಪಹಾರ ಮತ್ತು ಭಾವನೆಗಳ ವೈವಿಧ್ಯತೆಯ ದರ್ಶನವಾಯಿತು. ಸಾಂಪ್ರದಾಯಿಕ ವಸ್ತ್ರಗಳು, ಕರಕುಶಲ ವಸ್ತುಗಳು, ರತ್ನಗಂಬಳಿಗಳು, ಪಾತ್ರೆಗಳು, ಬಿದಿರು ಮತ್ತು ಕಂಚಿನ ಉತ್ಪನ್ನಗಳು, ಪಂಜಾಬಿನ ಹೂಕುಂಡಗಳು, ಆಂಧ್ರಪ್ರದೇಶದ ಅದ್ಭುತವಾದ ಚರ್ಮದ ಉತ್ಪನ್ನಗಳು, ತಮಿಳುನಾಡಿನ ಸುಂದರವಾದ ವರ್ಣಚಿತ್ರಗಳು, ಉತ್ತರ ಪ್ರದೇಶದ ಹಿತ್ತಾಳೆಯ ಉತ್ಪನ್ನಗಳು, ಬದೋಹಿಯ ರತ್ನಗಂಬಳಿಗಳು, ಕಛ್ ನ ತಾಮ್ರದ ಉತ್ಪನ್ನಗಳು, ಅನೇಕ ಸಂಗೀತ ವಾದ್ಯಗಳು, ಲೆಕ್ಕವಿಲ್ಲದಷ್ಟು ಮಾತುಗಳು, ಸಂಪೂರ್ಣ ಭಾರತದ ಕಲೆ ಮತ್ತು ಸಂಸ್ಕೃತಿಯ ಕಿರುನೋಟ ನಿಜಕ್ಕೂ ಅದ್ಭುತವೇ ಆಗಿತ್ತು. ಇದರ ಹಿಂದಿನ ಕುಶಲಕರ್ಮಿಗಳ ಸಾಧನೆ, ಏಕಾಗ್ರತೆ, ಅವರ ಕೌಶಲ್ಯದ ಬಗೆಗಿನ ಒಲವಿನ ಕಥೆಗಳು ಸಹ ಬಹಳ ಪ್ರೇರಣಾದಾಯಕವಾಗಿವೆ. ಹುನರ್ ಹಾಟ್ ನಲ್ಲಿ ಒಬ್ಬ ದಿವ್ಯಾಂಗ ಮಹಿಳೆಯ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ಈ ಹಿಂದೆ ಅವರು ಬೀದಿ ಬದಿಯಲ್ಲಿ ತಮ್ಮ ವರ್ಣಚಿತ್ರಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಹುನರ್ ಹಾಟ್ ನ ಒಡನಾಟದೊಂದಿಗೆ ಅವರ ಜೀವನ ಬದಲಾಗಿದೆ ಎಂದು ಹೇಳಿದರು. ಇಂದು ಅವರು ಸ್ವಾವಲಂಬಿಯಷ್ಟೇ ಅಲ್ಲ, ಸ್ವಂತ ಮನೆಯನ್ನೂ ಖರೀದಿಸಿದ್ದಾರೆ. ಹುನರ್ ಹಾಟ್ ನಲ್ಲಿ ನನಗೆ ಹಲವಾರು ಕುಶಲಕರ್ಮಿಗಳನ್ನು ಭೇಟಿ ಮಾಡುವ ಮತ್ತು ಅವರೊಂದಿಗೆ ಸಂವಾದ ನಡೆಸುವ ಅವಕಾಶ ದೊರೆಯಿತು. ಹುನರ್ ಹಾಟ್ ನಲ್ಲಿ ಭಾಗವಹಿಸುವ ಕುಶಲಕರ್ಮಿಗಳಲ್ಲಿ ಶೇ.50 ಕ್ಕೂ ಹೆಚ್ಚು ಮಹಿಳೆಯರಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಕಳೆದ 3 ವರ್ಷಗಳಲ್ಲಿ ಹುನರ್ ಹಾಟ್ ಮೂಲಕ ಸುಮಾರು 3 ಲಕ್ಷ ಕುಶಲಕರ್ಮಿಗಳಿಗೆ ಮತ್ತು ಶಿಲ್ಪಿಗಳಿಗೆ ಉದ್ಯೋಗಾವಕಾಶ ದೊರೆತಿದೆ. ಹುನರ್ ಹಾಟ್ ಕಲಾ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿರುವುದಷ್ಟೇ ಅಲ್ಲದೆ ಜನರ ಕನಸುಗಳ ಸಾಕಾರಕ್ಕೂ ಪುಷ್ಟಿ ನೀಡುತ್ತಿದೆ. ಈ ದೇಶದ ವಿವಿಧತೆಯನ್ನು ಅಲಕ್ಷ್ಯಗೊಳಿಸುವುದು ಅಸಂಭವ ಎನ್ನುವಂತಹ ಸ್ಥಳ ಇದಾಗಿದೆ. ಶಿಲ್ಪಕಲೆಯಂತೂ ಇದ್ದೇ ಇದೆ ಜೊತೆಗೆ ನಮ್ಮ ಉಟೋಪಚಾರಗಳ ವೈವಿಧ್ಯತೆಯನ್ನೂ ಕಾಣಬಹುದು. ಅಲ್ಲಿ ಒಂದೇ ಸಾಲಿನಲ್ಲಿ ಇಡ್ಲಿ – ದೋಸೆ, ಛೋಲೆ ಬಟೂರೆ, ದಾಲ್ ಬಾಟಿ, ಖಮನ್ – ಖಾಂಡ್ವಿ, ಇನ್ನೂ ಏನೇನೋ ಇತ್ತು. ನಾನು ಸ್ವತಃ ಅಲ್ಲಿ ಬಿಹಾರದ ಸ್ವಾದಿಷ್ಟ ಲಿಟ್ಟಿ ಚೋಖೆಯನ್ನು ಆಸ್ವಾದಿಸಿ, ಬಹಳ ಸಂತೋಷಪಟ್ಟೆ. ಭಾರತದ ಪ್ರತಿ ಭಾಗದಲ್ಲೂ ಇಂಥ ಮೇಳಗಳು, ಪ್ರದರ್ಶನಗಳು ಆಯೋಜಿತಗೊಳ್ಳುತ್ತಲೇ ಇರುತ್ತವೆ. ಭಾರತವನ್ನು ಅರಿಯಲು, ಭಾರತವನ್ನು ಅನುಭವಿಸಲು ಅವಕಾಶ ಸಿಕ್ಕಾಗಲೆಲ್ಲಾ ಖಂಡಿತ ಇಂಥ ಪ್ರದರ್ಶನಗಳಿಗೆ ಭೇಟಿ ನೀಡಿ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ವನ್ನು ಮನಃಪೂರ್ವಕ ಜೀವಿಸಲು ಇದು ಅವಕಾಶ ಕಲ್ಪಿಸುತ್ತದೆ. ನೀವು ಕೇವಲ ದೇಶದ ಕಲೆ ಮತ್ತು ಸಂಸ್ಕೃತಿಯ ಸಾಕ್ಷಾತ್ಕಾರ ಪಡೆಯುವುದಿಲ್ಲ ಜೊತೆಗೆ ದೇಶದ ಶ್ರಮಿಕ ಕುಶಲಕರ್ಮಿಗಳು, ವಿಶೇಷವಾಗಿ ಮಹಿಳೆಯರ ಸಮೃದ್ಧಿಗೂ ನಿಮ್ಮ ಕೊಡುಗೆಯನ್ನು ನೀಡಬಹುದಾಗಿದೆ. ಖಂಡಿತ ಭೇಟಿ ನೀಡಿ.
ನನ್ನ ಪ್ರಿಯ ದೇಶಬಂಧುಗಳೇ, ನಮ್ಮ ದೇಶದ ಪರಂಪರೆ ಬಹು ಮಹತ್ತರವಾದದ್ದು. ನಮ್ಮ ಪೂರ್ವಜರು ಇದನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ನಮಗೆ ದೊರೆತ ಶಿಕ್ಷಣ ಮತ್ತು ದೀಕ್ಷೆಯ ಪ್ರಕಾರ ಪ್ರತಿಯೊಂದು ಜೀವಿಯ ಬಗ್ಗೆಯೂ ದಯಾಭಾವನೆಯಿದೆ, ಪ್ರಕೃತಿಯ ಬಗ್ಗೆ ಅಪಾರವಾದ ಪ್ರೀತಿಯಿದೆ, ಈ ಎಲ್ಲ ವಿಷಯಗಳು ನಮ್ಮ ಸಾಂಸ್ಕೃತಿಕ ಬಳುವಳಿಯಾಗಿವೆ. ಭಾರತದ ಇಂಥ ವಾತಾವರಣದ ಆತಿಥ್ಯ ಪಡೆಯಲು ಪ್ರತಿ ವರ್ಷ ವಿಶ್ವದಾದ್ಯಂತದಿಂದ ವಿಭಿನ್ನ ಪ್ರಭೇದದ ಪಕ್ಷಿಗಳು ಭಾರತಕ್ಕೆ ಆಗಮಿಸುತ್ತವೆ. ಭಾರತ ವರ್ಷಪೂರ್ತಿ ಹಲವಾರು ವಲಸಿಗ ಪ್ರಭೇದಗಳ ಆಶ್ರಯತಾಣವಾಗಿರುತ್ತದೆ. ಇಲ್ಲಿ ಬರುವ ಪಕ್ಷಿಗಳು 500 ಕ್ಕೂ ಹೆಚ್ಚು ಪ್ರಭೇದದ ಮತ್ತು ಬೇರೆ ಬೇರೆ ಪ್ರದೇಶಗಳಿಂದ ಬಂದವುಗಳಾಗಿರುತ್ತವೆ ಎಂದೂ ಹೇಳಲಾಗುತ್ತದೆ. ಕೆಲ ದಿನಗಳ ಹಿಂದೆ ಗಾಂಧಿ ನಗರದಲ್ಲಿ ‘COP – 13 convention’, ನಲ್ಲಿ ಈ ವಿಷಯದ ಕುರಿತು ಸಾಕಷ್ಟು ಚಿಂತನೆಯಾಯಿತು, ಮನನವಾಯಿತು ಮತ್ತು ಮನವರಿಕೆಯೂ ಆಯಿತು ಮತ್ತು ಭಾರತದ ಪ್ರಯತ್ನಗಳ ಬಗ್ಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಯಿತು. ಸ್ನೇಹಿತರೇ, ಮುಂಬರುವ 3 ವರ್ಷಗಳವರೆಗೆ ಭಾರತ, ವಲಸಿಗ ಪಕ್ಷಿ ಪ್ರಭೇದಗಳ ಕುರಿತಾದ ‘COP convention’ ನ ಅಧ್ಯಕ್ಷತೆ ವಹಿಸುತ್ತಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಅವಕಾಶವನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ನಿಮ್ಮ ಅನಿಸಿಕೆಗಳನ್ನು ಖಂಡಿತ ಕಳುಹಿಸಿ
‘COP convention’ ಕುರಿತು ಚರ್ಚೆ ನಡೆಯುತ್ತಿರುವಾಗಲೇ ನನ್ನ ಗಮನ ಮೇಘಾಲಯಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿಷಯದತ್ತ ಹರಿಯಿತು. ಇತ್ತೀಚೆಗೆ ಜೀವಶಾಸ್ತ್ರಜ್ಞರು ಮೀನಿನ ಒಂದು ಹೊಸ ಪ್ರಭೇದವನ್ನು ಪತ್ತೆ ಹಚ್ಚಿದ್ದಾರೆ, ಇದು ಕೇವಲ ಮೇಘಾಲಯದ ಗುಹೆಗಳೊಳಗೆ ಮಾತ್ರ ಕಂಡುಬರುತ್ತದೆ. ಈ ಮೀನು ಗುಹೆಯೊಳಗೆ ಭೂಮಿಯಡಿಯಲ್ಲಿ ವಾಸಿಸುವ ಜಲಚರಗಳ ಪ್ರಭೇದಗಳಲ್ಲೇ ಅತ್ಯಂತ ದೊಡ್ಡದು ಎಂದು ನಂಬಲಾಗಿದೆ. ಈ ಮೀನು ಬೆಳಕು ತಲುಪಲು ಸಾಧ್ಯವೂ ಇಲ್ಲದಂತಹ ಕಗ್ಗತ್ತಲು ತುಂಬಿದ ಭೂಗರ್ಭದ ಗುಹೆಗಳಲ್ಲಿ ಇರುತ್ತದೆ. ಇಂಥ ಆಳವಾದ ಗುಹೆಯಲ್ಲಿ ಇಷ್ಟು ದೊಡ್ಡ ಮೀನು ಹೇಗೆ ಜೀವಂತವಾಗಿರುತ್ತದೆ ಎಂದು ವಿಜ್ಞಾನಿಗಳು ಕೂಡಾ ಅಚ್ಚರಿಪಟ್ಟಿದ್ದಾರೆ. ನಮ್ಮ ಭಾರತ ಅದರಲ್ಲೂ ವಿಶೇಷವಾಗಿ ಮೇಘಾಲಯ ಇಂಥ ಅಪರೂಪದ ಪ್ರಭೇದಗಳ ತವರಾಗಿದೆ ಎಂಬುದು ಆಹ್ಲಾದಕರ ವಿಷಯ. ಇದು ಭಾರತದ ಜೀವ ವೈವಿಧ್ಯತೆಗೆ ಒಂದು ಹೊಸ ಆಯಾಮವನ್ನು ನೀಡಲಿದೆ. ನಮ್ಮ ಸುತ್ತಮುತ್ತಲೂ ಇಂದಿಗೂ ಆವಿಷ್ಕರಿಸಲಾರದ ಹಲವಾರು ವಿಸ್ಮಯಗಳಿವೆ. ಇಂಥ ವಿಸ್ಮಯಗಳ ಪತ್ತೆಗೆ ತನಿಖಾ ಉತ್ಸಾಹದ ಅವಶ್ಯಕತೆಯಿರುತ್ತದೆ.
ತಮಿಳಿನ ಮಹಾ ಕವಿಯಿತ್ರಿ ಅವ್ವಯ್ಯಾರ್ ಹೀಗೆ ಬರೆದಿದ್ದಾರೆ
“ಕಟರದು ಕೈಮಣ ಅಲವೆ ಆನಾಲುಮ್
ಕಲ್ಲಾದದು ಉಲಗಲವು”
ಇದರರ್ಥ ‘ನಾವು ತಿಳಿದದ್ದು ಒಂದು ಮುಷ್ಠಿಯಷ್ಟಾದರೆ, ನಾವು ಅರಿಯದ್ದು ಸಂಪೂರ್ಣ ಬ್ರಹ್ಮಾಂಡಕ್ಕೆ ಸಮನಾಗಿದೆ’. ಈ ದೇಶದ ವೈವಿಧ್ಯತೆಯೂ ಹಾಗೇ ಇದೆ. ಎಷ್ಟು ಅರಿತರೂ ಸಾಲದು. ನಮ್ಮ ಜೀವವೈವಿಧ್ಯತೆಯೂ ಸಂಪೂರ್ಣ ಮಾನವ ಕುಲಕ್ಕೆ ಒಂದು ವಿಶಿಷ್ಟ ಖಜಾನೆಯಾಗಿದೆ. ಇದನ್ನು ನಾವು ಸಲಹಬೇಕು, ಸಂರಕ್ಷಿಸಬೇಕು ಮತ್ತು ಅನ್ವೇಷಿಸಬೇಕಿದೆ.
ನನ್ನ ಪ್ರಿಯ ಯುವ ಸ್ನೇಹಿತರೆ, ಈ ಮಧ್ಯೆ ನಮ್ಮ ದೇಶದ ಮಕ್ಕಳಲ್ಲಿ, ಯುವಕರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದೆಡೆ ಆಸಕ್ತಿ ನಿರಂತರವಾಗಿ ವೃದ್ಧಿಸುತ್ತಿದೆ. ಅಂತರಿಕ್ಷದಲ್ಲಿ ಉಪಗ್ರಹ ಉಡ್ಡಯನದಲ್ಲಿ ದಾಖಲೆ, ಹೊಸ ಹೊಸ ದಾಖಲೆಗಳು, ಹೊಸ ಹೊಸ ಯೋಜನೆಗಳು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಬೀಗುವಂತೆ ಮಾಡುತ್ತವೆ. ನಾನು ಚಂದ್ರಯಾನ -2 ರ ಸಮಯದಲ್ಲಿ ಬೆಂಗಳೂರಿನಲ್ಲಿದ್ದೆ, ಆಗ ನಾನು ನೋಡಿದ್ದೆ, ಅಲ್ಲಿ ಉಪಸ್ಥಿತರಿದ್ದ ಮಕ್ಕಳ ಉತ್ಸಾಹ ನೋಡುವಂತಿತ್ತು. ನಿದ್ದೆಯ ಸುಳಿವೂ ಅಲ್ಲಿರಲಿಲ್ಲ. ಒಂದು ರೀತಿ ಇಡೀ ರಾತ್ರಿ ಅವರು ಜಾಗರಣೆ ಮಾಡಿದ್ದರು. ಅವರಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣೆ ಬಗ್ಗೆ ಇದ್ದ ಉತ್ಸಾಹವನ್ನು ನಾವು ಮರೆಯಲಾಗದು. ಮಕ್ಕಳ, ಯುವಕರ, ಇದೇ ಉತ್ಸಾಹಕ್ಕೆ ಪುಷ್ಟಿ ನೀಡಲು ಮತ್ತೊಂದು ವ್ಯವಸ್ಥೆಯು ಆರಂಭಗೊಂಡಿದೆ. ಈಗ ನೀವು ಶ್ರೀಹರಿಕೋಟಾದಲ್ಲಿ ಆಗುವ ಉಪಗ್ರಹ ಉಡಾವಣೆಯನ್ನು ಮುಂದೆ ಕುಳಿತು ನೋಡಬಹುದು. ಇತ್ತೀಚೆಗೆ ಇದನ್ನು ಸರ್ವರಿಗೂ ಮುಕ್ತಗೊಳಿಸಲಾಗಿದೆ. ಸಂದರ್ಶಕರ ಗ್ಯಾಲರಿ ನಿರ್ಮಿಸಲಾಗಿದ್ದು ಅಲ್ಲಿ 10 ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇಸ್ರೊ ವೆಬ್ ಸೈಟ್ ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್ ಲೈನ್ ಬುಕಿಂಗ್ ಕೂಡಾ ಮಾಡಬಹುದಾಗಿದೆ. ಬಹಳಷ್ಟು ಶಾಲೆಗಳು ತಮ್ಮ ಮಕ್ಕಳಿಗೆ ಉಪಗ್ರಹ ಉಡಾವಣೆಯನ್ನು ತೋರಿಸಲು ಮತ್ತು ಅವರನ್ನು ಪ್ರೇರೆಪಿಸಲು ಪ್ರವಾಸಕ್ಕೂ ಕರೆದೊಯ್ಯುತ್ತಿವೆ ಎಂದು ನನಗೆ ಹೇಳಲಾಗಿದೆ. ಎಲ್ಲ ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು ಇದರ ಲಾಭ ಪಡೆಯಬೇಕೆಂದು ನಾನು ಆಗ್ರಹಿಸುತ್ತೇನೆ.
ಸ್ನೇಹಿತರೆ, ನಿಮಗೆ ನಾನು ಮತ್ತೊಂದು ರೋಮಾಂಚಕ ಮಾಹಿತಿ ನೀಡಬಯಸುತ್ತೇನೆ. ನಾನು ನಮೋ ಆಪ್ ನಲ್ಲಿ ಜಾರ್ಖಂಡ್ ನ ಧನ್ ಬಾದ್ ನಿವಾಸಿ ಪಾರಸ್ ಅವರ ಕಮೆಂಟ್ ಓದಿದೆ. ನಾನು ಇಸ್ರೋದ ಯುವಿಕಾ ಕಾರ್ಯಕ್ರಮದ ಕುರಿತು ಯುವ ಸ್ನೇಹಿತರಿಗೆ ತಿಳಿಸಬೇಕೆಂದು ಪಾರಸ್ ಕೋರಿದ್ದಾರೆ. ‘ಯುವಿಕಾ’ ಎಂಬುದು ಯುವಜನತೆಯನ್ನು ವಿಜ್ಞಾನದೊಂದಿಗೆ ಬೆರೆಯುವಂತೆ ಮಾಡಲು ಇಸ್ರೋ ಕೈಗೊಂಡ ಪ್ರಶಂಸನೀಯ ಪ್ರಯತ್ನವಾಗಿದೆ. 2019 ರಲ್ಲಿ ಈ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆರಂಭಿಸಲಾಗಿತ್ತು. ‘ಯುವಿಕಾ’ ಅಂದರೆ ಯುವ ವಿಜ್ಞಾನಿ ಕಾರ್ಯಕ್ರಮ ಎಂದು. ಈ ಕಾರ್ಯಕ್ರಮ ನಮ್ಮ ದೃಷ್ಟಿಕೋನವಾದ “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್” ಎಂಬುದಕ್ಕೆ ತಕ್ಕುದಾಗಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಪರೀಕ್ಷೆಗಳ ನಂತರ ರಜೆಯಲ್ಲಿ ವಿದ್ಯಾರ್ಥಿಗಳು ಇಸ್ರೋದ ಬೇರೆ ಬೇರೆ ಕೇಂದ್ರಗಳಲ್ಲಿ ಅಂತರಿಕ್ಷ ತಂತ್ರಜ್ಞಾನ, ಅಂತರಿಕ್ಷ ವಿಜ್ಞಾನ ಮತ್ತು ಅಂತರಿಕ್ಷ ಅನ್ವಯಿಕೆ ಕುರಿತು ಕಲಿಯುತ್ತಾರೆ. ನಿಮಗೆ ತರಬೇತಿ ಹೇಗಿದೆ? ಯಾವ ರೀತಿಯಿದೆ? ಎಷ್ಟು ರೋಮಾಂಚಕಾರಿಯಾಗಿದೆ? ಎಂದು ತಿಳಿಯಬೇಕೆಂದಲ್ಲಿ ಕಳೆದ ಬಾರಿ ಇದರಲ್ಲಿ ಪಾಲ್ಗೊಂಡವರ ಅನುಭವಗಳನ್ನು ಖಂಡಿತಾ ಓದಿರಿ. ನಿಮಗೆ ಸ್ವತಃ ಭಾಗವಹಿಸಬೇಕೆಂದಲ್ಲಿ ಇಸ್ರೋದ ‘ಯುವಿಕಾ’ ವೆಬ್ ಸೈಟ್ ಗೆ ತೆರಳಿ ನೊಂದಾಯಿಸಿಕೊಳ್ಳಬಹುದು. ನನ್ನ ಯುವಮಿತ್ರರೆ, ನಾನು ನಿಮಗಾಗಿ ವೆಬ್ ಸೈಟ್ ಹೆಸರು ಹೇಳುತ್ತಿದ್ದೇನೆ, ಬರೆದುಕೊಳ್ಳಿ ಮತ್ತು ಖಂಡಿತಾ ಇಂದೇ ಭೇಟಿ ನೀಡಿ. www.yuvika.isro.gov.in ಬರೆದುಕೊಂಡಿರಾ?
ನನ್ನ ಪ್ರೀತಿಯ ದೇಶವಾಸಿಗಳೇ, 2020 ರ ಜನವರಿ 31 ರಂದು ಲದ್ದಾಖ್ ನ ಸುಂದರ ಗಿರಿಶಿಖರಗಳು ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾದವು. ಲೇಹ್ ನ ಕುಶೊಕ್ ಬಾಕುಲಾ ರಿಂಪೋಚಿ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಬಲದ AN-32 ವಿಮಾನ ಹಾರಾಟ ನಡೆಸಿದಾಗ ಒಂದು ಹೊಸ ಇತಿಹಾಸವೇ ನಿರ್ಮಾಣವಾಯಿತು. ಈ ಉಡಾವಣೆಯಲ್ಲಿ ಶೇ 10 ರಷ್ಟು ಭಾರತೀಯ Bio-jet fuel ಮಿಶ್ರಣ ಮಾಡಲಾಗಿತ್ತು. ಎರಡೂ ಇಂಜಿನ್ ಗಳಲ್ಲೂ ಈ ಮಿಶ್ರಣದ ಉಪಯೋಗ ಮಾಡಿದ್ದು ಇದೇ ಮೊದಲ ಬಾರಿ. ಭಾರತದಲ್ಲಷ್ಟೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಎತ್ತರದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾದ ವಿಮಾನ ನಿಲ್ದಾಣದಿಂದ ಇದು ಹಾರಾಟ ನಡೆಸಿದೆ. ವಿಶೇಷತೆಯೆಂದರೆ Bio-jet fuel ನ್ನು ಸೇವಿಸಲಾಗದ ಮರದ ತೈಲದಿಂದ ತಯರಿಸಲಾಗಿದೆ. ಇದನ್ನು ಭಾರತದ ವಿಭಿನ್ನ ಬುಡಕಟ್ಟು ಪ್ರದೇಶಗಳಿಂದ ಖರೀದಿಸಲಾಗುತ್ತದೆ. ಈ ಪ್ರಯತ್ನಗಳಿಂದ ಕೇವಲ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಗ್ಗಿಸುವುದಲ್ಲದೇ ಕಚ್ಚಾ ತೈಲದ ಆಮದಿನ ಮೇಲೆ ಭಾರತದ ಅವಲಂಬನೆಯೂ ಕಡಿಮೆಯಾಗಬಹುದಾಗಿದೆ. ಈ ಬೃಹತ್ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಬಯೋಫ್ಯುಯೆಲ್ ನಿಂದ ವಿಮಾನ ಹಾರಾಟ ತಂತ್ರವನ್ನು ಸಿದ್ಧಪಡಿಸಿದ ಡೆಹ್ರಾಡೂನ್ ನ CSIR, Indian Institute of Petroleum ನ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಅವರ ಈ ಪ್ರಯತ್ನ, ಮೇಕ್ ಇನ್ ಇಂಡಿಯಾಗೂ ಪುಷ್ಟಿ ನೀಡುತ್ತದೆ.
ನನ್ನ ಪ್ರೀತಿಯ ದೇಶಬಾಂಧವರೇ, ನಮ್ಮ ನವಭಾರತ ಈಗ ತನ್ನ ಹಳೆಯ ವಿಧಾನಗಳನ್ನು ತೊರೆದು ಹೊಸತರೊಂದಿಗೆ ಮುಂದೆ ಸಾಗುವುದಕ್ಕೆ ಸಿದ್ಧವಾಗಿದೆ. ವಿಶೇಷವಾಗಿ, ಹೊಸಭಾರತದ ನಮ್ಮ ಸೋದರಿಯರು ಮತ್ತು ಮಾತೆಯರು ಮುಂದೆ ಸಾಗಿ ಆ ಸವಾಲುಗಳನ್ನು ತಮ್ಮ ಕೈಗೆತ್ತಿಕೊಳ್ಳುತ್ತಿದ್ದಾರೆ, ಇದರಿಂದಾಗಿ ಸಂಪೂರ್ಣ ಸಮಾಜದಲ್ಲಿ ಒಂದು ಸಕಾರಾತ್ಮಕ ಪರಿವರ್ತನೆ ಕಂಡುಬರುತ್ತಿದೆ. ಬಿಹಾರದ ಪೂರ್ಣಿಯಾದ ಕತೆಯು, ಇಡೀ ದೇಶದ ಜನರಿಗೆ ಪ್ರೇರಣೆ ನೀಡುವಂತಹದ್ದಾಗಿದೆ. ದಶಕಗಳಿಂದಲೂ ಪ್ರವಾಹದ ಸಮಸ್ಯೆಯಿಂದ ಓಲಾಡುತ್ತಿರುವ ಪ್ರದೇಶ ಇದಾಗಿದೆ. ಇಂತಹದ್ದರಲ್ಲಿ, ಇಲ್ಲಿ, ಬೇಸಾಯ ಮತ್ತು ಇತರ ಆದಾಯದ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಬಹಳ ಕಷ್ಟಕರವಾಗಿದೆ. ಆದರೆ, ಇದೇ ಪರಿಸ್ಥಿತಿಗಳಲ್ಲಿ ಪೂರ್ಣಿಯಾದಲ್ಲಿ, ಕೆಲವು ಮಹಿಳೆಯರು ಒಂದು ಬೇರೆಯೇ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಸ್ನೇಹಿತರೇ, ಮೊದಲು ಈ ಪ್ರದೇಶದ ಮಹಿಳೆಯರು ಹಿಪ್ಪನೇರಳೆ ಅಥವಾ ಮಲ್ಬರಿ ಮರಗಳ ಮೇಲೆ ರೇಷ್ಮೆ ಹುಳುಗಳಿಂದ ರೇಷ್ಮೆಗೂಡು ತಯಾರಿಸುತ್ತಿದ್ದರು. ಇದಕ್ಕೆ ಅವರಿಗೆ ಬಹಳ ಸಾಧಾರಣ ದರ ಸಿಗುತ್ತಿತ್ತು. ಇದನ್ನು ಖರೀದಿಸುವ ವ್ಯಕ್ತಿಗಳು, ಇದೇ ಕುಕೂನ್ ಗಳಿಂದ ರೇಷ್ಮೆ ದಾರ ತಯಾರಿಸಿ, ಭಾರೀ ಲಾಭ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ, ಇಂದು ಪೂರ್ಣಿಯಾದ ಮಹಿಳೆಯರು ಒಂದು ಹೊಸ ಆರಂಭ ಮಾಡಿದ್ದಾರೆ ಮತ್ತು ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಈ ಮಹಿಳೆಯರು ಸರ್ಕಾರದ ಸಹಾಯದೊಂದಿಗೆ, ಮಲ್ಬರಿ-ಉತ್ಪನ್ನ ಸಮೂಹ ರಚಿಸಿದರು. ಇದಾದ ನಂತರ ಅವರು ರೇಷ್ಮೆ ಗೂಡುಗಳಿಂದ ರೇಷ್ಮೆ ದಾರ ತಯಾರಿಸಿದರು ಮತ್ತು ಆ ನೂಲುಗಳಿಂದ ಸ್ವತಃ ಸೀರೆಗಳನ್ನು ತಯಾರಿಸುವುದನ್ನು ಕೂಡಾ ಪ್ರಾರಂಭಿಸಿದರು. ಈಮುನ್ನ ಯಾವ ರೇಷ್ಮೆಗೂಡುಗಳನ್ನು ಮಾರಾಟ ಮಾಡುವುದರಿಂದ ಅವರಿಗೆ ಸಾಧಾರಣ ಹಣ ಸಿಗುತ್ತಿತ್ತೋ, ಈಗ ಅದರಿಂದಲೇ ತಯಾರಿಸಲ್ಪಟ್ಟ ಸೀರೆಗಳು ಸಾವಿರಾರು ರೂಪಾಯಿಗಳಿಗೆ ಮಾರಾಟವಾಗುತ್ತಿವೆ ಎಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ‘ಆದರ್ಶ್ ಜೀವಿಕಾ ಮಹಿಳಾ ಮಲ್ಬರಿ ಉತ್ಪಾದನಾ ಸಮೂಹ’ದ ಸೋದರಿಯರು ಮಾಡಿರುವ ಪವಾಡಗಳ ಪರಿಣಾಮಗಳು ಈಗ ಅನೇಕ ಗ್ರಾಮಗಳಲ್ಲಿ ಕಂಡು ಬರುತ್ತಿವೆ. ಪೂರ್ಣಿಯಾದ ಅನೇಕ ಗ್ರಾಮಗಳ ಸೋದರಿಯರು, ಈಗ ಕೇವಲ ಸೀರೆಗಳನ್ನು ತಯಾರಿಸುವುದಷ್ಟೇ ಅಲ್ಲದೇ, ದೊಡ್ಡ ದೊಡ್ಡ ಜಾತ್ರೆ, ಮೇಳಗಳಲ್ಲಿ ಮಳಿಗೆಗಳನ್ನು ತೆರೆದು ಮಾರಾಟ ಕೂಡಾ ಮಾಡುತ್ತಿದ್ದಾರೆ. ಇಂದಿನ ಮಹಿಳೆ ಹೊಸ ಶಕ್ತಿ, ಹೊಸ ಆಲೋಚನೆಯೊಂದಿಗೆ ಯಾವ ರೀತಿಯಲ್ಲಿ ಹೊಸ ಗುರಿಗಳನ್ನು ಸಾಧಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಒಂದು ಉದಾಹರಣೆ.
ನನ್ನ ಪ್ರೀತಿಯ ದೇಶಬಾಂಧವರೇ, ನಮ್ಮ ದೇಶದ ಮಹಿಳೆಯರ, ನಮ್ಮ ಹೆಣ್ಣು ಮಕ್ಕಳ ಉದ್ಯಮಶೀಲತೆ, ಅವರ ಸಾಹಸ, ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವೆನಿಸಿದೆ. ನಮ್ಮ ಸುತ್ತ ಮುತ್ತ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಹೆಣ್ಣು ಮಕ್ಕಳು ಯಾವ ರೀತಿ ಹಿಂದಿನ ನಿರ್ಬಂಧಗಳನ್ನು ತೊಡೆದು ಹಾಕುತ್ತಿದ್ದಾರೆ, ಹೇಗೆ ಹೊಸ ಎತ್ತರಗಳನ್ನು ಅಧಿಗಮಿಸುತ್ತಿದ್ದಾರೆ ಎನ್ನುವುದು ಇವುಗಳಿಂದ ತಿಳಿದುಬರುತ್ತದೆ. ಹನ್ನೆರಡು ವರ್ಷದ ಬಾಲಕಿ ಕಾಮ್ಯಾ ಕಾರ್ತಿಕೇಯನ್ನಳ ಸಾಧನೆ ಬಗ್ಗೆ ನಾನು ನಿಮ್ಮೊಂದಿಗೆ ಖಂಡಿತಾ ಚರ್ಚಿಸಲು ಬಯಸುತ್ತೇನೆ. ಕಾಮ್ಯಾ ತನ್ನ ಹನ್ನೆರಡನೇ ವಯಸ್ಸಿನಲ್ಲೇ, ಮೌಂಟ್ ಅಕಾನ್ಕಾಗುವಾ (Mount Aconcagua) ಏರುವ ಸಾಧನೆ ಮಾಡಿ ತೊರಿದ್ದಾಳೆ. ಇದು ದಕ್ಷಿಣ ಅಮೆರಿಕಾದಲ್ಲಿ, ಆಂಡಿಸ್ ಪರ್ವತದ ಅತ್ಯಂತ ಎತ್ತರದ ಶಿಖರವಾಗಿದ್ದು. ಸುಮಾರು 7000 ಮೀಟರ್ ಎತ್ತರವಿದೆ. ಈ ತಿಂಗಳಾರಂಭದಲ್ಲಿ ಕಾಮ್ಯಾ ಪರ್ವತ ಏರಿದಳು ಮತ್ತು ಎಲ್ಲಕ್ಕಿಂತ ಮೊದಲು ಅಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಿಸಿದಳೆಂದು ಕೇಳಿದಾಗ ಪ್ರತಿ ಭಾರತೀಯನ ಮನಸ್ಸಿಗೂ ಇದು ಆಳವಾಗಿ ಮುಟ್ಟತ್ತದೆ. ದೇಶವೇ ಹೆಮ್ಮೆ ಪಡುವಂತೆ ಮಾಡಿದ ಕಾವ್ಯಾ ಈಗ ಹೊಸದೊಂದು ಕಾರ್ಯಾಚರಣೆಯಲ್ಲಿದ್ದಾರೆ ಮತ್ತು ಇದರ ಹೆಸರು ಮಿಷನ್ ಸಾಹಸ್ ಎಂದು ನನಗೆ ತಿಳಿದು ಬಂದಿದೆ. ಇದರ ಮೂಲಕ ಅವರು ಎಲ್ಲಾ ಮಹಾದ್ವೀಪಗಳ ಅತಿ ಎತ್ತರದ ಪರ್ವತಾರೋಹಣ ಮಾಡುವಲ್ಲಿ ನಿರತರಾಗಿದ್ದಾರೆ. ಈ ಅಭಿಯಾನದಲ್ಲಿ ಅವರು ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿ ಸ್ಕೀಯಿಂಗ್ ಕೂಡಾ ಮಾಡಬೇಕಾಗುತ್ತದೆ. ನಾನು ಕಾಮ್ಯಾಳಿಗೆ ಮಿಷನ್ ಸಾಹಸ್ ಗಾಗಿ ನನ್ನ ಶುಭಾಷಯಗಳನ್ನು ಕೋರುತ್ತೇನೆ. ಹಾಗೆಯೇ ಕಾಮ್ಯಾಳ ಈ ಸಾಧನೆ ಫಿಟ್ ಆಗಿರಲು ಎಲ್ಲರನ್ನೂ ಪ್ರೇರೇಪಿಸುತ್ತದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಕಾಮ್ಯಾ ತಲುಪಿರುವ ಈ ಎತ್ತರದಲ್ಲಿ, ಫಿಟ್ನೆಸ್ ಕೊಡುಗೆ ಬಹಳ ದೊಡ್ಡದಿದೆ. A Nation that is fit, will be a nation that is hit. ಅಂದರೆ, ಯಾವ ದೇಶ ಫಿಟ್ ಆಗಿರುತ್ತದೆಯೇ, ಅದು ಯಾವಾಗಲೂ ಹಿಟ್ ಆಗಿರುತ್ತದೆ. ಹಾಗೆಯೇ ಮುಂಬರಲಿರುವ ತಿಂಗಳಂತೂ ಸಾಹಸಕ್ರೀಡೆಗಳಿಗೆ ಬಹಳಷ್ಟು ಉಪಯುಕ್ತವಾಗಿದೆ. ಭಾರತದ ಭೌಗೋಳಿಕತೆ ಹೇಗಿದೆಯೆಂದರೆ, ಅದು ನಮ್ಮ ದೇಶಕ್ಕೆ ಸಾಹಸಕ್ರೀಡೆಗಳಿಗೆ ಬಹಳಷ್ಟು ಅವಕಾಶಗಳನ್ನು ಒದಗಿಸುತ್ತದೆ. ಒಂದುಕಡೆ ಎತ್ತರೆತ್ತರದ ಪರ್ವತಗಳಿದ್ದರೆ, ಮತ್ತೊಂದೆಡೆ ದೂರದೂರದವರೆಗೆ ವ್ಯಾಪಿಸಿರುವ ಮರಳುಗಾಡಿದೆ. ಒಂದೆಡೆ ದಟ್ಟವಾದ ಕಾಡುಗಳು ಹರಡಿದ್ದರೆ, ಮತ್ತೊಂದೆಡೆ ವಿಸ್ತಾರವಾದ ಸಮುದ್ರವಿದೆ. ಆದ್ದರಿಂದ, ನೀವು ಕೂಡಾ ನಿಮ್ಮ ಇಷ್ಟದ ಜಾಗ, ನಿಮ್ಮ ಇಚ್ಛೆಯ ಚಟುವಟಿಕೆ ಆಯ್ಕೆ ಮಾಡಿ ಮತ್ತು ನಿಮ್ಮ ಜೀವನವನ್ನು ಸಾಹಸದೊಂದಿಗೆ ಖಂಡಿತಾಜೋಡಿಸಿ ಎಂದು ನಾನು ನಿಮ್ಮೆಲ್ಲರಲ್ಲಿ ವಿಶೇಷವಾಗಿ ಮನವಿ ಮಾಡುತ್ತೇನೆ. ಜೀವನದಲ್ಲಿ ಸಾಹಸ ಇರಲೇ ಬೇಕಲ್ಲವೇ! ಸ್ನೇಹಿತರೇ, ಹನ್ನೆರಡು ವರ್ಷದ ಹೆಣ್ಣುಮಗು ಕಾಮ್ಯಾಳ ಸಫಲತೆಯ ನಂತರ, 105 ವರ್ಷ ವಯಸ್ಸಿನ ಭಾಗೀರಥಿ ಅಮ್ಮನ ಸಫಲತೆಯ ಕತೆ ಕೇಳಿದರಂತೂ ನೀವು ಮತ್ತಷ್ಟು ಆಶ್ಚರ್ಯಚಕಿತರಾಗುತ್ತೀರಿ. ಸ್ನೇಹಿತರೇ, ನಾವು ಜೀವನದಲ್ಲಿ ಮುಂದುವರಿಯಬೇಕೆಂದು ಬಯಸಿದಲ್ಲಿ, ಅಭಿವೃದ್ಧಿ ಹೊಂದಲು ಬಯಸಿದಲ್ಲಿ, ಏನನ್ನಾದರೂ ಮಾಡಬೇಕೆಂದು ಬಯಸಿದರೆ, ನಮ್ಮೊಳಗಿನ ವಿದ್ಯಾರ್ಥಿ ಎಂದಿಗೂ ಸಾಯಬಾರದು ಎನ್ನುವುದು ಮೊದಲನೇ ಷರತ್ತಾಗಿರುತ್ತದೆ. ನಮ್ಮ 105 ವರ್ಷ ವಯಸ್ಸಿನ ಭಾಗೀರಥಿ ಅಮ್ಮ ನಮಗೆ ಈ ಪ್ರೇರಣೆಯನ್ನು ನೀಡುತ್ತಾರೆ. ಈ ಭಾಗೀರಥಿ ಅಮ್ಮಾ ಯಾರು? ಎಂದು ಈಗ ನೀವು ಯೋಚಿಸುತ್ತಿರಬಹುದು. ಭಾಗೀರಥಿ ಅಮ್ಮ ಕೇರಳದ ಕೊಲ್ಲಂನಲ್ಲಿ ವಾಸಿಸುತ್ತಿದ್ದಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ ಆಕೆ ತನ್ನ ತಾಯಿಯನ್ನು ಕಳೆದುಕೊಂಡರು. ಚಿಕ್ಕ ವಯಸ್ಸಿನಲ್ಲೇ ವಿವಾಹವಾದ ನಂತರ ಪತಿಯನ್ನು ಕೂಡಾ ಕಳೆದುಕೊಂಡರು. ಆದರೆ, ಭಾಗೀರಥಿ ಅಮ್ಮ ತಮ್ಮ ಧೈರ್ಯ ಕಳೆದುಕೊಳ್ಳಲಿಲ್ಲ, ತಮ್ಮ ಉತ್ಸಾಹ ಕಳೆದುಕೊಳ್ಳಲಿಲ್ಲ. ಹತ್ತು ವರ್ಷದಷ್ಟು ಕಡಿಮೆ ವಯಸ್ಸಿನಲ್ಲೇ ಅವರು ಶಾಲೆಯನ್ನು ತೊರೆಯಬೇಕಾಯಿತು. ಅವರು 105 ನೇ ವಯಸ್ಸಿನಲ್ಲಿ ಪುನಃ ಶಾಲೆಗೆ ಹೋಗಲು ಆರಂಭಿಸಿದರು. ಓದಲಾರಂಭಿಸಿದರು. ಈ ಇಳಿ ವಯಸ್ಸಿನಲ್ಲೂ ಭಾಗೀರಥಿ ಅಮ್ಮ ಲೆವೆಲ್ 4 ರ ಪರೀಕ್ಷೆ ಬರೆದರು ಮತ್ತು ಬಹಳ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಅವರು ಪರೀಕ್ಷೆಯಲ್ಲಿ ಶೇಕಡಾ 75 ಅಂಕಗಳನ್ನು ಗಳಿಸಿದರು. ಇಷ್ಟೇ ಅಲ್ಲ, ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರು. ಅಮ್ಮ ಈಗ ಮುಂದೆ ಓದಲು ಬಯಸುತ್ತಿದ್ದಾರೆ. ಇನ್ನೂ ಮುಂದಿನ ಪರೀಕ್ಷೆಗಳನ್ನು ಬರಯಲು ಇಚ್ಛಿಸುತ್ತಿದ್ದಾರೆ. ಭಾಗೀರಥಿ ಅಮ್ಮನಂತಹ ವ್ಯಕ್ತಿಗಳು, ನಿಸ್ಸಂಶಯವಾಗಿಯೂ ಈ ದೇಶದ ಶಕ್ತಿಯಾಗಿದ್ದಾರೆ. ಸ್ಫೂರ್ತಿಯ ಅತಿದೊಡ್ಡ ಮೂಲವಾಗಿದ್ದಾರೆ. ನಾನು ಇಂದು ವಿಶೇಷವಾಗಿ ಭಾಗೀರಥಿ ಅಮ್ಮನಿಗೆ ವಂದಿಸುತ್ತೇನೆ.
ಸ್ನೇಹಿತರೇ, ಜೀವನದ ಪ್ರತಿಕೂಲ ಸಮಯದಲ್ಲಿ ನಮ್ಮ ಧೈರ್ಯ, ನಮ್ಮ ಇಚ್ಛಾ-ಶಕ್ತಿ, ಯಾವುದೇ ಪರಿಸ್ಥಿತಿಯನ್ನಾದರೂ ಬದಲಾಯಿಸಿಬಿಡುತ್ತದೆ. ಇತ್ತೀಚೆಗೆ ನಾನು, ಮೀಡಿಯಾದಲ್ಲಿ ಒಂದು ಕತೆಯನ್ನು ಓದಿದೆ ಮತ್ತು ಅದನ್ನು ನಿಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಲು ಬಯಸುತ್ತೇನೆ. ಇದು ಮುರಾದಾಬಾದ್ ನ ಹಮೀರ್ ಪುರ ಗ್ರಾಮದ ನಿವಾಸಿ ಸಲ್ಮಾನ್ ಎಂಬಾತನ ಕತೆಯಾಗಿದೆ. ಸಲ್ಮಾನ್ ಹುಟ್ಟಿನಿಂದಲೇ ದಿವ್ಯಾಂಗ. ಅವರ ಕಾಲು ಆತನಿಗೆ ಸಹಕರಿಸುತ್ತಿರಲಿಲ್ಲ. ಇಂತಹ ಕಷ್ಟಗಳ ನಡುವೆಯೂ ಅವರು ಸೋಲೊಪ್ಪಿಕೊಳ್ಳಲಿಲ್ಲ ಮತ್ತು ಸ್ವಂತಃ ತಮ್ಮ ಕೆಲಸ ಆರಂಭಿಸಬೇಕೆಂದು ನಿರ್ಧರಿಸಿದರು. ಜೊತೆಯಲ್ಲೇ, ತಾವು ತಮ್ಮಂತಹ ದಿವ್ಯಾಂಗರಿಗೆ ಸಹಾಯ ಕೂಡಾ ಮಾಡುವುದಾಗಿ ಕೂಡಾ ನಿರ್ಧರಿಸಿದನು. ಮತ್ತೇನಾಯಿತೆಂದರೆ , ಸಲ್ಮಾನ್ ತನ್ನ ಗ್ರಾಮದಲ್ಲೇ, ಚಪ್ಪಲಿ ಮತ್ತು ಡಿಟರ್ಜೆಂಟ್ ತಯಾರಿಸುವ ಕೆಲಸ ಆರಂಭಿಸಿದರು. ನೋಡ ನೋಡುತ್ತಿದ್ದಂತೆಯೇ, ಅವರೊಂದಿಗೆ ಇತರ 30 ಮಂದಿ ದಿವ್ಯಾಂಗ ಸ್ನೇಹಿತರು ಸೇರಿಕೊಂಡರು. ಇಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ, ಸಲ್ಮಾನನಿಗೆ ಸ್ವತಃ ನಡೆಯಲು ಸಮಸ್ಯೆ ಇತ್ತು, ಆದರೆ ಅವರು ಇತರರಿಗೆ ನಡೆಯಲು ಸಹಾಯ ಮಾಡುವ ಚಪ್ಪಲಿ ತಯಾರಿಸಲು ನಿರ್ಧಾರ ಮಾಡಿದರು. ವಿಶೇಷವೆಂದರೆ ಸಲ್ಮಾನ್, ಜೊತೆಯ ದಿವ್ಯಾಂಗರಿಗೆ ತಾವೇ ಸ್ವತಃ ತರಬೇತಿ ನೀಡಿದರು. ಈಗ ಇವರೆಲ್ಲರೂ ಸೇರಿ ಮ್ಯಾನುಫ್ಯಾಕ್ಚರಿಂಗ್ ಕೂಡಾ ಮಾಡುತ್ತಾರೆ ಮತ್ತು ಮಾರ್ಕೆಟಿಂಗ್ ಕೂಡಾ ಮಾಡುತ್ತಾರೆ. ತಮ್ಮ ಶ್ರಮದಿಂದ ಇವರುಗಳು, ಕೇವಲ ತಮಗಾಗಿ ಉದ್ಯೋಗ ಖಾತ್ರಿ ಪಡಿಸಿಕೊಂಡಿದ್ದು ಮಾತ್ರವಲ್ಲದೇ, ತಮ್ಮ ಕಂಪೆನಿಯನ್ನು ಕೂಡಾ ಲಾಭದಾಯಕವಾಗಿಸಿದರು. ಈಗ ಇವರೆಲ್ಲರೂ ಸೇರಿ, ಒಂದು ದಿನದಲ್ಲಿ ನೂರಾ ಐವತ್ತು (150) ಜೊತೆ ಚಪ್ಪಲಿ ತಯಾರಿಸುತ್ತಾರೆ. ಇಷ್ಟೇ ಅಲ್ಲ, ಈವರ್ಷ 100 ದಿವ್ಯಾಂಗರಿಗೆ ಉದ್ಯೋಗಾವಕಾಶ ನೀಡಬೇಕೆಂದು ಸಲ್ಮಾನ್ ಸಂಕಲ್ಪ ಕೂಡಾ ಮಾಡಿದ್ದಾರೆ. ಇವರೆಲ್ಲರ ಧೈರ್ಯ, ಅವರ ಉದ್ಯಮಶೀಲತೆಗೆ ನಾನು ನಮಸ್ಕರಿಸುತ್ತೇನೆ. ಇಂತಹದ್ದೇ ಸಂಕಲ್ಪ ಶಕ್ತಿ, ಗುಜರಾತ್ ನ ಕೆಲವು ಪ್ರಾಂತ್ಯಗಳಲ್ಲಿ, ಅಜರಕ್ ಗ್ರಾಮದ ಜನರಲ್ಲಿ ಕೂಡಾ ಕಂಡು ಬಂದಿದೆ. 2001 ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ,ಜನರೆಲ್ಲರೂ ಗ್ರಾಮ ತೊರೆಯುತ್ತಿದ್ದರು, ಆಗ ಇಸ್ಮಾಯಿಲ್ ಖತ್ರಿ ಎಂಬ ವ್ಯಕ್ತಿಯು, ಗ್ರಾಮದಲ್ಲೇ ಉಳಿದು, ತಮ್ಮ ಸಾಂಪ್ರದಾಯಿಕ ಅಜರಕ್ ಪ್ರಿಂಟ್ ನ ಕಲೆಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು. ನಂತರ, ನೋಡ ನೋಡುತ್ತಿದ್ದಂತೆಯೇ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಅಜರಕ್ ಕಲೆಯು ಪ್ರತಿಯೊಬ್ಬರನ್ನೂ ಆಕರ್ಷಿಸತೊಡಗಿತು ಮತ್ತು ಈ ಸಂಪೂರ್ಣ ಗ್ರಾಮವು ತನ್ನ ಸಾಂಪ್ರದಾಯಿಕ ಕರಕುಶಲ ವಿಧಾನದೊಂದಿಗೆ ಬೆಸೆದುಕೊಂಡಿತು. ಗ್ರಾಮಸ್ಥರು, ನೂರಾರು ವರ್ಷಗಳಷ್ಟು ಹಳೆಯದಾದ ತಮ್ಮ ಕಲೆಯನ್ನು ಉಳಿಸಿದ್ದು ಮಾತ್ರವಲ್ಲ, ಅದನ್ನು ನವೀನ ಫ್ಯಾಷನ್ ನೊಂದಿಗೆ ಕೂಡಾ ಜೋಡಿಸಿದರು. ಈಗ ದೊಡ್ಡ ದೊಡ್ಡ ಡಿಸೈನರ್, ದೊಡ್ಡ ದೊಡ್ಡ ಡಿಸೈನ್ ಸಂಸ್ಥೆಗಳು ‘ಅಜರಕ್ ಪ್ರಿಂಟ್’ ಬಳಸಲು ಆರಂಭಿಸಿವೆ. ಗ್ರಾಮದ ಶ್ರಮಜೀವಿಗಳ ಕಾರಣದಿಂದಾಗಿ, ಇಂದು ‘ಅಜರಕ್ ಪ್ರಿಂಟ್’ ಒಂದು ದೊಡ್ಡ ಬ್ರಾಂಡ್ ಎನಿಸುತ್ತಿದೆ. ವಿಶ್ವದ ದೊಡ್ಡ ಖರೀದಿದಾರರು ಈ ಪ್ರಿಂಟ್ ನೆಡೆಗೆ ಆಕರ್ಷಿತರಾಗುತ್ತಿದ್ದಾರೆ.
ನನ್ನ ಪ್ರೀತಿಯ ದೇಶಬಾಂಧವರೆ, ಇತ್ತೀಚೆಗೆ ಮಹಾ-ಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗಿದೆ. ಭಗವಂತ ಶಿವ ಮತ್ತು ಮಾತೆ ಪಾರ್ವತಿ ದೇವಿಯ ಆಶೀರ್ವಾದವು ದೇಶದ ಪ್ರಜ್ಞೆಯನ್ನು ಜಾಗೃತಗೊಳಿಸಿದೆ. ಮಹಾ-ಶಿವರಾತ್ರಿಯಂದು ಭೋಲೇ ಬಾಬಾನ ಆಶೀರ್ವಾದ ನಿಮ್ಮ ಮೇಲೆ ಉಳಿಯಲಿ,ನಿಮ್ಮ ಎಲ್ಲಾ ಮನೋಭಿಲಾಷೆಗಳನ್ನು ಶಿವ ಈಡೇರಿಸಲಿ, ನೀವು ಶಕ್ತಿವಂತರಾಗಿರಿ, ಆರೋಗ್ಯವಂತರಾಗಿರಿ, ಸುಖವಾಗಿರಿ, ಸಂತೋಷವಾಗಿರಿ ಮತ್ತು ದೇಶಕ್ಕಾಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರಿ.
ಸ್ನೇಹಿತರೇ, ಮಹಾಶಿವರಾತ್ರಿಯೊಂದಿಗೇ, ವಸಂತ ಋತುವಿನ ಸೌಂದರ್ಯ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ಮುಂಬರುವ ದಿನಗಳಲ್ಲಿ ಹೋಳಿ ಹಬ್ಬವೂ ಇದೆ. ಅದಾದ ನಂತರ ಶೀಘ್ರದಲ್ಲೇ ಗುಡಿಪಾಡವಾ ಕೂಡಾ ಬರಲಿದೆ. ನವರಾತ್ರಿಯ ಹಬ್ಬವೂ ಇದರೊಂದಿಗೆ ಸೇರಿಕೊಂಡಿದೆ. ರಾಮನವಮಿ ಹಬ್ಬವೂ ಬರುತ್ತದೆ. ಹಬ್ಬಗಳು ನಮ್ಮ ದೇಶದಲ್ಲಿ ಸಾಮಾಜಿಕ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಪ್ರತಿ ಹಬ್ಬದ ಹಿಂದೆ ಯಾವುದಾದರೊಂದು ಸಾಮಾಜಿಕ ಸಂದೇಶ ಅಡಗಿರುತ್ತದೆ ಮತ್ತು ಈ ಸಂದೇಶವು ಕೇವಲ ಸಮಾಜವನ್ನು ಮಾತ್ರವಲ್ಲ, ಸಂಪೂರ್ಣ ದೇಶವನ್ನು, ಏಕತೆಯಲ್ಲಿ ಬಂಧಿಸಿಡುತ್ತದೆ. ಹೋಳಿ ಹಬ್ಬದ ನಂತರ ಚೈತ್ರ ಶುಕ್ಲ -ಪಾಡ್ಯದಿಂದ ಭಾರತೀಯ ವಿಕ್ರಮೀ ನೂತನ ವರ್ಷಾರಂಭವೂ ಆಗುತ್ತದೆ. ಅದಕ್ಕಾಗಿಯೂ, ಭಾರತೀಯ ಹೊಸ ವರ್ಷಕ್ಕಾಗಿಯೂ , ನಾನು ನಿಮಗೆಲ್ಲಾ ಮುಂಚಿತವಾಗಿಯೇ ಶುಭಾಶಯ ಹೇಳುತ್ತಿದ್ದೇನೆ.
ನನ್ನ ಪ್ರೀತಿಯ ದೇಶ ಬಾಂಧವರೇ, ನನ್ನ ಮುಂದಿನ ಮನ್ ಕಿ ಬಾತ್ ವೇಳೆಗೆ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ನಿರತರಾಗಿರುತ್ತಾರೆ ಎಂದು ನನಗನಿಸುತ್ತದೆ. ಯಾರ ಪರೀಕ್ಷೆಗಳು ಮುಗಿದಿರುತ್ತವೆಯೋ ಅವರು ಖುಷಿಯಾಗಿರುತ್ತಾರೆ. ನಿರತರಾಗಿರುವವರಿಗೆ, ಖುಷಿಯಾಗಿರುವವರಿಗೆ ಕೂಡಾ ಅನೇಕಾನೇಕ ಶುಭಕಾಮನೆಗಳನ್ನು ನೀಡುತ್ತಿದ್ದೇನೆ, ಬನ್ನಿ, ಮುಂದಿನ ಮನ್ ಕಿ ಬಾತ್ ಗಾಗಿ ಅನೇಕಾನೇಕ ವಿಷಯಗಳನ್ನು ತೆಗೆದುಕೊಂಡು ಪುನಃ ಭೇಟಿಯಾಗೋಣ.
ಅನಂತಾನಂತ ಧನ್ಯವಾದಗಳು. ನಮಸ್ಕಾರ.
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಇಂದು ಜನವರಿ 26. ಗಣರಾಜ್ಯೋತ್ಸವ ದಿನದ ಅನಂತಾನಂತ ಶುಭಾಶಯಗಳು. ಇಂದು 2020 ರ ಮೊದಲ ಮನದ ಮಾತಿನಲ್ಲಿ ನಮ್ಮ ಭೇಟಿ. ಇದು ಈ ವರ್ಷದಲ್ಲಿ ಮೊದಲ ಕಾರ್ಯಕ್ರಮ ಕೂಡ, ಹಾಗೆಯೇ ಈ ದಶಕದ ಮೊದಲ ಕಾರ್ಯಕ್ರಮ ಸಹ ಆಗಿದೆ. ಗೆಳೆಯರೇ, ಈ ಬಾರಿ ಗಣರಾಜ್ಯೋತ್ಸವದ ಸಮಾರಂಭದ ಕಾರಣದಿಂದ ನಿಮ್ಮೊಂದಿಗಿನ ಮನದ ಮಾತಿನ ಸಮಯವನ್ನು ಬದಲಿಸುವುದು ಒಳ್ಳೆಯದು ಅನ್ನಿಸಿತು. ಆದ್ದರಿಂದ ಒಂದು ಬೇರೆ ಸಮಯವನ್ನು ನಿಗದಿಗೊಳಿಸಿ ಇಂದು ನಿಮ್ಮೊಂದಿಗೆ ಮನದ ಮಾತನ್ನು ಆಡುತ್ತಿದ್ದೇನೆ. ಗೆಳೆಯರೇ, ದಿನ ಬದಲಾಗುತ್ತದೆ, ವಾರಗಳು ಬದಲಾಗುತ್ತವೆ, ತಿಂಗಳುಗಳು ಸಹ ಉರುಳುತ್ತವೆ, ವರ್ಷಗಳೂ ಬದಲಾಗುತ್ತವೆ, ಆದರೆ ಭಾರತೀಯರ ಉತ್ಸಾಹ ಮತ್ತು “ನಾವು ಕೂಡ ಯಾರಿಗೂ ಕಡಿಮೆಯಿಲ್ಲ, ಏನಾದರೂ ಮಾಡಿಯೇ ಮಾಡುತ್ತೇವೆ” ಎನ್ನುವ ಈ ‘can do’ ಮನೋಭಾವ, ಸಂಕಲ್ಪದೊಂದಿಗೆ ಹೊರಹೊಮ್ಮುತ್ತಿದೆ. ದೇಶ ಮತ್ತು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಭಾವನೆ, ಪ್ರತಿದಿನ, ಮೊದಲಿಗಿಂತಲೂ ಹೆಚ್ಚು ಬಲಿಷ್ಠವಾಗುತ್ತಾ ಹೋಗುತ್ತಿದೆ. ಗೆಳೆಯರೇ, ಮನದ ಮಾತು ವೇದಿಕೆಯಲ್ಲಿ ಹೊಸ ಹೊಸ ವಿಷಯಗಳ ಬಗ್ಗೆ ಚರ್ಚೆ ಮಾಡಲು ಮತ್ತು ಭಾರತವನ್ನು ವಿಜೃಂಭಿಸಲು ಮತ್ತೊಮ್ಮೆ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಮನದ ಮಾತು – sharing, caring and growing together ಎನ್ನುವುದಕ್ಕೆ ಒಂದು ಒಳ್ಳೆಯ ಹಾಗೂ ಸಾಮಾನ್ಯ ವೇದಿಕೆ ಆಗಿಬಿಟ್ಟಿದೆ. ಪ್ರತೀ ತಿಂಗಳೂ ಸಾವಿರಾರು ಸಂಖ್ಯೆಯಲ್ಲಿ ಜನರು, ತಮ್ಮ ಸಲಹೆಗಳು, ಪ್ರಯತ್ನಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅವುಗಳಲ್ಲಿ ಸಮಾಜಕ್ಕೆ ಪ್ರೇರಣೆ ನೀಡುವಂತಹ ಕೆಲವು ಮಾತುಗಳು, ಜನರ ಅಸಾಧಾರಣ ಪ್ರಯತ್ನಗಳು ಇವುಗಳ ಬಗ್ಗೆ ನಮಗೆ ಚರ್ಚೆ ಮಾಡುವ ಅವಕಾಶ ಸಿಗುತ್ತದೆ.
ಯಾರೋ ಮಾಡಿ ತೋರಿಸಿದ್ದಾರೆ ಅಂದರೆ ನಾವೂ ಕೂಡ ಮಾಡಬಹುದೇ? ಆ ಪ್ರಯೋಗವನ್ನು ಇಡೀ ದೇಶದಲ್ಲಿ ಪುನರಾವರ್ತಿಸಿ ಒಂದು ದೊಡ್ಡ ಪರಿವರ್ತನೆಯನ್ನು ತರಬಹುದೇ? ಅದನ್ನು ಸಮಾಜದಲ್ಲಿ ಒಂದು ಸಹಜ ಅಭ್ಯಾಸದ ರೂಪದಲ್ಲಿ ವಿಕಸನಗೊಳಿಸಿ ಆ ಪರಿಪರ್ತನೆಗೆ ಒಂದು ಮಾನ್ಯತೆ ದೊರಕಿಸಿಕೊಡಬಹುದೇ? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹುಡುಕುತ್ತಾ ಪ್ರತಿ ತಿಂಗಳು ಮನದ ಮಾತಿನಲ್ಲಿ ಕೆಲವು ಮನವಿಗಳು, ಆಹ್ವಾನಗಳು, ಏನನ್ನಾದರೂ ಮಾಡಿ ತೋರಿಸುವ ಸಂಕಲ್ಪಗಳು -ಇವುಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಕಳೆದ ಎμÉ್ಟೂೀ ವರ್ಷಗಳಲ್ಲಿ ನಾವು ‘No to single use plastic’, ‘ಖಾದಿ’, ಮತ್ತು ‘ಸ್ಥಳೀಯ ಖರೀದಿ’ ಇವುಗಳ ಬಗ್ಗೆ, ಸ್ವಚ್ಚತೆಯ ವಿಷಯವಾಗಿ, ಹೆಣ್ಣುಮಕ್ಕಳ ಮಾನ-ಸಮ್ಮಾನದ ಚರ್ಚೆಗಳು, less cash Economy ಯಂತಹ ಹೊಸ ವಿಚಾರಗಳು ಮತ್ತು ಅವುಗಳನ್ನು ಬಲಪಡಿಸುವುದು – ಇಂತಹ ಹಲವಾರು ಸಣ್ಣ ಸಣ್ಣ ಸಂಕಲ್ಪಗಳನ್ನು ಮಾಡಿರಬಹುದು. ಇಂತಹ ಹಲವಾರು ಸಂಕಲ್ಪಗಳ ಹುಟ್ಟು ನಮ್ಮ ಈ ಸಣ್ಣ ಪುಟ್ಟ ಮನದ ಮಾತುಗಳಲ್ಲೇ ಆಗಿದೆ. ಮತ್ತು ಅದಕ್ಕೆ ನೀವೇ ಬಲವನ್ನೂ ನೀಡಿದ್ದೀರಿ.
ಬಿಹಾರದ ಶ್ರೀಮಾನ್ ಶೈಲೇಶ್ ಅವರು ಬರೆದಿರುವ ಬಹಳ ಪ್ರೀತಿಯ ಒಂದು ಪತ್ರ ನನಗೆ ಸಿಕ್ಕಿದೆ. ಅಂದಹಾಗೆ, ಅವರು ಈಗ ಬಿಹಾರದಲ್ಲಿ ವಾಸಿಸುತ್ತಿಲ್ಲ. ಅವರು ದೆಹಲಿಯಲ್ಲಿ ಇದ್ದು ಯಾವುದೋ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು – “ಮೋದಿಯವರೇ, ನೀವು ಪ್ರತಿ ಮನದ ಮಾತು ಕಾರ್ಯಕ್ರಮದಲ್ಲಿ ಏನಾದರೂ ಅಪೀಲು ಮಾಡುತ್ತೀರಿ. ನಾನು ಅವುಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ಈ ಛಳಿಗಾಲದಲ್ಲಿ ನಾನು ಜನರ ಮನೆಗಳಿಂದ ಬಟ್ಟೆಗಳನ್ನು ಒಟ್ಟು ಸೇರಿಸಿ ಅವಶ್ಯಕತೆ ಇದ್ದವರಿಗೆ ಹಂಚಿದ್ದೇನೆ. ಮನದ ಮಾತಿನಿಂದ ನಾನು ಬಹಳಷ್ಟು ಕೆಲಸಗಳನ್ನು ಮಾಡಲು ಪ್ರಾರಂಭಿಸಿದ್ದೇನೆ. ಆದರೆ ನಿಧಾನವಾಗಿ ಕೆಲವನ್ನು ನಾನು ಮರೆತುಬಿಟ್ಟೆ ಮತ್ತೆ ಕೆಲವು ವಿಷಯಗಳು ಬಿಟ್ಟು ಹೋದವು. ನಾನು ಈ ಹೊಸವರ್ಷದಲ್ಲಿ ಮನದ ಮಾತಿನ ಬಗ್ಗೆ ಒಂದು ಚಾರ್ಟರ್ ಮಾಡಿದ್ದೇನೆ. ಅದರಲ್ಲಿ ಈ ಎಲ್ಲಾ ವಿಷಯಗಳ ಒಂದು ಪಟ್ಟಿ ಮಾಡಿದ್ದೇನೆ. ಹೇಗೆ ಜನರು ಹೊಸವರ್ಷದ ಸಂಕಲ್ಪ ಮಾಡುತ್ತಾರೋ ಅದೇ ರೀತಿ ಇದು ನನ್ನ ಹೊಸವರ್ಷದ ಸಾಮಾಜಿಕ ಸಂಕಲ್ಪ. ಇವೆಲ್ಲಾ ಸಣ್ಣ ಸಣ್ಣ ವಿಷಯಗಳು, ಆದರೆ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂದು ನನಗೆ ಅನ್ನಿಸುತ್ತದೆ. ನೀವು ನನ್ನ ಈ ಚಾರ್ಟರ್ಗೆ ಆಟೋಗ್ರಾಫ್ ನೀಡಿ ನನಗೆ ಹಿಂತಿರುಗಿ ಕಳುಹಿಸುವುದಕ್ಕಾಗುತ್ತದೆಯೇ?” ಎಂದು ಬರೆದಿದ್ದಾರೆ. ಶೈಲೇಶ್ ಅವರೇ, ನಿಮಗೆ ಅನಂತಾನಂತ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ಹೊಸವರ್ಷದ ಸಂಕಲ್ಪಕ್ಕೆ ಮನದ ಮಾತಿನ ಚಾರ್ಟರ್ ತುಂಬಾ ಹೊಸತನದಿಂದ ಕೂಡಿದೆ. ನಾನು ನನ್ನ ಕಡೆಯಿಂದ ಶುಭಕಾಮನೆಗಳನ್ನು ಬರೆದು ಇದನ್ನು ಖಂಡಿತವಾಗಿ ನಿಮಗೆ ಹಿಂತಿರುಗಿಸಿ ಕಳುಹಿಸುತ್ತೇನೆ. ಸ್ನೇಹಿತರೇ, ಈ ಮನದ ಮಾತಿನ ಚಾರ್ಟರ್ನ್ನು ನಾನು ಓದುತ್ತಿರುವಾಗ ಇಷ್ಟೊಂದು ಮಾತುಗಳಿವೆಯೇ ಎಂದು ನನಗೆ ಕೂಡ ಆಶ್ಚರ್ಯವಾಯಿತು. ಎಷ್ಟೊಂದು ಹ್ಯಾಶ್ ಟ್ಯಾಗ್ ಗಳಿವೆ,, ಮತ್ತು ನಾವೆಲ್ಲಾ ಸೇರಿ ಬಹಳಷ್ಟು ಪ್ರಯತ್ನವನ್ನೂ ಪಟ್ಟಿದ್ದೇವೆ. ಒಮ್ಮೆ ನಾವು ‘ಸಂದೇಶ್ ಟು ಸೋಲ್ಜರ್ಸ್’ ನ ಜೊತೆಗೆ ನಮ್ಮ ಸೈನಿಕರ ಜೊತೆ ಭಾವನಾತ್ಮಕವಾಗಿ ಮತ್ತು ಸಧೃಢವಾಗಿ ಬೆಸೆದುಕೊಳ್ಳುವ ಅಭಿಯಾನವನ್ನು ನಡೆಸಿದೆವು, ‘Khadi for Nation – Khadi for Fashion’ ನ ಜೊತೆಗೆ ಖಾದಿಯ ವ್ಯಾಪಾರವನ್ನು ಹೊಸ ಗುರಿಯತ್ತ ತಲುಪಿಸಿದೆವು, ‘buy local’ ಎನ್ನುವ ಮಂತ್ರವನ್ನು ನಮ್ಮದಾಗಿಸಿಕೊಂಡೆವು, ‘ನಾವು ಸಧೃಢರಾಗಿದ್ದರೆ ಭಾರತ ಸಧೃಢ’ ಎನ್ನುತ್ತಾ ಫಿಟ್ನೆಸ್ನ ವಿಷಯವಾಗಿ ಜಾಗೃತಿಯನ್ನು ಹೆಚ್ಚಿಸಿದೆವು, ‘My Clean India’ ಅಥವಾ ‘Statue Cleaning’ ನ ಪ್ರಯತ್ನದಿಂದ ಸ್ವಚ್ಚತೆಯನ್ನು ಒಂದು mಚಿss movemeಟಿಣ ಮಾಡಿದೆವು, #ಓoಖಿoಆಡಿugs, #NoToDrugs, #BharatKiLakshami, #Self4Society, #StressFreeExams, #SurakshaBandhan, #DigitalEconomy, #RoadSafety,,,,,, ಅಬ್ಬಬ್ಬಾ,,, ಎಣಿಸುವುದಕ್ಕೆ ಆಗುತ್ತಿಲ್ಲ..
ಶೈಲೇಶ್ ಅವರೇ, ನಿಮ್ಮ ಈ ಮನದ ಮಾತಿನ ಚಾರ್ಟರ್ ನೋಡಿ ಈ ಪಟ್ಟಿ ತುಂಬಾ ದೊಡ್ಡದಿದೆ ಎಂದು ನನಗೆ ಅರಿವಾಯಿತು. ಬನ್ನಿ, ಈ ಯಾತ್ರೆಯನ್ನು ಮುಂದುವರೆಸೋಣ. ಮನದ ಮಾತಿನ ಚಾರ್ಟರ್ನಿಂದ ನಿಮ್ಮ ಇಷ್ಟದ ಯಾವುದೇ ರೀತಿಯ ವಿಷಯಗಳಿಗೆ ಕೈಜೋಡಿಸಿ. ಹ್ಯಾಷ್ ಟ್ಯಾಗ್ ಉಪಯೋಗಿಸಿ ಎಲ್ಲರೊಂದಿಗೆ ಹೆಮ್ಮೆಯಿಂದ ನಿಮ್ಮ ಕೊಡುಗೆಯನ್ನು ಹಂಚಿಕೊಳ್ಳಿ. ಸ್ನೇಹಿತರು, ಸಂಬಂಧಿಕರು ಮತ್ತು ಎಲ್ಲರನ್ನೂ ಪ್ರೇರೇಪಿಸಿ. ಪ್ರತಿಯೊಬ್ಬ ಭಾರತೀಯನೂ ಒಂದು ಹೆಜ್ಜೆ ನಡೆದರೆ ನಮ್ಮ ದೇಶವು 130 ಕೋಟಿ ಹೆಜ್ಜೆಗಳಷ್ಟು ಮುನ್ನುಗ್ಗುತ್ತದೆ. ಚರೈವೇತಿ – ಚರೈವೇತಿ – ಚರೈವೇತಿ – ಮುಂದೆ ಸಾಗುತ್ತಿರು – ಸಾಗುತ್ತಿರು – ಮುಂದೆ ಸಾಗುತ್ತಿರು ಎನ್ನುವ ಮಂತ್ರವನ್ನು ಮನಗಂಡು ನಮ್ಮ ಪ್ರಯತ್ನ ಮಾಡುತ್ತಲೇ ಇರೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಮನದ ಮಾತು ಚಾರ್ಟರ್ನ ಬಗ್ಗೆ ಮಾತನಾಡಿದೆವು. ಸ್ವಚ್ಚತೆಯ ನಂತರ ಜನರ ಪಾಲ್ಗೊಳ್ಳುವಿಕೆಯ ಭಾವನೆ ಅಂದರೆ participative spirit ಇಂದು ಮತ್ತೊಂದು ಕ್ಷೇತ್ರದಲ್ಲಿ ಬಹಳ ವೇಗವನ್ನು ಪಡೆದುಕೊಳ್ಳುತ್ತಿದೆ – ಅದು … “ಜಲ ಸಂರಕ್ಷಣೆ”. ನೀರಿನ ಸಂರಕ್ಷಣೆಗಾಗಿ ಬಹಳಷ್ಟು ಹೊಸ ಕಲ್ಪನೆಯ ಪ್ರಯತ್ನಗಳು ದೇಶದ ಮೂಲೆ ಮೂಲೆಯಲ್ಲೂ ವ್ಯಾಪಕವಾಗಿ ನಡೆಯುತ್ತಿವೆ. ಕಳೆದ ಮಾನ್ಸೂನ್ ಸಮಯದಲ್ಲಿ ಪ್ರಾರಂಭವಾದ ಈ ‘ಜಲ-ಶಕ್ತಿ ಅಭಿಯಾನ’, ಜನರ ಪಾಲ್ಗೊಳ್ಳುವಿಕೆಯಿಚಿದ, ಸಫಲತೆಯ ಕಡೆಗೆ ಮುಂದುವರೆಯುತ್ತಿದೆ ಎಂದು ಹೇಳುವುದಕ್ಕೆ ನನಗೆ ಬಹಳ ಸಂತೋಷವಾಗುತ್ತದೆ. ಹೆಚ್ಚಿನ ಸಂಖ್ಯೆಯ ಕೆರೆ -ಕುಂಟೆಗಳ ನಿರ್ಮಾಣವಾಗಿದೆ. ಈ ಅಭಿಯಾನದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರೂ ತಮ್ಮ ಕೊಡುಗೆ ನೀಡಿದ್ದಾರೆ ಎನ್ನುವುದು ಎಲ್ಲಕ್ಕಿಂತ ದೊಡ್ಡ ವಿಷಯ. ಈಗ ರಾಜಾಸ್ಥಾನದ ಝಾಲೋರ್ ಜಿಲ್ಲೆಯನ್ನೇ ನೋಡಿ, ಇಲ್ಲಿಯ ಎರಡು ಐತಿಹಾಸಿಕ ನೀರಿನ ಕೊಳಗಳು, ಕೊಳಚೆ ಮತ್ತು ದುರ್ನಾತ ಬೀರುವ ನೀರಿನ ಆಗರವಾಗಿದ್ದವು. ಆಮೇಲೇನು.. ಭದ್ರಾಯು ಮತ್ತು ಥಾನ್ವಾಲಾ ಪಂಚಾಯ್ತಿಯ ನೂರಾರು ಜನರು ಜಲಶಕ್ತಿ ಅಭಿಯಾನದ ಅಡಿಯಲ್ಲಿ ಇವುಗಳನ್ನು ಪುನರುಜ್ಜೀವನಗೊಳಿಸುವ ಪ್ರತಿಜ್ಞೆ ಮಾಡಿದರು. ಆ ಜನರು ಮಳೆಗಾಲಕ್ಕೆ ಮುಂಚೆಯೇ ಈ ಕೊಳಗಳಲ್ಲಿ ಸೇರಿಕೊಂಡಿದ್ದ ಕೊಳಚೆ ನೀರು, ಕಸ, ಕೆಸರು ಇವನ್ನೆಲ್ಲ ಸ್ವಚ್ಚಗೊಳಿಸುವುದಕ್ಕೆ ಸೇರಿಕೊಂಡರು. ಈ ಅಭಿಯಾನಕ್ಕಾಗಿ ಕೆಲವರು ಶ್ರಮದಾನ ಮಾಡಿದರೆ ಕೆಲವರು ಧನಸಹಾಯ ಮಾಡಿದರು. ಇದರ ಪರಿಣಾಮ . . ಇಂದು ಆ ಕೊಳಗಳು ಅಲ್ಲಿಯ ಜನರ ಜೀವನಾಡಿಯಾಗಿವೆ. ಉತ್ತರ ಪ್ರದೇಶದ ಬಾರಾಬಂಕಿಯ ಕಥೆ ಕೂಡ ಇದೇ ರೀತಿಯದ್ದಾಗಿದೆ. ಇಲ್ಲಿ 43 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಸರಾಹಿ ಸರೋವರ ತನ್ನ ಕೊನೆಯುಸಿರನ್ನು ಎಳೆಯುತ್ತಿತ್ತು. ಆದರೆ ಗ್ರಾಮೀಣ ಜನರು ತಮ್ಮ ಸಂಕಲ್ಪ ಶಕ್ತಿಯಿಂದ ಇದಕ್ಕೆ ಹೊಸ ಜೀವ ತುಂಬಿದರು. ಇಷ್ಟು ದೊಡ್ಡ ಕೆಲಸದ ದಾರಿಯಲ್ಲಿ ಇವರು ಯಾವುದೇ ರೀತಿಯ ಕೊರತೆಯೂ ಬಾರದಂತೆ ನೋಡಿಕೊಂಡರು. ಒಂದರ ಹಿಂದೆ ಒಂದರಂತೆ ಎμÉ್ಟೂೀ ಹಳ್ಳಿಗಳು ಇದರಲ್ಲಿ ಬೆಸೆದುಕೊಂಡವು. ಇವರೆಲ್ಲ ಸರೋವರದ ನಾಲ್ಕೂ ಕಡೆ ಒಂದು ಮೀಟರ್ ಎತ್ತರದ ಕಟ್ಟೆಯನ್ನು ನಿರ್ಮಿಸಿದರು. ಇಂದು ಸರೋವರದಲ್ಲಿ ನೀರು ತುಂಬಿ ಕಂಗೊಳಿಸುತ್ತಿದೆ ಮತ್ತು ಸುತ್ತಮುತ್ತಲ ವಾತಾವರಣದಲ್ಲಿ ಪಕ್ಷಿಗಳ ಕಲರವ ಕೇಳಿಬರುತ್ತಿದೆ.
ಉತ್ತರಾಖಂಡದ ಅಲ್ಮೋರಾ – ಹಲ್ದ್ವಾನಿ ಹೈವೇಗೆ ತಾಕಿಕೊಂಡಿರುವ ಸುನಿಯಾಕೊಟ್ ಹಳ್ಳಿಯಿಂದ ಕೂಡ ಜನರ ಪಾಲ್ಗೊಳ್ಳುವಿಕೆಯ ಇಂತಹದೇ ಒಂದು ಉದಾಹರಣೆ ನಮ್ಮ ಮುಂದಿದೆ. ಜಲಕ್ಷಾಮದಿಂದ ಪಾರಾಗಲು ಹಳ್ಳಿಯ ಜನರು ತಾವೇ ಸ್ವತಃ ಹಳ್ಳಿಯವರೆಗೆ ನೀರನ್ನು ತರುವ ಸಂಕಲ್ಪ ಮಾಡಿದರು. ಆಮೇಲೇನು? ಜನರು ತಮ್ಮಲ್ಲೇ ದುಡ್ಡು ಹೊಂದಿಸಿದರು, ಯೋಜನೆ ತಯಾರಾಯಿತು, ಶ್ರಮದಾನ ನಡೆಯಿತು ಮತ್ತು ಒಂದು ಕಿಲೋಮೀಟರ್ ದೂರದಿಂದ ಹಳ್ಳಿಯವರೆಗೆ ಕೊಳವೆಗಳನ್ನು ಅಳವಡಿಸಲಾಯಿತು, ಪಂಪಿಂಗ್ ಸ್ಟೇಷನ್ ಹಾಕಲಾಯಿತು, ಎರಡು ದಶಕಗಳಿಗೂ ಹೆಚ್ಚಿನ ಕಾಲದ ಸಮಸ್ಯೆ ನೋಡುನೋಡುತ್ತಿದ್ದಂತೆ ನಿವಾರಣೆಯಾಯಿತು.
ಅದೇ ರೀತಿ ತಮಿಳುನಾಡಿನಿಂದ ಬೋರ್ ವೆಲ್ ಗೆ ಮಳೆನೀರು ಸಂಗ್ರಹಿಸಿಕೊಡುವ ಬಹಳ ಒಳ್ಳೆಯ ಬಹಳ ಒಳ್ಳೆಯ ನವೀನ ಮಾದರಿಯ ಉಪಾಯ ತಿಳಿದು ಬಂದಿದೆ. ದೇಶದೆಲ್ಲೆಡೆ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಇಂತಹ ಬಹಳಷ್ಟು ಕಥೆಗಳಿವೆ. ಮತ್ತು ಇವು ನವ ಭಾರತದ ಸಂಕಲ್ಪಕ್ಕೆ ಬಲ ನೀಡುತ್ತಿವೆ. ಇಂದು ನಮ್ಮ ಜಲಶಕ್ತಿ ಚಾಂಪಿಯನ್ಗಳ ಕಥೆಗಳನ್ನು ಕೇಳುವುದಕ್ಕೆ ಇಡೀ ದೇಶ ಉತ್ಸುಕತೆ ತೋರುತ್ತಿದೆ. ನೀರಿನ ಉಳಿತಾಯ ಮತ್ತು ನೀರಿನ ಸಂರಕ್ಷಣೆಗಾಗಿ ಆಗುತ್ತಿರುವ ನಿಮ್ಮ ಅಥವಾ ನಿಮ್ಮ ಸುತ್ತಮುತ್ತಲ ಜನರ ಪ್ರಯತ್ನಗಳ ಕಥೆಗಳನ್ನು, ಭಾವಚಿತ್ರಗಳು ಮತ್ತು ವೀಡಿಯೊಗಳನ್ನು #jalshakti4India ಇದರಲ್ಲಿ ಖಂಡಿತವಾಗಿ ಹಂಚಿಕೊಳ್ಳಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿ.
ನನ್ನ ಪ್ರೀತಿಯ ದೇಶವಾಸಿಗಳೇ ಮತ್ತು ವಿಶೇಷವಾಗಿ ನನ್ನ ಯುವ ಮಿತ್ರರೇ, ಇಂದು ಮನದ ಮಾತಿನ ಮುಖಾಂತರ ನಾನು ಅಸ್ಸಾಂ ಸರ್ಕಾರಕ್ಕೂ ಮತ್ತು ಅಸ್ಸಾಂ ಜನತೆಗೂ ‘ಖೇಲೋ ಇಂಡಿಯಾ’ ದ ಅತ್ಯುತ್ತಮ ಆತಿಥ್ಯಕ್ಕ್ಕೆ ಅನಂತಾನಂತ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಗೆಳೆಯರೇ, ಇದೇ ಜನವರಿ 22 ರಂದು ಗುವಹಾಟಿಯಲ್ಲಿ ಮೂರನೇ ‘ಖೇಲೋ ಇಂಡಿಯಾ ಗೇಮ್ಸ್’ ಇದರ ಮುಕ್ತಾಯ ಸಮಾರಂಭ ಆಗಿದೆ. ಇದರಲ್ಲಿ ವಿಭಿನ್ನ ರಾಜ್ಯಗಳ ಸುಮಾರು 6 ಸಾವಿರ ಆಟಗಾರರು ಭಾಗವಹಿಸಿದ್ದರು. ಆಟಗಳ ಈ ಮಹೋತ್ಸವದಲ್ಲಿ 80 ರೆಕಾರ್ಡ್ಗಳು ಮುರಿಯಲ್ಪಟ್ಟವು ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು ಮತ್ತು ಅವುಗಳಲ್ಲಿ 56 ರೆಕಾರ್ಡ್ಗಳನ್ನು ಮುರಿಯುವ ಕೆಲಸವನ್ನು ನಮ್ಮ ಹೆಣ್ಣುಮಕ್ಕಳು ಮಾಡಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಈ ಸಾಧನೆಯ ಶ್ರೇಯಸ್ಸು ಹೆಣ್ಣುಮಕ್ಕಳಿಗೆ ಸಲ್ಲುತ್ತದೆ. ವಿಜೇತರೂ ಸೇರಿದಂತೆ ಭಾಗವಹಿಸಿದ ಎಲ್ಲಾ ಆಟಗಾರರಿಗೂ ನಾನು ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಜೊತೆಗೆ ಖೇಲೋ ಇಂಡಿಯಾ ಗೇಮ್ಸ್ನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಇದರೊಂದಿಗೆ ಕಾರ್ಯ ನಿರ್ವಹಿಸಿದ ಎಲ್ಲಾ ಜನರಿಗೂ, ತರಬೇತುದಾರರಿಗೂ ಮತ್ತು ತಾಂತ್ರಿಕ ಅಧಿಕಾರಿಗಳಿಗೂ ನನ್ನ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. ಪ್ರತಿ ವರ್ಷವೂ ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಆಟಗಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ ಎನ್ನುವುದು ನಮಗೆಲ್ಲರಿಗೂ ಬಹಳ ಸಂತಸದ ವಿಚಾರ. ಇದು, ಶಾಲಾ ಮಟ್ಟದಲ್ಲಿ ಮಕ್ಕಳಲ್ಲಿ ಆಟಗಳ ಬಗ್ಗೆ ಒಲವು ಎಷ್ಟು ಹೆಚ್ಚಾಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ. 2018 ರಲ್ಲಿ ಖೇಲೋ ಇಂಡಿಯಾ ಗೇಮ್ಸ್ ಪ್ರಾರಂಭವಾದಾಗ ಇದರಲ್ಲಿ 3500 ಆಟಗಾರರು ಭಾಗವಹಿಸಿದ್ದರು. ಆದರೆ ಕಳೆದ ಮೂರು ವರ್ಷಗಳಲ್ಲಿ ಆಟಗಾರರ ಸಂಖ್ಯೆ 6 ಸಾವಿರಕ್ಕೂ ಅಧಿಕವಾಗಿದೆ ಅಂದರೆ ಸುಮಾರು ಎರಡರಷ್ಡಾಗಿದೆ ಎಂದು ನಿಮಗೆ ಹೇಳಲು ಬಯಸುತ್ತೇನೆ. ಇದಿಷ್ಟೆ ಅಲ್ಲ, ಬರೀ ಮೂರು ವರ್ಷಗಳಲ್ಲಿ ಖೇಲೋ ಇಂಡಿಯಾ ಗೇಮ್ಸ್ನ ಮೂಲಕ 3200 ಪ್ರತಿಭಾವಂತ ಮಕ್ಕಳು ಹೊರಹೊಮ್ಮಿದ್ದಾರೆ. ಇವರಲ್ಲಿ ಬಹಳಷ್ಟು ಮಕ್ಕಳು ಅಭಾವ ಮತ್ತು ಬಡತನದ ಮಧ್ಯೆ ಅರಳಿ ದೊಡ್ಡವರಾಗಿದ್ದಾರೆ. ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಅವರ ತಂದೆ ತಾಯಿಯರ ಧೈರ್ಯ ಮತ್ತು ಧೃಢ ಸಂಕಲ್ಪದ ಕಥೆಗಳು ಹೇಗಿವೆ ಎಂದರೆ ಅವು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ನೀಡುತ್ತವೆ. ಗುವಹಾಟಿಯ ಪೂರ್ಣಿಮಾ ಮಂಡಲ್ ಅವರನ್ನೇ ನೋಡಿ, ಅವರು ಗುವಹಾಟಿ ನಗರಸಭೆಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತಾರೆ, ಆದರೆ ಅವರ ಮಗಳು ಮಾಳವಿಕಾ ಅಲ್ಲಿ ಫುಟ್ಬಾಲ್ನಲ್ಲಿ ತನ್ನ ಶಕ್ತಿ ಪ್ರದರ್ಶಿಸಿದಳು, ಅವರ ಒಬ್ಬ ಮಗ ಸುಜಿತ್ ಖೋಖೋನಲ್ಲಿ ಮತ್ತು ಎರಡನೇ ಮಗ ಪ್ರದೀಪ್ ಹಾಕಿಯಲ್ಲಿ ಅಸ್ಸಾಂ ರಾಜ್ಯವನ್ನು ಪ್ರತಿನಿಧಿಸಿದ್ದರು.
ಸ್ವಲ್ಪ ಇದೇ ರೀತಿಯ ಹೆಮ್ಮೆ ನೀಡುವ ಕಥೆ ತಮಿಳುನಾಡಿನ ಯೋಗಾನಾಥನ್ ಅವರದ್ದು. ಅವರು ತಮಿಳುನಾಡಿನಲ್ಲಿ ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಆದರೆ ಇವರ ಮಗಳು ಪೂರ್ಣಶ್ರೀ ವೆಯಿಟ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಪಡೆದುಕೊಂಡು ಪ್ರತಿಯೊಬ್ಬರ ಮನ ಗೆದ್ದಳು. ನಾನು ಡೇವಿಡ್ ಬೆಕ್ಹ್ಯಾಮ್ ಅವರ ಹೆಸರನ್ನು ಹೇಳಿದರೆ ಅವರು ಪ್ರಸಿದ್ಧ ಅಂತರರಾಷ್ಟ್ರೀಯ ಫುಟ್ ಬಾಲ್ ಆಟಗಾರ ಎಂದು ನೀವು ಹೇಳುತ್ತೀರಿ. ಆದರೆ ಈಗ ನಮ್ಮ ಬಳಿಯಲ್ಲಿಯೂ ಒಬ್ಬ ಡೇವಿಡ್ ಬೆಕ್ಹ್ಯಾಮ್ ಇದ್ದಾನೆ. ಅವನು ಗುವಹಾಟಿಯ ಯೂಥ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಅದೂ ಸಹ 200 ಮೀಟರ್ನ ಸೈಕ್ಲಿಂಗ್ ಸ್ಪರ್ಧೆಯ ಸ್ಪ್ರಿಂಟ್ ಇವೆಂಟ್ನಲ್ಲಿ!! ಕಾರ್ ನಿಕೊಬಾರ್ ದ್ವೀಪದಲ್ಲಿ ವಾಸಿಸೋ ಡೇವಿಡ್ಗೆ ತಂದೆ ತಾಯಿಯ ನೆರಳು ಬಾಲ್ಯದಲ್ಲೇ ಅಳಿಸಿಹೋಗಿತ್ತು. ಚಿಕ್ಕಪ್ಪ ಇವನನ್ನು ಫುಟ್ಬಾಲ್ ಆಟಗಾರನನ್ನಾಗಿ ಮಾಡಬೇಕು ಎಂದು ಆಶಿಸಿದ್ದರು ಅದಕ್ಕಾಗಿ ಪ್ರಖ್ಯಾತ ಫುಟ್ಬಾಲ್ ಆಟಗಾರನ ಹೆಸರನ್ನು ಇವನಿಗೆ ಇಟ್ಟಿದ್ದರು. ಆದರೆ ಇವನ ಮನಸ್ಸು ಸೈಕ್ಲಿಂಗ್ನಲ್ಲಿ ನೆಟ್ಟಿತ್ತು. ಖೇಲೋ ಇಂಡಿಯಾ ಸ್ಕೀಮ್ನ ಮುಖಾಂತರ ಇವನ ಆಸೆಯೂ ಪೂರೈಸಿತು ಮತ್ತು ನೋಡಿ, ಇಂದು ಇವನು ಸೈಕ್ಲಿಂಗ್ನಲ್ಲಿ ಒಂದು ಹೊಸ ರೆಕಾರ್ಡ್ ಮಾಡಿದ್ದಾನೆ.
ಭಿವಾನಿಯ ಪ್ರಶಾಂತ್ ಸಿಂಗ್ ಕನ್ಹಯ್ಯ ಪೋಲ್ವಾಲ್ಟ್ನಲ್ಲಿ ತನ್ನದೇ ಆದ ರಾಷ್ಟ್ರಮಟ್ಟದ ರೆಕಾರ್ಡ್ ಮುರಿದ. 19 ವರ್ಷದ ಪ್ರಶಾಂತ್ ಒಬ್ಬ ರೈತ ಕುಟುಂಬದವನು. ಪ್ರಶಾಂತ್ ಮಣ್ಣಿನಲ್ಲಿ ಪೋಲ್ವಾಲ್ಟ್ ಅಭ್ಯಾಸ ಮಾಡುತ್ತಿದ್ದ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದನ್ನು ತಿಳಿದ ಮೇಲೆ ಕ್ರೀಡಾ ಇಲಾಖೆ ಅವನ
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. 2019 ರ ವಿದಾಯದ ಘಳಿಗೆ ಹತ್ತಿರವಾಗುತ್ತಿದೆ. 3 ದಿನಗಳೊಳಗೆ 2019 ವಿದಾಯ ಪಡೆಯಲಿದೆ ಮತ್ತು ನಾವು ಕೇವಲ 2020ರಲ್ಲಿ ಹೊಸ ವರ್ಷಕ್ಕೆ ಮಾತ್ರ ಪ್ರವೇಶಿಸುತ್ತಿಲ್ಲ, 21 ನೇ ಶತಮಾನದ 3 ನೇ ದಶಕಕ್ಕೆ ಕಾಲಿಡುತ್ತಿದ್ದೇವೆ. ನಾನು ದೇಶದ ಸಮಸ್ತ ಜನತೆಗೆ 2020ರ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ. ಈ ದಶಕದ ಬಗ್ಗೆ ಒಂದು ಮಾತಂತೂ ಖಚಿತ. ಇದರಲ್ಲಿ 21 ನೇ ಶತಮಾನದಲ್ಲಿ ಜನ್ಮತಳೆದವರು ದೇಶದ ಪ್ರಗತಿಯ ವೇಗ ವೃದ್ಧಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲಿದ್ದಾರೆ – ಈ ಶತಮಾನದ ಮಹತ್ವಪೂರ್ಣ ಸವಾಲುಗಳನ್ನು ಅರಿತುಕೊಳ್ಳುತ್ತಾ ಬೆಳೆಯುತ್ತಿದ್ದಾರೆ. ಅಂತಹ ಯುವಕರನ್ನು ಇಂದು ಬಹಳಷ್ಟು ಹೆಸರುಗಳಿಂದ ಗುರುತಿಸಲಾಗುತ್ತದೆ. ಅವರನ್ನು ಮಿಲೆನಿಯಲ್ಸ್ ಎಂದು ಕೆಲವರು ಗುರುತಿಸಿದರೆ ಇನ್ನು ಕೆಲವರು ಜನರೇಶನ್ ಜಿ ಅಥವಾ ಜೆನ್ ಜಿ ಎಂದೂ ಕರೆಯುತ್ತಾರೆ. ಇದು ಸಾಮಾಜಿಕ ಜಾಲತಾಣದ ಪೀಳಿಗೆಯಾಗಿದೆ ಎಂಬ ವಿಷಯ ವ್ಯಾಪಕವಾಗಿ ಜನರ ಮನದಲ್ಲಿ ಅಚ್ಚೊತ್ತಿದೆ. ನಮ್ಮ ಇಂದಿನ ಪೀಳಿಗೆ ಬಹಳ ಪ್ರತಿಭಾವಂತ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ. ಹೊಸತೇನಾದರೂ ಮಾಡುವ ವಿಭಿನ್ನವಾದುದನ್ನೇನಾದರೂ ಮಾಡುವುದು ಇವರ ಕನಸು. ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಎಲ್ಲಕ್ಕಿಂತ ಸಂತಸದ ವಿಷಯವೆಂದರೆ ಅದರಲ್ಲೂ ವಿಶೇಷವಾಗಿ ಭಾರತದ ಬಗ್ಗೆ ಹೇಳುವುದಾದರೆ ಇಂದಿನ ಯುವ ಜನತೆ ವ್ಯವಸ್ಥೆಯನ್ನು ಇಷ್ಟಪಡುತ್ತಾರೆ. ಅಲ್ಲದೆ ಅವರು ವ್ಯವಸ್ಥೆಯನ್ನು ಅನುಸರಿಸುವುದನ್ನೂ ಇಷ್ಟಪಡುತ್ತಾರೆ. ಕೆಲವೊಮ್ಮೆ ವ್ಯವಸ್ಥೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಅವರು ದುಗುಡಕ್ಕೊಳಗಾಗುತ್ತಾರೆ. ಅಲ್ಲದೆ ಧೈರ್ಯದಿಂದ ವ್ಯವಸ್ಥೆಗೆ ಸವಾಲೊಡ್ಡುತ್ತಾರೆ. ಇದು ಒಳ್ಳೆಯದೆಂದು ನಾನು ಭಾವಿಸುತ್ತೇನೆ. ಒಂದಂತೂ ನಿಜ, ನಮ್ಮ ದೇಶದ ಯುವಕರು ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ನಾವು ಹೇಳಬಹುದು. ಅವ್ಯವಸ್ಥೆ, ಅಸ್ಥಿರತೆ ಅವರಿಗೆ ಆಗದು. ಪರಿವಾರವಾದ, ಜಾತಿವಾದ, ನಮ್ಮವರು – ಪರಕೀಯರು, ಸ್ತ್ರೀ – ಪುರುಷ ಎಂಬ ಬೇಧ-ಭಾವವನ್ನು ಇಷ್ಟಪಡುವುದಿಲ್ಲ. ಕೆಲವೊಮ್ಮೆ ವಿಮಾನ ನಿಲ್ದಾಣದಲ್ಲಿ ಇಲ್ಲವೆ ಚಿತ್ರಮಂದಿರದಲ್ಲಿ ಸರದಿಯಲ್ಲಿ ನಿಂತಾಗ ಯಾರಾದರೂ ಮಧ್ಯದಲ್ಲಿ ತೂರಿಕೊಂಡರೆ ಎಲ್ಲರಿಗಿಂತ ಮೊದಲು ಧ್ವನಿ ಎತ್ತುವವರು ಕೂಡಾ ಯುವಕರೇ. ಅಲ್ಲದೆ ಇಂಥ ಘಟನೆ ಜರುಗಿದಲ್ಲಿ ಇತರ ಯುವಕರು ಕೂಡಲೇ ತಮ್ಮ ಮೊಬೈಲ್ ಫೋನ್ ನಿಂದ ಅದರ ವಿಡಿಯೋ ಚಿತ್ರಿಕರಿಸಿಬಿಡುತ್ತಾರೆ. ನೋಡ ನೋಡುತ್ತಿದ್ದಂತೆ ಆ ವಿಡಿಯೋ ವೈರಲ್ ಕೂಡಾ ಆಗಿಬಿಡುತ್ತದೆ ಎಂಬುದನ್ನು ನಾವು ಕಂಡಿದ್ದೇವೆ. ತಪ್ಪು ಮಾಡಿದವರಿಗೆ ಏನು ನಡೆದಿದೆ ಎಂಬುದು ಅರಿವಿಗೆ ಬರುತ್ತದೆ. ಹಾಗಾಗಿ ಒಂದು ಹೊಸ ಬಗೆಯ ವ್ಯವಸ್ಥೆ, ಹೊಸ ಯುಗ ಮತ್ತು ಹೊಸ ಬಗೆಯ ಆಲೋಚನೆಗಳನ್ನು ನಮ್ಮ ಯುವ ಪೀಳಿಗೆ ಮೈಗೂಡಿಸಿಕೊಂಡಿದೆ. ಇಂದು ಈ ಯುವ ಪೀಳಿಗೆ ಮೇಲೆ ಭಾರತಕ್ಕೆ ಬಹಳಷ್ಟು ನಿರೀಕ್ಷೆ ಇದೆ. ಇದೇ ಯುವ ಜನತೆ ದೇಶವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ. “My Faith is in the Younger Generation, the Modern Generation, out of them, will come my workers” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಯುವ ಪೀಳಿಗೆ ಮೇಲೆ, ಈ ಆಧುನಿಕ ಪೀಳಿಗೆ ಮೇಲೆ ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದರು. ಈ ಪೀಳಿಗೆಯಿಂದಲೇ ನನ್ನ ಕಾರ್ಯಕರ್ತರು ಹೊರ ಹೊಮ್ಮಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಯುವಕರ ಬಗ್ಗೆ ಮಾತನಾಡುತ್ತಾ “ಯೌವನದ ಬೆಲೆ ಕಟ್ಟಲಾಗದು ಮತ್ತು ಅದರ ವರ್ಣನೆಯನ್ನೂ ಮಾಡಲಾಗದು” ಎಂದು ಹೇಳಿದ್ದರು. ಇದು ಜೀವನದ ಅತ್ಯಂತ ಮೌಲ್ಯಯುತ ಕಾಲಘಟ್ಟವಾಗಿದೆ. ನಿಮ್ಮ ಭವಿಷ್ಯ ಮತ್ತು ನಿಮ್ಮ ಜೀವನ ನಿಮ್ಮ ಯೌವ್ವನವನ್ನು ಹೇಗೆ ಬಳಸಿಕೊಳ್ಳುವಿರಿ ಎಂಬುದರ ಮೇಲೆ ಆಧರಿಸಿದೆ. ವಿವೇಕಾನಂದರ ಪ್ರಕಾರ ಯಾರು ಶಕ್ತಿ ಮತ್ತು ಚೈತನ್ಯವುಳ್ಳವನೋ ಮತ್ತು ಯಾರು ಬದಲಾವಣೆ ತರುವ ಶಕ್ತಿ ಹೊಂದಿರುತ್ತಾನೋ ಅವನೇ ಯುವಕ, ಭಾರತದಲ್ಲಿ ಈ ದಶಕ ಕೇವಲ ಯುವಜನತೆಯ ವಿಕಾಸದ್ದಾಗಿರದೇ ಯುವಕರ ಸಾಮಥ್ರ್ಯದಿಂದ ದೇಶದ ವಿಕಾಸವನ್ನು ಸಾಬೀತುಪಡಿಸುವಂತಹ ದಶಕವೂ ಆಗಿರುತ್ತದೆ. ಭಾರತದ ಆಧುನೀಕರಣದಲ್ಲಿ ಈ ಪೀಳಿಗೆಯವರ ಪಾತ್ರ ಬಹಳ ಮಹತ್ವವಾದದ್ದು ಎಂಬ ನಂಬಿಕೆ ನನಗಿದೆ. ಮುಂಬರುವ ಜನವರಿ 12 ರಂದು ವಿವೇಕಾನಂದ ಜಯಂತಿಯಂದು ದೇಶ ಯುವದಿನಾಚರಣೆ ಆಚರಿಸುತ್ತಿರುವಾಗ ಪ್ರತಿಯೊಬ್ಬ ಯುವಕ ಈ ದಶಕದಲ್ಲಿ ತಮ್ಮ ಕೊಡುಗೆ ಏನು ಎಂಬ ಬಗ್ಗೆಯೂ ಆಲೋಚಿಸಿ ಮತ್ತು ಈ ದಶಕದಲ್ಲಿ ಪೂರ್ಣಗೊಳಿಸುವ ಸಂಕಲ್ಪವನ್ನೂ ಕೈಗೊಳ್ಳಬೇಕು.
ನನ್ನ ಪ್ರಿಯ ದೇಶಬಾಂಧವರೆ, ಕನ್ಯಾಕುಮಾರಿಯಲ್ಲಿರುವ ಶಿಲೆಯ ಮೇಲೆ ಸ್ವಾಮಿ ವಿವೇಕಾನಂದರು ಧ್ಯಾನದ ಪರಾಕಾಷ್ಟೆ ತಲುಪಿದ್ದರು ಎಂಬುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿದೆ. ಅಲ್ಲಿ ನಿರ್ಮಿಸಲಾದ ವಿವೇಕಾನಂದ ರಾಕ್ ಮೆಮೊರಿಯಲ್ ಗೆ 50 ವರ್ಷ ಪೂರ್ಣಗೊಳ್ಳಲಿವೆ. ಕಳೆದ 5 ದಶಕಗಳಿಂದ ಈ ಸ್ಥಳ ಭಾರತದ ಗೌರವವೆನಿಸಿದೆ. ಕನ್ಯಾಕುಮಾರಿ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಒಂದು ಆಕರ್ಷಣೆಯ ಕೇಂದ್ರವಾಗಿದೆ. ರಾಷ್ಟ್ರ್ರಭಕ್ತಿಯಿಂದ ತುಂಬಿದ ಆಧ್ಯಾತ್ಮಿಕ ಚೇತನವನ್ನು ಅನುಭವಿಸಬಯಸುವ ಪ್ರತಿಯೊಬ್ಬರಿಗೂ ಇದೊಂದು ತೀರ್ಥ ಕ್ಷೇತ್ರವೆನಿಸಿದೆ. ಶೃದ್ಧೆಯ ಕೇಂದ್ರವಾಗಿದೆ. ಸ್ವಾಮೀಜಿಯವರ ಸ್ಮಾರಕ ಎಲ್ಲ ಪಂಥದ, ಎಲ್ಲ ವಯೋಮಾನದ, ಎಲ್ಲ ವರ್ಗದ ಜನರಲ್ಲಿ ರಾಷ್ಟ್ರ ಭಕ್ತಿಯ ಪ್ರೇರಣೆ ಮೂಡಿಸುತ್ತದೆ. ದರಿದ್ರ ನಾರಾಯಣ ಸೇವೆ ಎಂಬ ಮಂತ್ರದೊಂದಿಗೆ ಜೀವನದ ಮಾರ್ಗವನ್ನು ತೋರಿದೆ. ಅಲ್ಲಿ ಯಾರೇ ಹೋಗಲಿ ಅವರಲ್ಲಿ ಶಕ್ತಿಯ ಸಂಚಾರವಾಗುವುದು. ಸಕಾರಾತ್ಮಕತೆಯ ಭಾವ ಮೂಡವುದು, ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಛಲ ಮೂಡುವುದು – ಇದು ಸಹಜವೇ. ನಮ್ಮ ಆದರಣೀಯ ರಾಷ್ಟ್ರಪತಿಗಳು ಕೂಡಾ ಕೆಲ ದಿನಗಳ ಹಿಂದೆ ಈ 50 ವರ್ಷದ ಸ್ಮಾರಕ Rock Memorial ನೋಡಿ ಬಂದಿದ್ದಾರೆ. ಅಲ್ಲದೆ ಗುಜರಾತ್ನ ರನ್ ಆಫ್ ಕಛ್ನಲ್ಲಿ ನಡೆಯುವ ಉತ್ತಮ ರಣೋತ್ಸವದ ಉದ್ಘಾಟನೆಗೆ ನಮ್ಮ ಉಪ ರಾಷ್ಟ್ರಪತಿಗಳು ಹೋಗಿದ್ದರು ಎಂಬುದು ಸಂತಸದ ಸಂಗತಿ. ನಮ್ಮ ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳು ಕೂಡಾ ಇಂಥ ಮಹತ್ವಪೂರ್ಣ tourist destination ಗಳಿಗೆ ಭೇಟಿ ನೀಡುತ್ತಿದ್ದಾರೆ. ದೇಶದ ಜನತೆಗೆ ಖಂಡಿತ ಇದರಿಂದ ಪ್ರೇರಣೆ ಲಭಿಸುತ್ತಿದೆ. – ನೀವೂ ಖಂಡಿತಾ ಹೋಗಿ.
ನನ್ನ ಪ್ರಿಯ ದೇಶವಾಸಿಗಳೇ, ನಾವು ಬೇರೆ ಬೇರೆ ಕಾಲೇಜುಗಳಲ್ಲಿ ವಿಶ್ವ ವಿದ್ಯಾಲಯಗಳಲ್ಲಿ, ಶಾಲೆಗಳಲ್ಲಿ ಓದುತ್ತೇವೆ. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ/ alumni meet ಒಂದು ಆಹ್ಲಾದಕರ ಅನುಭವವಾಗಿರುತ್ತದೆ ಮತ್ತು ಹಳೆಯ ವಿದ್ಯಾರ್ಥಿಗಳ ಪುನರ್ಮಿಲನದಲ್ಲಿ ಎಲ್ಲ ಯುವಜನತೆ ಹಳೆಯ ನೆನಪುಗಳಲ್ಲಿ ತೇಲಿಹೋಗುತ್ತಾರೆ. 10, 20, 30 ವರ್ಷ ಹಿಂದಕ್ಕೆ ಹೊರಟುಹೋಗುತ್ತಾರೆ. ಕೆಲವೊಮ್ಮೆ ಇಂಥ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಗಳು ವಿಶೇಷ ಆಕರ್ಷಣೆಯ ಮೂಲಗಳಾಗುತ್ತವೆ. ಅದರತ್ತ ಗಮನಹರಿಯುತ್ತದೆ. ದೇಶದ ಗಮನವೂ ಅದರತ್ತ ಹರಿಯುವುದು ಅವಶ್ಯಕ. ಹಳೆಯ ಸ್ನೇಹಿತರನ್ನು ಭೇಟಿ ಆಗುವ, ನೆನಪುಗಳನ್ನು ಮೆಲುಕು ಹಾಕುವ, alumni meet ವಿಭಿನ್ನ ಆನಂದ ನೀಡುತ್ತದೆ. ಇದರ ಜೊತೆಗೆ shared purpose ಇದ್ದರೆ ಸಂಕಲ್ಪವೂ ಇದ್ದರೆ, ಭಾವನಾತ್ಮಕ ಕೊಂಡಿ ಬೆಸೆದುಕೊಂಡರೆ ಅದರಲ್ಲಿ ಅದೆಷ್ಟೋ ಹೊಸ ನಾವೀನ್ಯತೆಯ ರಂಗು ಹೊರಹೊಮ್ಮುತ್ತದೆ. ಹಳೆಯ ವಿದ್ಯಾರ್ಥಿ ಸಮೂಹಗಳು ತಮ್ಮ ಶಾಲೆಗೆ ಏನಾದರೂ ಕೊಡುಗೆ ನೀಡುವುದನ್ನು ನೀವು ನೋಡಿರಬಹುದು. ಒಬ್ಬರು computerization ವ್ಯವಸ್ಥೆ ಮಾಡುತ್ತಾರೆ. ಇನ್ನಾರೋ ಉತ್ತಮ ಗ್ರಂಥಾಲಯ ನಿರ್ಮಿಸುತ್ತಾರೆ. ಇನ್ನು ಕೆಲವರು ಶುದ್ಧ ನೀರಿನ ವ್ಯವಸ್ಥೆ ಮಾಡಿದರೆ ಮತ್ತಾರೋ ಹೊಸ ಕೊಠಡಿಗಳನ್ನು ನಿರ್ಮಿಸುತ್ತಾರೆ. ಕೆಲವರು ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಮುಂದಾಗುತ್ತಾರೆ. ಒಂದಲ್ಲಾ ಒಂದು ಕೊಡುಗೆ ನೀಡುತ್ತಾರೆ. ತಮ್ಮ ಜೀವನ ರೂಪಿಸಿದಂತಹ ಶಾಲೆಗೆ ಏನನ್ನಾದರೂ ಹಿಂದಿರುಗಿಸುವುದು ಅವರಿಗೆ ಆನಂದವನ್ನು ನೀಡುತ್ತದೆ. ಇಂಥ ಭಾವನೆ ಎಲ್ಲರ ಮನದಲ್ಲಿ ಇರುತ್ತದೆ ಮತ್ತು ಇರಲೂ ಬೇಕು ಮತ್ತು ಜನರು ಇದಕ್ಕಾಗಿ ಮುಂದೆಯೂ ಬರುತ್ತಾರೆ. ಆದರೆ ನಾನಿಂದು ಒಂದು ವಿಶೇಷ ಸಮಾರಂಭದ ಕುರಿತು ನಿಮಗೆ ಹೇಳಬಯಸುತ್ತೇನೆ. ಕೆಲ ದಿನಗಳ ಹಿಂದೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಭೈರವಗಂಜ್ ಹೆಲ್ತ್ ಸೆಂಟರ್ ಕಥೆಯನ್ನು ನಾನು ಮಾಧ್ಯಮದಲ್ಲಿ ಕೇಳಿದಾಗ ನನಗೆ ಬಹಳ ಆನಂದವಾಯಿತು. ನನಗೆ ಎಷ್ಟು ಆನಂದವಾಯಿತೆಂದರೆ ನಿಮ್ಮೊಂದಿಗೆ ಅದರ ಪ್ರಸ್ತಾಪ ಮಾಡದೇ ಇರಲಾಗಲಿಲ್ಲ. ಈ ಭೈರವಗಂಜ್ ಹೆಲ್ತ್ ಸೆಂಟರ್ ನಲ್ಲಿ ಉಚಿತ ಆರೊಗ್ಯ ತಪಾಸಣೆ ಮಾಡಿಸಿಕೊಳ್ಳಲು ಸುತ್ತಮುತ್ತಲ ಸಾವಿರಾರು ಜನರು ಬಂದು ಸೇರಿದರು. ಈ ಮಾತು ಕೇಳಿ ನಿಮಗೆ ಆಶ್ಚರ್ಯವೆನ್ನಿಸಲಿಕ್ಕಿಲ್ಲ. ಇದರಲ್ಲೇನು ಹೊಸತಿದೆ? ಜನರು ಬಂದಿರಬಹುದು ಎನ್ನಿಸಬಹುದು. ಅದು ಹಾಗಲ್ಲ. ಇಲ್ಲಿ ಬಹಳಷ್ಟು ಹೊಸತನವಿತ್ತು. ಇದು ಸರ್ಕಾರಿ ಕಾರ್ಯಕ್ರಮವಾಗಿರಲಿಲ್ಲ. ಸರ್ಕಾರದ ಉಪಕ್ರಮವೂ ಅಲ್ಲ. ಅಲ್ಲಿಯ K. R. High School ನ ಹಳೆಯ ವಿದ್ಯಾರ್ಥಿಗಳ alumni meet ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮವಾಗಿತ್ತು. ಇದಕ್ಕೆ ‘ಸಂಕಲ್ಪ 95’ ಎಂದು ಹೆಸರಿಡಲಾಗಿತ್ತು. ‘ಸಂಕಲ್ಪ 95’ ಎಂದರೆ ಈ ಶಾಲೆಯ 1995 ರ ಬ್ಯಾಚ್ ವಿದ್ಯಾರ್ಥಿಗಳ ಸಂಕಲ್ಪ ಎಂದು. ಈ ಬ್ಯಾಚ್ ನ ವಿದ್ಯಾರ್ಥಿಗಳು alumni meet ಆಯೋಜಿಸಿದರು ಮತ್ತು ಏನಾದರೂ ವಿಶೇಷವಾಗಿ ಮಾಡಲು ಆಲೋಚಿಸಿದರು. ಇದರಲ್ಲಿ ಹಳೆಯ ವಿದ್ಯಾರ್ಥಿಗಳು ಸಮಾಜಕ್ಕಾಗಿ ಏನನ್ನಾದರೂ ಒಳಿತನ್ನು ಮಾಡಲು ನಿರ್ಧರಿಸಿ ಸಾರ್ವಜನಿಕ ಆರೋಗ್ಯ ಜಾಗೃತಿಯ ಜವಾಬ್ದಾರಿಯನ್ನು ಹೊತ್ತುಕೊಂಡರು. ‘ಸಂಕಲ್ಪ 95’ ನ ಈ ಉಪಕ್ರಮದೊಂದಿಗೆ ಬೆತಿಯಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇನ್ನೂ ಹಲವಾರು ಆಸ್ಪತ್ರೆಗಳು ಕೈಜೋಡಿಸಿದವು. ತದನಂತರ ಜನರ ಆರೋಗ್ಯದ ಕುರಿತು ಒಂದು ಆಂದೋಲನವೇ ಆರಂಭವಾಯಿತು. ಶುಲ್ಕರಹಿತ ಪರೀಕ್ಷೆ, ಉಚಿತ ಔಷಧಿ ವಿತರಣೆ, ಜಾಗೃತಿ ಮೂಡಿಸಿದ ‘ಸಂಕಲ್ಪ 95’ ಒಂದು ನಿದರ್ಶನದಂತೆ ಹೊರ ಹೊಮ್ಮಿತು. ದೇಶದ ಪ್ರತಿಯೊಬ್ಬ ನಾಗರಿಕ ಒಂದು ಹೆಜ್ಜೆ ಮುಂದಿಟ್ಟರೆ ಈ ದೇಶ 130 ಕೋಟಿ ಹೆಜ್ಜೆ ಮುಂದೆ ಸಾಗುತ್ತದೆ ಎಂದು ನಾವು ಆಗಾಗ ಹೇಳುತ್ತಿರುತ್ತೇವೆ. ಇಂಥ ವಿಷಯಗಳು ಸಮಾಜದಲ್ಲಿ ಪ್ರತ್ಯಕ್ಷವಾಗಿ ನೋಡಲು ಸಿಕ್ಕಾಗ ಕೆಲವರಿಗೆ ಆನಂದವಾಗುತ್ತದೆ ಮತ್ತು ಜೀವನದಲ್ಲಿ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಲಭಿಸುತ್ತದೆ. ಒಂದೆಡೆ ಹಳೆಯ ವಿದ್ಯಾರ್ಥಿಗಳ ಸಮೂಹ ಸ್ವಾಸ್ಥ್ಯ ಸೇವೆಯ ಸಂಕಲ್ಪ ಕೈಗೆತ್ತಿಕೊಂಡಿರೋ ಬಿಹಾರದ ಬೆತಿಯಾ ಆದರೆ, ಅದೇ ರೀತಿ ಉತ್ತರ ಪ್ರದೇಶದ ಫೂಲ್ಪುರದ ಕೆಲ ಮಹಿಳೆಯರು ತಮ್ಮ ಜೀವನೋಪಾಯದಿಂದ ಸಂಪೂರ್ಣ ಪ್ರದೇಶಕ್ಕೆ ಪ್ರೇರಣೆ ನೀಡಿದ್ದಾರೆ. ಒಗ್ಗಟ್ಟಿನಿಂದ ಯಾವುದೇ ಸಂಕಲ್ಪಗೈದಲ್ಲಿ ಪರಿಸ್ಥಿತಿಗಳು ಬದಲಾಗುವುದನ್ನು ಯಾರೂ ತಡೆಗಟ್ಟಲಾರರು ಎಂಬುದನ್ನು ಈ ಮಹಿಳೆಯರು ಸಾಬೀತುಪಡಿಸಿದ್ದಾರೆ. ಕೆಲ ಸಮಯದವರೆಗೆ ಫೂಲ್ಪುರದ ಈ ಮಹಿಳೆಯರು ಆರ್ಥಿಕ ಮುಗ್ಗಟ್ಟು ಮತ್ತು ಬಡತನದಿಂದ ಬಳಲುತ್ತಿದ್ದರು. ಆದರೆ ಇವರಲ್ಲಿ ತಮ್ಮ ಕುಟುಂಬ ಮತ್ತು ಸಮಾಜಕ್ಕಾಗಿ ಏನನ್ನಾದರೂ ಮಾಡಲೇಬೇಕೆಂಬ ಛಲವಿತ್ತು. ಈ ಮಹಿಳೆಯರು ಕಾದಿಪುರದ ಸ್ವಯಂ ಸಹಾಯ ಗುಂಪು Women Self Help Group ನೊಂದಿಗೆ ಸೇರಿ ಪಾದರಕ್ಷೆಗಳನ್ನು ತಯಾರಿಸುವ ಕೌಶಲ್ಯ ಕಲಿತರು, ಇದರಿಂದ ಅವರು ತಮ್ಮ ಕಾಲಿಗೆ ನೆಟ್ಟ ಅಸಹಾಯಕತೆಯ ಮುಳ್ಳನ್ನು ಮಾತ್ರ ತೆಗೆದುಹಾಕಲಿಲ್ಲ ಜೊತೆಗೆ ಸ್ವಾವಲಂಬಿಯಾಗಿ ಕುಟುಂಬಕ್ಕೂ ಆಸರೆಯಾದರು. ಗ್ರಾಮೀಣ ಆಜೀವಿಕಾ ಮಿಶನ್ ಸಹಾಯದೊಂದಿಗೆ ಈಗ ಇಲ್ಲಿ ಪಾದರಕ್ಷೆಗಳನ್ನು ತಯಾರಿಸುವ ಘಟಕ ಸ್ಥಾಪನೆಗೊಂಡಿದೆ. ಇಲ್ಲಿ ಆಧುನಿಕ ಯಂತ್ರಗಳಿಂದ ಪಾದರಕ್ಷೆಗಳನ್ನು ತಯಾರಿಸಲಾಗುತ್ತಿದೆ. ನಾನು ವಿಶೇಷವಾಗಿ ಸ್ಥಳೀಯ ಪೋಲಿಸ್ ಮತ್ತು ಅವರ ಕುಟುಂಬಗಳಿಗೂ ಅಭಿನಂದಿಸುತ್ತೇನೆ. ಅವರು ತಮಗಾಗಿ ಮತ್ತು ಕುಟುಂಬದವರಿಗೆ ಈ ಮಹಿಳೆಯರಿಂದ ಪಾದರಕ್ಷೆಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿದ್ದಾರೆ. ಇಂದು ಈ ಮಹಿಳೆಯರ ಸಂಕಲ್ಪದಿಂದ ಅವರ ಕುಟುಂಬದ ಆರ್ಥಿಕತೆ ಬಲಗೊಂಡಿದೆ ಅಲ್ಲದೆ ಜೀವನಮಟ್ಟವೂ ಸುಧಾರಿಸಿದೆ. ಫೂಲ್ಪುರದ ಪೋಲಿಸರ ಜೀವನದ ಅಥವಾ ಅವರ ಕುಟುಂಬದವರ ಮಾತುಗಳನ್ನು ಕೇಳಿದಾಗ ನಾನು ಆಗಸ್ಟ್ 15 ರಂದು ಕೆಂಪುಕೋಟೆಯಿಂದ ಮಾತನಾಡಿದಾಗ ಒಂದು ವಿಷಯ ಪ್ರಸ್ತಾಪಿಸಿದ್ದೆ, ನಾವೆಲ್ಲರೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಬೇಕೆಂದು ಹೇಳಿದ್ದು ನಿಮಗೆ ನೆನಪಿರಬಹುದು. ಸ್ಥಳೀಯ ಉತ್ಪನ್ನಗಳ ಖರೀದಿಗೆ ಪ್ರೋತ್ಸಾಹ ನೀಡಬಹುದೆ? ನಿಮ್ಮ ಖರೀದಿಯಲ್ಲಿ ಅವುಗಳಿಗೆ ಆದ್ಯತೆ ನೀಡಬಹುದೇ? ಸ್ಥಳೀಯ ಉತ್ಪನ್ನಗಳನ್ನು ನಮ್ಮ ಪ್ರತಿಷ್ಠೆ ಮತ್ತು ಗೌರವದೊಂದಿಗೆ ಬೆಸೆಯಬಹುದೇ? ನಾವು ಈ ಭಾವನೆಯೊಂದಿಗೆ ನಮ್ಮ ದೇಶಬಾಂಧವರ ಸಮೃದ್ಧಿಗೆ ಮಾಧ್ಯವಾಗಬಹುದೇ? ಎಂದು ಈ ದಿನ ಮತ್ತೊಮ್ಮೆ ನಾನು ಆಗ್ರಹಿಸುತ್ತೇನೆ. ಸ್ನೇಹಿತರೇ, ಮಹಾತ್ಮಾ ಗಾಂಧಿಯವರು ಸ್ವದೇಶಿ ಭಾವನೆಯನ್ನು ಕಡುಬಡವನ ಜೀವನದಲ್ಲೂ ಸಮೃದ್ಧಿ ತರುವಂತಹ ಹಾಗೂ ಲಕ್ಷಾಂತರ ಜನರ ಜೀವನ ಬೆಳಗಿಸುವ ಆಶಾದೀಪದ ರೂಪದಲ್ಲಿ ಕಂಡಿದ್ದರು. 100 ವರ್ಷಗಳ ಹಿಂದೆ ಗಾಂಧೀಜಿಯವರು ಒಂದು ದೊಡ್ಡ ಜನಾಂದೋಲನ ಆರಂಭಿಸಿದ್ದರು. ಭಾರತೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸುವುದು ಇದರ ಒಂದು ಗುರಿಯಾಗಿತ್ತು. ಸ್ವಾವಲಂಬಿಯಾಗುವ ಈ ಮಾರ್ಗವನ್ನು ಗಾಂಧೀಜಿ ತೋರಿದ್ದರು. 2022 ರಲ್ಲಿ ನಾವು ಸ್ವಾತಂತ್ರ್ಯದ 75 ವರ್ಷ ಪೂರೈಸುತ್ತಿದ್ದೇವೆ. ಯಾವ ಸ್ವತಂತ್ರ ಭಾರತದಲ್ಲಿ ನಾವು ಉಸಿರಾಡುತ್ತಿದ್ದೆವೋ ಆ ಭಾರತವನ್ನು ಸ್ವತಂತ್ರೊಳಿಸಲು ಲಕ್ಷಾಂತರ ಭಾರತ ಮಾತೆಯ ಪುತ್ರರು, ಹೆಣ್ಣು ಮಕ್ಕಳು ಯಾತನೆ ಅನುಭವಿಸಿದ್ದಾರೆ ಮತ್ತು ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಲಕ್ಷಾಂತರ ಜನರ ತ್ಯಾಗ, ತಪಸ್ಸು ಮತ್ತು ಬಲಿದಾನದಿಂದ ಸ್ವತಂತ್ರ ಲಭಿಸಿತು, ಅದರ ಸಂಪೂರ್ಣ ಆನಂದವನ್ನು ನಾವು ಅನುಭವಿಸುತ್ತಿದ್ದೇವೆಯೋ, ಸ್ವತಂತ್ರ ಜೀವನ ನಡೆಸುತ್ತಿದ್ದೇವೆಯೋ ಆ ದೇಶಕ್ಕಾಗಿ ಪ್ರಾಣ ತೆತ್ತ, ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ಹೆಸರಾಂತ ಅಥವಾ ಅನಾಮಿಕ ಅಸಂಖ್ಯಾತ ಜನರಿದ್ದಾರೆ. ಅವರಲ್ಲಿ ಕೆಲವರ ಹೆಸರುಗಳನ್ನು ಮಾತ್ರ ನಾವು ಅರಿತಿರಬಹುದು. ಆದರೆ ತಮ್ಮ ಸ್ವತಂತ್ರ ಭಾರತದ ಕನಸಿಗಾಗಿ, ಸಮೃದ್ಧ, ಸುಖಮಯ, ಸಂಪದ್ಭರಿತ, ಸ್ವತಂತ್ರ ಭಾರತಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ.
ನನ್ನ ಪ್ರಿಯ ದೇಶಬಾಂಧವರೆ, ನಾವು 2022 ಕ್ಕೆ ಸ್ವಾತಂತ್ಯಕ್ಕೆ 75ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಕನಿಷ್ಠ 2-3 ವರ್ಷಗಳಾದರೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಸಂಕಲ್ಪ ಮಾಡಬಹುದೇ? ಭಾರತದಲ್ಲಿ ನಿರ್ಮಾಣವಾದ, ನಮ್ಮ ದೇಶಬಾಂಧವರಿಂದ ತಯಾರಿಸಲ್ಪಟ್ಟ, ನಮ್ಮ ದೇಶಬಾಂಧವರ ಬೆವರಿನ ಕಂಪು ತುಂಬಿದ ವಸ್ತುಗಳನ್ನು ಖರೀದಿಸಲು ಮುಂದಾಗಬಹುದೇ? ಸುದೀರ್ಘಾವಧಿವರೆಗೆ ಖರೀದಿಸಿ ಎನ್ನುವುದಿಲ್ಲ. ಕೇವಲ 2022 ರವರೆಗೆ, ಸ್ವತಂತ್ರದ 75 ವರ್ಷ ಪೂರ್ಣಗೊಳ್ಳುವವರೆಗೆ ಮಾತ್ರ. ಇದು ಸರ್ಕಾರಿ ಕೆಲಸವಾಗಕೂಡದು. ಎಲ್ಲೆಡೆ ಯುವಪೀಳಿಗೆ ಮುಂದೆ ಬರಬೇಕು. ಸಣ್ಣ ಪುಟ್ಟ ಸಂಸ್ಥೆಗಳನ್ನು ಕಟ್ಟಿ. ಜನರನ್ನು ಪ್ರೇರೆಪಿಸಿ, ತಿಳಿ ಹೇಳಿ ಮತ್ತು ಬನ್ನಿ ನಾವು ಸ್ಥಳೀಯ ವಸ್ತುಗಳನ್ನು ಖರೀದಿಸೋಣ, ಅವುಗಳಿಗೆ ಶಕ್ತಿ ತುಂಬೋಣ, ಯಾವ ವಸ್ತುಗಳಲ್ಲಿ ದೇಶಬಾಂಧವರ ಬೆವರಿನ ಕಂಪಿದೆಯೋ ಆ ಉತ್ಪನ್ನಗಳನ್ನು ಖರೀದಿಸುವುದು ನನ್ನ ಸ್ವತಂತ್ರ ಭಾರತದ ಮಧುರ ಘಳಿಗೆಯಾಗಲಿ ಎಂದು ನಿಶ್ಚಯಿಸಲಿ ಹಾಗೂ ಈ ಕನಸುಗಳನ್ನು ಹೊತ್ತು ಮುನ್ನಡೆಯಲಿ.
ನನ್ನ ಪ್ರಿಯ ದೇಶವಾಸಿಗಳೇ, ದೇಶದ ನಾಗರಿಕರು, ಆತ್ಮ ವಿಶ್ವಾಸದಿಂದ ಮತ್ತು ಗೌರವದಿಂದ ಜೀವನ ಸಾಗಿಸಲಿ ಎಂಬುದು ನಮ್ಮೆಲ್ಲರಿಗೂ ಮಹತ್ವಪೂರ್ಣವಾಗಿದೆ. ನನ್ನ ಗಮನವನ್ನು ಸೆಳೆದಂತಹ ಒಂದು ಉಪಕ್ರಮದ ಕುರಿತು ನಾನು ಚರ್ಚಿಸಲು ಇಷ್ಟಪಡುತ್ತೇನೆ ಅದೇ, ಜಮ್ಮು-ಕಾಶ್ಮೀರ ಮತ್ತು ಲದಾಖ್ನ ‘ಹಿಮಾಯತ್’ ಕಾರ್ಯಕ್ರ್ರಮ. ‘ಹಿಮಾಯತ್’ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಿದ್ದಾಗಿದೆ. ಇದರಲ್ಲಿ 15 ವರ್ಷದ ಬಾಲಕರಿಂದ 35 ವರ್ಷದ ಯುವಜನರೆಲ್ಲರೂ ಭಾಗವಹಿಸಬಹುದು. ಯಾವುದೋ ಕಾರಣಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲಾಗದೇ ಮಧ್ಯದಲ್ಲೇ ಶಾಲೆ ಅಥವಾ ಕಾಲೇಜಿನ ವ್ಯಾಸಂಗವನ್ನು ಸ್ಥಗಿತಗೊಳಿಸಿದವರಿಗಾಗಿ ಇದನ್ನು ರೂಪಿಸಲಾಗಿದೆ.
ನನ್ನ ಪ್ರಿಯ ದೇಶಬಂಧವರೆ, ಈ ‘ಹಿಮಾಯತ್’ ಕಾರ್ಯಕ್ರಮದಲ್ಲಿ ಕಳೆದ 2 ವರ್ಷಗಳಲ್ಲಿ 18 ಸಾವಿರ ಯುವಜನತೆ, 77 ಬೇರೆ ಬೇರೆ ಉದ್ಯಮಗಳಲ್ಲಿ ತರಬೇತಿ ಪಡೆದಿದ್ದಾರೆ. ಇವರಲ್ಲಿ ಸುಮಾರು 5 ಸಾವಿರ ಜನರು ಒಂದಲ್ಲಾ ಒಂದೆಡೆ ಉದ್ಯೋಗಕ್ಕೆ ಸೇರಿದ್ದಾರೆ ಮತ್ತು ಬಹುತೇಕರು ಸ್ವಉದ್ಯೋಗದೆಡೆಗೆ ಮುನ್ನಡೆಯುತ್ತಿದ್ದಾರೆ. ಹಿಮಾಯತ್ ಕಾರ್ಯಕ್ರಮದಿಂದ ತಮ್ಮ ಜೀವನವನ್ನು ಬದಲಿಸಿಕೊಂಡ ಇಂಥ ಜನರ ಕಥಾನಕಗಳು ನಿಜಕ್ಕೂ ಹೃದಯಸ್ಪರ್ಶಿಯಾಗಿವೆ.
ಪರ್ವೀನ್ ಫಾತಿಮಾ ತಮಿಳುನಾಡಿನ ತಿರುಪ್ಪುರ್ ನ ಒಂದು ಗಾರ್ಮೆಂಟ್ ಘಟಕದಲ್ಲಿ ಬಡ್ತಿ ಪಡೆದು ಸೂಪರ್ವೈಸರ್ ಕಮ್ ಕೊಆರ್ಡಿನೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವರ್ಷದ ಹಿಂದಿನವರೆಗೂ ಅವರು ಕಾರ್ಗಿಲ್ ನ ಒಂದು ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿದ್ದರು. ಇಂದು ಅವರ ಜೀವನದಲ್ಲಿ ಒಂದು ದೊಡ್ಡ ಪರಿವರ್ತನೆಯಾಗಿದೆ. ಆತ್ಮವಿಶ್ವಾಸ ತುಂಬಿದೆ – ಅವರು ಸ್ವಾವಲಂಬಿಯಾಗಿದ್ದಾರೆ ಮತ್ತು ಸಂಪೂರ್ಣ ಕುಟುಂಬಕ್ಕೆ ಆರ್ಥಿಕ ಪ್ರಗತಿಯ ಅವಕಾಶ ತಂದಿದ್ದಾರೆ. ಪರ್ವೀನ್ ಫಾತಿಮಾಳಂತೆ ‘ಹಿಮಾಯತ್’ ಕಾರ್ಯಕ್ರಮ ಲೇಹ್ ಲಡಾಕ್ ನ ಪ್ರಾಂತ್ಯದ ಇತರ ಹೆಣ್ಣು ಮಕ್ಕಳ ಭಾಗ್ಯವನ್ನೇ ಬದಲಿಸಿದೆ. ಇವರೆಲ್ಲರೂ ತಮಿಳುನಾಡಿನ ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೀಗೆ ‘ಹಿಮಾಯತ್’ ಡೋಡಾದ ಫಯಾಜ್ ಅಹ್ಮದ್ಗೆ ವರದಾನವಾಗಿ ಪರಿಣಮಿಸಿದೆ. ಫಯಾಜ್ 2012 ರಲ್ಲಿ 12 ನೇ ತರಗತಿ ತೇರ್ಗಡೆ ಹೊಂದಿದ್ದ. ಆದರೆ ಅನಾರೋಗ್ಯದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. 2 ವರ್ಷಗಳವರೆಗೆ ಫಯಾಜ್ ಹೃದ್ರೋಗದಿಂದ ನರಳುತ್ತಿದ್ದ. ಇದೇ ವೇಳೆ ಅವರ ಒಬ್ಬ ಸಹೋದರ ಮತ್ತು ಸಹೋದರಿ ಸಾವೀಗೀಡಾದರು. ಒಂದು ರೀತಿ ಅವರ ಕುಟುಂಬ ಕಷ್ಟಕೋಟಲೆಗಳಲ್ಲಿ ಸಿಲುಕಿತ್ತು. ಕೊನೆಗೆ ಅವರಿಗೆ ‘ಹಿಮಾಯತ್’ ನಿಂದ ನೆರವು ಲಭಿಸಿತು. ‘ಹಿಮಾಯತ್’ ನಿಂದ ITES CAzÀgÉ Information Technology enabled services’ ತರಬೇತಿ ಲಭಿಸಿತು ಮತ್ತು ಇಂದು ಅವರು ಪಂಜಾಬ್ನಲ್ಲಿ ಉದ್ಯೋಗದಲ್ಲಿದ್ದಾರೆ. ಫಯಾಜ್ ಅಹ್ಮದ್ ತಮ್ಮ ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅದು ಕೂಡಾ ಈಗ ಪೂರ್ಣಗೊಳ್ಳಲಿದೆ. ಇತ್ತೀಚೆಗೆ ‘ಹಿಮಾಯತ್’ನ ಕಾರ್ಯಕ್ರಮವೊಂದರಲ್ಲಿ ತಮ್ಮ ಅನುಭವ ಹಂಚಿಕೊಳ್ಳಲು ಅವರನ್ನು ಆಹ್ವಾನಿಸಲಾಗಿತ್ತು. ತಮ್ಮ ಕಥೆ ಹೇಳುವಾಗ ಅವರ ಕಣ್ಣಲ್ಲಿ ನೀರು ಜಿನುಗಿತು.
ಹೀಗೆಯೇ ಅನಂತನಾಗ್ನ ರಕೀಬ್ ಉಲ್ ರೆಹಮಾನ್ ಆರ್ಥಿಕ ಮುಗ್ಗಟ್ಟಿನಿಂದ ತಮ್ಮ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಒಂದು ದಿನ ರಕೀಬ್ ಅವರಿಗೆ ತಮ್ಮ ಬ್ಲಾಕ್ನಲ್ಲಿ ಆಯೋಜಿಸಲಾದ mobilisation camp ಮೂಲಕ ‘ಹಿಮಾಯತ್’ ಕಾರ್ಯಕ್ರಮ ಕುರಿತಾದ ಮಾಹಿತಿ ಲಭ್ಯವಾಯಿತು. ರಕೀಬ್ ಕೂಡಲೇ ರಿಟೇಲ್ ಟೀಂ ಲೀಡರ್ ಕೋರ್ಸ್ಗೆ ನೊಂದಾಯಿಸಿಕೊಂಡರು. ಇಲ್ಲಿ ತರಬೇತಿ ಪೂರ್ಣಗೊಳಿಸಿದ ಮೇಲೆ ಇಂದು ಅವರು ಒಂದು ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಪರಿವರ್ತನೆಗ ಪ್ರತೀಕವಾದ “ಹಿಮಾಯತ್ ಮಿಷನ್” ನಿಂದ ಲಾಭ ಪಡೆದ ಪ್ರತಿಭಾವಂತ ಯುವಕರ ಹಲವಾರು ಉದಾಹರಣೆಗಳಿವೆ. ಹಿಮಾಯತ್ ಕಾರ್ಯಕ್ರಮ ಸರ್ಕಾರ, ತರಬೇತಿ ಸಹಭಾಗಿತ್ವದ ಸಂಸ್ಥೆಗಳು, ಉದ್ಯೋಗ ನೀಡುವ ಕಂಪನಿಗಳು ಮತ್ತು ಜಮ್ಮು ಕಾಶ್ಮೀರದ ಜನರ ಮಧ್ಯದ ಹೊಂದಾಣಿಕೆಯ ಅತ್ಯುತ್ತಮ ಉದಾಹರಣೆಯಾಗಿದೆ.
ಈ ಕಾರ್ಯಕ್ರಮ ಜಮ್ಮು ಕಾಶ್ಮೀರದ ಯುವಜನತೆಯಲ್ಲಿ ಹೊಸ ಆತ್ಮ ವಿಶ್ವಾಸ ಹುಟ್ಟುಹಾಕಿದ್ದು ಮುಂದೆ ಸಾಗುವ ಹಾದಿಯನ್ನು ಸುಗಮಗೊಳಿಸಿದೆ.
ನನ್ನ ಪ್ರಿಯ ದೇಶಬಾಂಧವರೆ, ಕಳೆದ 26 ನೇ ತಾರೀಖಿನಂದು ನಾವು ಈ ದಶಕದ ಕೊನೆಯ ಸೂರ್ಯಗ್ರಹಣ ವೀಕ್ಷಿಸಿದೆವು. ಬಹುಶಃ ಸೂರ್ಯಗ್ರಹಣದ ಕಾರಣದಿಂದಲೇ ರಿಪುನ್ ಅವರು ಮೈ ಗೌ ನಲ್ಲಿ ಒಂದು ಆಸಕ್ತಿಕರ ಪ್ರಸ್ತಾಪಿಸಿದ್ದ್ದಾರೆ. ಅವರು … “ನಮಸ್ಕಾರ ಸರ್, ನನ್ನ ಹೆಸರು ರಿಪುನ್… ನಾನು ಈಶಾನ್ಯ ಭಾಗದವನಾಗಿದ್ದೇನೆ. ಆದರೆ ಈಗ ನಾನು ದಕ್ಷಿಣ ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಒಂದು ವಿಷಯ ಹಂಚಿಕೊಳ್ಳಬಯಸುತ್ತೇನೆ. ನಮ್ಮ ಪ್ರದೇಶದಲ್ಲಿ ಸ್ವಚ್ಛ ಆಕಾಶವಿರುತ್ತಿದ್ದುದರಿಂದ ನಾವು ಗಂಟೆಗಟ್ಟಲೆ ಆಕಾಶದತ್ತ ದೃಷ್ಟಿ ನೆಟ್ಟಿರುತ್ತಿದ್ದೆವು. star gazing, ನನಗೆ ಬಹಳ ಇಷ್ಟ. ಈಗ ನಾನು ವೃತ್ತಿಪರನಾದ್ದರಿಂದ ನನ್ನ ದಿನಚರಿಯಲ್ಲಿ ಇಂಥ ವಿಷಯಗಳಿಗೆ ಸಮಯ ನೀಡಲಾಗುತ್ತಿಲ್ಲ….ನೀವು ಈ ವಿಷಯದ ಕುರಿತು ಮಾತನಾಡಬಹುದೇ?ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಖಗೋಳ ವಿಜ್ಞಾನವನ್ನು ಹೇಗೆ ಜನಪ್ರಿಯಗೊಳಿಸಹುದು.
ನನ್ನ ಪ್ರಿಯ ದೇಶಬಾಂಧವರೇ, ನನಗೆ ಹಲವಾರು ಸಲಹೆಗಳು ಬರುತ್ತವೆ ಆದರೆ ಇಂಥ ಒಂದು ಸಲಹೆ ಪ್ರಥಮ ಬಾರಿಗೆ ನನ್ನ ಬಳಿ ಬಂದಿದೆ ಎನ್ನಬಹುದು. ವಿಜ್ಞಾನದ ಬಗ್ಗೆ, ಅದರ ಹಲವು ಆಯಾಮಗಳ ಬಗ್ಗೆ ಮಾತನಾಡುವ ಅವಕಾಶ ಲಭಿಸಿದೆ. ವಿಶೇಷವಾಗಿ ಯುವಜನತೆ ಆಗ್ರಹದ ಮೇರೆಗೆ ಮಾತಾಡುವ ಅವಕಾಶ ಅಪರೂಪ. ಆದರೆ ಈ ವಿಷಯ ಮಾತ್ರ ದೂರ ಉಳಿಯುತ್ತಿತ್ತು. ಕಳೆದ 26 ನೇ ತಾರೀಖಿನಂದು ಸೂರ್ಯಗ್ರಹಣ ಆಗಿರುವುದರಿಂದ ನಿಮಗೂ ಈ ವಿಷಯದಲ್ಲಿ ಆಸಕ್ತಿ ಇರಬಹುದು ಎಂದುಕೊಳ್ಳುತ್ತೇನೆ. ಸಮಸ್ತ ದೇಶಬಾಂಧವರಂತೆ, ವಿಶೇಷವಾಗಿ ಯುವಜನತೆಯಂತೆ 26 ನೇ ತಾರೀಖಿನ ಸೂರ್ಯಗ್ರಹಣದಂದು ನನ್ನ ಮನದಲ್ಲೂ ಉತ್ಸಾಹವಿತ್ತು. ನಾನೂ ಸೂರ್ಯಗ್ರಹಣ ನೋಡಬಯಸಿದ್ದೆ. ಆದರೆ ದುರದೃಷ್ಟವಶಾತ್ ಅಂದು ದೆಹಲಿಯಲ್ಲಿ ಆಕಾಶ ಮೋಡದಿಂದ ಮುಸುಕಿತ್ತು, ನಾನು ಆ ಆನಂದ ಪಡೆಯಲಾಗಲಿಲ್ಲ. ಆದರೆ ಟಿ ವಿಯಲ್ಲಿ ಕೋಳಿóಕೋಡ್ ಮತ್ತು ಭಾರತದ ಇತರ ಭಾಗಗಳ ಸೂರ್ಯಗ್ರಹಣದ ಸುಂದರ ಚಿತ್ರಗಳು ನೋಡಲು ದೊರೆತವು. ಸೂರ್ಯ ಹೊಳೆಯುವ ಉಂಗುರದಂತೆ ಕಾಣಿಸುತ್ತಿದ್ದ. ಅಂದು ಈ ವಿಷಯದ ಪರಿಣಿತರೊಂದಿಗೆ ಸಂವಾದ ನಡೆಸುವ ಅವಕಾಶ ಲಭಿಸಿತು. ಚಂದ್ರ ಭೂಮಿಯಿಂದ ಬಹುದೂರ ಇರುವುದರಿಂದ ಅದರ ಆಕೃತಿ ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಲು ಆಗುವುದದಿಲ್ಲ. ಹಾಗಾಗಿ ಉಂಗುರದಂತೆ ಗೋಚರಿಸುತ್ತದೆ ಎಂದು ಅವರು ಹೇಳುತ್ತಿದ್ದರು. ಈ ಸೂರ್ಯಗ್ರಹಣ ವಾರ್ಷಿಕ ಸೂರ್ಯಗ್ರಹಣವಾಗಿದ್ದು ಇದನ್ನು ವಲಯ ಗ್ರಹಣ ಇಲ್ಲವೇ ಕುಂಡಲ ಗ್ರಹಣವೆಂದೂ ಕರೆಯುತ್ತಾರೆ. ನಾವು ಭೂಮಿಯ ಮೇಲಿದ್ದು ಅಂತರಿಕ್ಷದಲ್ಲಿ ಸುತ್ತುತ್ತಿದ್ದೇವೆ ಎಂಬುದನ್ನು ಗ್ರಹಣ ನಮಗೆ ತಿಳಿಸುತ್ತದೆ. ಅಂತರಿಕ್ಷದಲ್ಲಿ ಸೂರ್ಯ, ಚಂದ್ರ ಮತ್ತು ಇತರ ಗ್ರಹಗಳಂತೆ ಹಲವು ಆಕಾಶಕಾಯಗಳು ಸುತ್ತುತ್ತಿರುತ್ತವೆ. ಚಂದ್ರನ ನೆರಳಿನಿಂದಲೇ ನಮಗೆ ಗ್ರಹಣದ ಬೇರೆ ಬೇರೆ ರೂಪ ನೋಡಲು ಸಾಧ್ಯವಾಗುತ್ತದೆ. ಸ್ನೇಹಿತರೆ, ಭಾರತದಲ್ಲಿ ಖಗೋಳಶಾಸ್ತ್ರ ಪ್ರಾಚೀನ ಮತ್ತು ಗೌರವಯುತ ಇತಿಹಾಸ ಹೊಂದಿದೆ. ನಮ್ಮ ಪರಂಪರೆ ಎಷ್ಟು ಪುರಾತನವಾದದ್ದೋ ಆಕಾಶದಲ್ಲಿ ಮಿಣುಗುತ್ತಿರುವ ನಕ್ಷತ್ರಗಳೊಂದಿಗೆ ನಮ್ಮ ನಂಟೂ ಅಷ್ಟೇ ಪುರಾತನವಾದದ್ದು. ಭಾರತದ ಹಲವೆವಡೆ ಬಹಳ ಭವ್ಯ ಜಂತರ್ಮಂತರ್ಗಳಿವೆ ಎಂಬುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರಬಹುದು. ಈ ಜಂತರ್ಮಂತರ್ಗಳು ಖಗೋಳಶಾಸ್ತ್ರದೊಂದಿಗೆ ಗಾಢ ನಂಟು ಹೊಂದಿವೆ. ಮಹಾನ್ ಆರ್ಯಭಟನ ಅಪ್ರತಿಮ ಪ್ರತಿಭೆ ಬಗ್ಗೆ ಯಾರಿಗೆ ತಿಳಿದಿಲ್ಲ. ತಮ್ಮ ಕಾಲಘಟ್ಟದಲ್ಲಿ ಅವರು ಸೂರ್ಯಗ್ರಹಣದ ಜೊತೆಗೆ ಚಂದ್ರಗ್ರಹಣದ ಬಗ್ಗೆಯೂ ವಿಸ್ತಾರವಾಗಿ ವ್ಯಾಖ್ಯಾನಿಸಿದ್ದಾರೆ. ಅದರಲ್ಲೂ ತಾತ್ವಿಕ ಮತ್ತು ಗಣಿತ ದೃಷ್ಟಿಕೋನದಿಂದ ವ್ಯಾಖ್ಯಾನಿಸಿದ್ದಾರೆ. ಅವರು ಪೃಥ್ವಿಯ ನೆರಳಿನ ಗಾತ್ರವನ್ನು ಹೇಗೆ ಮಾಪನ ಮಾಡಬೇಕೆಂದು ಗಣಿತದ ಮೂಲಕ ತಿಳಿಸಿದ್ದಾರೆ. ಗ್ರಹಣದ ಅವಧಿ ಮತ್ತು ತೀವ್ರತೆ ಕುರಿತು ಹೇಗೆ ಮಾಪನ ಮಾಡಬೇಕೆಂಬುದರ ಕುರಿತು ನಿಖರ ಮಾಹಿತಿ ನೀಡಿದ್ದಾರೆ. ಭಾಸ್ಕರರಂತಹ ಅವರ ಅನೇಕ ಶಿಷ್ಯಂದಿರು ಅದೇ ಹುಮ್ಮಸ್ಸಿನೊಂದಿಗೆ ಜ್ಞಾನಾಭಿವೃದ್ಧಿಗೆ ಸಂಪೂರ್ಣ ಪ್ರಯತ್ನ ಮಾಡಿದ್ದಾರೆ. ನಂತರ 14 ಮತ್ತು 15 ನೇ ಶತಮಾನದಲ್ಲಿ ಕೇರಳದ ಸಂಗಮ ಗ್ರಾಮದ ಮಾಧವ್ ಅವರು ಬ್ರಹ್ಮಾಂಡದಲ್ಲಿರುವ ಗ್ರಹಗಳ ಸ್ಥಿತಿಯ ಗಣನೆಗೆ ಕ್ಯಾಲ್ಕುಲಸ್ ಬಳಸಿದರು. ರಾತ್ರಿ ಕಂಡುಬರುವ ಆಕಾಶ ಕೇವಲ ಜಿಜ್ಞಾಸೆಯ ವಿಷಯವಾಗಿರದೇ ಗಣಿತದ ದೃಷ್ಟಿಯಿಂದ ಆಲೋಚಿಸುವವರಿಗೆ ಮತ್ತು ವಿಜ್ಞಾನಿಗಳಿಗೆ ಇದೊಂದು ಮಹತ್ವಪೂರ್ಣ ಮೂಲವಾಗಿತ್ತು. ಕೆಲ ವರ್ಷಗಳ ಹಿಂದೆ ‘Pre-Modern Kutchi (ಕಚ್ಛಿ) Navigation Techniques and Voyages’, ಎಂಬ ಪುಸ್ತಕ ಬಿಡುಗಡೆ ಮಾಡಿದ್ದೆ. ಈ ಪುಸ್ತಕ ಒಂದು ರೀತಿಯಲ್ಲಿ ಮಾಲಮ್ ಅವರ ಡೈರಿಯಂತಿದೆ. ಮಾಲಮ್ ಒಬ್ಬ ನಾವಿಕನಂತೆ ಏನು ಅನುಭವಿಸಿದ್ದರೋ ಅದನ್ನು ತಮ್ಮದೇ ರೀತಿಯಲ್ಲಿ ಡೈರಿಯಲ್ಲಿ ಬರೆದಿದ್ದಾರೆ. ಆಧುನಿಕ ಯುಗದಲ್ಲಿ ಗುಜರಾತಿ ಪಾಂಡುಲಿಪಿಯ ಸಂಗ್ರಹವಾದ ಮಾಲಮ್ ಅವರ ಆ ಪುಸ್ತಕದಲ್ಲಿ ಪ್ರಾಚೀನ ಸಮುದ್ರಯಾನ ತಂತ್ರಜ್ಞಾನದ ವರ್ಣನೆ ಮಾಡಲಾಗಿದೆ ಮತ್ತು ಪದೇ ಪದೇ “ಮಾಲಮ್ ನಿ ಪೋಥಿ” ಯಲ್ಲಿ ಆಕಾಶದ, ನಕ್ಷತ್ರಗಳ, ನಕ್ಷತ್ರಗಳ ಚಲನೆಯ ವರ್ಣನೆ ಮಾಡಲಾಗಿದೆ. ಸಮುದ್ರ ಪಯಣದಲ್ಲಿ ನಕ್ಷತ್ರಗಳ ಸಹಾಯದೊಂದಿಗೆ ದಿಕ್ಕನ್ನು ಗುರುತಿಸಬಹುದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಗಮ್ಯ ತಲುಪಲು ನಕ್ಷತ್ರಗಳು ದಾರಿಯನ್ನು ತೋರುತ್ತವೆ.
ನನ್ನ ಪ್ರಿಯ ದೇಶವಾಸಿಗಳೇ, ಖಗೋಳ ಶಾಸ್ತ್ರದ ಕ್ಷೇತ್ರದಲ್ಲಿ ಭಾರತ ಬಹಳ ಮುಂದೆ ಇದೆ ಮತ್ತು ನಮ್ಮ ಉಪಕ್ರಮಗಳು ಮುಂಚೂಣಿಯಲ್ಲಿವೆ. ನಮ್ಮ ಬಳಿ ಪುಣೆಯ ಹತ್ತಿರ ಬೃಹತ್ Meter Wave Telescope ಇದೆ. ಇಷ್ಟೇ ಅಲ್ಲದೆ ಕೊಡೈಕೆನಾಲ್, ಉದಗಮಂಡಲಂ, ಗುರು ಶಿಖರ್ ಮತ್ತು ಲಡಾಕ್ನ ಹನ್ಲೆಯಲ್ಲೂ ಶಕ್ತಿಯುತವಾದ ಟೆಲಿಸ್ಕೋಪ್ಗಳಿವೆ. ಬೆಲ್ಜಿಯಂನ ಅಂದಿನ ಪ್ರಧಾನಿ ಮತ್ತು ನಾನು 2016 ರಲ್ಲಿ ನೈನಿತಾಲ್ನಲ್ಲಿ 3.6 ಮೀಟರ್ನ ಬೃಹದಾಕಾರದ optical telescope ನ ಉದ್ಘಾಟನೆ ಮಾಡಿದೆವು. ಇದನ್ನು ಏಷಿಯಾದ ಅತ್ಯಂತ ದೊಡ್ಡ ಟೆಲಿಸ್ಕೋಪ್ ಎಂದು ಹೇಳಲಾಗುತ್ತಿದೆ. ಇಸ್ರೋ ಬಳಿ ASTROSAT ಎಂಬ ಖಗೋಳೀಯ ಉಪಗ್ರಹವಿದೆ. ಸೂರ್ಯನ ಕುರಿತ ಅಧ್ಯಯನಕ್ಕೆ ಇಸ್ರೋ ‘ಆದಿತ್ಯ’ ಹೆಸರಿನ ಮತ್ತೊಂದು ಉಪಗ್ರಹ ಉಡ್ಡಯನ ಮಾಡಲಿದೆ. ಖಗೋಳ ಶಾಸ್ತ್ರದ ಕುರಿತು ನಮ್ಮ ಪ್ರಾಚೀನ ಜ್ಞಾನವಾಗಲಿ ಅಥವಾ ಆಧುನಿಕ ಸಾಧನೆಗಳ ಬಗ್ಗೆಯಾಗಲಿ ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಹೆಮ್ಮೆ ಪಡಬೇಕು. ಇಂದು ನಮ್ಮ ಯುವ ವಿಜ್ಞಾನಿಗಳಲ್ಲಿ ವ್ಶೆಜ್ಞಾನಿಕ ಇತಿಹಾಸ ಅರಿಯುವ ಹುಮ್ಮಸ್ಸು ಮಾತ್ರವಲ್ಲದೆ ಖಗೋಳಶಾಸ್ತ್ರದ ಭವಿಷ್ಯದ ಕುರಿತೂ ಧೃಡ ಇಚ್ಛಾಶಕ್ತಿ ಕಂಡುಬರುತ್ತದೆ.
ನಮ್ಮ ದೇಶದ ತಾರಾಲಯಗಳು, ರಾತ್ರಿ ಆಕಾಶದ ಬಗ್ಗೆ ತಿಳಿಸುವುದರ ಜೊತೆಗೆ ನಕ್ಷತ್ರ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳಲು ಕೂಡಾ ಪ್ರೋತ್ಸಾಹಿಸುತ್ತಿವೆ. ಹಲವಾರು ಜನರು Amateur telescopes ನ್ನು ತಮ್ಮ ಮಹಡಿಯ ಮೇಲೆ, ಬಾಲ್ಕನಿಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಗ್ರಾಮೀಣ ಶಿಬಿರಗಳು ಮತ್ತು ಗ್ರಾಮೀಣ ವಿಹಾರಕ್ಕೂ ನಕ್ಷತ್ರ ವೀಕ್ಷಣೆಯಿಂದ ಪ್ರೋತ್ಸಾಹ ಸಿಗಲಿದೆ. ಹಲವಾರು ಶಾಲಾ ಕಾಲೇಜುಗಳು ಖಗೋಳಶಾಸ್ತ್ರ ಕ್ಲಬ್ಗಳನ್ನು ರೂಪಿಸಿ ಈ ಪ್ರಯೋಗವನ್ನು ಮುಂದುವರಿಸಿಕೊಂಡು ಹೋಗಬೇಕು.
ನನ್ನ ಪ್ರಿಯ ದೇಶಬಾಂಧವರೆ, ನಮ್ಮ ಸಂಸತ್ನ್ನು ಪ್ರಜಾಪ್ರಭುತ್ವದ ಮಂದಿರವೆಂದು ನಾವು ಪರಿಗಣಿಸುತ್ತೇವೆ. ನೀವು ಆಯ್ಕೆ ಮಾಡಿದ ಪ್ರತಿನಿಧಿಗಳು ಕಳೆದ 60 ವರ್ಷಗಳ ದಾಖಲೆಯನ್ನು ಮೀರಿ ಮುಂದೆ ಸಾಗಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಕಳೆದ 6 ತಿಂಗಳಲ್ಲಿ 17 ನೇ ಲೋಕಸಭೆಯ ಉಭಯ ಸದನಗಳು ಬಹಳ ಫಲಪ್ರದವಾಗಿ ಕಾರ್ಯನಿರ್ವಹಿಸಿವೆ. ಲೋಕಸಭೆ 114% ರಷ್ಟು ಕೆಲಸ ಮಾಡಿದ್ದರೆ ರಾಜ್ಯಸಭೆ 94% ರಷ್ಟು ಕೆಲಸ ಮಾಡಿದೆ. ಇದಕ್ಕೂ ಮೊದಲು ಆಯವ್ಯಯ ಅಧಿವೇಶನದಲ್ಲಿ ಶೇಕಡಾ 135 ರಷ್ಟು ಕಾರ್ಯನಿರ್ವಹಿಸಿದ್ದರು. ರಾತ್ರಿ ಸುದೀರ್ಘ ಸಮಯದವರೆಗೆ ಸಂಸತ್ ಸಭೆ ನಡೆಯಿತು. ಎಲ್ಲ ಸಂಸದರೂ ಅಭಿನಂದನೆಗೆ ಪಾತ್ರರು ಎಂದು ಹೇಳಲು ಈ ಮಾತನ್ನು ಪ್ರಸ್ತಾಪಿಸುತ್ತಿದ್ದೇನೆ. ನೀವು ಕಳುಹಿಸಿದ ಜನಪ್ರತಿನಿಧಿಗಳು ಕಳೆದ 60 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ಇಷ್ಟೊಂದು ಕೆಲಸ ಆಗಿರುವುದು ಭಾರತದ ಪ್ರಜಾಸತ್ತಾತ್ಮಕತೆಯ ಶಕ್ತಿಯ ಪ್ರಜಾಸತ್ತಾತ್ಮಕತೆ ಕುರಿತಾದ ಶೃದ್ಧೆಯ ಪ್ರತಿರೂಪವಾಗಿದೆ. ನಾನು ಉಭಯ ಸದನಗಳ ಪೀಠಾಧಿಪತಿಗಳನ್ನು ಎಲ್ಲ ರಾಜಕೀಯ ಪಕ್ಷಗಳನ್ನು, ಎಲ್ಲ ಸಂಸದರನ್ನು ಅವರ ಸಕ್ರೀಯ ಪಾಲ್ಗೊಳ್ಳುವಿಕೆಗೆ ಅನಂತ ಅಭಿನಂದಿಸಬಯಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ಸೂರ್ಯ, ಪ್ರಥ್ವಿ, ಚಂದ್ರನ ಚಲನೆಗಳು ಮಾತ್ರ ಗ್ರಹಣ ನಿರ್ಧರಿಸುವುದಿಲ್ಲ, ಇದರೊಂದಿಗೆ ಇನ್ನೂ ಹಲವಾರು ವಿಷಯಗಳು ಸೇರಿವೆ. ಸೂರ್ಯನ ಚಲನೆಯನ್ನು ಆಧರಿಸಿ ಭಾರತದಾದ್ಯಂತ ಜನವರಿಯ ಮಧ್ಯ ಭಾಗದಲ್ಲಿ ವಿಭಿನ್ನ ಉತ್ಸವಗಳನ್ನು ಆಚರಿಸಲಾಗುತ್ತದೆ. ಪಂಜಾಬ್ನಿಂದ ತಮಿಳುನಾಡಿನವರೆಗೆ. ಗುಜರಾತ್ನಿಂದ ಅಸ್ಸಾಂವರೆಗೆ ಜನರು ವಿಭಿನ್ನ ಉತ್ಸವಗಳನ್ನು ಸಂಭ್ರಮಿಸುತ್ತಾರೆ. ಜನವರಿಯಲ್ಲಿ ಅದ್ದೂರಿಯಾಗಿ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಆಚರಿಸಲಾಗುತ್ತದೆ. ಇವುಗಳನ್ನು ಶಕ್ತಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಪಂಜಾಬ್ನಲ್ಲಿ ಲೋಹ್ರಿ, ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂ ನಲ್ಲಿ ಮಾಘ-ಬಿಹು ಆಚರಿಸಲಾಗುತ್ತದೆ. ಈ ಉತ್ಸವಗಳು, ರೈತರ ಸಮೃದ್ಧಿ ಮತ್ತು ಬೆಳೆಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಈ ಉತ್ಸವಗಳು ನಮ್ಮ ಭಾರತದ ಒಗ್ಗಟ್ಟು ಮತ್ತು ಭಾರತದ ವೈವಿಧ್ಯತೆಯನ್ನು ನೆನಪಿಸುತ್ತವೆ. ಪೊಂಗಲ್ ಕೊನೆಯ ದಿನ ಮಹಾನ್ ತಿರುವಳ್ಳುವರ್ ಜಯಂತಿಯನ್ನು ಆಚರಿಸುವ ಸೌಭಾಗ್ಯ ನಮಗೆ ದೊರೆತಿದೆ. ಈ ದಿನ ಮಹಾನ್ ಲೇಖಕ, ವಿಚಾರವಾದಿ, ಸಂತ ತಿರುವಳ್ಳುವರ್ ಅವರಿಗೆ ಮತ್ತು ಅವರ ಜೀವನಕ್ಕೆ ಸಮರ್ಪಿತವಾಗಿದೆ,
ನನ್ನ ಪ್ರಿಯ ದೇಶಬಾಂಧವರೆ, ಇದು 2019 ರ ಕೊನೆಯ ‘ಮನದ ಮಾತು’. 2020 ರಲ್ಲಿ ಮತ್ತೆ ಭೇಟಿಯಾಗೋಣ. ಬನ್ನಿ ಹೊಸ ವರ್ಷ, ಹೊಸ ದಶಕ, ಹೊಸ ಸಂಕಲ್ಪ, ಹೊಸ ಶಕ್ತಿ, ಹೊಸ ಹುರುಪು ಮತ್ತು ಹೊಸ ಉತ್ಸಾಹದೊಂದಿಗೆ ಮುನ್ನಡೆಯೋಣ. ಸಂಕಲ್ಪ ಸಾಕಾರಕ್ಕೆ ಸಾಮಥ್ರ್ಯವನ್ನು ಒಗ್ಗೂಡಿಸೋಣ. ಬಹುದೂರ ಸಾಗಬೇಕಿದೆ. ಬಹಳಷ್ಟು ಮಾಡಬೇಕಿದೆ, ದೇಶವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ. 130 ಕೋಟಿ ನಾಗರಿಕರ ಪ್ರಯತ್ನಗಳ ಬಗ್ಗೆ, ಅವರ ಸಾಮಥ್ರ್ಯದ ಬಗ್ಗೆ, ಅವರ ಸಂಕಲ್ಪದ ಬಗ್ಗೆ, ಅಪಾರ ಶೃದ್ಧೆಯೊಂದಿಗೆ ಬನ್ನಿ ಮುನ್ನಡೆಯೋಣ. ಅನಂತ ಅನಂತ ಧನ್ಯವಾದಗಳು ಮತ್ತು ಅನಂತ ಶುಭಹಾರೈಕೆಗಳು
ನನ್ನ ಪ್ರಿಯ ದೇಶಬಾಂಧವರೆ, ಮನದ ಮಾತಿಗೆ ನಿಮಗೆಲ್ಲ ಸ್ವಾಗತ. ಇಂದು ಮನದ ಮಾತಿನ ಆರಂಭ ಯುವ ದೇಶದ, ಯುವಕರ, ಉತ್ಸಾಹ, ದೇಶಭಕ್ತಿ, ಆ ಸೇವೆಯ ಬಣ್ಣಗಳಲ್ಲಿ ಮಿಂದೆದ್ದ ಹದಿ ಹರೆಯದವರು, ನಿಮಗೆಲ್ಲ ಗೊತ್ತಿದೆಯಲ್ಲವೆ. ಪ್ರತಿ ವರ್ಷ ನವೆಂಬರ್ ತಿಂಗಳ ನಾಲ್ಕನೇ ರವಿವಾರವನ್ನು ಎನ್ಸಿಸಿ ದಿನವೆಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ನಮ್ಮ ಯುವ ಜನಾಂಗಕ್ಕೆ ಸ್ನೇಹಿತರ ದಿನ ಚೆನ್ನಾಗಿ ನೆನಪಿರುತ್ತದೆ. ಆದರೆ ಬಹಳಷ್ಟು ಜನರಿದ್ದಾರೆ ಅವರಿಗೆ ಎನ್ಸಿಸಿ ದಿನವೂ ಅಷ್ಟೇ ಚೆನ್ನಾಗಿ ನೆನಪಿರುತ್ತದೆ. ಹಾಗಾದರೆ ಬನ್ನಿ ಇಂದು ಎನ್ಸಿಸಿ ಬಗ್ಗೆ ಮಾತಾಡೋಣ. ನನಗೂ ಕೆಲ ನೆನಪುಗಳನ್ನು ಹಸಿರಾಗಿಸಿಕೊಳ್ಳುವ ಅವಕಾಶ ಸಿಕ್ಕಂತಾಗುತ್ತದೆ. ಎಲ್ಲಕ್ಕಿಂತ ಮೊದಲು ಹಿಂದಿನ ಮತ್ತು ಇಂದಿನ ಎಲ್ಲ ಎನ್ ಸಿಸಿ ಕೆಡೆಟ್ ಗಳಿಗೆ ಎನ್ ಸಿಸಿ ದಿನದ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ. ಏಕೆಂದರೆ ನಾನೂ ನಿಮ್ಮಂತೆ ಕೆಡೆಟ್ ಆಗಿದ್ದೆ ಮತ್ತು ಇಂದಿಗೂ ಮನಃ ಪೂರ್ತಿಯಾಗಿ ನನ್ನನ್ನು ನಾನು ಕೆಡೆಟ್ ಎಂದು ಭಾವಿಸುತ್ತೇನೆ. ಎನ್ಸಿಸಿ ಎಂದರೆ ನ್ಯಾಶನಲ್ ಕೆಡೆಟ್ ಕೋರ್ ಎಂಬುದು ನಮಗೆಲ್ಲರಿಗೂ ತಿಳಿದಿದೆ. ವಿಶ್ವದ ಅತಿ ದೊಡ್ಡ ಸಮವಸ್ತ್ರಧಾರಿ ಯುವ ಸಂಘಟನೆ ಎಂದರೆ ಅದು ಭಾರತದ ಎನ್ಸಿಸಿ. ಇದೊಂದು ಮೂರು ಸೇವಾ ಸಂಸ್ಥೆಗಳ ಒಕ್ಕೂಟವಾಗಿದೆ. ಇದರಲ್ಲಿ ಸೇನೆ, ವಾಯುದಳ, ನೌಕಾಬಲ ಮೂರು ಸೇರ್ಪಡೆಗೊಂಡಿವೆ. ನಾಯಕತ್ವ, ದೇಶಭಕ್ತಿ, ನಿರಪೇಕ್ಷ ಸ್ವಯಂ ಸೇವೆ, ಶಿಸ್ತು, ಕಠಿಣ ಪರಿಶ್ರಮ ಇವೆಲ್ಲವನ್ನೂ ನಿಮ್ಮ ಸ್ವಭಾವದಲ್ಲಿ ಮೇಳೈಸಿಕೊಳ್ಳಿ, ನಮ್ಮ ಅಭ್ಯಾಸಗಳನ್ನು ರೂಪಿಸಿಕೊಳ್ಳುವ ಒಂದು ರೋಮಾಂಚಕಾರಿ ಯಾತ್ರೆ ಎಂದರೆ ಅದು ಎನ್ಸಿಸಿ. ಈ ಯಾತ್ರೆಯ ಕುರಿತು ಇನ್ನಷ್ಟು ಮಾತನಾಡಲು ಇಂದು ಫೋನ್ ಕಾಲ್ ಮೂಲಕ ಎನ್ಸಿಸಿ ಯಲ್ಲಿ ತಮ್ಮದೇ ಸ್ಥಾನವನ್ನು ಸೃಷ್ಟಿಸಿಕೊಂಡಂತಹ ಕೆಲ ಯುವಕರಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ : ಸ್ನೇಹಿತರೇ ನೀವೆಲ್ಲ ಹೇಗಿದ್ದೀರಿ
ತರನ್ನುಮ್ ಖಾನ್ : ಜೈ ಹಿಂದ್ ಪ್ರಧಾನ ಮಂತ್ರಿಯವರೇ
ಪ್ರಧಾನ ಮಂತ್ರಿ : ಜೈ ಹಿಂದ್
ತರನ್ನುಮ್ ಖಾನ್ : ಸರ್ ನನ್ನ ಹೆಸರು ಜ್ಯೂನಿಯರ್ ಅಂಡರ್ ಆಫೀಸರ್ ತರನ್ನುಮ್ ಖಾನ್
ಪ್ರಧಾನ ಮಂತ್ರಿ : ತರನ್ನುಮ್ ನೀವು ಯಾವ ಊರಿನವರು
ತರನ್ನುಮ್ ಖಾನ್ : ನಾನು ದಿಲ್ಲಿ ನಿವಾಸಿ ಸರ್
ಪ್ರಧಾನ ಮಂತ್ರಿ : ಹೌದಾ, ಎನ್ಸಿಸಿಯಲ್ಲಿ ಎಷ್ಟು ವರ್ಷ ಇದ್ದಿರಿ. ನಿಮ್ಮ ಅನುಭವಗಳು ಎಂಥವು?
ತರನ್ನುಮ್ ಖಾನ್ : ಸರ್ ನಾನು ಎನ್ ಸಿಸಿ ಗೆ 2017 ರಲ್ಲಿ ಭರ್ತಿಯಾದೆ ಮತ್ತು ಈ 3 ವರ್ಷಗಳು ನನ್ನ ಜೀವನದ ಅತ್ಯುತ್ತಮ ವರ್ಷಗಳಾಗಿವೆ.
ಪ್ರಧಾನ ಮಂತ್ರಿ : ವಾವ್ ಕೇಳಿ ಬಹಳ ಆನಂದವಾಯಿತು.
ತರನ್ನುಮ್ ಖಾನ್ : ಸರ್ ನನ್ನ ಎಲ್ಲಕ್ಕಿಂತ ಉತ್ತಮ ಅನುಭವ ಏಕ್ ಭಾರತ್ ಶ್ರೇಷ್ಠ ಭಾರತ್ ಕ್ಯಾಂಪ್ನಲ್ಲಾಯಿತು ಎಂದು ನಾನು ನಿಮಗೆ ಹೇಳಬಯಸುತ್ತೇನೆ. ಈ ಕ್ಯಾಂಪ್ ಅಗಸ್ಟ್ ನಲ್ಲಿ ನಡೆಯಿತು. ಇದರಲ್ಲಿ ಎನ್ ಈ ಆರ್ ಈಶಾನ್ಯ ಭಾಗದ ಯುವಕರೂ ಬಂದಿದ್ದರು. ಆ ಕೆಡೆಟ್ಸ್ಗಳ ಜೊತೆಗೆ 10 ದಿನ ನಾವು ಇದ್ದೆವು. ನಾವು ಅವರ ನಡೆ ನುಡಿ ಕಲಿತೆವು. ಅವರ ಭಾಷೆ ಏನೆಂದು ತಿಳಿದೆವು. ಅವರ ಪರಂಪರೆ ಮತ್ತು ಸಂಸ್ಕøತಿ ಹೀಗೆ ಅವರಿಂದ ಹಲವಾರು ವಿಷಯಗಳನ್ನು ಕಲಿತೆವು. ಉದಾಹರಣೆಗೆ ವೈಝೋಮ್ ಎಂದರೆ ಹಲ್ಲೊ ಹೇಗಿದ್ದೀರಿ ಎಂದರ್ಥ. ಅದೇ ರೀತಿ ನಮ್ಮ ಸಾಂಸ್ಕøತಿಕ ಸಂಜೆ ಆಯೋಜಿಸಲಾಗಿತ್ತು. ಅದರಲ್ಲಿ ಅವರು ನಮಗೆ ತಮ್ಮ ನೃತ್ಯ ಕಲಿಸಿಕೊಟ್ಟರು. ಅವರ ನೃತ್ಯವನ್ನು ತೆಹರಾ ಎಂದು ಕರೆಯುತ್ತಾರೆ. ಅವರು ನನಗೆ ಮೆಖೆಲಾ ತೊಡುವುದನ್ನೂ ಕಲಿಸಿದರು. ಆ ಉಡುಗೆಯಲ್ಲಿ ನಿಜವಾಗಿಯೂ ದಿಲ್ಲಿಯ ಮತ್ತು ನಾಗಾಲ್ಯಾಂಡ್ ನ ಸ್ನೇಹಿತರು ಎಲ್ಲರೂ ಬಹಳ ಸುಂದರವಾಗಿ ಕಾಣಿಸುತ್ತಿದ್ದೆವು. ನಾವು ಅವರನ್ನು ದಿಲ್ಲಿ ದರ್ಶನಕ್ಕೂ ಕರೆದೊಯ್ದಿದ್ದೆವು. ನಾವು ಅವರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಇಂಡಿಯಾ ಗೇಟ್ ತೋರಿಸಿದೆವು. ಅಲ್ಲಿ ನಾವು ಅವರಿಗೆ ದಿಲ್ಲಿ ಚಾಟ್ಸ್ ಕೂಡಾ ತಿನ್ನಿಸಿದೆವು. ಭೇಲ್ ಪುರಿ ಕೊಡಿಸಿದೆವು ಆದರೆ ಅವರಿಗೆ ಸ್ವಲ್ಪ ಖಾರವೆನಿಸಿತು. ಏಕೆಂದರೆ ಅವರು ನಮಗೆ ಹೇಳಿದಂತೆ ಸಾಮಾನ್ಯವಾಗಿ ಅವರು ಸೂಪ್ ಕುಡಿಯುವುದನ್ನು ಇಷ್ಟಪಡುತ್ತಾರೆ. ಸ್ವಲ್ಪ ಬೇಯಿಸಿದ ತರಕಾರಿ ತಿನ್ನುತ್ತಾರೆ. ಹಾಗಾಗಿ ಅವರ ಊಟ ಅಷ್ಟೊಂದು ಇಷ್ಟವಾಗಲಿಲ್ಲ. ಆದರೆ ಇದೆಲ್ಲದರ ಹೊರತಾಗಿ ನಾವು ಅವರೊಂದಿಗೆ ಸಾಕಷ್ಟು ಫೋಟೊ ತೆಗೆದುಕೊಂಡೆವು, ಸಾಕಷ್ಟು ಅನುಭವಗಳನ್ನು ಹಂಚಿಕೊಂಡೆವು.
ಪ್ರಧಾನ ಮಂತ್ರಿ : ನೀವು ಅವರೊಂದಿಗೆ ಸಂಪರ್ಕದಲ್ಲಿದ್ದೀರಾ?
ತರನ್ನುಮ್ ಖಾನ್ : ಹೌದು ಸರ್, ಇಂದಿಗೂ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ.
ಪ್ರಧಾನ ಮಂತ್ರಿ : ಒಳ್ಳೇದು ಮಾಡಿದ್ದೀರಿ.
ತರನ್ನುಮ್ ಖಾನ್ : ಹೌದು ಸರ್
ಪ್ರಧಾನ ಮಂತ್ರಿ : ಮತ್ತೆ ನಿಮ್ಮೊಂದಿಗೆ ಬೇರೆ ಸ್ನೇಹಿತರು ಯಾರಿದ್ದಾರೆ?
ಶ್ರೀಹರಿ ಜಿ ವಿ : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್
ಶ್ರೀಹರಿ ಜಿ ವಿ : ನಾನು ಸೀನಿಯರ್ ಅಂಡರ್ ಆಫೀಸರ್ ಶ್ರೀ ಹರಿ ಜಿ ವಿ ಮಾತನಾಡುತ್ತಿದ್ದೇನೆ. ನಾನು ಕರ್ನಾಟಕದ ಬೆಂಗಳೂರಿನ ನಿವಾಸಿಯಾಗಿದ್ದೇನೆ.
ಪ್ರಧಾನ ಮಂತ್ರಿ : ನೀವು ಎಲ್ಲಿ ಓದುತ್ತಿದ್ದೀರಿ?
ಶ್ರೀಹರಿ ಜಿ ವಿ : ಸರ್ ಬೆಂಗಳೂರಿನ ಕ್ರಿಸ್ತುಜಯಂತಿ ಕಾಲೇಜಿನಲ್ಲಿ
ಪ್ರಧಾನ ಮಂತ್ರಿ : ಹೌದಾ ಬೆಂಗಳೂರಿನಲ್ಲೇ ಇದ್ದೀರಾ?
ಶ್ರೀಹರಿ ಜಿ ವಿ : ಯಸ್ ಸರ್
ಪ್ರಧಾನ ಮಂತ್ರಿ : ಹೇಳಿ
ಶ್ರೀಹರಿ ಜಿ ವಿ : ಸರ್ ನಾನು ನಿನ್ನೆಯಷ್ಟೇ ಯೂತ್ ಎಕ್ಸಚೇಂಜ್ ಪ್ರೊಗ್ರಾಂ ಸಿಂಗಾಪೂರ್ನಿಂದ ಮರಳಿದ್ದೇನೆ.
ಪ್ರಧಾನ ಮಂತ್ರಿ : ಅರೆ ವಾವ್!
ಶ್ರೀಹರಿ ಜಿ ವಿ : ಹೌದು ಸರ್
ಪ್ರಧಾನ ಮಂತ್ರಿ : ಹಾಗಾದರೆ ನಿಮಗೆ ಅಲ್ಲಿಗೆ ಹೋಗುವ ಅವಕಾಶ ಅಭಿಸಿತು.
ಶ್ರೀಹರಿ ಜಿ ವಿ : ಹೌದು ಸರ್
ಪ್ರಧಾನ ಮಂತ್ರಿ : ಸಿಂಗಪೂರ್ನಲ್ಲಿಯ ಅನುಭವ ಹೇಗಿತ್ತು?
ಶ್ರೀಹರಿ ಜಿ ವಿ : ಅಲ್ಲಿ ಬ್ರಿಟನ್, ಅಮೇರಿಕ, ಸಿಂಗಪೂರ್, ಬ್ರುನೈ, ಹಾಂಗ್ಕಾಂಗ್ ಮತ್ತು ನೇಪಾಳ್ ಸೇರಿದಂತೆ ಆರು ದೇಶಗಳು ಬಂದಿದ್ದವು. ಅಲ್ಲಿ ನಮಗೆ ಯುದ್ಧ ತರಬೇತಿ ಮತ್ತು ಅಂತಾರಾಷ್ಟ್ರೀಯ ಸೇನಾ ಅಭ್ಯಾಸಗಳ ವಿನಿಮಯ ಮಾಡಿಕೊಳ್ಳುವ ಅವಕಾಶ ಲಭಿಸಿತು. ಇಲ್ಲಿ ನಮ್ಮ ಪ್ರದರ್ಶನ ಬೇರೆಯೇ ಆಗಿತ್ತು ಸರ್. ಇವುಗಳಲ್ಲಿ ನಮಗೆ ಜಲ ಕ್ರೀಡೆಗಳು ಮತ್ತು ಸಾಹಸ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಯಿತು ಹಾಗೂ ವಾಟರ್ ಪೋಲೊ ಪಂದ್ಯಾವಳಿಯಲ್ಲಿ ಭಾರತದ ತಂಡ ಗೆಲುವು ಸಾಧಿಸಿತು ಸರ್ ಮತ್ತು ಸಾಂಸ್ಕøತಿಕ ವಿಭಾಗದಲ್ಲಂತೂ ನಾವು ಓವರ್ ಆಲ್ ಫರ್ಫಾರ್ಮರ್ಸ್ ಆಗಿದ್ದೆವು ಸರ್. ನಮ್ಮ ಡ್ರಿಲ್ ಮತ್ತು ವರ್ಡ ಆಫ್ ಕಮಾಂಡ್ ಅವರಿಗೆ ಇಷ್ಟವಾಗಿದ್ದವು ಸರ್.
ಪ್ರಧಾನ ಮಂತ್ರಿ : ನೀವು ಎಷ್ಟು ಜನ ಇದ್ದೀರಿ ಹರಿ?
ಶ್ರೀಹರಿ ಜಿ ವಿ : 20 ಜನರು ಸರ್, ಅದರಲ್ಲಿ 10 ಜನ ಹುಡುಗರು, ಹತ್ತು ಮಂದಿ ಹುಡುಗಿಯರು ಸರ್
ಪ್ರಧಾನ ಮಂತ್ರಿ : ಹೌದು ಭಾರತದ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದೀರಲ್ಲವೇ?
ಶ್ರೀಹರಿ ಜಿ ವಿ : ಹೌದು ಸರ್
ಪ್ರಧಾನ ಮಂತ್ರಿ : ಬನ್ನಿ ನಿಮ್ಮೆಲ್ಲ ಸ್ನೇಹಿತರು ನಿಮ್ಮೆಲ್ಲ ಅನುಭವಗಳನ್ನು ಕೇಳಲು ಬಹಳ ಕಾತುರರಾಗಿರಬಹುದು ಆದರೆ, ನನಗೆ ತುಂಬಾ ಹಿತವೆನಿಸಿತು. ನಿಮ್ಮೊಂದಿಗೆ ಇನ್ನೂ ಯಾರಿದ್ದಾರೆ?
ವಿನೋಲೆ ಕಿಸೋ : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್
ವಿನೋಲೆ ಕಿಸೋ : ನನ್ನ ಹೆಸರು ಸೀನಿಯರ್ ಅಂಡರ್ ಆಫೀಸರ್ ವಿನೋಲೆ ಕಿಸೋ. ನಾನು ಈಶಾನ್ಯ ಭಾಗದ ನಾಗಾಲ್ಯಾಂಡ್ ರಾಜ್ಯದವನಾಗಿದ್ದೇನೆ.
ಪ್ರಧಾನ ಮಂತ್ರಿ : ಹಾಂ ವಿನೋಲೆ. ನಿಮ್ಮ ಅನುಭವಗಳೇನು?
ವಿನೋಲೆ ಕಿಸೋ : ಸರ್. ನಾನು ಜಖಾಮಾದ ಸೆಂಟ್ ಜೋಸೆಫ್ಸ್ ಸ್ವಾಯತ್ತ ಕಾಲೇಜ್ನಲ್ಲಿ ಬಿ.ಎ. ಹಿಸ್ಟರಿ ಆನರ್ಸ್ ಓದುತ್ತಿದ್ದೇನೆ. ನಾನು 2017 ರಲ್ಲಿ ಎನ್ ಸಿ ಸಿ ಸೇರಿದೆ ಮತ್ತು ಅದು ನನ್ನ ಜೀವನದ ಬಹು ದೊಡ್ಡ ಮತ್ತು ಅತ್ಯುತ್ತಮ ನಿರ್ಧಾರವಾಗಿತ್ತು ಸರ್.
ಪ್ರಧಾನ ಮಂತ್ರಿ : ಎನ್ ಸಿ ಸಿ ಯಿಂದಾಗಿ ಭಾರತದ ಎಲ್ಲೆಲ್ಲಿ ಹೋಗುವ ಅವಕಾಶ ದೊರೆತಿದೆ?
ವಿನೋಲೆ ಕಿಸೋ : ಸರ್. ನಾನು ಎನ್ ಸಿ ಸಿ ಸೇರಿದೆ ಮತ್ತು ಬಹಳ ಕಲಿತೆ ಹಾಗೂ ನನಗೆ ಬಹಳಷ್ಟು ಅವಕಾಶಗಳೂ ದೊರೆತವು. ನನ್ನದೊಂದು ಅನುಭವವನ್ನು ನಿಮಗೆ ಹೇಳ ಬಯಸುತ್ತೇನೆ. ಈ ವರ್ಷ 2019 ರ ಜೂನ್ ತಿಂಗಳಿನಲ್ಲಿ ಒಂದು ಕ್ಯಾಂಪ್ನಲ್ಲಿ ಭಾಗವಹಿಸಿದ್ದೆ. ಅದು (ಕಂಬೈನ್ಡ್ ಆನ್ಯುವೆಲ್ ಟ್ರೈನಿಂಗ್ ಕ್ಯಾಂಪ್) ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ ಮತ್ತು ಅದನ್ನು ಕೊಹಿಮಾದ ಥಾಜೋಲಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ 400 ಕೆಡೆಟ್ಸ್ಗಳು ಭಾಗವಹಿಸಿದ್ದರು.
ಪ್ರಧಾನ ಮಂತ್ರಿ : ಹಾಗಾದರೆ ನಾಗಾಲ್ಯಾಂಡ್ನ ನಿಮ್ಮ ಎಲ್ಲ ಸ್ನೇಹಿತರು ಭಾರತದಲ್ಲಿ ಎಲ್ಲಿಗೆ ಹೋಗಿದ್ದಿರಿ? ಏನೇನು ನೋಡಿದಿರಿ? ಎಂಬುದನ್ನ ತಿಳಿದುಕೊಳ್ಳಬಯಸುತ್ತಿರಬಹುದು. ಎಲ್ಲ ಅನುಭವಗಳನ್ನು ಅವರೆಲ್ಲರಿಗೂ ಹೇಳುತ್ತೀರಾ?
ವಿನೋಲೆ ಕಿಸೋ : ಹೌದು ಸರ್.
ಪ್ರಧಾನ ಮಂತ್ರಿ : ನಿಮ್ಮೊಂದಿಗೆ ಇನ್ನೂ ಬೇರೆ ಯಾರಿದ್ದಾರೆ?
ಅಖಿಲ್ : ಜೈ ಹಿಂದ್ ಸರ್. ನನ್ನ ಹೆಸರು ಜೂನಿಯರ್ ಅಂಡರ್ ಆಫೀಸರ್ ಅಖಿಲ್
ಪ್ರಧಾನ ಮಂತ್ರಿ : ಹಾಂ ಅಖಿಲ್. ಹೇಳಿ.
ಅಖಿಲ್ : ನಾನು ಹರಿಯಾಣದ ರೊಹ್ಟಕ್ ನಿವಾಸಿಯಾಗಿದ್ದೇನೆ ಸರ್.
ಪ್ರಧಾನ ಮಂತ್ರಿ : ಹಾಂ
ಅಖಿಲ್ : ನಾನು ದೆಹಲಿ ವಿಶ್ವವಿದ್ಯಾಲಯದ ದಯಾಲ್ ಸಿಂಗ್ ಕಾಲೇಜಿನಲ್ಲಿ ಫಿಸಿಕ್ಸ್ ಆನರ್ಸ್ ಓದುತ್ತಿದ್ದೇನೆ
ಪ್ರಧಾನ ಮಂತ್ರಿ : ಹಾಂ ಹಾಂ
ಅಖಿಲ್ : ಸರ್. ಎನ್ ಸಿ ಸಿ ಯಲ್ಲಿ ನನಗೆ ಶಿಸ್ತು ಎಲ್ಲಕ್ಕಿಂತ ಇಷ್ಟವಾದುದು ಸರ್.
ಪ್ರಧಾನ ಮಂತ್ರಿ : ವಾವ್!
ಅಖಿಲ್ : ಇದು ನನ್ನನ್ನು ಜವಾಬ್ದಾರಿಯುತ ನಾಗರಿಕನನ್ನಾಗಿಸಿದೆ ಸರ್. ಎನ್ ಸಿ ಸಿ ಕೆಡೆಟ್ ಡ್ರಿಲ್ ಮತ್ತು ಸಮವಸ್ತ್ರ ನನಗೆ ಬಹಳ ಇಷ್ಟ.
ಪ್ರಧಾನ ಮಂತ್ರಿ : ಎಷ್ಟು ಕ್ಯಾಂಪ್ಗಳಲ್ಲಿ ಭಾಗವಹಿಸುವ, ಎಲ್ಲೆಲ್ಲಿ ಹೋಗುವ ಅವಕಾಶ ಲಭಿಸಿತು?
ಅಖಿಲ್ : ಸರ್. ನಾನು 3 ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ನಾನು ಇತ್ತೀಚೆಗೆ ಡೆಹರಾಡೂನ್ ನಲ್ಲಿ ಭಾರತೀಯ ಸೇನಾ ಅಕಾಡೆಮಿಯ ಅಟ್ಯಾಚ್ಮೆಂಟ್ ಕ್ಯಾಂಪ್ನಲ್ಲಿ ಭಾಗವಹಿಸಿದ್ದೆ.
ಪ್ರಧಾನ ಮಂತ್ರಿ : ಎಷ್ಟು ಸಮಯದ್ದಾಗಿತ್ತು?
ಅಖಿಲ್ : ಸರ್. ಅದು 13 ದಿನಗಳ ಶಿಬಿರವಾಗಿತ್ತು.
ಪ್ರಧಾನ ಮಂತ್ರಿ : ಹೌದಾ…
ಅಖಿಲ್ : ಸರ್. ನಾನು ಅಲ್ಲಿ ಭಾರತೀಯ ಸೇನೆಯಲ್ಲಿ ಹೇಗೆ ಅಧಿಕಾರಿಗಳಾಗಬಹುದು ಎಂಬುದನ್ನು ಬಹಳ ಹತ್ತಿರದಿಂದ ಕಂಡೆ ಮತ್ತು ತದನಂತರ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗುವ ನನ್ನ ಸಂಕಲ್ಪ ಮತ್ತಷ್ಟು ದೃಢವಾಯಿತು ಸರ್.
ಪ್ರಧಾನ ಮಂತ್ರಿ : ವಾವ್!
ಅಖಿಲ್ : ಮತ್ತೆ ಸರ್. ಗಣರಾಜ್ಯೋತ್ಸವ ಪಥ ಸಂಚಲನದಲ್ಲೂ ನಾನು ಭಾಗವಹಿಸಿದ್ದೆ ಮತ್ತು ಅದು ನನಗೂ ಹಾಗೂ ನನ್ನ ಕುಟುಂಬದವರಿಗೂ ಬಹಳ ಹೆಮ್ಮೆಯ ವಿಷಯವೆನಿಸಿದೆ.
ಪ್ರಧಾನ ಮಂತ್ರಿ : ಶಭಾಷ್!
ಅಖಿಲ್ : ನನಗಿಂತಲೂ ಹೆಚ್ಚು ನನ್ನ ತಾಯಿಗೆ ಸಂತೋಷವಾಗಿತ್ತು ಸರ್. ನಾವು ಬೆಳ್ಳಗ್ಗೆ 2 ಗಂಟೆಗೆ ಎದ್ದು ರಾಜ್ಪಥ್ ನಲ್ಲಿ ಅಭ್ಯಾಸ ಮಾಡಲು ಹೋಗುತ್ತಿದ್ದೆವು. ನಮ್ಮಲ್ಲಿ ಎಷ್ಟು ಹುಮ್ಮಸ್ಸು ಇತ್ತೆಂದರೆ, ಅದನ್ನು ಕಣ್ಣಾರೆ ನೊಡಲೇ ಬೇಕು ಸರ್. ಇತರ ಪಡೆಗಳು ನಮ್ಮನ್ನು ಎಷ್ಟು ಹುರಿದುಂಬಿಸುತ್ತಿದ್ದರು ಎಂದರೆ, ರಾಜ್ಪಥ್ ನಲ್ಲಿ, ಪಥ ಸಂಚಲನ ಮಾಡುವಾಗ ನಮಗೆ ಬಹಳ ರೋಮಾಂಚನವಾಗುತ್ತಿತ್ತು.
ಪ್ರಧಾನ ಮಂತ್ರಿ : ಎನ್ ಸಿ ಸಿ ದಿನದಂದು ನೀವು ನಾಲ್ಕೂ ಜನರೊಂದಿಗೆ ಮಾತನಾಡುವ ಅವಕಾಶ ಲಭಿಸಿತು. ನನಗೆ ಇದು ಬಹಳ ಸಂತೋಷದ ವಿಷಯವಾಗಿದೆ. ಏಕೆಂದರೆ, ನಾನೂ ಬಾಲ್ಯದಲ್ಲಿ ನನ್ನ ಗ್ರಾಮದ ಶಾಲೆಯಲ್ಲಿ ಎನ್ ಸಿ ಸಿ ಕೆಡೆಟ್ ಆಗಿದ್ದೆ. ಆದ್ದರಿಂದ, ಈ ಶಿಸ್ತು, ಈ ಸಮವಸ್ತ್ರ, ಅದರಿಂದಾಗಿ ವೃದ್ಧಿಸುವ ಆತ್ಮ ವಿಶ್ವಾಸದ ಮಟ್ಟ, ಇವೆಲ್ಲ ವಿಷಯಗಳೂ ಬಾಲ್ಯದಲ್ಲಿ ನನಗೂ ಎನ್ ಸಿ ಸಿ ಕೆಡೆಟ್ ರೂಪದಲ್ಲಿ ಅನುಭವಿಸುವ ಅವಕಾಶ ದೊರೆತಿತ್ತು.
ವಿನೋಲೆ : ಪ್ರಧಾನ ಮಂತ್ರಿಗಳೇ ನನ್ನದೊಂದು ಪ್ರಶ್ನೆ ಇದೆ.
ಪ್ರಧಾನ ಮಂತ್ರಿ : ಹಾಂ. ಹೇಳಿ. . .
ತರನ್ನುಮ್ : ನೀವೂ ಎನ್ ಸಿ ಸಿ ಯ ಒಂದು ಭಾಗವಾಗಿದ್ದಿರಿ ಎಂದು
ಪ್ರಧಾನ ಮಂತ್ರಿ : ಯಾರು? ವಿನೋಲೆ ಮಾತನಾಡುತ್ತಿದ್ದೀರಾ?
ವಿನೋಲೆ : ಹೌದು ಸರ್.. ಹೌದು ಸರ್ …
ಪ್ರಧಾನ ಮಂತ್ರಿ : ಹಾಂ ವಿನೋಲೆ ಹೇಳಿ. . .
ವಿನೋಲೆ : ನಿಮಗೆ ಎಂದಾದರೂ ಪನಿಶ್ಮೆಂಟ್ ಸಿಕ್ಕಿತ್ತೇ?
ಪ್ರಧಾನ ಮಂತ್ರಿ : (ನಗುತ್ತಾ) ಇದರರ್ಥ ನಿಮಗೆ ಪನಿಶ್ಮೆಂಟ್ ಸಿಗುತ್ತೆ ಎಂದಾಯಿತು
ವಿನೋಲೆ : ಹೌದು ಸರ್.
ಪ್ರಧಾನ ಮಂತ್ರಿ : ಇಲ್ಲ. ನನಗೆ ಹೀಗೆಂದೂ ಆಗಲಿಲ್ಲ. ಏಕೆಂದರೆ, ನಾನು ಬಹಳ, ಒಂದು ರೀತಿಯಲ್ಲಿ ಶಿಸ್ತನ್ನು ಪಾಲಿಸುವವನಾಗಿದ್ದೆ. ಆದರೆ, ಒಂದು ಬಾರಿ ಖಂಡಿತ ತಪ್ಪು ಕಲ್ಪನೆ ಆಗಿತ್ತು. ನಾವು ಶಿಬಿರದಲ್ಲಿದ್ದಾಗ ಒಂದು ಮರದ ಮೇಲೆ ಹತ್ತಿದ್ದೆ. ಆರಂಭದಲ್ಲಿ ಎಲ್ಲರಿಗೂ ನಾನು ಕಾನೂನನ್ನು ಮುರಿದಿದ್ದೇನೆ ಎನ್ನಿಸಿತ್ತು. ನಂತರ ಅಲ್ಲಿ ಒಂದು ಗಾಳಿ ಪಟದ ಸೂತ್ರದಲ್ಲಿ ಪಕ್ಷಿ ಸಿಲುಕಿಕೊಂಡಿರುವುದು ಎಲ್ಲರ ಗಮನಕ್ಕೆ ಬಂತು ಹಾಗಾಗಿ ಅದನ್ನು ರಕ್ಷಿಸಲು ನಾನು ಮರ ಹತ್ತಿದ್ದೆ. ಇರಲಿ ಮೊದಲು ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಅನ್ನಿಸಿತ್ತು. ಆದರೆ, ನಂತರ ಬಹಳಷ್ಟು ನನ್ನನ್ನು ಪ್ರಶಂಸಿಸಲಾಯಿತು. ಹೀಗೆ ನನಗೆ ಬೇರೆಯದೇ ರೀತಿಯ ಅನುಭವವಾಯಿತು.
ತರನ್ನುಮ್ ಖಾನ್ : ಸರ್. ಇದನ್ನು ಕೇಳಿ ನಮಗೆ ಬಹಳ ಸಂತೋಷವಾಯಿತು.
ಪ್ರಧಾನ ಮಂತ್ರಿ : ಧನ್ಯವಾದಗಳು
ತರನ್ನುಮ್ ಖಾನ್ : ನಾನು ತರನ್ನುಮ್ ಮಾತನಾಡುತ್ತಿದ್ದೇನೆ.
ಪ್ರಧಾನ ಮಂತ್ರಿ : ಹಾಂ. ತರನ್ನುಮ್ ಹೇಳಿ
ತರನ್ನುಮ್ ಖಾನ್ : ನೀವು ಅನುಮತಿ ನೀಡಿದರೆ, ನಿಮಗೆ ಒಂದು ಪ್ರಶ್ನೆ ಕೇಳ ಬಯಸುತ್ತೇನೆ ಸಾರ್
ಪ್ರಧಾನ ಮಂತ್ರಿ : ಹಾಂ ಹಾಂ . . ಹೇಳಿ
ತರನ್ನುಮ್ ಖಾನ್ : ಸರ್. ನೀವು ನಿಮ್ಮ ಸಂದೇಶಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೆ 3 ವರ್ಷಗಳಲ್ಲಿ 15 ಸ್ಥಳಗಳಿಗೆ ಭೇಟಿ ನೀಡಲೇಬೇಕು ಎಂದು ಹೇಳಿದ್ದೀರಿ. ನಾವು ಎಲ್ಲಿ ಹೋಗಬೇಕು ಎಂದು ನಮಗೆ ಹೇಳಬಹುದೇ? ಮತ್ತು ನಿಮಗೆ ಯಾವ ಸ್ಥಳಕ್ಕೆ ಹೋದಾಗ ಬಹಳ ಇಷ್ಟವಾದ ಅನುಭವವಾಗಿತ್ತು?
ಪ್ರಧಾನ ಮಂತ್ರಿ : ಹಾಗೆ ನಾನು ಯಾವಾಗಲೂ ಹಿಮಾಲಯವನ್ನು ಬಹಳ ಇಷ್ಟ ಪಡುತ್ತಿರುತ್ತೇನೆ.
ತರನ್ನುಮ್ ಖಾನ್ : ಸರ್ . . .
ಪ್ರಧಾನ ಮಂತ್ರಿ : ಆದರೂ ನಿಮಗೆ ಪ್ರಕೃತಿಯ ಬಗ್ಗೆ ಪ್ರೀತಿಯಿದೆ ಎಂದಾದಲ್ಲಿ ನಾನು ಭಾರತೀಯ ಜನತೆಗೆ ಆಗ್ರಹಿಸುತ್ತೇನೆ.
ತರನ್ನುಮ್ ಖಾನ್ : ಸರ್
ಪ್ರಧಾನ ಮಂತ್ರಿ : ದಟ್ಟ ಕಾಡು, ತೊರೆ ಝರಿಗಳು, ಒಂದು ವಿಭಿನ್ನ ವಾತಾವರಣವನ್ನು ನೋಡಬೇಕು ಎಂದಲ್ಲಿ ಖಂಡಿತಾ ಈಶಾನ್ಯ ಭಾಗಕ್ಕೆ ಭೇಟಿ ನೀಡಿ ಎಂದು ಎಲ್ಲರಿಗೂ ಹೇಳ ಬಯಸುತ್ತೇನೆ.
ತರನ್ನುಮ್ ಖಾನ್ : ಹಾಂ ಸರ್
ಪ್ರಧಾನ ಮಂತ್ರಿ : ಇದನ್ನು ನಾನು ಯಾವಾಗಲೂ ಹೇಳುತ್ತೇನೆ ಮತ್ತು ಇದರಿಂದಾಗಿ ಈಶಾನ್ಯ ಭಾಗದಲ್ಲಿ ಪ್ರವಾಸೋದ್ಯಮವೂ ಬಹಳ ವೃದ್ಧಿಸುವುದು ಆರ್ಥಿಕತೆಗೂ ಸಾಕಷ್ಟು ಲಾಭವಾಗುವುದು ಮತ್ತು ‘ಏಕ್ ಭಾರತ್ – ಶ್ರೇಷ್ಠ್ ಭಾರತ್’ ನ ಕನಸಿಗೂ ಅಲ್ಲಿ ಪುಷ್ಠಿ ದೊರೆಯುವುದು.
ತರನ್ನುಮ್ ಖಾನ್ : ಹೌದು ಸರ್
ಪ್ರಧಾನ ಮಂತ್ರಿ : ಆದರೆ ಭಾರತದಲ್ಲಿ ಪ್ರತಿಯೊಂದು ಸ್ಥಳದಲ್ಲೂ ಬಹಳಷ್ಟು ನೋಡುವಂಥದ್ದು ಇದೆ. ಅಧ್ಯಯನ ಮಾಡುವಂಥದಿದೆ ಮತ್ತು ಒಂದು ರೀತಿಯಲ್ಲಿ ಆತ್ಮವನ್ನು ಪರಿಶುದ್ಧಗೊಳಿಸುವಂತಿದೆ.
ಶ್ರೀಹರಿ ಜಿ ವಿ : ಪ್ರಧಾನ ಮಂತ್ರಿ ಅವರೇ ನಾನು ಶ್ರೀ ಹರಿ ಮಾತನಾಡುತ್ತಿದ್ದೇನೆ
ಪ್ರಧಾನ ಮಂತ್ರಿ : ಹರಿ ಅವರೇ ಹೇಳಿ
ಶ್ರೀಹರಿ ಜಿ ವಿ : ನೀವು ಒಬ್ಬ ರಾಜಕಾರಣಿ ಆಗಿರದೇ ಹೋದಲ್ಲಿ ಏನಾಗುತ್ತಿದ್ದಿರಿ ಎಂದು ನಿಮ್ಮಿಂದ ತಿಳಿಯ ಬಯಸುತ್ತೇನೆ
ಪ್ರಧಾನ ಮಂತ್ರಿ : ಇದು ಬಹಳ ಕಠಿಣವಾದ ಪ್ರಶ್ನೆ. ಏಕೆಂದರೆ, ಪ್ರತಿ ಮಗುವಿನ ಜೀವನದಲ್ಲೂ ಎಷ್ಟೋ ತಿರುವುಗಳು ಬರುತ್ತವೆ. ಕೆಲವೊಮ್ಮೆ ಇದಾಗಬೇಕೆಂದು ಬಯಸುತ್ತಾನೆ, ಕೆಲವೊಮ್ಮೆ ಅದಾಗಬೇಕೆಂದು ಬಯಸುತ್ತಾನೆ. ಆದರೆ, ಒಂದಂತೂ ನಿಜ ನನಗೆ ಎಂದಿಗೂ ರಾಜಕೀಯ ಪ್ರವೇಶಿಸುವ ಮನಸ್ಸಿರಲಿಲ್ಲ, ಎಂದೂ ಆಲೋಚಿಸಿರಲಿಲ್ಲ. ಆದರೆ, ಇಂದು ಇಲ್ಲಿಗೆ ತಲುಪಿದ್ದೇನೆ. ಆದ್ದರಿಂದ ತನು ಮನ ದಿಂದ ದೇಶಕ್ಕೆ ಉಪಯುಕ್ತವಾಗಬಯಸುತ್ತೇನೆ. ಅದಕ್ಕಾಗಿ ಆಲೋಚಿಸುತ್ತಿರುತ್ತೇನೆ. ಹಾಗಾಗಿ ಈಗ ನಾನು ‘ಇಲ್ಲಿರದಿದ್ದರೆ ಎಲ್ಲಿರುತ್ತಿದ್ದೆ’ ಎಂಬ ಬಗ್ಗೆ ಯೋಚಿಸಲಾರೆ. ಈಗಂತೂ ಎಲ್ಲಿದ್ದೇನೆಯೋ ಅಲ್ಲಿಯೇ ಮನಃಪೂರ್ವಕವಾಗಿ ಜೀವಿಸಬೇಕು, ಮನಃಪೂರ್ವಕವಾಗಿ ಒಗ್ಗೂಡಬೇಕು ಮತ್ತು ಹುಮ್ಮಸ್ಸಿನಿಂದ ದೇಶಕ್ಕಾಗಿ ಕೆಲಸ ಮಾಡಬೇಕು. ಹಗಲು ರಾತ್ರಿ ಎಂದೆಣಿಸದೇ ಇದೊಂದೇ ಗುರಿಯೊಂದಿಗೆ ನನ್ನನ್ನು ನಾನು ಸಮರ್ಪಿಸಿದ್ದೇನೆ.
ಅಖಿಲ್ : ಪ್ರಧಾನ ಮಂತ್ರಿಯವರೇ
ಪ್ರಧಾನ ಮಂತ್ರಿ : ಹೇಳಿ
ಅಖಿಲ್ : ನೀವು ದಿನ ಪೂರ್ತಿ ಇಷ್ಟೊಂದು ಬ್ಯುಸಿಯಾಗಿರುತ್ತೀರಾದ್ದರಿಂದ ನಿಮಗೆ ಟಿವಿ ನೋಡಲು, ಚಲನಚಿತ್ರ ನೋಡಲು ಅಥವಾ ಪುಸ್ತಕ ಓದಲು ಸಮಯ ಸಿಗುತ್ತದೆಯೇ?
ಪ್ರಧಾನ ಮಂತ್ರಿ : ನನಗೆ ಪುಸ್ತಕ ಓದುವ ಹವ್ಯಾಸವಂತೂ ಇತ್ತು. ಚಲನಚಿತ್ರ ನೋಡುವ ಆಸಕ್ತಿ ಎಂದೂ ಇರಲಿಲ್ಲ. ಅದರಲ್ಲಿ ಸಮಯದ ಕಟ್ಟುಪಾಡಂತೂ ಇಲ್ಲ ಮತ್ತು ಅದರಂತೆ ಟಿವಿಯನ್ನು ನೋಡಲಾಗುವುದಿಲ್ಲ. ಬಹಳ ಕಡಿಮೆ. ಹಿಂದೆ ಒಮ್ಮೊಮ್ಮೆ ಕುತೂಹಲಕ್ಕಾಗಿ ಡಿಸ್ಕವರಿ ಚಾನೆಲ್ ನೋಡುತ್ತಿದ್ದೆ ಮತ್ತು ಪುಸ್ತಕಗಳನ್ನು ಓದುತ್ತಿದ್ದೆ. ಆದರೆ, ಈ ನಡುವೆ ಓದಲಾಗುತ್ತಿಲ್ಲ. ಮತ್ತೊಂದು ವಿಷಯ ಗೂಗಲ್ನಿಂದಾಗಿಯೂ ಅಭ್ಯಾಸಗಳು ಬಿಗಡಾಯಿಸಿವೆ. ಏಕೆಂದರೆ, ಏನಾದರೂ ರೆಫರೆನ್ಸ್ ನೋಡಬೇಕೆಂದಲ್ಲಿ ಕೂಡಲೇ ಶಾರ್ಟ ಕಟ್ ಹುಡುಕಿಕೊಳ್ಳುತ್ತೇವೆ. ಹೇಗೆ ಕೆಲ ಅಭ್ಯಾಸಗಳು ಎಲ್ಲರಲ್ಲೂ ಬಿಗಡಾಯಿಸಿವೆಯೋ, ಹಾಗೇ ನನ್ನಲ್ಲೂ ಬಿಗಡಾಯಿಸಿವೆ. ಸ್ನೇಹಿತರೇ ನಿಮ್ಮೆಲ್ಲರೊಂದಿಗೆ ಮಾತನಾಡಿದ್ದು ನನಗೆ ಸಂತೋಷವೆನಿಸಿದೆ ಮತ್ತು ನಿಮ್ಮ ಮೂಲಕ ನಾನು ಎಲ್ಲ ಎನ್ ಸಿ ಸಿ ಕೆಡೆಟ್ಸ್ಗಳಿಗೆ ಅನಂತ ಅನಂತ ಶುಭಾಷಯ ಕೋರುತ್ತೇನೆ. ಧನ್ಯವಾದಗಳು ಸ್ನೇಹಿತರೇ. ಥ್ಯಾಂಕ್ಯೂ.
ಎಲ್ಲ ಎನ್ ಸಿ ಸಿ ಕೆಡೆಟ್ಸ್ ಗಳು : ಅನಂತ ಅನಂತ ಧನ್ಯವಾದಗಳು ಸರ್. ಥ್ಯಾಂಕ್ಯೂ.
ಪ್ರಧಾನ ಮಂತ್ರಿ : ಥ್ಯಾಂಕ್ಯೂ. ಥ್ಯಾಂಕ್ಯೂ.
ಎಲ್ಲ ಎನ್ ಸಿ ಸಿ ಕೆಡೆಟ್ಸ್ ಗಳು : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್
ಎಲ್ಲ ಎನ್ ಸಿ ಸಿ ಕೆಡೆಟ್ಸ್ ಗಳು : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್, ಜೈ ಹಿಂದ್.
ನನ್ನ ಪ್ರೀತಿಯ ದೇಶಬಾಂಧವರೆ, ಡಿಸೆಂಬರ್ 7 ನೇ ತಾರೀಖು ಂಡಿmeಜ ಈoಡಿಛಿes ಈಟಚಿg ಆಚಿಥಿ ಆಚರಿಸಲಾಗುತ್ತಿದೆ ಎಂಬುದನ್ನು ದೇಶವಾಸಿಗಳಾದ ನಾವು ಎಂದೂ ಮರೆಯಕೂಡದು. ಈ ದಿನ ನಾವು ನಮ್ಮ ವೀರ ಸೈನಿಕರನ್ನು, ಅವರ ಪರಾಕ್ರಮವನ್ನು, ಅವರ ಬಲಿದಾನವನ್ನು ನೆನಪಿಸಿಕೊಳ್ಳುತ್ತೇವೆ ಜೊತೆಗೆ ಕೊಡುಗೆಯನ್ನೂ ನೀಡುತ್ತೇವೆ. ಕೇವಲ ಸನ್ಮಾನದ ಭಾವನೆಯಿದ್ದರಷ್ಟೇ ಸಾಲದು ಸಹಭಾಗಿತ್ವವೂ ಅವಶ್ಯಕವಾಗಿದೆ. ಡಿಶೆಂಬರ್ 7 ರಂದು ಪ್ರತಿಯೊಬ್ಬ ನಾಗರಿಕರೂ ಮುಂದೆ ಬರಬೇಕು. ಪ್ರತಿಯೊಬ್ಬರ ಹತ್ತಿರ ಆ ದಿನ ಂಡಿmeಜ ಈoಡಿಛಿes ನ ಫ್ಲ್ಯಾಗ ಇರಲೇ ಬೇಕು ಮತ್ತು ಇದರಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇರಬೇಕು. ಬನ್ನಿ, ಈ ಸಂದರ್ಭದಲ್ಲಿ ನಾವಿ ನಮ್ಮ ಂಡಿmeಜ ಈoಡಿಛಿes ನ ಅದಮ್ಯ ಸಾಹಸ, ಶೌರ್ಯ ಮತ್ತು ಸಮರ್ಪಣ ಭಾವಕ್ಕೆ ಕೃತಜ್ಞತೆಯನ್ನು ಹೇಳೋಣ ಮತ್ತು ವೀರ ಸೈನಿಕರನ್ನು ಸ್ಮರಿಸೋಣ.
ನನ್ನ ಪ್ರೀತಿಯ ದೇಶಬಾಂಧವರೆ, ಭಾರತದಲ್ಲಿ ಫಿಟ್ ಇಂಡಿಯಾ ಮೂವ್ಮೆಂಟ್ ನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಈ ಸಂದರ್ಭದಲ್ಲಿ ಸಿ ಬಿ ಎಸ್ ಇ (ಅಃSಇ) ಯು ಒಂದು ಉತ್ತಮ ಹೆಜ್ಜೆಯನ್ನಿಟ್ಟಿದೆ. ಫಿಟ್ ಇಂಡಿಯಾ ಸಪ್ತಾಹವನ್ನು ಆಚರಿಸಲಾಯಿತು. ಶಾಲೆಗಳಲ್ಲಿ ಫಿಟ್ ಇಂಡಿಯಾ ಸಪ್ತಾಹವನ್ನು ಡಿಶೆಂಬರ್ ತಿಂಗಳಲ್ಲಿ ಯಾವಾಗಲಾದರೂ ಆಚರಿಸಬಹುದಾಗಿದೆ. ಇದರಲ್ಲಿ ಫಿಟ್ನೆಸ್ ಗೆ ಸಂಬಂಧಪಟ್ಟಂತೆ ಹಲವುಉ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಅವುಗಳಲ್ಲಿ ಕ್ವಿಜ್, ನಿಬಂಧ, ಲೇಖನ, ಡ್ರಾಯಿಂಗ್, ಪಾರಂಪರಿ ಮತ್ತು ಸ್ಥಳೀಯ ಕ್ರೀಡೆಗಳು, ಯೋಗಾಸನ, ಡಾನ್ಸ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳು ಒಳಗೊಂಡಿವೆ. ಫಿತ್ ಇಂಡಿಯಾ ಸಪ್ತಾಹದಲ್ಲಿ ವಿದ್ಯಾರ್ಥಿಗಳ ಜೊತೆಜೊತೆಗೆ ಅವರ ಶಿಕ್ಷಕರು ಹಾಗೂ ಪೋಷಕರೂ ಭಾಗವಹಿಸಬಹುದಾಗಿದೆ. ಆದರೆ ಇದನ್ನು ಮರೆಯಬೇಡಿ ಫಿಟ್ ಇಂಡಿಯಾ ಅಂದರೆ ಕೇವಲ ಮೆದುಳಿವ ಅಭ್ಯಾಸ, ಕಾಗದದ ಅಭ್ಯಾಸ ಇಲ್ಲವೆ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಇಲ್ಲವೆ ಮೊಬೈಲ್ ಫೋನ್ ನಲ್ಲಿ ಫಿಟ್ನೆಸ್ ಯ್ಯಾಪ್ ನೋಡುತ್ತ ಕೂಡುವುದಲ್ಲ. ಅದಲ್ಲ, ಇಲ್ಲಿ ಬೆವರು ಹರಿಸಬೇಕು. ಊಟದ ಪದ್ಧತಿ ಬದಲಾಗಬೇಕು. ಹೆಚ್ಚು ಹೆಚ್ಚು ಕಾರ್ಯಚಟುವಟಿಕೆಗಳನ್ನು ಮಾಡುವುದರತ್ತ ಗಮನ ಹರಿಸಬೇಕು. ನಾನು ದೇಶದ ಎಲ್ಲ ರಾಜ್ಯಗಳ ಸ್ಕೂಲ್ ಬೋರ್ಡಗಳು ಮತ್ತು ಸ್ಕೂಲ್ ವ್ಯವಸ್ಥಾಪಕರುಗಳಿಗೆ ಮನವಿ ಮಾಡುವುದೇನಂದರೆ ಸ್ಕೂಲುಗಳಲ್ಲಿ ಡಿಶೆಂಬರ್ ತಿಂಗಳಲ್ಲಿ ಫಿಟ್ ಇಂಡಿಯಾ ಸಪ್ತಾಹವನ್ನು ಆಚರಣೆಗೆ ತನ್ನಿರಿ. ಇದರಿಂದ ಫಿಟ್ನೆಸ್ ಎನ್ನುವುದು ನಮ್ಮ ದೈನಂದಿನ ಕಾರ್ಯಚಟುವಟಿಕೆಯಾಗುತ್ತದೆ. ಫಿಟ್ನೆಸ್ ಇಂಡಿಯಾ ಮೂವ್ಮೆಂಟ್ ನಲ್ಲಿ ಫಿಟ್ನೆಸ್ ಗೆ ಸಂಬಂಧಿಸಿದಂತೆ ಸ್ಕೂಲುಗಳ ರ್ಯಾಂಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ರ್ಯಾಂಕಿಂಗ್ ಪಡೆಯುವ ಎಲ್ಲ ಸ್ಕೂಲುಗಳು ಫಿಟ್ ಇಂಡಿಯಾ ಲೋಗೊ ಮತ್ತು ಪ್ಲ್ಯಾಗ್ಗಳ ಬಳಕೆಯನ್ನು ಮಾಡಲು ಅರ್ಹರಾಗುತ್ತಾರೆ. ಫಿಟ್ ಇಂಡಿಯಾ ಪೋರ್ಟಲ್ಗೆ ಹೋಗಿ ಸ್ಕೂಲುಗಳು ಸ್ವತ: ತಾವೇ ‘ಫಿಟ್’ ಎಂದು ಘೋಷಿಸಿಕೊಳ್ಳಬಹುದಾಗಿದೆ. ಫಿಟ್ ಇಂಡಿಯಾ ಥ್ರೀ ಸ್ಟಾರ್ ಹಾಗೂ ಫಿಟ್ ಇಂಡಿಯಾ ಫೈವ್ ಸ್ಟಾರ್ ರೇಟಿಂಗ್ ಕೂಡಾ ನೀಡಲಾಗುತ್ತದೆ. ಎಲ್ಲಾ ಸ್ಕೂಲುಗಳು ಈ ಫಿಟ್ ಇಂಡಿಯಾ ರ್ಯಾಂಕಿಂಗ್ ನಲ್ಲಿ ಭಾಗವಹಿಸಿ ಫಿಟ್ ಇಂಡಿಯಾ ಎಂಬುದು ಒಂದು ಸಹಜ ಸ್ವಭಾವವಾಗಲಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅದೊಂದು ಜನಾಂದೋಲನವಾಗಲಿ. ಜಾಗರೂಕತೆ ಬರಲಿ. ಇದಕ್ಕಾಗಿ ಶ್ರಮಿಸಬೇಕಾಗುತ್ತದೆ.
ನನ್ನ ಪ್ರೀತಿಯ ದೇಶಬಾಂಧವರೆ, ನಮ್ಮ ದೇಶ ಇಷ್ಟೊಂದು ವಿಶಾಲವಾಗಿದೆ. ಇಷ್ಟೊಂದು ವಿವಿಧತೆಯಿಂದ ಒಡಗೂಡಿದೆ. ಇಷ್ಟೊಂದು ಪುರಾತನವಾಗಿಯೆಂದರೆ ಹಲವಾರು ಸಂಗತಿಗಳು ನಮ್ಮ ಗಮನಕ್ಕೇ ಬರುವುದಿಲ್ಲ ಮತ್ತು ಸ್ವಾಭಾವಿಕವಾಗಿ ನಡೆದು ಹೋಗುತ್ತವೆ. ಅಂತಹ ‘ಮಾಯ್ ಗೌ’ ನಲ್ಲಿ ಒಂದು ಕಮೆಂಟ್ ನನ್ನ ಗಮನ ಸಳೆಯಿತು. ಈ ಕಮೆಂಟ್ನ್ನು ಅಸಮ್ ರಾಜ್ಯದ ನೌಗಾಂವ್ ನ ಶ್ರೀ ರಮೇಶ್ ಶರ್ಮಾ ಅವರು ಬರೆದಿದ್ದರು. ಅವರು ಬರೆದಿದ್ದೇನಂದರೆ, ಬ್ರಹ್ಮ ಪುತ್ರ ನದಿ ಕುರಿತಂತೆ ಒಂದು ಉತ್ಸವ ನಡೆಯುತ್ತಿದೆ. ಅದರ ಹೆಸರು ಪ್ರಹ್ಮ ಪುತ್ರ ಪುಷ್ಕರ ಎಂದು. ನವಂಬರ್ ತಿಂಗಳು 4 ರಿಂದ 16 ರ ವರೆಗೆ ಈ ಉತ್ಸವ ನಡೆಯಿತು. ಈ ಬ್ರಹ್ಮ ಪುತ್ರ ಪುಷ್ಕರ ದಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಹಲವಾರು ಜನರು ಬಂದಿದ್ದರು. ಇದನ್ನು ಕೇಳಿದ ತಮಗೂ ಆಶ್ಚರ್ಯವಾಗಿತಬೇಕಲ್ಲವೆ.. ಹೌದು, ಇದೇ ಮಾತು ಹೇಳಬೇಕೆಂದಿದ್ದು, ಇದೊಂದು ಇಂತಹ ಮಹತ್ವಪೂರ್ಣ ಉತ್ಸವವಾಗಿದ್ದು ನಮ್ಮ ಪೂರ್ವಜರು ಇದನ್ನು ಹೇಗೆ ಇಚನೆ ಮಾಡಿದ್ದಾರೆಂದರೆ ಅದನ್ನು ಪೂರ್ಣ ಕೇಳಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಆದರೆ ದುರ್ಭಾಗ್ಯವೆಂದರೆ ಇದಕ್ಕೆ ಎಷ್ಟು ಪ್ರಚಾರ ಬೇಕಿತ್ತೋ, ಎಷ್ಟೋದು ದೇಶದ ಮೂಲೆ ಮೂಲೆ ತಲುಪಬೇಕಿತ್ತೋ ಅಷ್ಟು ಆಗುತ್ತಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಉತ್ಸವದ ಆಯೋಜನೆ ಒಂದು ರೀತಿಯಿಂದ ಒಂದು ದೇಶ-ಒಂದು ಸಂದೇಶ, ನಾವೆಲ್ಲ ಒಂದು ಎನ್ನುವ ಭಾವನೆ ಮತ್ತು ಶಕ್ತಿ ತುಂಬುವುದಾಗಿದೆ.
ರಮೇಶ್ ಅವರೇ ಮೊದಲು ನಿಮಗೆ ತುಂಬಾ ಧನ್ಯವಾದಗಳು ಯಾಕಂದರೆ ನೀವು ‘ಮನ್ ಕೀ ಬಾತ್’ ನ ಮಾದ್ಯಮದೊಂದಿಗೆ ದೇಶವಾಸಿಗಳೊಂದಿಗೆ ತಮ್ಮ ಈ ಮಾತುಗಳನ್ನು ಶೇರ್ ಮಾಡಲು ನಿಶ್ಚಯಿಸಿದ್ದೀರಿ. ನೀವು ಸಂಕಟವನ್ನೂ ವದಕ್ತಪಡಿಸಿದ್ದೀರಿ, ಇಂತಹ ಮಹಲ್ವಪೂರ್ಣ ವಿಷಯದ ವ್ಯಾಪಕ ಚರ್ಚೆಯಾಗುವುದಿಲ್ಲ ಮತ್ತು ಪ್ರಚಾರವೂ ನಡೆಯುವುದಿಲ್ಲ. ತಮ್ಮ ಸಂಕಟವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ದೇಶದ ಹೆಚ್ಚು ಜನತೆ ಈ ವಿಷಯ ತಿಳಿದಿಲ್ಲ. ಹೌದು, ಯಾರಾದರೂ ಇದಕ್ಕೆ ‘ಅಂತರರಾಷ್ಟ್ರೀಯ ನದಿ ಉತ್ಸವ’ ಎಂದು ಹೆಸರಿಸಿದ್ದರೆ, ಕೆಲ ವಿಶಿಷ್ಟ ಪದಗಳ ಬಳಕೆಯಾಗಿದ್ದರೆ ನಮ್ಮ ದೇಶದ ಕೆಲವರು ಅವಶ್ಯವಾಗಿ ಏನಾದರೊಂದು ಚರ್ಚೆಯಾಗುತ್ತಿತ್ತು ಮತ್ತು ಹಾಗೆಯೇ ಪ್ರಚಾರವೂ ಆಗುತ್ತಿತ್ತು.
ನನ್ನ ಪ್ರೀತಿಯ ದೇಶಬಾಂಧವರೆ, ಪುಷ್ಕರಮ್, ಪುಷ್ಕರಾಲ್, ಪುಷ್ಕರ: ಎಂಬ ಶಬ್ದಗಳನ್ನು ನೀವು ಎಂದಾದರೂ ಕೇಳಿದ್ದೀರಾ.. ತಿಳಿದಿದ್ದೀರಾ.. ಗೊತ್ತಿದೆಯಾ.. ಸದೇನೆಂದು ನಾನು ಹೇಳುತ್ತೇನೆ, ಇದೊಂದು ದೇಶದ ಹನ್ನೆರಡು ವಿವಿಧ ನದಿಗಳ ಬಗ್ಗೆ ಯಾವ ಉತ್ಸವಗಳ ಆಯೋಜನೆಯಾಗುತ್ತದೆಯೋ ಅವುಗಳ ಭಿನ್ನ-ಭಿನ್ನ ಹೆಸರುಗಳಾಗಿವೆ. ಪ್ರತಿ ವರ್ಷ ಒಂದು ನದಿಯ ಉತ್ಸವ ಅಂದರೆ ಆ ನದಿಯ ಸರದಿ ಹನ್ನೆರಡು ವರ್ಷಗಳ ನಂತರ ಬರುತ್ತದದೆ. ಈ ಉತ್ಸವ ದೇಶದ ವಿಭಿನ್ನ ಸ್ಥಳಗಳಲ್ಲಿರುವ ಹನ್ನೆರಡು ನದಿಗಳಲ್ಲಿ ನಡೆಯುತ್ತದೆ. ಯಾವಾಗಲೂ ನಡೆಯುತ್ತವೆ ಮತ್ತು ಕುಂಭಮೇಳದಂತೆ ಈ ಉತ್ಸವ ರಾಷ್ಟ್ರೀಯ ಏಕತೆಗೆ ಒತ್ತು ನೀಡುತ್ತವೆ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ದ ದರ್ಶನ ನೀಡುತ್ತವೆ. ‘ಪುಷ್ಕರಮ್’ ಈ ವಿಶಿಷ್ಟ ಉತ್ಸವದಿಂದ ನದಿಯ ಗೌರವ, ಜೀವನದಲ್ಲಿ ನದಿಯ ಮಹತ್ವ ಒಂದು ರೀತಿಯಲ್ಲಿ ಸಹಜವಾಗಿ ಜಾಗೃತಗೋಳ್ಳುತ್ತದೆ.
ನಮ್ಮ ಪೂರ್ವಜರು ಪೃಕೃತಿ, ಪರಿಸರ, ನಿರು, ಭೂಮಿ, ಕಾಡುಗಳಿಗೆ ಬಹಳ ಮಹತ್ವದ ಸ್ಥಾನ ನೀಡಿದ್ದಾರೆ. ಅವರು ನದಿಯ ಮಹತ್ವವನ್ನು ತಿಳಿದಿದ್ದರು ಮತ್ತು ಸಮಾಜದಲ್ಲ್ಕಿ ನದಿಗಳ ಬಗ್ಗೆ ಸಕಾರಾತ್ಮಕ ಭಾವ ಮೂಡಲು, ಒಂದು ಸಂಸ್ಕಾರ ಹೇಗೆ ಮೂಡಬೇಕು, ನದಿಗಳೊಂದಿಗೆ ಸಂಸ್ಕøತಿ, ಸಂಸ್ಕಾರಗಳ ಮತ್ತು ಸಮಾಜದ ಬೆಸುಗೆಯ ಪ್ರಯತ್ನ ನಿರಂತರ ಜಾರಿಯಲ್ಲಿದೆ. ವಿಶೇಷವೆಂದರೆ ಸಮಾಜವು ನದಿಯೊಂದಿಗೆ ಹಾಗೂ ತಮ್ಮ-ತಮ್ಮೊಂದಿಗೆಯೂ ಬೆಸುಗೊಂಡವು. ಕಳೆದ ವರ್ಷ ತಮಿಳುನಾಡಿನ ‘ತಾಮೀರ್ಬರನಿ’ ನದಿಯಲ್ಲಿ ಪುಷ್ಕರಮ್ ಆಯೋಜಿಸಲಾಗಿತ್ತು. ಈ ವರ್ಷ ಅದು ‘ಬ್ರಹ್ಮ ಪುತ್ರ’ ನದಿಯಲ್ಲಿ ಆಯೋಜಿಸಲಾಯಿತು. ಬರುವ ವರ್ಷ ಆಂಧ್ರಪ್ರದೇಶ್, ತೆಲಂಗಾಣಾ, ಕರ್ನಾಟಕ ದಲ್ಲಿ ಹರಿಯುವ ತುಂಗಭದ್ರ ನದಿಯಲ್ಲಿ ಆಯೋಜನೆಗೊಳ್ಳಲಿದೆ. ಒಂದು ರೀತಿಯಲ್ಲಿ ನೀವು ಈ ಹನ್ನೆರಡೂ ಸ್ಥಾನಗಳ ಯಾತ್ರೆಯನ್ನು ಒಂದು’ ಟೂರಿಷ್ಟ ಸರ್ಕೀಟ್’ ದಂತೆ ಮಾಡಬಹುದಾಗಿದೆ. ಇಲ್ಲಿ ನಾನು ‘ಆಸಾಮ್’ ನ ಜನತೆಯ ಉತ್ಸಾಹ ಹಾಗೂ ಆತಿಥ್ಯಗಳನ್ನು ಶ್ಲಾಘಿಸಬಯಸುತ್ತೇನೆ. ಇಡೀ ದೇಶದಾದ್ಯಂತ ಆಗಮಿಸಿದ ತೀರ್ಥಯಾತ್ರಿಗಳನ್ನು ಬಹಳ ಸುಂದರವಾಗಿ ಸತ್ಕರಿಸಿದ್ದಾರೆ. ಆಯೋಜಕರು ಸ್ವಚ್ಛತೆಯ ಬಗ್ಗೆಯೂ ಬಹಳ ಜಾಗರೂಕತೆಯನ್ನು ವಹಿಸಿದ್ದಾರೆ. ‘ಪ್ಲಾಸ್ಟಿಕ್ ಫ್ರೀ ಝೋನ್’ ಎಂಬುದನ್ನು ಪಾಲಿಸಿದ್ದಾರೆ. ಅಲ್ಲಲ್ಲಿ ‘ಬಾಯೋ ಟಾಯ್ಲೆಟ್’ ಗಳ ವದಯವಸ್ಥೆಯನ್ನು ಮಾಡಿದ್ದರು. ಸಾವಿರಾರು ವರ್ಷಗಳ ಹಿಂದಿನಿಂದ ನಮ್ಮ ಪೂರ್ವಜರು ನದಿಗಳ ಬಗ್ಗೆ ಇಂತಹ ಭಾವನೆಗಳನ್ನು ತಳೆಯಲು ಮಾಡಿದ ಪ್ರಯತ್ನಗಳು ನಮ್ಮ ಭಾವಿ ಪೀಳಿಗೆಯನ್ನು ಬೆಸೆಯುತ್ತದೆ ಎಂದು ಹೇಳಲು ನನಗೆ ಹರ್ಷವೆನಿಸುತ್ತದೆ. ಪೃಕೃತಿ, ಪರಿಸರ, ನಿರು, ಈ ಎಲ್ಲವುಗಳು ನಮ್ಮ ಪ್ರವಾಸದ ಅಂಗಗಳಾಗಲಿ, ಜೀವನದ ಅಂಗಗಳೂ ಅಗಲಿ.
ನನ್ನ ಪ್ರೀತಿಯ ದೇಶಬಾಂಧವರರೆ, ‘ನಮೊ ಯ್ಯಾಪ್’ ನಲ್ಲಿ ಮಧ್ಯಪ್ರದೇಶದಿಂದ ಮಗಳು ಶ್ವೇತಾ ಬರೆಯುತ್ತಾಳೆ- ಸರ್, ನಾನು 9ನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ, ನನ್ನ ಬೋರ್ಡ ಪರೀಕ್ಷೆಗಳಿಗೆ ಇನ್ನೂ ಒಂದು ವರ್ಷವಿದೆ ಆದರೆ ನಾನು ‘ಸ್ಟೂಡೆಂಟ್ಸ ಎಂಡ್ ಎಗ್ಜಾಮ್ ವರೀಜ್’ ವಿಷಯದ ಬಗ್ಗೆ ತಮ್ಮ ಮಾತುಗಳನ್ನು ಯಾವಾಗಲೂ ಕೇಳುತ್ತಿರುತ್ತೇನೆ. ನಾನು ಏಕೆ ತಮಗೆ ಬರೆಯುತ್ತಿದ್ದೇನೆಂದರೆ ಮುಂದಿನ ಪರೀಕ್ಷೆಗಳ ಬಗ್ಗೆ ಚರ್ಚೆ ಯಾವಾಗ ನಡೆಯುತ್ತದೆ ಎಂದು ತಾವು ಇನ್ನೂ ತಿಳಿಸಿಲ್ಲ. ದಯವಿಟ್ಟು ಇದನ್ನು ಆದಷ್ಟು ಬೇಗ ಮಾಡಿರಿ. ಸಾಧ್ಯವಾದರೆ ಇದನ್ನು ಬರುವ ಜನುವರಿಯಲ್ಲಿಯೇ ಆಯೋಜಿಸಿರಿ. ಬಂಧುಗಳೇ, ‘ಮನ್ ಕಿ ಬಾತ್’ ಬಗ್ಗೆ ನನಗೆ ಇದೇ ಮಾತು ಬಹಳ ಇಷ್ಟವಾಗುತ್ತದೆ. ನನ್ನ ಯುವ ಮಿತ್ರ, ನನಗೆ ಯಾವ ಅಧಿಕಾರ ಹಾಗೂ ಸ್ನೇಹದೊಂದಿಗೆ ದೂರು ನೀಡುತ್ತಾರೆ, ಆದೇಶ ನೀಡುತ್ತಾರೆ, ಸಲಹೆ ನೀಡುತ್ತಾರೆ- ಇದನ್ನು ಕಂಡು ನನಗೆ ಬಹಳ ಖುಷಿಯಾಗುತ್ತದೆ. ಶ್ವೇತಾ ಅವರೆ, ನೀವು ಬಹಳ ಸರಿಯಾದ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಪರೀಕ್ಷೆಗಳು ಬರುತ್ತಲಿವೆ, ಹಾಗಾದರೆ, ಪ್ರತಿ ವರ್ಷದಂತೆ ನಾವು ಪರೀಕ್ಷೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ತಮ್ಮ ಮಾತು ಸರಿಯಾಗಿದೆ. ಈ ಕಾರ್ಯಕ್ರಮವನ್ನು ಸ್ವಲ್ಪ ಮೊದಲೇ ಆಯೋಜಿಸುವ ಅವಶ್ಯಕತೆಯಿದೆ.
ಕಳೆದ ಕಾರ್ಯಕ್ರಮದ ನಂತರ ಹಲವಾರು ಜನರು ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿಸಲು ತಮ್ಮ ಸಲಹೆಗಳನ್ನೂ ನೀಡಿದ್ದಾರೆ. ಮತ್ತು ದೂರನ್ನೂ ನೀಡಿದ್ದಾರೆ ಏಕೆಂದರೆ ಕಳೆದ ಸಲ ತಡವಾಗಿ ಮಾಡಲಾಯಿತು, ಪರೀಕ್ಷೆಗಳು ಬಹಳ ಸಮೀಪವಿದ್ದವು. ಅಲ್ಲದೆ ಶ್ವೇತಾಳ ಸಲಹೆ ಸರಿಯಾಗಿಯೇ ಇದೆ, ನಾನಿದನ್ನು ಜನೇವರಿಯಲ್ಲಿಯೇ ಮಾಡಬೇಕು. ‘ಎಚ್ ಆರ್ ಡಿ ಮಿನಿಸ್ಟ್ರೀ’ ಮತ್ತು ‘ಮಾಯ್ ಗೌ’ ನ ಟೀಮ್ ಕೂಡಿಕೊಂಡು ಇದರ ಕಾರ್ಯ ಮಾಡುತ್ತಿದ್ದಾರೆ. ಈ ಸಲದ ಪರಿಕ್ಷೆಗಳ ಮೇಲಿನ ಚರ್ಚೆಯನ್ನು ಜನೇವರಿ ಯ ಆರಂಭದಲ್ಲಿ ಇಲ್ಲವೆ ಮಧ್ಯದಲ್ಲಿ ಮಾಡಲು ನಾನು ಪ್ರಯತ್ನಿಸಿತ್ತೇನೆ. ದೇಶದ ಎಲ್ಲ ವಿದ್ಯಾರ್ಥಿಗಳಲ್ಲಿ ಮತ್ತು ಬಂಧುಗಳಲ್ಲಿ ಎರಡು ಅವಕಾಶಗಳಿವೆ. ಮೊದಲನೆಯದು, ತಮ್ಮ ಶಾಲೆಯಲ್ಲಿಯೇ ಇದರ ಅಂಗವಾಗುವುದು. ಎರಡನೆಯದು, ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ದಿಲ್ಲಿಯ ಕಾರ್ಯಕ್ರಮಕ್ಕಾಗಿ ದೇಶದ ವಿದ್ಯಾರ್ಥಿಗಳಿಗಾಗಿ ‘ಮಾಯ್ ಗೌ’ ದ ಮುಖಾಂತರ ಆಯ್ಕೆಯನ್ನು ಮಾಡಲಾಗುವುದು. ಬಂಧುಗಳೆ, ನಾವೆಲ್ಲರು ಸೇರಿ ಪರೀಕ್ಷೆಯ ಭಯವನ್ನು ಓಡಿಸಬೇಕಿದೆ. ನನ್ನ ಯುವ ಮಿತ್ರರು ಪರೀಕ್ಷೆಯ ಸಮಯದಲ್ಲಿ ನಗು-ನಗುತ್ತ, ಆಡುತ್ತ ಕಾಣಬೇಕು. ಪೋಷಕರು ಒತ್ತಡದಿಂದ ಮುಕ್ತರಾಗಿರಬೇಕು. ಶಿಕ್ಷಕರು ಆತ್ಮವಿಶ್ವಾಸದಿಂದಿರಬೇಕು. ಇದೇ ಉದ್ದೇಶದೊಂದಿಗೆ ಕಳೆದ ಹಲವು ವರ್ಷಗಳಿಂದ ನಾವು ‘ಮನ್ ಕಿ ಬಾತ್’ ಮುಖೇನ ‘ಪರೀಕ್ಷೆಗಳ ಬಗ್ಗೆ ಚರ್ಚೆ, ‘ಟೌನ್ ಹಾಲ್’ ಮುಖೇನ ಪುನ: ‘ಎಗ್ಜಾಮ್ ವಾರಿಯರ್ಸ ಬುಕ್’ ನ ಸಹಾಯದೊಂದಿಗೆ ಸತತ ಪ್ರಯತ್ನಶೀಲರಾಗಿದ್ದೇವೆ. ಈ ಮಿಶನ್ ಅನ್ನು ದೇಶದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸೇರಿ ಒಂದು ಮಾರ್ಗ ನೀಡಿದ್ದಾರೆ ಅದಕ್ಕಾಗಿ ನಾನು ಅವರೆಲ್ಲರಿಗೆ ಆಭಾರಿಯಾಗಿದ್ದೇನೆ. ಮತ್ತು ಬರುವ ಪರೀಕ್ಷೆಯ ಚರ್ಚಾ ಕಾರ್ಯಕ್ರಮ ನಾವೆಲ್ಲರು ಸೇರಿ ಮಾಡೋಣ. ತಮ್ಮೆಲ್ಲರಿಗೂ ಆಮಂತ್ರಣವಿದೆ.
ಬಂಧುಗಳೆ, ಕಳೆದ ‘ಮನ್ ಕಿ ಬಾತ್’ ನಲ್ಲಿ ನಾವು 2010 ರಲ್ಲಿ ಅಯೋಧ್ಯಾ ವಿಷಯಕ್ಕೆ ಸಂಬಂಧ ಪಟ್ಟಂತೆ ಅಲಾಹಾಬಾದ್ ಹೈಕೋರ್ಟನ ತೀರ್ಪಿನ ಬಗ್ಗೆ ಚರ್ಚಿಸಿದ್ದೆವು ಮತ್ತು ಅಂದು ನಿರ್ಣಯ ಬರುವ ಮೊದಲು ಹಾಗೂ ನಿರ್ಣಯ ಬಂದ ಮೇಲೆಯೂ ದೇಶವು ಹೇಗೆ ಭ್ರಾತೃತ್ವ ಮೆರೆದು ಶಾಂತಿ ನೆಲೆಸಲು ಕಾರಣವಾಗಿತ್ತು ಎಂದು ನಾನು ಹೇಳಿದ್ದೆ. ಈ ಸಲವೂ ನವೆಎಂಬರ್ 9 ರಂದು ಸುಪ್ರೀಮ್ ಕೋರ್ಟ್ ನ ತೀರ್ಪು ಬಂದಾಗ 130 ಕೋಟಿ ಭಾರತೀಯರು ಮತ್ತೊಮ್ಮೆ ಇದನ್ನು ಸಾಬೀತುಪಡಿಸಿದ್ದಾರೆ. ಅದೆಂದರೆ ದೇಶದ ಹಿತಕ್ಕಿಂತ ಬೇರೊಂದಿಲ್ಲ. ದೇಶದಲ್ಲಿ ಶಾಂತಿ, ಏಕತೆ ಮತ್ತು ಸದ್ಭಾವನೆಗಳ ಮೌಲ್ಯ ಸರ್ವೋಪರಿಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಾಮ ಮಂದಿರದ ಬಗ್ಗೆ ನಿರ್ಣಯ ಬಂದ ಮೇಲೆ ಅದನ್ನು ಸಂಪೂರ್ಣ ದೇಶ ತೆರೆದ ಮನಸ್ಸಿನಿಂದ ಆಲಂಗಿಸಿದೆ. ಪೂರ್ಣ ಸರಳತೆ ಹಾಗೂ ಶಾಂತಿಯಿಂದ ಸ್ವೀಕರಿಸಿದ್ದಾರೆ. ಇಂದು ‘ಮನ್ಕಿ ಬಾತ್’ ನ ಮುಖೇನ ನಾನು ದೇಶಬಾಂಧವರನ್ನು ಕೃತಜ್ಞತೆ ಸಲ್ಲಿಸುವುದರೊಂದಿಗೆ ಧನ್ಯವಾದ ಹೇಳಬಯಸುತ್ತೇನೆ. ಅವರು ಧೈರ್ಯ, ಸಂಯಮ ಹಾಗೂ ಪರಿಪಕ್ವತೆಯನ್ನು ಹೇಗೆ ಪರಿಚಯಿಸಿದ್ದಾರೋ ಅದಕ್ಕಾಗಿ ಅವರಿಗೆ ನಾನು ವಿಶೇಷವಾಗಿ ಆಭಾರಿಯಾಗಿದ್ದೇನೆ. ಇನ್ನೊಂದು ಮಾತು, ಬಹಳ ದೀರ್ಘ ಕಾಲದಿಂದ ಕಾನೂನಿನ ಕಾದಾಟ ಸಮಾಪ್ತವಾಗಿದೆ ಮತ್ತು ಹಾಗೆಯೇ ನ್ಯಾಯಾಲಯದ ಬಗ್ಗೆ ದೇಶದ ಗೌರವ ಮತ್ತಷ್ಟು ಹೆಚ್ಚಾಗಿದೆ. ವಾಸ್ತವವಾಗಿ ಈ ನಿರ್ಣಯ ನಮ್ಮ ನ್ಯಾಯಾಲಯಕ್ಕೂ ಒಂದು ಮೈಲುಗಲ್ಲಾಗಿ ಸಾಬೀತಾಗಿದೆ. ಸರ್ವೋಚ್ಚ ನ್ಯಾಯಾಲಯದ ಈ ಐತಿಹಾಸಿಕ ನಿರ್ಣಯದ ಬಳಿಕ ಈಗ ದೇಶ ಹೊಸ ಆಶೆ ಮತ್ತು ಹೊಸ ಆಕಾಂಕ್ಷೆಗಳೊಂದಿಗೆ ಹೊಸ ಮಾರ್ಗದತ್ತ ಹೊಸ ಕನಸುಗಳನ್ನು ಹೊತ್ತು ಸಾಗುತ್ತಿದೆ. ‘ನ್ಯೂ ಇಂಡಿಯಾ’ ದ ಪರಿಕಲ್ಪನೆಯನ್ನು ಹೊತ್ತು ಶಾಂತಿ, ಏಕತೆ ಮತ್ತು ಸದ್ಭಾವನೆಗಳೊಂದಿಗೆ ಮುಂದೆ ಸಾಗಲಿ, ಇದೇ ನನ್ನ ಕಾಮನೆಯಾಗಿದೆ, ನಮ್ಮೆಲ್ಲರ ಕಾಮನೆಯಾಗಿದೆ.
ನನ್ನ ಪ್ರೀತಿಯ ದೇಶ ಬಾಂಧವರೆ, ನಮ್ಮ ಸಭ್ಯತೆ, ಸಂಸ್ಕøತಿ ಮತ್ತು ಭಾಷೆಗಳು ಇಡೀ ವಿಶ್ವಕ್ಕೆ ಅನೇಕತೆಯಲ್ಲಿ ಏಕತೆಯ ಸಂದೇಶವನ್ನು ನೀಡುತ್ತವೆ. 130 ಕೋಟಿ ಭಾರತಿಯರ ಈ ದೇಶಹೇಗಿದೆಯೆಂದರೆ (ಕೋಸ್ ಕೋಸ್ ಪರ್ ಪಾನಿ ಬದಲೆ ಚಾರ ಕೋಸ್ ಪರ್ ಬಾನಿ’) ‘ಗಾವುದ ದಾಟಿದರೆ ಬದಲಿ ನೀರು ಸಿಗುತ್ತದೆ, ನಾಲ್ಕು ಗಾವುದ ದಾಟಿದರೆ ಬದಲಿ ಭಾಷೆ ಇರುತ್ತದೆ’. ನಮ್ಮ ಭಾರತ ಭೂಮಿಯಲ್ಲಿ ನೂರಾರು ಭಾಷೆಗಳು ಶತಮಾನಗಳಿಂದ ಪುಷ್ಪಿತ ಪಲ್ಲವಿತಗೊಳ್ಳುತ್ತಲಿವೆ. ನಮಗೆ ಎಲ್ಲಿ ಈ ಭಾಷೆಗಳೂ ಮತ್ತು ಈ ಉಪಭಾಷೆಗಳು ಅಳಿದುಹೋಗುವವೋ ಎಂಬ ಒಂದು ಆತಂಕವಿದೆ. ಹಿಂದೆ ನನಗೆ ಉತ್ತರಾಖಂಡದ ಧಾರಚುಲಾ ದ ಕತೆ ಓದಲು ಸಿಕ್ಕಿತ್ತು. ನನಗೆ ಬಹಳ ಸಂತೊಷವಾಯಿತು. ಈ ಕತೆಯಿಂದ ತಿಳಿದುಬರುವುದೇನಂದರೆ ಯಾವ ರೀತಿ ಜನರು ತಮ್ಮ ಭಾಷೆಗಳನ್ನು ಅಭಿವೃದ್ಧಿಗೊಳಿಸಲು ಮುಂದೆ ಬರುತ್ತಿದ್ದಾರೆ. ಇವರು ಹೊಸ ವಿಚಾರಗಳನ್ನು ಮಾಡುತ್ತಿದ್ದಾರೆ. ಧಾರಚುಲಾ ಹೆಸರು ಕೇಳುತ್ತಲೇ ಅದರ ಬಗ್ಗೆ ತಿಳಿಯಲು ಉತ್ಸುಕನಾದೆ ಏಕೆಂದರೆ ಒಂದು ಕಾಲದಲ್ಲಿ ನಾನು ಅಲ್ಲಿ ಪ್ರಯಾಣ ಮಾಡುವಾಗ ಅಲ್ಲಿ ಉಳಿದುಕೊಳ್ಳುತ್ತಿದ್ದೆ. ಅತ್ತ ನೇಪಾಳ ಇತ್ತಕಾಲಿ ಗಂಗಾ ಹೀಗಾಗಿ ಧಾರಚುಲಾ ಹೆಸರು ಕೇಳುತ್ತಲೇ ಅದು ನನ್ನ ಗಮನ ಸೆಳೆಯಿತು. ಪಿಥೌರ್ಗಡ ದ ಧಾರಚುಲಾದಲ್ಲಿ ರಂಗ ಸಮುದಾಯದ ಬಹಳ ಜನರಿದ್ದಾರೆ. ಅವರ ಮಧ್ಯೆ ಬಳಕೆಯ ಭಾಷೆ ’ರಗಲೊ’ ಇದೆ. ಆ ಜನರು ಭಾಷೆಯ ಬಗ್ಗೆ ಮಾತು ಬಂದಾಗ ಬಹಳ ದುಃಖಿತರಾಗುತ್ತಾರೆ ಏಕೆಂದರೆ ಅದನ್ನು ಮಾತನಾಡುವ ಜನರು ದಿನ ಕಳೆದಂತೆ ಕಡಿಮೆಯಾಗುತ್ತಿದ್ದಾರೆ. ಅವರೇನು ಮಾಡಿದರು ಅಂದರೆ ಎಲ್ಲರು ಸೇರಿ ಒಮ್ಮೆ ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಸಂಕಲ್ಪ ಮಾಡಿದರು. ನೋಡು ನೋಡುತ್ತಲೇ ಈ ಅಭಿಯಾನದಲ್ಲಿ ‘ರಂಗ’ ಸಮುದಾಯದ ಜನರು ಸೇರುತ್ತ ಹೋದರು. ತಮಗೆ ಕೇಳಿದರೆ ಆಶ್ಚರ್ಯವಾಗಬಹುದು, ಈ ಸಮುದಾಯದ ಸಂಖ್ಯೆ ಎಣಿಕೆಗೆ ಸಿಗುವಷ್ಟು ಮಾತ್ರ ಇದೆ. ಹತ್ತು ಸಾವಿರ ಇರಬಹುದೇನೊ ಎಂದು ಒಂದು ಅಂದಾಜು ಮಾಡಬಹುದು. ಆದರೆ ‘ರಂಗ’ ಭಾóಷೆಯನ್ನು ಉಳಿಸಲು ಎಲ್ಲರು ಒಂದುಗೂಡಿದರು, ಅದು ಎಂಬತ್ನಾಲ್ಕರ ಹಿರಿಯ ವಯಸ್ಸಿನ ಅಜ್ಜನಾಗಿರಬಹುದು, ದೀವಾನಸಿಂಹನಾಗಿರಬಹುದು ಇಲ್ಲವೆ ಇಪ್ಪತ್ತೆರಡು ವರ್ಷದ ಯುವ ಪ್ರೊಫೆಸರ್ ವೈಶಾಲಿ ಗರ್ಬ್ಯಾಲ್ ಆಗಿರಬಹುದು, ಇಲ್ಲವೆ ವ್ಯಾಪಾರಿ ಸಮುದಾಯವಿರಬಹುದು. ಎಲ್ಲರೂ ಸರ್ವ ಪ್ರಯತ್ನದಲ್ಲಿ ತೊಡಗಿಕೊಂಡರು. ಈ ಅಭಿಯಾನದಲ್ಲಿ ಸಾಮಾಜಿಕ ಜಾಲತಾಣದ ಉಪಯೋಗವೂ ಸಾಕಷ್ಟು ಆಯಿತು. ಹಲವು ವಾಟ್ಸಪ್ ಗ್ರೂಪ್ಗಳು ಆದವು. ನೂರಾರು ಜನರು ಅದರಲ್ಲಿಯೂ ಸೇರಿದರು. ಈ ಭಾಷೆಗೆ ಯಾವುದೇ ಲಿಪಿಯಿಲ್ಲ. ಇದರ ಪ್ರಯೋಗ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಅದರಲ್ಲಿಯೇ ಜನರು ಕತೆ, ಕವಿತೆ ಇತ್ಯಾದಿ ಪೋಸ್ಟ್ ಮಾಡತೊಡಗಿದರು. ಒಬ್ಬರ ಭಾಷೆಯನ್ನು ಇನ್ನೊಬ್ಬರು ತಿದ್ದತೊಡಗಿದರು. ಒಂದು ರೀತಿಯಲ್ಲಿ ವಾಟ್ಸಪ್ ಗ್ರೂಪ್ ಒಂದು ಕ್ಲಾಸ್ ರೂಮಾಯಿತು. ಪ್ರತಿಯೊಬ್ಬರೂ ಶಿಕ್ಷಕರೂ ಹೌದು, ವಿದ್ಯಾರ್ಥಿಯೂ ಹೌದು. ರಂಗ ಲೋಕ ಈ ಉಪಭಾಷೆಯನ್ನು ಉಳಿಸುವ ಇಂತಹ ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪತ್ರಿಕೆ ಹೊರಡಿಸಲಾಗುತ್ತಿದೆ. ಇದರಲ್ಲಿ ಸಾಮಾಜಿಕ ಸಂಸ್ಥೆಗಳ ಸಹಾಯವೂ ಸಿಗುತ್ತಲಿದೆ.
ಬಂಧುಗಳೆ, ವಿಶೇಷವೆಂದರೆ ಸಂಯುಕ್ತ ರಾಷ್ಟ್ರ ಸಂಘವು 2019 ಅಂದರೆ ಪ್ರಸಕ್ತ ವರ್ಷವನ್ನು ‘’ಪ್ರಾದೇಶಿಕ ಭಾಷೆಗಳ ಅಂತರರಾಷ್ಟ್ರೀಯ ವರ್ಷ’’ ಎಂದು ಘೋಷಿಸಿದೆ. ಅಂದರೆ ಯಾವ ಭಾಷೆಗಳು ಅಳಿವಿನಂಚಿನಲ್ಲಿವೆಯೋ ಅವುಗಳನ್ನು ಸಂರಕ್ಷಿಸಲು ಒತ್ತು ನೀಡಲಾಗುತ್ತಿದೆ. ನೂರೈವತ್ತು ವರ್ಷಗಳ ಹಿಂದೆಯೇ ಆಧುನಿಕ ಹಿಂದಿಯ ಜನಕ ಭಾತತೆಂದು ಹರಿಶ್ಚಂದ್ರ ಹೀಗೆ ಹೇಳಿದ್ದರು-
ನಿಜ ಭಾಷಾ ಉನ್ನತಿ ಅಹೈ, ಸಬ್ ಉನ್ನತಿ ಕೊ ಮೂಲ,
ಬಿನ ನಿಜ ಭಾಷಾ ಜ್ಞಾನ ಕೆ, ಮಿಟತಾ ನ ಹಿಯ ಕೊ ಸೂಲ.
(ಮಾತೃ ಭಾಷೆಯ ಉನ್ನತಿಯಲ್ಲಿಯೇ, ಎಲ್ಲ ಉನ್ನತಿ ಯ ಮೂಲವಿದೆ)
ಅಂದರೆ, ಮಾತೃಭಾಷೆಯ ಜ್ಞಾನವಿಲ್ಲದಿದ್ದರೆ ಉನ್ನತಿ ಸಾಧ್ಯವಿಲ್ಲ. ಇಂತಹದ್ದರಲ್ಲಿ ‘ರಂಗ’ ಸಮುದಾಯದ ಈ ಒಂದು ಹೆಜ್ಜೆ ಇಡೀ ವಿಶ್ವಕ್ಕೇ ದಾರಿದೀಪವಾಗಿದೆ. ಒಂದು ವೇಳೆ ತಾವೂ ಈ ಕತೆಯಿಂದ ಪ್ರೇರಿತರಾಗಿದ್ದರೆ, ಇಂದಿನಿಂದಲೇ ಸ್ವತ: ನಿಮ್ಮ ಮಾತೃಭಾಷೆಯನ್ನು ಬಳಸಿರಿ. ಪರಿವಾರ ಮತ್ತು ಸಮಾಜವನ್ನೂ ಪ್ರೇರೆಪಿಸಿರಿ.
19 ನೇ ಶತಮಾನದ ಅಂತ್ಯದಲ್ಲಿ ಮಹಾಕವಿ ಸುಬ್ರಹ್ಮಣ್ಯಂ ಭಾರತಿಯವರು ಹೇಳಿದ್ದರು. ಅದೂ ತಮಿಳಿನಲ್ಲಿ ಹೇಳಿದ್ದರು. ಅದು ಕೂಡಾ ನಮಗೆ ಬಹಳ ಪ್ರೇರಣೆ ನೀಡುವಂಥದ್ದಾಗಿದೆ. ಸುಬ್ರಹ್ಮಣ್ಯಂ ಭಾರತಿಯವರು ತಮಿಳ್ ಭಾಷೆಯಲ್ಲಿ ಹೇಳಿದ್ದರು.
ಮುಪ್ಪದು ಕೋಡಿ ಮುಗಮುಡಯ್ಯಾಳ್
ಉಯಿರ್ ಮೊಯಿಂಬುರ್ ಓಂದ್ರುಡಯ್ಯಾಳ್
ಇವಳ್ ಸೆಪ್ಪು ಮೋಳಿ ಪದಿನೆಟ್ಟುಡೈಯ್ಯಾಳ್
ಎನಿರ್ ಸಿಂದನೈ ಓಂದ್ರುಡಯ್ಯಾಳ್
ಮತ್ತು ಆ ಸಮಯ 19 ನೇ ಶತಮಾನದ ಉತ್ತರಾರ್ಧದ ಅಂತ್ಯದ ಕುರಿತಾಗಿತ್ತು. ಅಲ್ಲದೆ ಭಾರತ ಮಾತೆಯ 30 ಕೋಟಿ ಮುಖಗಳಿವೆ ಆದರೆ ದೇಹವೊಂದೇ ಎಂದು ಅವರು ಹೇಳಿದ್ದಾರೆ. ಇಲ್ಲಿ 18 ಭಾಷೆಗಳನ್ನು ಮಾತಾಡುತ್ತಾರೆ ಆದರೆ ಆಲೋಚನೆ ಒಂದೇ.
ನನ್ನ ಪ್ರಿಯ ದೇಶವಾಸಿಗಳೇ, ಒಮ್ಮೊಮ್ಮೆ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳೂ ನಮಗೆ ಬಹುದೊಡ್ಡ ಸಂದೇಶ ನೀಡುತ್ತವೆ. ಈಗ ನೋಡಿ ಮಾಧ್ಯಮದಲ್ಲಿ ಸ್ಕೂಬಾ ಡೈವರ್ಗಳ ಬಗ್ಗೆ ಒಂದು ಕಥೆ ಓದುತ್ತಿದ್ದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ನೀಡುವಂಥ ಕಥೆಯಾಗಿದೆ. ವಿಶಾಖಪಟ್ಟಣದಲ್ಲಿ ಡೈವಿಂಗ್ ತರಬೇತಿ ನೀಡುವ ಸ್ಕೂಬಾ ಡೈವರ್ಸ್ ಒಂದು ದಿನ ಮಂಗಮರಿಪೇಟಾ ಬೀಚ್ ನಲ್ಲಿ ಸಮುದ್ರದಿಂದ ಹಿಂದಿರುಗುತ್ತಿದ್ದಾಗ ಸಮುದ್ರದಲ್ಲಿ ತೇಲುತ್ತಿದ್ದ ಕೆಲ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೀಲಗಳು ತಾಗುತ್ತಿದ್ದವು. ಇದನ್ನು ಸ್ವಚ್ಛಗೊಳಿಸುತ್ತಲೇ ವಿಷಯದ ಗಾಂಭೀರ್ಯ ಅವರಿಗೆ ಅರ್ಥವಾಯಿತು. ನಮ್ಮ ಸಮುದ್ರವನ್ನು ಒಂದಲ್ಲ ಒಂದು ರೀತಿಯಿಂದ ಕಸದಿಂದ ತುಂಬಿಸಲಾಗುತ್ತಿದೆ. ಕಳೆದ ಹಲವು ದಿನಗಳಿಂದ ಈ ಡೈವರ್ಸ್ ಸಮುದ್ರದಲ್ಲಿ, ದಡದ ಸುಮಾರು 100 ಮೀಟರ್ ದೂರ ಹೋಗುತ್ತಾರೆ ಆಳವಾದ ನೀರಿನಲ್ಲಿ ಮುಳುಗು ಹಾಕುತ್ತಾರೆ ಮತ್ತು ಅಲ್ಲಿರುವ ಕಸವನ್ನು ಹೊರತೆಗೆಯುತ್ತಾರೆ. ಅಲ್ಲದೇ 13 ದಿನಗಳಲ್ಲೇ ಅಂದರೆ 2 ವಾರಗಳೊಳಗೆ 4000 ಕಿಲೋದಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಅವರು ಹೊರತೆಗೆದಿದ್ದಾರೆ ಎಂದು ನನಗೆ ಹೇಳಲಾಗಿದೆ. ಈ ಸ್ಕೂಬಾ ಡೈವರ್ಸ್ ಗಳ ಪುಟ್ಟದೊಂದು ಆರಂಭ ಒಂದು ದೊಡ್ಡ ಆಂದೋಲನೆಯ ರೂಪ ತಾಳುತ್ತಿದೆ. ಈಗ ಇವರಿಗೆ ಸ್ಥಳೀಯರ ನೆರವೂ ಲಭಿಸುತ್ತಿದೆ. ಸುತ್ತ ಮುತ್ತಲ ಮೀನುಗಾರರೂ ಎಲ್ಲ ರೀತಿಯಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಈ ಸ್ಕೂಬಾ ಡೈವರ್ಸ್ರಿಂದ ಪ್ರೇರಿತರಾಗಿ ನಾವೆಲ್ಲರೂ ಕೂಡಾ ಕೇವಲ ನಮ್ಮ ನೆರೆಹೊರೆಯ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಸಂಕಲ್ಪಗೈದರೆ ಪ್ಲಾಸ್ಟಿಕ್ ಮುಕ್ತ ಭಾರತ ಸಂಪೂರ್ಣ ವಿಶ್ವಕ್ಕೆ ಒಂದು ಹೊಸ ನಿದರ್ಶನದಂತೆ ಹೊರಹೊಮ್ಮಬಹುದಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, 2 ದಿನಗಳ ನಂತರ 26 ನವೆಂಬರ್ ಇದೆ. ಇದು ಸಂಪೂರ್ಣ ದೇಶಕ್ಕೆ ಬಹಳ ವಿಶೇಷವಾದ ದಿನ. ನನ್ನ ಪ್ರಜಾಪ್ರಭುತ್ವಕ್ಕೆ ವಿಶೇಷವಾಗಿ ಮಹತ್ವಪೂರ್ಣವಾಗಿದೆ ಏಕೆಂದರೆ ಈ ದಿನವನ್ನು ನಾವು ಸಂವಿಧಾನ ದಿನವೆಂದು ಆಚರಿಸುತ್ತೇವೆ. ಈ ಬಾರಿಯ ಸಂವಿಧಾನ ದಿನ ಬಹಳ ವಿಶೇಷವಾದದ್ದಾಗಿದೆ. ಏಕೆಂದರೆ ಸಂವಿಧಾನವನ್ನು ಅಂಗೀಕರಿಸಿ 70 ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ ಈ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿಶೇಷ ಆಯೋಜನೆ ಮಾಡಲಾಗುತ್ತಿದೆ ಮತ್ತು ವರ್ಷ ಪೂರ್ತಿ ದೇಶಾದ್ಯಂತ ವಿಭಿನ್ನ ಕಾರ್ಯಕ್ರಮಗಳಿರುತ್ತವೆ. ಬನ್ನಿ, ಈ ಸಂದರ್ಭದಲ್ಲಿ ನಾವು ಸಂವಿಧಾನ ಸಭೆಯ ಎಲ್ಲ ಸದಸ್ಯರಿಗೂ ಆದರದಿಮದ ನಮಿಸೋಣ. ಶ್ರದ್ಧೆಯನ್ನು ಸಮರ್ಪಿಸೋಣ. ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನ ಅಧಿಕಾರಗಳನ್ನು ಮತ್ತು ಗೌರವವನ್ನು ರಕ್ಷಿಸುವಂಥದ್ದಾಗಿದೆ ಮತ್ತು ಇದು ನಮ್ಮ ಸಂವಿಧಾನ ನಿರ್ಮಾತೃಗಳ ದೂರದೃಷ್ಠಿಯಿಂದಲೇ ಸಾಧ್ಯವಾಗಿದೆ. ಸಂವಿಧಾನ ದಿನ ನಮ್ಮ ಆದರ್ಶಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ನೀಡುವ ನಮ್ಮ ಬದ್ಧತೆಗೆ ಬಲ ನೀಡಲಿ ಎಂದು ನಾನು ಆಶಿಸುತ್ತೇನೆ. ಇದೇ ಕನಸನ್ನು ನಮ್ಮ ಸಂವಿಧಾನ ನಿರ್ಮಾತೃಗಳು ಕೂಡಾ ಕಂಡಿದ್ದರಲ್ಲವೇ!
ಪ್ರಿಯ ದೇಶ ಬಾಂಧವರೇ, ಚಳಿಗಾಲ ಆರಂಭವಾಗುತ್ತಿದೆ, ಚುಮು ಚುಮು ಚಳಿ ಈಗ ಅನುಭವವಾಗುತ್ತಿದೆ. ಹಿಮಾಲಯದ ಕೆಲ ಭಾಗ ಹಿಮದಿಂದಾವೃತವಾಗುತ್ತಿದೆ. ಆದರೆ, ಈ ಋತುಮಾನ ಫಿಟ್ ಇಂಡಿಯಾ ಮೊಮೆಂಟ್ನದ್ದಾಗಿದೆ. ನೀವು ನಿಮ್ಮ ಕುಟುಂಬ, ನಿಮ್ಮ ಮಿತ್ರ ವೃಂದ, ನಿಮ್ಮ ಸಹಚರರು ಈ ಅವಕಾಶ ಕಳೆದುಕೊಳ್ಳ ಬೇಡಿ. ‘ಫಿಟ್ ಇಂಡಿಯಾ ಮೊಮೆಂಟ್’ ಅನ್ನು ಮುಂದುವರೆಸಲು ಋತುಮಾನದ ಸಂಪೂರ್ಣ ಲಾಭ ಪಡೆಯಿರಿ.
ಅನಂತ ಅನಂತ ಶುಭಹಾರೈಕೆಗಳು. ಅನಂತ ಅನಂತ ಧನ್ಯವಾದಗಳು.
ನನ್ನ ಪ್ರಿಯ ದೇಶ ಬಾಂಧವರೇ, ನಮಸ್ಕಾರ. ಇಂದು ದೀಪಾವಳಿ ಹಬ್ಬದ ಪವಿತ್ರ ದಿನ. ಇಂದು ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು. ನಮ್ಮಲ್ಲಿ ಹೇಳಲಾಗಿದೆ
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ ನಮೋಸ್ತುತೇ
ಎಂಥ ಉತ್ತಮ ಸಂದೇಶವಲ್ಲವೇ. ಈ ಶ್ಲೋಕದಲ್ಲಿ ಹೇಳಲಾಗಿದೆ – ಬೆಳಕು ಜೀವನದಲ್ಲಿ ಸುಖ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ, ಅದು ದುರ್ಬುದ್ಧಿಯನ್ನು ನಾಶಗೊಳಿಸಿ, ಸುಬುದ್ಧಿಗೆ ದಾರಿ ತೋರುತ್ತದೆ. ಇಂಥ ದಿವ್ಯಜ್ಯೋತಿಗೆ ನನ್ನ ನಮನಗಳು. ದೀಪಾವಳಿಯನ್ನು ನೆನಪಿನಲ್ಲಿಟ್ಟುಕೊಳ್ಳಲು ಇದಕ್ಕಿಂತ ಉತ್ತಮವಾದ ವಿಚಾರ ಬೇರೊಂದಿಲ್ಲ. ನಾವು ಬೆಳಕನ್ನು ವಿಸ್ತರಿಸುತ್ತಾ, ಸಕಾರಾತ್ಮಕತೆಯನ್ನು ಪಸರಿಸಬಹುದು ಮತ್ತು ಶತ್ರುತ್ವ ಭಾವನೆಯನ್ನೇ ನಾಶ ಮಾಡಲು ಪ್ರಾರ್ಥಿಸಬಹುದು! ಈ ಮಧ್ಯೆ ವಿಶ್ವದ ಅನೇಕ ದೇಶಗಳಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಇದರಲ್ಲಿ ಕೇವಲ ಭಾರತೀಯ ಸಮುದಾಯ ಮಾತ್ರ ಪಾಲ್ಗೊಳ್ಳುತ್ತದೆ ಎಂದೇನಿಲ್ಲ. ಈಗ ಬಹಳಷ್ಟು ದೇಶಗಳ ಸರ್ಕಾರಗಳು, ಅಲ್ಲಿಯ ನಾಗರಿಕರು, ಅಲ್ಲಿಯ ಸಾಮಾಜಿಕ ಸಂಘಟನೆಗಳು ದೀಪಾವಳಿಯನ್ನು ಸಂಪೂರ್ಣ ಹರ್ಷೋಲ್ಲಾಸದಿಂದ ಆಚರಿಸುತ್ತಿವೆ ಎಂಬುದು ವಿಶೇಷವಾಗಿದೆ. ಒಂದು ರೀತಿ ಅಲ್ಲಿ ಭಾರತವೇ ಬಿಂಬಿತವಾಗುತ್ತದೆ.
ಸ್ನೇಹಿತರೇ, ವಿಶ್ವದಲ್ಲಿ festival tourism ತನ್ನದೇ ಆದ ಆಕರ್ಷಣೆಯನ್ನು ಹೊಂದಿದೆ. ನಮ್ಮ ಭಾರತ ಹಬ್ಬಗಳ ದೇಶವಾಗಿದ್ದು, ಇಲ್ಲಿ festival tourism ಗೆ ಸಾಕಷ್ಟು ಅವಕಾಶಗಳಿವೆ. ಅದು ಹೋಳಿ ಹಬ್ಬವಾಗಿರಲಿ, ದೀಪಾವಳಿ ಆಗಿರಲಿ, ಓಣಂ ಆಗಿರಲಿ, ಪೊಂಗಲ್ ಆಗಿರಲಿ, ಬಿಹು ಆಗಿರಲಿ, ಇಂಥ ಹಬ್ಬಗಳ ಪ್ರಸಾರ ಮಾಡುವುದು ಮತ್ತು ಹಬ್ಬದ ಸಂಭ್ರಮಾಚರಣೆಯಲ್ಲಿ ಬೇರೆ ರಾಜ್ಯಗಳ, ಬೇರೆ ದೇಶಗಳ ಜನರನ್ನು ಸೇರಿಸಿಕೊಳ್ಳುವ ಪ್ರಯತ್ನ ನಮ್ಮದಾಗಿರಬೇಕು. ನಮ್ಮಲ್ಲಂತೂ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಕ್ಷೇತ್ರ ತನ್ನದೇ ಆದ ವಿಭಿನ್ನ ಉತ್ಸವಗಳನ್ನು ಹೊಂದಿವೆ. ಬೇರೆ ದೇಶದ ಜನರಿಗೆ ಇವುಗಳಲ್ಲಿ ಬಹಳ ಆಸಕ್ತಿ ಇರುತ್ತದೆ. ಆದ್ದರಿಂದ ಭಾರತದಲ್ಲಿ festival tourism ಅಭಿವೃದ್ಧಿಗೆ ಹೊರ ದೇಶಗಳಲ್ಲಿ ನೆಲೆಸಿರುವ ಭಾರತೀಯರ ಪಾತ್ರ ಬಹಳ ಪ್ರಮುಖವಾದದ್ದು.
ನನ್ನ ಪ್ರಿಯ ದೇಶ ಬಾಂಧವರೇ, ಈ ಬಾರಿಯ ದೀಪಾವಳಿಗೆ ಏನನ್ನಾದರೂ ವಿಭಿನ್ನವಾಗಿ ಮಾಡುವ ಕುರಿತು ಕಳೆದ ಮನದ ಮಾತಿನಲ್ಲಿ ನಿರ್ಧರಿಸಿದ್ದೆವು. ಬನ್ನಿ ಈ ದೀಪಾವಳಿ ಸಂದರ್ಭದಲ್ಲಿ ಭಾರತದ ಸ್ತ್ರೀ ಶಕ್ತಿ ಮತ್ತು ಅವರ ಸಾಧನೆಗಳನ್ನು ಆಚರಿಸೋಣ. ಅಂದರೆ, ಭಾರತದ ಲಕ್ಷ್ಮಿಯನ್ನು ಆದರಿಸೋಣ ಎಂದು ನಾನು ಹೇಳಿದ್ದೆ. ನೋಡ ನೋಡುತ್ತಲೇ ನಾನು ಕರೆ ನೀಡಿದ ತಕ್ಷಣವೇ ಸಾಮಾಜಿಕ ಜಾಲ ತಾಣಗಳಲ್ಲಿ ಲೆಕ್ಕವಿಲ್ಲದಷ್ಟು ಪ್ರೇರಣಾತ್ಮಕ ಕಥೆಗಳ ಪ್ರವಾಹ ಹರಿದು ಬರಲಾರಂಭಿಸಿತು. ನನ್ನ ತಾಯಿ ನನ್ನ ಶಕ್ತಿ ಎಂದು ವಾರಂಗಲ್ ನ ಕೋಡಿಪಾಕ ರಮೇಶ್ ಅವರು ನಮೋ ಆಪ್ ನಲ್ಲಿ ಬರೆದಿದ್ದಾರೆ. 1990 ರಲ್ಲಿ ನನ್ನ ತಂದೆ ನಿಧನರಾದಾಗ ನನ್ನ ತಾಯಿಯೇ ಐದೂ ಮಕ್ಕಳ ಜವಾಬ್ದಾರಿ ಹೊತ್ತರು. ಇಂದು ನಾವು ಐವರು ಸೋದರರು ಉತ್ತಮ ಉದ್ಯೋಗದಲ್ಲಿದ್ದೇವೆ. ನನ್ನ ತಾಯಿಯೇ ನನಗೆ ದೇವರಿದ್ದಂತೆ, ನನಗೆ ಅವಳೇ ಸರ್ವಸ್ವ. ನಿಜವಾದ ಅರ್ಥದಲ್ಲಿ ಅವಳು ಭಾರತದ ಲಕ್ಷ್ಮಿ. ರಮೇಶ್ ಅವರೇ ನಿಮ್ಮ ತಾಯಿಯವರಿಗೆ ನನ್ನ ನಮಸ್ಕಾರಗಳು.
ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಗೀತಿಕಾ ಸ್ವಾಮಿ ಅವರಿಗೆ ಮೇಜರ್ ಖುಷ್ಬೂ ಕಂವರ್ ಭಾರತದ ಲಕ್ಷ್ಮಿ ಆಗಿದ್ದಾರೆ. ಖುಷ್ಬೂ ಒಬ್ಬ ಬಸ್ ಕಂಡಕ್ಟರ್ ಮಗಳಾಗಿದ್ದು, ಅಸ್ಸಾಂ ರೈಫಲ್ಸ್ ನ ಮಹಿಳಾ ಘಟಕದ ನೇತೃತ್ವ ವಹಿಸಿದ್ದಾರೆ. ಕವಿತಾ ತಿವಾರಿ ಅವರಿಗೆ, ಅವರ ಮಗಳು ಭಾರತದ ಲಕ್ಷ್ಮಿ ಆಗಿದ್ದಾಳೆ ಮತ್ತು ಅವರ ಶಕ್ತಿಯೂ ಆಗಿದ್ದಾಳೆ. ತಮ್ಮ ಮಗಳು ಅತ್ಯುತ್ತಮ ವರ್ಣ ಚಿತ್ರಗಳನ್ನು ಬಿಡಿಸುತ್ತಾಳೆ ಎಂದು ಅವರಿಗೆ ಹೆಮ್ಮೆ ಇದೆ. ಅವಳು CLAT ಪರೀಕ್ಷೆಯಲ್ಲಿ ಉತ್ತಮ ರಾಂಕ್ ಕೂಡಾ ಗಳಿಸಿದ್ದಾಳೆ. ಹಾಗೆಯೇ, ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಯಾತ್ರಿಕರಿಗೆ ಹಲವು ವರ್ಷಗಳಿಂದ ಉಚಿತವಾಗಿ ನೀರು ಸರಬರಾಜು ಮಾಡುತ್ತಿರುವ 92 ವರ್ಷದ ವೃದ್ಧರೊಬ್ಬರಿದ್ದಾರೆ ಎಂದು ಮೇಧಾ ಜೈನ್ ಬರೆದಿದ್ದಾರೆ. ಈ ಭಾರತದ ಲಕ್ಷ್ಮಿಯ ನಮ್ರತೆ ಮತ್ತು ಕರುಣೆಯನ್ನು ನೋಡಿ ಮೇಧಾರವರು ಬಹಳ ಪ್ರೇರಿತರಾಗಿದ್ದಾರೆ, ಇಂಥ ಅನೇಕ ಕಥೆಗಳನ್ನು ಜನರು ಹಂಚಿಕೊಂಡಿದ್ದಾರೆ. ನೀವು ಇದನ್ನ ಖಂಡಿತ ಓದಿ, ಪ್ರೇರಿತರಾಗಿ ಮತ್ತು ನಿಮ್ಮ ಸುತ್ತಮುತ್ತಲೂ ನಡೆಯುವ ಇಂಥ ಘಟನೆಗಳನ್ನು ಹಂಚಿಕೊಳ್ಳಿ ಹಾಗೂ ಭಾರತದ ಎಲ್ಲ ಲಕ್ಷ್ಮಿಯರಿಗೆ ನನ್ನ ಆದರ ಪೂರ್ವಕ ನಮನಗಳು.
ನನ್ನ ಪ್ರಿಯ ದೇಶ ಬಾಂಧವರೇ, 17ನೇ ಶತಮಾನದ ಸುಪ್ರಸಿದ್ಧ ಕವಯಿತ್ರಿ ಸಂಚಿ ಹೊನ್ನಮ್ಮ 17ನೇ ಶತಮಾನದಲ್ಲೇ ಕನ್ನಡ ಭಾಷೆಯಲ್ಲಿ ಒಂದು ಕವಿತೆಯನ್ನು ಬರೆದಿದ್ದರು. ನಾವು ಮಾತನಾಡುತ್ತಿರುವ ಭಾರತದ ಪ್ರತಿಯೊಂದು ಲಕ್ಷ್ಮಿಯ ಅಡಿಪಾಯ 17ನೇ ಶತಮಾನದಲ್ಲೇ ರಚಿಸಲಾಗಿತ್ತು ಎಂಬುದು ಅವರ ಕವಿತೆಯ ಭಾವ ಹಾಗೂ ಶಬ್ದಗಳಿಂದ ವ್ಯಕ್ತವಾಗುತ್ತದೆ. ಎಂಥ ಅದ್ಭುತ ಶಬ್ದಗಳು, ಎಂಥ ಅದ್ಭುತ ಭಾವ ಮತ್ತು ಎಷ್ಟು ಉತ್ತಮ ವಿಚಾರಗಳು ಈ ಕನ್ನಡ ಭಾಷೆಯ ಕವಿತೆಯಲ್ಲಿವೆ.
ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು,
ಪೆಣ್ಣಿಂದ ಭೃಗು ಪೆರ್ಚಿದನು,
ಪೆಣ್ಣಿಂದ ಜನಕರಾಯನು ಜಸುವೊಲಿದನು
ಇದರರ್ಥ ಹಿಮವಂತ ಅಂದರೆ, ಪರ್ವತರಾಜ ತನ್ನ ಮಗಳು ಪಾರ್ವತಿಯಿಂದ, ಭೃಗು ಮಹರ್ಷಿ ತನ್ನ ಮಗಳು ಲಕ್ಷ್ಮಿಯಿಂದ ಮತ್ತು ಜನಕ ರಾಜ ತನ್ನ ಮಗಳು ಸೀತೆಯಿಂದಲೇ ಪ್ರಸಿದ್ಧಿ ಹೊಂದಿದ್ದಾರೆ. ನಮ್ಮ ಹೆಣ್ಣು ಮಕ್ಕಳು ನಮ್ಮ ಗೌರವ. . ಮತ್ತು ಈ ಹೆಣ್ಣು ಮಕ್ಕಳಿಂದಲೇ ನಮ್ಮ ಸದೃಢ ಸಮಾಜವನ್ನು ಗುರುತಿಸಲಾಗುತ್ತದೆ ಮತ್ತು ಅದರ ಉಜ್ವಲ ಭವಿಷ್ಯವೂ ಇದರಲ್ಲಿ ಅಡಗಿದೆ.
ನನ್ನ ಪ್ರಿಯ ದೇಶ ಬಾಂಧವರೇ, 2019ರ ನವೆಂಬರ್ 12 ರಂದು ವಿಶ್ವದೆಲ್ಲೆಡೆ ಶ್ರೀ ಗುರುನಾನಕ್ ದೇವ್ ರವರ 550 ನೆಯ ಪ್ರಕಾಶ ಉತ್ಸವವನ್ನು ಆಚರಿಸಲಾಗುವುದು. ಗುರುನಾನಕ್ ದೇವ್ ರವರ ಪ್ರಭಾವ ಕೇವಲ ಭಾರತದಲ್ಲಷ್ಟೇ ಅಲ್ಲ ಸಂಪೂರ್ಣ ವಿಶ್ವದಲ್ಲಿ ಪಸರಿಸಿದೆ. ವಿಶ್ವದ ಎಷ್ಟೋ ದೇಶಗಳಲ್ಲಿ ನಮ್ಮ ಸಿಖ್ ಸೋದರ-ಸೋದರಿಯರು ನೆಲೆಸಿದ್ದಾರೆ. ಅವರು ಗುರುನಾನಕ್ ದೇವ್ ಅವರ ಆದರ್ಶಗಳಿಗೆ ಸಂಪೂರ್ಣ ಸಮರ್ಪಿತರಾಗಿದ್ದಾರೆ. ನಾನು ವ್ಯಾಂಕೋವರ್ ಮತ್ತು ತೆಹರಾನ್ ನಲ್ಲಿ ಗುರುದ್ವಾರಗಳಿಗೆ ನೀಡಿದ ಭೇಟಿಯನ್ನು ಎಂದೂ ಮರೆಯಲಾರೆ. ಗುರುನಾನಕ್ ದೇವ್ ಅವರ ಬಗ್ಗೆ ಹೇಳುವುದು ಇನ್ನೂ ಬಹಳಷ್ಟಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು ಆದರೆ, ಇದಕ್ಕಾಗಿ ಮನದ ಮಾತಿನ ಹಲವು ಕಂತುಗಳೇ ಬೇಕಾಗುತ್ತವೆ. ಅವರು ಸೇವೆಯನ್ನು ಸರ್ವ ಶ್ರೇಷ್ಠವೆಂದು ಪರಿಗಣಿಸಿದ್ದರು. ನಿಸ್ವಾರ್ಥ ಭಾವದಿಂದ ಮಾಡಿದ ಸೇವೆಗೆ ಬೆಲೆ ಕಟ್ಟಲಾಗದು ಎಂದು ಗುರುನಾನಕ್ ದೇವ್ ಅವರು ಭಾವಿಸಿದ್ದರು. ಅವರು ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಬಲವಾದ ವಿರೋಧ ವ್ಯಕ್ತಪಡಿಸಿದ್ದರು. ಶ್ರೀ ಗುರುನಾನಕ್ ದೇವ್ ಅವರು ತಮ್ಮ ಸಂದೇಶಗಳನ್ನು ವಿಶ್ವದಲ್ಲಿ ಬಹು ದೂರದವರೆಗೆ ತಲುಪಿಸಿದ್ದರು. ತಮ್ಮ ಕಾಲದಲ್ಲಿ ಅವರು ಅತಿ ಹೆಚ್ಚು ಯಾತ್ರೆ ಕೈಗೊಂಡವರಲ್ಲಿ ಒಬ್ಬರಾಗಿದ್ದರು. ಬಹಳಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದರು ಮತ್ತು ಎಲ್ಲಿಯೇ ಹೋಗಲಿ ಅಲ್ಲಿ ತಮ್ಮ ಸರಳತೆ, ವಿನಮ್ರತೆ ಮತ್ತು ನೈಜತೆಯಿಂದ ಎಲ್ಲರ ಮನ ಗೆದ್ದಿದ್ದರು. ಗುರುನಾನಕ್ ದೇವ್ ಅವರು ಸಾಕಷ್ಟು ಮಹತ್ವಪೂರ್ಣ ಧಾರ್ಮಿಕ ಯಾತ್ರೆಗೈದಿದ್ದಾರೆ ಅವುಗಳನ್ನು “ಉದಾಸೀ” ಎಂದು ಕರೆಯಲಾಗಿದೆ. ಸದ್ಭಾವನೆ ಮ್ತತು ಸಮಾನತೆಯ ಸಂದೇಶ ಹೊತ್ತು ಅವರು ಉತ್ತರ ದಕ್ಷಿಣ ಹಾಗೆಯೇ ಪೂರ್ವ ಮತ್ತು ಪಶ್ಚಿಮ, ಎಲ್ಲ ದಿಕ್ಕುಗಳಲ್ಲೂ ಸಂಚರಿಸಿದರು, ಎಲ್ಲ ಸ್ಥಳಗಳಲ್ಲೂ ಜನರನ್ನು, ಸಾಧು-ಸಂತರನ್ನು ಭೇಟಿಯಾದರು. ಅಸ್ಸಾಂನ ಸುಪ್ರಸಿದ್ಧ ಸಂತ ಶಂಕರ್ ದೇವ್ ಅವರೂ ಕೂಡಾ ಇವರಿಂದ ಪ್ರೇರಿತರಾಗಿದ್ದರು ಎಂದು ಹೇಳಲಾಗುತ್ತದೆ. ಅವರು ಪವಿತ್ರ ಸ್ಥಳವಾದ ಹರಿದ್ವಾರದ ಯಾತ್ರೆಗೈದಿದ್ದರು. ಕಾಶಿಯಲ್ಲಿ ‘ಗುರುಬಾಗ್ ಗುರುದ್ವಾರ’ ಎಂಬ ಒಂದು ಪವಿತ್ರ ಸ್ಥಳವಿದೆ. ಅಲ್ಲಿ ಗುರುನಾನಕ್ ದೇವ್ ಅವರು ತಂಗಿದ್ದರು ಎಂಬ ಪ್ರತೀತಿ ಇದೆ. ಅವರು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ‘ರಾಜಗೀರ್’ ಮ್ತತು ‘ಗಯಾ’ ದಂತ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಿದ್ದರು. ದಕ್ಷಿಣದಲ್ಲಿ ಶ್ರೀಲಂಕಾ ವರೆಗೂ ಗುರುನಾನಕ್ ದೇವ್ ರವರು ಯಾತ್ರೆಗೈದಿದ್ದರು. ಕರ್ನಾಟಕದಲ್ಲಿ ಬೀದರ್ ಯಾತ್ರೆ ಸಂದರ್ಭದಲ್ಲಿ, ಗುರುನಾನಕ್ ದೇವ್ ರವರೇ ಅಲ್ಲಿಯ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದ್ದರು. ಬೀದರ್ ನಲ್ಲಿ ‘ಗುರುನಾನಕ್ ಝರಾ ಸಾಹಬ್’ ಎಂಬ ಪ್ರಸಿದ್ಧ ಸ್ಥಳವಿದೆ ಇದು ನಮಗೆ ಗುರುನಾನಕ್ ದೇವ್ ಅವರ ನೆನಪು ಮಾಡಿಕೊಡುತ್ತದೆ. ಅವರಿಗೇ ಇದನ್ನು ಸಮರ್ಪಿಸಲಾಗಿದೆ. ಒಂದು ಉದಾಸೀಯ ಸಂದರ್ಭದಲ್ಲಿ ಗುರುನಾನಕ್ ಅವರು ಉತ್ತರದ ಕಾಶ್ಮೀರ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳ ಯಾತ್ರೆಗೈದಿದ್ದರು. ಇದರಿಂದ ಸಿಖ್ ಅನುಯಾಯಿಗಳ ಮತ್ತು ಕಾಶ್ಮೀರದ ಮಧ್ಯೆ ಒಂದು ಗಟ್ಟಿಮುಟ್ಟಾದ ಸಂಬಂಧ ಸ್ಥಾಪಿತವಾಯಿತು. ಗುರುನಾನಕ್ ದೇವ್ ಅವರು ತಿಬ್ಬತ್ ಗೂ ಹೋಗಿದ್ದರು. ಅಲ್ಲಿಯ ಜನರು ಇವರನ್ನು ಗುರು ಎಂದು ಸ್ವೀಕರಿಸಿದರು. ಅವರು ಪ್ರವಾಸಗೈದ ಉಜ್ಬೇಕಿಸ್ತಾನ್ ನಲ್ಲೂ ಪೂಜ್ಯನೀಯರಾಗಿದ್ದಾರೆ. ತಮ್ಮ ಉದಾಸಿಯ ಸಂದರ್ಭದಲ್ಲಿ ಅವರು ಬಹು ದೊಡ್ಡ ಪ್ರಮಾಣದಲ್ಲಿ ಇಸ್ಲಾಮಿಕ್ ದೇಶಗಳ ಯಾತ್ರೆಗೈದಿದ್ದರು. ಅವುಗಳಲ್ಲಿ ಸೌದಿ ಅರೇಬಿಯಾ, ಇರಾಕ್ ಮತ್ತು ಆಫ್ಘಾನಿಸ್ತಾನ ದೇಶಗಳೂ ಸೇರಿವೆ. ಅವರು ಲಕ್ಷಾಂತರ ಜನರ ಮನದಲ್ಲಿ ನೆಲೆಸಿದ್ದಾರೆ, ಆ ಜನರು ಸಂಪೂರ್ಣ ಶ್ರದ್ಧೆಯಿಂದ ಅವರ ಉಪದೇಶಗಳನ್ನು ಅನುಸರಿಸುತ್ತಿದ್ದರು ಮತ್ತು ಇಂದಿಗೂ ಅನುಸರಿಸುತ್ತಿದ್ದಾರೆ. ಈಗ್ಗೆ ಕೆಲ ದಿನಗಳ ಹಿಂದೆ ಸುಮಾರು 85 ದೇಶಗಳ ರಾಯಭಾರಿಗಳು ದೆಹಲಿಯಿಂದ ಅಮೃತ್ ಸರಕ್ಕೆ ತೆರಳಿದ್ದರು, ಅಲ್ಲಿ ಅವರು ಅಮೃತ್ ಸರದ ಸ್ವರ್ಣ ಮಂದಿರದ ದರ್ಶನ ಪಡೆದರು, ಇದೆಲ್ಲಾ ಗುರುನಾನಕ್ ದೇವ್ ಅವರ 550ನೇ ಪ್ರಕಾಶ ಪರ್ವದ ನಿಮಿತ್ತ ಆಯೋಜಿಸಲಾಗಿತ್ತು ಅಲ್ಲಿ ಈ ಎಲ್ಲ ರಾಯಭಾರಿಗಳು ಸ್ವರ್ಣ ಮಂದಿರದ ದರ್ಶನ ಪಡೆದರು ಜೊತೆಗೆ ಅವರಿಗೆ ಸಿಖ್ ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಅರಿಯುವ ಅವಕಾಶವೂ ಲಭಿಸಿತು. ತದನಂತರ ಅನೇಕ ರಾಯಭಾರಿಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ಲಿಯ ಭಾವ ಚಿತ್ರಗಳನ್ನು ಪ್ರದರ್ಶಿಸಿದರು. ಬಹಳ ಗೌರವ ಪೂರ್ಣವಾಗಿ ಅಲ್ಲಿಯ ಉತ್ತಮ ಅನುಭವಗಳ ಬಗ್ಗೆ ಬರೆದರು. ಗುರುನಾನಕ್ ದೇವ್ ಅವರ 550ನೇ ಪ್ರಕಾಶ ಪರ್ವ ನಮ್ಮೆಲ್ಲರಿಗೂ ಅವರ ವಿಚಾರಗಳು ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಮತ್ತಷ್ಟು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯವಾಗಿದೆ. ನಾನು ಮತ್ತೊಮ್ಮೆ ಶಿರಬಾಗಿಸಿ ಗುರುನಾನಕ್ ಅವರಿಗೆ ವಂದಿಸುತ್ತೇನೆ.
ನನ್ನ ಪ್ರಿಯ ದೇಶ ಬಾಂಧವರೇ, ದಿನಾಂಕ 31 ಅಕ್ಟೋಬರ್ ನಿಮ್ಮೆಲ್ಲರಿಗೂ ನೆನಪಿರುತ್ತದೆ ಎಂಬುದು ನನ್ನ ವಿಶ್ವಾಸ. ಈ ದಿನ ಭಾರತದ ಲೋಹ ಪುರುಷ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಜನ್ಮದಿನ. ಅವರು ದೇಶವನ್ನು ಏಕತೆಯ ಸೂತ್ರದಲ್ಲಿ ಜೋಡಿಸಿದ ಮಹಾನ್ ನಾಯಕರಾಗಿದ್ದಾರೆ. ಸರ್ದಾರ್ ಪಟೇಲ್ ರಲ್ಲಿ ಜನರನ್ನು ಒಗ್ಗೂಡಿಸುವ ಅದ್ಭುತ ಕ್ಷಮತೆ ಇತ್ತು . ಜೊತೆಗೆ ಯಾರೊಂದಿಗೆ ಹಲವು ವಿಚಾರಗಳ ಕುರಿತು ಮತ-ಬೇಧವಿತ್ತೋ, ಅವರೊಂದಿಗೂ ಸಾಮರಸ್ಯವನ್ನು ಬೆಳೆಸಿಕೊಳ್ಳುತ್ತಿದ್ದರು. ಸರ್ದಾರ್ ಪಟೇಲ್ ರವರು ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನೂ ಕೂಡಾ ಬಹಳ ಆಳವಾಗಿ ಅವಲೋಕಿಸುತ್ತಿದ್ದರು. ನಿಜವಾದ ಅರ್ಥದಲ್ಲಿ ಅವರು ‘ಮ್ಯಾನ್ ಆಫ್ ಡಿಟೇಲ್’ ಆಗಿದ್ದರು. ಇದರ ಜೊತೆಗೆ ಅವರು ಸಂಘಟನಾ ಕೌಶಲ್ಯದಲ್ಲೂ ನಿಪುಣತೆಯನ್ನು ಹೊಂದಿದ್ದರು. ಯೋಜನೆಗಳನ್ನು ರೂಪಿಸುವುದು ಮತ್ತು ರಾಜಕೀಯ ನೀತಿಗಳನ್ನು ಹೆಣೆಯುವುದರಲ್ಲೂ ಅವರು ಸಿದ್ಧ ಹಸ್ತರು. ಸರ್ದಾರ್ ಸಾಹೇಬರ ಕಾರ್ಯ ಶೈಲಿಯ ಕುರಿತು ಓದಿದಾಗ-ಕೇಳಿದಾಗ ಅವರ ಪ್ಲಾನಿಂಗ್ ಎಷ್ಟು ಅದ್ಭುತವಾದದ್ದು ಎಂದು ತಿಳಿಯುತ್ತದೆ. 1921 ರಲ್ಲಿ ಅಹ್ಮದಾಬಾದ್ ನಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೇಶದಾದ್ಯಂತದಿಂದ ಸಾವಿರಾರು ಪ್ರತಿನಿಧಿಗಳು ಬರುವವರಿದ್ದರು. ಅಧಿವೇಶನದ ಎಲ್ಲ ವ್ಯವಸ್ಥೆಯ ಜವಾಬ್ದಾರಿ ಸರ್ದಾರ್ ಪಟೇಲರ ಮೇಲಿತ್ತು. ಅವರು ನಗರದ ನೀರು ಸರಬರಾಜು ಜಾಲ ಸುಧಾರಣೆಗೂ ಈ ಸಂದರ್ಭವನ್ನು ಬಳಸಿಕೊಂಡರು. ಯಾರಿಗೂ ನೀರಿನ ಕೊರತೆಯಾಗದಂತೆ ಖಾತರಿ ಪಡಿಸಿದರು. ಇಷ್ಟೇ ಅಲ್ಲದೆ, ಅಧಿವೇಶನ ಸ್ಥಳದಲ್ಲಿ ಯಾವುದೇ ಪ್ರತಿನಿಧಿಗಳ ಸಾಮಾನುಗಳು ಅಥವಾ ಪಾದ ರಕ್ಷೆಗಳು ಕಳ್ಳತನವಾಗದಂತೆಯೂ ಅವರು ಕಾಳಜಿ ವಹಿಸಿದ್ದರು. ಇದಕ್ಕಾಗಿ ಸರ್ದಾರ್ ಪಟೇಲರು ಏನು ಮಾಡಿದ್ದರು ಎಂದು ತಿಳಿದು ನಿಮಗೆ ಆಶ್ಚರ್ಯ ವಾಗುತ್ತದೆ. ಅವರು ರೈತರನ್ನು ಸಂಪರ್ಕಿಸಿದರು ಮತ್ತು ಅವರಿಗೆ ಖಾದಿ ಕೈ-ಚೀಲಗಳನ್ನು ತಯಾರಿಸುವಂತೆ ಮನವಿ ಮಾಡಿದರು. ರೈತರು ಕೈ-ಚೀಲಗಳನ್ನು ತಯಾರಿಸಿದರು ಮತ್ತು ಪ್ರತಿನಿಧಿಗಳಿಗೆ ಮಾರಿದರು. ಈ ಕೈ ಚೀಲಗಳಲ್ಲಿ ತಮ್ಮ ಪಾದ ರಕ್ಷೆಗಳನ್ನು ಹಾಕಿ ತಮ್ಮ ಜೊತೆಗೇ ಇಟ್ಟು ಕೊಳ್ಳುವುದರಿಂದ ಪ್ರತಿನಿಧಿಗಳ ಮನಸ್ಸಿನಲ್ಲಿ ಅವು ಕಳ್ಳತನವಾಗುವ ಆತಂಕ ತಪ್ಪಿ ಹೋಯಿತು. ಮತ್ತೊಂದೆಡೆ ಖಾದಿ ವ್ಯಾಪಾರದಲ್ಲೂ ಸಾಕಷ್ಟು ವೃದ್ಧಿಯಾಯಿತು. ಸಂವಿಧಾನ ರಚನಾ ಸಭೆಯಲ್ಲಿ ಪ್ರಮುಖ ಪಾತ್ರವಹಿಸಿದ ಕುರಿತು ಸರ್ದಾರ್ ಪಟೇಲರಿಗೆ ನಮ್ಮ ದೇಶ ಎಂದಿಗೂ ಕೃತಜ್ಞವಾಗಿರುತ್ತದೆ. ಅವರು ಮೌಲಿಕ ಅಧಿಕಾರಗಳನ್ನು ಖಚಿತ ಪಡಿಸುವಂಥ ಮಹತ್ವಪೂರ್ಣ ಕೆಲಸ ಮಾಡಿದ್ದಾರೆ. ಇದರಲ್ಲಿ ಜಾತಿ ಮತ್ತು ಸಂಪ್ರದಾಯವನ್ನು ಆಧರಿಸಿ ಯಾವುದೇ ರೀತಿಯ ಬೇಧ ಭಾವಕ್ಕೆ ಅವಕಾಶವಿಲ್ಲ.
ಸ್ನೇಹಿತರೇ, ಭಾರತದ ಪ್ರಥಮ ಗೃಹ ಸಚಿವರಾಗಿ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ಪ್ರಾಂತ್ಯ ಸಂಸ್ಥಾನಗಳನ್ನು ಒಗ್ಗೂಡಿಸುವ ಒಂದು ಬಹು ದೊಡ್ಡ ಭಗೀರಥ ಮತ್ತು ಐತಿಹಾಸಿಕ ಕಾರ್ಯ ಮಾಡಿದ್ದಾರೆ ಎಂಬುದು ನಮಗೆಲ್ಲಾ ತಿಳಿದಿದೆ. ಅವರ ದೃಷ್ಠಿ ಪ್ರತಿಯೊಂದರ ಮೇಲೂ ನೆಟ್ಟಿತ್ತು ಎಂಬುದೇ ಸರ್ದಾರ್ ವಲ್ಲಭ್ ಭಾಯಿ ಅವರ ವಿಶೇಷತೆಯಾಗಿತ್ತು. ಒಂದೆಡೆ ಅವರ ದೃಷ್ಠಿ ಹೈದ್ರಾಬಾದ್, ಜುನಾಗಢ್ ಮತ್ತು ಇತರ ರಾಜ್ಯಗಳ ಮೇಲೆ ಕೇಂದ್ರೀಕೃತವಾಗಿತ್ತು ಮತ್ತೊಂದೆಡೆ ಅವರ ಗಮನ ಬಹುದೂರದ ಲಕ್ಷದ್ವೀಪ್ ಮೇಲೂ ಇತ್ತು. ನಿಜವಾಗಿ ನಾವು ಸರ್ದಾರ್ ಪಟೇಲ್ ಅವರ ಪ್ರಯತ್ನಗಳ ಕುರಿತು ಮಾತನಾಡುತ್ತೇವೆ ಎಂದಾದಲ್ಲಿ ದೇಶದ ಏಕೀಕರಣದಲ್ಲಿ ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಅವರ ಪಾತ್ರವಿದೆ ಎಂಬ ಚರ್ಚೆಯಾಗುತ್ತದೆ. ಲಕ್ಷದ್ವೀಪದಂತಹ ಪುಟ್ಟ ಸ್ಥಳಗಳ ಸೇರ್ಪಡೆಗೂ ಅವರು ಬಹಳ ಮಹತ್ವ ಕೊಟ್ಟಿದ್ದರು. ಈ ವಿಷಯವನ್ನು ಜನರು ಬಹುಶಃ ನೆನಪಿಸಿಕೊಳ್ಳುವುದೇ ಇಲ್ಲ. ಲಕ್ಷದ್ವೀಪ ಕೆಲ ದ್ವೀಪಗಳ ಸಮೂಹವೆಂದು ನಿಮಗೆಲ್ಲಾ ತಿಳಿದಿದೆ. ಇದು ಭಾರತದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿದೆ. 1947 ರಲ್ಲಿ, ಭಾರತ ವಿಭಜನೆ ನಂತರ ನಮ್ಮ ನೆರೆ ರಾಷ್ಟ್ರದ ಕಣ್ಣು ಲಕ್ಷದ್ವೀಪದ ಮೇಲೆ ಬಿತ್ತು ಮತ್ತು ತನ್ನ ಧ್ವಜದೊಂದಿಗೆ ಹಡಗನ್ನು ಅದು ಕಳುಹಿಸಿತ್ತು. ಸರ್ದಾರ್ ಪಟೇಲರಿಗೆ ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೇ, ವಿಳಂಬ ಮಾಡದೇ, ಕೂಡಲೇ ಕಠಿಣ ಕಾರ್ಯಾಚರಣೆ ಆರಂಭ ಮಾಡಿಬಿಟ್ಟರು. ಅವರು ಮೊದಲಿಯಾರ್ ಸೋದರರಾದ ಆರ್ಕಾಟ್ ರಾಮ ಸ್ವಾಮಿ ಮೊದಲಿಯಾರ್ ಮತ್ತು ಆರ್ಕಾಟ್ ಲಕ್ಷ್ಮಣ ಸ್ವಾಮಿ ಮೊದಲಿಯಾರ್ ಅವರಿಗೆ ಟ್ರಾವೆನ್ಕೋರ್ ಜನರ ಸಹಾಯದೊಂದಿಗೆ ಶೀಘ್ರದಲ್ಲೇ ಅಲ್ಲಿಗೆ ತೆರಳಿ ತ್ರಿವರ್ಣ ಧ್ವಜವನ್ನು ಹಾರಿಸಿ ಎಂದು ಹೇಳಿದರು. ಲಕ್ಷ ದ್ವೀಪದಲ್ಲಿ ಮೊದಲು ತ್ರಿವರ್ಣ ಧ್ವಜ ಹಾರಬೇಕು ಎಂದು ಹೇಳಿದ್ದರು. ಅವರ ಆದೇಶದಂತೆ ತಕ್ಷಣವೇ ಲಕ್ಷದ್ವೀಪದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು ಮತ್ತು ಲಕ್ಷದ್ವೀಪದವನ್ನು ವಶ ಪಡಿಸಿಕೊಳ್ಳಬೇಕೆಂಬ ನೆರೆ ರಾಷ್ಟ್ರದ ಉದ್ದೇಶವನ್ನು ನೋಡು ನೋಡುತ್ತಿದ್ದಂತೆಯೇ ವಿಫಲಗೊಳಿಸಲಾಯಿತು. ಈ ಘಟನೆಯ ನಂತರ ಸರ್ದಾರ್ ಪಟೇಲ್ ರವರು ಲಕ್ಷದ್ವೀಪದ ಅಭಿವೃದ್ಧಿಗೆ ಎಲ್ಲ ಸಹಾಯ ದೊರೆಯುವಂತೆ ಖಾತರಿ ಪಡಿಸಬೇಕೆಂದು ಮೊದಲಿಯಾರ್ ಸೋದರರಿಗೆ ಹೇಳಿದರು. ಇಂದು ಲಕ್ಷದ್ವೀಪ ಭಾರತದ ಪ್ರಗತಿಯಲ್ಲಿ ಮಹತ್ವಪೂರ್ಣ ಕೊಡುಗೆಯನ್ನು ನೀಡುತ್ತಿದೆ. ಇದೊಂದು ಆಕರ್ಷಕ ಪ್ರವಾಸಿ ತಾಣವೂ ಆಗಿದೆ. ನೀವೂ ಸಹ ಈ ಸುಂದರ ದ್ವೀಪಕ್ಕೆ ಭೇಟಿ ನೀಡುತ್ತೀರಿ ಮತ್ತು ಸಮುದ್ರ ತೀರದ ಯಾತ್ರೆಗೈಯುತ್ತೀರಿ ಎಂಬ ಆಶಾಭಾವನೆ ನನಗಿದೆ.
ನನ್ನ ಪ್ರೀತಿಯ ದೇಶ ಬಾಂಧವರೇ, ಸರ್ದಾರ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಲಾದ ‘ಏಕತಾ ಪ್ರತಿಮೆ’ (‘Statue of Unity’) ಯನ್ನು 2018 ರ ಅಕ್ಟೋಬರ್ 31 ರಂದು ದೇಶಕ್ಕೆ ಮತ್ತು ವಿಶ್ವಕ್ಕೆ ಸಮರ್ಪಿಸಲಾಯಿತು. ಇದು ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಎತ್ತರ ಅಮೆರಿಕಾದಲ್ಲಿರುವ ‘ಸ್ಟಾಚ್ಯೂ ಆಫ್ ಲಿಬರ್ಟಿ’ಗಿಂತ ಎರಡರಷ್ಟಿದೆ. ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯು, ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಹೆಮ್ಮೆ ಮೂಡಿಸುತ್ತದೆ. ಪ್ರತಿಯೊಬ್ಬ ಭಾರತೀಯನ ತಲೆ ಹೆಮ್ಮೆಯಿಂದ ಮೇಲೆತ್ತುವಂತೆ ಮಾಡುತ್ತದೆ. ಒಂದು ವರ್ಷದಲ್ಲಿ, 26 ಲಕ್ಷಕ್ಕಿಂತ ಹೆಚ್ಚು ಪ್ರವಾಸಿಗರು, ‘ಏಕತಾ ಪ್ರತಿಮೆ’ ನೋಡಲು ಆಗಮಿಸಿದ್ದಾರೆ ಎಂದು ತಿಳಿದು ನಿಮಗೆ ಸಂತೋಷವಾಗುತ್ತದೆ. ಇದರರ್ಥವೆಂದರೆ ಪ್ರತಿದಿನ ಸರಾಸರಿ ಎಂಟೂವರೆ ಸಾವಿರ ಜನರು ಸ್ಟಾಚ್ಯೂ ಆಫ್ ಯೂನಿಟಿಯ ಭವ್ಯತೆಯ ದರ್ಶನ ಪಡೆದಿದ್ದಾರೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ನಂಬಿಕೆ, ಶ್ರದ್ಧೆ ವ್ಯಕ್ತಪಡಿಸಿದ್ದಾರೆ, ಈಗ ಅಲ್ಲಿ ಕ್ಯಾಕ್ಟಸ್ ತೋಟ, ಚಿಟ್ಟೆಗಳ ತೋಟ, ಜಂಗಲ್ ಸಫಾರಿ, ಮಕ್ಕಳ ಪೋಷಕಾಂಶ ಉದ್ಯಾನ (ಚಿಲ್ಡ್ರನ್ ನ್ಯೂಟ್ರಿಷನ್ ಪಾರ್ಕ್), ಏಕತಾ ನರ್ಸರಿ ಹೀಗೆ ಅನೇಕ ಆಕರ್ಷಣೀಯ ಕೇಂದ್ರಗಳು ಸತತವಾಗಿ ಅಭಿವೃದ್ಧಿಯಾಗುತ್ತಿವೆ ಮತ್ತು ಇದರಿಂದಾಗಿ ಸ್ಥಳೀಯ ಅರ್ಥ ವ್ಯವಸ್ಥೆಗೂ ಉತ್ತೇಜನ ದೊರೆಯುತ್ತಿದೆ ಮತ್ತು ಜನರಿಗೆ ಹೊಸ ಹೊಸ ಉದ್ಯೋಗಾವಕಾಶಗಳು ಕೂಡಾ ದೊರೆಯುತ್ತಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅನೇಕ ಗ್ರಾಮಸ್ಥರು, ತಮ್ಮ ತಮ್ಮ ಮನೆಗಳಲ್ಲಿ, ಹೋಂ ಸ್ಟೇಗಳ ಸೌಲಭ್ಯ ಒದಗಿಸುತ್ತಿದ್ದಾರೆ. ಹೋಂ ಸ್ಟೇ ಸೌಲಭ್ಯಗಳನ್ನು ಒದಗಿಸುವ ಜನರಿಗೆ ವೃತ್ತಿಪರ ತರಬೇತಿಯನ್ನೂ ನೀಡಲಾಗುತ್ತಿದೆ. ಅಲ್ಲಿನ ಜನರು ಈಗ ಡ್ರಾಗನ್ ಹಣ್ಣಿನ ಕೃಷಿಯನ್ನು ಕೂಡಾ ಆರಂಭಿಸಿದ್ದಾರೆ ಮತ್ತು ಶೀಘ್ರದಲ್ಲಿಯೇ ಇದು ಅಲ್ಲಿನ ಜನರ ಪ್ರಮುಖ ಜೀವನೋಪಾಯದ ಮೂಲವಾಗಲಿದೆ ಎಂಬ ನಂಬಿಕೆ ನನಗಿದೆ.
ಸ್ನೇಹಿತರೇ, ದೇಶಕ್ಕಾಗಿ, ಎಲ್ಲಾ ರಾಜ್ಯಗಳಿಗಾಗಿ, ಪ್ರವಾಸೋದ್ಯಮಕ್ಕಾಗಿ, ಈ ಏಕತಾ ಪ್ರತಿಮೆ ಒಂದು ಅಧ್ಯಯನ ವಿಷಯವಾಗಬಲ್ಲದು. ಒಂದು ವರ್ಷದೊಳಗಾಗಿ, ಒಂದು ಸ್ಥಳ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೇಗೆ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ನಾವೆಲ್ಲಾ ಸಾಕ್ಷಿಗಳಾಗಿದ್ದೇವೆ. ಅಲ್ಲಿಗೆ ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಸಾರಿಗೆ, ವಸತಿ, ಮಾರ್ಗದರ್ಶಕರು, ಪರಿಸರ ಸ್ನೇಹಿ ವ್ಯವಸ್ಥೆಗಳು ಒಂದರ ನಂತರ ಮತ್ತೊಂದು ಅಭಿವೃದ್ಧಿಯಾಗುತ್ತಲೇ ಇವೆ. ಬಹುದೊಡ್ಡ ಆರ್ಥಿಕತೆ ಅಭಿವೃದ್ಧಿಯಾಗುತ್ತಿದೆ ಮತ್ತು ಪ್ರವಾಸಿಗರ ಅನುಕೂಲತೆಗಳಿಗೆ ಅನುಗುಣವಾಗಿ ಅಲ್ಲಿ ಸೌಲಭ್ಯಗಳನ್ನು ರಚಿಸುತ್ತಿದ್ದಾರೆ. ಸರ್ಕಾರ ಕೂಡಾ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ಸ್ನೇಹಿತರೆ, ಕೆಲ ದಿನಗಳ ಹಿಂದೆ ಟೈಮ್ ನಿಯತ ಕಾಲಿಕೆ ಪ್ರಕಟಿಸಿದ, ವಿಶ್ವದ 100 ಪ್ರಮುಖ ಪ್ರವಾಸಿ ತಾಣಗಳಲ್ಲಿ ಏಕತಾ ಪ್ರತಿಮೆಗೂ ಪ್ರಮುಖ ಸ್ಥಾನ ನೀಡಿದೆ ಎಂಬ ವಿಷಯ ತಿಳಿದು ಹೆಮ್ಮೆ ಪಡದ ಭಾರತೀಯರೇ ಇಲ್ಲ. ತಾವೆಲ್ಲರೂ ಕೂಡಾ ನಿಮ್ಮ ಅಮೂಲ್ಯ ಸಮಯದಲ್ಲಿ ಸ್ವಲ್ಪ ಸಮಯವನ್ನು ವಿನಿಯೋಗಿಸಿ ‘ಏಕತಾ ಪ್ರತಿಮೆ’ ನೋಡಲು ಹೋಗುತ್ತೀರಿ ಎಂಬ ವಿಶ್ವಾಸ ನನಗಿದೆ, ಆದರೆ ಪ್ರವಾಸ ಮಾಡಲು ತಮ್ಮ ಅಮೂಲ್ಯ ಸಮಯ ವಿನಿಯೋಗಿಸುವ ಪ್ರತಿಯೊಬ್ಬ ಭಾರತೀಯನೂ, ಕನಿಷ್ಠ 15 ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತ ಹೋಗಬೇಕು, ಹೋಗುವ ಸ್ಥಳಗಳಲ್ಲಿ ರಾತ್ರಿ ತಂಗಬೇಕು, ಎಂದು ನನ್ನ ಆಗ್ರಹ ಇದ್ದೇ ಇದೆ.
ಸ್ನೇಹಿತರೇ, 2014 ರಿಂದ ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತಾ ದಿನ’ ಆಚರಿಸುತ್ತಿರುವ ವಿಷಯ ನಿಮಗೆ ತಿಳಿದೇ ಇದೆ. ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸುರಕ್ಷತೆಯನ್ನು ಎಲ್ಲ ರೀತಿಯಿಂದಲೂ ರಕ್ಷಣೆ ಮಾಡುವ ಸಂದೇಶವನ್ನು ಈ ದಿನ ನಮಗೆ ನೀಡುತ್ತದೆ. ಅಕ್ಟೋಬರ್ 31 ರಂದು, ಪ್ರತಿ ವರ್ಷದಂತೆ ಏಕತೆಗಾಗಿ ಓಟ (Run for Unity) ಕೂಡಾ ಆಯೋಜಿಸಲಾಗುತ್ತಿದೆ. ಇದರಲ್ಲಿ ಸಮಾಜದ ಪ್ರತಿಯೊಂದು ವರ್ಗದ, ಪ್ರತಿಯೊಂದು ಪ್ರದೇಶದ ಜನರು ಪಾಲ್ಗೊಳ್ಳಲಿದ್ದಾರೆ. ಏಕತೆಗಾಗಿ ಓಟ (Run for Unity) ಎನ್ನುವುದು ಈ ದೇಶ ಒಂದಾಗಿದೆ, ಒಂದು ದಿಕ್ಕಿನಲ್ಲಿ ಮುಂದೆ ಸಾಗುತ್ತಿದೆ ಮತ್ತು ಒಂದು ಗುರಿ ಸಾಧಿಸಲು ಬಯಸುತ್ತಿದೆ ಎನ್ನುವುದರ ಸಂಕೇತವಾಗಿದೆ. ಒಂದು ಗುರಿ – ಒಂದು ಭಾರತ, ಶ್ರೇಷ್ಠ ಭಾರತ.
ಕೇವಲ ದೆಹಲಿ ಮಾತ್ರವಲ್ಲದೇ, ಭಾರತದ ನೂರಾರು ನಗರಗಳಲ್ಲಿ, ಕೇಂದ್ರಾಡಳಿತ ಪ್ರದೇಶಗಳಲ್ಲಿ, ರಾಜಧಾನಿಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ, ಸಣ್ಣ ಸಣ್ಣ ಎರಡನೇ ಮತ್ತು, ಮೂರನೇ ಸ್ತರದ ನಗರಗಳಲ್ಲಿ ಕೂಡಾ ಬಹಳ ಹೆಚ್ಚಿನ ಪ್ರಮಾಣದಲ್ಲಿ ಪುರುಷರಾಗಿರಲಿ, ಮಹಿಳೆಯರಾಗಿರಲಿ, ನಗರ ವಾಸಿಗಳಾಗಿರಲಿ, ಗ್ರಾಮವಾಸಿಗಳಾಗಿರಲಿ, ಬಾಲಕರಾಗಿರಲಿ, ಯುವಕರಾಗಿರಲಿ, ವೃದ್ಧರಾಗಿರಲಿ, ದಿವ್ಯಾಂಗರಾಗಿರಲಿ, ಎಲ್ಲರೂ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುವುದನ್ನು ಕಳೆದ ಐದು ವರ್ಷಗಳಲ್ಲಿ ನೋಡಿದ್ದೇವೆ. ಹಾಗೆಯೇ, ಇತ್ತೀಚಿನ ದಿನಗಳಲ್ಲಿ, ಜನರಲ್ಲಿ ಮ್ಯಾರಾಥಾನ್ ಬಗ್ಗೆ ಒಂದು ಆಸಕ್ತಿ ಮತ್ತು ಉತ್ಸಾಹ ಕಂಡುಬರುತ್ತಿದೆ. ಏಕತೆಗಾಗಿ ಓಟ (Run For Unity) ಕೂಡಾ ಒಂದು ಇಂತಹ ವಿಶಿಷ್ಠ ಅವಕಾಶವಾಗಿದೆ. ಓಡುವುದು ಮನಸ್ಸಿಗೆ-ಮೆದುಳಿಗೆ ಮತ್ತು ಶರೀರಕ್ಕೆ ಪ್ರಯೋಜನಕಾರಿಯಾಗಿದೆ. ಇಲ್ಲಿ ಓಟವೂ ಇದೆ, ಫಿಟ್ ಇಂಡಿಯಾ ಭಾವನೆಯನ್ನು ಐತಿಹಾಸಿಕಗೊಳಿಸುವುದೂ ಇದೆ, ಇದರೊಂದಿಗೆ, ಒಂದು ಭಾರತ ಶ್ರೇಷ್ಠ ಭಾರತ ಈ ಉದ್ದೇಶದೊಂದಿಗೆ ಕೂಡಾ ನಾವೆಲ್ಲರೂ ಒಂದುಗೂಡುತ್ತೇವೆ. ಆದ್ದರಿಂದ ಕೇವಲ ಶರೀರ ಮಾತ್ರವಲ್ಲ, ಮನಸ್ಸು ಮತ್ತು ಸುಸಂಸ್ಕೃತ ಭಾರತದ ಒಗ್ಗಟ್ಟಿಗಾಗಿ, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ ಕೂಡಾ. ಆದ್ದರಿಂದ, ನೀವು ಯಾವುದೇ ನಗರದಲ್ಲಿ ವಾಸಿಸುತ್ತಿದ್ದರೂ, ಅಲ್ಲಿ ನಿಮ್ಮ ಸುತ್ತಮುತ್ತ ಏಕತೆಗಾಗಿ ಓಟ (Run For Unity) ಕುರಿತು ತಿಳಿದುಕೊಳ್ಳಬಹುದು. ಇದಕ್ಕಾಗಿ runforunity.gov.in ಎನ್ನುವ ಪೋರ್ಟಲ್ ಆರಂಭಿಸಲಾಗಿದೆ. ದೇಶಾದ್ಯಂತ ಏಕತೆಗಾಗಿ ಓಟ (Run For Unity) ಆಯೋಜನೆಯಾಗ ಬೇಕಾಗಿರುವ ಸ್ಥಳಗಳ ಬಗ್ಗೆ ಈ ಪೋರ್ಟಲ್ ನಲ್ಲಿ ಮಾಹಿತಿ ನೀಡಲಾಗಿದೆ. ನೀವೆಲ್ಲರೂ ಅಕ್ಟೋಬರ್ 31 ರಂದು ಭಾರತದ ಏಕತೆಗಾಗಿ, ನಿಮ್ಮ ಫಿಟ್ನೆಸ್ ಗಾಗಿ ಕೂಡಾ ಖಂಡಿತಾ ಓಡುತ್ತೀರೆನ್ನುವ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶ ಬಾಂಧವರೇ, ಸರ್ದಾರ್ ಪಟೇಲ್ ಅವರು ದೇಶವನ್ನು ಏಕತೆಯ ಸೂತ್ರದಲ್ಲಿ ಜೋಡಿಸಿದರು. ಏಕತೆಯ ಈ ಮಂತ್ರ ನಮ್ಮ ಜೀವನದಲ್ಲಿ ಸಂಸ್ಕಾರದ ರೀತಿಯಂತಿದೆ ಮತ್ತು ಭಾರತದಂತಹ ವೈವಿಧ್ಯತೆಯಿಂದ ಕೂಡಿರುವ ದೇಶದಲ್ಲಿ, ಪ್ರತಿ ಹಂತದಲ್ಲಿ, ಪ್ರತಿ ಚರಣದಲ್ಲಿ, ಪ್ರತಿ ತಿರುವಿನಲ್ಲಿ, ಪ್ರತಿ ಮೆಟ್ಟಿಲಿನಲ್ಲಿ ಏಕತೆಯ ಈ ಮಂತ್ರ ಬಲಿಷ್ಠಗೊಳ್ಳುತ್ತಲೇ ಇರಬೇಕು. ನನ್ನ ಪ್ರೀತಿಯ ದೇಶಬಾಂಧವರೇ, ದೇಶದ ಏಕತೆ ಮತ್ತು ಪರಸ್ಪರ ಸದ್ಭಾವನೆಯನ್ನು ಸದೃಢಗೊಳಿಸಲು, ನಮ್ಮ ಸಮಾಜ ಯಾವಾಗಲೂ ಬಹಳ ಸಕ್ರಿಯವಾಗಿದೆ ಮತ್ತು ಜಾಗರೂಕತೆಯಿಂದ ಇದೆ. ನಮ್ಮ ಸುತ್ತಮುತ್ತಲೂ ನೋಡಿದಾಗ, ಪರಸ್ಪರ ಸದ್ಭಾವನೆಯನ್ನು ಹೆಚ್ಚಿಸುವುದಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಅನೇಕ ಉದಾಹರಣೆಗಳು ಕಂಡುಬರುತ್ತವೆ ಆದರೆ, ಕೆಲವೊಮ್ಮೆ ಸಮಾಜದ ಪ್ರಯತ್ನ, ಅದರ ಕೊಡುಗೆ, ನೆನಪಿನಿಂದ ಬಹಳ ಶೀಘ್ರವಾಗಿ ಅಳಿಸಿ ಹೋಗುತ್ತದೆ.
ಸ್ನೇಹಿತರೆ, 2010 ರ ಸೆಪ್ಟೆಂಬರ್ ನಲ್ಲಿ ರಾಮ ಜನ್ಮಭೂಮಿಯ ಬಗ್ಗೆ ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪು ನೀಡಿದ್ದು ನನಗೆ ನೆನಪಿದೆ. ಆ ದಿನಗಳಲ್ಲಿ ಎಂತಹ ಪರಿಸ್ಥಿತಿಯಿತ್ತು ಎನ್ನುವುದನ್ನು ಸ್ವಲ್ಪ ನೆನಪಿಸಿಕೊಳ್ಳಿ. ವಿವಿಧ ರೀತಿಯ ಅದೆಷ್ಟು ಜನರು ಅಂಗಳಕ್ಕೆ ಬಂದಿದ್ದರು. ಎಂತೆಂತಹ ಆಸಕ್ತ ಗುಂಪುಗಳು ತಮ್ಮದೇ ಆದ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳಲು ನೋಡುತ್ತಿದ್ದವು. ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಎಂತೆಂತಹ ಮಾತುಗಳನ್ನು ಆಡಲಾಗುತ್ತಿತ್ತು. ವಿಭಿನ್ನ ಸ್ವರಗಳಲ್ಲಿ ಕಹಿ ಭಾವನೆ ತುಂಬುವ ಪ್ರಯತ್ನವೂ ನಡೆಯುತ್ತಿತ್ತು. ಕೆಲವು ವಿರೋಧಾಭಿಪ್ರಾಯ ಹೊಂದಿದವರು ಮತ್ತು ಬಡಾಯಿಕೋರರು ಕೇವಲ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುವ ಉದ್ದೇಶದಿಂದ ಏನೇನು ಹೇಳಿದ್ದರು, ಯಾವ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದರು ನಮಗೆ ಎಲ್ಲವೂ ನೆನಪಿದೆ. ಆದರೆ ಇವೆಲ್ಲವೂ ಐದು ದಿನ, ಏಳು ದಿನ, ಹತ್ತು ದಿನ, ನಡೆಯುತ್ತದೆ, ಆದರೆ ತೀರ್ಪು ಬರುತ್ತಿದ್ದಂತೆಯೇ, ದೇಶದಲ್ಲಿ ಒಂದು ಆನಂದದಾಯಕ, ಆಶ್ಚರ್ಯಕರ ಬದಲಾವಣೆಯ ಅನುಭವವಾಯಿತು. ಒಂದೆಡೆ ಎರಡು ವಾರಗಳವರೆಗೆ ಪರಿಸ್ಥಿತಿ ವಿಷಮಿಸುವಂತೆ ಮಾಡುವುದಕ್ಕೆ ಬಹಳಷ್ಟು ಪ್ರಯತ್ನ ನಡೆಯಿತು, ಆದರೆ ರಾಮ ಜನ್ಮಭೂಮಿ ಬಗ್ಗೆ ತೀರ್ಪು ಬಂದಾಗ, ಸರ್ಕಾರ, ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ನಾಗರಿಕ ಸಮಾಜ, ಎಲ್ಲಾ ಪಂಗಡಗಳ ಪ್ರತಿನಿಧಿಗಳು, ಸಾಧು-ಸಂತರು ಅತ್ಯಂತ ಸಮತೋಲಿತ ಮತ್ತು ಸಂಯಮದ ಹೇಳಿಕೆ ನೀಡಿದರು. ಪರಿಸ್ಥಿತಿಯಲ್ಲಿ ಒತ್ತಡ ಕಡಿಮೆ ಮಾಡುವ ಪ್ರಯತ್ನ ನಡೆಯಿತು. ಆದರೆ ನನಗೆ ಆ ದಿನ ಚೆನ್ನಾಗಿ ನೆನಪಿದೆ. ಆ ದಿನವನ್ನು ನೆನಪಿಸಿಕೊಂಡಾಗಲೆಲ್ಲಾ ನನಗೆ ಸಂತೋಷವಾಗುತ್ತದೆ. ನ್ಯಾಯಾಂಗದ ಘನತೆಯನ್ನು ಅತ್ಯಂತ ಗೌರವಪೂರ್ವಕವಾಗಿ ಎತ್ತಿ ಹಿಡಿಯಲಾಯಿತು ಮತ್ತು ಎಲ್ಲಿಯೂ ಕೂಡಾ ಉದ್ವಿಗ್ನ, ಒತ್ತಡದ ಪರಿಸ್ಥಿತಿ ಉಂಟಾಗಲು ಬಿಡಲಿಲ್ಲ. ಈ ವಿಷಯವನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದು ನಮಗೆ ಬಹಳ ಶಕ್ತಿ ತುಂಬುತ್ತದೆ. ಆ ದಿನ, ಆ ಕ್ಷಣ ನಮಗೆಲ್ಲರಿಗೂ ಒಂದು ಕರ್ತವ್ಯಬೋಧಕವಾಗಿದೆ. ಏಕತೆಯ ಸ್ವರ, ದೇಶಕ್ಕೆ ಎಷ್ಟು ದೊಡ್ಡ ಶಕ್ತಿ ನೀಡುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.
ನನ್ನ ಪ್ರೀತಿಯ ದೇಶಬಾಂಧವರೇ, ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಹತ್ಯೆಯೂ ಅದೇ ದಿನ ಅಂದರೆ ಅಕ್ಟೋಬರ್ 31 ರಂದೇ ನಡೆದಿತ್ತು. ದೇಶಕ್ಕೆ ಬಹುದೊಡ್ಡ ಆಘಾತವಾಗಿತ್ತು. ನಾನು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶಬಾಂಧವರೇ, ಇಂದು, ಮನೆ ಮನೆಯ ಒಂದು ಕತೆ ದೂರ ದೂರಕ್ಕೆ ಕೇಳಿಸುತ್ತಿದೆಯಾದರೆ, ಪ್ರತಿ ಹಳ್ಳಿಯ ಯಾವುದಾದರೂ ಕತೆ ಕೇಳಿಸುತ್ತಿದೆ ಎಂದರೆ, – ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ಭಾರತದ ಪ್ರತಿ ಮೂಲೆಯಿಂದ ಒಂದು ಕತೆ ಕೇಳಿ ಬರುತ್ತಿದೆ ಎಂದಾದರೆ, ಅದು ಸ್ವಚ್ಛತೆಯ ಕತೆ. ಪ್ರತಿ ವ್ಯಕ್ತಿಗೆ, ಪ್ರತಿ ಕುಟುಂಬಕ್ಕೆ, ಪ್ರತಿ ಗ್ರಾಮಕ್ಕೆ, ಸ್ವಚ್ಛತೆಗೆ ಸಂಬಂಧಿಸಿದಂತೆ ತಮ್ಮ ಆಹ್ಲಾದಕರ ಅನುಭವ ಹೇಳುವ ಮನಸ್ಸಾಗುತ್ತದೆ, ಏಕೆಂದರೆ, ಸ್ವಚ್ಛತೆಯ ಈ ಪ್ರಯತ್ನ, ನೂರಾ ಇಪ್ಪತೈದು ಕೋಟಿ ಭಾರತೀಯರ ಪ್ರಯತ್ನವಾಗಿದೆ. ಫಲಿತಾಂಶದ ಮಾಲೀಕರು ಕೂಡಾ ಈ ನೂರಾ ಇಪ್ಪತ್ತೈದು ಕೋಟಿ ಭಾರತೀಯರೇ. ಆದರೆ ಒಂದು ಆಹ್ಲಾದಕರ ಮತ್ತು ರೋಚಕ ಅನುಭವ ಕೂಡಾ ಇದೆ. ನಾನು ಕೇಳಿರುವುದನ್ನು ನಿಮಗೆ ಕೂಡಾ ಹೇಳಬೇಕೆಂದು ಅಂದುಕೊಳ್ಳುತ್ತೇನೆ. ತಾಪಮಾನ ಶೂನ್ಯದಿಂದ ಮೈನಸ್ 50 ರಿಂದ 60 ಡಿಗ್ರಿ ತಲುಪುವ ವಿಶ್ವದ ಅತ್ಯಂತ ಎತ್ತರದ ರಣಭೂಮಿಯ ಕಲ್ಪನೆ ಮಾಡಿಕೊಳ್ಳಿ. ಗಾಳಿಯಲ್ಲಿ ಆಮ್ಲಜನಕ ನೆಪಮಾತ್ರದ ಪ್ರಮಾಣದಲ್ಲಿರುತ್ತದೆ. ಇಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಇಂತಹ ಸವಾಲುಗಳ ಮಧ್ಯದಲ್ಲಿ ವಾಸ ಮಾಡುವುದು ಕೂಡಾ ಯಾವುದೇ ಪರಾಕ್ರಮಕ್ಕಿಂತ ಕಡಿಮೆ ಏನಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ನಮ್ಮ ವೀರ ಸೈನಿಕರು ಎದೆಯುಬ್ಬಿಸಿ ದೇಶದ ಗಡಿಗಳ ರಕ್ಷಣೆ ಮಾಡುತ್ತಿರುವುದು ಮಾತ್ರವಲ್ಲ, ಅಲ್ಲಿ ಸ್ವಚ್ಛ ಸಿಯಾಚಿನ್ ಅಭಿಯಾನವನ್ನೂ ನಡೆಸುತ್ತಿದ್ದಾರೆ. ಭಾರತೀಯ ಸೇನೆಯ ಈ ಅದ್ಭುತ ಬದ್ಧತೆಗಾಗಿ ನಾನು ದೇಶಬಾಂಧವರ ಪರವಾಗಿ ಅವರನ್ನು ಪ್ರಶಂಸಿಸುತ್ತೇನೆ. ಕೃತಜ್ಞತೆ ವ್ಯಕ್ತ ಪಡಿಸುತ್ತೇನೆ. ಅಲ್ಲಿ ಎಷ್ಟು ತಣ್ಣಗಿರುತ್ತದೆ ಎಂದರೆ ಅಲ್ಲಿ ಯಾವುದೇ ವಸ್ತುವೂ ಕೊಳೆಯಲಾರದು. ಹೀಗಿರುವಾಗ, ಕಸ-ಕಡ್ಡಿಗಳನ್ನು ಬೇರ್ಪಡಿಸುವುದು, ಅವುಗಳ ನಿರ್ವಹಣೆ, ಬಹಳ ಮಹತ್ವಪೂರ್ಣ ಕೆಲಸವಾಗಿರುತ್ತದೆ. ಹೀಗಿರುವಾಗ, ಗ್ಲೇಷಿಯರ್ ಮತ್ತು ಅದರ ಆಸುಪಾಸಿನ ಪ್ರದೇಶಗಳಿಂದ 130 ಟನ್ ಮತ್ತು ಅದಕ್ಕಿಂತ ಹೆಚ್ಚು ಕಸ ವಿಲೇವಾರಿ ಮಾಡುವುದು ಮತ್ತು ಅದರಲ್ಲೂ ಇಲ್ಲಿನ ಸೂಕ್ಷ್ಮ ಪರಿಸರ ವ್ಯವಸ್ಥೆಯ ನಡುವೆ ಬಹಳ ಕಷ್ಟದ ಕೆಲಸ. ಇದು ಎಷ್ಟು ದೊಡ್ಡ ಸೇವೆಯಾಗಿದೆ! ಹಿಮ ಚಿರತೆಗಳಂತಹ ಅಪರೂಪದ ಪ್ರಬೇಧದ ವಾಸಸ್ಥಳವಾಗಿರುವ ಪರಿಸರ-ವ್ಯವಸ್ಥೆ ಇದಾಗಿದೆ. ಇಲ್ಲಿ ibex ಮತ್ತು ಕಂದು ಕರಡಿಯಂತಹ ಅಪರೂಪದ ಪ್ರಾಣಿಗಳು ಕೂಡಾ ವಾಸಿಸುತ್ತವೆ. ನದಿಗಳು ಮತ್ತು ಶುದ್ಧ ನೀರಿನ ಮೂಲವೇ ಸಿಯಾಚಿನ್ ಹಿಮನದಿ ಎನ್ನುವುದು ನಮಗೆಲ್ಲಾ ತಿಳಿದಿದೆ. ಆದ್ದರಿಂದ ಇಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದೆಂದರೆ, ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ, ಹಾಗೂ ನುಬ್ರಾ ಮತ್ತು ಶ್ಯೋಕ್ ನಂತಹ ನದಿಯ ನೀರನ್ನು ಉಪಯೋಗಿಸುವ ಜನರಿಗೆ ಶುದ್ಧ ನೀರಿನ ಪೂರೈಕೆಯನ್ನು ಖಚಿತಪಡಿಸುವುದು ಎನ್ನುವ ಅರ್ಥವಾಗಿದೆ.
ನನ್ನ ಪ್ರೀತಿಯ ದೇಶಬಾಂಧವರೇ, ಹಬ್ಬ ಎನ್ನುವುದು ನಮ್ಮೆಲ್ಲರ ಜೀವನದಲ್ಲಿ ಹೊಸ ಚೇತನವನ್ನು ಜಾಗೃತಗೊಳಿಸುವ ಸಮಯವಾಗಿದೆ. ದೀಪಾವಳಿಯಲ್ಲಂತೂ ವಿಶೇಷವಾಗಿ ಏನಾದರೂ ಹೊಸದನ್ನು ಖರೀದಿಸುವುದು, ಮಾರುಕಟ್ಟೆಯಿಂದ ಏನಾದರೂ ಕೊಂಡು ತರುವುದು ಪ್ರತಿ ಕುಟುಂಬದಲ್ಲೂ ಹೆಚ್ಚು ಕಡಿಮೆ ಇದ್ದೇ ಇರುತ್ತದೆ. ಸ್ಥಳೀಯ ವಸ್ತುಗಳನ್ನು ಖರೀದಿಸುವ ಪ್ರಯತ್ನವನ್ನು ನಾವು ಮಾಡೋಣವೆಂದು ನಾನು ಒಮ್ಮೆ ಹೇಳಿದ್ದೆ. ನಮಗೆ ಅಗತ್ಯವಿರುವ ವಸ್ತುಗಳು ನಮ್ಮ ಗ್ರಾಮದಲ್ಲೇ ದೊರೆಯುವ ಹಾಗಿದ್ದಲ್ಲಿ, ತಾಲ್ಲೂಕು ಸ್ಥಳಕ್ಕೆ ಹೋಗುವ ಅಗತ್ಯವಿಲ್ಲ. ತಾಲ್ಲೂಕಿನಲ್ಲಿ ದೊರೆಯುವ ಹಾಗಿದ್ದಲ್ಲಿ ಜಿಲ್ಲಾ ಕೇಂದ್ರದವರೆಗೆ ಹೋಗಬೇಕಾಗಿಲ್ಲ. ಸ್ಥಳೀಯ ವಸ್ತುಗಳನ್ನು ಖರೀದಿಸಲು ನಾವು ಎಷ್ಟು ಹೆಚ್ಚು ಪ್ರಯತ್ನ ಮಾಡುತ್ತೇವೋ, ‘ಗಾಂಧಿ 150’ ತನ್ನಷ್ಟಕ್ಕೆ ತಾನು ಒಂದು ಉತ್ತಮ ಅವಕಾಶವಾಗಿಬಿಡುತ್ತದೆ. ನಮ್ಮ ನೇಕಾರರ ಕೈಗಳಿಂದ ತಯಾರಾದ, ನಮ್ಮ ಖಾದಿ ತಯಾರಕರ ಕೈಗಳಿಂದ ತಯಾರಾದ, ಯಾವುದಾದರೂ ವಸ್ತುವೊಂದನ್ನು ನಾವು ಖರೀದಿಸಬೇಕೆನ್ನುವುದು ನನ್ನ ಆಗ್ರಹವಾಗಿದೆ. ಈ ದೀಪಾವಳಿಯಲ್ಲಿ ಕೂಡಾ, ದೀಪಾವಳಿಗೆ ಮುನ್ನವೇ ನೀವು ಬಹಳಷ್ಟು ಖರೀದಿಸಿರಬಹುದು, ಆದರೆ ದೀಪಾವಳಿಯ ನಂತರ ಖರೀದಿಸಿದಲ್ಲಿ, ಸ್ವಲ್ಪ ಅಗ್ಗದ ದರದಲ್ಲಿ ದೊರೆಯಬಹುದು ಎಂದು ಆಲೋಚಿಸುವ ಜನರು ಬಹಳಷ್ಟಿರುತ್ತಾರೆ. ಇನ್ನೂ ಖರೀದಿ ಮಾಡದೇ ಇರುವ ಜನರು ಕೂಡಾ ಬಹಳಷ್ಟಿರುತ್ತಾರೆ. ಹಾಗಿದ್ದಲ್ಲಿ, ದೀಪಾವಳಿಯ ಶುಭಾಶಯಗಳನ್ನು ಹೇಳುವುದರ ಜೊತೆಯಲ್ಲೇ, ನಾವು ಸ್ಥಳೀಯ ವಸ್ತುಗಳನ್ನು ಕೊಳ್ಳೋಣ ಕೂಡಾ ಎಂದು ಆಗ್ರಹಿಸುತ್ತೇನೆ. ನೋಡಿ, ಮಹಾತ್ಮಾ ಗಾಂಧಿಯವರ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಎಷ್ಟು ಮಹತ್ವದ ಪಾತ್ರ ನಿರ್ವಹಿಸಬಹುದು. ಈ ದೀಪಾವಳಿಯ ಪವಿತ್ರ ಹಬ್ಬಕ್ಕೆ ನಿಮಗೆ ಮತ್ತೊಮ್ಮೆ ಶುಭ ಕೋರುತ್ತೇನೆ. ನಾವು ದೀಪಾವಳಿಯಂದು ವಿವಿಧ ರೀತಿಯ ಪಟಾಕಿಗಳನ್ನು ಉಪಯೋಗಿಸುತ್ತೇವೆ. ಆದರೆ, ಕೆಲವೊಮ್ಮೆ ಅಜಾಗರೂಕತೆಯಿಂದ ಬೆಂಕಿ ಹೊತ್ತಿಕೊಂಡುಬಿಡುತ್ತದೆ. ಅನೇಕ ಗಾಯಗಳಾಗಿ ಬಿಡುತ್ತವೆ. ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿ ಮತ್ತು ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಿ ಎಂದು ನಾನು ನಿಮ್ಮೆಲ್ಲರಲ್ಲಿ ಆಗ್ರಹಿತ್ತೇನೆ. ನಿಮೆಗೆ ನನ್ನ ಶುಭ ಹಾರೈಕೆಗಳು.
ಅನಂತಾನಂತ ಧನ್ಯವಾದ |
ನನ್ನ ಪ್ರೀತಿಯ ದೇಶಬಾಂಧವರೇ, ನಮಸ್ಕಾರ. ಸ್ನೇಹಿತರೇ, ಇಂದು ನಾನು ಮನ್ ಕಿ ಬಾತ್ ನಲ್ಲಿ ದೇಶದ ಓರ್ವ ಮಹಾನ್ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತೇನೆ. ಭಾರತೀಯರಾದ ನಮ್ಮೆಲ್ಲರ ಮನದಲ್ಲಿ ಆ ವ್ಯಕ್ತಿಯ ಬಗ್ಗೆ ಬಹಳ ಗೌರವವಿದೆ, ಬಹಳ ಅಭಿಮಾನವಿದೆ. ಬಹುಶಃ ಆ ವ್ಯಕ್ತಿಯ ಬಗ್ಗೆ ಆದರಾಭಿಮಾನ, ಪ್ರೀತಿ ಗೌರವ ಇರದ ಯಾವುದೇ ನಾಗರೀಕ. . . ಭಾರತದಲ್ಲಿ ಇಲ್ಲ. ಅವರು ವಯಸ್ಸಿನಲ್ಲಿ ನಮ್ಮೆಲ್ಲರಗಿಂತ ಬಹಳ ಹಿರಿಯರು, ದೇಶದ ವಿವಿಧ ಹಂತಗಳಿಗೆ, ವಿಭಿನ್ನ ಸಮಯಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ನಾವು ಅವರನ್ನು ದೀದಿ ಎಂದು ಕರೆಯುತ್ತೇವೆ. – ಲತಾ ದೀದಿ.
ಈ ತಿಂಗಳ 28 ನೇ ತಾರೀಖಿನಂದು ಅವರು 90ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳುವುದಕ್ಕೆ ಮುನ್ನ ದೀದಿಯೊಂದಿಗೆ ದೂರವಾಣಿಯಲ್ಲಿ ಮತನಾಡುವ ಸೌಭಾಗ್ಯ ನನಗೆ ದೊರೆತಿತ್ತು. ಈ ಸಂಭಾಷಣೆ ಕಿರಿಯ ಸೋದರನೊಬ್ಬ ತನ್ನ ಅಕ್ಕನೊಂದಿಗೆ ಪ್ರೀತಿ ವಾತ್ಸಲ್ಯದಿಂದ ಮಾತನಾಡುವ ರೀತಿಯಲ್ಲಿತ್ತು. ಈ ರೀತಿಯ ವೈಯಕ್ತಿಕ ಸಂಭಾಷಣೆಯ ಬಗ್ಗೆ ನಾನು ಯಾವತ್ತೂ ಮಾತನಾಡುವುದಿಲ್ಲ ಆದರೆ, ಇಂದು ನೀವು ಕೂಡಾ ಲತಾ ದೀದಿಯ ಮಾತುಗಳನ್ನು ಕೇಳಬೇಕೆಂದು, ಆ ಸಂಭಾಷಣೆಯನ್ನು ಆಲಿಸಬೇಕೆಂದು ನಾನು ಬಯಸುತ್ತೇನೆ. ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅರಿಯಲು ಲತಾ ದೀದಿ ಈ ವಯಸ್ಸಿನಲ್ಲಿ ಕೂಡಾ ಎಷ್ಟೊಂದು ಉತ್ಸುಕತೆ, ಕಾತುರ ಹೊಂದಿದ್ದಾರೆ, ಭಾರತದ ಪ್ರಗತಿಯಲ್ಲಿ, ಬದಲಾಗುತ್ತಿರುವ ಭಾರತದಲ್ಲಿ, ಉತ್ತುಂಗಕ್ಕೇರುತ್ತಿರುವ ಭಾರತದಲ್ಲಿ ಜೀವನದ ಸಂತೋಷ ಕಾಣುತ್ತಿದ್ದಾರೆ ಎನ್ನುವುದನ್ನು ಕೇಳಿಸಿಕೊಳ್ಳಿ.
ಮೋದಿ ಜೀ – ಲತಾ ದೀದಿ , ನಮಸ್ಕಾರ. ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ.
ಲತಾ ಜೀ – ನಮಸ್ಕಾರ
ಮೋದಿ ಜೀ – ನಾನು ಫೋನ್ ಮಾಡಿದ ಕಾರಣ ಏನೆಂದರೆ, ಈ ವರ್ಷ ನಿಮ್ಮ ಜನ್ಮದಿನದಂದು….
ಲತಾ ಜೀ – ಹೇಳಿ ಹೇಳಿ
ಮೋದಿ ಜೀ- ನಾನು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೇನೆ.
ಲತಾ ಜೀ – ಹೌದಾ. ಒಳ್ಳೆಯದು.
ಮೋದಿ ಜೀ – ಹೊರಡುವುದಕ್ಕೆ ಮುನ್ನವೇ ನಾನು ನಿಮಗೆ…..
ಲತಾ ಜೀ – ಹೇಳಿ ಹೇಳಿ
ಮೋದಿ ಜೀ – ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಮುಂಚಿತವಾಗಿಯೇ ತಿಳಿಸಬೇಕೆಂದು ಯೋಚಿಸಿದೆ. ಉತ್ತಮ ಆರೋಗ್ಯ ನಿಮ್ಮದಾಗಿರಲಿ, ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎನ್ನುವುದೇ ನನ್ನ ಪ್ರಾರ್ಥನೆ. ನಿಮಗೆ ವಂದನೆಗಳನ್ನು ಅರ್ಪಿಸಲು ನಾನು ಅಮೆರಿಕಾಗೆ ತೆರಳುವುದಕ್ಕೆ ಮುನ್ನವೇ ಕರೆ ಮಾಡಿದ್ದೇನೆ.
ಲತಾ ಜೀ – ನಿಮ್ಮ ಫೋನ್ ಬರುತ್ತದೆ ಎಂದು ತಿಳಿದೇ ನನಗೆ ಬಹಳ ಆನಂದವಾಗಿತ್ತು. ನೀವು ಯಾವಾಗ ಹಿಂದಿರುಗಿ ಬರುತ್ತೀರಿ
ಮೋದಿ ಜೀ – ನಾನು 28ರ ತಡರಾತ್ರಿ ಮತ್ತು 29 ಬೆಳಗಿನಜಾವ ಬರುತ್ತೇನೆ ಮತ್ತು ಆ ವೇಳೆಗೆ ನಿಮ್ಮ ಜನ್ಮದಿನ ಆಚರಿಸಿ ಆಗಿರುತ್ತದೆ
ಲತಾ ಜೀ- ಸರಿ ಸರಿ. ಜನ್ಮದಿನ ಏನು ಆಚರಿಸುವುದು, ಮನೆಯಲ್ಲೇ ಎಲ್ಲರೂ…..
ಮೋದಿ ಜೀ – ದೀದಿ ನೋಡಿ ನನಗೆ……..
ಲತಾ ಜೀ – ನಿಮ್ಮ ಆಶೀರ್ವಾದ ನನಗೆ ದೊರೆತರೆ…..
ಮೋದಿ ಜೀ – ಅರೇ, ನಾವು ನಿಮ್ಮ ಆಶೀರ್ವಾದ ಕೋರುತ್ತೇವೆ, ನೀವು ನಮಗಿಂತ ಹಿರಿಯರು.
ಲತಾ ಜೀ – ವಯಸ್ಸಿನಲ್ಲಿ ಹಿರಿಯರು ಬಹಳಷ್ಟು ಜನ ಇರುತ್ತಾರೆ, ಆದರೆ ಕೆಲಸದಿಂದ ಯಾರು ಹಿರಿಯರೆನಿಸುತ್ತಾರೋ ಅವರಿಂದ ಆಶೀರ್ವಾದ ದೊರೆಯುವುದು ಬಹಳ ದೊಡ್ಡ ಸಂಗತಿ.
ಮೋದಿ ಜೀ – ದೀದಿ ನೀವು ವಯಸ್ಸಿನಲ್ಲೂ ಹಿರಿಯರು, ಕೆಲಸದಲ್ಲೂ ಹಿರಿಯರು, ಮತ್ತು ನೀವು ಸಾಧಿಸಿರುವ ಈ ಸಿದ್ಧಿ, ನಿಮ್ಮ ಸಾಧನೆ ಮತ್ತು ತಪಸ್ಸಿನಿಂದ ಪಡೆದಿರುವುದು.
ಲತಾ ಜೀ – ಇದು ನನ್ನ ತಾಯಿ – ತಂದೆಯರ ಆಶೀರ್ವಾದ, ಮತ್ತು ಕೇಳುಗರ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ. ನಾನು ಏನೂ ಅಲ್ಲ.
ಮೋದಿ ಜೀ – ಇದು ನಿಮ್ಮ ವಿನಯವಾಗಿದೆ. ಜೀವನದಲ್ಲಿ ಇಷ್ಟೊಂದು ಸಾಧಿಸಿದ ನಂತರವೂ ನಿಮ್ಮ ತಾಯಿ ತಂದೆ ನೀಡಿರುವ ಸಂಸ್ಕಾರಕ್ಕೆ ಮತ್ತು ವಿನಯಕ್ಕೆ ಪ್ರಾಧಾನ್ಯತೆ ನೀಡುವ ನಿಮ್ಮ ನಮ್ರತೆ ನಮ್ಮ ಹೊಸ ಪೀಳಿಗೆಗೆ ಅತಿ ದೊಡ್ಡ ಶಿಕ್ಷಣವಾಗಿದೆ, ನಮಗೆ ಅತಿ ದೊಡ್ಡ ಪ್ರೇರಣೆಯಾಗಿದೆ.
ಲತಾ ಜೀ – ಹೇಳಿ
ಮೋದಿ ಜೀ – ನಿಮ್ಮ ತಾಯಿ ಗುಜರಾತಿನವರೆಂದು ನೀವು ಹೆಮ್ಮೆಯಿಂದ ಹೇಳುವಾಗ ನನಗೆ ಬಹಳ ಆನಂದವಾಗುತ್ತದೆ.
ಲತಾ ಜೀ – ಹೇಳಿ
ಮೋದಿ ಜೀ – ನಾನು ನಿಮ್ಮ ಬಳಿಗೆ ಬಂದಾಗಲೆಲ್ಲಾ…..
ಲತಾ ಜೀ – ಹೇಳಿ
ಮೋದಿ ಜೀ – ನೀವು ನನಗೆ ಯಾವುದಾದರೊಂದು ಗುಜರಾತಿ ತಿಂಡಿ ತಿನ್ನಿಸಿದ್ದೀರಿ
ಲತಾ ಜೀ –ತಾವು ಏನೆಂದು ತಮಗೇ ಗೊತ್ತಿಲ್ಲ. ನೀವು ಬಂದ ನಂತರ ಭಾರತದ ಚಿತ್ರಣವೇ ಬದಲಾಗುತ್ತಿದೆ ಎನ್ನುವುದು ನನಗೆ ಗೊತ್ತು ಆದ್ದರಿಂದಲೇ ನನಗೆ ಬಹಳ ಸಂತೋಷವಾಗುತ್ತದೆ. ಖುಷಿ ಎನಿಸುತ್ತದೆ.
ಮೋದಿ ಜೀ –ಹಾಂ ದೀದಿ. ನಿಮ್ಮ ಆಶೀರ್ವಾದ ಸದಾ ಇರಲಿ, ಸಂಪೂರ್ಣ ದೇಶಕ್ಕೆ ನಿಮ್ಮ ಆಶೀರ್ವಾದವಿರಲಿ, ನಮ್ಮಂತಹವರು ಏನಾದರೊಂದು ಒಳ್ಳೆಯ ಕೆಲಸ ಮಾಡುತ್ತಿರುವಂತಾಗಲಿ, ನೀವು ನನಗೆ ಯಾವಾಗಲೂ ಪ್ರೇರಣೆ ನೀಡಿದ್ದೀರಿ. ನಿಮ್ಮ ಪತ್ರಗಳೂ ನನಗೆ ತಲುಪುತ್ತಿರುತ್ತವೆ. ಹಾಗೇ ಆಗಿಂದಾಗ್ಗೆ ಉಡುಗೊರೆಗಳೂ ನಿಮ್ಮಿಂದ ನನಗೆ ದೊರೆಯುತ್ತಿರುತ್ತವೆ. ಆಗೆಲ್ಲಾ ನಮ್ಮವರೆನ್ನುವ… ಕುಟುಂಬದ ಬಾಂಧವ್ಯದ ವಿಶೇಷ ಆನಂದ ನನಗಾಗುತ್ತದೆ.
ಲತಾ ಜೀ – ಹೇಳಿ ಹೇಳಿ. ಇಲ್ಲ, ನಾನು ನಿಮಗೆ ಹೆಚ್ಚು ತೊಂದರೆ ಕೊಡಲು ಬಯಸುವುದಿಲ್ಲ, ಏಕೆಂದರೆ ನೀವು ಎಷ್ಟು ಬ್ಯುಸಿ ಎಂದು, ನಿಮಗೆ ಎಷ್ಟು ಕೆಲಸ ಕಾರ್ಯಗಳಿರುತ್ತವೆ, ಏನೆಲ್ಲಾ ಯೋಚಿಸಬೇಕಾಗುತ್ತದೆ ಎಂದು ನಾನು ನೋಡಿದ್ದೇನೆ, ತಿಳಿದುಕೊಂಡಿದ್ದೇನೆ. ನೀವು ನಿಮ್ಮ ತಾಯಿಯವರ ಬಳಿ ಹೋಗಿ ಅವರ ಪಾದಸ್ಪರ್ಶ ಮಾಡಿ ಬಂದಿದ್ದನ್ನು ನೋಡಿದಾಗ, ನಾನು ಕೂಡಾ ಒಬ್ಬರನ್ನು ಅವರ ಬಳಿ ಕಳಿಸಿದೆ ಮತ್ತು ಅವರ ಆಶೀರ್ವಾದ ಪಡೆದುಕೊಂಡೆ.
ಮೋದಿ ಜೀ – ಹೌದು. ನಮ್ಮ ತಾಯಿಗೆ ಅದು ನೆನಪಿತ್ತು ಮತ್ತು ಅವರು ಆ ವಿಷಯ ನನಗೆ ಹೇಳಿದರು.
ಲತಾ ಜೀ – ಹೌದಾ
ಮೋದಿ ಜೀ – ಹೌದು
ಲತಾ ಜೀ – ಅವರು ನನಗೆ ಕರೆ ಮಾಡಿ ಆಶೀರ್ವಾದ ನೀಡಿದಾಗ ನನಗೆ ತುಂಬಾ ತುಂಬಾ ಸಂತೋಷವಾಯಿತು.
ಮೋದಿ ಜೀ – ನಿಮ್ಮ ಈ ಪ್ರೀತಿಯಿಂದಾಗಿ ನನ್ನ ತಾಯಿ ಬಹಳ ಸಂತೋಷಗೊಂಡಿದ್ದರು.
ಲತಾ ಜೀ- ಸರಿ ಸರಿ
ಮೋದಿ ಜೀ – ನೀವು ಯಾವಾಗಲೂ ನನ್ನ ಬಗ್ಗೆ ಯೋಚಿಸುತ್ತಿರುತ್ತೀರಿ ಅದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನಾನು ಮತ್ತೊಮ್ಮೆ ನಿಮಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದೇನೆ.
ಲತಾ ಜೀ – ಸರಿ
ಮೋದಿ ಜೀ –ಕಳೆದ ಬಾರಿ ಮುಂಬಯಿಗೆ ಬಂದಿದ್ದಾಗ ನಿಮ್ಮನ್ನು ಭೇಟಿಯಾಗಲು ಖಂಡಿತಾ ಬರಬೇಕೆಂದುಕೊಂಡಿದ್ದೆ
ಲತಾ ಜೀ – ಸರಿ ಸರಿ ಖಂಡಿತಾ
ಮೋದಿ ಜೀ – ಆದರೆ ಸಮಯದ ಅಭಾವದಿಂದಾಗಿ ಬರಲು ಸಾಧ್ಯವಾಗಲಿಲ್ಲ.
ಲತಾ ಜೀ – ಸರಿ
ಮೋದಿ ಜೀ –ಆದರೆ ನಾನು ಶೀಘ್ರದಲ್ಲೇ ಬರುತ್ತೇನೆ
ಲತಾ ಜೀ – ಸರಿ
ಮೋದಿ ಜೀ – ಮನೆಗೆ ಬಂದು ಕೆಲವು ಗುಜರಾತಿ ತಿನಿಸುಗಳನ್ನು ನಿಮ್ಮ ಕೈಯಿಂದಲೇ ತಿನ್ನುತ್ತೇನೆ
ಲತಾ ಜೀ – ಖಂಡಿತಾ ಖಂಡಿತಾ. ಇದು ನನ್ನ ಸೌಭಾಗ್ಯ
ಮೋದಿ ಜೀ – ವಂದನೆ ದೀದಿ
ಲತಾ ಜೀ – ವಂದನೆ
ಮೋದಿ ಜೀ – ನಿಮಗೆ ಶುಭ ಹಾರೈಕೆಗಳು
ಲತಾ ಜೀ – ನಿಮಗೆ ವಂದನೆಗಳು
ಮೋದಿ ಜೀ- ವಂದನೆ
ನನ್ನ ಪ್ರೀತಿಯ ದೇಶಬಾಂಧವರೇ, ನವರಾತ್ರಿಯ ಜೊತೆಜೊತೆಯಲ್ಲೇ, ಇಂದಿನಿಂದ ಹಬ್ಬಗಳ ವಾತಾವರಣವು ಮತ್ತೊಮ್ಮೆ ಹೊಸ ಭರವಸೆ, ಹೊಸ ಶಕ್ತಿ, ಹೊಸ ಉತ್ಸಾಹ, ಹೊಸ ಸಂಕಲ್ಪ ತುಂಬುತ್ತದೆ. ಹಬ್ಬಗಳಋತುವಲ್ಲವೇ …. ಮುಂದಿನ ಹಲವು ವಾರಗಳ ಕಾಲ ದೇಶಾದ್ಯಂತ ಹಬ್ಬದ ಶೋಭೆ ತುಂಬಿರುತ್ತದೆ. ನಾವೆಲ್ಲರೂ ನವರಾತ್ರಿ ಮಹೋತ್ಸವ, ಗರ್ಬಾ, ದುರ್ಗಾ ಪೂಜೆ, ದಸರಾ, ದೀಪಾವಳಿ, ಭೈಯ್ಯಾ ದೂಜ್, ಛಟ್ ಪೂಜಾ ಹೀಗೇ ಅನೇಕ ಹಬ್ಬಗಳನ್ನು ಆಚರಿಸೋಣ. ಮುಂಬರುವ ಹಬ್ಬಗಳಿಗಾಗಿ ನಿಮ್ಮೆಲ್ಲರಿಗೂ ಅನೇಕಾನೇಕ ಶುಭ ಹಾರೈಕೆಗಳು. ಹಬ್ಬಗಳಲ್ಲಿ ಕುಟುಂಬದವರೆಲ್ಲರೂ ಒಟ್ಟಿಗೆ ಸೇರುತ್ತಾರೆ. ಮನೆಗಳಲ್ಲಿ ಸಂತೋಷ ತುಂಬಿರುತ್ತದೆ, ಆದರೆ, ನಮ್ಮ ಸುತ್ತಲೂ ಈ ಹಬ್ಬಗಳ ಸಂತೋಷದಿಂದ ವಂಚಿತರಾದ ಅನೇಕ ಜನರಿದ್ದಾರೆ ಎನ್ನುವುದನ್ನು ನೀವು ಗಮನಿಸಿರಬಹುದು. ಆದ್ದರಿಂದಲೇ ಹೇಳುತ್ತಾರೆ ದೀಪದ ಕೆಳಗೇ ಕತ್ತಲು ಎಂದು….ಬಹುಶಃ ಈ ಗಾದೆ ಕೇವಲ ಮಾತು ಮಾತ್ರವಲ್ಲ, ನಮಗೆಲ್ಲರಿಗೂ ಆದೇಶ, ದರ್ಶನ ಮತ್ತು ಪ್ರೇರಣೆಯಾಗಿದೆ. ಯೋಚಿಸಿ ನೋಡಿ, ಒಂದೆಡೆ ಕೆಲವು ಮನೆಗಳಲ್ಲಿ ಬೆಳಕು ಝಗಮಗಿಸುತ್ತಿದ್ದರೆ, ಮತ್ತೊಂದೆಡೆ ಸುತ್ತ ಮುತ್ತಲಿನ ಕೆಲವು ಮನೆಗಳಲ್ಲಿ ಕತ್ತಲು ಹರಡಿರುತ್ತದೆ. ಕೆಲವು ಮನೆಗಳಲ್ಲಿ ಸಿಹಿ ತಿಂಡಿ ಕೆಟ್ಟು ಹೋಗುತ್ತಿದ್ದರೆ, ಇನ್ನು ಕೆಲವು ಮನೆಗಳಲ್ಲಿ ಮಕ್ಕಳು ಸಿಹಿತಿಂಡಿಗಾಗಿ ಹಂಬಲಿಸುತ್ತಿರುತ್ತಾರೆ. ಕೆಲವು ಅಲಮಾರುಗಳಲ್ಲಿ ಬಟ್ಟೆ ಇಡಲು ಸ್ಥಳವೇ ಇರುವುದಿಲ್ಲ, ಕೆಲವು ಮನೆಗಳಲ್ಲಿ ಮೈ ಮುಚ್ಚಿಕೊಳ್ಳುವುದಕ್ಕೆ ಬಟ್ಟೆಗಾಗಿ ಪರದಾಡುತ್ತಾರೆ. ಇದನ್ನು ತಾನೇ ದೀಪದ ಕೆಳಗೆ ಕತ್ತಲೆ ಎನ್ನುವುದು?… ಇದೇ ದೀಪದ ಕೆಳಗಿನ ಕತ್ತಲೆ. ಈ ಕತ್ತಲೆ ದೂರವಾದಾಗ, ಕಡಿಮೆಯಾಗಿ – ಬೆಳಕು ಹರಡಿದಾಗಲೇ ಈ ಹಬ್ಬಗಳ ನಿಜವಾದ ಸಂತೋಷ. ಅಭಾವ ಇರುವಲ್ಲಿ ಕೂಡಾ ನಾವು ಸಂತೋಷವನ್ನು ಹಂಚಿಕೊಳ್ಳಬೇಕು, ಇದು ನಮ್ಮ ಸ್ವಭಾವವಾಗಬೇಕು. ನಮ್ಮ ಮನೆಗೆ ಸಿಹಿತಿಂಡಿಗಳು, ಬಟ್ಟೆಗಳು, ಉಡುಗೊರೆಗಳು ಬಂದಾಗ, ಅವುಗಳನ್ನು ಕೊಡುವ ಬಗ್ಗೆಯೂ ಒಂದು ಕ್ಷಣ ಯೋಚಿಸಿ. ಕನಿಷ್ಠ ಪಕ್ಷ ನಮ್ಮ ಮನೆಯಲ್ಲಿ ಹೆಚ್ಚಾಗಿರುವುದನ್ನು, ನಾವು ಉಪಯೋಗಿಸದೇ ಇರುವಂತಹ ವಸ್ತುಗಳನ್ನಾದರೂ ಖಂಡಿತಾ ಕೊಟ್ಟುಬಿಡಿ. ಹಲವು ನಗರಗಳಲ್ಲಿ ಅನೇಕ ಎನ್ ಜಿ ಓಗಳು, ಯುವ ಮಿತ್ರರ ಸ್ಟಾರ್ಟ್ ಅಪ್ ಗಳು ಇಂತಹ ಕೆಲಸ ಮಾಡುತ್ತವೆ. ಅವು ಜನರ ಮನೆಗಳಿಂದ, ಬಟ್ಟೆಗಳು, ಸಿಹಿತಿಂಡಿಗಳು, ಊಟ ಎಲ್ಲವನ್ನೂ ಸಂಗ್ರಹಿಸಿ, ಅಗತ್ಯ ಇರುವವರನ್ನು ಹುಡುಕಿ ಅವರುಗಳಿಗೆ ತಲುಪಿಸುತ್ತವೆ….ತಮ್ಮಷ್ಟಕ್ಕೆ ತಾವು ಕೆಲಸ ನಿರ್ವಹಿಸುತ್ತವೆ. ಈ ಸಲ, ಈ ಹಬ್ಬದ ಋತುವಿನಲ್ಲಿ ಸಂಪೂರ್ಣ ಅರಿವು ಮತ್ತು ಸಂಕಲ್ಪದೊಂದಿಗೆ ನಾವು ಈ ದೀಪದ ಕೆಳಗಿನ ಕತ್ತಲೆಯನ್ನು ಹೋಗಲಾಡಿಸಬಲ್ಲೆವೆ? ಅನೇಕ ಬಡ ಪರಿವಾರಗಳ ಮೊಗದಲ್ಲಿ ಮೂಡುವ ಮುಗುಳ್ನಗೆ ನಿಮ್ಮ ಹಬ್ಬದ ಸಂತೋಷವನ್ನು ದ್ವಿಗುಣಗೊಳಿಸುತ್ತದೆ. ನಿಮ್ಮ ಮುಖ ಮತ್ತಷ್ಟು ಹೊಳೆಯುತ್ತದೆ, ನಿಮ್ಮ ದೀಪ ಮತ್ತಷ್ಟು ದೇದೀಪ್ಯಮಾನವಾಗಿ ಬೆಳಗುತ್ತದೆ. ನಿಮ್ಮ ದೀಪಾವಳಿ ಮತ್ತಷ್ಟು ಉಜ್ವಲವಾಗುತ್ತದೆ.
ನನ್ನ ಪ್ರೀತಿಯ ಸೋದರ ಸೋದರಿಯರೇ, ದೀಪಾವಳಿಯಂದು ಸೌಭಾಗ್ಯ ಮತ್ತು ಸಮೃದ್ಧಿಯ ರೂಪದಲ್ಲಿ ಮನೆ ಮನೆಗಳಲ್ಲಿ ಲಕ್ಷ್ಮಿಯ ಆಗಮನವಾಗುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ಲಕ್ಷ್ಮಿಯನ್ನು ಸ್ವಾಗತಿಸಲಾಗುತ್ತದೆ. ನಾವು ಈ ಬಾರಿ ಹೊಸದೊಂದು ರೀತಿಯಲ್ಲಿ ಲಕ್ಷ್ಮಿಯನ್ನು ಸ್ವಾಗತಿಸಬಹುದೇ? ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನು ಲಕ್ಷ್ಮಿಯೆಂದು ಭಾವಿಸಲಾಗುತ್ತದೆ …. ಮಗಳು ಸೌಭಾಗ್ಯ ಮತ್ತು ಸಮೃದ್ಧಿಯನ್ನು ತರುತ್ತಾಳೆ. ಈ ಬಾರಿ ನಾವು ನಮ್ಮ ಸಮಾಜದಲ್ಲಿ, ಹಳ್ಳಿಗಳಲ್ಲಿ, ನಗರಗಳಲ್ಲಿ ಹೆಣ್ಣುಮಕ್ಕಳನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಆಯೋಜಿಸಬಹುದೇ?ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ತಮ್ಮ ಪರಿಶ್ರಮ ಮತ್ತು ಬದ್ಧತೆಯಿಂದ, ನೈಪುಣ್ಯತೆಯಿಂದ ಕುಟುಂಬದ, ಸಮಾಜದ, ದೇಶದ ಹೆಸರನ್ನು ಉಜ್ವಲಗೊಳಿಸುತ್ತಿರುವ ಅನೇಕ ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ಈ ದೀಪಾವಳಿಯಂದು ಭಾರತದ ಈ ಲಕ್ಷ್ಮಿಯರನ್ನು ಗೌರವಿಸುವ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳಬಹುದೇ? ನಮ್ಮ ಸುತ್ತಮುತ್ತ ಅಸಾಧಾರಣ ಕೆಲಸ ಕಾರ್ಯ ಮಾಡುತ್ತಿರುವ ಅನೇಕ ಹೆಣ್ಣುಮಕ್ಕಳು, ಸೊಸೆಯಂದಿರು ಇದ್ದಾರೆ. ಕೆಲವರು ಬಡಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತಿರಬಹುದು, ಕೆಲವರು ಆರೋಗ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರಬಹುದು, ಮತ್ತೆ ಕೆಲವರು ವೈದ್ಯರಾಗಿ, ಇಂಜಿನಿಯರ್ ಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರಬಹುದು. ವಕೀಲರಾಗಿ ಯಾರಿಗಾದರೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿರಬಹುದು. ನಮ್ಮ ಸಮಾಜ ಇಂತಹ ಹೆಣ್ಣುಮಕ್ಕಳನ್ನು ಗುರುತಿಸಬೇಕು, ಗೌರವಿಸಬೇಕು ಮತ್ತು ಈ ಬಗ್ಗೆ ಹೆಮ್ಮೆ ಪಡಬೇಕು. ಇವರನ್ನು ಗೌರವಿಸುವ ಕಾರ್ಯಕ್ರಮ ದೇಶಾದ್ಯಂತ ನಡೆಯಬೇಕು. ನಾವು ಮಾಡಬಹುದಾದ ಮತ್ತೊಂದು ಕೆಲಸವೆಂದರೆ, ಇಂತಹ ಹೆಣ್ಣುಮಕ್ಕಳನ್ನು ಗುರುತಿಸಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಶೇರ್ ಮಾಡಿಕೊಳ್ಳಬೇಕು. ಮತ್ತು ಇದಕ್ಕಾಗಿ hash tagbharatkilaxmiಬಳಸಿ.
ನಾವೆಲ್ಲರೂ ಸೇರಿ “ಸೆಲ್ಫಿ ವಿದ್ ಡಾಟರ್” ಮಹಾ ಅಭಿಯಾನ ಆರಂಭಿಸಿದ್ದೆವು. ಅದು ವಿಶ್ವಾದ್ಯಂತ ಹರಡಿಬಿಟ್ಟಿತ್ತು. ಅದೇ ರೀತಿ ಈ ಬಾರಿ “ಭಾರತ್ ಕಿ ಲಕ್ಷ್ಮಿ” ಅಭಿಯಾನವನ್ನು ನಾವು ನಡೆಸೋಣ. “ಭಾರತ್ ಕಿ ಲಕ್ಷ್ಮಿ” ಗೆ ಪ್ರೋತ್ಸಾಹ ನೀಡುವುದರ ಅರ್ಥ… ದೇಶ ಮತ್ತು ದೇಶವಾಸಿಗಳನ್ನು ಸಮೃದ್ಧಿಯ ಹಾದಿಯಲ್ಲಿ ಸದೃಢಗೊಳಿಸುವುದಾಗಿದೆ.
ನನ್ನ ಪ್ರೀತಿಯ ದೇಶಬಾಂಧವರೇ, ನಾನು ಮೊದಲೇ ಹೇಳಿದಂತೆ, ಮನ್ ಕಿ ಬಾತ್ ನ ಬಹಳ ದೊಡ್ಡ ಪ್ರಯೋಜನವೆಂದರೆ ನನಗೆ ಪರಿಚಯವಿರುವ ಮತ್ತು ಪರಿಚಯವಿಲ್ಲದಿರುವ ಅನೇಕರೊಂದಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾತನಾಡುವ ಸೌಭಾಗ್ಯ ದೊರೆಯುತ್ತದೆ. ಕೆಲ ದಿನಗಳ ಹಿಂದೆ ದೂರದ ಅರುಣಾಚಲದಿಂದ ಅಲೀನಾ ತಾಯಂಗ್ ಎಂಬ ವಿದ್ಯಾರ್ಥಿನಿ ನನಗೆ ಬಹಳ ಆಸಕ್ತಿಕರ ಪತ್ರವೊಂದನ್ನು ಕಳುಹಿಸಿದ್ದರು. ಅದರಲ್ಲಿ ಹೀಗಿತ್ತು. ನಾನು ಆ ಪತ್ರವನ್ನು ನಿಮಗಾಗಿ ಓದುತ್ತೇನೆ
ಮಾನ್ಯ ಪ್ರಧಾನ ಮಂತ್ರಿಗಳೇ
ನನ್ನ ಹೆಸರು ಅಲೀನಾ ತಾಯಂಗ್. ನಾನು ಅರುಣಾಚಲ ಪ್ರದೇಶದ ರೋಯಿಂಗ್ ನಿವಾಸಿ. ಈ ಬಾರಿ ನನ್ನ ಪರೀಕ್ಷೆಯ ಫಲಿತಾಂಶ ಬಂದಾಗ, ನೀನು “ಎಕ್ಸಾಮ್ ವಾರಿಯರ್ಸ್” ಪುಸ್ತಕ ಓದಿದ್ದೀಯಾ ಎಂದು ಕೆಲವರು ನನ್ನನ್ನು ಪ್ರಶ್ನಿಸಿದರು. ನಾನು ಈ ಪುಸ್ತಕವನ್ನು ಓದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಆದರೆ ನಾನು ಹಿಂದಿರುಗಿ ಬಂದನಂತರ ಈ ಪುಸ್ತಕವನ್ನು ನಾನು ಖರೀದಿಸಿದೆ ಮತ್ತು ಎರಡು, ಮೂರು ಬಾರಿ ಓದಿದೆ… ಇಷ್ಟವಾಯಿತು. ನಾನು ಈ ಪುಸ್ತಕವನ್ನು ಪರೀಕ್ಷೆಗೆ ಮೊದಲೇ ಓದಿದ್ದರೆ ನನಗೆ ಬಹಳ ಹೆಚ್ಚಿನ ಪ್ರಯೋಜನ ದೊರೆಯುತ್ತಿತ್ತೆಂದು ನನಗನಿಸಿತು. ಈ ಪುಸ್ತಕದಲ್ಲಿರುವ ಅನೇಕ ಅಂಶಗಳು ನನಗೆ ಬಹಳ ಇಷ್ಟವಾದವು, ಆದರೆ ಇದರಲ್ಲಿ ವಿದ್ಯಾರ್ಥಿಗಳಿಗಾಗಿ ಅನೇಕ ಸಲಹೆ ಸೂಚನೆಗಳಿವೆಯಾದರೂ ಪಾಲಕರು ಮತ್ತು ಪೋಷಕರು ಹಾಗೂ ಶಿಕ್ಷಕರಿಗಾಗಿ ಹೆಚ್ಚಿನ ಅಂಶಗಳೇನೂ ಇದರಲ್ಲಿ ಇಲ್ಲ ಎನ್ನುವುದನ್ನು ನಾನು ಗಮನಿಸಿದೆ. ನೀವು ಪುಸ್ತಕದ ಹೊಸ ಆವೃತ್ತಿಯ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಅದರಲ್ಲಿ ತಾಯಿತಂದೆಯರಿಗಾಗಿ ಹಾಗೂ ಶಿಕ್ಷಕರಿಗಾಗಿ ಕೆಲವು ಸಲಹೆಗಳನ್ನು ಮತ್ತು ಕೆಲವು ಅಂಶಗಳನ್ನು ಖಂಡಿತವಾಗಿಯೂ ಸೇರಿಸಬೇಕೆಂದು ನಾನು ಇಚ್ಛಿಸುತ್ತೇನೆ.
ನೋಡಿ, ದೇಶದ ಪ್ರಧಾನ ಸೇವಕರಿಗೆ ಕೆಲಸ ಹೇಳಿದರೆ ಸಾಕು ಅದು ಖಂಡಿತಾ ಆಗಿಯೇ ಬಿಡುತ್ತದೆ ಎನ್ನುವ ಭರವಸೆ ನನ್ನ ಯುವ ಮಿತ್ರರಿಗೆ ಕೂಡಾ ಇದೆ.
ನನ್ನ ಪುಟ್ಟ ವಿದ್ಯಾರ್ಥಿ ಸ್ನೇಹಿತೆಯೇ, ಪತ್ರ ಬರೆದಿದ್ದಕ್ಕಾಗಿ ಮೊದಲಿಗೆ ಧನ್ಯವಾದ ಹೇಳುತ್ತಿದ್ದೇನೆ. “ಎಕ್ಸಾಮ್ ವಾರಿಯರ್ಸ್” ಎರಡು ಮೂರು ಬಾರಿ ಓದಿದ್ದಕ್ಕಾಗಿ ಧನ್ಯವಾದ. ಮತ್ತು ಓದುತ್ತಿರುವ ಸಮಯದಲ್ಲಿ ಅದರಲ್ಲಿ ಯಾವ ಅಂಶದ ಕೊರತೆಯಿದೆ ಎಂದು ನನಗೆ ತಿಳಿಯಪಡಿಸಿದ್ದಕ್ಕಾಗಿ ಧನ್ಯವಾದ. ಇದರೊಂದಿಗೆ ನನ್ನ ಈ ಪುಟ್ಟ ಸ್ನೇಹಿತೆ ನನಗೆ ಕೆಲಸವೊಂದನ್ನು ಕೂಡಾ ಒಪ್ಪಿಸಿದ್ದಾಳೆ. ಕೆಲಸವೊಂದನ್ನು ಮಾಡುವುದಕ್ಕೆ ಆದೇಶ ನೀಡಿದ್ದಾಳೆ. ನಾನು ನಿಮ್ಮ ಆದೇಶದ ಪಾಲನೆಯನ್ನು ಖಂಡಿತವಾಗಿಯೂ ಮಾಡುತ್ತೇನೆ. ನೀವು ಹೇಳಿದಂತೆ ಪುಸ್ತಕದ ಹೊಸ ಆವೃತ್ತಿಯನ್ನು ತರುವುದಕ್ಕೆ ನನಗೆ ಸಮಯ ದೊರೆತಿದ್ದೇ ಆದಲ್ಲಿ, ಅದರಲ್ಲಿ ಪಾಲಕರು, ಪೋಷಕರು ಮತ್ತು ಶಿಕ್ಷಕರಿಗಾಗಿ ಕೆಲವು ಅಂಶಗಳನ್ನು ಬರೆಯುವ ಪ್ರಯತ್ನವನ್ನು ಮಾಡುತ್ತೇನೆ. ಆದರೆ ನೀವು ನನಗೆ ಸಹಾಯ ಮಾಡುವುದಕ್ಕೆ ಸಾಧ್ಯವೇ ಎಂದು ನಾನು ನಿಮ್ಮನ್ನು ಕೇಳ ಬಯಸುತ್ತೇನೆ. ನಿತ್ಯ ಜೀವನದಲ್ಲಿ ನಿಮಗಾಗುವ ಅನುಭವಗಳೇನು, ದೇಶದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕರು ಮತ್ತು ತಾಯಿತಂದೆಯರು ಒತ್ತಡ ಮುಕ್ತ ಪರೀಕ್ಷೆಸಂಬಂಧಿತ ವಿಷಯಗಳು, ನಿಮ್ಮ ಅನುಭವಗಳು, ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ನನಗೆ ತಿಳಿಸಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ನಾನು ಖಂಡಿತವಾಗಿಯೂ ಅವುಗಳನ್ನು ಅಧ್ಯಯನ ಮಾಡುತ್ತೇನೆ. ಅವುಗಳ ಕುರಿತು ಆಲೋಚಿಸುತ್ತೇನೆ, ಮತ್ತು ಅವು ನನಗೆ ಸರಿ ಎನಿಸಿದಲ್ಲಿ, ಅವುಗಳನ್ನು ನನ್ನ ಮಾತುಗಳಲ್ಲಿ, ನನ್ನದೇ ಆದ ರೀತಿಯಲ್ಲಿ ಬರೆಯುವ ಪ್ರಯತ್ನ ಖಂಡಿತಾ ಮಾಡುತ್ತೇನೆ. ಒಂದು ವೇಳೆ ನಿಮ್ಮಿಂದ ಸಲಹೆ ಸೂಚನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ, ನನ್ನ ಹೊಸ ಆವೃತ್ತಿ ತರುವ ಮಾತು ಖಂಡಿತಾ ಖಚಿತವಾಗುತ್ತದೆ. ನಿಮ್ಮ ವಿಚಾರಗಳಿಗಾಗಿ ನಾನು ನಿರೀಕ್ಷಿಸುತ್ತೇನೆ. ಅರುಣಾಚಲದ ನನ್ನ ಪುಟ್ಟ ಸ್ನೇಹಿತೆ, ಅಲೀನಾ ತಾಯಂಗ್ ಗೆ ನಾನು ಮತ್ತೊಮ್ಮೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶಬಾಂಧವರೇ, ನೀವು ದಿನಪತ್ರಿಕೆಗಳ ಮೂಲಕ, ಟಿವಿ ಮೂಲಕ ದೇಶದ ಪ್ರದಾನಮಂತ್ರಿಯವರ ಬಿಡುವಿಲ್ಲದ ಕಾರ್ಯಕ್ರಮಗಳ ಬಗ್ಗೆ ತಿಳಿದೇ ಇರುತ್ತೀರಿ ಮತ್ತು ಅದರ ಬಗ್ಗೆ ಚರ್ಚೆ ಕೂಡಾ ಮಾಡುತ್ತಿರುತ್ತೀರಿ. ಆದರೆ ನಾನು ಕೂಡಾ ನಿಮ್ಮ ಹಾಗೆಯೇ ಓರ್ವ ಸಾಧಾರಣ ಮನುಷ್ಯ ಎನ್ನುವುದು ನಿಮಗೆ ಗೊತ್ತಲ್ಲವೇ. ಒಬ್ಬ ಸಾಮಾನ್ಯ ನಾಗರಿಕನಾಗಿದ್ದೇನೆ ಆದ್ದರಿಂದಲೇ ಸಾಮಾನ್ಯ ಜೀವನದಲ್ಲಿ ಯಾವ ಯಾವ ಅಂಶಗಳು ಪ್ರಭಾವ ಉಂಟುಮಾಡುತ್ತವೆಯೇ ಅಂತಹ ಪ್ರಭಾವಗಳು ನನ್ನ ಜೀವನದಲ್ಲಿ ಮತ್ತು ನನ್ನ ಮನದ ಮೇಲೆ ಪ್ರಭಾವ ಬೀರುತ್ತವೆ ಏಕೆಂದರೆ ನಾನು ಕೂಡಾ ನಿಮ್ಮ ನಡುವಿನಿಂದಲೇ ಬಂದಿದ್ದೇನೆ. ನೋಡಿ, ಈ ಬಾರಿ “ಯುಎಸ್ ಓಪನ್” ನಲ್ಲಿ ಗೆಲುವಿನ ಬಗ್ಗೆ ಎಷ್ಟು ಚರ್ಚೆಯಾಗಿತ್ತೋ ಅಷ್ಟೇ ಚರ್ಚೆ ರನ್ನರ್ ಅಪ್ ದೇನಿಲ್ ಮೆದ್ವೆದೇವ್ಭಾಷಣದ ಬಗ್ಗೆ ಕೂಡಾ ನಡೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇದು ಬಹಳ ಹೆಚ್ಚು ನಡೆಯುತ್ತಿದ್ದುದರಿಂದ ನಾನು ಕೂಡಾ ಆ ಭಾಷಣ ಕೇಳಿದೆ ಮತ್ತು ಮ್ಯಾಚ್ ಕೂಡಾ ನೋಡಿದೆ. 23 ವರ್ಷದ ದೇನಿಲ್ ಮೆದ್ವೆದೇವ್ ಅವರ ಸರಳತೆ, ಅವರ ಪ್ರಬುದ್ಧತೆ, ಪ್ರತಿಯೊಬ್ಬರನ್ನೂ ಪ್ರಭಾವಿತರನ್ನಾಗಿ ಮಾಡುತ್ತದೆ. ನಾನು ಖಂಡಿತವಾಗಿಯೂ ಪ್ರಭಾವಿತನಾದೆ. ಈ ಭಾಷಣದಸ್ವಲ್ಪ ಸಮಯದ ಮುಂಚೆ ಅವರು 19 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಮತ್ತು ಟೆನ್ನಿಸ್ ಲೆಜೆಂಡ್ ರಾಫಲ್ ನಡಾಲ್ ಅವರ ಎದುರು ಫೈನಲ್ ನಲ್ಲಿ ಪರಾಭವಗೊಂಡಿದ್ದರು. ಈ ಸಮಯದಲ್ಲಿ ಬೇರೆ ಯಾರಾದರೂ ಆಗಿದ್ದಲ್ಲಿ ಅವರು ಬೇಸರ ಮತ್ತು ನಿರಾಶೆ ಹೊಂದುತ್ತಿದ್ದರು, ಆದರೆ ಅವರ ಮುಖ ಬಾಡಿರಲಿಲ್ಲ, ಬದಲಾಗಿ ಅವರು ತಮ್ಮ ಮಾತಿನಿಂದ ಎಲ್ಲರ ಮುಖಗಳಲ್ಲಿ ಮಂದಹಾಸ ಮೂಡಿಸಿದರು. ಅವರ ವಿನಯ, ಸರಳತೆ, ನಿಜವಾದ ಅರ್ಥದಲ್ಲಿ, ಲೆಟರ್ ಅಂಡ್ ಸ್ಪಿರಿಟ್ ನಲ್ಲಿ ಸ್ಪೋರ್ಟ್ಸ್ ಮನ್ ಸ್ಪಿರಿಟ್ ನಮಗೆ ನೋಡಲು ದೊರೆಯಿತು. ಅದನ್ನು ನೋಡಿದ ಪ್ರತಿಯೊಬ್ಬರೂ ಮಂತ್ರಮುಗ್ಧರಾದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರು ಅವರ ಮಾತುಗಳನ್ನು ಆಪ್ಯಾಯತೆಯಿಂದ ಸ್ವಾಗತಿಸಿದರು. ದೇನಿಲ್ ಅವರು ಚಾಂಪಿಯನ್ ನಡಾಲ್ ಅವರನ್ನು ಕೂಡಾ ಮುಕ್ತ ಕಂಠದಿಂದ ಪ್ರಶಂಸಿಸಿದರು. ನಡಾಲ್ ಅವರು ಲಕ್ಷಾಂತರ ಯುವಕರನ್ನು ಯಾವ ರೀತಿ ಟೆನ್ನಿಸ್ ನತ್ತ ಪ್ರೇರೇಪಿಸಿದರು ಎಂದು ಕೂಡಾ ಹೇಳಿದರು. ಅಲ್ಲದೇ ಅವರೊಂದಿಗೆ ಆಟವಾಡುವುದು ಎಷ್ಟು ಕಷ್ಟಕರವಾಗಿತ್ತು ಎಂದು ಕೂಡಾ ಹೇಳಿದರು. ತೀವ್ರ ಸ್ಪರ್ಧೆಯಲ್ಲಿ ಪರಾಭವದ ನಂತರ ಕೂಡಾ ತಮ್ಮ ಪ್ರತಿಸ್ಪರ್ಧಿ ನಡಾಲ್ ಅವರನ್ನು ಪ್ರಶಂಸೆ ಮಾಡುವ ಮೂಲಕ ಸ್ಪೋರ್ಟ್ಸ್ ಮನ್ ಸ್ಪಿರಿಟ್ ನ ಜೀವಂತ ರುಜುವಾತು ನೀಡಿಬಿಟ್ಟರು. ಮತ್ತೊಂದೆಡೆ ಚಾಂಪಿಯನ್ ನಡಾಲ್ ಕೂಡಾ ದೇನಿಲ್ ಅವರ ಆಟವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಒಂದೇ ಪಂದ್ಯದಲ್ಲಿ ಸೋತವರ ಉತ್ಸಾಹ ಮತ್ತು ಗೆದ್ದವರ ವಿನಯ ನೋಡಲು ಅದ್ಬುತವಾಗಿತ್ತು. ನೀವೇನಾದರೂ ದೇನಿಲ್ ಮೇದ್ವೆದೇವ್ ಅವರ ಭಾಷಣ ಕೇಳಿರದೇ ಇದ್ದಲ್ಲಿ, ನಾನು ನಿಮ್ಮಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನತೆಯಲ್ಲಿ ಈ ವಿಡಿಯೋ ಖಂಡಿತವಾಗಿಯೂ ವೀಕ್ಷಿಸಿ ಎಂದು ಹೇಳುತ್ತೇನೆ. ಇದರಲ್ಲಿ ಪ್ರತಿಯೊಂದು ವರ್ಗಕ್ಕೂ ಎಲ್ಲಾ ವಯಸ್ಸಿನವರಿಗೂ ಕಲಿತುಕೊಳ್ಳುವುದಕ್ಕೆ ಬಹಳಷ್ಟು ಇದೆ. ಸೋಲು ಗೆಲುವಿನ ಪರಿಕಲ್ಪನೆಯನ್ನು ಮೀರಿದ ಕ್ಷಣ ಇದಾಗಿತ್ತು. ಸೋಲು-ಗೆಲುವಿಗೆ ಪ್ರಾಮುಖ್ಯತೆ ಇಲ್ಲ, ಜೀವನ ಗೆದ್ದು ಬಿಡುತ್ತದೆ. ಇದನ್ನು ನಮ್ಮ ಶಾಸ್ತ್ರಗಳಲ್ಲಿ ಬಹಳ ಉತ್ತಮ ರೀತಿಯಲ್ಲಿ ಹೇಳಲಾಗಿದೆ. ನಮ್ಮ ಪೂರ್ವಜರ ಚಿಂತನೆ ನಿಜಕ್ಕೂ ಬಹಳ ಪ್ರಶಂಸನೀಯವಾದದ್ದು. ನಮ್ಮ ಶಾಸ್ತ್ರಗಳಲ್ಲಿ ಹೀಗೆಂದು ಹೇಳಲಾಗುತ್ತದೆ
ವಿದ್ಯಾ ವಿನಯ ಉಪೇತಾ ಹರತಿ
ನ ಚೆತಾಂಸೀ ಕಸ್ಯ ಮನುಜಸ್ಯ
ಮಣಿ ಕಾಂಚನ ಸಂಯೋಗಃ
ಜನಯತಿ ಲೋಕಸ್ಯ ಲೋಚನ ಆನಂದಮ್
ಅಂದರೆ, ವ್ಯಕ್ತಿಯೊಬ್ಬನಲ್ಲಿ ಯೋಗ್ಯತೆ ಹಾಗೂ ವಿನಯ ಎರಡೂ ಸಮ್ಮಿಳಿತವಾದಲ್ಲಿ, ಅವರು ಯಾರ ಮನಸ್ಸನ್ನು ಗೆಲ್ಲಲಾರರು? ವಾಸ್ತವದಲ್ಲಿ ಈ ಯುವ ಕ್ರೀಡಾಪಟು ಪ್ರಪಂಚದಾದ್ಯಂತ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ.
ನನ್ನ ಪ್ರಿಯ ದೇಶ ಬಾಂಧವರೇ ಅದರಲ್ಲೂ ವಿಶೇಷವಾಗಿ ನನ್ನ ಯುವ ಮಿತ್ರರೇ, ಈಗ ನಾನು ಏನು ಮಾತನಾಡಲಿದ್ದೇನೆಯೋ ಅದು ನಿಮ್ಮ ಒಳ್ಳೆಯದಕ್ಕೇ ಆಗಿದೆ. ವಾದ ವಿವಾದ ನಡೆಯುತ್ತಲೇ ಇರುತ್ತದೆ. ಪರ – ವಿರೋಧ ನಡೆಯುತ್ತಲೇ ಇರುತ್ತದೆ. ಆದರೆ ಕೆಲ ವಿಷಯಗಳು ಉಲ್ಬಣಗೊಳ್ಳುವ ಮೊದಲೇ ತಡೆದರೆ ತುಂಬಾ ಲಾಭ ದಾಯಕವಾಗಿರುತ್ತದೆ. ಯಾವುದು ಅತಿರೇಕಕ್ಕೆ ಹೋಗುತ್ತದೋ ಅದು ಅಷ್ಟೇ ವಿಶಾಲವಾಗಿ ಪಸರಿಸುತ್ತದೆ. ನಂತರ ಅದನ್ನು ತಡೆಯುವುದು ಬಹಳ ಕಠಿಣವಾಗುತ್ತದೆ. ಆದರೆ, ಒಂದು ವೇಳೆ ಆರಂಭದಲ್ಲೇ ನಾವು ಜಾಗೃತರಾಗಿ ಅದನ್ನು ತಡೆದರೆ ಬಹಳಷ್ಟು ಹಾನಿಯಿಂದ ಬಚಾವಾಗಬಹುದು. ಇದೇ ಭಾವದಿಂದ ಇಂದು ಯುವಕರಿಗಾಗಿ ಖಂಡಿತ ಒಂದೆರಡು ಮಾತು ಹೇಳಬೇಕೆಂದು ನನ್ನ ಮನಸ್ಸು ಹೇಳುತ್ತಿದೆ. ತಂಬಾಕುವಿನ ವ್ಯಸನ ಆರೋಗ್ಯಕ್ಕೆ ಹಾನಿಕಾರಕ ಎಂದು ನಮ್ಮೆಲ್ಲರಿಗೂ ತಿಳಿದಿದೆ ಮತ್ತು ಆ ದುಶ್ಚಟದಿಂದ ಹೊರಬರುವುದು ಬಹಳ ಕಷ್ಟದಾಯಕವಾಗುತ್ತದೆ. ತಂಬಾಕು ಸೇವನೆ ಮಾಡುವವರಿಗೆ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡದಂತಹ ರೋಗಗಳು ಬರುವಂತಹ ಆತಂಕವೂ ಬಹಳ ಇರುತ್ತದೆ. ಹೀಗೆಂದು ಎಲ್ಲರೂ ಹೇಳುತ್ತಾರೆ. ತಂಬಾಕುವಿನಲ್ಲಿರುವ ನಿಕೋಟಿನ್ ನಿಂದ ಮತ್ತು ಬರುತ್ತದೆ. ಬಾಲ್ಯದಲ್ಲಿ ಇದರ ಸೇವನೆ ಮಾಡುವುದರಿಂದ ಮೆದುಳಿನ ಅಭಿವೃದ್ಧಿಯ ಮೇಲೂ ಪರಿಣಾಮಗಳಾಗುತ್ತವೆ. ಆದರೆ, ಇಂದು ನಾನು ನಿಮ್ಮೊಂದಿಗೆ ಒಂದು ಹೊಸ ವಿಷಯದ ಕುರಿತು ಮಾತನಾಡಬಯಸುತ್ತೇನೆ. ಭಾರತದಲ್ಲಿ ಇತ್ತೀಚೆಗೆ E – ಸಿಗರೇಟ್ ನಿಷೇಧದ ಬಗ್ಗೆ ನಿಮಗೆ ಗೊತ್ತಿರಬಹುದು. ಸಾಮಾನ್ಯ ಸಿಗರೇಟ್ ಗಿಂತ ಭಿನ್ನವಾದ E – ಸಿಗರೇಟ್ ಒಂದು ಬಗೆಯ ಎಲಾಕ್ಟ್ರಾನಿಕ್ ಉಪಕರಣವಾಗಿದೆ. E – ಸಿಗರೇಟ್ ನಲ್ಲಿ ನಿಕೋಟಿನ್ ಯುಕ್ತ ದ್ರವಗಳನ್ನು ಬಿಸಿ ಮಾಡುವುದರಿಂದ ಒಂದು ರೀತಿಯ ರಾಸಾಯನಿಕ ಹೊಗೆ ಉತ್ಪತ್ತಿಯಾಗುತ್ತದೆ. ಇದರ ಮೂಲಕ ನಿಕೋಟಿನ್ ಸೇವಿಸಲಾಗುತ್ತದೆ. ಸಾಮಾನ್ಯ ಸಿಗರೇಟ್ ನಿಂದಾಗುವ ಹಾನಿಯ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ, ಹಾಗೆಯೇ E – ಸಿಗರೇಟ್ ಬಗ್ಗೆಯೂ ತಪ್ಪು ಕಲ್ಪನೆಯನ್ನು ಸೃಷ್ಟಿಸಲಾಗಿದೆ. E ಸಿಗರೇಟ್ ನಿಂದ ಯಾವುದೇ ಹಾನಿಯಾಗುವುದಿಲ್ಲ ಎಂಬ ಭ್ರಮೆಯಿದೆ. ಇನ್ನುಳಿದ ಸಿಗರೇಟ್ ಗಳಂತೆ ಇದರಲ್ಲಿ ದುರ್ವಾಸನೆ ಬರದಿರಲಿ ಎಂದು ಸುಗಂಧ ದ್ರವ್ಯಗಳನ್ನೂ ಬೆರೆಸಲಾಗುತ್ತಿತ್ತು. ಮನೆಯಲ್ಲಿ ತಂದೆ ನಿರಂತರ ಸಿಗರೇಟು ಸೇದುವವರಾಗಿದ್ದರೂ ಅವರು ಮನೆಯ ಇತರ ಸದಸ್ಯರಿಗೆ ಧೂಮಪಾನ ಮಾಡದಂತೆ ತಡೆಯುತ್ತಾರೆ ಮತ್ತು ಕಟ್ಟು ನಿಟ್ಟು ವಹಿಸುತ್ತಾರೆ ಎಂಬುದನ್ನು ನಮ್ಮ ನೆರೆಹೊರೆಯಲ್ಲಿ ನಾವು ನೋಡಿದ್ದೇವೆ. ಮತ್ತು ತಮ್ಮ ಮಕ್ಕಳಿಗೆ ಬೀಡಿ ಸಿಗರೇಟ್ ನ ದುರಭ್ಯಾಸವಾಗದಂತೆ ನೋಡಿಕೊಳ್ಳುತ್ತಾರೆ. ಕುಟುಂಬದ ಯಾವುದೇ ಸದಸ್ಯರು ಧೂಮಪಾನ ಮಾಡದಿರಲಿ ಎಂಬುದೇ ಅವರ ಪ್ರಯತ್ನವಾಗಿರುತ್ತದೆ. ಧೂಮಪಾನ ಮಾಡುವುದರಿಂದ ಮತ್ತು ತಂಬಾಕಿನಿಂದ ಶರೀರಕ್ಕೆ ಬಹಳ ಹಾನಿಯಾಗುವುದೆಂದು ಅವರಿಗೆ ಗೊತ್ತು. ಸಿಗರೇಟ್ ನಿಂದಾಗುವ ಹಾನಿಯ ಕುರಿತು ಅವರಿಗೆ ಯಾವುದೇ ಭ್ರಮೆಯಿಲ್ಲ. ಅದರಿಂದ ನಷ್ಟವಾಗುತ್ತದೆ ಎಂಬುದು ಮಾರುವವರಿಗೂ, ಸೇದುವವರಿಗೂ ಮತ್ತು ನೋಡುವವರಿಗೂ ತಿಳಿದಿದೆ. ಆದರೆ E – ಸಿಗರೇಟ್ ವಿಷಯ ಬಹಳ ಭಿನ್ನವಾದದ್ದು. E – ಸಿಗರೇಟ್ ಬಗ್ಗೆ ಜನರಲ್ಲಿ ಜಾಗೃತಿಯಿಲ್ಲ. ಅವರಿಗೆ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಹಾಗಾಗಿ ಕೆಲವೊಮ್ಮೆ ಕುತೂಹಲಕ್ಕಾಗಿ ಕದ್ದುಮುಚ್ಚಿ E – ಸಿಗರೇಟ್ ಮನೆಯನ್ನು ಪ್ರವೇಶಿಸುತ್ತದೆ. ಅಲ್ಲದೆ ಜಾದೂ ತೋರಿಸುತ್ತೇನೆ ಎಂದು ಮಕ್ಕಳು ಒಬ್ಬರಿಗೊಬ್ಬರು ಇದನ್ನು ತೋರಿಸುತ್ತಿರುತ್ತಾರೆ. ಕುಟುಂಬದಲ್ಲಿ ತಂದೆ ತಾಯಿಯರ ಎದುರು ಕೂಡಾ ನಿಮಗೆ ಮ್ಯಾಜಿಕ್ ತೋರಿಸುವೆ. ನೋಡಿ ನನ್ನ ಬಾಯಿಂದ ಹೊಗೆ ಬಿಡುತ್ತೇನೆ. ನೋಡಿ ನಾನು ಬೆಂಕಿ ಅಂಟಿಸದೇ, ಯಾವುದೇ ದೀಪ ಬೆಳಗದೇ ಹೊಗೆಯನ್ನು ಬಿಡುತ್ತೇನೆ ಎಂದು ಪ್ರದರ್ಶಿಸುತ್ತಾರೆ. ಮಾಯಾಜಾಲದ ಪಟ್ಟುಗಳನ್ನು ತೋರಿಸುತ್ತಿರುವಂತೆ ಕುಟುಂಬದವರೆಲ್ಲ ಚಪ್ಪಾಳೆ ತಟ್ಟುತ್ತಾರೆ. ಒಮ್ಮೆ ಮಕ್ಕಳು ಮತ್ತು ಯುವಕರು ಈ ವ್ಯಸನದ ಕರಾಳ ಮುಷ್ಟಿಯಲ್ಲಿ ಸಿಲುಕಿದರೆ ಕ್ರಮೇಣ ಅವರು ಅರಿವಿಲ್ಲದೇ ಅದರ ದಾಸರಾಗಿಬಿಡುತ್ತಾರೆ ಎಂಬುದು ತಿಳಿಯುವುದೇ ಇಲ್ಲ. ಆ ದುಶ್ಚಟಕ್ಕೆ ಬಲಿಯಾಗಿಬಿಡುತ್ತಾರೆ. ನಮ್ಮ ಯುವಶಕ್ತಿ ವಿನಾಶದ ಹಾದಿಯಲ್ಲಿ ನಡೆದುಬಿಡುತ್ತದೆ. ತಿಳಿಯದೇ ನಡೆದುಬಿಡುತ್ತದೆ. ವಾಸ್ತವದಲ್ಲಿ E – ಸಿಗರೇಟ್ ನಲ್ಲಿ ಹಲವಾರು ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ನಮ್ಮ ಸುತ್ತಮುತ್ತ ಯಾರಾದರೂ ಧೂಮಪಾನ ಮಾಡಿದರೆ ಅದರ ದುರ್ಗಂಧದಿಂದಲೇ ನಮಗೆ ಅದರ ಅರಿವಾಗುತ್ತದೆ ಎಂದು ನಿಮಗೆಲ್ಲ ಗೊತ್ತು. ಅವರ ಜೇಬಿನಲ್ಲಿ ಸಿಗರೇಟ್ ಪ್ಯಾಕೆಟ್ ಇದೆಯೆಂಬುದು ಕೂಡಾ ದುರ್ಗಂಧದಿಂದಲೇ ತಿಳಿಯುತ್ತದೆ. ಆದರೆ E – ಸಿಗರೇಟ್ ನಲ್ಲಿ ಈ ಪ್ರಮೇಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಇಲ್ಲವೆ ಯುವಕರು ಅರಿಯದೇ ಕೆಲವೊಮ್ಮೆ ಫ್ಯಾಶನ್ ಪ್ರತೀಕವೆಂದು ಹೆಮ್ಮೆಯಿಂದ ತಮ್ಮ ಪುಸ್ತಕಗಳ ಜೊತೆಗೆ, ಕಛೇರಿಯಲ್ಲಿ, ಜೇಬಿನಲ್ಲಿ, ಕೆಲವೊಮ್ಮೆ ಕೈಯಲ್ಲಿ ಹಿಡಿದು ತಿರುಗಾಡುವುದು ಕಂಡುಬರುತ್ತಿದೆ. ಹೀಗೆ ಅವರು ಅದಕ್ಕೆ ಬಲಿಯಾಗುತ್ತಿದ್ದಾರೆ. ಯುವಜನತೆ ದೇಶದ ಭವಿಷ್ಯ. ವ್ಯಸನದ ಈ ಹೊಸ ಮಾರ್ಗ ನಮ್ಮ ಯುವ ರಾಷ್ಟ್ರವನ್ನು ನಾಶ ಮಾಡುವುದನ್ನು ತಡೆಯಲು, ಪ್ರತಿ ಕುಟುಂಬದ ಕನಸುಗಳನ್ನು ತುಳಿದುಹಾಕಬಾರದು ಎಂದು, ಮಕ್ಕಳ ಜೀವನ ಹಾಳಾಗಬಾರದೆಂದು, ಈ ರೋಗ, ಈ ದುಶ್ಚಟ ಸಮಾಜದಲ್ಲಿ ಬೇರು ಬಿಡದಿರಲಿ ಎಂದು E – ಸಿಗರೇಟ್ ಮೇಲೆ ನಿರ್ಭಂಧ ಹೇರಲಾಗಿದೆ.
ನಾನು ನಿಮ್ಮೆಲ್ಲರನ್ನು ಆಗ್ರಹಿಸುತ್ತೇನೆ. ತಂಬಾಕು ವ್ಯಸನವನ್ನು ಬಿಟ್ಟುಬಿಡಿ ಮತ್ತು E – ಸಿಗರೇಟ್ ಕುರಿತು ತಪ್ಪು ಕಲ್ಪನೆ ಬೆಳೆಸಿಕೊಳ್ಳಬೇಡಿ. ಬನ್ನಿ ನಾವೆಲ್ಲ ಸೇರಿ ಒಂದು ಆರೋಗ್ಯವಂತ ಭಾರತವನ್ನು ಕಟ್ಟೋಣ.
ಹಾಂ! ನಿಮಗೆ ಫಿಟ್ ಇಂಡಿಯಾ ನೆನಪಿದೆ ಅಲ್ಲವೆ? ಬೆಳಿಗ್ಗೆ ಸಂಜೆ ಕೈಕಾಲಿಗೆ ಕಸರತ್ತು ನೀಡುತ್ತಾ ಎರಡೆರಡು ಗಂಟೆ ಜಿಮ್ ಗೆ ಹೋದರೆ ಫಿಟ್ ಇಂಡಿಯಾ ನಿರ್ಮಾಣವಾಗುತ್ತದೆ ಎಂದರ್ಥವಲ್ಲ. ಫಿಟ್ ಇಂಡಿಯಾಗಾಗಿ ಈ ದುಶ್ಚಟಗಳಿಂದಲೂ ದೂರ ಇರಬೇಕಾಗುತ್ತದೆ. ನನ್ನ ಮಾತುಗಳು ನಿಮ್ಮ ಮನ ನೋಯಿಸುವುದಿಲ್ಲ, ನಿಮಗೆ ಹಿತವಾಗಿಯೇ ಇವೆ ಎಂದು ನನಗೆ ವಿಶ್ವಾಸವಿದೆ.
ನನ್ನ ಪ್ರಿಯ ಸೋದರ ಸೋದರಿಯರೇ, ನಮ್ಮ ಭಾರತ ದೇಶ ಸ್ವಾರ್ಥವನ್ನು ತೊರೆದು ಬೇರೆಯವರ ಹಿತಕ್ಕಾಗಿಯೇ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಂತಹ ಹಲವಾರು ಜನರ ಜನ್ಮಭೂಮಿಯಾಗಿದೆ ಮತ್ತು ಕರ್ಮಭೂಮಿಯೂ ಆಗಿದೆ ಎಂಬುದು ನಮ್ಮೆಲ್ಲರ ಸೌಭಾಗ್ಯ,
ನಮ್ಮ ಭಾರತ ಮಾತೆ, ನಮ್ಮ ದೇಶ ಬಹುರತ್ನ ವಸುಂಧರೆ. ಬಹಳಷ್ಟು ಮಾನವ ರತ್ನಗಳು ಈ ಭೂಮಿಯ ಮೇಲೆ ಜನ್ಮತಾಳಿವೆ. ಭಾರತ ಇಂಥ ಅಸಾಧಾರಾಣ ವ್ಯಕ್ತಿಗಳ ಜನ್ಮಭೂಮಿಯಾಗಿದೆ ಮತ್ತು ಕರ್ಮಭೂಮಿಯೂ ಆಗಿದೆ. ಅವರೆಲ್ಲ ತಮಗಾಗಿ ಅಲ್ಲದೇ ಬೇರೆಯವರಿಗಾಗಿ ಜೀವನ ಸವೆಸಿದವರು. ಇಂಥ ಮಹಾನ್ ವ್ಯಕ್ತಿತ್ವವನ್ನು ಅಕ್ಟೋಬರ್ 13 ರಂದು ವ್ಯಾಟಿಕನ್ ಸಿಟಿಯಲ್ಲಿ ಸನ್ಮಾನಿಸಲಾಗುತ್ತಿದೆ. ಮುಂಬರುವ ಅಕ್ಟೋಬರ್ 13 ರಂದು ಪೋಪ್ ಫ್ರಾನ್ಸಿಸ್ ಅವರು ಮರಿಯಮ್ ಥ್ರೆಸಿಯಾ ಅವರನ್ನು ಸಂತರೆಂದು ಘೋಷಿಸಲಿದ್ದಾರೆ ಎಂಬುದು ಪ್ರತಿ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಸಿಸ್ಟರ್ ಮರಿಯಮ್ ಥ್ರೆಸಿಯಾ ತನ್ನ 50 ವರ್ಷಗಳ ಜೀವಿತಾವಧಿಯಲ್ಲಿ ಮಾನವ ಕುಲಕ್ಕಾಗಿ ಮಾಡಿದ ಸೇವೆ ಸಂಪೂರ್ಣ ವಿಶ್ವಕ್ಕೆ ಮಾದರಿಯಾಗಿದೆ. ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರಿಗೆ ಬಹಳ ಆಸಕ್ತಿಯಿತ್ತು. ಅವರು ಹಲವಾರು ಶಾಲೆಗಳು, ವಿದ್ಯಾರ್ಥಿ ನಿಲಯ, ಅನಾಥಾಲಯ ನಿರ್ಮಾಣ ಮಾಡಿದ್ದಾರೆ ಮತ್ತು ಜೀವನಪೂರ್ತಿ ಈ ದಿಕ್ಕಿನಲ್ಲೇ ಸಾಗುತ್ತಿದ್ದರು. ಸಿಸ್ಟರ್ ಥ್ರೆಸಿಯಾ ಯಾವುದೇ ಕೆಲಸವಿರಲಿ ಅದನ್ನು ನಿಷ್ಠೆಯಿಂದ, ಶೃದ್ಧೆಯಿಂದ, ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ಪೂರ್ಣಗೊಳಿಸಿದ್ದಾರೆ. ಅವರು Congregation of the Sisters of the Holy Family ಸ್ಥಾಪಿಸಿದ್ದಾರೆ. ಇಂದಿಗೂ ಅದು ಅವರ ಜೀವನದರ್ಶನ ಮತ್ತು ಗುರಿಯನ್ನು ಮುನ್ನಡೆಸಿಕೊಂಡು ಸಾಗಿದೆ. ನಾನು ಮತ್ತೊಮ್ಮೆ ಸಿಸ್ಟರ್ ಮರಿಯಮ್ ಥ್ರೆಸಿಯಾ ಅವರಿಗೆ ಶೃದ್ಧಾಂಜಲಿ ಸಮರ್ಪಿಸುತ್ತೇನೆ. ಮತ್ತು ಎಲ್ಲ ಭಾರತೀಯರಿಗೆ, ವಿಶೇಷವಾಗಿ ಕ್ರಿಶ್ಚಿಯನ್ ಸೋದರ ಸೋದರಿಯರಿಗೆ ಈ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರಿಯ ದೇಶ ಬಾಂಧವರೇ, ಇಂದು ನಾವು ಗಾಂಧೀ – 150 ಆಚರಿಸುತ್ತಿರುವ ಸಂದರ್ಭದಲ್ಲಿ 130 ಕೋಟಿ ದೇಶಬಾಂಧವರು Single Use Plastic ನಿಂದ ಮುಕ್ತರಾಗುವ ಪಣ ತೊಟ್ಟಿರುವುದು ಕೇವಲ ಭಾರತ ದೇಶಕ್ಕಲ್ಲ ಸಂಪೂರ್ಣ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಭಾರತ ಸಂಪೂರ್ಣ ವಿಶ್ವದಲ್ಲೇ ಯಾವ ರೀತಿ ನಾಯಕತ್ವವಹಿಸಿದೆ ಎಂಬುದನ್ನು ನೋಡಿ ಎಲ್ಲ ದೇಶಗಳ ದೃಷ್ಟಿ ಭಾರತದ ಮೇಲೆ ನೆಟ್ಟಿದೆ. ನೀವೆಲ್ಲರೂ ಅಕ್ಟೋಬರ್ 2 ರಂದು ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ನಿಂದ ಮುಕ್ತಿಗಾಗಿ ನಡೆಯಲಿರುವ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದೀರಿ ಎಂಬ ವಿಶ್ವಾಸ ನನಗಿದೆ. ಅಲ್ಲಲ್ಲಿ ಜನರು ತಮ್ಮದೇ ರೀತಿಯಲ್ಲಿ ಈ ಆಂದೋಲನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಆದರೆ ನಮ್ಮ ದೇಶದ ಯುವಕನೊಬ್ಬ ಬಹಳ ವಿಶಿಷ್ಟ ರೀತಿಯಲ್ಲಿ ಒಂದು ಬಹುದೊಡ್ಡ ಪ್ರಚಾರಾಂದೋಲನ ಆರಂಭಿಸಿದ್ದಾನೆ. ಅವರ ಕೆಲಸದತ್ತ ನನ್ನ ಗಮನ ಹರಿದಾಗ ಅವರಿಗೆ ದೂರವಾಣಿ ಕರೆ ಮಾಡಿ ಅವರ ಕೆಲಸದ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ಅವರ ಈ ಮಾತುಗಳು ದೇಶದ ಇತರರಿಗೂ ಉಪಯುಕ್ತವಾಗಬಹುದು. ಶ್ರೀಯುತ ರಿಪುದಮನ್ ಬೆಲ್ವಿಯವರು ಒಂದು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ಅವರು Plogging ಮಾಡುತ್ತಾರೆ. ಮೊದಲ ಬಾರಿಗೆ ನಾನು Plogging ಶಬ್ದ ಕೇಳಿದಾಗ ನನಗೂ ಹೊಸದೆನಿಸಿತು. ವಿದೇಶಗಳಲ್ಲಿ ಸ್ವಲ್ಪಮಟ್ಟಿಗೆ ಈ ಪದದ ಬಳಕೆಯಿದೆ. ಆದರೆ ಭಾರತದಲ್ಲಿ ರಿಪುದಮನ್ ಬೆಲ್ವಿಯವರು ಇದರ ಪ್ರಚಾರವನ್ನು ಬಹಳಷ್ಟು ಮಾಡಿದ್ದಾರೆ. ಬನ್ನಿ ಅವರೊಂದಿಗೆ ಒಂದಿಷ್ಟು ಮಾತನಾಡೋಣ.
ಮೋದಿಜಿ: ಹಲ್ಲೋ ರಿಪುದಮನ್ ಅವರೇ ನಮಸ್ಕಾರ. ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ.
ರಿಪುದಮನ್ : ಹೇಳಿ ಸರ್ ತುಂಬಾ ಧನ್ಯವಾದಗಳು ಸರ್. ..
ಮೋದಿಜಿ: ರಿಪುದಮನ್ ಅವರೇ
ರಿಪುದಮನ್ : ಹಾಂ ಹೇಳಿ ಸರ್
ಮೋದಿಜಿ: ನೀವು Plogging ಬಗ್ಗೆ ಇಷ್ಟೊಂದು ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದ್ದೀರಿ
ರಿಪುದಮನ್ : ಹೌದು ಸರ್
ಮೋದಿಜಿ: ನನ್ನ ಮನದಲ್ಲೂ ಕುತೂಹಲವಿತ್ತು. ಹಾಗಾಗಿ ನಾನೇ ಸ್ವತಃ ಫೋನ್ ಮಾಡಿ ನಿಮ್ಮನ್ನು ಕೇಳೋಣ ಎಂದುಕೊಂಡೆ.
ರಿಪುದಮನ್ : ಓಕೆ . .
ಮೋದಿಜಿ: ನಿಮ್ಮ ಮನದಲ್ಲಿ ಈ ಆಲೋಚನೆ ಹೇಗೆ ಬಂತು. .
ರಿಪುದಮನ್: ಹಾಂ ಹೇಳಿ ಸರ್. . .
ಮೋದಿಜಿ: ಈ ಶಬ್ದ, ಈ ರೀತಿ ಪದ್ಧತಿ ಹೇಗೆ ಮನದಲ್ಲಿ ಮೂಡಿತು.
ರಿಪುದಮನ್ : ಸರ್, ಯುವಕರಿಗೆ ಸ್ಫೂರ್ತಿ ತುಂಬಲು ಇಂದು ಕೂಲ್ ಆಗಿರುವಂಥದ್ದು, ಆಸಕ್ತಿಕರವಾಗಿರುವಂಥದ್ದು ಬೇಕು. ನಾನು ಸ್ಫೂರ್ತಿ ಪಡೆದಿದ್ದೇನೆ. ನನಗೆ 130 ಕೋಟಿ ಭಾರತೀಯರಿಗೆ ಈ ಅಭಿಯಾನದಲ್ಲಿ ಜೋಡಿಸಬೇಕಾದರೆ ಏನಾದರೂ ಕೂಲ್ ಮತ್ತು ಆಸಕ್ತಿದಾಯಕವಾದದ್ದನ್ನು ಮಾಡಬೇಕಿತ್ತು. ನಾನು ಸ್ವತಃ ಒಬ್ಬ ರನ್ನರ್ ಆಗಿದ್ದೇನೆ. ನಾವು ಬೆಳಿಗ್ಗೆ ಓಡುವಾಗ ವಾಹನ ದಟ್ಟಣೆ ಕಡಿಮೆ ಇರುತ್ತದೆ. ಜನರು ಕಡಿಮೆ ಇರುತ್ತಾರೆ. ಹಾಗಾಗಿ ಕಸ, ಕಡ್ಡಿ ಪ್ಲಾಸ್ಟಿಕ್ ಹೆಚ್ಚು ಕಂಡುಬರುತ್ತದೆ. ಹಾಗಾಗಿ ಕಿರಿ ಕಿರಿ ಮಾಡಿಕೊಂಡು ಗೊಣಗುವ ಬದಲು ಏನನ್ನಾದರೂ ಪರಿಹಾರ ಹುಡುಕುವ ಬಗ್ಗೆ ಯೋಚಿಸಿದೆ. ಆದ್ದರಿಂದ ನನ್ನ ರನ್ನಿಂಗ್ ತಂಡದೊಂದಿಗೆ ದೆಹಲಿಯಲ್ಲಿ ಇದನ್ನು ಆರಂಭಿಸಿದೆ. ನಂತರ ಸಂಪೂರ್ಣ ಭಾರತದಲ್ಲಿ ಇದನ್ನು ಪಸರಿಸಿದೆ. ಎಲ್ಲೆಡೆಯಿಂದ ಬಹಳ ಪ್ರಶಂಸೆ ದೊರೆಯಿತು. . .
ಮೋದಿಜಿ: ಸರಿಯಾಗಿ ನೀವು ಏನು ಮಾಡುತ್ತಿದ್ದಿರಿ? ಸ್ವಲ್ಪ ವಿವರಿಸಿ.. ನನಗೂ ಅರ್ಥವಾಗಲಿ ಮತ್ತು ‘ಮನದ ಮಾತಿನ’ ಮೂಲಕ ದೇಶ ಬಾಂಧವರಿಗೂ ತಿಳಿಯಲಿ . .
ರಿಪುದಮನ್ : ಸರ್ ನಾವಿದನ್ನು ಆರಂಭಿಸಿದೆವು, ‘Run & Clean-up Movement’. ನಾವು ರನ್ನಿಂಗ್ ತಂಡಗಳಿಗೆ ಅವರ ಓಟದ ಅವಧಿಯ ನಂತರ ವಿರಾಮದ ವೇಳೆ ಕಸ ಆಯುವುದನ್ನು, ಪ್ಲಾಸ್ಟಿಕ್ ಆಯುವುದನ್ನು ಆರಂಭಿಸುವಂತೆ ಹೇಳಿದೆವು. ನೀವು ಓಟದಲ್ಲಿ ಭಾಗಿಯಾಗುತ್ತಿದ್ದೀರಿ ಎಂದಾದರೆ ನೀವು ಸ್ವಚ್ಛತೆಯನ್ನೂ ಮಾಡುತ್ತಿದ್ದೀರಿ. ಈಗ ಬಹಳಷ್ಟು ವ್ಯಾಯಾಮವೂ ಇದರೊಟ್ಟಿಗೆ ಸೇರಿದೆ. ನೀವು ಕೇವಲ ಓಡುತ್ತಿಲ್ಲ ನೀವು ಕುಳಿತುಕೊಳ್ಳುತ್ತಿದ್ದೀರಿ, ಬಸ್ಕಿ ಹೊಡೆಯುತ್ತಿದ್ದೀರಿ, ಶ್ವಾಸಕೋಶಕ್ಕೆ ಕೆಲಸ ನೀಡುತ್ತಿದ್ದೀರಿ, ಮುಂದೆ ಬಾಗುತ್ತಿದ್ದೀರಿ. ಹೀಗೆ ಇದೊಂದು ಸಮಗ್ರ ವ್ಯಾಯಾಮವಾಗಿದೆ. ಕಳೆದ ವರ್ಷ ಹಲವಾರು ಪತ್ರಿಕೆಗಳಲ್ಲಿ ಭಾರತದ ಟಾಪ್ ಫಿಟ್ ನೆಸ್ ಟ್ರೆಂಡ್ ಗಳಲ್ಲಿ ಈ ಮೋಜಿನ ಕೆಲಸವನ್ನು ಹೆಸರಿಸಲಾಗಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು.
ಮೋದಿಜಿ: ಈ ಕುರಿತು ನಿಮಗೆ ಅಭಿನಂದನೆಗಳು.
ರಿಪುದಮನ್ : ಧನ್ಯವಾದ ಸರ್. . .
ಮೋದಿಜಿ: ಅಂದರೆ ನೀವು ಸೆಪ್ಟೆಂಬರ್ 5 ರಿಂದ ಕೊಚ್ಚಿಯಿಂದ ಆರಂಭಿಸಿದ್ದೀರಿ. ..
ರಿಪುದಮನ್ : ಹೌದು ಸರ್, ಈ ಧ್ಯೇಯದ ಹೆಸರು ‘R|Elan – Run to make India Litter Free’ ಎಂದಾಗಿದೆ. ನೀವು ಅಕ್ಟೋಬರ್ 2 ರಂದು ಒಂದು ಐತಿಹಾಸಿಕ ಹೇಳಿಕೆ ನೀಡಲಿದ್ದೀರಿ. ಕಸ ಮುಕ್ತವಾಗುತ್ತದೆ ಎಂದಾದರೆ ಪ್ಲಾಸ್ಟಿಕ್ ಮುಕ್ತವೂ ಆಗಲಿದೆ ಎಂಬ ವಿಶ್ವಾಸ ನನಗಿದೆ. ಮತ್ತು ಅದು ವೈಯಕ್ತಿಕ ಜವಾಬ್ದಾರಿಯನ್ನೂ ನೀಡಿದಂತಾಗುತ್ತದೆ. ಓಟದ ಜೊತೆಗೆ ನಾನು 50 ನಗರಗಳಲ್ಲಿ 1000 ಕೀಲೋ ಮೀಟರ್ ವ್ಯಾಪ್ತಿಯನ್ನು ಸ್ವಚ್ಛಗೊಳಿಸುವ ಗುರಿ ಹೊಂದಿದ್ದೇನೆ. ಇದು ಬಹುಶಃ ವಿಶ್ವದ ಬಹುದೊಡ್ಡ ಕ್ಲೀನ್ ಅಪ್ ಡ್ರೈವ್ ಅಂದರೆ ಸ್ವಚ್ಛತಾ ಅಭಿಯಾನ ಆಗಲಿದೆ ಎಂದು ಬಹಳಷ್ಟು ಜನರು ಹೇಳಿದ್ದಾರೆ. ಸರ್, ಇದರ ಜೊತೆಗೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕಾಗಿ ಒಂದು ಕೂಲ್ ಹ್ಯಾಶ್ ಟ್ಯಾಗ್ ಬಳಸಿದ್ದೇವೆ #PlasticUpvaas. ಇದರಲ್ಲಿ ನೀವು ನಿಮ್ಮ ಜೀವನದಿಂದ ಒಮ್ಮೆ ಬಳಸಿ ಬಿಸಾಡುವ ವಸ್ತು – ಅದು ಪ್ಲಾಸ್ಟಿಕ್ ಆಗಿರಬಹುದು ಅಥವಾ ಇನ್ನಾವುದೇ ಆಗಿರಬಹುದು ಅದನ್ನು ಸಂಪೂರ್ಣವಾಗಿ ದೂರ ಮಾಡಲಿದ್ದೀರಿ ತಿಳಿಸಿ ಎಂದು ಜನರಿಗೆ ಕೇಳಿದ್ದೇವೆ.
ಮೋದಿಜಿ : ಅದ್ಭುತ, ನೀವು ಸೆಪ್ಟೆಂಬರ್ 5 ರಿಂದ ಆರಂಭಿಸಿದ್ದೀರಿ. . ಇಲ್ಲಿವರೆಗೆ ನಿಮ್ಮ ಅನುಭವವೇನು?
ರಿಪುದಮನ್ : ಸರ್, ಇಲ್ಲಿವರೆಗೆ ಬಹಳ ಉತ್ತಮ ಅನುಭವ ದೊರೆತಿದೆ. ಕಳೆದ 2 ವರ್ಷಗಳಲ್ಲಿ ನಾವು ಭಾರತದಾದ್ಯಂತ ಸುಮಾರು 300 ರಷ್ಟು Plogging drives ಆಯೋಜಿಸಿದ್ದೇವೆ. ನಾವು ಕೊಚ್ಚಿಯಿಂದ ಆರಂಭ ಮಾಡಿದಾಗ ರನ್ನಿಂಗ್ ತಂಡಗಳು ಸೇರ್ಪಡೆಯಾಗುತ್ತಾ ಹೋದವು. ಸ್ಥಳೀಯವಾಗಿ ನಡೆಯುತ್ತಿದ್ದ ಕ್ಲೀನ್ ಅಪ್ ಗಳನ್ನು ನನ್ನ ಜೊತೆ ಸೇರಿಸಿಕೊಂಡೆ. ಕೊಚ್ಚಿ ನಂರತ ಮಧುರೈ, ಕೋಯಂಬತ್ತೂರ್, ಸೇಲಂ, ಇದೀಗ ನಾವು ಉಡುಪಿಯಲ್ಲಿಯೂ ಮಾಡಿದ್ದೇವೆ. ಅಲ್ಲಿ ಒಂದು ಶಾಲೆಯಿಂದ ಆಮಂತ್ರಣ ಬಂದಿತ್ತು. ಅಲ್ಲಿ 3 ರಿಂದ 6 ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜನೆಗೆ ನಮ್ಮನ್ನು ಆಹ್ವಾನಿಸಲಾಗಿತ್ತು. ಅರ್ಧ ಗಂಟೆ ಸಮಯದ ಆ ಕಾರ್ಯಾಗಾರ 3 ಗಂಟೆಯ Plogging drive ಆಗಿ ಮಾರ್ಪಾಡಾಯಿತು. ಸರ್ ಮಕ್ಕಳು ಎಷ್ಟು ಉತ್ಸುಕರಾಗಿದ್ದರು ಎಂದರೆ ಅವರು ಇವೆಲ್ಲವನ್ನು ಮಾಡಲು ಆಸಕ್ತಿ ತೋರುತ್ತಿದ್ದರು. ತಮ್ಮ ತಂದೆ ತಾಯಿಗೆ ತಿಳಿಸುವುದು, ನೆರೆ ಹೊರೆಯವರಿಗೆ ಹೇಳುವುದು, ತಮ್ಮ ಗೆಳೆಯರಲ್ಲಿ ಹಂಚಿಕೊಳ್ಳುವುದು ಎಲ್ಲಕ್ಕಿಂತ ದೊಡ್ಡ ಪ್ರೇರಣೆಯಾಗಿದೆ. ಇದೇ ನಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.
ಮೋದಿಜಿ : ರಿಪು ಅವರೇ ಇದು ಪರಿಶ್ರಮವಲ್ಲ.. ಒಂದು ಸಾಧನೆ. ನಿಜವಾಗಿಯೂ ನೀವು ಸಾಧನೆಯನ್ನು ಮಾಡುತ್ತಿದ್ದೀರಿ.
ರಿಪುದಮನ್ : ಹೌದು ಸರ್. . .
ಮೋದಿಜಿ : ನಿಮಗೆ ಅನಂತ ಅಭಿನಂದನೆಗಳು. ನೀವು ದೇಶಬಾಂಧವರಿಗೆ 3 ಮಾತುಗಳನ್ನು ಹೇಳಬೇಕೆಂದಾದಲ್ಲಿ ನೀವು ಯಾವ 3 ನಿರ್ದಿಷ್ಟ ಮಾತುಗಳನ್ನು ಹೇಳಬಯಸುತ್ತೀರಿ.
ರಿಪುದಮನ್ : ನಾನು ಕಸ ಮುಕ್ತ ಭಾರತಕ್ಕೆ 3 ಹಂತಗಳನ್ನು ನೀಡಬಯಸುತ್ತೇನೆ. ಮೊದಲ ಹಂತ, ಕಸವನ್ನು ಕಸದ ಬುಟ್ಟಿಯಲ್ಲಿಯೇ ಹಾಕಿರಿ. 2 ನೇ ಹಂತ, ನೆಲದ ಮೇಲೆ ಬಿದ್ದ ಕಸ ನಿಮ್ಮ ಕಣ್ಣಿಗೆ ಬಿದ್ದರೆ ಅದನ್ನೆತ್ತಿ ಕಸದ ಬುಟ್ಟಿಗೆ ಹಾಕಿ. 3 ನೇ ಹಂತ, ಕಸದ ಬುಟ್ಟಿ ಅಲ್ಲಿ ಇಲ್ಲದಿದ್ದರೆ ಕಸವನ್ನು ನಿಮ್ಮ ಜೇಬಿನಲ್ಲಿಟ್ಟುಕೊಂಡು ಅಥವಾ ಗಾಡಿಯಲ್ಲಿಟ್ಟುಕೊಂಡು ಮನೆಗೆ ಕೊಂಡೊಯ್ದು ಹಸಿ ಮತ್ತು ಒಣ ಕಸ ಬೇರ್ಪಡಿಸಿ ಬೆಳಿಗ್ಗೆ ನಗರ ಪಾಲಿಕೆ ಗಾಡಿ ಬಂದಾಗ ಅವರಿಗೆ ಕೊಟ್ಟುಬಿಡಿ. ನಾವು ಈ ಮೂರು ಹಂತಗಳನ್ನು ಅನುಸರಿಸಿದರೆ ನಮಗೆ ಕಸಮುಕ್ತ ಭಾರತ ದೊರೆಯುತ್ತದೆ.
ಮೋದಿಜಿ : ನೋಡಿ ರಿಪು ಅವರೇ ಎಷ್ಟು ಸರಳ ಭಾಷೆಯಲ್ಲಿ ಸಾಮಾನ್ಯ ಮನುಷ್ಯ ಮಾಡಬಹುದಾದಂತಹ ಕೆಲಸಗಳನ್ನು ಹೇಳಿದ್ದೀರಿ. ಗಾಂಧೀಜಿಯವರ ಕನಸುಗಳನ್ನು ಹೊತ್ತು ಮುನ್ನಡೆಯುತ್ತಿದ್ದೀರಿ. ಜೊತೆಗೆ ಸರಳ ಶಬ್ದಗಳಲ್ಲಿ ತಿಳಿ ಹೇಳುವಂತಹ ಗಾಂಧೀಜಿಯವರ ರೀತಿಯನ್ನು ನೀವು ಅಳವಡಿಸಿಕೊಂಡಿದ್ದೀರಿ.
ರಿಪುದಮನ್ : ಧನ್ಯವಾದಗಳು
ಮೋದಿಜಿ : ಹಾಗಾಗಿ ನೀವು ಅಭಿನಂದನೆಗೆ ಪಾತ್ರರಾಗಿದ್ದೀರಿ. ರಿಪುದಮನ್ ಅವರೇ ನಿಮ್ಮೊಂದಿಗೆ ಮಾತಾಡಿ ನನಗೆ ಬಹಳ ಸಂತೋಷವಾಗಿದೆ. ನೀವು ಬಹಳ ವಿನೂತನ ರೀತಿಯಲ್ಲಿ ವಿಶೇಷವಾಗಿ ಯುವಜನತೆಗೆ ಇಷ್ಟವಾಗುವ ರೀತಿಯಲ್ಲಿ ಈ ಸಂಪೂರ್ಣ ಯೋಜನೆಯನ್ನು ಹಮ್ಮಿಕೊಂಡಿದ್ದೀರಿ. ನಿಮಗೆ ಅನಂತ ಅನಂತ ಅಭಿನಂದನೆಗಳು. ಸ್ನೇಹಿತರೇ ಈ ಬಾರಿ ಬಾಪೂಜಿಯವರ ಜಯಂತಿ ಪ್ರಯುಕ್ತ ಕ್ರೀಡಾ ಸಚಿವಾಲಯವೂ ‘Fit India Plogging Run’ ಆಯೋಜಿಸಲಿದೆ. ಅಕ್ಟೋಬರ್ 2 ರಂದು ದೇಶಾದ್ಯಂತ 2 ಕೀ ಮೀಟರ್ Plogging ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಹೇಗಿರಬೇಕು, ಕಾರ್ಯಕ್ರಮದಲ್ಲಿ ಏನಿರಬೇಕು ಎಂಬುದನ್ನು ರಿಪುದಮನ್ ಅವರ ಅನುಭವದಿಂದ ನಾವು ತಿಳಿದಿದ್ದೇವೆ. ಅಕ್ಟೋಬರ್ 2 ರಂದು ಆರಂಭವಾಗಲಿರುವ ಈ ಆಂದೋಲನದಲ್ಲಿ ನಾವು 2 ಕೀ ಮೀಟರ್ ಓಡುವುದರ ಜೊತೆಗೆ ರಸ್ತೆಯಲ್ಲಿ ಬಿದ್ದ ಪ್ಲಾಸ್ಟಿಕ್ ಕಸವನ್ನೂ ಸಂಗ್ರಹಿಸೋಣ. ಇದರಿಂದ ನಾವು ನಮ್ಮ ಆರೋಗ್ಯ ರಕ್ಷಿಸಿಕೊಳ್ಳುವುದು ಮಾತ್ರವಲ್ಲ ಭೂಮಿ ತಾಯಿಯ ರಕ್ಷಣೆಯನ್ನೂ ಮಾಡಿದಂತಾಗುತ್ತದೆ. ಈ ಆಂದೋಲನದಿಂದ ಜನರಲ್ಲಿ ಆರೋಗ್ಯದ ಜೊತೆಗೆ ಸ್ವಚ್ಛತೆಯ ಕುರಿತು ಜಾಗರೂಕತೆ ಹೆಚ್ಚುತ್ತಿದೆ. 130 ಕೋಟಿ ದೇಶಬಾಂಧವರು ಈ ನಿಟ್ಟಿನಲ್ಲಿ ಮುಂದಡಿಯಿಟ್ಟರೆ single use plastic ನಿಂದ ಮುಕ್ತವಾಗುವ ದಿಸೆಯಲ್ಲಿ ಭಾರತ 130 ಕೋಟಿ ಹೆಜ್ಜೆ ಮುಂದೆ ಸಾಗುತ್ತದೆ ಎಂದು ನನಗೆ ವಿಶ್ವಾಸವಿದೆ. ರಿಪುದಮನ್ ಅವರೇ ನಿಮಗೆ ಮತ್ತೊಮ್ಮೆ ಅನಂತ ಧನ್ಯವಾದಗಳು. ನಿಮಗೆ ನಿಮ್ಮ ತಂಡಕ್ಕೆ ಈ ಹೊಸ ಪ್ರಯೋಗಕ್ಕೆ ನನ್ನ ವತಿಯಿಂದ ಅನಂತ ಅನಂತ ಅಭಿನಂದನೆಗಳು. ಧನ್ಯವಾದಗಳು
ನನ್ನ ಪ್ರಿಯ ದೇಶಬಾಂಧವರೇ, ಅಕ್ಟೋಬರ್ 2 ರ ಸಿದ್ಧತೆಗಳು ಸಂಪೂರ್ಣ ದೇಶ ಮತ್ತು ವಿಶ್ವದೆಲ್ಲೆಡೆ ಭರದಿಂದ ಸಾಗಿದೆ. ಆದರೆ “ಗಾಂಧಿ 150” ನ್ನು ನಾವು ಕರ್ತವ್ಯ ಪಥದತ್ತ ಕೊಂಡೊಯ್ಯಬಯಸುತ್ತೇವೆ. ನಮ್ಮ ಜಿವನವನ್ನು ದೇಶದ ಹಿತಕ್ಕಾಗಿ ಮುಡಿಪಾಗಿಟ್ಟು ಮುನ್ನಡೆಸುವಂತಾಗಲು ಬಯಸುತ್ತೇನೆ. ಮುಂಚಿತವಾಗಿಯೇ ಒಂದು ಮಾತನ್ನು ನೆನಪಿಸಿಕೊಳ್ಳುವ ಇಚ್ಛೆಯಾಗುತ್ತಿದೆ. ಮುಂದಿನ ಮನದ ಮಾತಿನಲ್ಲಿ ಈ ಕುರಿತು ವಿಸ್ತೃತವಾಗಿ ತಿಳಿಸುತ್ತೇನೆ ಆದರೆ ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನೀವು ಮಾಡಿಕೊಳ್ಳಲು ಈ ಬಾರಿ ಮನದ ಮಾತಿನಲ್ಲಿ ಆ ಕುರಿತು ಪ್ರಸ್ತಾಪಿಸುತ್ತಿದ್ದೇನೆ. ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭ್ ಭಾಯ್ ಪಟೇಲರ ಜಯಂತಿ ಎಂದು ನಿಮಗೆ ನೆನಪಿದೆ. “ ಏಕ್ ಭಾರತ್ ಶ್ರೇಷ್ಠ ಭಾರತ್” ಎಂಬುದು ನಮ್ಮೆಲ್ಲರ ಕನಸು. ಇದರ ಪ್ರಯುಕ್ತ ಪ್ರತಿ ವರ್ಷವೂ ಅಕ್ಟೋಬರ್ 31 ರಂದು ನಾವು ದೇಶಾದ್ಯಂತ “ರನ್ ಫಾರ್ ಯುನಿಟಿ” ದೇಶದ ಒಗ್ಗಟ್ಟಿಗಾಗಿ ಓಟ ಹಮ್ಮಿಕೊಳ್ಳುತ್ತೇವೆ. ಮಕ್ಕಳು ವೃದ್ಧರು, ಯುವಕರು, ಶಾಲಾ ಕಾಲೇಜುಗಳು ಸಾವಿರಾರು ಸಂಖ್ಯೆಯಲ್ಲಿ ಭಾರತದ ಲಕ್ಷಾಂತರ ಗ್ರಾಮಗಳಲ್ಲಿ ಆ ದಿನದಂದು ದೇಶದ ಒಗ್ಗಟ್ಟಿಗಾಗಿ ಓಡಬೇಕಿದೆ. ಹಾಗಾಗಿ ನೀವೂ ಈಗಲೇ ಇದರ ಸಿದ್ಧತೆ ಮಾಡಿಕೊಳ್ಳಿ. ವಿಸ್ತೃತವಾಗಿ ಮುಂದೆ ಈ ಬಗ್ಗೆ ಮಾತಾಡುವೆ. ಆದರೆ ಇನ್ನೂ ಸಮಯ ಇರುವುದರಿಂದ ಕೆಲವರು ಅಭ್ಯಾಸ ಆರಂಭಿಸಬಹುದು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.
ನನ್ನ ಪ್ರಿಯ ದೇಶಬಾಂಧವರೇ, 2022 ರ ಒಳಗೆ ಭಾರತದ 15 ಸ್ಥಳಗಳಿಗೆ ಭೇಟಿ ನೀಡಿ ಎಂದು ಅಗಸ್ಟ್ 15 ರಂದು ನಾನು ಕೆಂಪು ಕೋಟೆಯಿಂದ ಕರೆ ನೀಡಿದ್ದೆ ಎಂಬುದು ನಿಮಗೆ ನೆನಪಿರಬಹುದು. ಕನಿಷ್ಟ 15 ಸ್ಥಳಗಳಿಗೆ ಭೇಟಿ ನೀಡಿ, ಸಾಧ್ಯವಾದರೆ ಒಂದೆರಡು ದಿನ ಅಲ್ಲಿ ತಂಗುವಂತೆ ಪ್ರವಾಸ ಮಾಡಿ. ಭಾರತವನ್ನು ನೋಡಿ, ತಿಳಿಯಿರಿ ಮತ್ತು ಅನುಭವಿಸಿ. ನಮ್ಮಲ್ಲಿ ಎಷ್ಟೊಂದು ವಿವಧತೆಯಿದೆ. ದೀಪಾವಳಿ ಹಬ್ಬದ ರಜೆಗಳಲ್ಲಿ ಜನರು ಖಂಡಿತ ಪ್ರವಾಸಗೈಯ್ಯುತ್ತಾರೆ. ಆದ್ದರಿಂದ ಮತ್ತೊಮ್ಮೆ ಭಾರತದ 15 ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿ ಎಂದು ನಾನು ಆಗ್ರಹಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ, ಮೊನ್ನೆಯಷ್ಟೇ 27 ಸೆಪ್ಟೆಂಬರ್ ದಂದು ವಿಶ್ವ ಪ್ರವಾಸಿ ದಿನವನ್ನು ಆಚರಿಸಲಾಯಿತು. ವಿಶ್ವದ ಕೆಲ ಜವಾಬ್ದಾರಿಯುತ ಏಜನ್ಸಿಗಳು ಪ್ರವಾಸೋದ್ಯಮದ ಗುಣಮಟ್ಟವನ್ನು ಅಳೆಯುತ್ತವೆ. ಪ್ರವಾಸ ಮತ್ತು ಪ್ರವಾಸೋದ್ಯಮದ ಸ್ಪರ್ಧಾ ಕೋಷ್ಟಕದಲ್ಲಿ ಭಾರತ ಬಹಳ ಸುಧಾರಣೆಗೈದಿದೆ ಎಂಬುದನ್ನು ತಿಳಿದು ನಿಮಗೆ ಹರ್ಷವೆನ್ನಿಸಬಹುದು. ಇದೆಲ್ಲವೂ ನಿಮ್ಮೆಲ್ಲರ ಸಹಯೋಗದಿಂದಲೇ ಸಾಧ್ಯವಾಗಿದೆ. ಪ್ರವಾಸದ ಮಹತ್ವವನ್ನು ಅರಿತಿರುವುದರಿಂದ ಈ ಸಾಧನೆ ಆಗಿದೆ ಎಂಬುದು ವಿಶೇಷ. ಸ್ವಚ್ಛತಾ ಆಂದೋಲನದ ಪಾಲು ಇದರಲ್ಲಿ ಹಿರಿದಾದುದು. ಎಷ್ಟು ಸುಧಾರಣೆ ಆಗಿದೆ ಎಂಬುದನ್ನು ನಾನು ನಿಮಗೆ ಹೇಳಲೇ? ನಿಮಗೆ ಖಂಡಿತ ಸಂತೋಷವಾಗುತ್ತದೆ. ಇಂದು ನಮ್ಮ ಸ್ಥಾನ 34 ರಲ್ಲಿದೆ. 5 ವರ್ಷಗಳ ಹಿಂದೆ ಇದು 65 ನೇ ಸ್ಥಾನದಲ್ಲಿತ್ತು. ಅಂದರೆ ಒಂದು ರೀತಿಯಲ್ಲಿ ನಾವು ಬಹುದೊಡ್ಡ ಅಂತರವನ್ನು ಕ್ರಮಿಸಿದ್ದೇವೆ. ನಾವು ಮತ್ತಷ್ಟು ಪ್ರಯತ್ನ ಮಾಡಿದರೆ ಸ್ವಾತಂತ್ರ್ಯದ 75 ನೇ ಸಂಭ್ರಮಾಚರಣೆ ವೇಳೆಗೆ ಪ್ರವಾಸೋದ್ಯಮದಲ್ಲಿ ವಿಶ್ವದ ಪ್ರಮುಖ ಸ್ಥಾನಗಳಲ್ಲಿ ಸ್ಥಳಾವಕಾಶ ಪಡೆಯಲಿದ್ದೇವೆ.
ನನ್ನ ಪ್ರಿಯ ದೇಶಬಾಂಧವರೇ, ನಿಮ್ಮೆಲ್ಲರಿಗೂ ಮತ್ತೊಮ್ಮೆ ವೈವಿಧ್ಯತೆಯಿಂದ ಕೂಡಿದ ಭಾರತದ ವಿವಿಧ ಹಬ್ಬಗಳ ಅನಂತ ಅನಂತ ಶುಭಹಾರೈಕೆಗಳು. ಹಾಂ, ಇದರ ಜೊತೆಗೆ ದೀಪಾವಳಿ ಆಚರಣೆಯಲ್ಲಿ ಪಟಾಕಿ ಹಾರಿಸುವಾಗ ಅಗ್ನಿ ಅನಾಹುತಗಳಾಗದಂತೆ, ಯಾವುದೇ ವ್ಯಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಿ. ಇದಕ್ಕಾಗಿ ಖಂಡಿತ ಮುನ್ನೆಚ್ಚರಿಕೆ ವಹಿಸಿ. ಸಂತೋಷವೂ ಇರಬೇಕು, ಸಂಭ್ರಮವೂ ಇರಬೇಕು, ಉತ್ಸಾಹವೂ ಇರಬೇಕು ಮತ್ತು ನಮ್ಮ ಹಬ್ಬಗಳು ಸಾಮೂಹಿಕತೆಯ ಸುಗಂಧವನ್ನೂ ಸೂಸುತ್ತವೆ. ಸಾಮೂಹಿಕತೆಯ ಸಂಸ್ಕಾರವನ್ನೂ ತರುತ್ತವೆ. ಸಾಮೂಹಿಕ ಜೀವನ ಹೊಸದೊಂದು ಸಾಮರ್ಥ್ಯವನ್ನು ನೀಡುತ್ತದೆ. ಹಬ್ಬಗಳು ಆ ಹೊಸ ಸಾಮರ್ಥ್ಯದ ಸಾಧನವಾಗಿರುತ್ತವೆ. ಬನ್ನಿ ಜೊತೆಗೂಡಿ, ಹುರುಪಿನಿಂದ, ಉತ್ಸಾಹದಿಂದ, ಹೊಸ ಕನಸುಗಳೊಂದಿಗೆ, ಹೊಸ ಸಂಕಲ್ಪದೊಂದಿಗೆ ಹಬ್ಬಗಳನ್ನೂ ಆಚರಿಸೋಣ. ಮತ್ತೊಮ್ಮೆ ಅನಂತ ಅನಂತ ಶುಭಾಷಯಗಳು. ಧನ್ಯವಾದ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ನಮ್ಮ ದೇಶ ಈ ಮಧ್ಯೆ ಒಂದೆಡೆ ಮಳೆಯ ಆನಂದವನ್ನು ಅನುಭವಿಸುತ್ತಿದ್ದರೆ ಇನ್ನೊಂದೆಡೆ ಭಾರತದ ಪ್ರತಿಯೊಂದು ಮೂಲೆಯಲ್ಲೂ ಒಂದಲ್ಲಾ ಒಂದು ಬಗೆಯ ಉತ್ಸವ ಮತ್ತು ಜಾತ್ರೆ, ದೀಪಾವಳಿವರೆಗೆ ಎಲ್ಲವೂ ಹೀಗೆ ನಡೆಯುತ್ತಿರುತ್ತದೆ. ಬಹುಶಃ ನಮ್ಮ ಪೂರ್ವಜರು ಋತು ಚಕ್ರ, ಆರ್ಥಿಕ ಚಕ್ರ ಮತ್ತು ಸಾಮಾಜಿಕ ಜೀವನದ ವ್ಯವಸ್ಥೆಯನ್ನು ಎಷ್ಟು ಜಾಣ್ಮೆಯಿಂದ ಹೆಣೆದಿದ್ದಾರೆ ಎಂದರೆ ಎಂಥದೇ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಮಂದತೆ ಮೂಡದಂತೆ ಎಚ್ಚರವಹಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ನಾವು ಹಲವಾರು ಹಬ್ಬಗಳನ್ನು ಆಚರಿಸಿದ್ದೇವೆ. ನಿನ್ನೆ ಭಾರತದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. ಸಹಸ್ರಾರು ವರ್ಷಗಳ ನಂತರವೂ ಎಲ್ಲ ಉತ್ಸವಗಳೂ ಹೊಸತನವನ್ನು ಹೊತ್ತು ತರುತ್ತವೆ, ಹೊಸ ಪ್ರೇರಣೆಯೊಂದಿಗೆ ಬರುತ್ತವೆ, ಹೊಸ ಶಕ್ತಿಯನ್ನು ಹೊತ್ತು ತರುತ್ತವೆ ಮತ್ತು ಸಾವಿರಾರು ವರ್ಷಗಳಷ್ಟು ಪುರಾತನವಾದ ಜೀವನ ಎಂಥದ್ದು ಎಂದರೆ, ಇಂದಿಗೂ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದಾಹರಣೆ ನೀಡಬಲ್ಲಂಥ ಮತ್ತು ಪ್ರೇರಣಾದಾಯಕವಾದಂಥ ಶ್ರೀ ಕೃಷ್ಣನ ಜೀವನದಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಗಾಧ ಸಾಮರ್ಥ್ಯ ಹೊಂದಿದ್ದರೂ ಶ್ರೀಕೃಷ್ಣ ಕೆಲವೊಮ್ಮೆ ರಾಸಲೀಲೆಯಲ್ಲಿ ತಲ್ಲೀನನಾದರೆ, ಒಮ್ಮೊಮ್ಮೆ ಗೋವುಗಳೊಂದಿಗೆ, ಇನ್ನೊಮ್ಮೆ ಗೋಪಾಲಕರೊಂದಿಗೆ, ಕೆಲವೊಮ್ಮೆ ಆಟಪಾಠಗಳಲ್ಲಿ, ಕೆಲವೊಮ್ಮೆ ಕೊಳಲು ವಾದನದಲ್ಲಿ ಮುಳುಗಿಹೋಗುತ್ತಿದ್ದ. ಅದೆಷ್ಟೋ ವೈವಿಧ್ಯತೆಗಳಿಂದ ಕೂಡಿದ್ದ ವ್ಯಕ್ತಿತ್ವ, ಅಪ್ರತಿಮ ಸಾಮರ್ಥ್ಯವಂತ ಆದರೆ ಸಮಾಜ ಶಕ್ತಿಗೆ, ಲೋಕ ಶಕ್ತಿಗೆ ತನ್ನನ್ನು ಸಮರ್ಪಿಸಿಕೊಂಡು ಲೋಕ ಪಾಲಕನ ರೂಪದಲ್ಲಿ ಹೊಸತೊಂದು ದಾಖಲೆಯನ್ನೇ ಸೃಷ್ಟಿಸಿದಂತಹ ವ್ಯಕ್ತಿತ್ವ. ಸ್ನೇಹ ಹೇಗಿರಬೇಕು ಎಂಬುದಕ್ಕೆ ಸುಧಾಮನ ಘಟನೆಯನ್ನು ಯಾರು ಮರೆಯಲು ಸಾಧ್ಯ. ಇನ್ನು ರಣರಂಗದಲ್ಲಿ ಅದಮ್ಯ ಸಾಮರ್ಥ್ಯದ ಹೊರತಾಗಿಯೂ ಸಾರಥಿಯ ಕೆಲಸವನ್ನು ಸ್ವೀಕರಿಸುವುದು, ಪರ್ವತವನ್ನೇ ಬೆರಳಿಂದ ಎತ್ತಿಹಿಡಿಯುವುದರಿಂದ ಹಿಡಿದು ಊಟದ ಎಲೆಯನ್ನು ಎತ್ತುವವರೆಗೆ ಎಲ್ಲದರಲ್ಲೂ ಹೊಸತನ ಎದ್ದು ಕಾಣುತ್ತದೆ. ಆದ್ದರಿಂದ ಇಂದು ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ ನನ್ನ ಗಮನ ಇಬ್ಬರು ಮೋಹನರ ಮೇಲೆ ನೆಟ್ಟಿದೆ. ಓರ್ವ ಸುದರ್ಶನ ಚಕ್ರ ಧರಿಸಿದ ಮೋಹನನಾದರೆ ಇನ್ನೊಬ್ಬರು ಚರಕಾಧಾರಿ ಮೋಹನ. ಸುದರ್ಶನ ಚಕ್ರ ಧರಿಸಿದ ಮೋಹನ ಯಮುನಾ ನದಿ ದಂಡೆಯನ್ನು ತೊರೆದು ಗುಜರಾತ್ನ ಸಮುದ್ರ ದಡದಲ್ಲಿ ದ್ವಾರಕಾ ನಗರದಲ್ಲಿ ನೆಲೆ ನಿಂತ. ಇನ್ನು ಸಮುದ್ರ ದಡದಲ್ಲಿ ಜನಿಸಿದ ಮೋಹನ ಯಮುನಾ ನದಿ ದಡಕ್ಕೆ ಬಂದು ದೆಹಲಿಯಲ್ಲಿ ಜೀವನದ ಕೊನೆಯುಸಿರೆಳೆಯುತ್ತಾರೆ. ಸುದರ್ಶನ ಚಕ್ರ ಧರಿಸಿದ ಮೋಹನ ಸಹಸ್ರಾರು ವರ್ಷಗಳ ಹಿಂದೆಯೇ ಅಂದಿನ ಪರಿಸ್ಥಿತಿಯಲ್ಲಿ ಯುದ್ಧವನ್ನು ತಡೆಯಲು, ಸಂಘರ್ಷವನ್ನು ತಡೆಯಲು, ತನ್ನ ಬುದ್ಧಿಶಕ್ತಿ, ಕರ್ತವ್ಯ ಮತ್ತು ಸಾಮರ್ಥ್ಯದ ಹಾಗೂ ತನ್ನ ವಿವೇಕದ ಸಂಪೂರ್ಣ ಬಳಕೆ ಮಾಡಿದ್ದ. ಚರಕಾಧಾರಿ ಮೋಹನ ಕೂಡಾ ಸ್ವಾತಂತ್ರ್ಯಕ್ಕಾಗಿ ಇಂಥದೇ ಒಂದು ದಾರಿ ಹುಡುಕಿದ್ದರು. ಮಾನವೀಯ ಮೌಲ್ಯಗಳನ್ನು ಕಾಪಾಡಲು, ವ್ಯಕ್ತಿತ್ವದ ಮೂಲ ತತ್ವಗಳಿಗೆ ಸಾಮರ್ಥ್ಯ ಒದಗಿಸಿಕೊಡಲು ಸಂಪೂರ್ಣ ವಿಶ್ವವೇ ಇಂದಿಗೂ ಆಶ್ಚರ್ಯಪಡುವಂಥ ಒಂದು ರೂಪ ಮತ್ತು ತಿರುವನ್ನು ಸ್ವಾತಂತ್ರ್ಯ ಚಳವಳಿಗೆ ನೀಡಿದ್ದರು. ನಿಸ್ವಾರ್ಥ ಸೇವೆಯ ಮಹತ್ವವಾಗಿರಲಿ, ಜ್ಞಾನದ ಮಹತ್ವವಾಗಿರಲಿ ಇಲ್ಲವೇ ಜೀವನ ಏಳು ಬೀಳುಗಳ ನಡುವೆಯೂ ನಗುತ್ತಾ ಮುಂದೆ ಸಾಗುವುದರ ಮಹತ್ವದ ಕುರಿತಾಗಲಿ, ಇದೆಲ್ಲವನ್ನು ನಾವು ಭಗವಂತ ಶ್ರೀ ಕೃಷ್ಣನ ಸಂದೇಶಗಳಿಂದ ಕಲಿಯಬಹುದಾಗಿದೆ. ಆದ್ದರಿಂದಲೇ ಶ್ರೀ ಕೃಷ್ಣನನ್ನು ಜಗದ್ಗುರು ಎಂದು ಕರೆಯಲಾಗುತ್ತದೆ. “ಕೃಷ್ಣಂ ವಂದೇ ಜಗದ್ಗುರುಂ”
ಇಂದು ನಾವು ಹಬ್ಬಗಳ ಕುರಿತು ಮಾತನಾಡುತ್ತಿರುವಾಗಲೇ ಭಾರತ ಮತ್ತೊಂದು ದೊಡ್ಡ ಉತ್ಸವದ ತಯಾರಿಯಲ್ಲಿ ತೊಡಗಿದೆ. ಭಾರತ ಮಾತ್ರವಲ್ಲ ಸಂಪೂರ್ಣ ವಿಶ್ವದಲ್ಲೇ ಇದರ ಚರ್ಚೆಯಾಗುತ್ತಿದೆ. ನನ್ನ ಪ್ರಿಯ ದೇಶಬಾಂಧವರೇ ನಾನು ಮಾತನಾಡುತ್ತಿರುವುದು ಮಹಾತ್ಮಾ ಗಾಂಧೀಯವರ 150 ನೇ ಜಯಂತಿ ಕುರಿತು. 2 ಅಕ್ಟೋಬರ್ 1869ರಲ್ಲಿ, ಪೋರ್ ಬಂದರ್ ಸಮುದ್ರದ ದಡದಲ್ಲಿ ಇಂದು ಕೀರ್ತಿ ಮಂದಿರ್ ಎಂದು ಕರೆಯಲಾಗುವ ಆ ಮನೆಯಲ್ಲಿ ಒಬ್ಬ ವ್ಯಕ್ತಿಯಲ್ಲ ಒಂದು ಯುಗದ ಜನನವಾಯಿತು. ಆ ವ್ಯಕ್ತಿ ಮಾನವನ ಇತಹಾಸಕ್ಕೆ ಹೊಸ ತಿರುವು ನೀಡಿದರು. ಹೊಸ ದಾಖಲೆಯನ್ನು ಬರೆದರು. ಒಂದು ವಿಷಯ ಮಹಾತ್ಮಾ ಗಾಂಧಿಯವರೊಂದಿಗೆ ಸದಾ ಇತ್ತು ಅಲ್ಲದೆ ಅದು ಅವರ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಅದೇ – ಸೇವೆ, ಸೇವೆಯ ಮನೋಭಾವ, ಸೇವೆಯ ಕುರಿತು ನಿಷ್ಠೆ. ಅವರ ಸಂಪೂರ್ಣ ಜೀವನವನ್ನು ಅವಲೋಕಿಸಿದಾಗ, ದಕ್ಷಿಣ ಆಫ್ರಿಕಾದಲ್ಲಿ ವರ್ಣ ಬೇಧಕ್ಕೆ ಗುರಿಯಾದ ಸಮುದಾಯದ ಜನರ ಸೇವೆ ಮಾಡಿದ್ದರು. ಆ ಕಾಲಕ್ಕೆ ಇದು ಸಣ್ಣ ಪುಟ್ಟ ವಿಷಯವೇನಾಗಿರಲಿಲ್ಲ. ಚಂಪಾರಣ್ಯದಲ್ಲಿ ಭೇದ ಭಾವಕ್ಕೆ ಒಳಗಾದ ರೈತರ ಸೇವೆ ಮಾಡಿದ್ದರು. ಯಾರಿಗೆ ಸೂಕ್ತ ಕೂಲಿ ದೊರೆಯುತ್ತಿರಲಿಲ್ಲವೋ ಅಂಥ ಕೂಲಿಗಾರರ ಸೇವೆಯನ್ನು ಅವರು ಮಾಡಿದ್ದರು. ಬಡವ, ಬಲ್ಲಿದ, ಅಶಕ್ತ ಮತ್ತು ಹಸಿದವರ ಸೇವೆಯನ್ನೇ ತಮ್ಮ ಜೀವನದ ಆದ್ಯ ಕರ್ತವ್ಯವೆಂದು ಭಾವಿಸಿದ್ದರು. ರಕ್ತ ಪಿತ್ತ ರೋಗಕ್ಕೆ ಸಂಬಂಧಿಸಿದ ಅದೆಷ್ಟೋ ಭ್ರಮೆಗಳಿದ್ದವು, ಇಂಥ ಭ್ರಮೆಗಳನ್ನು ತೊಡೆದು ಹಾಕಲು ರಕ್ತ ಪಿತ್ತ ರೋಗಿಗಳ ಸೇವೆಯನ್ನು ಸ್ವತಃ ಮಾಡುತ್ತಿದ್ದರು ಮತ್ತು ಸ್ವಂತ ಜೀವನದಲ್ಲಿ ಸೇವೆಯ ಮೂಲಕ ಉದಾಹರಣೆಗಳನ್ನು ನೀಡುತ್ತಿದ್ದರು. ಸೇವೆ ಎಂಬುದನ್ನು ಕೇವಲ ಶಬ್ದದಿಂದಲ್ಲದೆ ಸ್ವತಃ ಜೀವಿಸಿ ಕಲಿಸಿದ್ದರು. ಸತ್ಯದೊಂದಿಗೆ ಹೇಗೆ ಗಾಂಧೀಜಿಯವರ ನಂಟಿತ್ತೋ ಹಾಗೆಯೇ ಸೇವೆಯೊಂದಿಗೂ ಗಾಂಧೀಜಿಯವರ ಅನನ್ಯವಾದ ಮತ್ತು ಅಪರೂಪದ ನಂಟಿತ್ತು. ಯಾರಿಗೇ ಆಗಲಿ ಎಲ್ಲಿಯೇ ಆಗಲಿ ಅವಶ್ಯಕತೆಯಿದೆ ಎಂದಾದರೆ ಮಹಾತ್ಮಾ ಗಾಂಧಿ ಸೇವೆಗಾಗಿ ಉಪಸ್ಥಿತರಿರುತ್ತಿದ್ದರು. ಅವರು ಸೇವೆಯ ಬಗ್ಗೆ ಒತ್ತು ನೀಡುವುದಲ್ಲದೇ ಆತ್ಮ ಸಂತೋಷದ ಬಗ್ಗೆಯೂ ಹೆಚ್ಚಿನ ಮಹತ್ವ ನೀಡಿದ್ದರು. ಸೇವೆ ಎಂಬ ಶಬ್ದದ ಸಾರ್ಥಕತೆ ಸೇವೆಯೇ ಪರಮ ಧರ್ಮ ಎಂದರಿತು ಸಂತೋಷದಿಂದ ಮಾಡುವುದರಲ್ಲಿಯೇ ಇದೆ. ಆದರೆ ಇದರೊಟ್ಟಿಗೆ ಉತ್ಕೃಷ್ಟ ಆನಂದ, “ಸ್ವಾಂತಃ ಸುಖಾಯಃ” ಅಂದರೆ ಸ್ವ ಇಚ್ಛೆಯಿಂದ ಸುಖದ ಅನುಭವ ಪಡೆಯುವುದು ಈ ಭಾವನೆಯ ಅನುಭವವವೂ ಸೇವೆಯಲ್ಲಿ ಅಂತರ್ಗತವಾಗಿದೆ. ಇದನ್ನು ಬಾಪು ರವರ ಜೀವನದಿಂದ ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಮಹಾತ್ಮಾ ಗಾಂಧೀ ಅಸಂಖ್ಯ ಭಾರತೀಯರ ಧ್ವನಿಯಾಗಿದ್ದರು. ಆದರೆ ಮಾನವ ಮೌಲ್ಯಗಳು ಮತ್ತು ಹಿರಿಮೆಗೆ ಅವರು ವಿಶ್ವದ ಧ್ವನಿಯಾಗಿದ್ದರು. ಮಹಾತ್ಮಾ ಗಾಂಧೀ ಅವರಿಗೆ ವ್ಯಕ್ತಿ ಮತ್ತು ಸಮಾಜ, ಮಾನವ ಮತ್ತು ಮಾನವೀಯತೆಯೇ ಸರ್ವಸ್ವವಾಗಿತ್ತು. ಆಫ್ರಿಕಾದ ಫೀನಿಕ್ಸ್ ಫಾರ್ಮ್ ಆಗಿರಲಿ ಅಥವಾ ಟೋಲ್ಸ್ ಟಾಯ್ ಫಾರ್ಮ್ ಆಗಿರಲಿ, ಸಾಬರಮತಿ ಆಶ್ರಮವಾಗಿರಲಿ ಅಥವಾ ವಾರ್ಧಾ ಆಗಿರಲಿ ಎಲ್ಲ ಸ್ಥಳಗಳಲ್ಲೂ ತಮ್ಮದೇ ಆದ ರೀತಿಯಲ್ಲಿ ಸಮುದಾಯ ಸಂಚಲನೆಯಲ್ಲಿ ಗಾಂಧೀಜಿ ಅವರದ್ದು ಎತ್ತಿದ ಕೈಯಾಗಿತ್ತು. ಪೂಜ್ಯ ಮಹಾತ್ಮಾ ಗಾಂಧೀ ಅವರಿಗೆ ಸಂಬಂಧಿಸಿದ ಮಹತ್ವಪೂರ್ಣ ಸ್ಥಳಗಳಿಗೆ ಭೇಟಿ ನೀಡಿ ನಮನ ಸಲ್ಲಿಸಲು ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ. ಗಾಂಧೀಜಿ ಸೇವಾ ಮನೋಭಾವನೆಯ ಮೂಲಕ ಸಂಘಟನಾ ಭಾವಕ್ಕೂ ಪುಷ್ಟಿ ನೀಡುತ್ತಿದ್ದರು ಎಂದು ನಾನು ಹೇಳಬಲ್ಲೆ. ಸಮಾಜ ಸೇವೆ ಮತ್ತು ಸಮುದಾಯ ಸಂಚಲನೆ ಎಂಬ ಭಾವನೆಗಳನ್ನು ನಮ್ಮ ವ್ಯಾವಹಾರಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಇದೇ ಮಹಾತ್ಮಾ ಗಾಂಧೀ ಅವರಿಗೆ ನೀಡಬಹುದಾದ ಶೃದ್ಧಾಂಜಲಿಯಾಗಿದೆ. ಕಾರ್ಯಾಂಜಲಿಯಾಗಿದೆ. ಇಂಥ ಅವಕಾಶಗಳು ಬಹಳಷ್ಟು ಸಿಗುತ್ತವೆ. ನಾವೂ ಒಗ್ಗೂಡುತ್ತೇವೆ ಆದರೆ ಗಾಂಧೀಜಿಯ 150 ನೇ ಜನ್ಮ ವರ್ಷಾಚರಣೆ ಹೀಗೆ ಬಂದು ಹೋಗುವುದು ನಮಗೆ ಒಪ್ಪಿಗೆಯೇ? ದೇಶಬಾಂಧವರೇ ಇಲ್ಲ. ನಾವೆಲ್ಲ ನಮನ್ನೇ ಪ್ರಶ್ನಿಸಿಕೊಳ್ಳೋಣ, ಆಲೋಚಿಸೋಣ, ಸಾಮೂಹಿಕ ಚರ್ಚೆ ಮಾಡೋಣ. ಸಮಾಜದ ಇತರ ಜನರೊಂದಿಗೆ ಬೆರೆತು, ಎಲ್ಲ ವರ್ಗದವರೊಂದಿಗೆ ಸೇರಿ, ಎಲ್ಲ ವಯೋಮಾನದವರೊಂದಿಗೆ ಕೂಡಿ – ಗ್ರಾಮಗಳಾಗಲಿ, ನಗರಗಳಾಗಲಿ, ಪುರುಷರಾಗಲಿ, ಮಹಿಳೆಯರಾಗಲೀ ಎಲ್ಲರೊಂದಿಗೆ ಸೇರಿ ಸಮಾಜಕ್ಕೆ ಏನು ಮಾಡಬಹುದು – ಒಬ್ಬ ವ್ಯಕ್ತಿಯ ರೂಪದಲ್ಲಿ ಆ ಪ್ರಯತ್ನದಲ್ಲಿ ಹೇಗೆ ಜೊತೆಗೂಡಬಹುದು. ನನ್ನಿಂದ ಯಾವ ರೀತಿಯ ಮೌಲ್ಯವರ್ಧನೆ ಆಗಬಹುದು ಎಂಬ ಚಿಂತನೆ ಮಾಡಬೇಕು. ಹಾಗೂ ಸಮೂಹ ಕಾರ್ಯದಲ್ಲಿ ಅದರದ್ದೇ ಆದ ಶಕ್ತಿ ಇರುತ್ತದೆ. ಗಾಂಧಿ 150 ರ ಸಂಪೂರ್ಣ ಕಾರ್ಯಕ್ರಮದಲ್ಲಿ ಸಾಮೂಹಿಕತೆಯೂ ಇರಲಿ ಮತ್ತು ಸೇವೆಯೂ ಇರಲಿ. ಸುತ್ತಮುತ್ತಲಿನ ಎಲ್ಲರೂ ಸೇರಿ ಮುಂದಡಿಯಿಡೋಣವೇ? ನಮ್ಮದು ಫುಟ್ಬಾಲ್ ತಂಡವಾದರೆ, ಫುಟ್ಬಾಲ್ ಆಡೋಣ ಜೊತೆಗೆ ಗಾಂಧೀಜಿ ಆದರ್ಶದಂತೆ ಕೆಲವೊಂದು ಸೇವಾ ಕಾರ್ಯಗಳನ್ನೂ ಮಾಡೋಣ. ನಮ್ಮದು ಮಹಿಳಾ ಸಂಘವಾದರೆ (ಲೇಡಿಸ್ ಕ್ಲಬ್) ಆಧುನಿಕ ಯುಗದ ಮಹಿಳಾ ಸಂಘದ ಕೆಲಸಗಳನ್ನೂ ಮಾಡುತ್ತಲಿರೋಣ ಜೊತೆಗೆ ಎಲ್ಲ ಗೆಳತಿಯರು ಸೇರಿ ಒಂದಲ್ಲ ಒಂದು ಸೇವಾ ಕಾರ್ಯವನ್ನೂ ಕೈಗೊಳ್ಳೋಣ. ಬಹಳಷ್ಟು ಕೆಲಸ ಮಾಡಬಹುದು. ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡವರಿಗೆ ಹಂಚೋಣ. ಜ್ಞಾನವನ್ನು ಪಸರಿಸೋಣ. ಬಹುಶಃ 130 ಕೋಟಿ ದೇಶ ಬಾಂಧವರ ಬಳಿ 130 ಕೋಟಿ ಕಲ್ಪನೆಗಳಿವೆ, 130 ಕೋಟಿ ನವ ಉಪಕ್ರಮಗಳೂ ಆಗಬಹುದು. ಇದಕ್ಕೆ ಯಾವುದೇ ಸೀಮೆಯಿಲ್ಲ – ಬೇಕಾದದ್ದು ಇಷ್ಟೆ – ಉತ್ತಮ ಉದ್ದೇಶ, ಸದ್ಭಾವನೆ, ಸಂಪೂರ್ಣ ಸಮರ್ಪಣಾಭಾವದಿಂದ ಸೇವೆ ಮಾಡುವುದು. ಅದು ಕೂಡ ಸ್ವಾತಃ ಸುಖಾಯಃ – ಒಂದು ಅನನ್ಯವಾದ ಆನಂದದ ಅನುಭೂತಿಗಾಗಿ ಆಗಿರಲಿ.
ನನ್ನ ಪ್ರಿಯ ದೇಶ ಬಾಂಧವರೆ, ಕೆಲ ತಿಂಗಳುಗಳ ಹಿಂದೆ ನಾನು ಗುಜರಾತ್ನಲ್ಲಿ ದಾಂಡಿಗೆ ಭೇಟಿ ನೀಡಿದ್ದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾಂಡಿಯ “ಉಪ್ಪಿನ ಸತ್ಯಾಗ್ರಹ” ಒಂದು ಮಹತ್ವದ ತಿರುವಾಗಿದೆ. ದಾಂಡಿಯಲ್ಲಿ ನಾನು ಮಹಾತ್ಮಾ ಗಾಂಧೀ ಅವರಿಗೆ ಮೀಸಲಾದ ಒಂದು ಅತ್ಯಾಧುನಿಕ ಸಂಗ್ರಹಾಲಯವನ್ನು ಉದ್ಘಾಟಿಸಿದ್ದೆ. ನೀವು ಕೂಡಾ ಮುಂಬರುವ ದಿನಗಳಲ್ಲಿ ಮಹಾತ್ಮಾ ಗಾಂಧೀ ಅವರಿಗೆ ಸಂಬಂಧಿಸಿದ ಒಂದಲ್ಲಾ ಒಂದು ಸ್ಥಳಕ್ಕೆ ಖಂಡಿತ ಭೇಟಿ ನೀಡಿ ಎಂದು ಆಗ್ರಹಿಸುತ್ತೇನೆ. ಅದು ಪೋರ್ ಬಂದರ್ ಆಗಿರಬಹುದು, ಸಾಬರಮತಿ ಆಶ್ರಮವಾಗಿರಬಹುದು, ಚಂಪಾರಣ್ ಆಗಿರಬಹುದು, ವಾರ್ಧಾ ಆಶ್ರಮವಾಗಿರಬಹುದು ಅಥವಾ ದಿಲ್ಲಿಯಲ್ಲಿ ಮಾಹಾತ್ಮಾ ಗಾಂಧಿಯವರಿಗೆ ಸಂಬಂಧಿಸಿದ ಯಾವುದೇ ಸ್ಥಳವಾಗಿರಬಹುದು ಹೀಗೆ ಯಾವುದೇ ಸ್ಥಳವಾಗಿರಲಿ ಇಂಥ ಸ್ಥಳಗಳಿಗೆ ನೀವು ಹೋದಾಗ ನಿಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಪ್ಪದೇ ಅಪ್ಲೋಡ್ ಮಾಡಿ. ಇದರಿಂದ ಬೇರೆಯವರಿಗೂ ಸ್ಫೂರ್ತಿ ಸಿಗಲಿ ಹಾಗೂ ಅದರೊಟ್ಟಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವಂತಹ ಒಂದೆರಡು ವಾಕ್ಯಗಳನ್ನೂ ಬರೆಯಿರಿ. ನಿಮ್ಮ ಮನದಾಳದಿಂದ ಮೂಡಿಬಂದ ಭಾವ ಯಾವುದೇ ಉಚ್ಚಮಟ್ಟದ ಸಾಹಿತ್ಯಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಮತ್ತು ಆಗಬಹುದು. ಇಂದಿನ ಸಮಯದಲ್ಲಿ ನಿಮ್ಮ ದೃಷ್ಟಿ ಕೋನದಿಂದ ನೀವು ಲೇಖನಿಯಿಂದ ಬರೆದಂತಹ ಗಾಂಧಿಯ ರೂಪ ಬಹುಶಃ ಹೆಚ್ಚು ಸಮಯೋಚಿತವಿರಬಹುದು. ಮುಂಬರುವ ದಿನಗಳಲ್ಲಿ ಬಹಳಷ್ಟು ಕಾರ್ಯಕ್ರಮಗಳು, ಸ್ಪರ್ಧೆಗಳು, ಪ್ರದರ್ಶನಗಳ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಆದರೆ ಈ ಸಂದರ್ಭದಲ್ಲಿ ಒಂದು ಬಹಳ ರೋಚಕವಾದ ವಿಷಯವಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ವೆನ್ನಿಸ್ ಬಿಯೆನ್ನೆಲ್ ಎಂಬ ಬಹು ಪ್ರಸಿದ್ಧ ಕಲಾ ಪ್ರದರ್ಶನವಿದೆ. ಅಲ್ಲಿ ವಿಶ್ವದಾದ್ಯಂತದ ಕಲಾವಿದರು ಸೇರುತ್ತಾರೆ. ಈ ಬಾರಿ ವೆನ್ನಿಸ್ ಬಿಯೆನ್ನೆಲ್ ನಲ್ಲಿ ಭಾರತೀಯ ಪೆವಿಲಿಯನ್ ನಲ್ಲಿ ಗಾಂಧೀಜಿಯವರ ನೆನಪುಗಳ ಬಹಳ ಆಸಕ್ತಿಕರ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಇದರಲ್ಲಿ ಹರಿಪುರಾ ಪ್ಯಾನಲ್ಗಳು ಬಹಳ ಆಸಕ್ತಿ ಮೂಡಿಸಿದ್ದವು. ಗುಜರಾತ್ನ ಹರಿಪುರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು ಎಂಬುದು ನಿಮಗೆ ನೆನಪಿರಬಹುದು. ಅದರಲ್ಲಿ ಸುಭಾಷ್ ಚಂದ್ರ ಭೋಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಆರ್ಟ್ ಪ್ಯಾನಲ್ಗಳಿಗೆ ಒಂದು ಸುಂದರ ಇತಿಹಾಸವಿದೆ. ಕಾಂಗ್ರೆಸ್ ಹರಿಪುರ ಅಧಿವೇಶನಕ್ಕೂ ಮೊದಲು 1937-38 ರಲ್ಲಿ ಮಹಾತ್ಮಾ ಗಾಂಧಿಯವರು ಶಾಂತಿನಿಕೇತನ ಕಲಾಭವನದ ಅಂದಿನ ಪ್ರಾಂಶುಪಾಲರಾಗಿದ್ದ ನಂದಲಾಲ್ ಬೋಸ್ ಅವರಿಗೆ ಆಮಂತ್ರಣ ನೀಡಿದ್ದರು. ಭಾರತದಲ್ಲಿರುವವರ ಜೀವನಶೈಲಿಯನ್ನು ಕಲಾ ಮಾಧ್ಯಮದ ಮೂಲಕ ಪ್ರಸ್ತುತಪಡಿಸಲಿ ಎಂಬುದು ಗಾಂಧೀಜಿಯವರ ಆಸೆಯಾಗಿತ್ತು. ಈ ಕಲಾ ಪ್ರದರ್ಶನ ಅಧಿವೇಶನದ ಸಮಯದಲ್ಲಿ ನಡೆಯಬೇಕು ಎಂದುಕೊಂಡಿದ್ದರು. ನಮ್ಮ ಸಂವಿಧಾನದ ಶೋಭೆಯನ್ನು ಹೆಚ್ಚಿಸಿರುವ, ಅದಕ್ಕೊಂದು ಹೊಸ ರೂಪವನ್ನು ನೀಡಿರುವ ಕಲಾಕೃತಿಗಳ ರಚನೆಕಾರರು ಇದೇ ನಂದಲಾಲ್ ಬೋಸ್. ಅವರ ಈ ಕಲಾ ಸಾಧನೆ ಸಂವಿಧಾನದ ಜೊತೆ ಜೊತೆಗೆ ನಂದಲಾಲ್ ಬೋಸ್ ಅವರನ್ನು ಅಮರರನ್ನಾಗಿಸಿದೆ. ನಂದಲಾಲ್ ಬೋಸ್ ಅವರು ಹರಿಪುರಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಡಿ ಕೊನೆಗೆ ಗ್ರಾಮೀಣ ಭಾರತದ ಜೀವನವನ್ನು ಪ್ರತಿಬಿಂಬಿಸುವ ಒಂದು ಆರ್ಟ್ ಕ್ಯಾನ್ವಾಸ್ ಸಿದ್ಧಪಡಿಸಿದರು. ಈ ಅಪರೂಪದ ಕಲಾಕೃತಿಯ ಬಗ್ಗೆ ವಿನಿಸ್ನಲ್ಲಿ ಬಹಳ ಚರ್ಚೆ ನಡೆಯಿತು. ಮತ್ತೊಮ್ಮೆ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಶುಭಾಷಯಗಳೊಂದಿಗೆ ಪ್ರತಿ ಭಾರತೀಯನಿಂದಲೂ ಒಂದಲ್ಲ ಒಂದು ಸಂಕಲ್ಪದ ಅಪೇಕ್ಷೆ ಇದೆ. ದೇಶಕ್ಕಾಗಿ, ಸಮಾಜಕ್ಕಾಗಿ, ಬೇರೆಯವರಿಗಾಗಿ ಏನಾದರೂ ಮಾಡಬೇಕು. ಇದೇ ನಾವು ಬಾಪು ಅವರಿಗೆ ಸಲ್ಲಿಸುವ ಉತ್ತಮವಾದ, ನಿಜವಾದ ಮತ್ತು ಪ್ರಾಮಾಣಿಕವಾದ ಕಾರ್ಯಾಂಜಲಿಯಾಗಿದೆ.
ತಾಯಿ ಭಾರತಿಯ ಸುಪುತ್ರರೇ, ನಿಮ್ಮೆಲ್ಲರಿಗೂ ನೆನಪಿರಬಹುದು ಕಳೆದ ಕೆಲವು ವರ್ಷಗಳಿಂದೀಚೆಗೆ ನಾವು ಅಕ್ಟೋಬರ್ಗಿಂತಲೂ ಮೊದಲು ಸುಮಾರು 2 ವಾರಗಳವರೆಗೆ ದೇಶಾದ್ಯಂತ “ಸ್ವಚ್ಛತೆಯೇ ಸೇವೆ” ಆಂದೋಲನವನ್ನು ಆಚರಿಸುತ್ತೇವೆ. ಈ ಬಾರಿ ಇದು ಸೆಪ್ಟೆಂಬರ್ 11 ರಿಂದ ಆರಂಭವಾಗಲಿದೆ. ಈ ಸಮಯದಲ್ಲಿ ನಾವು ನಮ್ಮ ಮನೆಯಿಂದ ಹೊರಬಂದು ಶ್ರಮದಾನದ ಮೂಲಕ ಮಹಾತ್ಮಾ ಗಾಂಧಿಜಿಗೆ ಕಾರ್ಯಾಂಜಲಿ ಸಮರ್ಪಿಸೋಣ. ಮನೆಯಿರಲಿ ಅಥವಾ ಬೀದಿಯಿರಲಿ, ಚೌಕವಾಗಿರಲಿ, ಕೂಡು ರಸ್ತೆಗಳಾಗಿರಲಿ ಅಥವಾ ಚರಂಡಿಗಳಾಗಿರಲಿ, ಶಾಲೆ, ಕಾಲೇಜುಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯ ಮಹಾ ಅಭಿಯಾನವನ್ನೇ ನಡೆಸಬೇಕಿದೆ. ಈ ಬಾರಿ ಪ್ಲಾಸ್ಟಿಕ್ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಎಷ್ಟೊಂದು ಉತ್ಸಾಹ ಮತ್ತು ಹುರುಪಿನಿಂದ 125 ಕೋಟಿ ದೇಶವಾಸಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರೋ, ಬಯಲು ಶೌಚ ಮುಕ್ತಿಗಾಗಿ ಕೆಲಸ ಮಾಡಿದರೋ, ಅದೇ ರೀತಿ ಒಗ್ಗೂಡಿ ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್ನಿಂದ ಮುಕ್ತಿ ಹೊಂದಬೇಕಿದೆ ಎಂದು ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ನಾನು ಹೇಳಿದ್ದೆ. ಈ ವಿಷಯದ ಕುರಿತು ಸಮಾಜದ ಎಲ್ಲ ವರ್ಗಗಳಲ್ಲೂ ಉತ್ಸಾಹವಿದೆ. ನನ್ನ ಬಹಳಷ್ಟು ಜನ ವ್ಯಾಪಾರೀ ಸೋದರ ಸೋದರಿಯರು ತಮ್ಮ ಅಂಗಡಿಗಳಲ್ಲಿ “ ಗ್ರಾಹಕರು ತಮ್ಮ ಕೈಚೀಲಗಳನ್ನು ತಾವೇ ತರಬೇಕು” ಎಂಬ ಫಲಕವನ್ನು ಹಾಕಿದ್ದಾರೆ. ಇದರಿಂದ ಹಣದ ಉಳಿತಾಯವೂ ಆಗುತ್ತದೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ತಮ್ಮ ಕೊಡುಗೆಯನ್ನೂ ನೀಡಿದಂತಾಗುತ್ತದೆ. ಈ ಬಾರಿ ಅಕ್ಟೋಬರ್ 2 ರಂದು ಬಾಪೂಜಿಯವರ 150 ನೇ ಜಯಂತಿ ಆಚರಣೆ ಸಂದರ್ಭದಲ್ಲಿ ಬಯಲು ಶೌಚ ಮುಕ್ತ ಭಾರತವನ್ನ ಸಮರ್ಪಿಸುವುದಷ್ಟೇ ಅಲ್ಲದೆ ಪ್ಲಾಸ್ಟಿಕ್ ವಿರುದ್ಧ ಒಂದು ಹೊಸ ಜನಾಂದೋಲನಕ್ಕೆ ಅಡಿಪಾಯ ಹಾಕಲಿದ್ದೇವೆ. ಈ ವರ್ಷ ಗಾಂಧಿ ಜಯಂತಿಯನ್ನು ಭಾರತಮಾತೆಯನ್ನು ಪ್ಲಾಸ್ಟಿಕ್ನಿಂದ ಮುಕ್ತಗೊಳಿಸುವ ರೂಪದಲ್ಲಿ ಆಚರಿಸೋಣ, ಅಕ್ಟೋಬರ್ 2 ನೇ ತಾರಿಖನ್ನು ವಿಶೇಷವಾಗಿ ಆಚರಿಸೋಣ, ಮಹಾತ್ಮಾ ಗಾಂಧಿಯವರ ಜಯಂತಿಯು ಒಂದು ವಿಶೇಷ ಶ್ರಮದಾನದ ಹಬ್ಬವಾಗಲಿ ಎಂದು ಸಮಾಜದ ಎಲ್ಲ ವರ್ಗಗಳಿಗೆ, ಎಲ್ಲ ಗ್ರಾಮಗಳು, ಹೋಬಳಿಗಳು ಮತ್ತು ನಗರವಾಸಿಗಳಿಗೆ ಮನವಿ ಮಾಡುತ್ತೇನೆ, ಕೈಜೋಡಿಸಿ ಪ್ರಾರ್ಥಿಸುತ್ತೇನೆ. ಪ್ಲಾಸ್ಟಿಕ್ ಕಸ ಸಂಗ್ರಹ ಮತ್ತು ಶೇಖರಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ದೇಶದ ಎಲ್ಲ ನಗರಪಾಲಿಕೆಗಳು, ನಗರ ನಿಗಮಗಳು, ಜಿಲ್ಲಾಡಳಿತ, ಗ್ರಾಮ ಪಂಚಾಯ್ತಿಗಳು, ಸರ್ಕಾರಿ – ಸರ್ಕಾರೇತರ ಎಲ್ಲ ಸಂಸ್ಥೆಗಳು, ಎಲ್ಲ ಸಂಘಟನೆಗಳು, ಒಬ್ಬೊಬ್ಬ ನಾಗರಿಕನಲ್ಲೂ ವಿನಂತಿಸುತ್ತೇನೆ. ಈ ಎಲ್ಲ ಪ್ಲಾಸ್ಟಿಕ್ ತ್ಯಾಜ್ಯ ಒಗ್ಗೂಡಿದಾಗ ಇದರ ಸೂಕ್ತ ವಿಲೇವಾರಿಗೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಕಾರ್ಪೊರೇಟ್ ವಿಭಾಗಕ್ಕೂ ವಿನಂತಿಸುತ್ತೇನೆ. ಇದನ್ನು ಮರುಬಳಕೆ ಮಾಡಬಹುದು. ಇದರಿಂದ ಇಂಧನ ತಯಾರಿಸಬಹುದು. ಈ ರೀತಿ ದೀಪಾವಳಿವರೆಗೆ ನಾವು ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಕೆಲಸವನ್ನು ಪೂರ್ಣಗೊಳಿಸಬಹುದು. ಕೇವಲ ಸಂಕಲ್ಪಗೈಯ್ಯಬೇಕಿದೆ. ಪ್ರೇರಣೆಗಾಗಿ ಅತ್ತಿತ್ತ ನೋಡುವ ಅವಶ್ಯಕತೆಯಿಲ್ಲ. ಗಾಂಧಿಯವರಿಗಿಂತ ದೊಡ್ಡ ಪ್ರೇರಣೆ ಇನ್ನೊಂದಿಲ್ಲ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತ ಸುಭಾಷಿತಗಳು ಒಂದು ರೀತಿಯಲ್ಲಿ ಜ್ಞಾನದ ರತ್ನಗಳಾಗಿವೆ. ನಮಗೆ ಜೀವನದಲ್ಲಿ ಯಾವುದು ಬೇಕೋ ಅದು ಅವುಗಳಲ್ಲಿ ದೊರೆಯುತ್ತವೆ. ಇತ್ತೀಚಿನ ದಿನಗಳಲ್ಲಿ ನನ್ನ ಸಂಪರ್ಕ ಬಹಳ ಕಡಿಮೆ ಆಗಿದೆ ಆದರೆ ಮೊದಲು ನಾನು ಬಹಳ ಸಂಪರ್ಕದಲ್ಲಿದ್ದೆ. ಇಂದು ನಾನು ಒಂದು ಸಂಸ್ಕೃತ ಸುಭಾಷಿತದಿಂದ ಒಂದು ಬಹಳ ಮಹತ್ವಪೂರ್ಣ ಮಾತನ್ನು ಸ್ಪರ್ಷಿಸಲು ಇಚ್ಛಿಸುತ್ತೇನೆ ಮತ್ತು ಇದು ಶತಮಾನಗಳ ಹಿಂದೆ ಬರೆದಂತಹ ಮಾತುಗಳಾಗಿವೆ. ಆದರೆ ಇಂದು ಕೂಡಾ ಇವು ಎಷ್ಟೊಂದು ಮಹತ್ವಪೂರ್ಣವಾಗಿವೆ. ಒಂದು ಉತ್ತಮ ಸುಭಾಷಿತ ಹೀಗಿದೆ –
“ಪೃಥ್ವಿಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಮ್|
ಮೂಢೈ: ಪಾಷಾಣಖಂಡೇಷು ರತ್ನಸಂಜ್ಞಾ ಪ್ರದೀಯತೆ|”
ಈ ಸುಭಾಷಿತದಲ್ಲಿ ಹೀಗಿದೆ- ಪೃಥ್ವಿಯಲ್ಲಿ ಜಲ, ಅನ್ನ ಮತ್ತು ಸುಭಾಷಿತ ಈ ಮೂರು ರತ್ನಗಳಿವೆ. ಮೂರ್ಖರು ಕಲ್ಲನ್ನು ರತ್ನಗಳೆನ್ನುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಅನ್ನದ ಮಹತ್ವ ಬಹಳ ಅಧಿಕವಾಗಿದೆ. ಎಲ್ಲಿಯವರೆಗೆ ಅಂದರೆ ನಾವು ಅನ್ನದ ಜ್ಞಾನವನ್ನೂ ವಿಜ್ಞಾನವಾಗಿ ಬದಲಿಸಿದ್ದೇವೆ. ಸಮತೋಲ ಮತ್ತು ಪೌಷ್ಟಿಕ ಆಹಾರ ನಮ್ಮೆಲ್ಲರಿಗೂ ಅವಶ್ಯವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಮತ್ತು ನವಜಾತ ಶಿಶುಗಳಿಗಾಗಿ , ಯಾಕೆಂದರೆ ಇವರೆ ನಮ್ಮ ಸಮಾಜದ ಭವಿಷ್ಯದ ಅಡಿಪಾಯವಾಗಿದ್ದಾರೆ. ‘ಪೋಷಣ ಅಭಿಯಾನ’ ದಡಿಯಲ್ಲಿ ದೇಶದಲ್ಲೆಲ್ಲ ಆಧುನಿಕ ವೈಜ್ಞಾನಿಕ ರೀತಿಯಲ್ಲಿ ಪೋಷಣೆಯನ್ನು ಜನಾಂದೋಲನವನ್ನಾಗಿ ಮಾಡಲಾಗುತ್ತಿದೆ. ಜನರು ಹೊಸದಾದ ಮತ್ತು ಆಕರ್ಷಕ ರೀತಿಯಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಯಾವಾಗಲೋ ಒಂದು ಮಾತನ್ನು ನನ್ನ ಗಮನಕ್ಕೆ ತರಲಾಗಿತ್ತು. ನಾಶಿಕ್ ನಲ್ಲಿ “ಮುಷ್ಠಿಯಷ್ಟು ಕಾಳು” ಎಂಬುದೊಂದು ದೊಡ್ಡ ಚಳುವಳಿಯೇ ಆಗಿದೆ. ಇದರಡಿಯಲ್ಲಿ ಬೆಳೆಗಳ ಕೊಯ್ಲಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜನರಿಂದ ಒಂದು ಮುಷ್ಠಿ ಕಾಳು ಪಡೆದು ಕೂಡಿಸುತ್ತಾರೆ. ಮಹಿಳೆ ಹಾಗೂ ಮಕ್ಕಳಿಗಾಗಿ ಬಿಸಿಯೂಟ ಮಾಡಲು ಈ ಧಾನ್ಯಗಳನ್ನು ಉಪಯೋಗಿಸುತ್ತಾರೆ. ಇಲ್ಲಿ ದಾನ ಮಾಡುವ ವ್ಯಕ್ತಿ ಒಂದು ರೀತಿಯಿಂದ ಜಾಗರೂಕ ನಾಗರಿಕ ಸಮಾಜ ಸೇವಕನಾಗಿಬಿಡುತ್ತಾನೆ. ಇದಾದ ನಂತರ ಈ ಉದ್ದೇಶಕ್ಕಾಗಿ ಸ್ವತಃ ತಾನೆ ಸಮರ್ಪಿಸಿಕೊಂಡು ಬಿಡುತ್ತಾನೆ. ಅವನೊಬ್ಬ ಆ ಚಳುವಳಿಯ ಸಿಪಾಯಿಯಾಗಿ ಬಿಡುತ್ತಾನೆ. ನಾವೆಲ್ಲರೂ ಪರಿವಾರಗಳಲ್ಲಿ ಹಿಂದುಸ್ತಾನದ ಮೂಲೆ-ಮೂಲೆಯಲ್ಲಿ ‘ಅನ್ನ ಪ್ರಾಶನ’ ಸಂಸ್ಕಾರದ ಬಗ್ಗೆ ಕೇಳಿದ್ದೇವೆ. ಮಕ್ಕಳಿಗೆ ಮೊದಲ ಬಾರಿಗೆ ದ್ರವ ಆಹಾರದ ಬದಲಾಗಿ ಗಟ್ಟ್ಟಿ ಆಹಾರ ತಿನಿಸುವ ಈ ಸಂಸ್ಕಾರವನ್ನು ಮಾಡಲಾಗುತ್ತದೆ. ಗುಜರಾತಿನಲ್ಲಿ 2010 ರಲ್ಲಿ ಒಂದು ವಿಚಾರ ಮಂಡಿಸಲಾಯಿತು ‘ಅನ್ನ ಪ್ರಾಶನ ಸಂಸ್ಕಾರ’ ಸಮಯದಲ್ಲಿ ಯಾಕೆ ಮಕ್ಕಳಿಗೆ ಪೂರಕ ಆಹಾರ ಕೊಡಬಾರದು, ಏಕೆಂದರೆ ಇದರಿಂದ ಜನರನ್ನು ಜಾಗೃತಗೊಳಿಸಬಹುದು. ಇದೊಂದು ಬಹಳ ಅದ್ಭುತವಾದ ಹೆಜ್ಜೆಯಾಗಿದೆ, ಎಲ್ಲಿ ಬೇಕಾದರೂ ಅಳವಡಿಸಿಕೊಳ್ಳಬಹುದಾಗಿದೆ. ಹಲವು ರಾಜ್ಯಗಳಲ್ಲಿ ಜನರು ತಿಥಿ ಭೋಜನ ಅಭಿಯಾನ ನಡೆಸುತ್ತಾರೆ. ಒಂದು ವೇಳೆ ಪರಿವಾರದಲ್ಲಿ ಜನ್ಮದಿನವಾಗಿರಬಹುದು, ಯಾವುದೇ ಶುಭದಿನವಾಗಿರಬಹುದು, ಯಾವುದೇ ಸ್ಮ್ರತಿ ದಿನವಾಗಿರಬಹುದು ಆಗ ಪರಿವಾರದ ಜನತೆ ಪೌಷ್ಟಿಕವಾದ ಅಡುಗೆ, ಸ್ವಾಧಿಷ್ಟ ಅಡುಗೆ ಮಾಡಿಕೊಂಡು ಅಂಗನವಾಡಿಗೆ ಹೋಗುತ್ತಾರೆ, ಸ್ಕೂಲುಗಳಿಗೆ ಹೋಗುತ್ತಾರೆ ಮತ್ತು ಪರಿವಾರದ ಜನತೆ ಸ್ವತಃ ಮಕ್ಕಳಿಗೆ ನೀಡುತ್ತಾರೆ, ತಿನ್ನಿಸುತ್ತಾರೆ. ತಮ್ಮ ಆನಂದವನ್ನೂ ಹಂಚಿಕೊಳ್ಳುತ್ತಾರೆ ಮತ್ತು ಆನಂದವನ್ನು ವ್ಯಕ್ತಪಡಿಸುತ್ತಾರೆ. ಸೇವೆಯ ಭಾವನೆ ಮತ್ತು ಆನಂದದ ಭಾವನೆಯ ಅದ್ಭುತ ಮಿಲನ ಗೋಚರವಾಗುತ್ತದೆ. ಗೆಳೆಯರೆ, ಇಂತಹ ಹಲವು ಚಿಕ್ಕ-ಚಿಕ್ಕ ಕಾರ್ಯಗಳು ನಮ್ಮ ದೇಶದ ಅಪೌಷ್ಟಿಕತೆ ವಿರುದ್ಧ ಒಂದು ಪ್ರಭಾವಿ ಸಮರವನ್ನೇ ಸಾರಬಹುದಾಗಿದೆ. ಇಂದು ಜಾಗರೂಕತೆಯ ಕೊರತೆಯಿಂದ ಅಪೌಷ್ಟಿಕತೆಯಿಂದಾಗಿ ಬಡವರೂ ಮತ್ತು ಶ್ರೀಮಂತರೂ ಎರಡೂ ಸ್ತರದ ಪರಿವಾರಗಳು ಪ್ರಭಾವಿತವಾಗಿವೆ. ಇಡೀ ದೇಶದಲ್ಲಿ ಸೆಪ್ಟೆಂಬರ್ ತಿಂಗಳು ‘ಪೋಷಣ ಅಭಿಯಾನ’ ರೂಪದಲ್ಲಿ ಆಚರಿಸಲಾಗುವುದು. ತಾವು ಅವಶ್ಯವಾಗಿ ಇದರೊಂದಿಗೆ ಸೇರಿರಿ, ತಿಳಿದುಕೊಳ್ಳಿರಿ, ಸ್ವಲ್ಪ ಹೊಸದನ್ನು ಸೇರಿಸಿರಿ. ತಾವು ಕೊಡುಗೆ ನೀಡಿರಿ. ಒಂದು ವೇಳೆ ತಾವು ಒಂದಿಬ್ಬರಿಗಾದರೂ ಅಪೌಷ್ಟಿಕತೆಯಿಂದ ಮುಕ್ತಗೊಳಿಸಿದ್ದಾರೆ ಅದು ನಾವು ದೇಶವನ್ನು ಅಪೌಷ್ಟಿಕತೆಯಿಂದ ಹೊರಗೆ ತಂದಂತೆಯೇ ಸರಿ.
“ಹೆಲೊ ಸರ್, ನನ್ನ ಹೆಸರು ಸೃಷ್ಟಿ ವಿದ್ಯಾ ನಾನು 2nd year student ಆಗಿದ್ದೇನೆ. ಸರ್ ನಾನು Twelvth August ಕ್ಕೆ Bear Grylls ಜೊತೆಗೆ ತಮ್ಮ Episode ನೋಡಿದ್ದೆ. ಸರ್ ಆ ಇಠಿisoಜe ನೋಡಿ ನನಗೆ ಬಹಳ ಸಂತೋಷವಾಯಿತು. First of all (ಮೊದಲಿಗೆ) ಇದನ್ನು ಕೇಳಿ ಸಂತೊಷವಾಯಿತು ತಮಗೆ Nature, Wild life and environment ಬಗ್ಗೆ ಎಷ್ಟೊಂದು ಕಾಳಜಿ ಇದೆ. ಎಷ್ಟೊಂದು Care ಮಾಡುತ್ತೀರಿ. ಮತ್ತೆ ಸರ್ ತಮ್ಮನ್ನು ಈ ಹೊಸ ರೂಪದಲ್ಲಿ, Adventurous ರೂಪದಲ್ಲಿ ನೋಡಿ ಬಹಳ ಖುಷಿಯಾಯಿತು,. ಈಗ ಸರ್, ನಾನು ಈ Episode ನಿಂದ ತಮಗಾದ experience ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಕೊನೆಯದಾಗಿ ಒಂದು ಮಾತು Add ಮಾಡಬಯಸುತ್ತೇನೆ. ನಿಮ್ಮ fitness level ನೋಡಿ, ತಮ್ಮನ್ನು ಇಷ್ಟೊಂದು fit and fine ನೋಡಿ ನಮ್ಮಂತಹ youngster ಬಹಳ ಹೆಚ್ಚು impress ಮತ್ತು ಅತಿ ಹೆಚ್ಚು motivate ಆಗಿರುತ್ತೇವೆ.”
ಸೃಷ್ಟಿ ಅವರೆ ತಮ್ಮ ಫೋನ್ ಕಾಲ್ ಗಾಗಿ ಧನ್ಯವಾದಗಳು. ನಿಮ್ಮಂತೆಯೇ ಹರಿಯಾಣದಲ್ಲಿ ಸೋಹನಾ, ಕೆ.ಕೆ. ಪಾಂಡೆ ಅವರು ಮತ್ತು ಸೂರತ್ನ ಐಶ್ವರ್ಯಾ ಶರ್ಮಾ ಅವರೊಂದಿಗೆ ಇನ್ನೂ ಹಲವರು Discovery Channel ನಲ್ಲಿ ತೋರಿಸಿದಂತಹ ‘‘Man vs, Wild’ Episode ಬಗ್ಗೆ ತಿಳಿದುಕೊಳ್ಳಬಯಸಿದ್ದಾರೆ. ಈ ಸಲದ ‘ಮನ್ ಕಿ ಬಾತ್’ ಸಲುವಾಗಿ ಯೋಚಿಸುತ್ತಿರುವಾಗ ಇದರ ಬಗ್ಗೆ ಬಹಳಷ್ಟು ಪ್ರಶ್ನೆಗಳು ಬರಬಹುದೆಂದು ನನಗೆ ಪೂರ್ಣ ವಿಶ್ವಾಸವಿತ್ತು, ಅದು ಹಾಗೇ ಆಯಿತು ಅಲ್ಲದೆ ಕಳೆದ ಕೆಲವು ವಾರಗಳಲ್ಲಿ ನಾನು ನನ್ನ ಪ್ರವಾಸದಲ್ಲಿ ಎಲ್ಲೆಲ್ಲಿ ಜನರನ್ನು ಭೆಟಿಯಾಗಿದ್ದೇನೆ ಅಲ್ಲಿ ‘‘Man vs, Wild’ ನ ವಿಷಯ ಪ್ರಸ್ತಾಪ ಬಂದೇ ಬರುತ್ತಿದೆ. ಈ ಒಂದು Episode ನಿಂದಾಗಿ ನಾನು ಕೇವಲ ಭಾರತ ಅಷ್ಟೇ ಅಲ್ಲ ಜಗತ್ತಿನ ಎಲ್ಲ ಯುವಕರೊಂದಿಗೆ ಸಂಪರ್ಕ ಹೊಂದಿದ್ದೇನೆ. ಯುವಕರ ಮನಸ್ಸಿನಲ್ಲಿ ಈ ಪ್ರಕಾರ ನನಗೆ ಸ್ಥಾನ ಸಿಗುವುದೆಂದು ನಾನೂ ಕೂಡಾ ಎಂದೂ ಯೋಚಿಸಿರಲಿಲ್ಲ. ನಮ್ಮ ದೇಶ ಹಾಗೂ ಜಗತ್ತಿನ ಎಲ್ಲ ಯುವಕರು ಎಷ್ಟು ವಿವಿಧತೆಯಿಂದ ಕೂಡಿದ ವಿಷಯಗಳ ಬಗ್ಗೆ ಗಮನವಹಿಸತ್ತಾರೆಂದು ಕೂಡಾ ನಾನು ಎಂದೂ ಯೋಚಿಸಿರಲಿಲ್ಲ. ಜಗತ್ತಿನ ಎಲ್ಲ ಯುವ ಮನಸ್ಸುಗಳನ್ನು ಸ್ಪರ್ಷಿಸುವ ಪ್ರಸಂಗ ಒದಗುವುದೆಂಬುದರ ಬಗ್ಗೆ ನಾನು ಎಂದೂ ಯೋಚಿಸಿರಲಿಲ್ಲ. ಮತ್ತೆ ಏನಾಗುತ್ತದೆ? ಕಳೆದ ವಾರ ನಾನು ಭೂತಾನ್ಗೆ ಹೋಗಿದ್ದೆ. ಪ್ರಧಾನಮಂತ್ರಿಯಾಗಿ ಯಾವಾಗಲಾದರೂ ಎಲ್ಲಿಯಾದರೂ ಹೋಗಲು ಅವಕಾಶ ಒದಗಿ ಬಂದಾಗ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪರಿಣಾಮವಾಗಿ ಏನಾಗಿದೆ ಎಂಬುದನ್ನು ಗಮನಿಸಿದರೆ ಜಗತ್ತಿನಲ್ಲಿ ಎಲ್ಲಿ ಹೋಗುತ್ತೇನೋ ಅಲ್ಲಿ ಯಾರಾದರೂ ಆರೇಳು ನಿಮಿಷ ಯೋಗದ ಬಗ್ಗೆ ನನ್ನೊಂದಿಗೆ ಪ್ರಶ್ನೋತ್ತರ ಮಾಡುತ್ತಲೇ ಇರುವುದನ್ನು ನಾನು ಕಂಡಿದ್ದೇನೆ. ಇಡೀ ಜಗತ್ತಿನ ಯಾವುದೇ ಹಿರಿಯ ನಾಯಕರಿರಬಹುದು ಅವರು ನನ್ನೊಂದಿಗೆ ಯೋಗದ ಬಗ್ಗೆ ಮಾತನಾಡದೆ ಉಳಿದೇ ಇಲ್ಲ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಅನುಭವವಾಗುತ್ತಿದೆ. ಯಾರೇ ಭೇಟಿಯಾದರೂ, ಎಲ್ಲೇ ಮಾತನಾಡಲು ಅವಕಾಶ ಸಿಕ್ಕರೂ ಅವರು ವನ್ಯಜೀವಿಗಳ ಬಗ್ಗೆ ಚರ್ಚೆ ಮಾಡುತ್ತಾರೆ, ಪರಿಸರದ ಬಗ್ಗೆ ಚರ್ಚೆ ಮಾಡುತ್ತಾರೆ. ಹುಲಿ ಸಿಂಹ ಜೀವ-ಸೃಷ್ಟಿ ಇದೆಲ್ಲ ಕಂಡು ಜನರು ಎಷೊಂದು ಆಸಕ್ತಿ ಹೊಂದಿದ್ದಾರೆಂದು ನನಗೆ ಆಶ್ಚರ್ಯವಾಗುತ್ತಿದೆ. Discovery ಚಾನೆಲ್ ಈ ಕಾರ್ಯಕ್ರಮವನ್ನು 165 ದೇಶಗಳಲ್ಲಿ ಅವರವರ ಭಾಷೆಗಳಲ್ಲಿಯೇ ಪ್ರಸಾರ ಮಾಡುವ ಯೋಜನೆ ಮಾಡಿದೆ. ಇಂದು ವಾತಾವರಣ ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಒಂದು ಜಾಗತಿಕ ಮಂಥನದ ಪ್ರಕ್ರಿಯೆ ನಡೆಯುತ್ತಿದೆ. ಇಂತಹದ್ದರಲ್ಲಿ ಈ ಕಾರ್ಯಕ್ರಮ ಬಾರತದ ಸಂದೇಶ, ಭಾರತದ ಪರಂಪರೆ, ಬಾರತೀಯ ಸಂಸ್ಕಾರ ಯಾತ್ರೆಯಲ್ಲಿ ಪ್ರಕೃತಿಯ ಬಗ್ಗೆ ಸಂವೇದನಶೀಲತೆ ಈ ಎಲ್ಲ ಮಾತುಗಳನ್ನು ವಿಶ್ವಕ್ಕೆ ಪರಿಚಯಿಸುವುದರಲ್ಲಿ Discovery Channel ನ ಈ Episode ಬಹಳ ಸಹಾಯಕವಾಗುತ್ತದೆಯೆಂಬುದು ನನ್ನ ಆಶೆಯಾಗಿದೆ ಹಾಗೂ ನನಗೆ ಪೂರ್ಣ ವಿಶ್ವಾಸವಿದೆ ಅಲ್ಲದೆ ನಮ್ಮ ಬಾರತದಲ್ಲಿ climate justice ಮತ್ತು clean environment ನ ದಿಶೆಯಲ್ಲಿ ಇಟ್ಟಂತಹ ಹೆಜ್ಜೆಗಳನ್ನು ಜನರು ತಿಳಿಯಬಯಸಿದ್ದಾರೆ. ಆದರೆ ಇನ್ನೊಂದು ಕುತೂಹಲಕಾರಿ ವಿಷಯವಿದೆ. ಕೆಲವರು ಸಂಕೋಚದಿಂದಾದರೂ ಸರಿ ನನಗೆ ಒಂದು ಮಾತು ಅವಶ್ಯವಾಗಿ ಕೇಳುತ್ತಾರೆ ಮೋದಿಜಿ ನೀವು ಹಿಂದಿಯಲ್ಲಿ ಮಾತನಾಡುತ್ತಿದ್ದಿರಿ ಮತ್ತು Bear Grylls ಅವರಿಗೆ ಹಿಂದಿ ಬರುವುದಿಲ್ಲ ಆದಾಗ್ಯೂ ಇಷ್ಟೊಂದು ವೇಗವಾಗಿ ತಮ್ಮ ಮಧ್ಯೆ ಸಂವಾದ ಹೇಗೆ ನಡೆಯುತ್ತಿತ್ತು? ಅದೇನು ಆ ಮೇಲೆ Edit ಮಾಡಲಾಗಿದೆಯೇ? ಅದು ಅಷ್ಟೊಂದು ಮತ್ತೆ ಮತ್ತೆ Shooting ಮಾಡಲಾಗಿದೆಯೆ? ಏನಾಯ್ತು? ಬಹಳ ಜಿಜ್ಞಾಸೆಯಿಂದ ಕೇಳುತ್ತಾರೆ. ನೋಡಿ, ಇದರಲ್ಲಿ ಯಾವುದೇ ರಹಸ್ಯವಿಲ್ಲ. ಹಲವು ಜನರಲ್ಲಿ ಈ ಪ್ರಶ್ನೆಯಿದ್ದರೆ, ನಾನು ಇದರ ರಹಸ್ಯವನ್ನು ಬಿಡಿಸಿಯೇ ಇಡುತ್ತೇನೆ. ಹಾಗೆ ಅದು ರಹಸ್ಯವೇ ಅಲ್ಲ ವಾಸ್ತವವೇನೆಂದರೆ Bear Grylls ಜೊತೆ ಮಾತನಾಡುವಾಗ ತಂತ್ರಜ್ಞಾನ ಉಪಯೋಗ ಮಾಡಲಾಗಿದೆ. ನಾನು ಏನೇ ಮಾತನಾಡಿದರೂ ಅದು ತಕ್ಷಣ ಇಂಗ್ಲೀಷಿನಲ್ಲಿ ಅನುವಾದವಾಗುತ್ತಿತ್ತು. simultaneous interpretation ಆಗುತ್ತಿತ್ತು ಮತ್ತು Bear Grylls ಅವರ ಕಿವಿಯಲ್ಲಿ ಒಂದು ಚಿಕ್ಕ Cordles instrument ಹಾಕಿದ್ದರು. ಅಲ್ಲಿ ನಾನು ಹಿಂದಿ ಯಲ್ಲಿ ಮಾತನಾಡುತ್ತಿದ್ದಂತೆ ಅವರಿಗೆ ಇಂಗ್ಲೀಷಿನಲ್ಲಿ ಕೇಳಿಸುತ್ತಿತ್ತು ಹಾಗಾಗಿ ಸಂವಾದ ಬಹಳ ಸರಳವಾಗಿ ಆಗುತ್ತಿತ್ತು ಮತ್ತು ತಂತ್ರಜ್ಞಾನದ ಅದ್ಭುತ ಇದೇ ಅಲ್ಲವೆ. ಈ Show ಆದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ ವಿಷಯದ ಬಗ್ಗೆ ಚರ್ಚೆ ಮಾಡುತ್ತಿರುವುದು ಕಂಡು ಬಂದಿತು. ತಾವು ಕೂಡಾ Nature ಮತ್ತು Wild life ಪ್ರಕೃತಿ ಮತ್ತು ವನ್ಯ ಜೀವಿಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಅವಶ್ಯವಾಗಿ ಹೋಗಿರಿ. ನಾನು ಮೊದಲೂ ಹೇಳಿದ್ದೇನೆ, ಈಗಲೂ ತಮಗೆ ಹೇಳುತ್ತಿದ್ದೇನೆ. ತಮ್ಮ ಜೀವನದಲ್ಲಿ ಅವಶ್ಯವಾಗಿ ಈಶಾನ್ಯ ರಾಜ್ಯಗಳಿಗೆ ಹೋಗಿರಿ. ಅದೆಂತಹ ಪ್ರಕೃತಿ ಅಲ್ಲಿ. ತಾವು ನೋಡುತ್ತಲೇ ಇದ್ದು ಬಿಡುತ್ತೀರಿ. ತಮ್ಮ ಆಂತರ್ಯದ ವಿಸ್ತಾರವಾಗುವುದು. ಅಗಷ್ಟ 15 ರಂದು ನಾನು ಕೆಂಪು ಕೋಟೆಯ ಮೇಲಿಂದ ತಮ್ಮೆಲ್ಲರನ್ನು ಆಗ್ರಹಿಸಿದ್ದೆ, ಅದೇನೆಂದರೆ ಮುಂದಿನ 3 ವರ್ಷಗಳಲ್ಲಿ , ಕನಿಷ್ಠ 15 ಸ್ಥಳಗಳಿಗೆ ಭಾರತದಲ್ಲಿಯೇ ಶತಪ್ರತಿಶತ ಪ್ರವಾಸಕ್ಕಾಗಿಯೇ ಇರುವ 15 ಸ್ಥಳಗಳಿಗೆ ಭೇಟಿ ನೀಡಿ. ನೋಡಿರಿ, ಅಧ್ಯಯನ ಮಾಡಿರಿ, ಪರಿವಾರವನ್ನು ತೆಗೆದುಕೊಂಡು ಹೋಗಿರಿ, ಸ್ವಲ್ಪ ಸಮಯ ಅಲ್ಲಿ ಕಳೆಯಿರಿ. ವಿವಿಧತೆಯಿಂದ ತುಂಬಿದ ದೇಶ ತಮಗೂ ಕೂಡ ಒಬ್ಬ ಶಿಕ್ಷಕನ ರೀತಿಯಲ್ಲಿ ವೈವಿಧ್ಯತೆಗಳನ್ನು ತಮ್ಮ ಅಂತರಾಳದಲ್ಲಿ ಮೂಡಿಸುತ್ತದೆ. ತಮ್ಮ, ತಮ್ಮ ಜೀವನದ ವಿಸ್ತಾರವಾಗುತ್ತದೆ. ತಮ್ಮ ಚಿಂತನೆಯ ವಿಸ್ತಾರವಾಗುತ್ತದೆ. ಮತ್ತೆ ನನ್ನ ಮೇಲೆ ವಿಶ್ವಾಸವಿಡಿ ಹಿಂದುಸ್ತಾನದಲ್ಲಿ ಮಾತ್ರವೇ ಇಂತಹ ಸ್ಥಳಗಳಿವೆ. ಹೊಸ ಸ್ಪೂರ್ತಿ, ಹೊಸ ಉತ್ಸಾಹ, ಹೊಸ ಉನ್ನತಿ, ಹೊಸ ಪ್ರೇರಣೆ ತೆಗೆದುಕೊಂಡು ಬರುವಿರಿ ಅಲ್ಲದೆ ಕೆಲವು ಸ್ಥಳಗಳಿಗೆ ಮತ್ತೆ ಮತ್ತೆ ತಮಗೂ ಹೋಗಬೇಕೆಂದು ಅನಿಸಬಹುದು, ತಮ್ಮ ಪರಿವಾರಕ್ಕೂ ಅನಿಸಬಹುದು.
ನನ್ನ ಪ್ರೀತಿಯ ದೇಶವಾಸಿಗಳೆ, ಭಾರತದಲ್ಲಿ ಪರಿಸರದ ಬಗ್ಗೆ Care ಮತ್ತು concern ಅಂದರೆ ಮೇಲ್ವಿಚಾರಣೆಯ ಆಸ್ಥೆ ಸ್ವಾಭಾವಿಕವಾಗಿ ಕಾಣುತ್ತಿದೆ. ಕಳೆದ ತಿಂಗಳು ನನಗೆ Tiger census ಜಾರಿಗೆ ತರುವ ಸೌಭಾಗ್ಯ ಒದಗಿ ಬಂದಿತ್ತು. ಭಾರತದಲ್ಲಿ ಎಷ್ಟು ಹುಲಿಗಳಿವೆಯೆಂದು ನಿಮಗೆ ಗೊತ್ತಿದೆಯೇ? ಭಾರತದಲ್ಲಿ ಹುಲಿಗಳ ಸಂಖ್ಯೆ 2967 ಇದೆ. Two thousand nine hundred sixty seven.. ಕೆಲವು ವರ್ಷಗಳ ಹಿಂದೆ ಇದರ ಅರ್ಧದಷ್ಟಿತ್ತು. ಹುಲಿಗಳ ಬಗ್ಗೆ 2010 ರಲ್ಲಿ ರಶಿಯಾದ Saint Petersburg ನಲ್ಲಿ Tiger summit ಆಯೋಜಿಸಲಾಗಿತ್ತು. ಅಲ್ಲಿ ಜಗತ್ತಿನಾದ್ಯಂತ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಆತಂಕ ವ್ಯಕ್ತಪಡಿಸುತ್ತ ಒಂದು ಸಂಕಲ್ಪ ಮಾಡಲಾಗಿತ್ತು. ಆ ಸಂಕಲ್ಪವೇನೆಂದರೆ 2022 ರ ವರೆಗೆ ಇಡಿ ಜಗತ್ತಿನಲ್ಲಿ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುವುದಾಗಿತ್ತು. ಆದರೆ ಇದು New India ಅಲ್ಲವೆ, ನಾವು ಗುರಿಯನ್ನು ಬೇಗನೆ ತಲುಪಿ ಬಿಡುತ್ತೇವೆ. ನಾವು 2019 ರಲ್ಲಿಯೇ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿ ಬಿಟ್ಟಿದ್ದೇವೆ. ನಾವು ಕೇವಲ ಹುಲಿಗಳ ಸಂಖ್ಯೆಯನ್ನಷ್ಟೆ ಅಲ್ಲ, Protected areas ಮತ್ತು community reserves ನ ಸಂಖ್ಯೆಗಳನ್ನು ಹೆಚ್ಚಿಸಿದ್ದೇವೆ ಹುಲಿಗಳ data release ಮಾಡುವ ಸಮಯದಲ್ಲಿ ನನಗೆ ಗುಜರಾತ್ನ ಗೀರ್ ಪ್ರದೇಶದ ಸಿಂಹಗಳು ನೆನಪಿಗೆ ಬಂದವು. ಅಲ್ಲಿ ನಾನು ಮುಖ್ಯಮಂತ್ರಿ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾಗ ಗೀರ್ ಕಾಡಿನಲ್ಲಿ ಸಿಂಹಗಳ Habitat ಸಂಕುಚಿತವಾಗುತ್ತಿತ್ತು. ಅವುಗಳ ಸಂಖ್ಯೆ ಕಡಿಮೆಗೊಳ್ಳುತ್ತಲಿತ್ತು. ನಾವು ಗೀರ್ ಅರಣ್ಯದಲ್ಲಿ ಒಂದಾದ ಮೇಲೊಂದರಂತೆ ಹಲವು ಹೊಸ ಹೆಜ್ಜೆಗಳನ್ನಿಟ್ಟೆವು. 2007 ರಲ್ಲಿ ಅಲ್ಲಿ ಮಹಿಳಾ guards ಗಳನ್ನು ನಿಯುಕ್ತಿಗೊಳಿಸಲು ನಿರ್ಣಸಲಾಯಿತು. ಪ್ರವಾಸೋದ್ಯಮವನ್ನು ಹೆಚ್ಚಿಸಲು infrastructure ನಲ್ಲಿ ಸುಧಾರಣೆ ತರಲಾಯಿತು. ನಾವು ಪ್ರಕೃತಿ ಹಾಗೂ ವನ್ಯ ಜೀವಿಗಳ ಬಗ್ಗೆ ಮಾತನಾಡುವಾಗಲೆಲ್ಲ ಕೇವಲ conservation ಬಗ್ಗೆಯೇ ಮಾತನಾಡುತ್ತೇವೆ. ಆದರೆ ಈಗ ನಮಗೆ conservation ಕ್ಕಿಂತಲೂ ಮುಂದೆ ಹೋಗಿ compassion ನ ಕುರಿತು ವಿಚಾರ ಮಾಡಲೇ ಬೇಕಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಒಳ್ಳೆಯ ಮಾರ್ಗದರ್ಶನ ಸಿಕ್ಕಿದೆ. ಶತಮಾನಗಳ ಮೊದಲೇ ನಮ್ಮ ಶಾಸ್ತ್ರಗಳಲ್ಲಿ ನಾವು ಹೇಳಿದ್ದೇವೆ-
ನಿರ್ವನೊ ಬಧ್ಯತೆ ವ್ಯಾಘ್ರೊ, ನಿವ್ರ್ಯಾಘ್ರಂ ಛಿದ್ಯತೆ ವನಮ್|
ತಸ್ಮಾದ್ ವ್ಯಾಘ್ರೊ ವನಂ ರಕ್ಷೆತ್, ವನಂ ವ್ಯಾಘ್ರಂ ನ ಪಾಲಯೆತ್||
ಅರ್ಥಾತ್, ಒಂದು ವೇಳೆ ಕಾಡು ಇರದೆ ಹೋದರೆ ಹುಲಿಗಳು ಮನುಷ್ಯರ ವಾಸಸ್ಥಾನಗಳಿಗೆ ಬರುವುದು ಅನಿವಾರ್ಯವಾಗುತ್ತದೆ ಅಲ್ಲದೆ ಕೊಲ್ಲಲ್ಪಡುತ್ತವೆ ಮತ್ತು ಅರಣ್ಯದಲ್ಲಿ ಹುಲಿಗಳು ಇರದೆ ಹೋದರೆ ಮನುಷ್ಯ ಅರಣ್ಯವನ್ನು ಕಡಿದು ಅದನ್ನು ನಾಶಗೊಳಿಸುತ್ತಾನೆ ವಾಸ್ತವದಲ್ಲಿ ಹುಲಿಯು ವನದ ರಕ್ಷಣೆಯನ್ನು ಮಾಡುತ್ತದೆ, ವನವು ಹುಲಿಯ ರಕ್ಷಣೆಯನ್ನಲ್ಲ- ಎಷ್ಟೊಂದು ಉತ್ತಮವಾದ ರೀತಿಯಲ್ಲಿ ನಮ್ಮ ಪೂರ್ವಜರು ಈ ವಿಷಯವನ್ನು ತಿಳಿಸಿಕೊಟ್ಟಿದ್ದಾರೆ. ಅದಕ್ಕಾಗಿಯೆ ನಮಗೆ ನಮ್ಮ ವನ, ವನಸ್ಪತಿಗಳು ಮತ್ತು ವನ್ಯ ಜೀವಿಗಳನ್ನು ಸಂರಕ್ಷಣೆ ಮಾಡುವ ಅವಶ್ಯಕತೆಯಷ್ಟೆಯಲ್ಲದೆ ಅಂತಹ ವಾತಾವರಣವನ್ನೂ ನಿರ್ಮಿಸಬೇಕಾಗಿದೆ, ಅವುಗಳು ಇದರಿಂದ ಸರಿಯಾದ ರೀತಿಯಲ್ಲಿ ಬೆಳೆಯುವಂತಾಗಬೇಕು.
ನನ್ನ ಪ್ರೀತಿಯ ದೇಶವಾಸಿಗಳೆ, 11ನೆ ಸೆಪ್ಟೆಂಬರ್ 1893 ಸ್ವಾಮಿ ವಿವೆಕಾನಂದ ಅವರ ಐತಿಹಾಸಿಕ ಭಾಷಣವನ್ನು ಯಾರು ತಾನೆ ಮರತಾರು. ಇಡೀ ವಿಶ್ವದ ಮನುಕುಲವನ್ನೆ ಅಲ್ಲಾಡಿಸುವ ಭಾರತದ ಈ ಯುವ ಸನ್ಯಾಸಿ ಜಗತ್ತಿನಲ್ಲಿ ಭಾರತದ ಒಂದು ತೇಜಸ್ವಿ ಛಾಪು ಮೂಡಿಸಿ ಬಂದರು. ಗುಲಾಮ ಭಾರತದತ್ತ ಯಾವ ಜಗತ್ತು ಬಹಳ ವಿಕೃತ ಭಾವದಿಂದ ನೋಡುತ್ತಿತ್ತೋ ಅಂತಹ ಜಗತ್ತಿಗೆ 11ನೇ ಸೆಪ್ಟೆಂಬರ್ 1893 ರಂದು ಸ್ವಾಮಿ ವಿವೆಕಾನಂದ ರಂತಹ ಮಹಾ ಪುರುಷರ ಮಾತುಗಳು ಇಡೀ ಜಗತ್ತು ಭಾರತದತ್ತ ನೋಡುವ ದೃಷ್ಟಿಯನ್ನೆ ಬದಲಾಯಿಸಿದವು. ಬನ್ನಿ, ಸ್ವಾಮಿ ವಿವೆಕಾನಂದ ಅವರು ಭಾರತದ ರೂಪವನ್ನು ಯಾವ ರೀತಿ ಕಂಡಿದ್ದರು, ಸ್ವಾಮಿ ವಿವೆಕಾನಂದರು ಭಾರತದ ಸಾಮರ್ಥ್ಯವನ್ನು ಹೇಗೆ ಕಂಡಿದ್ದರು ನಾವು ಅದರಂತೆ ಜೀವಿಸಲು ಪ್ರಯತ್ನಿಸೋಣ. ನಮ್ಮೊಳಗಿದೆ, ಎಲ್ಲವೂ ಇದೆ. ಆತ್ಮವಿಶ್ವಾಸದೊಂದಿಗೆ ಮುನ್ನಡೆಯೋಣ.
ನನ್ನ ಪ್ರೀತಿಯ ದೇಶವಾಸಿಗಳೆ, ತಮ್ಮೆಲ್ಲರಿಗೂ ನೆನಪಿರಬಹುದು 29 ಅಗಷ್ಟ ರಂದು ‘ರಾಷ್ಟ್ರೀಯ ಖೇಲ್ ದಿವಸ’ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಾವು ಇಡೀ ದೇಶದಲ್ಲಿ ‘FIT INDIA MOVEMENT’ launch ಮಾಡಲಿದ್ದೇವೆ, ನಾವು ಸ್ವತ: ಸಧೃಡವಾಗಿರಬೇಕು fit ಇರಬೇಕು. ರಾಷ್ಟ್ರವನ್ನು ಸಧೃಡಗೊಳಿಸಬೇಕು ಮಕ್ಕಳು, ಹಿರಿಯರು, ಯುವಕರು, ಮಹಿಳೆಯರು ಎಲ್ಲರಿಗು ಇದೊಂದು ಒಳ್ಳೆ interesting ಅಭಿಯಾನವಾಗುತ್ತದೆ ಮತ್ತು ಇದು ನಮಗಾಗಿ ನಮ್ಮದೇ ಆಗಿರುತ್ತದೆ. ಆದರೆ ಅದರ ಸೂಕ್ಷ್ಮತೆಗಳನ್ನು ಇಂದು ನಾನು ಹೇಳುವುದಿಲ್ಲ. ಅಗಷ್ಟ 29ರ ವರೆಗೂ ಕಾಯಿರಿ. ನಾನು ಸ್ವತಃ ಅಂದು ಈ ವಿಷಯದ ಬಗ್ಗೆ ಹೇಳುವವನಿದ್ದೇನೆ ಮತ್ತು ನಿಮ್ಮನ್ನೂ ಇದರೊಂದಿಗೆ ಬೆರೆಸುತ್ತೇನೆ. ಯಾಕೆಂದರೆ ನಾನು ತಮ್ಮನ್ನು ಆರೋಗ್ಯವಂತರನ್ನಾಗಿ ನೋಡ ಬಯಸುತ್ತೇನೆ. ತಮಗೆ fitness ಗಾಗಿ ಜಾಗರೂಕರನ್ನಾಗಿ ಮಾಡ ಬಯಸುತ್ತೆನೆ ಮತ್ತು fit India ಕ್ಕಾಗಿ ದೇಶಕ್ಕಾಗಿ ನಾವೆಲ್ಲ ಸೇರಿ ಕೆಲವು ಗುರಿಗಳನ್ನು ನಿರ್ಧರಿಸೋಣ.
ನನ್ನ ಪ್ರೀತಿಯ ಧೆಶವಾಸಿಗಳೇ, ಅಗಷ್ಟ 29 ರಂದು fit India ದಲ್ಲಿ ನಿಮಗಾಗಿ ಕಾಯುತ್ತಿರುವೆನು. ಸೆಪ್ಟಂಬರ್ ತಿಂಗಳು ‘ಪೋಷಣ ಅಭಿಯಾನದಲ್ಲಿ’. ಮತ್ತು ವಿಶೇಷವಾಗಿ ಸೆಪ್ಟಂಬರ್ 11 ರಿಂದ ಅಕ್ಟೋಬರ್ 02 ರವರೆಗೆ ‘ಸ್ವಚ್ಛತಾ ಅಭಿಯಾನ’ ದಲ್ಲಿ ಹಾಗೂ ಅಕ್ಟೋಬರ್ 2 ರಂದು Totally dedicated plastic ಗಾಗಿ. plastic ನಿಂದ ಮುಕ್ತಿ ಹೊಂದಲು ನಾವೆಲ್ಲರು ಮನೆ ಹಾಗೂ ಮನೆಯ ಹೊರಗೆ ಎಲ್ಲ ಸ್ಥಳಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳೋಣ ಮತ್ತು ನನಗೆ ಗೊತ್ತು ಈ ಎಲ್ಲ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತವೆ. ಬನ್ನಿ ಒಂದು ಹೊಸ ಉತ್ಸಾಹ, ಹೊಸ ಸಂಕಲ್ಪ, ಹೊಸ ಶಕ್ತಿಯೊಂದಿಗೆ ಸಾಗೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ‘ಮನ್ ಕಿ ಬಾತ್’ ನಲ್ಲಿ ಇಷ್ಟು ಸಾಕು. ಮತ್ತೆ ಸಿಗೋಣ. ನಾನು ನಿಮ್ಮ ಮಾತುಗಳು, ನಿಮ್ಮ ಸಲಹೆಗಳಿಗಾಗಿ ಕಾಯುತ್ತಿರುತ್ತೇನೆ. ಬನ್ನಿ, ನಾವೆಲ್ಲ ಸೇರಿ ಸ್ವತಂತ್ರ ಸೇನಾನಿಗಳ ಕನಸಿನ ಭಾರತವನ್ನು ನಿರ್ಮಿಸಲು, ಗಾಂಧಿಜಿಯವರ ಕನಸುಗಳನ್ನು ಸಾಕಾರಗೊಳಿಸಲು ಮುನ್ನಡೆಯೋಣ. ‘ಸ್ವಾಂತ: ಸುಖಾಯ:’ ಆತ್ಮ ತೃಪ್ತಿಯನ್ನು ಸೇವಾ ಭಾವದಿಂದ ಪ್ರಕಟಗೊಳಿಸುತ್ತ ಸಾಗೋಣ.
ಧನ್ಯವಾದಗಳು.
ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಮನದ ಮಾತು ನನಗೆ ಮತ್ತು ನಿಮಗೆ ಎಂದಿಗೂ ಒಂದು ನಿರೀಕ್ಷೆಯ ಘಳಿಗೆಯಾಗಿದೆ. ಈ ಬಾರಿಯೂ ಬಹಳಷ್ಟು ಪತ್ರಗಳು, ಪ್ರತಿಕ್ರಿಯೆಗಳು ಮತ್ತು ದೂರವಾಣಿ ಕರೆಗಳು ಬಂದಿವೆ ಎಂಬುದನ್ನು ನಾನು ಗಮನಿಸಿದೆ. ಎಷ್ಟೋ ಕಥೆಗಳಿವೆ, ಸಲಹೆಗಳಿವೆ. ಪ್ರೇರಣೆಗಳಿವೆ – ಪ್ರತಿಯೊಬ್ಬರೂ ಏನನ್ನಾದರೂ ಮಾಡಬಯಸುತ್ತಾರೆ, ಹೇಳಬಯಸುತ್ತಾರೆ. ಒಂದು ಚೈತನ್ಯದ ಅನುಭೂತಿಯಾಗುತ್ತದೆ. ಮತ್ತು ಇದೆಲ್ಲದರಲ್ಲಿ ನಾನು ಅಳವಡಿಸಿಕೊಳ್ಳಬಯಸುವಂಥದ್ದು ಅದೆಷ್ಟೋ ಇದೆ. ಆದರೆ ಸಮಯದ ಮಿತಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ನೀವು ನನ್ನನ್ನು ಬಹಳ ಪರೀಕ್ಷೆ ಮಾಡುತ್ತಿದ್ದೀರಿ ಎನ್ನಿಸುತ್ತಿದೆ. ಆದರೂ ನಿಮ್ಮದೇ ಮಾತುಗಳನ್ನು ಮನದ ಮಾತೆಂಬ ಈ ಸೂತ್ರದಲ್ಲಿ ಪೋಣಿಸಿ ಮತ್ತೆ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
ನಿಮಗೆ ನೆನಪಿರಬಹುದು. ಕಳೆದ ಬಾರಿ ನಾನು ಪ್ರೇಮಚಂದ್ ರವರ ಕಥೆಗಳ ಒಂದು ಪುಸ್ತಕದ ಬಗ್ಗೆ ಚರ್ಚೆ ಮಾಡಿದ್ದೆ ಮತ್ತು ನೀವು ಯಾವುದೇ ಪುಸ್ತಕ ಓದಲಿ ಅದರ ಕುರಿತು ಕೆಲ ವಿಷಯಗಳನ್ನು NarendraModi App ನಲ್ಲಿ ಹಂಚಿಕೊಳ್ಳಿ ಎಂದು ನಿರ್ಧರಿಸಿದ್ದೆವು. ಬಹಳಷ್ಟು ಜನರು ಹಲವಾರು ಬಗೆಯ ಪುಸ್ತಕಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ನಾನು ಗಮನಿಸಿದ್ದೇನೆ. ಜನರು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಇತಿಹಾಸ, ಸಂಸ್ಕೃತಿ, ವ್ಯಾಪಾರ, ಜೀವನ ಚರಿತ್ರೆ ಹೀಗೆ ಎಷ್ಟೋ ವಿಷಯಗಳ ಬಗ್ಗೆ ಬರೆದ ಪುಸ್ತಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕೆಲವರು ನನಗೆ ನಾನು ಇಂಥ ಪುಸ್ತಕಗಳ ಬಗ್ಗೆ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ. ಸರಿ, ನಾನು ಖಂಡಿತ ಇನ್ನಷ್ಟು ಇಂಥ ಪುಸ್ತಕಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತೇನೆ. ಆದರೆ ನಾನು ಸಾಕಷ್ಟು ಪುಸ್ತಕಗಳನ್ನು ಓದಲು ಸಮಯ ಮೀಸಲಿರಿಸಲಾಗುತ್ತಿಲ್ಲ ಎಂಬ ಒಂದು ವಿಷಯ ನಾನು ಸ್ವೀಕರಿಸಲೇಬೇಕು. ಆದರೆ ನೀವು ನನಗೆ ಬರೆದು ಕಳುಹಿಸುವುದರಿಂದ ಬಹಳಷ್ಟು ಪುಸ್ತಕಗಳ ಬಗ್ಗೆ ಅರಿಯುವ ಅವಕಾಶ ನನಗೆ ಲಭಿಸುತ್ತಿರುವ ಲಾಭವಂತೂ ಆಗುತ್ತಿದೆ. ಆದರೆ ಕಳೆದ ಒಂದು ತಿಂಗಳ ಅನುಭವದಿಂದ ನಾವಿದನ್ನು ಮುಂದುವರಿಸಬೇಕು ಎನ್ನಿಸುತ್ತದೆ. ನಾವು ನರೇಂದ್ರ ಮೋದಿ ಆಪ್ ನಲ್ಲಿ ಒಂದು ಖಾಯಂ ಬುಕ್ಸ್ ಕಾರ್ನರ್ ಮಾಡಿದರೆ ಹೇಗಿರತ್ತೆ ಮತ್ತು ನಾವು ಯಾವುದಾದರೂ ಹೊಸ ಪುಸ್ತಕ ಓದಿದಾಗ ಅದರ ಕುರಿತು ಬರೆಯೋಣ, ಚರ್ಚಿಸೋಣ ಮತ್ತು ನೀವು ನಮ್ಮ ಈ ಬುಕ್ಸ್ ಕಾರ್ನರ್ಗೆ ಒಂದೊಳ್ಳೆ ಹೆಸರನ್ನು ಸೂಚಿಸಬಹುದು. ಈ ಬುಕ್ಸ್ ಕಾರ್ನರ್ ಓದುಗರು ಮತ್ತು ಲೇಖಕರಿಗೆ ಒಂದು ಸಕ್ರೀಯ ವೇದಿಕೆಯಾಗಲಿ ಎಂದು ಬಯಸುತ್ತೇನೆ. ನೀವು ಓದುತ್ತಿರಿ, ಬರೆಯುತ್ತಿರಿ ಮತ್ತು ಮನದ ಮಾತಿನ ಎಲ್ಲ ಸ್ನೇಹಿತರೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳ್ಳುತ್ತಿರಿ.
ಸ್ನೇಹಿತರೆ, ಜಲಸಂರಕ್ಷಣೆ ಕುರಿತು ಮನದ ಮಾತಿನಲ್ಲಿ ನಾನು ಪ್ರಸ್ತಾಪ ಮಾಡಿದ್ದೆ. ಆದರೆ ಅದಕ್ಕೂ ಮೊದಲೇ ಜಲಸಂರಕ್ಷಣೆ ನಿಮ್ಮ ಮನ ಮುಟ್ಟುವ ವಿಷಯವಾಗಿತ್ತು. ಸಾಮಾನ್ಯ ಜನರ ಇಷ್ಟವಾದ ವಿಷಯವಾಗಿತ್ತು ಎಂದು ನನಗೆ ಅನ್ನಿಸುತ್ತದೆ. ನೀರಿನ ವಿಷಯ ಇಂದಿನ ದಿನ ಪ್ರತಿಯೊಬ್ಬ ಭಾರತೀಯರ ಮನಸ್ಸನ್ನು ತಲ್ಲಣಿಸುವಂತೆ ಮಾಡಿದೆ. ಜಲಸಂರಕ್ಷಣೆ ಕುರಿತು ದೇಶಾದ್ಯಂತ ಅನೇಕ ಬಗೆಯ ಪ್ರಭಾವಯುತವಾದ ಪ್ರಯತ್ನಗಳು ನಡೆದಿವೆ. ಜನರು ಪಾರಂಪರಿಕ ವಿಧಿ ವಿಧಾನಗಳ ಬಗ್ಗೆ ನವೀನ ವಿನ್ಯಾಸದ ಆಂದೋಲನ ಹಂಚಿಕೊಂಡಿದ್ದಾರೆ. ಮಾಧ್ಯಮಗಳು ಜಲಸಂರಕ್ಷಣೆ ಬಗ್ಗೆ ಬಹಳಷ್ಟು ಪ್ರಚಾರಗಳನ್ನು ಆರಂಭಿಸಿವೆ. ಸರ್ಕಾರವೇ ಆಗಲಿ, ಸ್ವಯಂ ಸೇವಾ ಸಂಸ್ಥೆಗಳಾಗಲಿ ಯುದ್ಧೋಪಾದಿಯಲ್ಲಿ ಒಂದಲ್ಲ ಒಂದು ಕೆಲಸ ಮಾಡುತ್ತಿದ್ದಾರೆ. ಒಗ್ಗಟ್ಟಿನ ಇಂಥ ಸಾಮರ್ಥ್ಯವನ್ನು ಕಂಡು ಮನಸ್ಸಿಗೆ ಬಹಳ ಆನಂದವಾಗುತ್ತಿದೆ. ಜಾರ್ಖಂಡ್ ನಲ್ಲಿ ರಾಂಚಿಯಿಂದ ಸ್ವಲ್ಪ ದೂರ ಓರ್ಮಾಂಝಿ ಪ್ರಾಂತ್ಯದ ಆರಾ ಕೇರಂ ಎಂಬ ಗ್ರಾಮದಲ್ಲಿ, ಅಲ್ಲಿಯ ಗ್ರಾಮವಾಸಿಗಳು ಜಲಸಂರಕ್ಷಣೆ ಬಗ್ಗೆ ತೆಗೆದುಕೊಂಡಂತಹ ಕ್ರಮಗಳು ಎಲ್ಲರಿಗೂ ಒಂದು ಉದಾಹರಣೆಯಂತಿದೆ. ಗ್ರಾಮ ಜನತೆ ಶ್ರಮದಾನದ ಮೂಲಕ ಬೆಟ್ಟದಿಂದ ಹರಿಯುತ್ತಿದ್ದ ಝರಿಗೆ ನಿರ್ದಿಷ್ಟ ದಿಕ್ಕನ್ನು ಕಲ್ಪಿಸುವ ಕೆಲಸ ಮಾಡಿದ್ದಾರೆ. ಅದು ಕೂಡಾ ಶುದ್ಧ ಗ್ರಾಮೀಣ ಸ್ವರೂಪದಲ್ಲಿ. ಇದರಿಂದ ಮಣ್ಣಿನ ಸವಕಳಿ ತಡೆದು ಬೆಳೆ ಸಂರಕ್ಷಣೆಯಾಗಿದೆಯಲ್ಲದೇ ಹೊಲಗದ್ದೆಗಳಿಗೆ ನೀರಿನ ಪೂರೈಕೆ ಆಗಿದೆ. ಗ್ರಾಮಸ್ಥರ ಈ ಶ್ರಮದಾನ ಸಂಪೂರ್ಣ ಗ್ರಾಮಕ್ಕೆ ನೀಡಿದ ಜೀವದಾನಕ್ಕಿಂತ ಕಡಿಮೆಯೇನಲ್ಲ. ದೇಶದಲ್ಲಯೇ ತನ್ನದೇ ಆದ ಜಲನೀತಿಯನ್ನು ತಯಾರಿಸಿದ ಮೊದಲ ರಾಜ್ಯ ಈಶಾನ್ಯ ಭಾಗದ ಸುಂದರ ರಾಜ್ಯ ಮೇಘಾಲಯ ಎಂದು ತಿಳಿದು ನಿಮ್ಮೆಲ್ಲರಿಗೂ ಬಹಳ ಸಂತೋಷವಾಗಿರಬಹುದು. ನಾನು ಅಲ್ಲಿಯ ಸರ್ಕಾರಕ್ಕೆ ಅಭಿನಂದಿಸುತ್ತೇನೆ.
ಹರಿಯಾಣದಲ್ಲಿ ನೀರಿನ ಅವಶ್ಯಕತೆ ಕಡಿಮೆ ಇರುವಂತಹ ಮತ್ತು ರೈತರಿಗೆ ನಷ್ಟವಾಗದಂತಹ ಬೆಳೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಹರಿಯಾಣ ಸರ್ಕಾರ ಅಲ್ಲಿಯ ಕೃಷಿಕರನ್ನು ಸಂಪರ್ಕಿಸಿ ಸಾಂಪ್ರದಾಯಿಕ ವ್ಯವಸಾಯದ ಬದಲಾಗಿ ಕಡಿಮೆ ನೀರನ್ನು ಅಪೇಕ್ಷಿಸುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿರುವುದಕ್ಕೆ ವಿಶೇಷವಾಗಿ ನಾನು ಅಭಿನಂದಿಸಬಯಸುತ್ತೇನೆ.
ಈಗಂತೂ ಹಬ್ಬಗಳ ಸಮಯ. ಹಬ್ಬಗಳ ಸಂದರ್ಭದಲ್ಲಿ ಬಹಳಷ್ಟು ಜಾತ್ರೆಗಳನ್ನು ಆಯೋಜಿಸಲಾಗುತ್ತದೆ. ಜಲ ಸಂರಕ್ಷಣೆ ಪ್ರಚಾರಕ್ಕಾಗಿ ಈ ಜಾತ್ರೆಗಳ ಪ್ರಯೋಜನ ಪಡೆಯಬಹುದಲ್ಲವೇ? ಜಾತ್ರೆಗಳಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಬರುತ್ತಾರೆ. ಇಂಥ ಜಾತ್ರೆಗಳಲ್ಲಿ ನಾವು ಜಲ ಸಂರಕ್ಷಣೆಯ ಸಂದೇಶವನ್ನು ಬಹಳ ಪ್ರಭಾವಯುತವಾಗಿ ಪ್ರದರ್ಶಿಸಬಹುದು, ಬೀದಿ ನಾಟಕಗಳನ್ನು ಮಾಡಬಹುದು. ಉತ್ಸವಗಳ ಜೊತೆಗೆ ಜಲ ಸಂರಕ್ಷಣೆಯ ಸಂದೇಶವನ್ನು ಬಹಳ ಸುಲಭವಾಗಿ ತಲುಪಿಸಬಹುದು.
ಸ್ನೇಹಿತರೆ, ಜೀವನದಲ್ಲಿ ಕೆಲ ವಿಷಯಗಳು ನಮ್ಮಲ್ಲಿ ಉತ್ಸಾಹವನ್ನು ತುಂಬುತ್ತವೆ. ವಿಶೇಷವಾಗಿ ಮಕ್ಕಳ ಸಾಧನೆ, ಅವರ ಕೆಲಸಗಳು ನಮ್ಮಲ್ಲಿ ಹೊಸ ಶಕ್ತಿಯನ್ನು ತುಂಬುತ್ತವೆ. ಆದ್ದರಿಂದಲೇ ಇಂದು ಕೆಲ ಮಕ್ಕಳ ಬಗ್ಗೆ ಮಾತನಾಡುವ ಮನಸ್ಸಾಗಿದೆ. ಈ ಮಕ್ಕಳು ನಿಧಿ ಬೈಪೋಟು. ಮೊನೀಷ್ ಜೋಷಿ, ದೇವಾಂಶಿ ರಾವತ್, ತನುಷ್ ಜೈನ್, ಹರ್ಷ್ ದೇವ್ ಧರ್ಕರ್, ಅನಂತ ತಿವಾರಿ, ಪ್ರೀತಿ ನಾಗ್, ಅಥರ್ವ ದೇಶ್ಮುಖ್. ಅರೋನ್ಯತೇಶ್ ಗಾಂಗೂಲಿ ಮತ್ತು ಹೃತಿಕ್ ಅಲಾ-ಮಂದಾ.
ಇವರ ಬಗ್ಗೆ ನಾನು ಹೇಳುವುದನ್ನು ಕೇಳಿದರೆ ನಿಮ್ಮ ಮನದಲ್ಲೂ ಉತ್ಸಾಹ ಉಕ್ಕುತ್ತದೆ. ಕ್ಯಾನ್ಸರ್ ಎಂಬ ಶಬ್ದದಿಂದ ಇಡೀ ವಿಶ್ವವೇ ಹೆದರುತ್ತದೆ ಎಂಬುದು ನಮಗೆಲ್ಲ ತಿಳಿದ ವಿಷಯವೇ. ಮೃತ್ಯು ಬಾಗಿಲಿಗೆ ಬಂದು ನಿಂತಿದೆ ಎಂಬಂತೆ ಭಾಸವಾಗುತ್ತದೆ. ಆದರೆ ಈ ಎಲ್ಲ ಹತ್ತು ಮಕ್ಕಳು ತಮ್ಮ ಜೀವನದ ಹೋರಾಟದಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಸದೆಬಡಿಯುವುದು ಮಾತ್ರವಲ್ಲದೇ ತಮ್ಮ ಕೆಲಸದಿಂದ ಇಡೀ ವಿಶ್ವದಲ್ಲಿ ಭಾರತದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಕ್ರೀಡೆಗಳಲ್ಲಿ ಕ್ರೀಡಾಳುಗಳು ಪಂದ್ಯಾವಳಿಯನ್ನು ಗೆಲ್ಲುವ ಅಥವಾ ಪದಕ ಗಳಿಸುವ ಮೂಲಕ ಚಾಂಪಿಯನ್ ಆಗುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಇಂತಹ ಕಷ್ಟಕರ ಸನ್ನಿವೇಶದಲ್ಲೂ ಈ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೊದಲೇ ಚಾಂಪಿಯನ್ ಆಗಿದ್ದರು. ಅದರಲ್ಲೂ, ಜೀವನದ ಹೋರಾಟದ ಚಾಂಪಿಯನ್ ಗಳಾಗಿದ್ದರು.
ಇದೇ ತಿಂಗಳು ಮಾಸ್ಕೋ ನಲ್ಲಿ ವಿಶ್ವದ ವಿಜೇತ ಮಕ್ಕಳ ಪಂದ್ಯಾವಳಿ World Children’s winners games ಆಯೋಜಿಸಲಾಗಿತ್ತು. ಇದೊಂದು ವಿಶೇಷ ಪಂದ್ಯಾವಳಿಯಾಗಿದ್ದು, ಇದರಲ್ಲಿ ಕ್ಯಾನ್ಸರ್ ಗೆದ್ದುಬಂದ ಯುವ ಮಕ್ಕಳು ಅಂದರೆ ತಮ್ಮ ಜೀವನದಲ್ಲಿ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ ಚೇತರಿಸಿಕೊಂಡಂತಹವರು ಮಾತ್ರ ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಪಂದ್ಯಾವಳಿಯಲ್ಲಿ Shooting, Chess, Swimming, Running, Football ಮತ್ತು Table Tennis ನಂತಹ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಮ್ಮ ದೇಶದ ಈ ಎಲ್ಲ ಹತ್ತು ಚಾಂಪಿಯನ್ ಗಳು ಈ ಪಂದ್ಯಾವಳಿಯಲ್ಲಿ ಪದಕಗಳನ್ನು ಸಾಧಿಸಿದ್ದಾರೆ. ಇದರಲ್ಲಿ ಕೆಲ ಸ್ಪರ್ಧಾಳುಗಳು ಒಂದಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ನನ್ನ ಪ್ರಿಯ ದೇಶಬಾಂಧವರೇ, ಆಕಾಶದಿಂದಾಚೆ, ಅಂತರಿಕ್ಷದಲ್ಲೂ ಭಾರತದ ಯಶಸ್ಸು ಕುರಿತು ಕೇಳಿ ನಿಮಗೆ ಹೆಮ್ಮೆ ಆಗಿರಬಹುದು ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಚಂದ್ರಯಾನ ಎರಡು.
ರಾಜಸ್ಥಾನದ ಜೋಧ್ಪುರ್ ನ ಸಂಜೀವ್ ಹರೀಪುರ, ಕೊಲ್ಕತಾದ ಮಹೇಂದ್ರ ಕುಮಾರ್ ದಾಗಾ, ತೆಲಂಗಾಣದ ಪಿ. ಅರವಿಂದ್ ರಾವ್… ಹೀಗೆ ಅನೇಕರು ದೇಶದ ವಿವಿದೆಡೆಗಳಿಂದ, ಹಲವಾರು ಜನ ನನಗೆ NarendraModi App ಮತ್ತು MyGov ಮೂಲಕ, ಈ ಬಾರಿಯ ಮನದ ಮಾತಿನಲ್ಲಿ ಚಂದ್ರಯಾನ ಎರಡರ ಕುರಿತು ಮಾತನಾಡ ಬೇಕೆಂದು ಆಗ್ರಹಿಸಿದ್ದಾರೆ.
ಬಾಹ್ಯಾಕಾಶ ಸಾಧನೆಯ ದೃಷ್ಟಿಯಿಂದ 2019 ನೇ ವರ್ಷ ಬಹಳ ಉತ್ತಮವಾಗಿತ್ತು. ನಮ್ಮ ವಿಜ್ಞಾನಿಗಳು ಮಾರ್ಚ್ನಲ್ಲಿ A-Sat launch ಮಾಡಿದ್ದರು ತದನಂತರ ಚಂದ್ರಯಾನ 2. ಚುನಾವಣೆಯ ಕೆಲಸಕಾರ್ಯಗಳಿಂದಾಗಿ ಆಗ ಎಸ್ಯಾಟ್ ನಂತಹ ಬಹು ದೊಡ್ಡ ಮತ್ತು ಮಹತ್ವಪೂರ್ಣ ವಿಷಯದ ಕುರಿತು ಹೆಚ್ಚು ಚರ್ಚೆ ನಡೆಯಲಿಲ್ಲ. ಆದರೆ ನಾವು ಎಸ್ಯಾಟ್ ಕ್ಷಿಪಣಿಯಿಂದ ಕೇವಲ 3 ನಿಮಿಷಗಳಲ್ಲಿ 300 ಕಿಲೋಮೀಟರ್ ದೂರದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಪಡೆದಿದ್ದೇವೆ. ಭಾರತ ಈ ಸಾಧನೆಯನ್ನು ಸಂಭ್ರಮಿಸಿದ ವಿಶ್ವದ ನಾಲ್ಕನೇ ದೇಶವಾಗಿ ಹೊರಹೊಮ್ಮಿತು. ಈಗ ಜುಲೈ 22 ರಂದು ಚಂದ್ರಯಾನ 2 ಶ್ರೀಹರಿಕೋಟಾದಿಂದ ಅಂತರಿಕ್ಷದೆಡೆಗೆ ತನ್ನ ದಾಪುಗಾಲಿಕ್ಕಿದೆ ಎಂಬುದನ್ನು ಸಂಪೂರ್ಣ ದೇಶವೇ ಬಹಳ ಹೆಮ್ಮೆಯಿಂದ ವೀಕ್ಷಿಸಿದೆ. ಚಂದ್ರಯಾನ 2 ರ ಯಶಸ್ವೀ ಉಡಾವಣೆಯ ಭಾವಚಿತ್ರಗಳು ದೇಶಬಾಂಧವರಲ್ಲಿ ಗೌರವ, ಉತ್ಸಾಹ ಮತ್ತು ಆನಂದವನ್ನು ತುಂಬಿದೆ.
ಚಂದ್ರಯಾನ 2 ಈ ಮಿಶನ್ ಹಲವಾರು ರೀತಿಯಲ್ಲಿ ವಿಶೇಷವಾಗಿದೆ. ಚಂದ್ರಯಾನ 2 ಚಂದ್ರನ ಕುರಿತು ನಮ್ಮ ಜ್ಞಾನವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ. ಇದರಿಂದ ನಮಗೆ ಚಂದ್ರನ ಕುರಿತು ಇನ್ನಷ್ಟು ವಿಸ್ತ್ರತ ಮಾಹಿತಿ ದೊರೆಯಲಿದೆ ಆದರೆ ಚಂದ್ರಯಾನ 2 ಮಿಷನ್ನಿಂದ ಯಾವ ಎರಡು ಬಹುದೊಡ್ಡ ವಿಷಯಗಳನ್ನು ಅರಿತಿದ್ದೇನೆ ಎಂದು ನನ್ನನ್ನು ನೀವು ಕೇಳಿದರೆ ಅವು ವಿಶ್ವಾಸದಿಂದಿರುವುದು ಮತ್ತು ನಿರ್ಭೀತವಾಗಿರುವುದು ಎಂದು ನಾನು ಹೇಳಬಲ್ಲೆ. ನಮಗೆ ನಮ್ಮ ಪ್ರತಿಭೆ ಮತ್ತು ಕ್ಷಮತೆ ಬಗ್ಗೆ ನಮ್ಮಲ್ಲಿ ವಿಶ್ವಾಸವಿರಬೇಕು. ಚಂದ್ರಯಾನ 2 ಸಂಪೂರ್ಣವಾಗಿ ಭಾರತೀಯರೇ ಕೈಗೊಂಡಂತಹ ಯೋಜನೆಯಾಗಿದೆ ಎಂಬುದನ್ನು ಕೇಳಿ ನಿಮಗೆ ಸಂತೋಷವಾಗಬಹುದು. ಇದು ಹೃದಯದಿಂದಲೂ, ಆತ್ಮದಿಂದಲೂ ಭಾರತೀಯವಾಗಿದೆ. ಇದು ಸಂಪೂರ್ಣವಾಗಿ ಸ್ವದೇಶಿ ಯೋಜನೆಯಾಗಿದೆ. ಎಂದಿಗೇ ಆಗಲಿ ಹೊಸ ಕ್ಷೇತ್ರಗಳಲ್ಲಿ ಹೊಸತೇನನ್ನಾದರೂ ಮಾಡಿ ತೋರಬೇಕು ಎಂದಾದಲ್ಲಿ ನಮ್ಮ ವಿಜ್ಞಾನಿಗಳು ಸರ್ವ ಶ್ರೇಷ್ಠರೂ ಮತ್ತು ವಿಶ್ವಮಾನ್ಯ ಅಗ್ರರೂ ಆಗಿದ್ದಾರೆ ಎಂಬುದನ್ನು ಈ ಮಿಶನ್ ಮತ್ತೊಮ್ಮೆ ಸಾಬೀತು ಮಾಡಿದೆ.
ಮತ್ತೊಂದು ಮಹತ್ವಪೂರ್ಣವಾದ ಪಾಠವೇನೆಂದರೆ ಯಾವುದೇ ಅಡ್ಡಿ ಆತಂಕಗಳಿಗೆ ಅಂಜಬಾರದು. ನಮ್ಮ ವಿಜ್ಞಾನಿಗಳು ಹೇಗೆ ನಿರ್ಧರಿತ ಸಮಯದಲ್ಲಿ ಹಗಲು ರಾತ್ರಿಯೆನ್ನದೇ ತಾಂತ್ರಿಕ ದೋಷಗಳನ್ನು ನಿವಾರಿಸಿ ಚಂದ್ರಯಾನ 2 ನ್ನು ಯಶಸ್ವಿಗೊಳಿಸಿದರೋ ಅದೊಂದು ಅಭೂತಪೂರ್ವವಾದ ವಿಷಯ. ವಿಜ್ಞಾನಿಗಳ ಈ ತಪಸ್ಸಿಗೆ ವಿಶ್ವವೇ ಸಾಕ್ಷಿಯಾಗಿದೆ. ಈ ಕುರಿತು ನಾವೆಲ್ಲರೂ ಬಹಳ ಹೆಮ್ಮೆ ಪಡಬೇಕು. ಅಡ್ಡಿ ಆತಂಕಗಳ ಹೊರತಾಗಿಯೂ ಉಡಾವಣಾ ಸಮಯವನ್ನು ಅವರು ಬದಲಾಯಿಸದಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸುವಂಥ ವಿಷಯ. ನಮ್ಮ ಜೀವನದಲ್ಲೂ temporary set backs ಅಂದರೆ ತಾತ್ಕಾಲಿಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇದು ಯಶಸ್ವಿಯಾಗುವ ಸಾಮರ್ಥ್ಯ ನಮ್ಮಲ್ಲೇ ಇರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಚಂದ್ರಯಾನ 2 ಅಭಿಯಾನ ನಮ್ಮ ದೇಶದ ಯುವಕರಿಗೆ ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಪ್ರೇರಣಾದಾಯಕವಾಗಿರುತ್ತದೆ ಎಂಬ ಸಂಪೂರ್ಣ ಭರವಸೆ ನನಗಿದೆ. ಮಿಗಿಲಾಗಿ ವಿಜ್ಞಾನವೇ ವಿಕಾಸದ ಮಾರ್ಗವಲ್ಲವೇ? ಈಗ ನಾವು ಸೆಪ್ಟೆಂಬರ್ ತಿಂಗಳನ್ನು ಬಹಳ ಕುತೂಹಲದಿಂದ ಕಾಯುತ್ತಿದ್ದೇವೆ. ಆಗ ಚಂದ್ರನ ಮೇಲೆ ಲ್ಯಾಂಡರ್ – ವಿಕ್ರ್ರಮ್ ಮತ್ತು ರೋವರ್ – ಪ್ರಜ್ಞಾನದ ಲ್ಯಾಂಡಿಂಗ್ ಆಗಲಿದೆ.
ಈ ದಿನ ನಾನು “ಮನದ ಮಾತು” ಕಾರ್ಯಕ್ರಮದ ಮೂಲಕ ದೇಶದ ವಿದ್ಯಾರ್ಥಿ ಮಿತ್ರರ ಜೊತೆಗೆ, ಯುವ ಸ್ನೇಹಿತರ ಜೊತೆಗೆ ಒಂದು ಆಸಕ್ತಿದಾಯಕವಾದ ಸ್ಪರ್ಧೆ / ಕಾಂಪಿಟಿಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ ಮತ್ತು ದೇಶದ ಯುವಕ ಯುವತಿಯರನ್ನು ಒಂದು ಕ್ವಿಜ್ ಕಾಂಪಿಟಿಷನ್ ಗೆ ಆಹ್ವಾನಿಸುತ್ತಿದ್ದೇನೆ. ಅಂತರಿಕ್ಷಕ್ಕೆ ಸಂಬಂಧಿಸಿದ ಜಿಜ್ಞಾಸೆಗಳು ಭಾರತದ ಸ್ಪೇಸ್ ಮಿಷನ್, ವಿಜ್ಞಾನ ಮತ್ತು ತಂತ್ರಜ್ಞಾನ ಇವು ಈ ಕ್ವಿಜ್ ಕಾಂಪಿಟಿಷನ್ ನ ಮುಖ್ಯ ವಿಷಯಗಳಾಗಿರುತ್ತವೆ. ಯಾವ ರೀತಿ ಅಂದರೆ ರಾಕೆಟ್ ಉಡಾವಣೆ ಮಾಡಲು ಏನೇನು ಮಾಡಬೇಕು, ಉಪಗ್ರಹವನ್ನು ಹೇಗೆ ಕಕ್ಷೆಯಲ್ಲಿ ಸ್ಥಾಪನೆ ಮಾಡುತ್ತಾರೆ, ಉಪಗ್ರಹದಿಂದ ನಾವು ಏನೇನು ಮಾಹಿತಿಗಳನ್ನು ಪಡೆದುಕೊಳ್ಳಬಹುದು, A-Sat ಅಂದರೆ ಏನು, ಹೀಗೆ ಬಹಳಷ್ಟು ವಿಷಯಗಳಿವೆ. MyGov website ನಲ್ಲಿ ಆಗಸ್ಟ್ ಒಂದರಂದು ಸ್ಪರ್ಧೆಯ ವಿವರಗಳನ್ನು ಕೊಡಲಾಗುತ್ತದೆ.
ಈ ಕ್ವಿಜ್ ಕಾಂಪಿಟಿಷನ್ ನಲ್ಲಿ ಭಾಗವಹಿಸಿ; ನಿಮ್ಮ ಭಾಗವಹಿಸುವಿಕೆಯಿಂದ ಇದನ್ನು ಆಸಕ್ತಿದಾಯಕ, ರೋಚಕ ಮತ್ತು ನೆನಪಿನಲ್ಲಿ ಉಳಿಯುವಂತೆ ಮಾಡಿ ಎಂದು ನಾನು ಯುವ ಮಿತ್ರರನ್ನೂ, ವಿದ್ಯಾರ್ಥಿಗಳನ್ನೂ ಆಗ್ರಹಿಸುತ್ತೇನೆ. ನೀವು ನಿಮ್ಮ ಶಾಲೆಯನ್ನು ಇದರಲ್ಲಿ ಗೆಲ್ಲಿಸಲು ಸಾಕಷ್ಟು ಶ್ರಮ ವಹಿಸಿ ಎಂದು ನಾನು ಶಾಲೆಗಳಿಗೆ, ಶಾಲೆಗಳ ಪ್ರವರ್ತಕರಿಗೆ, ಉತ್ಸಾಹಿ ಗುರುಗಳು ಮತ್ತು ಶಿಕ್ಷಕರಿಗೆ ವಿಶೇಷವಾಗಿ ಹೇಳಲು ಬಯಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳನ್ನೂ ಇದರಲ್ಲಿ ಸೇರಿಕೊಳ್ಳಲು ಪ್ರೋತ್ಸಾಹಿಸಿ. ಎಲ್ಲಕ್ಕಿಂತ ರೋಮಾಂಚಕವಾದ ವಿಷಯ ಏನೆಂದರೆ ಪ್ರತಿ ರಾಜ್ಯದಿಂದ, ಎಲ್ಲರಿಗಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು, ಭಾರತ ಸರ್ಕಾರವು ತನ್ನ ಖರ್ಚಿನಲ್ಲಿ ಶ್ರೀಹರಿಕೋಟಾಕ್ಕೆ ಕರೆದೊಯ್ಯುತ್ತದೆ. ಸೆಪ್ಟೆಂಬರ್ ನಲ್ಲಿ ಚಂದ್ರಯಾನದ ನೌಕೆ ಚಂದ್ರನ ಮೇಲೆ ಇಳಿಯುತ್ತಿರುವ ದೃಶ್ಯಕ್ಕೆ ಸಾಕ್ಷಿಯಾಗುವ ಅವಕಾಶ ಇವರಿಗೆ ಸಿಗುತ್ತದೆ. ಗೆಲುವು ಸಾಧಿಸಿದ ಈ ವಿದ್ಯಾರ್ಥಿಗಳಿಗೆ ಇದು ಅವರ ಜೀವನದ ಐತಿಹಾಸಿಕ ಘಟನೆ ಆಗುತ್ತದೆ. ಆದರೆ ಇದಕ್ಕಾಗಿ ನೀವು ಕ್ವಿಜ್ ಕಾಂಪಿಟಿಷನ್ ನಲ್ಲಿ ಭಾಗವಹಿಸಬೇಕಾಗುತ್ತದೆ, ಎಲ್ಲರಿಗಿಂತ ಹೆಚ್ಚು ಅಂಕ ಪಡೆದುಕೊಳ್ಳಬೇಕಾಗುತ್ತದೆ, ಗೆಲುವು ಸಾಧಿಸಬೇಕಾಗುತ್ತದೆ.
ಸ್ನೇಹಿತರೇ, ನನ್ನ ಈ ಸಲಹೆ ನಿಮಗೆ ಖಂಡಿತವಾಗಿಯೂ ಸರಿಯಾಗಿದೆ ಎಂದು ಅನಿಸುತ್ತಿರಬಹುದು. ಇದು ಒಂದು ಮೋಜಿನ ಅವಕಾಶವಲ್ಲವೇ? ಆದ್ದರಿಂದ ನಾವು ಕ್ವಿಜ್ ನಲ್ಲಿ ಭಾಗವಹಿಸುವುದನ್ನು ಮರೆಯಬಾರದು ಮತ್ತು ಹೆಚ್ಚು ಹೆಚ್ಚು ಸ್ನೇಹಿತರನ್ನು ಕೂಡ ಇದರಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಒಂದು ವಿಷಯವನ್ನು ಗಮನಿಸಿರಬಹುದು. ನಮ್ಮ ಮನದ ಮಾತುಗಳು ಸ್ವಚ್ಚತಾ ಅಭಿಯಾನಕ್ಕೆ ಆಗಿಂದಾಗ್ಗೆ ವೇಗ ಕೊಟ್ಟಿವೆ ಮತ್ತು ಅದೇ ರೀತಿ ಸ್ವಚ್ಚತೆಗಾಗಿ ಮಾಡುತ್ತಿರುವ ಪ್ರಯತ್ನಗಳು ಕೂಡ ಮನದ ಮಾತಿಗೆ ಯಾವಾಗಲೂ ಪ್ರೇರಣೆ ಕೊಟ್ಟಿವೆ. 5 ವರ್ಷದ ಹಿಂದೆ ಪ್ರಾರಂಭವಾದ ಈ ಪಯಣ ಇಂದು ಎಲ್ಲಾ ಜನರ ಸಹಭಾಗಿತ್ವದಿಂದ ಸ್ವಚ್ಚತೆಯ ಹೊಸ ಹೊಸ ಮಾನದಂಡಗಳನ್ನು ಹುಟ್ಟುಹಾಕುತ್ತಿದೆ. ಸ್ವಚ್ಚತೆಯಲ್ಲಿ ನಾವು ಆದರ್ಶವಾದ ಎತ್ತರಕ್ಕೆ ಏರಿಲ್ಲವಾದರೂ ಬಯಲು ಶೌಚ ಮುಕ್ತವಾಗುವುದರಿಂದ ಹಿಡಿದು ಸಾರ್ವಜನಿಕ ಸ್ಥಳಗಳ ತನಕ ಸ್ವಚ್ಚತಾ ಅಭಿಯಾನದಲ್ಲಿ ಸಫಲತೆ ಸಿಕ್ಕಿದೆಯೋ, ಅದು 130 ಕೋಟಿ ದೇಶವಾಸಿಗಳ ಸಂಕಲ್ಪದ ಶಕ್ತಿ. ಆದರೆ ನಾವು ಇಷ್ಟಕ್ಕೇ ನಿಲ್ಲಿಸುವವರಲ್ಲ. ಈಗ ಈ ಆಂದೋಲನವು ಸ್ವಚ್ಚತೆಯಿಂದ ಸೌಂದರ್ಯದ ಕಡೆಗೆ ಹೋಗುತ್ತಿದೆ. ಈಗ ಸ್ವಲ್ಪ ದಿನಗಳ ಕೆಳಗೆ ನಾನು ಮೀಡಿಯಾ ದಲ್ಲಿ ಶ್ರೀಯುತ ಯೋಗೇಶ್ ಸೈನಿ ಮತ್ತು ಅವರ ತಂಡದ ಕಥೆಯನ್ನು ನೋಡುತ್ತಿದ್ದೆ. ಯೋಗೇಶ್ ಸೈನಿ ಅವರು ಒಬ್ಬ ಇಂಜಿನಿಯರ್ ಮತ್ತು ಅಮೆರಿಕಾದಲ್ಲಿದ್ದ ನೌಕರಿಯನ್ನು ತೊರೆದು ಭಾರತ ಮಾತೆಯ ಸೇವೆಗಾಗಿ ಹಿಂತಿರುಗಿ ಬಂದಿದ್ದಾರೆ. ಅವರು ಕೆಲದಿನಗಳ ಹಿಂದೆ ದೆಹಲಿಯನ್ನು ಸ್ವಚ್ಚ ಮಾತ್ರವಲ್ಲ, ಜೊತೆಗೆ ಸುಂದರಗೊಳಿಸುವ ಸಂಕಲ್ಪ ತೆಗೆದುಕೊಂಡಿದ್ದರು. ಇವರು ತಮ್ಮ ತಂಡದ ಜೊತೆಗೂಡಿ ಲೋಧಿ ಗಾರ್ಡನ್ ನ ಕಸದ ತೊಟ್ಟಿಯಿಂದ ತಮ್ಮ ಕೆಲಸ ಪ್ರಾರಂಭಿಸಿದರು. ಸ್ಟ್ರೀಟ್ ಆರ್ಟ್ ನ ಮಾಧ್ಯಮದಿಂದ ದೆಹಲಿಯ ಬಹಳಷ್ಟು ಭಾಗಗಳನ್ನು ಸುಂದರವಾದ ಪೈಂಟಿಂಗ್ಸ್ ಗಳಿಂದ ಅಲಂಕರಿಸುವ ಕೆಲಸ ಮಾಡಿದರು. ರಸ್ತೆ ಮೇಲ್ಸೇತುವೆಗಳು ಮತ್ತು ಶಾಲೆಗಳ ಗೋಡೆಗಳಿಂದ ಹಿಡಿದು ಕೊಳೆಗೇರಿಯ ಗುಡಿಸಲುಗಳವರೆಗೆ ಅವರು ತಮ್ಮ ಕೌಶಲ್ಯವನ್ನು ತೋರಿಸಲು ಪ್ರಾರಂಭಿಸಿದಾಗ ಜನರು ಕೂಡ ಕೈ ಜೋಡಿಸುವರು. ಇದು ಒಂದು ರೀತಿಯ ಸರಪಳಿಯಂತೆ ಮುಂದುವರೆಯಿತು. ಕುಂಭ ಮೇಳದ ಸಲುವಾಗಿ ಪ್ರಯಾಗ್ ರಾಜ್ ನ್ನು ಯಾವರೀತಿ ಬೀದಿಬದಿ ಚಿತ್ರಕಲೆಯಿಂದ ಅಲಂಕರಿಸಲಾಗಿತ್ತು ಎನ್ನುವುದು ನಿಮಗೆ ನೆನಪಿರಬಹುದು. ಯೋಗೇಶ್ ಸೈನಿ ಮತ್ತು ಅವರ ತಂಡವು ಅದರಲ್ಲಿಯೂ ಬಹಳ ದೊಡ್ಡ ಪಾತ್ರ ವಹಿಸಿದ್ದರು ಎಂದು ನಂಗೆ ತಿಳಿಯಿತು ಸೋದರರೇ, ಬಣ್ಣ ಮತ್ತು ರೇಖೆಗಳಲ್ಲಿ ಶಬ್ದಗಳಿಲ್ಲದಿದ್ದರೂ ಇದರಿಂದ ಮಾಡಿದ ಚಿತ್ರಗಳಿಂದ ಮೂಡುವ ಕಾಮನಬಿಲ್ಲು ನೀಡುವ ಸಂದೇಶ ಸಾವಿರಾರು ಶಬ್ದಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ ಎಂದು ಸಾಬೀತು ಪಡಿಸುತ್ತದೆ. ಸ್ವಚ್ಚತಾ ಅಭಿಯಾನದಲ್ಲಿ ಸೌಂದರ್ಯದಲ್ಲಿ ಕೂಡ ಈ ಮಾತು ನಮ್ಮ ಅನುಭವಕ್ಕೆ ಬಂದಿದೆ. ವೇಸ್ಟ್ ಣo ವೆಲ್ತ್ ಮಾಡುವ ಸಂಸ್ಕೃತಿ ನಮ್ಮ ಸಮಾಜದಲ್ಲಿ ಬೆಳೆಯಬೇಕು ಎನ್ನುವುದು ಬಹಳ ಮುಖ್ಯವಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಕಸದಿಂದ ರಸ ಮಾಡುವ ದಿಶೆಯಲ್ಲಿ ನಾವು ಮುಂದುವರೆಯಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ MyGov ನಲ್ಲಿ ನಾನು ಒಂದು ತುಂಬಾ ಆಸಕ್ತಿದಾಯಕ ಟಿಪ್ಪಣಿ ಓದಿದೆ. ಇದು ಜಮ್ಮು ಕಾಶ್ಮೀರ್ ನ ಶೋಪಿಯಾನ್ ವಾಸಿ ಸೋದರ ಮೊಹಮ್ಮದ್ ಅಸ್ಲಂ ಅವರದ್ದಾಗಿತ್ತು.
“ಮನದ ಮಾತು ಕಾರ್ಯಕ್ರಮವನ್ನು ಕೇಳುವುದು ಬಹಳ ಸಂತೋಷವಾಗುತ್ತದೆ. ನನ್ನ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ನಾನು Community Mobilization Programme – Back To Village ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿದ್ದೇನೆ ಎನ್ನುವುದನ್ನು ತಿಳಿಸಲು ನನಗೆ ಬಹಳ ಸಂತೋಷವಾಗುತ್ತಿದೆ. ಈ ಕಾರ್ಯಕ್ರಮವನ್ನು ಜೂನ್ ತಿಂಗಳಲ್ಲಿ ಆಯೋಜಿಸಲಾಗಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳು ಅಯೋಜನೆಯಾಗಬೇಕು ಎಂದು ನನಗೆ ಅನ್ನಿಸುತ್ತದೆ. ಇದರ ಜೊತೆಗೆ ಕಾರ್ಯಕ್ರಮದ online monitoring ನ ವ್ಯವಸ್ಥೆ ಕೂಡ ಮಾಡಬೇಕಾಗಿದೆ. ನನಗೆ ಗೊತ್ತಿರುವಂತೆ ಜನರು ಸರಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿದಂತಹ ಈ ಈ ಬಗೆಯ ಮೊದಲ ಕಾರ್ಯಕ್ರಮವಾಗಿತ್ತು.” ಎಂದು ಅವರು ಬರೆದಿದ್ದಾರೆ.
ಸೋದರ ಮೊಹಮ್ಮದ್ ಅಸ್ಲಂ ಅವರು ನನಗೆ ಕಳಿಸಿದ ಈ ಸಂದೇಶವನ್ನು ಓದಿದ ನಂತರ ‘Back To Village’ Programme ನ ಬಗ್ಗೆ ತಿಳಿದುಕೊಳ್ಳುವ ನನ್ನ ಉತ್ಸಾಹ ಹೆಚ್ಚಾಯಿತು. ನಾನು ಇದರ ಬಗ್ಗೆ ವಿವರವಾಗಿ ತಿಳಿದುಕೊಂಡಾಗ ಇಡೀ ದೇಶಕ್ಕೆ ಇದರ ಮಾಹಿತಿ ಸಿಗಬೇಕು ಎಂದು ನನಗೆ ಅನ್ನಿಸಿತು. ಕಾಶ್ಮೀರದ ಜನರು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಲು ಎಷ್ಟೊಂದು ಕಾತರರಾಗಿದ್ದಾರೆ, ಎಷ್ಟೊಂದು ಉತ್ಸುಕರಾಗಿದ್ದಾರೆ ಎನ್ನುವುದು ಈ ಕಾರ್ಯಕ್ರಮದಿಂದ ತಿಳಿದುಬರುತ್ತದೆ. ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದೊಡ್ಡ ದೊಡ್ಡ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ಇತ್ತರು – ಯಾವ ಅಧಿಕಾರಿಗಳನ್ನು ಹಳ್ಳಿಯ ಜನರು ನೋಡಿಯೇ ಇರಲಿಲ್ಲವೋ ಅಂಥವರೆಲ್ಲ ಅಭಿವೃದ್ಧಿಯ ಕೆಲಸಗಳಲ್ಲಿ ಬರಬಹುದಾದ ತೊಂದರೆಗಳನ್ನು ಅರ್ಥ ಮಾಡಿಕೊಂಡು ಸಮಸ್ಯೆಗಳನ್ನು ದೂರ ಮಾಡಲು ನೇರವಾಗಿ ಹಳ್ಳಿಗಳ ತನಕ ತಲುಪಿದರಲ್ಲದೆ ತಾವಾಗಿಯೇ ಹೋಗಿ ಅವರ ಮನೆಯ ಬಾಗಿಲಿಗೆ ಬಂದು ನಿಂತರು.
ಈ ಕಾರ್ಯಕ್ರಮ ವಾರವಿಡೀ ನಡೆಯಿತು. ರಾಜ್ಯದ ಸರಿಸುಮಾರು ಎಲ್ಲಾ ನಾಲ್ಕೂವರೆ ಸಾವಿರ ಪಂಚಾಯ್ತಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಳ್ಳಿಯ ಜನರಿಗೆ ಸರಕಾರೀ ಯೋಜನೆಗಳ ಬಗ್ಗೆ ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಆ ಜನರ ಬಳಿಗೆ ಸರ್ಕಾರಿ ಸೇವೆಗಳು ತಲುಪುತ್ತಿದೆಯೋ ಇಲ್ಲವೋ, ಪಂಚಾಯ್ತಿಗಳನ್ನು ಇನ್ನೂ ಬಲಗೊಳಿಸುವುದು ಹೇಗೆ, ಅವುಗಳ ಗಳಿಕೆಯನ್ನ ಹೆಚ್ಚಿಸಿಕೊಳ್ಳುವುದು ಹೇಗೆ ಅವುಗಳ ಸೇವೆಗಳು ಸಾಮಾನ್ಯ ಜನರ ಜೀವನದಲ್ಲಿ ಏನು ಪ್ರಭಾವ ಬೀರಬಹುದು ಎನ್ನುವುದನ್ನು ಕೂಡ ತಿಳಿದುಕೊಂಡರು. ಹಳ್ಳಿಯ ಜನರೂ ಸಹ ಮನ ಬಿಚ್ಚಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸಾಕ್ಷರತೆ, ಲಿಂಗಾನುಪಾತ, ಅರೋಗ್ಯ, ಸ್ವಚ್ಚತೆ, ನೀರಿನ ಸಂರಕ್ಷಣೆ, ವಿದ್ಯುತ್, ನೀರು, ಹೆಣ್ಣುಮಕ್ಕಳ ಶಿಕ್ಷಣ, ಹಿರಿಯ ನಾಗರೀಕರ ಪ್ರಶ್ನೆಗಳು, ಇಂತಹ ಹಲವಾರು ವಿಷಯಗಳ ಮೇಲೂ ಸಹ ಚರ್ಚೆ ನಡೆಯಿತು.
ಗೆಳೆಯರೇ, ಅಧಿಕಾರಿಗಳು ದಿನವೆಲ್ಲ ಹಳ್ಳಿಗಳಲ್ಲಿ ತಿರುಗಾಡಿ ಬಂದು ಸರ್ಕಾರದ ವತಿಯಿಂದ ಊಟಮಾಡಿ ಬರುವ ಯಾವುದೇ ಕಾರ್ಯಕ್ರಮ ಇದಾಗಿರಲಿಲ್ಲ. ಈ ಬಾರಿ ಅಧಿಕಾರಿಗಳು ಎರಡು ದಿನ ಮತ್ತು ಒಂದು ರಾತ್ರಿ ಪಂಚಾಯ್ತಿಯಲ್ಲೇ ಕಳೆದರು. ಇದರಿಂದ ಅವರಿಗೆ ಹಳ್ಳಿಗಳಲ್ಲಿ ಹೆಚ್ಚು ಕಾಲ ಇರುವ ಅವಕಾಶ ಸಿಕ್ಕಿತು. ಪ್ರತಿಯೊಬ್ಬರನ್ನೂ ಭೇಟಿ ಮಾಡುವ ಪ್ರಯತ್ನ ಮಾಡಿದರು. ಪ್ರತಿ ಸಂಸ್ಥೆಯ ಬಳಿಯೂ ಹೋಗುವ ಪ್ರಯತ್ನ ಮಾಡಿದರು. ಈ ಕಾರ್ಯಕ್ರಮವನ್ನು ಆಸಕ್ತಿದಾಯಕವಾಗಿಸಲು ಇನ್ನೂ ಬಹಳಷ್ಟು ವಿಷಯಗಳನ್ನೂ ಸೇರಿಸಲಾಗಿತ್ತು. ಖೇಲೋ ಇಂಡಿಯಾ ದ ಅಡಿಯಲ್ಲಿ ಮಕ್ಕಳಿಗೆ ಆಟೋಟಗಳ ಸ್ಪರ್ಧೆ ನಡೆಸಲಾಯಿತು. ಜೊತೆಗೆ, Sports Kits, ಮನ್ರೆಗಾದ job cards ಮತ್ತು SC/ST Certificates ಗಳನ್ನು ಸಹಾ ಹಂಚಲಾಯಿತು. Financial Literacy Camps ಗಳನ್ನು ಹಾಕಲಾಗಿತ್ತು.. Agriculture, Horticulture ಗಳಂಥಹ ಸರ್ಕಾರಿ ಇಲಾಖೆಗಳ ಪರವಾಗಿ stalls ಗಳನ್ನೂ ಹಾಕಲಾಗಿತ್ತು. ಇದರೊಟ್ಟಿಗೆ ಸರ್ಕಾರಿ ಯೋಜನೆಗಳ ಕುರಿತಾಗಿ ಮಾಹಿತಿಯನ್ನೂ ನೀಡಲಾಯಿತು. ಒಂದು ರೀತಿಯಲ್ಲಿ ಈ ಕಾರ್ಯಕ್ರಮವು ಅಭಿವೃದ್ಧಿ ಉತ್ಸವವಾಗಿತ್ತು; ಜನರ ಭಾಗವಹಿಸುವಿಕೆಯ ಉತ್ಸವವಾಗಿತ್ತು; ಜನ ಜಾಗೃತಿಯ ಉತ್ಸವವಾಗಿತ್ತು. ಕಾಶ್ಮೀರದ ಜನರು ಈ ಅಭಿವೃದ್ಧಿ ಉತ್ಸವದಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡರು. ಸರ್ಕಾರಿ ಅಧಿಕಾರಿಗಳಿಗೆ ತಲುಪುವುದಕ್ಕೆ ಕಷ್ಟವಾದ, ದುರ್ಗಮವಾದ ರಸ್ತೆಗಳ ಮೂಲಕ, ಪರ್ವತಗಳನ್ನು ಹತ್ತಿ ಇಳಿಯುತ್ತಾ, ಕೆಲವೊಮ್ಮೆ ಒಂದು ದಿನ, ಒಂದೂವರೆ ದಿನ ಕಾಲ್ನಡಿಗೆ ಮಾಡಿ ತಲುಪಬೇಕಾಗುವಂತಹ ದೂರ ದೂರದ ಹಳ್ಳಿಗಳಲ್ಲಿ ‘Back To Village’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎನ್ನುವುದೇ ಒಂದು ದೊಡ್ಡ ಖುಷಿಯ ವಿಚಾರ. ಸದಾ Cross Border ಫೈರಿಂಗ್ ನೆರಳಲ್ಲಿ ಗಡಿ ರೇಖೆಗಳಲ್ಲಿ ಇರುವ ಪಂಚಾಯ್ತಿಗಳ ತನಕ ಕೂಡ ಈ ಅಧಿಕಾರಿಗಳು ಹೋದರು. ಇದಷ್ಟೇ ಅಲ್ಲ; ಶೋಪಿಯಾನ್, ಪುಲ್ವಾಮಾ, ಕುಲಗಾಮ್ ಮತ್ತು ಅನಂತ್ ನಾಗ್ ಜಿಲ್ಲೆಗಳ ಅತಿ ಸೂಕ್ಷ್ಮ ಪ್ರದೇಶಗಳಿಗೆ ಕೂಡ ಅಧಿಕಾರಿಗಳು ಯಾವುದೇ ಭಯವಿಲ್ಲದೆ ತಲುಪಿದರು. ತಮಗೆ ನೀಡಿದ ಸ್ವಾಗತಕ್ಕೆ ಅಧಿಕಾರಿಗಳು ಎಷ್ಟು ಸ್ತಂಬೀಭೂತರಾದರೆಂದರೆ ಅವರುಗಳು ಎರಡು ದಿನಕ್ಕೂ ಅಧಿಕ ಸಮಯ ಹಳ್ಳಿಗಳಲ್ಲಿ ಉಳಿದುಕೊಂಡರು. ಈ ಇಲಾಖೆಗಳಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸುವುದು, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದು, ತಮಗಾಗಿ ಯೋಜನೆಗಳನ್ನು ತಯಾರು ಮಾಡುವುದು ಇವೆಲ್ಲ ಬಹಳ ಆಹ್ಲಾದಕತೆ ನೀಡುವ ವಿಚಾರಗಳು. ಹೊಸ ಸಂಕಲ್ಪ, ಹೊಸ ಉತ್ಸಾಹ ಮತ್ತು ಅದ್ಭುತವಾದ ಫಲಿತಾಂಶಗಳು. ಇಂತಹ ಕಾರ್ಯಕ್ರಮಗಳು ಮತ್ತು ಅವುಗಳಲ್ಲಿ ಜನರ ಭಾಗವಹಿಸುವಿಕೆ ಕಾಶ್ಮೀರದ ನಮ್ಮ ಸೋದರ ಸೋದರಿಯರು ಒಳ್ಳೆಯ ಆಡಳಿತವನ್ನು ಬಯಸುತ್ತಾರೆ ಎನ್ನುವುದನ್ನು ತಿಳಿ ಹೇಳುತ್ತದೆ. “ಅಭಿವೃದ್ದಿಯ ಶಕ್ತಿ, ಬಾಂಬ್ ಬಂದೂಕುಗಳ ಶಕ್ತಿಗಿಂತ ಯಾವಾಗಲೂ ಹೆಚ್ಚಾಗಿರುತ್ತದೆ” ಎನ್ನುವುದನ್ನು ಸಹ ಇದು ಸಾಬೀತು ಪಡಿಸುತ್ತದೆ. ಅಭಿವೃದ್ಧಿಯ ಹಾದಿಯಲ್ಲಿ ದ್ವೇಷವನ್ನು ಹರಡಲು ಬಯಸುವವರು, ಅಡೆತಡೆಗಳನ್ನು ಸೃಷ್ಟಿಸಲು ಬಯಸುವವರು ಎಂದಿಗೂ ತಮ್ಮ ದುಷ್ಟ ಉದ್ದೇಶಗಳಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದು ಕೂಡ ಇದರಿಂದ ಸ್ಪಷ್ಟವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮ ಒಂದು ಕವಿತೆಯಲ್ಲಿ ಶ್ರಾವಣ ಮಾಸದ ಮಹಿಮೆಯನ್ನ
“ಹೊಳಿಗೆ ಮತ್ತ ಮಳಿಗೆ ಆಗ್ಯೇದ್ ಲಗ್ನ , ಅದರಾಗ ಭೂಮಿ ಮಗ್ನ” ಎಂದು ವಿವರಿಸ್ತಾರೆ.
ಇದರ ಅರ್ಥ ‘ಸುರಿತಿರೋ ಮಳೆಗೂ ನೀರಿನ ಹರಿವಿಗೂ ಆಗೋ ಬೆಸುಗೆ ತುಂಬಾ ವಿಶಿಷ್ಟ, ಮತ್ತು ಅದರ ಸೌಂದರ್ಯ ವನ್ನ ನೋಡುವುದರಲ್ಲಿ ಭೂಮಿ ಮಗ್ನವಾಗಿದೆ’ ಅಂತ.
ಇಡೀ ಭಾರತ ದೇಶದಲ್ಲಿ ಬೇರೆ ಬೇರೆ ಸಂಸ್ಕೃತಿ ಮತ್ತು ಭಾಷೆಯ ಜನರು ಶ್ರಾವಣ ಮಾಸವನ್ನು ತಮ್ಮ ತಮ್ಮ ರೀತಿಯಲ್ಲಿ celebrate ಮಾಡುತ್ತಾರೆ. ಇಂತಹ ಋತುವಿನಲ್ಲಿ ನಾವು ನಮ್ಮ ಅಕ್ಕಪಕ್ಕದಲ್ಲಿ ನೋಡಿದಾಗ ಭೂಮಿ ಹಸಿರಿನ ಹೊದಿಕೆಯನ್ನು ಹೊದ್ದುಕೊಂಡಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಎಲ್ಲಾ ಕಡೆಯೂ ಒಂದು ಹೊಸ ಶಕ್ತಿಯ ಸಂಚಾರ ಪ್ರಾರಂಭವಾಗುತ್ತದೆ. ಇಂತಹ ಪವಿತ್ರವಾದ ತಿಂಗಳಿನಲ್ಲಿ ಎಷ್ಟೋ ಜನ ಭಕ್ತರು ಕಾವಡಿ ಯಾತ್ರೆ ಮತ್ತು ಅಮರನಾಥ್ ಯಾತ್ರೆಗೆ ಹೋಗುತ್ತಾರೆ, ಮತ್ತೆ ಕೆಲವು ಜನರು ನಿಯಮಿತವಾಗಿ ಉಪವಾಸ ಮಾಡುತ್ತಾರೆ ಮತ್ತು ಉತ್ಸುಕತೆಯಿಂದ ಜನ್ಮಾಷ್ಟಮಿ ಮತ್ತು ನಾಗಪಂಚಮಿಯಂತಹ ಹಬ್ಬಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಇದೇ ಸಮಯದಲ್ಲಿ ಸೋದರ-ಸೋದರಿಯರ ಪ್ರೇಮದ ಸಂಕೇತವಾದ ರಕ್ಷಾಬಂಧನದ ಹಬ್ಬ ಕೂಡ ಬರುತ್ತದೆ. ಈ ಬಾರಿ ಅಮರನಾಥ್ ಯಾತ್ರೆಗೆ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಎಲ್ಲಕ್ಕಿಂತ ಹೆಚ್ಚು ಭಕ್ತರು ಹೋಗುತ್ತಿದ್ದಾರೆ ಎಂದು ಕೇಳಿ ಶ್ರಾವಣ ಮಾಸದ ಬಗ್ಗೆ ಮಾತನಾಡುತ್ತಿರುವ ಈ ಸಮಯದಲ್ಲಿ ನಿಮಗೆ ಬಹಳ ಖುಷಿಯೆನಿಸಬಹುದು. ಜುಲೈ ಒಂದರಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಪವಿತ್ರವಾದ ಅಮರನಾಥ ಗುಹೆಯ ದರ್ಶನ ಮಾಡಿದ್ದಾರೆ. 2015 ರ ಈ ಯಾತ್ರೆಯಲ್ಲಿ 60 ದಿನಗಳಲ್ಲಿ ಎಷ್ಟು ಜನ ಯಾತ್ರಾರ್ಥಿಗಳು ಭಾಗಿಯಾಗಿದ್ದರೋ ಅದಕ್ಕಿಂತ ಹೆಚ್ಚು ಜನರು ಈ ಬಾರಿ ಬರೀ 28 ದಿನಗಳಲ್ಲಿ ಭಾಗಿಯಾಗಿದ್ದಾರೆ.
ಅಮರನಾಥ ಯಾತ್ರೆಯ ಸಫಲತೆಗಾಗಿ ನಾನು ವಿಶೇಷವಾಗಿ ಜಮ್ಮು-ಕಾಶ್ಮೀರದ ಜನತೆ ಮತ್ತು ಅವರ ಅತಿಥಿ ಸತ್ಕಾರದ ಬಗೆಯನ್ನು ಸಹ ಪ್ರಶಂಸಿಸುತ್ತೇನೆ. ಯಾತ್ರೆಯನ್ನು ಮುಗಿಸಿ ಬರುವವರಿಗೆ ಆ ರಾಜ್ಯದ ಜನರ ಅಪ್ಯಾಯತೆಯ ಮತ್ತು ಅವರೂ ತಮ್ಮವರು ಎನ್ನುವ ಭಾವನೆಯ ಅನುಭವ ಕೂಡ ಆಗುತ್ತದೆ. ಈ ಎಲ್ಲಾ ವಿಷಯಗಳೂ ಭವಿಷ್ಯದಲ್ಲಿ ಪ್ರವಾಸೋದ್ಯಮಕ್ಕೆ ತುಂಬಾ ಲಾಭದಾಯಕವಾಗಿ ಪರಿಣಮಿಸುವವು. ಉತ್ತರಾಖಂಡದಲ್ಲಿ ಕೂಡ ಚಾರ್ ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ಒಂದೂವರೆ ತಿಂಗಳ ಒಳಗೆ 8 ಲಕ್ಷಕ್ಕೂ ಅಧಿಕ ಭಕ್ತರು ಕೇದಾರನಾಥ ಕ್ಷೇತ್ರದ ದರ್ಶನ ಮಾಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. 2013 ರಲ್ಲಿ ಉಂಟಾದ ಭೀಕರ ದುರಂತದ ನಂತರ ಮೊದಲನೇ ಬಾರಿ ಇಷ್ಟೊಂದು ದಾಖಲೆಯ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ. ಮಾನ್ಸೂನ್ ಸಮಯದಲ್ಲಿ ಸೌಂದರ್ಯವನ್ನು ಹೊರಸೂಸುವ ದೇಶದ ಆ ಭಾಗಗಳಿಗೆ ನೀವು ಖಂಡಿತವಾಗಿಯೂ ಹೋಗಬೇಕೆಂದು ನಾನು ನಿಮ್ಮೆಲ್ಲರಲ್ಲೂ ಮನವಿ ಮಾಡುತ್ತೇನೆ. ನಮ್ಮ ದೇಶದ ಈ ಸೌಂದರ್ಯವನ್ನು ನೋಡುವುದಕ್ಕೆ ಮತ್ತು ನಮ್ಮ ದೇಶದ ಜನರ ಮನೋಭಾವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರವಾಸ ಮತ್ತು ಯಾತ್ರೆಗಿಂತ ದೊಡ್ಡ ಶಿಕ್ಷಕ ಬಹುಶಃ ಯಾರೂ ಇಲ್ಲ.
ಶ್ರಾವಣದ ಈ ಸುಂದರ ಮತ್ತು ಜೀವಭರಿತ ತಿಂಗಳಿನಲ್ಲಿ ನಿಮ್ಮೆಲ್ಲರಲ್ಲಿ ಹೊಸ ಶಕ್ತಿ, ಹೊಸ ಆಶೆ ಮತ್ತು ಹೊಸ ಭರವಸೆಗಳ ಸಂಚಾರವಾಗಲಿ ಎನ್ನುವ ಶುಭಾಶಯಗಳನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಅದೇ ರೀತಿಯಾಗಿ ಆಗಸ್ಟ್ ತಿಂಗಳು “ಭಾರತ ಬಿಟ್ಟು ತೊಲಗಿ” ನೆನಪನ್ನು ತರುತ್ತದೆ. ನೀವೆಲ್ಲ ಆಗಸ್ಟ್ 15 ಕ್ಕೆ ಸ್ವಲ್ಪ ವಿಶೇಷ ರೀತಿಯ ತಯಾರಿ ಮಾಡಬೇಕು ಎಂದು ನಾನು ಬಯಸುತ್ತೇನೆ. ಸ್ವಾತಂತ್ರ್ಯದ ಈ ಹಬ್ಬವನ್ನು ಆಚರಿಸಲು ಹೊಸ ವಿಧಾನವನ್ನು ಹುಡುಕಿ. ಜನರ ಭಾಗವಹಿಸುವಿಕೆ ಹೆಚ್ಚಾಗಲಿ. ಆಗಸ್ಟ್ 15 ನ್ನು ಲೋಕೋತ್ಸವವನ್ನಾಗಿ ಹೇಗೆ ಮಾಡಬೇಕು? ಜನೋತ್ಸವವನ್ನಾಗಿ ಹೇಗೆ ಮಾಡಬೇಕು? ಇದರ ಚಿಂತನೆಯನ್ನು ನೀವೆಲ್ಲರೂ ಮಾಡಿ. ಮತ್ತೊಂದೆಡೆ ದೇಶದ ಬಹಳಷ್ಟು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ಭಾಗಗಳಲ್ಲಿ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ – ಇದು ಅಂತಹ ಸಮಯ. ಪ್ರವಾಹದಿಂದ ವಿವಿಧ ಪ್ರಕಾರದ ನಷ್ಟ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆ ಸೇರಿ ಸಂಕಷ್ಟದಲ್ಲಿ ಇರುವ ಜನರಿಗೆ ಎಲ್ಲಾ ರೀತಿಯ ಸಹಾಯ ಸಿಗುವಂತೆ ಮಾಡುವ ಕೆಲಸವನ್ನು ಬಹಳ ತ್ವರಿತವಾಗಿ ಮಾಡುತ್ತದೆ ಎಂದು ನಾನು ಪ್ರವಾಹದ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲಾ ಜನರಿಗೂ ಆಶ್ವಾಸನೆ ನೀಡುತ್ತೇನೆ. ಹಾಗೆಯೇ ನಾವು ಟಿವಿ ನೋಡಿದಾಗ ಒಂದೇ ಬಗೆಯ ಮಳೆಯ ಚಿತ್ರಣ ಕಾಣಿಸುತ್ತವೆ – ಎಲ್ಲಾ ಕಡೆಯೂ ಪ್ರವಾಹ, ತುಂಬಿಕೊಂಡಿರುವ ನೀರು, ಟ್ರಾಫಿಕ್ ಜಾಮ್. ಮಾನ್ಸೂನ್ ನ ಎರಡನೇ ಚಿತ್ರ – ಅದರಲ್ಲಿ ಸಂತೋಷಗೊಂಡಿರುವ ನಮ್ಮ ರೈತ, ಪಕ್ಷಿಗಳ ಕೂಗು, ಹರಿಯುತ್ತಿರುವ ಝರಿ, ಹಸಿರಿನ ಹೊದಿಕೆ ಹೊದ್ದ ಭೂಮಿ – ಇವನ್ನೆಲ್ಲ ನೋಡಲು ನೀವು ಸ್ವತಃ ನಿಮ್ಮ ಕುಟುಂಬದವರೊಂದಿಗೆ ಹೊರಗೆ ಬರಬೇಕಾಗುತ್ತದೆ. ಮಳೆ, ತಾಜಾತನ ಮತ್ತು ಖುಷಿ ಅಂದರೆ – Freshness ಮತ್ತು Happiness ಇವೆರಡನ್ನೂ ತನ್ನ ಜೊತೆ ತರುತ್ತದೆ. ಈ ಮಾನ್ಸೂನ್ ನಿಮ್ಮೆಲ್ಲರಿಗೂ ಸತತವಾಗಿ ಖುಷಿಯನ್ನು ನೀಡುತ್ತಿರಲಿ, ನೀವೆಲ್ಲರೂ ಆರೋಗ್ಯವಾಗಿರಿ ಎನ್ನುವುದು ನನ್ನ ಆಶಯ.
ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತನ್ನು ‘ ಎಲ್ಲಿ ಪ್ರಾರಂಭಿಸುವುದು, ಎಲ್ಲಿ ನಿಲ್ಲಿಸುವುದು ಎನ್ನುವುದು ಬಹಳ ಕಷ್ಟದ ಕೆಲಸ ಎನ್ನಿಸುತ್ತದೆ. ಆದರೆ ಸಮಯದ ಮಿತಿ ಇರುತ್ತದೆಯಲ್ಲವೇ? ಒಂದು ತಿಂಗಳ ನಿರೀಕ್ಷೆಯ ನಂತರ ಮತ್ತೆ ಬರುತ್ತೇನೆ. ಮತ್ತೆ ಭೇಟಿಯಾಗುತ್ತೇನೆ. ತಿಂಗಳು ಪೂರ್ತಿ ನೀವು ನನಗೆ ಬಹಳಷ್ಟು ವಿಷಯಗಳನ್ನು ಹೇಳುತ್ತಾ ಇರಿ. ಮುಂದಿನ ಮನದ ಮಾತು ಕಾರ್ಯಕ್ರಮದಲ್ಲಿ ನಾನು ಅವುಗಳನ್ನು ಜೋಡಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಯುವ ಮಿತ್ರರಿಗೆ ಮತ್ತೆ ನೆನಪು ಮಾಡುತ್ತಿದ್ದೇನೆ – ನೀವು ಕ್ವಿಜ್ ಕಾಂಪಿಟಿಷನ್ ನ ಅವಕಾಶ ಬಿಡಬೇಡಿ. ಶ್ರೀಹರಿಕೋಟಾಗೆ ಹೋಗಲು ಸಿಗುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.
ನಿಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಒಂದು ಸುದೀರ್ಘ ವಿರಾಮದ ನಂತರ ಮತ್ತೊಮ್ಮೆ ನಿಮ್ಮೊಂದಿಗೆ ಮನದ ಮಾತು, ಜನರ ಮಾತು, ಜನಮಾನಸದ ಮಾತು, ಜನರ ಮನದ ಮಾತಿನ ಶೃಂಖಲೆಯನ್ನು ಆರಂಭಿಸುತ್ತಿದ್ದೇವೆ. ಚುನಾವಣೆಯ ಓಡಾಟದಲ್ಲಿ ಬಹಳಷ್ಟು ವ್ಯಸ್ತನಾಗಿದ್ದರೂ ಮನದ ಮಾತಿನ ಮೋಜು ನನಗೆ ಸಿಗುತ್ತಿರಲಿಲ್ಲ. ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ನಮ್ಮವರೊಂದಿಗೆ ಕುಳಿತು, ಆಹ್ಲಾದಕರವಾದ ವಾತಾವರಣದಲ್ಲಿ 130 ಕೋಟಿ ದೇಶಬಾಂಧವರ ಕುಟುಂಬದ ಒಬ್ಬ ಸದಸ್ಯನಂತೆ ಎಷ್ಟೋ ಮಾತುಗಳನ್ನು ಕೇಳುತ್ತಿದ್ದೆವು, ಮತ್ತೆ ಮತ್ತೆ ಮಾತಾಡುತ್ತಿದ್ದೆವು, ಕೆಲವೊಮ್ಮೆ ನಮ್ಮ ಮಾತುಗಳೇ ನಮ್ಮವರಿಗೆ ಪ್ರೇರಣಾದಾಯಕವಾಗುತ್ತಿದ್ದವು. ಈ ಅವಧಿ ಹೇಗಿತ್ತು, ಹೇಗೆ ಸಾಗಿತ್ತು ಎಂದು ನೀವು ಊಹಿಸಬಹುದೇ . .. ಭಾನುವಾರ, ಕೊನೇ ಭಾನುವಾರ – 11 ಗಂಟೆಗೆ, ನನಗೆ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು, ನಿಮಗೂ ಹಾಗೇ ಅನ್ನಿಸುತ್ತಿತ್ತಲ್ಲವೇ! ಖಂಡಿತ ಅನ್ನಿಸಿರಬೇಕು. ಬಹುಶಃ ಇದು ಒಂದು ನಿರ್ಜೀವ ಕಾರ್ಯಕ್ರಮವೇನೂ ಆಗಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಜೀವಂತಿಕೆ ಇತ್ತು, ಸ್ವಂತಿಕೆ ಇತ್ತು, ಮನಸ್ಸುಗಳು ಮೇಳೈಸಿದ್ದವು, ಹೃದಯಗಳು ಒಂದಾಗಿದ್ದವು. ಹಾಗಾಗಿ, ಈ ಮಧ್ಯದಲ್ಲಿ ಕಳೆದಂತಹ ಸಮಯ ನನಗೆ ಬಹಳ ಕಠಿಣವೆನಿಸಿತು. ನಾನು ಪ್ರತಿ ಕ್ಷಣವೂ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ನಾನು ಮನದ ಮಾತನ್ನಾಡುವಾಗ, ನಾನು ಮಾತಾಡಿದರೂ, ಬಹುಶಃ ಶಬ್ದಗಳು ನನ್ನವಾದರೂ, ಧ್ವನಿ ನನ್ನದಾದರೂ, ಕಥೆ ನಿಮ್ಮದು, ಪುರುಷಾರ್ಥ ನಿಮ್ಮದು, ಪರಾಕ್ರಮ ನಿಮ್ಮದು. ನಾನು ಕೇವಲ, ನನ್ನ ಶಬ್ದಗಳನ್ನ, ನನ್ನ ಧ್ವನಿಯನ್ನು ಉಪಯೋಗಿಸುತ್ತಿದ್ದೆ ಹಾಗೂ ಇದೇ ಕಾರಣದಿಂದಲೇ ನಾನು ಈ ಕಾರ್ಯಕ್ರಮವನ್ನಲ್ಲ ಬದಲಿಗೆ ನಿಮ್ಮನ್ನು miss ಮಾಡಿಕೊಳ್ಳುತ್ತಿದ್ದೆ. ಒಂದು ರೀತಿಯಲ್ಲಿ ಏಕಾಂಗಿತನ ಆವರಿಸಿತ್ತು. ಒಮ್ಮೆಯಂತೂ ಚುನಾವಣೆ ಮುಗಿದ ತಕ್ಷಣವೇ ನಿಮ್ಮ ಬಳಿಗೆ ಬರಬೇಕೆಂದೆನಿಸಿತ್ತು. ಆದರೆ, ಭಾನುವಾರದಂದು ಬರುವ ಆ ಕ್ರಮ ತಪ್ಪಿಸಬಾರದೆಂದು ಮತ್ತೆ ಅನಿಸಿತು. ಆದರೆ, ಈ ಭಾನುವಾರ ನನ್ನನ್ನು ಬಹಳ ಕಾಯುವಂತೆ ಮಾಡಿದೆ. ಆದರೆ, ಕೊನೆಗೂ ಆ ಅವಕಾಶ ದೊರೆಯಿತು. ಒಂದು ಕುಟುಂಬದ ವಾತಾವರಣದಲ್ಲಿ ‘ಮನದಾಳದ ಮಾತು’, ಚಿಕ್ಕ-ಪುಟ್ಟ, ಸರಳ ಮಾತುಗಳು, ಜೀವನದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಒಂದು ರೀತಿಯಲ್ಲಿ ಈ ಪ್ರಕ್ರಿಯೆ ಒಂದು ಹೊಸ ಹುರುಪಿಗೆ ಜನ್ಮ ನೀಡುತ್ತಾ, ಒಂದು ನವ ಭಾರತದ ಹುಮ್ಮಸಿಗೆ ಸಾಮರ್ಥ್ಯ ನೀಡುತ್ತಾ ನಮ್ಮ ಮಾತುಕತೆ ಮುಂದುವರೆಯಲಿ.
ಕಳೆದ ಕೆಲ ತಿಂಗಳಲ್ಲಿ ಬಹಳಷ್ಟು ಸಂದೇಶಗಳು ಬಂದಿವೆ. ಅದರಲ್ಲಿ ಜನರು ಮನದ ಮಾತನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ನಾನಿದನ್ನು ಓದಿದಾಗ ಮತ್ತು ಕೇಳಿದಾಗ ನನಗೆ ಬಹಳ ಆನಂದವೆನ್ನಿಸುತ್ತದೆ, ಆತ್ಮೀಯತೆಯ ಭಾವ ಮೂಡುತ್ತದೆ. ಕೆಲವೊಮ್ಮೆ ನನಗೆ ಇದು ಸ್ವ ದಿಂದ ಸಮಷ್ಟಿಯ ಯಾತ್ರೆಯಂತೆ ಭಾಸವಾಗುತ್ತದೆ. ಇದು ನನ್ನ ಅಹಂ ದಿಂದ ವಯಂ ದ ಯಾತ್ರೆಯಾಗಿದೆ. ನಿಮ್ಮೊಂದಿಗಿನ ಈ ಮೌನ ಸಂವಾದ ನನಗೆ ಒಂದು ರೀತಿಯಲ್ಲಿ ಆಧ್ಯಾತ್ಮಿಕ ಯಾತ್ರೆಯ ಅನುಭೂತಿಯ ಅಂಶವಾಗಿದೆ. ಚುನಾವಣೆಯ ಗಡಿಬಿಡಿಯಲ್ಲಿ ನಾನು ಕೇದಾರನಾಥಕ್ಕೆ ಏಕೆ ಹೋದೆ ಎಂದು ಬಹಳಷ್ಟು ಜನರು ನನ್ನ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಹಕ್ಕಿದು. ನಿಮ್ಮ ಜಿಜ್ಞಾಸೆ ನನಗೆ ಅರ್ಥವಾಗುತ್ತದೆ. ಆದರೆ ನನ್ನ ಭಾವನೆಗಳನ್ನು ನಿಮಗೆ ತಲುಪಿಸಬೇಕೆಂದು ನನಗೂ ಅನ್ನಿಸುತ್ತದೆ. ಆದರೆ ನನಗೆ ಇಂದು ನಾನು ಆ ದಿಕ್ಕಿನತ್ತ ಹೊರಟರೆ ಮನದ ಮಾತಿನ ರೂಪವೇ ಬದಲಾಗುತ್ತದೆ ಎಂದು ನನಗೆ ಅನಿಸುತ್ತದೆ. ಆದ್ದರಿಂದಲೇ ಚುನಾವಣೆಯ ಗಡಿಬಿಡಿ, ವಿಜಯ-ಪರಾಜಯದ ಅನುಮಾನ, ಪೋಲಿಂಗ್ ಸಹ ಇನ್ನೂ ಬಾಕಿ ಇತ್ತು ಮತ್ತು ನಾನು ಹೊರಟುಬಿಟ್ಟೆ. ಹೆಚ್ಚಿನ ಜನರು ಅದಕ್ಕೂ ರಾಜಕೀಯದ ಅರ್ಥ ಕಲ್ಪಿಸಿದರು. ಆದರೆ ನನಗೆ ನನ್ನ ಸಾಕ್ಷಾತ್ಕಾರದ ಅವಕಾಶ ಅದಾಗಿತ್ತು. ಒಂದು ರೀತಿಯಲ್ಲಿ ನಾನು ನನ್ನನ್ನೇ ಭೇಟಿಯಾಗಲು ಹೊರಟಿದ್ದೆ. ಇನ್ನೂ ಹೆಚ್ಚಿನ ವಿಷಯ ಇಂದು ಹೇಳಲ್ಲ ಆದರೆ ಮನದ ಮಾತಿನ ಈ ಅಲ್ಪವಿರಾಮದ ಕಾಲಘಟ್ಟವನ್ನು ತುಂಬುವಂಥ ಕೆಲಸಕ್ಕೆ ಕೇದಾರನಾಥದ ಆ ಗುಹೆಯಲ್ಲಿ ಅವಕಾಶ ಲಭಿಸಿತು ಎಂದು ಮಾತ್ರ ಹೇಳಬಲ್ಲೆ. ಉಳಿದಂತೆ ನಿಮ್ಮ ಜಿಜ್ಞಾಸೆಗೆ ಬಿಟ್ಟಿದ್ದು – ಒಂದೊಮ್ಮೆ ಆ ಬಗ್ಗೆಯೂ ಚರ್ಚೆ ಮಾಡುವೆ ಎಂದುಕೊಳ್ಳುತ್ತೇನೆ. ಯಾವಾಗ ಮಾತನಾಡುವೆ ಎಂದು ಹೇಳಲಾಗದು, ಆದರೆ ಖಂಡಿತ ಮಾತನಾಡುವೆ, ಏಕೆಂದರೆ ನಿಮಗೆ ನನ್ನ ಮೇಲೆ ಹಕ್ಕಿದೆ. ಕೇದಾರದ ವಿಷಯಗಳನ್ನು ತಿಳಿದುಕೊಳ್ಳಲು ಜನರು ಹೇಗೆ ಆಸಕ್ತಿ ತೋರಿದ್ದಾರೋ ಹಾಗೆಯೇ ಸಕಾರಾತ್ಮಕ ವಿಷಯಗಳಿಗೆ ಶಕ್ತಿಯನ್ನು ತುಂಬುವಂತಹ ನಿಮ್ಮ ಪ್ರಯತ್ನ ನಿಮ್ಮ ಮಾತಿನಲ್ಲಿ ನಿರಂತರವಾಗಿ ನನಗೆ ಕಾಣಿಸುತ್ತದೆ. ಮನದ ಮಾತಿಗಾಗಿ ಬರುವಂತಹ ಪತ್ರಗಳು, ಸಿಗುವ ಇನ್ಪುಟ್ ಅವು ನಿತ್ಯದ ಸರ್ಕಾರೀ ಕಾರ್ಯಕಲಾಪಗಳಿಗಿಂತ ಭಿನ್ನವಾಗಿರುತ್ತದೆ. ಒಂದು ರೀತಿ ನಿಮ್ಮ ಪತ್ರಗಳು ನನಗೆ ಪ್ರೇರಣಾದಾಯಕವಾದರೆ ಕೆಲವೊಮ್ಮೆ ಶಕ್ತಿಯನ್ನು ನೀಡುತ್ತವೆ. ಒಮ್ಮೊಮ್ಮೆ ನನ್ನ ಆಲೋಚನಾ ಲಹರಿಗೆ ತೀವ್ರತೆಯನ್ನು ನೀಡುವಂತಹ ಕೆಲಸವನ್ನು ನಿಮ್ಮ ಕೆಲ ಶಬ್ದಗಳು ಮಾಡುತ್ತವೆ. ಜನರು, ದೇಶ ಮತ್ತು ಸಮಾಜ ಎದುರಿಸುತ್ತಿರುವ ಕೆಲ ಸವಾಲುಗಳನ್ನು ಮುಂದಿಡುತ್ತಾರೆ ಜೊತೆಗೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ. ಜನರು ಪತ್ರಗಳಲ್ಲಿ ಸಮಸ್ಯೆಗಳನ್ನು ಚರ್ಚಿಸುತ್ತಾರೆ ಆದರೆ ಯಾವುದಾದರೂ ಕಲ್ಪನೆ ಇಲ್ಲವೆ ಸಲಹೆ ಮೂಲಕ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಪರಿಹಾರವನ್ನೂ ತಿಳಿಸುವುದು ವಿಶೇಷವಾಗಿದೆ. ಯಾರಾದರೂ ಸ್ವಚ್ಛತೆ ಬಗ್ಗೆ ಬರೆಯುತ್ತಾರೆ ಎಂದರೆ ಮಾಲಿನ್ಯತೆ ಬಗ್ಗೆ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾರೆ. ಆದರೆ ಸ್ವಚ್ಛತೆಯನ್ನು ಕಾಪಾಡುವ ಪ್ರಯತ್ನಗಳ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಾರೆ. ಪರಿಸರದ ಚರ್ಚೆಯನ್ನು ಮಾಡಿದಾಗ ಅದರ ನೋವಂತೂ ಅನುಭವವಾಗುತ್ತದೆ ಆದರೆ ಅದರ ಜೊತೆಗೆ ಸ್ವಂತ ಪ್ರಯತ್ನದ ಕುರಿತೂ ತಿಳಿಸುತ್ತಾರೆ. ತಾವು ನೋಡಿದ ಪ್ರಯೋಗಗಳ ಕುರಿತು ಹೇಳುತ್ತಾರೆ ಮತ್ತು ತಮ್ಮ ಮನದಲ್ಲಿರುವ ಚಿತ್ರಣವನ್ನೂ ಬಿಂಬಿಸುತ್ತಾರೆ. ಅಂದರೆ ಒಂದು ರೀತಿಯಲ್ಲಿ ಸಮಾಜವ್ಯಾಪಿ ಸಮಸ್ಯೆಗೆ ಪರಿಹಾರ ಹೇಗಿರಬೇಕು ಎಂಬುದರ ನೋಟ ನಿಮ್ಮ ಮಾತಿನಲ್ಲಿ ನನಗೆ ಕಂಡುಬರುತ್ತದೆ. ಮನದ ಮಾತು ದೇಶ ಮತ್ತು ಸಮಾಜಕ್ಕೆ ಒಂದು ಕನ್ನಡಿಯಂತಿದೆ. ಇದು ನಮಗೆ ದೇಶ ಬಾಂಧವರ ಆಂತರಿಕ ಸಾಮರ್ಥ್ಯ, ಶಕ್ತಿ ಮತ್ತು ಪ್ರತಿಭೆಯ ಕೊರತೆ ಇಲ್ಲ. ಆ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಒಗ್ಗೂಡಿಸುವ, ಅವಕಾಶಗಳನ್ನು ಒದಗಿಸುವ, ಅದನ್ನು ಕಾರ್ಯರೂಪಕ್ಕೆ ತರುವ ಅವಶ್ಯಕತೆಯಿದೆ. ದೇಶದ ಅಭಿವೃದ್ಧಿಗಾಗಿ ದೇಶದ 130 ಕೋಟಿ ಜನರು ಸಾಮರ್ಥ್ಯಥ್ರ್ಯದೊಂದಿಗೆ ಸಕ್ರಿಯವಾಗಿ ತೊಡಗಲು ಬಯಸುತ್ತಾರೆ ಎಂಬುದನ್ನು ಮನದ ಮಾತು ತಿಳಿಸುತ್ತದೆ. ಮನದ ಮಾತಿನಲ್ಲಿ ನನಗೆ ಎಷ್ಟೊಂದು ಪತ್ರಗಳು ಬರುತ್ತವೆ, ಎಷ್ಟೊಂದು ದೂರವಾಣಿ ಕರೆಗಳು ಬರುತ್ತವೆ. ಎಷ್ಟೊಂದು ಸಂದೇಶಗಳು ದೊರೆಯುತ್ತವೆ ಆದರೆ ದೂರುಗಳು ಬಹಳ ಕಡಿಮೆಯೇ ಇರುತ್ತವೆ. ಆದರೆ ಯಾರಾದರೂ ಏನಾದರೂ ಬೇಕೆಂದು ಕೇಳಿರುವುದು ಅದರಲ್ಲೂ ತಮ್ಮ ಸ್ವಾರ್ಥಕ್ಕಾಗಿ ಕೇಳಿರುವುದು ಕಳೆದ 5 ವರ್ಷಗಳಲ್ಲಿ ನನ್ನ ಗಮನಕ್ಕೆ ಬಂದಿಲ್ಲ. ದೇಶದ ಪ್ರಧಾನಮಂತ್ರಿಗೆ ಪತ್ರ ಬರೆದರೂ ತನಗಾಗಿ ಏನೂ ಕೇಳುವುದಿಲ್ಲ ಎಂಬುದನ್ನು ನೀವು ಊಹಿಸಬಹುದೇ! ಅಂದರೆ ದೇಶದ ಕೋಟ್ಯಾಂತರ ಜನರ ಭಾವನೆ ಎಷ್ಟು ಮಹತ್ತರವಾದದ್ದು ಎಂಬುದನ್ನು ನೀವೇ ಊಹಿಸಿ. ನಾನು ಈ ವಿಷಯಗಳನ್ನು ವಿಶ್ಲೇಷಣೆ ಮಾಡಿದಾಗ ನನ್ನ ಮನಸ್ಸಿಗೆ ಎಷ್ಟು ಸಂತೋಷವಾಗುವುದು ನನಗೆ ಎಷ್ಟೊಂದು ಶಕ್ತಿ ದೊರೆಯುತ್ತದೆ ಎಂಬುದನ್ನು ನೀವೇ ಕಲ್ಪಿಸಿಕೊಳ್ಳಬಹುದು. ನನ್ನನ್ನು ನೀವೇ ಮುನ್ನಡೆಸುತ್ತೀರಿ, ನನಗೆ ವೇಗವನ್ನು ನೀಡುತ್ತೀರಿ, ಕ್ಷಣ ಕ್ಷಣವೂ ಜೀವಂತಿಕೆಯನ್ನು ತುಂಬುತ್ತಿದ್ದೀರಿ ಎಂಬ ಕಲ್ಪನೆ ನಿಮಗಿಲ್ಲ. ಇದೇ ಬಾಂಧವ್ಯವನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೆ. ಇಂದು ನನ್ನ ಮನಸ್ಸು ಸಂಭ್ರಮಿಸುತ್ತಿದೆ. ನಾನು ಕೊನೆಯ ಹಂತದಲ್ಲಿ 3-4 ತಿಂಗಳುಗಳ ನಂತರ ಮತ್ತೆ ಭೇಟಿಯಾಗೋಣ ಎಂದಾಗ ಜನರು ಅದರಲ್ಲೂ ರಾಜಕೀಯ ಅರ್ಥವನ್ನು ಹುಡುಕಿದ್ದರು. ಮೋದಿಜಿ ಅವರಿಗೆ ಎಷ್ಟು ಆತ್ಮ ವಿಶ್ವಾಸವಿದೆ, ಎಷ್ಟು ನಂಬಿಕೆ ಇದೆ ಎಂದು ಜನರು ಅನ್ನುತ್ತಿದ್ದರು. ಆತ್ಮ ವಿಶ್ವಾಸ ಮೋದಿಯದ್ದಲ್ಲ. ಈ ವಿಶ್ವಾಸ ನಿಮ್ಮ ವಿಶ್ವಾಸದ ಬುನಾದಿಯಾಗಿದೆ. ನೀವೇ ವಿಶ್ವಾಸದ ರೂಪ ಧರಿಸಿದ್ದೀರಿ. ಆದ್ದರಿಂದಲೇ ಕೊನೆಯ ಮನದ ಮಾತಿನಲ್ಲಿ ಕೆಲ ತಿಂಗಳ ನಂತರ ಮತ್ತೆ ಭೇಟಿಯಾಗೋಣ ಎಂದು ಸಹಜವಾಗಿಯೇ ಹೇಳಿದ್ದೆ. ನಿಜ ಹೇಳಬೇಕೆಂದರೆ ನಾನು ಬಂದಿಲ್ಲ ನೀವು ನನ್ನನ್ನು ಕರೆತಂದಿರುವಿರಿ. ನೀವೇ ನನ್ನನ್ನು ಆರಿಸಿದ್ದೀರಿ. ನೀವೇ ನನಗೆ ಮತ್ತೊಮ್ಮೆ ಮಾತನಾಡುವ ಅವಕಾಶ ನೀಡಿದ್ದೀರಿ. ಇದೇ ಭಾವನೆಯೊಂದಿಗೆ ಬನ್ನಿ ನಮ್ಮ ಮನದ ಮಾತನ್ನು ಮುಂದುವರೆಸೋಣ.
ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದಾಗ ಅದರ ವಿರೋಧ ರಾಜನೈತಿಕ ಪರಿಧಿಗೆ ಸೀಮಿತವಾಗಿರಲಿಲ್ಲ. ರಾಜಕೀಯ ಧುರೀಣರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಜೈಲಿನ ಸಲಾಕೆಗಳವರೆಗೆ ಚಳುವಳಿ ಹಬ್ಬಿರಲಿಲ್ಲ. ಜನರ ಮನದಲ್ಲಿ ಆಕ್ರೋಶವಿತ್ತು. ಕಳೆದುಹೋದ ಪ್ರಜಾಪ್ರಭುತ್ವದ ತಪನವಿತ್ತು. ಹಗಲು ರಾತ್ರಿ ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಿದ್ದರೆ ಹಸಿವೆ ಏನೆಂಬುದು ಅರ್ಥವಾಗುವುದಿಲ್ಲ. ಹಾಗೆಯೇ ಸಾಮಾನ್ಯ ಜೀವನದಲ್ಲಿ ಪ್ರಜಾಪ್ರಭುತ್ವದ ಅಧಿಕಾರದ ಅನುಕೂಲಗಳೇನು ಎಂಬುದು ಪ್ರಜಾಪ್ರಭುತ್ವದ ಅಧಿಕಾರ ಕಿತ್ತುಕೊಂಡಾಗ ಅರ್ಥವಾಗುತ್ತದೆ. ಆಪತ್ಕಾಲದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಜೀವನದುದ್ದಕ್ಕೂ ತನ್ನದೇನನ್ನೋ ಕಿತ್ತುಕೊಂಡಂತಹ ಅನುಭವವಾಗುತ್ತಿತ್ತು. ತಾನು ಜೀವನದುದ್ದಕ್ಕೂ ಬಳಸದೇ ಇದ್ದುದನ್ನೂ ಕಿತ್ತುಕೊಂಡರೆ ಎಂಬ ನೋವು ಅವನ ಮನದಲ್ಲಿತ್ತು. ಭಾರತದ ಸಂವಿಧಾನ ಕೆಲ ವ್ಯವಸ್ಥೆ ಮಾಡಿರುವುದರಿಂದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಸಮಾಜ ವ್ಯವಸ್ಥೆಯನ್ನು ಮುನ್ನಡೆಸಲು ಸಂವಿಧಾನದ ಅವಶ್ಯಕತೆಯಿದೆ. ಕಾಯ್ದೆ ಕಾನೂನು, ನಿಯಮಗಳ ಅವಶ್ಯಕತೆಯಿದೆ. ಅಧಿಕಾರ ಮತ್ತು ಕರ್ತವ್ಯದ ಮಾತೂ ನಡೆಯುತ್ತದೆ ಆದರೆ ಕಾನೂನು ಮತ್ತು ನಿಯಮಗಳ ಹೊರತಾಗಿ ಪ್ರಜಾಪ್ರಭುತ್ವವೆಂಬುದು ನಮ್ಮ ಸಂಸ್ಕಾರ, ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವ ನಮ್ಮ ಬಳುವಳಿಯಾಗಿದೆ ಎಂದು ಭಾರತ ಹೆಮ್ಮೆಯಿಂದ ಹೇಳಬಲ್ಲುದು. ಈ ಬಳುವಳಿಯೊಂದಿಗೆಯೇ ನಾವು ಬೆಳೆದಿದ್ದೇವೆ. ಆದ್ದರಿಂದಲೇ ಅದರ ಕೊರತೆ ದೇಶದ ಜನರ ಅನುಭವಕ್ಕೆ ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನಾವು ಅನುಭವಿಸಿದ್ದೇವೆ. ಆದ್ದರಿಂದಲೇ ದೇಶ ತನಗಾಗಿ, ತನ್ನ ಹಿತಕ್ಕಾಗಿ ಅಲ್ಲದೇ ಪ್ರಜಾಪ್ರಭುತ್ವದ ರಕ್ಷಣೆಗೆ ಕರೆ ನೀಡಿತ್ತು. ಬಹುಶಃ ವಿಶ್ವದ ಯಾವುದೇ ದೇಶದ ಜನತೆ ತಮ್ಮ ಇತರೆ ಹಕ್ಕುಗಳು, ಅವಶ್ಯಕತೆಗಳು, ಅಧಿಕಾರಗಳನ್ನು ಲೆಕ್ಕಿಸದೇ ಕೇವಲ ಪ್ರಜಾಪ್ರಭುತ್ವಕ್ಕಾಗಿ ಮತದಾನ ಮಾಡಿರಲಿಕ್ಕಿಲ್ಲ. ಇಂಥ ಒಂದು ಚುನಾವಣೆಯನ್ನು ನಮ್ಮ ದೇಶ 77 ರಲ್ಲಿ ಕಂಡಿತ್ತು. ಇತ್ತೀಚೆಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಮಹಾಪರ್ವ, ಬಹುದೊಡ್ಡ ಚುನಾವಣಾ ಅಭಿಯಾನ ಪೂರ್ಣಗೊಂಡಿದೆ. ಬಡವ ಬಲ್ಲಿದರಿಂದ ಎಲ್ಲರೂ ಈ ಪರ್ವದಲ್ಲಿ ಸಂತೋಷದಿಂದ ನಮ್ಮ ದೇಶದ ಭವಿಷ್ಯ ನಿರ್ಧರಿಸಲು ಕಾತುರರಾಗಿದ್ದರು.
ಯಾವುದೇ ವಸ್ತು ನಮ್ಮ ಹತ್ತಿರದಲ್ಲಿಯೇ ಇದ್ದಾಗ ನಾವು ಅದರ ಮಹತ್ವವನ್ನು ಕಡೆಗಣಿಸುತ್ತೇವೆ. ಅದರ ಅದ್ಭುತ ವಿಷಯಗಳೂ ಗಣನೆಗೆ ಬರುವುದಿಲ್ಲ. ನಮಗೆ ದೊರೆತ ಬಹಳ ಅಮೂಲ್ಯವಾದ ಪ್ರಜಾಪ್ರಭುತ್ವವನ್ನು ನಾವು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುತ್ತೇವೆ, ಆದರೆ ಸಹಸ್ರಾರು ವರ್ಷಗಳ ಸಾಧನೆಯಿಂದ, ತಲೆಮಾರುಗಳ ಸಂಸ್ಕಾರಗಳಿಂದ, ಒಂದು ವಿಶಾಲವಾದ ಮನಸ್ಥಿತಿಯಿಂದ ವ್ಯಕ್ತಿಗತವಾಗಿ – ಪ್ರಜಾಪ್ರಭುತ್ವ ಬಹಳ ಅಮೂಲ್ಯವಾದದ್ದು ಮತ್ತು ಈ ಪ್ರಜಾಪ್ರಭುತ್ವಕ್ಕೆ ನಮ್ಮ ನರನಾಡಿಗಳಲ್ಲಿ ಸ್ಥಳ ದೊರೆತಿದೆ ಎಂಬುದನ್ನು ನೆನಪಿಸಿಕೊಡಬೇಕು. ಭಾರತದಲ್ಲಿ ನಡೆದ 2019 ರ ಚುನಾವಣೆಯಲ್ಲಿ 61 ಕೋಟಿ ಜನರು ಮತದಾನ ಮಾಡಿದರು. 61 ಕೋಟಿ ಜನ! ಈ ಸಂಖ್ಯೆ ನಮಗೆ ಬಹಳ ಸಾಮಾನ್ಯವಾದುದೆನ್ನಿಸಬಹುದು. ಆದರೆ ವಿಶ್ವಮಟ್ಟದಲ್ಲಿ ಹೇಳುವುದಾದರೆ ಚೀನಾ ಒಂದನ್ನು ಬಿಟ್ಟು ಭಾರತದಲ್ಲಿ ಬೇರಾವುದೇ ದೇಶದ ಜನಸಂಖ್ಯೆಗಿಂತ ಹೆಚ್ಚಿನ ಜನರು ಮತದಾನ ಮಾಡಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರ ಒಟ್ಟು ಸಂಖ್ಯೆ ಅಮೇರಿಕದ ಒಟ್ಟು ಜನಸಂಖ್ಯೆಗಿಂತಲೂ ಅಧಿಕ. ಸುಮಾರು ದುಪ್ಪಟ್ಟು ಸಂಖ್ಯೆ. ಭಾರತದಲ್ಲಿಯ ಒಟ್ಟು ಮತದಾರರ ಸಂಖ್ಯೆ ಯುರೋಪ್ನ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು. ಇದು ನಮ್ಮ ಪ್ರಜಾಪ್ರಭುತ್ವದ ವ್ಯಾಪಕತೆ ಮತ್ತು ವಿಶಾಲತೆಯ ಪರಿಚಯ ನೀಡುತ್ತದೆ. 2019 ರ ಲೋಕಸಭೆ ಚುನಾವಣೆ ಇತಿಹಾಸದಲ್ಲಿಯೇ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ಚುನಾವಣೆ ಎನಿಸಿದೆ. ಇಂಥ ಒಂದು ಚುನಾವಣೆಯನ್ನು ಪೂರ್ಣಗೊಳಿಸಲು ಎಷ್ಟೊಂದು ಸಂಪನ್ಮೂಲಗಳ ಮತ್ತು ಮಾನವ ಶಕ್ತಿಯ ಅವಶ್ಯಕತೆಯಿರಬಹುದು ಎಂಬುದನ್ನು ನೀವು ಊಹಿಸಬಹುದು. ಲಕ್ಷಾಂತರ ಶಿಕ್ಷಕರು, ಅಧಿಕಾರಿಗಳು ಮತ್ತು ಕೆಲಸಗಾರರ ಹಗಲಿರುಳಿನ ಶ್ರಮದಿಂದ ಚುನಾವಣೆ ಸಾಧ್ಯವಾಗಿದೆ. ಪ್ರಜಾಪ್ರಭುತ್ವದ ಈ ಮಹಾಯಾಗವನ್ನು ಸಫಲತೆಯಿಂದ ಪೂರ್ಣಗೊಳಿಸಲು ಅರೆಸೇನಾಪಡೆಯ ಸುಮಾರು 3 ಲಕ್ಷ ಸೈನಿಕರು ಕರ್ತವ್ಯ ಮೆರೆದಿದ್ದಾರೆ. ಹಾಗೆಯೇ ಬೇರೆ ಬೇರೆ ರಾಜ್ಯಗಳ ಸುಮಾರು 20 ಲಕ್ಷ ಪೋಲಿಸರು ಕೂಡಾ ಸಂಪೂರ್ಣ ಪರಿಶ್ರಮವಹಿಸಿದ್ದಾರೆ. ಈ ಜನರ ಕಠಿಣ ಪರಿಶ್ರಮದ ಫಲವಾಗಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮತದಾನವಾಗಿದೆ. ಮತದಾನಕ್ಕಾಗಿ ಸಂಪೂರ್ಣ ದೇಶದಲ್ಲಿ ಸುಮಾರು 10 ಲಕ್ಷ ಮತದಾನ ಕೇಂದ್ರಗಳು, ಸುಮಾರು 40 ಲಕ್ಷಕ್ಕಿಂತ ಹೆಚ್ಚು ಇವಿಎಂ ಮೆಶಿನ್ಗಳು 17 ಲಕ್ಷಕ್ಕಿಂತ ಹೆಚ್ಚು ವಿವಿ ಪ್ಯಾಟ್ ಮೆಶಿನ್ಗಳು. ಎಷ್ಟೊಂದು ದೊಡ್ಡ ಪ್ರಮಾಣದ ತಯಾರಿ ಎಂದು ನೀವು ಊಹಿಸಬಹುದು. ಯಾವುದೇ ಮತದಾರನೂ ತನ್ನ ಮತ ನೀಡುವ ಅಧಿಕಾರದಿಂದ ವಂಚಿತನಾಗಬಾರದು ಎಂಬುದನ್ನು ಖಾತರಿಪಡಿಸಲು ಇದೆಲ್ಲವನ್ನೂ ಮಾಡಲಾಗಿತ್ತು. ಅರುಣಾಚಲ ಪ್ರದೇಶದ ಒಂದು ದೂರದ ಸ್ಥಳದಲ್ಲಿ ಕೇವಲ ಓರ್ವ ಮಹಿಳಾ ಮತದಾರಳಿಗಾಗಿ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಚುನಾವಣಾ ಅಧಿಕಾರಿಗಳು ಅಲ್ಲಿಗೆ ತಲುಪಲು ಎರಡೆರಡು ದಿನ ಪಯಣಿಸಬೇಕಿತ್ತು ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಇದೇ ಪ್ರಜಾಪ್ರಭುತ್ವದ ನಿಜವಾದ ಸಮ್ಮಾನವಲ್ಲವೇ. ವಿಶ್ವದ ಅತಿ ಎತ್ತರದಲ್ಲಿ ಸ್ಥಾಪಿತವಾದ ಮತದಾನ ಕೇಂದ್ರವೂ ಭಾರತದಲ್ಲಿಯೇ ಇದೆ. ಈ ಮತದಾನ ಕೇಂದ್ರ ಹಿಮಾಚಲ ಪ್ರದೇಶದ ಲಾಹೌಲ್ – ಸ್ಫಿತಿ ಕ್ಷೇತ್ರದಲ್ಲಿ 15,000 ಅಡಿ ಎತ್ತರದಲ್ಲಿದೆ. ಇದಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಹೆಮ್ಮೆ ಪಡುವಂಥ ಮತ್ತೊಂದು ವಿಷಯವಿದೆ. ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳೆಯರು ಪುರುಷರಂತೆ ಉತ್ಸಾಹದಿಂದ ಮತದಾನ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು ಮತ್ತು ಪುರುಷರ ಮತದಾನ ಹೆಚ್ಚು ಕಡಿಮೆ ಸಮವಾಗಿತ್ತು. ಇದರೊಟ್ಟಿಗೆ ಉತ್ಸಾಹ ಹೆಚ್ಚಿಸುವಂಥ ಸತ್ಯ ಇನ್ನೂ ಒಂದಿದೆ – ಇಂದು ಸಂಸತ್ತಿನಲ್ಲಿ 78 ಮಹಿಳಾ ಸಂಸದರಿರುವುದು ದಾಖಲೆಯ ಸಂಗತಿಯಾಗಿದೆ. ನಾನು ಚುನಾವಣಾ ಆಯೋಗಕ್ಕೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿ ವ್ಯಕ್ತಿಗೆ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಭಾರತದ ಜಾಗರೂಕ ಮತದಾರರಿಗೆ ನಮಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ನೀವು ಬಹಳಷ್ಟು ಸಲ ‘ಬೊಕೆ ಅಲ್ಲ ಬುಕ್’ ಎಂದು ನಾನು ಹೇಳಿದ್ದನ್ನು ಕೇಳಿರಬಹುದು. ನಾವು ಆದರ ಸತ್ಕಾರ ಮಾಡುವಾಗ ಹೂವಿನ ಬದಲಾಗಿ ಪುಸ್ತಕಗಳನ್ನು ನೀಡಬಹುದೇ ಎಂಬುದು ನನ್ನ ಆಗ್ರಹವಾಗಿತ್ತು. ಅಂದಿನಿಂದ ಜನರು ಹೆಚ್ಚೆಚ್ಚು ಪುಸ್ತಕಗಳನ್ನು ನೀಡುತ್ತಿದ್ದಾರೆ. ನನಗೆ ಇತ್ತೀಚೆಗೆ ಯಾರೋ ಪ್ರೇಮ್ಚಂದ್ ಅವರ ಲೋಕಪ್ರಿಯ ಕಥೆಗಳು ಎಂಬ ಪುಸ್ತಕ ನೀಡಿದರು. ನನಗೆ ಬಹಳ ಖುಷಿ ಎನಿಸಿತು. ಹೆಚ್ಚಿನ ಸಮಯ ದೊರೆಯದಿದ್ದರೂ ಪ್ರವಾಸದ ವೇಳೆ ನನಗೆ ಮತ್ತೊಮ್ಮೆ ಅವರ ಕೆಲವು ಕಥೆಗಳನ್ನು ಓದುವ ಅವಕಾಶ ಲಭಿಸಿತು. ಪ್ರೇಮ್ಚಂದ್ ತಮ್ಮ ಕಥೆಗಳಲ್ಲಿ ರೂಪಿಸಿರುವ ಸಮಾಜದ ಚಿತ್ರಣ ಓದುತ್ತಾ ಹೋದಂತೆ ನಿಮ್ಮ ಮನದಲ್ಲಿ ಮೂಡುತ್ತಾ ಹೋಗುತ್ತದೆ. ಅವರು ಬರೆದ ಒಂದೊಂದೂ ವಿಷಯ ಜೀವ ತಳೆಯುತ್ತಾ ಸಾಗುತ್ತದೆ. ಸಹಜ, ಸರಳ ಭಾಷೆಯಲ್ಲಿ ಮಾನವೀಯ ಸಂವೇದನೆಗಳನ್ನು ಅಭಿವ್ಯಕ್ತಪಡಿಸುವ ಅವರ ಕಥೆಗಳು ನನ್ನ ಮನಸ್ಸನ್ನೂ ತಾಕಿದವು. ಅವರ ಕಥೆಗಳಲ್ಲಿ ಸಂಪೂರ್ಣ ಭಾರತದ ಮನಸ್ಥಿತಿ ಮಿಳಿತವಾಗಿದೆ. ಅವರು ಬರೆದ ‘ನಶಾ’ ಎಂಬ ಕಥೆಯನ್ನು ನಾನು ಓದುತ್ತಿದ್ದಾಗ ನನ್ನ ಮನಸ್ಸು ಸಮಾಜದಲ್ಲಿ ಪಸರಿಸಿದ ಆರ್ಥಿಕ ವಿಷಮತೆಯತ್ತ ಹೊರಳಿತು. ನನಗೆ ನನ್ನ ಯೌವನದ ದಿನಗಳಲ್ಲಿ ಹೇಗೆ ರಾತ್ರಿ ಪೂರ್ತಿ ಈ ವಿಷಯದ ಕುರಿತು ಚರ್ಚೆ ನಡೆಯುತ್ತಿತ್ತು ಎಂಬುದು ನೆನಪಾಯಿತು. ಜಮೀನ್ದಾರರ ಮಗ ಈಶ್ವರೀ ಮತ್ತು ಬಡ ಕುಟುಂಬದ ಬೀರ್ ನ ಈ ಕಥೆಯಿಂದ -ನೀವು ಎಚ್ಚರವಾಗಿರದಿದ್ದರೆ ದುಷ್ಟರ ಸಂಗ ಯಾವಾಗ ನಿಮ್ಮನ್ನು ಮುತ್ತಿಕೊಳ್ಳುತ್ತದೆ ಎಂಬುದು ತಿಳಿಯುವುದೇ ಇಲ್ಲ ಎಂಬುದು ಅರ್ಥವಾಗುತ್ತದೆ. ನನ್ನ ಮನಸ್ಸನ್ನು ಗಾಢವಾಗಿ ಕಲಕಿದ ಇನ್ನೊಂದು ಕಥೆ “ಈದ್ಗಾ”. ಓರ್ವ ಬಾಲಕನ ಸಂವೇದನಶೀಲತೆ ಮತ್ತು ತನ್ನ ಅಜ್ಜಿಗಾಗಿ ಆತನ ನಿರ್ಮಲ ಪ್ರೇಮ, ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಪರಿಪಕ್ವ ಭಾವ. 4-5 ವರ್ಷಗಳ ವಯಸ್ಸಿನ ಹಾಮೀದ್ ಜಾತ್ರೆಯಿಂದ ಇಕ್ಕಳ ತೆಗೆದುಕೊಂಡು ತನ್ನ ಅಜ್ಜಿಯ ಬಳಿ ತಲುಪಿದಾಗ ನಿಜವಾಗಿಯೂ ಮಾನವೀಯ ಸಂವೇದನೆ ಪರಾಕಾಷ್ಟೆ ತಲುಪುತ್ತದೆ. ಈ ಕಥೆಯ ಕೊನೇ ಸಾಲುಗಳು ಬಹಳ ಭಾವುಕವಾಗಿವೆ ಏಕೆಂದರೆ ಅದರಲ್ಲಿ ಜೀವನದ ಬಹು ದೊಡ್ಡ ನಿಜಾರ್ಥ ಅಡಗಿದೆ. ಬಾಲಕ ಹಾಮೀದ್ ವೃದ್ಧ ಹಾಮೀದ್ ನ ಪಾತ್ರ ಮಾಡಿದ್ದ. ವೃದ್ಧೆ ಆಮೀನಾ ಬಾಲಕಿ ಆಮೀನಾ ಆಗಿಬಿಟ್ಟಿದ್ದಳು.
ಇಂಥದೇ ಒಂದು ಮಾರ್ಮಿಕ ಕಥೆ “ಪೂಸ್ ಕಿ ರಾತ್”. ಈ ಕಥೆಯಲ್ಲಿ ಒಬ್ಬ ಬಡ ಕೃಷಿಕನ ಜೀವನದ ವಿಡಂಬನೆಯ ಚಿತ್ರಣ ನೋಡಲು ಸಿಕ್ಕಿತು. ತನ್ನ ಬೆಳೆ ನಷ್ಟವಾದ ಮೇಲೆ ಕೂಡಾ ಹಲ್ದು ಎಂಬ ರೈತ ನಡುಗುವ ಚಳಿಯಲ್ಲಿ ಹೊಲದಲ್ಲಿ ಮಲಗುವ ಪ್ರಮೇಯವಿಲ್ಲ ಎಂದು ಸಂತೋಷಪಡುತ್ತಾನೆ. ಈ ಕಥೆಗಳು ನೂರಾರು ವರ್ಷಗಳಷ್ಟು ಹಳೆಯದಾದರೂ ಇವುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಇವುಗಳನ್ನು ಓದಿದ ಮೇಲೆ ನನಗೆ ವಿಭಿನ್ನ ಪ್ರಕಾರದ ಅನುಭವವಾಗಿದೆ.
ಓದುವ ಕುರಿತು ಮಾತಾಡುತ್ತಿರುವಾಗ, ಯಾವುದೋ ಮಾಧ್ಯಮದಲ್ಲಿ ಕೇರಳದ ಅಕ್ಷರಾ ಗ್ರಂಥಾಲಯದ ಕುರಿತು ಓದುತ್ತಿದ್ದೆ. ಈ ಗ್ರಂಥಾಲಯ ಇಡುಕ್ಕಿಯ ದಟ್ಟವಾದ ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಒಂದು ಪುಟ್ಟ ಗ್ರಾಮದಲ್ಲಿದೆ ಎಂದು ತಿಳಿಯಲು ನಿಮಗೆ ಆಶ್ಚರ್ಯವೆನ್ನಿಸಬಹುದು. ಇಲ್ಲಿಯ ಪ್ರಾಥಮಿಕ ವಿದ್ಯಾಲಯದ ಶಿಕ್ಷಕ ಪಿ ಕೆ ಮುರುಳಿಧರನ್ ಮತ್ತು ಪುಟ್ಟ ಚಹಾ ಗೂಡಂಗಡಿಯನ್ನು ನಡೆಸುವ ಪಿ ವಿ ಚಿನ್ನತಂಬಿ, ಇವರಿಬ್ಬರೂ ಈ ಗ್ರಂಥಾಲಯಕ್ಕಾಗಿ ಬಹಳ ಶ್ರಮಿಸಿದ್ದಾರೆ. ಮೂಟೆಯಲ್ಲಿ ಕಟ್ಟಿಕೊಂಡು ಬೆನ್ನ ಮೇಲೆ ಹೇರಿಕೊಂಡು ಪುಸ್ತಕಗಳನ್ನು ಇಲ್ಲಿಗೆ ತಂದ ದಿನಗಳೂ ಇವೆ. ಇಂದು ಈ ಗ್ರಂಥಾಲಯ ಬುಡಕಟ್ಟು ಜನರ ಜೊತೆಗೆ ಎಲ್ಲರಿಗೂ ಒಂದು ಹೊಸ ದಿಕ್ಕನ್ನು ತೋರುತ್ತಿದೆ.
ಗುಜರಾತಿನ – ‘ವಾಂಚೆ ಗುಜರಾತ್ ಅಭಿಯಾನ’ ಯಶಸ್ವಿ ಪ್ರಯೋಗವಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಎಲ್ಲ ವಯೋಮಾನದ, ಎಲ್ಲ ವರ್ಗದ ಜನರು ಪುಸ್ತಕಗಳನ್ನು ಓದಲು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇಂದಿನ ಡಿಜಿಟಲ್ ಯುಗದಲ್ಲಿ, ಗೂಗಲ್ ಗುರುವಿನ ಸಮಯದಲ್ಲಿ, ನೀವು ನಿಮ್ಮ ದೈನಂದಿನ ಕೆಲಸದ ನಡುವೆ ಕೆಲ ಸಮಯವನ್ನು ಪುಸ್ತಕಗಳನ್ನು ಓದಲು ಮೀಸಲಿರಿಸಿ ಎಂದು ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ನೀವು ಇದನ್ನು ಖಂಡಿತ ಆನಂದಿಸುತ್ತೀರಿ ಮತ್ತು ನೀವು ಯಾವುದೇ ಪುಸ್ತಕ ಓದಿದರೂ ನರೇಂದ್ರ ಮೋದಿ ಆಪ್ ನಲ್ಲಿ ಖಂಡಿತಾ ಬರೆಯಿರಿ. ಮನದ ಮಾತಿನ ಕೇಳುಗರೆಲ್ಲರೂ ಆ ಬಗ್ಗೆ ತಿಳಿಯಲಿ.
ನನ್ನ ಪ್ರಿಯ ದೇಶ ಬಾಂಧವರೇ, ನಮ್ಮ ದೇಶದ ಜನರು ಕೇವಲ ವರ್ತಮಾನದ ವಿಷಯಗಳಲ್ಲದೇ, ಭವಿಷ್ಯದಲ್ಲೂ ಸವಾಲಾಗಬಹುದಾದಂತಹ ವಿಷಯಗಳ ಕುರಿತು ಚಿಂತಿಸುತ್ತಿದ್ದಾರೆ ಎಂಬುದನ್ನು ಅರಿತು ನನಗೆ ಸಂತೋಷವಾಗುತ್ತಿದೆ. ನಾನು NarendraModi App ಮತ್ತು Mygovನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಓದುತ್ತಿದ್ದೆ ಹಾಗೂ ನೀರಿನ ಸಮಸ್ಯೆ ಕುರಿತು ಬಹಳಷ್ಟು ಜನರು ಬರೆದಿದ್ದಾರೆ. ಬೆಳಗಾವಿಯ ಪವನ್ ಗೌರಾಯಿ, ಭುವನೇಶ್ವರದ ಸಿತಾಂಶು ಮೋಹನ್ ಪರೀದಾ, ಹಾಗೂ ಯಶ್ ಶರ್ಮಾ, ಶಾಹಬ್ ಅಲ್ತಾಫ್ ಇನ್ನೂ ಕೆಲವಾರು ಜನರು ನನಗೆ ನೀರಿನ ಸವಾಲುಗಳ ಬಗ್ಗೆ ಬರೆದಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ಬಹಳ ಮಹತ್ವ ನೀಡಲಾಗಿದೆ. ಋಗ್ವೇದದ ಆಪಃ ಸೂಕ್ತದಲ್ಲಿ ನೀರಿನ ಬಗ್ಗೆ ಹೇಳಲಾಗಿದೆ.
ಆಪೊ ಹಿಷ್ಟಾ ಮಯೋ ಭುವಃ, ಸ್ಥಾ ನ ಊರ್ಜೆ ದಧಾತನ, ಮಹೆ ರಣಾಯ ಚಕ್ಷಸೆ,
ಯೊ ವಃ ಶಿವತಮೊ ರಸಃ, ತಸ್ಯ ಭಾಜಯತೆ ನಃ, ಉಷತೀರಿವ ಮಾತರಃ.
ಅಂದರೆ, ಜಲವೇ ಪ್ರಾಣ ಶಕ್ತಿ, ಶಕ್ತಿಯ ಮೂಲ, ನೀವು ತಾಯಿಯ ಸಮಾನ ಅಂದರೆ ಮಾತೆಯಂತೆ ಆಶೀರ್ವದಿಸಿ. ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ. ಎಂದರ್ಥ. ನೀರಿನ ಅಭಾವದಿಂದ ದೇಶದ ಎಷ್ಟೋ ಭಾಗಗಳು ಪ್ರತಿವರ್ಷವೂ ಸಂಕಷ್ಟಕ್ಕೊಳಗಾಗುತ್ತವೆ. ನಮ್ಮ ದೇಶದಲ್ಲಿ ವರ್ಷಪೂರ್ತಿ ಮಳೆಯಿಂದ ಲಭಿಸುವ ನೀರಿನ ಕೇವಲ 8% ರಷ್ಟು ನೀರನ್ನು ಮಾತ್ರ ಸಂರಕ್ಷಿಸಲಾಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕೇವಲ 8%, ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕಾದ ಸಮಯ ಸನ್ನಿಹಿತವಾಗಿದೆ. ಜನರ ಪಾಲುದಾರಿಕೆಯಿಂದ, ಜನರ ಶಕ್ತಿಯಿಂದ 130 ಕೋಟಿ ದೇಶಬಾಂಧವರ ಸಾಮರ್ಥ್ಯ, ಸಹಕಾರ ಮತ್ತು ಸಂಕಲ್ಪದಿಂದ ಉಳಿದ ಇತರ ಸಮಸ್ಯೆಗಳಂತೆ ನಾವು ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ. ನೀರಿನ ಮಹತ್ವವನ್ನು ಉಚ್ಚಮಟ್ಟದಲ್ಲಿ ಪರಿಗಣಿಸಿ ದೇಶದಲ್ಲಿ ಜಲಶಕ್ತಿ ಸಚಿವಾಲಯ ನಿರ್ಮಿಸಲಾಗಿದೆ. ಇದರಿಂದ ನೀರಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಶೀಘ್ರಗತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಕೆಲ ದಿನಗಳ ಹಿಂದೆ ನಾನು ಹೊಸ ಪ್ರಯೋಗಕ್ಕೆ ಪ್ರಯತ್ನಿಸಿದೆ. ದೇಶದ ಎಲ್ಲ ಸರಪಂಚರಿಗೆ ಪತ್ರ ಬರೆದೆ. ನೀರಿನ ಉಳಿತಾಯಕ್ಕಾಗಿ. ನೀರು ಸಂಗ್ರಹಣೆಗೆ, ಮಳೆ ನೀರಿನ ಒಂದೊಂದು ಹನಿಯನ್ನು ಸಂರಕ್ಷಿಸಲು ಗ್ರಾಮ ಸಭೆಗಳನ್ನು ಆಯೋಜಿಸಿ, ಗ್ರಾಮಸ್ಥರೊಂದಿಗೆ ಚರ್ಚಿಸಬೇಕೆಂದು ಗ್ರಾಮ ಮುಖ್ಯಸ್ಥರಿಗೆ ಬರೆದೆ. ಅವರು ಈ ಕೆಲಸದಲ್ಲಿ ಸಾಕಷ್ಟು ಉತ್ಸಾಹ ತೋರಿದ್ದಾರೆ ಎಂದು ನನಗೆ ಆನಂದವಾಗಿದೆ. ಈ ತಿಂಗಳ 22 ನೇ ತಾರೀಖಿನಂದು ಸಾವಿರಾರು ಪಂಚಾಯಿತಿಗಳಲ್ಲಿ ಕೋಟ್ಯಾಂತರ ಜನರು ಶ್ರಮದಾನ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಜನರು ನೀರಿನ ಒಂದೊಂದು ಹನಿಯನ್ನು ಸಂರಕ್ಷಿಸಲು ಸಂಕಲ್ಪಗೈದರು.
ಇಂದು ಮನದ ಮಾತಿನಲ್ಲಿ ನಾನು ಒಬ್ಬ ಸರಪಂಚರ ಮಾತನ್ನು ಕೇಳಿಸಬಯಸುತ್ತೇನೆ. ಜಾರ್ಖಂಡ್ದ ಹಜಾರಿಬಾಗ್ ಜಿಲ್ಲೆಯ ಕಟಕಂಸಾಂಡಿ ಬ್ಲಾಕ್ನ ಲುಪುಂಗ್ ಪಂಚಾಯತಿಯ ಸರಪಂಚರು ನಮ್ಮೆಲ್ಲರಿಗೂ ಏನೆಂದು ಸಂದೇಶ ನೀಡಿದ್ದಾರೆ ಕೇಳಿ
“ನನ್ನ ಹೆಸರು ದಿಲೀಪ್ ಕುಮಾರ್ ರವಿದಾಸ್. ಜಲ ಸಂರಕ್ಷಣೆಗೆ ಪ್ರಧಾನ ಮಂತ್ರಿಗಳು ನಮಗೆ ಪತ್ರ ಬರೆದಾಗ ಪ್ರಧಾನಿಗಳು ನಮಗೆ ಪತ್ರ ಬರೆದಿದ್ದಾರೆ ಎಂದು ನಂಬಲಾಗಲಿಲ್ಲ. 22 ನೇ ತಾರೀಖಿನಂದು ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರಧಾನ ಮಂತ್ರಿಗಳು ಬರೆದ ಪತ್ರ ಓದಿ ಹೇಳಿದಾಗ ಅವರೆಲ್ಲರೂ ಬಹಳ ಉತ್ಸುಕರಾದರು. ನೀರಿನ ಸಂರಕ್ಷಣೆಗಾಗಿ ಕೊಳಗಳ ಸ್ವಚ್ಛತೆ ಮತ್ತು ಹೊಸ ಕೊಳಗಳ ನಿರ್ಮಾಣಕ್ಕೆ ಶ್ರಮದಾನ ಮಾಡಿ ತಮ್ಮ ಪಾಲುದಾರಿಕೆ ನಿಭಾಯಿಸಲು ಸಿದ್ಧರಾದರು. ಮಳೆಗಾಲಕ್ಕೆ ಮೊದಲೇ ಈ ಉಪಾಯ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ನಮಗೆ ನೀರಿನ ಅಭಾವವಾಗುವುದಿಲ್ಲ. ನಮ್ಮ ಪ್ರಧಾನಮಂತ್ರಿಗಳು ನಮಗೆ ಸರಿಯಾದ ಸಮಯಕ್ಕೆ ನೆನಪಿಸಿದ್ದು ಒಳ್ಳೆಯದಾಯಿತು”.
ಬಿರ್ಸಾ ಮುಂಡಾ ನೆಲದಲ್ಲಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಜೀವಿಸುವುದು ಸಂಸ್ಕೃತಿಯ ಒಂದು ಭಾಗವಾಗಿದೆ. ಅಲ್ಲಿಯ ಜನ ಮತ್ತೊಮ್ಮೆ ಜಲ ಸಂರಕ್ಷಣೆಗೆ ಸಕ್ರೀಯವಾಗಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ. ನನ್ನ ಕಡೆಯಿಂದ ಎಲ್ಲ ಗ್ರಾಮ ಮುಖ್ಯಸ್ಥüರಿಗೆ ಮತ್ತು ಎಲ್ಲ ಸರಪಂಚರಿಗೆ ಅವರ ಕೆಲಸದಲ್ಲಿ ಶುಭವಾಗಲಿ ಎಂದು ಹಾರೈಸುತ್ತೇನೆ. ದೇಶದಾದ್ಯಂತ ಜಲ ಸಂರಕ್ಷಣೆಗೆ ಪಣ ತೊಟ್ಟ ಬಹಳಷ್ಟು ಜನ ಸರಪಂಚರಿದ್ದಾರೆ. ಒಂದು ರೀತಿಯಲ್ಲಿ ಇದು ಸಂಪೂರ್ಣ ಗ್ರಾಮಕ್ಕೆ ದೊರೆತ ಅವಕಾಶವಾಗಿದೆ. ಗ್ರಾಮದ ಜನತೆ ತಮ್ಮ ಗ್ರಾಮಗಳಲ್ಲಿ ಜಲಮಂದಿರ ನಿರ್ಮಾಣದ ಸ್ಪರ್ದೆಯಲ್ಲಿ ತೊಡಗಿರುವಂತೆ ಭಾಸವಾಗುತ್ತಿದೆ. ಸಾಮೂಹಿಕ ಪ್ರಯತ್ನದಿಂದ ದೊಡ್ಡ ಸಕಾರಾತ್ಮಕ ಫಲಿತಾಂಶಗಳು ಲಭಿಸುತ್ತವೆ. ಸಂಪೂರ್ಣ ದೇಶದಲ್ಲಿ ಜಲಸಂಕಟದಿಂದ ಪಾರಾಗುವ ಒಂದೇ ಸೂತ್ರ ಇರಲಾರದು. ಇದಕ್ಕಾಗಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಎಲ್ಲರ ಗುರಿ ಒಂದೇ. ಅದೇ ನೀರಿನ ಉಳಿತಾಯ, ಜಲ ಸಂರಕ್ಷಣೆ.
ಪಂಜಾಬ್ನಲ್ಲಿ ಒಳಚರಂಡಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಈ ಪ್ರಯತ್ನದಿಂದ ನೀರು ನಿಲ್ಲುವ ಸಮಸ್ಯೆಯಿಂದ ಮುಕ್ತಿ ಲಭಿಸುವುದು. ತೆಲಂಗಾಣದ ತಿಮ್ಮೈ ಪಲ್ಲಿಯಲ್ಲಿ ಟ್ಯಾಂಕ್ ನಿರ್ಮಾಣದಿಂದ ಜನರ ಜೀವನ ಬದಲಾಗುತ್ತಿದೆ. ರಾಜಸ್ಥಾನದ ಕಬೀರ್ಧಾಮ್ ನಲ್ಲಿ ಹೊಲಗದ್ದೆಗಳಲ್ಲಿ ನಿರ್ಮಿಸಲಾದ ಪುಟ್ಟ ಹೊಂಡಗಳಿಂದ ಬಹು ದೊಡ್ಡ ಬದಲಾವಣೆ ಸಾಧ್ಯವಾಗಿದೆ. ತಮಿಳುನಾಡಿನ ವೆಲ್ಲೋರ್ದಲ್ಲಿ ಕೈಗೊಳ್ಳಲಾದ ಒಂದು ಸಾಮೂಹಿಕ ಪ್ರಯತ್ನದ ಕುರಿತು ನಾನು ಓದುತ್ತಿದ್ದೆ, ಅಲ್ಲಿ ನಾಗ ನದಿಯ ಪುನರುಜ್ಜೀವನ ಕಾರ್ಯಕ್ಕೆ 20 ಸಾವಿರ ಮಹಿಳೆಯರು ಒಗ್ಗೂಡಿ ಬಂದರು. ಗಡ್ವಾಲದ ಮಹಿಳೆಯರು ಒಗ್ಗೂಡಿ ಮಳೆ ನೀರು ಸಂಗ್ರಹ ಕುರಿತು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿರುವ ಬಗ್ಗೆಯೂ ನಾನು ಓದಿದ್ದೇನೆ. ಇಂಥ ಹಲವಾರು ಪ್ರಯತ್ನಗಳು ಮಾಡಲಾಗುತ್ತಿದೆ ಎಂದು ನಾನು ನಂಬಿದ್ದೇನೆ. ನಾವೆಲ್ಲರೂ ಒಗ್ಗೂಡಿ ಶ್ರಮವಹಿಸಿ ಇಂಥ ಪ್ರಯತ್ನಗಳನ್ನು ಮಾಡಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ. ಜನರು ಒಂದಾದಾಗ ಜಲವು ಸುರಕ್ಷಿತವಾಗುತ್ತದೆ. ಮನದ ಮಾತಿನ ಮೂಲಕ ಇಂದು ನಾನು ದೇಶದ ಜನತೆಯ ಮುಂದೆ ಮೂರು ಬೇಡಿಕೆಗಳನ್ನು ಇಡುತ್ತಿದ್ದೇನೆ.
ದೇಶದ ಜನತೆ ಸ್ವಚ್ಛತೆಗೆ ಹೇಗೆ ಒಂದು ಚಳುವಳಿಯ ರೂಪವನ್ನು ನೀಡಿದ್ದರೋ, ಹಾಗೆಯೇ ಜಲ ಸಂರಕ್ಷಣೆಯನ್ನೂ ಒಂದು ಜನಾಂದೋಲನವಾಗಿ ಆರಂಭಿಸಿ ಎಂಬುದು ನನ್ನ ಮೊದಲ ಮನವಿ. ನಾವೆಲ್ಲರೂ ಒಗ್ಗೂಡಿ ನೀರಿನ ಒಂದೊಂದು ಹನಿಯನ್ನು ರಕ್ಷಿಸುವ ಸಂಕಲ್ಪಗೈಯ್ಯೋಣ ಮತ್ತು ನೀರು ಆ ಪರಮಾತ್ಮ ನೀಡಿದ ಪ್ರಸಾದ ಎಂಬುದು ನನ್ನ ವಿಶ್ವಾಸ. ನೀರು ಸ್ಫಟಿಕ ರೂಪಿ, ಹಿಂದೆ ಸ್ಫಟಿಕ ಸ್ಪರ್ಶ ದಿಂದ ಲೋಹ ಚಿನ್ನವಾಗುತ್ತದೆ ಎಂದು ಹೇಳಲಾಗುತ್ತಿತ್ತು. ನೀರೇ ಸ್ಫಟಿಕ ಮತ್ತು ಈ ಸ್ಫಟಿಕ ಸ್ಪರ್ಶದಿಂದ ನವ ಜೀವನ ನಿರ್ಮಾಣವಾಗುತ್ತದೆ ಎಂದು ನಾನು ಹೇಳುತ್ತೇನೆ. ನೀರಿನ ಒಂದೊಂದು ಹನಿಯನ್ನೂ ಸಂರಕ್ಷಿಸಲು ಒಂದು ಜಾಗೃತಿ ಚಳುವಳಿ ಆರಂಭಿಸಿ, ಇದರಲ್ಲಿ ನೀರಿನ ಸಮಸ್ಯೆಗಳ ಕುರಿತು ತಿಳಿಸಿ ಜೊತೆಗೆ ಜಲ ಸಂರಕ್ಷಣೆಯ ವಿಧಿ ವಿಧಾನಗಳನ್ನು ಪ್ರಚಾರ ಮಾಡಿ. ವಿಶಿಷ್ಠವಾದ ಪ್ರಚಾರಗಳ ನೇತೃತ್ವ ವಹಿಸಲು ಆಗ್ರಹಿಸುತ್ತೇನೆ. ಚಲನ ಚಿತ್ರ ಜಗತ್ತೇ ಆಗಿರಲಿ, ಕ್ರೀಡಾ ಜಗತ್ತೇ ಆಗಿರಲಿ, ನಮ್ಮ ಮಾಧ್ಯಮ ಮಿತ್ರರೇ ಆಗಿರಲಿ, ಸಾಮಾಜಿಕ ಸಂಘಟನೆಗಳೊಂದಿಗೆ ಕೆಲಸ ಮಾಡುವವರೇ ಆಗಿರಲಿ, ಸಾಂಸ್ಕøತಿಕ ಸಂಘಟನೆಗಳೊಂದಿಗೆ ಕೆಲಸ ಮಾಡುವವರಾಗಿರಲಿ, ಕಥೆ ಕೀರ್ತನೆಗಳನ್ನು ಹೇಳುವವರಾಗಿರಲಿ, ಎಲ್ಲರೂ ತಮ್ಮದೇ ರೀತಿಯಲ್ಲಿ ಈ ಚಳುವಳಿಯ ನೇತೃತ್ವ ವಹಿಸಲಿ. ಸಮಾಜವನ್ನು ಜಾಗೃತಗೊಳಿಸಲಿ, ಸಮಾಜವನ್ನು ಒಗ್ಗೂಡಿಸಲಿ, ಸಮಾಜದೊಂದಿಗೆ ಕೈಜೋಡಿಸಲಿ. ನೀವೇ ನೋಡಿ ನಮ್ಮ ಕಣ್ಣ ಮುಂದೆಯೇ ನಾವು ಪರಿವರ್ತನೆ ಆಗುವುದನ್ನು ಕಾಣಬಹುದಾಗಿದೆ.
ದೇಶವಾಸಿಗಳಲ್ಲಿ ನನ್ನ 2 ನೇ ಮನವಿ – ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಜಲ ಸಂರಕ್ಷಣೆಗೆ ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಜಲ ಸಂರಕ್ಷಣೆಯ ಆ ಪಾರಂಪರಿಕ ವಿಧಾನಗಳನ್ನು ಹಂಚಿಕೊಳ್ಳುವಂತೆ ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುತ್ತೇನೆ. ನಿಮಗೆ ಪೋರ್ಬಂದರ್ನಲ್ಲಿರುವ ಪೂಜ್ಯ ಬಾಪೂಜಿಯವರ ಜನ್ಮ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಲಭಿಸಿರಬಹುದು. ಪೂಜ್ಯ ಬಾಪೂಜಿಯವರ ಮನೆ ಹಿಂದೆಯೇ ಇನ್ನೊಂದು ಮನೆಯಿದೆ. ಅಲ್ಲಿ 200 ವರ್ಷಗಳಷ್ಟು ಹಳೆಯದಾದ ನೀರಿನ ಟ್ಯಾಂಕ್ ಇದೆ. ಇಂದಿಗೂ ಅದರಲ್ಲಿ ನೀರಿದೆ. ಮಳೆ ನೀರನ್ನು ಹಿಡಿದಿಡುವ ವ್ಯವಸ್ಥೆಯಿದೆ. ಕೀರ್ತಿ ಮಂದಿರಕ್ಕೆ ಯಾರೇ ಭೇಟಿ ನೀಡಲಿ ಆ ನೀರಿನ ಟ್ಯಾಂಕ್ ಖಂಡಿತ ನೋಡಿ ಎಂದು ನಾನು ಯಾವತ್ತೂ ಹೇಳುತ್ತೇನೆ. ಇಂಥ ಹಲವು ಬಗೆಯ ಪ್ರಯತ್ನಗಳು ವಿವಿಧೆಡೆ ಆಗಿರಬಹುದು.
ನಿಮ್ಮಲ್ಲಿ ನನ್ನ 3 ನೇ ವಿನಂತಿ – ಜಲ ಸಂರಕ್ಷಣೆಯಲ್ಲಿ ಮಹತ್ವಪೂರ್ಣ ಪಾಲುದಾರಿಕೆ ನೀಡುತ್ತಿರುವ ಜನರ, ಸ್ವಯಂ ಸೇವಾ ಸಂಸ್ಥೆಗಳ ಮತ್ತು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳಿ. ಇದರಿಂದ ನೀರಿನ ಸಮೃದ್ಧತೆಗಾಗಿ ಸಮರ್ಪಿತವಾದ, ನೀರಿಗಾಗಿ ಸಕ್ರಿಯವಾಗಿ ಕೆಲಸ ಮಾಡುವ ಸಂಘಟನೆಗಳ ಮತ್ತು ವ್ಯಕ್ತಿಗಳ ಒಂದು ಮಾಹಿತಿ ಕೋಶವನ್ನು ತಯಾರಿಸಲು ಸಹಾಯವಾಗುತ್ತದೆ. ಬನ್ನಿ ನಾವೆಲ್ಲರೂ ಜಲಸಂರಕ್ಷಣೆಗೆ ಸಂಬಂಧಿಸಿದ ಹೆಚ್ಚು ವಿಧಾನಗಳ ಪಟ್ಟಿ ತಯಾರಿಸಿ ಜನರನ್ನು ಜಲಸಂರಕ್ಷಣೆಗೆ ಪ್ರೇರೇಪಿಸೋಣ. ನೀವು # #JanShakti4JalShakti ಹ್ಯಾಶ್ಟ್ಯಾಗ್ ಬಳಸಿ ನಿಮ್ಮ ಬಳಿ ಇರುವ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ.
ನನ್ನ ಪ್ರಿಯ ದೇಶಬಾಂಧವರೇ, ಇನ್ನೊಂದು ವಿಷಯಕ್ಕೂ ಸಹ ನಿಮಗೆ ಮತ್ತು ವಿಶ್ವದ ಎಲ್ಲ ಜನತೆಗೆ ಕೃತಜ್ಞತೆ ಸಲ್ಲಿಸಬೇಕಿದೆ. ಜೂನ್ 21 ಕ್ಕೆ ಮತ್ತೊಮ್ಮೆ ಯೋಗ ದಿನದಂದು ನೀವೆಲ್ಲರೂ ಒಗ್ಗೂಡಿ ಸಕ್ರೀಯವಾಗಿ ಹೊಸ ಹುಮ್ಮಸ್ಸಿನೊಂದಿಗೆ ಪ್ರತಿಯೊಂದು ಕುಟುಂಬದಿಂದ ಮೂರು ನಾಲ್ಕು ಪೀಳಿಗೆಯವರು ಜೊತೆಗೂಡಿ ಯೋಗದಿನಾಚರಣೆಯಲ್ಲಿ ಪಾಲ್ಗೊಂಡಿದ್ದೀರಿ. ಸಮಗ್ರ ಆರೋಗ್ಯ ರಕ್ಷಣೆಗಾಗಿ ಮೂಡಿರುವ ಜಾಗೃತಿಯಿಂದಾಗಿ ಯೋಗ ದಿನದ ಮಹತ್ವ ಹೆಚ್ಚುತ್ತಾ ಸಾಗಿದೆ. ಪ್ರತಿಯೊಬ್ಬರೂ ವಿಶ್ವದ ಮೂಲೆ ಮೂಲೆಯಲ್ಲೂ ಯಾವುದೇ ಯೋಗಪ್ರೇಮಿ ಸೂರ್ಯೋದಯವನ್ನು ಸ್ವಾಗತಿಸಿದರೆ ಸೂರ್ಯಾಸ್ತದೊಂದಿಗೆ ಆ ಯಾತ್ರೆ ಮುಕ್ತಾಯಗೊಳ್ಳುವುದು. ಯೋಗ ಎಷ್ಟು ಪ್ರಸಿದ್ಧವಾಗಿದೆ ಎಂದರೆ ವಿಶ್ವದಲ್ಲಿ ಯೋಗ ಅರಿಯದ ಮಾನವರಿರುವ ಯಾವುದೇ ಸ್ಥಳವೇ ಇಲ್ಲ. ಯೋಗ ಇಷ್ಟೊಂದು ಬೃಹದಾಕಾರ ಪಡೆದಿದೆ. ಭಾರತದಲ್ಲಿ ಹಿಮಾಲಯದಿಂದ ಹಿಂದು ಮಹಾಸಾಗರದವರೆಗೆ. ಸಿಯಾಚಿನ್ನಿಂದ ಸಬ್ಮೆರಿನ್ವರೆಗೆ, ಏರ್ ಫೋರ್ಸ್ ನಿಂದ ಏರ್ಕ್ರಾಫ್ಟ್ ಕ್ಯಾರಿಯರ್ಗಳವರೆಗೆ, ಎ ಸಿ ಜಿಮ್ಗಳಿಂದ ಸುಡುವ ಮರುಭೂಮಿವರೆಗೆ, ಗ್ರಾಮಗಳಿಂದ ನಗರಗಳವರೆಗೆ ಸಾಧ್ಯವಿರುವ ಪ್ರತಿಯೊಂದು ಸ್ಥಳದಲ್ಲಿಯೂ ಯೋಗವನ್ನು ಮಾಡುವುದಷ್ಟೇ ಅಲ್ಲ ಎಲ್ಲರೂ ಒಗ್ಗೂಡಿ ಸಂಭ್ರಮಿಸಿದರು.
ವಿಶ್ವದ ಎಷ್ಟೋ ರಾಷ್ಟ್ರಗಳ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಪ್ರಸಿದ್ಧ ವ್ಯಕ್ತಿಗಳು, ಸಾಮಾನ್ಯ ನಾಗರಿಕರು ನನಗೆ ಟ್ವಿಟ್ಟರ್ ಮೂಲಕ ತಮ್ಮ ದೇಶದಲ್ಲಿ ಯೋಗಾಚರಣೆ ನಡೆಸಿದರು ಎಂಬುದನ್ನು ತೋರಿಸಿದರು. ಅಂದು ಇಡೀ ವಿಶ್ವವೇ ಒಂದು ಸಂತುಷ್ಟ ಕುಟುಂಬದಂತೆ ಕಾಣಿಸುತ್ತಿತ್ತು.
ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಸಂವೇದನಶೀಲ ಜನರ ಅವಶ್ಯಕತೆಯಿರುತ್ತದೆ. ಯೋಗ ಇದನ್ನು ಧೃಡಪಡಿಸುತ್ತದೆ. ಆದ್ದರಿಂದ ಯೋಗದ ಪ್ರಚಾರ ಮತ್ತು ಪ್ರಸಾರ ಸಮಾಜ ಸೇವೆಯ ಒಂದು ಮಹತ್ತರವಾದ ಕೆಲಸವಾಗಿದೆ. ಇಂಥ ಸೇವೆಯನ್ನು ಪರಿಗಣಿಸಿ ಸನ್ಮಾನಿಸುವುದು ಅವಶ್ಯಕವಲ್ಲವೇ? 2019 ನೇ ಸಾಲಿನಲ್ಲಿ ಯೋಗದ ಪ್ರಚಾರ ಮತ್ತು ಅಭಿವೃದ್ಧಿಯಲ್ಲಿ ಉತ್ಕøಷ್ಟ ಸೇವೆ ಸಲ್ಲಿಸಿದವರಿಗೆ ಪ್ರಧಾನ ಮಂತ್ರಿ ಪ್ರಶಸ್ತಿಯ ಘೋಷಣೆ ಮಾಡುವುದು ನನ್ನಲ್ಲಿ ಹೊಸ ಸಂತಸವನ್ನು ಮೂಡಿಸಿತ್ತು. ಯೋಗದ ಪ್ರಚಾರ ಮತ್ತು ಪ್ರಸಾರಕ್ಕೆ ನೀವು ಊಹಿಸಲೂ ಆಗದಂತಹ ಕೆಲಸಗಳನ್ನು ಮಾಡಿದ ವಿಶ್ವಾದ್ಯಂತದ ಸಂಘಟನೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಉದಾಹರಣೆಗೆ ‘ಜಪಾನ್ ಯೋಗನಿಕೇತನ’ ತೆಗೆದುಕೊಳ್ಳಿ. ಇದು ಯೋಗವನ್ನು ಜಪಾನ್ನಾದ್ಯಂತ ಜನಪ್ರಿಯಗೊಳಿಸಿದೆ ಮತ್ತು ತರಬೇತಿ ನೀಡುತ್ತಿದೆ. ಇಲ್ಲವೆ ಇಟಲಿಯ ಮಿಸ್ ಆಂಟೋನಿಟಾ ರೋಸಿ ಅವರ ಹೆಸರೇ ತೆಗೆದುಕೊಳ್ಳಿ. ಅವರು ಸರ್ವ ಯೋಗ ಇಂಟರ್ ನ್ಯಾಷನಲ್ ಅನ್ನು ಪ್ರಾರಂಭಿಸಿದರು ಮತ್ತು ಯೂರೋಪಿನಾದ್ಯಂತ ಯೋಗದ ಪ್ರಚಾರ-ಪ್ರಸಾರ ಮಾಡಿದರು. ಇದು ತಮಗೆ ತಾವೇ ಪ್ರೇರಣೆಯಾಗುವಂಥ ಒಂದು ಉದಾಹರಣೆಯಾಗಿದೆ. ಯೋಗಕ್ಕೆ ಸಂಬಂಧ ಪಟ್ಟ ಈ ವಿಷಯದಲ್ಲಿ, ಭಾರತೀಯರಾಗಿ ನಾವು ಹಿಂದೆ ಉಳಿಯುತ್ತೇವೆಯೇ? ಮುಂಗೇರ್ನ, ಬಿಹಾರ್ ಯೋಗ ವಿದ್ಯಾಲಯವನ್ನು ಸನ್ಮಾನಿಸಲಾಯಿತು, ಈ ಸಂಸ್ಥೆ ಕಳೆದ ಹಲವಾರು ದಶಕಗಳಿಂದ ಯೋಗಕ್ಕೆ ಸರ್ಮಪಿತವಾಗಿದೆ. ಹೀಗೇ, ಸ್ವಾಮಿ ರಾಜ ಋಷಿ ಮುನಿಯನ್ನೂ ಸನ್ಮಾನಿಸಲಾಯಿತು ಅವರು ಲೈಫ್ ಮಿಷನ್ ಮತ್ತು ಲಕುಲಿಶ್ ಯೋಗ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಯೋಗದ ವ್ಯಾಪಕವಾದ ಸಂಭ್ರಮಾಚರಣೆ ಮತ್ತು ಯೋಗದ ಸಂದೇಶವನ್ನು ಮನೆ ಮನೆಗೂ ತಲುಪಿಸುವವರಿಗೆ ಸನ್ಮಾನ, ಈ ಎರಡೂ ವಿಷಯಗಳು ಈ ಬಾರಿಯ ಯೋಗವನ್ನು ವಿಶೇಷವಾಗಿಸಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಯಾತ್ರೆ ಹೊಸ ಭಾವನೆ, ಹೊಸ ಅನುಭೂತಿ, ಹೊಸ ಸಂಕಲ್ಪ, ಹೊಸ ಸಾಮರ್ಥ್ಯದೊಂದಿಗೆ ಇಂದು ಆರಂಭವಾಗಿದೆ. ಜೊತೆಗೆ ನಾನು ನಿಮ್ಮ ಸಲಹೆಗಳಿಗಾಗಿ ಎದುರು ನೋಡುತ್ತಿರುತ್ತೇನೆ. ನಿಮ್ಮ ವಿಚಾರಗಳೊಂದಿಗೆ ಬೆರೆಯುವುದು ನನಗೊಂದು ಮಹತ್ವಪೂರ್ಣ ಯಾತ್ರೆಯಾಗಿದೆ. ಮನದ ಮಾತು ನೆಪ ಮಾತ್ರ. ಬನ್ನಿ, ನಾವು ಭೇಟಿಯಾಗೋಣ ನಮ್ಮ ಮಾತುಗಳನ್ನು ಮುಂದುವರೆಸೋಣ. ನಿಮ್ಮ ಭಾವನೆಗಳನ್ನ ಕೇಳುತ್ತಲೇ ಇರುತ್ತೇನೆ, ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಮತ್ತು ಅರ್ಥಮಾಡಿಕೊಳ್ಳತ್ತೇನೆ. ಹಾಗೂ ಕೆಲವೊಮ್ಮೆ ಆ ಭಾವನೆಗಳನ್ನೇ ರೂಢಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ. ನೀವೇ ನನಗೆ ಪ್ರೇರಣೆ, ನೀವೇ ನನ್ನ ಶಕ್ತಿ. ಬನ್ನಿ ನಾವು ಒಗ್ಗೂಡಿ ‘ಮನದ ಮಾತಿನ’ ಆನಂದ ಪಡೆಯುತ್ತಾ ಜೀವನದ ಜವಾಬ್ದಾರಿಗಳನ್ನ ನಿಭಾಯಿಸೋಣ. ಮುಂದಿನ ತಿಂಗಳು ಮತ್ತೊಂದು ಮನದ ಮಾತಿನಲ್ಲಿ ಮತ್ತೆ ಭೇಟಿಯಾಗೋಣ. ನಿಮ್ಮೆಲ್ಲರಿಗೂ ನನ್ನ ಅನಂತ ಅನಂತ ಧನ್ಯವಾದಗಳು.
ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಈ ತಿಂಗಳ 21 ನೇ ತಾರೀಖಿನಂದು ದೇಶಕ್ಕೆ ಬಹಳ ಶೋಕದಾಯಕ ಸುದ್ದಿಯೊಂದು ತಿಳಿಯಿತು. ಕರ್ನಾಟಕದ ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾ ಮಠದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮನ್ನಗಲಿದರು. ಶಿವಕುಮಾರ ಸ್ವಾಮೀಜಿಯವರು ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಸಮರ್ಪಿಸಿದ್ದರು. ಶರಣರಾದ ಅಣ್ಣ ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ –ಅಂದರೆ ಕಠಿಣ ಪರಿಶ್ರಮದ ಜೊತೆ ಜೊತೆಗೆ ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಗುವುದು ಭಗವಾನ್ ಶಿವನ ನಿವಾಸ ಸ್ಥಾನವಾದ ಕೈಲಾಸದಲ್ಲಿ ನೆಲೆಸಿರುವುದಕ್ಕೆ ಸಮ ಎಂದರ್ಥ. ಶಿವಕುಮಾರ ಸ್ವಾಮೀಜಿಯವರು ಇದೇ ಉಕ್ತಿಯ ಅನುಯಾಯಿಗಳಾಗಿದ್ದರು. ಅವರು ತಮ್ಮ 111 ವರ್ಷಗಳ ಸುದೀರ್ಘ ಜೀವಿತಾವಧಿಯಲ್ಲಿ ಸಾವಿರಾರು ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕೆಲಸ ಮಾಡಿದರು. ಇಂಗ್ಲೀಷ್, ಸಂಸ್ಕೃತಮತ್ತು ಕನ್ನಡ ಭಾಷೆಗಳಲ್ಲಿ ಅದ್ಭುತ ಪಾಂಡಿತ್ಯವನ್ನು ಹೊಂದಿದ ವಿದ್ವಾಂಸರ ಅಗ್ರಪಂಕ್ತಿಯಲ್ಲಿ ಅವರ ಹೆಸರನ್ನು ಎಣಿಸುವಂಥ ಕೀರ್ತಿ ಅವರದ್ದಾಗಿತ್ತು. ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಜನರಿಗೆ ಅನ್ನ, ಆಶ್ರಯ, ಶಿಕ್ಷಣ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಒದಗಿಸುವುದಕ್ಕೇ ತಮ್ಮ ಸಂಪೂರ್ಣ ಜೀವನವನ್ನು ಅವರು ಮುಡಿಪಾಗಿಟ್ಟಿದ್ದರು. ಸರ್ವ ರೀತಿಯಲ್ಲೂ ರೈತರ ಕಲ್ಯಾಣಾಭಿವೃದ್ಧಿ ವಿಷಯ ಸ್ವಾಮೀಜಿ ಅವರ ಜೀವನದಲ್ಲಿ ಪ್ರಾಧಾನ್ಯತೆ ಪಡೆದಿತ್ತು. ಸಿದ್ಧಗಂಗಾ ಮಠ ನಿಯತಕಾಲಿಕವಾಗಿ ರಾಸುಗಳು ಮತ್ತು ಕೃಷಿ ಮೇಳಗಳನ್ನು ಆಯೋಜಿಸುತ್ತಾ ಬಂದಿದೆ. ನನಗೆ ಅದೆಷ್ಟೋ ಬಾರಿ ಸ್ವಾಮೀಜಿಯವರ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ.2007 ರಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನಮ್ಮ ಅಂದಿನ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ತುಮಕೂರಿಗೆ ಹೋಗಿದ್ದರು. ಕಲಾಂ ಅವರು ಆ ಸಂದರ್ಭದಲ್ಲಿ ಸ್ವಾಮೀಜಿ ಅವರ ಬಗ್ಗೆ ಒಂದು ಕವಿತೆಯನ್ನು ಹೇಳಿದ್ದರು. ಅವರು ಹೇಳುತ್ತಾರೆ:
ಓ ನನ್ನ ದೇಶಬಾಂಧವರೇ,ಕೊಡುವುದರಲ್ಲಿ ನೀವು ಸಂತಸ ಪಡೆಯುವಿರಿ,
ತನು ಮನಗಳಲ್ಲಿ ಕೊಡುವುದೆಲ್ಲವೂ ಇದೆ.
ನಿಮ್ಮಲ್ಲಿ ಜ್ಞಾನವಿದೆಯಾದರೆ – ಹಂಚಿಕೊಳ್ಳಿ
ನಿಮ್ಮಲ್ಲಿ ಸಂಪನ್ಮೂಲವಿದ್ದರೆ –ಅವಶ್ಯಕತೆಯಿರುವವರೊಂದಿಗೆ ಹಂಚಿಕೊಳ್ಳಿ
ನೀವು, ನಿಮ್ಮ ಮನಸ್ಸು ಮತ್ತು ಹೃದಯ
ಬಾಧೆಯಲ್ಲಿರುವವರ ನೋವನ್ನು ನಿವಾರಿಸಲಿ
ದುಖಃತಪ್ತ ಮನಸ್ಸುಗಳನ್ನು ಉಲ್ಲಸಿತಗೊಳಿಸಲಿ,
ಕೊಡುವುದರಲ್ಲಿ ನೀವು ಸಂತೋಷ ಪಡೆಯುವಿರಿ.
ಅಂಥ ನಿಮ್ಮೆಲ್ಲ ಕಾರ್ಯಗಳಿಗೆ ದೇವರು ಆಶೀರ್ವದಿಸುತ್ತಾನೆ
ಡಾ. ಕಲಾಂ ಸಾಹೇಬರ ಈ ಕವಿತೆಯಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ ಮತ್ತು ಸಿದ್ಧಗಂಗಾ ಮಠದ ಧ್ಯೇಯದ ಕುರಿತು ಸುಂದರವಾಗಿ ವರ್ಣಿಸಲಾಗಿದೆ. ಮತ್ತೊಮ್ಮೆ ನಾನು ಇಂಥ ಮಹಾಪುರುಷರಿಗೆ ಶೃದ್ಧಾಂಜಲಿ ಸಲ್ಲಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ, 1950 ರ ಜನವರಿ 26 ರಂದು ನಮ್ಮ ದೇಶದ ಸಂವಿಧಾನ ಜಾರಿಗೆ ಬಂತು. ಅಂದು ನಮ್ಮ ದೇಶ ಗಣರಾಜ್ಯವಾಯಿತು. ನಿನ್ನೆಯಷ್ಟೇ ನಾವು ಅದ್ದೂರಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಿದೆವು. ಆದರೆ, ಇಂದು ನಾನು ಮತ್ತೊಂದು ವಿಷಯ ಪ್ರಸ್ತಾಪ ಮಾಡಲು ಇಚ್ಛಿಸುತ್ತೇನೆ. ನಮ್ಮ ದೇಶದಲ್ಲಿ ಒಂದು ಮಹತ್ವವಾದ ಸಂಸ್ಥೆಯಿದೆ, ಇದು ನಮ್ಮ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಗಣರಾಜ್ಯಕ್ಕಿಂತಲೂ ಹಳೆಯದು – ನಾನು ಭಾರತದ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೇನೆ. ಜನವರಿ 25ಚುನಾವಣಾ ಆಯೋಗದ ಸ್ಥಾಪನಾ ದಿನ. ಇದನ್ನು ರಾಷ್ಟ್ರೀಯ ಮತದಾರರ ದಿನ – ‘ನ್ಯಾಶನಲ್ ವೋಟರ್ಸ್ ಡೇ’ ಎಂದು ಆಚರಿಸಲಾಗುತ್ತದೆ. ಭಾರತದಲ್ಲಿ ಯಾವ ಮಟ್ಟದಲ್ಲಿ ಚುನಾವಣೆ ಸಿದ್ಧತೆ ನಡೆಯುತ್ತದೆ ಎಂದರೆ ವಿಶ್ವವೇ ಇದನ್ನು ಕಂಡು ನಿಬ್ಬೆರಗಾಗುತ್ತದೆ. ನಮ್ಮ ಚುನಾವಣಾ ಆಯೋಗ ಎಷ್ಟು ಸಮರ್ಥವಾಗಿ ಆಯೋಜಿಸುತ್ತದೆ ಎಂದರೆ ಇದನ್ನು ಕಂಡ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೂ ಚುನಾವಣಾ ಆಯೋಗದ ಬಗ್ಗೆ ಹೆಮ್ಮೆ ಪಡುವುದು ಸಹಜವಾಗಿದೆ. ನಮ್ಮ ದೇಶದಲ್ಲಿ ಮತದಾರನಾಗಿ ನೊಂದಾಯಿತರಾಗಿರುವ ಪ್ರತಿಯೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಲು ಸರ್ವ ಪ್ರಯತ್ನ ಮಾಡುತ್ತಿದೆ.
ಸಮುದ್ರ ಮಟ್ಟದಿಂದ 15 ಸಾವಿರ ಅಡಿ ಎತ್ತರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ನಾವು ಕೇಳಿದಾಗ, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ದೂರದ ಪ್ರದೇಶದಲ್ಲೂ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ಕೇಳಿದಾಗ ಹಾಗೂ ನಮ್ಮಗುಜರಾತಿನ ಗಿರ್ ಅರಣ್ಯದ ವಿಷಯವನ್ನಂತೂ ನೀವು ಕೇಳೇ ಇರುತ್ತೀರಿ. ಅಂಥ ದೂರದ ಪ್ರದೇಶದಲ್ಲ್ಲೂ ಕೇವಲ ಓರ್ವ ಮತದಾರನಿಗೋಸ್ಕರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಯೋಚಿಸಿ… .. ಕೇವಲ ಓರ್ವ ಮತದಾರನಿಗೋಸ್ಸರ ಎಂದರೆ ನೀವೇ ಊಹಿಸಿಕೊಳ್ಳಿ. ಇಂಥ ವಿಷಯಗಳನ್ನು ಕೇಳಿದಾಗ ಚುನಾವಣಾ ಆಯೋಗದ ಕುರಿತು ಹೆಮ್ಮೆಯೆನಿಸುವುದು ಸಹಜ. ಒಬ್ಬ ಮತದಾರನನ್ನ ಗಮನದಲ್ಲಿಟ್ಟುಕೊಂಡು ಅವನು ತನ್ನ ಮತಚಲಾಯಿಸುವ ಹಕ್ಕಿನಿಂದ ವಂಚಿತನಾಗಬಾರದೆಂದು ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಆ ದೂರದ ಪ್ರದೇಶಕ್ಕೆ ತೆರಳಿ ಮತದಾನದ ವ್ಯವಸ್ಥೆ ಮಾಡುತ್ತದೆ. ಇದೇ ನಮ್ಮ ಗಣರಾಜ್ಯದ ವೈಶಿಷ್ಟ್ಯತೆಯಾಗಿದೆ.
ನಮ್ಮ ಗಣರಾಜ್ಯವನ್ನು ಬಲಿಷ್ಠಗೊಳಿಸಲು ಚುನಾವಣಾ ಆಯೋಗ ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ. ಎಲ್ಲ ರಾಜ್ಯಗಳ ಚುನಾವಣಾ ಆಯೋಗ,ರಕ್ಷಣಾ ಪಡೆ ಮತ್ತು ಇತರ ಎಲ್ಲ ಉದ್ಯೋಗಿಗಳನ್ನೂ ನಾನು ಶ್ಲಾಘಿಸುತ್ತೇನೆ. ಇವರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಲ್ಲದೇ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಮತದಾನ ನಡೆಯುವಂತೆ ಖಾತರಿಪಡಿಸುತ್ತಾರೆ.
ಈ ವರ್ಷ ನಮ್ಮ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತದೆ. 21 ನೇ ಶತಮಾನದಲ್ಲಿ ಜನಿಸಿದ ಎಲ್ಲ ಯುವಕರು ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶವನ್ನು ಪ್ರಥಮ ಬಾರಿಗೆ ಪಡೆಯಲಿದ್ದಾರೆ. ಅವರು ದೇಶದ ಜವಾಬ್ದಾರಿಯನ್ನು ಹೊರುವಂಥ ಸಮಯ ಬಂದಿದೆ. ಈಗ ಅವರು ದೇಶದ ನಿರ್ಣಯ ಪ್ರಕ್ರಿಯೆಗಳಲ್ಲಿ ಭಾಗಿಯಾಗಲಿದ್ದಾರೆ. ತಮ್ಮ ಕನಸುಗಳನ್ನು ದೇಶದ ಕನಸುಗಳೊಂದಿಗೆ ಬೆರೆಸುವ ಸಮಯ ಸನ್ನಿಹಿತವಾಗಿದೆ. ತಾವು ಮತದಾನದ ವಯಸ್ಸನ್ನು ತಲುಪಿದ್ದಲ್ಲಿ ಖಂಡಿತ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ಯುವಜನತೆಗೆ ನಾನು ಕರೆ ನೀಡುತ್ತಿದ್ದೇನೆ. ದೇಶದಲ್ಲಿ ಮತದಾರನಾಗುವುದು, ಮತದಾನದ ಅಧಿಕಾರ ಪಡೆಯುವುದು ಜೀವನದ ಮಹತ್ವಪೂರ್ಣ ಅಂಶಗಳಲ್ಲಿ ಹಾಗೂ ಮಹತ್ವಪೂರ್ಣ ಹಂತಗಳಲ್ಲಿ ಒಂದಾಗಿದೆ ಎಂಬುದರ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಜೊತೆಗೆ ಮತದಾನ ಮಾಡುವುದು ನನ್ನ ಕರ್ತವ್ಯ – ಎಂಬ ಭಾವನೆ ನಮ್ಮ ಅಂತರಾಳದಲ್ಲಿ ಮಿಡಿಯಬೇಕು. ಜೀವನದಲ್ಲಿ ಯಾವುದೇ ಕಾರಣದಿಂದ ಮತಚಲಾಯಿಸಲು ಆಗದಿದ್ದಲ್ಲಿ ಅದರ ಬಾಧೆ ನಮಗಿರಬೇಕು. ದೇಶದಲ್ಲಿ ಎಂದಿಗೇ ಆಗಲಿ ಎಲ್ಲಿಯೇ ಆಗಲಿ ತಪ್ಪು ನಡೆಯುತ್ತಿದೆ ಎಂದು ತಿಳಿದಲ್ಲಿ ನಮಗೆ ನೋವಾಗಬೇಕು. ಹೌದು ನಾನು ಮತದಾನ ಮಾಡಿರಲಿಲ್ಲ,ಅಂದು ನಾನು ಮತ ಚಲಾಯಿಸಲು ಹೋಗಲಿಲ್ಲ, ಅದರ ಪರಿಣಾಮ ಇಂದು ನನ್ನ ದೇಶ ಅನುಭವಿಸುತ್ತಿದೆ. ಇಂಥ ಜವಾಬ್ದಾರಿಯ ಅನುಭವ ನಮಗಾಗಬೇಕು. ಇದು ನಮ್ಮ ವೃತ್ತಿ ಮತ್ತು ಪ್ರವೃತ್ತಿಯೂ ಆಗಬೇಕು. ಇದು ನಮ್ಮ ನಡವಳಿಕೆಯಾಗಬೇಕು. ನಾವೆಲ್ಲರೂ ಸೇರಿ ವೋಟರ್ ರೆಜಿಸ್ಟ್ರೇಶನ್ ಆಗಲಿ, ಮತದಾನದ ದಿನ ಮತಚಲಾಯಿಸುವುದಾಗಲಿ ಇದೆಲ್ಲದರ ಕುರಿತು ಪ್ರಚಾರ ಕಾರ್ಯ ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸೋಣ ಎಂದು ನಮ್ಮ ದೇಶದ ಖ್ಯಾತನಾಮರಲ್ಲಿ ನಾನು ಕೇಳಿಕೊಳ್ಳುತ್ತೇನೆ. ಯುವಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ. ತಮ್ಮ ಸಹಭಾಗಿತ್ವದೊಂದಿಗೆ ನಮ್ಮ ಗಣರಾಜ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಾರೆ ಎಂಬ ನಂಬಿಕೆಯಿದೆ.
ನನ್ನ ಪ್ರಿಯ ದೇಶವಾಸಿಗಳೇ,ಭಾರತದ ಈ ಪುಣ್ಯ ಭೂಮಿ ಸಾಕಷ್ಟು ಮಹಾಪುರುಷರಿಗೆ ಜನ್ಮ ನೀಡಿದೆ. ಆ ಮಹಾಪುರುಷರು ಮಾನವೀಯತೆಗಾಗಿ ಅದ್ಭುತವಾದ ಮತ್ತು ಮರೆಯಲಾಗದಂತಹ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ದೇಶ ಬಹುರತ್ನ ವಸುಂಧರೆ. ಇಂಥ ಮಹಾಪುರುಷರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕೂಡಾ ಒಬ್ಬರು. ಜನವರಿ 23 ಕ್ಕೆ ಇಡೀ ದೇಶವೇ ವಿಶೇಷವಾಗಿ ಇವರ ಜನ್ಮದಿನವನ್ನು ಆಚರಿಸಿತು. ನೇತಾಜಿ ಜನ್ಮಜಯಂತಿಯ ಅಂಗವಾಗಿ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮ ಬಲಿದಾನ ನೀಡಿದ ವೀರ ಪುರುಷರಿಗೆ ಸಮರ್ಪಿತವಾದ ಒಂದು ಸಂಗ್ರಹಾಲಯವನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆಯಿತು. ಸ್ವಾತಂತ್ರ್ಯದ ನಂತರದಿಂದ ಇಲ್ಲಿವರೆಗೆ ಕೆಂಪು ಕೋಟೆಯ ಹಲವಾರು ಕೊಠಡಿಗಳು ಉಪಯೋಗಿಸದೇ ಖಾಲಿಯಾಗಿದ್ದವು ಎಂಬುದು ನಿಮಗೆ ಗೊತ್ತು. ಹೀಗೆ ಖಾಲಿಯಿದ್ದ ಆ ಕೊಠಡಿಗಳನ್ನು ಸುಂದರ ಸಂಗ್ರಹಾಲಯಗಳಾಗಿ ಮಾರ್ಪಡಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ಸೇನೆಗೆ ಸಮರ್ಪಿತವಾದ ಸಂಗ್ರಹಾಲಯ: ಯಾದ್ ಎ ಜಲಿಯಾ ಮತ್ತು 1857ರ ಪ್ರಥಮ ಭಾರತೀಯ ಸ್ವತಂತ್ರ ಸಂಗ್ರಾಮದ ನೆನಪುಗಳಿಗೆ ಸಮರ್ಪಿಸಿದ ಸಂಗ್ರಹಾಲಯ. ಈ ಎಲ್ಲ ಸಂಗ್ರಹಾಲಯಗಳ ಪ್ರಾಂಗಣಕ್ಕೆ ‘ಕ್ರಾಂತಿ ಮಂದಿರ’ಎಂದು ಹೆಸರಿಸಿ ದೇಶಕ್ಕೆ ಸಮರ್ಪಿಸಲಾಗಿದೆ. ಈ ಸಂಗ್ರಹಾಲಯದ ಒಂದೊಂದು ಇಟ್ಟಿಗೆಯಲ್ಲೂ ನಮ್ಮ ದೇಶದ ಇತಿಹಾಸದ ಸುಗಂಧ ತುಂಬಿದೆ. ಸಂಗ್ರಹಾಲಯದ ಮೂಲೆ ಮೂಲೆಯಲ್ಲೂ ನಮ್ಮ ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಿದ ವೀರರ ಕಥೆಯನ್ನು ಹೇಳುವ ವಿಷಯಗಳು ಇತಿಹಾಸದ ಆಳಕ್ಕೆ ತೆರಳುವಂತೆ ನಮ್ಮನ್ನು ಪ್ರೇರೆಪಿಸುತ್ತವೆ. ಇದೇ ಸ್ಥಳದಲ್ಲಿಯೇ ಭಾರತಾಂಬೆಯ ವೀರಪುತ್ರರಾದಂತಹ ಕರ್ನಲ್ ಪ್ರೇಮ್ ಸೆಹೆಗಲ್, ಕರ್ನಲ್ ಗುರುಭಕ್ಷ ಸಿಂಗ್ ದಿಲ್ಲೋನ್ ಮತ್ತು ಮೇಜರ್ ಜನರಲ್ ಶಾ ನವಾಜ್ ಖಾನ್ ಅವರ ಮೇಲೆ ಬ್ರಿಟಿಷ್ ಸರ್ಕಾರ ಮೊಕದ್ದಮೆ ನಡೆಸಿತ್ತು. ನಾನು ಕೆಂಪು ಕೋಟೆಯ ಕ್ರಾಂತಿ ಮಂದಿರ್ನಭಲ್ಲಿ ನೇತಾಜಿಯವರ ನೆನಪುಗಳ ದರ್ಶನಗೈಯ್ಯುತ್ತಿದ್ದಾಗ ನೇತಾಜಿ ಕುಟುಂಬದವರು ಒಂದು ವಿಶೇಷ ಟೋಪಿಯನ್ನು ನನಗೆ ಕೊಡುಗೆಯಾಗಿ ನೀಡಿದರು. ನೇತಾಜಿಯವರು ಆ ಟೋಪಿಯನ್ನು ಯಾವಾಗಲೂ ಧರಿಸುತ್ತಿದ್ದರು. ಅಲ್ಲಿಗೆ ಬರುವ ಜನರೆಲ್ಲರೂ ಆ ಟೋಪಿಯನ್ನು ನೋಡಲಿ ಮತ್ತು ದೇಶಭಕ್ತಿಯ ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ನಾನು ಆ ಟೋಪಿಯನ್ನು ಸಂಗ್ರಹಾಲಯದಲ್ಲೇ ಇರಿಸಿದೆ. ನಮ್ಮ ಯುವ ಜನಾಂಗಕ್ಕೆ ನಮ್ಮ ದೇಶದ ನಾಯಕರ ಶೌರ್ಯ ಮತ್ತು ದೇಶಭಕ್ತಿಯ ಕುರಿತು ಬೇರೆ ಬೇರೆ ರೂಪದಲ್ಲಿ ಮತ್ತೆ ಮತ್ತೆ ಮಾಹಿತಿ ಒದಗಿಸುವ ಅವಶ್ಯಕತೆಯಿದೆ. ಇದೀಗ ಒಂದು ತಿಂಗಳ ಹಿಂದೆ ಡಿಸೆಂಬರ್ 30 ರಂದು ನಾನು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಹೋಗಿದ್ದೆ. 75 ವರ್ಷಗಳ ಹಿಂದೆ ನೇತಾಜಿ ಸುಭಾಷ್ ಬೋಸ್ ತ್ರಿವರ್ಣ ಧ್ವಜಾರೋಹಣ ಮಾಡಿದ ಸ್ಥಳದಲ್ಲೇ ಒಂದು ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲಾಯಿತು. ಇದೇ ರೀತಿ ಸ್ವತಂತ್ರ ಭಾರತದ ಸರ್ಕಾರ ರಚನೆಯ 75 ವರ್ಷ ಪೂರೈಸಿದ ಸಂದರ್ಭದಲ್ಲಿ ಅಕ್ಟೋಬರ್ 2018 ರಲ್ಲಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದಾಗ ಎಲ್ಲರಿಗೂ ಆಶ್ಚರ್ಯವಾಯಿತು ಏಕೆಂದರೆ ಅಗಸ್ಟ್ 15 ಕ್ಕೆ ಅಲ್ಲಿ ಧ್ವಜಾರೋಹಣ ಮಾಡುವ ಸಂಪ್ರದಾಯವಿತ್ತು.
ಸುಭಾಷ್ ಅವರನ್ನು ಒಬ್ಬ ವೀರ ಸೈನಿಕನಾಗಿ ಮತ್ತು ಕುಶಲ ಸಂಘಟನಾಕಾರನ ರೂಪದಲ್ಲಿ ಎಂದಿಗೂ ಸ್ಮರಿಸಲಾಗುವುದು. ಸ್ವಾತಂತ್ರ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ ಸೈನಿಕ ಅವರಾಗಿದ್ದರು. “ದಿಲ್ಲಿ ಚಲೋ” , ‘ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ ಕೊಡುವೆ’ ದಂತಹ ಪುಳಕಿತಗೊಳ್ಳುವ ಘೋಷಣೆಗಳಿಂದ ನೇತಾಜಿ ಎಲ್ಲ ಭಾರತೀಯರ ಮನದಲ್ಲಿ ಮನೆ ಮಾಡಿದ್ದಾರೆ. ನೇತಾಜಿಯವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ನಾವು ಈ ಕೆಲಸ ಮಾಡಿ ತೋರಿಸಿದ್ದೇವೆ ಎಂದು ಹೇಳಲು ನನಗೆ ಹರ್ಷವೆನಿಸುತ್ತದೆ. ನೇತಾಜಿಯವರ ಪೂರ್ಣ ಪರಿವಾರ ಪ್ರಧಾನಮಂತ್ರಿ ನಿವಾಸಕ್ಕೆ ಬಂದ ಆ ದಿನ ನನಗೆ ಇಂದಿಗೂ ನೆನಪಿದೆ. ನಾವೆಲ್ಲ ಸೇರಿ ನೇತಾಜಿಯವರ ಕುರಿತು ಹಲವಾರು ವಿಷಯಗಳನ್ನು ಚರ್ಚಿಸಿದೆವು ಮತ್ತು ಅವರಿಗೆ ಶೃದ್ಧಾಂಜಲಿ ಅರ್ಪಿಸಿದೆವು.
ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಸಂಬಂಧಿಸಿದ 26, ಅಲಿಪುರ್ ರಸ್ತೆಯಾಗಿರಬಹುದು, ಸರ್ದಾರ್ ಪಟೇಲ್ ಸಂಗ್ರಹವಾಗಿರಬಹುದು ಅಥವಾ ಕ್ರಾಂತಿ ಮಂದಿರವಾಗಿರಬಹುದು – ಹೀಗೆ ಭಾರತದ ಮಹಾನ್ ನಾಯಕರಿಗೆ ಸಂಬಂಧಿಸಿದ ಹಲವಾರು ಸ್ಥಳಗಳನ್ನು ದಿಲ್ಲಿಯಲ್ಲಿ ಸ್ಥಾಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಲು ನನಗೆ ಸಂತೋಷವೆನಿಸುತ್ತದೆ. ನೀವು ದೆಹಲಿಗೆ ಬಂದರೆ ಖಂಡಿತ ಈ ಸ್ಥಳಗಳಿಗೆ ಭೇಟಿ ನೀಡಿ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾವು ಮನದ ಮಾತಿನಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಿದ್ದೇನೆ. ರೇಡಿಯೋವನ್ನು ಜನರೊಂದಿಗೆ ಸಂಪರ್ಕ ಹೊಂದುವ ಮಹತ್ವಪೂರ್ಣ ಮಾಧ್ಯಮ ಎಂದು ನಾನು ಭಾವಿಸಿದ್ದೇನೆ. ಇದೇ ರೀತಿ ನೇತಾಜಿಯವರಿಗೂರೇಡಿಯೋದೊಂದಿಗೆ ಬಹಳ ಗಹನವಾದ ಸಂಬಂಧವಿತ್ತು. ಅವರು ಕೂಡಾ ದೇಶದ ಜನತೆಯೊಂದಿಗೆ ಮಾತನಾಡಲು ರೇಡಿಯೋವನ್ನೇ ಆಯ್ಕೆ ಮಾಡಿಕೊಂಡಿದ್ದರು.
1942 ರಲ್ಲಿ ಸುಭಾಷ್ ಅವರು ಆಜಾದ್ ಹಿಂದ್ ರೇಡಿಯೋವನ್ನು ಆರಂಭಿಸಿದ್ದರು. ರೇಡಿಯೋ ಮಾಧ್ಯಮದ ಮೂಲಕ “ಆಜಾದ್ ಹಿಂದ್ ಸೇನೆ” ಸೈನಿಕರು ಮತ್ತು ದೇಶದ ನಾಗರಿಕರೊಂದಿಗೆ ಮಾತನಾಡುತ್ತಿದ್ದರು. ಸುಭಾಷ್ ಅವರು ರೇಡಿಯೋದಲ್ಲಿ ಮಾತು ಆರಂಭಿಸುವ ರೀತಿ ವಿಶಿಷ್ಟವಾಗಿತ್ತು. ಅವರು ಸಂವಾದ ಆರಂಭಿಸಿದಾಗ ಎಲ್ಲಕ್ಕಿಂತ ಮೊದಲು ಹೇಳುತ್ತಿದ್ದುದು– ‘ದಿಸ್ ಈಸ್ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಪೀಕಿಂಗ್ ಟು ಯು ಓವರ್ ದಿ ಆಜಾದ್ ಹಿಂದ್ ರೇಡಿಯೋ’. ಇದನ್ನು ಕೇಳುತ್ತಿದ್ದಂತೆ ಶ್ರೋತೃಗಳ ಮನದಲ್ಲಿ ಹೊಸ ಹುಮ್ಮಸ್ಸು ಹೊಸ ಸ್ಪೂರ್ತಿಯ ಸಂಚಲನವಾಗುತ್ತಿತ್ತ್ತು.
ರೇಡಿಯೋ ಸ್ಟೇಶನ್ ಆಂಗ್ಲ, ಹಿಂದಿ,ತಮಿಳು, ಬಂಗಾಲಿ, ಮರಾಠಿ,ಪಂಜಾಬಿ, ಪಶ್ತೊ ಮತ್ತು ಉರ್ದು ಭಾಷೆಗಳಲ್ಲಿ ಸಾಪ್ತಾಹಿಕ ವಾರ್ತಾ ಸಂಚಿಕೆಯನ್ನು ಪ್ರಸಾರ ಮಾಡುತ್ತಿತ್ತು ಎಂದು ನನಗೆ ತಿಳಿಸಲಾಗಿದೆ. ಈ ರೇಡಿಯೋ ಸ್ಟೇಶನ್ ಅನ್ನು ನಿಯಂತ್ರಿಸುವಲ್ಲಿ ಗುಜರಾತ್ ನ ಎಂ. ಆರ್. ವ್ಯಾಸ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಆಜಾದ್ ಹಿಂದ್ ರೇಡಿಯೋದಲ್ಲಿ ಬಿತ್ತರಗೊಳ್ಳುವ ಕಾರ್ಯಕ್ರಮಗಳು ಸಾಕಷ್ಟು ಜನಪ್ರಿಯತೆಗಳಿಸಿದ್ದವು. ಈ ಕಾರ್ಯಕ್ರಮಗಳಿಂದ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಯೋಧರಿಗೂ ಬಹಳ ಪ್ರೇರಣೆ ಲಭಿಸುತ್ತಿತ್ತು.
ಇದೇ ಕ್ರಾಂತಿ ಮಂದಿರದಲ್ಲಿ ಒಂದು ದೃಶ್ಯಕಲಾ ಸಂಗ್ರಹಾಲಯವನ್ನೂ ಸ್ಥಾಪಿಸಲಾಗಿದೆ. ಇಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಬಹಳ ಆಕರ್ಷಕವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಸಂಗ್ರಹಾಲಯದಲ್ಲಿ ನಾಲ್ಕು ಐತಿಹಾಸಿಕ ಪ್ರದರ್ಶನಗಳಿವೆ ಮತ್ತು ಅವು 3 ಶತಮಾನಗಳ ಹಳೆಯದಾದ 450 ಕ್ಕೂ ಹೆಚ್ಚು ವರ್ಣಚಿತ್ರ ಮತ್ತು ಕಲಾಕೃತಿಗಳನ್ನು ಹೊಂದಿವೆ. ಸಂಗ್ರಹಾಲಯದಲ್ಲಿ ಅಮೃತಾ ಶೇರ್ಗಿಲ್, ರಾಜಾ ರವಿವರ್ಮಾ, ಅವನೀಂದ್ರ ನಾಥ್ ಠಾಗೋರ್, ಗಗನೇಂದ್ರ ನಾಥ್ ಠಾಗೋರ್, ನಂದಲಾಲ್ ಬೋಸ್,ಜಾಮಿನಿ ರಾಯ್ ಮತ್ತು ಸೈಲೋಜ್ ಮುಖರ್ಜಿಯವರಂತಹ ಮಹಾನ್ ಕಲಾವಿದರ ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ನೀವೆಲ್ಲರೂ ಅಲ್ಲಿಗೆ ಹೋಗಿ ಮತ್ತು ಗುರುದೇವ್ ರವಿಂದ್ರ ನಾಥ್ ಟ್ಯಾಗೋರ್ ಅವರ ಕಲಾಕೃತಿಗಳನ್ನು ತಪ್ಪದೇ ವೀಕ್ಷಿಸಿ ಎಂದು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ.
ಇಲ್ಲಿ ಕಲೆಗಳ ಬಗ್ಗೆ ಮಾತನಾಡುತ್ತಿದ್ದರೆ, ನಾನು ನಿಮಗೆ ಗುರುದೇವ ಠಾಗೋರ್ ಅತ್ಯುತ್ತಮ ಕೆಲಸಗಳನ್ನು ತಿಳಿದುಕೊಳ್ಳುವ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ನೀವು ಈಗ ಯೋಚಿಸುತ್ತಿರಬಹುದು. ಇದುವರೆಗೂ ನೀವು ಗುರುದೇವ ರವೀಂದ್ರನಾಥ ಠಾಗೋರ್ ಅವರನ್ನು ಒಬ್ಬ ಲೇಖಕ ಮತ್ತು ಸಂಗೀತಕಾರರ ರೂಪದಲ್ಲಿ ತಿಳಿದಿರಬಹುದು. ಆದರೆ ಗುರುದೇವ ಅವರು ಒಬ್ಬ ಚಿತ್ರಕಾರರು ಸಹ ಆಗಿದ್ದರು ಎಂಬುದನ್ನು ನಾನು ಹೇಳಬಯಸುತ್ತೇನೆ. ಅವರು ಬಹಳಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಅವರು ಪಶು ಪಕ್ಷಿಗಳ ಚಿತ್ರಗಳನ್ನು ಕೂಡ ರಚಿಸಿದ್ದಾರೆ;ಬಹಳಷ್ಟು ಸುಂದರ ದೃಶ್ಯಾವಳಿಗಳ ಚಿತ್ರಗಳನ್ನೂ ಬಿಡಿಸಿದ್ದಾರೆ. ಮತ್ತು ಅದಷ್ಟೇ ಅಲ್ಲದೆ ಅವರು ವ್ಯಕ್ತಿಗಳ ಪಾತ್ರಗಳನ್ನೂ ಸಹ ಕಲೆಯ ಮಾಧ್ಯಮದಲ್ಲಿ ಕ್ಯಾನ್ವಾಸಿನ ಮೇಲೆ ಮೂಡಿಸುವ ಕೆಲಸ ಮಾಡಿದ್ದಾರೆ. ಬಹಳ ಮುಖ್ಯವಾದ ವಿಷಯವೇನೆಂದರೆ ಗುರುದೇವ ಠಾಗೋರ್ ಅವರು ತಮ್ಮ ಬಹಳಷ್ಟು ಕಲಾಕೃತಿಗಳಿಗೆ ಯಾವುದೇ ಹೆಸರನ್ನೂ ಹಾಕಿಕೊಂಡಿಲ್ಲ. ಚಿತ್ರಕಲೆಯನ್ನು ನೋಡುವವರು ಸ್ವತಃ ಆ ಕಲಾಕೃತಿಯನ್ನು ತಿಳಿದುಕೊಳ್ಳಬೇಕು,ಕಲಾಕೃತಿಯ ಮುಖಾಂತರ ಅವರಿಂದ ಕೊಡಲ್ಪಟ್ಟ ಸಂದೇಶವನ್ನು ತಮ್ಮ ದೃಷ್ಟಿಯಲ್ಲಿ ಅರ್ಥಮಾಡಿಕೊಳ್ಳಬೇಕು ಎನ್ನುವುದು ಅವರ ನಿಲುವಾಗಿತ್ತು. ಅವರ ಕಲಾಕೃತಿಗಳನ್ನು ಯುರೋಪ್ ದೇಶಗಳಲ್ಲಿ, ರಶಿಯಾ ಮತ್ತು ಅಮೇರಿಕಾಗಳಲ್ಲಿ ಸಹ ಪ್ರದರ್ಶಿಸಲಾಗಿದೆ.
ಅವರ ಕಲಾಕೃತಿಗಳನ್ನು ನೋಡಲು ನೀವು ಖಂಡಿತವಾಗಿ ಕ್ರಾಂತಿ ಮಂದಿರಕ್ಕೆ ಹೋಗುತ್ತೀರಿ ಎನ್ನುವ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತವು ಸಂತರ ಭೂಮಿಯಾಗಿದೆ. ನಮ್ಮ ಸಂತರು ತಮ್ಮ ವಿಚಾರಗಳು ಹಾಗೂ ಕೆಲಸಗಳ ಮುಖಾಂತರ ಸದ್ಭಾವ, ಸಮಾನತೆ ಮತ್ತು ಸಾಮಾಜಿಕ ಸಬಲೀಕರಣದ ಸಂದೇಶ ನೀಡಿದ್ದಾರೆ. ಸಂತ ರವಿದಾಸರು ಅಂತಹ ಒಬ್ಬ ಸಂತ. ಫೆಬ್ರವರಿ 19 ರಂದು ರವಿದಾಸರ ಜಯಂತಿಯಾಗಿದೆ. ಸಂತ ರವಿದಾಸರ ದ್ವಿಪದಿಗಳು ಬಹಳ ಪ್ರಸಿದ್ಧಿಯಾಗಿವೆ. ಸಂತ ರವಿದಾಸರು ಕೆಲವೇ ಸಾಲುಗಳ ಮುಖಾಂತರ ದೊಡ್ಡ ದೊಡ್ಡ ಸಂದೇಶಗಳನ್ನು ನೀಡುತ್ತಿದ್ದರು.
“ಜಾತಿ ಜನಾಂಗದಲ್ಲಿ ಮುಂದುವರೆಯುತ್ತದೆ,
ಅದುವೇ ಅದರ ಹೆಗ್ಗುರುತು
ರಯಿದಾಸ್, ಮನುಷ್ಯರನ್ನು ಬೆಸೆಯಲು ಸಾಧ್ಯವಾಗದು
ಜಾತಿ ದೂರವಾಗದ ಹೊರತು”
ಎಂದು ಅವರು ಹೇಳಿದ್ದರು.
ಬಾಳೆಯ ದಿಂಡನ್ನು ಸುಲಿದರೆ ಯಾವ ರೀತಿ ಸಿಪ್ಪೆಯ ಕೆಳಗೆ ಸಿಪ್ಪೆ,ಮತ್ತೆ ಸಿಪ್ಪೆಯ ಕೆಳಗೆ ಸಿಪ್ಪೆ ಸಿಗುತ್ತಾ ಹೋಗಿ ಕೊನೆಗೆ ಏನೂ ಸಿಗುವುದಿಲ್ಲವೋ ಅದೇ ರೀತಿಯಾಗಿ ಮನುಷ್ಯರನ್ನೂ ಸಹ ಜಾತಿಗಳಲ್ಲಿ ಹರಿದು ಹಂಚಿ ಮಾನವ ಎನ್ನುವವನು ಇಲ್ಲವೇ ಇಲ್ಲ ಎನ್ನುವಂತೆ ಮಾಡಲಾಗಿದೆ. ಒಂದುವೇಳೆ ನಿಜವಾಗಿಯೂ ಭಗವಂತ ಪ್ರತೀ ಮನುಷ್ಯನಲ್ಲೂ ಇದ್ದಾನಾದರೆ ಅವನನ್ನು ಜಾತಿ,ಪಂಥ ಮತ್ತು ಇತರ ಸಾಮಾಜಿಕ ಬೇಧಗಳ ಅನುಸಾರವಾಗಿ ವಿಂಗಡಿಸುವುದು ಸರಿಯಲ್ಲ ಎಂದು ಅವರು ಹೇಳುತ್ತಿದ್ದರು.
ಪವಿತ್ರ ಭೂಮಿ ವಾರಣಾಸಿಯಲ್ಲಿ ಗುರು ರವಿದಾಸರ ಜನ್ಮವಾಯಿತು. ಸಂತ ರವಿದಾಸರು ತಮ್ಮ ಪೂರ್ತಿ ಜೀವಿತಾವಧಿಯಲ್ಲಿ ತಮ್ಮ ಸಂದೇಶಗಳ ಮೂಲಕ ಶ್ರಮ ಮತ್ತು ಶ್ರಮಿಕರ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದರು. ಶ್ರಮದ ಹೆಮ್ಮೆಯ ವಾಸ್ತವಿಕ ಅರ್ಥವನ್ನು ಅವರು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರೆ ಅದು ತಪ್ಪಾಗಲಾರದು.
“ಮನಸು ಸರಿಯಾಗಿದ್ದರೆ ಹೃದಯದಲ್ಲಿ ಗಂಗೆ ಇರುತ್ತದೆ” ಎಂದು ಅವರು ಹೇಳುತ್ತಿದ್ದರು.
ಇದರ ಅರ್ಥ “ಒಂದುವೇಳೆ ನಿಮ್ಮ ಮನಸ್ಸು ಮತ್ತು ಹೃದಯ ಪಾವಿತ್ರ್ಯತೆಯಿಂದ ಕೂಡಿದ್ದರೆ,ಸಾಕ್ಷಾತ್ ಪರಮೇಶ್ವರನು ನಿಮ್ಮ ಹೃದಯದಲ್ಲಿ ನೆಲೆಸುತ್ತಾನೆ” ಎಂದು. ಸಂತ ರವಿದಾಸರ ಸಂದೇಶಗಳು ಎಲ್ಲಾ ಭಾಗದ, ಎಲ್ಲಾ ವರ್ಗದ ಜನರನ್ನು ಪ್ರಭಾವಿತಗೊಳಿಸಿದೆ. ಚಿತ್ತೋರ್ನವ ಮಹಾರಾಜ ಮತ್ತು ಮಹಾರಾಣಿ, ಮೀರಾಬಾಯಿ ಇವರೆಲ್ಲ ಅವರ ಅನುಯಾಯಿಗಳಾಗಿದ್ದರು.
ನಾನು ಮತ್ತೊಮ್ಮೆ ಸಂತ ರವಿದಾಸರಿಗೆ ನಮಸ್ಕರಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ,ನಾನು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ಅದರ ಭವಿಷ್ಯದ ಜೊತೆಗೆ ಬೆಸೆದುಕೊಂಡಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಕಿರಣ್ ಸಿದರ್ ಅವರು ಮೈಗೌ (mygov.gov.in) ನಲ್ಲಿ ಬರೆದಿದ್ದಾರೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅಭಿರುಚಿ ಇಟ್ಟುಕೊಂಡು ಸ್ವಲ್ಪ ವಿಭಿನ್ನವಾಗಿ, ಆಕಾಶಕ್ಕಿಂತ ಎತ್ತರಕ್ಕೆ ಹೋಗಿ ಯೋಚಿಸಬೇಕು ಎಂದು ವಿದ್ಯಾರ್ಥಿಗಳನ್ನು ಕುರಿತು ನಾನು ಆಗ್ರಹಿಸಬೇಕು ಎಂದು ಸಹ ಇವರು ನನ್ನಿಂದ ಬಯಸುತ್ತಿದ್ದಾರೆ. ಕಿರಣ್ ಅವರೇ, ನಾನು ತಮ್ಮ ಈ ವಿಚಾರಕ್ಕೆ ಮತ್ತು ವಿಶೇಷವಾಗಿ ನಮ್ಮ ಮಕ್ಕಳಿಗಾಗಿ ಕೊಟ್ಟಿರುವ ಸಂದೇಶಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದೇನೆ.
ಕೆಲವು ದಿನಗಳ ಹಿಂದೆ ನಾನು ಅಹಮದಾಬಾದ್ ಗೆ ಹೋಗಿದ್ದೆ. ನನಗೆ ಅಲ್ಲಿ ಡಾ. ವಿಕ್ರಂ ಸಾರಾಭಾಯಿಯವರ ಪ್ರತಿಮೆಯನ್ನು ಅನಾವರಣಗೊಳಿಸುವ ಸೌಭಾಗ್ಯ ದೊರಕಿತ್ತು. ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಡಾ. ವಿಕ್ರಂ ಸಾರಾಭಾಯಿಯವರ ಒಂದು ಮಹತ್ವಪೂರ್ಣವಾದ ಕೊಡುಗೆ ಇದೆ;ದೇಶದ ಅಸಂಖ್ಯಾತ ಯುವ ವಿಜ್ಞಾನಿಗಳ ಕೊಡುಗೆ ಇದೆ. ಇಂದು ನಮ್ಮ ವಿದ್ಯಾರ್ಥಿಗಳಿಂದ ಅಭಿವೃದ್ಧಿ ಪಡಿಸಲ್ಪಟ್ಟ ಉಪಗ್ರಹಗಳು ಮತ್ತು ಶಬ್ದ ಸಂವೇದಿ ರಾಕೆಟ್ ಗಳು ಬಾಹ್ಯಾಕಾಶದವರೆಗೆ ತಲುಪುತ್ತಿವೆ. ಇದೇ 24 ರಂದು ನಮ್ಮ ವಿದ್ಯಾರ್ಥಿಗಳಿಂದ ನಿರ್ಮಿಸಲ್ಪಟ್ಟ ‘ಕಲಾಮ್ ಸ್ಯಾಟ್’ ಅನ್ನು ಹಾರಿ ಬಿಡಲಾಗಿದೆ. ಒರಿಸ್ಸಾದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಶಬ್ದ ಸಂವೇದಿ ರಾಕೆಟ್ ಗಳು ಕೂಡ ಹಲವಾರು ದಾಖಲೆಗಳನ್ನು ಮಾಡಿವೆ. ದೇಶವು ಸ್ವತಂತ್ರವಾದಾಗಿನಿಂದ 2014ರವರೆಗೆ ಎಷ್ಟು ಬಾಹ್ಯಾಕಾಶ ಯೋಜನೆಗಳು ಆಗಿವೆಯೋ ಹೆಚ್ಚು ಕಮ್ಮಿ ಅಷ್ಟೇ ಬಾಹ್ಯಾಕಾಶ ಯೋಜನೆಗಳ ಪ್ರಾರಂಭ ಕಳೆದ ನಾಲ್ಕು ವರ್ಷಗಳಲ್ಲಿ ಆಗಿವೆ. ನಾವು ಒಂದೇ ಒಂದು ಬಾಹ್ಯಾಕಾಶ ಯಾನದಲ್ಲಿ ಒಟ್ಟಿಗೆ 104ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವ ದಾಖಲೆ ಮಾಡಿದ್ದೇವೆ. ಸಧ್ಯದಲ್ಲೇ ಚಂದ್ರಯಾನ-2ಅಭಿಯಾನದ ಮೂಲಕ ನಾವು ಚಂದ್ರನ ಮೇಲೆ ಭಾರತದ ಹಾಜರಿಯನ್ನೂ ಹಾಕಲಿದ್ದೇವೆ.
ನಮ್ಮ ದೇಶವು ಬಾಹ್ಯಾಕಾಶ ತಂತ್ರಜ್ಞಾನವನ್ನು ದೇಶದ ರಕ್ಷಣೆಗಾಗಿ ಸಹ ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದೆ. ಚಂಡಮಾರುತವಾಗಿರಲಿ, ರೈಲ್ವೆ ಮತ್ತು ರಸ್ತೆ ಸುರಕ್ಷತೆಯಾಗಿರಲಿ,ಇವೆಲ್ಲವುಗಳಲ್ಲಿಯೂ ಬಾಹ್ಯಾಕಾಶ ತಂತ್ರಜ್ಞಾನದಿಂದ ಸಾಕಷ್ಟು ಸಹಾಯ ಸಿಗುತ್ತಿದೆ. ನಮ್ಮ ಮೀನುಗಾರ ಸೋದರರಿಗೆ ನಾವಿಕ್ ಡಿವೈಸಸ್ (navic devices) ಹಂಚಲಾಗಿದೆ. ಇದು ಅವರ ಸುರಕ್ಷತೆಯ ಜೊತೆ ಜೊತೆಗೆ ಆರ್ಥಿಕ ಉನ್ನತಿ ಸಾಧಿಸುವುದರಲ್ಲಿಯೂ ಸಹಾಯಕವಾಗಿದೆ. ಸರ್ಕಾರಿ ಸೇವೆಗಳ ಬಟವಾಡೆ ಮತ್ತು ಹೊಣೆಗಾರಿಕೆಯನ್ನು ಮತ್ತಷ್ಟು ಉತ್ತಮವಾಗಿಸಲು ನಾವು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಹೌಸಿಂಗ್ ಫೊರ್ ಆಲ್ (housing for all)ಅಂದರೆ “ಎಲ್ಲರಿಗೂ ಮನೆ” ಎನ್ನುವ ಯೋಜನೆಯ ಅಡಿಯಲ್ಲಿ 23ರಾಜ್ಯಗಳ ಸುಮಾರು 40 ಲಕ್ಷ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಇದರ ಜೊತೆಗೇಮನ್ರೇಗಾ MNREGA ದ ಮೂಲಕ ಮೂರೂವರೆ ಕೋಟಿ ಆಸ್ತಿಗಳಿಗೆ ಸಹ ಜಿಯೋ ಟ್ಯಾಗ್ ಮಾಡಲಾಯಿತು. ಇಂದು ನಮ್ಮ ಉಪಗ್ರಹಗಳು ದೇಶದ ಹೆಚ್ಚುತ್ತಿರುವ ಶಕ್ತಿಯ ಪ್ರತೀಕವಾಗಿವೆ. ವಿಶ್ವದ ಬಹಳಷ್ಟು ದೇಶಗಳ ಜೊತೆ ನಮ್ಮ ಸಂಬಂಧ ಉತ್ತಮಗೊಳಿಸುವಲ್ಲಿ ಇವುಗಳ ಕೊಡುಗೆ ಬಹು ದೊಡ್ಡದು. ದಕ್ಷಿಣ ಏಷ್ಯಾದ ಉಪಗ್ರಹಗಳು ತಮ್ಮ ನೆರೆಯ ಮಿತ್ರ ರಾಷ್ಟ್ರಗಳಿಗೆ ಕೂಡ ವಿಕಾಸದ ಕೊಡುಗೆ ನೀಡುವಲ್ಲಿ ಅನನ್ಯ ರೀತಿಯ ಮಾನ್ಯತೆ ಪಡೆದಿವೆ. ಅತ್ಯಂತ ಸ್ಪರ್ಧಾತ್ಮಕ ಉಡಾವಣಾ ಸೇವೆಗಳ ಮೂಲಕ ಭಾರತವು ಇಂದು ಬರೀ ಅಭಿವೃದ್ಧಿಶೀಲ ರಾಷ್ಟ್ರಗಳಷ್ಟೇ ಅಲ್ಲದೆ, ಅಭಿವೃದ್ಧಿ ಹೊಂದಿದ ದೇಶಗಳ ಉಪಗ್ರಹಗಳನ್ನೂ ಸಹ ಉಡಾವಣೆ ಮಾಡುತ್ತಿದೆ. ಮಕ್ಕಳಿಗೆ ಯಾವಾಗಲೂ ಆಕಾಶ ಮತ್ತು ನಕ್ಷತ್ರ ಬಹಳ ಆಕರ್ಷಣೀಯವಾಗಿರುತ್ತದೆ. ನಮ್ಮ ಬಾಹ್ಯಾಕಾಶ ಯೋಜನೆಗಳು ಮಕ್ಕಳಿಗೆ ದೊಡ್ಡದಾಗಿ ಯೋಚಿಸುವ ಮತ್ತು ಅವರ ಪರಿಧಿಯ ಆಚೆಗೆ ಮುಂದುವರೆಯುವ ಅವಕಾಶ ಒದಗಿಸಿಕೊಡುತ್ತದೆ. ಇದನ್ನು ಇದುವರೆಗೂ ಅಸಂಭವ ಎಂದು ಪರಿಗಣಿಸಲಾಗಿತ್ತು. ನಕ್ಷತ್ರಗಳನ್ನು ವೀಕ್ಷಿಸುವ ಜೊತೆ ಜೊತೆಗೆ ಹೊಸ ಹೊಸ ನಕ್ಷತ್ರಗಳನ್ನು ಶೋಧಿಸುವ ನಿಟ್ಟಿನಲ್ಲಿ ಇದು ನಮ್ಮ ಮಕ್ಕಳಿಗೆ ಪ್ರೇರಣೆ ನೀಡುವ ಒಂದು ದೃಷ್ಟಿಕೋನವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,ಯಾರು ಆಡುತ್ತಾರೆಯೋ ಅವರು ಅರಳುತ್ತಾರೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಈ ಬಾರಿ ಖೇಲೋ ಇಂಡಿಯಾ ದ ಮುಖೇನ ಬಹಳಷ್ಟು ತರುಣ ಮತ್ತು ಯುವ ಆಟಗಾರರು ಅರಳಿ,ನಮ್ಮೆದುರಿಗೆ ಮೂಡಿದರು. ಜನವರಿ ತಿಂಗಳಲ್ಲಿ ಪೂನಾದಲ್ಲಿ ಖೇಲೋ ಇಂಡಿಯಾ ಯೂಥ್ ಗೇಮ್ಸ್ ನಲ್ಲಿ18 ಆಟೋಟಗಳಲ್ಲಿ ಸುಮಾರು 6ಸಾವಿರ ಆಟಗಾರರು ಭಾಗವಹಿಸಿದ್ದರು. ಯಾವಾಗ ನಮ್ಮ ಆಟೋಟಗಳ ಪ್ರಾದೇಶಿಕ ಪರಿಸರ ಗಟ್ಟಿಯಾಗುತ್ತದೆಯೋ ಆಗ ನಮ್ಮ ತಳಹದಿ ಗಟ್ಟಿಯಾಗುತ್ತದೆ,ಹಾಗಾದಾಗ ಮಾತ್ರ ನಮ್ಮ ಯುವಕರು ದೇಶ ಮತ್ತು ವಿಶ್ವದೆಲ್ಲೆಡೆ ತಮ್ಮ ಕಾರ್ಯಕ್ಷಮತೆಯ ಅತ್ಯುತ್ತಮ ಪ್ರದರ್ಶನ ನೀಡಬಲ್ಲರು. ಪ್ರಾದೇಶಿಕ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದಾಗ ಮಾತ್ರ ಜಾಗತಿಕ ಮಟ್ಟದಲ್ಲಿ ಸಹ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಈ ಬಾರಿ ಖೇಲೋ ಇಂಡಿಯಾ ದಲ್ಲಿ ಪ್ರತಿ ರಾಜ್ಯದ ಆಟಗಾರರು ತಮ್ಮ ಶಕ್ತ್ಯಾನುಸಾರ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಪದಕ ಗೆದ್ದಂತಹ ಬಹಳಷ್ಟು ಆಟಗಾರರ ಜೀವನವು ಪ್ರಭಾವಶಾಲಿ ಪ್ರೇರಣೆ ನೀಡುವಂತಹುದ್ದಾಗಿದೆ.
ಬಾಕ್ಸಿಂಗಿನ ಯುವ ಆಟಗಾರ ಆಕಾಶ್ ಗೋರ್ಖಾ ಬೆಳ್ಳಿಯ ಪದಕ ಗೆದ್ದರು. ಆಕಾಶ್ ಅವರ ತಂದೆ ರಮೇಶ್ ಅವರು ಪೂನಾದಲ್ಲಿ ಒಂದು ಕಾಂಪ್ಲೆಕ್ಸ್ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಾರೆ ಎಂದು ನಾನು ಓದಿದ್ದೆ. ತಮ್ಮ ಪರಿವಾರದವರೊಡನೆ ಅವರು ಒಂದು ಪಾಕಿರ್ಂಗ್ ಶೆಡ್ ನಲ್ಲಿ ವಾಸವಾಗಿದ್ದಾರೆ. ಅದೇ ಮಹಾರಾಷ್ಟ್ರದ ಸತಾರಾದಲ್ಲಿ 21 ರ ವಯೋಮಾನದ ಒಳಗಿನ ಮಹಿಳಾ ಕಬಡ್ಡಿ ಟೀಮಿನಲ್ಲಿ ಕ್ಯಾಪ್ಟನ್ ಸೋನಾಲಿ ಹೆಳವಿ ಇದ್ದಾರೆ. ಅವರು ಅತಿ ಕಡಿಮೆ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು, ಅವರ ಸೋದರ ಮತ್ತು ತಾಯಿ ಸೋನಾಲಿ ಅವರ ಕೌಶಲ್ಯತೆಯನ್ನು ಪೋಷಿಸಿದರು. ಕಬಡ್ಡಿಯಂತಹ ಆಟದಲ್ಲಿ ಹೆಣ್ಣುಮಕ್ಕಳಿಗೆ ಅಷ್ಟೊಂದು ಉತ್ತೇಜನ ಸಿಗುವುದಿಲ್ಲ ಎನ್ನುವುದನ್ನು ಹೆಚ್ಚಾಗಿ ಗಮನಿಸಿರುತ್ತೇವೆ. ಹಾಗಿದ್ದರೂ ಸಹ ಸೋನಾಲಿ ಅವರು ಕಬಡ್ಡಿಯನ್ನು ಆರಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದರು. ಆಸನ್ಸೋ ಲ್ ನ 10 ವರ್ಷದ ಅಭಿನವ್ ಶಾ ಖೇಲೋ ಇಂಡಿಯಾ ಯೂಥ್ ಗೇಮ್ಸ್ ನ್ನು ಪದಕ ವಿಜೇತರಲ್ಲಿ ಅತ್ಯಂತ ಕಿರಿಯ ವಯಸ್ಸಿನವರು. ಕರ್ನಾಟಕದ ಒಬ್ಬ ರೈತನ ಮಗಳು ಅಕ್ಷತಾ ಬಾಸವಾಣಿ ಕಮತಿ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಅವರು ತಮ್ಮ ಗೆಲುವಿನ ಶ್ರೇಯಸ್ಸನ್ನು ತಮ್ಮ ತಂದೆಗೆ ಅರ್ಪಿಸಿದರು. ಅವರ ತಂದೆ ಬೆಳಗಾವಿಯಲ್ಲಿ ಒಬ್ಬ ರೈತನಾಗಿದ್ದಾರೆ. ಯಾವಾಗ ನಾವು ಭಾರತದ ನಿರ್ಮಾಣದ ಮಾತನಾಡುತ್ತಿದ್ದೇವೆಯೋ ಅದು ಯುವಶಕ್ತಿಯ ಸಂಕಲ್ಪದ ನವಭಾರತವಾಗಿದೆ. ನವ ಭಾರತದ ನಿರ್ಮಾಣದಲ್ಲಿ ಬರೀ ದೊಡ್ಡ ಪಟ್ಟಣಗಳ ಜನರ ಕೊಡುಗೆ ಮಾತ್ರವಲ್ಲ; ಸಣ್ಣ ಪಟ್ಟಣಗಳು,ಹಳ್ಳಿಗಳು, ಹೋಬಳಿಗಳಿಂದ ಬಂದ ಯುವಕರು, ಮಕ್ಕಳು, ಯುವ ಕ್ರೀಡಾ ಪ್ರತಿಭೆಗಳು – ಇವರುಗಳ ಕೊಡುಗೆಯೂ ಬಹಳ ದೊಡ್ಡದಾಗಿದೆ ಎಂದು ಖೇಲೋ ಇಂಡಿಯಾದ ಈ ಕಥೆಗಳು ಹೇಳುತ್ತಿವೆ.
ನನ್ನ ಪ್ರೀತಿಯ ದೇಶವಾಸಿಗಳೇ,ನೀವು ಬಹಳಷ್ಟು ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳ ಬಗ್ಗೆ ಕೇಳಿರಬಹುದು. ಆದರೆ ನೀವು ಶೌಚಾಲಯವನ್ನು ಹೊಳೆಯುವಂತೆ ಮಾಡುವ ಸ್ಪರ್ಧೆಯ ಬಗ್ಗೆ ಕೇಳಿದ್ದೀರಾ? ಅರೇ,, ಸುಮಾರು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಈ ವಿಭಿನ್ನ ಸ್ಪರ್ಧೆಯಲ್ಲಿ 50 ಲಕ್ಷಕ್ಕಿಂತಲೂ ಅಧಿಕ ಶೌಚಾಲಯಗಳು ಭಾಗವಹಿಸುತ್ತಿವೆ ಕೂಡ. ಈ ವಿಭಿನ್ನ ಸ್ಪರ್ಧೆಯ ಹೆಸರು “ಸ್ವಚ್ಚ ಸುಂದರ ಶೌಚಾಲಯ”. ಜನರು ತಮ್ಮ ಶೌಚಾಲಯಗಳನ್ನು ಸ್ವಚ್ಚವಾಗಿರಿಸಿಕೊಳ್ಳುವುದರ ಜೊತೆಗೆ ಅದಕ್ಕೆ ಸುಣ್ಣ ಬಣ್ಣ ಬಳಿದು ಕೆಲವು ಪೈಂಟಿಂಗ್ ಗಳನ್ನು ಹಾಕಿ ಸುಂದರವಾಗಿ ಕಾಣುವಂತೆಯೂ ಸಹ ಮಾಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್ನಿಂ ದ ಕಾಮರೂಪದವರೆಗಿನ “ಸ್ವಚ್ಚ ಸುಂದರ ಶೌಚಾಲಯಗಳ” ಬಹಳಷ್ಟು ಫೋಟೋಗಳು ನಿಮಗೆ ಸಾಮಾಜಿಕ ಮಾಧ್ಯಮದಲ್ಲಿ ಸಹ ನೋಡಲು ಸಿಗುತ್ತಿವೆ. ನಾನು ಎಲ್ಲಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಮುಖ್ಯಸ್ಥರನ್ನು ತಮ್ಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಈ ಅಭಿಯಾನದ ನೇತೃತ್ವವನ್ನು ವಹಿಸಿಕೊಳ್ಳಲು ಆಹ್ವಾನಿಸುತ್ತಿದ್ದೇನೆ. ನೀವು “ಸ್ವಚ್ಚ ಸುಂದರ ಶೌಚಾಲಯ”ದ ಫೋಟೋಗಳನ್ನು #MylzzatGhar ನ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಶ್ಯವಾಗಿ ಹಂಚಿಕೊಳ್ಳಿ.
ಸ್ನೇಹಿತರೇ, ಅಕ್ಟೋಬರ್ 2, 2014ರಂದು ನಾವು ನಮ್ಮ ದೇಶವನ್ನು ಸ್ವಚ್ಚಗೊಳಿಸುವ ಮತ್ತು ಬಯಲು ಶೌಚದಿಂದ ಮುಕ್ತಗೊಳಿಸುವ ಸಲುವಾಗಿ, ಒಟ್ಟಿಗೆ ಸೇರಿ ಒಂದು ಅವಿಸ್ಮರಣೀಯ ಯಾತ್ರೆಯನ್ನು ಪ್ರಾರಂಭಿಸಿದ್ದೆವು. ಪ್ರತಿಯೊಬ್ಬ ಪ್ರಜೆಯ ಸಹಯೋಗದಿಂದ ಇಂದು ಅಕ್ಟೋಬರ್ 2, 2019 ಕ್ಕೆ ಸಾಕಷ್ಟು ಮುಂಚಿತವಾಗಿಯೇ ಭಾರತವು ಬಯಲು ಶೌಚ ಮುಕ್ತವಾಗುವತ್ತ ಮಂಚೂಣಿಯಲ್ಲಿದೆ, ಇದರಿಂದ ಬಾಪೂರವರಿಗೆ ಅವರ 150 ನೇ ಜನ್ಮದಿನದಂದು ನಿಜವಾದ ಶ್ರದ್ಧಾಂಜಲಿ ಸಲ್ಲಿಸಬಹುದು.
ಸ್ವಚ್ಚ ಭಾರತದ ಈ ಅವಿಸ್ಮರಣೀಯ ಯಾತ್ರೆಯಲ್ಲಿ ಮನದ ಮಾತು ಕಾರ್ಯಕ್ರಮದ ಕೇಳುಗರ ಕೊಡುಗೆ ಸಹ ಸಾಕಷ್ಟಿದೆ. ಆದ್ದರಿಂದ, 5 ಲಕ್ಷ50 ಸಾವಿರಕ್ಕೂ ಅಧಿಕ ಹಳ್ಳಿಗಳು ಮತ್ತು 600 ಜಿಲ್ಲೆಗಳು ಸ್ವಯಂ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ; ಗ್ರಾಮೀಣ ಭಾರತದಲ್ಲಿ ಸ್ವಚ್ಚತೆಯ ವ್ಯಾಪ್ತಿ ಶೇಕಡಾ 98 ನ್ನು ಮೀರಿದೆ ಮತ್ತು ಸುಮಾರು 9 ಕೋಟಿ ಪರಿವಾರಗಳಿಗೆ ಶೌಚಾಲಯದ ಅನುಕೂಲ ದೊರೆಯುವಂತೆ ಮಾಡಲಾಗಿದೆ ಎನ್ನುವ ಮಾತನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.
ನನ್ನ ಪುಟಾಣಿ ಸ್ನೇಹಿತರೇ,ಪರೀಕ್ಷೆಯ ದಿನಗಳು ಬರುತ್ತಿವೆ. ನಾನು ಪರೀಕ್ಷೆಗಳು ಮತ್ತು ಎಕ್ಸಾಮ್ ವಾರಿಯರ್ಸ್ ಇವುಗಳ ಬಗ್ಗೆ ಮಾತನಾಡಬೇಕು ಎಂದು ಹಿಮಾಚಲ ಪ್ರದೇಶದ ನಿವಾಸಿ ಅನ್ಶುಲ್ ಶರ್ಮ ಅವರು ಮೈಗೌ (mygov.gov.in) ನಲ್ಲಿ ಬರೆದಿದ್ದಾರೆ. ಅನ್ಶುಲ್ ಅವರೇ, ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ನಿಮಗೆ ಧನ್ಯವಾದ. ಹೌದು,ಬಹಳಷ್ಟು ಪರಿವಾರಗಳಿಗೆ ವರ್ಷದ ಮೊದಲಾರ್ಧ ಪರೀಕ್ಷಾ ಸಮಯ ಆಗಿರುತ್ತದೆ. ವಿದ್ಯಾರ್ಥಿ, ಅವರ ತಂದೆ ತಾಯಿಯರಿಂದ ಶಿಕ್ಷಕರವರೆಗೆ ಎಲ್ಲಾ ಜನರೂ ಪರೀಕ್ಷೆಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳು, ಅವರ ತಂದೆ ತಾಯಂದಿರು ಮತ್ತು ಶಿಕ್ಷಕರಿಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತಿದ್ದೇನೆ. ಈ ವಿಷಯದ ಬಗ್ಗೆ ಇಂದು ಮನದ ಮಾತಿನ ಈ ಕಾರ್ಯಕ್ರಮದಲ್ಲಿ ಚರ್ಚಿಸಲು ಖಂಡಿತವಾಗಿಯೂ ಇಚ್ಚಿಸಿದ್ದೆ, ಆದರೆ ಕೇವಲ 2 ದಿನಗಳ ನಂತರ ಜನವರಿ29 ರಂದು ಬೆಳಗ್ಗೆ 11 ಘಂಟೆಗೆ“ಪರೀಕ್ಷಾ ಪೆ ಚರ್ಚಾ” ಎನ್ನುವ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ವಿದ್ಯಾರ್ಥಿಗಳ ಜೊತೆ ನಾನು ಮಾತುಕತೆ ನಡೆಸಲಿದ್ದೇನೆ ಎನ್ನುವುದನ್ನು ತಿಳಿದು ನಿಮಗೆ ಸಂತೋಷವಾಗಬಹುದು. ಈ ಬಾರಿ ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರು ಹಾಗೂ ಶಿಕ್ಷಕರು ಸಹ ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ ಮತ್ತು ಈ ಬಾರಿ ಬೇರೆ ದೇಶದ ಬಹಳಷ್ಟು ವಿದ್ಯಾರ್ಥಿಗಳೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಪರೀಕ್ಷೆಯ ಬಗೆಗಿನ ಚರ್ಚೆಯಲ್ಲಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ವಿಷಯಗಳೂ,ವಿಶೇಷವಾಗಿ ಒತ್ತಡ ರಹಿತ ಪರೀಕ್ಷೆಯ ಬಗ್ಗೆ ನಮ್ಮ ಯುವ ಸ್ನೇಹಿತರೊಂದಿಗೆ ಬಹಳಷ್ಟು ಮಾತನಾಡುತ್ತೇನೆ.
ಇದಕ್ಕಾಗಿಯೇ ನಾನು ಜನರನ್ನು ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಳುಹಿಸಲು ಕೋರಿಕೊಂಡಿದ್ದೆ. ಮೈಗೌ (mygov.gov.in) ನಲ್ಲಿ ಇದರ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ. ಅವುಗಳಲ್ಲಿ ಕೆಲವು ವಿಚಾರಗಳು ಮತ್ತು ಸಲಹೆಗಳನ್ನು ನಾನು ಅವಶ್ಯಕವಾಗಿ ಟೌನ್ ಹಾಲ್ ಕಾರ್ಯಕ್ರಮದಲ್ಲಿ ನಿಮ್ಮ ಮುಂದೆ ಇಡುತ್ತೇನೆ. ತಪ್ಪದೆ ನೀವು ನಿಮ್ಮನ್ನು ಈ ಕಾರ್ಯಕ್ರಮದ ಭಾಗವಾಗಿಸಿಕೊಳ್ಳಿ. ಸಾಮಾಜಿಕ ಮಾಧ್ಯಮಗಳು ಮತ್ತು ನಮೋ ಆಪ್ ಮೂಲಕ ನೀವು ಇದರ ನೇರ ಪ್ರಸಾರವನ್ನು ಸಹ ನೋಡಬಹುದು.
ನನ್ನ ಪ್ರೀತಿಯ ದೇಶವಾಸಿಗಳೇ,ಜನವರಿ 30ರಂದು ಪೂಜ್ಯ ಬಾಪೂರವರ ಪುಣ್ಯತಿಥಿ. 11ಘಂಟೆಗೆ ಇಡೀ ದೇಶವು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುತ್ತದೆ. ನಾವೂ ಸಹ ಎಲ್ಲಿಯೇ ಇದ್ದರೂ 2 ನಿಮಿಷ ಹುತಾತ್ಮರಿಗೆ ಅವಶ್ಯವಾಗಿ ಶ್ರದ್ಧಾಂಜಲಿ ಸಲ್ಲಿಸೋಣ, ಪೂಜ್ಯ ಬಾಪೂರವರ ಪುಣ್ಯಸ್ಮರಣೆಯನ್ನು ಮಾಡೋಣ. ಪೂಜ್ಯ ಬಾಪೂರವರ ಕನಸುಗಳನ್ನು ನನಸು ಮಾಡುವುದು, ನವ ಭಾರತದ ನಿರ್ಮಾಣ ಮಾಡುವುದು,ನಾಗರೀಕರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸುವುದು – ಈ ಸಂಕಲ್ಪದೊಂದಿಗೆ ಬನ್ನಿ, ನಾವು ಮುಂದೆ ನಡೆಯೋಣ. 2019 ರ ಈ ಪಯಣವನ್ನು ಸಫಲತಾಪೂರ್ವಕವಾಗಿ ಮುಂದುವರೆಸೋಣ.
ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು, ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶ ಬಾಂಧವರೇ, ನಮಸ್ಕಾರ. 2018 ನೇ ವರ್ಷದ ಕೊನೆಯ ಘಟ್ಟದಲ್ಲಿದ್ದೇವೆ. 2019 ಕ್ಕೆ ಪ್ರವೇಶಿಸಲಿದ್ದೇವೆ. ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಗತಿಸಿದ ವರ್ಷದ ವಿಚಾರಗಳ ಚರ್ಚೆಯಾಗುತ್ತದೆ. ಅದೇ ವೇಳೆ ಮುಂಬರುವ ವರ್ಷದ ಸಂಕಲ್ಪಗಳ ಚರ್ಚೆ ಕೂಡಾ ಕೇಳಿ ಬರುತ್ತದೆ. ಅದು ವೈಯಕ್ತಿಕ ಜೀವನವಾಗಿರಲಿ, ಸಾಮಾಜಿಕ ಇಲ್ಲವೆ ರಾಷ್ಟ್ರೀಯ ಜೀವನವಾಗಿರಲಿ, ಎಲ್ಲರಿಗೂ ಹಿಂದಿರುಗಿ ನೋಡಲೇಬೇಕಾಗುತ್ತದೆ ಮತ್ತು ಮುಂದೆ ಎಷ್ಟು ದೂರ ಸಾಧ್ಯವೋ ಅಷ್ಟು ದೂರದೃಷ್ಟಿಯಿಟ್ಟು ನೋಡಲೂ ಬೇಕಾಗುತ್ತದೆ. ನೋಡುವ ಪ್ರಯತ್ನವನ್ನೂ ಮಾಡಬೇಕಾಗುತ್ತದೆ. ಆಗಲೇ ಅನುಭವದ ಲಾಭವಾಗುತ್ತದೆ ಅಲ್ಲದೆ ಹೊಸದನ್ನು ಮಾಡುವ ಆತ್ಮ ವಿಶ್ವಾಸವೂ ಹುಟ್ಟುತ್ತದೆ. ನಮ್ಮ ವೈಯಕ್ತಿಕ ಜೀವನದ ಬದಲಾವಣೆಗಾಗಿ ಜೊತೆ ಜೊತೆಗೆ ದೇಶವನ್ನು ಮತ್ತು ನಮ್ಮ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನಾವು ಹೇಗೆ ಕೈಜೋಡಿಸಬಹುದು ಎಂಬುದನ್ನು ಚಿಂತಿಸಬೇಕು. ನಿಮ್ಮೆಲ್ಲರಿಗೂ 2019 ರ ಶುಭಾಶಯಗಳು. ನೀವೆಲ್ಲರೂ 2018 ನೇ ವರ್ಷವನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ಆಲೋಚಿಸಿರಬಹುದು. ಭಾರತ ಒಂದು ದೇಶವಾಗಿ, ತನ್ನ 130 ಕೋಟಿ ಜನತೆಯ ಸಾಮರ್ಥ್ಯ ರೂಪದಲ್ಲಿ, ಹೇಗೆ ನೆನಪಿನಲ್ಲಿಟ್ಟುಕೊಳ್ಳುತ್ತದೆ? ಇದನ್ನು ನೆನೆಯುವುದು ಕೂಡಾ ಮಹತ್ವಪೂರ್ಣ ಅಂಶವಾಗಿದೆ ಹಾಗೂ ನಾವೆಲ್ಲರೂ ಗೌರವ ಪಡುವ ವಿಷಯವಾಗಿದೆ.
2018 ರಲ್ಲಿ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮೆ ಯೋಜನೆ “ಆಯುಷ್ಮಾನ್ ಭಾರತ” ದ ಆರಂಭವಾಯಿತು. ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ತಲುಪಿತು. ಭಾರತ ದಾಖಲೆ ಪ್ರಮಾಣದಲ್ಲಿ ದೇಶವನ್ನು ಬಡತನ ಮುಕ್ತಗೊಳಿಸುವತ್ತ ದಾಪುಗಾಲಿಟ್ಟಿದೆ ಎಂದು ವಿಶ್ವದ ಪ್ರತಿಷ್ಠಿತ ಸಂಸ್ಥೆಗಳು ಮನ್ನಣೆ ನೀಡಿವೆ. ದೇಶಬಾಂಧವರ ಸಂಕಲ್ಪದಿಂದಾಗಿ ಸ್ವಚ್ಛತಾ ಆಂದೋಲನದ ವ್ಯಾಪ್ತಿ ಶೇಕಡಾ 95 ನ್ನೂ ದಾಟಿ ಮುಂದೆ ಸಾಗಿದೆ.
ಸ್ವಾತಂತ್ರ್ಯಾ ನಂತರ ಕೆಂಪು ಕೋಟೆಯಿಂದ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ 75 ನೇ ವರ್ಷಾಚರಣೆ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ದೇಶವನ್ನು ಏಕತೆಯ ಸೂತ್ರದಲ್ಲಿ ಪೋಣಿಸಿದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ವಿಶ್ವದ ಅತ್ಯಂತ ಎತ್ತರವಾದ ‘ಸ್ಟ್ಯಾಚ್ಯೂ ಆಫ್ ಯುನಿಟಿ’ ಸನ್ಮಾನಪೂರ್ವಕವಾಗಿ ದೇಶಕ್ಕೆ ಸಮರ್ಪಿಸಲಾಯಿತು. ವಿಶ್ವದಲ್ಲಿ ದೇಶದ ಹೆಸರು ಉತ್ತುಂಗಕ್ಕೇರಿತು. ದೇಶಕ್ಕೆ ಸಂಯುಕ್ತ ರಾಷ್ಟ್ರದ ಸರ್ವೊಚ್ಚ ಪರಿಸರ ಸನ್ಮಾನ ‘ಚಾಂಪಿಯನ್ಸ್ ಆಫ್ ದಿ ಅರ್ತ್ ಅವಾರ್ಡ್ಸ್’ ನೀಡಿ ಸನ್ಮಾನಿಸಲಾಯಿತು. ಸೌರ ಶಕ್ತಿ ಮತ್ತು ಹವಾಮಾನ ಬದಲಾವಣೆಯಲ್ಲಿ ಭಾರತದ ಪ್ರಯತ್ನಕ್ಕೆ ವಿಶ್ವದಲ್ಲಿ ಸ್ಥಾನ ದೊರೆಯುವಂತಾಯಿತು. ಭಾರತದಲ್ಲಿ ಅಂತಾರಾಷ್ಟ್ರೀಯ ಸೌರ ಒಪ್ಪಂದದ ಮೊದಲ ಮಹಾಸಭೆ ‘ಇಂಟರ್ನ್ಯಾ ಶನಲ್ ಸೋಲಾರ್ ಅಲೈನ್ಸ್’ ಆಯೋಜಿಸಲಾಯಿತು. ನಮ್ಮ ದೇಶದಲ್ಲಿ ಈಸ್ ಆಫ್ ಡುಯಿಂಗ್ ಬಿಸಿನೆಸ್ ರಾಂಕಿಂಗ್ (ವ್ಯಾಪಾರ ಕೈಗೊಳ್ಳುವಲ್ಲಿ ಸರಳತೆ) ನಲ್ಲಿ ಸಾಕಷ್ಟು ಮಹತ್ವದ ಸುಧಾರಣೆ ಯಾಗಿರುವುದು ಎಲ್ಲರ ಸಾಮೂಹಿಕ ಪ್ರಯತ್ನದಿಂದಲೇ. ದೇಶದ ಸುರಕ್ಷಾ ವ್ಯವಸ್ಥೆ ಗೆ ಇನ್ನಷ್ಟು ಪುಷ್ಟಿ ದೊರೆತಿದೆ. ಇದೇ ವರ್ಷ ನಮ್ಮ ದೇಶ ಸಫಲವಾಗಿ ನ್ಯುಕ್ಲಿಯರ್ ಟ್ರಯಾಡ್ ಪೂರ್ತಿಗೊಳಿಸಿದೆ. ಅಂದರೆ ಈಗ ನಾವು ನೆಲ, ಜಲ, ಆಕಾಶ ಮೂರರಲ್ಲೂ ಪರಮಾಣು ಶಕ್ತಿ ಸಂಪನ್ನರಾಗಿದ್ದೇವೆ. ದೇಶದ ಹೆಣ್ಣು ಮಕ್ಕಳು ನಾವಿಕಾ ಸಾಗರ ಪರಿಕ್ರಮಾ ಮೂಲಕ ಸಂಪೂರ್ಣ ವಿಶ್ವದ ಪರ್ಯಟನೆ ಮಾಡಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ.
ವಾರಣಾಸಿಯಲ್ಲಿ ಭಾರತದ ಮೊದಲ ಜಲಮಾರ್ಗವನ್ನು ಆರಂಭಿಸಲಾಯಿತು. ಇದರಿಂದ ವಾಟರ್ ವೇಸ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದಂತಾಯಿತು. ದೇಶದ ಅತ್ಯಂತ ದೊಡ್ಡ ರೇಲ್ ರೋಡ್ ಸೇತುವೆ ಬೋಗಿಬೀಲ್ ಬ್ರಿಜ್ ನ್ನು ಲೋಕಾರ್ಪಣೆ ಮಾಡಲಾಯಿತು. ಸಿಕ್ಕಿಂನ ಮೊದಲ ಮತ್ತು ದೇಶದ 100 ನೇ ಏರ್ಪೋ ರ್ಟ್ ಪಾಕ್ಯೋಂಗ್ ಆರಂಭಿಸಲಾಯಿತು.
19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಮತ್ತು ವಿಶ್ವಕಪ್ ಬ್ಲೈಂಡ್ ಕ್ರಿಕೆಟ್ ನಲ್ಲಿ ಭಾರತ ಜಯ ಸಾಧಿಸಿತು. ಈ ಬಾರಿ ಏಷ್ಯನ್ ಗೇಮ್ಸ್ ಗಳಲ್ಲಿ ಭಾರತ ಬಹು ದೊಡ್ಡ ಸಂಖ್ಯೆಯಲ್ಲಿ ಪದಕಗಳನ್ನು ಗಳಿಸಿದೆ. ಪ್ಯಾರಾ ಏಷ್ಯನ್ ಗೇಮ್ಸ್ ಗಳಲ್ಲಿ ಕೂಡಾ ಭಾರತ ಉತ್ತಮ ಪ್ರದರ್ಶನ ನೀಡಿದೆ. ಅಂದ ಹಾಗೆ ನಾನು ಭಾರತೀಯರ ಸಾಧನೆಯ, ನಮ್ಮ ಸಾಮೂಹಿಕ ಪ್ರಯತ್ನಗಳ ಸಂಗತಿಗಳನ್ನು ಹೇಳುತ್ತಾ ಹೋದರೆ ನಮ್ಮ ಮನದ ಮಾತು ಸುದೀರ್ಘ ಸಮಯದವರೆಗೂ ಮುಂದುವರೆಯುತ್ತದೆ ಎಂದರೆ ಬಹುಶಃ 2019 ಬಂದೇ ಬಿಡುತ್ತದೆ. ಇದೆಲ್ಲವೂ 130 ಕೋಟಿ ದೇಶ ಬಾಂಧವರ ನಿರಂತರ ಪ್ರಯತ್ನದಿಂದಲೇ ಸಾಧ್ಯವಾಗಿದೆ. 2019 ರಲ್ಲೂ ಭಾರತದ ಪ್ರಗತಿ ಮತ್ತು ಉನ್ನತಿಯ ಈ ಯಾತ್ರೆ ಹೀಗೆ ಮುಂದುವರಿಯಲಿದೆ ಮತ್ತು ನಮ್ಮ ದೇಶ ಸದೃಢವಾಗಿ ಮತ್ತಷ್ಟು ಉತ್ತುಂಗಕ್ಕೇರಲಿದೆ ಎಂಬ ಭರವಸೆ ನನಗಿದೆ.
ಪ್ರಿಯ ದೇಶಬಾಂಧವರೆ, ಈ ಡಿಸೆಂಬರ್ ನಲ್ಲಿ ಕೆಲವರು ಗಣ್ಯರನ್ನು ಕಳೆದುಕೊಂಡಿದ್ದೇವೆ. ಡಿಸೆಂಬರ್ 19 ರಂದು ಚೆನ್ನೈ ನ ಡಾಕ್ಟರ್ ಜಯಾಚಂದ್ರನ್ ಅವರನ್ನು ಕಳೆದುಕೊಂಡೆವು. ಡಾಕ್ಟರ್ ಜಯಾಚಂದ್ರನ್ ಅವರನ್ನು ಜನರು “ಮಕ್ಕಳ್ ಮಾರುಥುವರ್” ಎಂದು ಕರೆಯುತ್ತಿದ್ದರು. ಏಕೆಂದರೆ ಅವರು ಜನರ ಮನದಲ್ಲಿ ನೆಲೆ ನಿಂತಿದ್ದರು. ಡಾಕ್ಟರ್ ಜಯಚಂದ್ರ ಅವರು ಬಡ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧೋಪಚಾರ ದೊರೆಯುವಂತೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದರು. ಅವರು ಜನರ ಶುಶ್ರೂಷೆಗೆ ಎಂದಿಗೂ ಸಿದ್ಧರಾಗಿರುತ್ತಿದ್ದರು ಎಂದು ಜನರು ಹೇಳುತ್ತಾರೆ. ತಮ್ಮ ಬಳಿ ತಪಾಸಣೆಗೆ ಬರುವ ವೃದ್ಧರಿಗೆ ಅವರು ಹೋಗಿ ಬರುವ ಖರ್ಚು ಕೂಡಾ ನೀಡುತ್ತಿದ್ದರಂತೆ. ನಾನು ದಿ ಬೆಟರ್ ಇಂಡಿಯಾ ಡಾಟ್ ಕಾಮ್ ವೆಬ್ ಸೈಟ್ ನಲ್ಲಿ ಸಮಾಜಕ್ಕೆ ಪ್ರೇರಣೆ ನೀಡುವಂತಹ ಅನೇಕ ಇಂಥ ಕೆಲಸಗಳ ಬಗ್ಗೆ ಓದಿದ್ದೇನೆ. ಹೀಗೆಯೇ ಡಿಸೆಂಬರ್ 25 ರಂದು ಸೂಲಗಿತ್ತಿ ನರಸಮ್ಮ ನಿಧನರಾದ ಸುದ್ದಿ ತಿಳಿಯಿತು. ಸೂಲಗಿತ್ತಿ ನರಸಮ್ಮ ಗರ್ಭವತಿ ಮಾತೆಯರಿಗೆ – ಅಕ್ಕ ತಂಗಿಯರಿಗೆ ಪ್ರಸವ ಸಮಯದಲ್ಲಿ ಸಹಾಯ ಮಾಡುತ್ತಿದ್ದಳು. ಅವಳು ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ದುರ್ಗಮ ಮಾರ್ಗದ ಗ್ರಾಮಗಳಲ್ಲಿ ಸಾವಿರಾರು ಮಾತೆಯರಿಗೆ – ಅಕ್ಕ ತಂಗಿಯರಿಗೆ ತನ್ನ ಸೇವೆಯನ್ನು ಒದಗಿಸಿದ್ದಾರೆ. ಈ ವರ್ಷಾರಂಭದಲ್ಲಿ ಅವರನ್ನು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಡಾಕ್ಟರ್ ಜಯಾಚಂದ್ರನ್ ಮತ್ತು ಸೂಲಗಿತ್ತಿ ನರಸಮ್ಮ ಅವರಂತಹ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಹಳಷ್ಟು ಪ್ರೇರಣೆಯನ್ನು ನೀಡುವ ವ್ಯಕ್ತಿತ್ವಗಳಿವೆ. ನಾವು ಆರೋಗ್ಯ ರಕ್ಷಣೆ ಕುರಿತು ಮಾತನಾಡುತಿರುವಾಗ ಉತ್ತರ ಪ್ರದೇಶದ ಬಿಜನೌರ್ ನಲ್ಲಿ ವೈದ್ಯರ ಸಾಮಾಜಿಕ ಪ್ರಯತ್ನದ ಕುರಿತು ಹೇಳ ಬಯಸುತ್ತೇನೆ. ನಗರದ ಕೆಲ ಯುವ ವೈದ್ಯರು ಕ್ಯಾಂಪ್ ಗಳ ಮೂಲಕ ಬಡವರ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ನಮ್ಮ ಪಕ್ಷದ ಕೆಲ ಕಾರ್ಯಕರ್ತರು ನನಗೆ ತಿಳಿಸಿದರು. ಇಲ್ಲಿಯ ‘ಹಾರ್ಟ್ ಲಂಗ್ಸ್ ಕ್ರಿಟಿಕಲ್ ಸೆಂಟರ್’ ವತಿಯಿಂದ ಪ್ರತಿ ತಿಂಗಳು ಇಂಥ ಮೆಡಿಕಲ್ ಕ್ಯಾಂಪ್ ನಡೆಸಲಾಗುತ್ತದೆ. ಇಲ್ಲಿ ಹಲವಾರು ರೋಗಗಳಿಗೆ ಸಂಪೂರ್ಣ ಉಚಿತವಾಗಿ ತಪಾಸಣೆ ಮತ್ತು ಉಪಚಾರ ಕೂಡಾ ಮಾಡಲಾಗುತ್ತದೆ. ಇಂದು ಪ್ರತಿ ತಿಂಗಳೂ ಸಾವಿರಾರು ಬಡವರು ಈ ಕ್ಯಾಂಪ್ ಗಳ ಭವನ್ನು ಪಡೆಯುತ್ತಿದ್ದಾರೆ. ನಿಸ್ವಾರ್ಥ ಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಈ ವೈದ್ಯ ಮಿತ್ರರ ಉತ್ಸಾಹ ನಿಜಕ್ಕೂ ಶ್ಲಾಘನೀಯ. ಸಾಮೂಹಿಕ ಪ್ರಯತ್ನದಿಂದಲೇ ಸ್ವಚ್ಛ ಭಾರತ ಅಭಿಯಾನ ಒಂದು ಸಫಲ ಅಭಿಯಾನವಾಯಿತು ಎಂಬ ವಿಷಯವನ್ನು ಇಂದು ನಾನು ಬಹಳ ಹೆಮ್ಮೆಯಿಂದ ಹೇಳುತ್ತಿದ್ದೇನೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಜಬ್ಬಲ್ಪುಾರದಲ್ಲಿ ಒಂದೇ ಬಾರಿಗೆ 3 ಲಕ್ಷಕ್ಕಿಂತ ಹೆಚ್ಚು ಜನರು ಸ್ವಚ್ಛತೆಯ ಅಭಿಯಾನದಲ್ಲಿ ಪಾಲ್ಗೊಂಡರು ಎಂಬುದನ್ನು ಕೆಲ ಜನರು ನನಗೆ ತಿಳಿಸಿದರು. ಸ್ವಚ್ಛತೆಯ ಈ ಮಹಾ ಯಜ್ಞದಲ್ಲಿ ನಗರ ನಿಗಮ, ಸ್ವಯಂ ಸೇವಾ ಸಂಸ್ಥೆಗಳು, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಜಬ್ಬಲ್ಪು ರದ ಜನತೆ, ಎಲ್ಲರೂ ನಾ ಮುಂದು ತಾ ಮುಂದು ಎನ್ನುವಂತೆ ಭಾಗವಹಿಸಿದರು. ನಾನು ಇದೀಗ ದಿ ಬೆಟರ್ ಇಂಡಿಯಾ ಡಾಟ್ ಕಾಮ್ ಕುರಿತು ಉಲ್ಲೇಖಿಸಿದ್ದೆ.ಅಲ್ಲಿ ನನಗೆ ಡಾ. ಜಯಚಂದ್ರನ್ ಅವರ ಬಗ್ಗೆ ತಿಳಿಯಿತು ಮತ್ತು ನನಗೆ ಸಮಯ ಸಿಕ್ಕಾಗಲೆಲ್ಲ ನಾನು ಖಂಡಿತ ದಿ ಬೆಟರ್ ಇಂಡಿಯಾ ಡಾಟ್ ಕಾಮ್ ಗೆ ಹೋಗಿ ಇಂಥ ಪ್ರೇರಣಾತ್ಮಕ ವಿಷಯಗಳ ಬಗ್ಗೆ ತಿಳಿಯಲು ಪ್ರಯತ್ನಿಸುತ್ತೇನೆ. ಇಂದು ಇಂಥ ಅಪರೂಪದ ಜನರ ಜೀವನದ ಮೂಲಕ ಪ್ರೇರೇಪಿಸಬಲ್ಲ ಬಹಳಷ್ಟು ಕಥೆಗಳನ್ನು ಪರಿಚಯಿಸುವಂತಹ ಅನೇಕ ವೆಬ್ ಸೈಟ್ ಪುಟಗಳಿವೆ ಎಂಬುದು ನನಗೆ ಸಂತಸವೆನಿಸುತ್ತದೆ. ಪಾಸಿಟಿವ್ ಇಂಡಿಯಾ ಡಾಟ್ ಕಾಮ್ ಸಮಾಜದಲ್ಲಿ ಸಕಾರಾತ್ಮಕ ಭಾವನೆಯನ್ನು ಪಸರಿಸುವ ಮತ್ತು ಸಮಾಜವನ್ನು ಸಂವೇದನಶೀಲಗೊಳಿಸುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿ, ಯುವರ್ ಸ್ಟೋರಿ ಡಾಟ್ ಕಾಮ್ ನಲ್ಲಿ ಹೊಸ ಆವಿಷ್ಕಾರಿಗಳು ಮತ್ತು ಉದ್ಯಮಿಗಳ ಸಫಲತೆಯ ಕಥೆಗಳ ಕುರಿತು ಬಹಳ ಚೆನ್ನಾಗಿ ಹೇಳಲಾಗುತ್ತದೆ. ಹಾಗೇ ಸಂಸ್ಕೃತ ಭಾರತಿ ಡಾಟ್ ಇನ್ ಎಂಬ ಮಾಧ್ಯಮದ ಮೂಲಕ ಅತ್ಯಂತ ಸರಳವಾಗಿ ಮನೆಯಲ್ಲಿ ಕುಳಿತುಕೊಂಡೇ ಸಂಸ್ಕೃತ ಭಾಷೆಯನ್ನು ಕಲಿಯಬಹುದು. ನಾವು ಒಂದು ಕೆಲಸ ಮಾಡಬಹುದೇ – ಇಂತಹ ವೆಬ್ ಸೈಟ್ ಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳೋಣ. ಸಕಾರಾತ್ಮಕತೆಯನ್ನು ಒಂದಾಗಿ ಪಸರಿಸೋಣ. ಈ ಮೂಲಕ ಹೆಚ್ಚೆಚ್ಚು ಜನರು ಸಮಾಜದಲ್ಲಿ ಪರಿವರ್ತನೆಯನ್ನು ತರುವ ನಮ್ಮ ನಾಯಕರ ಕುರಿತು ತಿಳಿಯುವರು. ನಕಾರಾತ್ಮಕತೆ ಹಬ್ಬಿಸುವುದು ಬಹಳ ಸುಲಭ. ಆದರೆ ನಮ್ಮ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಬಹಳಷ್ಟು ಒಳ್ಳೇ ಕೆಲಸಗಳು ನಡೆಯುತ್ತಿವೆ ಮತ್ತು ಇವೆಲ್ಲವೂ 130 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದಲೇ ಆಗುತ್ತಿದೆ. ಎಲ್ಲ ಸಮಾಜಗಳಲ್ಲೂ ಕ್ರೀಡೆಗೆ ತನ್ನದೇ ಆದ ಮಹತ್ವವಿರುತ್ತದೆ. ಕ್ರೀಡೆಯಲ್ಲಿ ತೊಡಗಿದಾಗ ನೋಡುಗರ ಮನಸ್ಸು ಕೂಡಾ ಪ್ರಜ್ವಲಿತಗೊಳ್ಳುತ್ತದೆ. ಕ್ರೀಡಾಳುಗಳ ಹೆಸರು, ಸನ್ಮಾನ, ಪರಿಚಯ, ಮುಂತಾದವುಗಳನ್ನು ನಾವೂ ಅನುಭವಿಸುತ್ತೇವೆ. ಆದರೆ ಕೆಲವೊಮ್ಮೆ ಇವೆಲ್ಲವುಗಳ ಹೊರತಾಗಿ ಇನ್ನೂ ಎಷ್ಟೋ ವಿಷಯಗಳು ಕ್ರೀಡಾ ಜಗತ್ತಿಗೂ ಮಿಗಿಲಾದದ್ದು ಮತ್ತು ದೊಡ್ಡದಾದದ್ದಾಗಿರುತ್ತವೆ. ಕರಾಟೆ ಚ್ಯಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದ ಕಾಶ್ಮೀರದ ಓರ್ವ ಮಗಳ ಬಗ್ಗೆ ನಾನು ಹೇಳಬಯಸುತ್ತೇನೆ. ಹನಾಯ ನಿಸಾರ್ 12 ವರ್ಷದ ಬಾಲಕಿ. ಕಾಶ್ಮೀರದ ಅನಂತ್ ನಾಗ್ ನ ನಿವಾಸಿ. ಹನಾಯ ಬಹಳ ಶ್ರಮವಹಿಸಿ, ಏಕಾಗ್ರತೆಯಿಂದ ಕರಾಟೆ ಅಭ್ಯಾಸ ಮಾಡಿ, ಅದರ ಸೂಕ್ಷ್ಮತೆಗಳನ್ನು ಅರಿತು ತನ್ನನ್ನು ತಾನು ಸಾಬೀತು ಮಾಡಿ ತೋರಿಸಿದ್ದಾಳೆ. ಎಲ್ಲ ಭಾರತೀಯರ ಪರವಾಗಿ ಮಗಳ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಹನಾಯಳಿಗೆ ಶುಭಾಷಯಗಳು ಮತ್ತು ಆಶೀರ್ವಾದಗಳು.
ಹಾಗೆಯೇ 16 ರ ವಯೋಮಾನದ ಯುವತಿ ರಜನಿ ಬಗ್ಗೆ ಮಾಧ್ಯಮಗಳಲ್ಲಿ ಬಹಳ ಚರ್ಚೆಯಾಗಿದೆ. ನೀವು ಖಂಡಿತ ಓದಿರಬಹುದು. ರಜನಿ ಜ್ಯುನಿಯರ್ ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ರಜನಿ ಪದಕ ಗೆಲ್ಲುತ್ತಿದ್ದಂತೆಯೇ ಹತ್ತಿರದ ಒಂದು ಮಳಿಗೆಗೆ ಹೋಗಿ ಒಂದು ಗ್ಲಾಸ್ ಹಾಲನ್ನು ಕುಡಿದಳು. ನಂತರ ತನ್ನ ಪದಕವನ್ನು ಒಂದು ಬಟ್ಟೆಯಲ್ಲಿ ಸುತ್ತಿ ಬ್ಯಾಗ್ ನಲ್ಲಿ ಇಟ್ಟಳು. ಈಗ ನೀವು ರಜನಿ ಒಂದು ಗ್ಲಾಸ್ ಹಾಲು ಏಕೆ ಕುಡಿದಳು ಎಂದು ಯೋಚಿಸುತ್ತಿರಬಹುದು? ಪಾನಿಪತ್ ನ ಒಂದು ಸ್ಟಾಲ್ ನಲ್ಲಿ ಲಸ್ಸಿ ಮಾರುತ್ತಿರುವ ತನ್ನ ತಂದೆ ಜಸ್ಮೇರ್ ಸಿಂಗ್ ಅವರಿಗೆ ಗೌರವ ಸೂಚಿಸಲು ಅವಳು ಹೀಗೆ ಮಾಡಿದಳು. ತಾನು ಈ ಹಂತ ತಲುಪಲು ತನ್ನ ತಂದೆ ಬಹಳ ತ್ಯಾಗ ಮಾಡಿದ್ದಾರೆಂದು ಮತ್ತು ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆಂದು ಅವಳು ಹೇಳಿದಳು. ಜಸ್ಮೇರ್ ಸಿಂಗ್ ಅವರು ಪ್ರತಿದಿನ ಬೆಳಿಗ್ಗೆ ರಜನಿ ಮತ್ತು ಅವಳ ಸೋದರ ಸೋದರಿಯರು ಏಳುವ ಮೊದಲೇ ಕೆಲಸಕ್ಕೆ ಹೋಗುತ್ತಾರೆ. ರಜನಿ ತನ್ನ ತಂದೆ ಬಳಿ ಬಾಕ್ಸಿಂಗ್ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ತಂದೆ ಅದಕ್ಕೆ ಬೇಕಾದ ಎಲ್ಲ ಅವಶ್ಯಕ ಸಾಧನಗಳನ್ನು ಒಗ್ಗೂಡಿಸಿ ಅವಳನ್ನು ಪ್ರೋತ್ಸಾಹಿಸಿದರು. ರಜನಿಗೆ ಬಾಕ್ಸಿಂಗ್ ಅಭ್ಯಾಸವನ್ನು ಹಳೆಯ ಗ್ಲೌಸ್ಗ್ಳನ್ನು ಬಳಸಿಯೇ ಆರಂಭಿಸಬೇಕಾಯಿತು. ಏಕೆಂದರೆ ಆ ದಿನಗಳಲ್ಲಿ ಅವರ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ರಜನಿ ಧೈರ್ಯಗೆಡಲಿಲ್ಲ ಬಾಕ್ಸಿಂಗ್ ಕಲಿಕೆ ಮುಂದುವರಿಸಿದಳು. ಅವಳು ಸರ್ಬಿಯಾದಲ್ಲೂ ಒಂದು ಪದಕ ಗಳಿಸಿದ್ದಾಳೆ. ರಜನಿಗೆ ನಾನು ಶುಭಾಷಯ ಮತ್ತು ಆಶೀರ್ವಾದ ತಿಳಿಸುತ್ತೇನೆ. ರಜನಿಗೆ ಪ್ರೋತ್ಸಾಹಿಸಿದ ಮತ್ತು ಅವಳ ಉತ್ಸಾಹ ಹೆಚ್ಚಿಸಿದ ತಂದೆ ತಾಯಿ ಜಸ್ಮೇರ್ ಸಿಂಗ್ ಮತ್ತು ಉಷಾರಾಣಿ ಅವರನ್ನು ಅಭಿನಂದಿಸುತ್ತೇನೆ. ಇದೇ ತಿಂಗಳು ಪುಣೆಯ ಓರ್ವ 20ರ ವಯಸ್ಸಿನ ಯುವತಿ ವೇದಾಂಗಿ ಕುಲ್ಕರ್ಣಿ ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡಿದ ಎಲ್ಲರಿಗಿಂತ ವೇಗದ ಏಷಿಯನ್ ಆಗಿ ಹೊರಹೊಮ್ಮಿದ್ದಾಳೆ. ಅವಳು 159 ದಿನಗಳವರೆಗೆ ಪ್ರತಿನಿತ್ಯ 300 ಕಿಲೋಮೀಟರ್ ಸೈಕಲ್ ತುಳಿಯುತ್ತಿದ್ದಳು. 300 ಕಿಲೋಮೀಟರ್ ಸೈಕಲ್ ತುಳಿಯುವ ಕುರಿತು ನೀವು ಕಲ್ಪನೆ ಮಾಡಿಕೊಳ್ಳಬಹುದೇ! ಸೈಕಲ್ ತುಳಿಯುವ ಕುರಿತಾದ ಅವಳ ಹುಮ್ಮಸ್ಸು ನಿಜಕ್ಕೂ ಶ್ಲಾಘನೀಯವಾಗಿದೆ. ಇಂಥ ಸಾಧನೆಯ ಬಗ್ಗೆ ಕೇಳಿದಾಗ ನಮಗೆ ಪ್ರೇರಣೆ ದೊರೆಯುವುದಿಲ್ಲವೇ? ಅದರಲ್ಲೂ ವಿಶೇಷವಾಗಿ ನನ್ನ ಯುವ ಮಿತ್ರರು, ಇಂಥ ಘಟನೆಗಳ ಬಗ್ಗೆ ಕೇಳಿದಾಗ ತಾವೂ ಕಠಿಣ ಪರಿಸ್ಥಿತಿಗಳನ್ನು ಮೆಟ್ಟಿ ಏನಾದರೂ ಸಾಧಿಸಬೇಕೆಂಬ ಪ್ರೇರಣೆಯನ್ನು ಪಡೆಯುತ್ತಾರೆ. ಸಂಕಲ್ಪ , ದೃಢ ಸಂಕಲ್ಪವಿದ್ದರೆ, ಅಡೆತಡೆಗಳು ತಾವಾಗೇ ದೂರವಾಗುತ್ತವೆ. ಸಂಕಷ್ಟಗಳು ಎಂದೂ ಅಡೆತಡೆಗಳಾಗುವುದಿಲ್ಲ. ಇಂಥ ಅನೇಕ ಉದಾಹರಣೆಗಳನ್ನು ಕೇಳುತ್ತಿದ್ದರೆ, ನಮ್ಮ ಜೀವನದಲ್ಲೂ ಪ್ರತಿಕ್ಷಣ ಹೊಸ ಪ್ರೇರಣೆ ಮೂಡುತ್ತದೆ.
ನನ್ನ ಪ್ರಿಯ ದೇಶಬಾಂಧವರೇ, ಜನವರಿಯಲ್ಲಿ ಉತ್ಸಾಹ ಮತ್ತು ಉಲ್ಲಾಸದಿಂದ ತುಂಬಿದ ಬಹಳಷ್ಟು ಹಬ್ಬಗಳು ಬರಲಿವೆ. ಉದಾಹರಣೆಗೆ ಲೊಹ್ರಿ, ಪೊಂಗಲ್, ಮಕರ ಸಂಕ್ರಾಂತಿ, ಉತ್ತರಾಯಣ, ಮಾಘ ಬಿಹು, ಮಾಘೀ ; ಈ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಂಪೂರ್ಣ ಭಾರತದಲ್ಲಿ ವಿಭಿನ್ನ ಪಾರಂಪರಿಕ ನೃತ್ಯಗಳ ರಂಗು ಕಾಣಸಿಗುತ್ತದೆ, ಇನ್ನೊಂದೆಡೆ ಫಸಲು ಕೈಗೆ ಬಂದ ಸಂತಸಕ್ಕೆ ಲೊಹ್ಡಿ ಬೆಳಗಿಸುತ್ತಾರೆ. ಇನ್ನೊಂದೆಡೆ ಆಕಾಶದಲ್ಲಿ ರಂಗುರಂಗಿನ ಗಾಳಿಪಟಗಳು ಹಾರುತ್ತಿರುವುದು ಕಾಣುತ್ತದೆ. ಎಷ್ಟೋ ಜಾತ್ರೆಗಳು ಮೈದಳೆಯುತ್ತವೆ. ಇನ್ನೊಂದೆಡೆ ಕ್ರೀಡೆಯ ಧೂಳು ಎದ್ದೇಳುತ್ತದೆ. ಮತ್ತೊಂದೆಡೆ ಪರಸ್ಪರ ಎಳ್ಳು ಬೆಲ್ಲ ಹಂಚಿಕೊಳ್ಳುತ್ತಾರೆ. ಜನರು ಒಬ್ಬರಿಗೊಬ್ಬರು ಎಳ್ಳು ಬೆಲ್ಲ ತೆಗೆದುಕೊಳ್ಳಿ ಮತ್ತು ಒಳ್ಳೊಳ್ಳೆ ಮಾತಾಡಿ ಎಂದು ಹಾರೈಸುತ್ತಾರೆ. ಈ ಎಲ್ಲ ಹಬ್ಬಗಳ ಹೆಸರುಗಳು ಬೇರೆ ಬೇರೆಯಾಗಿರಬಹುದು ಆದರೆ ಅವುಗಳೆಲ್ಲವನ್ನು ಆಚರಿಸುವವರ ಭಾವನೆಗಳು ಒಂದೇ ಆಗಿವೆ. ಈ ಉತ್ಸವಗಳು ಒಂದಲ್ಲಾ ಒಂದು ರೀತಿ ಫಸಲಿಗೆ ಮತ್ತು ಒಕ್ಕಲುತನಕ್ಕೆ ಸಂಬಂಧಿಸಿದ್ದಾಗಿದೆ. ರೈತರಿಗೆ ಸಂಬಂಧಿಸಿದ್ದು ಮತ್ತು ಗ್ರಾಮಗಳಿಗೆ ಸಂಬಂಧಿಸಿದ್ದಾಗಿದೆ. ಗದ್ದೆ ಹೊಲಗಳಿಗೆ ಸಂಬಂಧಿಸಿದ್ದಾಗಿವೆ. ಇದೇ ಸಂದರ್ಭದಲ್ಲಿ ಸೂರ್ಯ ಉತ್ತರಾಭಿಮುಖವಾಗಿ ಮಕರ ರಾಶಿ ಪ್ರವೇಶಿಸುತ್ತಾನೆ. ಇದರ ನಂತರದಿಂದ ದಿನಗಳು ನಿಧಾನವಾಗಿ ದೀರ್ಘವಾಗುತ್ತವೆ ಮತ್ತು ಚಳಿಗಾಲದ ಬೆಳೆಯ ಕಟಾವು ಮಾಡಲಾಗುತ್ತದೆ. ನಮ್ಮ ಅನ್ನದಾತ ಕೃಷಿಕ ಸೋದರ ಸೋದರಿಯರಿಗೆ ಅನಂತ ಅನಂತ ಶುಭಾಷಯಗಳು. ವಿವಿಧತೆಯಲ್ಲಿ ಏಕತೆ, ಒಂದು ಭಾರತ ಶ್ರೇಷ್ಠ ಭಾರತ ಎಂಬ ಭಾವನೆಯ ಸುಗಂಧವನ್ನು ನಮ್ಮ ಹಬ್ಬಗಳು ತಮ್ಮಲ್ಲಿ ಹುದುಗಿಸಿಕೊಂಡಿವೆ. ನಮ್ಮ ಹಬ್ಬ ಹರಿದಿನಗಳು ಪ್ರಕೃತಿಯೊಂದಿಗೆ ಹೇಗೆ ಅತ್ಯಂತ ಹತ್ತಿರದ ಸಂಬಂಧ ಹೊಂದಿವೆ ಎಂಬುದನ್ನು ನಾವು ಕಾಣಬಹುದು. ಭಾರತೀಯ ಸಂಸ್ಕೃತಿಯಲ್ಲಿ ಸಮಾಜ ಮತ್ತು ಪ್ರಕೃತಿಯನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ಇಲ್ಲಿ ವ್ಯಕ್ತಿ ಮತ್ತು ಸಮಷ್ಟಿ ಒಂದೇ ಆಗಿದೆ. ಪ್ರಕೃತಿಯೊಂದಿಗೆ ನಮ್ಮ ನಿಕಟ ಸಂಬಂಧಕ್ಕೆ ಒಂದು ಉತ್ತಮ ಉದಾಹರಣೆ ಹಬ್ಬಗಳನ್ನಾಧರಿಸಿದ ಕ್ಯಾಲೆಂಡರ್. ಇದರಲ್ಲಿ ವರ್ಷಪೂರ್ತಿ ಆಚರಿಸುವ ಹಬ್ಬ ಹರಿದಿನಗಳ ಜೊತೆಗೆ ಗ್ರಹ ನಕ್ಷತ್ರಗಳ ಲೆಕ್ಕಾಚಾರವನ್ನೂ ನೀಡಲಾಗಿರುತ್ತದೆ. ಈ ಪಾರಂಪರಿಕ ಕ್ಯಾಲೆಂಡರ್ ನಿಂದ ಪ್ರಾಕೃತಿಕ ಮತ್ತು ಖಗೋಳ ಶಾಸ್ತ್ರದ ಪ್ರಕಾರ ನಡೆಯುವ ಘಟನೆಗಳ ಜೊತೆ ನಮ್ಮ ಸಂಬಂಧ ಎಷ್ಟು ಪುರಾತನವಾದದ್ದು ಎಂಬುದು ತಿಳಿಯುತ್ತದೆ. ಚಂದ್ರ ಮತ್ತು ಸೂರ್ಯನ ಚಲನೆಯ ಆಧಾರದ ಮೇಲೆ ಚಾಂದ್ರಮಾನ ಮತ್ತು ಸೌರಮಾನ ಕ್ಯಾಲೆಂಡರ್ ಪ್ರಕಾರ ಹಬ್ಬ ಹರಿದಿನಗಳ ತಿಥಿ ನಿರ್ಧಾರವಾಗುತ್ತದೆ. ಯಾರು ಯಾವ ಕ್ಯಾಲೆಂಡರ್ ಅನುಸರಿಸುತ್ತಾರೆ ಎಂಬುದರ ಮೇಲೆ ಇದು ನಿರ್ಧರಿಸಿರುತ್ತದೆ. ಎಷ್ಟೋ ಪ್ರದೇಶಗಳಲ್ಲಿ ಗ್ರಹ ನಕ್ಷತ್ರಗಳ ಸ್ಥಿತಿಯನ್ನಾಧರಿಸಿ ಹಬ್ಬಗಳ ಆಚರಣೆ ಕೈಗೊಳ್ಳಲಾಗುತ್ತದೆ. ಗುಡಿ ಪಾಡ್ವಾ, ಚೇಟಿಚಂಡ್, ಉಗಾದಿ ಇವೆಲ್ಲವೂ ಚಾಂದ್ರಮಾನ ಕ್ಯಾಲೆಂಡರ್ ಅನುಸಾರ ಆಚರಿಸುವ ಹಬ್ಬಗಳು. ಅದೇ ರೀತಿ ತಮಿಳಿನ ಪುಥಾಂಡು, ವಿಶು, ವೈಶಾಖ, ಬೈಸಾಖಿ, ಪೊಯಿಲಾ ಬೈಸಾಖ್, ಬಿಹು ಈ ಎಲ್ಲ ಹಬ್ಬಗಳನ್ನು ಸೌರಮಾನ ಕ್ಯಾಲೆಂಡರ್ ಆಧರಿಸಿ ಆಚರಿಸಲಾಗುತ್ತದೆ. ನಮ್ಮ ಹಲವಾರು ಹಬ್ಬಗಳಲ್ಲಿ ನದಿಗಳು ಮತ್ತು ಜಲ ಸಂಪತ್ತನ್ನು ರಕ್ಷಿಸುವ ವಿಶಿಷ್ಟ ಭಾವ ಮಿಳಿತವಾಗಿದೆ. ಛಟ್ ಪರ್ವ, ನದಿಗಳು, ಕೆರೆ ತೊರೆಗಳಲ್ಲಿ ಸೂರ್ಯ ಉಪಾಸನೆಯ ವಿಶಿಷ್ಟ ಆಚರಣೆ ಹೊಂದಿವೆ. ಮಕರ ಸಂಕ್ರಾಂತಿಯಂದು ಲಕ್ಷಾಂತರ, ಕೋಟ್ಯಾಂತರ ಜನರು ನದಿಗಳಲ್ಲಿ ಮಿಂದೇಳುತ್ತಾರೆ. ನಮ್ಮ ಹಬ್ಬ ಹರಿದಿನಗಳು ನಮಗೆ ಸಾಮಾಜಿಕ ಮೌಲ್ಯಗಳ ಶಿಕ್ಷಣವನ್ನೂ ನೀಡುತ್ತವೆ. ಒಂದೆಡೆ ಇವುಗಳ ಪೌರಾಣಿಕ ಮಹತ್ವವಿದ್ದರೆ, ಇನ್ನೊಂದೆಡೆ ಜೀವನ ಪಾಠ, ಪರಸ್ಪರ ಸೋದರ ಭಾವದಿಂದ ಇರುವ ಪ್ರೇರಣೆಯನ್ನು ಅತ್ಯಂತ ಸರಳ ರೀತಿಯಲ್ಲಿ ಕಲಿಸುತ್ತವೆ. ನಿಮ್ಮೆಲ್ಲರಿಗೂ 2019 ರ ಹೊಸ ವರ್ಷದ ಶುಭಾಷಯಗಳು, ಮತ್ತು ಮುಂಬರುವ ಹಬ್ಬಗಳ ಸಂಪೂರ್ಣ ಆನಂದವನ್ನು ಪಡೆಯಿರಿ ಎಂದು ಹಾರೈಸುತ್ತೇನೆ. ಭಾರತದ ವಿವಿಧತೆ ಮತ್ತು ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಎಲ್ಲರೂ ನೋಡಲಿ ಎಂಬುದಕ್ಕಾಗಿ ಈ ಹಬ್ಬಗಳಲ್ಲಿ ತೆಗೆದುಕೊಂಡಂತಹ ಫೋಟೊಗಳನ್ನು ಎಲ್ಲರೊಂದಿಗೆ ಶೇರ್ ಮಾಡಿ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತಿಯಲ್ಲಿ ನಾವು ಹೆಮ್ಮೆ ಪಟ್ಟು, ಇಡೀ ಜಗತ್ತಿಗೆ ಅಭಿಮಾನದಿಂದ ತೋರಿಸಿಕೊಳ್ಳುವ ಎಷ್ಟೊಂದು ವಿಷಯಗಳಿವೆ. ಅವುಗಳಲ್ಲಿ ಒಂದು- ಕುಂಭಮೇಳ. ನೀವು ಕುಂಭ ಮೇಳದ ಬಗ್ಗೆ ಬಹಳಷ್ಟು ಕೇಳಿರಬಹುದು, ಚಲನಚಿತ್ರಗಳಲ್ಲಿ ಕೂಡ ಇದರ ಭವ್ಯತೆ ಮತ್ತು ವಿಶಾಲತೆಯ ಬಗ್ಗೆ ಬಹಳಷ್ಟು ನೋಡಿರಲೂ ಬಹುದು ಮತ್ತು ಅದು ಸತ್ಯ ಕೂಡ. ಕುಂಭ ಮೇಳದ ಸ್ವರೂಪ ಬೃಹತ್ತಾದುದು. ಎಷ್ಟು ದಿವ್ಯವೋ ಅಷ್ಟೇ ಭವ್ಯ. ದೇಶದಲ್ಲಿ ಮತ್ತು ಜಗತ್ತಿನೆಲ್ಲೆಡೆಯಿಂದ ಜನರು ಬರುತ್ತಾರೆ, ಬಂದು ಕುಂಭ ಮೇಳದಲ್ಲಿ ಭಾಗಿಯಾಗುತ್ತಾರೆ. ಕುಂಭಮೇಳದಲ್ಲಿ ಭಕ್ತಿ ಮತ್ತು ಶ್ರದ್ಧೆಯ ಜನಸಾಗರ ಉಕ್ಕಿ ಹರಿಯುತ್ತದೆ. ಒಂದೇ ಕಡೆ, ಒಂದೇ ಸಮಯದಲ್ಲಿ ದೇಶ ವಿದೇಶಗಳ ಲಕ್ಷಾಂತರ, ಕೋಟ್ಯಾಂತರ ಜನ ಸೇರುತ್ತಾರೆ. ಕುಂಭಮೇಳದ ಪರಂಪರೆಯು ನಮ್ಮ ಮಹಾನ್ ಸಾಂಸ್ಕೃತಿಕ ಪರಂಪರೆಯಿಂದ ಫಲಿತವವಾಗಿದೆ ಮತ್ತು ಮೂಡಿಬಂದಿದೆ. ಈ ಬಾರಿ ಜನವರಿ 15 ರಿಂದ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲ್ಪಡುವ ವಿಶ್ವ ಪ್ರಸಿದ್ಧ ಕುಂಭ ಮೇಳಕ್ಕೆ ನೀವೂ ಸಹ ಬಹುಶಃ ಬಹಳ ಉತ್ಸುಕತೆಯಿಂದ ಕಾಯುತ್ತಿರಬಹುದು. ಕುಂಭ ಮೇಳಕ್ಕೆ ಈಗಿಂದಲೇ ಸಾಧು ಸಂತರು ತಲುಪುವ ವಿಧಿಗಳು ಆರಂಭಗೊಂಡಿದೆ. ಕಳೆದ ವರ್ಷ UNESCO ಕುಂಭ ಮೇಳವನ್ನು Intangible cultural ಹೆರಿಟೇಜ್ ಆಫ್ ಹ್ಯುಮಾನಿಟಿ ಯ ಸೂಚ್ಯಂಕದಲ್ಲಿ ಗುರುತಿಸಿದೆ. ಇದರ ಜಾಗತಿಕ ಮಹತ್ವದ ಅಂದಾಜನ್ನು ಇದರಿಂದಲೇ ತಿಳಿಯಬಹುದು. ಕೆಲವು ದಿನಗಳ ಹಿಂದೆ ಹಲವು ದೇಶಗಳ ರಾಯಭಾರಿಗಳು ಕುಂಭಮೇಳದ ತಯಾರಿಯನ್ನು ವೀಕ್ಷಿಸಿದರು. ಅಲ್ಲಿ ಒಮ್ಮೆಲೇ ಹಲವು ದೇಶಗಳ ಧ್ವಜಗಳು ಹಾರಾಡಿದವು. ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲಾಗುವ ಈ ಕುಂಭ ಮೇಳದಲ್ಲಿ 150ಕ್ಕೂ ಹೆಚ್ಚು ದೇಶಗಳ ಜನರು ಆಗಮಿಸುವ ನಿರೀಕ್ಷೆ ಇದೆ ಕುಂಭಮೇಳದ ದಿವ್ಯತೆಯಿಂದ ಭಾರತದ ಭವ್ಯತೆ ಇಡೀ ಜಗತ್ತಿಗೆ ತನ್ನ ಬಣ್ಣವನ್ನು ಹರಡುತ್ತದೆ. ಕುಂಭ ಮೇಳವು ಆತ್ಮ ಶೋಧನೆಯ ಒಂದು ಮಾಧ್ಯಮವಾಗಿದೆ. ಅಲ್ಲಿ ಬರುವ ಪ್ರತಿವ್ಯಕ್ತಿಗೂ ವಿಭಿನ್ನ ರೀತಿಯ ಅನುಭವ ಆಗುತ್ತದೆ. ಸಾಂಸಾರಿಕ ವಿಷಯಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ವಿಶೇಷವಾಗಿ ಯುವಕರಿಗೆ ಇದು ಒಂದು ದೊಡ್ಡ ಕಲಿಕೆಯ ಅನುಭವ ಆಗುತ್ತದೆ. ನಾನು ಸ್ವತಃ ಕೆಲವು ದಿನಗಳ ಹಿಂದೆ ಪ್ರಯಾಗ್ ರಾಜ್ ಗೆ ಹೋಗಿದ್ದೆ. ಕುಂಭ ಮೇಳದ ತಯಾರಿ ಬಹಳ ಜೋರಾಗಿ ನಡೆಯುತ್ತಿರುವುದನ್ನು ನೋಡಿದೆ . ಪ್ರಯಾಗ್ ರಾಜ್ ದ ಜನತೆ ಸಹ ಕುಂಭ ಮೇಳದ ಬಗ್ಗೆ ಬಹಳ ಉತ್ಸಾಹಿತರಾಗಿದ್ದಾರೆ. ಅಲ್ಲಿ ನಾನು ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಿದೆ. ಭಕ್ತರಿಗೆ ಇದರಿಂದ ಸಾಕಷ್ಟು ಸಹಾಯ ಆಗುತ್ತದೆ. ಈ ಸಾರಿ ಕುಂಭ ಮೇಳದಲ್ಲಿ ಸ್ವಚ್ಚತೆಯ ಬಗ್ಗೆ ಬಹಳಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಶ್ರದ್ಧೆಯ ಜೊತೆಜೊತೆಗೆ ಸ್ವಚ್ಚತೆ ಇದ್ದರೆ ಇದರ ಬಗ್ಗೆ ಒಳ್ಳೆಯ ಸಂದೇಶ ದೂರ ದೂರದವರೆಗೆ ತಲುಪುತ್ತದೆ. ಈ ಬಾರಿ ಪ್ರತಿ ಭಕ್ತನೂ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಮೇಲೆ ಅಕ್ಷಯ ಮರ ದ ಪುಣ್ಯ ದರ್ಶನವನ್ನೂ ಮಾಡಬಹುದು. ಜನರ ಭಕ್ತಿಯ ಸಂಕೇತವಾದ ಈ ಅಕ್ಷಯ ಮರ ಹಲವಾರು ವರ್ಷಗಳಿಂದ ಕೋಟೆಯ ಒಳಗಡೆಯೇ ಇತ್ತು ,ಭಕ್ತರು ಇದರ ದರ್ಶನವನ್ನು ಬಯಸಿದರು ದೊರಕುತ್ತಿರಲಿಲ್ಲ ಈಗ ಇದರ ದರ್ಶನ ಎಲ್ಲರಿಗೂ ಮುಕ್ತವಾಗಿದೆ. ಹೆಚ್ಹಿನ ಸಂಖ್ಯೆಯಲ್ಲಿ ಜನರು ಕುಂಭ ಮೇಳಕ್ಕೆ ಬರಲು ಪ್ರೇರಣೆ ಸಿಗುವಂತಾಗಲು ನೀವು ಕುಂಭ ಮೇಳಕ್ಕೆ ಹೋದಾಗ ಅದರ ಬೇರೆ ಬೇರೆ ಮಗ್ಗುಲುಗಳು ಮತ್ತು ಅವುಗಳ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅವಶ್ಯವಾಗಿ ಹಂಚಿಕೊಳ್ಳಿ. ಆಧ್ಯಾತ್ಮಿಕವಾದ ಈ ಕುಂಭ ಮೇಳ ಭಾರತೀಯತೆಯ ದರ್ಶನದ ಮಹಾ ಕುಂಭವಾಗಲಿ,
ಶ್ರದ್ದೆಯ ಈ ಕುಂಭಮೇಳ ರಾಷ್ಟ್ರೀಯತೆಯ ಮಹಾ ಕುಂಭವಾಗಲಿ, ರಾಷ್ಟ್ರೀಯ ಏಕತೆಯ ಮಹಾಕುಂಭವಾಗಲಿ,
ಶ್ರಧ್ಧಾಳುಗಳ ಈ ಕುಂಭ ಅಂತರಾಷ್ಟ್ರೀಯ ಪ್ರವಾಸಿಗಳ ಮಹಾ ಕುಂಭವಾಗಲಿ,
ಕಲಾತ್ಮಕತೆಯ ಈ ಕುಂಭಮೇಳ, ಸೃಜನಶೀಲ ಶಕ್ತಿಯ ಮಹಾ ಕುಂಭವಾಗಲಿ.
ನನ್ನ ಪ್ರೀತಿಯ ದೇಶವಾಸಿಗಳೇ, ಜನವರಿ 26 ರ ಗಣತಂತ್ರ ದಿವಸದ ಸಮಾರಂಭದ ಕುರಿತು ನಮ್ಮೆಲ್ಲರ ಮನದಲ್ಲಿ ತುಂಬಾ ಉತ್ಸುಕತೆ ಇರುತ್ತದೆ. ಆ ದಿನ ನಾವು, ನಮಗೆ ನಮ್ಮ ಸಂವಿಧಾನವನ್ನು ಕೊಟ್ಟ ಮಹಾ ಪುರುಷರನ್ನು ನೆನಪಿಸಿಕೊಳ್ಳುತ್ತೇವೆ. ಈ ವರ್ಷ ನಾವು ಪೂಜ್ಯ ಬಾಪೂ ರವರ 150 ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ ಶ್ರೀ ಸಿರಿಲ್ ರಾಮಾಫೋಸ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಬರುತ್ತಿರುವುದು ನಮ್ಮ ಸೌಭಾಗ್ಯ. ಪೂಜ್ಯ ಬಾಪೂ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಒಂದು ಅವಿನಾಭಾವ ಸಂಬಂಧವಿದೆ. ಈ ದಕ್ಷಿಣ ಆಫ್ರಿಕಾದಿಂದಲೇ ಮೋಹನ್ ‘ಮಹಾತ್ಮ’ ನಾದರು. ದಕ್ಷಿಣ ಆಫ್ರಿಕಾದಲ್ಲಿಯೇ ಮಹಾತ್ಮಾ ಗಾಂಧಿಯವರು ತಮ್ಮ ಮೊದಲ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಮತ್ತು ವರ್ಣಬೇಧ ನೀತಿಯ ವಿರುದ್ಧ ಸಿಡಿದು ನಿಂತಿದ್ದರು. ಅವರು ಫೀನಿಕ್ಸ್ ಮತ್ತು ಟಾಲ್ ಸ್ಟಾಯ್ ಫಾರ್ಮ್ಸ್ ಗಳನ್ನು ಸ್ಥಾಪನೆ ಮಾಡಿದ್ದರು. ಅಲ್ಲಿಂದಲೇ ಇದೇ ವಿಶ್ವದಲ್ಲಿ ಶಾಂತಿ, ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಿದರು. 2018 ನ್ನು ನೆಲ್ಸನ್ ಮಂಡೇಲಾ ಅವರ ಜನ್ಮ ಶತಾಬ್ದಿಯ ರೂಪದಲ್ಲಿ ಆಚರಿಸಲಾಗುತ್ತಿದೆ. ಅವರು ‘ಮಡೀಬಾ’ ಎನ್ನುವ ಹೆಸರಿನಿದ ಸಹ ಗುರುತಿಸಿಸಲ್ಪಡುತ್ತಾರೆ. ನೆಲ್ಸನ್ ಮಂಡೇಲಾ ಅವರು ಇಡೀ ವಿಶ್ವದಲ್ಲಿ ವರ್ಣ ಬೇಧ ನೀತಿಯ ವಿರುದ್ಧದ ಸಂಘರ್ಷದಲ್ಲಿ ಒಂದು ಮಾದರಿ ಆಗಿದ್ದರು ಎಂಬುದು ನಮಗೆಲ್ಲರಿಗೂ ಗೊತ್ತು. ಮಂಡೇಲಾ ಅವರಿಗೆ ಪ್ರೆರಣಾದಾಯಕರಾಗಿದ್ದವರು ಯಾರು? ಅವರಿಗೆ ಅಷ್ಟೊಂದು ವರ್ಷ ಜೈಲುವಾಸ ಅನುಭವಿಸಲು ಸಹನಶಕ್ತಿ ಮತ್ತು ಪ್ರೇರಣೆ ಪೂಜ್ಯಬಾಪೂರವರಿಂದಲೇ ಸಿಕ್ಕಿತ್ತು. ಮಂಡೇಲರವರು “ಮಹಾತ್ಮಾ ಅವರು ನಮ್ಮ ಇತಿಹಾಸದ ಅವಿಚ್ಚಿನ್ನ ಅಂಗವಾಗಿದ್ದಾರೆ. ಏಕೆಂದರೆ, ಇಲ್ಲಿಯೇ ಅವರು ಸತ್ಯದೊಂದಿಗೆ ತಮ್ಮ ಮೊದಲ ಪ್ರಯೋಗವನ್ನು ಮಾಡಿದ್ದರು, ಇಲ್ಲಿಯೇ ಅವರು ನ್ಯಾಯಕ್ಕಾಗಿ ತಮ್ಮ ಧ್ರುಡತೆಯ ಒಂದು ವಿಲಕ್ಷಣವಾದ ಪ್ರದರ್ಶನ ನೀಡಿದ್ದರು, ಇಲ್ಲಿಯೇ ಅವರು ತಮ್ಮ ಸತ್ಯಾಗ್ರಹದ ರೂಪು ರೇಷೆ ಮತ್ತು ಸಂಘರ್ಷದ ವಿಧಾನವನ್ನು ವಿಕಸಿತಗೊಳಿಸಿದ್ದರು” ಎಂದು ಬಾಪೂ ಅವರ ಬಗ್ಗೆ ಹೇಳಿದ್ದರು. ಅವರು ಬಾಪೂ ಅವರನ್ನು ಅದರ್ಶ ವ್ಯಕ್ತಿಯಾಗಿ ಪರಿಗಣಿಸಿದ್ದರು ಬಾಪೂ ಮತ್ತು ಮಂಡೇಲಾ ಇವರಿಬ್ಬರೂ ಇಡೀ ವಿಶ್ವಕ್ಕೆ ಬರೀ ಪ್ರೆರಣಾದಾಯಕರು ಮಾತ್ರವಲ್ಲದೆ ಅವರ ಆದರ್ಶ, ಪ್ರೇಮ ಮತ್ತು ಕರುಣೆ ತುಂಬಿದ ಸಮಾಜದ ನಿರ್ಮಾಣಕ್ಕೆ ಸಹ ಯಾವಾಗಲೋ ನಮ್ಮನ್ನು ಪ್ರೋತ್ಸಾಹಿಸುತ್ತಿರುತ್ತವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಮುಂಚೆ ನರ್ಮದಾ ತೀರದ ಕೆವಡಿಯದಲ್ಲಿ DGP conference ನಡೆಯಿತು. ಎಲ್ಲಿ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ statue of liberty ಎಲ್ಲಿ ಇದೆಯೋ, ಅಲ್ಲಿ ದೇಶದ ವರಿಷ್ಠ ಪೋಲಿಸ್ ಅಧಿಕಾರಿಗಳ ಜೊತೆ ಸಾರ್ಥಕವಾದ ಚರ್ಚೆ ನಡೆಯಿತು. ದೇಶ ಮತ್ತು ದೇಶವಾಸಿಗಳಿಗೆ ಸುರಕ್ಷತೆಯನ್ನು ಹೆಚ್ಚು ಬಲ ಪಡಿಸುವ ಸಲುವಾಗಿ ಯಾವ ರೀತಿಯ ಹೆಜ್ಜೆ ಇಡಬೇಕು ಎನ್ನುವುದರ ಬಗ್ಗೆ ದೀರ್ಘವಾಗಿ ಮಾತುಕತೆಗಳು ನಡೆದವು. ಅದೇ ಕಾರಣದಿಂದ ನಾನು ದೇಶದ ಏಕತೆಗಾಗಿ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ಪ್ರದಾನಮಾಡಲು ಪ್ರಾರಂಭಿಸುವ ಬಗ್ಗೆ ಘೋಷಣೆ ಸಹಾ ಮಾಡಿದ್ದೆ. ಯಾವುದಾದರೊಂದು ರೂಪದಲ್ಲಿ ರಾಷ್ಟ್ರೀಯ ಏಕತೆಗಾಗಿ ತಮ್ಮ ಕೊಡುಗೆಯನ್ನು ಯಾರು ನೀಡಿರುತ್ತಾರೋ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಸರ್ದಾರ್ ಪಟೇಲರು ತಮ್ಮ ಇಡೀ ಜೀವನವನ್ನು ದೇಶದ ಏಕತೆಗಾಗಿ ಸಮರ್ಪಿಸಿಕೊಂಡಿದ್ದರು. ಅವರು ಯಾವಾಗಲೂ ಭಾರತದ ಅಖಂಡತೆಯನ್ನು ಕಾಪಾಡುವುದರಲ್ಲಿ ತೊಡಗಿಸಿಕೊಂಡಿದ್ದರು. ಭಾರತದ ಶಕ್ತಿ ಇಲ್ಲಿಯ ವಿವಿಧತೆಯಲ್ಲಿಯೇ ಅಡಗಿದೆ ಎಂದು ಸರದಾರರು ನಂಬಿದ್ದರು. ಸರ್ದಾರ್ ಪಟೇಲರ ಈ ಭಾವನೆಯನ್ನು ಗೌರವಿಸುತ್ತಾ ಏಕತೆಗಾಗಿ ಇರುವ ಈ ಪ್ರಶಸ್ತಿಯ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೆದ್ದೇವೆ.
ನನ್ನ ಪ್ರೀತಿಯ ದೇಶವಾಸಿಗಳೇ, 13 ಜನವರಿ ಗುರು ಗೋವಿಂದ ಸಿಂಗ ರ ಜಯಂತಿಯ ಪುಣ್ಯ ದಿನ. ಗುರು ಗೋವಿಂದ ಸಿಂಗರು ಜನಿಸಿದ್ದು ಪಟ್ನಾದಲ್ಲಿ. ಜೀವನದ ಅಧಿಕ ಸಮಯದವರೆಗೆ ಅವರ ಕರ್ಮ ಭೂಮಿ ಉತ್ತರ ಭಾರತವಾಗಿತ್ತು ಮತ್ತು ಮಹಾರಾಷ್ಟ್ರದ ನಾಂದೇಡ್ ನಲ್ಲಿ ಅವರು ತಮ್ಮ ಕೊನೆಯುಸಿರೆಳೆದರು. ಜನ್ಮಸ್ಥಳ ಪಟ್ನಾ, ಕರ್ಮ ಭೂಮಿ ಉತ್ತರ ಭಾರತ ಮತ್ತು ಜೀವನದ ಕೊನೆಯ ಕ್ಷಣಗಳು ನಾಂದೇಡ್ ನಲ್ಲಿ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇಡೀ ಭಾರತ ದೇಶಕ್ಕೆ ಅವರ ಆಶೀರ್ವಾದ ಲಭಿಸಿತು. ಅವರ ಜೀವನ ಕಾಲವನ್ನು ನೋಡಿದರೆ ಅದರಲ್ಲಿ ಇಡೀ ಭಾರತದ ನೋಟ ಸಿಗುತ್ತದೆ. ತಮ್ಮ ತಂದೆ ಗುರು ತೇಜ್ ಬಹದ್ದೂರ್ ರು ಹುತಾತ್ಮರಾದ ಮೇಲೆ ಗುರು ಗೋವಿಂದ ಸಿಂಗ ರು 9 ನೇ ವರ್ಷದ ಸಣ್ಣ ವಯಸ್ಸಿನಲ್ಲಿಯೇ ಗುರುವಿಯ ಪದವಿ ಪಡೆದವರು. ಗುರು ಗೋವಿಂದ ಸಿಂಗರಿಗೆ ನ್ಯಾಯಕ್ಕಾಗಿ ಹೋರಾಟ ಮಾಡುವ ಸಾಹಸ ಸಿಖ್ ಗುರುಗಳ ಪರಂಪರೆಯಿಂದಲೇ ಬಂದಿತ್ತು. ಅವರು ಶಾಂತ ಹಾಗೂ ಸರಳ ವ್ಯಕ್ತಿತ್ವದ ಧಣಿಯಾಗಿದ್ದರು. ಆದರೆ ಯಾವಾಗ ಬಡವರು ಮತ್ತು ದುರ್ಬಲರ ಧ್ವನಿಯನ್ನು ದಮನ ಮಾಡುವ ಪ್ರಯತ್ನ ಆಗುತ್ತಿತ್ತೋ, ಅವರೊಂದಿಗೆ ಅನ್ಯಾಯವಾಗುತ್ತಿತ್ತೋ ಆಗೆಲ್ಲಾ ಗುರು ಗೋವಿಂದ ಸಿಂಗರು ಬಡವರು ಮತ್ತು ದುರ್ಬಲರಿಗಾಗಿ ಧ್ರುದತೆಯಿಂದ ತಮ್ಮ ಧ್ವನಿ ಎತ್ತಿದ್ದರು ಮತ್ತು ಆದ್ದರಿಂದ
ಲಕ್ಷ ಲಕ್ಷ ಜನರೊಂದಿಗೆ ಒಬ್ಬನೇ ಹೋರಾಡುವೆನು
ಹದ್ದಿನಿಂದ ಹಕ್ಕಿಗಳನ್ನು ರಕ್ಷಿಸಬಲ್ಲೆನು
ಅದರಿಂದಲೇ ಗೋವಿಂದ ಸಿಂಹ ಎಂದು ಕರೆಸಿಕೊಳ್ಳುವೆನು
ದುರ್ಬಲರ ವಿರುದ್ಧ ಹೋರಾಡಿ ಶಕ್ತಿಯ ಪ್ರದರ್ಶನ ಮಾಡಲಾಗದು ಎಂದು ಅವರು ಹೇಳುತ್ತಿದ್ದರು. ಮಾನವನ ದುಃಖ ಗಳನ್ನೂ ದೂರಮಾಡುವುದು ಎಲ್ಲಕ್ಕಿಂತ ದೊಡ್ಡ ಸೇವೆ ಎಂದು ಶ್ರೀ ಗೋವಿಂದ ಸಿಂಗರು ಹೇಳುತ್ತಿದ್ದರು. ಅವರು ಶೌರ್ಯ, ವೀರತ್ವ, ತ್ಯಾಗ, ಧರ್ಮಪರಾಯಣತೆ, ಇವುಗಳಿಂದ ತುಂಬಿದ್ದ ದಿವ್ಯ ಪುರುಷರಾಗಿದ್ದರು. ಇವರಿಗೆ ಶಾಸ್ತ್ರ, ಶಸ್ತ್ರ, ಎರಡರ ಬಗ್ಗೆಯೂ ಅಲೌಕಿಕ ಜ್ನಾನವಿತ್ತು. ಅವರೊಬ್ಬ ಗುರಿಕಾರರಾಗಿದ್ದರು. ಜೊತೆಗೆ ಗುರುಮುಖಿ, ಬೃಜ್ ಭಾಷೆ, ಸಂಸ್ಕೃತ, ಪಾರ್ಸಿ, ಹಿಂದಿ ಮತ್ತು ಉರ್ದು ಸಹಿತ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ನಾನು ಮತ್ತೊಮ್ಮೆ ಗುರು ಗೋವಿಂದ ಸಿಂಗರಿಗೆ ವಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗದ ಬಹಳಷ್ಟು ಒಳ್ಳೆಯ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅಂತಹದೇ ಒಂದು ಪ್ರಯತ್ನ FSSAI ಅಂದರೆ Food Safety and Standard Authority of India ದ ಮುಖಾಂತರ ನಡೆಯುತ್ತಿದೆ. ಮಹಾತ್ಮಾ ಗಾಂಧಿಯವರ 150- ನೇ ವರ್ಷಾಚರಣೆಯ ಅಂಗವಾಗಿ ದೇಶದೆಲ್ಲೆಡೆ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೇ ಸರಣಿಯಲ್ಲಿ FSSAI ಸೇಫ್ ಮತ್ತು healthy ಡಯಟ್ ಹ್ಯಾಬಿಟ್ – ಆಹಾರದ ಒಳ್ಳೆಯ ಅಭ್ಯಾಸಗಳಿಗೆ ಆದ್ಯತೆ ನೀಡುವುದರಲ್ಲಿ ತೊಡಗಿಕೊಂಡಿದೆ. ‘Eat Right India” ಅಭಿಯಾನದ ಅಡಿಯಲ್ಲಿ ದೇಶದೆಲ್ಲೆಡೆ ಸ್ವಸ್ಥ ಭಾರತ ಯಾತ್ರೆಗಳನ್ನು ನಡೆಸಲಾಗುತ್ತಿದೆ. ಈ ಅಭಿಯಾನವು ಜನವರಿ 27 ರ ವರೆಗೆ ನಡೆಯುತ್ತದೆ. ಕೆಲವೊಮ್ಮೆ ಸಹಕಾರಿ ಸಂಘಟನೆಗಳು ಒಂದು ನಿರ್ವಾಹಕದ ರೀತಿಯಲ್ಲಿ ಇರುತ್ತದೆ. ಆದರೆ FSSAI ಇದರಿಂದ ಮುಂದಕ್ಕೆ ಹೋಗಿ ಜನ ಜಾಗೃತಿ ಮತ್ತು ಲೋಕ ಶಿಕ್ಷಣದ ಕೆಲಸ ಮಾಡುತ್ತಿದೆ. ಎಂದು ಭಾರತ ಸ್ವಚ್ಚವಾಗುತ್ತದೋ, ಆರೋಗ್ಯಪೂರ್ಣವಾಗುತ್ತದೆಯೋ ಆಗ ಭಾರತ ಸಮೃದ್ಧವೂ ಆಗುತ್ತದೆ. ಒಳ್ಳೆಯ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಎಲ್ಲಕ್ಕಿಂತ ಮುಖ್ಯ. ಈ ಸಂದರ್ಭದಲ್ಲಿ ಈ ಕಾರ್ಯಕ್ರಮಗಳಿಗೆ FSSAI ಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಬನ್ನಿ, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಎನ್ನುವುದು ನಿಮ್ಮಲ್ಲಿ ನನ್ನ ಪ್ರಾರ್ಥನೆ. ನೀವೂ ಕೂಡ ಇದರಲ್ಲಿ ಭಾಗವಹಿಸಿ ಮತ್ತು ಮುಖ್ಯವಾಗಿ ಮಕ್ಕಳಿಗೆ ಇದನ್ನೆಲ್ಲಾ ತೋರಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಆಹಾರದ ಮಹತ್ವದ ಬಗ್ಗೆ ಶಿಕ್ಷಣವು ಬಾಲ್ಯದಿಂದಲೇ ಅವಶ್ಯಕವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, 2018 ರಲ್ಲಿ ಇದು ಕೊನೆಯ ಕಾರ್ಯಕ್ರಮ. 2019 ರಲ್ಲಿ ನಾವು ಮತ್ತೆ ಸಿಗೋಣ, ಮತ್ತೆ ಮನದ ಮಾತುಗಳನ್ನು ಆಡೋಣ. ವ್ಯಕ್ತಿಯ ಜೀವನವಿರಲಿ, ದೇಶದ ಜೀವನವಿರಲಿ, ಸಮಾಜದ ಜೀವನವಿರಲಿ, ಇದಕ್ಕೆಲ್ಲ ಪ್ರೇರಣೆ ಪ್ರಗತಿಯ ಆಧಾರವಾಗಿರುತ್ತದೆ. ಬನ್ನಿ, ಹೊಸ ಪ್ರೇರಣೆಯೇ, ಹೊಸ ಆಶಾಭಾವ, ಹೊಸ ಸಂಕಲ್ಪ, ಹೊಸ ಸಿದ್ಧಿ, ಹೊಸ ಎತ್ತರ, ಇವೆಲ್ಲದರ ಜೊತೆ ಮುಂದೆ ಸಾಗೋಣ ಬೆಳೆಯುತ್ತಾ ಸಾಗೋಣ, ನಾವೂ ಬದಲಾಗೋಣ, ದೇಶವನ್ನೂ ಬದಲಾಯಿಸೋಣ.
ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. 2014 ರ ಅಕ್ಟೋಬರ್ 3 ವಿಜಯದಶಮಿಯ ಪವಿತ್ರ ದಿನ. ಮನದ ಮಾತಿನ ಮಾಧ್ಯಮದ ಮೂಲಕ ನಾವೆಲ್ಲರೂ ಒಂದು ಯಾತ್ರೆಯನ್ನು ಆರಂಭಿಸಿದ್ದೆವು. ಮನದ ಮಾತಿನ ಈ ಯಾತ್ರೆಗೆ ಇಂದು 50 ಕಂತುಗಳು ಪೂರ್ಣಗೊಂಡಿವೆ. ಈ ರೀತಿ ಇಂದಿನ ಈ ಗೋಲ್ಡನ್ ಜ್ಯುಬಿಲಿ ಕಂತು ಸ್ವರ್ಣಮಯವಾದದ್ದಾಗಿದೆ. ಈ ಬಾರಿ ನನಗೆ ಬಂದ ನಿಮ್ಮ ಪತ್ರಗಳು ಮತ್ತು ದೂರವಾಣಿ ಕರೆಗಳು ಈ 50 ಕಂತುಗಳಿಗೆ ಸಂಬಂದಿಸಿದ್ದೇ ಆಗಿವೆ. ಮೈ ಗೌ ಗೆ ದೆಹಲಿಯ ಅಂಶುಕುಮಾರ್, ಅಮರ್ ಕುಮಾರ್ ಮತ್ತು ಪಾಟ್ನಾದಿಂದ ವಿಕಾಸ್ ಯಾದವ್, ಹಾಗೆಯೇ ನರೇಂದ್ರ ಮೋದಿ ಆಪ್ ಗೆ ದೆಹಲಿಯ ಮೋನಿಕಾ ಜೈನ್, ಪಶ್ಚಿಮ ಬಂಗಾಳದ ಬರ್ಧವಾನ್ ದಿಂದ ಪ್ರಸನ್ಜಿತ್ ಸರ್ಕಾರ್ ಮತ್ತು ನಾಗ್ಪುರದ ಸಂಗೀತಾ ಶಾಸ್ತ್ರಿ ಇವರೆಲ್ಲರೂ ಒಂದೇ ಬಗೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಹೇಳುವುದೇನೆಂದರೆ ‘ಸಾಮಾನ್ಯವಾಗಿ ಜನರು ನಿಮ್ಮನ್ನು ಸಂಪರ್ಕಿಸಲು ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳು ಮತ್ತು ಮೋಬೈಲ್ ಆಪ್ಗಳನ್ನು ಬಳಸುತ್ತಾರೆ ಆದರೆ ನೀವು ಜನರೊಂದಿಗೆ ಸಂಪರ್ಕ ಹೊಂದಲು ರೇಡಿಯೋವನ್ನು ಏಕೆ ಆಯ್ದುಕೊಂಡಿರಿ?’ ನಿಮ್ಮ ಈ ಜಿಜ್ಞಾಸೆ ಬಹಳ ಸಹಜವಾದದ್ದು. ಇಂದಿನ ಯುಗದಲ್ಲಿ ರೇಡಿಯೋವನ್ನು ಹೆಚ್ಚು ಕಡಿಮೆ ಜನ ಮರೆತೇ ಹೋಗಿದ್ದರು ಎನ್ನುವಾಗ ಮೋದಿಯವರು ಏಕೆ ರೇಡಿಯೋದೊಂದಿಗೆ ಬಂದರು? ನಾನು ನಿಮಗೆ ಒಂದು ಘಟನೆ ಬಗ್ಗೆ ಹೇಳಬಯಸುತ್ತೇನೆ. ಇದು 1998 ರ ಸಂಗತಿ, ನಾನು ಭಾರತೀಯ ಜನತಾ ಪಾರ್ಟಿಯ ಸಂಘಟನೆಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೆ. ಅದು ಮೇ ತಿಂಗಳು ಮತ್ತು ನಾನು ಸಂಜೆ ವೇಳೆ ಪಯಣಿಸುತ್ತಾ ಬೇರೊಂದು ಸ್ಥಳಕ್ಕೆ ಹೊರಟಿದ್ದೆ. ಹಿಮಾಚಲ ಪ್ರದೇಶದ ಬೆಟ್ಟಗಳ ಮೇಲೆ ಸಂಜೆ ವೇಳೆ ಚಳಿ ಹೆಚ್ಚಿರುತ್ತದೆ. ಹಾಗಾಗಿ ಆಗ ಒಂದು ಧಾಬಾದಲ್ಲಿ ಚಹಾ ಸೇವನೆಗೆ ನಿಂತೆ ಮತ್ತು ಚಹಾಗಾಗಿ ಆರ್ಡರ್ ಮಾಡಿದೆ. ಅದೊಂದು ಪುಟ್ಟ ಧಾಬಾ ಆಗಿತ್ತು ಮತ್ತು ಅಲ್ಲಿ ಒಬ್ಬನೇ ವ್ಯಕ್ತಿ ಚಹಾ ತಯಾರಿಸುತ್ತಿದ್ದ ಮತ್ತು ಮಾರುತ್ತಿದ್ದ. ಅದಕ್ಕೆ ಸೂರು ಇರಲಿಲ್ಲ. ರಸ್ತೆ ಬದಿಗೆ ತಳ್ಳೋ ಗಾಡಿಯಲ್ಲಿ ಚಹಾ ಮಾರುತ್ತಿದ್ದ. ಆತನ ಬಳಿಯಿರುವ ಗಾಜಿನ ಜರಡಿಯಿಂದ ಲಡ್ಡುವೊಂದನ್ನು ಹೊರತೆಗೆದ, ಸರ್ ಚಹಾ ನಂತರ ಕುಡಿಯಿರಿ ಮೊದಲು ಲಡ್ಡು ತಿನ್ನಿರಿ, ಬಾಯಿ ಸಿಹಿ ಮಾಡಿಕೊಳ್ಳಿ ಎಂದು ಹೇಳಿದ. ನನಗೂ ಆಶ್ಚರ್ಯವಾಯಿತು ‘ ಏನು ಸಮಾಚಾರ, ಮನೆಯಲ್ಲಿ ಮದುವೆ ಮುಂಜಿ ಇಲ್ಲ ಯಾವುದಾದರೂ ಸಂತೋಷದ ವಿಷಯವಿದೆಯೇ ಎಂದು ಕೇಳಿದೆ. ಆತ ಹೇಳಿದ ಇಲ್ಲ ಅಣ್ಣ ನಿಮಗೆ ಗೊತ್ತಿಲ್ಲವೇ? ಬಹಳ ಸಂತೋಷದ ವಿಷಯವೇ ಇದೆ’ ಎಂದು ಕುಣಿದು ಕುಪ್ಪಳಿಸುತ್ತಿದ್ದ. ಅವನ ಉತ್ಸಾಹ ಕಂಡು ಏನಾಯ್ತಪ್ಪ ಎಂದು ಕೇಳಿದೆ. ಇಂದು ಭಾರತ ಬಾಂಬ್ ಸ್ಫೋಟಿಸಿದೆ ಎಂದ. ಭಾರತ ಬಾಂಬ್ ಸ್ಫೋಟಿಸಿತು ಎಂಬುದು ನನಗೆ ಅರ್ಥವಾಗಲಿಲ್ಲ ಎಂದೆ. ಅದಕ್ಕೆ ಅವನು ರೇಡಿಯೋ ಕೇಳಿ ಸರ್ ಎಂದ. ಆಗ ರೇಡಿಯೋದಲ್ಲಿ ಅದರದ್ದೇ ಚರ್ಚೆ ನಡೆದಿತ್ತು. ಅದು ಪರಮಾಣು ಪರೀಕ್ಷೆಯ ದಿನವಾಗಿತ್ತು. ನಮ್ಮ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಆಗ ಪರಮಾಣು ಪರೀಕ್ಷೆಯ ಕುರಿತು ಮಾಧ್ಯಮದವರ ಮುಂದೆ ಘೋಷಿಸಿದ್ದರು. ಅದನ್ನು ಕೇಳಿದ್ದ ಆ ಚಹಾ ಅಂಗಡಿಯಾತ ಸಂತೋಷದಿಂದ ಕುಣಿಯುತ್ತಿದ್ದ. ಕಾಡಿನ ನಿರ್ಜನ ಪ್ರದೇಶದಲ್ಲಿ, ಮಂಜಿನಿಂದಾವೃತವಾದ ಬೆಟ್ಟಗಳ ನಡುವೆ, ಚಹಾ ಗಾಡಿಯನ್ನು ಇಟ್ಟುಕೊಂಡು ಹೊಟ್ಟೆ ಹೊರೆಯುತ್ತಿರುವ ಒಬ್ಬ ಸಾಮಾನ್ಯ ಮನುಷ್ಯ ದಿನಪೂರ್ತಿ ರೇಡಿಯೋ ಕೇಳುತ್ತಿರಬಹುದು, ಆ ರೇಡಿಯೋದಲ್ಲಿ ಬಿತ್ತರಗೊಂಡ ಸುದ್ದಿ ಅವನ ಮೇಲೆ ಎಂಥ ಅಗಾಧ ಪರಿಣಾಮ ಬೀರಿತ್ತು, ಎಷ್ಟು ಪ್ರಭಾವ ಬೀರಿತ್ತು ಎಂದರೆ ಅಂದಿನಿಂದ ರೇಡಿಯೋ ಜನಮಾನಸದಲ್ಲಿ ಮನೆಮಾಡಿದೆ ಮತ್ತು ರೇಡಿಯೋ ಬಹಳ ಶಕ್ತಿಯುತ ಮಾಧ್ಯಮವಾಗಿದೆ ಎಂಬುದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತು. ಅತಿ ಹೆಚ್ಚು ವ್ಯಾಪ್ತಿಗೆ ತಲುಪಬಲ್ಲ ಮತ್ತು ಹೆಚ್ಚು ಪ್ರಭಾವಯುತವಾದ ಸಂವಹನ ಮಾಧ್ಯಮದಲ್ಲಿ ರೇಡಿಯೋಗೆ ಸಮನಾದದ್ದು ಬೇರಾವುದೂ ಇಲ್ಲ ಎಂಬುದು ಅಂದಿನಿಂದ ನನ್ನ ಮನಸ್ಸನ್ನು ತುಂಬಿದೆ ಮತ್ತು ಅದರ ಶಕ್ತಿ ಎಷ್ಟೆಂಬುದನ್ನು ನಾನು ಅಂದಾಜಿಸಬಲ್ಲೆ. ಈಗ ನಾನು ಪ್ರಧಾನಮಂತ್ರಿ ಮಂತ್ರಿ ಆದ ಮೇಲೆ ಅತ್ಯಂತ ಪ್ರಭಾವಯುತ ಮಾಧ್ಯಮದತ್ತ ನನ್ನ ಗಮನ ಹೋಗುವುದು ಸಾಮಾನ್ಯವೇ ಆಗಿತ್ತು. ದೇಶದ ಏಕತೆ, ನಮ್ಮ ಭವ್ಯ ಇತಿಹಾಸ, ಅದರ ಶೌರ್ಯ, ಭಾರತದ ವಿವಿಧತೆ, ನಮ್ಮ ಸಾಂಸ್ಕೃತಿಕ ವೈವಿಧ್ಯತೆ, ನಮ್ಮ ಸಮಾಜದ ಕಣ ಕಣದಲ್ಲೂ ಹುದುಗಿರುವ ಉತ್ತಮ ವಿಚಾರಗಳು, ಜನರ ಮಾನವೀಯತೆ, ಹುಮ್ಮಸ್ಸು, ತ್ಯಾಗ, ತಪಸ್ಸು ಈ ಎಲ್ಲ ವಿಷಯಗಳು ಭಾರತದ ಪ್ರತಿಯೊಬ್ಬ ಮನುಷ್ಯನಿಗೂ ತಲುಪಬೇಕು ಎಂಬುದು 2014 ರ ಮೇ ತಿಂಗಳಲ್ಲಿ ನಾನು ಪ್ರಧಾನ ಸೇವಕನಾಗಿ ಕರ್ತವ್ಯ ನಿಭಾಯಿಸಲಾರಂಭಿಸಿದ ದಿನದಿಂದಲೇ ನನ್ನ ಮನಸ್ಸಿನಲ್ಲಿ ಮೂಡಿದ ಆಸೆಯಾಗಿತ್ತು. ದೇಶದ ದೂರದ ಗ್ರಾಮಗಳಿಂದ ಹಿಡಿದು ಮೆಟ್ರೋ ನಗರಗಳವರೆಗೆ ರೈತರಿಂದ ಯುವ ವೃತ್ತಿಪರರವರೆಗೆ ತಲುಪುವ ಉದ್ದೇಶದಿಂದ ಈ ಮನ್ ಕಿ ಬಾತ್ ಯಾತ್ರೆ ಆರಂಭವಾಯಿತು. ಪ್ರತಿ ತಿಂಗಳು ಲಕ್ಷಾಂತರ ಪತ್ರಗಳನ್ನು ಓದುತ್ತಾ, ದೂರವಾಣಿ ಕರೆಗಳನ್ನು ಕೇಳುತ್ತಾ, ಆಪ್ ಮತ್ತು ಮೈ ಗೌ ನಲ್ಲಿ ಅನಿಸಿಕೆಗಳನ್ನು ನೋಡುತ್ತಾ ಈ ಎಲ್ಲವನ್ನೂ ಒಂದು ಸೂತ್ರದಲ್ಲಿ ಪೋಣಿಸಿ, ಸಣ್ಣ ಪುಟ್ಟ ಮಾತುಗಳನ್ನು ಆಡುತ್ತಲೇ ನಾವೆಲ್ಲರೂ 50 ಕಂತುಗಳನ್ನು ಪೂರೈಸಿದ್ದೇವೆ. ಇತ್ತೀಚೆಗೆ ಆಕಾಶವಾಣಿ ಮನ್ ಕಿ ಬಾತ್ ಕುರಿತಾದ ಸಮೀಕ್ಷೆ ನಡೆಸಿತ್ತು. ಅವುಗಳಲ್ಲಿ ಕೆಲವು ಬಹಳ ಆಸಕ್ತಿದಾಯಕ ಫೀಡ್ ಬ್ಯಾಕ್ ಗಳನ್ನು ನಾನು ಗಮನಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಸರಾಸರಿ 70% ರಷ್ಟು ಜನರು ನಿಯಮಿತವಾಗಿ ಮನ್ ಕಿ ಬಾತ್ ಕೇಳುವ ಜನರಿದ್ದಾರೆ. ಮನ್ ಕಿ ಬಾತ್ ಕೇಳುವ ಹೆಚ್ಚಿನ ಜನರಿಗೆ ಇದರಿಂದ ಸಮಾಜದಲ್ಲಿ ಸಕಾರಾತ್ಮಕತೆ ಹೆಚ್ಚಿದೆ ಎಂಬ ಅಭಿಪ್ರಾಯವಿದೆ. ಮನ್ ಕಿ ಬಾತ್ ಮೂಲಕ ದೊಡ್ಡ ಪ್ರಮಾಣದಲ್ಲಿ ಜನಾಂದೋಲನಕ್ಕೆ ಉತ್ತೇಜನ ದೊರೆತಿದೆ. ಹ್ಯಾಶ್ ಟ್ಯಾಗ್ ಇಂಡಿಯಾ ಪಾಸಿಟಿವ್ ಕುರಿತು ವ್ಯಾಪಕ ಚರ್ಚೆಯೂ ಆಗಿದೆ. ಇದು ನಮ್ಮ ದೇಶಬಾಂಧವರ ಮನದಲ್ಲಿ ಹುದುಗಿರುವ ಧನಾತ್ಮಕ ಭಾವನೆಯ, ಸಕಾರಾತ್ಮಕ ಭಾವನೆಯ ಒಂದು ನೋಟವಾಗಿದೆ. ಮನ್ ಕಿ ಬಾತ್ ನಿಂದಾಗಿ ಸ್ವ ಇಚ್ಛೆಯಿಂದ ಕೆಲಸ ಮಾಡುವ ಭಾವನೆ ಹೆಚ್ಚಿದೆ, ಸಮಾಜ ಸೇವೆಗೆ ಜನರು ಏನಾದರೂ ಮಾಡಬೇಕೆಂದು ನಾ ಮುಂದು ತಾ ಮುಂದು ಎಂದು ಮುಂದೆ ಬರುವಂಥ ಭಾವನೆ ಹೆಚ್ಚಿದೆ ಎಂದು ಜನರು ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಮನ್ ಕಿ ಬಾತ್ ನಿಂದಾಗಿ ರೇಡಿಯೋ ಮತ್ತಷ್ಟು ಜನಪ್ರಿಯಗೊಳ್ಳುತ್ತಿದೆ ಎಂಬುದನ್ನು ಕೇಳಿ ನನಗೆ ಸಂತೋಷವಾಯಿತು. ಆದರೆ ಕೇವಲ ರೇಡಿಯೋ ಮಾಧ್ಯಮದಿಂದ ಮಾತ್ರ ಜನರು ಈ ಕಾರ್ಯಕ್ರಮದೊಂದಿಗೆ ಬೆರೆತಿಲ್ಲ. ಜನರು ಟಿ ವಿ, ಎಫ್ ಎಂ, ರೇಡಿಯೋ, ಮೊಬೈಲ್, ಇಂಟರ್ನೆಟ್, ಫೇಸ್ಬುಕ್ ಲೈವ್ ಮತ್ತು ಪೆರಿಸ್ಕೋಪ್ ಜೊತೆ ಜೊತೆಗೆ ನರೇಂದ್ರ ಮೋದಿ ಆಪ್ ಮೂಲಕವೂ ಮನ್ ಕಿ ಬಾತ್ ನಲ್ಲಿ ಪಾಲ್ಗೊಳ್ಳುವುದನ್ನು ದೃಢಪಡಿಸುತ್ತಿದ್ದಾರೆ. ನಾನು ಮನ್ ಕಿ ಬಾತ್ ಕುಟುಂಬದ ಎಲ್ಲ ಸದಸ್ಯರಾದ ನಿಮಗೆ ಇದರ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಮತ್ತು ಇದರಲ್ಲಿ ಪಾಲ್ಗೊಂಡಿದ್ದಕ್ಕೆ ಮನಃ ಪೂರ್ವಕವಾಗಿ ಧನ್ಯವಾದ ತಿಳಿಸುತ್ತೇನೆ.
(ಫೋನ್ ಕಾಲ್ – 1)
ಗೌರವಯುತ ಪ್ರಧಾನ ಮಂತ್ರಿಗಳೇ, ನಮಸ್ಕಾರ! ನನ್ನ ಹೆಸರು ಶಾಲಿನಿ, ನಾನು ಹೈದರಾಬಾದ್ ನಿಂದ ಮಾತನಾಡುತ್ತಿದ್ದೇನೆ. ‘ಮನ್ ಕಿ ಬಾತ್’ ಕಾರ್ಯಕ್ರಮ ಜನರಲ್ಲಿ ಅತಿ ಜನಪ್ರಿಯ ಕಾರ್ಯಕ್ರಮವಾಗಿದೆ. ಆರಂಭದಲ್ಲಿ ಈ ಕಾರ್ಯಕ್ರಮವೂ ಒಂದು ರಾಜಕೀಯ ವೇದಿಕೆಯಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿತ್ತು ಮತ್ತು ಚರ್ಚೆಯ ವಿಷಯವೂ ಆಗಿತ್ತು. ಆದರೆ ಕಾರ್ಯಕ್ರಮ ಮುಂದುವರಿದಂತೆ ಸಾಮಾಜಿಕ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಕೇಂದ್ರೀಕೃತವಾಗಿತ್ತು ಎಂಬುದನ್ನು ನಾವು ಗಮನಿಸಿದ್ದೇವೆ. ಹೀಗೆ ಕೋಟ್ಯಾಂತರ ಸಾಮಾನ್ಯ ಜನರೊಂದಿಗೆ ಇದು ಸಂಪರ್ಕದ ಸಾಧನವಾಯಿತು. ನಿಧಾನವಾಗಿ ರಾಜಕೀಯ ವೇದಿಕೆ ಎಂಬ ಚರ್ಚೆಗಳು ನಿಂತು ಹೋದವು. ನೀವು ಈ ಕಾರ್ಯಕ್ರಮವನ್ನು ರಾಜಕೀಯದಿಂದ ದೂರ ಇರುವಂತೆ ಮಾಡುವಲ್ಲಿ ಹೇಗೆ ಸಫಲರಾದಿರಿ ಎಂಬುದು ನನ್ನ ಪ್ರಶ್ನೆ. ಈ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಬಹುದು ಎಂದು ನಿಮಗೆ ಅನ್ನಿಸಲಿಲ್ಲವೆ? ಇಲ್ಲವೆ ಈ ವೇದಿಕೆಯ ಮೂಲಕ ನಿಮ್ಮ ಸರ್ಕಾರದ ಸವಲತ್ತುಗಳ ಕುರಿತು ಮಾತನಾಡಬೇಕೆಂದು ಅನ್ನಿಸಲಿಲ್ಲವೆ? ಧನ್ಯವಾದ.” ( ಫೋನ್ ಕಾಲ್ ಮುಕ್ತಾಯ)
ನಿಮ್ಮ ದೂರವಾಣಿ ಕರೆಗೆ ಅನಂತಾನಂತ ಧನ್ಯವಾದಗಳು. ನಿಮ್ಮ ಅನುಮಾನ ಸರಿಯಾದದ್ದೇ. ನೇತಾರರಿಗೆ ಮೈಕ್ ಸಿಕ್ಕರೆ, ಅದರಲ್ಲೂ ಲಕ್ಷಾಂತರ, ಕೋಟ್ಯಾಂತರ ಜನರು ಕೇಳುಗರಿದ್ದರೆ, ಅದಕ್ಕಿಂತ ಹೆಚ್ಚೇನು ಬೇಕು? ಕೆಲ ಯುವ ಮಿತ್ರರು ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಲಾದ ವಿಷಯಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಅವರು ಎಲ್ಲ ಕಂತುಗಳ ಶಾಬ್ದಿಕ ವಿಶ್ಲೇಷಣೆ ಕೈಗೊಂಡರು ಮತ್ತು ಯಾವ ಶಬ್ದವನ್ನು ಎಷ್ಟು ಬಾರಿ ಹೇಳಲಾಗಿದೆ, ಯಾವ ಶಬ್ದಗಳನ್ನು ಪದೇ ಪದೇ ಬಳಸಲಾಗಿದೆ ಎಂಬುದನ್ನು ಅಭ್ಯಸಿಸಿದ್ದಾರೆ. ಅವರ ಶೋಧನೆಯಂತೆ ಈ ಕಾರ್ಯಕ್ರಮ ರಾಜಕೀಯರಹಿತವಾಗಿತ್ತು. ಮನ್ ಕಿ ಬಾತ್ ಆರಂಭಿಸಿದಾಗಲೇ ಇದರಲ್ಲಿ ರಾಜಕೀಯವಾಗಲಿ ಅಥವಾ ಸರ್ಕಾರದ ಗುಣಗಾನವಾಗಲಿ ಇರುವುದಿಲ್ಲ, ಎಲ್ಲಿಯೂ ಮೋದಿ ಕೂಡಾ ಇರಬಾರದು ಎಂದು ನಿರ್ಧರಿಸಿದ್ದೆ. ನನ್ನ ಈ ಸಂಕಲ್ಪವನ್ನು ನಿಭಾಯಿಸಲು ಹೆಚ್ಚಿನ ಶಕ್ತಿ ಮತ್ತು ಪ್ರೇರಣೆ ನಿಮ್ಮಿಂದಲೇ ದೊರೆಯಿತು. ಪ್ರತಿ ಮನ್ ಕಿ ಬಾತ್ ಗಿಂತ ಮೊದಲು ಬರುವಂತಹ ಪತ್ರಗಳನ್ನು, ಆನ್ ಲೈನ್ ಪ್ರತಿಕ್ರಿಯೆಗಳು. ದೂರವಾಣಿ ಕರೆಗಳು. . . ಇವುಗಳಲ್ಲಿ ಶೋತೃಗಳ ಆಶೋತ್ತರಗಳು ಸ್ಪಷ್ಟವಾಗಿರುತ್ತವೆ. ಮೋದಿ ಬರುತ್ತಾರೆ ಮತ್ತು ಹೊರಟು ಹೋಗುತ್ತಾರೆ, ಆದರೆ ಈ ದೇಶ ಅಚಲವಾಗಿರುತ್ತದೆ. ನಮ್ಮ ಸಂಸ್ಕೃತಿ ಅಮರವಾಗಿರುತ್ತದೆ. 130 ಕೋಟಿ ದೇಶ ಬಾಂಧವರ ಸಣ್ಣ ಪುಟ್ಟ ಕಥೆಗಳು ಎಂದಿಗೂ ಜೀವಂತವಾಗುಳಿತ್ತವೆ. ಈ ದೇಶವನ್ನು ಹೊಸ ಪ್ರೇರಣೆಯೊಂದಿಗೆ, ಉತ್ಸಾಹದೊಂದಿಗೆ, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುತ್ತದೆ. ನಾನು ಆಗಾಗ ಹಿಂದಿರುಗಿ ನೋಡಿದರೆ ನನಗೂ ಬಹಳ ಆಶ್ಚರ್ಯವಾಗುತ್ತದೆ. ಒಮ್ಮೆ ದೇಶದ ಒಂದು ಮೂಲೆಯಿಂದ ಯಾರೋ ಪತ್ರ ಬರೆದು – ಚಿಲ್ಲರೆ ವ್ಯಾಪಾರಿಗಳ, ಆಟೋ ಚಾಲಕರ, ತರಕಾರಿ ಮಾರುವಂಥವರೊಂದಿಗೆ ಹೆಚ್ಚು ಚೌಕಾಶಿ ಮಾಡಬಾರದು ಎಂದು ಹೇಳುತ್ತಾರೆ. ನಾನು ಪತ್ರ ಓದುತ್ತೇನೆ. ಇಂಥದೇ ವಿಚಾರ ಇನ್ನಾವುದೋ ಪತ್ರದಲ್ಲಿ ಬಂದಿದ್ದರೆ ಇದರೊಂದಿಗೆ ಅದನ್ನೂ ಜೋಡಿಸುತ್ತೇನೆ. ನನ್ನ ಅನುಭವದ ಒಂದೆರಡು ಮಾತುಗಳನ್ನೂ ಅದರೊಂದಿಗೆ ಒಗ್ಗೂಡಿಸಿ, ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ನಂತರ ಈ ಮಾತು ಯಾವಾಗ ಸಾಮಾಜಿಕ ಜಾಲತಾಣ ತಲುಪುತ್ತದೆಯೋ, ಯಾವಾಗ ವಾಟ್ಸ್ ಅಪ್ ಹರಿದಾಡುತ್ತದೆಯೋ ಆಗ ಒಂದು ಪರಿವರ್ತನೆಯತ್ತ ಸಾಗುತ್ತಿರುತ್ತದೆ. ನೀವು ಕಳುಹಿಸಿದ ಸ್ವಚ್ಛತೆಯ ಕಥೆಗಳು, ಸಾಮಾನ್ಯ ಜನರ ಹಲವಾರು ಉದಾಹರಣೆಗಳು ಮನೆಮನೆಯಲ್ಲಿಯೂ ಓರ್ವ ಪುಟ್ಟ ಸ್ವಚ್ಛತಾ ರಾಯಭಾರಿಯನ್ನು ಸೃಷ್ಟಿಸಿದೆ, ಆತ ಮನೆಯವರನ್ನೂ ಎಚ್ಚರಿಸುತ್ತಾನೆ ಮತ್ತು ಆಗಾಗ ದೂರವಾಣಿ ಕರೆಯ ಮೂಲಕ ಪ್ರಧಾನ ಮಂತ್ರಿಗಳಿಗೂ ಆದೇಶ ನೀಡುತ್ತಾನೆ. “ಸೆಲ್ಫಿ ವಿತ್ ಡಾಟರ್” ಎಂಬ ಅಭಿಯಾನ ಹರಿಯಾಣದ ಒಂದು ಪುಟ್ಟ ಗ್ರಾಮದಿಂದ ಆರಂಭವಾಗಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ಪಸರಿಸಿದಂಥ ಶಕ್ತಿಯನ್ನು ಯಾವ ಸರ್ಕಾರ ಸಾಧಿಸಬಲ್ಲದು? ಸಮಾಜದ ಪ್ರತಿ ವರ್ಗ, ಪ್ರತಿಷ್ಠಿತ ವ್ಯಕ್ತಿಗಳು ಎಲ್ಲರೂ ಒಗ್ಗೂಡಲಿ ಮತ್ತು ಸಮಾಜದಲ್ಲಿ ವಿಚಾರಗಳ-ಪರಿವರ್ತನೆಯ ಒಂದು ಹೊಸ ಭಾಷೆಯಲ್ಲಿ ಇಂದಿನ ಪೀಳಿಗೆ ಅರ್ಥ ಮಾಡಿಕೊಳ್ಳುವಂತಹ ಕ್ರಾಂತಿಯಾಗಲಿ. ಕೆಲವೊಮ್ಮೆ ಮನ್ ಕಿ ಬಾತ್ ಬಗ್ಗೆ ತಮಾಷೆಯ ಮಾತುಗಳೂ ಕೇಳಿಬರುತ್ತವೆ. ಆದರೆ ನನ್ನ ಮನದಲ್ಲಿ ಯಾವತ್ತೂ ದೇಶದ 130 ಕೋಟಿ ಜನತೆ ಸ್ಥಿರವಾಗಿರುತ್ತಾರೆ. ಅವರ ಮನಸ್ಸೇ ನನ್ನ ಮನಸ್ಸು. ಮನದ ಮಾತು ಸರ್ಕಾರಿ ಮಾತಲ್ಲ. ಇದು ಸಮಾಜದ ಮಾತು. ಮನ್ ಕಿ ಬಾತ್ ಒಂದು ಮಹತ್ವಾಕಾಂಕ್ಷಿ ಭಾರತದ ಮಾತಾಗಿದೆ. ಭಾರತದ ಜೀವಾಳ ರಾಜನೀತಿಯಲ್ಲ. ಭಾರತದ ಜೀವಾಳ ರಾಜಶಕ್ತಿಯೂ ಅಲ್ಲ. ಭಾರತದ ಜೀವಾಳ ಸಮಾಜ ನೀತಿ ಮತ್ತು ಸಮಾಜ ಶಕ್ತಿಯಾಗಿದೆ. ಸಾಮಾಜಿಕ ಜೀವನಕ್ಕೆ ಹಲವಾರು ಮಗ್ಗುಲುಗಳಿವೆ. ಅದರಲ್ಲಿ ರಾಜಕೀಯವೂ ಒಂದಾಗಿದೆ. ರಾಜಕೀಯವೇ ಸರ್ವಸ್ವ ಎಂಬುದು ಆರೋಗ್ಯಕರ ಸಮಾಜಕ್ಕೆ ಒಳ್ಳೆಯದಲ್ಲ. ಕೆಲವೊಮ್ಮೆ ರಾಜಕೀಯ ಘಟನೆಗಳು ಮತ್ತು ರಾಜಕೀಯದಲ್ಲಿ ತೊಡಗಿರುವವರು ಎಷ್ಟು ಪ್ರಬಲವಾಗಿರುತ್ತಾರೆ ಎಂದರೆ ಸಮಾಜದ ಇತರ ಪ್ರತಿಭೆಗಳು, ಸಾಧನೆಗಳು ಮರೆಮಾಚಲ್ಪಡುತ್ತವೆ. ಭಾರತದಂತಹ ದೇಶದ ಉಜ್ವಲ ಭವಿಷ್ಯಕ್ಕಾಗಿ ಜನಸಾಮಾನ್ಯರ ಪ್ರತಿಭೆ ಮತ್ತು ಸಾಧನೆಗಳಿಗೆ ಉತ್ತಮ ಸ್ಥಾನಮಾನ ದೊರಕಿಸಿಕೊಡುವುದು ಎಂಬುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಮನ್ ಕಿ ಬಾತ್ ಈ ದಿಕ್ಕಿನಲ್ಲಿ ಒಂದು ಪುಟ್ಟ ವಿನಮ್ರ ಪ್ರಯತ್ನವಾಗಿದೆ.
ಫೋನ್ ಕಾಲ್ -2
“ ಪ್ರಧಾನ ಮಂತ್ರಿಗಳೇ ನಮಸ್ಕಾರ! ನಾನು ಮುಂಬೈಯಿಂದ ಪ್ರೋಮಿತಾ ಮುಖರ್ಜಿ ಮಾತನಾಡುತ್ತಿದ್ದೇನೆ. ಸರ್ ‘ಮನ್ ಕಿ ಬಾತ್’ ನ ಪ್ರತಿ ಕಂತು ಗಾಢವಾದ ಆಂತರ್ಯ, ಮಾಹಿತಿ, ಸಕಾರಾತ್ಮಕ ಕಥೆಗಳು ಮತ್ತು ಜನ ಸಾಮಾನ್ಯರ ಉತ್ತಮ ಕೆಲಸಗಳ ವಿವರಗಳಿಂದ ಕೂಡಿರುತ್ತದೆ. ನೀವು ಪ್ರತಿ ಕಾರ್ಯಕ್ರಮದ ಮೊದಲು ಎಷ್ಟು ಸಿದ್ಧತೆ ಮಾಡಿಕೊಳ್ಳುತ್ತೀರಿ? ಎಂದು ನಾನು ನಿಮ್ಮನ್ನು ಕೇಳಲು ಇಷ್ಟಪಡುತ್ತೇನೆ.
ಫೋನ್ ಕಾಲ್ ಮುಕ್ತಾಯ
ದೂರವಾಣಿ ಕರೆಗಾಗಿ ನಿಮಗೆ ಅನಂತಾನಂತ ಧನ್ಯವಾದಗಳು. ನೀವು ಕೇಳಿದ ಪ್ರಶ್ನೆ ಆತ್ಮೀಯತೆಯಿಂದ ಕೇಳಿದ್ದಾಗಿದೆ. ಮನ್ ಕಿ ಬಾತ್ ನ 50 ನೇ ಕಂತಿನ ಅತಿ ದೊಡ್ಡ ಸಾಧನೆಯೇನೆಂದರೆ ನೀವು ಪ್ರಧಾನ ಮಂತ್ರಿಯವರಿಗಲ್ಲ ನೀವು ನಿಮ್ಮ ಆತ್ಮೀಯ ಸ್ನೇಹಿತರಿಗೆ ಪ್ರಶ್ನೆ ಕೇಳುತ್ತಿದ್ದೀರಿ ಎಂಬುದೇ ಆಗಿದೆ. ಹೌದು ಇದೇ ಪ್ರಜಾ ಪ್ರಭುತ್ವ. ನೀವು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡುವುದಾದರೆ. ಯಾವ ಪೂರ್ವ ತಯಾರಿ ಮಾಡಿಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಮನ್ ಕಿ ಬಾತ್ ನನಗೆ ಒಂದು ಸುಲಭವಾದ ಕೆಲಸ. ಪ್ರತಿ ಬಾರಿಯ ಮನ್ ಕಿ ಬಾತ್ ಗೆ ಮೊದಲು ಜನರಿಂದ ಪತ್ರಗಳು ಬರುತ್ತವೆ. ಮೈ ಗೌ, ನರೇಂದ್ರ ಮೋದಿ ಮೊಬೈಲ್ ಆಪ್ನಲ್ಲಿ ಜನರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಒಂದು ಟೋಲ್ ಫ್ರೀ ನಂಬರ್ 1800117800 ಕೂಡಾ ಇದೆ. ಈ ಸಂಖ್ಯೆಗೆ ಕರೆ ಮಾಡಿ ಜನರು ತಮ್ಮ ಧ್ವನಿಯಲ್ಲಿ ತಮ್ಮ ಸಂದೇಶವನ್ನು ಧ್ವನಿಮುದ್ರಿಸುತ್ತಾರೆ. ಮನ್ ಕಿ ಬಾತ್ ಗೆ ಮೊದಲು ಹೆಚ್ಚೆಚ್ಚು ಪತ್ರಗಳನ್ನು ಮತ್ತು ಸಲಹೆ ಸೂಚನೆಗಳನ್ನು ಸ್ವತಃ ಓದುವ ಪ್ರಯತ್ನ ಮಾಡುತ್ತೇನೆ. ನಾನು ಸಾಕಷ್ಟು ದೂರವಾಣಿ ಕರೆಗಳನ್ನು ಕೇಳುತ್ತೇನೆ. ಪ್ರವಾಸದಲ್ಲಿದ್ದಾಗ ಮನ್ ಕಿ ಬಾತ್ ಕಂತು ಹತ್ತಿರ ಬರುತ್ತಿರುವಂತೆ ನೀವು ಕಳುಹಿಸಿದ ವಿಚಾರಗಳು ಮತ್ತು ಸಲಹೆ ಸೂಚನೆಗಳನ್ನು ಬಹಳ ಗಮನವಿಟ್ಟು ಓದುತ್ತೇನೆ.
ಪ್ರತಿಕ್ಷಣದಲ್ಲೂ ನನ್ನ ದೇಶವಾಸಿ ಪ್ರಜೆಗಳು ನನ್ನ ಮನದಲ್ಲಿ ಅಂತರ್ನಿಹಿತರಾಗಿರುತ್ತಾರೆ. ಆದ್ದರಿಂದಲೇ ಯಾವುದಾದರೂ ಪತ್ರವನ್ನು ಓದಿದಾಗ / ಪತ್ರವನ್ನು ಬರೆದವರ ಪರಿಸ್ಥಿತಿ, ಅವರ ಭಾವನೆಗಳು, ನನ್ನ ವಿಚಾರದ ಅಂಗವಾಗಿಬಿಡುತ್ತವೆ. ಆ ಪತ್ರ ನನಗೆ ಕೇವಲ ಕಾಗದದ ತುಂಡು ಎನಿಸುವುದಿಲ್ಲ. ಅಂದಹಾಗೆ, ಅಖಂಡವಾಗಿ ಸುಮಾರು 40-45 ವರ್ಷಗಳ ಕಾಲ ನಾನು ಸನ್ಯಾಸಿಯಂತೆ ಜೀವನ ನಡೆಸಿದ್ದೇನೆ. ದೇಶದ ಬಹುತೇಕ ಜಿಲ್ಲೆಗಳಿಗೆ ಹೋಗಿದ್ದೇನೆ. ದೇಶದ ಬಹÅದೂರದ ಜಿಲ್ಲೆಗಳಲ್ಲೂ ಸಾಕಷ್ಟು ಸಮಯ ಕಳೆದಿದ್ದೇನೆ. ಈ ಕಾರಣದಿಂದ, ಯಾವಾಗ ನಾನು ಪತ್ರವನ್ನು ಓದುತ್ತೇನೋ, ಆಗ ಆ ಸ್ಥಾನ ಮತ್ತು ಸಂದರ್ಭದೊಂದಿಗೆ ಬಹಳ ಸುಲಭವಾಗಿ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತೇನೆ. ನಂತರ ನಾನು ಕೆಲವು ವಾಸ್ತವಿಕ ಅಂಶಗಳನ್ನು ಅಂದರೆ ಆ ಹಳ್ಳಿ, ವ್ಯಕ್ತಿಯ ಹೆಸರು, ಇಂತಹ ಅಂಶಗಳನ್ನು ಗುರುತುಮಾಡಿಕೊಳ್ಳುತ್ತೇನೆ. ನಿಜವಾಗಿ ಹೇಳಬೇಕೆಂದರೆ, ‘ಮನದ ಮಾತಿನಲ್ಲಿ’ ಧ್ವನಿ ನನ್ನದು ಆದರೆ ಉದಾಹರಣೆಗಳು, ಭಾವನೆಗಳು ಮತ್ತು ಸ್ಫೂರ್ತಿ ನನ್ನ ದೇಶವಾಸಿಗಳದ್ದೇ ಆಗಿವೆ. ಮನ್ ಕಿ ಬಾತ್ ಗೆ ಕೊಡುಗೆ ನೀಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸಬಯಸುತ್ತೇನೆ. ಇಂತಹ ಲಕ್ಷಾಂತರ ಜನರಿದ್ದಾರೆ. ಆದರೆ ಅವರ ಹೆಸರನ್ನು ನಾನು ಇದುವರೆಗೂ ‘ಮನ್ ಕಿ ಬಾತ್’ನಲ್ಲಿ ತೆಗೆದುಕೊಳ್ಳಲಾಗಲಿಲ್ಲ, ಆದರೆ ಅವರು ನಿರಾಶರಾಗದೆ, ತಮ್ಮ ಪತ್ರ, ತಮ್ಮ ಟೀಕೆ-ಟಿಪ್ಪಣಿ ಕಳಿಸುತ್ತಾರೆ. ನಿಮ್ಮ ವಿಚಾರಧಾರೆ, ನಿಮ್ಮ ಭಾವನೆಗಳು ನನ್ನ ಜೀವನದಲ್ಲಿ ಬಹು ಮಹತ್ವಪೂರ್ಣವಾಗಿವೆ. ನಿಮ್ಮೆಲ್ಲರ ವಿಚಾರಗಳು ಹಿಂದಿಗಿಂತಲೂ ಎಷ್ಟೋ ಪಟ್ಟು ಅಧಿಕವಾಗಿ ನನಗೆ ದೊರಕುತ್ತವೆ. ಮನದಮಾತನ್ನು ಮತ್ತಷ್ಟು ರೋಚಕವಾಗಿ, ಪ್ರಭಾವಿಯಾಗಿ, ಉಪಯೋಗಿಯಾಗಿಸುತ್ತದೆ ಎಂಬ ಪೂರ್ಣ ಭರವಸೆ ನನಗಿದೆ.ಯಾವ ಪತ್ರ ‘ಮನದ ಮಾತಿ’ನಲ್ಲಿ ಸೇರ್ಪಡೆಯಾಗಿಲ್ಲವೋ ಆ ಪತ್ರಗಳು ಮತ್ತು ಅದರಲ್ಲಿನ ಸಲಹೆಗಳಿಗೆ ಸಂಬಂಧಪಟ್ಟ ವಿಭಾಗಗಳು ಗಮನನೀಡುವಂತೆ ಪ್ರಯತ್ನ ಮಾಡಲಾಗುವುದು.
ನಾನು ಆಕಾಶವಾಣಿ, ಎಫ್.ಎಮ್.ರೇಡಿಯೋ, ದೂರದರ್ಶನ, ಇತರೆ ಟಿ.ವಿ. ಚಾನಲ್ಗಳು, ಸಾಮಾಜಿಕ ತಾಣಗಳಲ್ಲಿನ ನನ್ನ ಸ್ನೇಹಿತರಿಗೂ ಧನ್ಯವಾದ ಅರ್ಪಿಸಬಯಸುತ್ತೇನೆ. ಅವರ ಪರಿಶ್ರಮದಿಂದಾಗಿ ‘ಮನದ ಮಾತು’ ಹೆಚ್ಹೆಚ್ಚು ಜನರನ್ನು ತಲಪುತ್ತದೆ.ಆಕಾಶವಾಣಿಯ ತಂಡ ಪ್ರತಿ ಕಂತನ್ನೂ ಸಹ ಬಹಳಷ್ಟು ಭಾಷೆಗಳಲ್ಲಿ ಪ್ರಸಾರ ಮಾಡಲು ತಯಾರಿ ನಡೆಸುತ್ತದೆ. ಕೆಲವರಂತೂ ಮೋದಿಯ ಧ್ವನಿಗೆ ಹೋಲುವ ಧ್ವನಿಯಲ್ಲಿ ಅದೇ ಕಂಠದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಮನದ ಮಾತನ್ನು ಕೇಳಿಸುತ್ತಾರೆ.ಈ ರೀತಿಯಾಗಿ ಅವರು ಆ ಮೂವತ್ತು ನಿಮಿಷಗಳ ಕಾಲ ನರೇಂದ್ರಮೋದಿಯೇ ಆಗಿಬಿಡುತ್ತಾರೆ. ನಾನು ಅವರನ್ನೂ, ಅವರ ಪ್ರತಿಭೆ, ಕೌಶಲವನ್ನು ಅಭಿನಂದಿಸುತ್ತೇನೆ. ಧನ್ಯವಾದವನ್ನೂ ಅರ್ಪಿಸುತ್ತೇನೆ. ನಿಮ್ಮ ಪ್ರಾದೇಶಿಕ, ಸ್ಥಳೀಯ ಭಾಷೆಯಲ್ಲಿ ಅವಶ್ಯವಾಗಿ ಕೇಳಬೇಕೆಂದು ತಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಯಾರು ತಮ್ಮ-ತಮ್ಮ ಚಾನಲ್ಗಳಲ್ಲಿ ನಿಯಮಿತವಾಗಿ ಮನದ ಮಾತನ್ನು ಪ್ರಸಾರ ಮಾಡಿದ್ದಾರೆ ಆ ನನ್ನ ಎಲ್ಲಾ ಮಾಧ್ಯಮ ಮಿತ್ರರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಯಾವುದೇ ರಾಜಕೀಯ ವ್ಯಕ್ತಿಯೂ ಸಹ ಮಾಧ್ಯಮಗಳಿಂದ ತಮಗೆ ಕಡಿಮೆ ಕವರೇಜ್ ಸಿಗುತ್ತದೆ. ಕವರೇಜ್ ಸಿಕ್ಕರೂ ಅದು ನೇತ್ಯಾತ್ಮಕವಾಗಿಯೇ ಇರುತ್ತದೆ ಎಂಬ ಕಾರಣಕ್ಕೆ ಮಾಧ್ಯಮಗಳ ವಿಚಾರವಾಗಿ ಸಂತಸದಿಂದ ಇರುವುದಿಲ್ಲ. ಆದರೆ ಮನದ ಮಾತಿನಲ್ಲಿ ಪ್ರಸ್ತಾಪಿಸಲಾದ ವಿಷಯಗಳನ್ನು ಮಾಧ್ಯಮಗಳು ತಮ್ಮದಾಗಿಸಿಕೊಂಡಿವೆ. ಸ್ವಚ್ಛತೆ, ರಸ್ತೆ ಸುರಕ್ಷತೆ, ಮಾದಕ ವಸ್ತು ಮುಕ್ತ ಭಾರತ, selfie with daughter ಮೊದಲಾದ ವಿಷಯಗಳನ್ನು ಮಾಧ್ಯಮಗಳು ನವೀನ ಶೈಲಿಯಲ್ಲಿ ಒಂದು ಅಭಿಯಾನದ ರೂಪವನ್ನೇ ನೀಡಿ ಮುನ್ನಡೆಸುವ ಕೆಲಸ ಮಾಡಿವೆ. ಟಿ.ವಿ. ಚಾನಲ್ಗಳು ಇದನ್ನು most heard radio programme ಮಾಡಿಬಿಟ್ಟಿವೆ. ನಾನು ಮಾಧ್ಯಮಕ್ಕೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ತಮ್ಮ ಸಹಕಾರವಿಲ್ಲದೆ ‘ಮನದ ಮಾತಿನ’ ಯಾತ್ರೆ ಅಪೂರ್ಣವೇ ಆಗುತ್ತಿತ್ತು.
[ಫೋನ್ ಕರೆ -3 ]
“ನಮಸ್ತೆ ಮೋದೀಜಿ ಉತ್ತರಾಖಂಡ್ನ ಮಸೂರಿಯಿಂದ ನಾನು ನಿಧಿ ಬಹುಗುಣಾ ಮಾತಾಡ್ತಾ ಇದೀನಿ.ನಾನು ಯುವಾವಸ್ಥೆಯ ಇಬ್ಬರು ಮಕ್ಕಳ ತಾಯಿ. ನಾನು ಆಗಾಗ ಗಮನಿಸಿದ್ದೀನಿ.ಈ ವಯೋಮಾನದ ಮಕ್ಕಳು ‘ಅವರೇನು ಮಾಡಬೇಕು?’ಎಂಬುದನ್ನು ಅವರ ಶಿಕ್ಷಕರು ಇರಬಹ್ದು, ಅವರ ತಾಯಿ-ತಂದೆ ಇರಬಹ್ದು ಯಾರ್ಹೇಳೋದನ್ನೂ ಅವರು ಇಷ್ಟಪಡೋದಿಲ್ಲ. ಆದರೆ ‘ಮನದ ಮಾತಿನಲ್ಲಿ’ ತಾವು ಮಕ್ಕಳಿಗೆ ಏನಾದರೂ ಹೇಳಿದರೆ, ಅವರು ಹೃದಯಪೂರ್ವಕವಾಗಿ ಅರ್ಥಮಾಡಿಕೊಳ್ತಾರೆ ಮತ್ತು ಅದರ ಪಾಲನೆ ಕೂಡ ಮಾಡ್ತಾರೆ.ತಾವು ಇದರ ರಹಸ್ಯವನ್ನು ನಮ್ಮೊಡನೆ ಹಂಚಿಕೊಳ್ಳುವಿರಾ? ತಾವು ಹೇಳುವ ರೀತಿಯಿಂದ, ತಾವು ವಿಷಯಗಳನ್ನು ಆರಿಸಿಕೊಳ್ಳುವ ಪರಿಯಿಂದ ಮಕ್ಕಳು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.ಜೊತೆಗೆ ಕಾರ್ಯಗತಗೊಳಿಸುತ್ತಾರೆ ಕೂಡ. ಧನ್ಯವಾದ.
ನಿಧಿಯವರೆ, ನಿಮ್ಮ ಫೋನ್ ಕರೆಗಾಗಿ ಅನಂತಾನಂತ ಧನ್ಯವಾದಗಳು.ವಾಸ್ತವವಾಗಿ ನನ್ನ ಬಳಿ ಯಾವ ರಹಸ್ಯವೂ ಇಲ್ಲ. ನಾನು ಯಾವುದನ್ನು ಮಾಡುತ್ತಿದ್ದೇನೆ, ಪ್ರಾಯಶಃ ಅದು ಎಲ್ಲಾ ಕುಟುಂಬದಲ್ಲೂ ನಡೆಯುತ್ತಲೇ ಇರಬಹುದು. ಸರಳ ಭಾಷೆಯಲ್ಲಿ ಹೇಳುವುದಾದರೆ, ನನ್ನನ್ನು ನಾನು ಯುವಕರ ಮನಸ್ಸಿನ ಒಳಹೊಕ್ಕು ನೋಡುವ ಪ್ರಯತ್ನ ಮಾಡುತ್ತೇನೆ. ನನ್ನನ್ನೇ ಅವರ ಪರಿಸ್ಥಿತಿಗಳಿಗೆ ಒಡ್ಡಿಕೊಂಡು, ಅವರ ವಿಚಾರಧಾರೆಗಳ ಜೊತೆ ಸಾಮರಸ್ಯ ಮೂಡಿಸುವ, ಒಂದು ವೇವ್ ಲೆನ್ತ್ ಹೊಂದಿಸುವ ಪ್ರಯತ್ನ ಮಾಡುತ್ತೇನೆ.ಅವು ನಮ್ಮದೇ ಜೀವನದ ಹಿಂದಿನ ಸರಕುಗಳು. ಅವು ನಮ್ಮ ಮಧ್ಯದಲ್ಲಿ ಬರದೇ ಹೋದರೆ, ಯಾರನ್ನೇ ಆದರೂ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಕೆಲವೊಮ್ಮೆ ನಮ್ಮ ಪೂರ್ವಾಗ್ರಹವೇ ಪರಸ್ಪರ ಮಾತುಕತೆಗೆ ದೊಡ್ಡ ಅಡ್ಡಿಯಾಗುತ್ತದೆ. ನಾನು ಇನ್ನೊಬ್ಬರ ಮಾತನ್ನು ಒಪ್ಪಿಕೊಳ್ಳುವ, ಒಪ್ಪಿಕೊಳ್ಳದಿರುವ ಅಥವಾ ಪ್ರತಿಕ್ರಿಯೆ ನೀಡುವುದಕ್ಕಿಂತ ಮಿಗಿಲಾಗಿ ಅರ್ಥಮಾಡಿಕೊಳ್ಳುವುದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತೇನೆ. ಈ ಕಾರಣದಿಂದ ನಮ್ಮ ಮನವೊಲಿಸಲು ಪರಿ ಪರಿಯಾಗಿ ತರ್ಕ ಮತ್ತು ಒತ್ತಡಗಳನ್ನು ಬಳಸುವ ಬದಲಾಗಿ ನಮ್ಮ ಮನೋಭಾವಕ್ಕೆ ಅನುಗುಣವಾಗಿಸಲು ಪ್ರಯತ್ನಿಸುತ್ತಾರೆ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಇದರಿಂದಲೇ ಪರಸ್ಪರ ವಿಚಾರ ವಿನಿಮಯ ಅಂತರ ಇಲ್ಲವಾಗುತ್ತದೆ. ಜೊತೆಗೆ ಒಂದು ಬಗೆಯಲ್ಲಿ ಅದೇ ವಿಚಾರದಲ್ಲಿ ನಾವಿಬ್ಬರೂ ಸಹಯಾತ್ರಿಗಳಾಗಿಬಿಡುತ್ತೇವೆ. ಇಬ್ಬರಲ್ಲೂ ಯಾವಾಗ? ಹೇಗೆ? ತನ್ನ ವಿಚಾರವನ್ನು ಕೈಬಿಟ್ಟು, ಮತ್ತೊಬ್ಬರ ವಿಚಾರವನ್ನು ಸ್ವೀಕರಿಸಿದೆ? ನನ್ನದಾಗಿಸಿಕೊಂಡೆ? ಎಂಬುದು ಗೊತ್ತಾಗುವುದೇ ಇಲ್ಲ.
ಇಂದಿನ ಯುವಪೀಳಿಗೆಯಲ್ಲಿರುವ ವೈಶಿಷ್ಟ್ಯವೇನೆಂದರೆ, ಯಾವುದೇ ಕಾರ್ಯದಲ್ಲಿ ಅವರಿಗೆ ನಂಬಿಕೆ ಬಾರದಿದ್ದರೆ, ಅದನ್ನು ಅವರು ಮಾಡುವುದೇ ಇಲ್ಲ. ಯಾವಾಗ ಅವರಿಗೆ ಯಾವ ವಿಷಯದಲ್ಲಿ ವಿಶ್ವಾಸ ಮೂಡುತ್ತದೋ, ಅವರು ಅದಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿಯಾದರೂ ಸರಿ ಅದರ ಬೆನ್ನುಬೀಳುತ್ತಾರೆ. ಬಹಳಷ್ಟು ಬಾರಿ ಜನರು ಕುಟುಂಬದಲ್ಲಿನ ಹಿರಿಯರ-ಹದಿಹರೆಯದವರ ನಡುವಿನ ಸಂವಹನದ ಅಂತರದ ಕುರಿತು ಮಾತನಾಡುತ್ತಾರೆ.ಆದರೆ ವಾಸ್ತವವಾಗಿ ಬಹುತೇಕ ಕುಟುಂಬಗಳಲ್ಲಿ ಹದಿಹರೆಯದವರೊಡನೆ ಆಗುವ ಮಾತುಕತೆಯ ವ್ಯಾಪ್ತಿ ಬಹಳ ಸೀಮಿತವಾಗಿರುತ್ತದೆ.ಹೆಚ್ಚಿನ ಸಮಯ ವ್ಯಾಸಂಗ ಅಥವಾ ಅಭ್ಯಾಸಗಳು, ಜೊತೆಗೆ ಜೀವನಶೈಲಿಯ ವಿಚಾರಗಳನ್ನು ಉಲ್ಲೇಖಿಸಿ, ‘ಹೀಗೆ ಮಾಡು-ಹೀಗೆ ಮಾಡಬೇಡ’ ಎಂಬ ಮಾತುಗಳು ನಡೆಯುತ್ತವೆ. ಯಾವುದೇ ನಿರೀಕ್ಷೆಯಿಲ್ಲದ ಮುಕ್ತಮನಸ್ಸಿನ ಮಾತುಗಳು, ಕುಟುಂಬಗಳಲ್ಲಿ ನಿಧಾನವಾಗಿ ಕಡಿಮೆಯಾಗುತ್ತ ಬರುತ್ತಿದೆ. ಇದು ಚಿಂತೆಯ ವಿಷಯವೇ.
ನಿರೀಕ್ಷೆಯ ಬದಲಾಗಿ ಒಪ್ಪಿಕೊಳ್ಳುವ, / ತಿರಸ್ಕರಿಸುವ ಬದಲು ಚರ್ಚಿಸುವುದರಿಂದ / ಪರಸ್ಪರ-ಸಂವಾದ ಪ್ರಭಾವಿ ಆಗುತ್ತದೆ. ಪ್ರತ್ಯೇಕ ಕಾರ್ಯಕ್ರಮಗಳಲ್ಲಿ, ಸಾಮಾಜಿಕ ತಾಣಗಳ ಮೂಲಕ ಯುವಕರೊಡನೆ ಮಾತನಾಡುವ ನನ್ನ ಪ್ರಯತ್ನ ನಿರಂತರವಾಗಿರುತ್ತದೆ.ಅವರೇನು ಮಾಡುತ್ತಿದ್ದಾರೆ? ಏನು ಯೋಚಿಸುತ್ತಿದ್ದಾರೆ? ಎಂಬ ಚಿಂತನೆಗಳ ಮೂಲಕ ಕಲಿಯುವ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಅವರ ಬಳಿ ಹೊಸ ವಿಚಾರಗಳ ಭಂಡಾರವೇ ಇರುತ್ತದೆ. ಅವು ಅತ್ಯಂತ ಶಕ್ತಿಯುತವೂ, ಹೊಸತನದಿಂದ ಕೂಡಿದ್ದೂ, ವಿಚಾರ ಕೇಂದ್ರಿತವಾದದ್ದೂ ಆಗಿರುತ್ತದೆ. ‘ಮನದ ಮಾತಿನ’ ಮೂಲಕ ನಾನು ಯುವಕರ ಪ್ರಯತ್ನಶೀಲತೆಗಳನ್ನು, ಅವರ ಮಾತುಗಳನ್ನೂ, ಹೆಚ್ಹೆಚ್ಚು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಯಾವಾಗಲೂ ಒಂದು ದೂರು ಇದ್ದೇ ಇರುತ್ತದೆ – ಯುವಕರು ಹೆಚ್ಚು ಪ್ರಶ್ನೆ ಕೇಳುತ್ತಾರೆ ಎಂಬುದು. ನಾನು ಹೇಳುತ್ತೇನೆ –ಯುವಕರು ಪ್ರಶ್ನಿಸುವುದು ಒಳ್ಳೆಯದೇ. ಇದೇಕೆ ಒಳ್ಳೆಯದು ಎಂದರೆ, ಅವರು ಎಲ್ಲ ವಿಚಾರಗಳನ್ನೂ ಮೂಲದಿಂದ ಪರೀಕ್ಷಿಸಬಯಸುತ್ತಾರೆ. ಯುವಕರಿಗೆ ಧೈರ್ಯವಿಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ ಯುವಕರ ಬಳಿ ವ್ಯರ್ಥಮಾಡುವಷ್ಟು ಸಮಯವೇ ಇಲ್ಲ ಎಂಬುದು ನನ್ನ ನಂಬಿಕೆ. ಇದುವೇ ಇಂದಿನ ಯುವಕರನ್ನು ಅಧಿಕ ಕ್ರಿಯಾಶೀಲರನ್ನಾಗಿಟ್ಟಿರುವುದಕ್ಕೆ ಸಹಕಾರಿಯಾಗಿದೆ. ಏಕೆಂದರೆ ಅವರು ಕೆಲಸಗಳನ್ನು ಶೀಘ್ರಗತಿಯಲ್ಲಿ ಮಾಡಬಯಸುತ್ತಾರೆ. ಇಂದಿನ ಯುವಪೀಳಿಗೆಯವರು ಬಹಳ ಮಹತ್ವಾಕಾಂಕ್ಷಿಗಳು, ಜೊತೆಗೆ ಬೃಹತ್ ವಿಷಯಗಳ ಬಗ್ಗೆ ಯೋಚಿಸುತ್ತಾರೆ ಒಳ್ಳೆಯದು. / ದೊಡ್ಡದಾಗಿ ಕನಸು ಕಾಣಲಿ. ಅಧಿಕ ಯಶಸ್ಸನ್ನು ಸಾಧಿಸಲಿ. ಹೌದು ಇದುವೆ ನವಭಾರತ.
ಯುವಕರು ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡಲು ಬಯಸುತ್ತಾರೆ ಎಂದೂ ಕೆಲವರು ಹೇಳುತ್ತಾರೆ. ಇದರಲ್ಲೇನು ತಪ್ಪು? ಬಹುಕಾಯಕಗಳಲ್ಲಿ ಅವರು ನಿಷ್ಣಾತರು. ಆದ್ದರಿಂದಲೇ ಹಾಗೆ ಮಾಡುತ್ತಾರೆ. ನಾವು ನಮ್ಮ ಸುತ್ತ-ಮುತ್ತ ದೃಷ್ಟಿಹಾಯಿಸಿದರೆ, ಅದು ಸಾಮಾಜಿಕ ಉದ್ಯಮಶೀಲತೆ ಇರಬಹುದು, start ups ಇರಬಹುದು, ಕ್ರೀಡೆ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ, ಸಮಾಜದಲ್ಲಿ ಬದಲಾವಣೆ ತರುವುದಾಗಿರಬಹುದು ಪ್ರಶ್ನೆಗಳನ್ನು ಕೇಳುವುದಾಗಿರಬಹುದು, ದೊಡ್ಡ ಕನಸುಗಳನ್ನು ಕಾಣುವ ಸಾಹಸ ತೋರಿಸಬಹುದಾಗಿರಬಹುದು ಇದೆಲ್ಲವನ್ನು ಮಾಡುವವರು ಯುವಕರೇ ಆಗಿರುತ್ತಾರೆ. ನಾವು ಯುವಕರ ವಿಚಾರಧಾರೆಯನ್ನು ಮೂಲಭೂತವಾಗಿ ಅಭಿವ್ಯಕ್ತಗೊಳಿಸಲು ಮುಕ್ತ ವಾತಾವರಣ ಒದಗಿಸಿದರೆ, ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಾರೆ. ಅವರು ಹಾಗೆ ಮಾಡುತ್ತಲೂ ಇದ್ದಾರೆ.
ನನ್ನ ದೇಶವಾಸಿಗಳೆ,
ಗುರುಗ್ರಾಮದಿಂದ ವಿನೀತಾ ಅವರು MyGov.ನಲ್ಲಿ ಬರೆದಿದ್ದಾರೆ ‘ಮನದ ಮಾತಿನಲ್ಲಿ’ ನಾನು ನಾಳೆಯ ಅಂದರೆ ನವಂಬರ್ 26ರ ‘ಸಂವಿಧಾನ ದಿವಸ್’ ಕುರಿತು ಮಾತನಾಡಬೇಕು ಎಂದಿದ್ದಾರೆ. ನಾವು ಸಂವಿಧಾನವನ್ನು ಅಳವಡಿಸಿಕೊಂಡು 70ನೇ ವರ್ಷಕ್ಕೆ ಪ್ರವೇಶಿಸುತ್ತಿದ್ದೇವೆ ಇದು ಇಂದಿನ ವಿಶೇಷ ಎನ್ನುವುದು ಅವರ ಮಾತಾಗಿದೆ.
ವಿನೀತಾರವರೆ, ತಮ್ಮ ಸಲಹೆಗಾಗಿ ತಮಗೆ ಅನಂತಾನಂತ ಧನ್ಯವಾದ.
ನಿಜ. ನಾಳೆ ‘ಸಂವಿಧಾನ ದಿವಸ’. ನಮ್ಮ ಸಂವಿಧಾನದ ಸೃಷ್ಟಿಗೆ ಕಾರಣಕರ್ತರಾದ ವಿಭೂತಿಪುರುಷರನ್ನು ನೆನೆಯಬೇಕಾದ ದಿನ. 1949 ರ ನವೆಂಬರ್ 26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಸಂವಿಧಾನದ ಕರಡು ಸಿದ್ಧಪಡಿಸುವ ಐತಿಹಾಸಿಕ ಕೆಲಸವನ್ನು ಪೂರ್ಣಗೊಳಿಸಲು ಸಂವಿಧಾ ರಚನಾ ಸಭೆಗೆ ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿವಸಗಳು ಹಿಡಿದವು. ಒಮ್ಮೆ ಕಲ್ಪನೆ ಮಾಡಿಕೊಳ್ಳಿ –‘ಮೂರೇ ವರ್ಷಗಳೊಳಗೆಈ ಮಹಾಪುರುಷರು ನಮಗೆ ಇಷ್ಟು ವಿಸ್ತಾರವಾದ, ವ್ಯಾಪಕವಾದ ಸಂವಿಧಾನವನ್ನು ನೀಡಿದ್ದಾರೆ. ಇವರೇನು ಅಸಾಧಾರಣ ವೇಗದಲ್ಲಿ ಸಂವಿಧಾನ ರಚನೆ ಮಾಡಿದ್ದಾರೆ, ಅದು ಇಂದಿಗೂ ಸಹ ಸಮಯ ನಿರ್ವಹಣೆ ಮತ್ತು ಕರ್ತೃತ್ವಕ್ಷಮತೆ ಒಂದು ಉದಾಹರಣೆಯೇ ಆಗಿದೆ. ಇದು ನಮಗೂ ಸಹ ನಮ್ಮ ಜವಾಬ್ದಾರಿಯನ್ನು ಒಂದು ದಾಖಲೆಯ ಸಮಯದಲ್ಲಿಯೇ ಪೂರ್ಣಗೊಳಿಸಲು ಪ್ರೇರೇಪಿಸುತ್ತದೆ. ಸಂವಿಧಾನ ಸಭೆ ದೇಶದ ಮಹಾನ್ ಪ್ರತಿಭೆಗಳ ಸಂಗಮವೇ ಆಗಿತ್ತು. ಅದರಲ್ಲಿ ಪ್ರತಿಯೊಬ – ‘ಭಾರತೀಯನೂ ಸಶಕ್ತನಾಗಬೇಕು. ಕಡುಬಡವನೂ ಸಹ ಸಮರ್ಥನಾಗಬೇಕು’ ಎಂಬ ಆಶಯದಿಂದ ಸಂವಿಧಾನವನ್ನು ನೀಡಲು ಬದ್ಧರಾಗಿದ್ದರು.
ನಮ್ಮ ಸಂವಿಧಾನದ ವೈಶಿಷ್ಠ್ಯತೆಯೆಂದರೆ ಹಕ್ಕು ಮತ್ತು ಕರ್ತವ್ಯ ಅಂದರೆ rights & duties ವಿಚಾರವಾಗಿ ವಿಸ್ತೃತವಾಗಿ ವಿವರಿಸಲಾಗಿದೆ. ನಾಗರಿಕ ಜೀವನದಲ್ಲಿ ಇವೆರಡೂ ಅಂಶಗಳ ಸಮತೋಲನವೇ ದೇಶವನ್ನು ಮುನ್ನಡೆಸುತ್ತದೆ. ನಾವು ಇನ್ನೊಬ್ಬರ ಹಕ್ಕನ್ನು ಗೌರವಿಸಿದರೆ, ನಮ್ಮ ಹಕ್ಕಿನ ರಕ್ಷಣೆ ತಂತಾನೇ ಆಗುತ್ತದೆ. ಅದೇ ರೀತಿ ಒಂದುವೇಳೆ ನಾವು ಸಂವಿಧಾನದತ್ತ ಕರ್ತವ್ಯಗಳಪಾಲನೆ ಮಾಡಿದರೆ, ಆಗಲೂ ನಮ್ಮ ಹಕ್ಕುಗಳ ರಕ್ಷಣೆ ತಾನಾಗಿಯೇ ಆಗುವುದು. 2010ರಲ್ಲಿ ಭಾರತ ಗಣತಂತ್ರದ ಅರವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಗುಜರಾತ್ನಲ್ಲಿ ಸಂವಿಧಾನದ ಪ್ರತಿಯನ್ನು ಆನೆಯ ಮೇಲೆ ಇಟ್ಟು ಮೆರವಣಿಗೆ ನಡೆಸಿದ್ದು ನನಗೀಗಲೂ ನೆನಪಿದೆ. ಯುವಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಅವರಿಗೆ ಸಂವಿಧಾನದ ಮಜಲಲ್ಲಿ ಜೋಡಿಸಲು ಒಂದು ಸ್ಮರಣೀಯ ಪ್ರಸಂಗವಾಗಿತ್ತು. 2020ರಲ್ಲಿ ಒಂದು ಗಣತಂತ್ರವಾಗಿ ಎಪ್ಪತ್ತು ವರ್ಷಗಳನ್ನು ಪೂರ್ಣಗೊಳಿಸಲಿದ್ದೇವೆ ಮತ್ತು 2022ರಲ್ಲಿ ನಮ್ಮ ಸ್ವಾತಂತ್ರ್ಯಕ್ಕೂ ಎಪ್ಪತ್ತೈದು ವರ್ಷಗಳು ಪೂರ್ಣವಾಗುತ್ತವೆ.
ಬನ್ನಿ, ನಾವೆಲ್ಲಾ ನಮ್ಮ ಸಂವಿಧಾನದ ಮೌಲ್ಯಗಳನ್ನು ಬಲಪಡಿಸೋಣ. ನಮ್ಮ ದೇಶದಲ್ಲಿ peace, progression, prosperity ಅಂದರೆ, ಶಾಂತಿ, ಉನ್ನತಿ ಮತ್ತು ಸಮೃದ್ಧಿಯನ್ನು ಸುನಶ್ಚಿತಗೊಳಿಸೋಣ.
ನನ್ನ ಪ್ರಿಯ ದೇಶವಾಸಿಗಳೆ,
ಸಂವಿಧಾನ ಸಭೆಯ ಬಗ್ಗೆ ಮಾತನಾಡುವಾಗ ಸಂವಿಧಾನ ಸಭೆಯ ಕೇಂದ್ರಬಿಂದುವಾಗಿದ್ದ ಆ ಮಹಾಪುರುಷನ ಕೊಡುಗೆಯನ್ನು ಮರೆಯಲು ಸಾಧ್ಯವಾಗುವುದೇ ಇಲ್ಲ. ಈ ಮಹಾಪುರುಷರೇ ಪೂಜ್ಯನೀಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಡಿಸೆಂಬರ್ 6 ಅವರ ಮಹಾಪರಿನಿರ್ವಾಣ ದಿನ. ನಾನು ದೇಶವಾಸಿಗಳೆಲ್ಲರ ಪರವಾಗಿ, ಕೋಟ್ಯಂತರ ಭಾರತೀಯರಿಗೆ ಗೌರವದಿಂದ ಬಾಳುವ ಹಕ್ಕನ್ನು ಒದಗಿಸಿದ ಬಾಬಾ ಸಾಹೇಬರಿಗೆ ನಮನ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ ಎಂಬುದು ಬಾಬಾ ಸಾಹೇಬರ ಸ್ವಭಾವದಲ್ಲಿ ಅಂತರ್ನಿಹಿತವಾಗಿತ್ತು. ಅವರು “ಭಾರತದ ಪ್ರಜಾಪ್ರಭುತ್ವದ ಮೌಲ್ಯ ಹೊರಗಿನಿಂದ ಬಂದದ್ದಲ್ಲ” ಎಂದೇ ಹೇಳುತ್ತಿದ್ದರು. ಗಣತಂತ್ರವೆಂದರೇನು? ಸಂಸದೀಯ ವ್ಯವಸ್ಥೆ ಹೇಗಿರುತ್ತದೆ ಎಂಬುದು ಭಾರತಕ್ಕೆ ಹೆÇಸತೇನಲ್ಲ. ಸಂವಿಧಾನ ಸಭೆಯಲ್ಲಿ ಅವರು ‘ಇಷ್ಟು ಸಂಘರ್ಷದ ನಂತರ ದೊರೆತಿರುವ ಸ್ವಾತಂತ್ರ್ಯವನ್ನು ನಮ್ಮ ರಕ್ತದ ಕೊನೆಯ ಹನಿ ಇರುವವರೆಗೂ ರಕ್ಷಿಸಬೇಕು’ ಎಂದು ಅತ್ಯಂತ ಭಾವುಕರಾಗಿ ಮನವಿ ಮಾಡಿದ್ದರು. ನಾವು ಭಾರತೀಯರು ವಿಭಿನ್ನ ಹಿನ್ನೆಲೆಯವರಿರಬಹುದು ಆದರೆ ಉಳಿದೆಲ್ಲ ವಿಚಾರಗಳಿಗಿಂತ ದೇಶದ ಹಿತವೇ ಮುಖ್ಯವಾಗಬೇಕು ಎಂದು ಅವರು ಹೇಳಿದ್ದರು. ಡಾ. ಬಾಬಾಸಾಹೇಬ್ ಅಂಬೆಡ್ಕರ್ ಅವರ ಮೂಲಮಂತ್ರ India first ಎಂಬುದಾಗಿತ್ತು ಮತ್ತೊಮ್ಮೆ ಪೂಜ್ಯ ಬಾಬಾ ಸಾಹೇಬರಿಗೆ ವಿನಮ್ರ ಶ್ರದ್ಧಾಂಜಲಿ.
ನನ್ನ ಪ್ರಿಯ ದೇಶವಾಸಿಗಳೆ,
ಕಳೆದೆರಡು ದಿನಗಳ ಹಿಂದೆ ನವಂಬರ್ 23ರಂದು ನಾವೆಲ್ಲಾ ಗುರುನಾನಕ್ ದೇವ್ಜಿ ಅವರ ಜಯಂತಿ ಆಚರಿಸಿದ್ದೇವೆ. ಮುಂದಿನ ವರ್ಷ ಅಂದರೆ 2019ರಲ್ಲಿ ಗುರುನಾನಕರ 550ನೇ ಪ್ರಕಾಶ-ಪರ್ವ ಆಚರಿಸಲಿದ್ದೇವೆ, ಗುರುನಾನಕರು ಯಾವಾಗಲೂ ಇಡೀ ಮಾನವ ಕುಲದ ಅಭಿವೃದ್ಧಿಗಾಗಿಯೇ ಚಿಂತಿಸಿದ್ದಾರೆ. ಅವರು ಅನವರತವಾಗಿ ಸಮಾಜಕ್ಕೆ ಸತ್ಯ, ಕರ್ಮ, ಸೇವೆ, ಕರುಣೆ ಮತ್ತು ಸೌಹಾರ್ದತೆಯ ಪಥದ ಮಾರ್ಗದರ್ಶಿಯಾಗಿದ್ದಾರೆ. ದೇಶದಲ್ಲಿ ಮುಂದಿನ ವರ್ಷ ನಾನಕ್ ದೇವ್ ಅವರ 550ನೇ ಜಯಂತಿ ಸಮಾರಂಭವನ್ನು ವೈಭವದಿಂದ ಆಚರಿಸಲಾಗುವುದು. ಇದರ ಪ್ರಭೆ ಕೇವಲ ದೇಶದಲ್ಲಷ್ಟೇ ಅಲ್ಲ, ಪ್ರಪಂಚದಲ್ಲೆಲ್ಲಾ ಪಸರಿಸುತ್ತದೆ. ಎಲ್ಲಾ ರಾಜ್ಯಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳವರನ್ನೂ ಈ ಸಮಯದಲ್ಲಿ ಅದ್ದೂರಿಯಿಂದ ಆಚರಿಸಲು ವಿನಂತಿಮಾಡಲಾಗಿದೆ. ಇದೇ ರೀತಿ ಗುರುನಾನಕರ 550ನೇ ಪ್ರಕಾಶ-ಪರ್ವವನ್ನು ಪ್ರಪಂಚದ ಎಲ್ಲಾ ದೇಶಗಳಲ್ಲೂ ಆಚರಿಸಲಾಗುವುದು. ಇದರ ಜೊತೆಗೆ ಗುರುನಾನಕರೊಂದಿಗೆ ಬೆಸೆದುಕೊಂಡಿರುವ ಪವಿತ್ರ ಸ್ಥಳಗಳ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಲಾಗುವುದು. ನಾನು ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಸಭೆ ನಡೆಸುತ್ತಿದ್ದ ಸಮಯದಲ್ಲೇ ನನಗೆ ಲಖಪತ್ ಸಾಹಿಬ್ ಗುರುದ್ವಾರದ ನೆನಪಾಯಿತು. 2001ರಲ್ಲಿ ಆದ ಗುಜರಾತ್ನ ಭೂಕಂಪದ ಸಮಯದಲ್ಲಿ ಆ ಗುರುದ್ವಾರಕ್ಕೆ ದೊಡ್ಡ ನಷ್ಟವೇ ಉಂಟಾಗಿತ್ತು. ಆದರೆ ಯಾವ ರೀತಿ ಸ್ಥಳೀಯ ಜನರ ಜೊತೆ ರಾಜ್ಯ ಸರ್ಕಾರವೂ ಬೆರೆತು ಅದರ ಜೀರ್ಣೋದ್ಧಾರ ಮಾಡಿತು. ಅದು ಇಂದಿಗೂ ಸಹ ಒಂದು ದೃಷ್ಟಾಂತವೇ ಸರಿ.
ಭಾರತ ಸರ್ಕಾರವು ‘ಕರ್ತಾರ್ಪುರ್ ಕಾರಿಡಾರ್’ ನಿರ್ಮಿಸುವ ಬೃಹತ್ತಾದ ಮಹತ್ವಪೂರ್ಣ ನಿರ್ಣಯ ಕೈಗೊಂಡಿದೆ. ಇದರಿಂದ ನಮ್ಮ ದೇಶದ ಯಾತ್ರಿಗಳು ಸುಲಭವಾಗಿ ಪಾಕಿಸ್ತಾನದ, ಕರ್ತಾರ್ಪುರ್ನಲ್ಲಿ ಗುರುನಾನಕರ ಪವಿತ್ರ ಸ್ಥಳಗಳ ದರ್ಶನ ಮಾಡಬಹುದಾಗಿದೆ.
ನನ್ನ ಪ್ರಿಯ ದೇಶವಾಸಿಗಳೆ,
ಐವತ್ತು ಕಂತುಗಳ ನಂತರ ಮತ್ತೊಮ್ಮೆ ಮತ್ತೊಂದು ‘ಮನದ ಮಾತಿನ’ಲ್ಲಿ ಭೇಟಿಯಾಗೋಣ. ಮೊದಲ ಬಾರಿಗೆ, ಈ ಕಾರ್ಯಕ್ರಮದ ಹಿಂದಿರುವ ಭಾವನೆಗಳನ್ನು, ತಮ್ಮೆದುರು ಇಡುವ ಅವಕಾಶ ದೊರಕಿತು. ಏಕೆಂದರೆ ತಾವು ಇದೇ ರೀತಿ ಪ್ರಶ್ನೆಗಳನ್ನು ಕೇಳಿದ್ದೀರಿ, ಆದರೆ ನಮ್ಮ ಯಾತ್ರೆ ಸಾಗುತ್ತಿರುತ್ತದೆ ಎಂಬ ವಿಶ್ವಾಸ ನನಗಿದೆ. ತಮ್ಮ ಒಡನಾಟ ಎಷ್ಟು ಹೆಚ್ಚು ಸಮ್ಮಿಳಿತವಾಗುತ್ತದೋ, ನಮ್ಮ ಈ ಯಾತ್ರೆ ಅಷ್ಟೇ ಗಂಭೀರವಾಗಿ ಸಾಗುತ್ತದೆ. ಮತ್ತು ಎಲ್ಲರಿಗು ಸಂತೋಷವನ್ನೂ ನೀಡುತ್ತದೆ. ಕೆಲವೊಮ್ಮೆ ಜನರ ಮನದಲ್ಲಿ ‘ಮನದ ಮಾತಿನಿಂದ’ ನನಗೇನು ಲಾಭವಾಯಿತು ಎಂಬ ಪ್ರಶ್ನೆ ಏಳುತ್ತದೆ. ಇದರ ಬಗ್ಗೆ ಇಂದು ಹೇಳುತ್ತೇನೆ. ‘ಮನದ ಮಾತಿನ ಬಗ್ಗೆ’ ಪ್ರತಿಕ್ರಿಯೆಗಳು ಬರುವುದನ್ನು ಗಮನಿಸಿದಾಗ, ಅದರಲ್ಲಿ ಒಂದು ಮಾತು ನನ್ನ ಮನಸ್ಸನ್ನು ನಾಟುತ್ತದೆ. ಹೆಚ್ಚಿನ ಜನರಿಗೆ – “ನಾವು ಕುಟುಂಬ ಸಮೇತರಾಗಿ ಕುಳಿತು ಮನದ ಮಾತನ್ನು ಕೇಳುತ್ತಿರುವಾಗ, ನಮಗೆ ನಮ್ಮ ಕುಟುಂಬದ ಮುಖ್ಯಸ್ಥ ನಮ್ಮ ನಡುವೆಯೇ ಕುಳಿತು ನಮ್ಮದೇ ಮಾತುಗಳನ್ನು ನಮ್ಮೊಡನೆಯೇ ಹಂಚಿಕೊಳ್ಳುತ್ತಿದ್ದಾರೆ ಅನಿಸುತ್ತದೆ” ಈ ಮಾತು ವ್ಯಾಪಕವಾಗಿ ಕೇಳಿಬಂದಾಗ ನನಗೆ ಸಂತೋಷವಾಯಿತು. ‘ನಾನು ನಿಮ್ಮವನು. ನಿಮ್ಮಲ್ಲೊಬ್ಬ. ನಿಮ್ಮ ನಡುವೆಯೇ ಇದ್ದೇನೆ. ನೀವೇ ನನ್ನನ್ನು ಬೆಳೆಸಿದ್ದೀರಿ. ಒಂದು ರೀತಿಯಲ್ಲಿ ನಾನು ನಿಮ್ಮ ಪರಿವಾರದ ಸದಸ್ಯನ ರೂಪದಲ್ಲಿಯೇ ‘ಮನದ ಮಾತಿನ’ ಮಾಧ್ಯಮದ ಮೂಲಕ ಮತ್ತೆ ಮತ್ತೆ ಬರುತ್ತಲೇ ಇರುತ್ತೇನೆ ಹಾಗೂ ನಿಮ್ಮೊಡನೆ ಬೆರೆಯುತ್ತಲೇ ಇರುತ್ತೇನೆ. ನಿಮ್ಮ ಸುಖ-ದುಃಖವೇ, ನನ್ನ ಸುಖ-ದುಃಖ, ನಿಮ್ಮ ಆಕಾಂಕ್ಷೆಗಳೇ ನನ್ನ ಆಕಾಂಕ್ಷೆಗಳು. ನಿಮ್ಮ ಮಹತ್ವಾಕಾಂಕ್ಷೆಯೇ – ನನ್ನ ಮಹತ್ವಾಕಾಂಕ್ಷೆ.
ಬನ್ನಿ. ಈ ಯಾತ್ರೆಯನ್ನು ನಾವು ಮತ್ತಷ್ಟು ಮುನ್ನಡೆಸೋಣ.
ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ, ತಮ್ಮೆಲ್ಲರಿಗೂ ನಮಸ್ಕಾರ. ಅಕ್ಟೋಬರ್ 31 ನಮ್ಮೆಲ್ಲರ ಪ್ರಿಯ ಸರ್ದಾರ್ ವಲ್ಲಭ್ಭಾಯಿ ಪಟೇಲ್ ಅವರ ಜಯಂತಿ ಮತ್ತು ಪ್ರತಿ ವರ್ಷದಂತೆ ದೇಶದ ಯುವಜನತೆ ‘ರನ್ ಫಾರ್ ಯುನಿಟಿ’ಗಾಗಿ ಓಟಕ್ಕೆ ಒಗ್ಗಟ್ಟಿನಿಂದ ಸಿದ್ಧರಾಗಿದ್ದಾರೆ. ಈಗ ವಾತಾವರಣವೂ ಬಹಳ ಆಹ್ಲಾದಕರವಾಗಿರುತ್ತದೆ. ಇದು ‘ರನ್ ಫಾರ್ ಯುನಿಟಿ’ ಯ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಲಿದೆ. ನೀವೆಲ್ಲರೂ ಬಹು ದೊಡ್ಡ ಸಂಖ್ಯೆಯಲ್ಲಿ ಏಕತೆಯ ಈ ಓಟದಲ್ಲಿ ‘ರನ್ ಫಾರ್ ಯುನಿಟಿ’ಯಲ್ಲಿ ಭಾಗವಹಿಸಬೇಕು ಎಂಬುದು ನನ್ನ ಆಗ್ರಹ. ಸ್ವಾತಂತ್ರ್ಯಕ್ಕೂ ಸುಮಾರು ಆರೂವರೆ ತಿಂಗಳು ಮೊದಲು 1947 ರ ಜನವರಿ 27 ರಂದು ವಿಶ್ವದ ಪ್ರಸಿದ್ಧ ಅಂತಾರಾಷ್ಟ್ರೀಯ ಪತ್ರಿಕೆ ‘ಟೈಮ್ ಮ್ಯಾಗಜಿನ್’ ತನ್ನ ಆವೃತ್ತಿಯ ಮುಖಪುಟದ ಮೇಲೆ ಸರ್ದಾರ್ ಪಟೇಲ್ ಅವರ ಭಾವಚಿತ್ರವನ್ನು ಪ್ರಕಟಿಸಿತ್ತು. ತಮ್ಮ ಪ್ರಮುಖ ಸುದ್ದಿಯಲ್ಲಿ ಅವರು ಭಾರತದ ನಕಾಶೆಯನ್ನು ತೋರಿಸಿದ್ದರು ಮತ್ತು ಅದು ಇಂದು ನಾವು ಕಾಣುವ ಭೂಪಟವಾಗಿರಲಿಲ್ಲ. ಅದು ಹಲವಾರು ಭಾಗಗಳಾಗಿ ವಿಭಜಿತಗೊಂಡ ಭಾರತದ ಭೂಪಟವಾಗಿತ್ತು. ಅಂದು 550 ಕ್ಕಿಂತ ಹೆಚ್ಚು ದೇಶೀಯ ಸಂಸ್ಥಾನಗಳಿದ್ದವು. ಭಾರತದ ಬಗ್ಗೆ ಬ್ರಿಟಿಷರಲ್ಲಿ ಆಸಕ್ತಿ ಕಡಿಮೆ ಆಗಿತ್ತು, ಆದರೆ ಅವರು ಈ ದೇಶವನ್ನು ಛಿದ್ರ ಛಿದ್ರಗೊಳಿಸಿಬಿಡಬೇಕು ಎಂದುಕೊಂಡಿದ್ದರು. ವಿಭಜನೆ, ಹಿಂಸೆ, ಆಹಾರದ ಅಭದ್ರತೆ, ಹಣದುಬ್ಬರ ಮತ್ತು ಆಡಳಿತಕ್ಕಾಗಿ ರಾಜಕೀಯದಂತಹ ಅಪಾಯಗಳು ತಲೆ ಎತ್ತಿದ್ದವು ಎಂದು ‘ಟೈಮ್ ಮ್ಯಾಗಜಿನ್’ ವರದಿ ಮಾಡಿತ್ತು. ಮುಂದುವರಿದು ಇದೆಲ್ಲದರ ಮಧ್ಯೆ ದೇಶವನ್ನು ಒಗ್ಗಟ್ಟಿನ ಸೂತ್ರದಲ್ಲಿ ಕಟ್ಟುವಂಥ ಮತ್ತು ಗಾಯಗಳನ್ನು ಮಾಸುವಂತೆ ಮಾಡುವ ಸಾಮರ್ಥ್ಯ ಕೇವಲ ಸರ್ದಾರ್ ವಲ್ಲಭ್ಭಾಯಿ ಪಟೇಲ್ ಅವರಲ್ಲಿದೆ ಎಂದು ‘ಟೈಮ್ ಮ್ಯಾಗಜಿನ್’ ನಲ್ಲಿ ಬರೆಯಲಾಗಿತ್ತು. ‘ಟೈಮ್ ಮ್ಯಾಗಜಿನ್’ ನ ಸುದ್ದಿ ಲೋಹ ಪುರುಷನ ಜೀವನದ ಇನ್ನೊಂದು ಮಗ್ಗುಲಿನ ಮೇಲೂ ಬೆಳಕು ಚೆಲ್ಲುತ್ತದೆ.
1920 ರ ದಶಕದಲ್ಲಿ ಅಹ್ಮದಾಬಾದ್ ನಲ್ಲಿ ಎದುರಾದ ಪ್ರವಾಹ ಪರಿಸ್ಥಿಯಲ್ಲಿ ರಕ್ಷಣಾ ಕಾರ್ಯವನ್ನು ಹೇಗೆ ನಿಭಾಯಿಸಿದರು, ಹೇಗೆ ಅವರು ಬಾರ್ಡೊಲಿ ಸತ್ಯಾಗ್ರಹಕ್ಕೆ ರಹದಾರಿಯನ್ನು ತೋರಿದರು ಎಂಬುದನ್ನು ತಿಳಿಸಲಾಗಿತ್ತು. ದೇಶದ ಬಗ್ಗೆ ಅವರ ಪ್ರಾಮಾಣಿಕತೆ ಮತ್ತು ಬದ್ಧತೆ ಎಂಥದ್ದು ಎಂದರೆ ಕೃಷಿಕರು, ಕಾರ್ಮಿಕರಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಅವರ ಮೇಲೆ ಭರವಸೆ ಇಟ್ಟಿದ್ದರು. ರಾಜ್ಯಗಳ ಸಮಸ್ಯೆಗಳು ಎಷ್ಟು ಕ್ಲಿಷ್ಟವಾಗಿವೆಯೆಂದರೆ ಅದಕ್ಕೆ ನೀವೇ ಪರಿಹಾರ ಶೋಧಿಸಬಲ್ಲಿರಿ ಎಂದು ಗಾಂಧೀಜಿ, ಸರ್ದಾರ್ ಪಟೇಲ್ರಿಗೆ ಹೇಳಿದರು. ಮತ್ತು ಸರ್ದಾರ್ ಪಟೇಲ್ರು ಒಂದೊಂದೇ ಸಮಸ್ಯೆಗಳಿಗೆ ಪರಿಹಾರ ಹುಡುಕಿದರು ಮತ್ತು ದೇಶವನ್ನು ಏಕತೆಯ ಸೂತ್ರದಲ್ಲಿ ಕಟ್ಟುವಂಥ ಅಸಂಭವ ಕೆಲಸವನ್ನು ಸಾಧಿಸಿ ತೋರಿದರು. ಅವರು ಎಲ್ಲ ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿದರು. ಅದು ಜುನಾಗಡ್ ಆಗಿರಲಿ ಇಲ್ಲವೆ ಹೈದ್ರಾಬಾದ್, ಟ್ರಾವಂಕೋರ್ (ತಿರುವನಂತಪುರಂ) ಆಗಿರಲಿ ಅಥವಾ ರಾಜಸ್ಥಾನದ ಸಂಸ್ಥಾನವಾಗಿರಲಿ – ಇವೆಲ್ಲವನ್ನೂ ಒಗ್ಗೂಡಿಸಿದ್ದು ಸರ್ದಾರ್ ಪಟೇಲ್ ಅವರೇ, ಅವರ ಬುದ್ಧಿಮತ್ತೆ ಮತ್ತು ರಾಜನೈತಿಕ ಕೌಶಲ್ಯದಿಂದಲೇ ಇಂದು ನಾವು ಒಂದು ಅಖಂಡ ಹಿಂದುಸ್ತಾನವನ್ನು ಕಾಣುತ್ತಿದ್ದೇವೆ. ಏಕತೆಯ ಸೂತ್ರದಲ್ಲಿ ಹೆಣೆದ ಈ ರಾಷ್ಟ್ರವನ್ನು, ಭಾರತ ಮಾತೆಯನ್ನು ನೋಡಿ ಸಹಜವಾಗಿಯೇ ನಾವು ಸರ್ದಾರ್ ವಲ್ಲಭ್ಭಾಯಿ ಪಟೇಲ್ ಅವರ ಪುಣ್ಯಸ್ಮರಣೆಯನ್ನು ಮಾಡುತ್ತೇವೆ. ಈ ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ರ ಜಯಂತಿ ಇನ್ನಷ್ಟು ವಿಶೇಷವಾಗಿರಲಿದೆ – ಅಂದು ಸ್ಟ್ಯಾಚ್ಯೂ ಆಫ್ ಯುನಿಟಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ಸರ್ದಾರ್ ಪಟೇಲ್ ಅವರಿಗೆ ನಿಜವಾದ ಅರ್ಥದಲ್ಲಿ ಶೃದ್ಧಾಂಜಲಿ ಸಲ್ಲಿಸಲಿದ್ದೇವೆ. ಗುಜರಾತ್ನ ನರ್ಮದಾ ನದಿ ದಡದಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯ ಎತ್ತರ ಅಮೇರಿಕದ ಸ್ಟ್ಯಾಚ್ಯೂ ಆಫ್ ಲಿಬರ್ಟಿಗಿಂತ 2 ಪಟ್ಟು ಎತ್ತರವಿದೆ. ಇದು ವಿಶ್ವದ ಎಲ್ಲಕ್ಕಿಂತ ಎತ್ತರವಾದ ಗಗನಚುಂಬಿ ಪ್ರತಿಮೆಯಾಗಿದೆ. ವಿಶ್ವದ ಅತಿ ಎತ್ತರವಾದ ಪ್ರತಿಮೆ ಭಾರತದಲ್ಲಿದೆ ಎಂಬುದರ ಕುರಿತು ಪ್ರತಿಯೊಬ್ಬ ಭಾರತೀಯನೂ ಈಗ ಹೆಮ್ಮೆ ಪಡಬಹುದಾಗಿದೆ. ಭೂಮಿ ಪುತ್ರನಾಗಿದ್ದ ಸರ್ದಾರ್ ಪಟೇಲ್ ಅವರು ಇಂದು ಆಕಾಶದ ಶೋಭೆಯನ್ನೂ ಹೆಚ್ಚಿಸಲಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನೂ ತಾಯಿ ಭಾರತಿಯ ಈ ಮಹಾನ್ ಕೊಡುಗೆಯನ್ನು ವಿಶ್ವದೆದುರು ಹೆಮ್ಮೆಯಿಂದ ತಲೆ ಎತ್ತಿ ಎದೆಯುಬ್ಬಿಸಿ ಇದರ ಗೌರವದ ಬಗ್ಗೆ ಹಾಡಿ ಹೊಗಳಲಿದ್ದಾರೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಸ್ಟ್ಯಾಚ್ಯೂ ಆಫ್ ಯುನಿಟಿ ನೋಡುವ ಆಸೆಯಾಗುವುದು ಸಹಜ ಮತ್ತು ಭಾರತದ ಮೂಲೆ ಮೂಲೆಯಿಂದ ಜನರು ಇದನ್ನೂ ತಮ್ಮ ಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ನನಗಿದೆ.
ನನ್ನ ಪ್ರಿಯ ಸೋದರ ಸೋದರಿಯರೇ, ನೆನ್ನೆಯಷ್ಟೇ ನಾವೆಲ್ಲರೂ ಇನ್ಫಂಟ್ರಿ ಡೇ ಆಚರಿಸಿದೆವು. ಭಾರತೀಯ ಸೇನೆಯ ಭಾಗವಾಗಿರುವ ಅವರೆಲ್ಲರಿಗೂ ನಾನು ನಮಿಸುತ್ತೇನೆ. ನಮ್ಮ ಸೈನಿಕರ ಕುಟುಂಬಗಳಿಗೂ ಅವರ ಸಾಹಸಕ್ಕಾಗಿ ಸೆಲ್ಯೂಟ್ ಮಾಡುತ್ತೇನೆ. ಆದರೆ ನಾವೆಲ್ಲ ಭಾರತೀಯರು ಇನ್ಫಂಟ್ರಿ ಡೇ ಏಕೆ ಆಚರಿಸುತ್ತೇವೆ ಎಂಬುದು ನಿಮಗೆ ಗೊತ್ತೇ? ಭಾರತೀಯ ಸೇನೆಯ ವೀರರು ಕಾಶ್ಮೀರದ ಗಡಿಯೊಳಗೆ ನುಸುಳುಕೋರರ ವಿರುದ್ಧ ಹೋರಾಡಿ ಕಣಿವೆಯನ್ನು ರಕ್ಷಿಸಿದ್ದರು. ಈ ಐತಿಹಾಸಿಕ ಘಟನೆಗೂ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರೊಂದಿಗೆ ನೇರ ಸಂಬಂಧವಿದೆ. ನಾನು ಭಾರತೀಯ ಸೇನೆಯ ಮಹಾದಂಡನಾಯಕ (ಮಹಾನ್ ಸೈನ್ಯಾಧಿಕಾರಿ) ಸ್ಯಾಮ್ ಮಾನಿಕ್ಶಾ ಅವರ ಒಂದು ಹಳೆಯ ಸಂದರ್ಶನ ಓದುತ್ತಿದ್ದೆ. ಆ ಸಂದರ್ಶನದಲ್ಲಿ ಫೀಲ್ಡ್ ಮಾರ್ಷಲ್ ಮಾನಿಕ್ ಶಾ ತಾವು ಕರ್ನಲ್ ಆಗಿದ್ದಾಗಿನ ಸಮಯದ ಬಗ್ಗೆ ಮೆಲುಕು ಹಾಕಿದ್ದರು. ಆ ಸಮಯದಲ್ಲಿ ಅಕ್ಟೋಬರ್ 1947 ರಲ್ಲಿ ಕಾಶ್ಮೀರದಲ್ಲಿ ಸೈನ್ಯ ಅಭಿಯಾನ ಆರಂಭವಾಗಿತ್ತು. ಒಂದು ಮಾತುಕತೆಯ ಸಂದರ್ಭದಲ್ಲಿ ಕಾಶ್ಮೀರಕ್ಕೆ ಸೇನೆಯನ್ನು ಕಳುಹಿಸುವುದರಲ್ಲಿ ವಿಳಂಬವಾಗುತ್ತಿರುವುದರ ಕುರಿತು ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಹೇಗೆ ಕೋಪೋದ್ರಿಕ್ತರಾಗಿದ್ದರು ಎಂದು ಫೀಲ್ಡ್ ಮಾರ್ಷಲ್ ಮಾನಿಕ್ ಶಾ ವಿವರಿಸುತ್ತಿದ್ದರು. ಸರ್ದಾರ್ ಪಟೇಲ್ರು ಮಾತುಕತೆ ಸಂದರ್ಭದಲ್ಲಿ ತಮ್ಮ ವಿಶಿಷ್ಟ ರೀತಿಯ ನೋಟವನ್ನು ಅವರತ್ತ ಹರಿಸಿ ಕಾಶ್ಮೀರಕ್ಕೆ ಸೇನಾ ಅಭಿಯಾನದಲ್ಲಿ ಯಾವುದೇ ರೀತಿಯ ವಿಳಂಬವಾಗಕೂಡದು ಮತ್ತು ಇದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿದ್ದರು. ಅದರ ನಂತರವೇ ಸೇನೆಯ ವೀರರು ಕಾಶ್ಮೀರಕ್ಕೆ ತೆರಳಿದರು ಮತ್ತು ಅವರು ಹೇಗೆ ವಿಜಯ ಸಾಧಿಸಿದರು ಎಂಬುದನ್ನು ನಾವೆಲ್ಲ ಕಂಡಿದ್ದೇವೆ. ಅಕ್ಟೋಬರ್ 31 ರಂದು ನಮ್ಮ ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯೂ ಇದೆ. ಇಂದಿರಾಜಿಯವರಿಗೂ ಗೌರವಪೂರ್ಣ ಶೃದ್ಧಾಂಜಲಿ.
ನನ್ನ ಪ್ರಿಯ ದೇಶಬಂಧುಗಳೇ, ಕ್ರೀಡೆ ಯಾರಿಗೆ ತಾನೇ ಇಷ್ಟವಿಲ್ಲ. ಕ್ರೀಡಾರಂಗದಲ್ಲಿ ಉತ್ಸಾಹ, ಶಕ್ತಿ, ಕೌಶಲ್ಯ ಮತ್ತು ಸಾಮರ್ಥ್ಯ – ಇವೆಲ್ಲ ವಿಷಯಗಳು ಬಹಳ ಮಹತ್ವಪೂರ್ಣವಾಗಿವೆ. ಇವು ಯಾವುದೇ ಕ್ರೀಡಾಳುವಿನ ಸಫಲತೆಯ ಮಾನದಂಡವಾಗಿರುತ್ತವೆ ಮತ್ತು ಈ ನಾಲ್ಕು ಗುಣಗಳೇ ಯಾವುದೇ ರಾಷ್ಟ್ರದ ನಿರ್ಮಾಣಕ್ಕೂ ಸಹ ಮಹತ್ವಪೂರ್ಣವಾಗಿರುತ್ತವೆ. ಯಾವುದೇ ದೇಶದ ಯುವಜನತೆಯಲ್ಲಿ ಇವೆಲ್ಲವೂ ಇದ್ದಲ್ಲಿ ಆ ದೇಶ ಆರ್ಥಿಕವಾಗಿ, ವಿಜ್ಞಾನ, ಮತ್ತು ತಂತ್ರಜ್ಞಾನದಂತಹ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದು ಮಾತ್ರವಲ್ಲದೆ ಕ್ರೀಡೆಯಲ್ಲೂ ತನ್ನ ಛಾಪನ್ನು ಮೂಡಿಸುತ್ತದೆ. ಇತ್ತೀಚೆಗೆ ನನಗೆ 2 ಮರೆಯಲಾಗದಂತಹ ಭೇಟಿಗಳಾದವು. ಮೊದಲನೆಯದ್ದು ಜಕಾರ್ತಾದಲ್ಲಿ ನಡೆದ ಏಷಿಯನ್ ಪ್ಯಾರಾ ಗೇಮ್ಸ್ 2018 ರ ನಮ್ಮ ಪ್ಯಾರಾ ಅಥ್ಲೀಟ್ಗಳನ್ನು ಸಂಧಿಸುವ ಅವಕಾಶ ದೊರೆಯಿತು. ಈ ಕ್ರೀಡೆಗಳಲ್ಲಿ ಭಾರತ ಒಟ್ಟು 72 ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ಬರೆಯಿತು ಮತ್ತು ದೇಶದ ಗೌರವವನ್ನು ಹೆಚ್ಚಿಸಿತು. ಈ ಎಲ್ಲ ಪ್ರತಿಭಾನ್ವಿತ ಪ್ಯಾರಾ ಅಥ್ಲೀಟ್ಗಳೊಂದಿಗೆ ಖುದ್ದಾಗಿ ಭೇಟಿಯಾಗುವ ಸೌಭಾಗ್ಯ ದೊರೆಯಿತು ಮತ್ತು ಅವರನ್ನು ನಾನು ಅಭಿನಂದಿಸಿದೆ. ಅವರ ದೃಢ ಇಚ್ಛಾಶಕ್ತಿ ಮತ್ತು ಪ್ರತಿಯೊಂದು ಸಂಕಷ್ಟಗಳೊಂದಿಗೆ ಹೋರಾಡಿ ಮುಂದುವರಿಯುವ ಅವರ ಛಲ ಎಲ್ಲ ದೇಶವಾಸಿಗಳಿಗೆ ಪ್ರೇರಣಾದಾಯಕವಾಗಿದೆ. ಇದೇ ರೀತಿ ಅರ್ಜೆಂಟೀನಾ ದಲ್ಲಿ ನಡೆದ ಸಮ್ಮರ್ ಯುತ್ ಒಲಿಂಪಿಂಕ್ಸ್ 2018 ರ ವಿಜೇತರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಯುತ್ ಒಲಿಂಪಿಂಕ್ಸ್ 2018 ರಲ್ಲಿ ನಮ್ಮ ಯುವಜನತೆ ಇಲ್ಲಿವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಕೇಳಿ ನಿಮಗೆ ಸಂತೋಷವಾಗಬಹುದು. ಈ ಕ್ರೀಡೆಗಳಲ್ಲಿ ನಾವು 13 ಪದಕಗಳಲ್ಲದೆ ಮಿಶ್ರ ಆಟೋಟಗಳ ಸ್ಪರ್ಧೆಯಲ್ಲಿ 3 ಪದಕಗಳನ್ನು ಸಹ ಗೆದ್ದಿದ್ದೇವೆ. ಈ ಬಾರಿ ಏಷ್ಯನ್ ಗೇಮ್ಸ್ ನಲ್ಲೂ ಭಾರತದ ಪ್ರದರ್ಶನ ಉತ್ತಮವಾಗಿತ್ತು ಎಂಬುದು ನಿಮಗೆ ನೆನಪಿರಬಹುದು. ನೋಡಿ, ಈ ಕೆಲವು ನಿಮಿಷಗಳಲ್ಲಿ ನಾನು ಎಷ್ಟೊಂದು ಬಾರಿ ಎಲ್ಲಕ್ಕಿಂತ ಉತ್ತಮ ಮತ್ತು ಎಲ್ಲಕ್ಕಿಂತ ಅದ್ಭುತವಾದ ಶಬ್ದಗಳನ್ನು ಬಳಸಿದ್ದೇನೆ. ಇದು ಇಂದಿನ ಭಾರತೀಯ ಕ್ರೀಡಾ ಜಗತ್ತಿನ ಕಥೆ. ಇದು ದಿನ ಕಳೆದಂತೆ ಉತ್ತುಂಗಕ್ಕೆ ಏರುತ್ತಿದೆ. ಭಾರತ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲ ಎಂದಿಗೂ ಊಹಿಸದಂತಹ ಕ್ಷೇತ್ರಗಳಲ್ಲೂ ಸಹ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಉದಾಹರಣೆಗೆ ಪ್ಯಾರಾ ಅಥ್ಲೀಟ್ ನಾರಾಯಣ್ ಥಾಕೂರ್ ಅವರ ಬಗ್ಗೆ ಹೇಳಬಯಸುತ್ತೇನೆ. ಅವರು 2018 ರ ಏಷ್ಯನ್ ಪ್ಯಾರಾ ಗೇಮ್ಸ್ ನ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅವರು ಜನ್ಮತಃ ದಿವ್ಯಾಂಗರಾಗಿದ್ದಾರೆ. ಅವರು 8 ವರ್ಷದವರಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಮುಂದಿನ 8 ವರ್ಷಗಳನ್ನು ಅವರು ಅನಾಥಾಲಯದಲ್ಲಿ ಕಳೆದರು. ಅನಾಥಾಲಯದಿಂದ ಹೊರಬಂದ ಮೇಲೆ ಜೀವನ ನಿರ್ವಹಣೆಗೆ ಡಿಟಿಸಿ ಬಸ್ಗಳನ್ನು ಸ್ವಚ್ಛಗೊಳಿಸುವುದು ಮತ್ತು ದೆಹಲಿಯ ರಸ್ತೆ ಬದಿಯ ಧಾಬಾಗಳಲ್ಲಿ ವೇಟರ್ ಆಗಿ ಕೆಲಸ ಮಾಡಿದ್ದಾರೆ. ಇಂದು ಅದೇ ನಾರಾಯಣ್ ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆಲ್ಲುತ್ತಿದ್ದಾರೆ. ಇಷ್ಟೇ ಅಲ್ಲದೆ, ಭಾರತದ ಕ್ರೀಡೆಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯ ವ್ಯಾಪ್ತಿಯನ್ನು ಅವಲೋಕಿಸಿ, ಭಾರತ ಜೂಡೋದಲ್ಲಿ ಸಿನಿಯರ್ ಲೆವೆಲ್ ಆಗಿರಲಿ ಜ್ಯೂನಿಯರ್ ಲೆವೆಲ್ ಆಗಿರಲಿ ಎಂದೂ ಪದಕವನ್ನು ಗೆದ್ದಿರಲಿಲ್ಲ್ಲ. ಆದರೆ ತಬಾಬಿ ದೇವಿಯವರು ಯುತ್ ಒಲಿಂಪಿಕ್ಸ್ನ ಜೂಡೋದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. 16 ರ ವಯೋಮಾನದ ಯುವ ಕ್ರೀಡಾಳು ತಬಾಬಿ ದೇವಿ ಮಣಿಪುರದ ಒಂದು ಗ್ರಾಮ ನಿವಾಸಿ. ಅವರ ತಂದೆ ಒಬ್ಬ ಕಾರ್ಮಿಕ, ತಾಯಿ ಮೀನು ಮಾರುವ ವೃತ್ತಿಯಲ್ಲಿದ್ದಾರೆ. ಎಷ್ಟೋ ಸಲ ಅವರ ಕುಟುಂಬದಲ್ಲಿ ಆಹಾರ ಖರೀದಿಸಲು ಹಣ ಇಲ್ಲದಂತಹ ಪರಿಸ್ಥಿತಿ ಬಂದೊದಗಿತ್ತು. ಇಂಥ ಪರಿಸ್ಥಿತಿಯಲ್ಲೂ ತಬಾಬಿ ದೇವಿ ಎದೆಗುಂದಲಿಲ್ಲ. ಮತ್ತು ದೇಶಕ್ಕಾಗಿ ಪದಕವನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಂಥ ಎಷ್ಟೋ ಕಥೆಗಳಿವೆ. ಇಂತಹ ಪ್ರತಿಯೊಬ್ಬರ ಜೀವನ ಪ್ರೇರಣಾದಾಯಕವಾಗಿದೆ. ಪ್ರತಿಯೊಬ್ಬ ಯುವ ಕ್ರೀಡಾಳು, ಅವರ ಹುಮ್ಮಸ್ಸು ನವ ಭಾರತದ ಪ್ರತೀಕವಾಗಿದೆ.
ನನ್ನ ಪ್ರಿಯ ದೇಶಬಾಂಧವರೇ, ನಾವು 2017 ರಲ್ಲಿ ಫಿಫಾ ಅಂಡರ್ 17 ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೆವು ಎಂಬುದು ನಿಮ್ಮೆಲ್ಲರಿಗೂ ನೆನಪಿರಬಹುದು. ಇದು ಅತ್ಯಂತ ಸಫಲ ಪಂದ್ಯಾವಳಿ ಎಂದು ಇಡೀ ವಿಶ್ವವೇ ಹೊಗಳಿತ್ತು. ಫಿಫಾ 17ರ ವಯೋಮಾನದ ಒಳಗಿನವರ ವಿಶ್ವಕಪ್ ವೀಕ್ಷಕರ ಸಂಖ್ಯೆ ವಿಷಯದಲ್ಲೂ ಒಂದು ಹೊಸ ದಾಖಲೆಯನ್ನು ಮೂಡಿಸಿತ್ತು. ದೇಶದ ವಿವಿಧ ಸ್ಟೆಡಿಯಂಗಳಲ್ಲಿ 12 ಲಕ್ಷಕ್ಕಿಂತ ಹೆಚ್ಚು ಜನರು ಫುಟ್ಬಾಲ್ ಮ್ಯಾಚ್ ಅನ್ನು ಆನಂದಿಸಿದರು. ಮತ್ತು ಯುವ ಕ್ರೀಡಾಳುಗಳನ್ನು ಪ್ರೋತ್ಸಾಹಿಸಿದರು. ಈ ವರ್ಷ ಭಾರತಕ್ಕೆ ಭುವನೇಶ್ವರದಲ್ಲಿ 2018 ರ ಸಾಲಿನ ಪುರುಷರ ಹಾಕಿ ವಿಶ್ವ ಕಪ್ ಆಯೋಜನೆಯ ಸೌಭಾಗ್ಯ ದೊರೆತಿದೆ. ಹಾಕಿ ವಿಶ್ವ ಕಪ್ ನವೆಂಬರ್ 28 ರಿಂದ ಆರಂಭವಾಗಿ ಡಿಸೆಂಬರ್ 16 ರವರೆಗೆ ನಡೆಯಲಿದೆ. ಪ್ರತಿಯೊಬ್ಬ ಭಾರತೀಯ ಯಾವುದೇ ಆಟ ಆಡುತ್ತಿರಲಿ ಅಥವಾ ಯಾವುದೇ ಕ್ರೀಡೆಯಲ್ಲಿ ಅಭಿರುಚಿ ಹೊಂದಿರಲಿ ಹಾಕಿ ಬಗ್ಗೆ ಅವರಿಗೆ ವಿಶೇಷ ಒಲವಿದೆ. ಹಾಕಿಯಲ್ಲಿ ಭಾರತ ಸ್ವರ್ಣಮಯ ಇತಿಹಾಸ ಹೊಂದಿದೆ. ಹಿಂದೆ ಭಾರತಕ್ಕೆ ಹಲವು ಬಾರಿ ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ದೊರೆತಿದೆ. ಅಲ್ಲದೇ ಒಂದು ಬಾರಿ ವಿಶ್ವಕಪ್ ಕೂಡಾ ಗೆದ್ದಿದೆ. ಹಾಕಿ ಗೆ ಭಾರತ ಹಲವಾರು ಮಹಾನ್ ಆಟಗಾರರನ್ನೂ ನೀಡಿದೆ. ವಿಶ್ವದಲ್ಲಿ ಹಾಕಿ ಬಗ್ಗೆ ಎಂದೇ ಚರ್ಚೆಯಾದರೂ ಈ ಮಹಾನ್ ಕ್ರೀಡಾಳುಗಳ ಹೊರತು, ಹಾಕಿ ಕಥೆ ಅಪೂರ್ಣವಾಗಿರುತ್ತದೆ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಬಗ್ಗೆ ವಿಶ್ವವೇ ಅರಿತಿದೆ. ಅವರ ನಂತರ ಬಲ್ವಿಂದರ್ ಸಿಂಗ್ ಸಿನಿಯರ್, ಲೆಸ್ಲಿ ಕ್ಲಾಡಿಯಸ್, ಮೊಹಮ್ಮದ್ ಶಾಹೀದ್, ಉಧಂ ಸಿಂಗ್ ರಿಂದ ಹಿಡಿದು ಧನ್ರಾಜ್ ಪಿಳ್ಳೈವರೆಗೂ ಹಾಕಿ ಕ್ರೀಡೆ ಬಹು ದೊಡ್ಡ ಹಾದಿಯನ್ನು ಕ್ರಮಿಸಿದೆ. ಇಂದಿಗೂ ಟೀಂ ಇಂಡಿಯಾದ ಆಟಗಾರರು ತಮ್ಮ ಶ್ರಮ ಮತ್ತು ಸಮರ್ಪಣಾ ಭಾವದಿಂದಾಗಿ ದೊರೆಯುತ್ತಿರುವ ಯಶಸ್ಸಿನಿಂದ ಹಾಕಿಯ ಹೊಸ ಪೀಳಿಗೆಯನ್ನು ಪ್ರೇರೆಪಿಸುತ್ತಿದ್ದಾರೆ. ಕ್ರೀಡಾ ಪ್ರೇಮಿಗಳಿಗೆ ರೋಮಾಂಚಕ ಆಟವನ್ನು ನೋಡುವ ಒಂದು ಒಳ್ಳೇ ಅವಕಾಶ ಇದಾಗಿದೆ. ಭುವನೇಶ್ವರ್ ಗೆ ತೆರಳಿ ಕೇವಲ ಭಾರತೀಯ ತಂಡಕ್ಕೆ ಉತ್ಸಾಹ ತುಂಬುವುದರ ಜೊತೆಗೆ ಇತರ ತಂಡಗಳನ್ನೂ ಪ್ರೋತ್ಸಾಹಿಸಿ. ಒಡಿಶಾ ಒಂದು ಗೌರವಪೂರ್ಣ ಇತಿಹಾಸ ಹೊಂದಿದ್ದು ಸಮೃದ್ಧ ಸಾಂಸ್ಕೃತಿಕ ಪರಂಪರೆಯುಳ್ಳ ರಾಜ್ಯವಾಗಿದೆ. ಅಲ್ಲಿಯ ಜನ ಕೂಡಾ ಬಹಳ ಉತ್ಸಾಹಿಗಳು. ಕ್ರೀಡಾ ಪ್ರೇಮಿಗಳಿಗೆ ಇದು ಒಡಿಶಾ ದರ್ಶನ ಪಡೆಯುವ ಒಂದು ಒಳ್ಳೇ ಅವಕಾಶವಾಗಿದೆ. ಈ ಸಮಯದಲ್ಲಿ ಕ್ರೀಡೆಗಳನ್ನು ಆನಂದಿಸುವುದರ ಜೊತೆಗೆ ಕೊನಾರ್ಕ್ ನ ಸೂರ್ಯ ದೇವಾಲಯ, ಪುರಿಯ ಭಗವಾನ್ ಜಗನ್ನಾಥ ಮಂದಿರ ಮತ್ತು ಚಿಲ್ಕಾ ಲೇಕ್ ಸೇರಿದಂತೆ ಅನೇಕ ವಿಶ್ವ ಪ್ರಸಿದ್ಧ ಮತ್ತು ಪವಿತ್ರ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಭಾರತೀಯ ಪುರುಷ ಹಾಕಿ ತಂಡಕ್ಕೆ ಶುಭ ಹಾರೈಸುತ್ತೇನೆ ಮತ್ತು 125 ಕೋಟಿ ಭಾರತೀಯರು ಅವರೊಂದಿಗೆ ಅವರ ಬೆಂಬಲವಾಗಿ ನಿಂತಿದ್ದಾರೆ ಎಂಬ ವಿಶ್ವಾಸವನ್ನು ಮೂಡಿಸುತ್ತೇನೆ. ಮತ್ತು ಭಾರತಕ್ಕೆ ಆಗಮಿಸುವ ವಿಶ್ವದ ಎಲ್ಲ ತಂಡಗಳಿಗೂ ಶುಭ ಹಾರೈಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ಸಾಮಾಜಿಕ ಕೆಲಸಗಳಿಗೆ ಜನರು ಹೇಗೆ ಮುಂದೆ ಬರುತ್ತಿದ್ದಾರೆ ಮತ್ತು ಸ್ವಯಂ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಎಂಬುದು ಇಡೀ ದೇಶದ ಜನತೆಗೆ ಪ್ರೇರಣೆಯನ್ನು ನೀಡುತ್ತಿದೆ ಮತ್ತು ಹುರುಪು ತುಂಬುವಂಥದ್ದಾಗಿದೆ. ಸೇವಾ ಪರಮೋಧರ್ಮ ಎಂಬುದು ಭಾರತೀಯ ಪರಂಪರೆಯಾಗಿದೆ. ನಮ್ಮ ಪರಂಪರೆ ನೂರಾರು ವರ್ಷಗಳಷ್ಟು ಪುರಾತನವಾಗಿದ್ದು ಸಮಾಜದ ಮೂಲೆ ಮೂಲೆಯಲ್ಲಿ, ಪ್ರತಿ ಕ್ಷೇತ್ರದಲ್ಲಿ ಇದರ ಸುಗಂಧವನ್ನು ನಾವು ಇಂದಿಗೂ ಅನುಭವಿಸಬಹುದಾಗಿದೆ. ಆದರೆ ಹೊಸ ಯುಗದಲ್ಲಿ, ಹೊಸ ರೀತಿಯಲ್ಲಿ, ಹೊಸ ಪೀಳಿಗೆ, ಹೊಸ ಹುರುಪು ಉತ್ಸಾಹದಿಂದ, ಹೊಸ ಕನಸುಗಳೊಂದಿಗೆ ಈ ಕೆಲಸಗಳನ್ನು ಮಾಡಲು ಇಂದು ಮುಂದೆ ಬರುತ್ತಿದೆ. ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ, ಅಲ್ಲಿ ಒಂದು ಪೋರ್ಟಲ್ ಚಾಲನೆ ನೀಡಲಾಯಿತು. ಅದರ ಹೆಸರು ‘ಸೆಲ್ಫ್ ಫಾರ್ ಸೊಸೈಟಿ’, ಮೈ ಗೌ ಮತ್ತು ದೇಶದ ಐ.ಟಿ. ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮ ಸಾಮಾಜಿಕ ಕೆಲಸಗಳನ್ನು ಮಾಡಲು ತಮ್ಮ ಉದ್ಯೋಗಿಗಳನ್ನು ಪ್ರೊತ್ಸಾಹಿಸಲು ಮತ್ತು ಅವರಿಗೆ ಇಂಥ ಅವಕಾಶಗಳನ್ನು ಒದಗಿಸಲು ಈ ಪೋರ್ಟಲ್ ನ್ನು ಪ್ರಾರಂಭಿಸಲಾಗಿದೆ. ಈ ಕೆಲಸಕ್ಕಾಗಿ ಅವರಲ್ಲಿರುವ ಉತ್ಸಾಹ ಮತ್ತು ಆಸ್ಥೆ ಪ್ರತಿ ಭಾರತೀಯನಿಗೂ ಹೆಮ್ಮೆ ಮೂಡಿಸುವಂಥದ್ದಾಗಿದೆ. ಐಟಿ ಟು ಸೊಸೈಟಿ, ನಾನು ಅಲ್ಲ ನಾವು, ಅಹಂ ಅಲ್ಲ ವಯಮ್, ಸ್ವ ದಿಂದ ಸಮಷ್ಟಿ ಯ ಯಾತ್ರೆಯ ಸುಗಂಧ ಇದರಲ್ಲಿದೆ. ಯಾರೋ ಮಕ್ಕಳಿಗೆ ವಿದ್ಯಭ್ಯಾಸ ಮಾಡಿಸುತ್ತಿದ್ದಾರೆ ಇನ್ನಾರೋ ಹಿರಿಯರಿಗೆ ಓದು ಹೇಳಿಕೊಡುತ್ತಿದ್ದಾರೆ, ಯಾರೋ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಇನ್ನಾರೋ ರೈತರಿಗೆ ಸಹಾಯ ಮಾಡುತ್ತಿದ್ದಾರೆ ಆದರೆ ಇದೆಲ್ಲವನ್ನೂ ಮಾಡುವುದರ ಹಿಂದೆ ಯಾವುದೇ ಲಾಲಸೆಯಿಲ್ಲ. ಬದಲಾಗಿ ಸಮರ್ಪಣೆ ಮತ್ತು ಸಂಕಲ್ಪದ ನಿಸ್ವಾರ್ಥ ಭಾವ ತುಂಬಿದೆ. ಓರ್ವ ಯುವಕ ದಿವ್ಯಾಂಗರ ವೀಲ್ ಚೇರ್ ಬಾಸ್ಕೆಟ್ ಬಾಲ್ ತಂಡಕ್ಕೆ ಸಹಾಯ ಮಾಡಲೆಂದು ಸ್ವತಃ ವೀಲ್ ಚೇರ್ ಬಾಸ್ಕೆಟ್ ಬಾಲ್ ಕಲಿತ. ಈ ಉತ್ಸಾಹ, ಇಂಥ ಸಮರ್ಪಣೆ ಇದೆಲ್ಲ ಅಭಿಯಾನ ರೀತಿಯ ಚಟುವಟಿಕೆಯಾಗಿದೆ. ಪ್ರತಿ ಭಾರತೀಯನಿಗೂ ಇದರ ಬಗ್ಗೆ ಹೆಮ್ಮೆ ಎನ್ನಿಸುವುದಿಲ್ಲವೇ! ಖಂಡಿತ ಅನ್ನಿಸುತ್ತದೆ. ನಾನ ಅಲ್ಲ ನಾವು ಎಂಬ ಭಾವನೆ ನಮ್ಮೆಲ್ಲರಿಗೂ ಪ್ರೇರಣೆ ನೀಡುತ್ತದೆ.
ನನ್ನ ಪ್ರೀತಿಯ ಸೋದರ-ಸೋದರಿಯರೆ,
ಈ ಬಾರಿಯ ‘ಮನ್ ಕೀ ಬಾತ್’ಗಾಗಿ ತಮ್ಮ ಸಲಹೆಗಳನ್ನು ಗಮನಿಸುತ್ತಿದ್ದಾಗ ನನಗೆ ಪುದುಚೇರಿಯ ಶ್ರೀ ಮನೀಶ್ ಮಹಾಪಾತ್ರ ಅವರ ಒಂದು ರೋಚಕ ಟಿಪ್ಪಣಿ ದೃಷ್ಟಿಗೆ ಬಿತ್ತು. ಅವರು MyGov.ನಲ್ಲಿ ಬರೆದಿದ್ದರು. “ ದಯಮಾಡಿ, ಭಾರತದ ಬುಡಕಟ್ಟು ಜನಾಂಗ, ಅವರ ಸಂಪ್ರದಾಯ ಮತ್ತು ಪರಂಪರೆಗಳು ಪ್ರಕೃತಿಯ ಜೊತೆಗಿನ ಸಹಬಾಳ್ವೆಗೆ ಯಾವರೀತಿ ಸರ್ವಶ್ರೇಷ್ಠ ಉದಾಹರಣೆಯಾಗಿವೆ ಎಂಬುದರ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತನಾಡಿ” ಎಂದು ಬರೆದಿದ್ದರು. ಸುಸ್ಥಿರ ಅಭಿವೃದ್ಧಿಗೆ ಅವರ ಸಂಪ್ರದಾಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮದಾಗಿಸಿಕೊಳ್ಳುವ ಅವಶ್ಯಕತೆಯಿದೆ, ಅವರಿಂದ ಕೆಲವನ್ನು ಕಲಿಯುವ ಅಗತ್ಯವಿದೆ.
ಮನೀಶ್ ಜಿ, – ಈ ವಿಷಯವನ್ನು ಮನದ ಮಾತಿನಲ್ಲಿ ಕೇಳುಗರ ನಡುವೆ ಪ್ರಸ್ತಾವಿಸಲು ಸೂಚಿಸಿದ್ದಕ್ಕೆ ತಮ್ಮನ್ನು ಅಭಿನಂದಿಸುತ್ತೇನೆ. ಇದುಎಂತಹ ವಿಚಾರವೆಂದರೆ, / ಇದು ನಮ್ಮ ಹೆಮ್ಮೆಯ ಪ್ರಾಚೀನತೆಯ ಮತ್ತು ಸಂಸ್ಕೃತಿಯ ಕಡೆಗೆ ದೃಷ್ಟಿ ಹಾಯಿಸಲು ಪ್ರೇರೇಪಿಸುತ್ತದೆ. ಇಂದು ಪ್ರಪಂಚವು ವಿಶೇಷವಾಗಿ ಪಶ್ಚಿಮ ದೇಶಗಳು ಪರಿಸರ-ಸಂರಕ್ಷಣೆಯ ವಿಚಾರವಾಗಿಚರ್ಚೆ ಮಾಡುತ್ತದೆ ಮತ್ತು ಸಂತುಲಿತ ಜೀವನಶೈಲಿಗಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿವೆ. ಅದೇ ರೀತಿ ನಮ್ಮ ಭಾರತದೇಶವೂ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ಆದರೆ ಇದರ ಪರಿಹಾರಕ್ಕೆ ನಮ್ಮ ಸಮುದಾಯದಲ್ಲಿಯೇ ದೃಷ್ಟಿ ಹಾಯಿಸಬೇಕಿದೆ. ನಮ್ಮ ಸಮೃದ್ಧ ಇತಿಹಾಸ, ಪರಂಪರೆಯನ್ನು ಗಮನಿಸಬೇಕಿದೆ. ಮತ್ತು ವಿಶೇಷವಾಗಿ ನಮ್ಮ ಬುಡಕಟ್ಟು ಸಮುದಾಯಗಳ ಜೀವನಶೈಲಿಯನ್ನು ಅರಿತುಕೊಳ್ಳಬೇಕಿದೆ.
ಪ್ರಕೃತಿಯೊಂದಿಗೆ ಸಾಮರಸ್ಯ ಕಾಯ್ದುಕೊಳ್ಳುವುದು ನಮ್ಮ ಆದಿವಾಸಿ ಸಮುದಾಯಗಳ ಸಂಸ್ಕೃತಿಯಲ್ಲೇ ಬೆಸೆದುಕೊಂಡಿದೆ.ನಮ್ಮ ಆದಿವಾಸಿ ಸೋದರ-ಸೋದರಿಯರು ಗಿಡ-ಮರಗಳ ಮತ್ತು ಪುಷ್ಪಗಳ ಆರಾಧನೆಯನ್ನೂ ದೇವತಾರಾಧನೆಯಂತೆಯೇ ಮಾಡುತ್ತಾರೆ.
• ಮಧ್ಯಭಾರತದ ಭಿಲ್ ಬುಡಕಟ್ಟಿನಲ್ಲಿ ವಿಶೇಷವಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ಘಡದ ಜನರು ಅಶ್ವತ್ಥ ವೃಕ್ಷ ಮತ್ತು ಅರ್ಜುನ ವೃಕ್ಷದಂತಹ ಮರಗಳನ್ನು ಶ್ರದ್ಧೆಯಿಂದ ಪೂಜಿಸುತ್ತಾರೆ.
• ರಾಜಸ್ಥಾನದಂತಹ ಮರುಭೂಮಿ ಪ್ರದೇಶದಲ್ಲೂ ಸಹ ಬಿಷ್ಣೋಈ ಪಂಗಡದವರು [ವೈಷ್ಣವರು] ನಮಗೆ ಪರಿಸರದ ರಕ್ಷಣೆಯ ಪಥವನ್ನೇ ತೋರಿಸಿದ್ದಾರೆ. ವಿಶೇಷವಾಗಿ ವೃಕ್ಷಗಳ ಸಂರಕ್ಷಣೆಯ ಸಂದರ್ಭದಲ್ಲಿ ಪ್ರಾಣವನ್ನಾದರೂ ತ್ಯಾಗಮಾಡಿಯಾರು, ಆದರೆ ಒಂದೇ-ಒಂದು ಮರಕ್ಕೂ ಹಾನಿಯುಂಟಾಗುವುದು ಅವರಿಗೆ ಒಪ್ಪಿಗೆಯಾಗುವ ವಿಷಯವಲ್ಲ.
• ಅರುಣಾಚಲದ ಮಿಶ್ಮೀ ಜನಾಂಗ ಹುಲಿಗಳೊಡನೆ ತಮಗೆ ಅವಿನಾಭಾವ ಸಂಬಂಧವಿರುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ವ್ಯಾಘ್ರಗಳನ್ನು ತಮ್ಮ ಸೋದರ-ಸೋದರಿಯರೆಂದು ಭಾವಿಸುತ್ತಾರೆ.
• ನಾಗಾಲ್ಯಾಂಡ್ನಲ್ಲೂ ಸಹ ಹುಲಿಯನ್ನು ‘ವನರಕ್ಷಕ’ನ ರೂಪದಲ್ಲಿ ನೋಡಲಾಗುತ್ತದೆ.
• ಮಹಾರಾಷ್ಟ್ರದ ವಾರ್ಲಿ ಸಮುದಾಯದಜನ ಹುಲಿಯನ್ನು ಅತಿಥಿಯೆಂದು ಭಾವಿಸುತ್ತಾರೆ. ಅವರಿಗೆ ಹುಲಿಯ ಉಪಸ್ಥಿತಿ ಸಮೃದ್ಧಿಯನ್ನು ತರುವುದಾಗಿದೆ.
• ಮಧ್ಯ ಭಾರತದ ಕೋಲ ಸಮುದಾಯದವರಲ್ಲಿ ಒಂದು ನಂಬಿಕೆಯಿದೆ. ಅವರಿಗೆ ಅವರ ಭಾಗ್ಯವೇ ಹುಲಿಯೊಡನೆ ಸಂಬಂಧಿಸಿದೆ. ಒಂದು ವೇಳೆಗೆ ಹುಲಿಗಳಿಗೆ ಒಂದು ಬಾರಿಗೆ ಆಗುವಷ್ಟು ಆಹಾರ [ನೈವೇದ್ಯ] ದೊರಕದಿದ್ದಲ್ಲಿ, ಆ ಗ್ರಾಮದ ಜನತೆಯೂ ಉಪವಾಸ ಇರಬೇಕಾಗುತ್ತದೆ. ಇದು ಅವರ ಶ್ರದ್ಧಾವಂತಿಕೆ.
• ಮಧ್ಯ ಭಾರತದ ಗೊಂಡ ಬುಡಕಟ್ಟಿನ ಸಮುದಾಯ ಮೀನು ತಳಿ ಸಂವರ್ಧನೆಯ [breeding season ] ಕಾಲದಲ್ಲಿ ಕೇಥನ್ ನದಿಯ ಕೆಲವು ಭಾಗಗಳಲ್ಲಿ ಮೀನುಗಾರಿಕೆಯನ್ನು ನಿಲ್ಲಿಸುತ್ತಾರೆ. ಈ ಪ್ರದೇಶಗಳನ್ನು ಅವರು ಮತ್ಸ್ಯಗಳ ಆಶ್ರಯತಾಣ ಎಂಬುದಾಗಿ ಭಾವಿಸುತ್ತಾರೆ. ಈ ವಾಡಿಕೆಯ ಅನುಸರಣಯಿಂದಾಗಿ ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ದೊರಕುತ್ತವೆ.
• ಆದಿವಾಸಿ ಸಮುದಾಯ ತಮ್ಮ ಮನೆಗಳನ್ನು ನೈಸರ್ಗಿಕ ವಸ್ತುಗಳಿಂದಲೇ ನಿರ್ಮಿಸಿಕೊಳ್ಳುತ್ತಾರೆ. ಇವು ಗಟ್ಟಿಮುಟ್ಟಾಗಿ ಇರುವುದರ ಜೊತೆಗೆ ಪರಿಸರಕ್ಕೆ ಪೂರಕವೂ ಆಗುತ್ತವೆ.
• ದಕ್ಷಿಣ ಭಾರತದ ನೀಲಗಿರಿ ಪ್ರಸ್ಥದ ಏಕಾಂತ ಕ್ಷೇತ್ರಗಳಲ್ಲಿ ಚಿಕ್ಕ ಅಲೆಮಾರಿ ‘ತೋಡಾ’ ಸಮುದಾಯದ ತಾಣಗಳಲ್ಲಿ ಸ್ಥಳೀಯವಾಗಿ ದೊರಕುವ ಸಾಮಗ್ರಿಗಳಿಂದಲೇ, ಪರಂಪರಾನುಗತ ರೀತಿಯಲ್ಲೇ ನಿರ್ಮಿತವಾಗಿರುತ್ತವೆ.
ನನ್ನ ಪ್ರೀತಿಯ ಸೋದರ-ಸೋದರಿಯರೆ,
ಸತ್ಯ ಸಂಗತಿಯೆಂದರೆ ಆದಿವಾಸಿ ಸಮುದಾಯವು ಬಹಳ ಶಾಂತಿಪೂರ್ಣವಾಗಿ ಮತ್ತು ತಮ್ಮ-ತಮ್ಮಲ್ಲೇ ಬೆರೆತು ಸಹಬಾಳ್ವೆ ನಡೆಸುವುದರಲ್ಲೇ ವಿಶ್ವಾಸವಿರಿಸುತ್ತಾರೆ. ಆದರೆ ಯಾರಾದರೂ ಪ್ರಾಕೃತಿಕ ಸಂಪನ್ಮೂಲಗಳಿಗೆ ಹಾನಿಯುಂಟುಮಾಡುತ್ತಿದ್ದರೆ, ಆಗ ತಮ್ಮ ಅಧಿಕಾರಕ್ಕಾಗಿ ಹೋರಾಡಲೂ ಅಂಜುವುದಿಲ್ಲ. ನಮ್ಮ ಪ್ರಥಮ ಸ್ವತಂತ್ರ ಸೇನಾನಿಗಳಲ್ಲಿ ಆದಿವಾಸಿ ಸಮುದಾಯದ ಜನರೇ ಇದ್ದರು ಎಂಬುದು ಆಶ್ಚರ್ಯಕರ ಸಂಗತಿಯಲ್ಲ. ಆದರಣೀಯ ಬಿರ್ಸಾ ಮುಂಡಾನನ್ನು ಯಾರು ತಾನೇ ಮರೆಯಲು ಸಾಧ್ಯ. ಅರಣ್ಯ ಭೂಮಿಯ ರಕ್ಷಣೆಗಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಭೀಕರ ಸಂಘರ್ಷಕ್ಕೆ ಇಳಿದಿದ್ದವನು.
ನಾನು ಯಾವ ವಿಚಾರವನ್ನು ಪ್ರಸ್ತಾಪಿಸಿದ್ದೇನೋ ಅದರ ಪಟ್ಟಿ ಸುದೀರ್ಘವಾಗಿಯೇ ಇದೆ. ಪ್ರಕೃತಿಯೊಡನೆ ಸಾಮರಸ್ಯವನ್ನು ಉಳಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಆದಿವಾಸಿ ಸಮುದಾಯವು ನಮಗೆ ವಿಷಯಗಳನ್ನು ತಿಳಿಸಿದ ಅನೇಕ ಉದಾಹರಣೆಗಳಿವೆ. ಇಂದು ನಮ್ಮ ಬಳಿ ಏನು ವನಸಂಪತ್ತು ಉಳಿದಿದೆ, ಅದಕ್ಕೆದೇಶವು ನಮ್ಮ ಆದಿವಾಸಿ ಜನಾಂಗಕ್ಕೆ ಋಣಿಯಾಗಿದೆ. ಬನ್ನಿ. ಅವರ ಬಗ್ಗೆ ನಮ್ಮಆದರವನ್ನು ವ್ಯಕ್ತಪಡಿಸೋಣ. [ಅವರಿಗೆ ಗೌರವ ಸಲ್ಲಿಸೋಣ]
ಪ್ರಿಯದೇಶಬಾಂಧವರೆ,
‘ಮನದ ಮಾತಿನಲ್ಲಿ’ ನಾವು ಸಮಾಜಕ್ಕಾಗಿಅಸಾಮಾನ್ಯ ಕೆಲಸ ಮಾಡಿದ ವ್ಯಕ್ತಿ-ಸಂಸ್ಥೆಗಳ ಬಗ್ಗೆ ಮಾತನಾಡುತ್ತೇವೆ. ನೋಡುವುದಕ್ಕೆ ಸಾಧಾರಣ ಎನಿಸುತ್ತದೆ ಆದರೆ ವಾಸ್ತವದಲ್ಲಿ ನಮ್ಮ ಮನಸ್ಥಿತಿಯನ್ನು ಬದಲಿಸಲು, ಸಮಾಜದದೃಷ್ಟಿಕೋನವನ್ನು ಬದಲಿಸಲು ಅದು ಬಹಳ ಆಳವಾದ ಪ್ರಭಾವ ಬೀರುತ್ತದೆ.
ಕೆಲವು ದಿನಗಳ ಹಿಂದೆ ನಾನು ಪಂಜಾಬ್ನ ಕೃಷಿಕ ಸೋದರ ಗುರ್ಬಚನ್ ಸಿಂಗ್ ಬಗ್ಗೆ ಓದುತ್ತಿದ್ದೆ. ಓರ್ವ ಸಾಮಾನ್ಯ ಆದರೆ ಪರಿಶ್ರಮೀ ರೈತ ಗುರ್ಬಚನ್ ಸಿಂಘ್ನ ಮಗನ ಮದುವೆಯಿತ್ತು.ಈ ವಿವಾಹದ ಪೂರ್ವದಲ್ಲಿಗುರ್ಬಚನ್ ವಧುವಿನ ಮಾತಾಪಿತರೊಡನೆ‘ಮದುವೆ ಸರಳವಾಗಿ ಮಾಡೋಣ’ಎಂದೇ ಹೇಳಿದ್ದರು. ‘ಇದನ್ನು ಅತ್ಯಂತ ಸರಳ ಸಂದರ್ಭವಾಗೇ ಮಾಡೋಣ. ಮೆರವಣಿಗೆ ಇರಬಹುದು, ಬೇರಾವುದೇ ಸಮಾರಂಭವಿರಲಿ, ಯಾವುದಕ್ಕೂ ಹೆಚ್ಚು ಖರ್ಚು ಮಾಡುವ ಅವಶ್ಯಕತೆಯಿಲ್ಲ’ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಒಂದು ಶರತ್ತು ಇದೆ ಎಂದರು.
ಇಂದು ಮದುವೆಯ ಸಂದರ್ಭದಲ್ಲಿ ಷರತ್ತಿನ ಮಾತು ಬಂತೆಂದರೆ, ಸಾಮಾನ್ಯವಾಗಿ ಎದುರಿನವರು ಯಾವುದೋ ದೊಡ್ಡದಾದ ಬೇಡಿಕೆಯನ್ನಿಡಬಹುದು ಎಂದೆನಿಸಬಹುದು. ಬಹುಶಃ ವಧುವಿನ ಕಡೆಯವರಿಗೆ ಕಷ್ಟ ತಂದೊಡ್ಡುವ ರೀತಿಯಲ್ಲಿ ಬೃಹತ್ ವಸ್ತುವಿನ ಬೇಡಿಕೆಯನ್ನೇ ಇಡಬಹುದು ಎಂದೇ ಭಾವಿಸುತ್ತೇವೆ. ಆದರೆ ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಸೋದರಗುರ್ಬಚನ್ ಸಿಂಘ್ ಅತ್ಯಂತ ಸರಳ ಕೃಷಿಕ. ಅವರು ವಧುವಿನ ತಂದೆಗೆ ಹೇಳಿದ ವಿಷಯ, ವಿಧಿಸಿದ ಷರತ್ತನ್ನು ನಮ್ಮ ಸಮಾಜಕ್ಕೆ ಬಲ, ಪುಷ್ಟಿ ನೀಡುವಂಥದ್ದಾಗಿದೆ. ಗುರ್ಬಚನ್ ಸಿಂಘ್ ವಧುವಿನ ತಂದೆಗೆ “ನೀವು ನಿಮ್ಮ ಜಮೀನಿನಲ್ಲಿ ಬೆಳೆಯುವ ಕಳೆ ಸೋಗೆಯನ್ನು ಸುಟ್ಟುಹಾಕುವುದಿಲ್ಲ ಎಂದು ಮಾತುಕೊಡಿ” ಎಂದು ಕೇಳಿದರು. ಈ ಮಾತಿಗೆ ಸಾಮಾಜಿಕವಾಗಿ ಎಂತಹ ಶಕ್ತಿಯಿದೆ ಎಂಬುದನ್ನು ನೀವು ಕಲ್ಪನೆ ಮಾಡಿಕೊಳ್ಳಬಹುದು.
ಗುರ್ಬಚನ್ ಸಿಂಘ್ರ ಈ ಮಾತು ಬಹಳ ಸಾಧಾರಣ ಎನಿಸಿದರೂ, ಅವರ ವ್ಯಕ್ತಿತ್ವದ ವೈಶಾಲ್ಯತೆಯು ತಿಳಿಯುತ್ತದೆ. ನಮ್ಮ ಸಮಾಜದಲ್ಲಿ ಎಷ್ಟೋ ಪರಿವಾರಗಳು ವೈಯಕ್ತಿಕ ವಿಚಾರಗಳನ್ನು ಸಮಾಜೋಪಯೋಗಿ ಪ್ರಸಂಗಗಳಾಗಿ ಪರಿವರ್ತಿಸಿರುವುದನ್ನು ಕಾಣುತ್ತೇವೆ. ಶ್ರೀಮಾನ್ ಗುರ್ಬಚನ್ ಸಿಂಘರ ಪರಿವಾರ ಅಂತಹ ಒಂದು ದೃಷ್ಟಾಂತವನ್ನು [ಆದರ್ಶವನ್ನು] ನಮ್ಮ ಮುಂದಿರಿಸಿದೆ.
ನಾನು ಪಂಜಾಬ್ನ ಮತ್ತೊಂದು ಹಳ್ಳಿ ನಾಭಾದ ಹತ್ತಿರ ಇರುವ ಕಲ್ಲರ್ ಮಾಜ್ರಾ ಬಗ್ಗೆ ಓದಿದೆ. ಕಲ್ಲರ್ ಮಾಜ್ರಾದ ಜನ ಭತ್ತದ ಸೋಗೆಯನ್ನು ಸುಡುವುದರ ಬದಲು, ಭೂಮಿಯನ್ನು ಉಳುಮೆ ಮಾಡಿ ಮಣ್ಣಿನಲ್ಲೇ ಬೆರೆಸಿಬಿಡುತ್ತಾರೆ. ಅದಕ್ಕಾಗಿ ಯಾವ ತಂತ್ರಜ್ಞಾನವನ್ನು ಬಳಸಬೇಕೋ ಅದನ್ನು ಅವಶ್ಯವಾಗಿ ಬಳಸುತ್ತಾರೆ.
ಸಹೋದರ ಗುರ್ಬಚನ್ ಸಿಂಘ್ ಗೆ ಅಭಿನಂದನೆ. ಕಲ್ಲರ್ ಮಾಜ್ರಾ ಮತ್ತು ಆ ಕ್ಷೇತ್ರದಲ್ಲಿ ವಾತಾವರಣವನ್ನು ಸ್ವಚ್ಛವಾಗಿಡುವುದಕ್ಕೆ ಯಾರ್ಯಾರು ಒಳ್ಳೇ ಪ್ರಯತ್ನವನ್ನು ಮಾಡುತ್ತಿದ್ದಾರೋ ಅವರೆಲ್ಲರಿಗೂ ಅಭಿನಂದನೆಗಳು. ತಾವೆಲ್ಲರೂ ಭಾರತದ ಸ್ವಚ್ಛಜೀವನ ಶೈಲಿಯ ಪರಂಪರೆಯ ಉತ್ತರಾಧಿಕಾರಿಯರೂಪದಲ್ಲಿ ಮುಂದೆ ನಡೆಯುತ್ತಿದ್ದೀರಿ.ಯಾವರೀತಿ ಹನಿ-ಹನಿ ನೀರು ಸೇರಿ ಸಾಗರವಾಗುತ್ತದೋ, ಅದೇ ರೀತಿ ಚಿಕ್ಕ-ಚಿಕ್ಕಜಾಗೃತ, ಸಕ್ರಿಯ ಹಾಗೂ ಸಕಾರಾತ್ಮಕ ಚಿಂತನೆಯ ಕಾರ್ಯಗಳು ಯಾವಾಗಲೂ ಸಕಾರಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಉನ್ನತ ಪಾತ್ರವನ್ನು ವಹಿಸುತ್ತದೆ.
ನನ್ನ ಪ್ರಿಯ ದೇಶವಾಸಿಗಳೆ, ನಮ್ಮ ಗ್ರಂಥಗಳಲ್ಲಿ ಹೇಳಲಾಗಿದೆ :
ಓಂ ದ್ಯೌಃ ಶಾಂತಿಃ | ಅಂತರಿಕ್ಷ ಶಾಂತಿಃ | ಪೃಥಿವೀ ಶಾಂತಿಃ | ಆಪಃ ಶಾಂತಿಃ |
ಓಷಧಯಃ ಶಾಂತಿಃ | ವನಸ್ಪತಯಃ ಶಾಂತಿಃ | ವಿಶ್ವೇದೇವಾ ಶಾಂತಿಃ |
ಬಹ್ಮ ಶಾಂತಿಃ | ಸರ್ವಮ್ ಶಾಂತಿಃ |
ಶಾಂತಿರೇವ ಶಾಂತಿಃ | ಸಾ ಮಾ ಶಾಂತಿರೇಧಿ ||
ಓಂ ಶಾಂತಿಃ, ಶಾಂತಿಃ , ಶಾಂತಿಃ || ಅಂದರೆ
ಹೇ ಈಶ್ವರ, ಮೂರೂ ಲೋಕಗಳಲ್ಲಿ ಎಲ್ಲೆಡೆಯೂ ಶಾಂತಿ ನೆಲೆಸಲಿ.ನೀರಿನಲ್ಲಿ,ಭೂಮಿಯಲ್ಲಿ, ಆಕಾಶದಲ್ಲಿ, ಅಂತರಿಕ್ಷದಲ್ಲಿ, ಅಗ್ನಿಯಲ್ಲಿ, ಔಷಧಿಗಳಲ್ಲಿ, ಗಾಳಿಯಲ್ಲಿ, ವನಸ್ಪತಿಗಳಲ್ಲಿ, ಉಪವನಗಳಲ್ಲಿ, ಉಪಪ್ರಜ್ಞೆಗಳಲ್ಲಿ, ಸಂಪೂರ್ಣ ಬ್ರಹ್ಮಾಂಡದಲ್ಲಿ ಶಾಂತಿ ಸ್ಥಾಪಿತವಾಗಲಿ.ಜೀವಿಗಳಲ್ಲಿ, ಹೃದಯದಲ್ಲಿ, ನನ್ನಲ್ಲಿ-ನಿನ್ನಲ್ಲಿ, ಜಗತ್ತಿನಕಣ-ಕಣದಲ್ಲಿ, ಎಲ್ಲಕಡೆಯಲ್ಲೂ ಶಾಂತಿ ನೆಲೆಸಲಿ. ಓಂ ಶಾಂತಿಃ, ಶಾಂತಿಃ , ಶಾಂತಿಃ ||
ಎಲ್ಲೇ ಆಗಲಿ, ಯಾವಾಗಲೇ ಆಗಲಿ ವಿಶ್ವ ಶಾಂತಿಯ ವಿಚಾರ ಬಂದಾಗ ಇದಕ್ಕೆ ಸಂಬಂಧಿಸಿದಂತೆ ಭಾರತದ ಹೆಸರು ಮತ್ತು ಕೊಡುಗೆ ಸ್ವರ್ಣಾಕ್ಷರಗಳಲ್ಲಿ ದಾಖಲಾಗಿರುವುದು ಗೋಚರವಾಗುತ್ತದೆ. ಭಾರತಕ್ಕೆ ಈ ವರ್ಷದ ನವಂಬರ್ ಹನ್ನೊಂದನೇ ತಾರೀಖು ಮಹತ್ವದ ದಿನವಾಗಿದೆ. ಏಕೆಂದರೆ, ನವಂಬರ್ 11ಕ್ಕೆ ನೂರು ವರ್ಷಗಳ ಹಿಂದೆ ಮೊದಲ ಜಾಗತಿಕ ಯುದ್ಧ ಅಂತ್ಯಗೊಂಡಿತ್ತು. ಆ ಯುದ್ಧ ಪರಿಸಮಾಪ್ತಿಯಾಗಿಒಂದು ನೂರು ವರ್ಷಗಳು ಆಗಲಿದೆ. ಅಂದರೆ, ಆ ಸಮಯದಲ್ಲಿ ಆದಂತಹ ಭಾರೀ ವಿನಾಶ ಮತ್ತು ಜೀವಹಾನಿಯ ಅಂತ್ಯಕ್ಕೂ ಒಂದು ನೂರು ವರ್ಷಗಳಾಗಲಿವೆ. ಭಾರತಕ್ಕೆ ಪ್ರಥಮ ಜಾಗತಿಕ ಯುದ್ಧ ಒಂದು ಮಹತ್ವಪೂರ್ಣ ಘಟನೆ. ನಿಜಾರ್ಥದಲ್ಲಿ ಗಮನಿಸಿದರೆ ಆ ಯುದ್ಧದಲ್ಲಿ ನೇರವಾಗಿ ನಮ್ಮ ಪಾತ್ರವೇನೂ ಇರಲಿಲ್ಲ. ಇದರ ಹೊರತಾಗಿಯೂ, ನಮ್ಮ ಸೈನಿಕರು ಶೌರ್ಯದಿಂದ ಹೋರಾಡಿದರು.ಮುಖ್ಯ ಪಾತ್ರ ವಹಿಸಿದರು. ಸರ್ವೋಚ್ಚ ಬಲಿದಾನಗೈದರು. ಯುದ್ಧದ ಸನಿವೇಶ ಎದುರಾದರೆ, ಭಾರತೀಯ ಸೈನಿಕರು ಹಿಂದಡಿ ಇಡುವುದಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟರು.ನಮ್ಮ ಸೈನಿಕರುದುರ್ಗಮ ಪ್ರದೇಶಗಳಲ್ಲಿ, ವಿಷಮ ಪರಿಸ್ಥಿತಿಗಳಲ್ಲೂ ಸಹ ತಮ್ಮ ಶೌರ್ಯಪ್ರದರ್ಶಿಸಿದ್ದಾರೆ. ಇದೆಲ್ಲದರ ಹಿಂದೆ ಶಾಂತಿಯ ಮರುಸ್ಥಾಪನೆಯ ಏಕೈಕ ಉದ್ದೇಶವಿತ್ತು
ಪ್ರಥಮ ಜಾಗತಿಕ ಯುದ್ಧದಲ್ಲಿ ಪ್ರಪಂಚವು ವಿನಾಶದ ಭೀಕರತೆಯನ್ನು ಕಂಡಿತು. ಸರಿಸುಮಾರು ಒಂದು ಕೋಟಿ ಸೈನಿಕರು, ಇಷ್ಟೇ ಪ್ರಮಾಣದಲ್ಲಿ ನಾಗರಿಕರೂ ಸಹ ತಮ್ಮ ಪ್ರಾಣ ಕಳೆದುಕೊಂಡರು. ಇದರಿಂದ ಪ್ರಪಂಚವು ಶಾಂತಿಯ ಮಹತ್ವವೇನು ಎಂಬುದನ್ನು ಅರಿತುಕೊಂಡಿತು. ಕಳೆದ ನೂರು ವರ್ಷಗಳಲ್ಲಿ ಶಾಂತಿ ಪದದ ವ್ಯಾಖ್ಯಾನ ಬದಲಾಗಿದೆ. ಇಂದು ಶಾಂತಿ, ಸೌಹಾರ್ದತೆಯ ಅರ್ಥ ಯುದ್ಧ ಆಗದಿರುವುದು ಎಂದಲ್ಲ. ಶಾಂತಿ ಎಂದರೆ ಆತಂಕವಾದವೇ ಮೊದಲ್ಗೊಂಡು, ಜಲ-ವಾಯುವಿನ ಪರಿವರ್ತನೆ, / ಆರ್ಥಿಕ ಪ್ರಗತಿಯಿಂದಾರಂಭಿಸಿ ಸಾಮಾಜಿಕ ನ್ಯಾಯ ಒದಗಿಸುವುದು / ಜಾಗತಿಕ ಸಹಯೋಗ ಮತ್ತು ಸಮನ್ವಯತೆಯೊಂದಿಗೆ ಕೆಲಸ ಮಾಡುವ ಅವಶ್ಯಕತೆಯಿದೆ. ಬಡವರಲ್ಲಿ ಬಡವನ ವಿಕಾಸವನ್ನು ಕಾಣುವುದೇ ಶಾಂತಿಯ ನೈಜ ದ್ಯೋತಕವಾಗಿದೆ.
ನನ್ನ ಪ್ರಿಯ ದೇಶವಾಸಿಗಳೆ,
ನಮ್ಮ ಭಾರತದ ಈಶಾನ್ಯ ಪ್ರದೇಶದ ಸಂಗತಿಯೇ ವಿಭಿನ್ನ. ಪೂರ್ವೋತ್ತರ ಪ್ರದೇಶದ ಪ್ರಾಕೃತಿಕ ಸೌಂದರ್ಯ ಅನುಪಮವಾದದ್ದು. ಇಲ್ಲಿಯ ಜನರೂ ಸಹ ಅಷ್ಟೇ ಪ್ರತಿಭಾಶಾಲಿಗಳು. ನಮ್ಮ ಈಶಾನ್ಯ ಭಾಗವು ಉತ್ತಮ ಕಾರ್ಯಗಳಿಂದ ಗುರುತಿಸಲ್ಪಡುತ್ತದೆ. ಭಾರತದ ಈಶಾನ್ಯ ಪ್ರದೇಶ ಸಾವಯವ ಕೃಷಿಯಲ್ಲಿ ಬಹಳ ಪ್ರಗತಿಯನ್ನು ಸಾಧಿಸಿದೆ. ಕೆಲವು ದಿನಗಳ ಹಿಂದೆ ಸಿಕ್ಕಿಮ್ ರಾಜ್ಯವು ಸುಸ್ಥಿರ ಆಹಾರ ಪದ್ಧತಿಯನ್ನುಉತ್ತೇಜಿಸುತ್ತಿರುವ ಹಿನ್ನೆಲೆಯಲ್ಲಿ 2018 ರ ಪ್ರತಿಷ್ಠಿತ Future Policy Gold Award ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಯು ಸಂಯುಕ್ತ ರಾಷ್ಟ್ರಗಳ F.A.O. ಅಂದರೆ Food & Agriculture Organisation ಕೊಡಮಾಡುವ ಪುರಸ್ಕಾರವಾಗಿದೆ.
ನಿಮಗೆ ಮತ್ತೊಂದು ವಿಚಾರವನ್ನು ಕೇಳಿದರೆ ಸಂತಸವಾಗುತ್ತದೆ. ಈ ವಿಭಾಗದಲ್ಲಿ ಉತ್ತಮ ಕಾರ್ಯಸೂಚಿಯ ಅನುಷ್ಠಾನಕ್ಕಾಗಿ ನೀಡುವ ಈ ಪುರಸ್ಕಾರವು, ‘ಆಸ್ಕರ್’ ಪ್ರಶಸ್ತಿಗೆ ಸಮಾನವಾದದ್ದು. ಇಷ್ಟೇ ಅಲ್ಲ ನಮ್ಮ ಸಿಕ್ಕಿಮ್ ಇಪ್ಪತ್ತೈದು ದೇಶಗಳ ನಾಮನಿರ್ದೇಶಿತ ಐವತ್ತೊಂದು ಪಾಲಿಸಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದಕ್ಕಾಗಿ ನಾನು ಸಿಕ್ಕಿಮ್ ಜನತೆಗೆ ಅನಂತ ಅಭಿನಂದನೆಗಳನ್ನು ತಿಳಿಸುತ್ತೇನೆ.
ಪ್ರಿಯ ದೇಶವಾಸಿಗಳೆ,
ಅಕ್ಟೋಬರ್ ತಿಂಗಳು ಮುಕ್ತಾಯದ ಹಂತದಲ್ಲಿದೆ. ವಾತಾವರಣದಲ್ಲಿಯೂ ಭಾರೀ ಪರಿವರ್ತನೆಯ ಅನುಭವವಾಗುತ್ತಿದೆ. ಈಗಾಗಲೇ ಥಂಡಿಯ, ಛಳಿಯ ದಿನಗಳು ಆರಂಭವಾಗಿವೆ. ವಾತಾವರಣದ ಪರಿವರ್ತನೆಯ ಜೊತೆ-ಜೊತೆಗೇ ಹಬ್ಬಗಳ ಋತು ಬಂದಿದೆ. ಧನ್ತೇರಸ್ [ಧನಲಕ್ಷ್ಮೀಪೂಜೆ] ದೀಪಾವಳಿ, ಭಾಯ್ ದೂಜ್ – ಛಟ್ ಒಂದು ರೀತಿಯಲ್ಲಿ ಹೇಳುವುದಾದರೆ ನವಂಬರ್ ಮಾಸ ಹಬ್ಬಗಳ ಮಾಸವೇ ಆಗಿದೆ. ದೇಶವಾಸಿಗಳೆಲ್ಲರಿಗೆ ಈ ಎಲ್ಲಾ ಹಬ್ಬಗಳಿಗಾಗಿ ಅನೇಕಾನೇಕ ಶುಭಕಾಮನೆಗಳು.
ನಾನು ತಮ್ಮೆಲ್ಲರಲ್ಲಿ ಒತ್ತಾಯಿಸುತ್ತೇನೆ. ಎಲ್ಲಾ ಪರ್ವಗಳಲ್ಲೂ ನಿಮ್ಮಬಗ್ಗೆ ಕಾಳಜಿಯಿರಲಿ. ನಿಮ್ಮ ಆರೋಗ್ಯದ ಕಡೆಗೂ ಗಮನ ನೀಡಿ, ಸಾಮಾಜಿಕ ಹಿತದ ಕಡೆಗೂ ಲಕ್ಷ್ಯವಿರಲಿ. ಈ ಹಬ್ಬಗಳು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭವೂ ಆಗಿದೆ. ಈ ಪರ್ವದಿನವು ನಿಮ್ಮ ಜೀವನದಲ್ಲೂ ಸಹ, ಒಂದು ಅಭಿಯಾನದ ದಿಕ್ಕಿನಲ್ಲಿ ಸಾಗುವ,ಹೊಸ ಸಂಕಲ್ಪ ಕೈಗೊಳ್ಳುವ ಅವಕಾಶದ ದಿನವಾಗಲಿ. ನಿಮ್ಮ ಪ್ರಗತಿ ದೇಶದ ಪ್ರಗತಿಯ ಒಂದು ಮುಖ್ಯ ಭಾಗ. ನಿಮ್ಮಪ್ರಗತಿ ಎಷ್ಟು ಅಧಿಕ ಅಷ್ಟೇ ದೇಶದ ಪ್ರಗತಿಯೂ ಆಗುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ನಮ್ಮ ಭಾರತೀಯ ಸೇನಾ ಪಡೆ, ನಮ್ಮ ಸೈನಿಕರ ಬಗ್ಗೆ ಹೆಮ್ಮೆಯಿರದ ಒಬ್ಬನೇ ಒಬ್ಬ ಭಾರತೀಯನು ಬಹುಶಃ ಇರಲಿಕ್ಕಿಲ್ಲ. ಯಾವುದೇ ಕ್ಷೇತ್ರ, ಜಾತಿ, ಧರ್ಮ, ಪಂಥ, ಅಥವಾ ಭಾಷೆಯವರೇ ಆಗಿರಲಿ ಪ್ರತಿಯೊಬ್ಬ ಭಾರತೀಯರು ನಮ್ಮ ಸೈನಿಕರ ಕುರಿತು ಸಂತೋಷ, ಸಂಭ್ರಮವನ್ನು ವ್ಯಕ್ತಪಡಿಸಲು ಕಾತುರರಾಗಿರುತ್ತಾರೆ. ನಿನ್ನೆ ಭಾರತದ ಎರಡೂ ಕಾಲು ಕೋಟಿ ಜನತೆ ಪರಾಕ್ರಮ ದಿನವನ್ನು ಆಚರಿಸಿದರು. 2016 ರಲ್ಲಿ ಆದ ಸರ್ಜಿಕಲ್ ಸ್ಟ್ರೈಕ್ನ್ನು ಸ್ಮರಿಸಲಾಯಿತು. ಅಂದು ಭಯೋತ್ಪಾದನೆ ನೆಪದಲ್ಲಿ ನಮ್ಮ ದೇಶದ ಮೇಲೆ ನಕಲಿ ಯುದ್ಧವನ್ನು ಮಾಡುವ ಉದ್ಧಟತನ ತೋರಿದವರಿಗೆ ನಮ್ಮ ಸೈನಿಕರು ಸರಿಯಾಗಿ ಎದುರುತ್ತರ ನೀಡಿದ್ದರು. ನಾವು ಎಷ್ಟು ಸಮರ್ಥರು, ನಮ್ಮ ಸೇನೆ ತಮ್ಮ ಜೀವದ ಹಂಗು ತೊರೆದು ಹೇಗೆ ದೇಶದ ಜನತೆಯ ಸಂರಕ್ಷಣೆ ಮಾಡುತ್ತದೆ ಮತ್ತು ನಮ್ಮ ಶಕ್ತಿ ಏನೆಂಬುದು ದೇಶದ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಯುವಜನತೆಗೆ ತಿಳಿಯಲಿ ಎಂಬ ಉದ್ದೇಶದಿಂದ ದೇಶದ ವಿವಿಧ ಭಾಗಗಳಲ್ಲಿ ನಮ್ಮ ಸೇನೆ ಪ್ರದರ್ಶನವನ್ನು ಏರ್ಪಡಿಸಿತ್ತು. ಪರಾಕ್ರಮ ಪರ್ವದಂತಹ ದಿನ ಯುವಜನತೆಗೆ ನಮ್ಮ ಸೇನಾಪಡೆಯ ಗೌರವಯುತ ಇತಿಹಾಸವನ್ನು ನೆನಪಿಸುತ್ತದೆ. ಅಲ್ಲದೆ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಮಗೆ ಪ್ರೇರಣೆಯನ್ನು ನೀಡುತ್ತದೆ. ನಾನು ಕೂಡ ವೀರರ ಭೂಮಿ ರಾಜಸ್ಥಾನದ ಜೋಧ್ಪುಪರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ, ಯಾರೇ ಆಗಲಿ ನಮ್ಮ ದೇಶದ ಶಾಂತಿ ಮತ್ತು ಅಭಿವೃದ್ಧಿಶೀಲ ವಾತಾವರಣವನ್ನು ಕದಡುವ ಪ್ರಯತ್ನವನ್ನು ಮಾಡಿದಲ್ಲಿ ಅವರಿಗೆ ಸೂಕ್ತ ಉತ್ತರ ನೀಡಲು ಈಗ ನಿರ್ಣಯಿಸಲಾಗಿದೆ. ನಾವು ಶಾಂತಿಪ್ರೀಯರು ಮತ್ತು ಶಾಂತಿ ನೆಲೆಸುವಂತೆ ಮಾಡಲು ಬದ್ಧರಾಗಿದ್ದೇವೆ, ಆದರೆ ಗೌರವಪೂರ್ಣವಾಗಿ ಇದನ್ನು ಸಾಧಿಸಬೇಕು ಹೊರತಾಗಿ ಖಂಡಿತ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದರಿಂದಾಗಲೀ ಅಥವಾ ರಾಷ್ಟ್ರದ ಸಾರ್ವಭೌಮತ್ವವನ್ನು ಪಣಕ್ಕಿಟ್ಟಲ್ಲ. ಭಾರತ ಎಂದಿಗೂ ಶಾಂತಿಯ ಬಗ್ಗೆ ಬದ್ಧತೆಯುಳ್ಳದ್ದಾಗಿದ್ದು ಸಮರ್ಪಿತವಾಗಿದೆ. 20 ನೇ ಶತಮಾನದಲ್ಲಿ ನಡೆದ 2 ವಿಶ್ವಯುದ್ಧಗಳು ನಮಗೆ ಯಾವುದೇ ರೀತಿ ಸಂಬಂಧಿಸಿರದಿದ್ದರೂ ನಮ್ಮ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರು ಶಾಂತಿಗಾಗಿ ತಮ್ಮ ಸರ್ವಸ್ವವನ್ನೂ ಬಲಿದಾನಗೈದರು. ಪರರ ಭೂಮಿಯ ಮೇಲೆ ಎಂದಿಗೂ ನಾವು ಕಣ್ಣು ಹಾಕಿಲ್ಲ. ಶಾಂತಿಗಾಗಿ ಮಾತ್ರ ನಮ್ಮ ಹೋರಾಟ. ಕೆಲವೇ ದಿನಗಳ ಹಿಂದೆ ಸೆಪ್ಟೆಂಬರ್ 23 ಕ್ಕೆ ಇಸ್ರೇಲ್ನಿ ಹೈಫಾ ಯುದ್ಧಕ್ಕೆ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಕ್ರಮಣಕಾರರಿಂದ ಹೈಫಾವನ್ನು ಮುಕ್ತಗೊಳಿಸಿದ್ದ ಮೈಸೂರು, ಹೈದ್ರಾಬಾದ್ ಮತ್ತು ಜೋಧಪುರದ ಲ್ಯಾನ್ಸರ್ಸ್ ನ ನಮ್ಮ ವೀರ ಯೋಧರನ್ನು ಸ್ಮರಿಸಲಾಯಿತು. ಇದು ಕೂಡಾ ಶಾಂತಿಯನ್ನು ಕಾಪಾಡಲು ನಮ್ಮ ಸೈನಿಕರು ತೋರಿದ ಪರಾಕ್ರಮವಾಗಿತ್ತು. ಇಂದಿಗೂ ವಿಶ್ವಸಂಸ್ಥೆಯ ವಿಭಿನ್ನ ಶಾಂತಿ ಪರಿಪಾಲನಾ ಪಡೆಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಸೈನಿಕರನ್ನು ಕಳುಹಿಸುವ ದೇಶಗಳಲ್ಲಿ ಭಾರತ ಒಂದಾಗಿದೆ. ನಮ್ಮ ವೀರ ಯೋಧರು ನೀಲಿ ಬಣ್ಣದ ಹೆಲ್ಮೆಟ್ ಧರಿಸಿ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ದಶಕಗಳಿಂದ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ನನ್ನ ಪ್ರಿಯ ದೇಶಬಾಂಧವರೆ, ನೀಲಾಕಾಶದ ವಿಚಾರಗಳು ಬಹಳ ವಿಭಿನ್ನವಾಗಿರುತ್ತವೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಅಂತೆಯೇ ಭಾರತೀಯ ವಾಯುಸೇನೆ ಕೂಡಾ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದೆ. ನಮ್ಮಲ್ಲಿ ಸುರಕ್ಷತಾ ಭಾವವನ್ನು ಮೂಡಿಸಿದೆ. ಗಣರಾಜ್ಯೋತ್ಸವ ಸಮಾರಂಭದ ದಿನದಂದು ಜನರು ಅತ್ಯಂತ ಉತ್ಸುಕತೆಯಿಂದ ಕಾಯುವ ಹಂತ ಫ್ಲೈ ಪಾಸ್ಟ್. ಇದರಲ್ಲಿ ನಮ್ಮ ವಾಯುಪಡೆ ಅದ್ಭುತವಾದ ಕಸರತ್ತಿನೊಂದಿಗೆ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡುತ್ತದೆ. ಅಕ್ಟೋಬರ್ 8 ರಂದು ನಾವು ವಾಯುಸೇನಾ ದಿನವನ್ನು ಆಚರಿಸುತ್ತೇವೆ. 1932 ರಲ್ಲಿ 6 ಜನ ಪೈಲಟ್ಗಂಳು ಮತ್ತು 19 ವಾಯು ಸೈನಿಕರ ಒಂದು ಪುಟ್ಟ ಆರಂಭದೊಂದಿಗೆ ವೃದ್ಧಿಸುತ್ತಾ ಸಾಗಿದ ವಾಯುಸೇನೆ ಇಂದು 21 ನೇ ಶತಮಾನದ ಎಲ್ಲರಿಗಿಂತ ಸಾಹಸಮಯ ಮತ್ತು ಶಕ್ತಿಯುತ ಏರ್ ಫೋರ್ಸ್ಗಇಳ ಪಟ್ಟಿಗೆ ಸೇರಿದೆ. ಇದು ಒಂದು ಸ್ಮರಣೀಯ ಯಾತ್ರೆಯಾಗಿದೆ. ದೇಶಕ್ಕೆ ತಮ್ಮ ಸೇವೆಯನ್ನು ಒದಗಿಸುವ ಏರ್ ವಾರಿಯರ್ಸ್ ಮತ್ತು ಅವರ ಕುಟುಂಬಕ್ಕೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. 1947 ನಲ್ಲಿ ಪಾಕಿಸ್ತಾನದ ಆಕ್ರಮಣಕಾರರು ಒಂದು ಅನಿರೀಕ್ಷಿತ ದಾಳಿಯನ್ನು ಆರಂಭಿಸಿದಾಗ, ಶ್ರೀನಗರವನ್ನು ದಾಳಿಕೋರರಿಂದ ರಕ್ಷಿಸಲು ಭಾರತೀಯ ಸೈನಿಕರು ಮತ್ತು ಯುದ್ಧ ಸಾಮಗ್ರಿಗಳು ಯುದ್ಧ ಭೂಮಿಗೆ ಸಕಾಲದಲ್ಲಿ ತಲುಪುವಂತೆ ಮಾಡಿದ್ದು ಇದೇ ವಾಯುಸೇನೆ. 1965 ರಲ್ಲೂ ವಾಯುಸೇನೆ ಶತೃಗಳಿಗೆ ಸಮರ್ಪಕ ಉತ್ತರ ನೀಡಿದ್ದರು. 1971 ರ ಬಾಂಗ್ಲಾದೇಶದ ಸ್ವಾತಂತ್ರ್ಯದ ಯುದ್ಧವನ್ನು ಯಾರು ತಾನೇ ಅರಿಯರು? 1999 ರಲ್ಲಿ ಕಾರ್ಗಿಲ್ನ್ನು ನುಸುಳುಕೋರರಿಂದ ಮುಕ್ತಗೊಳಿಸುವಲ್ಲಿಯೂ ವಾಯುಸೇನೆಯ ಪಾತ್ರ ಹಿರಿದಾದದ್ದು. ಟೈಗರ್ ಹಿಲ್ನಮಲ್ಲಿ ಹಗಲಿರುಳು ಬಾಂಬ್ ದಾಳಿಯನ್ನು ಮಾಡಿ ಅವರಿಗೆ ಮಣ್ಣು ಮುಕ್ಕಿಸಿತ್ತು. ಪರಿಹಾರ ಮತ್ತು ರಕ್ಷಣಾ ಕಾರ್ಯವಾಗಿರಲಿ ಅಥವಾ ವಿಪತ್ತು ನಿರ್ವಹಣೆಯಾಗಿರಲಿ ನಮ್ಮ ಏರ್ ವಾರಿಯರ್ಸ್ಗುಳ ಸಾಹಸಮಯ ಕೆಲಸಕ್ಕೆ ಸಂಪೂರ್ಣ ದೇಶ ವಾಯುಸೇನೆಗೆ ಕೃತಜ್ಞವಾಗಿದೆ. ಚಂಡಮಾರುತ, ಸುಂಟರಗಾಳಿ, ನೆರೆಯಿಂದ ಹಿಡಿದು ಕಾಡ್ಗಿಚ್ಚಿನಂತಹ ಪ್ರಕೃತಿ ವಿಕೋಪದ ನಿರ್ವಹಣೆ ಮತ್ತು ದೇಶದ ಜನತೆಗೆ ಸಹಾಯ ಒದಗಿಸುವ ಅವರ ಉಮೇದು ಅದ್ಭುತವಾದದ್ದು. ದೇಶದಲ್ಲಿ ಲಿಂಗ ಸಮಾನತೆಯನ್ನು ಖಚಿತಪಡಿಸುವಲ್ಲಿ ವಾಯು ಸೇನೆ ಎಲ್ಲರಿಗೂ ನಿದರ್ಶನವಾಗಿದೆ ಮತ್ತು ದೇಶದ ಹೆಣ್ಣು ಮಕ್ಕಳಿಗೆ ಅವಕಾಶ ಕಲ್ಪಿಸಲು ಪ್ರತ್ಯೇಕ ವಿಭಾಗದ ದ್ವಾರವನ್ನು ಮುಕ್ತವಾಗಿರಿಸಿದೆ. ಈಗ ವಾಯುಸೇನೆ ಮಹಿಳೆಯರಿಗೆ ಅಲ್ಪ ಕಾಲಿಕ ಸೇವಾ ಆಯೋಗ ಜೊತೆಗೆ ಖಾಯಂ ಆಯೋಗದ ಅವಕಾಶವನ್ನೂ ನೀಡುತ್ತಿದೆ. ಇದರ ಘೋಷಣೆಯನ್ನು ಅಗಸ್ಟ 15 ರಂದು ನಾನು ಕೆಂಪುಕೋಟೆಯಿಂದ ಮಾಡಿದ್ದೆ. ಭಾರತ ಸೇನೆಯ ಸಶಸ್ತ್ರ ಪಡೆಯಲ್ಲಿ ಪುರುಷ ಶಕ್ತಿಯ ಜೊತೆ ಜೊತೆಗೆ ಸ್ತ್ರೀ ಶಕ್ತಿಯ ಪಾಲುದಾರಿಕೆಯೂ ಸಮಾನವಾಗಿದೆ ಎಂದು ಭಾರತ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಸ್ತ್ರೀ ಸಶಕ್ತಳಂತೂ ಹೌದು, ಈಗ ಸಶಸ್ತ್ರಳೂ ಆಗುತ್ತಿದ್ದಾಳೆ.
ನನ್ನ ಪ್ರಿಯ ದೇಶಬಾಂಧವರೆ, ಕೆಲ ದಿನಗಳ ಹಿಂದೆ ನಮ್ಮ ನೌಕಾಪಡೆಯ ಅಧಿಕಾರಿಯಾದ ಅಭಿಲಾಶ್ ಟಾಮಿ ಎನ್ನುವವರು ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿದ್ದರು. ಟಾಮಿಯವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು ದೇಶ ಚಿಂತೆಗೀಡಾಗಿತ್ತು. ಅಭಿಲಾಶ್ ಟಾಮಿ ಒಬ್ಬ ಸಾಹಸಿ, ವೀರ ಅಧಿಕಾರಿ ಎಂಬುದು ನಿಮಗೆ ತಿಳಿದಿದೆಯೇ? ಅವರು ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ ಒಂದು ಪುಟ್ಟ ನೌಕೆಯಲ್ಲಿ ವಿಶ್ವ ಪರ್ಯಟನೆ ಕೈಗೊಂಡ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ 80 ದಿನಗಳಿಂದ ಅವರು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಗೋಲ್ಡನ್ ಗ್ಲೋಬ್ ರೇಸ್ ನಲ್ಲಿ ಭಾಗವಹಿಸಲು ಸಮುದ್ರದಲ್ಲಿ ತಮ್ಮ ವೇಗವನ್ನು ಸ್ಥಿರವಾಗಿಟ್ಟುಕೊಂಡು ಮುಂದೆ ಸಾಗುತ್ತಿದ್ದರು, ಹಾಗಿದ್ದರೂ ಭಯಂಕರವಾದ ಸಮುದ್ರದ ಚಂಡಮಾರುತ ಅವರಿಗೆ ಆತಂಕವನ್ನು ತಂದೊಡ್ಡಿತು. ಆದರೆ ಭಾರತೀಯ ನೌಕಾಪಡೆಯ ಈ ವೀರ ಸಮುದ್ರ ಮಧ್ಯದಲ್ಲಿ ಬಹು ದಿನಗಳವರೆಗೆ ಹೋರಾಡುತ್ತಲೇ ಇದ್ದ. ನೀರಿನಲ್ಲಿ ಅನ್ನ ನೀರು ಇಲ್ಲದೆಯೇ ಹೋರಾಡುತ್ತಿದ್ದ. ಆದರೆ ಸೋಲೊಪ್ಪಿಕೊಳ್ಳಲಿಲ್ಲ. ಸಾಹಸ, ಸಂಕಲ್ಪಶಕ್ತಿ, ಪರಾಕ್ರಮದ ಒಂದು ಅದ್ಭುತ ಉದಾಹರಣೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಅಭಿಲಾಷ್ ಅವರನ್ನು ಸಮುದ್ರದಿಂದ ಸುರಕ್ಷಿತವಾಗಿ ಹೊರ ತಂದ ಮೇಲೆ ಫೋನ್ ಮೂಲಕ ಅವರೊಂದಿಗೆ ನಾನು ಮಾತನಾಡಿದ್ದೆ. ಹಿಂದೆಯೂ ಟಾಮಿಯವರನ್ನು ನಾನು ಭೇಟಿ ಮಾಡಿದ್ದೆ. ಇಂಥ ಸಂಕಷ್ಟದಿಂದ ಹೊರ ಬಂದ ಮೇಲೆಯೂ ಅವರಲ್ಲಿ ಇದ್ದಂಥ ಹುರುಪು, ಉತ್ಸಾಹ, ಮತ್ತೊಮ್ಮೆ ಏನಾದರೂ ಪರಾಕ್ರಮದ ಕೆಲಸ ಮಾಡುವ ಸಂಕಲ್ಪವನ್ನು ನನ್ನೊಂದಿಗೆ ಹಂಚಿಕೊಂಡಿದ್ದು ನಿಜಕ್ಕೂ ದೇಶದ ಯುವ ಜನತೆಗೆ ಪ್ರೇರಣಾದಾಯಕವಾಗಿದೆ. ನಾನು ಅಭಿಲಾಷ್ ಟಾಮಿಯವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಮತ್ತು ಅವರ ಈ ಸಾಹಸ, ಪರಾಕ್ರಮ, ಅವರ ಸಂಕಲ್ಪ ಶಕ್ತಿ, ಹೋರಾಡುವ ಮತ್ತು ಗೆಲ್ಲುವ ಶಕ್ತಿ ಖಂಡಿತ ನಮ್ಮ ದೇಶದ ಯುವಜನತೆಗೆ ಪ್ರೇರಣೆಯನ್ನು ನೀಡಲಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶಕ್ಕೆ ಅಕ್ಟೋಬರ್ 2 – ಈ ದಿನದ ಮಹತ್ವ ಏನು ಎಂಬುದನ್ನು ಚಿಕ್ಕ ಚಿಕ್ಕ ಮಕ್ಕಳು ಕೂಡ ತಿಳಿದಿದ್ದಾರೆ. ಈ ವರ್ಷದ 2 ನೇ ಅಕ್ಟೋಬರ್ ಮತ್ತೊಂದು ವಿಶೇಷ ಮಹತ್ವವನ್ನು ಹೊಂದಿದೆ. ಇಂದಿನಿಂದ 2 ವರ್ಷಗಳ ತನಕ ನಾವು ಮಹಾತ್ಮ ಗಾಂಧಿಯವರ 150ನೇ ಜಯಂತಿಯ ಪ್ರಯುಕ್ತ ದೇಶದೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮಹಾತ್ಮಾ ಗಾಂಧಿಯವರ ವಿಚಾರಗಳು ಇಡೀ ಜಗತ್ತನ್ನೇ ಪ್ರೇರಣೆಗೊಳಿಸಿದೆ. ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಆಗಿರಲಿ, ಅಥವಾ ನೆಲ್ಸನ್ ಮಂಡೇಲಾರವರಂತಹ ಮಹಾನ್ ವ್ಯಕ್ತಿಗಳು ಪ್ರತಿಯೊಬ್ಬರೂ ಗಾಂಧೀಜಿಯವರ ವಿಚಾರಗಳಿಂದ ಶಕ್ತಿ ಗಳಿಸಿಕೊಂಡಿದ್ದರು ಮತ್ತು ತಮ್ಮ ಜನತೆಗೆ ಸಮಾನತೆ ಮತ್ತು ಆತ್ಮಗೌರವದ ಹಕ್ಕನ್ನು ಗಳಿಸಿಕೊಡಲು ದೀರ್ಘಕಾಲದ ಹೋರಾಟ ಮಾಡಲು ಶಕ್ತರಾದರು. ಇಂದಿನ ಮನದ ಮಾತಿನಲ್ಲಿ ನಾನು ನಿಮ್ಮೊಂದಿಗೆ ಪೂಜ್ಯ ಬಾಪೂರವರ ಮತ್ತೊಂದು ಮಹತ್ವಪೂರ್ಣ ಕೆಲಸದ ಬಗ್ಗೆ ಚರ್ಚೆ ನಡೆಸಲು ಬಯಸುತ್ತೇನೆ. ಇದನ್ನು ಹೆಚ್ಚು ಹೆಚ್ಹು ದೇಶವಾಸಿಗಳು ತಿಳಿದುಕೊಳ್ಳಬೇಕಾಗಿದೆ. ಸಾವಿರದ ಒಂಬೈನೂರಾ ನಲವತ್ತೊಂದರಲ್ಲಿ ಮಹಾತ್ಮಾ ಗಾಂಧಿಯವರು constructive programme ಅಂದರೆ ರಚನಾತ್ಮಕ ಕಾರ್ಯಕ್ರಮಗಳ ರೂಪದಲ್ಲಿ ಕೆಲವು ವಿಚಾರಗಳನ್ನು ಬರೆಯಲು ಪ್ರಾರಂಭಿಸಿದ್ದರು. ತದನಂತರ 1945ರಲ್ಲಿ ಯಾವಾಗ ಸ್ವಾತಂತ್ರ್ಯ ಸಂಗ್ರಾಮವು ಮಹತ್ವ ಪಡೆದುಕೊಂಡಿತೋ, ಆಗ ಅವರು ಆ ವಿಚಾರಗಳ ತಿದ್ದುಪಡಿ ಮಾಡಲ್ಪಟ್ಟ ಪ್ರತಿಯನ್ನು ತಯಾರು ಮಾಡಿದ್ದರು. ಪೂಜ್ಯ ಬಾಪೂರವರು ರೈತರು, ಹಳ್ಳಿಗಳು, ಕಾರ್ಮಿಕರ ಹಕ್ಕುಗಳ ರಕ್ಷಣೆ, ಸ್ವಚ್ಚತೆ, ಶಿಕ್ಷಣದ ಪ್ರಚಾರ ಹೀಗೆ ಬಹಳಷ್ಟು ವಿಷಯಗಳ ಮೇಲೆ ತಮ್ಮ ವಿಚಾರಗಳನ್ನು ದೇಶವಾಸಿಗಳ ಮುಂದೆ ಇಟ್ಟಿದ್ದಾರೆ. ಇದನ್ನು ‘ಗಾಂಧಿ ಚಾರ್ಟರ್’ (Gandhi Charter) ಎಂದೂ ಸಹ ಕರೆಯುತ್ತಾರೆ. ಪೂಜ್ಯ ಬಾಪೂರವರು ಜನಾನುರಾಗಿಯಾಗಿದ್ದರು. ಜನರ ಜೊತೆ ಬೆರೆಯುವುದು ಮತ್ತು ಅವರನ್ನು ಬೆಸೆಯುವುದು ಬಾಪೂರವರ ವಿಶೇಷತೆಯಾಗಿತ್ತು, ಇದು ಅವರ ಸ್ವಭಾವದಲ್ಲೇ ಸೇರ್ಪಡೆಯಾಗಿತ್ತು. ಇದು ಅವರ ವ್ಯಕ್ತಿತ್ವದಲ್ಲೇ ಎಲ್ಲಕ್ಕಿಂತ ವಿಶಿಷ್ಟವಾದ ರೂಪದಲ್ಲಿ ಪ್ರತಿಯೊಬ್ಬರ ಅನುಭವಕ್ಕೂ ಬಂದಿದೆ. ‘ಯಾವುದೇ ವ್ಯಕ್ತಿಯಾಗಿರಲಿ, ಅವರು ದೇಶಕ್ಕೆ ಅತೀ ಪ್ರಮುಖರು ಮತ್ತು ಅತ್ಯಂತ ಮುಖ್ಯರಾದವರು’ ಎಂದು ಪ್ರತಿಯೊಬ್ಬರಿಗೂ ಅವರು ಮನವರಿಕೆ ಮಾಡಿಕೊಟ್ಟಿದ್ದರು. ಸ್ವಾತಂತ್ರ್ಯ ಸಂಗ್ರಾಮವನ್ನು ಅವರು ಒಂದು ದೊಡ್ಡ ಜನಾಂದೋಳನವನ್ನಾಗಿ ಮಾಡಿದ್ದರು ಎನ್ನುವುದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ಕೊಟ್ಟ ಬಹು ದೊಡ್ಡ ಕೊಡುಗೆ. ಮಹಾತ್ಮಾ ಗಾಂಧಿಯವರ ಆಹ್ವಾನದ ಮೇರೆಗೆ ಸಮಾಜದ ಪ್ರತಿ ಕ್ಷೇತ್ರದ, ಪ್ರತಿ ವರ್ಗದ ಜನರು ಸ್ವಾತಂತ್ರ್ಯ ಸಂಗ್ರಾಮದ ಅಂದೋಳನದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಬಾಪೂರವರು ನಮ್ಮೆಲ್ಲರಿಗೂ ಒಂದು ಪ್ರೇರಣಾದಾಯಕ ಮಂತ್ರವನ್ನು ಕೊಟ್ಟಿದ್ದಾರೆ. ಅದನ್ನು ಸಾಮಾನ್ಯವಾಗಿ ಗಾಂಧೀಜಿಯವರ ಮಂತ್ರ ಎಂದು ಕರೆಯಲಾಗುತ್ತದೆ. ಅದರಲ್ಲಿ ಗಾಂಧೀಜಿಯವರು “ನಾನು ನಿಮಗೆ ಒಂದು ಸಲಹೆಯನ್ನು ಕೊಡುತ್ತೇನೆ. ಯಾವಾಗಲಾದರೂ ನಿಮಗೆ ಅನುಮಾನ ಬಂದರೆ, ನಿಮ್ಮ ಅಹಂಕಾರ ನಿಮ್ಮನ್ನು ಆವರಿಸಿಕೊಳ್ಳತೊಡಗಿದರೆ ಆಗ ಈ ಪರೀಕ್ಷೆಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಿ – ನೀವು ನೋಡಿರುವ ಎಲ್ಲರಿಗಿಂತ ಬಡವನಾದ, ನಿಶ್ಶಕ್ತನಾದ ಮನುಷ್ಯನ ಚಿತ್ರವನ್ನು ನೆನಪಿಸಿಕೊಳ್ಳಿ ಮತ್ತು ಯಾವ ಹೆಜ್ಜೆಯನ್ನು ನೀವು ಇಡಲು ಯೋಚಿಸುತ್ತಿದ್ದೀರೋ ಅದು ಆ ಮನುಷ್ಯನಿಗೆ ಎಷ್ಟು ಉಪಯೋಗವಾಗುತ್ತದೆ; ಅದರಿಂದ ಆ ಮನುಷ್ಯನಿಗೆ ಸ್ವಲ್ಪ ಲಾಭವಾಗುತ್ತದೆಯೇ; ಅದರಿಂದ ಅವನು ತನ್ನ ಜೀವನ ಮತ್ತು ಅದೃಷ್ಟದ ಮೇಲೆ ಸ್ವಲ್ಪ ಹಿಡಿತ ಇಟ್ಟುಕೊಳ್ಳಬಹುದೇ; ಅದರಿಂದ ಹೊಟ್ಟೆ ಹಸಿದಿರುವ ಮತ್ತು ಅತೃಪ್ತರಾಗಿರುವ ಕೋಟ್ಯಾಂತರ ಜನರಿಗೆ ಸ್ವಾತಂತ್ರ ಸಿಗಬಹುದೇ; ಎಂದು ನಿಮ್ಮ ಮನಸ್ಸಿಗೆ ನೀವು ಕೇಳಿಕೊಳ್ಳಿ. ಆಗ ನಿಮ್ಮ ಅನುಮಾನ ಕಳೆದು ಹೋಗುತ್ತಿದೆ ಮತ್ತು ಅಹಂಕಾರ ಮುಗಿದುಹೋಗುತ್ತಿದೆ ಎಂದು ನಿಮಗೆ ಅನ್ನಿಸತೊಡಗುತ್ತದೆ.” ಎಂದು ಹೇಳಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಗಾಂಧೀಜಿಯವರ ಈ ಒಂದು ಮಂತ್ರ ಇಂದಿಗೂ ಅಷ್ಟೇ ಮಹತ್ವದ್ದಾಗಿದೆ. ಇಂದು ದೇಶದಲ್ಲಿ ಹೆಚ್ಚುತ್ತಿರುವ ಮಧ್ಯಮ ವರ್ಗ ಮತ್ತು ಹೆಚ್ಚುತ್ತಿರುವ ಅವರ ಅರ್ಥಿಕ ಶಕ್ತಿ, ಅವರ ಖರೀದಿಸುವ ಶಕ್ತಿಯನ್ನು (purchasing power) ಹೆಚ್ಚಿಸಿದೆ. ನಾವು ಏನನ್ನಾದರೂ ಖರೀದಿಸಲು ಹೋದಾಗ ಒಂದು ಕ್ಷಣ ಪೂಜ್ಯ ಬಾಪೂರವರನ್ನು ಸ್ಮರಣೆ ಮಾಡಿಕೊಳ್ಳಬಹುದೇ? ಪೂಜ್ಯ ಬಾಪೂರವರ ಆ ಮಂತ್ರವನ್ನು ನೆನಪಿಸಿಕೊಳ್ಳಬಹುದೇ? ನಾವು ಖರೀದಿ ಮಾಡುವ ಸಮಯದಲ್ಲಿ “ನಾನು ಯಾವ ವಸ್ತುವನ್ನು ಖರೀದಿ ಮಾಡುತ್ತಿದ್ದೇನೆಯೋ ಅದರಿಂದ ನನ್ನ ದೇಶದ ಯಾವ ನಾಗರೀಕನಿಗೆ ಲಾಭವಾಗುತ್ತಿದೆ; ಯಾರ ಮುಖದ ಮೇಲೆ ಸಂತೋಷ ಮೂಡುತ್ತಿದೆ; ನನ್ನ ಖರೀದಿಯಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಲಾಭ ಪಡೆದುಕೊಳ್ಳುವ ಆ ಭಾಗ್ಯಶಾಲಿ ಯಾರಾಗಿರಬಹುದು; ಬಡವರಲ್ಲಿ ಬಡವನಿಗೆ ಇದರಿಂದ ಲಾಭವಾದರೆ ನನ್ನ ಖುಷಿ ಬಹಳಷ್ಟು ಹೆಚ್ಚಾಗುತ್ತದೆ” ಎಂದು ನಾವು ಯೋಚಿಸಬಹುದೇ? ಮುಂಬರುವ ದಿನಗಳಲ್ಲಿ ನಾವು ಯಾವಾಗಲಾದರೂ ಏನನ್ನಾದರೂ ಖರೀದಿಸಿದಾಗ ಗಾಂಧೀಜಿಯವರ ಈ ಮಂತ್ರವನ್ನು ನೆನಪಿಸಿಕೊಳ್ಳೋಣ, ಗಾಂಧೀಜಿಯವರ 150 ನೇ ಜಯಂತಿಯನ್ನು ಆಚರಿಸುವಾಗ ನಾವು ಮಾಡುವ ಪ್ರತಿಯೊಂದು ಖರೀದಿಯಿಂದ ಖಂಡಿತವಾಗಿ ಯಾರಾದರೊಬ್ಬ ದೇಶವಾಸಿಗೆ ಒಳ್ಳೆಯದಾಗಬೇಕು ಮತ್ತು ಅದರಲ್ಲಿಯೂ ಸಹ ಯಾರು ತಮ್ಮ ಬೆವರು ಹರಿಸಿರುತ್ತಾರೋ, ಯಾರು ತಮ್ಮ ಹಣವನ್ನು ಹೂಡಿರುತ್ತಾರೋ, ಯಾರು ತಮ್ಮ ಕೌಶಲ್ಯವನ್ನು ಬೆರೆಸಿರುತ್ತಾರೋ, ಆ ಎಲ್ಲರಿಗೂ ಅಲ್ಪ ಸ್ವಲ್ಪ ಲಾಭವಾಗಬೇಕು ಎಂದು ಯೋಚಿಸೋಣ. ಇದೇ ಗಾಂಧೀಜಿಯವರ ಮಂತ್ರ, ಇದೇ ಗಾಂಧೀಜಿಯವರ ಸಂದೇಶ ಮತ್ತು ನಿಮ್ಮ ಈ ಒಂದು ಸಣ್ಣ ಹೆಜ್ಜೆ ಎಲ್ಲರಿಗಿಂತ ಬಡವ ಮತ್ತು ನಿಶ್ಯಕ್ತನಾಗಿರುವ ವ್ಯಕ್ತಿಯ ಜೀವನದಲ್ಲಿ ಬಹಳ ದೊಡ್ಡ ಪರಿಣಾಮ ಬೀರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಗಾಂಧೀಜಿಯವರು “ನಾವು ಸ್ವಚ್ಚಗೊಳಿಸಿದರೆ ಸ್ವಾತಂತ್ರ್ಯ ದೊರೆಯುತ್ತದೆ” ಎಂದು ಹೇಳಿದಾಗ ಇದು ಹೇಗಾಗುತ್ತದೆ ಎಂದು ಬಹುಶಃ ಅವರಿಗೇ ಗೊತ್ತಿರಲಿಲ್ಲ. ಆದರೆ ಅದು ಆಯಿತು, ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಇದೇ ರೀತಿ “ನನ್ನ ದೇಶದ ಆರ್ಥಿಕ ಬೆಳವಣಿಗೆಗೆ, ಆರ್ಥಿಕ ಸಬಲೀಕರಣಕ್ಕೆ, ಬಡವರು ಬಡತನದ ವಿರುದ್ಧ ಹೋರಾಡಲು ಶಕ್ತಿ ನೀಡುವ ನಿಟ್ಟಿನಲ್ಲಿ, ನನ್ನ ಈ ಸಣ್ಣ ಕೆಲಸವು ಬಹು ದೊಡ್ಡ ಕೊಡುಗೆ ಆಗಬಹುದು” ಎಂದು ನಮಗೆ ಅನ್ನಿಸುತ್ತದೆ. ಇಂದಿನ ದಿನಗಳಲ್ಲಿ ಇದೇ ನಿಜವಾದ ದೇಶಭಕ್ತಿ ಮತ್ತು ಇದೇ ಪೂಜ್ಯ ಬಾಪೂರವರಿಗೆ ನಾವು ಅರ್ಪಿಸುವ ಕಾರ್ಯಾಂಜಲಿ. ವಿಶೇಷ ಸಂದರ್ಭಗಳಲ್ಲಿ ಖಾದಿ ಮತ್ತು ಹ್ಯಾಂಡ್ಲೂರಮ್ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಯೋಚಿಸಿದರೆ, ಇದರಿಂದ ನೇಕಾರರಿಗೆ ಸಹಾಯವಾಗುತ್ತದೆ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಯಾರದ್ದೋ ಪರಿಶ್ರಮ ಅಡಗಿಕೊಂಡಿರುತ್ತದೆ ಎಂಬ ಕಾರಣ ನೀಡಿ ಹಳೆಯ ಅಥವಾ ಹರಿದ ಖಾದಿ ಬಟ್ಟೆಗಳನ್ನು ಸಹ ಜತನದಿಂದ ಇಟ್ಟುಕೊಳ್ಳುತ್ತಿದ್ದರು. ಅವರು “ಈ ಎಲ್ಲಾ ಖಾದಿಯ ಬಟ್ಟೆಗಳು ಬಹಳ ಕಷ್ಟಪಟ್ಟು ಮಾಡಿರುವಂತಹುದಾಗಿದೆ, ಇದರ ಒಂದೊಂದು ನೂಲು ಕೆಲಸಕ್ಕೆ ಬರಬೇಕು” ಎಂದು ಹೇಳುತ್ತಿದ್ದರು. ದೇಶಪ್ರೇಮ ಮತ್ತು ದೇಶವಾಸಿಗಳ ಬಗ್ಗೆ ಪ್ರೀತಿಯ ಭಾವನೆ ಪುಟ್ಟ ದೇಹದ, ಆ ಮಹಾ ಮಾನವನ ನರ ನಾಡಿಗಳಲ್ಲಿ ಹಾಸುಹೊಕ್ಕಾಗಿತ್ತು. ಎರಡು ದಿನಗಳ ನಂತರ ಪೂಜ್ಯ ಬಾಪೂರವರ ಜಯಂತಿಯ ಜೊತೆ ನಾವು ಶಾಸ್ತ್ರೀಜಿಯವರ ಜಯಂತಿಯನ್ನು ಸಹ ಆಚರಿಸುತ್ತೇವೆ. ಶಾಸ್ತ್ರೀಜಿಯವರ ಹೆಸರು ಕೇಳಿದರೆ ನಮ್ಮ ಭಾರತೀಯರ ಮನದಲ್ಲಿ ಒಂದು ಅನನ್ಯ ಭಕ್ತಿಯ ಭಾವನೆ ಉಕ್ಕಿ ಬರುತ್ತದೆ. ಅವರ ಸೌಮ್ಯ ವ್ಯಕ್ತಿತ್ವ ಪ್ರತಿ ದೇಶವಾಸಿಯಲ್ಲೂ ಯಾವಾಗಲೂ ಹೆಮ್ಮೆಯನ್ನು ತುಂಬುತ್ತದೆ.
ಲಾಲ್ ಬಹಾದೂರ್ ಶಾಸ್ತ್ರಿಯವರ ವಿಶೇಷವೆಂದರೆ ಅವರು ಬಾಹ್ಯದಲ್ಲಿ ಬಹಳ ವಿನಮ್ರವಾಗಿ ಕಾಣುತ್ತಿದ್ದರು ಆದರೆ, ಆಂತರ್ಯದಲ್ಲಿ ಕಲ್ಲಿನಂತೆ ದೃಢ ಮನಸ್ಸಿನವರಾಗಿದ್ದರು. “ಜೈ ಜವಾನ್ ಜೈ ಕಿಸಾನ್” ಎನ್ನುವ ಅವರ ಘೋಷವಾಕ್ಯ ಅವರ ಇದೇ ಧೀಮಂತ ವ್ಯಕ್ತಿತ್ವದ ಗುರುತಾಗಿತ್ತು. ರಾಷ್ಟ್ರಕ್ಕೆ ಅವರ ನಿಸ್ವಾರ್ಥ ಸೇವೆಯ ಪ್ರತಿಫಲದ ಕಾರಣವಾಗಿಯೇ, ಕೇವಲ ಒಂದೂವರೆ ವರ್ಷಗಳ ಕಡಿಮೆ ಕಾರ್ಯಾವಧಿಯಲ್ಲಿ ಅವರು ದೇಶದ ಸೈನಿಕರು ಮತ್ತು ರೈತರು ಸಫಲತೆಯ ಶಿಖರದ ಮೇಲೆ ಏರಲು ಈ ಮಂತ್ರವನ್ನು ನೀಡಿದರು.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಾವು ಯಾವಾಗ ಪೂಜ್ಯ ಬಾಪೂರವರ ಸ್ಮರಣೆಯನ್ನು ಮಾಡುತ್ತೇವೆಯೋ ಆಗ ಸ್ವಚ್ಚತೆಯ ಬಗ್ಗೆ ಮಾತನಾಡದೇ ಇರಲು ಸಾಧ್ಯವಾಗುವುದಿಲ್ಲ. ಇದೇ ಸೆಪ್ಟೆಂಬರ್ 15 ರಿಂದ “ಸ್ವಚ್ಚತೆಯೇ ಸೇವೆ” ಎನ್ನುವ ಒಂದು ಅಭಿಯಾನ ಪ್ರಾರಂಭವಾಯಿತು. ಕೋಟ್ಯಾಂತರ ಜನರು ಈ ಅಭಿಯಾನದಲ್ಲಿ ಸೇರಿಕೊಂಡರು ಮತ್ತು ನನಗೂ ಸಹ ದೆಹಲಿಯ ಅಂಬೇಡ್ಕರ್ ಶಾಲೆಯಲ್ಲಿ ಮಕ್ಕಳ ಜೊತೆಗೆ ಸ್ವಚ್ಚತಾ ಶ್ರಮದಾನ ಮಾಡುವ ಸೌಭಾಗ್ಯ ಸಿಕ್ಕಿತು. ಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಲಾನ್ಯಾಸ ಮಾಡಿದ ಆ ಶಾಲೆಗೆ ನಾನು ಹೋದೆ. ದೇಶದೆಲ್ಲೆಡೆ ಎಲ್ಲಾ ರೀತಿಯ ಜನರೂ ಈ 15 ನೇ ತಾರೀಖಿನಂದು ಶ್ರಮದಾನದಲ್ಲಿ ಭಾಗಿಯಾಗಿದ್ದರು. ಸಂಸ್ಥೆಗಳು ಸಹಾ ಇದಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದವು. ಶಾಲೆಯ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಎನ್ಸಿನಸಿ, ಎನ್ಎ.ಸ್ಎಯಸ್, ಯುವ ಸಂಘಟನೆಗಳು, ಮಾಧ್ಯಮ ತಂಡಗಳು, ಕಾರ್ಪೊರೇಟ್ ಜಗತ್ತು ಇವರೆಲ್ಲರೂ ಅತ್ಯಂತ ಉತ್ಸಾಹದಿಂದ ಸ್ವಚ್ಚತಾ ಶ್ರಮದಾನವನ್ನು ಮಾಡಿದರು. ಇದಕ್ಕಾಗಿ ನಾನು ಈ ಎಲ್ಲಾ ಸ್ವಚ್ಚತಾ ಪ್ರೇಮಿ ದೇಶವಾಸಿಗಳಿಗೆ ಹೃದಯಪೂರ್ವಕವಾಗಿ ಅನಂತಾನಂತ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಬನ್ನಿ, ಒಂದು ದೂರವಾಣಿ ಕರೆಯನ್ನು ಕೇಳೋಣ:
“ನಮಸ್ಕಾರ. ನನ್ನ ಹೆಸರು ಶೈತಾನ್ ಸಿಂಗ್. ನಾನು ರಾಜಾಸ್ತಾನದ, ಬಿಕಾನೆರ್ ಜಿಲ್ಲೆಯ ಪೂಗಲ್ ತಾಲೂಕಿನಿಂದ ಮಾತನಾಡುತ್ತಿದ್ದೇನೆ. ನಾನೊಬ್ಬ ಅಂಧ ವ್ಯಕ್ತಿಯಾಗಿದ್ದೇನೆ. ನನಗೆ ಎರಡೂ ಕಣ್ಣುಗಳಿಲ್ಲ, ದೃಷ್ಟಿ ಇಲ್ಲ. ಮನದ ಮಾತು ಕಾರ್ಯಕ್ರಮದಲ್ಲಿ ಸ್ವಚ್ಚ ಭಾರತದ ಬಗ್ಗೆ ಮೋದಿಜಿಯವರು ಇಟ್ಟ ಹೆಜ್ಜೆ ಬಹಳ ದೊಡ್ಡದು. ನಮ್ಮಂತಹ ಅಂಧರು ಶೌಚಕ್ಕೆ ಹೋಗಲು ಕಷ್ಟಪಡುತ್ತಿದ್ದೆವು. ಈಗ ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಇದರಿಂದ ನಮಗೆ ಬಹು ದೊಡ್ಡ ಲಾಭವಾಗಿದೆ. ಇದು ಬಹಳ ದೊಡ್ಡದಾಗಿ ಇಟ್ಟಿರುವ ಹೆಜ್ಜೆ, ಈ ಕೆಲಸವು ಹೀಗೆಯೇ ಮುಂದುವರೆಯಲಿ”.
ಅನಂತಾನಂತ ಧನ್ಯವಾದಗಳು. ನೀವು ಬಹಳ ಒಳ್ಳೆಯ ಮಾತನ್ನು ಹೇಳಿದಿರಿ. ಪ್ರತಿಯೊಬ್ಬರ ಜೀವನದಲ್ಲಿಯೂ ಸ್ವಚ್ಚತೆಯು ಅತೀ ಮಹತ್ವದ್ದಾಗಿದೆ, ಸ್ವಚ್ಚ ಭಾರತ ಅಭಿಯಾನದ ಮೂಲಕ ನಿಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಯಿತು ಮತ್ತು ಇದರಿಂದ ಈಗ ನಿಮಗೆ ಉಪಯೋಗವಾಗುತ್ತಿದೆ. ನಮ್ಮೆಲ್ಲರಿಗೆ ಇದಕ್ಕಿಂತ ಹೆಚ್ಚಿನ ಖುಷಿಯ ವಿಷಯ ಬೇರೆ ಯಾವುದಾಗಬಲ್ಲದು? ತಮ್ಮ ದೃಷ್ಟಿವಿಹೀನತೆಯ ಕಾರಣದಿಂದ ನೀವು ನೋಡಲು ಸಾಧ್ಯವಿಲ್ಲ, ಆದರೆ ಶೌಚಾಲಯ ಇಲ್ಲದೆ ಇದ್ದಾಗ ನೀವು ಎಷ್ಟು ಕಷ್ಟದ ಜೀವನ ನಡೆಸಿದ್ದೀರಿ ಮತ್ತು ಶೌಚಾಲಯ ನಿರ್ಮಿಸಿದ ಮೇಲೆ ಅದು ನಿಮಗೆ ಎಷ್ಟು ದೊಡ್ಡ ವರದಾನವಾಯಿತು ಎನ್ನುವುದನ್ನು ಈ ಅಭಿಯಾನದ ಜೊತೆಗೆ ಸೇರಿಕೊಂಡ ಜನರಿಗೆ ಊಹಿಸಲು ಕೂಡ ಸಾಧ್ಯವಿಲ್ಲ. ಬಹುಶಃ ನೀವೂ ಕೂಡ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದೂರವಾಣಿ ಕರೆ ಮಾಡದೆ ಇದ್ದಿದ್ದರೆ ಸ್ವಚ್ಚತೆಯ ಈ ಅಭಿಯಾನದಲ್ಲಿ ಸೇರಿದ ಜನರ ಮನಸ್ಸಿನಲ್ಲಿ ಇಂತಹ ಸೂಕ್ಷ್ಮ ವಿಚಾರ ಹೊಳೆಯುತ್ತಲೇ ಇರಲಿಲ್ಲ. ನಾನು ನಿಮ್ಮ ದೂರವಾಣಿ ಕರೆಗೆ ನಿಮಗೆ ವಿಶೇಷವಾಗಿ ಧನ್ಯವಾದ ಹೇಳುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ‘ಸ್ವಚ್ಚ ಭಾರತ ಮಿಶನ್” ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಒಂದು ಸಫಲತೆಯ ಕತೆಯಾಗಿ ಹೋಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ. ಈ ಬಾರಿ ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಜಗತ್ತಿನಲ್ಲೇ ಅತೀ ದೊಡ್ಡದಾದ ಸ್ವಚ್ಚತಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. “ಮಹಾತ್ಮಾ ಗಾಂಧಿ ಅಂತರಾಷ್ಟ್ರೀಯ ಸ್ವಚ್ಚತಾ ಸಮ್ಮೇಳನ” ಅಂದರೆ ‘Mahatma Gandhi International Sanitation Convention’ ಜಗತ್ತಿನ ಎಲ್ಲಾ Sanitation Ministers ಮತ್ತು ಈ ಕ್ಷೇತ್ರದ ತಜ್ಞರನ್ನು ಒಗ್ಗೊಡಿಸುತ್ತಿದೆ, ಸ್ವಚ್ಚತೆಗೆ ಸಂಬಂಧಪಟ್ಟ ತಮ್ಮ ಪ್ರಯೋಗ ಮತ್ತು ಅನುಭವಗಳನ್ನು ಅವರು ಹಂಚಿಕೊಳ್ಳಲಿದ್ದಾರೆ. ‘Mahatma Gandhi International Sanitation Convention’ ಇದು, 2 ಅಕ್ಟೋಬರ್ 2018 ರಂದು ಬಾಪೂರವರ 150ನೇ ಜಯಂತಿಯ ಕಾರ್ಯಕ್ರಮಗಳ ಶುಭಾರಂಭದೊಂದಿಗೆ ಮುಗಿಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸಂಸ್ಕೃತದಲ್ಲಿ ಒಂದು ಉಕ್ತಿ ಹೀಗಿದೆ – ‘ನ್ಯಾಯಮೂಲಂ ಸ್ವರಾಜ್ಯಂ ಸ್ಯಾತ್”. ಅಂದರೆ ಸ್ವರಾಜ್ಯದ ಮೂಲದಲ್ಲೇ ನ್ಯಾಯ ಇರುತ್ತದೆ ಎಂದು. ಯಾವಾಗ ನ್ಯಾಯದ ಚರ್ಚೆ ಆಗುತ್ತದೆಯೋ ಆಗ ಮನುಷ್ಯನ ಹಕ್ಕಿನ ಭಾವನೆ ಅದರಲ್ಲಿ ಸಂಪೂರ್ಣವಾಗಿ ಒಳಗೊಂಡಿರುತ್ತದೆ. ಶೋಷಿತ, ಪೀಡಿತ ಹಾಗೂ ವಂಚಿತರ ಸ್ವಾತಂತ್ರ್ಯ, ಶಾಂತಿಯನ್ನು ಕಾಪಾಡಲು ಮತ್ತು ಅವರಿಗೆ ಕಡ್ಡಾಯವಾಗಿ ನ್ಯಾಯವನ್ನು ಒದಗಿಸಲು ವಿಶೇಷವಾಗಿ ಇದು ಅನಿವಾರ್ಯವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂಲಕ ಕೊಡಲ್ಪಟ್ಟ ಸಂವಿಧಾನದಲ್ಲಿ ಬಡವರ ಮೂಲ ಹಕ್ಕಿನ ರಕ್ಷಣೆಗಾಗಿ ಬಹಳಷ್ಟು ಅವಕಾಶಗಳನ್ನು ಮಾಡಲಾಗಿದೆ. ಅವರ ದೂರದೃಷ್ಟಿಯಿಂದ ಪ್ರೇರಣೆಗೊಂಡು 12 ಅಕ್ಟೋಬರ್ 1993 ರಂದು ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ಅಂದರೆ ‘National Human Rights Commission’ (NHRC) ಯ ರಚನೆ ಮಾಡಲಾಯಿತು. ಕೆಲವೇ ದಿನಗಳ ನಂತರ (NHRC) ಯ 25ನೇ ವರ್ಷ ಸಂಪೂರ್ಣವಾಗಲಿದೆ. ಓಊಖಅ ಯು ಬರೀ ಮಾನವ ಹಕ್ಕುಗಳ ರಕ್ಷಣೆಯನ್ನಷ್ಟೇ ಅಲ್ಲದೆ ಮಾನವೀಯತೆಯ ಹಿರಿಮೆಯನ್ನು ಸಹ ಹೆಚ್ಚಿಸುವ ಕೆಲಸ ಮಾಡಿದೆ. ನಮ್ಮೆಲ್ಲರ ಪ್ರೀತಿಯ ನಾಯಕ, ನಮ್ಮ ದೇಶದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿಯವರು “ಮಾನವ ಹಕ್ಕು ಎನ್ನುವುದು ನಮಗೆ ಬರೀ ಎರವಲು ಪರಿಕಲ್ಪನೆಯಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದರು. ನಮ್ಮ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಚಿನ್ಹೆಯಲ್ಲಿ ವೇದಗಳ ಕಾಲದ ಆದರ್ಶ ಸೂತ್ರವಾದ “ಸರ್ವೇ ಭವಂತು ಸುಖಿನಃ” ಇದನ್ನು ಬಿಂಬಿಸಲಾಗಿದೆ. NHRC ಯು ಮಾನವ ಹಕ್ಕುಗಳ ಬಗ್ಗೆ ವ್ಯಾಪಕವಾದ ಅರಿವು ಮೂಡಿಸಿದೆ. ಜೊತೆಗೆ ಇದರ ದುರುಪಯೋಗವನ್ನು ತಡೆಗಟ್ಟವುದರಲ್ಲಿ ಸಹ ಪ್ರಶಂಸನೀಯ ಪಾತ್ರ ವಹಿಸಿದೆ. 25 ವರ್ಷಗಳ ಈ ಪಯಣದಲ್ಲಿ ಅದು ದೇಶವಾಸಿಗಳಲ್ಲಿ ಒಂದು ರೀತಿಯ ಭರವಸೆ ಹಾಗೂ ವಿಶ್ವಾಸದ ವಾತಾವರಣವನ್ನು ಹುಟ್ಟುಹಾಕಿದೆ. ಒಂದು ಆರೋಗ್ಯಕರ ಸಮಾಜಕ್ಕಾಗಿ, ಉತ್ತಮವಾದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಇದು ಒಂದು ದೊಡ್ಡ ಭರವಸೆ ಎಂದು ನಾನು ತಿಳಿದಿದ್ದೇನೆ. ಇಂದು ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಕೆಲಸಗಳ ಜೊತೆಜೊತೆಗೆ 26 ರಾಜ್ಯಗಳಲ್ಲಿ ಮಾನವ ಹಕ್ಕುಗಳ ಆಯೋಗಗಳನ್ನು ಸಹ ರಚಿಸಲಾಗಿದೆ. ಒಂದು ಸಮಾಜದ ರೂಪದಲ್ಲಿ ಮಾನವ ಹಕ್ಕುಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳುವ ಮತ್ತು ಆಚರಣೆಗೆ ತರುವ ಅವಶ್ಯಕತೆಯು ನಮಗಿದೆ. ಇದೇ “ಸಬ್ ಕಾ ಸಾಥ್ – ಸಬ್ ಕಾ ವಿಕಾಸ್” ಎನ್ನುವುದರ ಮೂಲಾಧಾರವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಅಕ್ಟೋಬರ್ ತಿಂಗಳಿರಲಿ, ಜಯಪ್ರಕಾಶ್ ನಾರಾಯಣ್ ಅವರ ಜಯಂತಿ ಇರಲಿ, ರಾಜಮಾತೆ ವಿಜಯರಾಜೆ ಸಿಂಧಿಯಾ ಅವರ ಜನ್ಮ ಶತಾಬ್ದಿ ವರ್ಷದ ಪ್ರಾರಂಭವಿರಲಿ – ಈ ಎಲ್ಲಾ ಮಹನೀಯರು ನಮಗೆಲ್ಲರಿಗೂ ಪ್ರೇರಣೆ ನೀಡುತ್ತಿರುತ್ತಾರೆ, ಅವರಿಗೆ ನಾವು ನಮನ ಸಲ್ಲಿಸುತ್ತೇವೆ. 31 ಅಕ್ಟೋಬರ್ ರಂದು ಸರ್ದಾರ್ ಪಟೇಲರ ಜಯಂತಿ. ನಾನು ಮುಂದಿನ ಮನದ ಮಾತು ಕಾರ್ಯಕ್ರಮದಲ್ಲಿ ಇವರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ಕೆಲವು ವರ್ಷಗಳಿಂದ ಸರ್ದಾರ್ ಪಟೇಲರ ಜಯಂತಿಯ ಅಂಗವಾಗಿ ಅಕ್ಟೋಬರ್ 31 ರಂದು ಭಾರತದ ಪ್ರತಿ ಸಣ್ಣ-ದೊಡ್ಡ ನಗರಗಳಲ್ಲಿ, ಹೋಬಳಿಗಳಲ್ಲಿ, ಹಳ್ಳಿಗಳಲ್ಲಿ ‘ಏಕತೆಗಾಗಿ ಓಟ’ (Run for Unity) ವನ್ನು ಆಯೋಜಿಸಲಾಗುತ್ತದೆ. ಆದ್ದರಿಂದ ನಾನು ಇಂದು ಖಂಡಿತವಾಗಿಯೂ ಸರ್ದಾರ್ ಪಟೇಲರ ವಿಷಯವನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಈ ವರ್ಷವೂ ಸಹ ನಾವು ಪ್ರಯತ್ನ ಪಟ್ಟು ನಮ್ಮ ಹಳ್ಳಿಗಳಲ್ಲಿ, ಹೋಬಳಿಗಳಲ್ಲಿ, ನಗರ-ಪಟ್ಟಣಗಳಲ್ಲಿ Run for Unity ಯನ್ನು ಆಯೋಜಿಸಬೇಕು. ಏಕತೆಗಾಗಿ ಓಟವು ಸರ್ದಾರ್ ಪಟೇಲರನ್ನು ಸ್ಮರಿಸುವ ಅತ್ಯುತ್ತಮ ಮಾರ್ಗವಾಗಿದೆ. ಏಕೆಂದರೆ, ಅವರು ಜೀವನಪೂರ್ತಿ ದೇಶದ ಏಕತೆಗಾಗಿ ಕೆಲಸ ಮಾಡಿದರು. ಅಕ್ಟೋಬರ್ 31 ರಂದು Run for Unityಯ ಮೂಲಕ ಸಮಾಜದ ಪ್ರತಿ ವರ್ಗವನ್ನೂ, ದೇಶದ ಪ್ರತಿ ಘಟಕವನ್ನೂ ಏಕತೆಯ ಸೂತ್ರದಲ್ಲಿ ಬಂಧಿಸುವ ನಮ್ಮ ಪ್ರಯತ್ನಗಳಿಗೆ ನಾವು ಶಕ್ತಿ ತುಂಬೋಣ ಎಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಮತ್ತು ಇದೇ ಅವರಿಗೆ ನಾವು ನೀಡುವ ಅತ್ಯುತ್ತಮ ಶ್ರದ್ಧಾಂಜಲಿ.
ನನ್ನ ಪ್ರೀತಿಯ ದೇಶವಾಸಿಗಳೇ, ನವರಾತ್ರಿಯಾಗಿರಲಿ, ದುರ್ಗಾಪೂಜೆಯಾಗಿರಲಿ, ವಿಜಯದಶಮಿಯಾಗಿರಲಿ, ಈ ಎಲ್ಲಾ ಪವಿತ್ರ ಉತ್ಸವಗಳ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ, ಅನಂತಾನಂತ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.
ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ! ನಮಸ್ಕಾರ. ಇಂದು ಸಂಪೂರ್ಣ ದೇಶ ರಕ್ಷಾಬಂಧನದ ಹಬ್ಬವನ್ನು ಆಚರಿಸುತ್ತಿದೆ. ಎಲ್ಲ ದೇಶಬಾಂಧವರಿಗೆ ಈ ಪವಿತ್ರಆಚರಣೆಯ ಅನಂತ ಅನಂತ ಶುಭಾಶಯಗಳು. ರಕ್ಷಾಬಂಧನವನ್ನು ಸೋದರ ಸೋದರಿಯರ ಪರಸ್ಪರ ಸ್ನೇಹ ಮತ್ತು ವಿಶ್ವಾಸದ ಪ್ರತೀಕವೆಂದುಪರಿಗಣಿಸಲಾಗುತ್ತದೆ. ಈ ಹಬ್ಬ ಶತಮಾನಗಳಿಂದಲೂ ಸಾಮಾಜಿಕ ಸೌಹಾರ್ದತೆಯ ಒಂದು ದೊಡ್ಡ ಉದಾಹರಣೆಯಾಗಿದೆ.ಒಂದು ರಕ್ಷಾ ಸೂತ್ರ ಬೇರೆಬೇರೆ ರಾಜ್ಯಗಳ ಅಥವಾ ಧರ್ಮದ ಜನರನ್ನು ವಿಶ್ವಾಸದ ಎಳೆಯೊಂದಿಗೆ ಬೆಸೆದಂತಹ ಬಹಳಷ್ಟು ಕಥೆಗಳನ್ನು ದೇಶದ ಇತಿಹಾಸದಲ್ಲಿ ಕಾಣಬಹುದಾಗಿದೆ.ಇನ್ನು ಕೆಲವೇ ದಿನಗಳ ನಂತರ ಜನ್ಮಾಷ್ಟಮಿ ಆಚರಣೆಯೂ ಬರಲಿದೆ.ಪರಿಸರದ ತುಂಬೆಲ್ಲ ಹಾಥಿ, ಘೋಡಾ, ಪಾಲ್ಕಿ – ಜಯ್ ಕನ್ಹಯ್ಯಾಲಾಲ್ ಕಿ,ಗೋವಿಂದ ಗೋವಿಂದ ಎಂಬ ಜಯಘೋಷ ಪ್ರತಿಧ್ವನಿಸಲಿದೆ. ಭಗವಂತ ಕೃಷ್ಣನಲ್ಲಿ ತನ್ಮಯರಾಗಿ ತೇಲಾಡುವ ಆನಂದವೇ ವಿಶಿಷ್ಟವಾದದ್ದು. ದೇಶದ ವಿವಿಧಭಾಗಗಳಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮೊಸರು ಕುಡಿಕೆಯ ತಯಾರಿಯಲ್ಲಿ ನಮ್ಮ ಯುವಕರು ತೊಡಗಿರಬಹುದು. ಎಲ್ಲ ದೇಶಬಾಂಧವರಿಗೆರಕ್ಷಾಬಂಧನ ಮತ್ತು ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
‘प्रधानमन्त्रि-महोदय! नमस्कारः | अहं चिन्मयी, बेंगलुरु-नगरे विजयभारती-विद्यालये दशम-कक्ष्यायां पठामि | महोदय अद्य संस्कृत-दिनमस्ति | संस्कृतंभाषां सरला इति सर्वे वदन्ति | संस्कृतं भाषा वयमत्र वह:वह:अत्र: सम्भाषणमअपि कुर्मः | अतः संस्कृतस्य महत्व: -विषये भवतः गह: अभिप्रायः इति रुपयावदतु |’
ಪ್ರಧಾನಮಂತ್ರಿಗಳೇ ನಮಸ್ಕಾರ, ನಾನು ಚಿನ್ಮಯಿ, ಬೆಂಗಳೂರು ನಗರದ ವಿಜಯಭಾರತಿ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಸರ್,ಇಂದು ಸಂಸ್ಕೃತ ದಿನ. ಸಂಸ್ಕೃತ ಭಾಷೆ ಸರಳವಾದದ್ದು ಎಂದು ಎಲ್ಲರೂ ಹೇಳುತ್ತಾರೆ. ನಾವು ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಿ ಸಂಸ್ಕೃತದಲ್ಲಿಸಂಭಾಷಿಸೋಣ. ಆದ್ದರಿಂದ ಸಂಸ್ಕೃತದ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ.
भगिनी ! चिन्मयि !!
भवती संस्कृत – प्रश्नं पृष्टवती |
बहूत्तमम् ! बहूत्तमम् !!
अहं भवत्या: अभिनन्दनं करोमि |
संस्कृत –सप्ताह – निमित्तं देशवासिनां
सर्वेषां कृते मम हार्दिक-शुभकामना:
ಸೋದರಿ ಚಿನ್ಮಯಿ!!
ಸಂಸ್ಕೃತದಲ್ಲಿ ಪ್ರಶ್ನೆ ಕೇಳಿದ್ದು ಅತ್ಯುತ್ತಮವಾಗಿದೆ. ನಾನು ನಿಮಗೆ ಅದಕ್ಕಾಗಿ ಅಭಿನಂದಿಸುತ್ತೇನೆ. ಸಂಸ್ಕೃತ – ಸಪ್ತಾಹದ ನಿಮಿತ್ತ ಎಲ್ಲ ದೇಶವಾಸಿಗಳಿಗೂನನ್ನ ಹಾರ್ದಿಕ ಶುಭಾಷಯಗಳು.
ಈ ವಿಷಯ ಪ್ರಸ್ತಾಪಿಸಿದ್ದಕ್ಕೆ ಚಿನ್ಮಯಿಗೆ ನಾನು ಬಹಳ ಕೃತಜ್ಞನಾಗಿದ್ದೇನೆ. ಸ್ನೇಹಿತರೇ, ರಕ್ಷಾಬಂಧನವಷ್ಟೇ ಅಲ್ಲ ಶ್ರಾವಣ ಪೌರ್ಣಮಿಯಂದುಸಂಸ್ಕೃತ ದಿನವನ್ನೂ ಆಚರಿಸಲಾಗುತ್ತದೆ. ಈ ಉದಾತ್ತ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸದಲ್ಲಿತೊಡಗಿರುವ ಎಲ್ಲ ಜನರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ತಮಿಳು ಭಾಷೆ ವಿಶ್ವದ ಅತ್ಯಂತಪುರಾತನ ಭಾಷೆ ಎಂಬ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. ಅಲ್ಲದೆ ಸಂಸ್ಕೃತ ಭಾಷೆ ವೇದಕಾಲದಿಂದಲೂ ಜ್ಞಾನವೃದ್ಧಿಗೆ ಮತ್ತು ಪ್ರಚಾರ ಮಾಡುವಲ್ಲಿ ಬಹು ದೊಡ್ಡಪಾತ್ರವಹಿಸಿದೆ ಎಂಬುದಕ್ಕೂ ಕೂಡಾ ಭಾರತೀಯರಾದ ನಮಗೆ ಹೆಮ್ಮೆಯಿದೆ.
ಜೀವನದ ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನದ ಭಂಡಾರದಂತೆ ಸಂಸ್ಕೃತ ಭಾಷೆ ಮತ್ತು ಅದರ ಸಾಹಿತ್ಯವಿದೆ. ಅದು ವಿಜ್ಞಾನವಾಗಿರಲಿ ಅಥವಾತಂತ್ರಜ್ಞಾನವಾಗಿರಲಿ, ಕೃಷಿ ಇರಲಿ ಇಲ್ಲವೆ ಆರೋಗ್ಯವಾಗಿರಲಿ, ಖಗೋಳ ಶಾಸ್ತ್ರವಾಗಿರಲಿ, ವಾಸ್ತುಶಿಲ್ಪವಾಗಿರಲಿ, ಗಣಿತವಾಗಲಿ ಅಥವಾಆಡಳಿತವಾಗಿರಲಿ, ಅರ್ಥಶಾಸ್ತ್ರ್ರದ ಮಾತಾಗಲಿ ಇಲ್ಲವೆ ಪರಿಸರದ ಬಗ್ಗೆಯಾಗಲಿ, ಜಾಗತಿಕ ತಾಪಮಾನ ಹೆಚ್ಚಳದ ಸವಾಲುಗಳನ್ನು ಎದುರಿಸುವಉಪಾಯವೂ ನಮ್ಮ ವೇದಗಳಲ್ಲಿ ವಿಸ್ತಾರವಾಗಿ ಉಲ್ಲೇಖಿಸಲಾಗಿದೆ ಎಂದು ಹೇಳುತ್ತಾರೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸಳ್ಳಿ ಮತ್ತೂರು ಗ್ರಾಮಸ್ಥರುಇಂದಿಗೂ ಮಾತಾಡಲು ಸಂಸ್ಕೃತ ಭಾಷೆಯನ್ನೇ ಬಳಸುತ್ತಾರೆ ಎಂದು ಕೇಳಿ ನಿಮಗೆ ಹರ್ಷವೆನಿಸಬಹುದು. ನಿಮಗೆ ಒಂದು ವಿಷಯ ಕೇಳಿಆಶ್ಚರ್ಯವೆನಿಸಬಹುದು, ಸಂಸ್ಕೃತ ಭಾಷೆ ಎಂಥದ್ದು ಎಂದರೆ ಇದರಲ್ಲಿ ಅಸಂಖ್ಯ ಶಬ್ದಗಳ ನಿರ್ಮಾಣಮಾಡಬಹುದಾಗಿದೆ. 2 ಸಾವಿರ ಧಾತುಗಳು, 200ಪ್ರತ್ಯಯ ಅಂದರೆ ಸಫಿಕ್ಸ್, 22 ಉಪಸರ್ಗ ಅಂದರೆ ಪ್ರಿಫಿಕ್ಸ್ ಗಳಿರುವುದರಿಂದ ಸಮಾಜದ ಬಳಕೆಯ ಅಸಂಖ್ಯ ಶಬ್ದಗಳ ನಿರ್ಮಾಣ ಸಾಧ್ಯ. ಆದ್ದರಿಂದಲೇಯಾವುದೇ ಅತಿ ಸೂಕ್ಷ್ಮ ಭಾವನೆ ಅಥವಾ ವಿಷಯವನ್ನು ನಿಖರವಾಗಿ ವರ್ಣಿಸಬಹುದಾದದ್ದು. ಸಂಸ್ಕೃತ ಭಾಷೆಯ ಇನ್ನೊಂದು ವಿಶೇಷತೆಯಿದೆ. ಇಂದಿಗೂನಾವು ನಮ್ಮ ಮಾತಿಗೆ ಹೆಚ್ಚಿನ ಶಕ್ತಿ ತುಂಬಲು ಇಂಗ್ಲಿಷ್ ನಾಣ್ಣುಡಿಗಳನ್ನು ಬಳಸುತ್ತೇವೆ, ಕೆಲವೊಮ್ಮೆ ಹಿಂದಿ ಶಾಯರಿಗಳನ್ನು ಉಪಯೋಗಿಸುತ್ತೇವೆ. ಆದರೆಯಾರಿಗೆ ಸಂಸ್ಕೃತ ಸುಭಾಷಿತಗಳ ಬಗ್ಗೆ ತಿಳಿದಿದೆಯೋ ಅವರಿಗೆ ಬಹಳ ಕಡಿಮೆ ಶಬ್ದಗಳಲ್ಲಿ ಅತ್ಯಂತ ಸೂಕ್ತವಾದ ಹೇಳಿಕೆಯನ್ನು ಸಂಸ್ಕೃತ ಸುಭಾಷಿತಗಳಮೂಲಕ ನೀಡಬಹುದಾಗಿದೆ ಎಂಬುದು ಗೊತ್ತು. ಅಲ್ಲದೆ ಅದು ನಮ್ಮ ನೆಲ ಮತ್ತು ಸಂಪ್ರದಾಯದೊಂದಿಗೆ ಮಿಳಿತವಾಗಿರುವುದರಿಂದ ತಿಳಿದುಕೊಳ್ಳುವುದುಬಹಳ ಸರಳ.
ಜೀವನದಲ್ಲಿ ಗುರುವಿನ ಮಹತ್ವ ಅರಿಯಲು ಹೀಗೆ ಹೇಳಿದ್ದಾರೆ –
“ಏಕಮಪಿ ಅಕ್ಷರಮಸ್ತು, ಗುರುಃ ಶಿಷ್ಯಂ ಪ್ರಭೋದಯೇತ್.
ಪೃಥವ್ಯಾಂ ನಾಸ್ತಿ ತತ್ ದ್ರವ್ಯಂ, ಯತ್ ದತ್ವಾ ಹಯನೃಣೀ ಭವೇತ್”
ಇದರರ್ಥ ಯಾವುದೇ ಗುರು ತನ್ನ ಶಿಷ್ಯನಿಗೆ ಒಂದೇ ಅಕ್ಷರವನ್ನು ಕಲಿಸಿದರೂ ಶಿಷ್ಯನಿಗೆ ಗುರುವಿನ ಆ ಋಣ ತೀರಿಸಬಹುದಾದಂಥ ವಸ್ತು ಅಥವಾ ಹಣಸಂಪೂರ್ಣ ಭೂಮಂಡಲದಲ್ಲೇ ಇಲ್ಲ ಎಂದು. ಮುಂಬರುವ ಶಿಕ್ಷಕರ ದಿನಾಚರಣೆಯನ್ನು ನಾವೆಲ್ಲ ಇದೇ ಭಾವನೆಯೊಂದಿಗೆ ಆಚರಿಸೋಣ. ಜ್ಞಾನ ಮತ್ತು ಗುರುಅಪ್ರತಿಮ, ಅಮೂಲ್ಯ ಮತ್ತು ಅಪೂರ್ವವಾದವು. ತಾಯಿಯನ್ನು ಹೊರತುಪಡಿಸಿದರೆಶಿಕ್ಷಕರೇ ಮಗುವಿನ ವಿಚಾರಗಳಿಗೆ ಸರಿಯಾದ ಮಾರ್ಗದರ್ಶನ ನೀಡುವಜವಾಬ್ದಾರಿಯನ್ನು ಹೊರುತ್ತಾರೆ ಮತ್ತು ಜೀವನದುದ್ದಕ್ಕೂ ಅದರ ಅತ್ಯಧಿಕ ಪ್ರಭಾವ ಕಂಡುಬರುತ್ತದೆ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಮಹಾನ್ಚಿಂತಕರೂ ಮತ್ತು ದೇಶದ ಅಂದಿನ ರಾಷ್ಟ್ರ್ರಪತಿಗಳೂ ಆದ ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ನಾವು ಸ್ಮರಿಸುತ್ತೇವೆ.ಅವರಜಯಂತಿಯನ್ನೇ ಸಂಪೂರ್ಣ ರಾಷ್ಟ್ರ ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತದೆ. ದೇಶದ ಎಲ್ಲ ಶಿಕ್ಷಕರಿಗೂ ಮುಂಬರುವ ಶಿಕ್ಷಕರ ದಿನಾಚರಣೆಶುಭಾಷಯಗಳನ್ನು ಕೋರುತ್ತೇನೆ. ಜೊತೆಗೆ ವಿಜ್ಞಾನ, ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗ್ಗೆ ಅವರ ಸಮರ್ಪಣಾ ಭಾವವನ್ನು ಅಭಿನಂದಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ!ಕಠಿಣ ಪರಿಶ್ರಮಿಗಳಾದ ನಮ್ಮ ರೈತರಿಗೆ ಮುಂಗಾರು ಹಲವು ನಿರೀಕ್ಷೆಗಳನ್ನು ಹೊತ್ತು ತರುತ್ತದೆ. ಭಯಂಕರ ಬಿಸಿಲಿನೊಂದಿಗೆಕಾದಾಡುತ್ತಿರುವ ಗಿಡಮರಗಳು, ಒಣಗಿದ ಜಲಾಶಯಗಳಿಗೆ ನೆಮ್ಮದಿಯನ್ನು ನೀಡುತ್ತದೆ ಆದರೆ ಕೆಲವೊಮ್ಮೆ ಇದು ಅತೀವೃಷ್ಟಿ ಮತ್ತು ವಿನಾಶಕಾರಿಪ್ರವಾಹವನ್ನೂ ತರುತ್ತದೆ. ಕೆಲವೆಡೆ ಹೆಚ್ಚು ಮಳೆಯಿಂದಾಗಿ ಪ್ರಕೃತಿಯ ರುದ್ರ ನರ್ತನ ಕಂಡುಬರುತ್ತಿದೆ. ನಾವೆಲ್ಲರೂ ನೋಡಿದ್ದೇವೆ. ಕೇರಳದಲ್ಲಿ ಭಯಂಕರಪ್ರವಾಹ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇಂದು ಇಂಥ ಕಠಿಣ ಪರಿಸ್ಥಿತಿಯಲ್ಲಿ ಸಂಪೂರ್ಣ ರಾಷ್ಟ್ರ ಕೇರಳದ ಜೊತೆ ನಿಂತಿದೆ. ತಮ್ಮವರನ್ನುಕಳೆದುಕೊಂಡ ಕುಟುಂಬಗಳಿಗೆ ನಮ್ಮ ಸಹಾನುಭೂತಿಯಿದೆ. ಕಳೆದುಕೊಂಡಿರುವುದನ್ನು ತುಂಬಿಕೊಡಲಾಗುವುದಿಲ್ಲ ಆದರೆ 125 ಕೋಟಿ ಭಾರತೀಯರುದುಖಃದ ಈ ಘಳಿಗೆಯಲ್ಲಿ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದು ಶೋಕದಲ್ಲಿರುವ ಕುಟುಂಬಗಳಿಗೆ ಭರವಸೆ ನೀಡುತ್ತೇನೆ. ಈ ಪ್ರಕೃತಿವಿಕೋಪದಲ್ಲಿ ಗಾಯಾಳುಗಳಾದವರು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರಾಜ್ಯದ ಜನತೆಯ ಭಾವನೆಗಳಿಂದ ಮತ್ತು ಅದಮ್ಯಸಾಹಸದಿಂದಾಗಿ ಕೇರಳ ಬಹುಬೇಗ ಮತ್ತೆ ಪುನರ್ ನಿರ್ಮಾಣಗೊಳ್ಳುವುದು ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
ವಿಕೋಪಗಳು ತಮ್ಮ ಹಿಂದೆ ಭಯಂಕರ ವಿನಾಶವನ್ನು ಬಿಟ್ಟುಹೋಗುತ್ತವೆ ಎಂಬುದು ದೌರ್ಭಾಗ್ಯವೇ ಸರಿ, ಆದರೆ ಇಂಥ ಸಂದರ್ಭದಲ್ಲಿ ಮಾನವೀಯತೆಯದರ್ಶನವೂ ನಮಗಾಗುತ್ತದೆ ಎಂಬುದು ಗಮನಾರ್ಹ ಸಂಗತಿ. ಅದು ಕೇರಳವೇ ಆಗಿರಲಿ ಅಥವಾ ಭಾರತದ ಇನ್ನಾವುದೇ ಜಿಲ್ಲೆಯಾಗಿರಲಿ ಅಥವಾಯಾವುದೇ ಪ್ರದೇಶವಾಗಿರಲಿ ಎಲ್ಲೇ ವಿಪತ್ತು ಎದುರಾದರೂ ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲಿ ಎಂಬ ಉದ್ದೇಶದಿಂದ,ಕಛ್ದಿಂದ ಕಾಮ್ರೂಪ್ವರೆಗೆ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲರೂ ತಮ್ಮದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.ಎಲ್ಲ ವಯೋಮಾನದ ಮತ್ತು ಎಲ್ಲ ಕ್ಷೇತ್ರದ ಜನರುತಂತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಕೇರಳದ ಜನತೆಯ ಸಂಕಷ್ಟಗಳನ್ನು, ಅವರ ದುಖಃವನ್ನುಹಂಚಿಕೊಳ್ಳಲು ಪ್ರತಿಯೊಬ್ಬರೂ ನಿಶ್ಚಯಿಸಿದ್ದಾರೆ.ಸೇನಾಪಡೆಯ ಯೋಧರು ಕೇರಳದಲ್ಲಿ ನಡೆಯುತ್ತಿರುವ ರಕ್ಷಣೆ ಮತ್ತು ಪರಿಹಾರ ಕಾರ್ಯದ ನಾಯಕತ್ವ ವಹಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರುಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ವಾಯುಪಡೆ, ನೌಕಾಪಡೆ, ಭೂಸೇನೆ, ಬಿಎಸ್ಎಫ್, ಸಿಐಎಸ್ಎಫ್, ಆರ್ಎಎಫ್ಹೀಗೆ ಪ್ರತಿಯೊಬ್ಬರೂ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ನಾನು ಎನ್ಡಿಆರ್ಎಫ್ ಯೋಧರ ಕಠಿಣ ಪರಿಶ್ರಮದ ಬಗ್ಗೆಕೂಡಾ ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಇಂಥ ಸಂಕಷ್ಟ ಸ್ಥಿತಿಯಲ್ಲಿ ಅವರು ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಎನ್ಡಿಆರ್ಎಫ್ಅವರಸಾಮಥ್ರ್ಯ ಹಾಗೂ ಬದ್ಧತೆ ಮತ್ತು ಶೀಘ್ರ ನಿರ್ಣಯ ಕೈಗೊಂಡು ತ್ವರಿತ ಗತಿಯಲ್ಲಿ ಪರಿಸ್ಥಿತಿಗಳನ್ನು ನಿಭಾಯಿಸುವ ಕ್ಷಮತೆ, ಪ್ರತಿಯೊಬ್ಬ ಭಾರತೀಯನಿಗೂಹೊಸ ಶೃದ್ಧೆಯನ್ನು ನೀಡುವಂಥದ್ದಾಗಿದೆ. ನಿನ್ನೆ ಓಣಂ ಆಚರಣೆಯಿತ್ತು, ಓಣಂ ಉತ್ಸವ ದೇಶಕ್ಕೆ ಅದರಲ್ಲೂ ವಿಶೇಷವಾಗಿ ಕೇರಳ ರಾಜ್ಯಕ್ಕೆ ಹೆಚ್ಚಿನ ಶಕ್ತಿನೀಡಲಿ, ಈ ವಿಪತ್ತಿನಿಂದ ಆದಷ್ಟು ಬೇಗ ಕೇರಳ ರಾಜ್ಯ ಪುನರ್ ನಿರ್ಮಾಣವಾಗಲಿ ಹಾಗೂ ಅದರ ಅಭಿವೃದ್ಧಿ ಮಾರ್ಗಕ್ಕೆ ಹೆಚ್ಚಿನ ವೇಗ ದೊರೆಯಲಿ ಎಂದುನಾವೆಲ್ಲ ಪ್ರಾರ್ಥಿಸೋಣ. ಇನ್ನೊಮ್ಮೆ ದೇಶದ ಜನತೆಯ ಪರವಾಗಿ ಕೇರಳದವರಿಗೆ ಹಾಗೂ ದೇಶದ ಯಾವ ಭಾಗಗಳಲ್ಲಿ ವಿಪತ್ತು ಬಂದೆರಗಿದೆಯೋಅವರೆಲ್ಲರಿಗೆ ಸಂಪೂರ್ಣ ದೇಶ ಆ ವಿಪತ್ತಿನ ಸಂದರ್ಭದಲ್ಲಿ ನಿಮ್ಮೊಂದಿಗಿದೆ ಎಂಬುದನ್ನು ಖಚಿತಪಡಿಸಬಯಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ, ಈ ಬಾರಿ ಮನದ ಮಾತಿಗೆ ಬಂದ ಸಲಹೆಗಳನ್ನು ನೋಡುತ್ತಿದ್ದೆ. ಆಗ ದೇಶಾದ್ಯಂತದ ಜನತೆ ನಮ್ಮೆಲ್ಲರ ನೆಚ್ಚಿನ ಶ್ರೀಯುತಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆಯೇ ಹೆಚ್ಚಿಗೆ ಪ್ರಸ್ತಾಪಿಸಿರುವುದು ಕಂಡುಬಂತು. ಗಾಜಿಯಾಬಾದ್ನಿಂದ ಕೀರ್ತಿ, ಸೋನಿಪತ್ನಿಂದ ಸ್ವಾತಿ ವತ್ಸ್,ಕೇರಳದಿಂದ ಸೋದರ ಪ್ರವೀಣ್, ಪಶ್ಚಿಮ ಬಂಗಾಳದಿಂದ ಡಾ. ಸ್ವಪ್ನ ಬ್ಯಾನರ್ಜಿ, ಬಿಹಾರದ ಕಟಿಹಾರದಿಂದ ಅಖಿಲೇಶ್ ಪಾಂಡೆ ಹೀಗೆ ದೇಶದ ನಾನಾಭಾಗಗಳಿಂದ ಜನರು ನರೇಂದ್ರ ಮೋದಿ ಮೊಬೈಲ್ ಆಪ್ಗೆ ಮತ್ತು ಮೈ ಗೌ ಗೆ ಬರೆದು ಅಟಲ್ಜಿಯವರ ಜೀವನದ ವಿವಿಧ ಆಯಾಮಗಳ ಬಗ್ಗೆ ಮಾತಾಡಿಎಂದು ಆಗ್ರಹಿಸಿದ್ದಾರೆ. ನಮ್ಮ ದೇಶ ಮತ್ತು ವಿಶ್ವಕ್ಕೆ ಅಗಸ್ಟ್ 16 ರಂದು ಅಟಲ್ಜಿಯವರು ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರತಿಯೊಬ್ಬರೂ ದುಖಃದಲ್ಲಿಮುಳುಗಿಹೋದರು.ಅವರು 14 ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಂತಹ ಒಬ್ಬ ರಾಷ್ಟ್ರನಾಯಕರು. ಕಳೆದ 10 ವರ್ಷಗಳಿಂದಒಂದು ರೀತಿಯಲ್ಲಿ ಸಕ್ರೀಯ ರಾಜಕಾರಣದಿಂದ ತಮ್ಮನ್ನು ತಾವು ದೂರವಿರಿಸಿಕೊಂಡಿದ್ದರು. ಸುದ್ದಿ ಸಮಾಚಾರಗಳಲ್ಲಿ ಕಾಣಿಸುತ್ತಿರಲಿಲ್ಲ ಹಾಗೂಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕಂಡುಬರುತ್ತಿರಲಿಲ್ಲ. 10 ವರ್ಷಗಳ ವಿರಾಮ ಬಹುದೊಡ್ಡದಾಗಿರುತ್ತದೆ ಆದರೆ ಭಾರತದ ಓರ್ವ ಸಾಮಾನ್ಯ ವ್ಯಕ್ತಿಯಮನಸ್ಸಿನಲ್ಲಿ ಈ 10 ವರ್ಷಗಳ ಕಾಲಘಟ್ಟ ಒಂದು ಕ್ಷಣವೂ ಅವರನ್ನು ದೂರ ಮಾಡಿರಲಿಲ್ಲ ಎಂಬುದನ್ನು ಅಗಸ್ಟ್ 16 ರಂದು ದೇಶ ಹಾಗೂ ವಿಶ್ವ ಕಂಡಿತು.ಅಟಲ್ ಜಿ ರವರ ಬಗ್ಗೆ ಇದ್ದ ಸ್ನೇಹ, ಶ್ರದ್ಧೆ ಮತ್ತು ಶೋಕದ ಭಾವನೆ ದೇಶದಾದ್ಯಂತ ಉಕ್ಕಿಹರಿಯಿತು, ಇದು ಅವರ ವಿಶಾಲ ವ್ಯಕ್ತಿತ್ವವನ್ನು ಎತ್ತಿ ತೋರುತ್ತದೆ.ಕಳೆದ ಕೆಲವು ದಿನಗಳಲ್ಲಿ ಅಟಲ್ ಜಿ ರವರ ಜೀವನದ ಪ್ರತಿಯೊಂದು ಉತ್ತಮ ಆಯಾಮಗಳು ದೇಶದ ಜನತೆಯ ಮುಂದೆ ಈಗಾಗಲೇ ಗೋಚರವಾಗಿವೆ.ಜನ ಅವರನ್ನು ಉತ್ತಮ ಸಂಸದರು, ಸಂವೇದನಾಶೀಲ ಲೇಖಕರು, ಶ್ರೇಷ್ಠ ವಾಗ್ಮಿಗಳು, ಲೋಕಪ್ರಿಯ ಪ್ರಧಾನ ಮಂತ್ರಿಗಳ ರೂಪದಲ್ಲಿ ನೆನೆಯುತ್ತಿದ್ದರುಹಾಗೂ ನೆನೆಯುತ್ತಲೂ ಇರುತ್ತಾರೆ. ಉತ್ತಮ ಆಡಳಿತ ಅಂದರೆ ಗುಡ್ ಗವರ್ನನ್ಸ್ ಅನ್ನು ಮುಖ್ಯ ವಾಹಿನಿಗೆ ತಂದಿರುವ ಬಗ್ಗೆ ದೇಶ ಎಂದಿಗೂ ಅಟಲ್ಜಿಯವರಿಗೆ ಕೃತಜ್ಞವಾಗಿರುತ್ತದೆ. ಆದರೆ, ಇಂದು ನಾನು ಅಟಲ್ ಜಿಯವರ ವಿಶಾಲ ವ್ಯಕ್ತಿತ್ವದ ಮತ್ತೊಂದು ಮಗ್ಗುಲಿನ ಬಗ್ಗೆ ಕೇವಲ ಸ್ವಲ್ಪ ಮಾತ್ರತಿಳಿಸಬಯಸುತ್ತೇನೆ. ಅದು ಏನೆಂದರೆ ಅಟಲ್ಜಿಯವರು ನೀಡಿದ ರಾಜಕೀಯ ಸಂಸ್ಕೃತಿ, ರಾಜಕೀಯ ಸಂಸ್ಕೃತಿಯಲ್ಲಿ ತಂದ ಬದಲಾವಣೆಯ ಪ್ರಯತ್ನ,ಅದನ್ನು ವ್ಯವಸ್ಥೆಯಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನ. ಇವುಗಳಿಂದ ಭಾರತಕ್ಕೆ ಬಹಳ ಲಾಭವಾಗಿದೆ, ಮುಂಬರುವ ದಿನಗಳಲ್ಲೂ ಲಾಭವಾಗಲಿದೆ. ಇದುಸತ್ಯ. 2003 ರಲ್ಲಿ 91ನೇ ತಿದ್ದುಪಡಿಯನ್ನು ತಂದದ್ದಕ್ಕಾಗಿ ಭಾರತ ಎಂದಿಗೂ ಅಟಲ್ಜಿಯವರಿಗೆ ಕೃತಜ್ಞವಾಗಿರುತ್ತದೆ. ಈ ಬದಲಾವಣೆ ಭಾರತೀಯರಾಜಕಾರಣದಲ್ಲಿ 2 ಮಹತ್ವಪೂರ್ಣ ಪರಿವರ್ತನೆಗಳನ್ನು ತಂದಿದೆ.
ಮೊದಲನೆಯದು, ರಾಜ್ಯದ ಮಂತ್ರಿಮಂಡಲದ ಒಟ್ಟು ಸದಸ್ಯರ ಸಂಖ್ಯೆಯನ್ನು ವಿಧಾನಸಭೆಯ ಸದಸ್ಯರ ಸಂಖ್ಯೆಯ ಶೇಕಡಾ 15ಕ್ಕೆಸೀಮಿತಗೊಳಿಸಲಾಯಿತು.
ಎರಡನೆಯದು, ಪಕ್ಷಾಂತರ ವಿರೋಧಿ ಕಾನೂನಿನ ಅಡಿ ನಿರ್ಧರಿಸಲಾದ ಕನಿಷ್ಠ ಬೆಂಬಲವನ್ನು ಮೂರನೆಯ ಒಂದರಷ್ಟಿದ್ದದ್ದನ್ನು ಹೆಚ್ಚಿಸಿ, ಮೂರನೆಯಎರಡರಷ್ಟು ಮಾಡಲಾಯಿತು. ಇದರ ಜೊತೆಗೆ ಪಕ್ಷಾಂತರಿಗಳನ್ನು ಅನರ್ಹರು ಎಂದು ನಿರ್ಧರಿಸಲು ಸ್ಪಷ್ಟವಾದ ನಿರ್ದೇಶನಗಳನ್ನೂ ಕೂಡಾಸೂಚಿಸಲಾಗಿತ್ತು.
ಹಲವು ದಶಕಗಳಲ್ಲಿ ಭಾರತದಲ್ಲಿ ಬಹು ದೊಡ್ಡ ಪ್ರಮಾಣದ ಮಂತ್ರಿ ಮಂಡಲ ರಚಿಸುವ ರಾಜಕೀಯ ಸಂಸ್ಕೃತಿ ಇತ್ತು, ಇಂಥ ಅಗಾಧ ಮಂತ್ರಿ ಮಂಡಲವನ್ನುಕೆಲಸದ ಹಂಚಿಕೆಗಾಗಿ ಆಗಿರದೇ, ರಾಜಕೀಯ ನಾಯಕರನ್ನು ಸಂತೋಷಪಡಿಸಲು ಮಾತ್ರ ರಚಿಸಲಾಗುತ್ತಿತ್ತು. ಅಟಲ್ ಜೀ ಯವರು ಇದನ್ನುಬದಲಾಯಿಸಿದರು. ಅವರ ಈ ದಿಟ್ಟ ಹೆಜ್ಜೆಯಿಂದ ಹಣ ಮತ್ತು ಸಂಪನ್ಮೂಲಗಳ ಉಳಿತಾಯವಾಯಿತು. ಇದರ ಜೊತೆ ಕಾರ್ಯಕ್ಷಮತೆಯಲ್ಲೂ ಅಭಿವೃದ್ಧಿಕಂಡುಬಂತು. ಇದು ಅಟಲ್ ಜೀ ಯವರ ದೂರದೃಷ್ಟಿಯಿಂದಲೇ ಸಾಧ್ಯವಾಗಿತ್ತು, ಇವರು ಇದ್ದ ಪರಿಸ್ಥಿತಿಯನ್ನು ಬದಲಿಸಿ ರಾಜಕೀಯ ಸಂಸ್ಕೃತಿಯಲ್ಲಿಆರೋಗ್ಯಕರ ಪರಂಪರೆಯನ್ನು ಹುಟ್ಟುಹಾಕಿದರು. ಅಟಲ್ಜಿಯವರು ಒಬ್ಬ ನಿಜವಾದ ದೇಶ ಭಕ್ತನಾಗಿದ್ದರು. ಅವರ ಅಧಿಕಾರದಲ್ಲಿಯೇ ಬಜೆಟ್ ಮಂಡಿಸುವವೇಳೆಯಲ್ಲಿ ಬದಲಾವಣೆ ತರಲಾಯಿತು. ಹಿಂದೆ ಬ್ರಿಟಿಷರ ಪರಂಪರೆಯಂತೆ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು ಏಕೆಂದರೆ ಅದು ಲಂಡನ್ನಲ್ಲಿಸಂಸತ್ ಅಧಿವೇಶನ ಆರಂಭವಾಗುವ ಸಮಯವಾಗಿತ್ತು. 2001 ನೇ ಇಸವಿಯಲ್ಲಿ ಅಟಲ್ಜಿಯವರು ಬಜೆಟ್ ಮಂಡನೆ ಸಮಯವನ್ನು ಸಂಜೆ 5 ರಿಂದ ಬೆಳಿಗ್ಗೆ11 ಕ್ಕೆ ಬದಲಾಯಿಸಿದರು. “ಮತ್ತೊಂದು ಸ್ವಾತಂತ್ರ್ಯ” ಅಟಲ್ಜಿಯವರ ಕಾರ್ಯಾವಧಿಯಲ್ಲಿ ಭಾರತೀಯ ಧ್ವಜ ಸಂಹಿತೆಯನ್ನು ರೂಪಿಸಿ, 2002 ರಲ್ಲಿಜಾರಿಗೆ ತರಲಾಯಿತು. ಈ ಸಂಹಿತೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಾಧ್ಯವಾಗುವಂತಹ ಹಲವು ನಿಯಮಗಳನ್ನುಸೇರಿಸಲಾಗಿದೆ. ಇದರಿಂದಾಗಿ ಬಹಳಷ್ಟು ಭಾರತೀಯ ನಾಗರಿಕರಿಗೆ ತಮ್ಮ ರಾಷ್ಟ್ರ ಧ್ವಜವನ್ನು ಹಾರಿಸುವ ಅವಕಾಶ ಲಭಿಸಿತು. ಹೀಗೆ ಅವರು ನಮಗೆಅತ್ಯಂತ ಪ್ರಿಯವಾದ ತ್ರಿವರ್ಣ ಧ್ವಜವನ್ನು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿದರು.
ನೀವು ನೋಡಿದ್ದೀರಿ!ಅಟಲ್ಜಿಯವರು ದೇಶದಲ್ಲಿಚುನಾವಣೆ ಪ್ರಕ್ರಿಯೆಯಾಗಿರಲಿ ಅಥವಾ ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ಇದ್ದ ಕೆಟ್ಟ ಭಾವನೆ ಇರಲಿ ಅದರ ವಿರುದ್ಧ ಸಾಹಸಮಯ ಕ್ರಮಗಳನ್ನು ಕೈಗೊಂಡುಮೂಲದಿಂದಲೇ ಸುಧಾರಣೆ ತಂದರು. ಹೀಗೆ ಇಂದು ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಸುವ ಕುರಿತು ಚರ್ಚೆ ಮುಂದುವರಿದಿದೆ. ಈವಿಷಯದ ಪರವಾಗಿ ಮತ್ತು ವಿರೋಧವಾಗಿ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಶುಭಸಂಕೇತವೂ ಆಗಿದೆ. ಆರೋಗ್ಯಕರ, ಉತ್ತಮ ಪ್ರಜಾಪ್ರಭುತ್ವಕ್ಕೆ ಉತ್ತಮ ಸಂಸ್ಕೃತಿಯನ್ನು ಬೆಳೆಸುವುದು, ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲುನಿರಂತರ ಪ್ರಯತ್ನಿಸುವುದು, ಚರ್ಚೆಗಳನ್ನು ಮುಕ್ತ ಮನಸ್ಸಿನಿಂದ ಮುಂದುವರಿಸುವುದು ಇವೆಲ್ಲವುಗಳುಅಟಲ್ಜಿಯವರಿಗೆ ಸಲ್ಲಿಸುವ ಅತ್ಯುತ್ತಮ ಶೃದ್ಧಾಂಜಲಿಆಗುತ್ತದೆ ಎಂಬುದನ್ನು ನಾನು ಹೇಳಬಯಸುತ್ತೇನೆ.ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅವರ ಕನಸನ್ನು ಪೂರ್ಣಗೊಳಿಸುವ ಸಂಕಲ್ಪವನ್ನುಪುನರುಚ್ಛರಿಸಿ ನಾನು ಎಲ್ಲರ ಪರವಾಗಿ ಅಟಲ್ಜಿಯವರಿಗೆ ಶೃದ್ಧಾಂಜಲಿ ಅರ್ಪಿಸುತ್ತೇನೆ.
ಪ್ರಿಯ ದೇಶವಾಸಿಗಳೆ,ಇತ್ತೀಚಿನ ದಿನಗಳಲ್ಲಿ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳೆಲ್ಲವೂ ಸಾಮಾನ್ಯವಾಗಿ ಅಡಚಣೆ, ಕೂಗಾಟಗಳ ಜೊತೆಗೆಪ್ರಗತಿಯನ್ನು ತಡೆಯುವಂತಹ ವಿಷಯಗಳ ಕುರಿತೇ ಹೆಚ್ಚು ಆಗುತ್ತವೆ. ಆದರೆ ಒಳಿತನ್ನು ಬಯಸುವ ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆ ಆಗುವುದೇ ಇಲ್ಲ.ಕೆಲವೇ ದಿನಗಳ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯವಾಯಿತು. ಲೋಕಸಭಾ ಅಧಿವೇಶನದ ಗುಣಾತ್ಮಕ ಬಳಕೆ ಶೇ.118 ಮತ್ತುರಾಜ್ಯಸಭೆ ಉತ್ಪಾದಕತೆ ಶೇ.74 ಎಂಬುದನ್ನು ಕೇಳಿ ನಿಮಗೆ ಸಂತೋಷವಾಗಬಹÅದು. ಎಲ್ಲಾ ಸಂಸದರೂ ಕೂಡ, ಪಕ್ಷಾತೀತವಾಗಿ ಸಂಸತ್ತಿನಮುಂಗಾರು ಅಧಿವೇಶನವನ್ನು ಹೆಚ್ಚು ಉಪಯುಕ್ತವನ್ನಾಗಿಸಿದರು. ಹಾಗಾಗಿ ಲೋಕಸಭೆಯಲ್ಲಿ ಇಪ್ಪತ್ತೊಂದು ವಿಧೇಯಕಗಳು, ರಾಜ್ಯಸಭೆಯಲ್ಲಿ ಹದಿನಾಲ್ಕುವಿಧೇಯಕಗಳು ಅನುಮೋದಿತವಾದವು. ಸಂಸತ್ತಿನ ಈ ಮುಂಗಾರು ಅಧಿವೇಶನವು ಸಾಮಾಜಿಕ ನ್ಯಾಯ ಮತ್ತು ಯುವಜನತೆಯ ಕಲ್ಯಾಣದ ಅಧಿವೇಶನದರೂಪದಲ್ಲಿ ಎಲ್ಲಾ ಕಾಲದಲ್ಲೂ ನೆನಪಿಸಿಕೊಳ್ಳುವಂಥಾದ್ದು.ಈ ಅಧಿವೇಶನದಲ್ಲಿ ಯುವಕರಿಗೆ ಮತ್ತು ಹಿಂದುಳಿದ ಸಮುದಾಯಗಳಿಗೆ ಅನುಕೂಲಕರವಾದಹಲವು ಮಹತ್ವಪೂರ್ಣ ವಿಧೇಯಕಗಳು ಅನುಮೋದಿಸಲ್ಪಟ್ಟಿವೆ.ನಿಮಗೆಲ್ಲಾ ತಿಳಿದೇ ಇದೆ – “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ರೀತಿಯಲ್ಲೇ ಇತರಹಿಂದುಳಿದ ವರ್ಗಗಳ ಆಯೋಗದ [OBC COMMISSION] ಸ್ಥಾಪನೆಗಾಗಿ ಕಳೆದ ಹಲವು ದಶಕಗಳಿಂದಲೂ ಬೇಡಿಕೆ ಇತ್ತು. ಹಿಂದುಳಿದ ವರ್ಗಗಳಹಕ್ಕನ್ನು ನಿರ್ಧರಿಸಲು ಹಿಂದುಳಿದ ವರ್ಗಗಳ ಆಯೋಗ [OBC COMMISSION] ರಚಿಸುವ ಸಂಕಲ್ಪವನ್ನು ಪೂರ್ಣಗೊಳಿಸಿದೆ, ಅಷ್ಟೇ ಅಲ್ಲ ಅದಕ್ಕೆಸಂವಿಧಾನಬದ್ಧ ಅಧಿಕಾರವನ್ನೂ ನೀಡಲಾಗಿದೆ.ಈ ಒಂದು ಹೆಜ್ಜೆ ಸಾಮಾಜಿಕ ನ್ಯಾಯವನ್ನು ಮುಂದುವರೆಸಲು ಸಹಕಾರಿಯಾಗಿದೆ.ಅನುಸೂಚಿತ ಜಾತಿಮತ್ತು ಅನುಸೂಚಿತ ಜನಾಂಗೀಯ ಅಧಿಕಾರಗಳನ್ನು ಸುರಕ್ಷಿತವಾಗಿರಿಸಲು ತಿದ್ದುಪಡಿ ವಿಧೇಯಕಕ್ಕೂ ಅನುಮೋದನೆ ದೊರಕಿಸುವ ಕಾರ್ಯ ಸಹ ಈಅಧಿವೇಶನದಲ್ಲಿ ನಡೆದಿದೆ.ಈ ಕಾನೂನು ಎಸ್.ಸಿ.ಮತ್ತು ಎಸ್.ಟಿ. ಸಮುದಾಯದ ಹಿತವನ್ನು ಮತ್ತಷ್ಟು ಭದ್ರಗೊಳಿಸುವುದು.ಜೊತೆಯಲ್ಲೇ ಇದುಅಪರಾಧಿಗಳು ಅತ್ಯಾಚಾರ ಎಸಗುವುದನ್ನು ತಡೆಯುವುದು ಮತ್ತು ದಲಿತ ಸಮುದಾಯದಲ್ಲಿ ವಿಶ್ವಾಸವನ್ನು ತುಂಬುವುದು.
ದೇಶದ ಮಹಿಳೆಯ ವಿರುದ್ಧದ ಅನ್ಯಾಯವನ್ನು ಸಮಾಜದ ಯಾರೊಬ್ಬರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.ದೇಶವು ಬಲಾತ್ಕಾರಿಗಳನ್ನುಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದಲೇ, ಅಪರಾಧೀಯ ಕಾನೂನು ಸಂಶೋಧನಾ ವಿಧೇಯಕವನ್ನು ಜಾರಿಗೆ ತಂದು ಅತ್ಯಂತ ಕಠಿಣ ಶಿಕ್ಷೆ ನೀಡಲುಅನುವುಮಾಡಿಕೊಟ್ಟಿದೆ.ಇಂತಹ ದುಷ್ಕರ್ಮಿಗಳಿಗೆ ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆಯಾಗುವುದು. ಹನ್ನೆರಡು ವರ್ಷಗಳಿಗಿಂತಲೂ ಚಿಕ್ಕ ವಯಸ್ಸಿನಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯಾಗುವುದು. ತಾವೆಲ್ಲಾ ಪತ್ರಿಕೆಗಳಲ್ಲಿ ಓದಿರಬಹದು. – ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಮಂದಸೌರ್ನ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರದಒಂದು ಪ್ರಕರಣದಲ್ಲಿ ಕೇವಲ ಎರಡು ತಿಂಗಳ ಕಾಲ ವಿಚಾರಣೆ ನಡೆದು, ಇಬ್ಬರು ದೋಷಿಗಳಿಗೆಗಲ್ಲು ಶಿಕ್ಷೆಯಾಗಿದೆ. ಇದಕ್ಕೂ ಮೊದಲು ಮಧ್ಯಪ್ರದೇಶದ ಕಟ್ನೀ ನ್ಯಾಯಾಲಯವು ಒಂದು ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಆಲಿಸಿ, ಇಂತಹುದೇರೀತಿಯ ತ್ವರಿತ ನಿರ್ಣಯವನ್ನು ಕೈಗೊಂಡಿದೆ.ರಾಜಾಸ್ಥಾನದಲ್ಲೂ ಸಹ ಅಲ್ಲಿಯ ನ್ಯಾಯಾಲಯಗಳೂ ಸಹ ಇಂತಹದೇ ಶೀಘ್ರ ತೀರ್ಮಾನಗಳನ್ನುಕೈಗೊಂಡಿವೆ. ಈ ಕಾನೂನು ಮಹಿಳೆಯರ ಮತ್ತು ಬಾಲಕಿಯರ ವಿರುದ್ಧ ಅಪರಾಧ ಎಸಗುವುದನ್ನು ತಡೆಯುವ ವಿಚಾರದಲ್ಲಿ ಮುಖ್ಯ ಭೂಮಿಕೆಯಾಗಲಿದೆ.
ಸಾಮಾಜಿಕ ಬದಲಾವಣೆ ಆಗದೆ, ಆರ್ಥಿಕ ಪ್ರಗತಿ ಪೂರ್ಣವಾಗುವುದಿಲ್ಲ.ತ್ರಿವಳಿ ತಲಾಖ್ ವಿಧೇಯಕವು ಲೋಕಸಭೆಯಲ್ಲಿಅಂಗೀಕಾರವಾಗಿದೆ.ಆದರೆ ರಾಜ್ಯಸಭೆಯ ಈ ಅಧಿವೇಶನದಲ್ಲಿ ಈ ಗೊತ್ತುವಳಿಯನ್ನು ಅಂಗೀಕರಿಸಲು ಸಾಧ್ಯವಾಗಿಲ್ಲ. ಮುಸ್ಲಿಮ್ ಸಮುದಾಯದಮಹಿಳೆಯರಿಗೆ ‘ಇಡೀ ದೇಶವೇ ಅವರಿಗೆ ನ್ಯಾಯ ಒದಗಿಸಲು ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಜೊತೆಗೆ ನಿಂತಿದೆ’ ಎಂಬ ಭರವಸೆ ನೀಡುತ್ತೇನೆ. ನಾವುಯಾವಾಗ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಹೆಜ್ಜೆ ಇಡುತ್ತೇವೆ ಆಗ ಬಡವರ, ಹಿಂದುಳಿದವರ, ಶೋಷಿತರ ಮತ್ತು ವಂಚಿತರ ಜೀವನದಲ್ಲಿಬದಲಾವಣೆ ತರಲು ಸಾಧ್ಯವಿದೆ. ಮುಂಗಾರಿನ ಈ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಒಂದು ಆದರ್ಶವನ್ನು ಪ್ರಕಟಮಾಡಿದ್ದಾರೆ.ನಾನು ನಮ್ಮ ದೇಶದ ಎಲ್ಲಾಸಂಸದರಿಗೂ ಸಾರ್ವತ್ರಿಕವಾಗಿ ಇಂದು ಹೃದಯಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೆ,
ಇತ್ತೀಚಿನ ದಿನಗಳಲ್ಲಿ ಕೋಟ್ಯಂತರ ದೇಶವಾಸಿಗಳ ಗಮನ ಜಕಾರ್ತಾದಲ್ಲಿ ನಡೆಯುತ್ತಿರುವ ‘ಏಷಿಯನ್ ಕ್ರೀಡೆ’ಗಳ ಕಡೆಗಿದೆ.ಪ್ರತಿನಿತ್ಯವೂ,ಬೆಳಗಾದ ಕೂಡಲೇ, ಜನರು ವಾರ್ತಾಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ, ಸಮಾಚಾರಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಒಂದು ದೃಷ್ಟಿ ಬೀರಿ ‘ಯಾವಭಾರತೀಯ ಆಟಗಾರ ಪದಕ ಪಡೆದಿದ್ದಾನೆ ಎಂಬುದನ್ನು ಗಮನಿಸುತ್ತಾರೆ.ಏಷಿಯನ್ ಕ್ರೀಡೆಗಳು ಇನ್ನೂ ನಡೆಯುತ್ತಿವೆ. ನಾನು ಭಾರತಕ್ಕೆ ಪದಕತಂದುಕೊಟ್ಟ ಪ್ರತಿಯೊಬ್ಬ ಕ್ರೀಡಾಪಟುವನ್ನೂ ಅಭಿನಂದಿಸುತ್ತೇನೆ. ಇನ್ನೂ ಉಳಿದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೂ ಶುಭವನ್ನುಕೋರುತ್ತೇನೆ.ಭಾರತದ ಕ್ರೀಡಾಪಟುಗಳು ವಿಶೇಷವಾಗಿ ಶೂಟಿಂಗ್ ಮತ್ತು ಕುಸ್ತಿಯಲ್ಲಿ ಉತ್ಕೃಷ್ಟ ಪ್ರದರ್ಶನವನ್ನು ನೀಡುತ್ತಿದ್ದಾರೆ.ಜೊತೆಗೆ, ಈ ಮೊದಲುಅಷ್ಟೇನೂ ಪರಿಣಾಮಕಾರಿ ಪ್ರದರ್ಶನ ನೀಡುತ್ತಾ ಇಲ್ಲದಿದ್ದ, ವುಶು ಮತ್ತು ರೋಯಿಂಗ್ನಲ್ಲೂ ಸಹ ಉನ್ನತ ಪ್ರದರ್ಶನ ನೀಡಿ ಪದಕಗಳನ್ನು ತರುತ್ತಿದ್ದಾರೆ.ಇವು ಕೇವಲ ಪದಕಗಳಲ್ಲ ಭಾರತೀಯ ಕ್ರೀಡೆ ಮತ್ತು ಕ್ರೀಡಾಪಟುಗಳ ಗಗನ ಚುಂಬಿ ಸ್ಥೈರ್ಯದ ಮತ್ತು ಗುರಿಮುಟ್ಟುವ ಕನಸಿನ ಪ್ರತೀಕವಾಗಿವೆ. ದೇಶಕ್ಕಾಗಿಪದಕಗಳನ್ನು ತರುತ್ತಿರುವವರ ಪಟ್ಟಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೂ ಅಧಿಕವಾಗಿದೆ.ಇದು ಸಕಾರಾತ್ಮಕ ಬೆಳವಣಿಗೆ.ಇಲ್ಲಿಯವರೆಗಿನ ಪದಕ ವಿಜೇತರಲ್ಲಿ 15- 16 ವರ್ಷಗಳ ಯುವಜನರೂ ಇದ್ದಾರೆ.ಇದೂ ಸಹ ಒಂದು ಒಳ್ಳೆಯ ಬೆಳವಣಿಗೆಯ ಸಂಕೇತ.ಪದಕಗಳನ್ನು ಗೆದ್ದಿರುವ ಕ್ರೀಡಾಪಟುಗಳಲ್ಲಿ ಸಣ್ಣ ಸಣ್ಣಹೋಬಳಿಗಳಲ್ಲಿ ಮತ್ತು ಹಳ್ಳಿಗಳಲ್ಲಿ ವಾಸಿಸುವವರ ಸಂಖ್ಯೆಯೂ ಅಧಿಕವಾಗಿಯೇ ಇದೆ.ಇದು ಅಲ್ಲಿನ ಜನರ ಕಠಿಣ ಪರಿಶ್ರಮಕ್ಕೆ ದಕ್ಕಿರುವ ಫಲ.
ಆಗಸ್ಟ್ 29 ರಾಷ್ಟ್ರೀಯ ಕ್ರೀಡಾ ದಿನವಾಗಿದೆ.‘ರಾಷ್ಟ್ರೀಯ ಖೇಲ್ ದಿವಸ್’ ಎಂದು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಕ್ರೀಡಾಪ್ರೇಮಿಗಳೆಲ್ಲರಿಗೂಶುಭಕಾಮನೆಗಳನ್ನು ತಿಳಿಸುತ್ತೇನೆ. ಜೊತೆಗೆ ಹಾಕೀ ಕ್ಷೇತ್ರದ ಮಾಂತ್ರಕ ಶ್ರೀಯುತ ಧ್ಯಾನ್ಚಂದ್ ಅವರಿಗೆ ನನ್ನ ಶ್ರದ್ಧಾಂಜಲಿ ಸಮರ್ಪಿಸುತ್ತೇನೆ.
ನಾನು ನನ್ನ ದೇಶದ ಸಮಸ್ತ ನಾಗರಿಕರಲ್ಲಿ ಮನವಿ ಮಾಡುವುದೇನೆಂದರೆ ‘ಪ್ರತಿಯೊಬ್ಬರೂ ಆಟವಾಡಿ ಆದರೆ ನಿಮ್ಮ ದೈಹಿಕ ದೃಢತೆ ಬಗ್ಗೆಗಮನವಿರಲಿ.ಸ್ವಸ್ಥ ಭಾರತ (ಭಾರತೀಯರಿಂದ) ಮಾತ್ರವೇ ಸಂಪನ್ನ ಮತ್ತು ಸಮೃದ್ಧವಾದ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ.ಯಾವಾಗ ಭಾರತಸಶಕ್ತವಾಗುತ್ತದೋ ಆಗ ಮಾತ್ರ ಭಾರತದ ಉಜ್ವಲ ಭವಿಷ್ಯದ ನಿರ್ಮಾಣವಾಗುತ್ತದೆ.ಮತ್ತೊಮ್ಮೆ ನಾನು ಏಷಿಯನ್ ಕ್ರೀಡೆಗಳಲ್ಲಿ ಪದಕ ಗೆದ್ದವರನ್ನುಅಭಿನಂದಿಸುತ್ತೇನೆ. ಮತ್ತು ಉಳಿದ ಕ್ರೀಡಾಪಟುಗಳಿಂದಲೂ ಉತ್ತಮ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತೇನೆ.ಎಲ್ಲರಿಗೂ ರಾಷ್ಟ್ರೀಯ ಕ್ರೀಡಾದಿನದಶುಭಾಶಯಗಳು.
“ಪ್ರಧಾನಮಂತ್ರಿಗಳೆ, ನಮಸ್ಕಾರ.ನಾನು ಕಾನ್ಪುರದ ಭಾವನಾ ತ್ರಿಪಾಠಿ ಮಾತನಾಡುತ್ತಿದ್ದೇನೆ. ಓರ್ವ ಇಂಜಿನಿಯರಿಂಗ್ವಿದ್ಯಾರ್ಥಿನಿ.ಪ್ರಧಾನಮಂತ್ರಿಗಳೆ, ತಾವು ಹಿಂದಿನ ‘ಮನ್ ಕೀ ಬಾತ್’ನಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಿರಿ.ಅದಕ್ಕೂ ಪೂರ್ವದಲ್ಲಿ ತಾವುವೈದ್ಯರು ಮತ್ತು ಲೆಕ್ಕಪರಿಶೋಧಕರ ಜೊತೆ ಕೂಡ ಮಾತುಕತೆ ನಡೆಸಿದ್ದಿರಿ.ನನ್ನದೊಂದು ಮನವಿಯಿದೆ. ‘ಬರುವ ಸೆಪ್ಟೆಂಬರ್ ಹದಿನೈದನ್ನು ಇಂಜಿನಿಯರ್ಗಳ ದಿನ ಎಂದು ಆಚರಿಸಲಾಗುತ್ತದೆ.ಇದನ್ನು ಗಮನದಲ್ಲಿಟ್ಟುಕೊಂಡು ತಾವು ನಮ್ಮಂತಹ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಡನೆ ಮಾತನಾಡಿ.ಇದರಿಂದನಮ್ಮ ಮನೋಸ್ಥೈರ್ಯವೂ ಸಹ ವೃದ್ಧಿಯಾಗುತ್ತದೆ.ನಮಗೆ ಸಂತೋಷವೂ ಆಗುತ್ತದೆ.ಮುಂಬರುವ ದಿನಗಳಲ್ಲಿ ನಮ್ಮ ದೇಶಕ್ಕಾಗಿ ಏನನ್ನಾದರೂ ಮಾಡಲುನಮಗೆ ಪ್ರೋತ್ಸಾಹವೂ ಸಿಗುವುದು.”
ಭಾವನಾ ಜೀ, ನಮಸ್ತೆ.ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ.ಇಟ್ಟಿಗೆ-ಕಲ್ಲುಗಳಿಂದ ಮನೆಗಳನ್ನು, ಕಟ್ಟಡಗಳ ನಿರ್ಮಾಣ ಮಾಡುವುದನ್ನುನಾವೆಲ್ಲರೂ ಗಮನಿಸಿದ್ದೇವೆ.ಸುಮಾರು 1200 ವರ್ಷಗಳ ಹಿಂದೆ ಒಂದು ಏಕಶಿಲಾ ಬೆಟ್ಟವನ್ನು ಕಟೆದು ಒಂದು ಉತ್ಕೃಷ್ಟ, ವಿಶಾಲ ಮತ್ತು ಅದ್ಭುತಮಂದಿರದ, ದೇವಸ್ಥಾನದ ರೂಪ ಕೊಡಲಾಗಿದೆ.ಬಹಶಃ ಊಹಿಸಿಕೊಳ್ಳಲೂ ಅಸಾಧ್ಯವಾದದ್ದು.ಆದರೆ ಇದನ್ನು ಸಾಕಾರಗೊಳಿಸಲಾಗಿದೆ.ಮಹಾರಾಷ್ಟ್ರದಎಲ್ಲೋರಾದಲ್ಲಿರುವ ಕೈಲಾಸನಾಥಮಂದಿರವೇ ಇದು.
ಸಾವಿರ ವರ್ಷಗಳ ಹಿಂದೆ ಗ್ರಾನೈಟ್ನ 60 ಮೀಟರ್ ಎತ್ತರದ ಒಂದು ಕಂಬ ಹಾಗೂ ಅದರ ತುದಿಯಲ್ಲಿ ಸುಮಾರು 80 ಟನ್ ತೂಕದ ಒಂದುಶಿಲಾಕೃತಿಯ ಸ್ಥಾಪನೆಯಾಗಿದೆ.ಇದನ್ನು ತಾವು ನಂಬುತ್ತೀರಾ?ಅದುವೇ ತಮಿಳುನಾಡಿನ ತಂಜಾವೂರಿನಲ್ಲಿರುವ ಬೃಹದೇಶ್ವರ ಮಂದಿರ.ಇಲ್ಲಿಯ ಸ್ಥಪತಿಯವಿಸ್ಮಯದ ಶಿಲ್ಪಕಲೆ ಮತ್ತು ಇಂಜಿನಿಯರಿಂಗ್ಕೌಶಲ್ಯ ಸಂಯೋಜನೆ ನಂಬಲು ಅಸಾಧ್ಯ ಎನಿಸುತ್ತದೆ.
ಗುಜರಾತಿನ ಪಾಟಣ್ ದಲ್ಲಿರುವ 11ನೇ ಶತಮಾನದ ರಾಣಿ ಕೀ ವಾವ್ ಅಥವಾ ಮೆಟ್ಟಿಲು ಬಾವಿ ನೋಡಿದರೆ ಯಾರೇ ಆದರೂಆಶ್ಚರ್ಯಚಕಿತರಾಗುತ್ತಾರೆ.ಇದು ಭಾರತದ ಕಟ್ಟಡ ನಿರ್ಮಾಣದ ಪ್ರಯೋಗಶಾಲೆಯಂತಿದೆ.ಕಲ್ಪನೆಗೂ ನಿಲುಕದಂತಹುದನ್ನು ಕಲ್ಪಿಸಿಕೊಳ್ಳುವಂತೆ ಮಾಡಿದಇಂತಹ ಎಷ್ಟೋ ಇಂಜಿನಿಯರ್ಗಳು ಭಾರತದಲ್ಲಿ ಇದ್ದರು.ಇಂಜಿನಿಯರಿಂಗ್ನಲ್ಲಿ ಚಮತ್ಕಾರಗಳನ್ನೇ ಸೃಷ್ಟಿಸಿದ್ದಾರೆ.ಮಹಾನ್ ಇಂಜಿನಿಯರ್ಗಳಪರಂಪರೆಯಲ್ಲಿ ಇಂತಹ ಒಂದು ರತ್ನ ನಮಗೆ ದೊರೆತಿದೆ.ಯಾರ ಕೆಲಸ ಇಂದೂ ಸಹ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೋ, ಅಂತಹ ರತ್ನಭಾರತರತ್ನ ಡಾ.ಎಮ್.ವಿಶ್ವೇಶ್ವರಯ್ಯ.ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೃಷ್ಣರಾಜಸಾಗರ ಅಣೆಕಟ್ಟಿನ ಲಾಭವನ್ನು ಇಂದಿಗೂ ಸಹ ಲಕ್ಷಾಂತರರೈತರು ಮತ್ತು ಜನಸಾಮಾನ್ಯರು ಪಡೆಯುತ್ತಿದ್ದಾರೆ.ದೇಶದ ಆ ಭಾಗದವರಿಗೆ ಅವರು ಪೂಜನೀಯರೇ ಹೌದು – ಹಾಗೆಯೇ ಇತರ ಭಾಗದವರೂ ಸಹಅವರನ್ನು ಅಷ್ಟೇ ಗೌರವ ಮತ್ತು ಆತ್ಮೀಯತೆಯಿಂದ ನೆನಪಿಸಿಕೊಳ್ಳುತ್ತಾರೆ. ಅವರ ಸ್ಮರಣೆಯಲ್ಲೇ ಪ್ರತಿವರ್ಷ ಸೆಪ್ಟೆಂಬರ್ 15ರಂದು ಇಂಜಿನಿಯರ್ಸ್ ಡೇಆಚರಿಸಲಾಗುತ್ತದೆ.ಅವರ ಹೆಜ್ಜೆಯ ಹಾದಿಯಲ್ಲೇ ಸಾಗಿದ ನಮ್ಮ ದೇಶದ ಅಸಂಖ್ಯಾತ ಇಂಜಿನಿಯರ್ಗಳು ವಿಶಾಲ ಪ್ರಪಂಚದಲ್ಲಿ ತಮ್ಮದೇ ಆದ ಛಾಪನ್ನುಮೂಡಿಸಿದ್ದಾರೆ.
ಇಂಜಿನಿಯರಿಂಗ್ನ ಚಮತ್ಕಾರದ ಬಗ್ಗೆ ಮಾತನಾಡುವಾಗಲೆಲ್ಲಾ ನನಗೆ 2001ರಲ್ಲಿ ಗುಜರಾತ್ನ ಕಛ್ನಲ್ಲಿ ಭಯಂಕರ ಭೂಕಂಪ ಸಂಭವಿಸಿತ್ತಲ್ಲ, ಅದರಒಂದು ಘಟನೆಯ ನೆನೆಪು ಬರುತ್ತದೆ.ಆ ಸಮಯದಲ್ಲಿ ನಾನೊಬ್ಬ ಕಾರ್ಯಕರ್ತನಾಗಿ, ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ.ನನಗೆ ಒಂದು ಹಳ್ಳಿಗೆಹೋಗುವ ಅವಕಾಶ ಸಿಕ್ಕಿತು.ಅಷ್ಟೇ ಅಲ್ಲ ಆ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಯಸ್ಸಾಗಿದ್ದ ಒಬ್ಬ ತಾಯಿಯನ್ನು ಭೇಟಿ ಮಾಡುವ ಅವಕಾಶ ಒದಗಿತು. ಆಕೆನಮ್ಮ ಕಡೆ ನೋಡಿ ನಗುತ್ತಾ ಹೇಳಿದಳು – ‘ನೋಡಿ ಇದು ನನ್ನ ಮನೆ. ಕಛ್ನಲ್ಲಿ ಇದಕ್ಕೆ ಭೂಂಗಾ ಎನ್ನುತ್ತೇವೆ. ಈ ನನ್ನ ಮನೆ ಮೂರು-ಮೂರುಭೂಕಂಪಗಳನ್ನು ಕಂಡಿದೆ. ನಾನೂ ಸ್ವತಃ ಮೂರು ಭೂಕಂಪಗಳನ್ನು ನೋಡಿದ್ದೇನೆ. ಇದೇ ಮನೆಯಲ್ಲಿ ನೋಡಿದ್ದೇನೆ. ಆದರೆ ನಿಮಗೆ ಎಲ್ಲೂ, ಏನೂನಷ್ಟವಾಗಿರುವುದು ಕಂಡುಬರುವುದಿಲ್ಲ. ಈ ಮನೆಯನ್ನು ನನ್ನ ಪೂರ್ವಜರು, ಇಲ್ಲಿ ಪ್ರಕೃತಿಗೆ ಅನುಗುಣವಾಗಿ, ವಾತಾವರಣಕ್ಕೆ ಹೊಂದಿಕೆಯಾಗುವಂತೆನಿರ್ಮಾಣ ಮಾಡಿದ್ದಾರೆ.’ಎಂಬ ಮಾತನ್ನು ಬಹಳ ಹೆಮ್ಮೆಯಿಂದ ಹೇಳಿದಳು.ಇದನ್ನು ಕೇಳುವಾಗ, ನೋಡಿದಾಗ ನನಗೆ ಅನ್ನಿಸಿದ್ದು, ಶತಮಾನಗಳಹಿಂದೆಯೂ ಸಹ ಆ ಕಾಲದ ಇಂಜಿನಿಯರ್ಗಳೂ ಸಹ ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ, ಎಂತೆಂತೆಹ ರಚನೆಗಳನ್ನು ಮಾಡಿದ್ದಾರೆ.ಬಹಶಃ ಆಕಾರಣದಿಂದಲೇ ಜನಸಾಮಾನ್ಯರು ಸುರಕ್ಷಿತವಾಗಿ ಇರುತ್ತಿದ್ದರು ಎನ್ನಿಸಿತು.
ನಾವು ಈಗ ಇಂಜಿನಿಯರ್ಸ್ ಡೇ ಆಚರಿಸುವಾಗ ಭವಿಷ್ಯದ ಬಗ್ಗೆಯೂ ಚಿಂತಿಸಬೇಕು.ಪ್ರತಿಯೊಂದು ಸ್ಥಳಗಳಲ್ಲೂ ಕಾರ್ಯಾಗಾರಗಳುನಡೆಯಬೇಕು.ಬದಲಾಗುತ್ತಿರುವ ಕಾಲಮಾನದಲ್ಲಿ ನಾವು ಯಾವ ಯಾವ ಹೊಸ ವಿಚಾರಗಳನ್ನು ಕಲಿಯಬೇಕಿದೆ?ಯಾವ ವಿಚಾರಗಳನ್ನು ಕಲಿಸಬೇಕಿದೆ?ಯಾವುದನ್ನು ಜೋಡಿಸಬೇಕಿದೆ?ಇಂದು ಪ್ರಕೃತಿ ವಿಕೋಪ ನಿಯಂತ್ರಣವೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ.ಪ್ರಾಕೃತಿಕ ವಿಪತ್ತುಗಳಿಂದ ಪ್ರಪಂಚತತ್ತರಿಸುತ್ತಿದೆ.ಇದರಲ್ಲಿ ರಚನಾತ್ಮಕ ಇಂಜಿನಿಯರಿಂಗ್ನ ಹೊಸ ವಿನ್ಯಾಸ ಹೇಗಿರಬೇಕು? ಯಾವ ಯಾವ ಕೋರ್ಸ್ಗಳಿರಬೇಕು ? ವಿದ್ಯಾರ್ಥಿಗಳಿಗೆ ಏನನ್ನುಕಲಿಸಬೇಕು ? ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಕೃತಿಸ್ನೇಹಿಯಾಗಿ ಹೇಗಿರಬೇಕು?ಸ್ಥಳೀಯವಾಗಿ ದೊರಕುವ ಸಾಮಗ್ರಿಗಳನ್ನೇ ಬಳಸಿಕೊಂಡುಮೌಲ್ಯಯುಕ್ತ ನಿರ್ಮಾಣವನ್ನು ಮಾಡುವುದನ್ನು ಹೇಗೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದು?ಒಂದು ಪದಾರ್ಥವೂ ವ್ಯರ್ಥವಾಗದಂತೆ ಹೇಗೆಉಪಯೋಗಿಸಬೇಕು ಎಂಬುದರ ಬಗ್ಗೆ ಪ್ರಾಥಮಿಕ ಚಿಂತನೆ ಆಗಬೇಕು?ಇಂತಹ ಅನೇಕ ವಿಷಯಗಳನ್ನು ಇಂಜಿನಿಯರ್ಸ್ ದಿನವನ್ನು ಆಚರಿಸುವಾಗಚಿಂತಿಸಬೇಕಾದ ಅವಶ್ಯಕತೆ ಇದೆ.
ನನ್ನ ಪ್ರಿಯ ದೇಶಬಂಧುಗಳೆ,ಉತ್ಸವಗಳ ವಾತಾವರಣವಿದೆ.ಜೊತೆಯಲ್ಲಿ ದೀಪಾವಳಿ ಹಬ್ಬದ ತಯಾರಿಯೂ ಆರಂಭವಾಗುತ್ತದೆ. ‘ಮನದ ಮಾತಿನಲ್ಲಿಭೇಟಿಯಾಗುತ್ತಲೇಇರೋಣ.‘ಮನದ ಮಾತು’ಗಳನ್ನು ಆಡುತ್ತಲೇ ಇರೋಣ.ನಾವು ದೇಶವನ್ನು ಮುನ್ನಡೆಸುವಲ್ಲಿ ಮನಸಾರೆ ಜೊತೆಯಾಗಿ ಸಾಗೋಣ.ಇದೇಭಾವನೆಗಳೊಂದಿಗೆ ತಮಗೆಲ್ಲಾ ಅನಂತ ಶುಭಕಾಮನೆಗಳನ್ನು ತಿಳಿಸುತ್ತೇನೆ.ಧನ್ಯವಾದ. ಮತ್ತೆ ಭೇಟಿಯಾಗೋಣ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ.
ಈ ಮಳೆಗಾಲದ ದಿನಗಳಲ್ಲಿ ಬಹಳಷ್ಟು ಸ್ಥಳಗಳಿಂದ ಹೆಚ್ಚಿನ ಮಳೆಯಾಗಿರುವ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ಸ್ಥಳಗಳಲ್ಲಿ ಅತೀವೃಷ್ಟಿಯಿಂದಾಗಿ ಆತಂಕದ ಸುದ್ದಿಗಳೂ ಬರುತ್ತಿವೆ ಮತ್ತು ಇನ್ನು ಕೆಲವೆಡೆ ಜನರು ಇನ್ನೂ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಭಾರತದ ವಿಶಾಲತೆ, ವಿವಿಧತೆಯೊಂದಿಗೆ ಕೆಲವೊಮ್ಮೆ ಮಳೆ ಕೂಡಾ ಇಷ್ಟಾನಿಷ್ಟದ ರೂಪ ಪ್ರದರ್ಶಿಸುತ್ತದೆ. ಆದರೆ ನಾವು ಮಳೆಯನ್ನು ಹೇಗೆ ದೂಷಿಸುವುದು, ಸ್ವತಃ ಮನುಷ್ಯನೇ ಪ್ರಕೃತಿಯೊಂದಿಗೆ ಸಂಘರ್ಷದ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅದರ ಪರಿಣಾಮವೇ ಕೆಲವೊಮ್ಮೆ ನಿಸರ್ಗ ನಮ್ಮೊಂದಿಗೆ ಮುನಿಸಿಕೊಳ್ಳುತ್ತದೆ. ಆದ್ದರಿಂದ ನಾವು ನಿಸರ್ಗ ಪ್ರೆಮಿಗಳಾಗಬೇಕು, ಪ್ರಕೃತಿಯ ರಕ್ಷಕರಾಗಬೇಕು, ಪ್ರಕೃತಿಯ ಪ್ರವರ್ತಕರಾಗಬೇಕು ಎಂಬುದು ನಮ್ಮ ಕರ್ತವ್ಯವಾಗಿದೆ. ಆಗ ಮಾತ್ರ ಪ್ರಕೃತಿದತ್ತ ವಸ್ತುಗಳಲ್ಲಿ ಸಮತೋಲನ ತನ್ನಿಂತಾನೇ ಮೂಡುತ್ತದೆ.
ಕೆಲದಿನಗಳ ಹಿಂದೆ ಇಂಥದೇ ಒಂದು ಪ್ರಕೃತಿ ವಿಕೋಪದ ಘಟನೆ ಸಂಪೂರ್ಣ ವಿಶ್ವದ ಗಮನ ಸೆಳೆದಿತ್ತು. ಮನುಜ ಕುಲದ ಮನಸ್ಸನ್ನೇ ಕಲಕಿಬಿಟ್ಟಿತ್ತು. ನೀವೆಲ್ಲರೂ ಟಿ ವಿ ಯಲ್ಲಿ ನೋಡಿರಬಹುದು. ಥೈಲೆಂಡ್ನಲ್ಲಿ 12 ಜನ ಯುವಕರ ಫುಟ್ಬಾಲ್ ತಂಡ ಮತ್ತು ಅವರ ತರಬೇತುದಾರ ಚಾರಣಕ್ಕೆಂದು ಗುಹೆಗೆ ತೆರಳಿದ್ದರು. ಸಾಮಾನ್ಯವಾಗಿ ಗುಹೆಯೊಳಗೆ ಹೋಗಿ ಹೊರಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಅಂದು ವಿಧಿಯಾಟ ಬೇರೆಯೇ ಆಗಿತ್ತು. ಅಂದು ಅವರು ಗುಹೆಯಲ್ಲಿ ಬಹುದೂರ ತೆರಳಿದಾಗ ಇದ್ದಕ್ಕಿದ್ದಂತೆ ಜೋರಾದ ಮಳೆಯಿಂದಾಗಿ ಗುಹೆಯ ಪ್ರವೇಶದ್ವಾರದ ಬಳಿ ಸಾಕಷ್ಟು ನೀರು ತುಂಬಿತ್ತು. ಹೊರಬರುವ ದಾರಿ ಮುಚ್ಚಿಬಿಟ್ಟಿತ್ತು. ಬೇರೆ ಯಾವ ದಾರಿ ಇಲ್ಲದ ಕಾರಣ ಗುಹೆಯಲ್ಲಿಯೇ ಒಂದು ದಿಬ್ಬದ ಮೇಲೆ ನಿಂತಿದ್ದರು ಅದೂ ಒಂದೆರಡು ದಿನಗಳಲ್ಲ ಪೂರ್ತಿ 18 ದಿನಗಳವರೆಗೆ. ಹದಿಹರೆಯದ ವಯಸ್ಸಿನಲ್ಲಿ ಕಣ್ಣೆದುರಿಗೆ ಸಾವು ತಾಂಡವವಾಡುತ್ತಿರುವಾಗ ಪ್ರತಿ ಕ್ಷಣವನ್ನು ಕಳೆಯುವುದು ಎಷ್ಟು ಭಯಂಕರ ಎನ್ನುವುದನ್ನು ನೀವು ಊಹಿಸಬಹುದು. ಒಂದೆಡೆ ಅವರು ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾಗ ಇನ್ನೊಂದೆಡೆ ಇಡೀ ವಿಶ್ವದ ಮನುಕುಲವೇ ಒಂದಾಗಿ ದೈವದತ್ತ ಮಾನವತೆಯನ್ನು ಮೆರೆಯುವಲ್ಲಿ ನಿರತರಾಗಿದ್ದರು. ವಿಶ್ವದಾದ್ಯಂತದ ಜನತೆ ಇವರನ್ನು ಸುರಕ್ಷಿತವಾಗಿ ಹೊರತೆಗೆಯುವ ಕುರಿತು ಪ್ರಾರ್ಥನೆ ಮಾಡುತ್ತಿದ್ದರು. ಮಕ್ಕಳು ಎಲ್ಲಿದ್ದಾರೆ, ಹೇಗಿದ್ದಾರೆ, ಅವರನ್ನು ಹೇಗೆ ಹೊರಗೆ ತೆಗೆಯಬಹುದು ಎಂದು ಶೋಧಿಸುವ ಸಂಭಾವ್ಯ ಎಲ್ಲ ಪ್ರಯತ್ನಗಳನ್ನೂ ಮಾಡಲಾಯಿತು. ಒಂದು ವೇಳೆ ಅವರನ್ನು ರಕ್ಷಿಸುವ ಕೆಲಸ ಸಕಾಲದಲ್ಲಿ ಆಗದೇ ಹೋದರೆ ಮಳೆಗಾಲದ ದಿನಗಳಲ್ಲಿ ಕೆಲ ತಿಂಗಳುಗಳವರೆಗೆ ಅವರನ್ನು ಹೊರ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಒಟ್ಟಾರೆ ಒಳ್ಳೆ ಸುದ್ದಿ ಬಂದಾಗ ವಿಶ್ವದ ಎಲ್ಲ ಜನರೂ ನಿರಾಳರಾದರು, ಸಂತೋಷಪಟ್ಟರು. ಆದರೆ ಈ ಸಂಪೂರ್ಣ ಪ್ರಕ್ರಿಯೆಯನ್ನು ಇನ್ನೊಂದು ದೃಷ್ಟಿಯಿಂದ ನೋಡಬಯಸುತ್ತೇನೆ. ಈ ಪೂರ್ಣ ಘಟನೆ ಹೇಗೆ ಜರುಗಿತು. ಪ್ರತಿ ಘಟ್ಟದಲ್ಲೂ ಜವಾಬ್ದಾರಿಯ ಅನುಭವ ಬಹಳ ಅದ್ಭುತವೆನಿಸಿತು. ಸರ್ಕಾರದವರೇ ಆಗಿರಲಿ, ಆ ಮಕ್ಕಳ ತಂದೆ ತಾಯಿಯಾಗಲಿ, ಅವರ ಕುಟುಂಬದವರಾಗಲಿ, ಮಾಧ್ಯಮವಾಗಲಿ, ದೇಶದ ಜನತೆಯಾಗಲಿ ಪ್ರತಿಯೊಬ್ಬರೂ ಶಾಂತಿ ಮತ್ತು ಧೈರ್ಯವನ್ನು ಮೆರೆದದ್ದು ಅದ್ಭುತವಾಗಿತ್ತು. ಎಲ್ಲರೂ ಒಂದು ತಂಡದ ರೂಪದಲ್ಲಿ ತಂತಮ್ಮ ಕಾರ್ಯದಲ್ಲಿ ತೊಡಗಿದ್ದರು. ಎಲ್ಲರ ಸಂಮಯಯುಕ್ತ ವ್ಯವಹಾರ ಅರಿಯುವಂಥ ಮತ್ತು ಕಲಿಯುವಂಥ ವಿಷಯವಾಗಿದೆ. ಅವರ ತಂದೆ ತಾಯಿ ದುಖಿಃತರಾಗಿರಲಿಲ್ಲ ಎಂದಲ್ಲ, ಅವರ ತಾಯಂದಿರ ಕಣ್ಣಲ್ಲಿ ನೀರು ತುಂಬಿರಲಿಲ್ಲ ಎಂದಲ್ಲ, ಆದರೆ ಅವರು ತೋರಿದ ದೈರ್ಯ, ಸಂಯಮ, ಸಂಪೂರ್ಣ ಸಮಾಜದ ಶಾಂತಚಿತ್ತ ನಡತೆ ಇದೆಲ್ಲವೂ ನಮ್ಮೆಲ್ಲರಿಗೆ ಕಲಿಯುವಂಥ ವಿಷಯವಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಥೈಲ್ಯಾಂಡ್ನ ನೌಕಾಪಡೆಯ ಯೋಧನೊಬ್ಬ ಜೀವ ತೆರಬೇಕಾಯಿತು. ಇಂಥ ಕಠಿಣ ಪರಿಸ್ಥಿತಿಯಲ್ಲಿಯೂ ನೀರಿನಿಂದ ತುಂಬಿದ ಕಗ್ಗತ್ತಲ ಒಂದು ಗುಹೆಯೊಳಗೆ ಧೈರ್ಯ ಮತ್ತು ಸಾಹಸದೊಂದಿಗೆ ಭರವಸೆಯನ್ನು ಕಳೆದುಕೊಳ್ಳದೇ ಅವರು ಕೆಲಸ ಮಾಡಿದ್ದಕ್ಕೆ ಸಂಪೂರ್ಣ ವಿಶ್ವವೇ ಆಶ್ಚರ್ಯಚಕಿತಗೊಂಡಿದೆ. ಮಾನವೀಯತೆ ಒಗ್ಗೂಡಿದಾಗ ಅದ್ಭುತ ಕೆಲಸಗಳಾಗುತ್ತವೆ ಎಂಬುದನ್ನು ಇದು ತೋರುತ್ತದೆ. ಇದಕ್ಕಾಗಿ ನಾವು ಶಾಂತಚಿತ್ತರಾಗಿ ಸ್ಥಿರ ಮನಸ್ಸಿನಿಂದ ನಮ್ಮ ಗುರಿಯತ್ತ ಗಮನವಿಟ್ಟು ಕೆಲಸ ಮಾಡುವುದು ಅವಶ್ಯಕವಾಗಿರುತ್ತದೆ.
ಕೆಲ ದಿನಗಳ ಹಿಂದೆ ನಮ್ಮ ದೇಶದ ಪ್ರಿಯ ಕವಿ ನೀರಜ್ ಅವರು ನಮ್ಮನ್ನಗಲಿದರು. ಆಸೆ, ಭರವಸೆ, ಧೃಡಸಂಕಲ್ಪ, ಆತ್ಮವಿಶ್ವಾಸ ನೀರಜ್ ಅವರ ವಿಶೇಷತೆಯಾಗಿತ್ತು. ನಾವೆಲ್ಲ ಹಿಂದೂಸ್ಥಾನದ ಜನರಿಗೆ ನೀರಜ್ ಅವರ ಪ್ರತಿ ಮಾತುಗಳೂ ಬಹಳ ಶಕ್ತಿಯನ್ನು ನೀಡಬಲ್ಲಂಥವಾಗಿವೆ, ಪ್ರೆÃರಣಾದಾಯಕವಾಗಿವೆ. ಅವರು ಹೀಗೆ ಬರೆದಿದ್ದಾರೆ –
ಅಂಧಿಯಾರ್ ಢಲ್ಕರ್ ಹಿ ರಹೇಗಾ
ಆಂಧಿಯಾ ಚಾಹೆ ಉಠಾವೊ,
ಬಿಜಲಿಯಾ ಚಾಹೆ ಗಿರಾವೊ
ಜಲ್ ಗಯಾ ಹೈ ದೀಪ್ ತೊ
ಅಂಧಿಯಾರ್ ಢಲ್ಕರ್ ಹಿ ರಹೇಗಾ
‘अँधियार ढलकर ही रहेगा,
आँधियाँ चाहे उठाओ,
बिजलियाँ चाहे गिराओ,
ದೀಪ ಹೊತ್ತಿದೆ ಅಂದ ಮೇಲೆ ಕತ್ತಲೆಯೂ ಕಳೆಯಲೇಬೇಕು. ನೀರಜ್ ಅವರಿಗೆ ಸನ್ಮಾನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
“ಪ್ರಧಾನಮಂತ್ರಿಯವರೇ ನಮಸ್ಕಾರ, ನನ್ನ ಹೆಸರು ಸತ್ಯಂ. ನಾನು ಈ ಬಾರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದಿದ್ದೇನೆ. ನಮ್ಮ ಶಾಲೆಯ ಬೋರ್ಡ್ ಪರೀಕ್ಷೆ ಸಮಯದಲ್ಲಿ ನೀವು ಪರೀಕ್ಷಾ ಒತ್ತಡ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿದ್ದಿರಿ. ನನ್ನಂಥ ವಿದ್ಯಾರ್ಥಿಗಳಿಗೆ ಈಗ ನಿಮ್ಮ ಸಂದೇಶವೇನು?”
ಜುಲೈ ಮತ್ತು ಅಗಸ್ಟ್ ತಿಂಗಳು ಕೃಷಿಕರಿಗೆ ಮತ್ತು ಯುವಕರಿಗೆ ಬಹಳ ಮಹತ್ವಪೂರ್ಣವಾದವು. ಏಕೆಂದರೆ ಇದೇ ಸಮಯ ಕಾಲೇಜುಗಳಲ್ಲಿ ಅತ್ಯಂತ ಪೀಕ್ ಸೀಸನ್ ಆಗಿರುತ್ತದೆ. ಸತ್ಯಂ ಅವರಂತಹ ಲಕ್ಷಾಂತರ ಯುವಕರು ಶಾಲೆಯಿಂದ ಕಾಲೇಜಿಗೆ ತೆರಳುತ್ತಾರೆ. ಫೆಬ್ರವರಿ, ಮಾರ್ಚ ತಿಂಗಳು ಪರೀಕ್ಷೆ, ಪೇಪರ್ಗಳು, ಉತ್ತರಗಳು ಎಂದೆಲ್ಲ ಕಳೆದರೆ ಏಪ್ರಿಲ್ ಮತ್ತು ಮೇ ತಿಂಗಳು ರಜೆ, ಮೋಜು ಜೊತೆಗೆ ಫಲಿತಾಂಶ ಮತ್ತು ಮುಂದೆ ಜೀವನದಲ್ಲಿ ಏನು ಮಾಡಬೇಕು ಎಂದು ನಿರ್ಧರಿಸುವುದು, ಕೆರಿಯರ್ ಛಾಯ್ಸ್, ಇದರಲ್ಲೇ ಕಳೆದುಹೋಗುತ್ತವೆ. ಜುಲೈ ಎಂಥ ತಿಂಗಳು ಎಂದರೆ ಇದರಲ್ಲಿ ಯುವಕರು ತಮ್ಮ ಜೀವನದ ಹೊಸ ಘಟ್ಟಕ್ಕೆ ಕಾಲಿರಿಸುತ್ತಾರೆ. ಈ ಸಮಯದಲ್ಲಿ ಫೋಕಸ್ ಕೊಶ್ಚನ್ ನಿಂದ ಮುಂದೆ ಸಾಗಿ ಕಟ್ ಆಫ್ ಹಂತ ತಲುಪುತ್ತಾರೆ. (ಈ ಸಮಯದಲ್ಲಿ ಯಾವುದರತ್ತ ಗಮನ ಕೇಂದ್ರೀಕರಿಸಬೇಕು ಎಂಬ ಪ್ರಶ್ನೆಗಳನ್ನು ದಾಟಿ ಯಾವುದನ್ನು ಆಯ್ದುಕೊಳ್ಳಬೇಕು ಎಂದು ನಿರ್ಧರಿಸುವ ಹಂತ ತಲುಪುತ್ತಾರೆ) ವಿದ್ಯಾರ್ಥಿಗಳ ಗಮನ ಮನೆಯಿಂದ ಹಾಸ್ಟೆಲ್ನತ್ತ ತಿರುಗುತ್ತದೆ. ವಿದ್ಯಾರ್ಥಿ ಪೋಷಕರ ನೆರಳಿನಿಂದ ಶಿಕ್ಷಕರ ಸುಪರ್ದಿಗೆ ಬರುತ್ತಾನೆ. ನನ್ನ ಯುವಮಿತ್ರರು ಕಾಲೇಜು ಜೀವನದ ಆರಂಭದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ ಮತ್ತು ಸಂಭ್ರಮದಿಂದಿದ್ದಾರೆ ಎಂದು ನನಗೆ ವಿಶ್ವಾಸವಿದೆ. ಪ್ರಥಮ ಬಾರಿಗೆ ಮನೆಯಿಂದ ಹೊರ ಹೋಗುವುದು, ಹಳ್ಳಿಯಿಂದ ಹೊರ ಹೋಗುವುದು, ತಮ್ಮ ಸುರಕ್ಷಿತ ವಲಯದಿಂದ ಹೊರಹೋಗಿ ತಮಗೆ ತಾವೇ ಸಾರಥಿಯಾಗಿ ಮುನ್ನಡೆಯಬೇಕಾಗುತ್ತದೆ.
ಇಷ್ಟೊಂದು ಜನ ಯುವಕರು ಮೊದಲ ಬಾರಿಗೆ ಮನೆಗಳನ್ನು ತೊರೆದು ತಮ್ಮ ಜೀವನಕ್ಕಾಗಿ ಒಂದು ಹೊಸ ದಿಕ್ಕನ್ನು ಅರಸುತ್ತಾ ಹೊರಬರುತ್ತಾರೆ. ಎಷ್ಟೋ ವಿದ್ಯಾರ್ಥಿಗಳು ಈಗಾಗಲೇ ತಂತಮ್ಮ ಕಾಲೇಜುಗಳನ್ನು ಸೇರಿದ್ದಾಗಿರಬಹುದು, ಇನ್ನೂ ಕೆಲವರು ಸೇರುವವರಿರಬಹುದು. ನಿಮಗೆ ಹೇಳುವುದು ಇಷ್ಟೇ ಶಾಂತರಾಗಿರಿ, ಜೀವನವನ್ನು ಆನಂದಿಸಿ, ಜೀವನದಲ್ಲಿ ಅಂತರಾಳದ ಪೂರ್ಣ ಆನಂದ ಪಡೆಯಿರಿ. ಪುಸ್ತಕಗಳ ಹೊರತಾಗಿ ಅನ್ಯ ಮಾರ್ಗವಿಲ್ಲ, ಓದಲೇಬೇಕು, ಆದರೆ ಹೊಸತನ್ನು ಶೋಧಿಸುವ ಪ್ರವೃತ್ತಿ ಹೊಂದಿದವರಾಗಿರಬೇಕು. ಹಳೆಯ ಗೆಳೆಯರು, ಬಾಲ್ಯ ಸ್ನೇಹಿತರು ಬಹಳ ಅಮೂಲ್ಯವಾಗಿರುತ್ತಾರೆ. ಆದರೆ ಹೊಸ ಸ್ನೇಹಿತರನ್ನು ಆಯ್ದುಕೊಳ್ಳುವುದು, ಗೆಳೆತನ ಮಾಡುವುದು ಮತ್ತು ನಿಭಾಯಿಸುವುದು ಇದು ಬಹುದೊಡ್ಡ ವಿವೇಚನೆಯ ಕೆಲಸವಾಗಿದೆ. ಹೊಸತು ಏನನ್ನಾದರೂ ಕಲಿಯಿರಿ, ಹೊಸ ಹೊಸ ಕೌಶಲ್ಯಗಳು, ಹೊಸ ಭಾಷೆಗಳನ್ನು ಕಲಿಯಿರಿ. ಯಾವ ಯುವಕರು ತಮ್ಮ ಊರನ್ನು ಬಿಟ್ಟು ಬೇರೆಡೆ ಕಲಿಯಲು ಹೋಗಿದ್ದೀರೋ ಆ ಸ್ಥಳದ ಬಗ್ಗೆ ಶೋಧ ನಡೆಸಿ, ಆ ಸ್ಥಳದ ಬಗ್ಗೆ, ಜನರ ಬಗ್ಗೆ, ಭಾಷೆ ಬಗ್ಗೆ ಸಂಸ್ಕೃತಿ ಬಗ್ಗೆ ಅರಿಯಿರಿ. ಅಲ್ಲಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ, ಅವುಗಳ ಬಗ್ಗೆ ತಿಳಿಯಿರಿ. ಜೀವನದ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವ ಎಲ್ಲ ಯುವಕರಿಗೆ ನನ್ನ ಶುಭಾಷಯಗಳು. ಈಗ ಕಾಲೇಜ್ ಸೀಸನ್ ಬಗ್ಗೆ ಮಾತಾಡುತ್ತಿದ್ದಂತೆ ನಾನು ನ್ಯೂಸ್ನಲ್ಲಿ ನೋಡಿದ ಸುದ್ದಿ ನೆನಪಾಗ್ತಿದೆ. ಮಧ್ಯಪ್ರದೇಶದ ಅತ್ಯಂತ ಬಡ ಕುಟುಂಬದ ಒಬ್ಬ ವಿದ್ಯಾರ್ಥಿ ಆಶಾರಾಮ್ ಚೌಧರಿ ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ಹೇಗೆ ಸಫಲತೆಯನ್ನು ಪಡೆದ ಎಂಬುದು. ಇವರು ಜೋಧಪುರದ ಎ ಐ ಐ ಎಂ ಎಸ್ ನ ಎಂ ಬಿ ಬಿ ಎಸ್ ಪರೀಕ್ಷೆಯಲ್ಲಿ ಒಂದೇ ಪ್ರಯತ್ನದಲ್ಲಿಯೇ ಸಫಲತೆಯನ್ನು ಪಡೆದಿದ್ದಾರೆ. ಅವರ ತಂದೆ ಕಸ ಆಯ್ದು ತಮ್ಮ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದಾರೆ. ಅವರ ಈ ಸಾಧನೆಗೆ ಅವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಬಡ ಕುಟುಂಬದಿಂದ ಬಂದ ಬಹಳಷ್ಟು ಜನ ವಿದ್ಯಾರ್ಥಿಗಳಿದ್ದಾರೆ ಮತ್ತು ಸಂಕಷ್ಟ ಪರಿಸ್ಥಿತಿಗಳ ಹೊರತಾಗಿಯೂ ತಮ್ಮ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅವರು ಎಂಥ ಸಾಧನೆಯನ್ನು ಮಾಡಿದ್ದಾರೆಂದರೆ ಅದು ನಮ್ಮೆಲ್ಲರಿಗೂ ಪ್ರೇರಣೆ ನೀಡುತ್ತದೆ. ಅವರು ದಿಲ್ಲಿಯ ಡಿಟಿಸಿ ಯಲ್ಲಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವವರ ಮಗ ಪ್ರಿನ್ಸ್ ಕುಮಾರ್ ಆಗಿರಲಿ ಅಥವಾ ಕೊಲ್ಕತ್ತಾದ ಫುಟ್ ಪಾತ್ ಮೇಲೆ ಬೀದಿ ದೀಪದ ಬೆಳಕಿನಲ್ಲಿ ಓದಿದ ಅಭಯ್ ಗುಪ್ತಾ ಆಗಿರಲಿ, ಅಹ್ಮದಾಬಾದ್ನ ಕುಮಾರಿ ಆಫ್ರಿಕನ್ ಆಗಿರಲಿ ಅವಳ ತಂದೆ ಅಟೋ ರಿಕ್ಷಾ ಚಾಲಕರಾಗಿದ್ದಾರೆ, ನಾಗ್ಪುರದ ಕುಮಾರಿ ಖುಷಿ ಆಗಿರಲಿ ಅವಳ ತಂದೆ ಕೂಡಾ ಶಾಲಾ ಬಸ್ ಚಾಲಕರಾಗಿದ್ದಾರೆ, ಅಥವಾ ಹರಿಯಾಣದ ಕಾರ್ತಿಕ್ ಆಗಿರಲಿ ಅವರ ತಂದೆ ಕಾವಲುಗಾರನಾಗಿದ್ದಾರೆ ಅಥವಾ ಜಾರ್ಖಂಡ್ ನ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವವರ ಮಗ ರಮೇಶ್ ಸಾಹು ಆಗಿರಲಿ, ಸ್ವತಃ ರಮೇಶ್ ಜಾತ್ರೆಯಲ್ಲಿ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದರು. ಅಥವಾ ಗುಡ್ಗಾಂವ್ನ ಜನ್ಮತಃ ಸ್ಪೈನಲ್ ಮಸ್ಕ್ಯುಲಾರ್ ಅಟ್ರೋಫಿ ಎಂಬ ರೋಗದಿಂದ ನರಳುತ್ತಿರುವ ವಿಕಲಚೇತನೆ ಕುಮಾರಿ ಅನುಷ್ಕಾ ಪಾಂಡಾ ಆಗಿರಲಿ ಇವರೆಲ್ಲರೂ ಧೃಡಸಂಕಲ್ಪದಿಂದ ಮತ್ತು ತಾಳ್ಮೆಯಿಂದ ಎಲ್ಲ ಬಗೆಯ ಸಂಕಷ್ಟಗಳನ್ನು ದಾಟಿ ಜಗತ್ತು ನೋಡಬಲ್ಲಂಥ ಸಾಧನೆಯನ್ನು ಮಾಡಿದ್ದಾರೆ. ನಮ್ಮ ಸುತ್ತಮುತ್ತಲೂ ನಾವು ನೋಡಿದರೆ ಇಂಥ ಎಷ್ಟೋ ಉದಾಹರಣೆಗಳು ನಮಗೆ ಸಿಗುತ್ತವೆ.
ದೇಶದ ಯಾವುದೇ ಮೂಲೆಯಲ್ಲಿ ಘಟಿಸಿದ ಉತ್ತಮ ಘಟನೆಯಾಗಲಿ ನನಗೆ ಶಕ್ತಿ ನೀಡುತ್ತದೆ, ಪ್ರೇರಣೆ ನೀಡುತ್ತದೆ ಮತ್ತು ಈ ಯುವಕರ ಬಗ್ಗೆ ನಿಮಗೆ ಹೇಳುತ್ತಿದ್ದೇನೆ ಎಂದಾಗ ನನಗೆ ನೀರಜ್ ಅವರ ಆ ಮಾತುಗಳು ನೆನಪಿಗೆ ಬರುತ್ತವೆ ಮತ್ತು ಜೀವನದ ಉದ್ದೇಶವೂ ಅದೇ ಅಲ್ಲವೆ? ನೀರಜ್ ಅವರು ಹೇಳಿದ್ದರು:
“ಗೀತ್ ಆಕಾಶ್ ಕೊ ಧರತಿ ಕಾ ಸುನಾನಾ ಹೈ ಮುಝೆ
ಹರ್ ಅಂಧೆರೆ ಕೊ ಉಜಾಲೆ ಮೆ ಬುಲಾನಾ ಹೈ ಮುಝೆ
ಫೂಲ್ ಕಿ ಗಂಧ ಸೆ ತಲವಾರ್ ಕೊ ಸರ್ ಕರನಾ ಹೈ
ಔರ್ ಗಾ ಗಾ ಕೆ ಪಹಾಡೊಂಕೊ ಜಗಾನಾ ಹೈ ಮುಝೆ”
‘गीत आकाश को धरती का सुनाना है मुझे,
हर अँधेरे को उजाले में बुलाना है मुझे,
फूल की गंध से तलवार को सर करना है,
और गा-गा के पहाड़ों को जगाना है मुझे’
ನನ್ನ ಪ್ರಿಯ ದೇಶಬಾಂಧವರೇ ಕೆಲ ದಿನಗಳ ಹಿಂದೆ ಒಂದು ಸುದ್ದಿಯೆಡೆ ನನ್ನ ದೃಷ್ಟಿ ಹೋಯಿತು. ಅಲ್ಲಿ ಹೀಗೆ ಬರೆದಿದ್ದರು. ‘ಇಬ್ಬರು ಯುವಕರು ಮೋದಿಯವರ ಕನಸನ್ನು ನನಸು ಮಾಡಿದ್ದಾರೆ’ ಎಂದು. ವಿವರವಾಗಿ ಓದಿದಾಗ, ಹೇಗೆ ನಮ್ಮ ಯುವಕರು ತಂತ್ರಜ್ಞಾನವನ್ನು ಜಾಣ್ಮೆಯಿಂದ ಮತ್ತು ಕೌಶಲ್ಯಪೂರ್ಣವಾಗಿ ಬಳಸಿ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಯಿತು. ಘಟನೆ ಏನು ಎಂದರೆ ಅಮೇರಿಕದ ಟೆಕ್ನಾಲಾಜಿ ಹಬ್ ಎಂದೇ ಗುರುತಿಸಲ್ಪಡುವ ಸ್ಯಾನ್ ಜೋಸ್ ನಗರದಲ್ಲಿ ನಾನು ಒಮ್ಮೆ ಭಾರತೀಯ ಯುವಕರೊಂದಿಗೆ ಚರ್ಚೆ ಮಾಡುತ್ತಿದ್ದೆ. ನಾನು ಅವರಿಗೆ ತಮ್ಮ ಜ್ಞಾನವನ್ನು ಅವರು ಭಾರತಕ್ಕಾಗಿ ಹೇಗೆ ಬಳಸಬಹುದು ಎಂಬುದನ್ನು ಯೋಚಿಸಿ ಸ್ವಲ್ಪ ಸಮಯವನ್ನು ಮೀಸಲಿರಿಸಿ ಏನನ್ನಾದರೂ ಮಾಡಿ ಎಂದು ಮನವಿ ಮಾಡಿದ್ದೆ. ನಾನು ಬ್ರೇನ್ ಡ್ರೇನ್ ಅನ್ನು ಬ್ರೇನ್ ಗೇನ್ ಆಗಿ ಬದಲಿಸುವ ಮನವಿ ಮಾಡಿದ್ದೆ. ಯೋಗೇಶ್ ಸಾಹು ಮತ್ತು ರಜನೀಶ್ ವಾಜಪೇಯಿ ಎಂಬ ರಾಯಬರೇಲಿಯ ಇಬ್ಬರು ಐಟಿ ವೃತ್ತಿಪರರು ನನ್ನ ಈ ಸವಾಲನ್ನು ಸ್ವೀಕರಿಸಿ ಒಂದು ಹೊಸ ಪ್ರಯತ್ನ ಮಾಡಿದ್ದಾರೆ. ತಮ್ಮ ವೃತ್ತಿಪರ ಕೌಶಲ್ಯವನ್ನು ಉಪಯೋಗಿಸಿ ಯೋಗೇಶ್ ಸಾಹು ಮತ್ತು ರಜನೀಶ್ ವಾಜಪೇಯಿ ಅವರು ಒಂದು ಸ್ಮಾರ್ಟ್ ಗಾಂವ್ ಆಪ್ ತಯಾರಿಸಿದ್ದಾರೆ. ಈ ಆಪ್ ಈಗ ಹಳ್ಳಿಯ ಜನರಿಗೆ ಸಂಪೂರ್ಣ ವಿಶ್ವದೊಂದಿಗೆ ಸಂಪರ್ಕ ಕಲ್ಪಿಸುತ್ತಿರುವುದಷ್ಟೇ ಅಲ್ಲ ಅವರು ಯಾವುದೇ ಮಾಹಿತಿ ಮತ್ತು ಸೂಚನೆಗಳನ್ನು ಸ್ವತಃ ತಮ್ಮ ಮೊಬೈಲ್ ನಲ್ಲಿ ಪಡೆಯಬಹುದಾಗಿದೆ. ರಾಯಬರೇಲಿಯ ತೌಘಕ್ಪುರ್ ಗ್ರಾಮಸ್ಥರು, ಗ್ರಾಮ ಮುಖ್ಯಸ್ಥ, ಜಿಲ್ಲಾ ನ್ಯಾಯಾಧೀಶರು, ಸಿ ಡಿ ಒ ಎಲ್ಲರೂ ಈ ಆಪ್ ಬಳಸಲು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ಆಪ್ ಗ್ರಾಮದಲ್ಲಿ ಒಂದು ರೀತಿಯ ಡಿಜಿಟಲ್ ಕ್ರಾಂತಿಯನ್ನು ತರುವ ಕೆಲಸ ಮಾಡುತ್ತಿದೆ. ಗ್ರಾಮದಲ್ಲಾಗುವ ಅಭಿವೃದ್ಧಿ ಕೆಲಸಗಳನ್ನು ಈ ಆಪ್ ಮೂಲಕ ರೆಕಾರ್ಡ್ ಮಾಡುವುದು, ಟ್ರ್ಯಾಕ್ ಮಾಡುವುದು, ಮಾನಿಟರ್ ಮಾಡುವುದು ಸುಲಭವಾಗಿದೆ. ಈ ಆಪ್ನಲ್ಲಿ ಗ್ರಾಮದ ಫೋನ್ ಡೈರೆಕ್ಟರಿ, ಸುದ್ದಿ ವಿಭಾಗ, ಘಟನೆಗಳ ಪಟ್ಟಿ, ಆರೋಗ್ಯ ಕೇಂದ್ರ ಮತ್ತು ಮಾಹಿತಿ ಕೇಂದ್ರ ಇವೆ. ಈ ಆಪ್ ಕೃಷಿಕರಿಗೂ ಬಹಳ ಉಪಯುಕ್ತವಾಗಿದೆ. ಆಪ್ನ ಗ್ರಾಮರ್ ಫೀಚರ್, ರೈತರ ಮಧ್ಯೆ ಫ್ಯಾಕ್ಟ್ ರೇಟ್ ಹೀಗೆ ಅವರ ಉತ್ಪಾದನೆಗಳಿಗೆ ಒಂದೇ ಮಾರುಕಟ್ಟೆ ಸ್ಥಳದ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಘಟನೆಯನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಷಯ ಗಮನಕ್ಕೆ ಬರುತ್ತದೆ. ಆ ಯುವಕರು ಅಮೇರಿಕದಲ್ಲಿ, ಅಲ್ಲಿಯ ಜೀವನ, ವಿಚಾರ ವೈಖರಿ ಮಧ್ಯೆ ಜೀವಿಸ್ಮತ್ತಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ಭಾರತವನ್ನು ಬಿಟ್ಟು ಹೋಗಿರಬಹುದು ಆದರೂ ತಮ್ಮ ಗ್ರಾಮದ ಸೂಕ್ಷ್ಮತೆಗಳನ್ನು ಅರಿತಿದ್ದಾರೆ, ಸಮಸ್ಯೆಗಳ ಬಗ್ಗೆ ತಿಳಿದಿದ್ದಾರೆ ಮತ್ತು ಹಳ್ಳಿಯೊಂದಿಗೆ ಭಾವನಾತ್ಮಕವಾಗಿ ಇಂದಿಗೂ ಹೊಂದಿಕೊಂಡಿದ್ದಾರೆ. ಆದ್ದರಿಂದಲೇ ಬಹುಶಃ ಅವರು ತಮ್ಮ ಗ್ರಾಮಕ್ಕೆ ಏನು ಬೇಕೋ ಅದಕ್ಕೆ ಅನುಸಾರ ಕೆಲಸ ಮಾಡಿದ್ದಾರೆ. ತನ್ನ ಗ್ರಾಮ, ತಮ್ಮ ಮೂಲ ಬೇರುಗಳೊಂದಿಗೆ ಇರುವ ಈ ಬಂಧ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಭಾವನೆ ಬಹುಶಃ ಪ್ರತಿಯೊಬ್ಬ ಭಾರತೀಯನಲ್ಲೂ ಸ್ವಾಭಾವಿಕವಾಗಿಯೇ ಇರುತ್ತದೆ. ಆದರೆ ಕೆಲವೊಮ್ಮೆ ಸಮಯದ ಅಭಾವದಿಂದಾಗಿ, ಅಂತರದಿಂದಾಗಿ, ಕೆಲವೊಮ್ಮೆ ಪರಿಸ್ಥಿತಿಯಿಂದಾಗಿ ಆ ಭಾವನೆಯ ಮೇಲೆ ಒಂದು ತೆಳುವಾದ ಪದರ ಶೇಖರಣೆಯಾಗಿಬಿಡುತ್ತದೆ ಆದರೆ ಒಂದು ಒಂದು ಪುಟ್ಟ ಕಿಡಿ ತಗುಲಿದರೂ ಆ ಎಲ್ಲ ವಿಷಯಗಳು ಹೊರಹೊಮ್ಮುತ್ತವೆ ಮತ್ತು ಕಳೆದು ಹೋದ ದಿನಗಳತ್ತ ಸೆಳೆದುಕೊಂಡು ಹೋಗುತ್ತವೆ. ನಾವೂ ನಮ್ಮ ವಿಷಯದಲ್ಲೂ ಹೀಗೆ ಆಗಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಸ್ಥಿತಿ, ಪರಿಸ್ಥಿತಿ, ಅಂತರ, ನಮ್ಮನ್ನು ಅಗಲಿಸಿಲ್ಲ ತಾನೇ, ಬೂದಿ ಮುಚ್ಚಿದೆಯೇ ಎಂದು ಖಂಡಿತ ಪರೀಕ್ಷಿಸಿ, ಖಂಡಿತ ಯೋಚಿಸಿ.
“ಆದರಣೀಯ ಪ್ರಧಾನಮಂತ್ರಿಗಳೇ ನಮಸ್ಕಾರ.ನಾನು ಸಂತೋಷ್ ಕಾಕಡೆ, ಮಹಾರಾಷ್ಟ್ರದ ಕೊಲ್ಹಾಪುರದಿಂದ ಮಾತನಾಡುತ್ತಿದ್ದೇನೆ. ಪಂಢರಾಪುರದ ಯಾತ್ರೆ ಈ ಮಹಾರಾಷ್ಟ್ರದಲ್ಲಿ ಹಳೆಯ ಸಂಪ್ರದಾಯ. ಪ್ರತಿವರ್ಷ ಇದು ಅತ್ಯಂತ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲ್ಪಡುತ್ತದೆ. ಸುಮಾರು 7 ರಿಂದ 8 ಲಕ್ಷ ಯಾತ್ರಿಕರು ಇದರಲ್ಲಿ ಭಾಗವಹಿಸುತ್ತಾರೆ. ಈ ವಿಶೇಷವಾದ ಕಾರ್ಯಕ್ರಮದಲ್ಲಿ ದೇಶದ ಉಳಿದ ಜನರೂ ಭಾಗಿಯಾಗುವಂತಾಗಲಿ, ಆದ್ದರಿಂದ ನೀವು ಈ ಯಾತ್ರೆಯ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ”.
ಸಂತೋಷ್ ರವರೇ, ನಿಮ್ಮ ದೂರವಾಣಿ ಕರೆಗೆ ಬಹಳ ಧನ್ಯವಾದಗಳು. ನಿಜವಾಗಿಯೂ ಪಂಢರಾಪುರದ ಯಾತ್ರೆಯು ತನ್ನಷ್ಟಕ್ಕೆ ತಾನೇ ಒಂದು ಅದ್ಭುತ ಯಾತ್ರೆಯಾಗಿದೆ. ಗೆಳೆಯರೇ, ಈ ಜುಲೈ ತಿಂಗಳ 23 ರಂದು ಆಷಾಢ ಏಕಾದಶಿ ಆಗಿತ್ತು, ಆ ದಿನವನ್ನು ಪಂಢರಾಪುರದಲ್ಲಿ ವೈಭವೋಪೇತ ಯಾತ್ರೆಯ ರೂಪದಲ್ಲಿ ಆಚರಿಸಲಾಗುತ್ತದೆ. ಪಂಢರಾಪುರವು ಮಹಾರಾಷ್ಟ್ರದ ಸೋಲ್ಹಾಪುರ್ ಜಿಲ್ಲೆಯ ಒಂದು ಪವಿತ್ರ ಸ್ಥಳವಾಗಿದೆ. ಆಷಾಢ ಏಕಾದಶಿಗೆ ಸುಮಾರು 15 – 20 ದಿನಗಳ ಮುಂಚೆಯೇ ಯಾತ್ರಾರ್ಥಿಗಳು ಪಲ್ಲಕ್ಕಿಗಳೊಂದಿಗೆ ಪಂಢರಾಪುರದ ಯಾತ್ರೆಗೆ ಕಾಲ್ನಡಿಗೆಯಿಂದ ಹೊರಡುತ್ತಾರೆ. ಜಾತ್ರೆ ಎಂದು ಕರೆಯುವ ಈ ಯಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಯಾತ್ರಿಗಳು ಸೇರಿಕೊಳ್ಳುತ್ತಾರೆ. ಸಂತ ಜ್ಞಾನೇಶ್ವರ್ ಮತ್ತು ಸಂತ ತುಕಾರಾಂ ರವರಂತಹ ಸಂತರ ಪಾದುಕೆಗಳನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು “ವಿಠ್ಠಲ, ವಿಠ್ಠಲ’ ಎಂದು ಹಾಡುತ್ತಾ, ನೃತ್ಯ ಮಾಡುತ್ತಾ, ವಾದ್ಯಗಳನ್ನು ನುಡಿಸುತ್ತಾ ಕಾಲ್ನಡಿಗೆಯಿಂದ ಪಂಢರಾಪುರದ ಕಡೆಗೆ ಹೊರಡುತ್ತಾರೆ. ಈ ಯಾತ್ರೆಯು ವಿದ್ಯೆ, ಸಂಸ್ಕಾರ ಮತ್ತು ಶ್ರದ್ಧೆಯ ತ್ರಿವೇಣೀಸಂಗಮವಾಗಿದೆ. ಯಾತ್ರಾರ್ಥಿಗಳು ವಿಠೋಬ ಅಥವಾ ಪಾಂಡುರಂಗ ಎಂದು ಕೂಡ ಕರೆಯುವ ಭಗವಾನ್ ವಿಠ್ಠಲನ ದರ್ಶನಕ್ಕೆ ಅಲ್ಲಿಗೆ ತಲುಪುತ್ತಾರೆ. ಭಗವಾನ್ ವಿಠ್ಠಲನು ಬಡವರು, ವಂಚಿತರು, ಶೋಷಿತರು ಇವರುಗಳ ಹಿತರಕ್ಷಣೆ ಮಾಡುತ್ತಾನೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಇಲ್ಲಿಯ ಜನರಲ್ಲಿ ಅಪಾರ ಶ್ರದ್ಧೆ, ಭಕ್ತಿ ಇದೆ. ಪಂಢರಾಪುರದಲ್ಲಿ ವಿಠೋಬನ ಮಂದಿರಕ್ಕೆ ಹೋಗುವುದು ಮತ್ತು ಅಲ್ಲಿಯ ಮಹಾತ್ಮೆ, ಸೌಂದರ್ಯ, ಅಧ್ಯಾತ್ಮಿಕ ಆನಂದವನ್ನು ಹೊಂದುವುದು ಒಂದು ಬೇರೆಯದೇ ರೀತಿಯ ಅನುಭವವಾಗಿದೆ. ಅವಕಾಶ ಸಿಕ್ಕಿದಾಗ ಒಂದು ಬಾರಿ ಖಂಡಿತವಾಗಿಯೂ ಪಂಢರಾಪುರದ ಯಾತ್ರೆಯ ಅನುಭವವನ್ನು ಪಡೆದುಕೊಳ್ಳಿ ಎನ್ನುವುದು ‘ಮನದ ಮಾತು’ ಕಾರ್ಯಕ್ರಮದ ಶ್ರೋತೃಗಳಲ್ಲಿ ನನ್ನ ವಿನಂತಿ. ಜ್ಞಾನೇಶ್ವರ, ನಾಮದೇವ, ಏಕನಾಥ, ರಾಮದಾಸ, ತುಕಾರಾಂ ಹೀಗೆ ಬಹಳಷ್ಟು ಸಂತರು ಮಹಾರಾಷ್ಟ್ರದಲ್ಲಿ ಇಂದಿಗೂ ಕೂಡ ಜನಸಾಮಾನ್ಯರನ್ನು ಸುಶಿಕ್ಷಿತರನ್ನಾಗಿ ಮಾಡುತ್ತಿದ್ದಾರೆ, ಮೂಢನಂಬಿಕೆಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುತ್ತಿದ್ದಾರೆ ಮತ್ತು ಹಿಂದುಸ್ತಾನದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಈ ಸಂತ ಪರಂಪರೆಯು ಪ್ರೇರಣೆ ನೀಡುತ್ತಿರುತ್ತದೆ. ಅವರ ಭಾರುಡ್ ಆಗಿರಲಿ, ಅಭಂಗ್ ಆಗಿರಲಿ, ಅವುಗಳಿಂದ ನಮಗೆ ಒಳ್ಳೆಯ ಅಭಿರುಚಿ, ಪ್ರೀತಿ ಮತ್ತು ಸಹೋದರತ್ವದ ಪ್ರಮುಖ ಸಂದೇಶಗಳು ಸಿಗುತ್ತವೆ; ಮೂಢನಂಬಿಕೆಗಳ ವಿರುದ್ಧ ಶ್ರದ್ಧೆಯೊಂದಿಗೆ ಸಮಾಜವು ಹೋರಾಡುವಂತಾಗಬೇಕು ಎನ್ನುವ ಮಂತ್ರವು ಸಿಗುತ್ತದೆ. ಇವರುಗಳು ತಕ್ಕ ಸಮಯದಲ್ಲಿ ಸಮಾಜವನ್ನು ತಡೆದು, ಬುದ್ಧಿ ಹೇಳಿ, ಕನ್ನಡಿಯನ್ನು ತೋರಿಸಿ ಹಳೆಯ ಕಂದಾಚಾರಗಳನ್ನು ನಮ್ಮ ಸಮಾಜದಿಂದ ತೊಲಗಿಸಿ ಜನರಲ್ಲಿ ಕರುಣೆ, ಸಮಾನತೆ ಮತ್ತು ಶುಚಿತ್ವದ ಸಂಸ್ಕಾರವನ್ನು ನಿಶ್ಚಿತವಾಗಿ ತರಲು ಶ್ರಮಿಸಿದಂತಹವರು. ನಮ್ಮ ಈ ಭಾರತ ಭೂಮಿಯು ‘ಬಹುರತ್ನಾ ವಸುಂಧರಾ’ ಎನ್ನುವಂತಿದೆ. ಹೇಗೆ ಸಂತರ ಒಂದು ಮಹಾನ್ ಪರಂಪರೆಯು ನಮ್ಮ ದೇಶದಲ್ಲಿದೆಯೋ ಹಾಗೆಯೇ ಸಾಮರ್ಥ್ಯವುಳ್ಳ, ತಾಯಿ ಭಾರತಿಗೆ ತಮ್ಮನ್ನೇ ಸಮರ್ಪಿಸಿಕೊಂಡ ಮಹಾಪುರುಷರೂ ಇದ್ದಾರೆ; ಅವರು ಈ ನೆಲಕ್ಕೆ ತಮ್ಮ ಜೀವನವನ್ನು ಬಲಿ ಕೊಟ್ಟಿದ್ದಾರೆ, ಸಮರ್ಪಣೆ ಮಾಡಿದ್ದಾರೆ. ಲೋಕಮಾನ್ಯ ತಿಲಕರು ಇಂತಹ ಒಬ್ಬ ಮಹಾಪುರುಷರು. ಅವರು ಅನೇಕ ಭಾರತೀಯರ ಮನದಲ್ಲಿ ತಮ್ಮ ಆಳವಾದ ಮುದ್ರೆಯನ್ನು ಒತ್ತಿದ್ದಾರೆ. ನಾವು ಜುಲೈ 23 ರಂದು ತಿಲಕರ ಜನ್ಮ ಜಯಂತಿ ಮತ್ತು ಆಗಸ್ಟ್ 1 ರಂದು ಅವರ ಪುಣ್ಯತಿಥಿಯ ಅಂಗವಾಗಿ ಅವರ ಪುಣ್ಯಸ್ಮರಣೆಯನ್ನು ಮಾಡುತ್ತೇವೆ. ಲೋಕಮಾನ್ಯ ತಿಲಕರು ಸಾಹಸ ಮತ್ತು ಆತ್ಮವಿಶ್ವಾಸವನ್ನು ತುಂಬಿಕೊಂಡಿದ್ದರು. ಅವರಲ್ಲಿ ಬ್ರಿಟೀಷ್ ಅಧಿಕಾರಿಗಳಿಗೆ ಅವರ ತಪ್ಪುಗಳನ್ನು ಕನ್ನಡಿ ಹಿಡಿದು ತೋರಿಸುವ ಶಕ್ತಿ ಮತ್ತು ಬುದ್ಧಿಮತ್ತೆ ಇತ್ತು. ಬ್ರಿಟೀಷರು ಲೋಕಮಾನ್ಯ ತಿಲಕರಿಗೆ ಎಷ್ಟೊಂದು ಹೆದರುತ್ತಿದ್ದರೆಂದರೆ 20 ವರ್ಷಗಳಲ್ಲಿ ಅವರ ಮೇಲೆ 3 ಬಾರಿ ರಾಜದ್ರೋಹದ ಆರೋಪವನ್ನು ಹೇರಲು ಪ್ರಯತ್ನ ಮಾಡಿದ್ದರು. ಇದೊಂದು ಸಣ್ಣ ವಿಷಯವಲ್ಲ. ಲೋಕಮಾನ್ಯ ತಿಲಕರು ಮತ್ತು ಅಹಮದಾಬಾದ್ ನಲ್ಲಿ ಅವರ ಒಂದು ಪ್ರತಿಮೆಯ ಜೊತೆ ಬೆಸೆದುಕೊಂಡಿರುವ ಒಂದು ಕುತೂಹಲಕಾರಿ ಘಟನೆಯನ್ನು ಇಂದು ನಾನು ದೇಶವಾಸಿಗಳ ಜೊತೆ ಹಂಚಿಕೊಳ್ಳಲು ಆಶಿಸುತ್ತಿದ್ದೇನೆ. 1916 ನೇ ಅಕ್ಟೋಬರ್ ನಲ್ಲಿ ಲೋಕಮಾನ್ಯ ತಿಲಕರು ಅಹಮದಾಬಾದ್ ಗೆ ಬಂದಾಗ ಆ ಕಾಲದಲ್ಲೇ – ಇಂದಿಗೆ ಸುಮಾರು ನೂರು ವರ್ಷಗಳ ಹಿಂದೆಯೇ 40 ಸಾವಿರಕ್ಕೂ ಹೆಚ್ಚಿನ ಜನರು ಅವರನ್ನು ಅಹಮದಾಬಾದ್ ನಲ್ಲಿ ಸ್ವಾಗತಿಸಿದ್ದರು ಮತ್ತು ಈ ಯಾತ್ರೆಯ ಕಾರಣದಿಂದಲೇ ಸರ್ದಾರ್ ವಲ್ಲಭಭಾಯ್ ಪಟೇಲ್ ರಿಗೆ ಅವರ ಜೊತೆ ಮಾತುಕತೆ ನಡೆಸಲು ಅವಕಾಶ ಒದಗಿಬಂದಿತ್ತು. ಸರ್ದಾರ್ ವಲ್ಲಭಭಾಯ್ ಪಟೇಲರು ಲೋಕಮಾನ್ಯ ತಿಲಕರಿಂದ ಅತ್ಯಂತ ಪ್ರಭಾವಿತರಾಗಿದ್ದರು. 1920 ನೇ ಆಗಸ್ಟ್ 1 ರಂದು ಲೋಕಮಾನ್ಯ ತಿಲಕರು ವಿಧಿವಶರಾದಾಗ ಅಹಮದಾಬಾದ್ ನಲ್ಲಿ ಅವರ ಸ್ಮಾರಕವನ್ನು ನಿರ್ಮಿಸಲು ಪಟೇಲರು ನಿರ್ಧರಿಸಿದ್ದರು. ಸರ್ದಾರ್ ವಲ್ಲಭಭಾಯ್ ಪಟೇಲರು ಅಹಮದಾಬಾದ್ ನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರು. ತಕ್ಷಣವೇ ಅವರು ಲೋಕಮಾನ್ಯ ತಿಲಕರ ಸ್ಮಾರಕಕ್ಕಾಗಿ ವಿಕ್ಟೋರಿಯಾ ಗಾರ್ಡನ್ ನನ್ನು ಆಯ್ಕೆ ಮಾಡಿಕೊಂಡರು. ಈ ವಿಕ್ಟೋರಿಯಾ ಗಾರ್ಡನ್ ಅಂದಿನ ಬ್ರಿಟನ್ನಿನ ಮಹಾರಾಣಿಯವರ ಹೆಸರಿನಲ್ಲಿ ಇತ್ತು. ಇದರಿಂದ ಬ್ರಿಟೀಷರು ಸ್ವಾಭಾವಿಕವಾಗಿಯೇ ಅಸಮಾಧಾನಗೊಂಡರು ಮತ್ತು ಕಲೆಕ್ಟರ್ ಇದಕ್ಕಾಗಿ ಅನುಮತಿ ನೀಡುವುದನ್ನು ನಿರಂತರವಾಗಿ ನಿರಾಕರಿಸುತ್ತಿದ್ದ. ಆದರೆ ಸರ್ದಾರ್ ಸಾಹೇಬರು ಸರ್ದಾರ್ ಸಾಹೇಬರೇ. ಅವರು ಆಚಲವಾಗಿದ್ದರು. ತಮ್ಮ ಹುದ್ದೆಯನ್ನು ಬಿಡುವಂತಾದರೂ ಸರಿ ಆದರೆ ಲೋಕಮಾನ್ಯ ತಿಲಕರ ಪ್ರತಿಮೆ ಆಗಿಯೇ ತೀರುತ್ತದೆ ಎಂದು ಅವರು ಹೇಳಿದ್ದರು. ಕೊನೆಗೂ ಪ್ರತಿಮೆ ತಯಾರಾಯಿತು. 1929 ನೇ ಫೆಬ್ರವರಿ 28 ರಂದು ಸರ್ದಾರರು ಬೇರೆ ಯಾರಿಂದಲೋ ಅಲ್ಲ, ಮಹಾತ್ಮಾ ಗಾಂಧಿಯವರಿಂದ ಇದರ ಉದ್ಘಾಟನೆಯನ್ನು ನೆರವೇರಿಸಿದರು. ಎಲ್ಲಕ್ಕಿಂತ ಸಂತೋಷದ ವಿಚಾರವೆಂದರೆ ಆ ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯ ಬಾಪೂರವರು ತಮ್ಮ ಭಾಷಣದಲ್ಲಿ ಸರ್ದಾರ್ ಪಟೇಲರು ಬಂದಮೇಲೆ ಅಹಮದಾಬಾದ್ ನಗರಪಾಲಿಕೆಗೆ ಬರೀ ಒಬ್ಬ ವ್ಯಕ್ತಿಯಷ್ಟೇ ಸಿಕ್ಕಿಲ್ಲ, ಬದಲಾಗಿ ತಿಲಕರ ಪ್ರತಿಮೆಯನ್ನು ನಿರ್ಮಾಣ ಮಾಡುವಂತಹ ಧೈರ್ಯ ಸಹ ಸಿಕ್ಕಿದೆ ಎಂದು ಹೇಳಿದ್ದರು. ನನ್ನ ಪ್ರೀತಿಯ ದೇಶವಾಸಿಗಳೇ, ಈ ಪ್ರತಿಮೆಯ ವಿಶಿಷ್ಟತೆ ಏನೆಂದರೆ, ಇದು ತಿಲಕರ ಒಂದು ಅಪರೂಪದ ಪ್ರತಿಮೆ. ಇದರಲ್ಲಿ ಅವರು ಒಂದು ಕುರ್ಚಿಯಲ್ಲಿ ಕುಳಿತಿರುವ ರೀತಿ ಇದೆ ಜೊತೆಗೆ ಇದರಲ್ಲಿ ಸರಿಯಾಗಿ ತಿಲಕರ ಕೆಳಗೆ ‘स्वराज हमारा जन्म सिद्ध अधिकार है’ (‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು) ಎಂದು ಬರೆಯಲಾಗಿದೆ. ಇದೆಲ್ಲಾ ಬ್ರಿಟೀಷರ ಕಾಲದ ಕಥೆಗಳು, ಅದನ್ನೇ ಹೇಳುತ್ತಿದ್ದೇನೆ. ಲೋಕಮಾನ್ಯ ತಿಲಕರ ಪ್ರಯತ್ನದಿಂದಲೇ ಸಾರ್ವಜನಿಕ ಗಣೇಶೋತ್ಸವದ ಪರಂಪರೆಯು ಪ್ರಾರಂಭವಾಯಿತು. ಸಾರ್ವಜನಿಕ ಗಣೇಶೋತ್ಸವವು ಪರಂಪರಾಗತ ಶ್ರದ್ಧೆ ಮತ್ತು ಉತ್ಸವದ ಜೊತೆ ಜೊತೆಗೆ ಸಾಮಾಜಿಕ ಜಾಗೃತಿ, ಸಾಮೂಹಿಕತೆ, ಜನರಲ್ಲಿ ಸಾಮರಸ್ಯ ಮತ್ತು ಸಮಾನತೆಯ ಭಾವಗಳನ್ನು ಮುಂದುವರೆಸಿಕೊಂಡು ಹೋಗಲು ಒಂದು ಪ್ರಭಾವೀ ಮಾಧ್ಯಮವಾಗಿತ್ತು. ಆ ಸಮಯದಲ್ಲಿ ದೇಶವು ಬ್ರಿಟೀಷರ ವಿರುದ್ಧ ಹೋರಾಡುವ ಸಲುವಾಗಿ ಜನರನ್ನು ಒಂದುಗೂಡಿಸಲು ಅಂತಹ ಒಂದು ಅಧ್ಯಾಯ ಬೇಕಿತ್ತು. ಈ ಉತ್ಸವಗಳು ಜಾತಿ ಮತ್ತು ಸಂಪ್ರದಾಯದ ಕಟ್ಟುಪಾಡುಗಳನ್ನು ಮುರಿದುಹಾಕುತ್ತಾ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡಿತು. ಸಮಯದ ಜೊತೆಗೆ ಈ ಕಾರ್ಯಕ್ರಮಗಳ ಜನಪ್ರಿಯತೆ ಸಹ ಹೆಚ್ಚಾಗುತ್ತಾ ಹೋಯಿತು. ನಮ್ಮ ಪ್ರಾಚೀನ ಪರಂಪರೆ ಮತ್ತು ಇತಿಹಾಸದ ನಮ್ಮ ವೀರ ನಾಯಕರ ಬಗ್ಗೆ ಇಂದಿಗೂ ಕೂಡ ನಮ್ಮ ಯುವ ಪೀಳಿಗೆಯವರಿಗೆ ಗೀಳು ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಇಂದು ಬಹಳಷ್ಟು ನಗರಗಳಲ್ಲಿ ಹೇಗಾಗುತ್ತದೆ ಎಂದರೆ ನಿಮಗೆ ಸುಮಾರು ಪ್ರತೀ ರಸ್ತೆಯಲ್ಲಿಯೂ ಗಣೇಶನ ಪೆಂಡಾಲ್ ನೋಡಲು ಸಿಗುತ್ತದೆ. ರಸ್ತೆಯ ಎಲ್ಲಾ ಕುಟುಂಬದವರೂ ಒಟ್ಟಿಗೆ ಸೇರಿ ಅದನ್ನು ಆಯೋಜಿಸುತ್ತಾರೆ. ಒಂದು ಟೀಮ್ ನ ರೀತಿ ಕೆಲಸ ಮಾಡುತ್ತಾರೆ. ಇದು ನಮ್ಮ ಯುವಕರಿಗೆ ಕೂಡ ಒಂದು ಒಳ್ಳೆಯ ಅವಕಾಶ. ಅಲ್ಲಿ ಅವರು ನಾಯಕತ್ವ ಮತ್ತು ಸಂಘಟನೆಯಂತಹ ಗುಣಗಳನ್ನು ಕಲಿಯುತ್ತಾರೆ, ಅವನ್ನು ತಮ್ಮೊಳಗೆ ವಿಕಸನಗೊಳಿಸಿಕೊಳ್ಳುತ್ತಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಈ ಹಿಂದೆ ವಿನಂತಿ ಮಾಡಿಕೊಂಡಿದ್ದೆ ಮತ್ತು ಈಗ ಲೋಕಮಾನ್ಯ ತಿಲಕರನ್ನು ನೆನಪಿಸಿಕೊಳ್ಳುತ್ತಿರುವ ಸಮಯದಲ್ಲಿ ಮತ್ತೊಮ್ಮೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ – ಈ ಬಾರಿ ಕೂಡ ನಾವು ಗಣೇಶೋತ್ಸವವನ್ನು ಆಚರಿಸೋಣ, ಅದ್ಧೂರಿಯಾಗಿ ಆಚರಿಸೋಣ, ಸಂತೋಷವಾಗಿ ಆಚರಿಸೋಣ. ಆದರೆ, ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸುವ ನಿರ್ಧಾರ ಇರಿಸಿಕೊಳ್ಳಿ. ಗಣೇಶನ ಮೂರ್ತಿಯಿಂದ ಹಿಡಿದು ಅಲಂಕಾರಿಕ ವಸ್ತುಗಳ ತನಕ ಎಲ್ಲವೂ ಪರಿಸರಸ್ನೇಹಿಯಾಗಿರಲಿ. ಪ್ರತಿ ನಗರದಲ್ಲೂ ಬೇರೆ ಬೇರೆ ಪರಿಸರಸ್ನೇಹಿ ಗಣೇಶೋತ್ಸವದ ಸ್ಪರ್ಧೆಗಳು ಇರಲಿ, ಅದಕ್ಕೆ ಬಹುಮಾನ ಕೊಡಲ್ಪಡಲಿ ಎನ್ನುವುದು ನನ್ನ ಆಶಯ. MyGov ಮತ್ತು Narendra Modi App ನಲ್ಲಿ ಕೂಡ ವ್ಯಾಪಕವಾಗಿ ಪ್ರಚಾರ ಪಡಿಸಲು ಪರಿಸರಸ್ನೇಹಿ ಗಣೇಶೋತ್ಸವದ ವಿಷಯವನ್ನು ಎಲ್ಲರೂ ಹಾಕಲಿ ಎಂದು ನಾನು ಆಶಿಸುತ್ತೇನೆ. ಅಗತ್ಯವಾಗಿ ನಾನು ನಿಮ್ಮೆಲ್ಲರ ಮಾತುಗಳನ್ನು ಜನರಿಗೆ ತಲುಪಿಸುತ್ತೇನೆ. ಲೋಕಮಾನ್ಯ ತಿಲಕರು ದೇಶವಾಸಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದರು. ಅವರು “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾವು ಪಡೆದೇ ತೀರುತ್ತೇವೆ“ ಎನ್ನುವ ಘೋಷಣೆಯನ್ನು ಮಾಡಿದ್ದರು. ಇಂದು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾವು ಪಡೆದೇ ತೀರುತ್ತೇವೆ ಎಂದು ಮತ್ತೊಮ್ಮೆ ಹೇಳುವ ಸಮಯವಾಗಿದೆ. ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಉತ್ತಮ ಫಲಿತಾಂಶಗಳು ಪ್ರತಿ ಭಾರತೀಯರಿಗೆ ತಲುಪುವಂತೆ ಆಗಬೇಕು. ಯಾವುದು ಒಂದು ನವ ಭಾರತದ ನಿರ್ಮಾಣವನ್ನು ಮಾಡಬಲ್ಲದೋ ಅದು ಇದೇ ಮಾತು. ತಿಲಕರು ಹುಟ್ಟಿ ಸರಿಯಾಗಿ 50 ವರ್ಷಗಳ ನಂತರ ಅದೇ ದಿನ ಅಂದರೆ ಜುಲೈ 23 ರಂದು ಭಾರತಮಾತೆಯ ಮತ್ತೊಬ್ಬ ಸುಪುತ್ರನ ಜನನವಾಯಿತು. ದೇಶವಾಸಿಗಳು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಲಿ ಎನ್ನುವ ಭಾವನೆಯಿಂದ ಆತ ತನ್ನ ಜೀವನವನ್ನು ಬಲಿದಾನ ಮಾಡಿದ. ನಾನು ಚಂದ್ರಶೇಖರ್ ಆಜಾದ್ ಬಗ್ಗೆ ಮಾತನಾಡುತ್ತಿದ್ದೇನೆ. ಭಾರತದಲ್ಲಿ ಈ ಕೆಳಗಿನ ಸಾಲುಗಳನ್ನು ಕೇಳಿ ಪ್ರಭಾವಿತರಾಗದ ಯಾವ ಯುವಜನರಿದ್ದಾರೆ?
“ಸರ್ಫರೋಷಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ,
ದೇಖನಾ ಹೈ ಜೋರ್ ಕಿತನಾ ಬಾಜು-ಎ-ಕಾತಿಲ್ ಮೇ ಹೈ’
ಈ ಸಾಲುಗಳು ಅಶ್ಫಾಕ್ ಉಲ್ಲಾಹ್ ಖಾನ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದ ಅನೇಕ ಯುವಕರನ್ನು ಪ್ರೇರಿತಗೊಳಿಸಿತ್ತು. ಚಂದ್ರಶೇಖರ್ ಅಜಾದ್ ರ ಶೌರ್ಯ ಮತ್ತು ಸ್ವಾತಂತ್ರಕ್ಕಾಗಿ ಅವರ ತುಡಿತ ಇವು ಬಹಳಷ್ಟು ಯುವಕರಿಗೆ ಸ್ಫೂರ್ತಿ ನೀಡಿತ್ತು. ಆಜಾದ್ ತಮ್ಮ ಜೀವನವನ್ನು ಪಣವಾಗಿಟ್ಟರು. ಆದರೆ ವಿದೇಶೀ ಶಾಸನದ ಮುಂದೆ ಅವರು ಎಂದಿಗೂ ಬಾಗಲಿಲ್ಲ. ಮಧ್ಯಪ್ರದೇಶದಲ್ಲಿರುವ ಚಂದ್ರಶೇಖರ್ ಅಜಾದ್ ಅವರ ಹಳ್ಳಿ ಅಲೀರಾಜ್ ಪುರ್ ಗೆ ಹೋಗುವ ಸದವಕಾಶ ನನಗೆ ಸಿಕ್ಕಿತ್ತು. ಇದು ನನ್ನ ಸೌಭಾಗ್ಯ. ಅಲಹಾಬಾದ್ ನ ಚಂದ್ರಶೇಖರ್ ಅಜಾದ್ ಉದ್ಯಾನವನದಲ್ಲಿ ಸಹ ಗೌರವಾರ್ಪಣೆ ಮಾಡಲು ಅವಕಾಶ ಸಿಕ್ಕಿತ್ತು. ಚಂದ್ರಶೇಖರ್ ಅಜಾದ್ ಅವರು ಎಂತಹ ವೀರ ಪುರುಷರೆಂದರೆ ವಿದೇಶೀಯರ ಗುಂಡಿನಿಂದ ಸಾಯುವುದಕ್ಕೂ ಇಷ್ಟಪಡಲಿಲ್ಲ. ಬದುಕಿದ್ದರೆ ಸ್ವಾತಂತ್ರಕ್ಕಾಗಿ ಹೋರಾಡುತ್ತಾ ಇರುವುದು ಮತ್ತು ಸಾಯುವುದಾದರೂ ಸಹ ಸ್ವತಂತ್ರವಾಗಿ ಇದ್ದು ಸಾಯುವುದು ಎನ್ನುವುದೇ ಅವರ ವಿಶೇಷತೆಯಾಗಿತ್ತು. ಮತ್ತೊಮ್ಮೆ ಭಾರತಮಾತೆಯ ಇಬ್ಬರು ಮಹಾನ್ ಸುಪುತ್ರರಾದ ಲೋಕಮಾನ್ಯ ತಿಲಕರು ಮತ್ತು ಚಂದ್ರಶೇಖರ್ ಅಜಾದ್ ಅವರಿಗೆ ಶ್ರದ್ಧಾಪೂರ್ವಕವಾಗಿ ನಮಸ್ಕರಿಸುತ್ತೇನೆ.
ಈಗ ಸ್ವಲ್ಪ ದಿನಗಳ ಮುಂಚೆ ಫಿನ್ಲ್ಯಾಂಡ್ ನಲ್ಲಿ ನಡೆಯುತ್ತಿದ್ದ ಜೂನಿಯರ್ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ಸ್ ಓಟದ ಆ ಸ್ಪರ್ಧೆಯಲ್ಲಿ ಭಾರತದ ವೀರ ಪುತ್ರಿ ಮತ್ತು ರೈತನ ಪುತ್ರಿ ಹಿಮಾ ದಾಸ್ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದಾಳೆ. ದೇಶದ ಮತ್ತೋರ್ವ ಪುತ್ರಿ ಏಕತಾ ಭಯಾನ್ ನನ್ನ ಪತ್ರಕ್ಕೆ ಉತ್ತರವಾಗಿ ಇಂಡೋನೇಶಿಯಾದಿಂದ ನನಗೆ ಇ-ಮೇಲ್ ಕಳುಹಿಸಿದ್ದಾಳೆ. ಈಗ ಆಕೆ ಅಲ್ಲಿ ಏಷ್ಯನ್ ಗೇಮ್ಸ್ ನ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ಇ-ಮೇಲ್ ನಲ್ಲಿ ಏಕತಾ “ಯಾವುದೇ ಅಥ್ಲೆಟ್ ಗೆ ತ್ರಿವರ್ಣ ಧ್ವಜವನ್ನು ಹಿಡಿದುಕೊಳ್ಳುವ ಕ್ಷಣವು ಜೀವನದಲ್ಲಿ ಎಲ್ಲಕ್ಕಿಂತ ಮಹತ್ವಪೂರ್ಣ ಕ್ಷಣವಾಗಿರುತ್ತದೆ. ಅದನ್ನು ನಾನು ಮಾಡಿತೋರಿಸಿದ್ದೇನೆ ಎನ್ನುವುದರ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಬರೆದಿದ್ದಾಳೆ. ಏಕತಾ, ನಮ್ಮೆಲ್ಲರಿಗೂ ಕೂಡ ನಿಮ್ಮ ಬಗ್ಗೆ ಹೆಮ್ಮೆ ಇದೆ. ನೀವು ದೇಶದ ಹೆಸರನ್ನು ಬೆಳಗಿಸಿದ್ದೀರಿ. ಟುನೀಶಿಯ ದಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ Grand Prix 2018 ನಲ್ಲಿ ಏಕತಾ ಅವರು ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಅವರ ಸಾಧನೆ ಬಹಳ ವಿಶೇಷ ಏಕೆಂದರೆ ಅವರು ತಮ್ಮ ಸವಾಲನ್ನೇ ತಮ್ಮ ಯಶಸ್ಸಿನ ಮಾಧ್ಯಮವನ್ನಾಗಿಸಿಕೊಂಡಿದ್ದಾರೆ. ಏಕತಾ ಭಯಾನ್ ಎಂಬ ಈ ಹೆಣ್ಣುಮಗಳಿಗೆ 2003 ರಲ್ಲಿ ರಸ್ತೆ ಅಪಘಾತದ ಕಾರಣದಿಂದ ಅವಳ ಶರೀರದ ಅರ್ಧ ಭಾಗ, ಕೆಳಗಿನ ಅರ್ಧ ಭಾಗ ಉಪಯೋಗವಿಲ್ಲದಂತೆ ಆಯಿತು. ಆದರೆ ಈ ಹೆಣ್ಣುಮಗಳು ಧೈರ್ಯಗೆಡದೆ ತನ್ನನ್ನು ತಾನು ಬಲಗೊಳಿಸಿಕೊಳ್ಳುತ್ತಾ ತನ್ನ ಗುರಿ ಸಾಧಿಸಿದಳು. ಮತ್ತೋರ್ವ ದಿವ್ಯಾಂಗ ಯೋಗೇಶ್ ಕಠುನಿಯಾ ಅವರು ಬರ್ಲಿನ್ ನಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ವಿಶ್ವದಾಖಲೆ ಮಾಡಿದ್ದಾರೆ. ಅವರ ಜೊತೆಗೆ ಸುಂದರ್ ಸಿಂಗ್ ಗುರ್ಜರ್ ಅವರು ಸಹ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನಾನು ಏಕತಾ ಭಯಾನ್, ಯೋಗೇಶ್ ಕಠುನಿಯಾ ಮತ್ತು ಸುಂದರ್ ಸಿಂಗ್, ನಿಮ್ಮೆಲ್ಲರ ಭರವಸೆ ಮತ್ತು ಉತ್ಸಾಹಕ್ಕೆ ನಮಸ್ಕರಿಸುತ್ತೇನೆ. ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ನೀವುಗಳು ಮತ್ತಷ್ಟು ಮುಂದೆ ಹೋಗಿ, ಆಡುತ್ತಿರಿ, ಅರಳುತ್ತಿರಿ.
ನನ್ನ ಪ್ರೀತಿಯ ದೇಶವಾಸಿಗಳೇ, ಆಗಸ್ಟ್ ತಿಂಗಳಿನಲ್ಲಿ ಇತಿಹಾಸದ ಅನೇಕ ಘಟನೆಗಳು ಮತ್ತು ಉತ್ಸವಗಳ ಭರಪೂರ ತುಂಬಿರುತ್ತದೆ. ಆದರೆ ಹವಾಮಾನದ ಕಾರಣದಿಂದ ಕೆಲವೊಮ್ಮೆ ರೋಗಗಳೂ ಮನೆಯೊಳಗೆ ಪ್ರವೇಶಿಸುತ್ತವೆ. ನಾನು ನಿಮ್ಮೆಲ್ಲರ ಉತ್ತಮ ಆರೋಗ್ಯಕ್ಕಾಗಿ, ದೇಶಭಕ್ತಿಯ ಪ್ರೇರಣೆಯನ್ನು ಜಾಗೃತಗೊಳಿಸುವ ಈ ಆಗಸ್ಟ್ ತಿಂಗಳಿಗಾಗಿ ಮತ್ತು ಹಿಂದಿನಿಂದಲೂ ನಡೆದು ಬಂದಿರುವ ಅನೇಕಾನೇಕ ಉತ್ಸವಗಳಿಗಾಗಿ ಅನಂತಾನಂತ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಮತ್ತೊಮ್ಮೆ ಮನದ ಮಾತಿಗಾಗಿ ಅವಶ್ಯವಾಗಿ ಸಿಗೋಣ.
ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಇಂದು ಮತ್ತೊಮ್ಮೆ ಮನದ ಮಾತಿನ ಈ ಕಾರ್ಯಕ್ರಮದಲ್ಲಿ ನಿಮ್ಮೆಲ್ಲರೊಂದಿಗೆ ಮಾತನಾಡುವ ಸೌಭಾಗ್ಯ ಲಭಿಸಿದೆ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಐತಿಹಾಸಿಕ ಕ್ರಿಕೆಟ್ ಪಂದ್ಯ ನಡೆಯಿತು. ನಾನು ಭಾರತ ಮತ್ತು ಅಫ್ಘಾನಿಸ್ಥಾನದ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮಗೆ ಚೆನ್ನಾಗಿ ಅರ್ಥವಾಗಿರಬಹುದು. ಇದು ಅಫ್ಘಾನಿಸ್ಥಾನದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು ಮತ್ತು ಅಫ್ಘಾನಿಸ್ಥಾನದ ಈ ಐತಿಹಾಸಿಕ ಪಂದ್ಯ ಭಾರತದೊಂದಿಗೆ ಇತ್ತು ಎನ್ನುವುದು ಪ್ರತಿ ಭಾರತೀಯನಿಗೂ ಹೆಮ್ಮೆಯ ವಿಷಯ. ಈ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಅಫ್ಘಾನಿಸ್ಥಾನದ ಇನ್ನೊಬ್ಬ ಬೌಲರ್ ರಷೀದ್ ಖಾನ್ ಅಂತೂ ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಫ್ಘಾನಿಸ್ಥಾನದ ರಾಷ್ಟ್ರಪತಿ ಅಶ್ರಫ್ ಘನಿ ಅವರು“ಅಫ್ಘಾನಿಸ್ಥಾನದ ಜನರಿಗೆ ತಮ್ಮ ಹಿರೋ ರಶೀದ್ ಖಾನ್ ಅವರ ಬಗ್ಗೆ ಅಪಾರ ಅಭಿಮಾನವಿದೆ” ಎಂದು ನನಗೆ ಟ್ಯಾಗ್ ಮಾಡಿ ಟ್ವಿಟ್ಟರ್ ನಲ್ಲಿ ಬರೆದಿದ್ದು ನನಗೆ ನೆನಪಿದೆ. ನಮ್ಮ ಕ್ರೀಡಾಳುಗಳಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಒಂದು ವೇದಿಕೆ ಕಲ್ಪಿಸಿದ ನನ್ನ ಭಾರತೀಯ ಮಿತ್ರರಿಗೂ ನಾನು ಆಭಾರಿಯಾಗಿದ್ದೇನೆ. ಅಫ್ಘಾನಿಸ್ಥಾದಲ್ಲಿ ಶ್ರೇಷ್ಠವಾದುದರ ಪ್ರತಿನಿಧಿತ್ವವನ್ನು ರಶೀದ್ ವಹಿಸಿದ್ದಾರೆ. ಅವರು ಕ್ರಿಕೆಟ್ ವಿಶ್ವದ ಆಸ್ತಿಯಿದ್ದಂತೆ ಮತ್ತು ಅದರ ಜೊತೆಗೆ ಹಾಸ್ಯದ ರೂಪದಲ್ಲಿ “ ಇಲ್ಲ ನಾವು ಅವರನ್ನು ಯಾರಿಗೂ ಕೊಡುವುದಿಲ್ಲ” ಎಂದು ಘನಿ ಅವರು ಬರೆದಿದ್ದರು. ಈ ಪಂದ್ಯ ನಮ್ಮೆಲ್ಲರಿಗೂ ನೆನಪಿನಲ್ಲುಳಿಯುವಂಥದ್ದಾಗಿದೆ. ಇರಲಿ, ಮೊದಲ ಪಂದ್ಯವಾದ್ದರಿಂದ ನೆನಪಿನಲ್ಲುಳಿಯುವುದು ಸಹಜವೇ. ಆದರೆ ನನಗೆ ಈ ಪಂದ್ಯ ಒಂದು ವಿಶೇಷ ಕಾರಣಕ್ಕೆ ನೆನಪಿನಲ್ಲುಳಿಯಲಿದೆ. ಭಾರತೀಯ ತಂಡ ಮಾಡಿರುವಂಥ ಕೆಲಸ ಇಡೀ ವಿಶ್ವಕ್ಕೆ ಒಂದು ಉದಾಹರಣೆಯಾಗಿದೆ. ಟ್ರೋಫಿ ತೆಗೆದುಕೊಳ್ಳುವಾಗ ಓರ್ವ ವಿಜೇತ ತಂಡ ಏನು ಮಾಡಬಲ್ಲದು – ಅವರು ಏನು ಮಾಡಿದರು! ಭಾರತೀಯ ತಂಡ ಟ್ರೋಫಿ ತೆಗೆದುಕೊಳ್ಳುವಾಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವಾಡಿದ ಅಫ್ಘಾನಿಸ್ಥಾನದ ತಂಡವನ್ನು ಆಹ್ವಾನಿಸಿದರು ಮತ್ತು ಎರಡೂ ತಂಡದವರು ಒಟ್ಟಿಗೇ ಫೋಟೊ ತೆಗೆಸಿಕೊಂಡರು. ಕ್ರೀಡಾ ಮನೋಭಾವ ಎಂದರೇನು, ಕ್ರೀಡಾಪಟುತ್ವ ಎಂದರೇನು – ಎಂಬುದನ್ನು ಈ ಒಂದು ಘಟನೆಯಿಂದ ನಾವು ತಿಳಿದುಕೊಳ್ಳಬಹುದಾಗಿದೆ. ಕ್ರೀಡೆ ಎಂಬುದು ಸಮಾಜವನ್ನು ಒಗ್ಗೂಡಿಸುವ ಮತ್ತು ನಮ್ಮ ಯುವಕರಲ್ಲಿ ಹುದುಗಿದ ಕೌಶಲ್ಯ, ಪ್ರತಿಭೆಯ ಶೋಧದ ಉತ್ತಮ ಸಾಧನವಾಗಿದೆ. ಭಾರತ ಮತ್ತು ಅಫ್ಘಾನಿಸ್ಥಾನದ ಎರಡೂ ತಂಡಗಳಿಗೆ ಅಭಿನಂದನೆಗಳು. ನಾವು ಮುಂದೆ ಕೂಡಾ ಇದೇ ರೀತಿ ಕ್ರೀಡಾ ಮನೋಭಾವದೊಂದಿಗೆ ಆಡುತ್ತೇವೆ ಮತ್ತು ಅಭಿವೃದ್ಧಿ ಸಾಧಿಸುತ್ತೇವೆ ಎಂದು ನನಗೆ ಭರವಸೆಯಿದೆ.
ನನ್ನ ಪ್ರಿಯ ದೇಶವಾಸಿಗಳೇ! ಇದೇ ಜೂನ್ 21 ಕ್ಕೆ ನಾಲ್ಕನೇ ಯೋಗ ದಿನದಂದು ಬೆರೆಯೇ ದೃಶ್ಯ ಕಂಡುಬಂತು. ಸಂಪೂರ್ಣ ವಿಶ್ವ ಒಂದಾಗಿದ್ದು ಕಂಡುಬಂತು. ವಿಶ್ವಾದ್ಯಂತ ಜನರು ಸಂಪೂರ್ಣ ಉತ್ಸಾಹ ಮತ್ತು ಉಲ್ಲಾಸದಿಂದ ಯೋಗಾಭ್ಯಾಸ ಮಾಡಿದರು. ಬ್ರೆಜಿಲ್ನಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಆಗಲಿ,ನ್ಯೂಯಾರ್ಕ್ನಲ್ಲಿರುವ ಸಂಯುಕ್ತ ರಾಷ್ಟ್ರಗಳ ಮುಖ್ಯ ಕಛೇರಿಯಲ್ಲಾಗಿರಲಿ, ಜಪಾನಿನ ನೌಕಾ ಬಲದ ಯುದ್ಧ ಹಡಗುಗಳಲ್ಲಾಗಲಿ ಎಲ್ಲೆಡೆ ಜನರು ಯೋಗವನ್ನು ಮಾಡುವುದು ಕಂಡುಬಂತು. ಸೌದಿ ಅರಬ್ನಲ್ಲಿ ಮೊದಲ ಬಾರಿಗೆ ಯೋಗದ ಐತಿಹಾಸಿಕ ಕಾರ್ಯಕ್ರಮ ಜರುಗಿತು. ಈ ಬಾರಿ ಮಹಿಳೆಯರು ಆಸನಗಳ ಪ್ರದರ್ಶನವನ್ನು ಮಾಡಿದರು ಎಂದು ತಿಳಿದುಬಂದಿದೆ. ಲಢಾಕ್ನ ಎತ್ತರದ ಮಂಜಿನಿಂದಾವೃತವಾದ ಶಿಖರಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಒಟ್ಟಿಗೆ ಸೇರಿ ಯೋಗಾಭ್ಯಾಸ ಮಾಡಿದ್ದಾರೆ. ಯೋಗ ಎಲ್ಲ ಗಡಿಗಳನ್ನು ಮೀರಿ ಒಗ್ಗೂಡಿಸುವ ಕೆಲಸ ಮಾಡುತ್ತದೆ. ಬಹಳಷ್ಟು ದೇಶಗಳ ಸಾವಿರಾರು ಉತ್ಸಾಹಿ ಜನರು ಜಾತಿ, ಧರ್ಮ, ಕ್ಷೇತ್ರ,ವರ್ಣ ಅಥವಾ ಲಿಂಗ ಎಂಬ ಭೇದಭಾವವನ್ನು ಮೆಟ್ಟಿ ಈ ಸಂದರ್ಭವನ್ನು ಒಂದು ಬಹು ದೊಡ್ಡ ಉತ್ಸವವನ್ನಾಗಿ ಮಾಡಿದರು. ವಿಶ್ವಾದ್ಯಂತದಿಂದ ಜನರು ಇಷ್ಟೊಂದು ಉತ್ಸಾಹದಿಂದ ಯೋಗ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದ ಮೇಲೆ ಭಾರತದಲ್ಲಿ ಅದರ ಉತ್ಸಾಹ ಹಲವು ಪಟ್ಟು ಹೆಚ್ಚಾಗಿರಲೇಬೇಕಲ್ಲವೇ.
ನಮ್ಮ ರಕ್ಷಣಾ ಪಡೆ ಯೋಧರು ಜಲ, ಭೂಮಿ ಮತ್ತು ಅಂತರಿಕ್ಷ ಹೀಗೆ ಮೂರು ಸ್ಥಳದಲ್ಲಿ ಯೋಗಾಭ್ಯಾಸ ಮಾಡಿದ್ದನ್ನು ನೋಡಿ ದೇಶದ 125 ಕೋಟಿ ಜನರಿಗೆ ಹೆಮ್ಮೆಯೆನಿಸುತ್ತದೆ. ಕೆಲ ವೀರ ಯೋಧರು ಪನಡುಬ್ಬಿಯಲ್ಲಿ ಯೋಗ ಮಾಡಿದರೆ ಇನ್ನು ಕೆಲ ಯೋಧರು ಸಿಯಾಚಿನ್ನ ಮಂಜು ಮುಸುಕಿದ ಪರ್ವತಗಳ ಮೇಲೆ ಯೋಗಾಭ್ಯಾಸ ಮಾಡಿದರು. ವಾಯುಪಡೆಯ ನಮ್ಮ ಯೋಧರಂತೂ ಭೂಮಿಯಿಂದ 15 ಸಾವಿರ ಅಡಿ ಎತ್ತರದಲ್ಲಿ ಯೋಗಾಸನ ಮಾಡಿ, ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ಅವರು ವಿಮಾನದಲ್ಲಿ ಕುಳಿತು ಯೋಗ ಮಾಡದೇ ಗಾಳಿಯಲ್ಲಿ ತೇಲುತ್ತಾ ಯೋಗ ಮಾಡಿದ್ದು ವಿಶೇಷವಾಗಿತ್ತು. ಶಾಲೆಯಾಗಿರಲಿ, ಕಾಲೇಜು ಆಗಿರಲಿ, ಕಛೇರಿಯಾಗಿರಲಿ, ಉದ್ಯಾನವಾಗಿರಲಿ, ದೊಡ್ಡ ಕಟ್ಟಡವಾಗಿರಲಿ ಅಥವಾ ಆಟದ ಮೈದಾನವಾಗಿರಲಿ ಎಲ್ಲೆಡೆ ಯೋಗಾಭ್ಯಾಸ ನಡೆಯಿತು. ಅಹ್ಮದಾಬಾದ್ನ ಒಂದು ದೃಶ್ಯ ಮನಸೂರೆಗೊಳ್ಳುವಂತಿತ್ತು. ಸುಮಾರು750 ಜನ ದಿವ್ಯಾಂಗ ಸೋದರ ಸೋದರಿಯರು ಒಂದು ಸ್ಥಳದಲ್ಲಿ ಎಲ್ಲರೂ ಸೇರಿ ಯೋಗಾಭ್ಯಾಸ ಮಾಡಿ ವಿಶ್ವಕ್ಕೇ ಕೀರ್ತಿಯನ್ನು ತಂದರು. ಯೋಗ ಜಾತಿ, ಪಂಥ ಮತ್ತು ಭೌಗೋಳಿಕ ಮಿತಿಯನ್ನೂ ದಾಟಿ ವಿಶ್ವಾದ್ಯಂತ ಜನರನ್ನು ಒಗ್ಗೂಡಿಸಿ ಮಾಡುವಂಥ ಕೆಲಸ ಮಾಡಿದೆ. ಸಹಸ್ರಾರು ವರ್ಷಗಳಿಂದ ನಾವು ಅಳವಡಿಸಿಕೊಂಡಿರುವ, ನಮ್ಮ ಋಷಿ ಮುನಿಗಳು, ಸಂತರು ಯಾವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರೋ ವಸುದೈವ ಕುಟುಂಬಕಂ ಎಂಬ ಭಾವನೆಯನ್ನು ಯೋಗ ಸರಿಯಾದ ರೀತಿಯಲ್ಲಿ ಸಾಧಿಸಿ ತೋರಿಸಿದೆ. ಇಂದು ಯೋಗ ಕ್ಷೇಮ ಕ್ರಾಂತಿಯ ಕೆಲಸ ಮಾಡುತ್ತಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಈಗ ಆರಂಭಗೊಂಡಿರುವ ಯೋಗದಿಂದ ಕ್ಷೇಮ ಎಂಬ ಅಭಿಯಾನ ಮುಂದುವರಿಯುತ್ತದೆ ಎಂದು ನಾನು ಆಶಿಸುತ್ತೇನೆ. ಹೆಚ್ಚೆಚ್ಚು ಜನರು ಇದನ್ನು ತಮ್ಮ ಜೀವನದ ಅಂಗವನ್ನಾಗಿಸಿಕೊಳ್ಳುವರು.
ನನ್ನ ಪ್ರಿಯ ದೇಶಬಾಂಧವರೇ, ಮೈ ಗೌ ಮತ್ತು ನರೇಂದ್ರ ಮೋದಿ ಆಪ್ನಲ್ಲಿ ಈ ಬಾರಿಯ ಮನದ ಮಾತಿನಲ್ಲಿ ಮುಂಬರುವ ಜುಲೈ 1 ರಂದು ಬರಲಿರುವ ವೈದ್ಯರ ದಿನಾಚರಣೆ ಬಗ್ಗೆ ಮಾತನಾಡಿ ಎಂದು ಬಹಳ ಜನ ಬರೆದಿದ್ದಾರೆ. ಸರಿಯಾಗಿದೆ. ಕಷ್ಟ ಕಾಲದಲ್ಲೇ ನಮಗೆ ವೈದ್ಯರು ನೆನಪಾಗುತ್ತಾರೆ ಆದರೆ ಇದು,ಸಂಪೂರ್ಣ ದೇಶ ವೈದ್ಯರ ಸಾಧನೆಗಳನ್ನು ಆಚರಣೆ ಮಾಡುವಂಥ ದಿನವಾಗಿದೆ ಮತ್ತು ಸಮಾಜಕ್ಕೆ ಅವರು ನೀಡಿದ ಸೇವೆ ಮತ್ತು ಸಮರ್ಪಣೆಗೆ ಅವರಿಗೆ ಅನಂತ ಧನ್ಯವಾದಗಳನ್ನು ಅರ್ಪಿಸುವ ದಿನವಾಗಿದೆ.
ನಾವು ಸ್ವಭಾವತಃ ತಾಯಿಯನ್ನು ದೇವರೆಂದು ಪೂಜಿಸುವವರಾಗಿದ್ದೇವೆ. ದೇವರ ಸಮ ಎಂದು ಭಾವಿಸುತ್ತೇವೆ ಏಕೆಂದರೆ ತಾಯಿ ನಮಗೆ ಜನ್ಮ ನೀಡುತ್ತಾಳೆ. ತಾಯಿ ನಮಗೆ ಜನ್ಮ ನೀಡಿದರೆ ವೈದ್ಯರು ನಮಗೆ ಎಷ್ಟೋ ಸಲ ಪುನರ್ಜನ್ಮ ನೀಡುತ್ತಾರೆ. ವೈದ್ಯರ ಪಾತ್ರ ಕೇವಲ ರೋಗವನ್ನು ಗುಣಪಡಿಸುವವರೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾನ್ಯವಾಗಿ ವೈದ್ಯರು ಕುಟುಂಬದ ಸ್ನೇಹಿತರಂತೆ ಇರುತ್ತಾರೆ. ನಮ್ಮ ಜೀವನ ಶೈಲಿಯ ಮಾರ್ಗದರ್ಶಕರಾಗಿರುತ್ತಾರೆ – “They not only cure but also heal” ವೈದ್ಯರ ಬಳಿ ವೈದ್ಯಕೀಯ ಪರಿಣಿತಿಯಂತೂ ಇದ್ದೇ ಇರುತ್ತದೆ ಜೊತೆಗೆ ಸಾಮಾನ್ಯ ಜೀವನ ಶೈಲಿಯ ರೂಢಿಗಳ ಬಗ್ಗೆ, ಅವು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತವೆ ಇದೆಲ್ಲದರ ಬಗ್ಗೆ ಆಳವಾದ ಅನುಭವವು ಇರುತ್ತದೆ. ಭಾರತೀಯ ವೈದ್ಯರು ತಮ್ಮ ಸಾಮಥ್ರ್ಯ ಮತ್ತು ಕೌಶಲ್ಯದಿಂದಾಗಿ ವಿಶ್ವದೆಲ್ಲೆಡೆ ಹೆಸರು ಗಳಿಸಿದ್ದಾರೆ. ವೈದ್ಯ ವೃತ್ತಿಯಲ್ಲಿ ಪಾಂಡಿತ್ಯ ಮತ್ತು ಕಠಿಣ ಪರಿಶ್ರಮ ಸಾಧಿಸಿರುವುದರ ಜೊತೆಗೆ ನಮ್ಮ ವೈದ್ಯರು ಜಟಿಲ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಹೆಸರುವಾಸಿಯಾಗಿದ್ದಾರೆ. ಮನದ ಮಾತಿನ ಮೂಲಕ ನಾನು ಎಲ್ಲ ದೇಶಬಾಂಧವರ ಪರವಾಗಿ ಮುಂಚಿತವಾಗಿಯೇ ನನ್ನೆಲ್ಲ ವೈದ್ಯ ಮಿತ್ರರಿಗೆ ಜುಲೈ 1 ರಂದು ಆಚರಿಸುವ ವೈದ್ಯರ ದಿನದ ಶುಭಾಷಯ ತಿಳಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ, ಭಾರತದಲ್ಲಿ ಜನಿಸಿದ ನಾವು ಎಂಥ ಭಾಗ್ಯಶಾಲಿಗಳು. ಭಾರತದ ಇತಿಹಾಸ ಎಷ್ಟು ಸಮೃದ್ಧವಾಗಿದೆ ಎಂದರೆ ಒಂದಲ್ಲಾ ಒಂದು ಐತಿಹಾಸಿಕ ಘಟನೆ ಘಟಿಸಿರದ ಯಾವುದೇ ದಿನವಾಗಲಿ ಅಥವಾ ಯಾವುದೇ ತಿಂಗಳು ಆಗಲಿ ಇಲ್ಲ. ಹಾಗೆ ನೋಡಿದರೆ ಭಾರತದ ಪ್ರತಿ ಸ್ಥಳಕ್ಕೂ ತನ್ನದೇ ಆದ ಪರಂಪರೆಯಿದೆ. ಆ ಸ್ಥಳಕ್ಕೆ ಸಂಬಂಧಿಸಿದ ಯಾರೋ ಸಂತರಿದ್ದಾರೆ, ಮಹಾಪುರುಷರಿದ್ದಾರೆ, ಯಾರೋ ಪ್ರಸಿದ್ಧ ವ್ಯಕ್ತಿಗಳಿದ್ದಾರೆ ಎಲ್ಲರದೂ ಅವರದೇ ಆದ ಪಾಲುದಾರಿಕೆಯಿದೆ, ಅವರದ್ದೇ ಆದ ಶ್ರೇಷ್ಠತೆಯಿದೆ.
“ಪ್ರಧಾನಮಂತ್ರಿಯವರೇ ನಮಸ್ಕಾರ! ನಾನು ಡಾಕ್ಟರ್ ಸುರೇಂದ್ರ ಮಿಶ್ರ್ರ ಮಾತನಾಡುತ್ತಿದ್ದೇನೆ. ನೀವು ಜೂನ್ 28 ರಂದು ಮಗಹರ್ ಗೆ ಬರುತ್ತಿರುವಿರಿ ಎಂದು ನಮಗೆ ತಿಳಿದುಬಂದಿದೆ. ನಾನು ಮಗಹರ್ ಪಕ್ಕದ ಗೋರಖಪುರದ ಒಂದು ಪುಟ್ಟ ಗ್ರಾಮ ಟಡವಾ ನಿವಾಸಿಯಾಗಿದ್ದೇನೆ. ಮಗಹರ್ ಕಬೀರ್ ಅವರ ಸಮಾಧಿ ಸ್ಥಳವಾಗಿದೆ ಮತ್ತು ಇಲ್ಲಿ ಜನರು ಕಬೀರ್ ರನ್ನು ಸಾಮಾಜಿಕ ಸಾಮರಸ್ಯಕ್ಕಾಗಿ ಸ್ಮರಿಸುತ್ತಾರೆ ಹಾಗೂ ಪ್ರತಿ ಹಂತದಲ್ಲೂ ಕಬೀರ್ ರ ವಿಚಾರಧಾರೆಗಳ ಚರ್ಚೆಯಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಕಾರ್ಯ ಯೋಜನೆಗಳು ಸಮಾಜದ ಎಲ್ಲ ಘಟ್ಟಗಳಲ್ಲಿ ಸಾಕಷ್ಟು ಪ್ರಭಾವ ಬೀರಲಿವೆ. ಭಾರತ ಸರ್ಕಾರದ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿಕೊಡಬೇಕೆಂದು ತಮ್ಮನ್ನು ಕೇಳಿಕೊಳ್ಳುತ್ತೇನೆ.”
ನಿಮ್ಮ ದೂರವಾಣಿ ಕರೆಗೆ ಅನಂತ ಧನ್ಯವಾದಗಳು. ನಾನು ಜೂನ್ 28 ರಂದು ಮಗಹರ್ ಗೆ ಬರುತ್ತಿರುವುದು ನಿಜ ಮತ್ತು ನಿಮಗೆ ಗುಜರಾತ್ನ ಕಬೀರ್ವಡದ ಬಗ್ಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ, ನಾನು ಗುಜರಾತ್ನಲ್ಲಿದ್ದಾಗ, ನಾನು ಅಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ ಕಬೀರ್ ರ ಪರಂಪರೆಯೊಂದಿಗೆ ಒಗ್ಗೂಡಿದ ಜನರ ಒಂದು ಮಹಾ ರಾಷ್ಟ್ರೀಯ ಅಧಿವೇಶನವನ್ನೂ ಆಯೋಜಿಸಿದ್ದೆ. ನಿಮಗೆಲ್ಲ ಕಬೀರರು ಮಗಹರ್ ಗೆ ತೆರಳಿದ್ದು ಏಕೆ ಎಂಬುದು ತಿಳಿದಿದೆ. ಅಂದು ಮಗಹರ್ ನಲ್ಲಿ ಯಾರದೇ ಮೃತ್ಯುವಾದರೆ ಅವರಿಗೆ ಸ್ವರ್ಗ ಲಭಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ಕಾಶಿಯಲ್ಲಿ ಮರಣ ಹೊಂದುವವರು ಸ್ವರ್ಗಕ್ಕೆ ಸೇರುತ್ತಾರೆ ಎಂಬ ನಂಬಿಕೆ ಇತ್ತು. ಮಗಹರ್ ನ್ನು ಅಪವಿತ್ರ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಸಂತ ಕಬೀರರು ಇದನ್ನು ನಂಬುತ್ತಿರಲಿಲ್ಲ. ತಮ್ಮ ಕಾಲದ ಇಂಥ ಅನಿಷ್ಠ ಪದ್ಧತಿಗಳು ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದರು ಮತ್ತು ಅದಕ್ಕಾಗಿಯೇ ಮಗಹರ್ ಗೆ ತೆರಳಿದರು ಮತ್ತು ಅಲ್ಲಿಯೇ ಸಮಾಧಿ ಹೊಂದಿದರು. ಸಂತ ಕಬೀರರು ತಮ್ಮ ರಚನೆಗಳು ಮತ್ತು ದ್ವಿಪದಿಗಳ ಮೂಲಕ ಸಾಮಾಜಿಕ ಸಮಾನತೆ, ಶಾಂತಿ ಮತ್ತು ಸೋದರತ್ವಕ್ಕೆ ಪುಷ್ಟಿ ನೀಡಿದರು. ಇವೇ ಅವರ ಆದರ್ಶಗಳಾಗಿದ್ದವು. ಅವರ ರಚನೆಗಳಲ್ಲಿ ಇದೇ ಆದರ್ಶ ಎದ್ದು ಕಾಣುತ್ತದೆ. ಇಂದಿನ ಯುಗದಲ್ಲೂ ಅವರು ಅಷ್ಟೇ ಪ್ರೇರಣಾದಾಯಕರಾಗಿದ್ದಾರೆ. ಅವರ ಒಂದು ದ್ವಿಪದಿ :
ಕಬೀರ್ ಸೋಇ ಪೀರ್ ಹೈ, ಜೊ ಜಾನೆ ಪರ್ ಪೀರ್
ಜೋ ಪರ್ ಪೀರ್ ನ ಜಾನಹಿ ಸೋ ಕಾ ಪೀರ್ ಮೆ ಪೀರ್
ಅಂದರೆ ಇದರ ಅರ್ಥ ಇತರರ ಕಷ್ಟಗಳನ್ನು ಅರಿಯಬಲ್ಲವನೇ ನಿಜವಾದ ಯೋಗಿ, ಯಾರು ಇತರರ ದುಖಃಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ನಿಷ್ಠರರು ಎಂದು.
ಕಬೀರರು ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರು ದೂರದೃಷ್ಟಿಯ ವಿಚಾರವಂತರಾಗಿದ್ದರು. ವಿಶ್ವದಲ್ಲಿ ಅವನತಿ ಮತ್ತು ಸಂಘರ್ಷದ ಕಾಲಘಟ್ಟದಲ್ಲಿ ಅವರು ಶಾಂತಿ ಮತ್ತು ಸದ್ಭಾವನೆಯ ಸಂದೇಶ ಸಾರಿದರು. ವಿಶ್ವದ ಮನುಕುಲವನ್ನು ಒಗ್ಗೂಡಿಸಿ ಮತಭೇದವನ್ನು ತೊಡೆದು ಹಾಕುವ ಕೆಲಸ ಮಾಡಿದರು.
ಜಗ್ ಮೆ ಬೈರಿ ಕೋಯಿ ನಹಿ ಜೊ ಮನ್ ಶೀಲಲ್ ಹೋಯ್
ಯೆ ಆಪಾ ತೊ ಡಾಲ್ ದೆ ದಯಾ ಕರೆ ಸಬ್ ಕೊಇ
ಇನ್ನೊಂದು ದ್ವಿಪದಿಯಲ್ಲಿ ಕಬೀರರು ಬರೆಯುತ್ತಾರೆ
ಜಹಾ ದಯಾ ತಹಂ ಧರ್ಮ ಹೈ, ಜಹಾ ಲೋಭ ತಹಂ ಪಾಪ
ಜಹಾ ಕ್ರೋಧ ತಹಂ ಕಾಲ ಹೈ. ಆಹಾ ಕ್ಷಮಾ ತಹಂ ಆಪ್
ಅವರು ಹೇಳುತ್ತಾರೆ: -
“ಸಾಧು ಸಂತರ ಜಾತಿಯನ್ನು ಕೇಳಬೇಡಿ ಅವರಿಂದ ಜ್ಞಾನವನ್ನು ಪಡೆಯಿರಿ” ಎಂದು. ಎಲ್ಲರೂ ಜಾತಿ ಧರ್ಮಕ್ಕಿಂತ ಮಿಗಿಲಾಗಿ ಜನರನ್ನು ಅವರ ಜ್ಞಾನದ ಬಲದಿಂದ ಪರಿಗಣಿಸಿ, ಅವರನ್ನು ಗೌರವಿಸಿ ಎಂದು ಕಬೀರರು ಜನರಿಗೆ ಮನವಿ ಮಾಡಿದರು. ಇಂದಿಗೂ ಅವರ ಮಾತುಗಳು ಅಷ್ಟೇ ಪ್ರಭಾವಯುತವಾಗಿವೆ. ಈಗ ನಾವು ಸಂತ ಕಬೀರರ ಬಗ್ಗೆ ಮಾತನಾಡುತ್ತಿರುವಂತೆ ನನಗೆ ಅವರ ದ್ವಿಪದಿಯೊಂದು ನೆನಪಾಗುತ್ತಿದೆ. ಅದರಲ್ಲಿ ಅವರು ಹೇಳುತ್ತಾರೆ
“गुरु गोविन्द दोऊ खड़े, काके लागूं पांय |
बलिहारी गुरु आपने, गोविन्द दियो बताय ||”
ಹೀಗಿದೆ ಗುರುವಿನ ಮಹಾತ್ಮೆ. ಇಂಥ ಒಬ್ಬ ಗುರುಗಳು ಜಗದ್ಗುರುಗಳು ಅಂದರೆ, ಗುರುನಾನಕ ದೇವರು. ಅವರು ಕೋಟ್ಯಾಂತರ ಜನರಿಗೆ ಸನ್ಮಾರ್ಗವನ್ನು ತೋರುತ್ತಾ ಸಾವಿರಾರು ವರ್ಷಗಳಿಂದ ಪ್ರೇರಣೆ ನೀಡುತ್ತಿದ್ದಾರೆ. ಗುರುನಾನಕ ದೇವರು ಸಮಾಜದಲ್ಲಿ ಮತೀಯ ಭೇದಭಾವ ತೊಲಗಿಸಲು ಮತ್ತು ಸಂಪೂರ್ಣ ಮನುಕುಲವನ್ನು ಒಂದು ಎಂದು ಪರಿಗಣಿಸಿ ಅಪ್ಪಿಕೊಳ್ಳುವ ಬೋಧನೆ ಮಾಡಿದರು. ಗುರುನಾನಕರು ಬಡವರು ಮತ್ತು ಅವಶ್ಯಕತೆಯಿರುವವರ ಸೇವೆಯನ್ನೇ ಭಗವಂತನ ಸೇವೆ ಎನ್ನುತ್ತಿದ್ದರು. ಅವರು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲ ಸಮಾಜದ ಏಳ್ಗೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡರು. ಯಾವುದೇ ಜಾತಿ, ಪಂಥ, ಧರ್ಮ ಅಥವಾ ಸಂಪ್ರದಾಯದ ವ್ಯಕ್ತಿ ಬಂದು ಊಟ ಮಾಡುವಂಥ ಸಾಮಾಜಿಕ ಭೇದಭಾವದಿಂದ ಮುಕ್ತವಾದ ಅಡುಗೆ ಮನೆ ವ್ಯವಸ್ಥೆ ಮಾಡಿದರು. ಗುರುನಾನಕ ದೇವರೇ ಲಂಗರ್ ವ್ಯವಸ್ಥೆಯನ್ನು ಆರಂಭಿಸಿದವರು. 2019ರಲ್ಲಿ ಗುರುನಾನಕ ದೇವರ 550 ನೇ ವರ್ಧಂತಿ ಆಚರಣೆ ಕೈಗೊಳ್ಳಲಾಗುವುದು. ನಾವೆಲ್ಲರೂ ಸಂಪೂರ್ಣ ಉತ್ಸಾಹ ಉಲ್ಲಾಸದಿಂದ ಇದರಲ್ಲಿ ಪಾಲ್ಗೊಳ್ಳೋಣ ಎಂದು ನಾನು ಬಯಸುತ್ತೇನೆ. ಗುರುನಾನಕ ದೇವರ550 ನೇ ವರ್ಧಂತಿಯನ್ನು ಸಮಾಜದಲ್ಲಿ ಮತ್ತು ಸಂಪೂರ್ಣ ವಿಶ್ವದಲ್ಲಿ ಹೇಗೆ ಆಚರಿಸೋಣ ಎಂಬುದರ ಬಗ್ಗೆ ಹೊಸ ಹೊಸ ವಿಚಾರಗಳು, ಹೊಸ ಹೊಸ ಸಲಹೆಗಳು, ಹೊಸ ಹೊಸ ಕಲ್ಪನೆಗಳು ಹೇಗಿರಬೇಕು ಎಂಬುದರ ಬಗ್ಗೆ ಆಲೋಚಿಸೋಣ, ಸಿದ್ಧತೆಗಳನ್ನು ಕೈಗೊಳ್ಳೋಣ ಮತ್ತು ಅತ್ಯಂತ ಗೌರವದಿಂದ ನಾವೆಲ್ಲ ಸೇರಿ ಈ ವರ್ಧಂತಿಯನ್ನು ಪ್ರೇರಣಾ ಪರ್ವವನ್ನಾಗಿ ಮಾಡೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಸ್ವಾತಂತ್ರ್ಯದ ಸಂಗ್ರಾಮವು ಬಹಳ ಸುದೀರ್ಘವಾದದ್ದು,ವ್ಯಾಪಕವಾಗಿದೆ, ಬಹಳ ಆಳವಾಗಿದೆ ಮತ್ತು ಅಸಂಖ್ಯ ಹುತಾತ್ಮರಿಂದ ತುಂಬಿಕೊಂಡಿದೆ. ಪಂಜಾಬಿನೊಂದಿಗೆ ಇನ್ನೊಂದು ಇತಿಹಾಸ ತಳುಕು ಹಾಕಿಕೊಂಡಿದೆ. 2019 ಕ್ಕೆ ಇಡೀ ಮನುಕುಲವನ್ನೇ ಮುಜುಗರಕ್ಕೀಡುಮಾಡಿದ ಜಲಿಯನ್ ವಾಲಾ ಬಾಗ್ ನ ಆ ಭಯಾನಕ ಘಟನೆಗೆ ಸಹ 100 ವರ್ಷಗಳಾಗುತ್ತಿವೆ. ಅಧಿಕಾರದ ದುರುಪಯೋಗವನ್ನು ಮಾಡಿಕೊಂಡು ಕ್ರೂರತೆಯ ಎಲ್ಲಾ ಎಲ್ಲೆಗಳನ್ನು ಮೀರಿ ನಿರ್ದೋಷಿಗಳಾದ,ನಿಶ್ಶಸ್ತ್ರರಾಗಿದ್ದ ಮುಗ್ಧ ಜನರ ಮೇಲೆ ಗುಂಡು ಹಾರಿಸಿದ 1919 ರ ಏಪ್ರಿಲ್ 13 ರ ಆ ಕರಾಳ ದಿನವನ್ನು ಯಾರು ಮರೆಯಬಲ್ಲರು? ಈ ಘಟನೆಗೆ 100 ವರ್ಷಗಳಾಗುತ್ತಿವೆ. ಇದನ್ನು ನಾವು ಹೇಗೆ ಸ್ಮರಿಸುವುದು ಎನ್ನುವುದರ ಬಗ್ಗೆ ನಾವು ಯೋಚಿಸಬಹುದು, ಆದರೆ ಈ ಘಟನೆಯು ನೀಡಿದ ಅಮರ ಸಂದೇಶವನ್ನು ನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. ಈ ಹಿಂಸೆ ಮತ್ತು ಕ್ರೂರತೆಯಿಂದ ಎಂದಿಗೂ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ. ಜಯವು ಯಾವಾಗಲೂ ಶಾಂತಿ ಮತ್ತು ಅಹಿಂಸೆಯದೇ ಆಗಿರುತ್ತದೆ; ತ್ಯಾಗ ಮತ್ತು ಬಲಿದಾನದ್ದೇ ಆಗಿರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೆಹಲಿಯ ರೋಹಿಣಿಯ ಶ್ರೀಯುತ ರಮಣ್ ಕುಮಾರ್ ರವರು ‘‘Narendra Modi Mobile App’ನಲ್ಲಿ, ಬರುವ ಜುಲೈ 6 ರಂದು ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಜನ್ಮದಿನವಾಗಿದ್ದು, ಈ ಕಾರ್ಯಕ್ರಮದಲ್ಲಿ ನಾನು ಡಾ. ಶ್ಯಾಮಾ ಪ್ರಸಾದ್ ಮುಖರ್ಜಿಯವರ ಬಗ್ಗೆ ದೇಶವಾಸಿಗಳ ಜೊತೆ ಮಾತನಾಡಬೇಕೆಂದು ಬರೆದಿದ್ದಾರೆ. ರಮಣ್ ರವರೇ, ಎಲ್ಲಕ್ಕಿಂತ ಮೊದಲು ನಿಮಗೆ ಅನಂತಾನಂತ ಧನ್ಯವಾದಗಳು. ಭಾರತದ ಇತಿಹಾಸದಲ್ಲಿ ತಮ್ಮ ಅಭಿರುಚಿಯನ್ನು ನೋಡಿ ಬಹಳ ಸಂತೋಷವಾಯಿತು. ನಿನ್ನೆ ಅಂದರೆ 23 ನೇ ಜೂನ್ ರಂದು ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ ಎಂದು ನಿಮಗೆ ಗೊತ್ತಿರಬಹುದು. ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರು ಬಹಳಷ್ಟು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿ ಇದ್ದರು, ಆದರೆ ಅವರಿಗೆ ಎಲ್ಲಕ್ಕಿಂತ ಹತ್ತಿರವಿದ್ದ ಕ್ಷೇತ್ರಗಳೆಂದರೆ ಶಿಕ್ಷಣ,ಆಡಳಿತ ಮತ್ತು ಸಂಸದೀಯ ವ್ಯವಹಾರಗಳು. ಕೋಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಅತಿ ಕಿರಿಯ ವಯಸ್ಸಿನ ಉಪಕುಲಪತಿಗಳಾಗಿದ್ದರು ಎನ್ನವುದು ಬಹಳ ಕಡಿಮೆ ಜನರಿಗೆ ತಿಳಿದಿರುವ ವಿಚಾರ. ಅವರು ಉಪಕುಲಪತಿಗಳಾದಾಗ ಅವರ ವಯಸ್ಸು ಬರೀ 33 ವರ್ಷಗಳು. ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಆಮಂತ್ರಣದ ಮೇರೆಗೆ ಶ್ರೀ ಗುರುದೇವ ರವೀಂದ್ರನಾಥ ಟ್ಯಾಗೋರ್ ರವರು 1937 ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಬಂಗಾಳಿ ಭಾಷೆಯಲ್ಲಿ ಮಾತನಾಡಿದರು. ಬ್ರೀಟಿಷರ ಆಳ್ವಿಕೆಯ ಸಮಯದಲ್ಲಿ, ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಯಾರಾದರೊಬ್ಬರು ಬಂಗಾಳಿ ಭಾಷೆಯಲ್ಲಿ ಮಾತನಾಡಿದ್ದೇ ಆಗಿದ್ದರೆ ಅದು ಇದೇ ಮೊದಲು. 1947 ರಿಂದ 1950 ರ ವರೆಗೆ ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರು ಭಾರತದ ಮೊದಲ ಕಾರ್ಮಿಕ ಸಚಿವರಾಗಿದ್ದರು ಮತ್ತು ಒಂದು ಅರ್ಥದಲ್ಲಿ ಹೇಳುವುದಾದರೆ ಅವರು ಭಾರತದ ಮತ್ತು ಔದ್ಯೋಗಿಕ ವಿಕಾಸದ ಗಟ್ಟಿಮುಟ್ಟಾದ ನೆಲೆಗಟ್ಟನ್ನು ಹಾಕಿಕೊಟ್ಟರು. ಮಜಬೂತಾದ ತಳಹದಿ ಹಾಕಿದರು; ಒಂದು ಗಟ್ಟಿಯಾದ ವೇದಿಕೆಯನ್ನು ತಯಾರುಗೊಳಿಸಿದರು. 1948 ರಲ್ಲಿ ಬಂದ ಸ್ವತಂತ್ರ ಭಾರತದ ಮೊದಲ ಔದ್ಯೋಗಿಕ ನೀತಿಯು ಅವರ ಪರಿಕಲ್ಪನೆ ಮತ್ತು ದೂರದೃಷ್ಟಿಯ ಛಾಯೆಯನ್ನು ಹೊತ್ತುಕೊಂಡೇ ಬಂದಿತ್ತು. ಭಾರತವು ಪ್ರತಿ ಕ್ಷೇತ್ರದಲ್ಲೂ ಔದ್ಯೋಗಿಕವಾಗಿ ಸ್ವಾವಲಂಬಿಯಾಗಿ, ಕೌಶಲ್ಯ ಹೊಂದಿ ಸಮೃದ್ಧಿಯಾಗಬೇಕು ಎನ್ನುವುದು ಡಾ. ಮುಖರ್ಜಿಯವರ ಕನಸಾಗಿತ್ತು. ಭಾರತವು ದೊಡ್ಡ ಉದ್ದಿಮೆಗಳನ್ನು ಬೆಳೆಸುವುದರ ಜೊತೆಗೆ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು, ಕೈಮಗ್ಗ, ಜವಳಿ ಮತ್ತು ಗುಡಿ ಕೈಗಾರಿಕೆ ಬಗ್ಗೆಯೂ ಸಹ ಗಮನಹರಿಸಬೇಕು ಎನ್ನುವುದನ್ನು ಅವರು ಬಯಸುತ್ತಿದ್ದರು. ಗ್ರಾಮೀಣ ಮತ್ತು ಲಘು ಉದ್ದಿಮೆಗಳ ಸರಿಯಾದ ಅಭಿವೃದ್ಧಿಗೆ ಅವುಗಳಿಗೆ ಅರ್ಥಿಕ ಸಹಾಯ ಮತ್ತು ಸಂಸ್ಥೆಗಳ ರೂಪ ಕೊಡಬೇಕು ಎನ್ನುವ ಉದ್ದೇಶದಿಂದ 1948 ರಿಂದ1950 ರ ನಡುವೆ All India Handicrafts Board, All India Handloom Board ಮತ್ತುKhadi & Village Industries Board ಇವುಗಳ ಸ್ಥಾಪನೆಯನ್ನು ಮಾಡಲಾಯಿತು. ಭಾರತದ ಸೇನಾ ಉತ್ಪಾದನೆಗಳ ಸ್ವದೇಶೀಕರಣದ ಬಗ್ಗೆಯೂ ಡಾ. ಮುಖರ್ಜಿಯವರು ವಿಶೇಷವಾಗಿ ಒತ್ತು ಕೊಟ್ಟಿದ್ದರು. ಎಲ್ಲಕ್ಕಿಂತ ಸಫಲವಾದ ನಾಲ್ಕು ದೊಡ್ಡ ಯೋಜನೆಗಳಾದ Chittaranjan locomotive works factory, Hindustan aircraft factory, ಸಿಂದರಿ ಯ ಗೊಬ್ಬರ ಕಾರ್ಖಾನೆ, ದಾಮೋದರ್ ವ್ಯಾಲಿ ನಿಗಮ ಹಾಗೂ ಮತ್ತೊಂದೆಡೆ ನದಿ ಕಣಿವೆ ಯೋಜನೆಗಳ ಸ್ಥಾಪನೆಗಳಲ್ಲಿ ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಕೊಡುಗೆ ಬಹಳ ದೊಡ್ಡದು. ಪಶ್ಚಿಮ ಬಂಗಾಳದ ಅಭಿವೃದ್ಧಿಯ ಬಗ್ಗೆ ಅವರು ಬಹಳ ಉತ್ಸುಕರಾಗಿದ್ದರು. ಅವರ ತಿಳುವಳಿಕೆ, ಆತ್ಮಸಾಕ್ಷಿ ಮತ್ತು ಸಕ್ರಿಯತೆಯ ಪರಿಣಾಮವಾಗಿ ಬಂಗಾಳದ ಒಂದು ಭಾಗವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಮತ್ತು ಅದು ಇಂದಿಗೂ ಕೂಡ ಭಾರತದ ಭಾಗವಾಗಿದೆ. ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರಿಗೆ ಎಲ್ಲಕ್ಕಿಂತ ಮಹತ್ವಪೂರ್ಣವಾದದ್ದೆಂದರೆ ಅದು ಭಾರತದ ಅಖಂಡತೆ ಮತ್ತು ಏಕತೆ – ಇದಕ್ಕಾಗಿಯೇ 52 ನೇ ವರ್ಷದ ಸಣ್ಣ ವಯಸ್ಸಿನಲ್ಲಿಯೇ ಅವರು ತಮ್ಮ ಪ್ರಾಣವನ್ನೇ ತೆರಬೇಕಾಯಿತು. ಬನ್ನಿ, ನಾವೆಲ್ಲರೂ ಯಾವಾಗಲೂ ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಏಕತೆಯ ಸಂದೇಶವನ್ನು ನೆನಪಿಡೋಣ, ಒಳ್ಳೆಯ ಭಾವನೆ ಮತ್ತು ಸೋದರಭಾವದೊಂದಿಗೆ ಭಾರತದ ಪ್ರಗತಿಗಾಗಿ ತನು ಮನಗಳೊಂದಿಗೆ ಬೆಸೆದುಕೊಂಡಿರೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಕಳೆದ ಕೆಲವು ವಾರಗಳಲ್ಲಿ ಸರ್ಕಾರದ ವಿಭಿನ್ನ ಯೋಜನೆಗಳ ಫಲಾನುಭಾವಿಗಳೊಂದಿಗೆ ವೀಡಿಯೊ ಕರೆಗಳ ಮೂಲಕ ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ಕಡತಗಳಿಂದ ಹೊರಬಂದು ಜನರ ಜೀವನದಲ್ಲಿ ಏನು ಬದಲಾವಣೆಗಳು ಆಗುತ್ತಿವೆ ಎನ್ನುವುದರ ಬಗ್ಗೆ ನೇರವಾಗಿ ಅವರಿಂದಲೇ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ಜನರು ತಮ್ಮ ಸಂಕಲ್ಪ, ತಮ್ಮ ಸುಖ-ದುಃಖ,ತಮ್ಮ ದೊರೆತ ಸೌಲಭ್ಯಗಳ ಬಗ್ಗೆ ಹೇಳಿದರು. ಇದು ನನಗೆ ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿರಲಿಲ್ಲ, ಬದಲಿಗೆ ಇದು ಒಂದು ಬೇರೆ ರೀತಿಯ ಕಲಿಕೆಯ ಅನುಭವವಾಗಿತ್ತು. ಇದರ ಮುಖಾಂತರ ಜನರ ಮುಖದಲ್ಲಿ ಇರುವ ಆ ಖುಷಿಯನ್ನು ನೋಡಲು ಲಭ್ಯವಾಯಿತು. ಯಾರದೇ ಜೀವನದಲ್ಲಿ ಇದಕ್ಕಿಂತ ದೊಡ್ಡ ಸಂತೋಷದ ಕ್ಷಣ ಬೇರೆ ಏನಾಗಿರಬಹುದು? ಸಾಮಾನ್ಯರ ಕಥೆಗಳನ್ನು ಕೇಳಿದಾಗ, ಅವರ ಮುಗ್ಧ ಮಾತುಗಳಲ್ಲಿ ತಮ್ಮ ಅನುಭವದ ಕಥೆಯನ್ನು ಹೇಳುತ್ತಿದ್ದಾಗ ಅದು ನನ್ನ ಹೃದಯ ಮುಟ್ಟುತ್ತಿತ್ತು. ದೂರಾತಿದೂರದ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು common service centre ನ ಮುಖಾಂತರ ಹಳ್ಳಿಯ ವೃದ್ಧರ ಪಿಂಚಣಿಯಿಂದ ಹಿಡಿದು ಪಾಸ್ ಪೋರ್ಟ್ ಮಾಡಿಸಿಕೊಡುವುದರ ತನಕ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಛತ್ತೀಸ್ ಗಡದ ಯಾರೋ ಸೋದರಿ ಸೀತಾಫಲವನ್ನು ಸಂಗ್ರಹಿಸಿ ಅದರ ಐಸ್ ಕ್ರೀಮ್ ಮಾಡಿಕೊಂಡು ಉದ್ಯೋಗ ಮಾಡುತ್ತಿರುವ ಬಗ್ಗೆ; ಜಾರ್ಖಂಡ್ ನಲ್ಲಿ ಅಂಜನ್ ಪ್ರಕಾಶ್ ರವರಂತಹ ದೇಶದ ಲಕ್ಷಾಂತರ ಯುವ ಜನರು ಔಷಧಿ ಕೇಂದ್ರಗಳನ್ನು ನಡೆಸುವುದರ ಜೊತೆಜೊತೆಗೆ ಅಕ್ಕಪಕ್ಕದ ಹಳ್ಳಿಗಳಿಗೆ ಹೋಗಿ ಸುಲಭ ದರದಲ್ಲಿ ಔಷಧಿಗಳು ಸಿಗುವಂತೆ ಮಾಡುತ್ತಿರುವುದರ ಬಗ್ಗೆ; ಎರಡು ಮೂರು ವರ್ಷಗಳಿಂದ ಕೆಲಸ ಹುಡುಕುತ್ತಿದ್ದು ಈಗ ಸ್ವ ಉದ್ಯೋಗವನ್ನು ಸಫಲ ರೀತಿಯಲ್ಲಿ ಮಾಡುತ್ತಿರುವುದಷ್ಟೇ ಅಲ್ಲದೆ, ಹತ್ತು ಹದಿನೈದು ಜನರಿಗೆ ಕೆಲಸ ಕೊಟ್ಟಿರುವ ಪಶ್ಚಿಮ ಬಂಗಾಳದ ಒಬ್ಬ ಯುವಕನ ಬಗ್ಗೆ; ಇತ್ತ ತಮಿಳುನಾಡು, ಪಂಜಾಬ್, ಗೋವಾ ದ ಶಾಲೆಯ ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿ ಶಾಲೆಯ ಣiಟಿಞeಡಿiಟಿg ಟಚಿb ನಲ್ಲಿ ತ್ಯಾಜ್ಯ ನಿರ್ವಹಣೆಯಂತಹ ಮುಖ್ಯ ವಿಷಯಗಳ ಮೇಲೆ ಕೆಲಸಮಾಡುತ್ತಿರುವ ಬಗ್ಗೆ; ಹೀಗೆ ಇನ್ನೂ ಎಷ್ಟು ಕಥೆಗಳಿವೆಯೋ ಗೊತ್ತಿಲ್ಲ, ದೇಶದ ಯಾವ ಮೂಲೆಯಲ್ಲಿಯೂ ಜನರ ಸಫಲತೆಯ ಮಾತುಗಳನ್ನಾಡದಿರುವಂಥ ಸಂದರ್ಭವೇ ಇಲ್ಲ. ಈ ಇಡೀ ಕಾರ್ಯಕ್ರಮದಲ್ಲಿ ಸರಕಾರದ ಸಫಲತೆಗಿಂತ ಸಾಮಾನ್ಯ ಜನರ ಸಾಫಲ್ಯದ ಮಾತುಗಳು, ದೇಶದ ಶಕ್ತಿ, ನವಭಾರತದ ಕನಸಿನ ಶಕ್ತಿ, ನವಭಾರತದ ಸಂಕಲ್ಪದ ಶಕ್ತಿ – ಇವುಗಳನ್ನು ನಾನು ಅನುಭವಿಸುತ್ತಿದ್ದೆ ಎನ್ನುವುದು ನನಗೆ ಖುಷಿಯ ವಿಚಾರ. ಸಮಾಜದಲ್ಲಿ ಕೆಲವು ಜನರು ಎಂಥವರಿರುತ್ತಾರೆ ಎಂದರೆ ನಿರಾಶೆಯ ಮಾತುಗಳನ್ನಾಡದಿದ್ದರೆ, ಹತಾಶೆಯ ಮಾತುಗಳನ್ನಾಡದಿದ್ದರೆ, ಅಪನಂಬಿಕೆ ಹುಟ್ಟುಹಾಕುವ ಪ್ರಯತ್ನ ಮಾಡದಿದ್ದರೆ, ಬೆಸೆಯುವ ಬದಲು ಒಡೆಯುವ ದಾರಿಯನ್ನು ಹುಡುಕದಿದ್ದರೆ ಅವರಿಗೆ ಸಮಾಧಾನವಾಗುವುದಿಲ್ಲ. ಇಂತಹ ವಾತಾವರಣದಲ್ಲಿ ಸಾಮಾನ್ಯ ಜನರು ಹೊಸ ಆಸೆ, ಹೊಸ ಉತ್ಸಾಹ, ಮತ್ತು ತಮ್ಮ ಜೀವನದಲ್ಲಿ ಆಗಿಹೋದ ಘಟನೆಗಳ ಮಾತುಗಳನ್ನು ತೆಗೆದುಕೊಂಡು ಬರುತ್ತಾರೋ ಆಗ ಅದು ಸರಕಾರದ ಸಾಧನೆಯಾಗಿ ಉಳಿಯುವುದಿಲ್ಲ. ದೂರಾತಿದೂರದ ಒಂದು ಸಣ್ಣ ಹಳ್ಳಿಯ, ಒಂದು ಪುಟ್ಟ ಹುಡುಗಿಯ ಘಟನೆಯು ಕೂಡಾ 125 ಕೋಟಿ ದೇಶವಾಸಿಗಳಿಗೆ ಪ್ರೇರಣೆಯಾಗುತ್ತದೆ. ತಾಂತ್ರಿಕತೆಯ ನೆರವಿನಿಂದ, video bridge ನ ಮೂಲಕ ಫಲಾನುಭವಿಗಳ ಜೊತೆ ಸಮಯ ಕಳೆದ ಕ್ಷಣವು ನನಗೆ ತುಂಬಾ ಸಂತೋಷದಾಯಕ ಮತ್ತು ಬಹಳ ಪ್ರೇರಣಾದಾಯಕವಾಗಿದೆ ಮತ್ತು ಇದರಿಂದ ಕೆಲಸ ಮಾಡಿದ ಸಂತೋಷ ಸಿಗುವುದಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುವ ಉತ್ಸಾಹ ಸಹ ದೊರೆಯುತ್ತದೆ. ಬಡವರಲ್ಲಿ ಬಡವನಾದ ವ್ಯಕ್ತಿಗೆ ಜೀವನವನ್ನು ನಡೆಸಲು ಮತ್ತೊಂದು ಹೊಸ ಆನಂದ, ಮತ್ತೊಂದು ಹೊಸ ಉತ್ಸಾಹ, ಮತ್ತೊಂದು ಹೊಸ ಪ್ರೇರಣೆ ಸಿಗುತ್ತದೆ. ನಾನು ದೇಶವಾಸಿಗಳಿಗೆ ತುಂಬಾ ಅಭಾರಿಯಾಗಿದ್ದೇನೆ. 40 – 50 ಲಕ್ಷದಷ್ಟು ಜನರು video bridge ನ ಕಾರ್ಯಕ್ರಮದಲ್ಲಿ ಭಾಗವಹಿಸಿ ನನಗೆ ಹೊಸ ಶಕ್ತಿಯನ್ನು ಕೊಡುವ ಕೆಲಸವನ್ನು ಮಾಡಿದ್ದೀರಿ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ತಿಳಿಸಲು ಬಯಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಒಂದುವೇಳೆ ನಾವು ನಮ್ಮ ಸುತ್ತಮುತ್ತಲೂ ಗಮನಿಸಿದರೆ ಎಲ್ಲಿಯಾದರೂ ಏನಾದರೊಂದು ಒಳ್ಳೆಯದು ನಡೆಯುತ್ತಿರುತ್ತದೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಒಳ್ಳೆಯದನ್ನು ಮಾಡುವ ಜನರು ಇರುತ್ತಾರೆ. ಒಳ್ಳೆಯತನದ ಸುವಾಸನೆಯನ್ನು ನಾವೂ ಕೂಡ ಅನುಭವಿಸಬಹುದು. ಕೆಲವು ದಿನಗಳ ಹಿಂದೆ ಒಂದು ವಿಷಯ ನನಗೆ ತಿಳಿಯಿತು ಮತ್ತು ಇದು ಒಂದು ರೀತಿಯ ದೊಡ್ಡದಾದ, ಹೊಸದಾದ ಸಂಯೋಜನೆಯಾಗಿದೆ. ಇದರಲ್ಲಿ ಒಂದು ಕಡೆ ವೃತ್ತಿಪರರು ಮತ್ತು ಇಂಜಿನಿಯರ್ ಗಳಿದ್ದರೆ ಮತ್ತೊಂದೆಡೆ ಹೊಲದಲ್ಲಿ ಕೆಲಸ ಮಾಡುವ ವ್ಯವಸಾಯದೊಂದಿಗೆ ಬೆಸೆದುಕೊಂಡಿರುವ ನಮ್ಮ ರೈತ ಸೋದರ-ಸೋದರಿಯರಿದ್ದಾರೆ. ಇವೆರಡೂ ಖಡಾಖಂಡಿತವಾಗಿ ಬೇರೆ ಬೇರೆ ವೃತ್ತಿಗಳು, ಇವುಗಳ ಸಂಬಂಧ ಏನು ಎಂದು ನೀವು ಈಗ ಯೋಚಿಸುತ್ತಿರಬಹುದು. ಆದರೆ ಇದು ಹೀಗಿದೆ – ಬೆಂಗಳೂರಿನಲ್ಲಿ ಕಾರ್ಪೊರೇಟ್ ವೃತ್ತಿಪರರು, ಐ.ಟಿ. ಇಂಜಿನಿಯರ್ ಗಳು ಒಟ್ಟಿಗೆ ಬಂದರು. ಅವರು ಜೊತೆ ಸೇರಿ ‘ಸಹಜ್ ಸಮೃದ್ಧಿ’ ಎನ್ನುವ ಟ್ರಸ್ಟ್ ಮಾಡಿದ್ದಾರೆ. ರೈತರ ಆದಾಯ ಎರಡರಷ್ಟು ಮಾಡುವ ಉದ್ದೇಶದಿಂದ ಈ ಟ್ರಸ್ಟ್ ಗೆ ಚಾಲನೆ ನೀಡಿದರು. ಇವರು ರೈತರ ಜೊತೆ ಸೇರಿಕೊಂಡಿದ್ದಾರೆ, ಯೋಜನೆಗಳನ್ನು ಮಾಡುತ್ತಿದ್ದಾರೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಫಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕೃಷಿಯ ಹೊಸ ವಿಧಾನಗಳನ್ನು ಕಲಿಸುವುದರ ಜೊತೆಜೊತೆಗೆ ಜೈವಿಕ ಕೃಷಿಯನ್ನು ಹೇಗೆ ಮಾಡಬೇಕು, ಜಮೀನಿನಲ್ಲಿ ಒಂದು ಫಸಲಿನ ಜೊತೆಜೊತೆಗೆ ಬೇರೆ ಫಸಲುಗಳನ್ನು ಹೇಗೆ ಬೆಳೆಯುವುದು ಎನ್ನುವುದರ ಬಗ್ಗೆ ಈ ಟ್ರಸ್ಟ್ ವೃತ್ತಿಪರರು,ಇಂಜಿನಿಯರ್ ಗಳು ಮತ್ತು ತಂತ್ರಜ್ಞ ರ ಮೂಲಕ ರೈತರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಮೊದಲಿಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಒಂದೇ ಒಂದು ಫಸಲಿನ ಮೇಲೆ ಅವಲಂಬಿತರಾಗಿರುತ್ತಿದ್ದರು. ಇಳುವರಿಯೂ ಹೆಚ್ಚು ಸಿಗುತ್ತಿರಲಿಲ್ಲ ಮತ್ತು ಹೆಚ್ಚು ಲಾಭವೂ ಸಿಗುತ್ತಿರಲಿಲ್ಲ. ಈಗ ಅವರು ತರಕಾರಿಗಳನ್ನು ಬೆಳೆಯುತ್ತಿರುವುದಷ್ಟೇ ಅಲ್ಲದೆ ಟ್ರಸ್ಟ್ ನ ಮೂಲಕ ತಮ್ಮ ತರಕಾರಿಗಳಿಗೆ ಮಾರುಕಟ್ಟೆ ಒದಗಿಸಿಕೊಂಡು ಒಳ್ಳೆಯ ಬೆಲೆಯನ್ನೂ ಪಡೆಯುತ್ತಿದ್ದಾರೆ. ಧಾನ್ಯಗಳನ್ನು ಉತ್ಪಾದಿಸುವ ರೈತರು ಕೂಡ ಇದರೊಂದಿಗೆ ಸೇರಿಕೊಂಡಿದ್ದಾರೆ. ಒಂದು ಕಡೆ ಫಸಲಿನ ಉತ್ಪಾದನೆಯಿಂದ ಹಿಡಿದು ಮಾರುಕಟ್ಟೆ ಒದಗಿಸುವವರೆಗೆ ಪೂರ್ತಿ ಸರಪಳಿಯಲ್ಲಿ ರೈತರ ಪ್ರಮುಖ ಪಾತ್ರವಿದ್ದರೆ, ಮತ್ತೊಂದೆಡೆ ಬರುವ ಲಾಭದಲ್ಲಿ ರೈತರ ಭಾಗವಹಿಸುವಿಕೆ ಮತ್ತು ಹಕ್ಕನ್ನು ಕೊಡಿಸುವ ಪ್ರಯತ್ನ ಇದೆ. ಫಸಲು ಚೆನ್ನಾಗಿರಲು, ಅದಕ್ಕಾಗಿ ಒಳ್ಳೆಯ ತಳಿಯ ಬಿತ್ತನೆ ಬೀಜಗಳನ್ನು ದೊರಕಿಸಿಕೊಡಲು ಬೇರೆ ರೀತಿಯ ಸೀಡ್ ಬ್ಯಾಂಕ್ ಗಳನ್ನೂ ಮಾಡಲಾಗಿದೆ. ಮಹಿಳೆಯರು ಈ ಸೀಡ್ ಬ್ಯಾಂಕ್ ಗಳ ಕೆಲಸಕಾರ್ಯಗಳನ್ನು ನೋಡಿಕೊಳ್ಳುತ್ತಾರೆ. ಮಹಿಳೆಯರನ್ನೂ ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಇಂತಹ ವಿನೂತನ ಪ್ರಯೋಗಕ್ಕೆ ನಾನು ಈ ಯುವಕರಿಗೆ ತುಂಬಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ವೃತ್ತಿಪರರು, ತಂತ್ರಜ್ಞರು, ಇಂಜಿನಿಯರ್ ಗಳ ಜಗತ್ತಿಗೆ ಸೇರಿರುವ ಈ ಯುವಕರು ತಮ್ಮ ಮಿತಿಯಿಂದ ಹೊರಬಂದು ರೈತರ ಜೊತೆ ಬೆರೆಯುವುದು, ಹಳ್ಳಿಗಳ ಜೊತೆ ಬೆರೆಯುವುದು, ಕೃಷಿ ಮತ್ತು ನೇಗಿಲಿನ ಜೊತೆ ಸೇರಿಕೊಳ್ಳುವ ಈ ದಾರಿಯನ್ನು ತಮ್ಮದನ್ನಾಗಿ ಮಾಡಿಕೊಂಡಿರುವುದು ನನಗೆ ತುಂಬಾ ಖುಷಿಯೆನಿಸುತ್ತದೆ. ನಾನು ಮತ್ತೊಮ್ಮೆ ನನ್ನ ದೇಶದ ಯುವ ಪೀಳಿಗೆಗೆ, ಅವರ ಈ ವಿನೂತನ ಪ್ರಯೋಗಗಳಿಗೆ, ಕೆಲವು ನನಗೆ ಗೊತ್ತಿರಬಹುದು, ಕೆಲವು ಗೊತ್ತಿಲ್ಲದಿರಬಹುದು, ಕೆಲವು ಜನರಿಗೆ ಗೊತ್ತಿರಬಹುದು, ಕೆಲವು ಗೊತ್ತಿಲ್ಲದಿರಬಹುದು, ಆದರೆ ಕೋಟ್ಯಾಂತರ ಜನರು ನಿರಂತರವಾಗಿ ಏನಾದರೊಂದು ಒಳ್ಳೆಯದನ್ನು ಮಾಡುತ್ತಿದ್ದಾರೆಯೋ ಅವರೆಲ್ಲರಿಗೂ ನನ್ನ ಕಡೆಯಿಂದ ತುಂಬಾ ಅಭಿನಂದನೆಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ಜಿ.ಎಸ್.ಟಿ. ಜಾರಿಗೆ ಬಂದು ಒಂದು ವರ್ಷವಾಗುತ್ತಿದೆ. ‘One Nation, One Tax’ ಎನ್ನುವುದು ದೇಶದ ಜನರ ಕನಸಾಗಿತ್ತೋ ಅದು ಇಂದು ನನಸಾಗಿದೆ. One Nation One Tax reform, ಇದಕ್ಕಾಗಿ ನಾನು ಇದರ ಸಂಪೂರ್ಣ ಕೀರ್ತಿಯನ್ನು ರಾಜ್ಯಗಳಿಗೆ ಕೊಡುತ್ತೇನೆ. ಜಿ.ಎಸ್.ಟಿ. Cooperative federalism ಇದಕ್ಕೆ ಒಂದು ಒಳ್ಳೆಯ ಉದಾಹರಣೆ. ಅಲ್ಲಿ ಎಲ್ಲಾ ರಾಜ್ಯಗಳೂ ಒಟ್ಟಾಗಿ ಸೇರಿ ದೇಶದ ಹಿತಕ್ಕಾಗಿ ನಿರ್ಧಾರ ತೆಗೆದುಕೊಂಡಿದ್ದರಿಂದ ದೇಶದಲ್ಲಿ ಇಷ್ಟು ದೊಡ್ಡ ತೆರಿಗೆ ಸುಧಾರಣೆಯನ್ನು ಜಾರಿಗೆ ತರಲು ಸಾಧ್ಯವಾಯಿತು. ಇಲ್ಲಿಯವರೆಗೆ ಜಿ.ಎಸ್.ಟಿ. Council ನ 27 ಸಭೆಗಳು ನಡೆದಿವೆ ಮತ್ತು ಅಲ್ಲಿ ಬೇರೆ ಬೇರೆ ರಾಜಕೀಯ ಸಿದ್ಧಾಂತದ ಜನರು ಕುಳಿತುಕೊಳ್ಳುತ್ತಾರೆ, ಬೇರೆ ಬೇರೆ ರಾಜ್ಯದ ಜನರು ಇರುತ್ತಾರೆ, ಬೇರೆ ಬೇರೆ priority ಇರುವ ರಾಜ್ಯಗಳು ಇರುತ್ತವೆ ಆದರೆ ಅದೆಲ್ಲವುಗಳ ನಡುವೆಯೂಜಿ.ಎಸ್.ಟಿ. Councilನಲ್ಲಿ ಇದುವರೆಗೆ ಏನೇನು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆಯೋ ಅವೆಲ್ಲವೂ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಜಿ.ಎಸ್.ಟಿ ಜಾರಿಯಾಗುವ ಮುನ್ನ ದೇಶದಲ್ಲಿ 17 ಬೇರೆ ಬೇರೆ ರೀತಿಯ ತೆರಿಗೆಗಳು ಇರುತ್ತಿದ್ದವು ಆದರೆ ಈಗ ಈ ವ್ಯವಸ್ಥೆಯಲ್ಲಿ ಇಡೀ ದೇಶದಲ್ಲಿ ಒಂದೇ ತೆರಿಗೆಯನ್ನು ಜಾರಿಗೊಳಿಸಲಾಗಿದೆ. ಜಿ.ಎಸ್.ಟಿ. ಯು ಪ್ರಾಮಾಣಿಕತೆಗೆ ಸಂದ ಜಯ ಮತ್ತು ಪ್ರಾಮಾಣಿಕತೆಯ ಒಂದು ಹರ್ಷೋಲ್ಲಾಸ. ಮೊದಲು ದೇಶದಲ್ಲಿ ಸಾಕಷ್ಟು ಸಾರಿ ತೆರಿಗೆ ವಿಷಯದಲ್ಲಿ ಇನ್ ಸ್ಪೆಕ್ಟರ್ ರಾಜ್ ನ ದೂರುಗಳು ಬರುತ್ತಿದ್ದವು. ಜಿ.ಎಸ್.ಟಿ.ಯಲ್ಲಿ ಇನ್ ಸ್ಪೆಕ್ಟರ್ ಜಾಗವನ್ನು ಐ.ಟಿ. ಯ ಮಾಹಿತಿ ತಂತ್ರಜ್ಞಾನವು ತೆಗೆದುಕೊಂಡಿದೆ. Returnನಿಂದ refundವರೆಗೆ ಎಲ್ಲವೂ ಆನ್ ಲೈನ್ ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಆಗುತ್ತದೆ. ಜಿ.ಎಸ್.ಟಿ. ಜಾರಿಯಾಗಿರುವುದರಿಂದ ಚೆಕ್ ಪೋಸ್ಟ್ ಗಳು ತೆರವಾಗಿವೆ ಮತ್ತು ಸರಕುಗಳ ಸಾಗಣೆಯ ವೇಗವೂ ಹೆಚ್ಚಾಗಿದೆ. ಇದರಿಂದ ಬರೀ ಸಮಯ ಉಳಿತಾಯವಷ್ಟೇ ಅಲ್ಲದೆlogisticsಕ್ಷೇತ್ರಕ್ಕೆ ಕೂಡ ಬಹಳಷ್ಟು ಲಾಭ ಸಿಗುತ್ತಿದೆ. ಜಿ.ಎಸ.ಟಿ ಯು ಬಹುಶಃ ಜಗತ್ತಿನ ಎಲ್ಲಕ್ಕಿಂತ ದೊಡ್ಡ ತೆರಿಗೆ ಸುಧಾರಣೆಯಾಗಿದೆ. ಭಾರತದಲ್ಲಿ ಇಷ್ಟು ದೊಡ್ಡ ತೆರಿಗೆ ಸುಧಾರಣೆ ಸಫಲವಾದ ಕಾರಣವೆಂದರೆ ದೇಶದ ಜನರು ಇದನ್ನು ತಮ್ಮದಾಗಿಸಿಕೊಂಡರು, ಮತ್ತು ಜನಶಕ್ತಿಯ ಮೂಲಕವೇ ಜಿ.ಎಸ್.ಟಿ ಯು ಖಂಡಿತವಾಗಿಯೂ ಸಫಲವಾಯಿತು. ಇಷ್ಟು ದೊಡ್ಡ ಸುಧಾರಣೆ, ಇಷ್ಟು ದೊಡ್ಡ ದೇಶ, ಇಷ್ಟೊಂದು ಹೆಚ್ಚಿನ ಜನಸಂಖ್ಯೆ ಇವೆಲ್ಲವುಗಳ ಕಾರಣದಿಂದ ಇದು ಪರಿಪೂರ್ಣವಾಗಿ ಸ್ಥಿರವಾಗಲು 5 ರಿಂದ 7 ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಆದರೆ, ದೇಶದ ಪ್ರಾಮಾಣಿಕ ಜನರ ಉತ್ಸಾಹ, ದೇಶದ ಪ್ರಾಮಾಣಿಕತೆಯ ಉತ್ಸವ, ಜನ ಶಕ್ತಿಯ ಭಾಗವಹಿಸುವಿಕೆ ಇವೆಲ್ಲಾ ಕಾರಣಗಳಿಂದಾಗಿಯೇ ಒಂದು ವರ್ಷದ ಒಳಗೆ ಬಹಳಷ್ಟು ಸಂಖ್ಯೆಯಲ್ಲಿ ಈ ಹೊಸ ತೆರಿಗೆ ಪ್ರಣಾಳಿಕೆಯು ತನ್ನ ಜಾಗವನ್ನು ಭದ್ರಪಡಿಸಿಕೊಂಡು, ಸ್ಥಿರತೆಯನ್ನು ಪಡೆದುಕೊಂಡಿದೆ. ಅವಶ್ಯಕತೆಗೆ ತಕ್ಕಂತೆ ತನ್ನ inbuiltವ್ಯವಸ್ಥೆಯ ಮೂಲಕ ಅದು ಸುಧಾರಣೆಗೆ ಒಳಪಡುತ್ತಿರುತ್ತದೆ. ಇದು 125 ಕೋಟಿ ದೇಶವಾಸಿಗಳು ಸ್ವತಃ ಗಳಿಸಿಕೊಂಡ ಬಹಳ ದೊಡ್ಡ ಸಾಧನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮತ್ತೊಮ್ಮೆ ಮನದ ಮಾತನ್ನು ಮುಗಿಸುತ್ತಾ ನಿಮ್ಮನ್ನು ಸಂಧಿಸುವ,ನಿಮ್ಮಜೊತೆ ಮಾತನಾಡುವ ಮುಂದಿನ ಮನದ ಮನದ ಮಾತು ಕಾರ್ಯಕ್ರಮಕ್ಕೆ ಕಾಯುತಿದ್ದೇನೆ. ನಿಮಗೆ ಅನಂತಾನಂತ ಶುಭಾಷಯಗಳು.
ಅನಂತಾನಂತ ಧನ್ಯವಾದಗಳು.
ನಮಸ್ಕಾರ.
ಮನದ ಮಾತಿನ ಮುಖಾಂತರ ಮತ್ತೊಮ್ಮೆ ನಿಮ್ಮೆಲ್ಲರೊಂದಿಗೆ ಮುಖಾಮುಖಿ ಆಗುವ ಅವಕಾಶ ಸಿಕ್ಕಿದೆ. ನೌಕಾ ಸೇನೆಯ ಆರು ಮಹಿಳಾ ಕಮಾಂಡರ್ ಗಳ ಒಂದು ಪಡೆಯು ಕಳೆದ ಕೆಲವು ತಿಂಗಳುಗಳಿಂದ ಸಮುದ್ರದಲ್ಲಿ ಸಂಚರಿಸುತ್ತಿರುವುದು ನಿಮ್ಮೆಲ್ಲರಿಗೂ ಚೆನ್ನಾಗಿ ನೆನಪಿರಬಹುದು. “ನಾವಿಕಾ ಸಾಗರ ಪರಿಕ್ರಮ” – ಹೌದು, ನಾನು ಅವರ ವಿಷಯವಾಗಿ ಸ್ವಲ್ಪ ಮಾತನಾಡಲು ಇಚ್ಚಿಸುತ್ತೇನೆ. ಭಾರತದ ಈ ಆರು ಸುಪುತ್ರಿಯರ ತಂಡವು ಎರಡುನೂರ ಐವತ್ತನಾಲ್ಕು ದಿನಗಳು – 250 ಕ್ಕಿಂತ ಹೆಚ್ಚು ದಿನಗಳು ಸಮುದ್ರ ಮಾರ್ಗದಲ್ಲಿ INSV ತಾರಿಣಿಯಲ್ಲಿ ಇಡೀ ವಿಶ್ವದ ಪರ್ಯಟನೆ ಮಾಡಿ ಮೇ 21 ರಂದು ಭಾರತಕ್ಕೆ ಹಿಂತಿರುಗಿ ಬಂದಿದ್ದಾರೆ. ಅವರನ್ನು ಇಡೀ ದೇಶವು ಸಾಕಷ್ಟು ಉತ್ಸಾಹದಿಂದ ಸ್ವಾಗತಿಸಿದೆ. ಅವರು ವಿಭಿನ್ನ ಮಹಾಸಾಗರಗಳಲ್ಲಿ ಮತ್ತು ಬಹಳಷ್ಟು ಸಮುದ್ರಗಳಲ್ಲಿ ಪ್ರವಾಸ ಮಾಡುತ್ತಾ ಸುಮಾರು 22 ಸಾವಿರ ನಾಟಿಕಲ್ ಮೈಲಿಗಳಷ್ಟು ದೂರವನ್ನು ಕ್ರಮಿಸಿದ್ದಾರೆ. ಇದು ವಿಶ್ವದಲ್ಲೇ ಇಂತಹ ಮೊದಲ ಘಟನೆಯಾಗಿದೆ. ಕಳೆದ ಬುಧವಾರ ಈ ಎಲ್ಲಾ ಹೆಣ್ಣುಮಕ್ಕಳನ್ನು ಭೇಟಿ ಮಾಡುವ, ಅವರ ಅನುಭವಗಳನ್ನು ಕೇಳುವ ಅವಕಾಶ ಸಿಕ್ಕಿತ್ತು. ನಾನು ಮತ್ತೊಮ್ಮೆ ಈ ಹೆಣ್ಣುಮಕ್ಕಳನ್ನು, ಅವರ ಸಾಹಸವನ್ನು, ನೌಕಾಪಡೆಯ ಗೌರವವನ್ನು, ಭಾರತದ ಗೌರವವನ್ನು ಹೆಚ್ಚಿಸಿದ್ದಕ್ಕಾಗಿ ಮತ್ತು ವಿಶೇಷವಾಗಿ “ಭಾರತದ ಹೆಣ್ಣುಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಜಗತ್ತೇ ತಿಳಿದುಕೊಳ್ಳಲಿ’’ ಎನ್ನುವ ಸಂದೇಶವನ್ನು ತಲುಪಿಸಿದ್ದಕ್ಕಾಗಿ ಬಹಳವಾಗಿ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಸಾಹಸದ ಪರಿಕಲ್ಪನೆ ಯಾರಿಗೆ ಗೊತ್ತಿಲ್ಲ? ಬಹುಶಃ ನಾವು ಮಾನವ ಜೀವಿಗಳ ವಿಕಾಸ ಯಾತ್ರೆಯನ್ನು ಗಮನಿಸಿದಾಗ ಯಾವುದಾದರೊಂದು ಸಾಹಸದ ಗರ್ಭದಲ್ಲೇ ಪ್ರಗತಿ ಎನ್ನುವುದು ಹುಟ್ಟಿಬಂದಿದೆ. ವಿಕಾಸ ಎನ್ನುವುದು ಸಾಹಸದ ಮಡಿಲಲ್ಲೇ ಜೀವ ಪಡೆದುಕೊಳ್ಳುತ್ತದೆ. ಏನಾದರೊಂದು ಮಾಡಿ ಹೋಗುವ ಉದ್ದೇಶ, ವಿಭಿನ್ನವಾಗಿ ಮಾಡುವ ಮನಸ್ಥಿತಿ, ಏನೋ ಅಸಾಮಾನ್ಯವಾದದ್ದನ್ನು ಮಾಡುವಂಥದ್ದು, ನಾನೂ ಏನನ್ನಾದರೂ ಮಾಡಬಲ್ಲೆ ಎನ್ನುವ ಮನೋಭಾವ ಇರುವವರು ಕಡಿಮೆ ಇದ್ದರೂ ಕೂಡ ಇದು ಯುಗ ಯುಗಗಳಲ್ಲಿ, ಕೋಟಿ ಕೋಟಿ ಜನರಿಗೆ ಸ್ಫೂರ್ತಿದಾಯಕವಾಗಿರುತ್ತದೆ. ಕಳೆದ ದಿನಗಳಲ್ಲಿ ಮೌಂಟ್ ಎವರೆಸ್ಟ್ ಹತ್ತುವವರ ವಿಷಯದಲ್ಲಿ ಬಹಳಷ್ಟು ಹೊಸ ಹೊಸ ಮಾತುಗಳು ಗಮನಕ್ಕೆ ಬಂದಿವೆ, ಶತಮಾನಗಳಿಂದ ಎವರೆಸ್ಟ್ ಶಿಖರವು ಮಾನವರಿಗೆ ಸವಾಲುಗಳನ್ನು ಒಡ್ಡುತ್ತಿದೆ ಮತ್ತು ಶೌರ್ಯವಂತರು ಆ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ.
ಮೇ ಹದಿನಾರರಂದು ಮಹಾರಾಷ್ಟ್ರದ ಚಂದ್ರಪುರದ ಒಂದು ಆಶ್ರಮ-ಶಾಲೆಯ 5 ಆದಿವಾಸಿ ಮಕ್ಕಳು – ಮನೀಷಾ ಧುರ್ವೆ, ಪ್ರಮೇಶ್ ಆಲೆ, ಉಮಾಕಾಂತ್ ಮಡವಿ, ಕವಿದಾಸ್ ಕಾತ್ ಮೋಡೆ, ವಿಕಾಸ್ ಸೋಯಾಮ್ – ಈ ನಮ್ಮ ಆದಿವಾಸಿ ಮಕ್ಕಳ ಒಂದು ದಳವು ಪ್ರಪಂಚದಲ್ಲೇ ಎತ್ತರವಾದ ಪರ್ವತವನ್ನು ಹತ್ತಿದರು. ಆಶ್ರಮ ಶಾಲೆಯ ಈ ವಿದ್ಯಾರ್ಥಿಗಳು ಆಗಸ್ಟ್ 2017 ರಲ್ಲಿ ತರಬೇತಿ ಪ್ರಾರಂಭಿಸಿದರು. ವರ್ಧಾ, ಹೈದರಾಬಾದ್, ಡಾರ್ಜಲಿಂಗ್, ಲೇಹ್, ಲಡಾಕ್ – ಈ ಜಾಗಗಳಲ್ಲಿ ಇವರ ತರಬೇತಿ ನಡೆಯಿತು. ಈ ಯುವಕರನ್ನು ‘ಮಿಶನ್ ಶೌರ್ಯ’ ಈ ಕಾರ್ಯಕ್ರಮದ ಅಡಿಯಲ್ಲಿ ಆರಿಸಲಾಗಿತ್ತು. ಹೆಸರಿಗೆ ತಕ್ಕಂತೆ ಎವರೆಸ್ಟ್ ಶಿಖರವನ್ನು ಹತ್ತಿ ಅವರು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ನಾನು ಚಂದ್ರಪುರದ ಶಾಲೆಯ ಜನರಿಗೆ, ನನ್ನ ಈ ಪುಟ್ಟ ಪುಟ್ಟ ಗೆಳೆಯರಿಗೆ ಹೃದಯಪೂರ್ವಕವಾದ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಇತ್ತೀಚೆಗೆ 16 ವರ್ಷದ ಶಿವಾಂಗಿ ಪಾಠಕ್ ನೇಪಾಳದ ಕಡೆಯಿಂದ ಎವರೆಸ್ಟ್ ಹತ್ತಿದ ಎಲ್ಲರಿಗಿಂತ ಕಿರಿಯ ಭಾರತೀಯ ಮಹಿಳೆಯಾದರು. ಹೆಮ್ಮೆಯ ಪುತ್ರಿ ಶಿವಾಂಗಿಗೆ ಅನಂತಾನಂತ ಅಭಿನಂದನೆಗಳು.
ಅಜೀತ್ ಬಜಾಜ್ ಮತ್ತು ಅವರ ಮಗಳು ದಿಯಾ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ತಂದೆ-ಮಗಳ ಜೋಡಿ ಆಯಿತು. ಬರೀ ಯುವಕರಷ್ಟೇ ಎವರೆಸ್ಟ್ ಹತ್ತುತ್ತಾರೆ ಎಂದೇನಿಲ್ಲ. ಸಂಗೀತಾ ಬಹಲ್ ಅವರು ಮೇ 19 ರಂದು ಎವರೆಸ್ಟ್ ಹತ್ತಿದರು. ಸಂಗೀತಾ ಬಹಲ್ ಅವರ ವಯಸ್ಸು 50 ಕ್ಕಿಂತ ಹೆಚ್ಚಾಗಿದೆ. ಎವರೆಸ್ಟ್ ಹತ್ತಿದವರಲ್ಲಿ ಕೆಲವರು ‘ಅವರ ಬಳಿ ಬರೀ ಕೌಶಲ್ಯ ಮಾತ್ರವೇ ಅಲ್ಲ, ಜೊತೆಗೆ ಅವರು ಸೂಕ್ಷ್ಮಗ್ರಾಹಿಗಳೂ ಆಗಿದ್ದಾರೆ’ ಎಂಬುದನ್ನು ತೋರಿಸಿದಂತಹ ಜನರೂ ಇದ್ದಾರೆ. ಈಗ್ಗೆ, ಕೆಲವು ದಿನಗಳ ಹಿಂದೆ ಸ್ವಚ್ಛ ಗಂಗಾ ಅಭಿಯಾನದ ಅಡಿಯಲ್ಲಿ ಬಿಎಸ್ ಎಫ್ ನ ಒಂದು ತಂಡವು ಎವರೆಸ್ಟ್ ಹತ್ತಿತ್ತು. ಆದರೆ, ಪೂರಾ ತಂಡವು ಎವರೆಸ್ಟ್ ನಿಂದ ಬಹಳಷ್ಟು ತ್ಯಾಜ್ಯ ವಸ್ತುಗಳನ್ನು ತಮ್ಮ ಜೊತೆಗೆ ಕೆಳಗೆ ತಂದಿತ್ತು. ಈ ಕೆಲಸವು ಪ್ರಶಂಸನೀಯವಾಗಿರುವುದರ ಜೊತೆಗೆ ಸ್ವಚ್ಚತೆಯ ಬಗ್ಗೆ, ಪರಿಸರದ ಬಗ್ಗೆ ಅವರಿಗಿರುವ ಬದ್ಧತೆಯನ್ನೂ ಸಹ ತೋರಿಸಿಕೊಡುತ್ತದೆ. ಬಹಳಷ್ಟು ವರ್ಷಗಳಿಂದ ಜನರು ಎವರೆಸ್ಟ್ ಶಿಖರವನ್ನು ಹತ್ತುತ್ತಲೇ ಇದ್ದಾರೆ ಮತ್ತು ಅದರಲ್ಲಿ ಸಫಲತೆಯಿಂದ ಪೂರ್ತಿಗೊಳಿಸಿದವರು ಕೂಡ ಬಹಳಷ್ಟು ಜನ ಇದ್ದಾರೆ. ನಾನು ಈ ಎಲ್ಲಾ ಸಾಹಸಿ ವೀರರಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ ಮತ್ತು ವಿಶೇಷವಾಗಿ ನನ್ನ ಯುವ ಮಿತ್ರರೇ, ಈಗ ಎರಡು ತಿಂಗಳ ಹಿಂದೆ ನಾನು ಫಿಟ್ ಇಂಡಿಯಾದ ಬಗ್ಗೆ ಮಾತನಾಡಿದ್ದೆ. ಇದರ ಬಗ್ಗೆ ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ, ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಎಲ್ಲಾ ಕ್ಷೇತ್ರಗಳಿಂದಲೂ ಜನರು ಇದರ ಬೆಂಬಲಕ್ಕಾಗಿ ಮುಂದೆ ಬರುತ್ತಾರೆ ಎಂದು ನಾನು ಯೋಚಿಸಿರಲಿಲ್ಲ. ಯಾವಾಗ ನಾನು ಫಿಟ್ ಇಂಡಿಯಾದ ಬಗ್ಗೆ ಮಾತನಾಡುತ್ತೇನೆಯೋ, ಆಗ “ನಾವು ಎಷ್ಟು ಆಟವಾಡುತ್ತೇವೆಯೋ ಅಷ್ಟೇ ದೇಶವೂ ಆಡುತ್ತದೆ” ಎನ್ನುವುದನ್ನು ನಾನು ಒಪ್ಪುತ್ತೇನೆ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಫಿಟ್ನೆಸ್ ಚಾಲೆಂಜ್ ಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಒಬ್ಬರನ್ನೊಬ್ಬರು ಟ್ಯಾಗ್ ಮಾಡಿ ಚಾಲೆಂಜ್ ಮಾಡುತ್ತಿದ್ದಾರೆ. ಫಿಟ್ ಇಂಡಿಯಾದ ಈ ಅಭಿಯಾನಕ್ಕೆ ಇಂದು ಚಿತ್ರಜಗತ್ತಿಗೆ ಸೇರಿದ ಜನರಾಗಲಿ, ಕ್ರೀಡೆಗಳಿಗೆ ಸೇರಿದ ಜನರಾಗಲಿ ಅಥವಾ ದೇಶದ ಸಾಮಾನ್ಯ ಜನರು, ಸೇನೆಯ ಯೋಧರಾಗಿರಲಿ, ಶಾಲಾ ಶಿಕ್ಷಕರಾಗಿರಲಿ ಹೀಗೆ ಪ್ರತಿಯೊಬ್ಬರೂ ಇದರಲ್ಲಿ ಸೇರಿಕೊಳ್ಳುತ್ತಿದ್ದಾರೆ. ನಾಲ್ಕೂ ದಿಕ್ಕಿನಿಂದ “ನಾವು ಫಿಟ್ ಆಗಿದ್ದರೆ ಇಂಡಿಯಾ ಫಿಟ್ ಆಗಿರುತ್ತದೆ” ಎಂಬ ಒಂದೇ ಘೋಷ ಕೇಳಿಬರುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ನನಗೆ ಚಾಲೆಂಜ್ ಮಾಡಿದ್ದಾರೆ ಮತ್ತು ನಾನು ಆ ಚಾಲೆಂಜ್ ಅನ್ನು ಸ್ವೀಕರಿಸಿದ್ದೇನೆ ಎನ್ನುವುದು ನನಗೆ ಖುಷಿಯ ವಿಚಾರ. ಈ ರೀತಿಯ ಚಾಲೆಂಜ್ ಗಳು ಒಳ್ಳೆಯದು ಎನ್ನುವುದನ್ನು ನಾನು ಒಪ್ಪುತ್ತೇನೆ. ಈ ರೀತಿಯ ಚಾಲೆಂಜ್ ಗಳು ನಮ್ಮನ್ನು ಫಿಟ್ ಆಗಿ ಇರಿಸಲು ಸಹಾಯ ಮಾಡುವುದರ ಜೊತೆಗೆ ಬೇರೆಯವರನ್ನು ಸಹ ಫಿಟ್ ಆಗಿರುವಂತೆ ಪ್ರೋತ್ಸಾಹಿಸುತ್ತವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮನದ ಮಾತು ಕಾರ್ಯಕ್ರಮದಲ್ಲಿ ಕ್ರೀಡೆಗಳಿಗೆ ಸಂಬಂಧಿಸಿದಂತೆ, ಕ್ರೀಡಾಪಟುಗಳಿಗೆ ಸಂಬಂಧಿಸಿದಂತೆ ಏನಾದರೂ ಮಾತುಗಳು ನನ್ನಿಂದ ನೀವು ಕೇಳಿರುತ್ತೀರಿ. ಹಿಂದಿನ ಸಾರಿಯಂತೂ ಕಾಮನ್ ವೆಲ್ತ್ ಕ್ರೀಡಾಕೂಟದ ನಮ್ಮ ನಾಯಕರು ತಮ್ಮ ಮನದ ಮಾತುಗಳನ್ನು ಈ ಕಾರ್ಯಕ್ರಮದ ಮುಖಾಂತರ ನಮಗೆ ಹೇಳುತ್ತಿದ್ದರು –
“ನಮಸ್ಕಾರ ಸರ್. ನಾನು ಛವಿ ಯಾದವ್ ನೊಯಿಡಾದಿಂದ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಮನದ ಮಾತು ಕಾರ್ಯಕ್ರಮದ ಖಾಯಂ ಶ್ರೋತೃವಾಗಿದ್ದೇನೆ ಮತ್ತು ಇಂದು ನಾನು ನಿಮಗೆ ನನ್ನ ಮನದ ಮಾತುಗಳನ್ನು ಹೇಳಲು ಇಚ್ಚಿಸುತ್ತೇನೆ. ಈ ದಿನಗಳಲ್ಲಿ ಬೇಸಿಗೆಯ ರಜೆ ಶುರುವಾಗಿದೆ. ಮಕ್ಕಳು ಇಂಟರ್ನೆಟ್ ಆಟಗಳನ್ನು ಆಡುವುದರಲ್ಲೇ ಹೆಚ್ಚಿನ ಸಮಯ ವ್ಯಯಿಸುವುದನ್ನು ನಾನು ಒಬ್ಬ ತಾಯಿಯಾಗಿ ನೋಡಿದ್ದೇನೆ. ನಾವು ಚಿಕ್ಕವರಾಗಿದ್ದಾಗ ಸಾಂಪ್ರದಾಯಿಕ ಆಟಗಳು ಅದರಲ್ಲೂ ಹೆಚ್ಚಾಗಿ ಯಾವುದು ಹೊರಾಂಗಣ ಆಟಗಳಾಗಿದ್ದವೋ ಅವುಗಳನ್ನು ಆಡುತ್ತಿದ್ದೆವು. ಅದೇ ರೀತಿ ಒಂದು ಆಟವಿತ್ತು. ಅದರಲ್ಲಿ ಕಲ್ಲಿನ ಏಳು ತುಂಡುಗಳನ್ನು ಒಂದರ ಮೇಲೊಂದರಂತೆ ಇಟ್ಟು ಅದನ್ನು ಚೆಂಡಿನಿಂದ ಹೊಡೆಯುತ್ತಿದ್ದೆವು ಮತ್ತು ಅದು ಮೇಲೆ ಕೆಳಗೆ ಆಗುತ್ತಿತ್ತು, ಅದರಂತೆ, ಖೋ ಖೋ; ಈ ಎಲ್ಲಾ ಆಟಗಳು ಇಂದಿನ ದಿನಗಳಲ್ಲಿ ಕಾಣೆಯಾಗುತ್ತಿವೆ. ನೀವು ಇಂದಿನ ಪೀಳಿಗೆಯವರಿಗೆ ಇಂತಹ ಸಾಂಪ್ರದಾಯಿಕ ಆಟಗಳ ಬಗ್ಗೆ ಹೇಳಿ ಎನ್ನುವುದು ನನ್ನ ಕೋರಿಕೆ. ಅದರಿಂದ ಅವರಿಗೂ ಇದರ ಬಗ್ಗೆ ಆಸಕ್ತಿ ಹೆಚ್ಚಲಿ. ಧನ್ಯವಾದ.”
ಛವಿ ಯಾದವ್ ರವರೇ, ನಿಮ್ಮ ದೂರವಾಣಿ ಕರೆಗಾಗಿ ನಿಮಗೆ ತುಂಬಾ ಧನ್ಯವಾದಗಳು. ಹಿಂದೆ ಗಲ್ಲಿ ಗಲ್ಲಿಗಳಲ್ಲಿ, ಪ್ರತಿ ಮಗುವಿನ ಜೀವನದ ಭಾಗವಾಗಿದ್ದ ಆಟಗಳು ಇಂದು ಕಡಿಮೆಯಾಗುತ್ತಿವೆ ಎನ್ನುವ ಮಾತು ಸತ್ಯ. ಈ ಆಟಗಳು ಮುಖ್ಯವಾಗಿ ಬೇಸಿಗೆ ರಜೆಗಳ ವಿಶೇಷ ಭಾಗವಾಗಿರುತ್ತಿತ್ತು. ಕೆಲವೊಮ್ಮೆ ನಡು ಮಧ್ಯಾನ್ಹದಲ್ಲಿ ಮತ್ತೆ ಕೆಲವೊಮ್ಮೆ ರಾತ್ರಿಯ ಊಟವಾದ ಮೇಲೆ ಯಾವುದೇ ಚಿಂತೆಯಿಲ್ಲದೆ, ಖಡಾಖಂಡಿತವಾಗಿ ಯಾವ ಯೋಚನೆಯನ್ನೂ ಮಾಡದೆ ಮಕ್ಕಳು ಘಂಟೆಗಟ್ಟಲೆ ಆಟವಾಡುತ್ತಿದ್ದರು. ಕೆಲವೊಂದು ಆಟಗಳು ಹೇಗಿದ್ದವೆಂದರೆ ಪೂರ್ತಿ ಪರಿವಾರವು ಜೊತೆಯಲ್ಲಿ ಆಟವಾಡುತ್ತಿತ್ತು. ಪಿಟ್ಟೂ ಅಥವಾ ಕಂಚೆ ಆಗಲಿ, ಖೋ ಖೋ ಅಗಲಿ, ಕೋಲಾಟ ಅಥವಾ ಚಿನ್ನಿ ದಾಂಡು ಅಗಲಿ, ಎಣಿಸಲಾಗದಷ್ಟು ಆಟಗಳು ಕಾಶ್ಮೀರದಿಂದ ಕನ್ಯಾಕುಮಾರಿ, ಕಛ್ಚ್ ನಿಂದ ಕಾಮರೂಪ್ ನವರೆಗೆ ಎಲ್ಲರಿಗೂ ಬಾಲ್ಯದ ಭಾಗವಾಗಿರುತ್ತಿತ್ತು. ಹೌದು, ಬೇರೆ ಬೇರೆ ಪ್ರದೇಶಗಳಲ್ಲಿ ಈ ಆಟಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟಿರುವುದು ಆಗಿರಬಹುದು. ಉದಾಹರಣೆಗೆ – ಪಿಟ್ಟೂ – ಕೆಲವರು ಇದನ್ನು ಲಗೋರಿ, ಸಾತೋಲಿಯಾ, ಸಾತ್ ಪತ್ಥರ್, ಡಿಕೋರಿ, ಸತೋದಿಯಾ ಎಂದೆಲ್ಲ ಅನೇಕ ಹೆಸರುಗಳಿಂದ ಕರೆಯುತ್ತಾರೆ, ಇದೊಂದೇ ಆಟಕ್ಕೆ ಇನ್ನೂ ಎಷ್ಟು ಹೆಸರುಗಳಿವೆಯೋ ಗೊತ್ತಿಲ್ಲ. ಸಾಂಪ್ರದಾಯಿಕ ಆಟಗಳಲ್ಲಿ ಹೊರಾಂಗಣ, ಒಳಾಂಗಣ ಹೀಗೆ ಎರಡೂ ರೀತಿಯ ಆಟಗಳಿವೆ. ನಮ್ಮ ದೇಶದ ವಿವಿಧತೆಯ ಹಿಂದೆ ಬಚ್ಚಿಟ್ಟುಕೊಂಡಿರುವ ಏಕತೆಯನ್ನು ಈ ಆಟಗಳಲ್ಲಿ ಸಹ ನೋಡಬಹುದಾಗಿದೆ. ಒಂದೇ ಆಟ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ. ನಾನು ಗುಜರಾತಿನವನು. ಅಲ್ಲಿ ಚೋಮಲ್- ಇಸ್ತೋ ಎನ್ನುವ ಒಂದು ಆಟವಿದೆ. ಈ ಆಟವು ಕವಡೆ ಅಥವಾ ಹುಣಸೆ ಬೀಜ ಅಥವಾ ದಾಳಗಳ ಜೊತೆಗೆ 8X8 ರ ಚೌಕಾಕಾರದ ಬೋರ್ಡ್ ನ ಸಹಾಯದಿಂದ ಆಡಲ್ಪಡುತ್ತದೆ. ಈ ಆಟವನ್ನು ಸರಿ ಸುಮಾರು ಎಲ್ಲಾ ರಾಜ್ಯಗಳಲ್ಲೂ ಆಡುತ್ತಿದ್ದರು. ಕರ್ನಾಟಕದಲ್ಲಿ ಇದಕ್ಕೆ ಚೌಕ ಬಾರಾ ಎಂದು ಹೇಳಿದರೆ, ಮಧ್ಯಪ್ರದೇಶದಲ್ಲಿ ಅತ್ತೂ; ಕೇರಳದಲ್ಲಿ ಪಕೀಡಾಕಾಲೀ ಎಂದಾದರೆ ಮಹಾರಾಷ್ಟ್ರದಲ್ಲಿ ಚಂಪಲ್, ತಮಿಳುನಾಡಿನಲ್ಲಿ ದಾಯಾಮ್ ಮತ್ತು ಥಾಯಾಮ್, ರಾಜಾಸ್ಥಾನದಲ್ಲಿ ಚಂಗಾಪೋ, ಇನ್ನೂ ಎಷ್ಟು ಹೆಸರುಗಳಿವೆಯೋ ಗೊತ್ತಿಲ್ಲ; ಆದರೆ ಪ್ರತಿ ರಾಜ್ಯದವರಿಗೂ ಭಾಷೆ ಗೊತ್ತಿಲ್ಲದಿದ್ದರೂ ಸಹ “ಅರೇ ವಾವ್, ಈ ಆಟವನ್ನು ನಾವೂ ಆಡಿದ್ದೇವೆ” ಎಂದು ಆಡಿದ ಮೇಲೆ ಅನ್ನಿಸುತ್ತದೆ. ಬಾಲ್ಯದಲ್ಲಿ ಚಿನ್ನಿ ದಾಂಡು ಆಡದವರು ನಮ್ಮಲ್ಲಿ ಯಾರಿದ್ದಾರೆ? ಇದಂತೂ ಹಳ್ಳಿಯಿಂದ ಹಿಡಿದು ಪಟ್ಟಣದವರೆಗೆ ಎಲ್ಲರೂ ಆಡುವಂತಹ ಆಟ. ದೇಶದ ಬೇರೆ ಬೇರೆ ಭಾಗಗಳಲ್ಲಿ ಇದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ. ಆಂಧ್ರಪ್ರದೇಶದಲ್ಲಿ ಇದನ್ನು ಗೋಟಿಬಿಲ್ಲಾ ಅಥವಾ ಕಾರ್ರಿಬಿಲ್ಲಾ ಎಂಬ ಹೆಸರಿನಿಂದ ಕರೆಯುತ್ತಾರೆ. ಒರಿಸ್ಸಾದಲ್ಲಿ ಇದನ್ನು ಗುಲಿಬಾಡಿ ಎಂದು ಕರೆದರೆ ಮಹಾರಾಷ್ಟ್ರದಲ್ಲಿ ಇದನ್ನು ವಿತ್ತಿಡಾಲೂ ಎನ್ನುತ್ತಾರೆ. ಕೆಲವು ಆಟಗಳಿಗೆ ಅದರದ್ದೇ ಆದ ಒಂದು ಋತು ಇರುತ್ತದೆ. ಉದಾಹರಣೆಗೆ, ಗಾಳಿಪಟ ಹಾರಿಸುವುದಕ್ಕೆ ಕೂಡ ಒಂದು ಋತು ಇರುತ್ತದೆ. ಯಾವಾಗ ಗಾಳಿಪಟ ಹಾರಿಸುತ್ತಾ ನಾವು ಆಡುತ್ತೇವೆಯೋ ಆಗ ನಮ್ಮಲ್ಲಿ ಇರುವ ವಿಶಿಷ್ಠ ಗುಣಗಳನ್ನು ನಾವು ಮುಕ್ತವಾಗಿ ವ್ಯಕ್ತಪಡಿಸಬಲ್ಲೆವು. ಕೆಲವು ಮಕ್ಕಳು ನಾಚಿಕೆ ಸ್ವಭಾವದವರಾಗಿರುತ್ತಾರೆ, ಆದರೆ ಆಟವಾಡುವ ಸಮಯದಲ್ಲಿ ಬಹಳ ಲವಲವಿಕೆಯಿಂದ ಕೂಡಿರುತ್ತಾರೆ ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುತ್ತಾರೆ. ತುಂಬಾ ಗಂಭೀರ ಸ್ವಭಾವದವರಾಗಿ ಕಾಣುವವರಲ್ಲಿ ಹುದುಗಿರುವ ಹುಡುಗುತನ ಆಟವಾಡುವ ಸಮಯದಲ್ಲಿ ಹೊರಬರುತ್ತದೆ. ಶಾರೀರಿಕ ಕ್ಷಮತೆಯ ಜೊತೆಜೊತೆಗೆ ನಮ್ಮ ತಾರ್ಕಿಕ ಚಿಂತನೆ, ಏಕಾಗ್ರತೆ, ಜಾಗರೂಕತೆ ಮತ್ತು ಸ್ಫೂರ್ತಿ ಇವುಗಳನ್ನೂ ಸಹ ಪ್ರಚುರಪಡಿಸುವ ರೀತಿಯಲ್ಲಿ ಸಾಂಪ್ರದಾಯಿಕ ಆಟಗಳು ರೂಪುಗೊಂಡಿವೆ. ಆಟಗಳು ಬರೀ ಆಟಗಳಾಗಿರುವುದಿಲ್ಲ, ಅವು ಜೀವನದ ಮೌಲ್ಯಗಳನ್ನು ಕಲಿಸುತ್ತವೆ. ಗುರಿಯನ್ನು ಹೇಗೆ ನಿರ್ಧರಿಸುವುದು, ಧೃಡತೆಯನ್ನು ಹೇಗೆ ಸಾಧಿಸುವುದು, ಒಂದು ತಂಡದ ಭಾವನೆಯನ್ನು ಹೇಗೆ ಹುಟ್ಟುಹಾಕಿಕೊಳ್ಳಬೇಕು, ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡಬೇಕು ಎನ್ನುವುದನ್ನು ಆಟಗಳು ಕಲಿಸುತ್ತವೆ. ವ್ಯವಹಾರ ನಿರ್ವಹಣೆಗೆ ಸಂಬಂಧಪಟ್ಟ ತರಬೇತಿ ಕಾರ್ಯಕ್ರಮಗಳಲ್ಲಿ, ಒಟ್ಟಾರೆ ವೈಯುಕ್ತಿಕ ಅಭಿವೃದ್ಧಿ ಮತ್ತು ಪರಸ್ಪರ ಕೌಶಲ್ಯಗಳ ಅಭಿವೃದ್ಧಿಗೆ ಕೂಡ ನಮ್ಮ ಸಾಂಪ್ರದಾಯಿಕವಾಗಿ ಆಡುವ ಆಟಗಳ ಉಪಯೋಗ ಇಂದಿನ ದಿನಗಳಲ್ಲಿ ಆಗುತ್ತಿದೆ ಮತ್ತು ಬಹಳ ಸುಲಭವಾಗಿ ಸಮಗ್ರ ಅಭಿವೃದ್ಧಿಯಲ್ಲಿ ನಮ್ಮ ಆಟಗಳು ಉಪಯೋಗವಾಗುತ್ತಿವೆ ಎಂಬುದನ್ನು ನಾನು ಕಳೆದ ಕೆಲವು ದಿನಗಳಲ್ಲಿ ನೋಡಿದ್ದೇನೆ. ಜೊತೆಗೆ ಈ ಆಟಗಳನ್ನು ಆಡುವುದಕ್ಕೆ ಯಾವುದೇ ವಯಸ್ಸಿನ ಅಂತರವಿಲ್ಲ. ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿ ಸಹಿತ ಎಲ್ಲರೂ ಆಟವಾಡಿದಾಗ ಪೀಳಿಗೆಯ ನಡುವಿನ ಅಂತರ ಎಂದು ನಾವು ಏನನ್ನು ಹೇಳುತ್ತೇವೆ, ಅದು ಕೂಡ ಮಾಯವಾಗಿ ಹೋಗುತ್ತದೆ. ಜೊತೆಗೆ ನಾವು ನಮ್ಮ ಸಂಸೃತಿ ಮತ್ತು ಪರಂಪರೆಗಳನ್ನೂ ಸಹ ತಿಳಿದುಕೊಳ್ಳುತ್ತೇವೆ. ಕೆಲವು ಆಟಗಳು ಸಮಾಜ ಮತ್ತು ಪರಿಸರದ ಬಗ್ಗೆ ಕೂಡ ನಮ್ಮನ್ನು ಜಾಗರೂಕರನ್ನಾಗಿ ಮಾಡುತ್ತವೆ. ಎಲ್ಲೋ ಒಂದು ಕಡೆ ನಮ್ಮ ಈ ಆಟಗಳನ್ನು ಕಳೆದುಕೊಳ್ಳುವ ಭೀತಿ ಕೆಲವೊಮ್ಮೆ ನನ್ನನ್ನು ಯೋಚನೆಗೆ ದೂಡುತ್ತದೆ. ಅದು ಬರೀ ಆಟವನ್ನು ಮಾತ್ರವಲ್ಲ ಎಲ್ಲೋ ಬಾಲ್ಯವನ್ನೂ ಸಹ ಕಳೆದು ಕೊಳ್ಳುವ ಭೀತಿ ನನ್ನನ್ನು ಕಾಡುತ್ತದೆ ಮತ್ತು ಆಗ –
“ಈ ಐಶ್ವರ್ಯವನ್ನು ತೆಗೆದುಕೋ,
ಈ ಸೌಂದರ್ಯವನ್ನು ತೆಗೆದುಕೋ
ಬೇಕಾದರೆ ನನ್ನ ಯೌವ್ವನವನ್ನೂ ಕಿತ್ತುಕೊ,
ಆದರೆ ಕಾಗದದ ದೋಣಿ ಮತ್ತು ಮಳೆಯ ನೀರನ್ನು ನೆನಪಿಸುವ
ನನ್ನ ಬಾಲ್ಯದ ಶ್ರಾವಣವನ್ನು ನನಗೆ ಹಿಂತಿರುಗಿಸು”
ಎಂಬಂತಹ ಕವಿತೆಯ ಸಾಲುಗಳನ್ನು ನಾವು ಕೇಳುತ್ತೇವೆ; ಕೇಳುತ್ತಲೇ ಇದ್ದುಬಿಡುತ್ತೇವೆ.
ಆದ್ದರಿಂದ ಈ ಪಾರಂಪರಿಕ ಆಟಗಳನ್ನು ನಾವು ಕಳೆದುಕೊಳ್ಳಬಾರದು. ಶಾಲೆಗಳು, ಬಡಾವಣೆಗಳು, ಯುವಮಂಡಳಿಗಳು ಮುಂದೆ ಬಂದು ಈ ಆಟಗಳಿಗೆ ಪ್ರಚಾರ ಕೊಡುವುದನ್ನು ಇಂದು ಅವಶ್ಯಕವಾಗಿ ಮಾಡಬೇಕಾಗಿದೆ. Crowd sourcing ಮುಖಾಂತರ ನಾವು ನಮ್ಮ ಸಾಂಪ್ರದಾಯಿಕ ಆಟಗಳ ಒಂದು ದೊಡ್ಡ ಆರ್ಖೈವ್ ಮಾಡಬಹುದು, ಈ ಆಟಗಳ ವಿಡಿಯೋಗಳನ್ನು ಮಾಡಬಹುದು, ಅದರಲ್ಲಿ ಆಟದ ನಿಯಮಗಳು, ಆಡುವ ರೀತಿಯ ಬಗ್ಗೆ ತೋರಿಸಬಹುದು. ನಮ್ಮ ಈ ಹೊಸ ಪೀಳಿಗೆ – ಯಾರಿಗೆ ನಮ್ಮ ಈ ಗಲ್ಲಿ ಗಲ್ಲಿಗಳಲ್ಲಿ ಆಡುವ ಆಟಗಳು ಕೆಲವೊಮ್ಮೆ ಅಪರೂಪ ಎನಿಸುತ್ತದೆಯೋ ಅವರಿಗಾಗಿ ಈ ಆಟಗಳ ಅನಿಮೇಷನ್ ಫಿಲಂಗಳನ್ನೂ ಮಾಡಬಹುದು. ಅವರು ಅದನ್ನು ನೋಡುತ್ತಾರೆ, ಆಡುತ್ತಾರೆ ಮತ್ತು ಅರಳುತ್ತಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಬರುವ ಜೂನ್ 5 ರಂದು ಅಧಿಕೃತವಾಗಿ ನಮ್ಮ ದೇಶ ಭಾರತವು ವಿಶ್ವ ಪರಿಸರ ದಿನಾಚರಣೆಯನ್ನು (World Environment Day Celebration ) ಅತಿಥೇಯ ದೇಶವಾಗಿ ಆಯೋಜಿಸಲಿದೆ. ಭಾರತಕ್ಕೆ ಇದೊಂದು ದೊಡ್ಡ ಮಹತ್ವಪೂರ್ಣ ಅವಕಾಶವಾಗಿದೆ ಮತ್ತು ಜಲ-ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ ಹೆಚ್ಚಾಗುತ್ತಿರುವ ನಾಯಕತ್ವಕ್ಕೆ ಸಮ್ಮತಿ ಸಿಗುತ್ತಿದೆ ಎನ್ನುವುದರ ಸಂಕೇತವೂ ಸಹ ಆಗಿದೆ. ಈ ವರ್ಷದ ವಿಷಯ ‘Beat Plastic Pollution’ ಎನ್ನುವುದಾಗಿದೆ. ಈ ವಿಷಯದ ಭಾವನೆಯನ್ನು, ಇದರ ಮಹತ್ವವನ್ನು ಅರಿತುಕೊಂಡು ನಾವೆಲ್ಲರೂ ಪಾಲಿಥೀನ್, ಕಡಿಮೆ ದರ್ಜೆಯ ಗುಣಮಟ್ಟದ ಪ್ಲಾಸ್ಟಿಕ್ ಇವುಗಳ ಉಪಯೋಗವನ್ನು ನಿಲ್ಲಿಸೋಣ. ನಮ್ಮ ಪ್ರಕೃತಿಯ ಮೇಲೆ, ವನ್ಯಜೀವಿಗಳ ಮೇಲೆ ಮತ್ತು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿರುವ ಈ ಪ್ಲಾಸ್ಟಿಕ್ ಮಾಲಿನ್ಯವನ್ನು ತಗ್ಗಿಸುವ ಪ್ರಯತ್ನವನ್ನು ಮಾಡೋಣ ಎನ್ನುವುದು ನಾನು ನಿಮ್ಮೆಲ್ಲರಿಗೂ ಮಾಡುತ್ತಿರುವ ಮನವಿ. ವಿಶ್ವ ಪರಿಸರ ದಿನಾಚರಣೆ (World Environment Day Celebration ) ಇದರ ವೆಬ್ ಸೈಟ್ ‘wed-india2018’ ನ್ನು ನೋಡಿ. ಅದರಲ್ಲಿ ಬಹಳಷ್ಟು ಸಲಹೆಗಳನ್ನು ತುಂಬಾ ಆಸಕ್ತಿದಾಯಕವಾಗಿ ನೀಡಲಾಗಿದೆ. ಅದನ್ನು ನೋಡಿ, ತಿಳಿದುಕೊಳ್ಳಿ ಮತ್ತು ಅವುಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ. ಭಯಾನಕ ರೀತಿಯ ಸೆಕೆ ಇದ್ದಾಗ, ಬರ ಉಂಟಾದಾಗ, ಮಳೆ ಬೀಳದೇ ಇದ್ದಾಗ, ಸಹಿಸಲಾರದಂತಹ ಛಳಿ ಆವರಿಸಿಕೊಂಡಾಗ ಎಲ್ಲರೂ ಮೇಧಾವಿಗಳಾಗಿ global warming, climate change ಇವುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಬರೀ ಮಾತನಾಡುವುದರಿಂದ ಕೆಲಸವಾಗುತ್ತದೆಯೇ? ಪ್ರಕೃತಿಯ ಬಗ್ಗೆ ಸಂವೇದನಾಶೀಲರಾಗುವುದು ಮತ್ತು ಪ್ರಕೃತಿಯನ್ನು ರಕ್ಷಿಸುವುದು ಇವು ನಮ್ಮ ಸಹಜ ಸ್ವಭಾವಗಳಾಗಬೇಕು, ನಮ್ಮ ಸಂಸ್ಕಾರದಲ್ಲಿ ಹಾಸುಹೊಕ್ಕಾಗಬೇಕು. ಕಳೆದ ಕೆಲವು ವಾರಗಳಲ್ಲಿ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಮರಳ ಬಿರುಗಾಳಿ ಎದ್ದು, ಬಲವಾದ ಗಾಳಿಯೊಂದಿಗೆ ಭಾರೀ ಮಳೆಯೂ ಸಹ ಅಕಾಲಿಕವಾಗಿ ಸುರಿಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಇದರಿಂದ ಪ್ರಾಣ ಹಾನಿ, ಧನಹಾನಿ ಸಹ ಸಂಭವಿಸಿದವು. ಹವಾಮಾನ ಮಾದರಿಯಲ್ಲಿ ಆಗಿರುವ ಬದಲಾವಣೆ ಮತ್ತು ಅದರ ಪರಿಣಾಮವೇ ಇವೆಲ್ಲಕ್ಕೂ ಮೂಲ ಕಾರಣವಾಗಿದೆ. ನಮ್ಮ ಸಂಸ್ಕೃತಿ ಹಾಗೂ ನಮ್ಮ ಪರಂಪರೆಯು ನಾವು ಪ್ರಕೃತಿಯ ಜೊತೆಗೆ ಹೋರಾಟ ಮಾಡುವುದನ್ನು ಕಲಿಸಿಲ್ಲ. ನಾವು ಪ್ರಕೃತಿಯೊಂದಿಗೆ ಸದ್ಭಾವನೆಯಿಂದ ಇರಬೇಕು, ಪ್ರಕೃತಿಯೊಂದಿಗೆ ಬೆರೆತುಕೊಂಡಿರಬೇಕು. ಮಹಾತ್ಮಾ ಗಾಂಧಿಯವರಂತೂ ಜೀವನಪರ್ಯಂತ ಪ್ರತೀ ಹೆಜ್ಜೆಯಲ್ಲೂ ಇದನ್ನು ಸಮರ್ಥಿಸಿದ್ದರು. ಭಾರತವು climate justice ಬಗ್ಗೆ ಮಾತನಾಡುವಾಗ, Cop21 ಮತ್ತು Paris ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸಿ, international solar alliance ನ ಮುಖಾಂತರ ಇಂದು ಇಡೀ ವಿಶ್ವವನ್ನು ಒಂದುಗೂಡಿಸಿದೆ ಎಂದರೆ ಇದೆಲ್ಲದರ ಮೂಲ, ಮಹಾತ್ಮಾ ಗಾಂಧಿಯವರ ಆ ಕನಸನ್ನು ಪೂರ್ಣಗೊಳಿಸುವ ಒಂದು ಭಾವನೆಯಾಗಿದೆ. ಈ ಪರಿಸರ ದಿನಾಚರಣೆಯಂದು ‘ನಾವು ನಮ್ಮ ಭೂಗ್ರಹವನ್ನು ಸ್ವಚ್ಚ ಮತ್ತು ಹಸಿರನ್ನಾಗಿಸಲು ಏನು ಮಾಡಬಹುದು, ಯಾವ ರೀತಿ ಈ ನಿಟ್ಟಿನಲ್ಲಿ ಮುಂದೆ ಹೋಗಬಹುದು, ಏನು ಅವಿಷ್ಕಾರಗಳನ್ನು ಮಾಡಬಹುದು?’ ಎನ್ನುವುದರ ಬಗ್ಗೆ ಯೋಚಿಸೋಣ. ಮಳೆಗಾಲ ಬರುತ್ತಿದೆ, ನಾವು ಈ ಸಾರಿ ದಾಖಲೆಯ ವನಮಹೋತ್ಸವದ ಗುರಿ ಇಟ್ಟುಕೊಳ್ಳಬಹುದು. ಬರೀ ಗಿಡ ನೆಡುವುದಷ್ಟೇ ಅಲ್ಲದೆ ಅದು ಬೆಳೆದು ದೊಡ್ಡದಾಗುವ ತನಕ ಅದರ ಪಾಲನೆ ಪೋಷಣೆಯ ವ್ಯವಸ್ಥೆ ಮಾಡುವುದು ನಮ್ಮ ಗುರಿಯಾಗಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ ಮತ್ತು ವಿಶೇಷವಾಗಿ ನನ್ನ ಯುವ ಮಿತ್ರರೇ, ನೀವು ಜೂನ್ 21 ನ್ನು ಖಂಡಿತವಾಗಿಯೂ ನೆನಪಿಟ್ಟುಕೊಂಡಿರುತ್ತೀರಾ. ನೀವು-ನಾವಷ್ಟೇ ಅಲ್ಲ, ಇಡೀ ವಿಶ್ವವೇ ಜೂನ್ 21 ನ್ನು ನೆನಪಿಟ್ಟುಕೊಂಡಿರುತ್ತದೆ. ಇಡೀ ವಿಶ್ವದಲ್ಲಿ ಜೂನ್ 21 ಅಂತರ್ರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲ್ಪಡುತ್ತದೆ. ಇದು ಎಲ್ಲಾ ಕಡೆಯೂ ಸ್ವೀಕೃತವಾಗಿದೆ ಮತ್ತು ಜನರು ತಿಂಗಳುಗಳ ಮೊದಲೇ ಇದಕ್ಕಾಗಿ ತಯಾರಿ ಪ್ರಾರಂಭಿಸುತ್ತಾರೆ. ಇಡೀ ವಿಶ್ವದಲ್ಲಿ ಜೂನ್ 21 ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸುವ ಸಲುವಾಗಿ ಸಂಪೂರ್ಣ ಸಿದ್ಧತೆಗಳು ನಡೆಯುತ್ತಿವೆ. yoga for unity ಮತ್ತು harmonious society ಎನ್ನುವ ಸಂದೇಶವನ್ನು ಇಡೀ ವಿಶ್ವವು ಕಳೆದ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಅನುಭವಕ್ಕೆ ತಂದುಕೊಂಡಿದೆ. ಸಂಸ್ಕೃತದ ಭರ್ತೃಹರಿಯು ಶತಮಾನಗಳ ಮುಂಚೆಯೇ ತನ್ನ ಶತಕತ್ರಯಮ್ ನಲ್ಲಿ –
ಧೈರ್ಯ ಯಸ್ಯ ಪಿತಾ ಕ್ಷಮಾ ಚ ಜನನೀ ಶಾಂತಿಶ್ಚಿರಂ ಗೇಹನೀ
ಸತ್ಯಂ ಸೂನುರಯಮ್ ದಯಾ ಚ ಭಗಿನೀ ಭ್ರಾತಾ ಮನಃ ಸಂಯಮಃ !
ಶಯ್ಯಾ ಭೂಮಿತಲಂ ದಿಶೋSಪಿ ವಸನಂ ಜ್ಞಾನಾಮೃತಮ್ ಭೋಜನಂ
ಏತೇ ಯಸ್ಯ ಕುಟುಂಬಿನಃ ವದ ಸಖೇ ಕಸ್ಮಾದ್ ಭಯಂ ಯೋಗಿನಃ !!
ಎಂದು ಬರೆದಿದ್ದಾನೆ.
ಶತಮಾನಗಳ ಹಿಂದೆಯೇ ಹೇಳಿರುವ ಈ ಮಾತಿನ ನೇರಾನೇರ ಅರ್ಥ – ನಿಯಮಿತ ಯೋಗಾಭ್ಯಾಸ ಮಾಡುವುದರಿಂದ ಕೆಲವು ಒಳ್ಳೆಯ ಗುಣಗಳು ಹತ್ತಿರದ ಸಂಬಂಧಿಗಳಂತೆ ಹಾಗೂ ಮಿತ್ರರಂತೆ ಆಗಿಬಿಡುತ್ತವೆ. ಯೋಗ ಮಾಡುವುದರಿಂದ ಧೈರ್ಯ ಹುಟ್ಟಿಕೊಳ್ಳುತ್ತದೆ ಮತ್ತು ಅದು ಯಾವಾಗಲೂ ತಂದೆಯ ರೀತಿ ನಮ್ಮ ರಕ್ಷಣೆ ಮಾಡುತ್ತದೆ; ಯಾವರೀತಿ ತಾಯಿಯು ತನ್ನ ಮಕ್ಕಳ ಬಗ್ಗೆ ಕ್ಷಮಾಗುಣವನ್ನು ಹೊಂದಿರುತ್ತಾಳೋ ಅಂತಹ ಕ್ಷಮೆಯ ಭಾವ ಉತ್ಪತ್ತಿಯಾಗುತ್ತದೆ; ಮಾನಸಿಕ ಶಾಂತಿ ನಮ್ಮ ಶಾಶ್ವತ ಸ್ನೇಹಿತನಾಗುತ್ತದೆ; ನಿಯಮಿತವಾಗಿ ಯೋಗ ಮಾಡುವುದರಿಂದ ಸತ್ಯವು ನಮ್ಮ ಸಂತಾನವಾಗುತ್ತದೆ; ದಯೆಯು ನಮ್ಮ ಸೋದರಿಯಾಗುತ್ತದೆ; ಆತ್ಮ ಸಂಯಮ ನಮ್ಮ ಸೋದರ; ಸ್ವಯಂ ಭೂಮಿಯೇ ನಮ್ಮ ಹಾಸಿಗೆಯಾಗುತ್ತದೆ; ಜ್ಞಾನವು ನಮ್ಮ ಹಸಿವನ್ನು ಇಂಗಿಸುವ ಭೋಜನವಾಗುತ್ತದೆ ಮತ್ತು ಒಂದುವೇಳೆ ಇಷ್ಟೆಲ್ಲಾ ಗುಣಗಳು ಯಾರಿಗಾದರೂ ಮಿತ್ರರಾದರೆ ಅಂತಹ ಯೋಗಿಯು ಎಲ್ಲಾ ರೀತಿಯ ಭಯದಿಂದ ಮುಕ್ತನಾಗಿ ವಿಜಯವನ್ನು ಹೊಂದುತ್ತಾನೆ ಎಂದು ಭರ್ತೃಹರಿಯು ಹೇಳಿದ್ದಾನೆ. ಯೋಗದ ನಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿ ಒಂದು ಸ್ವಸ್ಥ, ಆನಂದಮಯ ಮತ್ತು ಸದ್ಭಾವನಾಪೂರ್ಣ ರಾಷ್ಟ್ರವನ್ನು ನಿರ್ಮಾಣ ಮಾಡಲು ನಾನು ಮತ್ತೊಮ್ಮೆ ಎಲ್ಲಾ ದೇಶವಾಸಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 27. ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂರವರ ಪುಣ್ಯತಿಥಿ. ನಾನು ಪಂಡಿತ್ ನೆಹರೂರವರಿಗೆ ನಮಸ್ಕರಿಸುತ್ತೇನೆ. ಈ ಮೇ ತಿಂಗಳ ನೆನಪು ಮತ್ತೊಂದು ವಿಷಯದೊಂದಿಗೆ ಸಹ ಬೆಸೆದುಕೊಂಡಿದೆ. ಅದೆಂದರೆ ವೀರ ಸಾವರ್ಕರ್. ಭಾರತೀಯರು ಬ್ರಿಟೀಷರಿಗೆ ತಮ್ಮ ಬಲವನ್ನು ತೋರಿಸಿದ್ದು 1857 ರ ಇದೇ ಮೇ ತಿಂಗಳಿನಲ್ಲಿ. ದೇಶದ ಹಲವು ಭಾಗಗಳಲ್ಲಿ ನಮ್ಮ ಯುವಕರು ಮತ್ತು ರೈತರು ತಮ್ಮ ಶೌರ್ಯವನ್ನು ಪ್ರದರ್ಶಿಸುತ್ತಾ ಅನ್ಯಾಯದ ವಿರುದ್ಧ ಎದ್ದು ನಿಂತಿದ್ದರು. ಆದರೆ ನಾವು ಬಹಳ ದೀರ್ಘಕಾಲದವರೆಗೆ 1857 ರ ಘಟನೆಗಳನ್ನು ಕೇವಲ ದಂಗೆ ಅಥವಾ ಸಿಪಾಯಿ ದಂಗೆ ಎಂದೇ ಹೇಳುತ್ತಿದ್ದುದು ದುಃಖದ ವಿಚಾರ. ವಾಸ್ತವವಾಗಿ ಆ ಘಟನೆಗಳನ್ನು ಬಹಳ ಕಡಿಮೆಗೊಳಿಸಿ ಅಂದಾಜು ಮಾಡಿದ್ದಷ್ಟೇ ಅಲ್ಲದೆ ಅದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ರೀತಿಯ ಒಂದು ಪ್ರಯತ್ನವಾಗಿತ್ತು. ಆದರೆ ನಿರ್ಭಯದಿಂದ “1857 ರಲ್ಲಿ ಏನಾಗಿತ್ತೋ ಅದು ಯಾವುದೇ ವಿದ್ರೋಹವಲ್ಲ ಬದಲಾಗಿ ಸ್ವಾತಂತ್ರ್ಯದ ಮೊದಲ ಸಂಗ್ರಾಮ” ಎಂದು ಬರೆದವರು ಇದೇ ವೀರ ಸಾವರ್ಕರ್. ಸಾವರ್ಕರ್ ಸಹಿತ ಲಂಡನ್ ನ ಇಂಡಿಯಾ ಹೌಸ್ ನ ವೀರರು ಇದರ 50 ನೇ ವರ್ಷದ ಆಚರಣೆಯನ್ನು ಅದ್ಧೂರಿಯಿಂದ ಆಚರಿಸಿದರು. ಯಾವ ತಿಂಗಳಿನಲ್ಲಿ ಮೊದಲ ಸ್ವಾತಂತ್ರ್ಯದ ಸಂಗ್ರಾಮ ಆರಂಭವಾಯಿತೋ ಅದೇ ತಿಂಗಳು ವೀರ ಸಾವರ್ಕರ್ ಅವರು ಜನ್ಮ ತಾಳಿದ್ದು ಒಂದು ಅದ್ಭುತ ಸಂಯೋಗ. ಸಾವರ್ಕರ್ ಅವರ ವ್ಯಕ್ತಿತ್ವ ವಿಶೇಷತೆಗಳಿಂದ ತುಂಬಿತ್ತು. ಅವರು ಶಸ್ತ್ರ ಮತ್ತು ಶಾಸ್ತ್ರ ಇವೆರಡರ ಉಪಾಸಕರೂ ಆಗಿದ್ದರು. ಸಾಮಾನ್ಯವಾಗಿ ವೀರ ಸಾವರ್ಕರ್ ಅವರನ್ನು ಅವರ ಶೌರ್ಯ ಮತ್ತು ಬ್ರಿಟೀಷ್ ರಾಜ್ಯದ ವಿರುದ್ಧ ಅವರ ಹೋರಾಟದ ಕಾರಣಕ್ಕೆ ನೆನಪಿಟ್ಟುಕೊಂಡಿದ್ದೇವೆ. ಆದರೆ ಇದೆಲ್ಲದರ ಹೊರತಾಗಿ ಅವರು ಒಬ್ಬ ಉದಯೋನ್ಮುಖ ಕವಿ ಮತ್ತು ಸಮಾಜ ಸುಧಾರಕರೂ ಸಹ ಆಗಿದ್ದರು. ಅವರು ಯಾವಾಗಲೂ ಸದ್ಭಾವನೆ ಮತ್ತು ಏಕತೆ ಇವುಗಳನ್ನು ಸಮರ್ಥಿಸುತ್ತಿದ್ದರು. ನಮ್ಮೆಲ್ಲರ ಪ್ರೀತಿಯ, ಆದರಣೀಯ ಅಟಲ್ ಬಿಹಾರಿ ವಾಜಪೇಯಿಯವರು ಸಾವರ್ಕರ್ ಅವರ ಬಗ್ಗೆ ಒಂದು ಅದ್ಭುತ ವರ್ಣನೆ ಮಾಡಿದ್ದಾರೆ. “ಸಾವರ್ಕರ್ ಅಂದರೆ ತೇಜಸ್ಸು, ಸಾವರ್ಕರ್ ಅಂದರೆ ತ್ಯಾಗ, ಸಾವರ್ಕರ್ ಅಂದರೆ ತಪಸ್ಸು, ಸಾವರ್ಕರ್ ಅಂದರೆ ತತ್ವ, ಸಾವರ್ಕರ್ ಅಂದರೆ ತರ್ಕ, ಸಾವರ್ಕರ್ ಅಂದರೆ ತಾರುಣ್ಯ, ಸಾವರ್ಕರ್ ಅಂದರೆ ಬಾಣ, ಸಾವರ್ಕರ್ ಅಂದರೆ ಕತ್ತಿ“ ಎಂದು ಅಟಲ್ ಜೀ ಯವರು ಹೇಳಿದ್ದರು. ಎಷ್ಟೊಂದು ಹತ್ತಿರದ ಚಿತ್ರಣ ಕೊಟ್ಟಿದ್ದಾರೆ ಅಟಲ್ ಜೀ ಯವರು! ಸಾವರ್ಕರ್ ಅವರು ಕವಿತೆ ಮತ್ತು ಕ್ರಾಂತಿ ಎರಡನ್ನೂ ಜೊತೆಗೆ ತೆಗೆದುಕೊಂಡು ನಡೆದವರು. ಸಂವೇದನಾಶೀಲ ಕವಿಯಾಗಿದ್ದುದರ ಜೊತೆಗೆ ಅವರು ಸಾಹಸಿ ಕ್ರಾಂತಿಕಾರಿಯೂ ಆಗಿದ್ದರು.
ನನ್ನ ಪ್ರೀತಿಯ ಸೋದರ-ಸೋದರಿಯರೇ, ನಾನು ದೂರದರ್ಶನದಲ್ಲಿ ಒಂದು ಕಥೆ ನೋಡುತ್ತಿದ್ದೆ, ರಾಜಾಸ್ಥಾನದ ಸೀಕರ್ ನ ಗುಡಿಸಲುಗಳದ್ದು, ನಮ್ಮ ಬಡ ಹೆಣ್ಣುಮಕ್ಕಳದ್ದು. ಒಂದೊಮ್ಮೆ ತ್ಯಾಜ್ಯ ಎತ್ತುವುದರಿಂದ ಹಿಡಿದು ಭಿಕ್ಷೆ ಬೇಡುವಷ್ಟು ಅಸಹಾಯಕರಾಗಿದ್ದ ನಮ್ಮ ಈ ಹೆಣ್ಣುಮಕ್ಕಳು ಇಂದು ಹೊಲಿಗೆ ಕೆಲಸವನ್ನು ಕಲಿತು ಬಡವರ ದೇಹ ಮುಚ್ಚುವುದಕ್ಕಾಗಿ ಬಟ್ಟೆ ಹೊಲೆಯುತ್ತಿದ್ದಾರೆ. ಇಲ್ಲಿನ ಹೆಣ್ಣುಮಕ್ಕಳು ಇಂದು ತಮ್ಮ ಮತ್ತು ತಮ್ಮ ಕುಟುಂಬದವರ ಬಟ್ಟೆಗಳಲ್ಲದೆ, ಸಾಮಾನ್ಯವಾಗಿರುವ ಬಟ್ಟೆಗಳಿಂದ ಹಿಡಿದು ಒಳ್ಳೊಳ್ಳೆಯ ಬಟ್ಟೆಗಳವರೆಗೆ ಹೊಲೆಯುತ್ತಿದ್ದಾರೆ. ಇದರೊಟ್ಟಿಗೆ ಅವರು ಕೌಶಲ್ಯಾಭಿವೃದ್ಧಿಯ ಕೋರ್ಸ್ ಸಹ ಮಾಡುತ್ತಿದ್ದಾರೆ. ನಮ್ಮ ಈ ಹೆಣ್ಣುಮಕ್ಕಳು ಇಂದು ಸ್ವಾವಲಂಬಿಗಳಾಗಿದ್ದಾರೆ. ಗೌರವದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ತಮ್ಮ ತಮ್ಮ ಕುಟುಂಬಗಳಿಗೆ ಒಂದು ಶಕ್ತಿಯಾಗಿದ್ದಾರೆ. ಭರವಸೆ ಮತ್ತು ನಂಬಿಕೆ ತುಂಬಿಕೊಂಡಿರುವ ನಮ್ಮ ಈ ಹೆಣ್ಣುಮಕ್ಕಳಿಗೆ ನಾನು ಅವರ ಉಜ್ವಲ ಭವಿಷ್ಯಕ್ಕೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಒಂದುವೇಳೆ ಏನಾದರೂ ಮಾಡಿತೋರಿಸುವ ಅದಮ್ಯ ಉತ್ಸಾಹ ಇದ್ದು ಅದಕ್ಕೋಸ್ಕರ ನೀವು ದೃಢಸಂಕಲ್ಪ ಹೊಂದಿದ್ದರೆ ಎಲ್ಲಾ ಕಷ್ಟಗಳ ನಡುವೆಯೂ ಕೂಡ ಸಫಲತೆಯನ್ನು ಪಡೆದುಕೊಳ್ಳಬಹುದು ಎಂದು ಇವರು ತೋರಿಸಿಕೊಟ್ಟಿದ್ದಾರೆ. ಇದು ಬರೀ ಸೀಕರ್ ನ ಮಾತಲ್ಲ, ಹಿಂದೂಸ್ಥಾನದ ಪ್ರತಿ ಮೂಲೆಯಲ್ಲೂ ನಿಮಗೆ ಇಂತಹವುಗಳು ನೋಡಲು ಸಿಗುತ್ತದೆ. ನಿಮ್ಮ ಹತ್ತಿರದಲ್ಲಿ, ಅಕ್ಕ ಪಕ್ಕದಲ್ಲಿ ಗಮನಿಸಿ ನೋಡಿದರೆ ಜನರು ಯಾವ ರೀತಿಯಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ ಎಂದು ನಿಮಗೆ ಗೊತ್ತಾಗುತ್ತದೆ. ಯಾವಾಗಲಾದರೂ ಒಂದು ಚಹಾ ಅಂಗಡಿಗೆ ಹೋದಾಗ, ನಾವು ಅಲ್ಲಿಯ ಚಹಾದ ಆನಂದವನ್ನು ಅನುಭವಿಸುವುದರ ಜೊತೆಗೆ ಕೆಲವು ಜನರೊಂದಿಗೆ ಚರ್ಚೆ ಮತ್ತು ವಿಚಾರ ವಿಮರ್ಶೆಯಲ್ಲಿ ತೊಡಗಿಕೊಳ್ಳುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಈ ಚರ್ಚೆಯು ರಾಜಕೀಯ, ಸಾಮಾಜಿಕ, ಚಲನಚಿತ್ರ, ಕ್ರೀಡೆ ಮತ್ತು ಕ್ರೀಡಾಪಟುಗಳು, ದೇಶದ ಸಮಸ್ಯೆ ಇವೆಲ್ಲವುಗಳ ಬಗ್ಗೆಯೂ ಆಗಬಹುದು; ಇಂತಹ ಸಮಸ್ಯೆ ಇದೆ, ಇದರ ಪರಿಹಾರ ಈ ರೀತಿ ಇದೆ, ಇದನ್ನು ಮಾಡಬೇಕು ಇತ್ಯಾದಿ. ಬಹಳಷ್ಟು ಬಾರಿ ಈ ಕೆಲಸಗಳು ಬರೀ ಚರ್ಚೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಕೆಲವು ಜನರು ಹೇಗಿರುತ್ತಾರೆಂದರೆ ತಮ್ಮ ಕೆಲಸಗಳಿಂದ, ತಮ್ಮ ಶ್ರಮದಿಂದ, ಭಾವೋದ್ರೇಕದಿಂದ ಬದಲಾವಣೆ ತರುವ ದಿಕ್ಕಿನಲ್ಲಿ ಮುಂದುವರೆಯುತ್ತಾರೆ ಮತ್ತು ಅದನ್ನು ನಿಜವಾಗಿಸುವ ರೂಪ ನೀಡುತ್ತಾರೆ. ಬೇರೆಯವರ ಕನಸನ್ನು ತಮ್ಮದನ್ನಾಗಿಸಿಕೊಂಡು, ಅದನ್ನು ಪೂರ್ಣಗೊಳಿಸಲು ಸ್ವತಃ ತಾವೇ ತೊಡಗಿಸಿಕೊಳ್ಳುವ ಇದೇ ರೀತಿಯ ಕಥೆ ಒರಿಸ್ಸಾದ ಕಟಕ್ ನಗರದ ಕೊಳಗೇರಿಯ ಗುಡಿಸಿಲಿನಲ್ಲಿ ವಾಸಿಸುವ ಡಿ. ಪ್ರಕಾಶ್ ರಾವ್ ಅವರದ್ದು. ನಿನ್ನೆಯಷ್ಟೇ ನನಗೆ ಡಿ. ಪ್ರಕಾಶ್ ರಾವ್ ಅವರನ್ನು ಭೇಟಿಯಾಗುವ ಸೌಭಾಗ್ಯವು ಸಿಕ್ಕಿತ್ತು. ಶ್ರೀಮಾನ್ ಡಿ. ಪ್ರಕಾಶ್ ರಾವ್ ಅವರು ಕಳೆದ 5 ದಶಕಗಳಿಂದ ನಗರದಲ್ಲಿ ಚಹಾ ಮಾರುತ್ತಿದ್ದಾರೆ. ಒಬ್ಬ ಮಾಮೂಲಿ ಚಹಾ ಮಾರುವವನು ಇಂದು 70 ಕ್ಕೂ ಹೆಚ್ಚು ಮಕ್ಕಳ ಜೀವನದಲ್ಲಿ ಶಿಕ್ಷಣದ ಬೆಳಕನ್ನು ತುಂಬಿಸುತ್ತಿದ್ದಾರೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಅವರು ಗುಡಿಸಲು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ‘ಆಶಾ ಆಶ್ವಾಸನ್’ ಹೆಸರಿನ ಒಂದು ಶಾಲೆಯನ್ನು ತೆರೆದರು. ಈ ಬಡ ಚಹಾ ಮಾರುವವರು ತಮ್ಮ ಗಳಿಕೆಯ ಶೇಕಡಾ 50 ರಷ್ಟು ಹಣವನ್ನು ಅದಕ್ಕಾಗಿಯೇ ಖರ್ಚು ಮಾಡುತ್ತಾರೆ. ಅವರು ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ, ಶಿಕ್ಷಣ, ಅರೋಗ್ಯ ಮತ್ತು ಭೋಜನದ ಸಂಪೂರ್ಣ ವ್ಯವಸ್ಥೆಯನ್ನು ಮಾಡುತ್ತಾರೆ. ನಾನು ಡಿ. ಪ್ರಕಾಶ್ ರಾವ್ ಅವರಿಗೆ ಅವರ ಕಠಿಣ ಪರಿಶ್ರಮ, ಕಾರ್ಯತತ್ಪರತೆ ಮತ್ತು ಆ ಬಡ ಮಕ್ಕಳ ಜೀವನಕ್ಕೆ ಹೊಸ ದಿಕ್ಕನ್ನು ಕೊಡುತ್ತಿರುವುದಕ್ಕೆ ತುಂಬಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಅವರು ಆ ಮಕ್ಕಳ ಜೀವನದ ಅಂಧಕಾರವನ್ನು ನೀಗಿಸಿದ್ದಾರೆ. “ತಮಸೋಮಾ ಜ್ಯೋತಿರ್ಗಮಯ” ಎನ್ನುವ ವೇದ ವಾಕ್ಯವನ್ನು ತಿಳಿಯದೆ ಇರುವವರು ಯಾರು? ಆದರೆ ಡಿ. ಪ್ರಕಾಶ್ ರಾವ್ ರವರು ಅದನ್ನು ಮನಃಪೂರ್ವಕವಾಗಿ ಮಾಡಿ ತೋರಿಸಿದ್ದಾರೆ. ಅವರ ಜೀವನ ನಮ್ಮೆಲ್ಲರಿಗೆ, ಸಮಾಜಕ್ಕೆ ಮತ್ತು ಇಡೀ ದೇಶಕ್ಕೆ ಒಂದು ಪ್ರೇರಣೆಯಾಗಿದೆ. ನಿಮ್ಮ ಅಕ್ಕ ಪಕ್ಕದಲ್ಲೂ ಇಂತಹ ಪ್ರೇರಕ ಘಟನೆಗಳ ಸರಮಾಲೆಯೇ ಇರಬಹುದು, ಎಣಿಸಲಾರದಷ್ಟು ಇರಬಹುದು. ಬನ್ನಿ, ನಾವು ಸಕಾರಾತ್ಮಕತೆಯನ್ನು ಮುಂದುವರೆಸೋಣ.
ಜೂನ್ ತಿಂಗಳಿನಲ್ಲಿ ಜನರು ಮಳೆಯನ್ನು ಎದುರು ನೋಡುತ್ತಾ ಕಾಯುವಷ್ಟು ಬಿಸಿಲಿನ ಧಗೆ ಇರುತ್ತದೆ. ಇದೇ ನಂಬಿಕೆಯಲ್ಲಿ ಜನರು ಆಕಾಶದಲ್ಲಿರುವ ಮೋಡಗಳ ಕಡೆಗೆ ಬಿಟ್ಟೂ ಬಿಡದೆ ನೋಡುತ್ತಲೇ ಇರುತ್ತಾರೆ. ಇನ್ನು ಸ್ವಲ್ಪ ದಿನಗಳಲ್ಲಿ ಜನರು ಚಂದ್ರನ ನಿರೀಕ್ಷೆಯನ್ನು ಸಹ ಮಾಡುತ್ತಾರೆ. ಚಂದ್ರ ಕಾಣಿಸುವ ಅರ್ಥ ಈದ್ ಆಚರಿಸಬಹುದು ಎಂದು. ರಮ್ಜಾನ್ ನ ಸಲುವಾಗಿ ಒಂದು ತಿಂಗಳ ಉಪವಾಸದ ನಂತರ ಈದ್ ಹಬ್ಬದ ಉತ್ಸವ, ಸಂಭ್ರಮದ ಆಚರಣೆಗಳ ಪ್ರಾರಂಭದ ಪ್ರತೀಕವಾಗಿದೆ. ಎಲ್ಲಾ ಜನರೂ ಈದ್ ಹಬ್ಬವನ್ನು ಅತೀ ಉತ್ಸಾಹದಿಂದ ಆಚರಿಸುತ್ತೀರಿ ಎನ್ನುವ ನಂಬಿಕೆ ನನಗಿದೆ. ಈ ಸಂದರ್ಭದಲ್ಲಿ ಮಕ್ಕಳೂ ಸಹ ಒಳ್ಳೆಯ ಉಡುಗೊರೆಗಳನ್ನು ಪಡೆಯುತ್ತಾರೆ. ಈದ್ ಹಬ್ಬವು ನಮ್ಮ ಸಮಾಜದ ಸದ್ಭಾವನೆಯ ಬಂಧನಕ್ಕೆ ಮತ್ತಷ್ಟು ಬಲ ಕೊಡುತ್ತದೆ ಎಂದು ನಾನು ಆಶಿಸುತ್ತೇನೆ. ಎಲ್ಲರಿಗೂ ಅನಂತಾನಂತ ಶುಭಾಶಯಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಮತ್ತೊಮ್ಮೆ ಮುಂದಿನ ತಿಂಗಳು ಮನದ ಮಾತಿನಲ್ಲಿ ಭೇಟಿಯಾಗೋಣ.
ನಮಸ್ಕಾರ.
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಇಂದು ರಾಮನವಮಿಯ ಶುಭದಿನ. ರಾಮನವಮಿಯ ಈ ಪವಿತ್ರ ದಿನಂದಂದು ದೇಶವಾಸಿಗಳಿಗೆ ನನ್ನ ಅನಂತಾನಂತ ಶುಭಾಷಯಗಳು. ಪೂಜ್ಯ ಬಾಪೂರವರ ಜೀವನದಲ್ಲಿ ರಾಮನಾಮದ ಶಕ್ತಿ ಎಷ್ಟಿತ್ತು ಎಂಬುದನ್ನು ನಾವು ಅವರ ಜೀವನದ ಪ್ರತಿಕ್ಷಣದಲ್ಲೂ ನೋಡಿದ್ದೇವೆ. ಹಿಂದಿನ ಜನವರಿ 26 ರಂದು ASEAN ದೇಶಗಳ ಎಲ್ಲಾ ಮಹಾನುಭಾವರು ಇಲ್ಲಿಗೆ ಬಂದಾಗ ತಮ್ಮ ಜೊತೆಯಲ್ಲಿ ಸಾಂಸ್ಕೃತಿಕ ತಂಡಗಳನ್ನು ಕರೆತಂದಿದ್ದರು ಮತ್ತು ಅವುಗಳಲ್ಲಿ ಹೆಚ್ಚಿನ ದೇಶದ ತಂಡಗಳು ರಾಮಾಯಣವನ್ನೇ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದು ಬಹಳ ಹೆಮ್ಮೆಯ ಸಂಗತಿ. ಅಂದರೆ ರಾಮ ಮತ್ತು ರಾಮಾಯಣ ಬರೀ ಭಾರತವಷ್ಟೇ ಅಲ್ಲದೆ, ವಿಶ್ವದ ಈ ಭೂಭಾಗದ ASEAN ದೇಶಗಳಲ್ಲಿ ಇಂದಿಗೂ ಸಹ ಅಷ್ಟೇ ಪ್ರೇರಣೆ ಮತ್ತು ಪ್ರಭಾವವನ್ನು ಹುಟ್ಟು ಹಾಕುತ್ತಿದೆ. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ರಾಮನವಮಿಯ ಶುಭಾಷಯಗಳನ್ನು ತಿಳಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನನಗೆ ನಿಮ್ಮೆಲ್ಲರ ಪತ್ರಗಳು, ಇ-ಮೇಲ್ ಗಳು, ದೂರವಾಣಿ ಕರೆಗಳು ಮತ್ತು ಟೀಕೆ ಟಿಪ್ಪಣಿಗಳು ಬಹಳಷ್ಟು ಸಂಖ್ಯೆಯಲ್ಲಿ ಸಿಕ್ಕಿದೆ. ಕೋಮಲ್ ಠಕ್ಕರ್ ರವರು ತಮ್ಮ ಸಂಸ್ಕೃತದ ಆನ್-ಲೈನ್ ಕೋರ್ಸ್ ನ್ನು ಪ್ರಾರಂಭಿಸುವ ಬಗ್ಗೆ ಒಥಿಉov ನಲ್ಲಿ ಬರೆದಿದ್ದನ್ನು ನಾನು ಓದಿದೆ. ಐ.ಟಿ ಪ್ರೊಫೆಷನಲ್ ಆಗಿರುವ ಜೊತೆ ಜೊತೆಗೆ ಸಂಸ್ಕೃತದ ಬಗ್ಗೆ ನಿಮಗಿರುವ ಭಾಷಾಪ್ರೇಮ ನೋಡಿ ಬಹಳ ಸಂತೋಷವಾಯಿತು. ನಾನು ಇದಕ್ಕೆ ಸಂಬಂಧಿಸಿದ ವಿಭಾಗಕ್ಕೆ ಈ ನಿಟ್ಟಿನಲ್ಲಿ ಆಗುತ್ತಿರುವ ಪ್ರಯತ್ನಗಳ ಮಾಹಿತಿಗಳನ್ನು ನಿಮ್ಮ ಬಳಿಗೆ ತಲುಪಿಸಲು ಹೇಳಿದ್ದೇನೆ. ಕೋಮಲ್ ರವರ ಸಲಹೆಯನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬಹುದು ಎನ್ನುವುದರ ಬಗ್ಗೆ ವಿಚಾರ ಮಾಡಿ ಎಂದು ನಾನು ಸಂಸ್ಕೃತದ ಬಗ್ಗೆ ಕೆಲಸ ಮಾಡುತ್ತಿರುವ ಮನದ ಮಾತು ಕಾರ್ಯಕ್ರಮದ ಶ್ರೋತೃಗಳನ್ನು ವಿನಂತಿಸಿಕೊಳ್ಳುತ್ತೇನೆ.
ಬಿಹಾರದ, ನಳಂದಾ ಜಿಲ್ಲೆಯ ಬರಾಕರ್ ಗ್ರಾಮದ ಶ್ರೀಯುತ ಘನಶ್ಯಾಂ ಕುಮಾರ್ ರವರೇ, NarendraModiApp ನಲ್ಲಿ ಬರೆದಿರುವ ನಿಮ್ಮ ಅಭಿಪ್ರಾಯವನ್ನು ನಾನು ಓದಿದೆ. ಭೂಮಿಯಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟದ ಕುರಿತು ನಡೆಸಿರುವ ನಿಮ್ಮ ಚಿಂತನೆ ನಿಜವಾಗಿಯೂ ಬಹಳ ಮಹತ್ವಪೂರ್ಣದ್ದಾಗಿದೆ.
ಕರ್ನಾಟಕದ ಶ್ರೀಯುತ ಶಕಲ್ ಶಾಸ್ತ್ರಿಯವರೇ, “ಯಾವಾಗ ನಾವು ಈ ಭೂಮಿಯಲ್ಲಿ ಇರುವ ಪ್ರತಿ ಪ್ರಾಣಿಯ ಬಗ್ಗೆ ನಾವು ಯೋಚಿಸುತ್ತೇವೆಯೋ ಆಗ ‘ಆಯುಷ್ಮಾನ್ ಭೂಮಿ’ಯಾಗುತ್ತದೆ, ಮತ್ತು ‘ಆಯುಷ್ಮಾನ್ ಭೂಮಿ’ ಆದಾಗ ‘ಆಯುಷ್ಮಾನ್ ಭಾರತ’ವಾಗುತ್ತದೆ” ಎಂದು ನೀವು ಶಬ್ದಗಳ ಸುಂದರ ತಾಳಮೇಳಗಳೊಂದಿಗೆ ಬರೆದಿದ್ದೀರಿ. ಬೇಸಿಗೆಯಲ್ಲಿ ಪಶು ಪಕ್ಷಿಗಳಿಗೆ ನೀರನ್ನು ಇಡಲು ನೀವು ಎಲ್ಲರಿಗೂ ಒತ್ತಾಯಿಸಿದ್ದೀರಿ. ಶಕಲ್ ರವರೇ, ನಿಮ್ಮ ಭಾವನೆಗಳನ್ನು ನಾನು ಎಲ್ಲಾ ಶ್ರೋತೃಗಳಿಗೂ ತಲುಪಿಸಿದ್ದೇನೆ.
ನಾನು ಈ ಬಾರಿ ಯುವಕರೊಂದಿಗೆ ಅವರ ಆರೋಗ್ಯದ ಬಗ್ಗೆ ಮಾತನಾಡಬೇಕು ಎಂದು ಶ್ರೀಯುತ ಯೋಗೇಶ್ ಭದ್ರೇಶರವರು ಹೇಳುತ್ತಾರೆ. ಏಷಿಯಾ ದೇಶಗಳೊಂದಿಗೆ ಹೋಲಿಸಿದರೆ ನಮ್ಮ ಯುವಕರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎಂಬುದು ಅವರ ಅನಿಸಿಕೆ. ಯೋಗೇಶ್ ರವರೇ, ಈ ಬಾರಿ ಅರೋಗ್ಯದ ವಿಷಯವನ್ನು ತೆಗೆದುಕೊಂಡು ಎಲ್ಲರೊಂದಿಗೆ ವಿಸ್ತಾರವಾಗಿ ಮಾತನಾಡಲು, Fit India ದ ಬಗ್ಗೆ ಮಾತನಾಡಲು ನಾನು ಯೋಚಿಸಿದ್ದೇನೆ. ನೀವೆಲ್ಲಾ ಯುವಕರು ಸೇರಿ Fit India ದ ಒಂದು ಚಳುವಳಿಯನ್ನೇ ನಡೆಸಬಹುದು.
ಕೆಲವು ದಿನಗಳ ಹಿಂದೆ ಫ್ರಾನ್ಸ್ ನ ರಾಷ್ಟ್ರಪತಿಯವರು ಕಾಶಿಗೆ ಯಾತ್ರೆ ಹೋಗಿದ್ದರು. ಆ ಯಾತ್ರೆಯ ಎಲ್ಲಾ ದೃಶ್ಯಗಳು ಮನ ಮುಟ್ಟುವಂತಿದ್ದವು, ಪ್ರಭಾವ ಬೀರುವಂತಿದ್ದವು ಎಂದು ವಾರಣಾಸಿಯ ಶ್ರೀಯುತ ಪ್ರಶಾಂತ್ ಕುಮಾರ್ ರವರು ಬರೆದಿದ್ದಾರೆ. ಆ ಯಾತ್ರೆಯ ಎಲ್ಲಾ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು ಎಂದು ಕೂಡ ಅವರು ಒತ್ತಾಯಿಸಿದ್ದಾರೆ. ಪ್ರಶಾಂತ್ ರವರೇ, ಭಾರತ ಸರ್ಕಾರವು ಆ ಫೋಟೋ ಗಳನ್ನು ಅದೇ ದಿನ ಸಾಮಾಜಿಕ ಮಾಧ್ಯಮಗಳು ಮತ್ತು NarendraModiApp ನಲ್ಲಿ ಹಂಚಿಕೊಂಡಿದೆ. ಈಗ ನೀವು ಅವುಗಳನ್ನು ಲೈಕ್ ಮಾಡಿ ಮತ್ತು ರೀ ಟ್ವೀಟ್ ಮಾಡುವ ಮೂಲಕ ನಿಮ್ಮ ಮಿತ್ರರಿಗೆ ತಲುಪಿಸಿ.
ಚೆನ್ನೈ ನಿಂದ ಅನಘಾ, ಜಯೇಶ್ ಮತ್ತು ಬಹಳಷ್ಟು ಮಕ್ಕಳು Exam Warrior ಪುಸ್ತಕದ ಹಿಂದೆ ಕೊಟ್ಟಿರುವ ಗ್ರಾಟಿಟ್ಯೂಡ್ ಕಾರ್ಡ್ ಗಳಲ್ಲಿ ತಮ್ಮ ಮನಸ್ಸಿನಲ್ಲಿ ಬಂದಿರುವ ವಿಚಾರಗಳನ್ನು ಬರೆದು ನನಗೇ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರಗಳಿಂದ ನನ್ನ ಇಡೀ ದಿನದ ಆಯಾಸ ಮಾಯವಾಗಿ ಹೋಗುತ್ತದೆ ಎಂದು ನಾನು ಅನಘಾ, ಜಯೇಶ್ ಮತ್ತು ಎಲ್ಲಾ ಮಕ್ಕಳಿಗೆ ಹೇಳಲು ಬಯಸುತ್ತೇನೆ. ಎಷ್ಟೆಲ್ಲಾ ಪತ್ರಗಳು, ಎಷ್ಟೊಂದು ದೂರವಾಣಿ ಕರೆಗಳು, ಟೀಕೆ ಟಿಪ್ಪಣಿಗಳು!! ಇವುಗಳಲ್ಲಿ ನಾನು ಯಾವುದನ್ನು ಓದಲು ಸಾಧ್ಯವಾಗಿದೆಯೋ, ಯಾವುದು ಕೇಳಿದ್ದೇನೆಯೋ, ಅವುಗಳಲ್ಲಿ ನನ್ನ ಮನ ಮುಟ್ಟಿದ ಎಷ್ಟೊಂದು ವಿಚಾರಗಳು – ಬರೀ ಅವುಗಳ ಬಗ್ಗೆಯೇ ಮಾತನಾಡಿದರೂ ಕೂಡ ಬಹುಶಃ ತಿಂಗಳವರೆಗೆ ನಾನು ನಿರಂತರವಾಗಿ ಏನಾದರೊಂದು ಹೇಳುತ್ತಿರಲೇ ಬೇಕಾಗುತ್ತದೆ.
ಈ ಬಾರಿ ಹೆಚ್ಚಾಗಿ ಪತ್ರಗಳು ಮಕ್ಕಳಿಂದ ಬಂದಿವೆ. ಅವರುಗಳು ಪರೀಕ್ಷೆಯ ಬಗ್ಗೆ ಬರೆದಿದ್ದಾರೆ. ರಜಾ ದಿನಗಳ ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಬೇಸಿಗೆಯಲ್ಲಿ ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ಚಿಂತನೆ ಮಾಡಿದ್ದಾರೆ. ರೈತ ಮೇಳಗಳು ಮತ್ತು ಕೃಷಿಯ ವಿಚಾರವಾಗಿ ದೇಶದೆಲ್ಲೆಡೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ರೈತ ಸೋದರ-ಸೋದರಿಯರ ಪತ್ರಗಳು ಬಂದಿವೆ. ನೀರಿನ ಸಂರಕ್ಷಣೆಯ ವಿಚಾರದಲ್ಲಿ ಕೆಲವು ನಾಗರೀಕರು ಸಲಹೆಗಳನ್ನು ಕಳುಹಿಸಿದ್ದಾರೆ. ನಾವು ಪರಸ್ಪರ ರೇಡಿಯೋ ದ ಮುಖಾಂತರ ಮನದ ಮಾತು ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದ ನಾನು ಒಂದು ರೀತಿಯ ನಮೂನೆಯನ್ನು ನೋಡಿಕೊಂಡು ಬಂದಿದ್ದೇನೆ. ಅದೆಂದರೆ, ಬಿಸಿಲು ಕಾಲದಲ್ಲಿ ಹೆಚ್ಚಿನ ಪತ್ರಗಳು ಬೇಸಿಗೆಯ ವಿಷಯವಾಗಿಯೇ ಇರುತ್ತವೆ. ಪರೀಕ್ಷೆಗಳಿಗೆ ಮೊದಲು ವಿದ್ಯಾರ್ಥಿ ಮಿತ್ರರ ಚಿಂತನೆಗಳನ್ನು ಒಳಗೊಂಡ ಪತ್ರಗಳು ಬರುತ್ತವೆ. ಹಬ್ಬಗಳ ಋತುವಿನಲ್ಲಿ ನಮ್ಮ ಹಬ್ಬಗಳು, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ವಿಚಾರವಾಗಿ ಮಾತುಗಳು ಬರುತ್ತವೆ. ಅಂದರೆ, ಮನದ ಮಾತುಗಳು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ ಮತ್ತು ಬಹುಶಃ ನಮ್ಮ ಮನದ ಮಾತುಗಳು ಎಲ್ಲೋ ಯಾರದೋ ಜೀವನದ ಹವಾಮಾನ ಕೂಡ ಬದಲಿಸುತ್ತದೆ ಎನ್ನುವುದು ಸಹ ಸತ್ಯ ಎನಿಸುತ್ತದೆ. ನಿಮ್ಮ ಈ ಮಾತುಗಳಲ್ಲಿ, ನಿಮ್ಮ ಈ ಅನುಭವಗಳಲ್ಲಿ, ನಿಮ್ಮ ಈ ಉದಾಹರಣೆಗಳಲ್ಲಿ ಇಷ್ಟೊಂದು ಪ್ರೇರಣೆ, ಇಷ್ಟೊಂದು ಶಕ್ತಿ, ಇಷ್ಟೊಂದು ಅಪ್ಯಾಯತೆ, ದೇಶಕ್ಕಾಗಿ ಏನನ್ನಾದರೂ ಮಾಡುವ ಸಂಕಲ್ಪ ಇರುವಾಗ ಏಕೆ ಬದಲಾಗಬಾರದು ಹೇಳಿ? ಇವುಗಳಲ್ಲಿ ಇಡೀ ದೇಶದ ಹವಾಮಾನವನ್ನೇ ಬದಲಾಯಿಸುವ ಶಕ್ತಿ ತುಂಬಿಕೊಂಡಿದೆ. ಅಸ್ಸಾಂನ ಕರೀಂ ಗಂಜ್ ನ ಅಹಮದ್ ಅಲಿ ಎನ್ನುವ ರಿಕ್ಷಾ ಚಾಲಕ ತನ್ನ ಇಚ್ಚಾಶಕ್ತಿಯ ಬಲದಿಂದ ಬಡಮಕ್ಕಳಿಗಾಗಿ 9 ಶಾಲೆಗಳನ್ನು ತೆರೆದಿದ್ದಾರೆ ಎನ್ನುವ ವಿಷಯ ನಿಮ್ಮ ಪತ್ರದ ಮೂಲಕ ಓದಲು ಸಿಕ್ಕಿದಾಗ ಈ ದೇಶದ ಅದಮ್ಯ ಇಚ್ಚಾಶಕ್ತಿಯ ದರ್ಶನ ನನಗೆ ಆಗುತ್ತದೆ. ಕಾನ್ಪುರದ ಡಾಕ್ಟರ್ ಅಜಿತ್ ಮೋಹನ್ ಚೌಧರಿಯವರು ಸ್ವತಃ ಹೋಗಿ ಪಾದಚಾರಿ ಮಾರ್ಗಗಳಲ್ಲಿ ಇರುವ ಬಡವರನ್ನು ನೋಡಿ ಅವರಿಗೆ ಉಚಿತವಾಗಿ ಔಷಧಿಯನ್ನು ಕೊಡುತ್ತಾರೆ ಎನ್ನುವ ಸಂಗತಿಯನ್ನು ಕೇಳಿದಾಗ ಈ ದೇಶದಲ್ಲಿ ಇರುವ ಬಂಧುತ್ವದ ಸವಿಯನ್ನು ಅನುಭವಿಸುವ ಅವಕಾಶ ಸಿಗುತ್ತದೆ. 13 ವರ್ಷಗಳ ಹಿಂದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಕಾರಣಕ್ಕೆ ಕೊಲ್ಕತ್ತಾದ ಕ್ಯಾಬ್ ಚಾಲಕ ಸೈದುಲ್ ಲಸ್ಕರ್ ನ ಸೋದರಿಯ ಸಾವು ಸಂಭವಿಸಿತು. ಚಿಕಿತ್ಸೆ ದೊರೆಯದ ಕಾರಣದಿಂದ ಬಡವರ ಸಾವು ಸಂಭವಿಸಬಾರದು ಎನ್ನುವ ಕಾರಣದಿಂದ ಅವನು ಆಸ್ಪತ್ರೆಯನ್ನು ಕಟ್ಟಿಸುವ ಧೃಢ ನಿರ್ಧಾರ ತೆಗೆದುಕೊಂಡ. ಸೈದುಲ್ ತನ್ನ ಈ ಗುರಿ ಸಾಧಿಸುವ ಪ್ರಯತ್ನದಲ್ಲಿ ಮನೆಯ ಒಡವೆಗಳನ್ನು ಮಾರಿದ, ದಾನದ ರೂಪದಲ್ಲಿ ಹಣ ಸಂಗ್ರಹಣೆ ಮಾಡಿದ. ಅವನ ಕ್ಯಾಬ್ ನಲ್ಲಿ ಪ್ರಯಾಣಿಸುವ ಎಷ್ಟೋ ಪ್ರಯಾಣಿಕರು ಉದಾರ ಹೃದಯದಿಂದ ದಾನ ಮಾಡಿದರು. ಒಬ್ಬಳು ಇಂಜಿನಿಯರ್ ಅಂತೂ ತನ್ನ ಮೊದಲ ಸಂಬಳವನ್ನೇ ನೀಡಿದಳು. ಈ ರೀತಿ ಧನ ಸಂಗ್ರಹಣೆ ಮಾಡಿ ಛಲವಾದಿ ಸೈದುಲ್ ಲಸ್ಕರ್ ತನ್ನ ಭಗೀರಥ ಪ್ರಯತ್ನ ಮುಂದುವರೆಸಿದ. 12 ವರ್ಷ ಪಟ್ಟ ನಿರಂತರ ಕಠಿಣ ಪರಿಶ್ರಮದ ಫಲವಾಗಿ, ಅವನ ಸಂಕಲ್ಪದ ಕಾರಣದಿಂದಾಗಿ ಇಂದು ಕೋಲ್ಕತ್ತಾದ ಹತ್ತಿರ ಪುನರಿ ಗ್ರಾಮದಲ್ಲಿ ಸುಮಾರು 30 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯು ಸಿದ್ಧವಾಗಿದೆ. ಇದು ನವ ಭಾರತದ ಶಕ್ತಿ. ಉತ್ತರಪ್ರದೇಶದ ಒಬ್ಬ ಮಹಿಳೆ ಅನೇಕ ಸಂಘರ್ಷಗಳ ಹೊರತಾಗಿಯೂ 125 ಶೌಚಾಲಯಗಳನ್ನು ನಿರ್ಮಿಸಿ, ಮಹಿಳೆಯರಿಗೆ ಅವರ ಹಕ್ಕುಗಳಿಗಾಗಿ ಪ್ರೇರಣೆ ನೀಡುತ್ತಾಳೆ ಎಂದಾದಾಗ ಮಾತೃ ಶಕ್ತಿಯ ದರ್ಶನವಾಗುತ್ತದೆ. ಇಂತಹ ಅನೇಕ ಪ್ರೇರಣಾ-ಪುಂಜಗಳು ನನ್ನ ದೇಶದ ಪರಿಚಯ ಮಾಡಿಕೊಡುತ್ತದೆ. ಇಂದು ಇಡೀ ವಿಶ್ವದಲ್ಲೇ ಭಾರತವನ್ನು ನೋಡುವ ದೃಷ್ಟಿ ಬದಲಾಗಿದೆ. ಇಂದು ಭಾರತದ ಹೆಸರನ್ನು ಬಹಳ ಗೌರವದಿಂದ ಹೇಳುತ್ತಾರೆಂದರೆ ಅದರ ಹಿಂದೆ ತಾಯಿ ಭಾರತಿಯ ಇಂತಹ ಪುತ್ರ-ಪುತ್ರಿಯರ ಪರಿಶ್ರಮ ಅಡಗಿದೆ. ಇಂದು ದೇಶದೆಲ್ಲೆಡೆ ಯುವಕರಲ್ಲಿ, ಮಹಿಳೆಯರಲ್ಲಿ, ಹಿಂದುಳಿದವರಲ್ಲಿ, ಬಡವರಲ್ಲಿ, ಮಧ್ಯಮ ವರ್ಗದವರಲ್ಲಿ, ಪ್ರತಿಯೊಂದು ವರ್ಗಗಳಲ್ಲಿಯೂ ಕೂಡ ‘ಹೌದು, ನಾವು ಮುಂದುವರೆಯಬಹುದು, ನಮ್ಮ ದೇಶ ಮುಂದುವರೆಯುತ್ತದೆ‘ ಎನ್ನುವ ಭರವಸೆ ಮೂಡಿದೆ. ಆಸೆ-ನಿರೀಕ್ಷೆಗಳು ತುಂಬಿದ, ಆತ್ಮವಿಶ್ವಾಸದ ಒಂದು ಧನಾತ್ಮಕ ವಾತಾವರಣ ಸೃಷ್ಟಿಯಾಗಿದೆ. ಇದೇ ಆತ್ಮವಿಶ್ವಾಸ, ಇದೇ ಧನಾತ್ಮಕತೆ, ನವ ಭಾರತದ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ, ಕನಸನ್ನು ನನಸಾಗಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂಬರುವ ಕೆಲವು ತಿಂಗಳುಗಳು ರೈತ ಸೋದರ ಸೋದರಿಯರಿಗೆ ಬಹಳ ಮುಖ್ಯವಾದವುಗಳು. ಆದ್ದರಿಂದ, ಬಹಳಷ್ಟು ಪತ್ರಗಳು ಕೃಷಿಯ ವಿಚಾರವಾಗಿ ಬಂದಿವೆ. ಈ ಬಾರಿ ದೂರದರ್ಶನದ DD Kisan Channel ನಲ್ಲಿ ರೈತರ ಜೊತೆಯಲ್ಲಿ ನಡೆಯುವ ಚರ್ಚೆಗಳ ವೀಡಿಯೊಗಳನ್ನು ತರಿಸಿಕೊಂಡು ನೋಡಿದೆ. ಪ್ರತಿಯೊಬ್ಬ ರೈತರೂ ದೂರದರ್ಶನದ ಈ ಆಆ ಏisಚಿಟಿ ಅhಚಿಟಿಟಿeಟ ನ ಜೊತೆಗೆ ಬೆಸೆದುಕೊಳ್ಳಬೇಕು, ಅದನ್ನು ನೋಡಬೇಕು ಮತ್ತು ಆ ಪ್ರಯೋಗಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ನನಗೆ ಅನಿಸುತ್ತಿದೆ. ಮಹಾತ್ಮ ಗಾಂಧಿಯವರಿಂದ ಹಿಡಿದು ಲಾಲ್ ಬಹದ್ದೂರ್ ಶಾಸ್ತ್ರೀಜಿ, ರಾಮ್ ಮನೋಹರ್ ಲೋಹಿಯಾ, ಚೌಧರಿ ಚರಣ್ ಸಿಂಗ್, ಚೌಧರಿ ದೇವಿಲಾಲ್ ಯಾರೇ ಅಗಲಿ- ಇವರೆಲ್ಲರೂ ಕೃಷಿ ಮತ್ತು ಕೃಷಿಕರನ್ನು ದೇಶದ ಅರ್ಥವ್ಯವಸ್ಥೆಯ ಮತ್ತು ಸಾಮಾನ್ಯ ಜನ ಜೀವನದ ಒಂದು ಮುಖ್ಯವಾದ ಭಾಗ ಎಂದು ತಿಳಿದಿದ್ದರು. ಮಣ್ಣು, ಕೃಷಿ ಭೂಮಿ ಮತ್ತು ರೈತರ ಬಗ್ಗೆ ಮಹಾತ್ಮಾ ಗಾಂಧಿಯವರಿಗೆ ಎಂತಹ ನಂಟು ಇತ್ತು ಎಂಬುದು ಅವರ ಈ ಪಂಕ್ತಿಯಲ್ಲಿ ಇಣುಕುತ್ತದೆ.
‘To forget how to dig the earth and to tend the soil, is to forget ourselves.’ ಎಂದು ಅವರು ಹೇಳಿದ್ದರು.
ಅಂದರೆ, ‘ಭೂಮಿಯನ್ನು ಅಗೆದು ಮಣ್ಣನ್ನು ಹದ ಮಾಡುವುದನ್ನು ನಾವು ಮರೆತರೆ ನಮ್ಮನ್ನು ನಾವು ಮರೆತಂತೆ’ ಎಂದು. ಇದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಗಿಡ, ಮರ ಮತ್ತು ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಉತ್ತಮ ಕೃಷಿ ಪದ್ಧತಿಗಳ ಅವಶ್ಯಕತೆಗಳ ಬಗ್ಗೆ ಯಾವಾಗಲೂ ಹೆಚ್ಚು ಒತ್ತಿ ಹೇಳುತ್ತಿದ್ದರು. ಡಾಕ್ಟರ್ ರಾಮ ಮನೋಹರ್ ಲೋಹಿಯಾರವರಂತೂ ನಮ್ಮ ಕೃಷಿಕರಿಗಾಗಿ ಉತ್ತಮ ಆದಾಯ, ಉತ್ತಮ ನೀರಾವರಿ ಸೌಲಭ್ಯಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಆಹಾರ ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯ ಮಾತನ್ನು ಹೇಳಿದ್ದರು. 1979 ರಲ್ಲಿ ಚೌಧರಿ ಚರಣ್ ಸಿಂಗ್ ರವರು ತಮ್ಮ ಭಾಷಣದಲ್ಲಿ ಹೊಸ ತಾಂತ್ರಿಕತೆಯ ಉಪಯೋಗವನ್ನು ಮಾಡಲು, ಹೊಸ ಅವಿಷ್ಕಾರಗಳನ್ನು ಮಾಡಲು ರೈತರಲ್ಲಿ ಮನವಿ ಮಾಡಿದ್ದರು ಮತ್ತು ಇದರ ಅವಶ್ಯಕತೆಯ ಬಗ್ಗೆ ಒತ್ತು ಕೊಟ್ಟಿದ್ದರು. ನಾನು ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಆಯೋಜಿಸಲಾದ ಕೃಷಿ ಉನ್ನತಿ ಮೇಳಕ್ಕೆ ಹೋಗಿದ್ದೆ. ಅಲ್ಲಿ ಕೃಷಿಕ ಸೋದರ ಸೋದರಿಯರು ಮತ್ತು ವಿಜ್ಞಾನಿಗಳ ಜೊತೆ ನನ್ನ ಮಾತುಕತೆ, ಕೃಷಿಗೆ ಸಂಬಂಧಿಸಿದ ಅನೇಕ ಅನುಭವಗಳನ್ನು ತಿಳಿದುಕೊಳ್ಳುವುದು, ಅರ್ಥ ಮಾಡಿಕೊಳ್ಳುವುದು, ಕೃಷಿಗೆ ಸಂಬಂಧಿಸಿದ ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳುವುದು – ಇವೆಲ್ಲವೂ ನನಗೆ ಒಂದು ಆಹ್ಲಾದಕರವಾದ ಅನುಭವವಾಗಿತ್ತು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಪ್ರಭಾವಿತಗೊಳಿಸಿದ ವಿಷಯವೆಂದರೆ ಮೇಘಾಲಯ ಮತ್ತು ಅಲ್ಲಿನ ರೈತರ ಕಠಿಣ ಪರಿಶ್ರಮ. ಕಡಿಮೆ ಪ್ರದೇಶವಿರುವ ಈ ರಾಜ್ಯವು ಬಹು ದೊಡ್ಡ ಕೆಲಸ ಮಾಡಿ ತೋರಿಸಿದೆ. ಮೇಘಾಲಯದ ನಮ್ಮ ಕೃಷಿಕರು 2015 – 16 ನೇ ವರ್ಷದಲ್ಲಿ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಒಂದು ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಗುರಿ ನಿರ್ಧಾರಿತವಾಗಿದ್ದರೆ, ಧೈರ್ಯವಿದ್ದರೆ, ಮನದಲ್ಲಿ ಮಾಡಿದ ಸಂಕಲ್ಪವನ್ನು ಸಾಧಿಸಬಹುದು, ಸಾಧಿಸಿ ತೋರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇಂದು ಕೃಷಿಕರ ಪರಿಶ್ರಮಕ್ಕೆ ತಾಂತ್ರಿಕತೆಯ ನೆರವು ಸಿಗುತ್ತಿದೆ, ಇದರಿಂದ ಕೃಷಿ-ಉತ್ಪಾದಕರಿಗೆ ಬಹಳಷ್ಟು ಬಲ ಬಂದಂತಾಗಿದೆ. ನನ್ನ ಬಳಿ ಬಂದಿರುವ ಪತ್ರಗಳನ್ನು ನೋಡುತ್ತಿದ್ದಾಗ, ಬಹಳಷ್ಟು ಜನ ರೈತರು MSP (Minimum Support price)) ನ ಬಗ್ಗೆ ಬರೆದಿದ್ದಾರೆ ಮತ್ತು ನಾನು ಇದರ ಬಗ್ಗೆ ಅವರೊಂದಿಗೆ ವಿವರವಾಗಿ ಮಾತನಾಡಬೇಕು ಎಂದು ಬಯಸುತ್ತಿದ್ದಾರೆ.
ಸೋದರ ಸೋದರಿಯರೇ, ಈ ವರ್ಷದ ಬಜೆಟ್ ನಲ್ಲಿ ರೈತರಿಗೆ ತಮ್ಮ ಫಸಲಿಗೆ ನ್ಯಾಯೋಚಿತವಾದ ಬೆಲೆಯನ್ನು ಕೊಡಿಸಲು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೂಚಿಸಲಾದ ಫಸಲುಗಳಿಗೆ ಒSP ಯು ಅದಕ್ಕೆ ತಗುಲಿದ ವೆಚ್ಚದ ಕನಿಷ್ಠ ಒಂದೂವರೆ ಪಟ್ಟು ಎಂದು ಘೋಸಿಸಬೇಕು ಎಂದು ನಿರ್ಧರಿಸಲಾಗಿದೆ. ಇದನ್ನು ನಾನು ವಿವರವಾಗಿ ಹೇಳಬೇಕೆಂದರೆ, ಒSP ಯಲ್ಲಿ ಬೇರೆ ಕಾರ್ಮಿಕರು ಪಡುವ ಪರಿಶ್ರಮಕ್ಕೆ ಕೊಡುವ ಕೂಲಿ, ನಿಮ್ಮ ಜಾನುವಾರು, ಯಂತ್ರಗಳು ಅಥವಾ ಬಾಡಿಗೆಗೆ ತಂದಿರುವ ಜಾನುವಾರು ಮತ್ತು ಯಂತ್ರಗಳ ಖರ್ಚು, ಬೀಜದ ಮೌಲ್ಯ, ಉಪಯೋಗಿಸಿರುವ ಎಲ್ಲಾ ರೀತಿಯ ಗೊಬ್ಬರಗಳ ಮೌಲ್ಯ, ನೀರಾವರಿಯ ಖರ್ಚು, ರಾಜ್ಯ ಸರ್ಕಾರಗಳಿಗೆ ಕೊಟ್ಟಿರುವ ಕಂದಾಯ, ಮೂಲಧನದ ಮೇಲೆ ಕೊಟ್ಟಿರುವ ಬಡ್ಡಿ, ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರೆ ಅದರ ಬಾಡಿಗೆ ಮತ್ತು ಇದಲ್ಲದೆ ಸ್ವತಃ ರೈತರು ಮಾಡುವ ಕೆಲಸ ಅಥವಾ ಅವನ ಪರಿವಾರದಲ್ಲಿ ಯಾರೇ ಕೃಷಿ ಕಾರ್ಯದಲ್ಲಿ ಶ್ರಮದಾನ ಮಾಡಿದರೆ ಅದರ ಕೂಲಿಯನ್ನು ಸಹ ಉತ್ಪಾದನಾ ವೆಚ್ಚಕ್ಕೆ ಸೇರಿಸಲಾಗುತ್ತದೆ. ಇದರ ಜೊತೆಗೆ, ರೈತರ ಬೆಳೆಗೆ ನ್ಯಾಯೋಚಿತವಾದ ಬೆಲೆ ಸಿಗಬೇಕು ಎನ್ನುವ ದೃಷ್ಟಿಯಿಂದ Agriculture Marketing Reform ನ ಬಗ್ಗೆಯೂ ದೇಶದಲ್ಲಿ ಬಹಳ ವ್ಯಾಪಕವಾಗಿ ಕೆಲಸಗಳು ನಡೆಯುತ್ತಿವೆ. ಗ್ರಾಮಗಳ ಸ್ಥಳೀಯ ಮಂಡಿಗಳನ್ನು ಸಗಟು ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆಗಳ ಜೊತೆಗೆ ಸೇರಿಸುವ ಪ್ರಯತ್ನಗಳು ಸಹ ಆಗುತ್ತಿದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಹಳಷ್ಟು ದೂರ ಹೋಗುವುದನ್ನು ತಪ್ಪಿಸಲು ದೇಶದ 22 ಸಾವಿರ ಗ್ರಾಮೀಣ ಮಾರುಕಟ್ಟೆಗಳನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಿ APMC ಮತ್ತು e-NAM platform ಗಳೊಂದಿಗೆ ಸೇರಿಸಲಾಗುತ್ತದೆ. ಅಂದರೆ ಒಂದು ರೀತಿಯಲ್ಲಿ ‘ಕೃಷಿ ಭೂಮಿಯಿಂದ ದೇಶದ ಯಾವುದೇ ಮಾರುಕಟ್ಟೆಯ ಜೊತೆ ಸಂಪರ್ಕ’ – ಇಂತಹ ವ್ಯವಸ್ಥೆ ಮಾಡಲಾಗುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ವರ್ಷ ಮಹಾತ್ಮಾ ಗಾಂಧಿಯವರ 150 ನೇ ಜಯಂತಿಯ ವರ್ಷಾಚರಣೆಯ ಆರಂಭವಾಗುತ್ತದೆ. ಇದು ಒಂದು ಐತಿಹಾಸಿಕ ಸಂದರ್ಭ. ದೇಶ ಹೇಗೆ ಈ ಉತ್ಸವವನ್ನು ಆಚರಿಸಬೇಕು? ಸ್ವಚ್ಚ ಭಾರತವಂತೂ ನಮ್ಮ ಸಂಕಲ್ಪವಾಗಿಯೇ ಇದೆ. ಇದಲ್ಲದೆ 125 ಕೋಟಿ ದೇಶವಾಸಿಗಳು ಭುಜಕ್ಕೆ ಭುಜ ಕೊಟ್ಟು ಗಾಂಧೀಜಿಯವರಿಗೆ ಹೇಗೆ ಅತ್ಯುತ್ತಮವಾದ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಬೇಕು? ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಬಹುದೇ? ಹೊಸ ಹೊಸ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಬಹುದೇ? ಒಥಿಉov ಮಾಧ್ಯಮದ ಮೂಲಕ ಈ ವಿಷಯದ ಬಗ್ಗೆ ನಿಮ್ಮ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಎಂಬುದು ನಿಮ್ಮಲ್ಲಿ ನನ್ನ ವಿನಂತಿಯಾಗಿದೆ. ‘ಗಾಂಧಿ 150’ ಇದರ ಲೋಗೋ ಏನಾಗಿರಬೇಕು? ಸ್ಲೋಗನ್ ಅಥವಾ ಮಂತ್ರ ಅಥವಾ ಘೋಷ ವಾಕ್ಯ ಏನಾಗಿರಬೇಕು? ಇದರ ಬಗ್ಗೆ ನೀವು ನಿಮ್ಮ ಸಲಹೆ ನೀಡಿ. ನಾವೆಲ್ಲರೂ ಸೇರಿ ಬಾಪೂರವರಿಗೆ ನೆನಪಿನಲ್ಲಿ ಉಳಿಯುವಂತಹ ಒಂದು ಶ್ರದ್ಧಾಂಜಲಿ ಸಲ್ಲಿಸಬೇಕಾಗಿದೆ ಮತ್ತು ಬಾಪೂರವರನ್ನು ಸ್ಮರಿಸಿಕೊಂಡು, ಅವರಿಂದ ಪ್ರೇರಣೆ ಪಡೆದುಕೊಂಡು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ತಲುಪಿಸಬೇಕಾಗಿದೆ.
### (ಫೋನ್) “ಆದರಣೀಯ ಪ್ರಧಾನಮಂತ್ರಿಗಳೇ, ನಮಸ್ಕಾರ…. ನಾನು ಪ್ರೀತಿ ಚತುರ್ವೇದಿ, ಗುರುಗ್ರಾಮದಿಂದ ಮಾತನಾಡುತ್ತಿದ್ದೇನೆ… ಪ್ರಧಾನಮಂತ್ರಿಗಳೇ, ಹೇಗೆ ನೀವು ‘ಸ್ವಚ್ಚ-ಭಾರತ’ ಅಭಿಯಾನವನ್ನು ಒಂದು ಸಫಲಪೂರ್ಣ ಅಭಿಯಾನವನ್ನಾಗಿ ಮಾಡಿದ್ದೀರೋ, ಹಾಗೆಯೇ ಈಗ ‘ಸ್ವಸ್ಥ ಭಾರತ’ ಅಭಿಯಾನವನ್ನು ಅದೇ ರೀತಿ ಸಫಲಗೊಳಿಸುವ ಕಾಲವು ಬಂದಿದೆ… ಈ ಅಭಿಯಾನಕ್ಕೆ ನೀವು ಜನರನ್ನು, ಸರ್ಕಾರವನ್ನು, ಸಂಸ್ಥೆಗಳನ್ನು ಯಾವ ರೀತಿ ಸಜ್ಜುಗೊಳಿಸುತ್ತಿದ್ದೀರಿ, ಇದರ ಬಗ್ಗೆ ನಮಗೆ ಸ್ವಲ್ಪ ಹೇಳಿ.. ಧನ್ಯವಾದಗಳು…”
ಧನ್ಯವಾದಗಳು. ನೀವು ಸರಿಯಾಗಿ ಹೇಳಿದ್ದೀರಿ; ಸ್ವಚ್ಚ ಭಾರತ ಮತ್ತು ಸ್ವಸ್ಥ ಭಾರತ ಎರಡೂ ಒಂದಕ್ಕೊಂದು ಪೂರಕವಾಗಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ, ಆರೋಗ್ಯದ ಕ್ಷೇತ್ರದಲ್ಲಿ ಇಂದು ದೇಶ conventional approach ನೊಂದಿಗೆ ಮುಂದೆ ಹೋಗಿದೆ. ದೇಶದಲ್ಲಿ ಆರೋಗ್ಯದ ಜೊತೆ ಬೆಸೆದುಕೊಂಡಿರುವ ಯಾವ ಕೆಲಸಗಳು ಈ ಮೊದಲು ಬರೀ ಅರೋಗ್ಯ ಸಚಿವಾಲಯದ ಜವಾಬ್ದಾರಿಯಾಗಿತ್ತೋ, ಅದು ಈಗ ಎಲ್ಲಾ ವಿಭಾಗಗಳು ಹಾಗೂ ಸಚಿವಾಲಯಗಳು – ಅದು ಸ್ವಚ್ಚತಾ ಸಚಿವಾಲಯವಾಗಿರಲಿ, ಆಯುಷ್ ಸಚಿವಾಲಯವಾಗಿರಲಿ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವಾಗಿರಲಿ, ಗ್ರಾಹಕ ಸಚಿವಾಲಯವಾಗಿರಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವಾಗಿರಲಿ ಅಥವಾ ರಾಜ್ಯ ಸರ್ಕಾರಗಳಾಗಿರಲಿ, ಇವೆಲ್ಲವುಗಳ ಜವಾಬ್ದಾರಿಯಾಗಿದೆ. ಇವುಗಳೆಲ್ಲ ಒಟ್ಟಿಗೆ ಸೇರಿ ಸ್ವಸ್ಥ-ಭಾರತಕ್ಕಾಗಿ ಕೆಲಸ ಮಾಡುತ್ತಿವೆ ಮತ್ತು preventive health ನ ಜೊತೆಜೊತೆಗೆ affordable health ನ ಬಗ್ಗೆ ಒತ್ತು ನೀಡಲಾಗುತ್ತಿದೆ. preventive health-care ಎಲ್ಲಕ್ಕಿಂತ ಅಗ್ಗವಾಗಿದೆ ಹಾಗೂ ಎಲ್ಲಕ್ಕಿಂತ ಸುಲಭವಾಗಿಯೂ ಇದೆ. preventive health-care ನ ಬಗ್ಗೆ ನಾವು ಎಷ್ಟು ಜಾಗರೂಕರಾಗಿರುತ್ತೇವೆಯೋ ಅದರಿಂದ ಅಷ್ಟೇ ಲಾಭ ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕೂಡ ಇದೆ. ಜೀವನ ಆರೋಗ್ಯಪೂರ್ಣವಾಗಿರಬೇಕಾದರೆ ಇರಬೇಕಾದ ಮೊದಲ ಅವಶ್ಯಕತೆ ಎಂದರೆ ಅದು ಸ್ವಚ್ಚತೆ. ನಾವೆಲ್ಲರೂ ಒಂದೇ ದೇಶ ಎನ್ನುವ ಪರಿಕಲ್ಪನೆಯಲ್ಲಿ ಮುಷ್ಠಿ ಎತ್ತಿದ್ದೆವು, ಅದರ ಪರಿಣಾಮ – ಕಳೆದ ಸುಮಾರು 4 ವರ್ಷಗಳಲ್ಲಿ sanitation coverage ಎರಡರಷ್ಟಾಗಿ ಶೇಕಡಾ 80 ರ ಆಸುಪಾಸಿನಷ್ಟು ಆಗಿದೆ. ಇದಲ್ಲದೆ ದೇಶದೆಲ್ಲೆಡೆ ಆರೋಗ್ಯ ಸ್ವಾಸ್ಥ್ಯ ಕೇಂದ್ರಗಳನ್ನು (Health Wellness Centres) ತೆರೆಯುವ ದಿಕ್ಕಿನಲ್ಲಿ ಬಹಳ ತ್ವರಿತವಾಗಿ ಕೆಲಸ ನಡೆಯುತ್ತಿದೆ. Preventive health-care ನ ರೂಪದಲ್ಲಿ ಯೋಗವು ಹೊಸ ರೀತಿಯಲ್ಲಿ ಜಗತ್ತಿನ ತುಂಬಾ ತನ್ನ ಹೆಗ್ಗುರುತನ್ನು ಮೂಡಿಸಿದೆ. ಯೋಗ, ftness ಮತ್ತು wellness ಇವೆರಡಕ್ಕೂ ಭರವಸೆ ನೀಡುತ್ತದೆ. ಯೋಗವು ಇಂದು ಒಂದು mass movement ಆಗಿ, ಮನೆ ಮನೆಯನ್ನು ತಲುಪಿರುವುದು ನಮ್ಮೆಲ್ಲರ ಬದ್ಧತೆಯ ಪರಿಣಾಮವಾಗಿದೆ. ಈ ವರ್ಷದ ಅಂತರ್ರಾಷ್ಟ್ರೀಯ ಯೋಗ ದಿವಸವಾದ ಜೂನ್ 21 ಕ್ಕೆ 100 ದಿನಗಳಿಗೂ ಕಡಿಮೆ ದಿನಗಳು ಉಳಿದಿವೆ. ಹಿಂದಿನ ಮೂರು ಅಂತರ್ರಾಷ್ಟ್ರೀಯ ಯೋಗ ದಿನಗಳಲ್ಲಿ ದೇಶ ಮತ್ತು ಜಗತ್ತಿನ ಪ್ರತಿಯೊಂದು ಜಾಗದಲ್ಲಿಯೂ ಜನರು ಸಾಕಷ್ಟು ಉತ್ಸಾಹದಿಂದ ಇದರಲ್ಲಿ ಭಾಗವಹಿಸಿದ್ದರು. ಈ ಬಾರಿಯೂ ಸಹ ನಾವು ಸ್ವತಃ ಯೋಗ ಮಾಡುತ್ತೇವೆ ಎಂದು ನಿಶ್ಚಯಸಿಕೊಳ್ಳಬೇಕು ಮತ್ತು ಕುಟುಂಬದ ಸದಸ್ಯರು, ಸ್ನೇಹಿತರು ಎಲ್ಲರನ್ನೂ ಯೋಗ ಮಾಡಲು ಇಂದಿನಿಂದಲೇ ಪ್ರೇರೇಪಣೆಗೊಳಿಸಬೇಕು. ಆಸಕ್ತಿದಾಯಕ ರೀತಿಯಲ್ಲಿ ಯೋಗವನ್ನು ಮಕ್ಕಳಲ್ಲಿ, ಯುವಕರಲ್ಲಿ, ಹಿರಿಯ ನಾಗರೀಕರಲ್ಲಿ – ಎಲ್ಲಾ ವಯಸ್ಸಿನವರಲ್ಲಿ, ಪುರುಷರಾಗಿರಲಿ, ಮಹಿಳೆಯಾಗಿರಲಿ ಎಲ್ಲರಲ್ಲೂ ಜನಪ್ರಿಯಗೊಳಿಸಬೇಕಾಗಿದೆ. ಹಾಗೆಯೇ ದೇಶದ ಖಿಗಿ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ವರ್ಷಪೂರ್ತಿ ಯೋಗಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತವೆ. ಆದರೆ ಇಂದಿನಿಂದ ಪ್ರಾರಂಭಿಸಿ ಯೋಗ ದಿನದವರೆಗೆ ಒಂದು ಅಭಿಯಾನದ ರೂಪದಲ್ಲಿ ಯೋಗದ ವಿಷಯದಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗುತ್ತದೆಯೇ?
ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಯೋಗ ಶಿಕ್ಷಕನಲ್ಲ. ಆದರೆ ನಾನು ಯೋಗಾಭ್ಯಾಸ ಮಾಡುತ್ತೇನೆ. ಆದರೆ ಕೆಲವು ಜನರು ತಮ್ಮ ಸೃಜನಶೀಲತೆಯ ಮೂಲಕ ನನ್ನನ್ನು ಯೋಗ ಶಿಕ್ಷಕನನ್ನಾಗಿ ಸಹ ಮಾಡಿದ್ದಾರೆ ಮತ್ತು ನಾನು ಯೋಗ ಮಾಡುತ್ತಿರುವಂತೆ 3ಆ ಅನಿಮೇಟೆಡ್ ವೀಡಿಯೊ ಗಳನ್ನೂ ಸಹ ಮಾಡಿದ್ದಾರೆ. ನಾನು ನಿಮ್ಮೆಲ್ಲರೊಂದಿಗೆ ಈ ವೀಡಿಯೊ ಹಂಚಿಕೊಳ್ಳುತ್ತೇನೆ, ಅದರಿಂದ ನಾವು ಜೊತೆಜೊತೆಯಾಗಿ ಆಸನ, ಪ್ರಾಣಾಯಾಮ ಇವುಗಳ ಅಭ್ಯಾಸ ಮಾಡಬಹುದು. ಅರೋಗ್ಯ ರಕ್ಷಣೆ accessible ಮತ್ತು affordable ಇದ್ದು ಜನ ಸಾಮಾನ್ಯರಿಗೆ ಅಗ್ಗವಾಗಿ ಮತ್ತು ಸುಲಭವಾಗಿರಲಿ ಎನ್ನುವುದರ ಸಲುವಾಗಿ ಕೂಡ ತ್ವರಿತವಾಗಿ ವಿವಿಧ ಹಂತಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇಂದು ದೇಶದೆಲ್ಲೆಡೆ 3 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 800 ಕ್ಕೂ ಅಧಿಕ ಔಷಧಿಗಳು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗುತ್ತಿದೆ. ಇನ್ನಷ್ಟು ಹೊಸ ಕೇಂದ್ರಗಳನ್ನೂ ಸಹ ತೆರೆಯಲಾಗುತ್ತಿದೆ. ಮನದ ಮಾತು ಕಾರ್ಯಕ್ರಮದ ಶ್ರೋತೃಗಳಲ್ಲಿ ನನ್ನ ಮನವಿ ಏನೆಂದರೆ: ಅವಶ್ಯಕತೆ ಇರುವವರಿಗೆ ಈ ಜನೌಷಧಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿ, ಇದರಿಂದ ಅವರ ಔಷಧಿಯ ಖರ್ಚು ಬಹಳಷ್ಟು ಕಡಿಮೆಯಾಗುತ್ತದೆ. ಅವರಿಗೆ ಬಹಳಷ್ಟು ಉಪಕಾರವಾಗುತ್ತದೆ. ಹೃದ್ರೋಗಿಗಳಿಗಾಗಿ ಹಾರ್ಟ್ ಸ್ಟೆಂಟ್ ನ ಬೆಲೆಯನ್ನು ಶೇಕಡಾ 85 ರಷ್ಟು ಕಡಿಮೆಗೊಳಿಸಲಾಗಿದೆ. ಮಂಡಿ ಚಿಪ್ಪಿನ ಬದಲಾವಣೆಯ ಶಸ್ತ್ರಚಿಕಿತ್ಸೆಯ ವೆಚ್ಚವನ್ನೂ ಸಹ ನಿಯಂತ್ರಣಗೊಳಿಸಿ ಶೇಕಡಾ 50 ರಿಂದ 70 ರಷ್ಟು ಕಡಿಮೆಗೊಳಿಸಲಾಗಿದೆ. ‘ಆಯುಷ್ಮಾನ್ ಭಾರತ ಯೋಜನೆ’ ಇದರ ಅಂಗವಾಗಿ ಸುಮಾರು 10 ಕೋಟಿ ಕುಟುಂಬಗಳು ಅಂದರೆ ಸುಮಾರು 50 ಕೋಟಿ ನಾಗರೀಕರಿಗೆ, ಭಾರತ ಸರ್ಕಾರ ಮತ್ತು ವಿಮಾ ಕಂಪನಿಗಳು ಸೇರಿ ಒಂದು ವರ್ಷದಲ್ಲಿ 5 ಲಕ್ಷದಷ್ಟು ಚಿಕಿತ್ಸಾ ವೆಚ್ಚವನ್ನು ಕೊಡುತ್ತವೆ. ದೇಶದಲ್ಲಿರುವ 479 ವೈದ್ಯಕೀಯ ಕಾಲೇಜುಗಳಲ್ಲಿ MBBS ಸೀಟುಗಳ
ಸಂಖ್ಯೆಯನ್ನು ಹೆಚ್ಚಿಸಿ ಸುಮಾರು 68 ಸಾವಿರದಷ್ಟು ಮಾಡಲಾಗಿದೆ. ದೇಶದ ಎಲ್ಲ ಜನರಿಗೂ ಉತ್ತಮ ಚಿಕಿತ್ಸೆ ಮತ್ತು ಅರೋಗ್ಯ ಸೌಲಭ್ಯಗಳು ಸಿಗಲಿ ಎನ್ನುವ ಉದ್ದೇಶದಿಂದ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ AIIMS ಗಳನ್ನು ತೆರೆಯಲಾಗುತ್ತಿದೆ. ಪ್ರತಿ 3 ಜಿಲ್ಲೆಗಳ ಮಧ್ಯದಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜು ತೆರೆಯಲಾಗುವುದು. ದೇಶವನ್ನು 2025 ರ ಹೊತ್ತಿಗೆ ಕ್ಷಯರೋಗ ಮುಕ್ತವನ್ನಾಗಿ ಮಾಡಲು ಗುರಿ ನಿಗದಿಪಡಿಸಲಾಗಿದೆ. ಇದು ಒಂದು ಬಹು ದೊಡ್ಡ ಕೆಲಸ. ಪ್ರತಿ ಜನರಿಗೂ ಈ ಜಾಗೃತಿಯನ್ನು ತಲುಪಿಸಲು ನಿಮ್ಮ ಸಹಾಯ ಬೇಕು. ಕ್ಷಯ ರೋಗದಿಂದ ಮುಕ್ತಿ ಪಡೆಯಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನ ಮಾಡಬೇಕಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಏಪ್ರಿಲ್ 14 ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಜಯಂತಿ. ಬಹಳ ವರ್ಷಗಳ ಹಿಂದೆಯೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತದ ಔದ್ಯೋಗೀಕರಣದ ಬಗ್ಗೆ ಮಾತನಾಡಿದ್ದರು. ಅವರ ಪ್ರಕಾರ ಉದ್ಯೋಗವು ಬಡವರಲ್ಲಿ ಬಡವನಾದ ವ್ಯಕ್ತಿಗೆ ಕೆಲಸ ದೊರೆಯುವಂತೆ ಮಾಡುವ ಒಂದು ಪ್ರಭಾವೀ ಮಾಧ್ಯಮವಾಗಿತ್ತು. ಇಂದು ದೇಶದಲ್ಲಿ Make in India ದ ಅಭಿಯಾನ ಸಫಲವಾಗಿ ನಡೆಯುತ್ತಿದೆಯೆಂದರೆ ಅದಕ್ಕೆ ಡಾ. ಅಂಬೇಡ್ಕರ್ ಅವರು ತಮ್ಮ ದೂರದೃಷ್ಟಿಯಿಂದ industrial super power ನ ರೂಪದಲ್ಲಿ ಕನಸು ಕಂಡ ಭಾರತ ಪ್ರೇರಣೆಯಾಗಿದೆ, ಇಂದು ಭಾರತವು ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದೆ ಮತ್ತು ಇಡೀ ವಿಶ್ವದಲ್ಲೇ ಎಲ್ಲಕ್ಕಿಂತ ಹೆಚ್ಚು ವಿದೇಶೀ ನೇರ ಹೂಡಿಕೆ (Foreign Direct Investment), FDI ಭಾರತಕ್ಕೆ ಬರುತ್ತಿದೆ. ಇಡೀ ವಿಶ್ವವು ಭಾರತವನ್ನು ಹೂಡಿಕೆ, ಅವಿಷ್ಕಾರ ಮತ್ತು ಅಭಿವೃದ್ಧಿ ಕೇಂದ್ರದ ರೂಪದಲ್ಲಿ ನೋಡುತ್ತಲಿದೆ. ಉದ್ಯೋಗಗಳ ಅಭಿವೃದ್ಧಿ ಪಟ್ಟಣಗಳಲ್ಲಿ ಮಾತ್ರ ಸಾಧ್ಯ ಎನ್ನುವ ಯೋಚನೆಯಿಂದಲೇ ಡಾ. ಅಂಬೇಡ್ಕರ್ ರವರು ಭಾರತದ ನಗರೀಕರಣವನ್ನು ನಂಬಿಕೊಂಡಿದ್ದರು. ಅವರ ಈ ದೂರದೃಷ್ಟಿಯನ್ನು ಮುಂದುವರೆಸಿ ದೇಶದ ದೊಡ್ಡ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಪ್ರತಿಯೊಂದು ರೀತಿಯ ಸೌಲಭ್ಯಗಳು – ಅದು ಒಳ್ಳೆಯ ರಸ್ತೆಯಾಗಲಿ, ನೀರಿನ ವ್ಯವಸ್ಥೆಯಾಗಲಿ, ಆರೋಗ್ಯ ಸೌಲಭ್ಯಗಳಾಗಲಿ, ಶಿಕ್ಷಣ ಅಥವಾ ಡಿಜಿಟಲ್ ಸಂಪರ್ಕವಾಗಲಿ, ಇವುಗಳನ್ನು
ದೊರೆಯುವಂತೆ ಮಾಡುವುದಕ್ಕಾಗಿಯೇ ಇಂದು ದೇಶದಲ್ಲಿ smart cities mission ಮತ್ತು urban mission ಇವುಗಳನ್ನು ಪ್ರಾರಂಭಿಸಲಾಗಿದೆ. ಬಾಬಾ ಸಾಹೇಬ್ ಅವರಿಗೆ ತಮ್ಮ ಸ್ವಾವಲಂಬನೆ ಮತ್ತು ಸ್ವಯಂ ಪೂರ್ಣತೆ ಇವುಗಳಲ್ಲಿ ದೃಢ ವಿಶ್ವಾಸವಿತ್ತು. ಯಾವುದೇ ವ್ಯಕ್ತಿಯು ಯಾವಾಗಲೂ ಬಡತನದಲ್ಲಿ ತನ್ನ ಜೀವನವನ್ನು ನಡೆಸುವುದನ್ನು ಅವರು ಇಚ್ಚಿಸುತ್ತಿರಲಿಲ್ಲ. ಇದರ ಜೊತೆಗೆ ಬಡವರಿಗೆ ಬರೀ ಏನಾದರೊಂದು ಹಂಚಿಕೊಡುವುದರಿಂದ ಅವರ ಬಡತನ ದೂರವಾಗುವುದಿಲ್ಲ ಎಂದು ಕೂಡ ಅವರು ತಿಳಿದಿದ್ದರು. ಇಂದು ಮುದ್ರಾ ಯೋಜನೆ, Start Up India, Stand Up India initiatives ಗಳು ನಮ್ಮ ಯುವ ಅವಿಷ್ಕಾರಿಗಳನ್ನು, ಯುವ ಉದ್ಯಮಿಗಳನ್ನು ಹುಟ್ಟು ಹಾಕುತ್ತಿದೆ. 1930 ಮತ್ತು 1940 ರ ದಶಕದಲ್ಲಿ ಭಾರತದಲ್ಲಿ ಬರೀ ರಸ್ತೆ ಮತ್ತು ರೈಲ್ವೆ ಯ ಬಗ್ಗೆ ಮಾತನಾಡಲಾಗುತ್ತಿದ್ದ ಕಾಲದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬಂದರು ಮತ್ತು ಜಲಮಾರ್ಗಗಳ ಬಗ್ಗೆ ಮಾತನಾಡಿದ್ದರು. ಜಲಶಕ್ತಿಯನ್ನು ರಾಷ್ಟ್ರಶಕ್ತಿಯ ರೂಪದಲ್ಲಿ ನೋಡಿದವರು ಡಾ. ಬಾಬಾ ಸಾಹೇಬ್ ಮಾತ್ರ. ದೇಶದ ಅಭಿವೃದ್ಧಿಗಾಗಿ ನೀರಿನ ಉಪಯೋಗಕ್ಕೆ ಒತ್ತು ಕೊಟ್ಟರು. ವಿಭಿನ್ನ ನದಿ- ಕಣಿವೆ ಅಥಾರಿಟಿಗಳು, ನೀರಿಗೆ ಸಂಬಂಧಿಸಿದ ಬೇರೆ ಬೇರೆ ಆಯೋಗಗಳು ಇವೆಲ್ಲವೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿದೆ. ಇಂದು ದೇಶದಲ್ಲಿ ಜಲಮಾರ್ಗ ಮತ್ತು ಬಂದರುಗಳಿಗೆ ಐತಿಹಾಸಿಕ ಪ್ರಯತ್ನಗಳು ನಡೆಯುತ್ತಿವೆ. ಭಾರತದ ಬೇರೆ ಬೇರೆ ಸಮುದ್ರ ತೀರಗಳಲ್ಲಿ ಹೊಸ ಹೊಸ ಬಂದರುಗಳು ನಿರ್ಮಾಣವಾಗುತ್ತಿವೆ ಮತ್ತು ಹಳೆಯ ಬಂದರುಗಳ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ. 40 ರ ದಶಕದ ಕಾಲಘಟ್ಟದಲ್ಲಿ 2 ನೇ ಮಹಾಯುದ್ಧ, ನಡೆಯಬಹುದಾದ ಶೀತಲ ಸಮರಗಳು ಮತ್ತು ದೇಶ ವಿಭಜನೆ ಇವುಗಳ ಕುರಿತಾಗಿ ಹೆಚ್ಚು ಚರ್ಚೆಗಳು ನಡೆಯುತ್ತಿದ್ದವು. ಅಂತಹ ಸಮಯದಲ್ಲಿ ಡಾ. ಅಂಬೇಡ್ಕರ್ ರವರು ಒಂದು ರೀತಿಯಲ್ಲಿ team India ದ spirit ಗೆ ಅಡಿಪಾಯ ಹಾಕಿದರು. ಅವರು federalism ಅಂದರೆ, ಸಾಂಘಿಕ ವ್ಯವಸ್ಥೆಯ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ದೇಶದ ಉನ್ನತಿಗಾಗಿ ಕೇಂದ್ರ ಮತ್ತು ರಾಜ್ಯಗಳು ಜೊತೆ ಸೇರಿ ಕೆಲಸ ಮಾಡುವ ಬಗ್ಗೆ ಒತ್ತು ನೀಡಿದರು. ಇಂದು ನಾವು ಶಾಸನದ ಪ್ರತಿ ಹೆಜ್ಜೆಯಲ್ಲೂ ಸಹಕಾರಿ ಸಂಘವಾದ ಅಂದರೆ co-operative federalism ಮತ್ತು ಅದಕ್ಕೂ ಮುಂದೆ ಹೋಗಿ ಮತ್ತು ಅದಕ್ಕೂ ಮುಂದೆ ಹೋಗಿ competitive cooperative federalism ನ ಮಂತ್ರವನ್ನು ನಮ್ಮದಾಗಿಸಿಕೊಂಡಿದ್ದೇವೆ. ಎಲ್ಲಕ್ಕಿಂತ ಮಹತ್ವಪೂರ್ಣವಾದ ವಿಷಯವೆಂದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಿಂದುಳಿದ ವರ್ಗಗಳೊಂದಿಗೆ ಬೆಸೆದುಕೊಂಡ ನನ್ನಂಥಹ ಕೋಟಿ ಕೋಟಿ ಜನರಿಗೆ ಒಂದು ಪ್ರೇರಣೆಯಾಗಿದ್ದಾರೆ. ಜೀವನದಲ್ಲಿ ಮುಂದೆ ಬರಲು ದೊಡ್ಡ ಅಥವಾ ಶ್ರೀಮಂತ ಕುಟುಂಬದಲ್ಲಿ ಹುಟ್ಟಬೇಕಾಗಿಲ್ಲ, ಬದಲಾಗಿ ಭಾರತದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಜನರು ಸಹ ತಮ್ಮ ಕನಸು ಕಾಣಬಹುದು, ಆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸಬಹುದು ಮತ್ತು ಸಫಲತೆಯನ್ನು ಸಹ ಪಡೆದುಕೊಳ್ಳಬಹುದು ಎಂದು ಅವರು ನಮಗೆ ತೋರಿಸಿಕೊಟ್ಟಿದ್ದಾರೆ. ಬಹಳಷ್ಟು ಜನರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡಿದ್ದೂ ಸಹ ನಡೆಯಿತು. ಅವರನ್ನು ಹಿಂದೆ ತಳ್ಳಲು ಪ್ರಯತ್ನ ಪಟ್ಟರು. ಬಡ ಮತ್ತು ಹಿಂದುಳಿದ ಕುಟುಂಬದಿಂದ ಬಂದವನು ಮುಂದೆ ಬರಬಾರದು, ಜೀವನದಲ್ಲಿ ಏನೂ ಆಗಬಾರದು, ಏನೂ ಸಾಧಿಸಬಾರದು ಎಂದು ಪ್ರತಿಯೊಂದು ರೀತಿಯ ಪ್ರಯತ್ನವನ್ನೂ ಮಾಡಲಾಯಿತು. ಆದರೆ ನವ ಭಾರತದ ಚಿತ್ರಣ ಖಂಡಿತವಾಗಿಯೂ ಬೇರೆಯೇ ಆಗಿದೆ. ಇಂತಹ ಭಾರತ ಅಂಬೇಡ್ಕರ್ ಬಯಸಿದ ಭಾರತವಾಗಿದೆ, ಬಡವರು ಮತ್ತು ಹಿಂದುಳಿದವರ ಭಾರತವಾಗಿದೆ. ಡಾ. ಅಂಬೇಡ್ಕರ್ ರವರ ಜನ್ಮ ಜಯಂತಿಯ ಸಂದರ್ಭದಲ್ಲಿ ಏಪ್ರಿಲ್ 14 ರಿಂದ ಮೇ 5 ರವರೆಗೆ ‘ಗ್ರಾಮ-ಸ್ವರಾಜ್ ಅಭಿಯಾನ’ ವನ್ನು ಆಯೋಜಿಸಲಾಗುತ್ತಿದೆ. ಇದರ ಅಂಗವಾಗಿ ಇಡೀ ಭಾರತದಲ್ಲಿ ಗ್ರಾಮೀಣಾಭಿವೃದ್ಧಿ, ಬಡವರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಇವುಗಳ ಬಗ್ಗೆ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತವೆ. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ಕೆಲವು ದಿನಗಳಲ್ಲಿ ಭಗವಾನ್ ಮಹಾವೀರ ಜಯಂತಿ, ಹನುಮಾನ್ ಜಯಂತಿ, ಈಸ್ಟರ್, ಬೈಸಾಖಿ ಹೀಗೆ ಬಹಳಷ್ಟು ಹಬ್ಬಗಳು ಬರುತ್ತಿವೆ. ಭಗವಾನ್ ಮಹಾವೀರ ಜಯಂತಿಯು ಮಹಾವೀರರ ತ್ಯಾಗ ಮತ್ತು ತಪಸ್ಸಿನ ನೆನಪು ಮಾಡಿಕೊಳ್ಳುವ ದಿನವಾಗಿದೆ. ಅಹಿಂಸೆಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜೀವನ, ಅವರ ದರ್ಶನ ನಮಗೆಲ್ಲರಿಗೂ ಪ್ರೇರಣೆ ಕೊಡುತ್ತದೆ. ಸಮಸ್ತ ದೇಶವಾಸಿಗಳಿಗೆ ಮಹಾವೀರ ಜಯಂತಿಯ ಶುಭಾಷಯಗಳು. ಈಸ್ಟರ್ ನ ಚರ್ಚೆ ಆಗುತ್ತಿದ್ದಂತೆ ಪ್ರಭು ಏಸು ಕ್ರಿಸ್ತನ ಪ್ರೇರಣಾದಾಯಕ ಉಪದೇಶವು ನೆನಪಿಗೆ ಬರುತ್ತದೆ. ಅವರು ಯಾವಾಗಲೂ ಮಾನವತೆಗೆ ಶಾಂತಿ, ಸದ್ಭಾವ, ನ್ಯಾಯ, ದಯೆ ಮತ್ತು ಕರುಣೆಯ ಸಂದೇಶಗಳನ್ನು ನೀಡಿದ್ದಾರೆ. ಏಪ್ರಿಲ್ ನಲ್ಲಿ ಪಂಜಾಬ್ ಮತ್ತು ಪಶ್ಚಿಮ ಭಾರತದಲ್ಲಿ ಬೈಸಾಖಿಯ ಉತ್ಸವವನ್ನು ಆಚರಿಸಲಾಗುತ್ತದೆ. ಮತ್ತು ಅದೇ ದಿನಗಳಲ್ಲಿ ಬಿಹಾರದಲ್ಲಿ ಜುಡ್ ಶೀತಲ್ ಮತ್ತು ಸತುವಾಯಿನ್, ಅಸ್ಸಾಂ ನಲ್ಲಿ ಬಿಹೂವಾದರೆ ಪಶ್ಚಿಮ ಬಂಗಾಳದಲ್ಲಿ ಪೋಯ್ಲಾ ವೈಸಾಖ್ ನ ಹರ್ಷೋಲ್ಲಾಸ ತುಂಬಿರುತ್ತದೆ. ಈ ಎಲ್ಲಾ ಹಬ್ಬಗಳೂ ಒಂದಿಲ್ಲೊಂದು ರೂಪದಲ್ಲಿ ನಮ್ಮ ಕೃಷಿ ಕಣಜಕ್ಕೆ ಮತ್ತು ಅನ್ನದಾತರೊಂದಿಗೆ ಬೆಸೆದುಕೊಂಡಿರುತ್ತದೆ. ಈ ಹಬ್ಬಗಳ ಮೂಲಕ ನಾವು ಧಾನ್ಯಗಳ ರೂಪದಲ್ಲಿ ದೊರೆಯುವ ಅಮೂಲ್ಯವಾದ ಉಡುಗೊರೆಗಳಿಗೆ ಪ್ರಕೃತಿ ಮಾತೆಗೆ ಧನ್ಯವಾದಗಳನ್ನು ತಿಳಿಸುತ್ತೇವೆ.
ಮತ್ತೊಮ್ಮೆ ನಿಮ್ಮೆಲ್ಲರಿಗೂ ಮುಂಬರುವ ಎಲ್ಲಾ ಹಬ್ಬಗಳಿಗಾಗಿ ಹಾರ್ದಿಕ ಶುಭಾಷಯಗಳು.
ಅನಂತಾನಂತ ಧನ್ಯವಾದಗಳು.
My dear countrymen, Namaskar.
Let us begin today’s Mann Ki Baat with a phone call.]
Phone Call...
Thank you very much for your phone call. My young friends have asked me many questions related to Science; they keep writing on quite a few points. All of us have seen that the sea appears blue, but we know from routine life experiences that water has no colour at all. Have we ever thought why water acquires colour in rivers and seas? The same thought occurred to a young man in the 1920s. The same question gave rise to a great scientist of modern India. When we talk about Science, the first name that strikes us is that of Bharat Ratna Sir C.V.Raman. He was awarded the Nobel Prize for his outstanding work on light scattering. One of his discoveries is famous as the Raman Effect.
We celebrate the 28th of February as National Science Day since on this very day, he is said to have discovered the phenomenon of light scattering, for which the Nobel Prize was conferred upon him. This land has given birth to many a great scientist. On the one hand, there has been a tradition of great Mathematicians like Bodhayan, Bhaskar, Brahmagupt and Aryabhatt; on the other, in the field of medicine, Sushrut & Charak have bestowed upon us a place of pride. Right from Sir Jagdish Chandra Bose and Hargobind Khurana to Satyendranath Bose have brought laurels to India. The famous particle BOSON has been named after Satyendranath Bose. Recently I got an opportunity to take part in a programme in Mumbai – the inauguration of the Wadhwani Institute for Artificial Intelligence. It was interesting to know about the ongoing miraculous accomplishments in the field of Science. Artificial Intelligence aids in making robots, Bots and other machines meant for specific tasks. Through self learning, machines today can enhance their intelligence to a smarter level. This technology can be harnessed to better the lives of the underprivileged, the marginalized and the needy. In that programme on Artificial Intelligence, I urged the scientific community to deliberate on how Artificial Intelligence could help us make life easier for our divyang brothers & sisters. Can we make better predictions of natural disasters using Artificial Intelligence? Can we use it to provide assistance to farmers on crop yield? Can Artificial Intelligence be used as tool to simplify the outreach of health services and modernize medical treatment?
A few days ago, I got an opportunity to accompany the Prime Minister of Israel to Ahmedabad, Gujarat for the inauguration of ‘I create’. There a young person referred to developing a digital instrument that converts the written word into voice. This is to aid those who are incapable of speech to converse normally like any other person. I feel we can harness Artificial Intelligence in many such fields.
Science and Technology are value neutral. They don’t possess any value in themselves. Any machine will work the way we want it to. It entirely depends on us what task we want it to perform. Here human objectives assume significance; the use of Science for the sole purpose of human welfare, with the endeavour to assist human lives touch the greatest heights.
Thomas Alva Edison, the inventor of the light bulb, failed many a time in his experiments. Once, on being asked about it, he quipped, “I have devised ten thousand ways of how NOT to make a light bulb”. What I mean to say is, Edison transformed even his failures into his own strength. Coincidentally, I am fortunate today to be in Auroville, the land, the karmabhoomi of Maharshi Arvind. As a revolutionary, he challenged British rule, fought against them and questioned subjugation. Thus, as a great sage, he questioned every facet of life. Extracting answers, he showed the right path to humanity. The relentless quest to ask questions for knowing the truth is very important. And this is the very essence, the real inspiration behind scientific inventions and discoveries. Never rest till every ‘why’, ‘what’ & ‘how’ are answered. I congratulate our scientists, and all those connected with Science on the occasion of National Science Day. May our young generation be inspired for the quest of truth & knowledge; may they be motivated to serve society through Science. I wish them the best.
Friends, safety in the times of crises, disasters are topics on which many messages keep coming in- people keep writing to me. In a comment posted on Narendra Modi Mobile App, Shriman Ravindra Singh from Pune has referred to occupational safety. He writes that in our country, safety standards at factories and construction sites are not upto the mark. Since the 4th of March is National Safety Day, the Prime Minister should include safety in the Mann Ki Baat programme in order to raise awareness on safety. When we refer to public safety, two aspects are very important- proactiveness and preparedness. Safety is of two kinds – one is safety during disasters and the other is safety in everyday life. If we are not aware of safety in daily life, if we are not able to attain a certain level, it will get extremely difficult during the time of disasters. We often read signboards on streets bearing lines such as – ‘सतर्कता हटी – दुर्घटना घटी’ – ‘Lose alertness – invite mishaps’ or ‘एक भूल करे नुकसान, छीने खुशियां और मुस्कान’ – ‘One mistake can cost you dear- rob you of your joy & smile’ or इतनी जल्दी न दुनिया छोड़ो, सुरक्षा से अब नाता जोड़ो – ‘Don’t be in a hurry to leave this world – embrace the culture of safety’ or सुरक्षा से न करो कोई मस्ती वर्ना जिन्दगी होगी सस्ती – ‘Don’t play around with safety, your life will be treated cheap’. Beyond that, these sentences serve no purpose in our lives. Leave aside natural disasters; most of the mishaps are a consequence of some mistake or the other on our part. If we stay alert, abide by the prescribed rules & regulations, we shall not only be able to save our own lives but we can prevent catastrophes harming society. There are times when we come across many slogans on safety at the work place but none following their letter and spirit. I urge the fire brigade under corporations and municipalities to visit school children once a week or once a month and perform mock drills for them. This will have a dual benefit – the fire brigade will undergo an exercise in readiness and the new generation will get lessons in alertness. And all this at no added cost. In a way it will a natural part of the overall learning curve. India is a land of geographic and climatic diversities. As far as disasters are concerned, this country has borne the brunt of many a natural as well as man made disaster, such as chemical & industrial mishaps. Today, the National Disaster Management Authority, NDMA is the vanguard when it comes to dealing with disasters in the country. During earthquakes, floods, cyclones, landslides, NDMA reaches the area within no time. They have issued guidelines; simultaneously they keep imparting training on a regular basis for capacity building. In Districts prone to floods and cyclones, an initiative names ‘Aapada Mitra’ has been launched for training Volunteers. Training and awareness have a very important role to play. Two- three years ago, thousands of people would lose their lives every year due to heat-wave. After that, NDMA organized workshops on heat wave management as part of a campaign to raise awareness in people. Mass participation led to good results. In 2017, the death toll on account of heat wave remarkably came down to around 220 or so. This proves that if we accord priority to safety, we can actually attain safety. I laud the role played by innumerable individuals, citizens who immediately embark upon rescue and relief operations wherever a disaster strikes. And there are numerous such unnamed, unsung heroes. Our Fire & Rescue services, National Disaster Response Forces Armed Forces, Paramilitary Forces… these brave hearts go beyond the call of duty to help people in distress, often risking their own lives. Organisations like NCC and Scouts are also contributing in this task; they are getting trained too. Recently we have made an attempt to have joint exercise for disaster management between countries on the lines of joint military exercise involving different countries of the world. India has made a pioneering effort – BIMSTEC, Bangladesh, India, Myanmar, Sri Lanka, Thailand, Bhutan & Nepal – a joint disaster management exercise involving these countries was undertaken. It was a novel humanitarian experiment on a large scale. We’ll have to turn ourselves into a risk conscious society. In our culture, we often talk of safety of values; we now need to realize the values of safety. We’ll have to make it part of our life, our being. In day to day life, during air travel, we must have frequently come across air hostesses giving out a rather longish speech, safety instructions at the beginning of a flight. We must have heard it hundreds of times. But today if one of us is taken inside an aircraft and asked about the location of equipments, say life jackets, and how to use them, I can say for sure that none of us will be able to give the right answer. So, was there a provision for giving our information? Yes, there was. Was there a scope of direct visibility when the information was given? Of course there was. But we did not respond actively. WHY? Because by nature, we are not conscious. And that is why our ears hear when we sit in the aircraft, but no one realizes that ‘these instructions are for me’. We experience this in all walks of life. Let us not think that safety is only meant for someone else. If all of us become conscious and aware of our own safety, the essence of safety of society will be inbuilt.
My dear countrymen, in the current budget, emphasis has been laid on turning ‘waste to wealth’ and ‘waste to energy’ through Bio gas, under the Swachch Bharat Campaign. An effort was initiated which was named GOBAR-Dhan - Galvanizing Organic Bio Agro Resources. The aim of this GOBAR- DHAN scheme is ensuring cleanliness in villages and generating wealth and energy by converting cattle dung and solid agricultural waste into Compost and Bio Gas. India is home to the highest cattle population in the world, close to 300 million in number, with a daily output of 3 million tonnes of dung. Some European countries and China use animal dung and other Bio-waste to produce energy. But India was lacking full capacity utilization. Under the Swachch Bharat Mission (Rural), we are taking rapid strides in this direction.
A target has been set to use cattle dung, agricultural waste, kitchen waste to produce Bio gas based energy. Under the Gobardhan Scheme our farmer brothers & sisters in rural India will be encouraged to consider dung and other waste not just as a waste but as a source of income. Under the aegis of 'GobarDhanYojana', many benefits will accrue to rural areas. It will be easier to keep the village clean and sanitized, livestock health will improve and farm yields will increase. Biogas generation will increase self-reliance in energy utilized for cooking and lighting. Farmers and cattle herders will be helped in augmenting their income. There will be novel opportunities for newer jobs linked to waste collection, transportation, biogas sales etc. An online trading platform will be created for better implementation of 'Gobar Dhan Yojana', it will connect farmers to buyers so that farmers can get the right price for dung and agricultural waste. I urge entrepreneurs, especially our sisters residing in rural India, to step forward, and through creation of self-help groups and cooperative societies extract full advantage from this opportunity. I invite you to become part of the movement comprising clean energy and green jobs, to become a part of the initiative to convert waste in your village to wealth and by converting dung into ‘Gobar dhan.’
My dear countrymen, till date, we have been hearing about the myriad types of festivals - be it music festivals, food festivals, film festivals and many other kinds of festivals. But in a unique endeavor in Raipur, Chhattisgarh, the state's first 'Trash Mahotsav' was organized. The objective behind this festival sponsored by Raipur Municipal Corporation was to generate awareness about cleanliness and the methods using which city's waste can be creatively used and inculcate awareness about various ways to recycle the garbage. A plethora of activities were organized during this festival, which found full participation of students and adults. Different types of artifacts were made utilizing garbage. Many Workshops were organized to inform people on the entire aspects of waste management. Music performances linked to the theme of hygiene were held and art works were created. Raipur inspired various types of such garbage or trash festivals in other districts too. Many individuals taking initiative on their own behalf shared innovative ideas, held discussions, conducted poetry recitals. A festive atmosphere regarding cleanliness got geared up. The way the school children took part in the entire endeavor was amazing. For the innovative manner in which importance of waste management and cleanliness were displayed in this festival, I congratulate the people of Raipur Municipal Corporation, the entire populace of Chhattisgarh, its government and administration.
Every year on March 8, 'International Women's Day' is celebrated. There are many programs that are held in our country and the world. On this day, women are also felicitated with 'Nari Shakti Puraskar' who have performed exemplary tasks in different sectors in the past. Today the country is moving forward from the path of Women development to women-led development. On this occasion, I remember the words of Swami Vivekananda. He’d said 'The idea of perfect womanhood is perfect independence' - This idea of Swami ji about one hundred and twenty five years ago expresses the contemplation of woman power in Indian culture. Today, it is our duty to ensure the participation of women in every field of life, be it social or economic life, it is our fundamental duty. We are part of a tradition where men were identified due to women-Yashoda-Nandan, Kaushalya-Nandan, Gandhari-Putra, these were identities of a son. Today our woman power has shown inner fortitude and self-confidence, has made herself self-reliant. Not only has she advanced herself but has carried forward the country and society to newer heights.
After all, our dream of 'New India' is the one where women are strong and empowered and are equal partners in the development of the country. A few days ago, a gentleman had given me a very sound proposition. He had suggested that on 8th March myriad events herald 'Women's Day' Why cannot we felicitate mothers and sisters who have completed 100 years in every Indian village or city,? Can a program of paying respect for such centenarians be held and cannot we reflect upon a life lived long? I liked the idea and I’m bouncing it with you will find many examples of what woman power can achieve, If you look around near yourself many such inspiring stories will appear. I just received news from Jharkhand wherein under the 'Swachh Bharat Abhiyan', about 1.5 million women in Jharkhand – and this figure is not a small one organized a hygiene campaign for an entire month! Under the auspices of this campaign starting from January 26, 2018, these women constructed 1 lakh 70 thousand toilets in just 20 days and made a record of sorts. There were about one lakh ‘Sakhi Mandals,’ 14 lakh women, 2 thousand women Panchayat representatives, 29 thousand water carriers, 10 thousand female cleaners and 50 thousand women masons were involved in this campaign. You can imagine what a mammoth undertaking it was! These women of Jharkhand have shown that women power is an integral component of ‘Swachh Bharat Abhiyan’, which will change the course of the campaign of cleanliness in general life, the effective role of hygiene in the nature of the people ingeneral.
My dear Brothers and sisters, I was just watching the TV news two days ago that electricity has reached three villages of the Elephanta island after 70 years of independence, and this has led to much joy and enthusiasm among the people there. You all know very well, that Elephanta is located 10 kms by the sea from Mumbai. It is a very important tourist destination. The caves of Elephanta are marked as the World Heritage sites by UNESCO and draw tourists from all over the country and abroad. I was surprised to know that despite being such a prominent center of tourism its close proximity from Mumbai, electricity hadn’t reached Elephanta after so many years of independence. For 70 years, the lives of the denizens of three villages of the Elephanta Island, Rajbunder, Morbandar and Centabandar, were engulfed by darkness, which has got dispelled now and there is brightness in their lives. I congratulate the administration and the populace there. I am glad that now the villages of Elephanta and the caves of Elephanta will be lighted due to electrification. This is not just electricity, but a new beginning of a period of development. There is no greater contentment and joy than the fact that the lives of the countrymen be full of shine and there be happiness in their lives.
My dear brothers and sisters, we just celebrated the festival of Shivaratri. And now the month of March beckons us with ripe crops in the fields, playful golden earrings of wheat and the captivating blossom of mango pleasing to the mind are the highlights of this month. But this month is also very special to all of us because of the festival of Holi. On 2nd March the entire country immersed in joy will celebrate the festival of Holi. In The festival of Holi, the importance of colors is as important as the ceremony of 'HolikaDahan' because it is the day when we burn our inherent vices in the fire. Holi makes us forget our rancours and gives us an opportunity to be a part of each other's happiness and glad tidings, and it conveys the message of love, unity and brotherhood. I wish a very joyous festival of Holi to all my countrymen, I further wish you colour laden felicitations. I wish and hope that this festival forever remains a festival of colourful cheer in the lives of all the countrymen- this is my wish. My dear countrymen, thank you very much
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ
ಇದು 2018 ರ ಮೊದಲ ಮನದ ಮಾತು.
2 ದಿನಗಳ ಹಿಂದೆಯಷ್ಟೇ ನಾವು ಬಹಳ ಉತ್ಸಾಹದಿಂದ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಇತಿಹಾಸದಲ್ಲೇ ಮೊದಲ ಬಾರಿಗೆ 10 ರಾಷ್ಟ್ರಗಳ ಮುಖ್ಯಸ್ಥüರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನನ್ನ ಪ್ರಿಯ ದೇಶವಾಸಿಗಳೇ, ಶ್ರಿಯುತ ಪ್ರಕಾಶ್ ತ್ರಿಪಾಠಿ ಅವರು ಓಚಿಡಿeಟಿಜಡಿಚಿಒoಜiಂಠಿಠಿ ನಲ್ಲಿ ಒಂದು ವಿಸ್ತøತವಾದ ಪತ್ರವನ್ನು ಬರೆದು, ತಮ್ಮ ಪತ್ರದಲ್ಲಿ ಬರೆದ ವಿಷಯಗಳನ್ನು ನಾನು ಅವಗಾಹನೆಗೆ ತೆಗೆದುಕೊಳ್ಳಲು ತುಂಬಾ ಒತ್ತಾಯಿಸಿದ್ದಾರೆ. ಅವರು ಹೀಗೆ ಬರೆದಿದ್ದಾರೆ, ಫೆಬ್ರವರಿ 1 ರಂದು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಪುಣ್ಯ ತಿಥಿ ಇದೆ. ಕೊಲಂಬಿಯಾದ ಗಗಯಾತ್ರೆಯ ದುರ್ಘಟನೆಯಲ್ಲಿ ಅವರು ನಮ್ಮನ್ನಗಲಿದರು. ಆದರೆ ವಿಶ್ವಾದ್ಯಂತ ಲಕ್ಷಾಂತರ ಯುವಜನತೆಗೆ ಪ್ರೇರಣೆಯನ್ನಿತ್ತರು. ಪ್ರಕಾಶ್ ತ್ರಿಪಾಠಿ ಅವರು ತಮ್ಮ ಪತ್ರವನ್ನು ಕಲ್ಪನಾ ಚಾವ್ಲಾ ಅವರ ಅಗಲುವಿಕೆಯಿಂದ ಪ್ರಾರಂಭಿಸಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಕಲ್ಪನಾ ಚಾವ್ಲಾ ಅವರನ್ನು ನಾವು ಇಷ್ಟು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡೆವು ಎಂಬುದು ತುಂಬಾ ದುಖಃದ ವಿಷಯ. ಆದರೆ ಅವರು ತಮ್ಮ ಜೀವನದ ಮೂಲಕ ವಿಶ್ವಕ್ಕೆ ಅದರಲ್ಲೂ ವಿಶೇಷವಾಗಿ ಭಾರತೀಯ ಯುವತಿಯರಿಗೆ ‘ಸ್ತ್ರೀ ಶಕ್ತಿಗೆ’ ಯಾವ ಎಲ್ಲೆಯೂ ಇಲ್ಲ ಎಂಬ ಸಂದೇಶವನ್ನು ನೀಡಿದರು. ಇಚ್ಛೆ ಮತ್ತು ಧೃಡವಾದ ಸಂಕಲ್ಪವಿದ್ದರೆ, ಸಾಧಿಸುವ ಛಲವಿದ್ದರೆ ಯಾವುದೂ ಅಸಂಭವವಲ್ಲ. ಇಂದು ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆಯನ್ನು ಮೆರೆಯುತ್ತಿದ್ದಾರೆ ಮತ್ತು ದೇಶಕ್ಕೆ ಗೌರವ ತರುತ್ತಿದ್ದಾರೆ ಎಂಬುದನ್ನು ಕಂಡು ಬಹಳ ಸಂತೋಷವಾಗುತ್ತದೆ.
ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡುವ ಗೌರವ, ಸಮಾಜದಲ್ಲಿ ಅವರ ಸ್ಥಾನಮಾನ ಮತ್ತು ಕೊಡುಗೆ, ವಿಶ್ವವೇ ಆಶ್ಚರ್ಯಚಕಿತವಾಗುವಂತೆ ಮಾಡಿದೆ. ಭಾರತದ ಮಹಿಳಾ ವಿದ್ವಾಂಸರ ಬಹು ದೊಡ್ಡ ಪರಂಪರೆಯಿದೆ. ವೇದಗಳ ರಚನೆ ಮತ್ತು ವಿಶ್ಲೇಷಣೆಯಲ್ಲಿ ಭಾರತದ ಬಹಳಷ್ಟು ಮಹಿಳಾ ವಿದ್ವಾಂಸರ ಕೊಡುಗೆ ಇದೆ. ಲೋಪಾಮುದ್ರಾ, ಗಾರ್ಗಿ, ಮೈತ್ರೆಯೀ ಹೀಗೆ ಹಲವಾರು ಹೆಸರುಗಳನ್ನು ಸ್ಮರಿಸಬಹುದು. ಇಂದು ನಾವು ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ ಎಂದು ಮಾತನಾಡುತ್ತೇವೆ, ಆದರೆ ಸಾವಿರಾರು ವರ್ಷಗಳ ಹಿಂದೆ ನಮ್ಮ ಶಾಸ್ತ್ರ್ರಗಳಲ್ಲಿ, ಸ್ಕಂದ ಪುರಾಣದಲ್ಲಿ ಹೀಗೆ ಹೇಳಿದ್ದಾರೆ :-
ದಶಪುತ್ರ, ಸಮಾಕನ್ಯಾ, ದಶಪುತ್ರಾನ್ ಪ್ರವರ್ಧಯನ್
ಯತ್ ಫಲಂ ಲಭತೆ ಮತ್ರ್ಯ, ತತ್ ಲಭ್ಯಂ ಕನ್ಯಕೈಕಯಾ.
ಇದರರ್ಥ ಒಬ್ಬ ಮಗಳು 10 ಗಂಡು ಮಕ್ಕಳಿಗೆ ಸಮಾನ. 10 ಜನ ಸುಪುತ್ರರಿಂದ ದೊರೆಯುವ ಪುಣ್ಯ ಒಬ್ಬಳು ಮಗಳಿಂದ ಲಭ್ಯವಾಗುತ್ತದೆ ಎಂದು. ಇದು ನಮ್ಮ ಸಮಾಜದಲ್ಲಿ ಮಹಿಳೆಯ ಮಹತ್ವದ ಕುರಿತು ಅರಿವು ಮೂಡಿಸುತ್ತದೆ. ಆದ್ದರಿಂದಲೇ ನಮ್ಮ ಸಮಾಜದಲ್ಲಿ
ಸ್ತ್ರೀ ಗೆ ಶಕ್ತಿಯ ರೂಪ ಎನ್ನಲಾಗುತ್ತದೆ. ಈ ನಾರಿ ಶಕ್ತಿ, ಸಂಪೂರ್ಣ ದೇಶವನ್ನು, ಸಮಾಜವನ್ನು, ಕುಟುಂಬವನ್ನು ಏಕತೆಯ ಸೂತ್ರದಲ್ಲಿ ಬಂಧಿಸುತ್ತದೆ. ಅದು ವೈದಿಕ ಕಾಲದ ಪ್ರಾಜ್ಞರಾದ ಲೋಪಾಮುದ್ರಾ, ಗಾರ್ಗಿ, ಮೈತ್ರೇಯಿ ಅವರ ವಿದ್ವತ್ ಆಗಿರಲಿ ಅಥವಾ ಅಕ್ಕ ಮಹಾದೇವಿ ಮತ್ತು ಮೀರಾಬಾಯಿ ಅವರ ಜ್ಞಾನ ಮತ್ತು ಭಕ್ತಿಯಾಗಿರಲಿ, ಹಾಗೆಯೇ ಅಹಲ್ಯಾಬಾಯಿ ಹೋಳ್ಕರ್ ಅವರ ಶಾಸನ ವ್ಯವಸ್ಥೆಯಾಗಿರಲಿ ಅಥವಾ ರಾಣಿ ಲಕ್ಷ್ಮೀಬಾಯಿಯ ಶೌರ್ಯವೇ ಆಗಿರಲಿ, ದೇಶದ ಗೌರವವನ್ನು ಹೆಚ್ಚಿಸುತ್ತಲೇ ಬಂದಿದೆ.
ಶ್ರೀಯುತ ಪ್ರಕಾಶ್ ತ್ರಿಪಾಠಿ ಅವರು ಹೀಗೆ ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ. ನಮ್ಮ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಯುದ್ಧ ವಿಮಾನ ಸುಖೋಯ್ 30 ರಲ್ಲಿ ಹಾರಾಟ ಮಾಡಿದ್ದು ತಮಗೆ ಪ್ರೇರಣೆ ನೀಡುತ್ತದೆ ಎಂದು ಅವರು ಬರೆದಿದ್ದಾರೆ. ಹಾಗೆಯೇ ವರ್ತಿಕಾ ಜೋಷಿ ಅವರ ನೇತೃತ್ವದಲ್ಲಿ ಭಾರತೀಯ ನೌಕಾ ಪಡೆಯ ಮಹಿಳಾ ತಂಡದ ಸದಸ್ಯರು IಓSಗಿ ಖಿಚಿಡಿiಟಿi ಯಲ್ಲಿ ವಿಶ್ವ ಪರ್ಯಟನೆ ಮಾಡುತ್ತಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ, ಭಾವನಾ ಕಂಠ್, ಮೊಹನ್ ಸಿಂಗ್ ಮತ್ತು ಆವನಿ ಚತುರ್ವೆದಿ ಎಂಬ ಮೂವರು ವೀರ ವನಿತೆಯರು ಈighಣeಡಿ Piಟoಣs ಆಗಿದ್ದಾರೆ ಮತ್ತು Suಞhoi-30 ರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕ್ಷಮತಾ ವಾಜಪೇಯಿ ಅವರ ನಾಯಕತ್ವದಲ್ಲಿ ಸರ್ವ ಮಹಿಳಾ ತಂಡ ದಿಲ್ಲಿಯಿಂದ ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಮರಳಿ ದಿಲ್ಲಿವರೆಗೆ ಂiಡಿ Iಟಿಜiಚಿ ಃoeiಟಿg ಎeಣ ನಲ್ಲಿ ಹಾರಾಟ ಕೈಗೊಂಡಿತು. ಈ ತಂಡದಲ್ಲಿ ಎಲ್ಲರೂ ಮಹಿಳೆಯರೇ. ಹೌದು ನೀವು ಸರಿಯಾಗಿ ಕೇಳಿಸಿಕೊಂಡಿರಿ, ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರಿಯುವುದು ಮಾತ್ರವಲ್ಲ ನಾಯಕತ್ವವನ್ನೂ ವಹಿಸುತ್ತಿದ್ದಾರೆ. ಇಂದು ಸ್ತ್ರೀ ಶಕ್ತಿ ಎಲ್ಲರಿಗಿಂತ ಮೊದಲು ಸಾಧನೆಗೈದು ತೋರಿಸಿದ ಹಲವಾರು ಕ್ಷೇತ್ರಗಳಿವೆ. ಒಂದು ಮೈಲಿಗಲ್ಲನ್ನು ಅವರು ಸ್ಥಾಪಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಾನ್ಯ ರಾಷ್ಟ್ರ್ರಪತಿಗಳು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ.
ರಾಷ್ಟ್ರ್ರಪತಿಯವರು ತಮ್ಮ ತಮ್ಮ ಕ್ಷೇತ್ರದಲ್ಲಿ ಏನನ್ನಾದರೂ ಪ್ರಥಮ ಬಾರಿಯ ಸಾಧನೆಗೈದ ಅಸಾಧಾರಣ ಮಹಿಳೆಯರ ಒಂದು ಸಮೂಹವನ್ನು ಭೇಟಿಯಾದರು. ದೇಶದ ಈ ತಿomeಟಿ ಚಿಛಿhieveಡಿs , ಈiಡಿsಣ ಜಿemಚಿಟe ಒeಡಿಛಿhಚಿಟಿಣ ಓಚಿvಥಿ ಅಚಿಠಿಣಚಿiಟಿ , ಠಿಚಿsseಟಿgeಡಿ ಣಡಿಚಿiಟಿ ನ ಪ್ರಥಮ ಮಹಿಳಾ ಖಿಡಿಚಿiಟಿ ಆಡಿiveಡಿ, ಅಗ್ನಿ ಶಾಮಕ ದಳದ ಪ್ರಥಮ ಮಹಿಳೆ, ಪ್ರಥಮ ಮಹಿಳಾ ಃus ಆಡಿiveಡಿ, ಂಟಿಣಚಿಡಿಛಿಣiಛಿಚಿ ತಲುಪಿದ ಪ್ರಥಮ ಮಹಿಳೆ, ಎವರೆಸ್ಟ್ ಏರಿದ ಪ್ರಥಮ ಮಹಿಳೆ, ಹೀಗೆ ಪ್ರತಿ ಕ್ಷೇತ್ರದ ಪ್ರಥಮ ಮಹಿಳೆಯರು – ನಮ್ಮ ಸ್ತ್ರೀ ಶಕ್ತಿ ಸಮಾಜದ ಕಟ್ಟುಪಾಡುಗಳನ್ನು ತೊಡೆದು, ಅಸಾಧಾರಣ ಸಾಧನೆ ಮೆರೆದಿದ್ದಾರೆ, ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಕಠಿಣ ಪರಿಶ್ರಮ, ಛಲ ಮತ್ತು ಧೃಡ ಸಂಕಲ್ಪದ ಶಕ್ತಿಯೊಂದಿಗೆ ಎಲ್ಲ ಅಡತಡೆಗಳು ಮತ್ತು ಸವಾಲುಗಳನ್ನು ಮೆಟ್ಟಿ ಹೊಸ ಹಾದಿಯನ್ನು ನಿರ್ಮಿಸಬಹುದಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಸಮಕಾಲೀನರನ್ನು ಮಾತ್ರವಲ್ಲದೆ ಮುಂಬರುವ ಪೀಳಿಗೆಗೂ ಪ್ರೇರಣಾದಾಯಕವಾದ ಮಾರ್ಗವದು. ಅವರಲ್ಲಿ ಹೊಸ ಹುರುಪು ಮತ್ತು ಉತ್ಸಾಹ ತುಂಬುವಂಥ ಮಾರ್ಗ. ಈ ತಿomeಟಿ ಚಿಛಿhieveಡಿs, ಜಿiಡಿsಣ ಟಚಿಜies ಕುರಿತ ಒಂದು ಪುಸ್ತಕವನ್ನೂ ಸಿದ್ಧಪಡಿಸಲಾಗಿದೆ. ಸಂಪೂರ್ಣ ರಾಷ್ಟ್ರಕ್ಕೆ ಸ್ತ್ರೀ ಶಕ್ತಿ ಬಗ್ಗೆ ಅರಿವು ಮೂಡಲಿ, ಅವರ ಜೀವನ ಮತ್ತು ಸಾಧನೆಗಳಿಂದ ಪ್ರೇರಣೆ ದೊರೆಯಲಿ ಎಂಬುದು ಇದರ ಉದ್ದೇಶ. ಇದು ಓಚಿಡಿeಟಿಜಡಿಚಿಒoಜi ತಿebsiಣe ನಲ್ಲಿ e-booಞ ರೂಪದಲ್ಲಿ ಲಭ್ಯವಿದೆ.
ಇಂದು ದೇಶ ಮತ್ತು ಸಮಾಜದಲ್ಲಾಗುತ್ತಿರುವ ಸಕಾರಾತ್ಮಕ ಬದಲಾವಣೆಗಳ ಹಿಂದೆ ಸ್ತ್ರೀ ಶಕ್ತಿಯ ಮಹತ್ವಪೂರ್ಣ ಪಾತ್ರವಿದೆ. ಇಂದು ನಾವು ಮಹಿಳಾ ಸಶಕ್ತೀಕರಣದ ಬಗ್ಗೆ ಮಾತನಾಡುತ್ತಿರುವಾಗ ಒಂದು ರೈಲು ನಿಲ್ದಾಣದ ಬಗ್ಗೆ ಪ್ರಸ್ತಾಪಿಸಬಯಸುತ್ತೇನೆ. ಒಂದು ರೈಲು ನಿಲ್ದಾಣ ಮತ್ತು ಮಹಿಳಾ ಸಶಕ್ತೀಕರಣದ ಮಧ್ಯೆ ಏನು ಸಂಬಂಧ ಎಂದು ನೀವು ಆಲೋಚಿಸುತ್ತಿರಬಹುದು. ಮುಂಬೈಯ ಮಾತುಂಗಾ ರೈಲು ನಿಲ್ದಾಣದಲ್ಲಿ, ಭಾರತದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಸಂಪೂರ್ಣ ಮಹಿಳಾ ಕೆಲಸಗಾರರಿದ್ದಾರೆ. ಅದು ಅommeಡಿಛಿiಚಿಟ ಆeಠಿಚಿಡಿಣmeಟಿಣ ಆಗಿರಲಿ, ಖಚಿiಟತಿಚಿಥಿ Poಟiಛಿe ಆಗಿರಲಿ, ಖಿiಛಿಞeಣ ಅheಛಿಞiಟಿg ಆಗಿರಲಿ, ಂಟಿಟಿouಟಿಛಿiಟಿg ಆಗಿರಲಿ, Poiಟಿಣ Peಡಿsoಟಿ ಆಗಿರಲಿ- ಎಲ್ಲ ವಿಭಾಗಗಳಲ್ಲಿ ಮಹಿಳಾ ಸಿಬ್ಬಂದಿ ಪೂರ್ತಿ 40 ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಇದ್ದಾರೆ. ಈ ಬಾರಿ ಗಣರಾಜ್ಯೋತ್ಸವದ ಪೆರೇಡ್ ನೋಡಿದ ನಂತರ ಬಹಳಷ್ಟು ಜನರು ಟ್ವಿಟ್ಟರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಃSಈ ಃiಞeಡಿ ಅoಟಿಣiಟಿgeಟಿಣ ನಲ್ಲಿ ಎಲ್ಲ ಮಹಿಳೆಯರು ಭಾಗವಹಿಸಿದ ವಿಶೇಷತೆ ಬಗ್ಗೆ ಬರೆದಿದ್ದಾರೆ. ಮಹಿಳೆಯರೇ ಸಾಹಸಮಯ ಪ್ರದರ್ಶನ ನೀಡುತ್ತಿದ್ದರು ಮತ್ತು ಆ ದೃಶ್ಯ ವಿದೇಶದಿಂದ ಬಂದ ಅತಿಥಿಗಳೂ ಆಶ್ಚರ್ಯಗೊಳ್ಳುವಂತೆ ಮಾಡಿತು. ಸಶಕ್ತೀಕರಣ ಸ್ವಾವಲಂಬನೆಯ ಒಂದು ರೂಪವಾಗಿದೆ. ಇಂದು ನಮ್ಮ ಸ್ತ್ರೀಶಕ್ತಿ ನಾಯಕತ್ವ ವಹಿಸುತ್ತಿದೆ.
ಸ್ವಾವಲಂಬಿಗಳಾಗುತ್ತಿದ್ದಾರೆ. ಇದೇ ರೀತಿ ಛತ್ತೀಸ್ಘಡದ ಬುಡಕಟ್ಟು ಜನಾಂಗದ ಮಹಿಳೆಯರೂ ಅದ್ಭುತ ಸಾಧನೆ ಮಾಡಿರುವುದು ನನಗೆ ನೆನಪಾಗುತ್ತಿದೆ. ಅವರು ಒಂದು ಹೊಸ ಉದಾಹರಣೆಯನ್ನು ಮುಂದಿಟ್ಟಿದ್ದಾರೆ. ಬುಡಕಟ್ಟು ಜನಾಂಗದವರ ಬಗ್ಗೆ ಮಾತಾಡಿದಾಗ ಎಲ್ಲರ ಮನದಲ್ಲಿ ಒಂದು ಸ್ಪಷ್ಟ ಚಿತ್ರ ಮೂಡಿಬರುತ್ತದೆ. ಅದರಲ್ಲಿ ಕಾಡು, ಬೆಟ್ಟ, ಅಲ್ಲಿ ತಲೆಯ ಮೇಲೆ ಭಾರ ಹೊತ್ತು ನಡೆಯುತ್ತಿರುವ ಮಹಿಳೆಯರು ಕಂಡು ಬರುತ್ತಾರೆ. ಆದರೆ ಛತ್ತೀಸ್ಘಡದ ಈ ಬುಡಕಟ್ಟು ಜನಾಂಗದ ಮಹಿಳೆಯರು, ಸ್ತ್ರೀ ಶಕ್ತಿ, ಒಂದು ಹೊಸ ಚಿತ್ರ ಮೂಡುವಂತೆ ಮಾಡಿದ್ದಾರೆ. ಛತ್ತೀಸ್ಘಡದ ಮಾವೋವಾದಿ ಪ್ರಭಾವವಿರುವಂಥ ದಾಂತೇವಾಡ ಪ್ರದೇಶದಲ್ಲಿ ಹಿಂಸೆ, ಅತ್ಯಾಚಾರ, ಬಂದೂಕು, ಪಿಸ್ತೂಲು, ಬಾಂಬ್ ಮುಂತಾದವುಗಳ ಮೂಲಕ ಮಾವೋವಾದಿಗಳು ಒಂದು ಭಯಾನಕ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇಂಥ ಭಯಾನಕ ವಾತಾವರಣದಲ್ಲೂ ಬುಡಕಟ್ಟು ಮಹಿಳೆಯರು ಇ-ಖiಛಿಞshಚಿತಿ ಚಾಲನೆ ಮೂಲಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಬಹಳಷ್ಟು ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ 3 ಲಾಭಗಳಾಗುತ್ತಿವೆ. ಒಂದೆಡೆ ಸ್ವ ಉದ್ಯೋಗ ಅವರನ್ನು ಸಶಕ್ತರನ್ನಾಗಿಸಿದರೆ, ಇನ್ನೊಂದೆಡೆ ಮಾವೋವಾದಿ ಪ್ರಭಾವವಿರುವ ಪ್ರದೇಶದ ಚಿತ್ರಣ ಕೂಡಾ ಬದಲಾಗುತ್ತಿದೆ. ಇದೆಲ್ಲದರ ಜೊತೆಗೆ ಪರಿಸರ ಸಂರಕ್ಷಣೆ ಕೆಲಸಕ್ಕೂ ಇಲ್ಲಿ ಶಕ್ತಿ ಲಭಿಸುತ್ತಿದೆ. ಇಲ್ಲಿಯ ಜಿಲ್ಲಾಡಳಿತಕ್ಕೂ ಅಭಿನಂದಿಸಬಯಸುತ್ತೇನೆ. ಅನ್ಮದಾನ ಮಂಜೂರು ಮಾಡುವುದರಿಂದ ಹಿಡಿದು ತರಬೇತಿ ನೀಡುವವರೆಗೂ ಜಿಲ್ಲಾಡಳಿತ ಈ ಮಹಿಳೆಯರ ಸಫಲತೆಯಲ್ಲಿ ಮಹತ್ವ ಪೂರ್ಣ ಪಾತ್ರ ನಿರ್ವಹಿಸಿದೆ.
ಏನೋ ಒಂದು ವಿಶೇಷ ಅಂಶ ಇದೆ, ನಮ್ಮ ವ್ಯಕ್ತಿತ್ವ ನಶಿಸಿಹೋಗುವುದಿಲ್ಲ ಎಂದು ಜನರು ಮಾತನಾಡುವುದನ್ನು ಯಾವಾಗಲೂ ನಾವು ಕೇಳುತ್ತಾ ಬಂದಿದ್ದೇವೆ. ಅದು ಏನು? ಅದೇನೆಂದರೆ ಈಟexibiಟiಣಥಿ ಹೊಂದಿಕೊಳ್ಳ್ಳುವಿಕೆ – ಖಿಡಿಚಿಟಿsಜಿoಡಿmಚಿಣioಟಿ ಪರಿವರ್ತನೆ. ಯಾವುದು ಸಮಕಾಲೀನವಲ್ಲವೋ ಅದನ್ನು ಬಿಟ್ಟು ಬಿಡುವುದು, ಯಾವುದು ಅವಶ್ಯಕವೋ ಅದರ ಸುಧಾರಣೆಯನ್ನು ಸ್ವೀಕರಿಸುವುದು. ಸ್ವಯಂ ಸುಧಾರಣೆಯ ನಿರಂತರ ಪ್ರಯತ್ನ, Seಟಜಿ-ಅoಡಿಡಿeಛಿಣioಟಿ ಎಂಬುದು ಭಾರತೀಯ ಪರಂಪರೆಯಾಗಿದೆ, ಇಂಥ ಸಂಸ್ಕøತಿ ನಮಗೆ ಬಳುವಳಿಯಾಗಿ ಲಭಿಸಿದೆ. Seಟಜಿ ಅoಡಿಡಿeಛಿಣiಟಿg ಒeಛಿhಚಿಟಿism ಯಾವುದೇ ಸಮಾಜದ ಮತ್ತು ಅದರ ಜೀವನಶೈಲಿಯ ಹೆಗ್ಗುರುತಾಗಿದೆ. ನಮ್ಮ ದೇಶದಲ್ಲಿ ಸಮಾಜದ ಅನಿಷ್ಟ ಪದ್ಧತಿಗಳು ಮತ್ತು ರೀತಿ ನೀತಿಗಳ ವಿರುದ್ಧ ಸಹಸ್ರಾರು ವರ್ಷಗಳಿಂದ ವ್ಯಕ್ತಿಗತವಾಗಿ ಸಾಮಾಜಿಕವಾಗಿ ಪ್ರಯತ್ನಗಳು ನಡೆದೇ ಇವೆ. ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಒಂದು ರೋಚಕ ಘಟನೆ ನಡೆಯಿತು. ರಾಜ್ಯದ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಬೇರು ಸಹಿತ ಕಿತ್ತೊಗೆಯಲು 13 ಸಾವಿರ ಕ್ಕೂ ಹೆಚ್ಚು ಕಿಲೊ ಮೀಟರ್ ಉದ್ದದ ವಿಶ್ವದಲ್ಲೇ ಅತಿ ದೊಡ್ಡ ಮಾನವ ಸರಪಳಿ ಊumಚಿಟಿ ಅhಚಿiಟಿ ಅನ್ನು ನಿರ್ಮಿಸಲಾಗಿತ್ತು. ಈ ಆಂದೋಲನದ ಮೂಲಕ ಜನರಲ್ಲಿ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಲಾಯಿತು. ಬಾಲ್ಯ ವಿವಾಹ ಮತ್ತು ವರದಕ್ಷಿಣೆಯಂಥ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಲು ಸಂಪೂರ್ಣ ರಾಜ್ಯ ಪಣ ತೊಟ್ಟಿತು. ಮಕ್ಕಳು, ವೃದ್ಧರು, ಹುಮ್ಮಸ್ಸಿನ ನವ ಯುವಕರು, ಮಾತೆಯರು, ಸೋದರಿಯರು ಹೀಗೆ ಎಲ್ಲರೂ ಈ ಯುದ್ಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪಟ್ನಾದ ಐತಿಹಾಸಿಕ ಗಾಂಧೀ ಮೈದಾನದಿಂದ ಆರಂಭವಾದ ಮಾನವ ಸರಪಳಿ ರಾಜ್ಯದ ಗಡಿಗಳವರೆಗೆ ತುಂಡರಿಸದೇ ಬೆಸೆಯುತ್ತಾ ಹೋಯಿತು.
ಸಮಾಜದ ಎಲ್ಲರಿಗೂ ನಿಜವಾದ ಅರ್ಥದಲ್ಲಿ ಅಭಿವೃದ್ಧಿಯ ಲಾಭವಾಗಬೇಕೆಂದಲ್ಲಿ ನಮ್ಮ ಸಮಾಜ ಅನಿಷ್ಟ ಪದ್ಧತಿಗಳಿಂದ ಮುಕ್ತಗೊಳ್ಳಬೇಕು. ಬನ್ನಿ ನಾವೆಲ್ಲ ಸೇರಿ ಈ ಅನಿಷ್ಟ ಪದ್ಧತಿಗಳಿಂದ ಸಮಾಜವನ್ನು ಮುಕ್ತಗೊಳಿಸೋಣ ಎಂದು ಪಣ ತೊಡೋಣ. ಅಲ್ಲದೆ, ಒಂದು ನವ ಭಾರತ ಹಾಗೂ ಸಶಕ್ತ, ಸಮರ್ಥ ಭಾರತದ ನಿರ್ಮಾಣ ಮಾಡೋಣ. ನಾನು ಬಿಹಾರದ ಜನತೆ, ಆ ರಾಜ್ಯದ ಮುಖ್ಯಮಂತ್ರಿಗಳು, ಅಲ್ಲಿಯ ಅಧಿಕಾರೀ ವರ್ಗ ಮತ್ತು ಮಾನವ ಸರಪಳಿಯಲ್ಲಿ ಪಾಲ್ಗೊಂಡ ಪ್ರತಿ ವ್ಯಕ್ತಿಯನ್ನು ಅವರು ಸಮಾಜ ಕಲ್ಯಾಣಕ್ಕಾಗಿ ಇಂಥ ವಿಶೇಷ ಮತ್ತು ವ್ಯಾಪಕವಾದ ಕಾರ್ಯಕ್ಕೆ ಮುಂದಡಿ ಇರಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕರ್ನಾಟಕದ ಮೈಸೂರಿನ ಶ್ರೀಯುತ ದರ್ಶನ್ ಅವರು – ಅವರ ತಂದೆಯ ಚಿಕಿತ್ಸೆಗಾಗಿ ತಿಂಗಳಿಗೆ ಔಷಧಿಯ ಖರ್ಚು 6 ಸಾವಿರ ರೂಪಾಯಿಗಳಾಗುತ್ತಿತ್ತು, ಅವರಿಗೆ ಮೊದಲು ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಬಗ್ಗೆ ಮಾಹಿತಿ ಇರಲಿಲ್ಲ, ಆದರೆ ಈಗ ಅವರಿಗೆ ಜನೌಷಧಿ ಕೇಂದ್ರದ ಬಗ್ಗೆ ಮಾಹಿತಿ ಸಿಕ್ಕಿದೆ ಮತ್ತು ಅವರು ಅಲ್ಲಿಂದ ಔಷಧಿಗಳನ್ನು ಖರೀದಿ ಮಾಡಿದ್ದರಿಂದ ಅವರ ಔಷಧಿಯ ಖರ್ಚು ಶೇಕಡಾ 75 ರಷ್ಟು ಕಡಿಮೆಯಾಗಿದೆ ಎಂದು ಒಥಿಉov ನಲ್ಲಿ ಬರೆದಿದ್ದಾರೆ. ನಾನು ಇದರ ಬಗ್ಗೆ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಬೇಕು ಮತ್ತು ಅದರಿಂದ ಹೆಚ್ಚು ಹೆಚ್ಚು ಜನರಿಗೆ ಇದರ ಬಗ್ಗೆ ಮಾಹಿತಿ ದೊರಕಿ ಇದರ ಲಾಭವನ್ನು ಅವರು ಪಡೆದುಕೊಳ್ಳುವಂತಾಗಬೇಕು ಎನ್ನುವ ಇಚ್ಚೆಯನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಕೆಲವು ಸಮಯದಿಂದ ಬಹಳ ಜನ ನನಗೆ ಈ ವಿಷಯದ ಬಗ್ಗೆ ಬರೆಯುತ್ತಿದ್ದರು ಮತ್ತು ಹೇಳುತ್ತಿದ್ದರು. ನಾನು ಈ ಯೋಜನೆಯ ಲಾಭ ಪಡೆದ ಕೆಲವು ಜನರ ವೀಡಿಯೊಗಳನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ ಮತ್ತು ಇಂತಹ ಮಾಹಿತಿ ಸಿಕ್ಕಾಗ ತುಂಬಾ ಸಂತೋಷವಾಗುತ್ತದೆ ಮತ್ತು ಸಾಕಷ್ಟು ತೃಪ್ತಿ ಸಿಗುತ್ತದೆ. ಯಾವುದು ಅವರಿಗೆ ಸಿಕ್ಕಿದೆಯೋ ಅದು ಬೇರೆಯವರಿಗೂ ಸಹ ಸಿಗಲಿ ಎನ್ನುವ ವಿಚಾರ ಶ್ರೀಯುತ ದರ್ಶನ್ ರವರ ಮನದಲ್ಲಿ ಮೂಡಿರುವುದು ಕೂಡ ನನಗೆ ತುಂಬಾ ಇಷ್ಟವಾಯಿತು. ಈ ಯೋಜನೆಯ ಹಿಂದೆ ಇರುವ ಉದ್ದೇಶ – ಅರೋಗ್ಯ ರಕ್ಷಣೆಯನ್ನು ಕೈಗೆಟುಕುವಂತೆ ಮಾಡುವುದು ಮತ್ತು ಸುಲಭವಾಗಿ ಜೀವನ ಮಾಡುವಂತೆ ಪ್ರೋತ್ಸಾಹಿಸುವುದು. ಜನೌಷಧಿ ಕೇಂದ್ರಗಳಲ್ಲಿ ಸಿಗುವ ಔಷಧಿಗಳು ಮಾರುಕಟ್ಟೆಯಲ್ಲಿ ಮಾರಲ್ಪಡುವ bಡಿಚಿಟಿಜeಜ ಔಷಧಿಗಳಿಗಿಂತ ಸುಮಾರು ಶೇಕಡಾ 50 ರಿಂದ 90 ರಷ್ಟು ಅಗ್ಗವಾಗಿವೆ. ಇದರಿಂದ ಜನ ಸಾಮಾನ್ಯರು, ವಿಶೇಷವಾಗಿ ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳುವ ಹಿರಿಯ ನಾಗರೀಕರಿಗೆ ಅರ್ಥಿಕವಾಗಿ ತುಂಬಾ ಸಹಾಯವಾಗುತ್ತದೆ ಮತ್ತು ಬಹಳಷ್ಟು ಉಳಿತಾಯವಾಗುತ್ತದೆ. ಇಲ್ಲಿ ಖರೀದಿಸಲ್ಪಡುವ geಟಿeಡಿiಛಿ ಔಷಧಿಗಳು ವಿಶ್ವ ಆರೋಗ್ಯ ಸಂಸ್ಥೆ ವಿಧಿಸುವ ಮಾನದಂಡಗಳಿಗೆ ಅನುಗುಣವಾಗಿರುತ್ತವೆ. ಇದೇ ಕಾರಣದಿಂದಾಗಿ ಒಳ್ಳೆಯ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಇಂದು ದೇಶದೆಲ್ಲೆಡೆ 3 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಸ್ಥಾಪಿಸಲ್ಪಟ್ಟಿವೆ. ಇದರಿಂದ ಔಷಧಿಗಳು ಬರೀ ಕಡಿಮೆ ಬೆಲೆಯಲ್ಲಿ ದೊರೆಯುವುದಷ್ಟೇ ಅಲ್ಲ, ಸ್ವಯಂ ಉದ್ಯಮಿಗಳಿಗೆ ಕೂಡ ಉದ್ಯೋಗದ ಹೊಸ ಅವಕಾಶಗಳು ಹುಟ್ಟಿಕೊಳ್ಳುತ್ತಿವೆ. ಕಡಿಮೆ ದರದ ಔಷಧಿಗಳು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಮತ್ತು ಆಸ್ಪತ್ರೆಗಳ ‘ಅಮೃತ್ sಣoಡಿes’ ಗಳಲ್ಲಿ ದೊರೆಯುತ್ತವೆ. ಇದೆಲ್ಲದರೆ ಹಿಂದಿನ ಒಂದೇ ಉದ್ದೇಶ – ದೇಶದ ಬಡವರಲ್ಲಿ ಬಡವನಾದ ವ್ಯಕ್ತಿಗೆ ಸಹ ಗುಣಮಟ್ಟದ ಮತ್ತು ಕೈಗೆಟುಕುವ ಅರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡುವುದು ಮತ್ತು ಅದರಿಂದ ಒಂದು ಸ್ವಸ್ಥ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸುವುದು.
ನನ್ನ ಪ್ರೀತಿಯ ದೇಶವಾಸಿಗಳೇ, ಮಹಾರಾಷ್ಟ್ರದ ಶ್ರೀಯುತ ಮಂಗೇಶ್ ಅವರು ಓಚಿಡಿeಟಿಜಡಿಚಿ ಒoಜi ಒobiಟe ಂಠಿಠಿ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಆ ಫೋಟೋ ಹೇಗಿತ್ತೆಂದರೆ ನನ್ನ ಗಮನ ಆ ಕಡೆಗೆ ಸೆಳೆಯುತ್ತಿತ್ತು. ಆ ಫೋಟೋ ಹೇಗಿತ್ತೆಂದರೆ, ಅದರಲ್ಲಿ ಒಬ್ಬ ಮೊಮ್ಮಗ ತನ್ನ ಅಜ್ಜನ ಜೊತೆ ‘ಅಟeಚಿಟಿ ಒoಡಿಟಿಚಿ ಖiveಡಿ’ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸುತ್ತಿದ್ದ. ಅಕೋಲಾದ ನಾಗರೀಕರು ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಮೋರ್ನಾ ನದಿಯನ್ನು ಶುಚಿಗೊಳಿಸಲು ಸ್ವಚ್ಚತಾ ಅಭಿಯಾನವನ್ನು ಆಯೋಜಿಸಿದ್ದರು ಎಂದು ನನಗೆ ತಿಳಿದು ಬಂತು. ಮೋರ್ನಾ ನದಿಯು ಮೊದಲು 12 ತಿಂಗಳೂ ಹರಿಯುತ್ತಿತ್ತು. ಆದರೆ ಈಗ ಅದು ಕೆಲ ಕಾಲ ಮಾತ್ರವಾಗಿದೆ. ಇನ್ನೊಂದು ನೋವಿನ ಸಮಾಚಾರವೆಂದರೆ ನದಿಯು ಸಂಪೂರ್ಣವಾಗಿ ನೀರಿನ ಕಳೆ, ಕಾಡಿನ ಹುಲ್ಲಿನಿಂದ ತುಂಬಿಹೋಗಿತ್ತು. ನದಿ ಮತ್ತು ಅದರ ದಡದಲ್ಲಿ ಸಾಕಷ್ಟು ಕಸವನ್ನು ಎಸೆಯಲಾಗುತ್ತಿತ್ತು. ಒಂದು ಕಾರ್ಯತಂತ್ರ ರೂಪಿಸಿ ಅದರಂತೆ ಮಕರ ಸಂಕ್ರಾಂತಿಗೆ ಒಂದು ದಿನ ಮುಂಚೆ ಜನವರಿ 13 ರಂದು ‘ಒissioಟಿ ಅಟeಚಿಟಿ ಒoಡಿಟಿಚಿ’ ದ ಮೊದಲ ಹಂತದ ಅಂಗವಾಗಿ, 4 ಕಿಲೋಮೀಟರ್ ಗಳಷ್ಟು ಜಾಗದಲ್ಲಿ 14 ಸ್ಥಳಗಳಲ್ಲಿ ಮೋರ್ನಾ ನದಿಯ ದಡದ ಎರಡೂ ದಂಡೆಗಳ ಸ್ವಚ್ಚತೆಯನ್ನು ಮಾಡಲಾಯಿತು. ‘ಒissioಟಿ ಅಟeಚಿಟಿ ಒoಡಿಟಿಚಿ’ ಎಂಬ ಈ ಅತ್ಯುತ್ತಮ ಕಾರ್ಯದಲ್ಲಿ ಅಕೋಲಾದ 6 ಸಾವಿರಕ್ಕೂ ಅಧಿಕ ನಾಗರೀಕರು, ನೂರಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು, ಕಾಲೇಜುಗಳು, ವಿದ್ಯಾರ್ಥಿಗಳು, ಮಕ್ಕಳು, ಹಿರಿಯರು, ತಾಯಿಯರು, ಸೋದರಿಯರು – ಹೀಗೆ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಿದರು. 20 ಜನವರಿ 2018 ರಂದು ಸಹ ಈ ಸ್ವಚ್ಚತಾ ಅಭಿಯಾನವು ಅದೇ ರೀತಿ ಮುಂದುವರೆಯಿತು ಮತ್ತು ಮೋರ್ನಾ ನದಿಯು ಸಂಪೂರ್ಣವಾಗಿ ಸ್ವಚ್ಚವಾಗುವವರೆಗೆ ಈ ಅಭಿಯಾನವು ಪ್ರತಿ ಶನಿವಾರದ ಬೆಳಗ್ಗೆ ನಡೆಯುತ್ತದೆ ಎಂದು ನನಗೆ ತಿಳಿಸಲಾಗಿದೆ. ಇದು, ವ್ಯಕ್ತಿಯು ಏನನ್ನಾದರೂ ಮಾಡಲು ನಿರ್ಧರಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲವೆಂಬುವುದನ್ನು ತೋರಿಸುತ್ತದೆ. ಜನಾಂದೋಲನದ ಮುಖಾಂತರ ದೊಡ್ದ ದೊಡ್ಡ ಬದಲಾವಣೆಗಳನ್ನು ತರಬಹುದು. ನಾನು ಅಕೋಲಾದ ಜನರಿಗೆ, ಅಲ್ಲಿಯ ಜಿಲ್ಲೆ ಮತ್ತು ನಗರ-ನಿಗಮದ ಆಡಳಿತಕ್ಕೆ, ಈ ಕಾರ್ಯಕ್ರಮವನ್ನು ಜನಾಂದೋಲನವನ್ನಾಗಿ ಮಾಡಲು ಕೈಜೋಡಿಸಿದ ಎಲ್ಲಾ ನಾಗರೀಕರಿಗೂ ನಿಮ್ಮ ಈ ಪ್ರಯತ್ನಕ್ಕೆ ತುಂಬಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ನಿಮ್ಮ ಈ ಪ್ರಯತ್ನವು ದೇಶದ ಬೇರೆ ಜನರನ್ನು ಸಹ ಪ್ರೇರೇಪಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ದಿನಗಳಲ್ಲಿ ಪದ್ಮ ಪುರಸ್ಕಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳನ್ನು ನೀವೂ ಕೊಡ ಕೇಳಿರಬಹುದು. ಈ ವಿಷಯವು ದಿನಪತ್ರಿಕೆಗಳಲ್ಲಿ, ಖಿಗಿ ಯಲ್ಲಿ ಕೂಡ ಗಮನವನ್ನು ಸೆಳೆದಿರುತ್ತದೆ. ಆದರೆ ನೀವು ಸ್ವಲ್ಪ ಗಮನವಿಟ್ಟು ನೋಡಿದರೆ ಹೆಮ್ಮೆಪಡುತ್ತೀರಿ. ಎಂತೆಂಥಹ ಮಹಾನ್ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ ಎಂದು ಹೆಮ್ಮೆ ಪಡುತ್ತೀರಿ. ಇಂದು ನಮ್ಮ ದೇಶದಲ್ಲಿ ಸಾಮಾನ್ಯ ವ್ಯಕ್ತಿಯೂ ಸಹ ಯಾವುದೇ ಶಿಫಾರಸು ಇಲ್ಲದೆ ಅಷ್ಟು ಎತ್ತರಕ್ಕೆ ತಲುಪುತ್ತಿದ್ದಾರೆ ಎನ್ನುವ ಬಗ್ಗೆ ಕೂಡ ಹೆಮ್ಮೆ ಮೂಡುತ್ತದೆ. ಪ್ರತಿ ವರ್ಷವೂ ಪದ್ಮ ಪುರಸ್ಕಾರ ನೀಡುವ ಪರಂಪರೆ ಇದೆ, ಆದರೆ ಹಿಂದಿನ 3 ವರ್ಷಗಳಿಂದ ಇದರ ಪ್ರಕ್ರಿಯೆಯು ಬದಲಾಗಿದೆ. ಈಗ ಯಾವುದೇ ನಾಗರೀಕನೂ ಯಾರನ್ನೇ ಅದರೂ ನಾಮನಿರ್ದೇಶನ ಮಾಡಬಹುದು. ಸಂಪೂರ್ಣ ಪ್ರಕ್ರಿಯೆ oಟಿಟiಟಿe ಆಗಿರುವುದರಿಂದ ಪಾರದರ್ಶಕತೆ ಬಂದಿದೆ. ಒಂದು ರೀತಿಯಲ್ಲಿ ಈ ಪುರಸ್ಕಾರಗಳ ಆಯ್ಕೆ ಪ್ರಕ್ರಿಯೆಯು ಪೂರ್ಣವಾಗಿ ರೂಪಾಂತರ ಹೊಂದಿದೆ. ತುಂಬಾ ಸಾಮಾನ್ಯ ಜನರಿಗೆ ಸಹ ಪದ್ಮ ಪುರಸ್ಕಾರಗಳು ಬರುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಸಾಮಾನ್ಯವಾಗಿ ದೊಡ್ಡ ದೊಡ್ಡ ನಗರಗಳಲ್ಲಿ, ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ, ಸಭೆ ಸಮಾರಂಭಗಳಲ್ಲಿ ಕಾಣಿಸಿ ಕೊಳ್ಳದೇ ಇರುವ ಜನರಿಗೆ ಕೂಡ ಪದ್ಮ ಪುರಸ್ಕಾರಗಳನ್ನು ನೀಡಲಾಗಿದೆ. ಈಗ ಪುರಸ್ಕಾರ ಕೊಡುವುದಕ್ಕೆ ವ್ಯಕ್ತಿಯ ಪರಿಚಯವಲ್ಲ, ಅವರ ಕೆಲಸದ ಮಹತ್ವ ಹೆಚ್ಚಾಗುತ್ತಾ ಹೋಗುತ್ತಿದೆ. ಶ್ರೀಯುತ ಅರವಿಂದ ಗುಪ್ತ ಅವರ ಬಗ್ಗೆ ನೀವು ಕೇಳಿರಬಹುದು. ಅವರು IIಖಿ ಕಾನ್ಪುರ್ ನ ವಿದ್ಯಾರ್ಥಿಯಾಗಿದ್ದರು ಮತ್ತು ಮಕ್ಕಳಿಗಾಗಿ ಆಟಿಕೆಗಳನ್ನು ಮಾಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು ಎಂದು ಕೇಳಿ ನಿಮಗೆ ಸಂತೋಷವಾಗಬಹುದು. ಅವರು 4 ದಶಕಗಳಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ವೈಚಾರಿಕತೆ ಬೆಳೆಯಲಿ ಎಂಬ ಉದ್ದೇಶದಿಂದ ತ್ಯಾಜ್ಯ ವಸ್ತುಗಳಿಂದ ಆಟಿಕೆಗಳನ್ನು ಮಾಡುತ್ತಿದ್ದಾರೆ. ತ್ಯಾಜ್ಯ ವಸ್ತುಗಳಿಂದ ವೈಜ್ಞಾನಿಕ ಪ್ರಯೋಗಗಳ ಕಡೆ ಮಕ್ಕಳು ಪ್ರೇರಿತರಾಗಲಿ ಎಂಬುದು ಅವರ ಪ್ರಯತ್ನ. ಇದಕ್ಕಾಗಿ ದೇಶದೆಲ್ಲೆಡೆ 3 ಸಾವಿರ ಶಾಲೆಗಳಿಗೆ ಹೋಗಿ 18 ಭಾಷೆಗಳಲ್ಲಿ ತಯಾರಿಸಿರುವ ಫಿಲಂ ತೋರಿಸಿ ಮಕ್ಕಳನ್ನು ಪ್ರೇರೇಪಿಸುತ್ತಿದ್ದಾರೆ. ಎಂತಹ ಅದ್ಭುತ ಜೀವನ, ಎಂತಹ ಅದ್ಭುತ ಸಮರ್ಪಣೆ!! ಇದೇ ರೀತಿಯ ಒಂದು ಕಥೆ ಕರ್ನಾಟಕದ ಸೀತವ್ವ ಜೋಡಟ್ಟಿಯವರದು. ಇವರನ್ನು ‘ಮಹಿಳಾ ಸಬಲೀಕರಣದ ದೇವಿ’ ಎಂದು ಸುಮ್ಮನೆ ಕರೆದಿಲ್ಲ. ಕಳೆದ 3 ದಶಕಗಳಿಂದ ಬೆಳಗಾವಿಯಲ್ಲಿ ಲೆಕ್ಕವಿಲ್ಲದಷ್ಟು ಮಹಿಳೆಯರ ಜೀವನ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರನ್ನು ಅವರ 7 ನೇ ವರ್ಷ ವಯಸ್ಸಿನಲ್ಲಿಯೇ ದೇವದಾಸಿಯನ್ನಾಗಿ ಮಾಡಲಾಗಿತ್ತು. ಆದರೆ ಅವರು ದೇವದಾಸಿಯರ ಕಲ್ಯಾಣಕ್ಕೋಸ್ಕರ ತಮ್ಮ ಸಂಪೂರ್ಣ ಜೀವನವನ್ನು ಮುಡುಪಾಗಿಟ್ಟರು. ಇಷ್ಟೇ ಅಲ್ಲ, ಇವರು ದಲಿತ ಮಹಿಳೆಯರ ಕಲ್ಯಾಣಕ್ಕಾಗಿ ಸಹಾ ಅತ್ಯದ್ಭುತ ಕಾರ್ಯವನ್ನು ಮಾಡಿದ್ದಾರೆ. ಮಧ್ಯ ಪ್ರದೇಶದ ಭಜ್ಜೂ ಶ್ಯಾಮ್ ಅವರ ಹೆಸರನ್ನು ನೀವು ಕೇಳಿರಬಹುದು. ಶ್ರೀಯುತ ಭಜ್ಜೂ ಶ್ಯಾಮ್ ಅವರು ಹುಟ್ಟಿದ್ದು ಒಂದು ಬಡ, ಬುಡಕಟ್ಟು ಕುಂಟುಂಬದಲ್ಲಿ. ಅವರು ಜೀವನೋಪಾಯಕ್ಕಾಗಿ ಸಾಮಾನ್ಯವಾದ ಕೆಲಸ ಮಾಡುತ್ತಿದ್ದರು, ಆದರೆ ಅವರಿಗೆ ಪಾರಂಪರಿಕ ಬುಡಕಟ್ಟು ವರ್ಣಚಿತ್ರ ಬಿಡಿಸುವ ಒಂದು ಹವ್ಯಾಸವಿತ್ತು. ಇಂದು ಅದೇ ಹವ್ಯಾಸದ ಕಾರಣದಿಂದ ಬರೀ ಭಾರತದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಅವರಿಗೆ ಗೌರವವಿದೆ. ನೆದರ್ಲ್ಯಾಂಡ್, ಜರ್ಮನಿ, ಇಂಗ್ಲೆಂಡ್, ಇಟಲಿ ಯಂತಹ ಅನೇಕ ದೇಶಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ಆಗಿದೆ. ವಿದೇಶಗಳಲ್ಲಿ ಭಾರತದ ಹೆಸರನ್ನು ಪ್ರಕಾಶಿಸುವಂತೆ ಮಾಡಿದ ಭಜ್ಜೂ ಶ್ಯಾಮ್ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.
ಕೇರಳದ ಆದಿವಾಸಿ ಮಹಿಳೆ ಲಕ್ಷ್ಮಿ ಕುಟ್ಟಿ ಯವರ ಕಥೆ ಕೇಳಿ ನೀವು ಆಶ್ಚರ್ಯಚಕಿತರಾಗುತ್ತೀರಿ. ಲಕ್ಷ್ಮಿಕುಟ್ಟಿ ಕಲ್ಲಾರ್ ನಲ್ಲಿ ಶಿಕ್ಷಕಿಯಾಗಿದ್ದಾರೆ ಮತ್ತು ಈಗಲೂ ಕೂಡ ದಟ್ಟ ಅರಣ್ಯದ ಮಧ್ಯದಲ್ಲಿ ಆದಿವಾಸಿ ಹಾಡಿಯಲ್ಲಿ ತಾಳೆ ಗರಿಗಳಿಂದ ಮಾಡಿದ ಗುಡಿಸಲಿನಲ್ಲಿ ವಾಸಿಸುತ್ತಾರೆ. ಅವರು ತಮ್ಮ ನೆನಪಿನ ಶಕ್ತಿಯಿಂದಲೇ 5 ನೂರು ಆಯುರ್ವೇದ ಔಷಧಿಗಳನ್ನು ಮಾಡಿದ್ದಾರೆ. ಗಿಡ ಮೂಲಿಕೆಗಳಿಂದ ಔಷಧಿ ಮಾಡಿದ್ದಾರೆ. ಹಾವಿನ ಕಡಿತಕ್ಕೆ ಬಳಸುವ ಔಷಧಿಯನ್ನು ತಯಾರಿಸುವುದರಲ್ಲಿ ಅವರು ಸಿದ್ಧಹಸ್ತರು. ಲಕ್ಷ್ಮಿಯವರು ತಮ್ಮ ಆಯುರ್ವೇದ ಔಷಧಗಳ ಜ್ಞಾನದಿಂದಾಗಿ ನಿರಂತರ ಸಮಾಜಸೇವೆ ಮಾಡುತ್ತಿದ್ದಾರೆ. ಈ ಅನಾಮಧೇಯ ಖ್ಯಾತರನ್ನು ಗುರುತಿಸಿ ಅವರ ಸಮಾಜಸೇವೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಇಂದು ಮತ್ತೊಂದು ಹೆಸರನ್ನು ಕೂಡ ಹೇಳಲು ನನಗೆ ಮನಸ್ಸಾಗಿದೆ. ಪಶ್ಚಿಮ ಬಂಗಾಳದ 75 ವರ್ಷದ ಸುಭಾಷಿಣಿ ಮಿಸ್ತ್ರಿ. ಅವರನ್ನೂ ಸಹ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಸುಭಾಷಿಣಿ ಮಿಸ್ತ್ರಿ ಎಂತಹ ಮಹಿಳೆ ಎಂದರೆ, ಆಸ್ಪತ್ರೆ ಕಟ್ಟಲು ಬೇರೆಯವರ ಮನೆಗಳಲ್ಲಿ ಪಾತ್ರೆ ತೊಳೆದರು, ತರಕಾರಿ ಮಾರಿದರು. ಅವರು 23 ವರ್ಷದವರಾಗಿದ್ದಾಗ ಸರಿಯಾದ ಚಿಕಿತ್ಸೆ ದೊರೆಯದೆ ಅವರ ಪತಿಯ ಮರಣವಾಗಿತ್ತು. ಇದೇ ಘಟನೆಯು ಅವರನ್ನು ಬಡವರಿಗಾಗಿ ಆಸ್ಪತ್ರೆ ಕಟ್ಟಿಸುವಂತೆ ಪ್ರೇರೇಪಿಸಿತು. ಇಂದು ಇವರು ಕಠಿಣ ಪರಿಶ್ರಮದಿಂದ ಕಟ್ಟಿರುವ ಆಸ್ಪತ್ರೆಯಲ್ಲಿ ಸಾವಿರಾರು ಬಡವರಿಗೆ ಯಾವುದೇ ಶುಲ್ಕವಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಈ ಭೂಗರ್ಭದಲ್ಲಿ ಇಂತಹ ಎಷ್ಟೋ ವ್ಯಕ್ತಿಗಳಿದ್ದಾರೆ, ನಾರೀಮಣಿಗಳಿದ್ದಾರೆ, ಅವರು ಯಾರಿಗೂ ಗೊತ್ತಿಲ್ಲ, ಅವರನ್ನು ಯಾರೂ ಗುರುತು ಹಿಡಿಯುವುದಿಲ್ಲ ಎಂದು ನನಗೆ ಗೊತ್ತಿದೆ. ಇಂತಹ ವ್ಯಕ್ತಿಗಳನ್ನು ಗುರುತಿಸದೇ ಹೋದರೆ ಅದು ಸಮಾಜಕ್ಕೆ ಆಗುವ ನಷ್ಟ. ಪದ್ಮ ಪುರಸ್ಕಾರ ಒಂದು ಮಾಧ್ಯಮ; ಆದರೆ ನಮ್ಮ ಸುತ್ತ ಮುತ್ತ ಸಮಾಜಕ್ಕಾಗಿ ಜೀವಿಸುವವರು, ಸಮಾಜಕ್ಕಾಗಿ ಮುಡಿಪಾದವರು, ಒಂದಿಲ್ಲೊಂದು ವಿಶೇಷತೆಯನ್ನು ಗುರಿಯಾಗಿಸಿಕೊಂಡು ಜೀವನ ಪೂರ್ತಿ ಕೆಲಸ ಮಾಡುವವರು ಲಕ್ಷಾಂತರ ಜನರಿದ್ದಾರೆ ಎಂದು ನಾನು ದೇಶವಾಸಿಗಳಲ್ಲಿ ಹೇಳಬಯಸುತ್ತೇನೆ. ಕೆಲವೊಮ್ಮೆ ಅವರನ್ನು ಸಮಾಜದ ಮಧ್ಯದಲ್ಲಿ ತರಬೇಕು. ಅವರು ಪ್ರಶಸ್ತಿ, ಪುರಸ್ಕಾರಗಳಿಗೆ ಕೆಲಸ ಮಾಡುವವರಲ್ಲ ಆದರೆ ಅವರ ಕೆಲಸಗಳಿಂದ ನಮಗೆ ಪ್ರೇರಣೆ ಸಿಗುತ್ತದೆ. ಕೆಲವೊಮ್ಮೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಇಂತಹ ಜನರನ್ನು ಕರೆಸಿ ಅವರ ಅನುಭವಗಳನ್ನು ಕೇಳಿಸಿಕೊಳ್ಳಬೇಕು. ಪುರಸ್ಕಾರಗಳಿಗಿಂತ ಮಿಗಿಲಾಗಿ ಸಮಾಜಮುಖಿಯಾಗಿ ಕೂಡ ಸ್ವಲ್ಪ ಪ್ರಯತ್ನ ಇರಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿವರ್ಷ ಜನವರಿ 9 ನ್ನು ನಾವು ಭಾರತೀಯ ಪ್ರವಾಸಿ ದಿನವನ್ನಾಗಿ ಆಚರಿಸುತ್ತೇವೆ. ಪೂಜ್ಯ ಮಹಾತ್ಮಾ ಗಾಂಧಿಯವರು ಜನವರಿ 9 ರಂದೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದ್ದು. ಈ ದಿನವನ್ನು ನಾವು ಭಾರತ ಮತ್ತು ವಿಶ್ವದೆಲ್ಲೆಡೆ ಇರುವ ಭಾರತೀಯರ ಮಧ್ಯೆ ಬಿಡಿಸಲಾರದ ಬಂಧದ ಉತ್ಸವ ಆಚರಿಸುತ್ತೇವೆ. ಈ ವರ್ಷ ಭಾರತೀಯ ಪ್ರವಾಸೀ ದಿನದಂದು ನಾವು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದಕ್ಕೆ ವಿಶ್ವದೆಲ್ಲೆಡೆ ಇರುವ ಭಾರತೀಯ ಮೂಲದ ಎಲ್ಲಾ ಸಂಸದರು ಮತ್ತು ಮೇಯರ್ ಗಳನ್ನು ಆಹ್ವಾನಿಸಿದ್ದೆವು. ಆ ಕಾರ್ಯಕ್ರಮದಲ್ಲಿ ಮಲೇಷ್ಯಾ, ನ್ಯೂಜಿಲ್ಯಾಂಡ್, ಸ್ವಿಟ್ಜರ್ಲ್ಯಾಂಡ್, ಪೋರ್ಚುಗಲ್, ಮಾರಿಷಸ್, ಫಿಜಿ, ಟಾಂಜಾನಿಯಾ, ಕೀನ್ಯಾ, ಕೆನಡಾ, ಬ್ರಿಟನ್, ಸುರಿನಾಮ್, ದಕ್ಷಿಣ ಆಫ್ರಿಕಾ, ಅಮೇರಿಕಾ, ಇನ್ನೂ ಬಹಳಷ್ಟು ದೇಶಗಳಿಂದ ಎಲ್ಲೆಲ್ಲಿ ನಮ್ಮ ಭಾರತೀಯ ಮೂಲದ ಮೇಯರ್ ಗಳಿದ್ದಾರೆ, ಎಲ್ಲೆಲ್ಲಿ ಸಂಸದರಿದ್ದಾರೆ ಅವರೆಲ್ಲರೂ ಭಾಗವಹಿಸಿದ್ದರು ಎಂದು ತಿಳಿದು ನಿಮಗೂ ಸಂತೋಷವಾಗಬಹುದು. ವಿಭಿನ್ನ ದೇಶಗಳಲ್ಲಿ ಜೀವಿಸಿರುವ ಭಾರತೀಯ ಮೂಲದ ಜನರು ಆ ದೇಶದ ಸೇವೆಯನ್ನು ಮಾಡುತ್ತಲೇ ಇದ್ದಾರೆ ಜೊತೆ ಜೊತೆಗೆ ಅವರು ಭಾರತದ ಜೊತೆಗೆ ಕೂಡ ತಮ್ಮ ಬಲವಾದ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ನನಗೆ ಸಂತಸವಿದೆ. ಈ ಬಾರಿ ಯುರೋಪಿಯಾ ಸಂಘ, ಯುರೋಪಿಯನ್ ಯೂನಿಯನ್ ನನಗೆ ಕಳುಹಿಸಿಕೊಟ್ಟಿರುವ ಕ್ಯಾಲೆಂಡರ್ ನಲ್ಲಿ ಯುರೋಪ್ ನ ವಿಭಿನ್ನ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಉತ್ತಮ ರೀತಿಯಲ್ಲಿ ತೋರಿಸಿದ್ದಾರೆ. ಯುರೋಪ್ ನ ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಮೂಲ ಭಾರತೀಯರು – ಯಾರೋ ಸೈಬರ್ ಸೆಕ್ಯೂರಿಟಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇನ್ಯಾರೋ ಆಯುರ್ವೇದಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ, ಮಗದೊಬ್ಬರು ತಮ್ಮ ಸಂಗೀತದಿಂದ ಸಮಾಜದ ಮನಸ್ಸಿಗೆ ಮುದ ನೀಡುತ್ತಿದ್ದಾರೆ, ಮತ್ತಿನ್ಯಾರೋ ತಮ್ಮ ಕವಿತೆಗಳಿಂದ ಮುದ ನೀಡುತ್ತಿದ್ದಾರೆ. ಯಾರೋ ಹವಾಮಾನ ಬದಲಾವಣೆಯ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ, ಮತ್ಯಾರೋ ಭಾರತೀಯ ಗ್ರಂಥಗಳ ಮೇಲೆ ಕೆಲಸಮಾಡುತ್ತಿದ್ದಾರೆ. ಯಾರೋ ಟ್ರಕ್ ಚಲಾಯಿಸಿ ಗುರುದ್ವಾರಾ ಕಟ್ಟಿದರೆ, ಇನ್ಯಾರೋ ಮಸೀದಿ ಕಟ್ಟಿದ್ದಾರೆ. ಅಂದರೆ ನಮ್ಮ ಜನರು ಎಲ್ಲೇ ಇರಲಿ, ಅವರು ಅಲ್ಲಿಯ ಭೂಮಿಯನ್ನು ಏನಾದರೊಂದು ರೀತಿಯಲ್ಲಿ ಸುಸಜ್ಜಿತಗೊಳಿಸಿದ್ದಾರೆ. ಯುರೋಪಿಯನ್ ಯೂನಿಯನ್ ನ ಈ ಉಲ್ಲೇಖನೀಯ ಕಾರ್ಯಕ್ಕಾಗಿ, ಭಾರತೀಯ ಮೂಲದ ಜನರನ್ನು ಗುರುತಿಸಿ, ಅವರ ಮಾಧ್ಯಮದ ಮೂಲಕ ಜಗತ್ತಿನ ಎಲ್ಲ ಜನರಿಗೆ ಇದರ ಮಾಹಿತಿ ಕೊಟ್ಟಿದ್ದಕ್ಕಾಗಿ ನಾನು ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ.
ಜನವರಿ 30 ರಂದು ನಮಗೆಲ್ಲರಿಗೂ ಒಂದು ಹೊಸ ದಾರಿಯನ್ನು ತೋರಿಸಿದ ಪೂಜ್ಯ ಬಾಪೂ ರವರ ಪುಣ್ಯ ತಿಥಿ. ಆ ದಿನವನ್ನು ನಾವು ಹುತಾತ್ಮರ ದಿವಸವನ್ನಾಗಿ ಆಚರಿಸುತ್ತೇವೆ. ಆ ದಿನದಂದು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಮಹಾನ್ ಹುತಾತ್ಮರಿಗೆ 11 ಘಂಟೆಗೆ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಶಾಂತಿ ಮತ್ತು ಅಹಿಂಸೆಯ ಮಾರ್ಗ; ಇದೇ ಬಾಪೂ ರವರ ದಾರಿ. ಪೂಜ್ಯ ಬಾಪೂ ರವರು ಯಾವ ಆದರ್ಶಗಳನ್ನು ಪಾಲಿಸಿಕೊಂಡು ಬಾಳಿದರೋ, ಅವರು ಯಾವ ಮಾತುಗಳನ್ನು ನಮಗೆ ಹೇಳಿದರೋ, ಅದು ಭಾರತಕ್ಕೇ ಅಗಲಿ ಅಥವಾ ವಿಶ್ವಕ್ಕೇ ಅಗಲಿ, ವ್ಯಕ್ತಿಗೇ ಆಗಲಿ, ಅಥವಾ ಪರಿವಾರಕ್ಕೆ, ಸಮಾಜಕ್ಕೇ ಅಗಲಿ, ಇಂದಿಗೂ ಕೂಡ ಅತ್ಯಂತ ಪ್ರಸ್ತುತವಾಗಿದೆ. ಅವು ಬರೀ ಸಿದ್ಧಾಂತಗಳಾಗಿರಲಿಲ್ಲ. ವರ್ತಮಾನದಲ್ಲಿ ಕೂಡ ಬಾಪೂರವರ ಮಾತುಗಳು ಎಷ್ಟೊಂದು ಸತ್ಯವಾದವುಗಳು ಎಂದು ನಾವು ಪ್ರತಿ ಹಂತದಲ್ಲಿಯೂ ನೋಡುತ್ತಿದ್ದೇವೆ. ನಾವು ಬಾಪೂರವರ ದಾರಿಯಲ್ಲಿ ನಡೆಯೋಣ, ಎಷ್ಟು ಸಾಧ್ಯವೋ ಅಷ್ಟು ನಡೆಯೋಣ ಎಂದು ಸಂಕಲ್ಪ ಮಾಡಿದರೆ ಅದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಏನಿರಲು ಸಾಧ್ಯ?
ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ 2018 ರ ಶುಭಾಷಯಗಳನ್ನು ತಿಳಿಸುತ್ತಾ ನನ್ನ ಮಾತನ್ನು ಮುಗಿಸುತ್ತಿದ್ದೇನೆ. ಅನಂತಾನಂತ ಧನ್ಯವಾದಗಳು.
ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ.
ಮನದ ಮಾತಿನ (‘ಮನ್ ಕಿ ಬಾತ್ ’) ಈ ವರ್ಷದ ಕೊನೆಯ ಆವೃತ್ತಿ ಇದಾಗಿದೆ. 2017 ರ ಕೊನೆಯ ದಿನವೂ ಇದಾಗಿರುವುದು ಸಂಯೋಗವೇ ಅಲ್ಲವೇ. ಈ ವರ್ಷಪೂರ್ತಿ ನಾನು ಮತ್ತು ನೀವು ಬಹಳಷ್ಟು ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಮನದ ಮಾತಿಗಾಗಿ ನೀವು ಕಳುಹಿಸಿದಂತಹ ಸಾಕಷ್ಟು ಪತ್ರಗಳು, ಕಾಮೆಂಟ್ಸ್, ವಿಚಾರಗಳ ವಿನಿಮಯ, ಇವೆಲ್ಲ ನನಗಂತೂ ಯಾವತ್ತೂ ಹೊಸ ಶಕ್ತಿಯನ್ನು ತುಂಬಿ ತರುತ್ತವೆ. ಕೆಲ ಗಂಟೆಗಳ ನಂತರ ಈ ಸಂವತ್ಸರ ಬದಲಾಗಿ ಹೋಗುತ್ತದೆ, ಆದರೆ ನಮ್ಮ ಮಾತಿನ ಈ ನಂಟು ಮುಂದೆಯೂ ಹೀಗೆ ಸಾಗುತ್ತಲಿರುತ್ತದೆ. ಮುಂಬರುವ ವರ್ಷದಲ್ಲಿ ನಾವು ಇನ್ನೂ ಹೊಸ ಹೊಸ ವಿಷಯಗಳ ಬಗ್ಗೆ ಮಾತನಾಡೋಣ, ಹೊಸ ಅನುಭವಗಳನ್ನು ಹಂಚಿಕೊಳ್ಳೋಣ. ನಿಮ್ಮೆಲ್ಲರಿಗೂ 2018 ರ ಅನಂತ ಅನಂತ ಶುಭಾಶಯಗಳು.
ಕೆಲ ದಿನಗಳ ಹಿಂದೆ ಡಿಸೆಂಬರ್ 25 ರಂದು ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತದಲ್ಲೂ ಜನರು ಸಾಕಷ್ಟು ಉತ್ಸಾಹದಿಂದ ಈ ಹಬ್ಬವನ್ನು ಆಚರಿಸಿದರು. ಕ್ರಿಸ್ಮಸ್ ಹಬ್ಬದಂದು ನಾವೆಲ್ಲರೂ ಜೀಸಸ್ ಕ್ರೈಸ್ತರ ಮಹಾನ್ ಬೋಧನೆಯನ್ನು ಸ್ಮರಿಸುತ್ತೇವೆ ಮತ್ತು ಜೀಸಸ್ ಕ್ರೈಸ್ತ ಎಲ್ಲಕ್ಕಿಂತ ಹೆಚ್ಚು ಒತ್ತು ಕೊಟ್ಟಿದ್ದು ಸೇವಾ ಮನೋಭಾವನೆಗೆ. ಸೇವೆಯ ಮನೋಭಾವನೆಯ ಸಾರವನ್ನು ನಾವು ಬೈಬಲ್ನಲ್ಲಿ ಕಾಣುತ್ತೇವೆ.
The Son of Man has come, not to be served,
But to serve,
And to give his life, as blessing
to all humankind.
ಇದು ಸೇವೆಯ ಮಹತ್ವವೇನೆಂದು ಸಾರುತ್ತದೆ. ವಿಶ್ವದ ಯಾವುದೇ ಜಾತಿಯಾಗಲಿ, ಧರ್ಮವಾಗಲಿ, ಪರಂಪರೆಯಾಗಲಿ, ವರ್ಣವೇ ಆಗಲಿ, ಆದರೆ ಸೇವಾಭಾವನೆ ಎಂಬುದು ಮಾನವೀಯ ಮೌಲ್ಯಗಳ ಅಮೂಲ್ಯ ಪ್ರತಿರೂಪದಂತಿದೆ.
ನಮ್ಮ ದೇಶದಲ್ಲಿ ನಿಷ್ಕಾಮ ಕರ್ಮದ ವಿಚಾರ ಮಾತನಾಡುತ್ತಾರೆ. ಅಂದರೆ ಯಾವುದೇ ಫಲಾಪೇಕ್ಷೆ ಇರದಂತಹ ಸೇವೆ. ನಮ್ಮಲ್ಲಿ ‘ಸೇವಾ ಪರಮೋ ಧರ್ಮಃ’ ಎಂದು ಹೇಳಲಾಗಿದೆ.
ಅಲ್ಲದೆ ಜೀವಿಗಳ ಸೇವೆಯೇ ಶಿವ ಸೇವೆ ಎಂದು ಹೇಳಲಾಗಿದೆ ಮತ್ತು ಗುರುದೇವ ರಾಮಕೃಷ್ಣ ಪರಮಹಂಸರು ಶಿವ ಭಾವನೆಯಿಂದ ಜೀವಿಗಳ ಸೇವೆಯನ್ನು ಮಾಡಿ ಎಂದು ಹೇಳಿದ್ದಾರೆ ಅಂದರೆ, ಸಂಪೂರ್ಣ ವಿಶ್ವದಲ್ಲಿ ಈ ಮಾನವೀಯ ಮೌಲ್ಯಗಳು ಒಂದೇ ತೆರನಾಗಿವೆ. ಬನ್ನಿ ನಾವೆಲ್ಲರೂ ಮಹಾಪುರುಷರನ್ನು ನೆನೆಯುತ್ತಾ, ಪವಿತ್ರ ದಿನಗಳನ್ನು ನೆನಪಿಸಿಕೊಳ್ಳುತ್ತಾ ನಮ್ಮ ಈ ಮಹಾನ್ ಮೌಲ್ಯಗಳ ಪರಂಪರೆಗೆ ನವ ಚೈತನ್ಯ ತುಂಬೋಣ, ಹೊಸ ಶಕ್ತಿ ತುಂಬೋಣ ಮತ್ತು ಸ್ವತಃ ಅದನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡೋಣ.
ನನ್ನ ಪ್ರಿಯ ದೇಶಬಾಂಧವರೇ, ಈ ವರ್ಷ ಗುರು ಗೋವಿಂದ್ ಸಿಂಗ್ ಅವರ 350 ನೇ ಪ್ರಕಾಶ ವರ್ಷವೂ ಆಗಿದೆ. ಗುರು ಗೋವಿಂದ್ ಸಿಂಗ್ರ ಸಾಹಸಮಯ ಮತ್ತು ತ್ಯಾಗಭರಿತ ಅಸಾಧಾರಣ ಜೀವನ, ನಮ್ಮೆಲ್ಲರಿಗೂ ಪ್ರೇರಣೆಯ ಸೆಲೆಯಾಗಿದೆ. ಗುರು ಗೋವಿಂದ್ ಸಿಂಗ್ರು ಅಮೂಲ್ಯವಾದ ಜೀವನ ಮೌಲ್ಯಗಳನ್ನು ಬೋಧಿಸಿದರು ಮತ್ತು ಅದೇ ಮೌಲ್ಯಗಳ ಆಧಾರದ ಮೇಲೆ ತಮ್ಮ ಜೀವನ ಸವೆಸಿದರು. ಒಬ್ಬ ಗುರು, ಕವಿ, ದಾರ್ಶನಿಕ, ಮಹಾನ್ ಯೋಧರೂ ಆಗಿದ್ದ ಗುರು ಗೋವಿಂದ್ ಸಿಂಗ್ರು ಈ ಎಲ್ಲ ಪಾತ್ರಗಳಲ್ಲೂ ಜನರಿಗೆ ಪ್ರೇರಣೆ ನೀಡುವಂಥ ಕೆಲಸ ಮಾಡಿದ್ದಾರೆ. ಅವರು ಅನ್ಯಾಯ ಮತ್ತು ಅನೀತಿ ವಿರುದ್ಧ ಹೋರಾಡಿದರು. ಜನರಿಗೆ ಜಾತಿ ಮತ್ತು ಧರ್ಮದ ಬಂಧನವನ್ನು ತೊಡೆದು ಹಾಕುವಂತೆ ಬೋಧಿಸಿದರು. ಈ ಪ್ರಯತ್ನದಲ್ಲಿ ಅವರಿಗೆ ವ್ಯಕ್ತಿಗತವಾಗಿ ಬಹಳಷ್ಟು ಕಳೆದುಕೊಳ್ಳಬೇಕಾಯಿತು. ಆದರೂ ಅವರು ಎಂದಿಗೂ ದ್ವೇಷದ ಭಾವನೆಯನ್ನು ಬೆಳೆಯಲು ಬಿಡಲಿಲ್ಲ. ಜೀವನದ ಪ್ರತಿ ಕ್ಷಣದಲ್ಲಿಯೂ ಪ್ರೀತಿ, ತ್ಯಾಗ ಮತ್ತು ಶಾಂತಿ ಸಂದೇಶ – ಸಾರಿದರು. ಎಂಥ ಅದ್ಭುತವಾದ ವಿಶೇಷತೆಗಳಿಂದ ಕೂಡಿದ ವ್ಯಕ್ತಿತ್ವ ಅವರದ್ದು? ಈ ವರ್ಷದ ಆರಂಭದಲ್ಲಿ ಪಟನಾಸಾಹಿಬ್ನಲ್ಲಿ ಆಯೋಜಿಸಲಾದ ಗುರು ಗೋವಿಂದ್ ಸಿಂಗ್ ಅವರ 350 ನೇ ವರ್ಷದ ಪ್ರಕಾಶ ಉತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರೆತಿರುವುದು ನನ್ನ ಸೌಭಾಗ್ಯವೇ ಸರಿ. ಬನ್ನಿ ನಾವೆಲ್ಲರೂ ಗುರು ಗೋವಿಂದ್ ಸಿಂಗ್ ಅವರ ಮಹಾನ್ ಬೋಧನೆ ಮತ್ತು ಪ್ರೇರಣಾದಾಯಕ ಜೀವನದಿಂದ ಕಲಿಯುತ್ತಾ ಜೀವನ ರೂಪಿಸಿಕೊಳ್ಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಸಂಕಲ್ಪ ಕೈಗೊಳ್ಳೋಣ.
ಜನವರಿ 1 2018 ಅಂದರೆ ನಾಳೆ ನನ್ನ ದೃಷ್ಟಿಯಲ್ಲಿ ಒಂದು ವಿಶೇಷ ದಿನವಾಗಿದೆ. ನಿಮಗೆ ಆಶ್ಚರ್ಯವಾಗಬಹುದು, ಹೊಸ ವರ್ಷ ಬರುತ್ತಲೇ ಇರುತ್ತದೆ, ಜನವರಿ 1 ಸಹ ಪ್ರತಿವರ್ಷವೂ ಬರುತ್ತದೆ, ಆದರೆ ಇಂದು ವಿಶೇಷ ಎಂದು ಹೇಳುತ್ತಿದ್ದೇನೆ ಅಂದ ಮೇಲೆ ನಿಜಕ್ಕೂ ವಿಶೇಷವಾಗಿದೆ. ಯಾರು 2000 ಅಥವಾ ಅದರ ನಂತರ ಜನಿಸಿದ್ದಾರೋ ಅಂದರೆ 21ನೇ ಶತಮಾನದಲ್ಲಿ ಯಾರು ಜನಿಸಿದ್ದಾರೋ ಅವರು 2018 ರ ಜನವರಿ 1 ರಂದು eligible voters ಆಗಲಾರಂಭಿಸುತ್ತಾರೆ. ಭಾರತೀಯ ಗಣತಂತ್ರವು 21ನೇ ಶತಮಾನದ ಮತದಾರರನ್ನು ‘New India Voters’ಗಳನ್ನು ಸ್ವಾಗತಿಸ್ಮತ್ತದೆ. ನಮ್ಮ ಯುವಜನತೆಗೆ ನಾನು ಅಭಿನಂದಿಸುತ್ತೇನೆ ಮತ್ತು ನೀವೆಲ್ಲರೂ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಿ ಎಂದು ಆಗ್ರಹಿಸುತ್ತೇನೆ. ಸಂಪೂರ್ಣ ಹಿಂದುಸ್ತಾನವು ನಿಮ್ಮನ್ನು 21ನೇ ಶತಮಾನದ ಮತದಾರರ ರೂಪದಲ್ಲಿ ಸ್ವಾಗತಿಸಲು ಹಾತೊರೆಯುತ್ತಿದೆ. 21ನೇ ಶತಮಾನದ ಮತದಾರರ ರೂಪದಲ್ಲಿ ನೀವೂ ಗೌರವದ ಅನುಭೂತಿ ಹೊಂದುತ್ತಿರಬಹುದು. ನಿಮ್ಮ ಮತವು ‘New Indiaದ ಆಧಾರವಾಗಲಿದೆ. ಪ್ರಜಾಸತ್ತಾತ್ಮಕತೆಯಲ್ಲಿ ಮತದಾನದ ಶಕ್ತಿ ಬಹುದೊಡ್ಡ ಶಕ್ತಿಯಾಗಿದೆ. ಲಕ್ಷಾಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮತದಾನ ಅತ್ಯಂತ ಪ್ರಭಾವಿ ಸಾಧನವಾಗಿದೆ. ನೀವು ಕೇವಲ ಮತ ನೀಡುವ ಅಧಿಕಾರ ಮಾತ್ರ ಪಡೆಯುತ್ತಿಲ್ಲ, ನೀವು 21 ನೇ ಶತಮಾನದ ಭಾರತ ಹೇಗಿರಬೇಕು? 21 ನೇ ಶತಮಾನದ ಭಾರತದ ನಿಮ್ಮ ಕನಸುಗಳೇನು? ಎನ್ಮ್ನವ ಆಶಯದೊಂದಿಗೆ ನೀವೂ ಭಾರತದ 21 ನೇ ಶತಮಾನದ ನಿರ್ಮಾತೃವಾಗಬಹುದು. ಇದರ ಆರಂಭ ಜನವರಿ 1 ರಿಂದ ವಿಶೇಷವಾಗಿ ಆಗುತ್ತಲಿದೆ. ಇಂದು ನಮ್ಮ ಮನದ ಮಾತಿನಲ್ಲಿ 18 ರಿಂದ 25 ವಯೋಮಾನದ ಶಕ್ತಿಯುತ ಸಂಕಲ್ಪಭರಿತ ನಮ್ಮ ಯಶಸ್ವಿ ಯುವಜನರೊಂದಿಗೆ ಮಾತನಾಡಬಯಸುತ್ತೇನೆ. ನಾನು ಇವರನ್ನು ‘New India Youth’ಎಂದು ಭಾವಿಸುತ್ತೇನೆ. New India Youth ಎಂಬುದರ ಅರ್ಥ – ಹುರುಪು, ಉತ್ಸಾಹ ಮತ್ತು ಶಕ್ತಿ. ನಮ್ಮ ಈ ಶಕ್ತಿಯುತ ಯುವಕರ ಕೌಶಲ್ಯ ಮತ್ತು ಸಾಮಥ್ರ್ಯದಿಂದಲೇ ನಮ್ಮ ‘New India’ಕನಸು ನನಸಾಗಲಿದೆ ಎಂಬುದು ನನ್ನ ವಿಶ್ವಾಸ. ಈಗ ನಾವು ನವಭಾರತದ ಬಗ್ಗೆ ಮಾತನಾಡುತ್ತಿರುವಾಗ ಅದು ಜಾತಿವಾದ, ಸಂಪ್ರದಾಯವಾದ, ಆತಂಕವಾದ, ಭ್ರಷ್ಟಾಚಾರ ಎಂಬ ವಿಷಗಳಿಂದ ಮುಕ್ತವಾಗಿರಬೇಕು. ಮಾಲಿನ್ಯ ಮತ್ತು ಬಡತನ ಮುಕ್ತವಾಗಬೇಕು . ‘New India’ – ದಲ್ಲಿ ಎಲ್ಲರಿಗೆ ಸಮಾನ ಅವಕಾಶಗಳಿರಬೇಕು. ಎಲ್ಲರ ಆಸೆ ಆಕಾಂಕ್ಷೆಗಳು ಕೈಗೂಡಬೇಕು. ನವಭಾರತದಲ್ಲಿ ಶಾಂತಿ, ಒಗ್ಗಟ್ಟು ಮತ್ತು ಸದ್ಭಾವನೆ ನಮ್ಮ ಮಾರ್ಗದರ್ಶಕ ಶಕ್ತಿಯಾಗಿರಬೇಕು.
ನನ್ನ ಈ ‘New India Youth’ ಮುಂದೆ ಬಂದು ನವ ಭಾರತ ನಿರ್ಮಾಣ ಹೇಗಿರಬೇಕೆಂದು ಚಿಂತಿಸಬೇಕು. ತಮಗಾಗಿಯೂ ಅವರು ಒಂದು ದಾರಿಯನ್ನು ಆಯ್ದುಕೊಳ್ಳಲಿ, ತಾವು ಯಾರೊಂದಿಗೆ ಒಡನಾಟದಲ್ಲಿರುವರೋ ಅವರನ್ನು ಈ ಮಾರ್ಗದಲ್ಲಿ ಒಗ್ಗೂಡಿಸಿ ಯಾತ್ರೆ ಮುಂದುವರಿಸಲಿ. ನೀವೂ ಮುಂದುವರಿಯಿರಿ. ದೇಶವೂ ಮುಂದುವರಿಯಲಿ, ನಿಮ್ಮೊಂದಿಗೆ ಈಗ ಮಾತನಾಡುತ್ತಿರುವಾಗ, ನಾವು ಭಾರತದ ಪ್ರತಿ ಜಿಲ್ಲೆಯಲ್ಲಿ ಒಂದು mock parliament ಆಯೋಜಿಸಬಹುದೇ? ಎಂಬ ಆಲೋಚನೆ ನನಗೆ ಬರುತ್ತಿದೆ. ಅಲ್ಲಿ ಈ 18 ರಿಂದ 25 ರ ವಯೋಮಾನದ ಯುವಕರು ಜೊತೆಗೂಡಿ New India ಕುರಿತು ಚಿಂತನೆ ನಡೆಸಲಿ, ಹೊಸ ದಾರಿಗಳನ್ನು ಶೋಧಿಸಲಿ, ಯೋಜನೆಗಳನ್ನು ರೂಪಿಸಲಿ. 2022ರ ಮೊದಲೇ ನಾವು ನಮ್ಮ ಸಂಕಲ್ಪಗಳನ್ನು ಹೇಗೆ ಸಿದ್ಧಿಸಿಕೊಳ್ಳಬೇಕು? ನಮ್ಮ ಸ್ವಾತಂತ್ರ್ಯ ಸೇನಾನಿಗಳು ನೋಡಿದಂತಹ ಕನಸುಗಳನ್ನು ನನಸಾಗಿಸುವಂಥ ಬಾರತವನ್ನು ಹೇಗೆ ನಿರ್ಮಾಣ ಮಾಡೋಣ? ಎನ್ನುವ ವಿಚಾರ ಮಂಥನ ನಡೆಯಲಿ. ಮಾಹಾತ್ಮಾ ಗಾಂಧಿಯವರು ಸ್ವಾತಂತ್ರ್ಯ ಆಂದೋಲನವನ್ನು ಜನಾಂದೋಲನವನ್ನಾಗಿಸಿದ್ದರು. ನನ್ನ ಯುವ ಸ್ನೇಹಿತರೇ ಈ 21ನೇ ಶತಮಾನದ ಭವ್ಯ-ದಿವ್ಯ ಭಾರತಕ್ಕಾಗಿ ಒಂದು ಜನಾಂದೋಲನ ಆರಂಭಿಸಬೇಕು ಎಂಬುದು ಕಾಲದ ಬೇಡಿಕೆಯಾಗಿದೆ. ಅದು ವಿಕಾಸದ ಜನಾಂದೋಲನ. ಪ್ರಗತಿಯ ಜನಾಂದೋಲನ. ಸಾಮಥ್ರ್ಯವುಳ್ಳ ಶಕ್ತಿಶಾಲಿ ಭಾರತದ ಜನಾಂದೋಲನವಾಗಬೇಕು. ಆಗಸ್ಟ್ 15 ರ ವೇಳೆಗೆ ದಿಲ್ಲಿಯಲ್ಲಿ ಒಂದು mock parliament ಆಯೋಜನೆಯಾಗಲಿ, ಇದರಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ ಒಬ್ಬ ಯುವಕ ಮುಂದಿನ 5 ವರ್ಷಗಳಲ್ಲಿ ನವಭಾರತದ ನಿರ್ಮಾಣ ಹೇಗೆ ಮಾಡಬಹುದು? ಸಂಕಲ್ಪದಿಂದ ಸಿದ್ಧಿಯನ್ನು ಹೇಗೆ ಸಾಧಿಸಬಹುದು? ಎಂಬ ವಿಷಯದ ಕುರಿತು ಚರ್ಚೆ ಮಾಡಬಹುದು. ಇಂದು ಯುವಕರಿಗಾಗಿ ಸಾಕಷ್ಟು ಅವಕಾಶಗಳು ಉದ್ಭವವಾಗಿವೆ. Skill Development ನಿಂದ Innovation ಮತ್ತು entrepreneurship ವರೆಗೆ ನಮ್ಮ ಯುವಕರು ಮುಂದೆ ಬರುತ್ತಿದ್ದಾರೆ ಮತ್ತು ಸಫಲರಾಗುತ್ತಿದ್ದಾರೆ. ಈ ಎಲ್ಲ ಅವಕಾಶಗಳ ಯೋಜನೆಗಳ ಮಾಹಿತಿ ಈ ‘New India Youth’ ಗೆ ಒಂದೇ ಸೂರಿನಡಿ ಹೇಗೆ ಸಿಗಬಹುದು ಮತ್ತು 18 ವರ್ಷ ತುಂಬುತ್ತಲೇ ಅವರಿಗೆ ಈ ಜಗತ್ತಿನ ಬಗ್ಗೆ, ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ದೊರೆಯುವಂತೆ ಹಾಗೂ ಇದರ ಲಾಭವನ್ನೂ ಅವರು ಪಡೆಯುವಂತಹ ಒಂದು ವ್ಯವಸ್ಥೆಯನ್ನು ನಿರ್ಮಿಸಬಹುದೇ ಎಂಬುದು ನನ್ನ ಆಶಯವಾಗಿದೆ.
ನನ್ನ ಪ್ರಿಯ ದೇಶಬಂಧುಗಳೇ, ಕಳೆದ ಮನದ ಮಾತಿನಲ್ಲಿ ನಿಮ್ಮೊಂದಿಗೆ positivity ಯ ಮಹತ್ವದ ಕುರಿತು ಮಾತನಾಡಿದ್ದೆ. ನನಗೆ ಸಂಸ್ಕøತದ ಒಂದು ಶ್ಲೋಕ ನೆನಪಾಗುತ್ತಿದೆ.
उत्साहो बलवानार्य, नास्त्युत्साहात्परं बलम् |
सोत्साहस्य च लोकेषु न किंचिदपि दुर्लभम् ||
ಇದರರ್ಥ ಉತ್ಸಾಹದಿಂದ ತುಂಬಿದ ಒಬ್ಬ ವ್ಯಕ್ತಿ ಅತ್ಯಂತ ಬಲಶಾಲಿಯಾಗಿರುತ್ತಾನೆ, ಏಕೆಂದರೆ ಉತ್ಸಾಹಕ್ಕೆ ಮೀರಿದ್ದು ಇನ್ನಾವುದೂ ಇಲ್ಲ. Positivity ಮತ್ತು ಉತ್ಸಾಹಭರಿತ ವ್ಯಕ್ತಿಗೆ ಯಾವುದೂ ಅಸಂಭವವಲ್ಲ. ‘Pessimism leads to weakness, optimism to power ’ಎಂದು ಇಂಗ್ಲೀಷ್ ನಲ್ಲಿ ಗಾದೆಯಿದೆ. ನಾನು ಕಳೆದ ಮನದ ಮಾತಿನಲ್ಲಿ 2017 ರ positive moments share ಮಾಡಿ ಎಂದು ಮತ್ತು 2018 ರ ಸ್ವಾಗತವನ್ನು positive atmosphere ನಲ್ಲಿ ಮಾಡಿರಿ ಎಂದು ಜನರಿಗೆ ಮನವಿ ಮಾಡಿದ್ದೆ. ಜನರು social media platform, MyGov ಮತ್ತು NarendraModi App ಮೂಲಕ ಬಹು ದೊಡ್ಡ ಪ್ರಮಾಣದಲ್ಲಿ positive response ನೀಡಿದರು. ತಮ್ಮ ಅನುಭವ ಹಂಚಿಕೊಂಡರು ಎಂಬುದು ನನಗೆ ಬಹಳ ಆನಂದ ತಂದಿದೆ. # Positive India hashtag (# ಟ್ಯಾಗ್ ) ನೊಂದಿಗೆ ಲಕ್ಷಾಂತರ ಟ್ವೀಟ್ ಮಾಡಲಾಯಿತು. ಇದು ಸುಮಾರು 150 ಕೋಟಿಗಿಂತಲೂ ಹೆಚ್ಚು ಜನರನ್ನು ತಲುಪಿತು. ಒಂದು ರೀತಿಯಲ್ಲಿ ಭಾರತದಲ್ಲಿ ಆರಂಭವಾದ positivity ಸಂಚಾರವು ವಿಶ್ವಾದ್ಯಂತ ಪಸರಿಸಿದೆ. ಬಂದಂತಹ tweets ಮತ್ತು response ನಿಜಕ್ಕೂ ಬಹಳ ಸ್ಫೂರ್ತಿದಾಯಕವಾಗಿದ್ದವು. ಅದು ಒಂದು ಹಿತವಾದ ಅನುಭವವಾಗಿತ್ತು. ಕೆಲ ದೇಶಬಂಧುಗಳು ತಮ್ಮ ಮನದ ಮೇಲೆ ವಿಶೇಷ ಪ್ರಭಾವ ಬೀರಿದ, ಸಕಾರಾತ್ಮಕ ಪ್ರಭಾವ ಬೀರಿದ ಕೆಲವು ಘಟನೆಗಳನ್ನು ಹಂಚಿಕೊಂಡರು. ಕೆಲವರು ತಮ್ಮ ವೈಯುಕ್ತಿಕ ಅನುಭವಗಳನ್ನೂ ಹಂಚಿಕೊಂಡರು.
ಬೈಟ್
# ನನ್ನ ಹೆಸರು ಮೀನು ಭಾಟಿಯಾ. ನಾನು ದೆಹಲಿಯ ಮಯೂರ್ ವಿಹಾರ್, ಪಾಕೆಟ್ ಒನ್, ಫೇಜ್ 1, ನಲ್ಲಿ ವಾಸವಾಗಿದ್ದೇನೆ. ನನ್ನ ಮಗಳು ಎಂ ಬಿ ಎ ಓದಬೇಕೆಂದಿದ್ದಳು. ಅದಕ್ಕಾಗಿ ನನಗೆ ಬ್ಯಾಂಕ್ನಿಂದ ಸಾಲ ಬೇಕಾಗಿತ್ತು. ನನಗದು ಬಹಳ ಸರಳವಾಗಿ ಸಿಕ್ಕಿತು ಮತ್ತು ನನ್ನ ಮಗಳ ಓದು ಮುಂದುವರಿದಿದೆ.
# ನನ್ನ ಹೆಸರು ಜ್ಯೋತಿ ರಾಜೇಂದ್ರ ವಾಡೆ. ನಾನು ಬೋಡಲ್ನಿಂದ ಮಾತಾಡುತ್ತಿದ್ದೇನೆ. ಪ್ರತಿ ತಿಂಗಳು ಒಂದು ರೂಪಾಯಿ ವಂತಿಗೆಯ ವಿಮೆ ಮಾಡಿಸಿದ್ದೆವು. ನನ್ನ ಪತಿ ಅದನ್ನು ಮಾಡಿಸಿದ್ದರು. accident ನಲ್ಲಿ ಅವರ ಮೃತ್ಯುವಾಯಿತು. ಆಗ ನಮ್ಮ ಸ್ಥಿತಿ ಹೇಗಿತ್ತು ಎಂಬುದು ನಮಗೇ ಗೊತ್ತು. ಸರ್ಕಾರದ ಈ ನೆರವಿನಿಂದ ನಮಗೆ ಬಹಳ ಲಾಭವಾಯಿತು ಮತ್ತು ಅದರಿಂದ ನಾನೂ ಸ್ವಲ್ಪ ಸುಧಾರಿಸಿಕೊಳ್ಳಲು ಸಾಧ್ಯವಾಯಿತು.
# ನನ್ನ ಹೆಸರು ಸಂತೋಷ ಜಾಧವ್. ನನ್ನ ಗ್ರಾಮ ಭಿನ್ನರ್ ನಲ್ಲಿ 2017 ರಲ್ಲಿ National Highway ನಿರ್ಮಾಣವಾಗಿದೆ. ಇದರಿಂದಾಗಿ ನಮ್ಮ ರಸ್ತೆಗಳು ಬಹಳ ಉತ್ತಮವಾಗಿವೆ ಮತ್ತು business ಕೂಡಾ ವೃದ್ಧಿಸಲಿದೆ.
# ನನ್ನ ಹೆಸರು ದೀಪಾಂಶು ಅಹುಜಾ. ನಾನು ಉತ್ತರಪ್ರದೇಶದ ಸಾದತ್ಗಂಜ್ ಗ್ರಾಮ, ಸಹಾರನ್ಪುರ್ ಜಿಲ್ಲೆಯ ನಿವಾಸಿಯಾಗಿದ್ದೇನೆ. ನಮ್ಮ ಸೈನಿಕರು 2 ಮಹತ್ತರವಾದ ಕೆಲಸಗಳನ್ನು ಮಾಡಿದ್ದಾರೆ. ಒಂದು ಪಾಕಿಸ್ತಾನದಲ್ಲಿ ಅವರು ನಡೆಸಿದ surgical strike. ಇದರಿಂದ ಉಗ್ರವಾದದ launching pads ಅವುಗಳನ್ನು ನಾಶ ಮಾಡಲಾಯಿತು ಜೊತೆಗೆ ಡೊಕ್ಲಾಮ್ನಲ್ಲಿ ನಮ್ಮ ಸೈನಿಕರು ತೋರಿದ ಪರಾಕ್ರಮ ಅಸಾಮಾನ್ಯವಾಗಿತ್ತು.
# ನನ್ನ ಹೆಸರು ಸತೀಶ್ ಬೇವಾನಿ. ನಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯಿತ್ತು. ಕಳೆದ 40 ವರ್ಷಗಳಿಂದ ನಾವು ಸೇನೆಯ ಪೈಪ್ಲೈನ್ನನ್ನೇ ನಂಬಿಕೊಂಡಿದ್ದೆವು. ಈಗ ಪ್ರತ್ಯೇಕವಾದ independent ಪೈಪ್ಲೈನ್ ಅಳವಡಿಸಲಾಗಿದೆ. 2017 ರಲ್ಲಿ ಈ ಎಲ್ಲ ಅನುಕೂಲಗಳು ನಮಗೆ ದೊರೆತಿವೆ.
ಹೀಗೆ ಬಹಳಷ್ಟು ಜನರು ತಮ್ಮ ತಮ್ಮ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತಿವೆ. ವಾಸ್ತವದಲ್ಲಿ ಇದೇ ‘New India’ಆಗಿದೆ. ಇದನ್ನು ನಾವೆಲ್ಲರೂ ಸೇರಿ ನಿರ್ಮಿಸುತ್ತಿದ್ದೇವೆ. ಬನ್ನಿ ಇವೇ ಸಣ್ಣ ಪುಟ್ಟ ಸಂತೋಷಗಳ ಜೊತೆಗೆ ನಾವು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡೋಣ. ಹೊಸ ವರ್ಷವನ್ನು ಆರಂಭಿಸೋಣ ಮತ್ತು ‘positive India’ ದೊಂದಿಗೆ ‘progressive India’ ದಡೆಗೆ ಧೃಡವಾದ ಹೆಜ್ಜೆ ಇಡೋಣ. ನಾವು positivity ಬಗ್ಗೆ ಮಾತಾಡುವಾಗ ನನಗೂ ಒಂದು ಮಾತನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸುತ್ತಿದೆ. ಇತ್ತೀಚೆಗೆ ನನಗೆ ಕಾಶ್ಮೀರದ ಆಡಳಿತಾತ್ಮಕ ಸೇವೆಯ ಟಾಪರ್ ಅಂಜುಮ್ ಬಶೀರ್ ಖಾನ್ ಖಟ್ಟಕ್ ಅವರ ಪ್ರೇರಣಾದಾಯಕ ಕಥೆ ಬಗ್ಗೆ ತಿಳಿದುಬಂತು. ಅವರು ಭಯೋತ್ಪಾದನೆ ಮತ್ತು ದ್ವೇಶದ ಅಗ್ನಿಯಿಂದ ಹೊರಬಂದು Kashmir Administrative Service ನಲ್ಲಿ ಟಾಪರ್ ಆಗಿ ಹೊರ ಹೊಮ್ಮಿದರು. 1990 ರಲ್ಲಿ ಉಗ್ರವಾದಿಗಳು ಅವರ ಪೂರ್ವಜರ ಮನೆಯನ್ನು ಭಸ್ಮ ಮಾಡಿದ್ದರು ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಅಲ್ಲಿ ಉಗ್ರವಾದ ಮತ್ತು ಹಿಂಸೆ ಎಷ್ಟು ಪ್ರಮಾಣದಲ್ಲಿತ್ತೆಂದರೆ ಅವರ ಕುಟುಂಬವರ್ಗದವರಿಗೆ ತಮ್ಮ ಪೂರ್ವಿಕರ ನೆಲವನ್ನು ತೊರೆದು ಹೊರನಡೆಯಬೇಕಾಯಿತು. ಒಬ್ಬ ಪುಟ್ಟ ಮಗುವಿಗೆ ತನ್ನ ಸುತ್ತಮುತ್ತಲೂ ಇದ್ದ ಇಂಥ ಹಿಂಸೆಯ ವಾತಾವರಣ ಮನಸ್ಸಿನ ತುಂಬ ಅಂಧಕಾರಾತ್ಮಕ ಮತ್ತು ಕಹಿಯಾದ ಭಾವನೆಯನ್ನು ಮೂಡಿಸಲು ಸಾಕಾಗಿತ್ತು. ಆದರೆ ಅಂಜುಮ್ ಹೀಗೆ ಆಗಲು ಆಸ್ಪದ ಕೊಡಲಿಲ್ಲ. ಅವರು ಎಂದಿಗೂ ಆಸೆಯ ಎಳೆಯನ್ನು ಬಿಡಲಿಲ್ಲ. ಅವರು ತಮಗಾಗಿ ಒಂದು ಬೇರೆಯೇ ದಾರಿಯನ್ನು ಆಯ್ದುಕೊಂಡರು. ಅದು ಜನತೆಯ ಸೇವೆಯ ದಾರಿ. ಅವರು ಅತ್ಯಂತ ಕಠಿಣ ಪರಿಸ್ಥಿತಿಯಿಂದ ಹೊರ ಬಂದು ಸಫಲತೆಯ ತಮ್ಮ ಕಥೆಯನ್ನು ತಾವೇ ಬರೆದರು. ಇಂದು ಅವರು ಕೇವಲ ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲದೆ ದೇಶದ ಎಲ್ಲ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ. ಪರಿಸ್ಥಿತಿಗಳು ಎಷ್ಟೇ ಸಂಕಷ್ಟದಾಯಕವಾಗಿದ್ದರೂ ಸಕಾರಾತ್ಮಕ ಕೆಲಸಗಳಿಂದ ನಿರಾಶೆಯ ಕಾರ್ಮೊಡಗಳನ್ನು ಧ್ವಂಸಗೊಳಿಸಬಹುದಾಗಿದೆ ಎಂಬುದನ್ನು ಅಂಜುಂ ಸಾಬೀತುಪಡಿಸಿದ್ದಾರೆ.
ಕಳೆದ ವಾರವಷ್ಟೇ ನನಗೆ ಜಮ್ಮು ಮತ್ತು ಕಾಶ್ಮೀರದ ಕೆಲ ಹೆಣ್ಣುಮಕ್ಕಳನ್ನು ಭೇಟಿಯಾಗುವ ಅವಕಾಶ ಅಭಿಸಿತು. ಅವರಲ್ಲಿರುವಂಥ ಭಾವನೆಗಳು, ಉತ್ಸಾಹ, ಕನಸುಗಳು ಮತ್ತು ಅವರು ಜೀವನದಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬಯಸುತ್ತಾರೆ, ಅವರು ಎಷ್ಟೊಂದು ಆಶಾವಾದದ ಜೀವನವುಳ್ಳವರಾಗಿದ್ದಾರೆ ಎಂಬುದು ತಿಳಿದು ಬಂತು. ಅವರೊಂದಿಗೆ ನಾನು ಮಾತಾಡಿದಾಗ ಅವರಲ್ಲಿ ಒಂದಂಶವೂ ನಿರಾಶೆಯ ಕುರುಹು ಇರಲಿಲ್ಲ. ಉತ್ಸಾಹವಿತ್ತು, ಹುಮ್ಮಸ್ಸಿತ್ತು, ಶಕ್ತಿಯಿತ್ತು, ಕನಸುಗಳಿದ್ದವು, ಸಂಕಲ್ಪವಿತ್ತು. ಆ ಹೆಣ್ಣುಮಕ್ಕಳೊಂದಿಗೆ ನಾನು ಮಾತಾಡಿದ ಅಷ್ಟೊತ್ತೂ ನನಗೂ ಪ್ರೇರಣೆ ದೊರೆಯಿತು ಮತ್ತು ದೇಶದ ಶಕ್ತಿ ಇದೇ ಅಲ್ಲವೇ, ಇವರೇ ನಮ್ಮ ಯುವಜನತೆಯಲ್ಲವೇ ಮತ್ತು ಇವರೇ ನಮ್ಮ ದೇಶದ ಭವಿಷ್ಯ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಷ್ಟೇ ಅಲ್ಲ, ಎಲ್ಲಿಯೇ ಅಗಲಿ ಕೆಲವೊಮ್ಮೆ ಪ್ರಸಿದ್ಧ ಧಾರ್ಮಿಕ ಸ್ಥಳದ ಬಗ್ಗೆ ಚರ್ಚೆ ಆಗುತ್ತದೆಯೋ ಆಗ ಕೇರಳದ ಶಬರಿಮಲೆಯ ಬಗ್ಗೆ ಮಾತು ಬರುವುದು ತುಂಬಾ ಸ್ವಾಭಾವಿಕ. ವಿಶ್ವ-ಪ್ರಸಿದ್ಧವಾದ ಈ ಮಂದಿರದಲ್ಲಿ ಭಗವಾನ್ ಐಯ್ಯಪ್ಪ ಸ್ವಾಮಿಯ ಆಶೀರ್ವಾದ ಪಡೆಯಲು ಪ್ರತಿವರ್ಷ ಕೋಟಿ ಕೋಟಿ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಎಲ್ಲಿ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೋ, ಯಾವ ಸ್ಥಳಕ್ಕೆ ಇಷ್ಟೊಂದು ದೊಡ್ಡ ಮಹಾತ್ಮೆ ಇದೆಯೋ ಅಲ್ಲಿ, ಅದರಲ್ಲೂ ವಿಶೇಷವಾಗಿ ಬೆಟ್ಟಗಳ ಮತ್ತು ಕಾಡಿನ ನಡುವೆ ಇರುವ ಆ ಜಾಗದಲ್ಲಿ, ಸ್ವಚ್ಚತೆಯನ್ನು ಕಾಪಾಡುವುದು ಎಷ್ಟು ದೊಡ್ಡ ಸವಾಲಾಗಿರಬಹುದು? ಆದರೆ ಈ ಸಮಸ್ಯೆಯನ್ನು ಸಹ ಸಂಸ್ಕಾರವನ್ನಾಗಿ ಹೇಗೆ ಬದಲಾಯಿಸಬಹುದು, ಸಮಸ್ಯೆಯಿಂದ ಹೊರಬರುವ ಮಾರ್ಗವನ್ನು ಹೇಗೆ ಹುಡುಕಬಹುದು ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಅದೆಂತಹ ಶಕ್ತಿ ಇರುತ್ತದೆ ಎನ್ನುವುದಕ್ಕೆ ಶಬರಿಮಲೆ ಮಂದಿರವು ತಂತಾನೇ ಒಂದು ಉದಾಹರಣೆಯ ರೀತಿಯಲ್ಲಿ ನಿಲ್ಲುತ್ತದೆ. ಪಿ. ವಿಜಯನ್ ಎನ್ನುವ ಹೆಸರಿನ ಒಬ್ಬ ಪೋಲಿಸ್ ಆಫೀಸರ್ “ಪುಣ್ಯಂ ಪೂಂಕವನಂ” (Punyam Poonkavanam) ಎನ್ನುವ ಒಂದು ಕಾರ್ಯಕ್ರಮ ಪ್ರಾರಂಭಿಸಿದರು ಮತ್ತು ಆ ಕಾರ್ಯಕ್ರಮದ ಮೂಲಕ ಸ್ವಚ್ಚತೆಗಾಗಿ ಜಾಗೃತಿ ಮೂಡಿಸುವ ಒಂದು ಸ್ವಯಂಪ್ರೇರಿತ ಪ್ರಚಾರ ಆರಂಭಿಸಿದರು. ಯಾವುದೇ ಯಾತ್ರಿಗಳು ಬಂದರೂ ಅವರು ಸ್ವಚ್ಚತೆಯ ಕಾರ್ಯಕ್ರಮದಲ್ಲಿ ಒಂದಿಲ್ಲೊಂದು ರೀತಿಯ ಶ್ರಮದಾನ ಮಾಡದೆ ಅವರ ಯಾತ್ರೆ ಸಂಪೂರ್ಣವಾಗದೇ ಇರುವ ರೀತಿಯಲ್ಲಿ ಒಂದು ಪರಂಪರೆಯನ್ನೇ ಸೃಷ್ಟಿಸಿದರು. ಈ ಆಂದೋಲನದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಪ್ರತಿಯೊಬ್ಬ ಯಾತ್ರಿಕನೂ ಇದೂ ಸಹಾ ಭಗವಂತನ ಪೂಜೆಯ ಒಂದು ಭಾಗವೇ ಎಂದು ಭಾವಿಸಿ ಸ್ವಲ್ಪವಾದರೂ ಸಮಯ ಸ್ವಚ್ಚತೆಗಾಗಿ ಕೆಲಸ ಮಾಡುತ್ತಾರೆ, ಮಾಲಿನ್ಯ ನಿರ್ಮೂಲನೆಗೆ ಕೆಲಸ ಮಾಡುತ್ತಾರೆ. ಪ್ರತಿದಿನ ಬೆಳಗ್ಗೆ ಇಲ್ಲಿ ಸ್ವಚ್ಚತಾ ಕಾರ್ಯಕ್ರಮದ ದೃಶ್ಯ ಬಹಳ ಅದ್ಭುತವಾಗಿರುತ್ತದೆ ಮತ್ತು ಎಲ್ಲಾ ಯಾತ್ರಾರ್ಥಿಗಳು ಇದರಲ್ಲಿ ಸೇರುತ್ತಾರೆ. ಎಷ್ಟೇ ದೊಡ್ಡ ಪ್ರಸಿದ್ಧ ವ್ಯಕ್ತಿಯಾಗಿರಲಿ, ಎಷ್ಟೇ ಧನಿಕನಾಗಿರಲಿ, ಎಷ್ಟೇ ದೊಡ್ಡ ಆಫೀಸರ್ ಆಗಿರಲಿ, ಎಲ್ಲರೂ ಒಬ್ಬ ಸಾಮಾನ್ಯ ಯಾತ್ರಿಯಂತೆ ಈ “ಪುಣ್ಯಂ ಪೂಂಕವನಂ” (Punyam Poonkavanam) ಕಾರ್ಯಕ್ರಮದ ಭಾಗವಾಗುತ್ತಾರೆ ಮತ್ತು ಸ್ವಚ್ಚಗೊಳಿಸಿಯೇ ಮುಂದೆ ಸಾಗುತ್ತಾರೆ. ದೇಶವಾಸಿಗಳಿಗೆ ಇಂತಹ ಅದೆಷ್ಟೋ ಉದಾಹರಣೆಗಳು ಕಾಣಸಿಗುತ್ತವೆ. ಶಬರಿಮಲೆಯಲ್ಲಿ ಇಷ್ಟೊಂದು ಮುಂದುವರೆದಿರುವ ಈ “ಪುಣ್ಯಂ ಪೂಂಕವನಂ” (Punyam Poonkavanam) ಸ್ವಚ್ಚತಾ-ಅಭಿಯಾನವು ಪ್ರತಿ ಯಾತ್ರಿಯ, ಯಾತ್ರೆಯ ಭಾಗವಾಗಿ ಹೋಗುತ್ತದೆ. ಅಲ್ಲಿ ಕಠೋರ ವ್ರತದ ಜೊತೆಗೆ ಸ್ವಚ್ಚತೆಯ ಕಠಿಣ ಸಂಕಲ್ಪವೂ ಜೊತೆಜೊತೆಯಾಗಿ ನಡೆಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪೂಜ್ಯ ಬಾಪೂರವರು ಜೀವನಪೂರ್ತಿ ಯಾವ ಕೆಲಸಕ್ಕೆ ಹೋರಾಟ ಮಾಡಿದ್ದರೋ, ಪ್ರಯತ್ನ ಪಡುತ್ತಿದ್ದರೋ, ‘ಸ್ವಚ್ಚ-ಭಾರತ’, ‘ಕೊಳಕು ಮುಕ್ತ ಭಾರತ’ ಎನ್ನುವ, ಯಾವ ಕೆಲಸವು ಅಪೂರ್ಣವಾಗಿತ್ತೋ ಅಂತಹ ಅವರ ಕನಸಿನ ಸ್ವಚ್ಚ ಭಾರತವನ್ನು ಪೂಜ್ಯ ಬಾಪೂರವರ 150ನೇ ಜಯಂತಿಯಂದು ಅವರಿಗೆ ಕೊಡುವುದಕ್ಕಾಗಿ, 2014 ನೇ ಅಕ್ಟೋಬರ್ 2 ರ ಪೂಜ್ಯ ಬಾಪೂರವರ ಜನ್ಮ ಜಯಂತಿಯಂದು, ನಾವೆಲ್ಲರೂ ಸಂಕಲ್ಪ ಮಾಡಿ ನಿರ್ಧರಿಸಿದ್ದೆವು. ಆ ದಿಕ್ಕಿನಲ್ಲಿ ನಾವೆಲ್ಲರೂ ಏನಾದರೂ ಸ್ವಲ್ಪ ಮಾಡೋಣ. ಸ್ವಚ್ಛತೆಯ ಬಗ್ಗೆ ದೇಶದಲ್ಲಿ ವ್ಯಾಪಕವಾದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಮಗ್ರವಾಗಿ ಸಾರ್ವಜನಿಕ ಸಹಭಾಗಿತ್ವದಿಂದ ಕೂಡ ಪರಿವರ್ತನೆ ಕಾಣಿಸುತ್ತಿದೆ. ನಗರ ಪ್ರದೇಶಗಳಲ್ಲಿ ಬರುವ 2018 ರ ಜನವರಿ 4 ರಿಂದ ಮಾರ್ಚ್ 10 ರ ನಡುವೆ ನೈರ್ಮಲ್ಯದ ಸಾಧನೆಯ ಮಟ್ಟವನ್ನು ಮೌಲ್ಯಮಾಪನ ಮಾಡಲು ಜಗತ್ತಿನಲ್ಲೇ ಎಲ್ಲಕ್ಕಿಂತ ದೊಡ್ಡದಾದ ‘ಸ್ವಚ್ಚ ಸರ್ವೇಕ್ಷಣೆ 2018’ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆಯನ್ನು 4 ಸಾವಿರಕ್ಕೂ ಅಧಿಕ ನಗರಗಳಲ್ಲಿ ಸುಮಾರು 40 ಕೋಟಿ ಜನಸಂಖ್ಯೆಯೊಂದಿಗೆ ಮಾಡಲಾಗುವುದು. ಈ ಸಮೀಕ್ಷೆಯಲ್ಲಿ ಮೌಲ್ಯಮಾಪನ ಮಾಡುವ ಅಂಶಗಳಲ್ಲಿ ನಗರಗಳಲ್ಲಿ ಬಯಲು ಶೌಚದಿಂದ ಮುಕ್ತಿ; ಕಸದ ಸಂಗ್ರಹಣೆ; ಕಸವನ್ನು ತೆಗೆದುಕೊಂಡು ಹೋಗಲು ವಾಹನದ ವ್ಯವಸ್ಥೆ; ವೈಜ್ಞಾನಿಕ ವಿಧಾನದಿಂದ ಕಸದ ಸಂಸ್ಕರಣೆ; ನಡುವಳಿಕೆಗಳನ್ನು ಬದಲಿಸಲು ಮಾಡುತ್ತಿರುವ ಪ್ರಯತ್ನಗಳು; ಸಾಮರ್ಥ್ಯದ ಉನ್ನತೀಕರಣ ಮತ್ತು ಸ್ವಚ್ಚತೆಗಾಗಿ ಮಾಡಿರುವ ಅವಿಷ್ಕಾರಿಕ ಪ್ರಯತ್ನಗಳು ಮತ್ತು ಈ ಕೆಲಸಕ್ಕೆ ಸಾರ್ವಜನಿಕ ಸಹಭಾಗಿತ್ವ – ಮುಂತಾದವುಗಳು ಸೇರಿರುತ್ತವೆ.
ಈ ಸಮೀಕ್ಷೆಯ ಸಮಯದಲ್ಲಿ ಬೇರೆ ಬೇರೆ ತಂಡಗಳಾಗಿ ನಗರಗಳನ್ನು ತಪಾಸಣೆ ಮಾಡುತ್ತೇವೆ. ನಾಗರೀಕರೊಂದಿಗೆ ಮಾತನಾಡಿ ಅವರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುತ್ತೇವೆ. ‘ಸ್ವಚ್ಚತಾ ಆಪ್’ ನ ಉಪಯೋಗದ ಬಗ್ಗೆ ಮತ್ತು ವಿಭಿನ್ನ ಪ್ರಕಾರದ ಸೇವೆಗಳಲ್ಲಿ ಆಗಬೇಕಾದ ಸುಧಾರಣೆಯ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ. ನಗರದ ಸ್ವಚ್ಚತೆ ಜನರ ಸ್ವಭಾವವಾಗುವಂತೆ, ನಗರದ ಸ್ವಭಾವವಾಗುವಂತೆ ಮಾಡುವ ಎಲ್ಲಾ ವ್ಯವಸ್ಥೆಗಳು ನಗರಗಳಲ್ಲಿ ಮಾಡಲಾಗಿದೆಯೇ ಎನ್ನುವುದನ್ನು ಸಹ ಈ ಸಮೀಕ್ಷೆಯಲ್ಲಿ ನೋಡಲಾಗುತ್ತದೆ. ಸ್ವಚ್ಚತೆ ಬರೀ ಸರ್ಕಾರಕ್ಕೆ ಸೀಮಿತವಾಗಿರದೆ, ಇದರಲ್ಲಿ ಪ್ರತಿಯೊಬ್ಬ ನಾಗರೀಕ ಮತ್ತು ನಾಗರೀಕ ಸಂಘಟನೆಗಳಿಗೆ ಕೂಡ ಹೆಚ್ಚಿನ ಜವಾಬ್ದಾರಿ ಇದೆ. ಮುಂಬರುವ ದಿನಗಳಲ್ಲಿ ನಡೆಯುವ ಸ್ವಚ್ಚತಾ ಸಮೀಕ್ಷೆಯಲ್ಲಿ ಎಲ್ಲರೂ ಹೆಚ್ಚು ಹೆಚ್ಚಾಗಿ ಭಾಗವಹಿಸಿ ಎನ್ನುವುದು ಪ್ರತಿಯೊಬ್ಬ ನಾಗರೀಕರಲ್ಲೂ ನನ್ನ ಮನವಿ.
ನಿಮ್ಮ ನಗರ ಹಿಂದೆ ಉಳಿಯಬಾರದು, ನಿಮ್ಮ ಬೀದಿ, ಬಡಾವಣೆ ಹಿಂದೆ ಉಳಿಯಬಾರದು, ಇದಕ್ಕಾಗಿ ಕ್ರಮಗಳನ್ನು ಕೈಗೊಳ್ಳಿ. ಮನೆಯಲ್ಲಿ ಒಣ ಕಸ ಮತ್ತು ಹಸಿ ಕಸ ಬೇರೆ ಬೇರೆಯಾಗಿ ವಿಂಗಡಿಸುವುದು; ನೀಲಿ ಮತ್ತು ಹಸಿರು ಕಸದ ಡಬ್ಬಿಗಳನ್ನು ಉಪಯೋಗಿಸುವುದು ಇಂದು ನಿಮಗೆ ಅಭ್ಯಾಸವಾಗಿ ಹೋಗಿದೆ ಎನ್ನುವುದರ ಬಗ್ಗೆ ನನಗೆ ಬಲವಾದ ನಂಬಿಕೆಯಿದೆ. reduce, re-use ಮತ್ತು re-cycle ಎನ್ನುವ ಸಿದ್ಧಾಂತ ಕಸಕ್ಕೆ ಬಹಳ ಹೊಂದಿಕೆಯಾಗುತ್ತದೆ. ಈ ಸಮೀಕ್ಷೆಯ ಆಧಾರದ ಮೇಲೆ ನಗರಗಳ ಅರ್ಹತಾ ಶ್ರೇಯಾಂಕವನ್ನು ಮಾಡಿದಾಗ – ಒಂದು ವೇಳೆ ನಿಮ್ಮ ನಗರವು ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದರೆ ಇಡೀ ದೇಶದ ಅರ್ಹತಾ ಶ್ರೇಯಾಂಕದಲ್ಲಿ, ಮತ್ತು ಒಂದು ಲಕ್ಷಕ್ಕೆ ಕಡಿಮೆ ಜನಸಂಖ್ಯೆ ಹೊಂದಿದ್ದರೆ ಪ್ರಾದೇಶಿಕ ಅರ್ಹತಾ ಶ್ರೇಯಾಂಕದಲ್ಲಿ ಉನ್ನತ ಮಟ್ಟದ ಸ್ಥಾನವನ್ನು ಗಿಟ್ಟಿಸಿಕೊಳ್ಳಬೇಕು ಎನ್ನುವುದು ನಿಮ್ಮ ಕನಸಾಗಿರಬೇಕು ಮತ್ತು ಅದಕ್ಕಾಗಿ ನಿಮ್ಮ ಪ್ರಯತ್ನ ಇರಬೇಕು.
2018 ನೇ ಜನವರಿ 4 ರಿಂದ ಮಾರ್ಚ್ 10 ರವರೆಗೆ ನಡೆಯುವ ಈ ಸ್ವಚ್ಚತಾ ಸಮೀಕ್ಷೆಯ ಈ ಆರೋಗ್ಯಕರ ಸ್ಪರ್ಧೆಯಲ್ಲಿ ನೀವು ಹಿಂದುಳಿಯುವುದಿಲ್ಲ ಎನ್ನುವುದು ಪ್ರತಿ ನಗರದಲ್ಲೂ ಒಂದು ಸಾರ್ವಜನಿಕ ಚರ್ಚೆಯ ವಿಷಯವಾಗಬೇಕು. “ನಮ್ಮ ನಗರ – ನಮ್ಮ ಪ್ರಯತ್ನ”, “ನಮ್ಮ ಪ್ರಗತಿ-ದೇಶದ ಪ್ರಗತಿ” ಎನ್ನುವುದು ನಿಮ್ಮೆಲ್ಲರ ಕನಸಾಗಬೇಕು. ಬನ್ನಿ, ಈ ಸಂಕಲ್ಪದೊಂದಿಗೆ ನಾವೆಲ್ಲರೂ ಮತ್ತೊಮ್ಮೆ ಪೂಜ್ಯ ಬಾಪೂರವರನ್ನು ಸ್ಮರಿಸುತ್ತಾ, ಸ್ವಚ್ಚ ಭಾರತದ ಸಂಕಲ್ಪ ಮಾಡುತ್ತಾ ಪುರುಷಾರ್ಥದ ಪರಾಕಾಷ್ಠೆ ತಲುಪೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೊಂದು ವಿಶಯಗಳು ನೋಡುವುದಕ್ಕೆ ಬಹಳ ಚಿಕ್ಕದಾಗಿ ಕಂಡರೂ ಒಂದು ಸಮಾಜದ ರೂಪದಲ್ಲಿ ನಮ್ಮ ಪರಿಚಯದ ಮೇಲೆ ತುಂಬಾ ಪ್ರಭಾವ ಬೀರುವಂತೆ ಮಾಡುತ್ತಿರುತ್ತದೆ. ಇಂದು ‘ಮನದ ಮಾತು’ ಎಂಬ ಈ ಕಾರ್ಯಕ್ರಮದ ಮೂಲಕ ನಾನು ನಿಮ್ಮೊಂದಿಗೆ ಅಂತಹ ಒಂದು ಮಾತನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನಗೆ ಬರುವ ಮಾಹಿತಿಗಳಲ್ಲಿ ಒಂದು ವಿಷಯ ತಿಳಿದು ಬಂತು. ಒಂದುವೇಳೆ ಯಾರಾದರೂ ಮುಸ್ಲಿಂ ಮಹಿಳೆ ಹಜ್ ಯಾತ್ರೆಗೆ ಹೋಗಲು ಬಯಸಿದರೆ ಅವರು ಮಹರಮ್ ಅಂದರೆ ತಮ್ಮ ಪುರುಷ ರಕ್ಷಕರಿಲ್ಲದೆ ಅಲ್ಲಿಗೆ ಹೋಗುವಂತಿಲ್ಲ. ನಾನು ಇದರ ಬಗ್ಗೆ ಮೊದಲ ಬಾರಿ ಕೇಳಿದಾಗ – ಇದು ಹೀಗೇಕೆ? ಈ ರೀತಿಯ ಕಾನೂನು ಯಾರು ಮಾಡಿರಬಹುದು? ಈ ತಾರತಮ್ಯ ಏಕೆ? ಎಂದು ಯೋಚಿಸತೊಡಗಿದೆ. ಅದರ ಬಗ್ಗೆ ಆಳವಾಗಿ ಚಿಂತಿಸಿದಾಗ ನನಗೆ ಆಶ್ಚರ್ಯವಾಯಿತು ಏಕೆಂದರೆ ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕವೂ ಈ ನಿರ್ಬಂಧ ಹಾಕಿದವರು ನಾವೇ ಆಗಿದ್ದೇವೆ. ದಶಕಗಳಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿತ್ತು, ಆದರೆ ಅದರ ಬಗ್ಗೆ ಚರ್ಚೆಯೇ ಆಗುತ್ತಿರಲಿಲ್ಲ. ಎಷ್ಟೋ ಮುಸ್ಲಿಂ ದೇಶಗಳಲ್ಲಿ ಕೂಡ ಈ ನಿಯಮ ಇಲ್ಲ. ಆದರೆ ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಈ ಅಧಿಕಾರ ಇರಲಿಲ್ಲ. ನಮ್ಮ ಸರಕಾರವು ಇದರ ಬಗ್ಗೆ ಗಮನ ಹರಿಸಿ, ನಮ್ಮ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಸಹ ಅವಶ್ಯಕವಾದ ದಿಟ್ಟಹೆಜ್ಜೆ ಇಟ್ಟು, 70 ವರ್ಷಗಳಿಂದ ನಡೆದುಬರುತ್ತಿರುವ ಸಂಪ್ರದಾಯವನ್ನು ಮುರಿದು ಈ ನಿರ್ಬಂಧವನ್ನು ನಾವು ತೆಗೆದುಹಾಕಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಇಂದು ಮುಸ್ಲಿಂ ಮಹಿಳೆಯರು ಪುರುಷ ರಕ್ಷಕರ ಜೊತೆ ಇಲ್ಲದೆ ಹಜ್ ಯಾತ್ರೆಗೆ ಹೋಗಬಹುದು.
ಈ ಸಾರಿ ಸರಿಸುಮಾರು 1300 ಮುಸ್ಲಿಂ ಮಹಿಳೆಯರು ಪುರುಷ ರಕ್ಷಕರರಿಲ್ಲದೆ ಹಜ್ ಯಾತ್ರೆಗೆ ಹೋಗಲು ಅರ್ಜಿ ಹಾಕಿದ್ದಾರೆ ಮತ್ತು ದೇಶದ ಬೇರೆ ಬೇರೆ ಭಾಗಗಳಿಂದ –ಕೇರಳದಿಂದ ಉತ್ತರದವರೆಗೆ ಮಹಿಳೆಯರು ಹೆಚ್ಹು ಹೆಚ್ಚಾಗಿ ಹಜ್ ಯಾತ್ರೆ ಕೈಗೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬಂಟಿಗರಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ಹಜ್ ಯಾತ್ರೆಗೆ ಹೋಗಲು ಖಚಿತವಾಗಿ ಅನುಮತಿ ದೊರಕಿಸಿಕೊಡುವಂತೆ ನಾನು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ಸೂಚನೆ ನೀಡಿದ್ದೇನೆ. ಸಾಮಾನ್ಯವಾಗಿ ಹಜ್ ಯಾತ್ರಿಗಳಿಗೆ ಲಾಟರಿ ವ್ಯವಸ್ಥೆ ಇದೆ. ಆದರೆ ಒಬ್ಬೊಂಟಿ ಮಹಿಳೆಯರನ್ನು ಈ ಲಾಟರಿ ವ್ಯವಸ್ಥೆಯಿಂದ ಹೊರಗಿಟ್ಟು ಅವರಿಗೆ ವಿಶೇಷ ವರ್ಗದಲ್ಲಿ ಅವಕಾಶ ಕೊಡಬೇಕು ಎಂದು ನಾನು ಬಯಸುತ್ತೇನೆ. ಭಾರತದ ವಿಕಾಸ ಯಾತ್ರೆಯು ನಮ್ಮ ಸ್ತ್ರೀ ಶಕ್ತಿಯ ಬಲದಿಂದ, ಅವರ ಪ್ರತಿಭೆಯ ಭರವಸೆಯಿಂದ ಮುಂದುವರೆಯುತ್ತಿದೆ ಮತ್ತು ಮುಂದುವರೆಯುತ್ತಲೇ ಇರುತ್ತದೆ. ನಮ್ಮ ಮಹಿಳೆಯರಿಗೆ ಕೂಡ ಪುರುಷರಿಗೆ ಸಮಾನವಾದ ಅಧಿಕಾರ ಸಿಗಲಿ, ಸಮಾನ ಅವಕಾಶಗಳು ಸಿಗಲಿ, ಅದರಿಂದ ಅವರೂ ಸಹ ಪ್ರಗತಿಯ ಮಾರ್ಗದಲ್ಲಿ ಒಟ್ಟೊಟ್ಟಿಗೆ ಮುಂದುವರೆಯುವಂತಾಗಲಿ ಎನ್ನುವುದು ನಮ್ಮ ನಿರಂತರ ಪ್ರಯತ್ನವಾಗಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ಜನವರಿ 26 ನಮಗೆ ಒಂದು ಐತಿಹಾಸಿಕ ಪರ್ವವಾಗಿದೆ. ಆದರೆ ಈ ವರ್ಷ 26 ಜನವರಿ 2018 ರ ದಿನ ವಿಶೇಷ ರೂಪದಲ್ಲಿ ನೆನಪಿನಲ್ಲಿ ಉಳಿಯಲಿದೆ. ಈ ವರ್ಷ ಗಣತಂತ್ರ ದಿವಸದ ಸಮಾರೋಪ ಸಮಾರಂಭಕ್ಕೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಎಲ್ಲಾ ಹತ್ತು ದೇಶಗಳ ಮುಖಂಡರು ಮುಖ್ಯ ಅತಿಥಿಗಳಾಗಿ ಭಾರತಕ್ಕೆ ಬರಲಿದ್ದಾರೆ. ಗಣತಂತ್ರ ದಿವಸದಂದು ಈ ಸಾರಿ ಒಬ್ಬರಲ್ಲ, ಹತ್ತು ಮುಖ್ಯ ಅತಿಥಿಗಳು ಇರುತ್ತಾರೆ. ಭಾರತದ ಇತಿಹಾಸದಲ್ಲಿ ಹಿಂದೆಂದೂ ಹೀಗೆ ಆಗಿರಲಿಲ್ಲ. 2017, ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಎಲ್ಲಾ ದೇಶಗಳು ಹಾಗೂ ಭಾರತಕ್ಕೆ ಒಂದು ರೀತಿಯ ವಿಶೇಷವಾಗಿದೆ. 2017 ರಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟವು ತನ್ನ 50 ವರ್ಷವನ್ನು ಪೂರೈಸಿತು ಮತ್ತು ಇದೇ 2017 ರಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಜೊತೆ ಭಾರತದ ಸಹಭಾಗಿತ್ವದ 25 ವರ್ಷಗಳು ಸಹ ಪೂರ್ತಿಯಾಗಿವೆ. ಜನವರಿ 26 ರಂದು ವಿಶ್ವದ ಹತ್ತು ದೇಶಗಳ ಈ ಮಹಾನ್ ನಾಯಕರುಗಳು ಒಗ್ಗೂಡುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ಪ್ರೀತಿಯ ದೇಶವಾಸಿಗಳೇ, ಇದು ಹಬ್ಬಗಳ ಋತುವಾಗಿದೆ. ಹಾಗೆಯೇ ನಮ್ಮ ದೇಶ ಒಂದು ರೀತಿಯಲ್ಲಿ ಹಬ್ಬಗಳ ದೇಶವಾಗಿದೆ. ಬಹುಶಃ ಹಬ್ಬದೊಂದಿಗೆ ಗುರುತಿಸದ ದಿನಗಳು ನಮ್ಮಲ್ಲಿ ಇಲ್ಲದೇ ಇರಬಹುದು. ಈಗಷ್ಟೇ ನಾವೆಲ್ಲರೂ ಕ್ರಿಸ್ಮಸ್ ಆಚರಿಸಿದ್ದೇವೆ ಮತ್ತು ಮುಂದೆ ಹೊಸ ವರ್ಷ ಬರಲಿದೆ. ಬರಲಿರುವ ಹೊಸ ವರ್ಷ ನಿಮಗೆಲ್ಲರಿಗೂ ಹೆಚ್ಚಿನ ಸಂತೋಷ, ಸುಖ ಮತ್ತು ಸಮೃದ್ಧಿಯನ್ನು ಹೊತ್ತು ತರಲಿ. ನಾವೆಲ್ಲರೂ ಹೊಸ ಆಶಯ, ಹೊಸ ಉತ್ಸಾಹ, ಹೊಸ ಭರವಸೆ ಮತ್ತು ಹೊಸ ಸಂಕಲ್ಪದೊಂದಿಗೆ ಮುಂದೆ ನಡೆಯೋಣ, ದೇಶವನ್ನೂ ಸಹ ಮುನ್ನಡೆಸೋಣ. ಜನವರಿ ತಿಂಗಳು ಸೂರ್ಯನು ಉತ್ತರಾಯಣಕ್ಕೆ ಪಥ ಬದಲಿಸುವ ಕಾಲ ಮತ್ತು ಇದೇ ತಿಂಗಳಲ್ಲಿ ಮಕರ ಸಂಕ್ರಾಂತಿ ಆಚರಿಸುತ್ತೇವೆ. ಇದು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಪರ್ವ.
ಹಾಗೆಯೇ ಕೂಡ ನಮ್ಮ ಪ್ರತಿಯೊಂದು ಕಾಲವೂ ಒಂದಿಲ್ಲೊಂದು ರೂಪದಲ್ಲಿ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಆದರೆ ವಿವಿಧತೆಯಿಂದ ತುಂಬಿರುವ ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯ ಈ ಅದ್ಭುತ ಘಟನೆಯನ್ನು ಬೇರೆ ಬೇರೆ ರೂಪದಲ್ಲಿ ಆಚರಿಸುವ ಸಂಪ್ರದಾಯವಿದೆ. ಪಂಜಾಬ್ ಮತ್ತು ಉತ್ತರಭಾರತದಲ್ಲಿ ‘ಲೋಹಡಿ’ ಯ ಆನಂದ ಇರುತ್ತದೆ, ಯು,ಪಿ. ಮತ್ತು ಬಿಹಾರಗಳಲ್ಲಿ ಖಿಚಡಿ ಮತ್ತು ತಿಲ್-ಸಂಕ್ರಾಂತಿಯ ನಿರೀಕ್ಷೆ ಇರುತ್ತದೆ. ರಾಜಾಸ್ಥಾನದಲ್ಲಿ ‘ಸಂಕ್ರಾಂತ್’ ಎಂದು ಹೇಳಲಿ, ಅಸ್ಸಾಂ ನಲ್ಲಿ ‘ಮಾಘ-ಬಿಹೂ’ ಅಥವಾ ತಮಿಳುನಾಡಿನಲ್ಲಿ ‘ಪೊಂಗಲ್’ ಎನ್ನಲಿ, ಇವೆಲ್ಲಾ ಹಬ್ಬಗಳೂ ಆಯಾ ಪ್ರದೇಶಗಳಲ್ಲಿ ವಿಶೇಷವಾಗಿವೆ ಮತ್ತು ಅವುಗಳಿಗೆ ಅದರದ್ದೇ ಆದ ಮಹತ್ವ ಇದೆ. ಈ ಎಲ್ಲಾ ಹಬ್ಬಗಳೂ ಬಹುಶಃ ಜನವರಿ 13 ರಿಂದ 17 ರ ಮಧ್ಯೆ ಆಚರಿಸಲ್ಪಡುತ್ತವೆ. ಈ ಎಲ್ಲಾ ಹಬ್ಬಗಳ ಹೆಸರು ಬೇರೆ ಬೇರೆ, ಆದರೆ ಇವುಗಳ ಮೂಲ ತತ್ವ ಒಂದೇ ಆಗಿದೆ. ಅದೆಂದರೆ ಪ್ರಕೃತಿ ಮತ್ತು ಕೃಷಿಯ ಜೊತೆಗಿನ ಸಂಬಂಧ.
ಎಲ್ಲಾ ದೇಶವಾಸಿಗಳಿಗೂ ಈ ಹಬ್ಬಗಳ ಹಾರ್ದಿಕ ಶುಭಾಶಯಗಳು. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೊಸ ವರ್ಷ 2018 ರ ಶುಭಾಶಯಗಳು. ಅನಂತಾನಂತ ಧನ್ಯವಾದಗಳು ಪ್ರೀತಿಯ ದೇಶವಾಸಿಗಳೇ.
2018 ರಲ್ಲಿ ಮತ್ತೊಮ್ಮೆ ಮಾತನಾಡೋಣ.
ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ.
ನಮ್ಮ ದೇಶದಲ್ಲಿ ಅತ್ಯಂತ ಕಠಿಣ ನಿಯಮ ನಿಷ್ಟೆಗಳಿಂದ ಪಾಲಿಸುವ ಛಟ್ ಪೂಜೆ ದೀಪಾವಳಿ 6 ದಿನಗಳ ನಂತರ ಆಚರಿಸುವ ಬಹು ದೊಡ್ಡ ಹಬ್ಬವಾಗಿದೆ. ಈ ಹಬ್ಬದಲ್ಲಿ ಊಟ ಉಪಚರದಿಂದ ಉಡುಗೆ ತೊಡುಗೆಗಳವರೆಗೆ ಪಾರಂಪರಿಕ ನಿಯಮಗಳನ್ನು ಪಾಲಿಸಲಾಗುತ್ತದೆ. ಛಟ್ ಪೂಜೆಯ ಪವಿತ್ರ ಋತು ಸಂಪೂರ್ಣವಾಗಿ ಪೃಕ್ರತಿ ಮತ್ತು ಪೃಕ್ರತಿ ಉಪಾಸನೆಯೊಂದಿಗೆ ಮಿಳಿತವಾಗಿದೆ. ಸೂರ್ಯ ಮತ್ತು ಜಲ ಛಟ್ ಪೂಜೆಯ ಆರಾಧನೆಯ ಕೇಂದ್ರ ಬಿಂದುಗಳಾಗಿವೆ. ಹಾಗಾಗಿ ಬಿದಿರು ಮತ್ತು ಮಣ್ಣಿನ ಪಾತ್ರೆಗಳು, ಗೆಡ್ಡೆಗಳು, ಗಿಡ ಮೂಲಿಕೆಗಳು ಈ ಪೂಜಾವಿಧಿಯ ಅವಿಭಾಜ್ಯ ಅಂಗವಾಗಿವೆ. ಭಕ್ತಿಯ ಈ ಮಹಾಪರ್ವದಲ್ಲಿ ಉದಯಿಸುವ ಸೂರ್ಯನ ಆರಾಧನೆ ಮತ್ತು ಅಸ್ತಮಿಸುವ ಸೂರ್ಯನ ಪೂಜೆಯ ಸಂದೇಶಗಳು ಅದ್ವಿತೀಯವಾಗಿದ್ದು ಪರಿಪೂರ್ಣವಾಗಿವೆ. ವಿಶ್ವವೆಲ್ಲ ಉದಯಿಸುವ ಸೂರ್ಯನ ಪೂಜೆಯಲ್ಲಿ ನಿರತವಾಗಿದ್ದರೆ, ಛಟ್ ಪೂಜೆ ನಮಗೆ ಸೂರ್ಯನ ಅಸ್ತಮಿಸುವಿಕೆ ನಿಶ್ಚಿತವೇ ಆದ್ದರಿಂದ ಅವನ ಆರಾಧನೆಯ ಸಂದೇಶವನ್ನೂ ನೀಡುತ್ತದೆ. ನಮ್ಮ ಜೀವನದಲ್ಲಿ ಸ್ವಚ್ಛತೆಯ ಮಹತ್ವದ ಕುರಿತಾದ ಅಭಿವ್ಯಕ್ತಿ ಕೂಡಾ ಈ ಹಬ್ಬದಲ್ಲಿದೆ. ಛಟ್ ಪೂಜೆಗೆ ಮೊದಲು ಸಂಪೂರ್ಣ ಮನೆಯ ಸ್ವಚ್ಛತೆಯ ಜೊತೆಗೆ ನದಿ, ಹಳ್ಳ ಕೊಳ್ಳಗಳ ತೀರಗಳ, ಪೂಜಾ ಸ್ಥಳವಾದ ಘಾಟ್ಗಳ ಸ್ವಚ್ಛತೆಯನ್ನು ಸಾಕಷ್ಟು ಹುಮ್ಮಸ್ಸಿನಿಂದ ಎಲ್ಲರೂ ಒಟ್ಟಾಗಿ ಮಾಡುತ್ತಾರೆ. ಸೂರ್ಯ ವಂದನೆ ಇಲ್ಲವೆ ಛಟ್ ಪೂಜೆ – ಪರಿಸರ ಸಂರಕ್ಷಣೆ, ರೋಗಗಳ ನಿವಾರಣೆ ಮತ್ತು ನೀತಿ ನಿಯಮಗಳ ಋತುವಾಗಿದೆ.
ಸಾಮಾನ್ಯವಾಗಿ ಏನನ್ನಾದರೂ ಕೇಳಿ ಪಡೆಯುವುದನ್ನು ಅತ್ಯಂತ ಹೀನ ಭಾವನೆಯಿಂದ ಕಾಣುತ್ತಾರೆ ಆದರೆ ಛಟ್ ಪೂಜೆಯಲ್ಲಿ ಬೆಳಗ್ಗೆ ಅಘ್ರ್ಯ ನೀಡಿದ ನಂತರ ಪ್ರಸಾದವನ್ನು ಕೇಳಿ ತಿನ್ನುವ ಒಂದು ವಿಶಿಷ್ಟವಾದ ಸಂಪ್ರದಾಯವಿದೆ. ಪ್ರಸಾದವನ್ನು ಕೇಳಿ ಪಡೆಯುವ ಈ ಸಂಪ್ರದಾಯದೊಂದಿಗೆ ಅಹಂಕಾರವನ್ನು ನಾಶಗೊಳಿಸುವ ಉದ್ದೇಶವಿದೆ ಎಂದು ಹೇಳಲಾಗುತ್ತದೆ. ಅಹಂಕಾರವೆಂಬುದು ಮಾನವನ ಪ್ರಗತಿಯಲ್ಲಿ ಅಡ್ಡಗೋಡೆಯಾಗಿ ನಿಲ್ಲುತ್ತದೆ. ಭಾರತದ ಈ ಮಹತ್ತರವಾದ ಸಂಪ್ರದಾಯದ ಬಗ್ಗೆ ಎಲ್ಲರಿಗೂ ಹೆಮ್ಮೆ ಎನಿಸುವುದು ಸಹಜವೇ.
ನನ್ನ ಪ್ರಿಯ ದೇಶವಾಸಿಗಳೇ, ಮನದ ಮಾತಿನ ಪ್ರಶಂಸೆಯೂ ಆಗುತ್ತದೆ ಮತ್ತು ಆ ಕುರಿತು ಆಲೋಚನೆಯೂ ನಡೆಯುತ್ತದೆ. ಆದರೆ ನಾನು ಮನದ ಮಾತಿನ ಪ್ರಭಾವದ ಬಗ್ಗೆ ಅವಲೋಕಿಸಿದಾಗ ಮನದ ಮಾತು ನೂರಕ್ಕೆ ನೂರು ಜನರ ಮನದಲ್ಲಿ ಒಂದು ಅವಿನಾಭಾವ ಸಂಬಂಧದೊಂದಿಗೆ ಬೆರೆತು ಹೋಗಿದೆ ಎಂಬ ಧೃಡ ವಿಶ್ವಾಸ ಮೂಡುತ್ತದೆ. ಖಾದಿ ಮತ್ತು ಕೈಮಗ್ಗದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಗಾಂಧಿ ಜಯಂತಿಯ ಸಂದರ್ಭದಲ್ಲಿ ನಾನು ಯಾವಾಗಲೂ ಖಾದಿ ಮತ್ತು ಕೈಮಗ್ಗದ ಬಗ್ಗೆ ಮಾತನಾಡುತ್ತೇನೆ. ಅದರ ಪರಿಣಾಮವೇನೆಂದು ತಿಳಿದು ನಿಮಗೂ ಸಂತೋಷವಾಗಬಹುದು. ಅಕ್ಟೋಬರ್ 17ರಂದು ಧನ್ತೆರಸ್ ಆಚರಣೆಯ ದಿನ ದೆಹಲಿಯ ಖಾದಿಯ ಗ್ರಾಮೋದ್ಯೋಗ ಭವನದ ಮಳಿಗೆಯಲ್ಲಿ ಸುಮಾರು 1 ಕೋಟಿ 20 ಲಕ್ಷ ರೂಪಾಯಿಯ ದಾಖಲೆಯ ವ್ಯಾಪಾರವಾಗಿದೆ ಎಂದು ನನಗೆ ತಿಳಿದು ಬಂದಿದೆ. ಖಾದಿ ಮತ್ತು ಕೈಮಗ್ಗದ ಒಂದೇ ಮಳಿಗೆಯಲ್ಲಿ ಇಷ್ಟೊಂದು ವ್ಯಾಪಾರವಾಗಿದೆ ಎಂದು ಕೇಳಿ ನಿಮಗೂ ಆನಂದವಾಗಿರಬಹುದು. ದೀಪಾವಳಿಯ ಸಂದರ್ಭದಲ್ಲಿ ಖಾದಿ ಗಿಫ್ಟ್ ಕೂಪನ್ ಮಾರಾಟದಲ್ಲಿ ಸರಿ ಸುಮಾರು 680 ಪ್ರತಿಶತದಷ್ಟು ವೃದ್ಧಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಖಾದಿ ಮತ್ತು ಕರಕುಶಲ ವಸ್ತುಗಳ ಒಟ್ಟು ವ್ಯಾಪಾರದಲ್ಲೂ ಸುಮಾರು ಶೇಕಡಾ 90ರಷ್ಟು ಏರಿಕೆಯಾಗಿದೆ. ಇದು ಏನನ್ನು ತೋರಿಸುತ್ತದೆ ಎಂದರೆ ಇಂದು ಹಿರಿಯರು-ಕಿರಿಯರು, ಮಹಿಳೆಯರು, ಎಲ್ಲ ವಯೋಮಾನದವರು ಖಾದಿ ಮತ್ತು ಕೈಮಗ್ಗದ ವಸ್ತುಗಳನ್ನು ಇಷ್ಟಪಡುತ್ತಿದ್ದಾರೆ ಎಂದು. ಇದರಿಂದ ಎಷ್ಟೋ ಜನ ನೇಕಾರ ಪರಿವಾರಗಳಿಗೆ, ಎಷ್ಟೋ ಜನ ಬಡ ಕುಟುಂಬಗಳಿಗೆ, ಕೈಮಗ್ಗದ ಕೆಲಸ ಮಾಡುವವರಿಗೆ ಎಷ್ಟು ಲಾಭವಾಗಿರಬಹುದು ಎಂದು ನಾನು ಅಂದಾಜಿಸಬಲ್ಲೆ. ಹಿಂದೆ ಖಾದಿ ಎಂಬುದು ‘ದೇಶಕ್ಕಾಗಿ ಖಾದಿ’ ಆಗಿತ್ತು ಆದರೆ ನಾವು ‘ಫೇಷನ್ ಗಾಗಿ ಖಾದಿ’ ಎಂದು ಹೇಳಿದೆವು, ಆದರೆ ಕಳೆದ ಕೆಲ ಸಮಯದ ಅನುಭವದಿಂದ ‘ದೇಶಕ್ಕಾಗಿ ಖಾದಿ’ ಮತ್ತು ‘ಫೇಷನ್ ಗಾಗಿ ಖಾದಿ’ ನಂತರ ಈಗ ‘ಪರಿವರ್ತನೆಗಾಗಿ ( ಬದಲಾವಣೆ/ ರೂಪಾಂತರ) ಖಾದಿ ‘ಎಂಬ ಸ್ಥಾನವನ್ನು ಆಕ್ರಮಿಸುತ್ತಿದೆ ಎಂದು ಹೇಳಬಲ್ಲೆ. ಖಾದಿ ಮತ್ತು ಕೈಮಗ್ಗ ಅತೀ ಬಡವರ ಜೀವನದಲ್ಲೂ ಬದಲಾವಣೆ ತರುವುದರ ಜೊತೆಗೆ ಅವರನ್ನು ಸಶಕ್ತರನ್ನಾಗಿಸುವ ಶಕ್ತಿಯುತ ಸಾಧನವಾಗಿ ಹೊರಹೊಮ್ಮುತ್ತಿದೆ. ಗ್ರಾಮೋದಯದಲ್ಲಿ ಇದು ಬಹು ದೊಡ್ಡ ಪಾತ್ರ ವಹಿಸುತ್ತಿದೆ.
ಭದ್ರತಾ ಪಡೆಯವರೆಂದಿಗೆ ನನ್ನ ದೀಪವಳಿ ಆಚರಣೆಯ ಅನುಭವದ ಬಗ್ಗೆ ಮತ್ತು ನಮ್ಮ ಭದ್ರತಾ ಪಡೆಯ ಸೇನಾನಿಗಳು ಹೇಗೆ ದೀಪಾವಳಿ ಆಚರಿಸುತ್ತಾರೆ ಎಂದು ತಿಳಿದುಕೊಳ್ಳಬೇಕೆಂದು ಶ್ರೀಯುತ ರಾಜನ್ ಭಟ್ ಎಂಬುವರು ನರೇಂದ್ರ ಆಪ್ ಗೆ ಬರೆದು ತಿಳಿಸಿದ್ದಾರೆ. ಶ್ರೀಮಾನ್ ತೇಜಸ್ ಗಾಯಕ್ ವಾಡ್ ಎಂಬುವವರು ನಮ್ಮ ಮನೆಯ ಮಿಠಾಯಿ ಸುರಕ್ಷಾ ಬಲದವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆಯೇ? ನಮಗೂ ವೀರ ಸೇನಾನಿಗಳ ನೆನಪಾಗುತ್ತದೆ ಎಂದು ನಮಗೂ ಅನ್ನಿಸುತ್ತದೆ. ನೀವೆಲ್ಲರೂ ದೀಪಾವಳಿಯನ್ನು ಹರ್ಷ ಉಲ್ಲಾಸದಿಂದ ಆಚರಿಸಬಹುದು. ನನಗಂತೂ ಈ ವರ್ಷವೂ ದೀಪಾವಳಿ ಒಂದು ವಿಶಿಷ್ಟ ಅನುಭವವನ್ನು ಹೊತ್ತು ತಂದಿತ್ತು. ನನಗೆ ಮತ್ತೊಮ್ಮೆ ಗಡಿಯಲ್ಲಿ ಕಟ್ಟೆಚ್ಚರದಿಂದ ಕಾಯುತ್ತಿರುವ ವೀರ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸೌಭಾಗ್ಯ ದೊರೆಯಿತು. ಈ ಬಾರಿ ಜಮ್ಮು – ಕಾಶಮೀರದ ಗುರೇಜ್ ನಲ್ಲಿ ಭದ್ರತಾ ಪಡೆಯವರೊಂದಿಗೆ ದೀಪಾವಳಿ ಆಚರಿಸಿದ್ದು ನನಗೆ ಅವಿಸ್ಮರಣೀಯವಾಗಿದೆ. ಗಡಿಯಲ್ಲಿ ಎಂಥ ಕಠಿಣ ಮತ್ತು ವಿಷಮ ಪರಿಸ್ಥಿತಿಗಳನ್ನು ಎದುರಿಸುತ್ತಾ ನಮ್ಮ ಸೇನಾನಿಗಳು ದೇಶದ ರಕ್ಷಣೆ ಮಾಡುತ್ತಾರೆ. ಅವರ ಆ ಸಂಘರ್ಷ, ಸಮರ್ಪಣೆ ಮತ್ತು ತ್ಯಾಗಕ್ಕೆ ಎಲ್ಲ ದೇಶ ವಾಸಿಗಳ ಪರವಾಗಿ ನಮ್ಮ ಭದ್ರತಾ ಪಡೆಯ ಪ್ರತಿ ಸೈನಿಕನನ್ನು ಗೌರವಿಸುತ್ತೇನೆ. ನಮಗೆ ಅವಕಾಶ ಸಿಕ್ಕಾಗ ನಮ್ಮ ಸೈನಿಕರ ಅನುಭವಗಳನ್ನು ತಿಳಿದುಕೊಳ್ಳಬೇಕು. ಅವರ ಯಶೋಗಾಥೆಗಳನ್ನು ಕೇಳಬೇಕು, ನಮ್ಮಲ್ಲಿ ಬಹಳಷ್ಟು ಜನರಿಗೆ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರು ಕೇವಲ ನಮ್ಮ ಗಡಿಯಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಶಾಂತಿ ಸ್ಥಾಪಿಸುವ ಮಹತ್ವಪೂರ್ಣ ಪಾತ್ರ ವಹಿಸುತ್ತಿದ್ದಾರೆ. ಶಾಂತಿದೂತರುಗಳಾಗಿ ಅವರು ವಿಶ್ವದಲ್ಲೇ ಹಿಂದೂಸ್ತಾನದ ಹೆಸರನ್ನು ಬೆಳಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಕ್ಟೋಬರ್ 24ರಂದು ವಿಶ್ವಾದ್ಯಂತ ಯುಎನ್ ಡೇ, ಸಂಯುಕ್ತ ರಾಷ್ಟ್ರ ದಿನವನ್ನು ಆಚರಿಸಲಾಯಿತು. ವಿಶ್ವದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವ ವಿಶ್ವಸಂಸ್ಥೆಯ ಪ್ರಯತ್ನವನ್ನು ಅದರ ಸಕಾರಾತ್ಮಕ ಪಾತ್ರವನ್ನು ಎಲ್ಲರೂ ನೆನೆಯುತ್ತಾರೆ. ಅಲ್ಲದೆ ನಾವಂತೂ ವಸುದೈವ ಕುಟುಂಬಕಂ ಎಂಬುದನ್ನು ನಂಬಿದವರು. ಅಂದರೆ, ಸಂಪೂರ್ಣ ವಿಶ್ವ ನಮಮ ಪರಿವಾರ ಎಂದು. ಇದೇ ವಿಶ್ವಾಸದಿಂದಾಗಿಯೇ ಭಾರತ ಆರಂಭದಿಂದಲೂ ವಿಶ್ವಸಂಸ್ಥೆಯ ವಿಭಿನ್ನ ಮಹತ್ವಪೂರ್ಣವಾದ ಉಪಕ್ರಮಗಳಲ್ಲಿ ಸಕ್ರಿಯ ಪಾಲುದಾರಿಕೆಯನ್ನು ನಿರ್ವಹಿಸುತ್ತಾ ಬಂದಿದೆ. ನಿಮಗೆ ಗೊತ್ತೇ ಇದೆ ಭಾರತದ ಸಂವಿಧಾನದ ಪ್ರಸ್ತಾವನೆಯು ಮತ್ತು ವಿಶ್ವಸಂಸ್ಥೆಯ ಯೆನ್ ಚಾಪ್ಟರ್ ಪ್ರಸ್ತಾವನೆಯ ವಿ ದ ಪೀಪಲ್ ಎಂಬ ಶಬ್ದಗಳೊಂದಿಗೆ ಆರಂಭವಾಗುತ್ತದೆ.
ಭಾರತ ಸ್ತ್ರೀ ಸಮಾನೆತ ಬಗ್ಗೆ ಎಂದಿಗೂ ಒತ್ತು ನೀಡುತ್ತಾ ಬಂದಿದೆ. ಅದೇ ರೀತಿ ವಿಶ್ವಸಂಸ್ಥೆಯ ಮಾನವ ಹಕ್ಕು ಘೋಷಣೆ ಇದರ ಜ್ವಲಂತ ಸಾಕ್ಷಿಯಾಗಿದೆ. ಅದರ ಉಪಕ್ರಮ ವಾಕ್ಯದಲ್ಲಿ ಪ್ರಸ್ತಾಪಿಸಿದ್ದೇನೆಂದರೆ ಎಲ್ಲಾ ಮನುಷ್ಯರೂ ಮುಕ್ತರು ಮತ್ತು ಸಮಾನರು ಅದನ್ನು ಭಾರತದ ಪ್ರತಿನಿಧಿ ಹಂಸಾ ಮೆಹತಾ ಅವರ ಪ್ರಯತ್ನದಿಂದಾಗಿ ಬದಲಾಯಿಸಲಾಯಿತು ಮತ್ತು ನಂತರ ಎಲ್ಲ ಮಾನವರೂ ಹುಟ್ಟುತ್ತಾರೆ, ಮುಕ್ತವಾಗಿ ಮತ್ತು ಸಮಾನರಾಗಿ ಎಂದು ಸ್ವೀಕರಿಸಲಾಯಿತು. ಇದೊಂದು ಅತ್ಯಂತ ಸಣ್ಣ ಬದಲಾವಣೆ ಎನ್ನಿಸಬಹುದು. ಆದರೆ ಇದೊಂದು ಆರೋಗ್ಯಪೂರ್ಣ ವಿಚಾರ ಎಂಬುದು ಬಿಂಬಿತವಾಗುತ್ತದೆ. ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆಯು ವಿಶ್ವಸಂಸ್ಥೆಯ ಸಂಪೂರ್ಣ ರಕ್ಷಣೆಯ ಛತ್ರಿಯಾಗಿದ್ದು ಇದರಲ್ಲಿ ಭಾರತದ ಪಾತ್ರ ಒಂದು ಮಹತ್ವಪೂರ್ಣ ಮತ್ತು ಬಹುದೊಡ್ಡ ಪಾಲುದಾರಿಕೆಯಾಗಿದೆ. ವಿಶ್ವಸಂಸ್ಥೆಯ ಶಾಂತಿ ರಕ್ಷಣೆಯ ಮಿಶನ್ ನಲ್ಲಿ ಭಾರತ ಎಂದಿಗೂ ಸಕ್ರಿಯ ಪಾತ್ರವನ್ನು ವಹಿಸುತ್ತಾ ಬಂದಿದೆ. ನಿಮ್ಮಲ್ಲಿ ಬಹಳಷ್ಟು ಜನರಿಗೆ ಈ ವಿಷಯ ಬಹುಶಃ ಮೊದಲ ಬಾರಿಗೆ ತಿಳಿಯುತ್ತಿರಬಹುದು. 18 ಸಾವಿರಕ್ಕಿಂತಲೂ ಹೆಚ್ಚು ಭಾರತೀಯ ಭದ್ರತಾ ಪಡೆ ಸಿಬ್ಬಂದಿ ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸುಮಾರು 7 ಸಾವಿರ ಸೈನಿಕರು ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಇದು ವಿಶ್ವದಲ್ಲೇ 3ನೇ ಅತಿದೊಡ್ಡ ಸಂಖ್ಯೆಯಾಗಿದೆ. ಆಗಸ್ಟ್ 2017ರ ವರೆಗೆ ವಿಶ್ವಸಂಸ್ಥೆಯ ವಿಶ್ವಾದ್ಯಂತ ನಡೆಸಿದ 71 ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆ ಸುಮಾರು 50 ಪ್ರಕ್ರಿಯೆಗಳಲ್ಲಿ ಭಾರತೀಯ ಸೈನಿಕರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಕೊರಿಯಾ, ಕೊಂಬೊಡಿಯಾ , ಲಾನ್, ವಿಯೆಟ್ನಾಂ, ಕೋಂಗೋ, ಸಿಪ್ರಸ್, ಲಿಬೆರಿಯಾ , ಲೆಬೆನೋನ್, ಸುಡಾನ್ ಸೇರಿದಂತೆ ವಿಶ್ವದ ಭೂ ಭಾಗದ ಅನೇಕ ದೇಶಗಳಲ್ಲಿ ಈ ಕಾರ್ಯಪ್ರಕ್ರಿಯೆಗಳು ನಡೆದಿವೆ. ಕಾಂಗೋ ಮತ್ತು ದಕ್ಷಿಣ ಸೂಡಾನ್ ಗಳಲ್ಲಿ ಭಾರತೀಯ ಸೇನಾ ಆಸ್ಪತ್ರೆಯಲ್ಲಿ 20 ಸಾವಿರಕ್ಕೂ ಅಧಿಕ ರೋಗಿಗಳ ಶುಶ್ರೂಷೆ ಮಾಡಲಾಗಿದೆ ಮತ್ತು ಅಸಂಖ್ಯಾತ ಜನರನ್ನು ರಕ್ಷಿಸಲಾಗಿದೆ. ಭಾರತೀಯ ಭದ್ರತಾ ಪಡೆಯವರು ವಿಭಿನ್ನ ರಾಷ್ಟ್ರಗಳಲ್ಲಿ ಕೇವಲ ಅಲ್ಲಿ ಜನರನ್ನು ರಕ್ಷಿಸುವುದು ಮಾತ್ರವಲ್ಲದೆ ಜನಹಿತ ಕಾರ್ಯ ಪ್ರಕ್ರಿಯೆ ನಡೆಸಿ ಅಲ್ಲಿಯ ಜನರ ಮನವನ್ನೂ ಗೆದ್ದಿದ್ದಾರೆ. ಭಾರತೀಯ ಮಹಿಳೆಯರು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೂಲ್ಯ ಪಾತ್ರವನ್ನು ವಹಿಸಿದ್ದಾರೆ. ಲಿಬೆರಿಯಾ ವಿಶ್ವಸಂಸ್ಥೆಯ ಶಾಂತಿ ಅಭಿಯಾನ ಮಿಶನ್ ಗಾಗಿ ಮಹಿಳಾ ಪೊಲೀಸ್ ಪಡೆಯನ್ನು ಕಳುಹಿಸಿದ ಪ್ರಥಮ ದೇಶ ಭಾರತ ಎಂಬುದು ಬಹಳ ಕಡಿಮೆ ಜನರಿಗೆ ತಿಳಿಸಿದೆ. ಭಾರತದ ಈ ಹೆಜ್ಜೆ ವಿಶ್ವದಾದ್ಯಂತದ ದೇಶಗಳಿಗೆ ಪ್ರೇರಣಾದಾಯಕವಾಯಿತು. ಇದರ ನಂತರ ಎಲ್ಲ ದೇಶಗಳು ತಮ್ಮ ತಮ್ಮ ಮಹಿಳಾ ಪೊಲೀಸ್ ಪಡೆಗಳನ್ನು ಕಳುಹಿಸಲು ಆರಂಭಿಸಿವೆ. ಭಾರತದ ಪಾತ್ರ ಕೇವಲ ಶಾಂತಿ ಕಾರ್ಯ ಪ್ರಕ್ರಿಯೆವರೆಗೆ ಮಾತ್ರ ಸೀಮಿತವಾಗಿರದೇ ಭಾರತ 85 ರಾಷ್ಟ್ರಗಳ ಶಾಂತಿ ಪಡೆಗಳಿಗೆ ತರಬೇತಿ ನೀಡುತ್ತಿದೆ ಎಂದು ಕೇಳಿ ನಿಮಗೆ ಹೆಮ್ಮೆ ಎನ್ನಿಸಬಹುದು. ಮಹಾತ್ಮಾ ಗಾಂಧಿ ಮತ್ತು ಗೌತಮ ಬುದ್ಧರ ಈ ಭೂಮಿಯಿಂದ ನಮ್ಮ ವೀರ ಶಾಂತಿ ರಕ್ಷಕರು ವಿಶ್ವಾದ್ಯಂತ ಶಾಂತಿ ಮತ್ತು ಸದ್ಭಾವನೆಯ ಸಂದೇಶ ತಲುಪಿಸಿದ್ದಾರೆ. ಶಾಂತಿ ಕಾರ್ಯ ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಭದ್ರತಾ ಪಡೆಯ ಸೈನಿಕರು ದುರ್ಗಮ ಸ್ಥಳಗಳಿಗೆ ಹೋಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ವಿಭಿನ್ನ ಜನರ ಮಧ್ಯೆ ಇರಬೇಕಾಗುತ್ತದೆ. ಅವರಿಗೆ ಅಲ್ಲಿಯ ಸ್ಥಳೀಯ ಅವಶ್ಯಕತೆಗಳು ಮತ್ತು ಪರಿಸ್ಥಿತಿಗನುಗುಣವಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಇಂದು ನಾವು ನಮ್ಮ ವೀರ ಯುಎನ್ ಶಾಂತಿ ಕಾರ್ಯ ಪಡೆಯನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದಾದಾಗ ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ ಅವರನ್ನು ನರೆಯಲಾಗುತ್ತದೆಯೇ?. ಅವರು ಆಫ್ರಿಕಾದ ಕಾಂಗೋನಲ್ಲಿ ಶಾಂತಿಗಾಗಿ ಹೋರಾಡಿದ್ದರು. ತಮ್ಮ ಸರ್ವಸ್ವವನ್ನು ಸಮರ್ಪಿಸಿದ್ದರು. ಅವರನ್ನು ನೆನೆದು ದೇಶದ ಪ್ರತಿಯೊಬ್ಬರೂ ಹೆಮ್ಮೆಯಿಂದ ಬೀಗುತ್ತಾರೆ. ಅವರು ಪರಮವೀರ ಚಕ್ರ ನೀಡಿ ಸನ್ಮಾನಿಸಲ್ಪಟ್ಟ ಏಕಮಾತ್ರ ವೀರರೂ ಮತ್ತು ವಿಶ್ವಸಂಸ್ಥೆಯ ಶಾಂತಿ ದೂತರಾಗಿದ್ದರು. ಸೈಪ್ರಸ್ ನಲ್ಲಿ ವಿಶಿಷ್ಟವಾದ ಛಾಪು ಮೂಡಿಸಿದಂತ ವೀರರಲ್ಲಿ ಲೆಫ್ಟಿನೆಂಟ್ ಜನರಲ್ ಪ್ರೇಮ್ ಚಂದ್ ಒಬ್ಬರಾಗಿದ್ದಾರೆ. 1989ರಲ್ಲಿ 72ರ ವಯೋಮಾನದ ಪ್ರೇಮ್ ಚಂದ್ ಅವರನ್ನು ನಮಿಬಿಯಾದಲ್ಲಿ ಆಪರೇಶನ್ ಗಾಗಿ ಫೋರ್ಸ್ ಕಮಾಂಡರ್ ಎಂದು ನೇಮಿಸಿದರು ಮತ್ತು ಅವರು ಆ ದೇಶಕ್ಕೆ ಸ್ವತಂತ್ರವನ್ನು ತಂದುಕೊಡುವಲ್ಲಿ ತಮ್ಮ ಸೇವೆ ಸಲ್ಲಿಸಿದರು. ಭಾರತೀಯ ಸೇನೆಯ ಪ್ರಮುಖರಾಗಿದ್ದ ಜನರಲ್ ತಿಮ್ಮಯ್ಯ ಅವರು ಸೈಪ್ರಸ್ ನಲ್ಲಿ ವಿಶ್ವಸಂಸ್ಥೆ ಶಾಂತಿ ಕಾರ್ಯಪಡೆ ನೇತೃತ್ವ ವಹಿಸಿದ್ದರು ಮತ್ತು ಶಾಂತಿ ಕಾರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದರು. ಭಾರತ ಶಾಂತಿದೂತನಂತೆ ಎಂದಿಗೂ ವಿಶ್ವಾದ್ಯಂತ ಶಾಂತಿ, ಏಕತೆ ಮತ್ತು ಸದ್ಭಾವನೆಯ ಸಂದೇಶ ಸಾರುತ್ತಿದೆ. ಎಲ್ಲರೂ ಶಾಂತಿ ಮತ್ತು ಸದ್ಭಾವನೆಯೊಂದಿಗೆ ಬಾಳಲಿ ಮತ್ತು ಉತ್ತಮ ಶಾಂತಿಪೂರ್ವಕ ದಿಕ್ಕಿನತ್ತ ಮುನ್ನಡೆಯಲಿ ಎಂಬುದು ನನ್ನ ಆಶಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪುಣ್ಯ ಭೂಮಿಯು ಯಾರು ನಿಸ್ವಾರ್ಥ ಭಾವದಿಂದ ಮಾನವತೆಯ ಸೇವೆ ಮಾಡಿದ್ದಾರೋ ಅಂತಹ ಮಹಾ ಜನರಿಂದ ಶೋಭಿತವಾಗಿದೆ. ಸಿಸ್ಟರ್ ನಿವೇದಿತಾ ಅವರನ್ನು ನಾವು ಸೋದರಿ ನಿವೇದಿತಾ ಎಂದೂ ಸಹ ಕರೆಯುತ್ತೇವೆ, ಅವರೂ ಸಹ ಆ ಅಸಾಧಾರಣ ಜನರಲ್ಲಿ ಒಬ್ಬರಾಗಿದ್ದರು. ಅವರು ಐರ್ಲೆಂಡ್ ನಲ್ಲಿ ಮಾರ್ಗರೆಟ್ ಎಲಿಜಬೆತ್ ನೊಬೆಲ್ ಎನ್ನುವ ಹೆಸರಿನಿಂದ ಹುಟ್ಟಿದ್ದರು ಆದರೆ ಸ್ವಾಮಿ ವಿವೆಕಾನಂದರು ಅವರಿಗೆ ನಿವೇದಿತಾ ಎನ್ನುವ ಹೆಸರನ್ನು ಕೊಟ್ಟರು, ನಿವೇದಿತಾ ಎನ್ನುವುದರ ಅರ್ಥ ಪೂರ್ಣ ರೂಪದಲ್ಲಿ ಸಮರ್ಪಿಸಿಕೊಳ್ಳುವುದು ಎಂದು. ಆ ನಂತರ ಅವರು ತಮ್ಮ ಹೆಸರಿನಂತೆ ತಮ್ಮನ್ನು ತಾವು ನಿರೂಪಿಸಿ ತೋರಿಸಿದರು. ನಿನ್ನೆ ಸಿಸ್ಟರ್ ನಿವೇದಿತಾ ಅವರ 150 ನೇ ಜಯಂತಿ ಆಗಿತ್ತು. ಅವರು ಸ್ವಾಮಿ ವಿವೇಕಾನಂದರಿಂದ ಎಷ್ಟು ಪ್ರಭಾವಿತರಾಗಿದ್ದರೆಂದರೆ ತಮ್ಮ ಸುಖ ಸಮೃದ್ಧಿಯಾದ ಜೀವನವನ್ನು ತ್ಯಾಗ ಮಾಡಿ ತಮ್ಮ ಜೀವನವನ್ನೇ ಬಡವರ ಸೇವೆಗಾಗಿ ಸಮರ್ಪಿಸಿದರು. ಸಿಸ್ಟರ್ ನಿವೇದಿತಾರವರು ಬ್ರಿಟಿಷ್ ಆಳ್ವಿಕೆಯಲ್ಲಿ ಅತ್ಯಾಚಾರಗಳಿಂದ ತುಂಬಾ ಆತಂಕಗೊಂಡಿದ್ದರು. ಬ್ರಿಟಿಷರು ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳಿದ್ದಷ್ಟೇಅಲ್ಲ, ನಮ್ಮನ್ನು ಸಹ ಮಾನಸಿಕವಾಗಿ ಗುಲಾಮರನ್ನಾಗಿ ಮಾಡಲು ಪ್ರಯತ್ನ ಪಟ್ಟಿದ್ದರು. ನಮ್ಮ ಸಂಸ್ಕೃತಿಯನ್ನು ಕನಿಷ್ಠವೆಂದು ಬಿಂಬಿಸಿ ನಮ್ಮಲ್ಲಿ ನಿಕೃಷ್ಟ ಭಾವನೆಯನ್ನು ಹುಟ್ಟುಹಾಕುವಂತಹ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತಿತ್ತು.
ಸೋದರಿ ನಿವೇದಿತಾರವರು ಭಾರತೀಯ ಸಂಸ್ಕೃತಿಯ ಗೌರವವನ್ನು ಮತ್ತೆ ಸ್ಥಾಪಿಸಿದರು. ರಾಷ್ಟ್ರೀಯತೆಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡಿದರು. ಅವರು ವಿಶ್ವದ ಬೇರೆ ಬೇರೆ ದೇಶಗಳಿಗೆ ಹೋಗಿ ಸನಾತನ ಧರ್ಮ ಮತ್ತು ದರ್ಶನದ ಬಗ್ಗೆ ಮಾಡುತ್ತಿದ್ದ ಅಪಪ್ರಚಾರದ ವಿರುಧ್ಧ ಧ್ವನಿ ಎತ್ತಿದರು. ಪ್ರಸಿಧ್ಧ ರಾಷ್ಟ್ರವಾದಿ ಮತ್ತು ತಮಿಳು ಕವಿ ಸುಬ್ರಮಣ್ಯ ಭಾರತಿ ಯವರು ತಮ್ಮ ಕ್ರಾಂತಿಕಾರಿ ಕವಿತೆ ಪುದುಮೈ ಪೆಣ್, ನ್ಯೂ ವಿಮೆನ್ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಈ ಕೆಲಸಕ್ಕೆ ಪ್ರೇರಣೆ ಸೋದರಿ ನಿವೇದಿತಾ ಅವರು ಎಂದು ಹೇಳುತ್ತಾರೆ.
ಸೋದರಿ ನಿವೇದಿತಾರವರು ಮಹಾನ್ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರಿಗೆ ಕೂಡ ಸಹಕಾರ ನೀಡಿದರು. ಅವರು ತಮ್ಮ ಬರವಣಿಗೆ ಮತ್ತು ಸಮ್ಮೇಳನಗಳ ಮುಖಾಂತರ ಬೋಸ್ ರವರ ರಿಸರ್ಚ್ ಗಳ ಪ್ರಕಟಣೆ ಮತ್ತು ಪ್ರಚಾರಕ್ಕೆ ಸಹಾಯ ಮಾಡಿದರು. ನಮ್ಮ ಸಂಸ್ಕೃತಿಯಲ್ಲಿ ಅಧ್ಯಾತ್ಮಿಕತೆ ಮತ್ತು ವಿಜ್ಞಾನ ಎರಡೂ ಒಂದಕ್ಕೊಂದು ಪೂರಕವಾಗಿದೆ ಎನ್ನುವುದೇ ಭಾರತದಲ್ಲಿ ಒಂದು ವಿಶೇಷ. ಸಿಸ್ಟರ್ ನಿವೇದಿತಾ ಮತ್ತು ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಇದಕ್ಕೊಂದು ಬಲವಾದ ಉದಾಹರಣೆ. 1899 ರಲ್ಲಿ ಕೋಲ್ಕತ್ತಾದಲ್ಲಿ ಭಯಾನಕವಾದ ಪ್ಲೇಗ್ ಹರಡಿತು ಮತ್ತು ನೋಡು ನೋಡುತ್ತಲೇ ನೂರಾರು ಜನರ ಪ್ರಾಣ ಹೊರಟು ಹೋಯಿತು. ಸಿಸ್ಟರ್ ನಿವೇದಿತಾ ಅವರು ತಮ್ಮ ಆರೋಗ್ಯದ ಚಿಂತೆಯನ್ನು ಸಹ ಮಾಡದೆ ಚರಂಡಿ ಮತ್ತು ರಸ್ತೆಗಳನ್ನು ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸಿದರು. ಅವರು ಎಂತಹ ಮಹಿಳೆಯೆಂದರೆ ತುಂಬಾ ಆರಾಮದಾಯಕ ಜೀವನವನ್ನು ನಡೆಸಬಹುದಾಗಿದ್ದರೂ ಕೂಡ ಬಡವರ ಸೇವೆಯಲ್ಲಿ ತೊಡಗಿಸಿಕೊಂಡರು. ಅವರ ಈ ತ್ಯಾಗದಿಂದ ಪ್ರೇರಿತರಾಗಿ ಜನರು ಸೇವಾಕಾರ್ಯಗಳಲ್ಲಿ ಅವರಜೊತೆ ಕೈ ಜೋಡಿಸಿದರು. ಅವರು ತಮ್ಮ ಕಾರ್ಯಗಳಿಂದ ಜನರಿಗೆ ಸ್ವಚ್ಚತೆ ಮತ್ತು ಸೇವೆಯ ಮಹತ್ವದ ಪಾಠ ಹೇಳಿಕೊಟ್ಟರು. ಅವರ ಸಮಾಧಿಯ ಮೇಲೆ ‘ ಹಿಯರ್ ರಿಪೋಸೆಸ್ ಸಿಸ್ಟರ್ ನಿವೇದಿತ ಹೋ ಗೇವ್ ಹರ್ ಆಲ್ ಟು ಇಂಡಿಯಾ ‘ ಯಾರು ತಮ್ಮ ಸರ್ವಸ್ವವನ್ನು ಭಾರತಕ್ಕೆ ನೀಡಿದರೋ ಅಂತಹ ಸಿಸ್ಟರ್ ನಿವೇದಿತಾ ಇಲ್ಲಿ ವಿಶ್ರಮಿಸುತ್ತಿದ್ದಾರೆ ? ಎಂದು ಬರೆದಿದೆ.
ನಿಸ್ಸಂದೇಹವಾಗಿ ಅವರು ಹಾಗೆಯೇ ಮಾಡಿದರು.
ಪ್ರತಿಯೊಬ್ಬ ಭಾರತೀಯನೂ ಅವರ ಜೀವನದಿಂದ ಪಾಠ ಕಲಿತು ಸ್ವತಃ ಅಂತಹ ಸೇವೆಯ ದಾರಿಯಲ್ಲಿ ನಡೆಯಲು ಪ್ರಯತ್ನ ಪಡುವುದೇ ಅಂಥಹ ಮಹಾನ್ ವ್ಯಕ್ತಿತ್ವಕ್ಕೆ ಸಲ್ಲುವ ಶ್ರಧ್ಧಾಂಜಲಿ.
ಫೋನ್ ಕಾಲ್ ?
ಮಾನನೀಯ ಪ್ರಧಾನಮಂತ್ರಿಗಳೇ, ನನ್ನ ಹೆಸರು ಡಾ. ಪಾರ್ಥ್ ಷಾ ಎಂದು. ನವೆಂಬರ್ 14 ನ್ನು ರಂದು ನಾವು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ ಏಕೆಂದರೆ ಅದು ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನ. ಅದೇ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ಸಹ ಪರಿಗಣಿಸಲಾಗಿದೆ. ಮಧುಮೇಹ ಕೇವಲ ದೊಡ್ಡವರ ಖಾಯಿಲೆಯಲ್ಲ, ಅದು ಬಹಳಷ್ಟು ಮಕ್ಕಳಲ್ಲಿ ಸಹ ಕಂಡುಬಂದಿದೆ. ಇಂತಹ ಸವಾಲಿಗೆ ನಾವು ಏನು ಮಾಡಬಹುದು?
ನಿಮ್ಮ ದೂರವಾಣಿ ಕರೆಗೆ ಧನ್ಯವಾದಗಳು. ಎಲ್ಲಕ್ಕಿಂತ ಮೊದಲಿಗೆ ನಮ್ಮ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದಂದು ಚಿಲ್ದೆರ್ನ್ ಡೇ, ಮಕ್ಕಳ ದಿನಾಚರಣೆ ಪ್ರಯುಕ್ತ ಎಲ್ಲ ಮಕ್ಕಳಿಗೂ ಹಾರ್ದಿಕ ಶುಭಾಷಯಗಳು. ಮಕ್ಕಳು ನವ ಭಾರತದ ನಿರ್ಮಾಣದಲ್ಲಿ ಎಲ್ಲಕ್ಕಿಂತ ಮುಖ್ಯವಾದ ಹೀರೋಗಳು, ನಾಯಕರು. ನಿಮ್ಮ ಯೋಚನೆ ಸರಿಯಾಗಿದೆ. ಮೊದಲು ಯಾವ ರೋಗಗಳು ದೊಡ್ಡವರಲ್ಲಿ, ಜೀವನದ ಅಂತಿಮ ಘಟ್ಟದಲ್ಲಿ ಬರುತ್ತಿತ್ತೋ ಅದು ಈಗೀಗ ಮಕ್ಕಳಲ್ಲಿ ಸಹ ಕಾಣಿಸಿಕೊಳ್ಳುತ್ತಿದೆ. ಮಕ್ಕಳೂ ಕೂಡ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ ಎಂದು ಕೇಳುವುದಕ್ಕೆ ಬಹಳ ಆಶ್ಚರ್ಯ ಎನಿಸುತ್ತದೆ. ಹಿಂದಿನ ಕಾಲದಲ್ಲಿ ಇಂತಹ ರೋಗಗಳನ್ನು ರಾಜ ರೋಗ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು. ರಾಜರೋಗ ಅಂದರೆ ಇಂತಹ ರೋಗಗಳು ಕೇವಲ ಶ್ರೀಮಂತ ಜನರಿಗೆ, ಆರಾಮವಾಗಿ ಜೀವನ ನಡೆಸುವವರಿಗೆ ಮಾತ್ರ ಬರುತ್ತಿತ್ತು. ಯುವಕರಲ್ಲಿ ಇಂತಹ ಖಾಯಿಲೆಗಳು ಅಪರೂಪವಾಗಿತ್ತು. ಆದರೆ ನಮ್ಮ ಜೀವನ ಶೈಲಿ ಬದಲಾಗಿದೆ. ಇಂದು ಇಂತಹ ಖಾಯಿಲೆಗಳನ್ನು ಹೆಸರಿಂದ ಗುರುತಿಸುತ್ತೇವೆ.
ಯವ್ವನದಲ್ಲಿ ಇಂತಹ ಖಾಯಿಲೆಗಳಿಗೆ ತುತ್ತಾಗುವುದಕ್ಕೆ ಒಂದು ಪ್ರಮುಖ ಕಾರಣ ನಮ್ಮ ಜೀವನಶೈಲಿ ಯಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿರುವುದು ಮತ್ತು ನಮ್ಮ ಆಹಾರ ಕ್ರಮದಲ್ಲಿ ಆಗಿರುವ ಬದಲಾವಣೆ. ಸಮಾಜ ಮತ್ತು ಕುಟುಂಬಗಳು ಇಂತಹವುಗಳ ಬಗ್ಗೆ ಗಮನ ಹರಿಸಬೇಕಾಗಿರುವುದು ಅಗತ್ಯವಾಗಿದೆ. ಯಾವಾಗ ಈ ವಿಚಾರವನ್ನು ನಾವು ಯೋಚಿಸುತ್ತವೆಯೋ ಆಗ ನೋಡಿ, ಏನೂ ಅತಿಶಯವಾಗಿ ಮಾಡುವ ಅವಶ್ಯಕತೆ ಇರುವುದಿಲ್ಲ. ಒಂದೇ ಒಂದರ ಅವಶ್ಯಕತೆ ಇದೆ, ಅದೆಂದರೆ, ಸಣ್ಣ ಸಣ್ಣ ಸಂಗತಿಗಳನ್ನು ನಿಯಮಿತ ರೂಪದಲ್ಲಿ ಮಾಡುತ್ತಾ ತಮ್ಮ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮತ್ತು ಅದನ್ನು ನಮ್ಮ ಸ್ವಭಾವವನ್ನಾಗಿ ಮಾಡಿಕೊಳ್ಳುವುದು.ಕುಟುಂಬದ ಸದಸ್ಯರು ತಮ್ಮ ಮಕ್ಕಳಿಗೆ ಪ್ರಜ್ಞಾಪೂರ್ವಕವಾಗಿ ತೆರೆದ ಮೈದಾನದಲ್ಲಿ ಆಟವಾಡುವ ಅಭ್ಯಾಸವನ್ನು ಮಾಡಿಸಲು ಪ್ರಯತ್ನಿಸಬೇಕೆಂದು ನಾನು ಬಯಸುತ್ತೇನೆ. ಸಾಧ್ಯವಾದರೆ ಕುಟುಂಬದ ಹಿರಿಯರು ಸಹ ಮಕ್ಕಳ ಜೊತೆ ಸ್ವಲ್ಪ ಹೊರಗೆ ಹೋಗಿ ಆಟವಾಡಿ. ಮಕ್ಕಳಿಗೆ ಲಿಫ್ಟ್ ನಲ್ಲಿ ಮೇಲೆ ಕೆಳಗೆ ಓಡಾಡಿಸುವ ಬದಲು ಮೆಟ್ಟಿಲು ಹತ್ತುವ ಅಭ್ಯಾಸ ಮಾಡಿಸಿ. ರಾತ್ರಿ ಊಟವಾದ ಮೇಲೆ ಕುಟುಂಬದ ಎಲ್ಲರೂ ಮಕ್ಕಳನ್ನು ಜೊತೆಗೆ ಕರೆದುಕೊಂಡು ನಡೆದಾಡುವ ಪ್ರಯತ್ನ ಮಾಡಿ. ಯೋಗಾ ಫೋರ್ ಯಂಗ್ ಇಂಡಿಯಾ. ಯೋಗವು ವಿಶೇಷವಾಗಿ ನಮ್ಮ ಯುವ ಮಿತ್ರರಿಗೆ ಒಂದು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳುವಲ್ಲಿ ಮತ್ತು ಜೀವನ ಶೈಲಿಯಿಂದ ಬರುವ ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ನೋಡಿ, ಶಾಲೆಯ ಪ್ರಾರಂಭಕ್ಕೆ ಮುನ್ನ 30 ನಿಮಿಷ ಮುಂಚೆ ಯೋಗ ಮಾಡಿದರೆ, ಎಷ್ಟು ಅನುಕೂಲವಾಗುತ್ತದೆ ಎಂದು. ಮನೆಯಲ್ಲಿ ಕೂಡ ಮಾಡಬಹುದು. ಯೋಗದ ವಿಶೇಷಯೆಂದರೆ ಅದೇ. ಅದು ಸಹಜ, ಸರಳ, ಸರ್ವ ಸುಲಭ.ಅದ್ದರಿಂದ ಹೇಳುತ್ತಿದ್ದೇನೆ, ಯಾವುದೇ ವಯಸ್ಸಿನ ವ್ಯಕ್ತಿಯೂ ಸುಲಭವಾಗಿ ಮಾಡಬಹುದು. ಸರಳ ಯಾಕೆಂದರೆ ಸುಲಭವಾಗಿ ಕಲಿತುಕೊಳ್ಳಬಹುದು, ಸರ್ವ ಸುಲಭ ಏಕೆಂದರೆ ಎಲ್ಲಿಯಾದರೂ ಮಾಡಬಹುದು. ವಿಶೇಷ ಉಪಕರಣಗಳು ಅಥವಾ ಮೈದಾನದ ಅವಶ್ಯಕತೆ ಇರುವುದಿಲ್ಲ. ಮಧುಮೇಹ ನಿಯಂತ್ರಣಕ್ಕೆ ಯೋಗ ಎಷ್ಟೊಂದು ಸಹಕಾರಿ ಎನ್ನುವುದರ ಬಗ್ಗೆ ಅಧ್ಯಯನ ಕೂಡ ನಡೆಯುತ್ತಿದೆ. ಎ.ಐ.ಐ.ಎಮ್.ಎಸ್ ಕೂಡ ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇಲ್ಲಿಯವರೆಗೂ ಬಂದಿರುವ ಫಲಿತಾಂಶಗಳು ತುಂಬಾ ಪ್ರೋತ್ಸಾಹದಾಯಕವಾಗಿದೆ. ಆಯುರ್ವೇದ ಮತ್ತು ಯೋಗ ಇವುಗಳನ್ನು ನಾವು ಬರೀ ಚಿಕಿತ್ಸೆಯ ಮಾಧ್ಯಮವಾಗಿ ಮಾತ್ರ ನೋಡಬಾರದು. ಅವುಗಳನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ಮುಖ್ಯವಾಗಿ ನನ್ನ ಯುವ ಜನರೇ,ಕ್ರೀಡಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಸುದ್ದಿ ಬಂದಿದೆ. ಬೇರೆ ಬೇರೆ ಆಟಗಳಲ್ಲಿ ನಮ್ಮ ಆಟಗಾರರು ದೇಶದ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ. ಹಾಕಿಯಲ್ಲಿ ಭಾರತವು ಅದ್ಭುತವಾಗಿ ಆಡಿ ಏಶಿಯ ಕಪ್ ಹಾಕಿ ಪ್ರಶಸ್ತಿ ಗೆದ್ದಿದೆ. ನಮ್ಮ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಅದರ ಬಲದಿಂದ ಭಾರತವು 10 ವರ್ಷಗಳ ನಂತರ ಏಶಿಯ ಕಪ್ ಚಾಂಪಿಯನ್ ಆಗಿದೆ. ಇದಕ್ಕೂ ಮುಂಚೆ ಭಾರತವು 2003 ಮತ್ತು 2007 ರಲ್ಲಿ ಏಶಿಯ ಕಪ್ ಚಾಂಪಿಯನ್ ಆಗಿತ್ತು. ತಂಡದವರೆಲ್ಲರಿಗೂ ಬೆಂಬಲ ಕೊಟ್ಟ ಸಿಬ್ಬಂದಿಗೆ ನನ್ನ ಕಡೆಯಿಂದ, ದೇಶವಾಸಿಗಳ ಕಡೆಯಿಂದ ಹಾರ್ದಿಕ ಅಭಿನಂದನೆಗಳು. ಹಾಕಿಯ ನಂತರ ಬ್ಯಾಡ್ಮಿಂಟನ್ ನಲ್ಲಿ ಸಹ ಭಾರತಕ್ಕೆ ಒಳ್ಳೆಯ ಸುದ್ದಿ ಬಂತು. ಬ್ಯಾಡ್ಮಿಂಟನ್ ಸ್ಟಾರ್ ಕಿಡಂಬಿ ಶ್ರೀಕಾಂತ್ ಉತ್ಕೃಷ್ಟ ಪ್ರದರ್ಶನ ನೀಡಿ ಡೆನ್ಮಾರ್ಕ್ ಓಪನ್ ಪ್ರಶಸ್ತಿಗೆದ್ದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತಂದಿದ್ದಾರೆ. ಇಂಡೋನೇಷಿಯ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್ ನಂತರಇದು ಅವರ ಮೂರನೇ ಸೂಪರ್ ಸೀರೀಸ್ ಪ್ರೀಮಿಯರ್ ಪ್ರಶಸ್ತಿಯಾಗಿದೆ. ನಾನು ನನ್ನ ಯುವ ಸ್ನೇಹಿತನಿಗೆ ಅವರ ಈ ಒಂದು ಗರಿಮೆಗೆ ಮತ್ತು ಭಾರತದ ಗೌರವವನ್ನು ಹೆಚ್ಚಿಸಿದ್ದಕ್ಕೆ ಬಹಳ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ಸ್ನೇಹಿತರೇ, ಇದೇ ತಿಂಗಳು ಫಿಫಾ ಅಂಡರ್ -17 ವರ್ಲ್ಡ್ ಕಪ್ ಆಯೋಜನೆಯಾಗಿತ್ತು. ವಿಶ್ವದೆಲ್ಲೆಡೆಯಿಂದ ತಂಡಗಳು ಭಾರತಕ್ಕೆ ಬಂದವು ಮತ್ತು ಎಲ್ಲ ತಂಡಗಳು ಫುಟ್ ಬಾಲ್ ಮೈದಾನದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದವು. ನನಗೂ ಸಹ ಒಂದು ಮ್ಯಾಚ್ ಗೆ ಹೋಗಲು ಅವಕಾಶ ಸಿಕ್ಕಿತ್ತು. ಆಟಗಾರರು, ಪ್ರೇಕ್ಷಕರು ಎಲ್ಲರಲ್ಲೂ ತುಂಬಾ ಉತ್ಸಾಹ ಇತ್ತು. ವಲ್ರ್ಡ್ ಕಪ್ ನಂಥಹ ದೊಡ್ಡ ಘಟನೆ, ಪೂರಾ ಜಗತ್ತು ನಿಮ್ಮನ್ನು ನೋಡುತ್ತಿದೆ, ಎಂತಹ ದೊಡ್ಡ ಮ್ಯಾಚ್, ನಾನಂತೂ ಯುವ ಆಟಗಾರರ ಶಕ್ತಿ, ಉತ್ಸಾಹ, ಏನನ್ನಾದರೂ ಸಾಧಿಸುವ ಮನಸ್ಥಿತಿ ನೋಡಿ ಆಶ್ಚರ್ಯಚಕಿತನಾದೆ. ವಲ್ರ್ಡ್ ಕಪ್ ನ ಆಯೋಜನೆ ಸಫಲವಾಯಿತು ಮತ್ತು ಎಲ್ಲಾ ತಂಡಗಳೂ ತಮ್ಮ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದವು. ಭಾರತವುಪ್ರಶಸ್ತಿ ಗೆಲ್ಲಲಿಲ್ಲ ಸರಿ, ಆದರೆ ಭಾರತದ ಯುವ ಆಟಗಾರರಂತೂ ಎಲ್ಲರ ಹೃದಯವನ್ನು ಗೆದ್ದರು. ಭಾರತವೂ ಸೇರಿದಂತೆ ಇಡೀ ವಿಶ್ವವು ಆಟದ ಈ ಮಹೋತ್ಸವವನ್ನು ಆನಂದಿಸಿತುಮತ್ತು ಈ ಎಲ್ಲಾ ಪಂದ್ಯಗಳು ಫುಟ್ ಬಾಲ್ ಪ್ರೇಮಿಗಳಿಗೆ ರೋಚಕ ಮತ್ತು ಮನೋರಂಜನೆ ನೀಡಿತ್ತು. ಫುಟ್ ಬಾಲ್ ನ ಭವಿಷ್ಯ ಉಜ್ವಲವಾಗಿದೆ. ಇದರ ಸೂಚನೆ ಕಾಣಿಸುತ್ತಿದೆ. ನಾನು ಮತ್ತೆ ಇನ್ನೊಂದು ಬಾರಿ ಎಲ್ಲಾ ಆಟಗಾರರಿಗೂ, ಅವರ ಜೊತೆಗಾರರಿಗೂ ಮತ್ತು ಎಲ್ಲಾ ಕ್ರೀಡಾ ಪ್ರೇಮಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ, ಶುಭಕಾಮನೆಗಳನ್ನು ತಿಳಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಚ್ಚ ಬಾರತ ದ ವಿಷಯದಲ್ಲಿ ಎಷ್ಟೊಂದು ಜನ ಬರೆಯುತ್ತಾರೆ ಅಂದರೆ ಒಂದು ವೇಳೆ ನಾನು ಅವರ ಭಾವನೆಗಳಿಗೆ ನ್ಯಾಯ ಒದಗಿಸಬೇಕು ಅಂತ ಅಂದುಕೊಂಡರೆ ನನಗೆ ಪ್ರತಿದಿನ ಮನ್ ಕಿ ಬಾತ್ ಕಾರ್ಯಕ್ರಮ ಮಾಡಬೇಕಾಗುತ್ತದೆ ಮತ್ತು ಪ್ರತಿದಿನ ನಾನು ಸ್ವಚ್ಚತೆಯ ವಿಷಯಕ್ಕೆ ಸಂಬಂಧಿಸಿದತೆಯೇ ಮನ್ ಕಿ ಬಾತ್ ಅನ್ನು ಅರ್ಪಣೆ ಮಾಡಬೇಕಾಗುತ್ತದೆ. ಕೆಲವರು ಚಿಕ್ಕ ಚಿಕ್ಕ ಮಕ್ಕಳ ಪ್ರಯತ್ನಗಳನ್ನು ಫೊಟೋ ತೆಗೆದು ಕಳುಹಿಸಿದರೆ ಕೆಲವೊಮ್ಮೆ ಯುವಕರ ತಂಡ ಈ ಪ್ರಯತ್ನಗಳ ಭಾಗವಾಗಿರುತ್ತದೆ. ಎಲ್ಲೋ ಸ್ವಚ್ಚತೆಯನ್ನು ಗುರಿಯಾಗಿಟ್ಟುಕೊಂಡು ಒಂದು ಆವಿಷ್ಕಾರದ ಕಥೆ ಬರುತ್ತದೆ ಅಥವಾ ಯಾವುದೋ ಅಧಿಕಾರಿಯ ಹುಮ್ಮಸ್ಸಿನೊಂದಿಗೆ ಬದಲಾವಣೆಗಳಾದ ಸುದ್ದಿಗಳು ಬರುತ್ತವೆ.
ಕೆಲವು ದಿನಗಳ ಹಿಂದೆ ನನಗೆ ತುಂಬಾ ವಿಸ್ತ್ರತವಾದ ಒಂದು ವರದಿ ಸಿಕ್ಕಿತು. ಅದರಲ್ಲಿ ಮಹಾರಾಷ್ಟ್ರದ ಚಂದ್ರಪುರದ ಕೋಟೆಯ ಕಾಯಕಲ್ಪದ ಕಥೆ ಇತ್ತು. ಅಲ್ಲಿ ಇಕೋಲೋಜಿಕಲ್ ಪ್ರೊಟೆಕ್ಷನ್ ಓರ್ಗನೈಸೇಷನ್ ಎಂಬ ಹೆಸರಿನ ಒಂದು ಪೂರ್ತಿ ತಂಡ ಚಂದ್ರಪುರದ ಕೋಟೆಯಲ್ಲಿ ಶುಚಿತ್ವದ ಒಂದು ಅಭಿಯಾನ ನಡೆಸಿದರು. 200 ದಿನಗಳವರೆಗೆ ನಡೆದ ಈ ಅಭಿಯಾನದಲ್ಲಿ ಜನರು ನಿಲ್ಲಿಸದೆ, ಸುಸ್ತಾಗದೆ ಒಂದು ತಂಡದಂತೆ ಕೋಟೆಯ ಸ್ವಚ್ಚತೆಯ ಕೆಲಸವನ್ನು ಮಾಡಿದರು. ಸತತ 200 ದಿನ.. ಮೊದಲು ಮತ್ತು ನಂತರ ಎನ್ನುವ ಫೊಟೋ ಅವರು ನನಗೆ ಕಳುಹಿಸಿದ್ದಾರೆ. ಫೋಟೋ ನೋಡಿ ನಾನು ಆಶ್ಚರ್ಯಚಕಿತನಾದೆ. ಯಾರ ಮನಸ್ಸಿನಲ್ಲಿ ನಮ್ಮ ಅಕ್ಕ ಪಕ್ಕದಲ್ಲಿ ಕೊಳಕನ್ನು ನೋಡಿ ನಿರಾಶೆ ಮೂಡುತ್ತದೆಯೋ, ಸ್ವಚ್ಚತೆಯ ಕನಸು ಹೇಗೆ ನನಸಾಗುತ್ತದೆ ಎಂದು ಅನ್ನಿಸುತ್ತದೆಯೋ ಅಂತಹವರಿಗೆ ನಾನು ಹೇಳುವುದು ಏನೆಂದರೆ- ಇಕೋಲೋಜಿಕಲ್ ಪ್ರೊಟೆಕ್ಷನ್ ಓರ್ಗನೈಸೇಷನ್ ನ ಯುವಕರನ್ನೂ, ಅವರು ಹರಿಸಿರುವ ಬೆವರನ್ನೂ, ಅವರ ಮನಸ್ಥೈರ್ಯವನ್ನೂ, ಅವರ ಸಂಕಲ್ಪವನ್ನೂ ಆ ಜೀವಕಳೆ ತುಂಬಿದ ಭಾವಚಿತ್ರದಲ್ಲಿ ನೀವು ನೋಡಬಹುದು. ಅದನ್ನು ನೋಡುತ್ತಲೇ ನಿಮ್ಮ ನಿರಾಶೆ ವಿಶ್ವಾಸವಾಗಿ ಬದಲಾವಣೆಯಾಗುತ್ತದೆ. ಸ್ವಚ್ಚತೆಯ ಈ ಭಗೀರಥ ಪ್ರಯತ್ನವು ಸೌಂದರ್ಯ, ಒಗ್ಗಟ್ಟು ಮತ್ತು ಪ್ರಾತ್ಯಕ್ಷಿಕೆಯ ಒಂದು ಅದ್ಭುತ ಉದಾಹರಣೆ. ಕೋಟೆಗಳು ನಮ್ಮ ಪರಂಪರೆಯ ಪ್ರತೀಕ. ಐತಿಹಾಸಿಕ ಸ್ಮಾರಕಗಳನ್ನು ಸುರಕ್ಷಿತವಾಗಿ ಮತ್ತು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಮ್ಮ ಎಲ್ಲಾ ದೇಶವಾಸಿಗಳ ಜವಾಬ್ದಾರಿಯಾಗಿದೆ. ನಾನು ಇಕೋಲೋಜಿಕಲ್ ಪ್ರೊಟೆಕ್ಷನ್ ಓರ್ಗನೈಸೇಷನ್ ಗೆ, ಅವರ ತಂಡಕ್ಕೆ ಮತ್ತು ಚಂದ್ರಪುರದ ಸಮಸ್ತ ನಾಗರೀಕರಿಗೂ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ನನ್ನ ಪ್ರಿಯ ದೇಶವಾಸಿಗಳೇ, ಬರುವ ನವೆಂಬರ್ 4 ರಂದು ನಾವೆಲ್ಲರೂ ಗುರು ನಾನಕ್ ರ ಜನ್ಮದಿನವನ್ನು ಆಚರಿಸುತ್ತೇವೆ. ಗುರು ನಾನಕ್ ರು ಬರೀ ಸಿಖ್ಖರ ಮೊದಲ ಗುರು ಮಾತ್ರವಲ್ಲ, ಅವರು ಜಗತ್ತಿಗೇ ಗುರುಗಳು.
ಅವರು ಎಲ್ಲಾ ಮಾನವತೆಯ ಕಲ್ಯಾಣದ ಬಗ್ಗೆ ಯೋಚಿಸಿದರು, ಅವರು ಎಲ್ಲಾ ಜಾತಿಗಳನ್ನೂ ಒಂದೇ ಎಂದು ಹೇಳಿದರು. ಮಹಿಳಾ ಸಬಲೀಕರಣ ಮತ್ತು ಸ್ತ್ರೀ ಗೌರವಕ್ಕೆ ತುಂಬಾ ಪ್ರಾಮುಖ್ಯತೆ ಕೊಟ್ಟಿದ್ದರು. ಗುರು ನಾನಕ್ ರು ಕಾಲ್ನಡಿಗೆಯಲ್ಲಿ 28 ಸಾವಿರ ಕಿಲೋಮೀಟರ್ ಯಾತ್ರೆ ಮಾಡಿದರುಮತ್ತು ತಮ್ಮ ಈ ಯಾತ್ರೆಯ ಮೂಲಕ ಅವರು ನಿಜವಾದ ಮಾನವತೆಯ ಸಂದೇಶ ಕೊಟ್ಟರು. ಅವರು ಜನರೊಂದಿಗೆ ಸಂವಾದ ನಡೆಸಿದರು ಮತ್ತು ಅವರಿಗೆ ಸತ್ಯ, ತ್ಯಾಗ ಮತ್ತು ಕರ್ಮ ನಿಷ್ಠೆಯ ಮಾರ್ಗ ತೋರಿಸಿದರು.ಅವರು ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದರು ಮತ್ತು ತಮ್ಮ ಈ ಸಂದೇಶವನ್ನು ಮಾತಿನಲ್ಲಿ ಮಾತ್ರವಲ್ಲ, ತಮ್ಮ ಕೃತಿಯಿಂದ ಸಹ ಮಾಡಿ ತೋರಿಸಿದರು. ಅವರು ಸಾಮೂಹಿಕ ಅಡಿಗೆ ಮನೆಯನ್ನು ಅಂದರೆ ಲಂಗರ್ ನಡೆಸಿದರು.
ಅದರಿಂದ ಜನರಿಗೆ ಸೇವಾ ಮನೋಭಾವನೆ ಹುಟ್ಟಿತು. ಒಟ್ಟಿಗೆ ಕುಳಿತುಅಡಿಗೆ ಮಾಡಿ ತಿನ್ನುವಲ್ಲಿ ಜನರಿಗೆ ಏಕತೆ ಮತ್ತು ನಮಾನತೆಯ ಭಾವನೆಗಳು ಬೆಳೆದವು. ಗುರು ನಾನಕರು ಸಾರ್ಥಕ ಜೀವನಕ್ಕಾಗಿ 3 ಸಂದೇಶಗಳನ್ನು ನೀಡಿದರು. ಅವೆಂದರೆ- ಪರಮಾತ್ಮನ ನಾಮವನ್ನು ಜಪಿಸು, ಕಷ್ಟ ಪಟ್ಟು ದುಡಿಮೆ ಮಾಡು, ಮತ್ತು ಅವಶ್ಯಕತೆ ಇದ್ದವರಿಗೆ ಸಹಾಯ ಮಾಡು, ಗುರು ನಾನಕರು ತಮ್ಮ ಮಾತುಗಳನ್ನು ಹೇಳಲು ಗುರುಬಾನಿಗಳನ್ನು ರಚಿಸಿದರು. ಬರುವ 2019 ರಲ್ಲಿ ನಾವು ಗುರು ನಾನಕರ 550 ನೇ ಜಯಂತಿಯನ್ನು ಆಚರಿಸಲು ಯೋಜಿಸಿದ್ದೇವೆ. ಬನ್ನಿ, ನಾವು ಅವರ ಸಂದೇಶ ಮತ್ತು ಶಿಕ್ಷಣ ದ ಮಾರ್ಗದಲ್ಲಿ ಮುಂದೆ ಹೋಗುವ ಪ್ರಯತ್ನ ಮಾಡೋಣ.
ನನ್ನ ಪ್ರೀತಿಯ ದೇಶವಾಸಿಗಳೇ, 2 ದಿನಗಳ ನಂತರ 31 ಅಕ್ಟೋಬರ್ ರಂದು ನಾವು ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಹುಟ್ಟು ಹಬ್ಬವನ್ನು ಆಚರಿಸೋಣ. ಆಧುನಿಕ ಅಖಂಡ ಭಾರತದ ಪ್ರಸ್ತಾವನೆಯನ್ನು ಇವರೇ ಕೊಟ್ಟಿದ್ದು ಎಂದು ನಮಗೆಲ್ಲರಿಗೂ ಗೊತ್ತು. ಭಾರತ ಮಾತೆಯ ಆ ಮಹಾನ್ ಸಂತಾನದ ಅಸಾಧಾರಣ ಜೀವನದಿಂದ ಇಂದು ನಾವು ಬಹಳ ತಿಳಿದುಕೊಳ್ಳಬಹುದು. 31 ಅಕ್ಟೋಬರ್ ರಂದು ಶ್ರೀಮತಿ ಇಂದಿರಾ ಗಾಂಧಿ ಯವರು ಸಹ ಈ ಜಗತ್ತನ್ನು ತೊರೆದು ಹೋದರು. ಸರ್ದಾರ್ ವಲ್ಲಬ್ ಭಾಯಿ ಪಟೇಲರ ವಿಶೇಷವೆಂದರೆ ಅವರು ಬರೀ ಪರಿವರ್ತನೆ ವಿಚಾರಗಳನ್ನು ಹೇಳುತ್ತಿರಲಿಲ್ಲ, ಅದನ್ನು ಮಾಡಿ ತೋರಿಸುವ ಸಲುವಾಗಿ ಕಷ್ಟಾತಿಕಷ್ಟವಾದ ಸಮಸ್ಯೆಗಳನ್ನು ವ್ಯಾವಹಾರಿಕವಾಗಿ ಪರಿಹರಿಸುವ ಉಪಾಯ ಹುಡುಕುವುದರಲ್ಲಿ ಸಮರ್ಥರಿದ್ದರು. ವಿಚಾರಗಳನ್ನು ಸಾಕಾರಗೊಳಿಸುವುದರಲ್ಲಿ ಅವರು ಸಮರ್ಥರು. ಸರ್ದಾರ್ ವಲ್ಲಭಭಾಯಿ ಪಟೇಲ್ ಭಾರತದ ಪ್ರಭುತ್ವವನ್ನು ಒಂದೇ ಸೂತ್ರದಲ್ಲಿ ಹಿಡಿದಿಟ್ಟು ನಿಯಂತ್ರಿಸಿದರು. ಕೋಟ್ಯಾಂತರ ಭಾರತೀಯರನ್ನು ?ಒಂದು ರಾಷ್ಟ್ರ ಮತ್ತು ಒಂದು ಸಂವಿಧಾನದ ನೆಲೆಯೊಳಗೆ ತರಬೇಕೆಂದು ನಿಶ್ಚಯಿಸಿದ್ದರು.
ಅವರ ಧೃಢ ನಿಶ್ಚಯ ಅವರಿಗೆ ಎಲ್ಲ ಅಡೆತಡೆ ಗಳನ್ನೂ ದಾಟಿ ಹೋಗುವ ಸಾಮರ್ಥ ಕೊಟ್ಟಿತು. ಎಲ್ಲಿ ಮನಸ್ಸನ್ನು ಬದಲಿಸುವ ಅವಶ್ಯಕತೆ ಇತ್ತೋ ಅಲ್ಲಿ ಅವರು ಮನ ಒಲಿಸಿದರು, ಎಲ್ಲಿ ಬಲಪ್ರಯೋಗದ ಅವಶ್ಯಕತೆ ಬಿತ್ತೋ ಅಲ್ಲಿ ಬಲಪ್ರಯೋಗ ಮಾಡಿದರು. ಅವರು ಒಂದು ಉದ್ದೇಶವನ್ನು ನಿಶ್ಚಯ ಮಾಡಿದ್ದರು ಮತ್ತು ಅದರೆಡೆಗೆ ತುಂಬಾ ಧೃಡತೆಯಿಂದ ಹೋಗುತ್ತಲೇ ಇದ್ದರು. ದೇಶವನ್ನು ಒಗ್ಗೂಡಿಸುವ ಈ ಕಾರ್ಯವನ್ನು ಅವರೊಬ್ಬರೇ ಮಾಡಬಲ್ಲವರಾಗಿದ್ದರು ಯಾಕೆಂದರೆ ಅವರು ಎಲ್ಲಾ ಜನರೂ ಸಮಾನರಾಗಿ ಇರುವಂತಹ ದೇಶದ ಪರಿಕಲ್ಪನೆಯನ್ನು ಮಾಡಿದ್ದರು ಮತ್ತು ಅವರು? ಜಾತಿ ಮತ್ತು ಪಂಥಗಳ ಯಾವುದೇ ಬೇಧ ನಮ್ಮನ್ನು ತಡೆಯದಿರಲಿ, ಎಲ್ಲರೂ ಭಾರತದ ಸುಪುತ್ರ ಮತ್ತು ಸುಪುತ್ರಿಯರು, ನಾವೆಲ್ಲರೂ ನಮ್ಮ ದೇಶವನ್ನು ಪ್ರೀತಿಸಬೇಕು ಮತ್ತು ಪರಸ್ಪರ ಪ್ರೇಮ ಮತ್ತು ಸದ್ಭಾವನೆಯಿಂದ ನಮ್ಮ ಗುರಿಯನ್ನು ನಿರ್ಮಿಸಿಕೊಳ್ಳಬೇಕಾಗಿದೆ? ಎಂದು ಹೇಳಿದ್ದರು. ಸರ್ದಾರ್ ವಲ್ಲಬ್ ಭಾಯಿ ಪಟೇಲರ ಮಾತು ಎಂದೂ ಯಾವಾಗಲೂ ನಮ್ಮೆಲ್ಲರಿಗೆ ಪ್ರೇರಣೆಯಾಗಿರಬೇಕು ಎಂದು ನಾನು ಹೇಳುತ್ತಿದ್ದೇನೆ.
ಸರ್ದಾರ್ ರ ಈ ಮಾತು ಇಂದಿಗೂ ಕೂಡ ನಮ್ಮ ನ್ಯೂ ಇಂಡಿಯಾ ದ ವಿಷನ್ ಗೆ ಪ್ರೇರಕವಾಗಿದೆ, ಪ್ರಾಸಂಗಿಕವಾಗಿದೆ. ಇದೇ ಕಾರಣದಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಆಚರಿಸಲಾಗುತ್ತಿದೆ.
ದೇಶಕ್ಕೆ ಒಂದು ಅಖಂಡ ರಾಷ್ಟ್ರದ ಸ್ವರೂಪ ಕೊಡುವುದಕ್ಕೆ ಅವರ ಕೊಡುಗೆ ಅನನ್ಯವಾದುದು. ಸರ್ದಾರ್ ಪಟೇಲ್ ರ ಜನ್ಮ ಜಯಂತಿ ಅಂಗವಾಗಿ 31 ಅಕ್ಟೋಬರ್ ರಂದು ದೇಶದೆಲ್ಲೆಡೆ ರನ್ ಫೋರ್ ಯುನಿಟಿ ಯನ್ನು ಅಯೋಜನೆಯಾಗುತ್ತದೆ. ಇದರಲ್ಲಿ ದೇಶದ ಎಲ್ಲಾ ಕಡೆಗಳಿಂದ ಮಕ್ಕಳು, ಯುವಕರು,ಮಹಿಳೆಯರು, ಎಲ್ಲಾ ವಯಸ್ಸಿನ ಜನರು ಭಾಗಿಯಾಗುತ್ತಾರೆ. ನೀವು ಸಹ ನಮ್ಮೆಲ್ಲರಲ್ಲಿ ಸದ್ಭಾವನೆ ಬೆಳೆಸುವ ಈ ರನ್ ಫೋರ್ ಯುನಿಟಿ ಉತ್ಸವದಲ್ಲಿ ಭಾಗಿಯಾಗಿ ಎಂದು ನಾನು ನಿಮ್ಮೆಲ್ಲರನ್ನೂ ಆಗ್ರಹಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೀಪಾವಳಿಯ ರಜೆಯ ನಂತರ ಹೊಸ ಸಂಕಲ್ಪದೊಂದಿಗೆ, ಹೊಸ ನಿಶ್ಚಯದೊಂದಿಗೆ, ನೀವೆಲ್ಲರೂ ನಿಮ್ಮ ದಿನನಿತ್ಯದ ಜೀವನದಲ್ಲಿ ಮತ್ತೊಮ್ಮೆ ಮುಳುಗಿರುತ್ತೀರಿ. ನನ್ನ ಕಡೆಯಿಂದ ಎಲ್ಲಾ ದೇಶವಾಸಿಗಳಿಗೆ, ಅವರ ಎಲ್ಲಾ ಕನಸುಗಳು ಸಾಕಾರವಾಗಲಿ ಎನ್ನುವ ಶುಭಕಾಮನೆಗಳು. ಅನಂತ ಧನ್ಯವಾದಗಳು.
ನನ್ನ ಪ್ರಿಯ ದೇಶವಾಸಿಗಳೇ ನಿಮ್ಮೆಲ್ಲರಿಗೂ ನಮಸ್ಕಾರ. ಆಕಾಶವಾಣಿಯ ಮೂಲಕ ಮನದ ಮಾತನ್ನು ಹಂಚಿಕೊಳ್ಳುತ್ತಾ 3 ವರ್ಷಗಳೇ ಆಗಿ ಹೋಗಿವೆ. ಇಂದು ಇದು 36ನೇ ಕಂತು. ಮನದ ಮಾತು ಒಂದು ರೀತಿ ಭಾರತದ ಸಕಾರಾತ್ಮಕ ಶಕ್ತಿಯಾಗಿದೆ. ದೇಶದ ಮೂಲೆಮೂಲೆಯ ಜನರಲ್ಲಿ ಹುದುಗಿದ ಭಾವನೆಗಳು, ಇಚ್ಛೆಗಳು, ಅಪೇಕ್ಷೆಗಳು, ಕೆಲವೆಡೆ ದೂರುಗಳಾಗಿವೆ. ಹೀಗೆ ಜನಮಾನಸದಲ್ಲಿ ತುಂಬಿ ತುಳುಕುತ್ತಿರುವ ಭಾವನೆಗಳೊಂದಿಗೆ ನಾನು ಬೆರೆಯಲು ಮನದ ಮಾತು ನನಗೆ ಒಂದು ಅದ್ಭುತ ಅವಕಾಶವನ್ನು ಒದಗಿಸಿದೆ. ನಾನೆಂದಿಗೂ ನನ್ನ ಮನದ ಮಾತು ಎಂದು ಹೇಳಿಲ್ಲ. ಈ ಮನದ ಮಾತು ದೇಶವಾಸಿಗಳ ಮನದೊಂದಿಗೆ ಬೆರೆತಿದೆ, ಅವರ ಭಾವನೆಗಳೊಂದಿಗೆ ಬೆರೆತಿದೆ, ಅವರ ಆಸೆ ಆಕಾಂಕ್ಷೆಗಳೊಂದಿಗೆ ಬೆರೆತಿದೆ. ಮನದ ಮಾತಿನಲ್ಲಿ ನಾನು ಹೇಳುವ ಮಾತುಗಳೆಲ್ಲವೂ ದೇಶದ ಮೂಲೆ ಮೂಲೆಯಿಂದ ಜನರು ನನಗೆ ಕಳುಹಿಸುವ ಅವರ ಮಾತುಗಳಾಗಿವೆ. ನಿಮಗೆ ಬಹುಶಃ ನಾನು ಬಹಳ ಕಡಿಮೆ ಹೇಳಲಾಗುತ್ತದೆಯೇನೋ, ಆದರೆ ನನಗೆ ತುಂಬಿ ತುಳುಕುವಂತಹ ಖಜಾನೆಯೇ ದೊರೆಯುತ್ತದೆ. ಅದು ಈ ಮೇಲ್ ಆಗಿರಲಿ, ದೂರವಾಣಿ ಆಗಿರಲಿ, ಮೈ ಗೌ ನಲ್ಲಾಗಿರಲಿ, ನರೇಂದ್ರ ಮೋದಿ ಆಪ್ನಲ್ಲಾಗಿರಲಿ ಸಾಕಷ್ಟು ಮಾತುಗಳು ನನಗೆ ತಲುಪುತ್ತವೆ. ಹೆಚ್ಚಿನವು ನನಗೆ ಪ್ರೇರಣಾದಾಯಕವಾಗಿರುತ್ತವೆ.
ಸಾಕಷ್ಟು ಸರ್ಕಾರದಲ್ಲಿಯ ಸುಧಾರಣೆ ಕುರಿತಾಗಿರುತ್ತವೆ. ಕೆಲವು ವ್ಯಕ್ತಿಗತ ದೂರುಗಳಾಗಿದ್ದರೆ ಇನ್ನು ಕೆಲವು ಸಾಮೂಹಿಕ ಸಮಸ್ಯೆಗಳ ಮೇಲೆ ಗಮನ ಹರಿಸುವಂಥವಾಗಿರುತ್ತವೆ. ನಾನು ತಿಂಗಳಿಗೊಮ್ಮೆ ನಿಮ್ಮ ಅರ್ಧ ಗಂಟೆಯಷ್ಟು ಸಮಯ ತೆಗೆದುಕೊಳ್ಳುತ್ತೇನೆ. ಆದರೆ ಜನರು 30 ದಿನಗಳೂ ಮನದ ಮಾತಿಗೆ ತಮ್ಮ ಮಾತುಗಳನ್ನು ತಲುಪಿಸುತ್ತಾರೆ. ಅದರ ಪರಿಣಾಮವಾಗಿ ಸರ್ಕಾರದಲ್ಲೂ ಸಂವೇದನಾಶೀಲತೆ, ಸಮಾಜದಲ್ಲಿ ದೂರ ದೂರದಲ್ಲಿ ಎಂತೆಂಥ ಶಕ್ತಿ ಕೇಂದ್ರೀಕೃತವಾಗಿದೆ ಅದರತ್ತ ಸರ್ಕಾರ ಗಮನ ನೀಡುವುದು, ಇದೆಲ್ಲ ಸಹಜ ಅನುಭವದಂತೆ ಕಂಡುಬರುತ್ತಿದೆ. ಹಾಗಾಗಿ ಮನದ ಮಾತಿನ 3 ವರ್ಷಗಳ ಈ ಯಾತ್ರೆ ದೇಶವಾಸಿಗಳ ಭಾವನೆಗಳ ಅರಿವಿನ ಯಾತ್ರೆಯಾಗಿದೆ. ಅಲ್ಲದೆ ಬಹುಶಃ ಇಷ್ಟು ಕಡಿಮೆ ಸಮಯದಲ್ಲಿ ದೇಶದ ಸಾಮಾನ್ಯ ನಾಗರಿಕನ ಭಾವನೆಗಳನ್ನು ಅರಿತುಕೊಳ್ಳುವ ಅವಕಾಶ ದೊರೆತದ್ದಕ್ಕೆ ದೇಶವಾಸಿಗಳಿಗೆ ನಾನು ಆಭಾರಿಯಾಗಿದ್ದೇನೆ. ಮನದ ಮಾತಿನಲ್ಲಿ ನಾನು ಯಾವಾಗಲೂ ಆಚಾರ್ಯ ವಿನೋಭಾ ಭಾವೆಯವರ ಮಾತನ್ನು ನೆನಪಿಟ್ಟಿದ್ದೇನೆ. ಆಚಾರ್ಯ ವಿನೋಭಾ ಭಾವೆ ’ಅ-ಸರ್ಕಾರಿ, ಅಸರ್ಕಾರಿ’ ಅಂದರೆ ಸರ್ಕಾರದ ಹೊರತಾಗಿದ್ದದ್ದು – ಪರಿಣಾಮಕಾರಿ ಎಂದು ಹೇಳುತ್ತಿದ್ದರು. ಮನದ ಮಾತಿನಲ್ಲಿ ನಾನೂ ದೇಶದ ಜನತೆಯನ್ನು ಕೇಂದ್ರೀಕೃತಗೊಳಿಸುವ ಪ್ರಯತ್ನ ಮಾಡಿದ್ದೇನೆ. ರಾಜಕೀಯದಿಂದ ದೂರವಿರಿಸಿದ್ದೇನೆ. ತಾತ್ಕಾಲಿಕ ಆವೇಶ, ಆಕ್ರೋಶದಲ್ಲಿ ಕೊಚ್ಚಿಹೋಗುವ ಬದಲು ಸ್ಥಿರ ಮನಸ್ಸಿನಿಂದ ನಿಮ್ಮೊಂದಿಗಿರುವ ಪ್ರಯತ್ನ ಮಾಡಿದ್ದೇನೆ.
ಈಗ 3 ವರ್ಷಗಳ ನಂತರ ಸಾಮಾಜಿಕ ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು, ರಿಸರ್ಚ್ ಸ್ಕಾಲರ್ ಗಳು, ಮಾಧ್ಯಮ ತಜ್ಞರು ಖಂಡಿತ ಇದರ ವಿಶ್ಲೇಷಣೆ ಮಾಡುತ್ತಾರೆ. ಸಾಧಕ-ಬಾಧಕ ಹೀಗೆ ಪ್ರತಿಯೊಂದು ವಿಷಯಗಳನ್ನೂ ಬೆಳಕಿಗೆ ತರುತ್ತಾರೆ ಮತ್ತು ಈ ವಿಚಾರ ವಿಮರ್ಶೆ ಭವಿಷ್ಯದಲ್ಲಿ ಮನದ ಮಾತಿಗೆ ಬಹಳ ಉಪಯುಕ್ತವಾಗಲಿದೆ, ಇದರಿಂದ ಒಂದು ಹೊಸ ಚೈತನ್ಯ, ಹೊಸ ಶಕ್ತಿ ದೊರೆಯಲಿದೆ ಎಂದು ನನಗೆ ವಿಶ್ವಾಸವಿದೆ. ನಾವು ಊಟ ಮಾಡುವಾಗ ಎಷ್ಟು ಅವಶ್ಯಕತೆಯಿದೆಯೋ ಅಷ್ಟನ್ನೇ ಸೇವಿಸಬೇಕು, ಆಹಾರ ಪದಾರ್ಥಗಳನ್ನು ಹಾಳು ಮಾಡಬಾರದು ಎಂದು ಹಿಂದೊಮ್ಮೆ ಮನದ ಮಾತಿನಲ್ಲಿ ಹೇಳಿದ್ದೆ. ಆದರೆ ತದನಂತರ ಈಗಾಗಲೇ ಅನೇಕ ಸಂಘ ಸಂಸ್ಥೆಗಳು, ಯುವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ದೇಶದ ಮೂಲೆ ಮೂಲೆಯಿಂದ ಬಂದ ಪತ್ರಗಳಿಂದ ನನಗೆ ತಿಳಿಯಿತು. ತಟ್ಟೆಯಲ್ಲಿ ಬಿಟ್ಟುಹೋಗುವ ಅನ್ನವನ್ನು ಹೇಗೆ ಒಟ್ಟುಗೂಡಿಸಿ ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂಬ ಕುರಿತು ಎಷ್ಟೊಂದು ಜನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. ಬಹಳ ಹರ್ಷವೆನಿಸಿತು.
ನಾನು ಒಮ್ಮೆ ಮನದ ಮಾತಿನಲ್ಲಿ ಮಹಾರಾಷ್ಟ್ರದ ನಿವೃತ್ತ ಶಿಕ್ಷಕ ಶ್ರೀಯುತ ಚಂದ್ರಕಾಂತ್ ಕುಲಕರ್ಣಿ ಅವರ ಮಾತನ್ನು ಪ್ರಸ್ತಾಪಿಸಿದ್ದೆ. ಅವರಿಗೆ 16 ಸಾವಿರ ರೂಪಾಯಿ ಪಿಂಚಣಿ ಲಭಿಸುತ್ತದೆ. ಅವರು ತಮಗೆ ಸಿಗುವ ಪಿಂಚಣಿಯಿಂದ, 5 ಸಾವಿರ ರೂಪಾಯಿಗಳ 51 ಪೋಸ್ಟ್ ಡೇಟೆಡ್ ಚೆಕ್ಗಳನ್ನು ಸ್ವಚ್ಛತೆಗಾಗಿ ದಾನ ನೀಡಿದ್ದರು. ಅದರ ನಂತರ ಸ್ವಚ್ಛತೆಗಾಗಿ ಇಂಥ ಕೆಲಸಕ್ಕೆ ಅದೆಷ್ಟು ಜನರು ಮುಂದೆ ಬಂದರು ಎಂಬುದನ್ನು ನಾನು ಕಂಡಿದ್ದೇನೆ.
ಒಮ್ಮೆ ನಾನು ಹರಿಯಾಣದ ಸರಪಂಚರೊಬ್ಬರು ಕಳುಹಿಸಿದ ಸೆಲ್ಫಿ ವಿದ್ ಡಾಟರ್ (ಮಗಳೊಂದಿಗೆ ಸೆಲ್ಫಿ) ವಿಷಯವನ್ನು ಮನದ ಮಾತಿನಲ್ಲಿ ಎಲ್ಲರ ಮುಂದಿರಿಸಿದೆ. ನೋಡು ನೋಡುತ್ತಲೇ ಕೇವಲ ಭಾರತದಿಂದ ಮಾತ್ರವಲ್ಲ, ವಿಶ್ವದಾದ್ಯಂತ ಸೆಲ್ಫಿ ವಿದ್ ಡಾಟರ್ ಎಂಬುದು ಒಂದು ಬಹುದೊಡ್ಡ ಅಭಿಯಾನದ ರೂಪದಲ್ಲಿ ಹರಡಿತು. ಇದು ಕೇವಲ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ವಿಷಯವಲ್ಲ. ಪ್ರತಿ ಹೆಣ್ಣು ಮಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವ, ಅಭಿಮಾನ ಮೂಡಿಸುವ ಘಟನೆಯಾಗಿ ರೂಪುಗೊಂಡಿತು. ಪ್ರತಿ ತಂದೆತಾಯಿಗೂ ತಾವೂ ಮಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು ಎನಿಸತೊಡಗಿತು. ಪ್ರತಿ ಹೆಣ್ಣು ಮಗಳಿಗೂ ತನ್ನದೇ ಹಿರಿಮೆಯಿದೆ, ತನ್ನದೇ ಆದ ಮಹತ್ವವಿದೆ ಎಂದೆನಿಸತೊಡಗಿತು.
ಕಳೆದ ದಿನಗಳಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯವರೊಂದಿಗೆ ಕುಳಿತಿದ್ದೆ. ಪ್ರವಾಸಕ್ಕೆಂದು ತೆರಳುವ ಜನರಿಗೆ ಇನ್ಕ್ರೆಡಿಬಲ್ ಇಂಡಿಯಾ ಬಗ್ಗೆ ಅವರು ಎಲ್ಲಿಯೇ ಹೋಗಲಿ ಫೋಟೊ ಕಳುಹಿಸಿ ಎಂದು ಕೇಳಿದ್ದೆ. ಭಾರತದ ಪ್ರತಿಯೊಂದು ಮೂಲೆಯಿಂದಲೂ ಲಕ್ಷಾಂತರ ಫೋಟೊಗಳು ಬಂದವು. ಒಂದು ರೀತಿ ಪ್ರವಾಸೀ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದೊಂದು ಬಹು ದೊಡ್ಡ ಆಸ್ತಿಯಾದಂತಾಯ್ತು. ಒಂದು ಪುಟ್ಟ ಘಟನೆ ಎಷ್ಟು ದೊಡ್ಡ ಆಂದೋಲನಕ್ಕೆ ನಾಂದಿಯಾಗುತ್ತದೆ ಎಂಬುದನ್ನು ಮನದ ಮಾತಿನಲ್ಲಿ ನಾನು ಅನುಭವಿಸಿದ್ದೇನೆ. ಇಂದು ಮನದ ಮಾತಿಗೆ 3 ವರ್ಷಗಳು ತುಂಬಿರುವ ಬಗ್ಗೆ ಯೋಚಿಸುತ್ತಿರುವ ಸಂದರ್ಭದಲ್ಲಿ ಕಳೆದ ವರ್ಷಗಳ ಕೆಲ ಮಾತುಗಳು ಮನಃಪಟಲವನ್ನು ಆವರಿಸಿಬಿಟ್ಟವು. ದೇಶ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲು ಪ್ರತಿ ಕ್ಷಣವೂ ಮುಂಚೂಣಿಯಲ್ಲಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಮತ್ತೊಬ್ಬರ ಒಳಿತಿಗಾಗಿ, ಸಮಾಜದ ಒಳಿತಿಗಾಗಿ, ದೇಶದ ಪ್ರಗತಿಗಾಗಿ ಏನಾದರೂ ಮಾಡಬಯಸುತ್ತಾನೆ. ನನ್ನ 3 ವರ್ಷದ ಮನದ ಮಾತಿನ ಈ ಅಭಿಯಾನದಲ್ಲಿ ನಾನು ದೇಶವಾಸಿಗಳಿಂದ ತಿಳಿದುಕೊಂಡೆ, ಅರಿತುಕೊಂಡೆ, ಕಲಿತೆ. ಯಾವುದೇ ದೇಶಕ್ಕೆ ಇದು ಅತಿ ದೊಡ್ಡ ಆಸ್ತಿಯಾಗಿದೆ, ಬಹುದೊಡ್ಡ ಶಕ್ತಿಯಾಗಿರುತ್ತದೆ. ನಾನು ಹೃದಯಪೂರ್ವಕವಾಗಿ ದೇಶದ ಜನರಿಗೆ ನಮಿಸುತ್ತೇನೆ.
ನಾನೊಮ್ಮೆ ಮನದ ಮಾತಿನಲ್ಲಿ ಖಾದಿ ಬಗ್ಗೆ ಚರ್ಚಿಸಿದ್ದೆ. ಖಾದಿ ಎಂಬುದು ಒಂದು ವಸ್ತ್ರವಲ್ಲ ಅದೊಂದು ವಿಚಾರವಾಗಿದೆ. ಈ ಮಧ್ಯೆ ಖಾದಿ ಬಗ್ಗೆ ಸಾಕಷ್ಟು ಅಭಿರುಚಿ ಹೆಚ್ಚಿದೆ. ಖಾದಿಧಾರಿಗಳಾಗಿ ಎಂದೇನೂ ಹೇಳುವುದಿಲ್ಲ ಆದರೆ ವಿಭಿನ್ನ ಬಗೆಯ ಫ್ಯಾಬ್ರಿಕ್ಗಳಿರುತ್ತವೆ ಅದರಲ್ಲಿ ಖಾದಿ ಕೂಡಾ ಒಂದು ಯಾಕಾಗಬಾರದು? ಮನೆಯಲ್ಲಿ ಹೊದಿಕೆಯಾಗಲಿ, ಕರವಸ್ತ್ರವಾಗಲಿ, ಪರದೆಯಾಗಲಿ ಎಂದು ನಾನು ಸಹಜವಾಗಿ ಹೇಳಿದ್ದೆ. ಯುವಪೀಳಿಗೆಯಲ್ಲಿ ಖಾದಿ ಆಕರ್ಷಣೆ ಹೆಚ್ಚಿದೆ ಎಂಬುದು ಅರಿವಿಗೆ ಬಂದಿದೆ. ಖಾದಿ ಮಾರಾಟ ಹೆಚ್ಚಿದೆ ಮತ್ತು ಅದರಿಂದಾಗಿ ನೇರವಾಗಿ ಬಡವನ ಮನೆಗೆ ಉದ್ಯೋಗದ ನಂಟು ಬೆಳೆದಿದೆ. ಅಕ್ಟೋಬರ್ 2 ರಿಂದ ಖಾದಿ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಖಾದಿಯ ಈ ಆಂದೋಲನವನ್ನು ಮುಂದುವರಿಸಿ ಮತ್ತು ಅಭಿವೃದ್ಧಿಪಡಿಸಿ ಎಂದು ನಾನು ಇನ್ನೊಮ್ಮೆ ಆಗ್ರಹಿಸುತ್ತೇನೆ. ಖಾದಿ ಖರೀದಿಸಿ ಬಡವನ ಮನೆಯಲ್ಲೂ ದೀಪಾವಳಿಯ ದೀಪ ಬೆಳಗಿಸೋಣ ಎಂಬ ಭಾವನೆಯೊಂದಿಗೆ ದುಡಿಯೋಣ. ನಮ್ಮ ದೇಶದ ಬಡಜನತೆಗೆ ಇದರಿಂದ ಹೊಸ ಶಕ್ತಿ ದೊರೆಯುತ್ತದೆ ಮತ್ತು ನಾವು ಅದನ್ನು ಮಾಡಲೇಬೇಕು. ಈಗ ಖಾದಿಯೆಡೆ ಅಭಿರುಚಿ ಹೆಚ್ಚಿರುವುದರಿಂದ ಖಾದಿ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ, ಭಾರತ ಸರ್ಕಾರದಲ್ಲಿ, ಖಾದಿಗೆ ಸಂಬಂಧಿಸಿದ ಜನರಲ್ಲಿ ಹೊಸ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳೋಣ, ಉತ್ಪಾದನಾ ಕ್ಷಮತೆಯನ್ನು ಹೇಗೆ ಹೆಚ್ಚಿಸೋಣ, ಸೋಲಾರ್ ಚರಕವನ್ನು ಹೇಗೆ ನಿರ್ಮಿಸೋಣ? ಎಂದು ಹೊಸ ದೃಷ್ಟಿಕೋನದಿಂದ ಆಲೋಚಿಸುವ ಉತ್ಸಾಹ ಹೆಚ್ಚಿದೆ. ನಮ್ಮ ಯಾವ ಪುರಾತನ ಪರಂಪರೆ, 20-25-30 ವರ್ಷಗಳಿಂದ ಮುಚ್ಚಿಹೋಗಿದ್ದವೋ ಅವುಗಳಿಗೆ ಪುನರುಜ್ಜೀವನ ಹೇಗೆ ಕಲ್ಪಿಸಬೇಕು ಎಂಬ ಚಿಂತನೆ ಮೂಡಿದೆ.
ಉತ್ತರ ಪ್ರದೇಶದ ವಾರಣಾಸಿಯ ಸೇವಾಪುರ್ನಲ್ಲಿ ಖಾದಿ ಆಶ್ರಮ 26 ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಆದರೆ ಇಂದು ಪುನರುಜ್ಜೀವನ ಪಡೆದಿದೆ. ವಿಭಿನ್ನ ಪ್ರಕಾರದ ಉಪಕಸುಬುಗಳನ್ನು ಜೋಡಿಸಿಕೊಳ್ಳಲಾಗಿದೆ. ಬಹಳಷ್ಟು ಜನರಿಗೆ ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಕಾಶ್ಮೀರದ ಪಂಪೋರ್ನಲ್ಲಿ ಖಾದಿ ಮತ್ತು ಗ್ರಾಮೊದ್ಯೋಗ ಸಂಸ್ಥೆಯು ಮುಚ್ಚಲ್ಪಟ್ಟಿದ್ದ ತಮ್ಮ ತರಬೇತಿ ಕೇಂದ್ರವನ್ನು ಮತ್ತೆ ಆರಂಭಿಸಿದೆ ಹಾಗೂ ಕಾಶ್ಮೀರದ ಬಳಿಯಂತೂ ಈ ಕ್ಷೇತ್ರಕ್ಕೆ ಕೊಡುಗೆ ನೀಡಲು ಬಹಳಷ್ಟಿದೆ. ಈಗ ಈ ತರಬೇತಿ ಕೇಂದ್ರ ಮತ್ತೆ ಆರಂಭಗೊಂಡಿದ್ದರಿಂದ ಹೊಸ ಪೀಳಿಗೆಗೆ ಆಧುನಿಕ ರೀತಿಯಲ್ಲಿ ನಿರ್ಮಿಸಲು, ಹೆಣೆಯಲು, ಹೊಸ ವಸ್ತುಗಳನ್ನು ಉತ್ಪಾದಿಸಲು ಸಹಾಯಕಾರಿಯಾಗಲಿದೆ. ದೊಡ್ಡ ದೊಡ್ಡ ಕಾರ್ಪೋರೇಟ್ ಹೌಸ್ಗಳು ಕೂಡಾ ದೀಪಾವಳಿ ಸಂದರ್ಭದಲ್ಲಿ ಉಡುಗೊರೆ ನೀಡಲು ಖಾದಿ ವಸ್ತುಗಳನ್ನು ಬಳಸುತ್ತಿರುವುದು ನನಗೆ ಬಹಳ ಸಂತಸವೆನಿಸಿದೆ. ಜನರು ಕೂಡಾ ಒಬ್ಬರಿಗೊಬ್ಬರು ಖಾದಿ ವಸ್ತುಗಳನ್ನೇ ಉಡುಗೊರೆಯಾಗಿ ನೀಡಲು ಆರಂಭಿಸಿದ್ದಾರೆ. ಸಹಜವಾಗಿಯೇ ಒಂದು ವಸ್ತು ಹೇಗೆ ವಿಸ್ತಾರಗೊಳ್ಳುತ್ತದೆ, ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎಂಬುದನ್ನು ನಾವು ಊಹಿಸಿಕೊಳ್ಳಬಹುದು.
ನನ್ನ ಪ್ರಿಯ ದೇಶವಾಸಿಗಳೇ, ಕಳೆದ ತಿಂಗಳ ಮನದ ಮಾತಿನಲ್ಲಿ ನಾವೆಲ್ಲರೂ ಒಂದು ಸಂಕಲ್ಪಗೈದಿದ್ದೆವು ಮತ್ತು ಗಾಂಧಿ ಜಯಂತಿಗೆ 15 ದಿನಗಳಿಗೂ ಮೊದಲು ದೇಶಾದ್ಯಂತ ಸ್ವಚ್ಛತೆಯ ಉತ್ಸವ ಆಚರಿಸುತ್ತೇವೆ, ಸ್ವಚ್ಛತೆಯೊಂದಿಗೆ ಜನಮಾನಸವನ್ನು ಒಗ್ಗೂಡಿಸೋಣ ಎಂದು ನಿರ್ಧರಿಸಿದ್ದೆವು. ನಮ್ಮ ಗೌರವಾನ್ವಿತ ರಾಷ್ಟ್ರಪತಿಯವರು ಈ ಕಾರ್ಯಕ್ಕೆ ಚಾಲನೆ ನೀಡಿದರು ಮತ್ತು ದೇಶ ಒಗ್ಗೂಡಿತು. ನಗರವಾಗಲಿ, ಗ್ರಾಮವಾಗಲಿ, ಪುರುಷರಾಗಿರಲಿ, ಸ್ತ್ರೀಯರಾಗಿರಲಿ, ಅಬಾಲವೃದ್ಧರಾದಿಯಾಗಿ ಇಂದು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮತ್ತು ನಾನು ಸಂಕಲ್ಪದಿಂದ ಸಿದ್ಧಿ ಎಂದು ಹೇಳಿದಾಗ ಈ ಸ್ವಚ್ಛತಾ ಅಭಿಯಾನ ಸಂಕಲ್ಪದಿಂದ ಸಿದ್ಧಿಯೆಡೆ ಹೇಗೆ ಮುಂದುವರಿಯುತ್ತಿದೆ ಎಂದು ನಾವು ಕಣ್ಣಾರೆ ನೋಡುತ್ತಿದ್ದೇವೆ. ಪ್ರತಿಯೊಬ್ಬರೂ ಇದನ್ನು ಸ್ವೀಕರಿಸುತ್ತಿದ್ದಾರೆ, ಸಹಯೋಗ ನೀಡುತ್ತಿದ್ದಾರೆ ಮತ್ತು ಇದನ್ನು ಸಾಕಾರಗೊಳಿಸಲು ಒಂದಲ್ಲಾ ಒಂದು ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ನಾನು ಗೌರವಾನ್ವಿತ ರಾಷ್ಟ್ರಪತಿಯವರಿಗೆ ಆಭಾರಿಯಾಗಿದ್ದೇನೆ ಜೊತೆಗೆ ದೇಶದ ಪ್ರತಿಯೊಂದೂ ವರ್ಗವೂ ಇದನ್ನು ತಮ್ಮದೇ ಕೆಲಸವೆಂದು ಭಾವಿಸಿದೆ. ಕ್ರೀಡಾಪಟುಗಳೇ ಆಗಿರಲಿ, ಚಿತ್ರರಂಗದವರಾಗಲಿ, ಶಿಕ್ಷಣರಂಗದವರೇ ಆಗಿರಲಿ, ಶಾಲೆಗಳಾಗಿರಲಿ, ಕಾಲೇಜುಗಳಾಗಿರಲಿ, ವಿಶ್ವವಿದ್ಯಾಲಯಗಳಾಗಿರಲಿ, ಕೃಷಿಕರಾಗಿರಲಿ, ಕಾರ್ಮಿಕರಾಗಿರಲಿ, ಅಧಿಕಾರಿ ಆಗಿರಲಿ, ಪೊಲೀಸರಾಗಿರಲಿ, ಸೇನಾನಿಯಾಗಿರಲಿ ಎಲ್ಲರೂ ಇದರೊಂದಿಗೆ ಒಗ್ಗೂಡಿದ್ದಾರೆ. ಈಗ ಸಾರ್ವಜನಿಕ ಸ್ಥಳಗಳು ಮಲಿನಗೊಂಡರೆ ಜನರು ದೂಷಿಸುತ್ತಾರೆ ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಂದು ರೀತಿಯ ಒತ್ತಡ ಏರ್ಪಟ್ಟಿದೆ. ಅಲ್ಲಿ ಕೆಲಸ ಮಾಡುವವರಿಗೂ ಒಂದು ಬಗೆಯ ಒತ್ತಡದ ಅನುಭವವಾಗುತ್ತಿದೆ. ಇದನ್ನು ನಾನು ಒಳ್ಳೇ ಬೆಳವಣಿಗೆ ಎಂದು ಭಾವಿಸುತ್ತೇನೆ. ಸ್ವಚ್ಚತೆಯೇ ಸೇವೆ ಅಭಿಯಾನದ ಮೊದಲ ನಾಲ್ಕು ದಿನಗಳಲ್ಲೇ ಸರಿ ಸುಮಾರು 75 ಲಕ್ಷಕ್ಕಿಂತ ಹೆಚ್ಚು ಜನರು, 40 ಸಾವಿರಕ್ಕಿಂತ ಹೆಚ್ಚು ಹೊಸ ಇನಿಶಿಯೇಟಿವ್ಗಳೊಂದಿಗೆ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಕೆಲವರಂತೂ ನಿರಂತರವಾಗಿ ಕೆಲಸ ಮಾಡುತ್ತಾ ಪರಿವರ್ತನೆಯನ್ನು ತಂದೇ ತರುವ ನಿರ್ಣಯದೊಂದಿಗೆ ಮುಂದುವರಿದಿದ್ದಾರೆ. ಈ ಬಾರಿ ಇನ್ನೊಂದು ವಿಷಯ ನೋಡಿದೆ – ಒಂದು ನಾವು ಯಾವುದೇ ಸ್ಥಳದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳುವುದು, ಇನ್ನೊಂದು ನಾವು ಜಾಗರೂಕರಾಗಿದ್ದು ಮಾಲಿನ್ಯ ಆಗದಂತೆ ನೋಡಿಕೊಳ್ಳುವುದು. ಹೀಗೆ ಸ್ವಚ್ಛತೆಯನ್ನು ಸ್ವಭಾವವಾಗಿಸಿಕೊಳ್ಳಬೇಕಾದರೆ ವೈಚಾರಿಕ ಆಂದೋಲನದ ಅವಶ್ಯಕತೆಯಿದೆ. ಈ ಬಾರಿ ಸ್ವಚ್ಛತೆಯೇ ಸೇವೆ ಎನ್ನುವ ಅಭಿಯಾನದೊಂದಿಗೆ ಹಲವಾರು ಸ್ಪರ್ಧೆಗಳೂ ನಡೆದವು. ಎರಡೂವರೆ ಕೋಟಿ ಮಕ್ಕಳು ಸ್ವಚ್ಛತೆಯ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸಾವಿರಾರು ಮಕ್ಕಳು ಪೇಂಟಿಂಗ್ ಮಾಡಿದರು. ತಮ್ಮ ತಮ್ಮ ಕಲ್ಪನೆಗನುಸಾರ ಸ್ವಚ್ಛತೆ ಬಗ್ಗೆ ಚಿತ್ರ ಬರೆದರು. ಬಹಳಷ್ಟು ಜನರು ಕವಿತೆ ರಚಿಸಿದರು. ಅಲ್ಲದೆ ಈ ಮಧ್ಯೆ ನಮ್ಮ ಪುಟ್ಟ ಸ್ನೇಹಿತರು ಕಳುಹಿಸಿದಂತಹ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಾನು ಪೋಸ್ಟ್ ಮಾಡುತ್ತಿದ್ದೇನೆ ಮತ್ತು ಅವರ ಪ್ರತಿಭೆಯನ್ನು ಗುರುತಿಸುತ್ತಿದ್ದೇನೆ. ಸ್ವಚ್ಛತೆಯ ಮಾತು ಬಂದಾಗ ನಾನು ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯುವುದಿಲ್ಲ. ಈ ಆಂದೋಲನವನ್ನು ಅವರು ಬಹಳ ಪಾವಿತ್ರ್ಯತೆಯಿಂದ ಮುಂದುವರಿಸಿದ್ದಾರೆ. ತಮ್ಮ ತಮ್ಮ ರೀತಿಯಲ್ಲಿ ಕೈ ಜೋಡಿಸಿದ್ದಾರೆ ಮತ್ತು ಒಂದು ಸಕಾರಾತ್ಮಕ ವಾತಾವರಣ ನಿರ್ಮಿಸುವಲ್ಲಿ ಅವರು ಬಹುದೊಡ್ಡ ಪಾತ್ರವಹಿಸಿದ್ದಾರೆ. ಇಂದಿಗೂ ಅವರು ತಮ್ಮದೇ ಆದ ರೀತಿಯಲ್ಲಿ ಸ್ವಚ್ಛತಾ ಆಂದೋಲನದ ನೇತೃತ್ವವಹಿಸಿದ್ದಾರೆ.
ನಮ್ಮ ದೇಶದ ವಿದ್ಯುನ್ಮಾನ ಮಾಧ್ಯಮ ಮತ್ತು ಮುದ್ರಣ ಮಾಧ್ಯಮ ಎಂತಹ ಅಭೂತಪೂರ್ವ ಸೇವೆ ಸಲ್ಲಿಸಬಹುದು ಎಂಬುದನ್ನು `ಸ್ವಚ್ಛತೆಯೇ ಸೇವೆ’ ಆಂದೋಲನದಲ್ಲಿ ಕಾಣಬಹುದು. ಇದೀಗ ಕೆಲ ದಿನಗಳ ಹಿಂದೆ ಶ್ರೀನಗರದ 18 ವರ್ಷದ ಯುವಕ ಬಿಲಾಲ್ ಡಾರ್ ಬಗ್ಗೆ ಯಾರೋ ನನ್ನ ಗಮನ ಸೆಳೆದರು. ಶ್ರೀನಗರ ನಿಗಮ ಬಿಲಾಲ್ ಡಾರ್ನನ್ನು ತಮ್ಮ ಸ್ವಚ್ಛತೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ ಎಂಬುದನ್ನು ಕೇಳಿ ನಿಮಗೆ ಸಂತೋಷವೆನ್ನಿಸಬಹುದು. ಬ್ರಾಂಡ್ ಅಂಬಾಸಿಡರ್ ಎಂದ ಕೂಡಲೇ ನಿಮಗೆ ಅವರು ಚಿತ್ರರಂಗದವರಾಗಿರಬಹುದು ಇಲ್ಲವೇ ಕ್ರೀಡಾಪಟುಗಳಾಗಿರಬಹುದು ಎಂದೆನಿಸಬಹುದು, ಆದರೆ ಅಲ್ಲ. ಬಿಲಾಲ್ ಡಾರ್ 12-13 ವರ್ಷದವನಿದ್ದಾಗಲೇ, ಅಂದರೆ ಕಳೆದ 5-6 ವರ್ಷಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಶ್ರೀನಗರದ ಬಳಿ ಇರುವ ಏಷ್ಯಾದ ಬಹುದೊಡ್ಡ ಸರೋವರದ ಬಳಿ ಪ್ಲಾಸ್ಟಿಕ್ ಇರಲಿ, ಪಾಲಿಥೀನ್ ಇರಲಿ, ಬಳಸಿದ ಬಾಟಲಿಗಳಿರಲಿ, ಕಸ ಕಡ್ಡಿಯಿರಲಿ ಅದೆಲ್ಲವನ್ನೂ ಸ್ವಚ್ಛಗೊಳಿಸುತ್ತಿರುತ್ತಾನೆ. ಅದರಿಂದ ಸ್ವಲ್ಪ ಸಂಪಾದನೆಯನ್ನೂ ಮಾಡುತ್ತಾನೆ. ಏಕೆಂದರೆ ಈತ ಬಹಳ ಚಿಕ್ಕವನಿದ್ದಾಗಲೇ ಅವನ ತಂದೆ ಕ್ಯಾನ್ಸರ್ನಿಂದ ಮರಣ ಹೊಂದಿದರು. ಆದರೆ ಆತ ತನ್ನ ಜೀವನ ನಿರ್ವಹಣೆಯೊಂದಿಗೆ ಸ್ವಚ್ಛತೆಯನ್ನು ಒಗ್ಗೂಡಿಸಿಕೊಂಡ. ಬಿಲಾಲ್ ವರ್ಷಕ್ಕೆ 12 ಸಾವಿರ ಕಿಲೋಗಿಂತಲೂ ಹೆಚ್ಚು ಕಸವನ್ನು ಸ್ವಚ್ಛಗೊಳಿಸಿದ್ದಾನೆಂದು ಅಂದಾಜಿಸಲಾಗಿದೆ. ಸ್ವಚ್ಛತೆಯ ಕುರಿತು ಮುಂದಡಿ ಇಟ್ಟಿದ್ದಕ್ಕಾಗಿ, ಬ್ರಾಂಡ್ ಅಂಬಾಸಿಡರ್ ನೇಮಕಕ್ಕಾಗಿ ಮತ್ತು ಅವರ ಈ ಕಲ್ಪನೆಗೆ ಶ್ರೀನಗರ ನಿಗಮವನ್ನೂ ನಾನು ಅಭಿನಂದಿಸುತ್ತೇನೆ. ಏಕೆಂದರೆ ಶ್ರೀನಗರ ಒಂದು ಪ್ರವಾಸಿ ತಾಣವಾಗಿದೆ. ಭಾರತದ ಪ್ರತಿ ನಾಗರಿಕನಿಗೂ ಶ್ರೀನಗರಕ್ಕೆ ಹೋಗುವ ಆಸೆ ಇರುತ್ತದೆ. ಹಾಗಾಗಿ ಶ್ರೀನಗರದಲ್ಲಿ ಸ್ವಚ್ಛತೆಯ ಬಗ್ಗೆ ಇಷ್ಟೊಂದು ಕಾಳಜಿ ಇರುವುದು ತನ್ನಲ್ಲೇ ಒಂದು ವಿಶೇಷತೆಯಾಗಿದೆ. ಬಿಲಾಲ್ನನ್ನು ಅವರು ಕೇವಲ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಲ್ಲ, ಸ್ವಚ್ಛತೆಯನ್ನು ಕೈಗೊಳ್ಳುತ್ತಿರುವ ಬಿಲಾಲ್ಗೆ ವಾಹನ ಸೌಲಭ್ಯ ಒದಗಿಸಿದ್ದಾರೆ. ಸಮವಸ್ತ್ರ ನೀಡಿದ್ದಾರೆ. ಮತ್ತು ಅವನು ಬೇರೆ ಪ್ರದೇಶಗಳಿಗೂ ಹೋಗಿ ಜನರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಾನೆ, ಸ್ಫೂರ್ತಿ ತುಂಬುತ್ತಾನೆ ಮತ್ತು ಸಫಲತೆ ದೊರೆಯುವವರೆಗೂ ಬೆಂಬಿಡದೆ ಹಿಂಬಾಲಿಸುತ್ತಾನೆ. ಬಿಲಾಲ್ ಡಾರ್ ವಯಸ್ಸು ಚಿಕ್ಕದು ಆದರೆ ಸ್ವಚ್ಛತೆ ಬಗ್ಗೆ ಕಾಳಜಿವಹಿಸುವವರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾನೆ.
ನಾನು ಬಿಲಾಲ್ ಡಾರ್ಗೆ ಅನಂತ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ಇತಿಹಾಸ ಇತಿಹಾಸದ ಗರ್ಭದಲ್ಲೇ ಜನಿಸುತ್ತದೆ ಎನ್ನುವ ಮಾತನ್ನು ನಾವು ಸ್ವೀಕರಿಸಲೇಬೇಕು ಮತ್ತು ಯಾವಾಗ ಇತಿಹಾಸದ ಮಾತು ಬರುತ್ತದೆಯೋ ಆಗ ಮಹಾಪುರುಷರ ನೆನಪಾಗುವುದು ಸ್ವಾಭಾವಿಕವೇ ಆಗಿದೆ. ಈ ಅಕ್ಟೋಬರ್ ತಿಂಗಳು ನಮ್ಮ ಬಹಳಷ್ಟು ಮಹಾಪುರುಷರನ್ನು ನೆನಪಿಸಿಕೊಳ್ಳುವ ತಿಂಗಳಾಗಿದೆ. ಮಹಾತ್ಮ ಗಾಂಧಿಯವರಿಂದ ಹಿಡಿದು ಸರ್ದಾರ್ ಪಟೇಲ್ ಅವರ ವರೆಗೆ, 20 ಮತ್ತು 21ನೇ ಶತಮಾನದಲ್ಲಿ ನಮಗೆ ದಿಕ್ಕು ತೋರಿಸಿದ, ನಮ್ಮ ನಾಯಕತ್ವ ವಹಿಸಿದ, ನಮಗೆ ಮಾರ್ಗದರ್ಶನ ತೋರಿದ ಎಷ್ಟೊಂದು ಮಹಾಪುರುಷರು ನಮ್ಮ ಮುಂದಿದ್ದಾರೆ ಮತ್ತು ದೇಶಕ್ಕಾಗಿ ಅವರೆಲ್ಲ ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆ. ಅಕ್ಟೋಬರ್ ಎರಡರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯಾದರೆ, ಅಕ್ಟೋಬರ್ ಹನ್ನೊಂದರಂದು ಜಯಪ್ರಕಾಶ್ ನಾರಾಯಣ್ ಮತ್ತು ನಾನಾಜಿ ದೇಶಮುಖ್ ಅವರ ಜಯಂತಿಯಾಗಿದೆ ಮತ್ತು ಸೆಪ್ಟೆಂಬರ್ 25ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜಯಂತಿಯಾಗಿದೆ. ನಾನಾಜಿ ಮತ್ತು ದೀನದಯಾಳ ಅವರದಂತೂ ಇದು ಜನ್ಮ ಶತಮಾನೋತ್ಸವದ ವರ್ಷ ಸಹ ಆಗಿದೆ. ಈ ಎಲ್ಲಾ ಮಹಾಪುರುಷರ ಒಂದು ಕೇಂದ್ರ ಬಿಂದು ಏನಾಗಿತ್ತು? ಒಂದು ಮಾತಿನಲ್ಲಿ ಇವರೆಲ್ಲರಲ್ಲಿ ಸಾಮ್ಯತೆ ಇತ್ತು, ಅದೆಂದರೆ ದೇಶಕ್ಕಾಗಿ ಬದುಕುವುದು ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡುವುದು. ಇದು ಬರೀ ಉಪದೇಶವಾಗಿರಲಿಲ್ಲ, ತಮ್ಮ ಜೀವನದ ಮುಖಾಂತರ ಮಾಡಿ ತೋರಿಸುವುದಾಗಿತ್ತು. ಗಾಂಧೀಜಿ, ಜಯಪ್ರಕಾಶ್ ಅವರು, ದೀನದಯಾಳ್ ಅವರಂತೂ ಎಂತಹ ಮಹಾಪುರುಷರೆಂದರೆ ಅವರು ಅಧಿಕಾರದ ಮಾರ್ಗದಿಂದ ದೂರ ಉಳಿದು ಜನರ ಜೀವನದ ಜೊತೆಗೆ ಕ್ಷಣ ಕ್ಷಣವೂ ಜೀವಿಸಿದ್ದರು, ಹೋರಾಟ ಮುಂದುವರೆಸಿದ್ದರು ಮತ್ತು ಸರ್ವ ಜನರ ಹಿತಕ್ಕಾಗಿ, ಸರ್ವ ಜನರ ಸುಖಕ್ಕಾಗಿ ಏನನ್ನಾದರೂ ಮಾಡುತ್ತಲೇ ಇರುತ್ತಿದ್ದರು. ನಾನಾಜಿ ದೇಶಮುಖ್ ಅವರು ರಾಜಕೀಯ ಜೀವನವನ್ನು ಬಿಟ್ಟು ಗ್ರಾಮೋದಯದಲ್ಲಿ ಭಾಗಿಯಾಗಿದ್ದರು ಮತ್ತು ಇಂದು ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರೆ ಅವರ ಗ್ರಾಮೋದಯದ ಕೆಲಸಕ್ಕೆ ಗೌರವಾದರ ಇರಿಸಿಕೊಳ್ಳುವುದು ತುಂಬಾ ಸಹಜವೇ ಆಗಿದೆ.
ಭಾರತದ ಅಂದಿನ ರಾಷ್ಟ್ರಪತಿ ಶ್ರೀಯುತ ಅಬ್ದುಲ್ ಕಲಾಂ ಅವರು ಯಾವಾಗ ನವ ಯುವಕರೊಂದಿಗೆ ಮಾತನಾಡುತ್ತಿದ್ದರೋ ಆಗೆಲ್ಲಾ ನಾನಾಜಿ ದೇಶಮುಖ್ ಅವರ ಗ್ರಾಮೀಣ ವಿಕಾಸದ ಮಾತುಗಳನ್ನು ಹೇಳುತ್ತಿದ್ದರು. ಆ ಮಾತುಗಳನ್ನು ತುಂಬಾ ಆದರದಿಂದ ಉಲ್ಲೇಖಿಸುತ್ತಿದ್ದರು ಮತ್ತು ಅವರು ಸ್ವತಃ ನಾನಾಜಿಯವರ ಈ ಕೆಲಸವನ್ನು ನೋಡುವುದಕ್ಕೋಸ್ಕರ ಹಳ್ಳಿಗೆ ಹೋಗಿದ್ದರು.
ಇನ್ನು ದೀನದಯಾಳ ಉಪಾಧ್ಯಾಯ ಅವರು. ಹೇಗೆ ಮಹಾತ್ಮಾ ಗಾಂಧಿ ಅವರು ಸಮಾಜದ ಕೊನೆಯ ಸ್ತರದಲ್ಲಿ ಕುಳಿತಿರುವ ಮನುಷ್ಯನ ಬಗ್ಗೆ ಮಾತನಾಡುತ್ತಿದ್ದರೋ ಹಾಗೆಯೇ ದೀನದಯಾಳ್ ಅವರು ಸಹ ಸಮಾಜದ ಕೊನೆಯ ಸ್ತರದಲ್ಲಿ ಕುಳಿತಿರುವ ನೋವುಂಡ, ಶೋಷಿತ, ವಂಚಿತ, ಬಡ ವರ್ಗದವರ ಬಗ್ಗೆಯೇ ಮಾತನಾಡುತ್ತಿದ್ದರು ಮತ್ತು ಅವರ ಜೀವನವನ್ನು ಸುಧಾರಿಸಲು ಶಿಕ್ಷಣದ ಮೂಲಕ, ಉದ್ಯೋಗದ ಮೂಲಕ ಯಾವ ರೀತಿ ಬದಲಾವಣೆ ತರಬಹುದು ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ಎಲ್ಲಾ ಮಹಾಪುರುಷರನ್ನು ಸ್ಮರಿಸುವುದು ಅವರಿಗೆ ನಾವು ಮಾಡುವ ಉಪಕಾರವಲ್ಲ. ನಮಗೆ ಜೀವನದಲ್ಲಿ ಮುಂದಿನ ದಾರಿಗಳು ಸಿಗುತ್ತಲಿರಲಿ, ಮುಂದಿನ ನಿರ್ದೇಶನಗಳು ಸಿಗುತ್ತಿರಲಿ ಎಂಬ ಕಾರಣಕ್ಕೆ ಈ ಮಹಾಪುರುಷರ ಸ್ಮರಣೆಯನ್ನು ಮಾಡಬೇಕಾಗಿದೆ.
ಮುಂದಿನ ಮನ್ ಕಿ ಬಾತ್ನಲ್ಲಿ ನಾನು ಖಂಡಿತವಾಗಿ ಸರ್ದಾರ್ ವಲ್ಲಬ್ ಭಾಯಿ ಪಟೇಲ್ ಅವರ ವಿಷಯ ಹೇಳುತ್ತೇನೆ. ಆದರೆ 31 ಅಕ್ಟೋಬರ್ ಪೂರಾ ದೇಶದಲ್ಲಿ, ದೇಶದ ಪ್ರತಿ ನಗರದಲ್ಲಿ, ಪ್ರತಿ ಪಟ್ಟಣದಲ್ಲಿ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ರನ್ ಫಾರ್ ಯುನಿಟಿ ಎನ್ನುವ ಕಾರ್ಯಕ್ರಮ ‘ಒಂದು ಭಾರತ ಶ್ರೇಷ್ಠ ಭಾರತ’ ಎನ್ನುವ ಘೋಷಣೆಯೊಂದಿಗೆ ನಡೆಯಬೇಕಿದೆ ಮತ್ತು ವಾತಾವರಣ ಸಹ ಓಡುವುದಕ್ಕೆ ಪೂರಕವಾಗಿದ್ದು ಸಂತೋಷ ತರುವಂತಿದೆ. ಸರ್ದಾರ್ ಪಟೇಲ್ ಅವರಂತೆ ಉಕ್ಕಿನ ಶಕ್ತಿ ಪಡೆದುಕೊಳ್ಳಲು ಇದು ಕೂಡ ಅವಶ್ಯಕವಾಗಿದೆ ಮತ್ತು ಸರ್ದಾರ್ ಪಟೇಲರು ದೇಶವನ್ನು ಒಗ್ಗೂಡಿಸಿದ್ದರು, ನಾವು ಸಹ ಏಕತೆಗಾಗಿ ಓಟದಲ್ಲಿ ಭಾಗವಹಿಸಿ ಐಕ್ಯತೆಯ ಮಂತ್ರವನ್ನು ಮುಂದುವರಿಸಬೇಕಾಗಿದೆ.
ನಾವೆಲ್ಲರೂ “ವಿವಿಧತೆಯಲ್ಲಿ ಏಕತೆ, ಭಾರತದ ವಿಶೇಷತೆ” ಎಂದು ತುಂಬಾ ಸಹಜವಾಗಿ ಹೇಳುತ್ತೇವೆ. ವಿವಿಧತೆಯನ್ನು ನಾವು ಗೌರವಿಸುತ್ತೇವೆ ಆದರೆ ಯಾವಾಗಲಾದರೂ ನಮ್ಮ ಈ ವಿವಿಧತೆಯನ್ನು ಅನುಭವಿಸಲು ಪ್ರಯತ್ನಪಟ್ಟಿದ್ದೇವೆಯೇ? ನಾನು ಮತ್ತೆ ಮತ್ತೆ ಹಿಂದುಸ್ತಾನದ ನನ್ನ ದೇಶ ವಾಸಿಗಳಿಗೆ ಅದರಲ್ಲೂ ವಿಶೇಷವಾಗಿ ನನ್ನ ಯುವ ಜನತೆಗೆ ಹೇಳಲು ಇಷ್ಟ ಪಡುತ್ತೇನೆ. ನಾವು ಒಂದು ಜಾಗೃತಾವಸ್ಥೆಯಲ್ಲಿ ಇದ್ದೇವೆ. ಈ ಭಾರತದ ವಿವಿಧತೆಯನ್ನು ಅನುಭವಿಸಿ, ಅದನ್ನು ಸ್ಪರ್ಶಿಸಿ, ಅದರ ಸುವಾಸನೆಯನ್ನು ಆಘ್ರಾಣಿಸಿ. ಬೇಕಿದ್ದರೆ ನೀವು ನೋಡಿ, ನಿಮ್ಮೊಳಗಿನ ವ್ಯಕ್ತಿತ್ವದ ವಿಕಸನಕ್ಕೆ ಕೂಡ ನಮ್ಮ ದೇಶದ ಈ ವೈವಿಧ್ಯತೆಗಳು ಒಂದು ದೊಡ್ಡ ಪಾಠಶಾಲೆಯಂತೆ ಕೆಲಸ ಮಾಡುತ್ತವೆ. ರಜಾ ದಿನಗಳಿರಲಿ, ದೀಪಾವಳಿಯ ದಿನವಾಗಲಿ, ನಮ್ಮ ದೇಶದಲ್ಲಿ ನಾಲ್ಕೂ ನಿಟ್ಟಿನಲ್ಲಿ ಒಂದಿಲ್ಲೊಂದು ಕಡೆ ಹೋಗಿ ಬರುವ ಅಭ್ಯಾಸವಿದೆ. ಜನರು ಯಾತ್ರಾರ್ಥಿಗಳಾಗಿ ಹೋಗಿ ಬರುತ್ತಾರೆ ಇದು ತುಂಬಾ ಸ್ವಾಭಾವಿಕ. ಆದರೆ ಒಮ್ಮೊಮ್ಮೆ ನನಗೆ, ‘ನಾವು ನಮ್ಮ ದೇಶವನ್ನು ನೋಡುವುದಿಲ್ಲ, ದೇಶದ ವೈವಿಧ್ಯತೆಗಳನ್ನು ತಿಳಿದುಕೊಳ್ಳುವುದಿಲ್ಲ, ಅರ್ಥ ಮಾಡಿಕೊಳ್ಳುವುದಿಲ್ಲ. ಅವ್ಯವಸ್ಥೆಯ ಪ್ರಭಾವದಿಂದ ವಿದೇಶಗಳಲ್ಲಿಯೇ ಪ್ರವಾಸ ಕೈಗೊಳ್ಳಲು ಇಷ್ಟ ಪಡಲು ಪ್ರಾರಂಭಿಸಿದ್ದೇವೆ’ ಎಂಬ ಚಿಂತೆ ಮೂಡುತ್ತದೆ. ನೀವು ಜಗತ್ತನ್ನೆಲ್ಲ ಸುತ್ತಲು ಹೋಗಿ, ನನಗೇನೂ ಅಭ್ಯಂತರವಿಲ್ಲ, ಆದರೆ ಕೆಲವೊಮ್ಮೆಯಾದರೂ ನಿಮ್ಮ ಮನೆಯನ್ನು ಕೂಡ ನೋಡಿ. ಉತ್ತರ ಭಾರತದ ವ್ಯಕ್ತಿಗಳಿಗೆ ದಕ್ಷಿಣ ಭಾರತದಲ್ಲಿ ಏನಿದೆ ಎಂದು ಗೊತ್ತಿರುವುದಿಲ್ಲ, ಪಶ್ಚಿಮ ಭಾರತದ ವ್ಯಕ್ತಿಗಳಿಗೆ ಪೂರ್ವ ಭಾರತದಲ್ಲಿ ಏನಿದೆ ಎಂದು ಗೊತ್ತಿರುವುದಿಲ್ಲ, ನಮ್ಮ ದೇಶ ಎಷ್ಟೊಂದು ವೈವಿಧ್ಯತೆಗಳಿಂದ ತುಂಬಿದೆ.
ಮಹಾತ್ಮ ಗಾಂಧಿ, ಲೋಕಮಾನ್ಯ ತಿಲಕ್, ಸ್ವಾಮಿ ವಿವೇಕಾನಂದ, ನಮ್ಮ ಹಿಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಜೀ ಇವರ ಮಾತುಗಳಲ್ಲೇ ನೋಡುವುದಾದರೆ ಒಂದು ಮಾತು ಮತ್ತೆ ಮತ್ತೆ ಬರುತ್ತದೆ ಅದು ಯಾವುದೆಂದರೆ ಅವರು ಭಾರತದಲ್ಲಿ ಸಂಚರಿಸಿದ್ದರಿಂದ ಅವರಿಗೆ ಭಾರತವನ್ನು ನೋಡಿ ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ಭಾರತಕ್ಕಾಗಿ ಬದುಕಲು ಅಥವಾ ಮಡಿಯಲು ಒಂದು ಹೊಸ ಪ್ರೇರಣೆ ಸಿಕ್ಕಿತು. ಈ ಎಲ್ಲಾ ಮಹಾಪುರುಷರೂ ಭಾರತದ ಉದ್ದಗಲಕ್ಕೂ ವ್ಯಾಪಕವಾಗಿ ಸಂಚರಿಸಿದ್ದರು. ತಮ್ಮ ತಮ್ಮ ಕೆಲಸಗಳ ಪ್ರಾರಂಭದಲ್ಲಿ ಇವರೆಲ್ಲ ಭಾರತವನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಭಾರತವನ್ನು ತಮ್ಮೊಳಗೆ ಜೀವಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ನಮ್ಮ ದೇಶದ ಭಿನ್ನಭಿನ್ನ ರಾಜ್ಯಗಳನ್ನೂ, ಭಿನ್ನಭಿನ್ನ ಸಮಾಜಗಳನ್ನೂ, ಸಮೂಹಗಳನ್ನೂ, ಅವರ ರೀತಿ-ರಿವಾಜುಗಳನ್ನೂ, ಅವರ ಪರಂಪರೆಯನ್ನೂ, ಅವರ ವೇಷ ಭೂಷಣಗಳನ್ನೂ, ಅವರ ಊಟ-ಉಪಚಾರಗಳನ್ನೂ, ಅವರ ಮೌಲ್ಯಗಳನ್ನೂ ಒಬ್ಬ ವಿದ್ಯಾರ್ಥಿಯ ರೂಪದಲ್ಲಿ ಕಲಿಯುವ, ಅರ್ಥಮಾಡಿಕೊಳ್ಳುವ, ಬದುಕುವ ಪ್ರಯತ್ನವನ್ನು ನಾವು ಮಾಡಬಲ್ಲೆವೇ?
ಪ್ರವಾಸದಲ್ಲಿ ನಾವು ಬರೀ ಬೇರೆಯವರನ್ನು ಭೇಟಿಯಾಗುವುದು ಅಷ್ಟೇ ಅಲ್ಲ, ನಾವು ಒಬ್ಬ ವಿದ್ಯಾರ್ಥಿಯ ತರಹ ಅವರನ್ನು ಅರ್ಥ ಮಾಡಿಕೊಂಡು ಅವರಂತೆ ಆಗುವ ಪ್ರಯತ್ನ ಮಾಡಿದಾಗ ಮಾತ್ರ ಪ್ರವಾಸ ಮೌಲ್ಯಾಧಾರಿತವಾಗುತ್ತದೆ. ನನ್ನ ಸ್ವಯಂ ಅನುಭವ ಹೇಳುವುದಾದರೆ ನನಗೆ ಹಿಂದುಸ್ತಾನದ 500ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹೋಗುವ ಅವಕಾಶ ಸಿಕ್ಕಿರಬಹುದು, 450ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನನಗೆ ರಾತ್ರಿ ಉಳಿದುಕೊಳ್ಳುವ ಸಂದರ್ಭ ಒದಗಿ ಬಂದಿದೆ ಮತ್ತು ಇಂದು ನಾನು ಭಾರತದಲ್ಲಿ ಈ ಒಂದು ಅಧಿಕಾರವನ್ನು ಸಂಭಾಳಿಸುತ್ತಿರುವಾಗ ನನ್ನ ಪ್ರವಾಸದ ಆ ಅನುಭವಗಳು ನನಗೆ ತುಂಬಾ ಕೆಲಸಕ್ಕೆ ಬರುತ್ತವೆ. ವಿಷಯಗಳನ್ನು ಅರ್ಥೈಸಿಕೊಳ್ಳುವಲ್ಲಿ ನನಗೆ ಬಹಳಷ್ಟು ಅನುಕೂಲವಾಗುತ್ತದೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ ನೀವು ಈ ವಿಶಾಲ ಭಾರತವನ್ನು “ವಿವಿಧತೆಯಲ್ಲಿ ಏಕತೆ” ಎನ್ನುವ ಘೋಷಣೆಗೆ ಮಾತ್ರ ಸೀಮಿತಗೊಳಿಸಬೇಡಿ, ನಮ್ಮ ಈ ಅಪಾರ ಶಕ್ತಿಯ ಭಂಡಾರವನ್ನು ಅನುಭವಿಸಿ. “ಒಂದು ಭಾರತ – ಶ್ರೇಷ್ಠ ಭಾರತ” ಎನ್ನುವ ಕನಸು ಇದರಲ್ಲಿ ಮಿಳಿತಗೊಂಡಿದೆ. ಊಟ-ಉಪಚಾರದಲ್ಲಿ ಎಷ್ಟೊಂದು ಬಗೆಗಳಿವೆ ಎಂದರೆ ಒಂದು ವೇಳೆ ಪೂರ್ತಿ ಜೀವಮಾನದಲ್ಲಿ ಪ್ರತಿ ದಿನವೂ ಒಂದೊಂದು ಹೊಸ ಬಗೆಯ ಆಹಾರ ಸೇವಿಸುತ್ತೇನೆ ಎಂದು ಅಂದುಕೊಂಡರೂ ಸಹ ಬಹುಶಃ ಯಾವುದೇ ಆಹಾರ ಪುನರಾವರ್ತನೆಯಾಗಲಾರದು. ಇದು ಈಗ ನಮ್ಮ ಪ್ರವಾಸೋದ್ಯಮದ ಒಂದು ದೊಡ್ಡ ಶಕ್ತಿಯಾಗಿದೆ.
ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಈ ರಜೆಯಲ್ಲಿ ನೀವು ಬರೀ ಒಂದು ಬದಲಾವಣೆಗೋಸ್ಕರ ಮನೆಯಿಂದ ಹೊರಗೆ ಹೋಗಬೇಡಿ , ಅದರ ಬದಲು ಏನಾದರೂ ಸ್ವಲ್ಪ ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ, ಪಡೆದುಕೊಳ್ಳುವ ನಿರ್ಧಾರದೊಂದಿಗೆ ಮನೆಯಿಂದ ಹೊರಡಿ. ಭಾರತವನ್ನು ನಿಮ್ಮೊಳಗೆ ಅವಗಾಹನೆ ಮಾಡಿಕೊಳ್ಳಿರಿ. ಕೋಟಿ ಕೋಟಿ ಜನರ ವೈವಿಧ್ಯತೆಯನ್ನು ನಿಮ್ಮೊಳಗೆ ಅಂತರ್ಗತಗೊಳಿಸಿಕೊಳ್ಳಿ. ಇಂತಹ ಅನುಭವಗಳಿಂದ ನಿಮ್ಮ ಜೀವನ ಸಮೃದ್ಧವಾಗುತ್ತದೆ. ನಿಮ್ಮ ಚಿಂತನೆಯ ವ್ಯಾಪ್ತಿಯು ವಿಶಾಲವಾಗುತ್ತದೆ. ಅನುಭವಕ್ಕಿಂತ ದೊಡ್ಡ ಶಿಕ್ಷಕ ಮತ್ಯಾರು ಇರಲು ಸಾಧ್ಯ? ಸಾಮಾನ್ಯವಾಗಿ ಅಕ್ಟೋಬರ್ನಿಂದ ಮಾರ್ಚ್ ವರೆಗಿನ ಸಮಯ ಹೆಚ್ಚಾಗಿ ಪ್ರವಾಸದ್ದಾಗಿರುತ್ತದೆ. ಜನರು ಪ್ರವಾಸ ಹೋಗುತ್ತಾರೆ. ಈ ಬಾರಿ ಕೂಡ ನೀವೊಂದು ವೇಳೆ ಪ್ರವಾಸ ಹೋಗುವಿರಾದರೆ ನನ್ನ ಈ ಅಭಿಯಾನವನ್ನು ನೀವು ಮುನ್ನಡೆಸುತ್ತೀರಿ ಎಂಬ ವಿಶ್ವಾಸ ನನಗಿದೆ. ನೀವು ಎಲ್ಲಿಯಾದರೂ ಹೋಗಿ, ನಿಮ್ಮ ಅನುಭವವನ್ನು ಹಂಚಿಕೊಳ್ಳಿ,
#incredibleindia (ಹ್ಯಾಷ್ ಟ್ಯಾಗ್ incredibleindia ) ಇದಕ್ಕೆ ನೀವು ಫೋಟೋಗಳನ್ನು ಖಂಡಿತವಾಗಿ ಕಳುಹಿಸಿ. ಅಲ್ಲಿಯ ಜನರ ಜೊತೆ ಭೇಟಿ ಮಾಡಿದಲ್ಲಿ ಅವರ ಭಾವಚಿತ್ರವನ್ನು ಕೂಡ ಕಳುಹಿಸಿ. ಬರೀ ಕಟ್ಟಡಗಳ ಬಗ್ಗೆ, ಪ್ರಕೃತಿ ಸೌಂದರ್ಯದ ಬಗ್ಗೆ ಮಾತ್ರವಲ್ಲ ಅಲ್ಲಿಯ ಜನ-ಜೀವನದ ಬಗ್ಗೆ ಸಹ ಕೆಲವು ಮಾತುಗಳನ್ನು ಬರೆಯಿರಿ. ನಿಮ್ಮ ಪ್ರವಾಸದ ಒಳ್ಳೆಯ ಪ್ರಬಂಧವನ್ನು ಬರೆಯಿರಿ. Mygovಗೆ ಕಳುಹಿಸಿರಿ, NarendraModiAppಗೆ ಕಳುಹಿಸಿರಿ.