ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರೆದಿರುವ ಹೊಚ್ಚ ಹೊಸ ಮತ್ತು ಪರಿಷ್ಕರಿಸಿದ ಆವೃತ್ತಿಯ ಪರೀಕ್ಷಾ ಯೋಧರು” ಕೃತಿ ಇಲ್ಲಿದೆಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನಪ್ರಿಯ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ (ಮನದ ಮಾತುನ ಇತ್ತೀಚಿನ ಆವೃತ್ತಿಯಲ್ಲಿ ಪರಿಷ್ಕೃತ ಆವೃತ್ತಿಯ ಎಕ್ಸಾಂ ವಾರಿಯರ್ಸ್” ಕೃತಿಯನ್ನು ಅತಿ ಶೀಘ್ರವೇ ಪ್ರಕಟಿಸುವುದಾಗಿ ಭರವಸೆ ನೀಡಿದ್ದರುಅದರಂತೆ ಆ ಕೃತಿ ಇದೀಗ ನಿಮ್ಮ ಮುಂದಿದೆಇದು ಹಲವಾರು ಆನ್ಲೈನ್ ಮಾರಾಟ ವೇದಿಕೆಗಳಲ್ಲಿ ಪೂರ್ವ-ಆದೇಶದಲ್ಲಿ(ಪ್ರೀ-ಆರ್ಡರ್ಲಭ್ಯವಾಗಲಿದೆನೀವು (https://amzn.to/3eaYOHH) or here (https://bit.ly/3eeUVl8). ಇಲ್ಲಿ ಪ್ರೀ-ಆರ್ಡರ್ ಮಾಡಬಹುದು.

 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2018ರಲ್ಲಿ ಮೊದಲ ಆವೃತ್ತಿಯ ಎಕ್ಸಾಂ ವಾರಿಯರ್ಸ್’ ಕೃತಿಯಲ್ಲಿ ವಿದ್ಯಾರ್ಥಿ ಜೀವನಪರೀಕ್ಷೆ ಎದುರಿಸುವ ಆತ್ಮಸ್ಥೈರ್ಯ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತು ಮಕ್ಕಳಿಗೆ ತಿಳಿ ಹೇಳುವಮಾರ್ಗದರ್ಶನ ನೀಡುವ ಸ್ಥೂರ್ತಿದಾಯಕ ವಿಚಾರಧಾರೆಗಳು ಮತ್ತು ಆಲೋಚನೆಗಳನ್ನು ಬರೆದಿದ್ದಾರೆಶಿಕ್ಷಣ ಎಂದರೆ ಮಕ್ಕಳು ಪರೀಕ್ಷೆಗಳಲ್ಲಿ ಕೇವಲ ಗರಿಷ್ಠ ಅಂಕಗಳನ್ನು ಗಳಿಸಲು ಮಾತ್ರ ಸೀಮಿತವಾಗಬಾರದುಕಲಿಕೆಯೇ ಶಿಕ್ಷಣದ ಆದ್ಯತೆಯ ಗಮನವಾಗಬೇಕುಮಕ್ಕಳು ತಮ್ಮಲ್ಲಿರುವ ಸುಪ್ತ ಮತ್ತು ಅಗಾಧ ಜ್ಞಾನವನ್ನು ಹೊರಹಾಕುವ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವ ಮುಕ್ತ ಪರಿಸರ ಸೃಷ್ಟಿ ಮಾಡುವುದೇ ನಿಜವಾದ ಶಿಕ್ಷಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.

ಪ್ರಧಾನ ಮಂತ್ರಿ ಅವರ ಎಕ್ಸಾಂ ವಾರಿಯರ್ಸ್’ ಕೃತಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಗಿದೆಬ್ರೈಲ್ ಲಿಪಿಯಲ್ಲೂ ಹೊರಮೂಡಿರುವುದು ವಿಶೇಷಈ ಕೃತಿಯನ್ನು ವಿದ್ಯಾರ್ಥಿ ಸಮುದಾಯಪೋಷಕರುಬೋಧಕ ವರ್ಗ ಅತ್ಯಂತ ಪ್ರೀತಿಯಿಂದ  ಸ್ವಾಗತಿಸಿದ್ದಾರೆಮೊದಲ ಆವೃತ್ತಿಯ ಈ ಕೃತಿಯು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ ಕಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ 3 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದೊಂದಿಗೆ ಸಂಬಂಧ ಮತ್ತು ಸಂಪರ್ಕ ಹೊಂದಿರುವ ಹಲವು ಪರಿಣತರುತಜ್ಞರೊಂದಿಗೆ ಸಂವಾದ ನಡೆಸಿದ್ದಾರೆಅವರು ಪ್ರಧಾನಿ ಅವರಿಗೆ ಹಲವಾರು ಸಲಹೆಸೂಚನೆದೃಷ್ಟಿಕೋನ ಮತ್ತು ಮಾರ್ಗದರ್ಶನ ನೀಡಿದ್ದಾರೆ.

ಅದರಲ್ಲೂ ವಿಶೇಷವಾಗಿದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರಶಿಕ್ಷಣ ಸೇರಿದಂತೆ ಪ್ರತಿಯೊಂದು ವಲಯದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಅಥವಾ ಸುಧಾರಣೆ ತರುವ ಪರಿಸ್ಥಿತಿ ಸೃಷ್ಟಿಯಾಯಿತುಇದೇ ಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಕ್ಸಾಂ ವಾರಿಯರ್ಸ್’ ಕೃತಿ ರಚಿಸಿದರುಹೊಸ ಆವೃತ್ತಿಯಲ್ಲಿ ಅವರು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಗುರಿ ನಿಗದಿತರಗತಿ ಹೊರಗಿನ ಮಕ್ಕಳ ಚಟುವಟಿಕೆಗಳು ಇತ್ಯಾದಿ ಹಲವು ವಿಚಾರಗಳಿಗೆ ಒತ್ತು ನೀಡಿದ್ದಾರೆ.

ಮಕ್ಕಳ ಕಲಿಕೆಗೆ ಪೋಷಕರು ಹೇಗೆ ನೆರವಾಗಬೇಕುಕುಟುಂಬದಲ್ಲಿ ತಂತ್ರಜ್ಞಾನ ಬಳಕೆಯ ಪಾತ್ರಮಕ್ಕಳಿಗೆ ಪ್ರೋತ್ಸಾಹ ನೀಡುವ ವಿಧಾನವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡುವ ರೀತಿ ಇತ್ಯಾದಿ ವಿಚಾರಗಳ ಕುರಿತು ಪ್ರಧಾನಿ ಅವರು ಸಲಹೆ ನೀಡಿದ್ದಾರೆ.

ಮೊದಲ ಆವೃತ್ತಿಯ ಎಕ್ಸಾಂ ವಾರಿಯರ್ಸ್’ ಕೃತಿಯ ಪ್ರತಿ ಪಠ್ಯದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿರುವ ಸಂವಾದ ಚಟುವಟಿಕೆಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆಇಂತಹ ಹೆಚ್ಚಿನ ಸಂವಾದ ಚಟುವಟಿಕೆಗಳಿಗೆ ಹೊಸ ಆವೃತ್ತಿಯಲ್ಲಿ ಒತ್ತು ನೀಡಲಾಗಿದೆಅವುಗಳನ್ನು ನರೇಂದ್ರ ಮೋದಿ ಮೊಬೈಲ್ ಆ್ಯಪ್ನಲ್ಲಿ ಸಹ ಸಂಯೋಜಿಸಲಾಗಿದೆನರೇಂದ್ರ ಮೋದಿ ಮೊಬೈಲ್ ಆ್ಯಪ್ನ ಎಕ್ಸಾಂ ವಾರಿಯರ್ಸ್’ ಮಾದರಿಯ ಕೃತಿಗೆ ತಂತ್ರಜ್ಞಾನ-ಸಾಮಾಜಿಕ ಆಯಾಮ ನೀಡಲಾಗಿದೆ.

ಹೊಚ್ಚ ಹೊಸ ಮತ್ತು ಪರಿಷ್ಕರಿಸಿದ ಆವೃತ್ತಿಯ ಎಕ್ಸಾಂ ವಾರಿಯರ್ಸ್’ ಕೃತಿ ಇದೀಗ ಆನ್ಲೈನ್ ಹಲವಾರು ಮಾರಾಟ ವೇದಿಕೆಗಳಲ್ಲಿ ಲಭ್ಯವಿವೆನೀವು (https://amzn.to/3eaYOHH) or here (https://bit.ly/3eeUVl8). ಇಲ್ಲಿ ಪ್ರೀ-ಆರ್ಡರ್ ಮಾಡಬಹುದು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Odisha’s Dhenkanal farmers export 3 tonne of mango to London

Media Coverage

Odisha’s Dhenkanal farmers export 3 tonne of mango to London
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮೇ 2026
May 14, 2026

Kisan Kalyan to Viksit Bharat: PM Modi Delivers Jobs, Markets & Dignity Across Rural and Industrial India