ಸ್ವಾತಂತ್ರ್ಯದ ನಂತರ, ಸರ್ದಾರ್ ಪಟೇಲ್ ಅವರು 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಗ್ಗೂಡಿಸುವ ಅಸಾಧ್ಯವಾದ ಕೆಲಸವನ್ನು ಸಾಧಿಸಿದರು; 'ಏಕ್‌ ಭಾರತ್, ಶ್ರೇಷ್ಠ ಭಾರತ್' ಎಂಬ ದೃಷ್ಟಿಕೋನವು ಅವರಿಗೆ ಅತ್ಯಂತ ಮುಖ್ಯವಾಗಿತ್ತು: ಪ್ರಧಾನಮಂತ್ರಿ
ನಮ್ಮ ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸುವ ಪ್ರತಿಯೊಂದು ಆಲೋಚನೆ ಅಥವಾ ಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕನು ಬಹಿಷ್ಕರಿಸಬೇಕು, ಇದು ನಮ್ಮ ದೇಶಕ್ಕೆ ಈಗಿನ ಅಗತ್ಯ: ಪ್ರಧಾನಮಂತ್ರಿ
ಇದು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಭಾರತ, ಅದು ಎಂದಿಗೂ ತನ್ನ ಭದ್ರತೆ ಅಥವಾ ಸ್ವಾಭಿಮಾನದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ: ಪ್ರಧಾನಮಂತ್ರಿ
2014 ರಿಂದ, ನಮ್ಮ ಸರ್ಕಾರವು ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಗೆ ನಿರ್ಣಾಯಕ ಮತ್ತು ಪ್ರಬಲ ಹೊಡೆತವನ್ನು ನೀಡಿದೆ: ಪ್ರಧಾನಮಂತ್ರಿ
ರಾಷ್ಟ್ರೀಯ ಏಕತಾ ದಿನದಂದು, ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ನುಸುಳುಕೋರರನ್ನು ಹೊರಹಾಕುವುದು ನಮ್ಮ ಸಂಕಲ್ಪವಾಗಿದೆ: ಪ್ರಧಾನಮಂತ್ರಿ
ಇಂದು, ದೇಶವು ವಸಾಹತುಶಾಹಿ ಚಿಂತನೆಯ ಪ್ರತಿಯೊಂದು ಕುರುಹುಗಳನ್ನು ನಿರ್ಮೂಲನೆ ಮಾಡುತ್ತಿದೆ: ಪ್ರಧಾನಮಂತ್ರಿ
ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ಗೌರವಿಸುವ ಮೂಲಕ, ನಾವು 'ರಾಷ್ಟ್ರ ಮೊದಲು' ಎಂಬ ಮನೋಭಾವವನ್ನು ಬಲಪಡಿಸುತ್ತಿದ್ದೇವೆ: ಪ್ರಧಾನಮಂತ್ರಿ
ವಿಕಸಿತ ಭಾರತದ ಗುರಿಯನ್ನು ಸಾಧಿಸಲು, ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸುವ ಪ್ರತಿಯೊಂದು ಪಿತೂರಿಯನ್ನು ನಾವು ವಿಫಲಗೊಳಿಸಬೇಕು: ಪ್ರಧಾನಮಂತ್ರಿ
ಸಾಂಸ್ಕೃತಿಕ ಏಕತೆ, ಭಾಷಾ ಏಕತೆ, ಸಮಗ್ರ ಅಭಿವೃದ್ಧಿ ಮತ್ತು ಸಂಪರ್ಕದ ಮೂಲಕ ಹೃದಯಗಳನ್ನು ಬೆಸೆಯುವುದು ಭಾರತದ ಏಕತೆಯ ನಾಲ್ಕು ಸ್ತಂಭಗಳಾಗಿವೆ: ಪ್ರಧಾನಮಂತ್ರಿ
ಭಾರತ ಮಾತೆಯ ಮೇಲಿನ ನಿಷ್ಠೆ ಪ್ರತಿಯೊಬ್ಬ ಭಾರತೀಯನಿಗೂ ಶ್ರೇಷ್ಠ ಪೂಜೆಯಾಗಿದೆ: ಪ್ರಧಾನಮಂತ್ರಿ

 

ಗುಜರಾತ್ ನ ಕೆವಾಡಿಯಾದಲ್ಲಿ ಇಂದು ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಸರ್ದಾರ್ ಪಟೇಲ್ ಅವರ 150ನೇ ಜಯಂತಿಯು ಒಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಏಕತಾ ನಗರದ ಮುಂಜಾವು ದೈವಿಕ ಮತ್ತು ಸುಂದರ ಎಂದು ಬಣ್ಣಿಸಿದ ಶ್ರೀ ಮೋದಿ, ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ನೆರೆದ ಜನಸಮೂಹವನ್ನು ಉಲ್ಲೇಖಿಸಿದರು ಮತ್ತು ದೇಶವು ಬಹಳ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ದೇಶಾದ್ಯಂತ ನಡೆದ ಏಕತಾ ಓಟ ಮತ್ತು ಲಕ್ಷಾಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಅವರು ಎತ್ತಿ ತೋರಿಸಿದರು, ನವ ಭಾರತಕ್ಕಾಗಿ ಸಂಕಲ್ಪವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಒತ್ತಿ ಹೇಳಿದರು. ಹಿಂದೆ ನಡೆದ ಕಾರ್ಯಕ್ರಮಗಳು ಮತ್ತು ನಿನ್ನೆ ಸಂಜೆ ನಡೆದ ಗಮನಾರ್ಹ ಪ್ರಸ್ತುತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಹಿಂದಿನ ಸಂಪ್ರದಾಯಗಳು, ಇಂದಿನ ಕಠಿಣ ಪರಿಶ್ರಮ ಮತ್ತು ಶೌರ್ಯ ಮತ್ತು ಭವಿಷ್ಯದ ಸಾಧನೆಗಳನ್ನು ಇವುಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಸರ್ದಾರ್ ಪಟೇಲ್ ಅವರ 150 ನೇ ಜಯಂತಿಯ ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ದೇಶದ 140 ಕೋಟಿ ನಾಗರಿಕರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.

ಇತಿಹಾಸ ಬರೆಯಲು ಸಮಯವನ್ನು ವ್ಯರ್ಥ ಮಾಡಬಾರದು, ಬದಲಾಗಿ ಇತಿಹಾಸ ಸೃಷ್ಟಿಸಲು ಶ್ರಮಿಸಬೇಕು ಎಂದು ಸರ್ದಾರ್ ಪಟೇಲ್ ನಂಬಿದ್ದರು ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. ಸರ್ದಾರ್ ಪಟೇಲ್ ಅವರ ಜೀವನದುದ್ದಕ್ಕೂ ಈ ತತ್ವವು ಸ್ಪಷ್ಟವಾಗಿತ್ತು ಎಂದು ಅವರು ಒತ್ತಿ ಹೇಳಿದರು ಮತ್ತು ಸರ್ದಾರ್ ಪಟೇಲ್ ಅವರ ನೀತಿ ಮತ್ತು ನಿರ್ಧಾರಗಳು ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದವು ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಗ್ಗೂಡಿಸುವ ಅಸಾಧ್ಯವಾದ ಕಾರ್ಯವನ್ನು ಸರ್ದಾರ್ ಪಟೇಲ್ ಹೇಗೆ ಸಾಧಿಸಿದರು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿದರು. “ಏಕ್‌  ಭಾರತ್, ಶ್ರೇಷ್ಠ ಭಾರತ್" ಎಂಬ ಚಿಂತನೆಯು ಸರ್ದಾರ್ ಪಟೇಲ್ ಅವರಿಗೆ ಅತ್ಯಂತ ಮುಖ್ಯವಾಗಿತ್ತು. ಅದಕ್ಕಾಗಿಯೇ ಸರ್ದಾರ್ ಪಟೇಲ್ ಅವರ ಜಯಂತಿಯು ಸಹಜವಾಗಿಯೇ ರಾಷ್ಟ್ರೀಯ ಏಕತೆಯ ಪ್ರಮುಖ ಹಬ್ಬವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಆಗಸ್ಟ್ 15 ರಂದು 140 ಕೋಟಿ ಭಾರತೀಯರು ಸ್ವಾತಂತ್ರ್ಯ ದಿನ ಮತ್ತು ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುವಂತೆಯೇ, ಏಕತಾ ದಿನದ ಮಹತ್ವವೂ ಹೆಚ್ಚಾಗಿದೆ. ಇಂದು ಲಕ್ಷಾಂತರ ಜನರು ಏಕತೆಯ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಮತ್ತು ರಾಷ್ಟ್ರದ ಏಕತೆಯನ್ನು ಬಲಪಡಿಸುವ ಚಟುವಟಿಕೆಗಳನ್ನು ಉತ್ತೇಜಿಸಲು ಸಂಕಲ್ಪ ಮಾಡಿದ್ದಾರೆ ಎಂದು ಅವರು ವಿವರಿಸಿದರು. ಏಕತಾ ನಗರದಲ್ಲಿರುವ ಏಕತಾ ಮಾಲ್ ಮತ್ತು ಏಕತಾ ಉದ್ಯಾನವು ಏಕತೆಯ ಎಳೆಯನ್ನು ಬಲಪಡಿಸುವ ಸಂಕೇತಗಳಾಗಿ ನಿಂತಿವೆ ಎಂದು ಅವರು ಹೇಳಿದರು.

 

"ಪ್ರತಿಯೊಬ್ಬ ನಾಗರಿಕನು ದೇಶದ ಏಕತೆಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮದಿಂದ ದೂರವಿರಬೇಕು" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಈಗಿನ ಅಗತ್ಯ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಏಕತಾ ದಿನದ ಮುಖ್ಯ ಸಂದೇಶವಾಗಿದೆ ಎಂದು ಹೇಳಿದರು. ಸರ್ದಾರ್ ಪಟೇಲ್ ದೇಶದ ಸಾರ್ವಭೌಮತ್ವವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪರಿಗಣಿಸಿದ್ದರು ಎಂದು ಅವರು ಒತ್ತಿ ಹೇಳಿದರು. ಆದಾಗ್ಯೂ, ಸರ್ದಾರ್ ಪಟೇಲ್ ಅವರ ಮರಣದ ನಂತರದ ವರ್ಷಗಳಲ್ಲಿ, ಸತತ ಸರ್ಕಾರಗಳು ದೇಶದ ಸಾರ್ವಭೌಮತ್ವದ ಬಗ್ಗೆ ಅದೇ ಗಂಭೀರತೆಯನ್ನು ತೋರಿಸಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಕಾಶ್ಮೀರದಲ್ಲಿನ ತಪ್ಪುಗಳು, ಈಶಾನ್ಯದಲ್ಲಿನ ಸವಾಲುಗಳು ಮತ್ತು ದೇಶಾದ್ಯಂತ ನಕ್ಸಲ್-ಮಾವೋವಾದಿ ಭಯೋತ್ಪಾದನೆಯ ಹರಡುವಿಕೆಯು ಭಾರತದ ಸ್ವಾತಂತ್ರ್ಯಕ್ಕೆ ನೇರ ಬೆದರಿಕೆಗಳಾಗಿವೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರ ನೀತಿಗಳನ್ನು ಅನುಸರಿಸುವ ಬದಲು, ಅಂದಿನ ಸರ್ಕಾರಗಳು ಬೆನ್ನುಮೂಳೆಯಿಲ್ಲದ ವಿಧಾನವನ್ನು ಅಳವಡಿಸಿಕೊಂಡವು, ಇದರ ಪರಿಣಾಮವಾಗಿ ದೇಶದಲ್ಲಿ ಹಿಂಸಾಚಾರ ಮತ್ತು ರಕ್ತಪಾತವಾಯಿತು ಎಂದು ಪ್ರಧಾನಮಂತ್ರಿ ಹೇಳಿದರು.

ಸರ್ದಾರ್ ಪಟೇಲ್ ಅವರು ಇತರ ರಾಜಪ್ರಭುತ್ವದ ರಾಜ್ಯಗಳನ್ನು ಯಶಸ್ವಿಯಾಗಿ ವಿಲೀನಗೊಳಿಸಿದಂತೆಯೇ ಕಾಶ್ಮೀರದ ಸಂಪೂರ್ಣ ಏಕೀಕರಣವನ್ನು ಬಯಸಿದ್ದರು ಎಂಬುದು ಇಂದಿನ ಯುವ ಪೀಳಿಗೆಯ ಅನೇಕರಿಗೆ ತಿಳಿದಿಲ್ಲದಿರಬಹುದು ಎಂದು ಮೋದಿ ಹೇಳಿದರು, ಆದರೆ ಅಂದಿನ ಪ್ರಧಾನಮಂತ್ರಿ ಈ ಆಶಯವನ್ನು ಈಡೇರಿಸಲು ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದರು. ಕಾಶ್ಮೀರವನ್ನು ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಲಾಂಛನದೊಂದಿಗೆ ವಿಭಜಿಸಲಾಯಿತು. ಕಾಶ್ಮೀರದ ಬಗ್ಗೆ ಆಗಿನ ಆಡಳಿತ ಪಕ್ಷದ ತಪ್ಪುಗಳು ದೇಶವನ್ನು ದಶಕಗಳ ಕಾಲ ಪ್ರಕ್ಷುಬ್ಧತೆಗೆ ತಳ್ಳಿದವು ಎಂದು ಅವರು ಹೇಳಿದರು. ಅವರ ದುರ್ಬಲ ನೀತಿಗಳಿಂದಾಗಿ, ಕಾಶ್ಮೀರದ ಒಂದು ಭಾಗವು ಪಾಕಿಸ್ತಾನದ ಅಕ್ರಮ ಅತಿಕ್ರಮಣಕ್ಕೆ ಒಳಗಾಯಿತು ಮತ್ತು ಪಾಕಿಸ್ತಾನ ಭಯೋತ್ಪಾದನೆಯನ್ನು ಮತ್ತಷ್ಟು ಪ್ರೋತ್ಸಾಹಿಸಿತು. ಈ ತಪ್ಪುಗಳಿಗೆ ಕಾಶ್ಮೀರ ಮತ್ತು ದೇಶ ಎರಡೂ ಭಾರಿ ಬೆಲೆ ತೆರಬೇಕಾಯಿತು. ಆದರೂ, ಆಗಿನ ಸರ್ಕಾರ ಭಯೋತ್ಪಾದನೆಯ ಮುಂದೆ ತಲೆಬಾಗುವುದನ್ನು ಮುಂದುವರೆಸಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

 

ಸರ್ದಾರ್ ಪಟೇಲ್ ಅವರ ದೃಷ್ಟಿಕೋನವನ್ನು ಮರೆತಿದ್ದಕ್ಕಾಗಿ ಪ್ರಸ್ತುತ ವಿರೋಧ ಪಕ್ಷವನ್ನು ಟೀಕಿಸಿದ ಶ್ರೀ ಮೋದಿ, ಆದರೆ ತಮ್ಮ ಪಕ್ಷವು ಮರೆತಿಲ್ಲ ಎಂದು ಹೇಳಿದರು. 2014ರ ನಂತರ, ದೇಶವು ಮತ್ತೊಮ್ಮೆ ಸರ್ದಾರ್ ಪಟೇಲ್ ಅವರಿಂದ ಪ್ರೇರಿತವಾದ ಬಲವಾದ ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಇಂದು, ಕಾಶ್ಮೀರವು 370ನೇ ವಿಧಿಯ ಸಂಕೋಲೆಗಳಿಂದ ಮುಕ್ತವಾಗಿದೆ ಮತ್ತು ಸಂಪೂರ್ಣವಾಗಿ ಮುಖ್ಯವಾಹಿನಿಗೆ ಬಂದಿದೆ. ಪಾಕಿಸ್ತಾನ ಮತ್ತು ಭಯೋತ್ಪಾದನೆಯ ಸೂತ್ರಧಾರಿಗಳು ಸಹ ಈಗ ಭಾರತದ ನಿಜವಾದ ಶಕ್ತಿಯನ್ನು ಗುರುತಿಸಿದ್ದಾರೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಯಾರಾದರೂ ಭಾರತಕ್ಕೆ ಸವಾಲು ಹಾಕಲು ಧೈರ್ಯ ಮಾಡಿದರೆ, ದೇಶವು ಶತ್ರು ಪ್ರದೇಶದೊಳಗೆ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸುತ್ತದೆ ಎಂದು ಇಡೀ ಜಗತ್ತು ನೋಡಿದೆ ಎಂದು ಹೇಳಿದರು. ಭಾರತದ ಪ್ರತಿಕ್ರಿಯೆ ಯಾವಾಗಲೂ ಬಲವಾಗಿರುತ್ತದೆ ಮತ್ತು ನಿರ್ಣಾಯಕವಾಗಿರುತ್ತದೆ ಎಂದು ಅವರು ಒತ್ತಿ ಹೇಳಿದರು. "ಇದು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಭಾರತ ಮತ್ತು ಅದು ಎಂದಿಗೂ ತನ್ನ ಭದ್ರತೆ ಮತ್ತು ಗೌರವದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ." ಇದು ಭಾರತದ ಶತ್ರುಗಳಿಗೆ ಸಂದೇಶವಾಗಿದೆ ಎಂದು ಅವರು ಹೇಳಿದರು.

"ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ, ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತದ ಅತಿದೊಡ್ಡ ಯಶಸ್ಸು ನಕ್ಸಲ್-ಮಾವೋವಾದಿ ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿದಿರುವುದು" ಎಂದು ಪ್ರಧಾನಮಂತ್ರಿ ಹೇಳಿದರು. 2014 ಕ್ಕಿಂತ ಮೊದಲು, ದೇಶದ ಪರಿಸ್ಥಿತಿ ಹೇಗಿತ್ತೆಂದರೆ, ನಕ್ಸಲ್-ಮಾವೋವಾದಿ ಗುಂಪುಗಳು ಭಾರತದ ಹೃದಯ ಭಾಗದಿಂದಲೇ ತಮ್ಮದೇ ಆದ ಆಡಳಿತ ನಡೆಸುತ್ತಿದ್ದವು ಎಂದು ಅವರು ನೆನಪಿಸಿಕೊಂಡರು. ಈ ಪ್ರದೇಶಗಳಲ್ಲಿ, ಭಾರತದ ಸಂವಿಧಾನ ಅನ್ವಯಿಸಲಿಲ್ಲ ಮತ್ತು ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ನಕ್ಸಲರು ಬಹಿರಂಗವಾಗಿ ಆದೇಶಗಳನ್ನು ಹೊರಡಿಸಿದರು, ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿದರು ಮತ್ತು ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡಿದರು, ಆದರೆ ಆಡಳಿತವು ಅವರ ಮುಂದೆ ಅಸಹಾಯಕವಾಗಿ ಕಂಡುಬಂದಿತು ಎಂದು ಶ್ರೀ ಮೋದಿ ವಿವರಿಸಿದರು.

"2014ರ ನಂತರ, ನಮ್ಮ ಸರ್ಕಾರ ನಕ್ಸಲ್-ಮಾವೋವಾದಿ ಭಯೋತ್ಪಾದನೆಯ ವಿರುದ್ಧ ಪ್ರಮುಖ ದಾಳಿಯನ್ನು ಪ್ರಾರಂಭಿಸಿತು" ಎಂದು ಶ್ರೀ ಮೋದಿ ಹೇಳಿದರು. ನಗರ ಪ್ರದೇಶಗಳಲ್ಲಿ ವಾಸಿಸುವ ನಕ್ಸಲ್ ಸಹಾನುಭೂತಿ ಹೊಂದಿರುವ ನಗರ ನಕ್ಸಲರನ್ನು ಸಹ ಬದಿಗೆ ಸರಿಸಲಾಯಿತು ಎಂದು ಅವರು ಒತ್ತಿ ಹೇಳಿದರು. ಸೈದ್ಧಾಂತಿಕ ಯುದ್ಧವನ್ನು ಗೆದ್ದು ನಕ್ಸಲ್ ಭದ್ರಕೋಟೆಗಳ ಮೇಲೆ ನೇರ ದಾಳಿ ನಡೆಸಲಾಯಿತು ಮತ್ತು ಇಡೀ ದೇಶವು ಈಗ ಫಲಿತಾಂಶಗಳನ್ನು ನೋಡುತ್ತಿದೆ ಎಂದು ಅವರು ಹೇಳಿದರು. 2014ರ ಮೊದಲು, ದೇಶದಲ್ಲಿ ಸುಮಾರು 125 ಜಿಲ್ಲೆಗಳು ಮಾವೋವಾದಿ ಭಯೋತ್ಪಾದನೆಯಿಂದ ಪ್ರಭಾವಿತವಾಗಿದ್ದವು. ಇಂದು, ಈ ಸಂಖ್ಯೆ ಕೇವಲ 11ಕ್ಕೆ ಇಳಿದಿದೆ ಮತ್ತು ಕೇವಲ ಮೂರು ಜಿಲ್ಲೆಗಳು ಮಾತ್ರ ಗಂಭೀರ ನಕ್ಸಲ್ ಪ್ರಭಾವವನ್ನು ಎದುರಿಸುತ್ತಿವೆ. ಭಾರತವು ನಕ್ಸಲ್-ಮಾವೋವಾದಿ ಬೆದರಿಕೆಯಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೆ ಸರ್ಕಾರ ವಿರಮಿಸುವುದಿಲ್ಲ ಎಂದು ಪ್ರಧಾನಮಂತ್ರಿಯವರು ಏಕತಾ ನಗರದ ಭೂಮಿಯಿಂದ, ಸರ್ದಾರ್ ಪಟೇಲ್ ಅವರ ಸಮ್ಮುಖದಲ್ಲಿ ದೇಶಕ್ಕೆ ಭರವಸೆ ನೀಡಿದರು.

 

ಇಂದು ದೇಶದ ಏಕತೆ ಮತ್ತು ಆಂತರಿಕ ಭದ್ರತೆಯು ನುಸುಳುಕೋರರಿಂದ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದಶಕಗಳಿಂದ ವಿದೇಶಿ ನುಸುಳುಕೋರರು ದೇಶವನ್ನು ಪ್ರವೇಶಿಸಿ, ನಾಗರಿಕರಿಗೆ ಮೀಸಲಾದ ಸಂಪನ್ಮೂಲಗಳನ್ನು ಕಸಿದುಕೊಂಡು, ಜನಸಂಖ್ಯಾ ಸಮತೋಲನವನ್ನು ಅಸ್ತವ್ಯಸ್ತಗೊಳಿಸಿದ್ದಾರೆ ಮತ್ತು ದೇಶದ ಏಕತೆಗೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದರು. ಈ ಗಂಭೀರ ವಿಷಯದ ಬಗ್ಗೆ ಹಿಂದಿನ ಸರ್ಕಾರಗಳು ಕಣ್ಣು ಮುಚ್ಚಿಕೊಂಡಿದ್ದವು ಎಂದು ಅವರು ಟೀಕಿಸಿದರು ಮತ್ತು ಮತಬ್ಯಾಂಕ್ ರಾಜಕೀಯಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ರಾಜಿ ಮಾಡಿಕೊಂಡಿವೆ ಎಂದು ಆರೋಪಿಸಿದರು. ಈ ಪ್ರಮುಖ ಬೆದರಿಕೆಯನ್ನು ನಿರ್ಣಾಯಕವಾಗಿ ಎದುರಿಸಲು ದೇಶವು ಮೊದಲ ಬಾರಿಗೆ ಸಂಕಲ್ಪ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು. ಈ ಸವಾಲನ್ನು ಎದುರಿಸಲು ಕೆಂಪು ಕೋಟೆಯಿಂದ ಜನಸಂಖ್ಯಾ ಮಿಷನ್ ಅನ್ನು ಘೋಷಿಸಿದ್ದನ್ನು ಅವರು ನೆನಪಿಸಿಕೊಂಡರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿರುವಾಗಲೂ, ಕೆಲವರು ದೇಶದ ಯೋಗಕ್ಷೇಮಕ್ಕಿಂತ ತಮ್ಮ ಸ್ವಂತ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಜನರು ಒಳನುಸುಳುವವರಿಗೆ ಹಕ್ಕುಗಳನ್ನು ನೀಡುವ ರಾಜಕೀಯ ಹೋರಾಟಗಳಲ್ಲಿ ತೊಡಗಿದ್ದಾರೆ ಮತ್ತು ದೇಶವನ್ನು ವಿಘಟಿಸುವ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಶ್ರೀ ಮೋದಿ ಹೇಳಿದರು. ದೇಶದ ಭದ್ರತೆ ಮತ್ತು  ಅಸ್ಮಿತೆಗೆ ಬೆದರಿಕೆ ಎದುರಾದರೆ, ಪ್ರತಿಯೊಬ್ಬ ನಾಗರಿಕನೂ ಅಪಾಯದಲ್ಲಿ ಸಿಲುಕಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಆದ್ದರಿಂದ, ರಾಷ್ಟ್ರೀಯ ಏಕತಾ ದಿನದಂದು, ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಒಳನುಸುಳುವವರನ್ನು ಹೊರಹಾಕುವ ಸಂಕಲ್ಪವನ್ನು ಪುನರುಚ್ಚರಿಸುವಂತೆ ಪ್ರಧಾನ ಮಂತ್ರಿಯವರು ರಾಷ್ಟ್ರಕ್ಕೆ ಕರೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯ ಏಕತೆ ಎಂದರೆ ವೈವಿಧ್ಯಮಯ ದೃಷ್ಟಿಕೋನಗಳನ್ನು ಗೌರವಿಸುವುದು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಪ್ರಜಾಪ್ರಭುತ್ವದಲ್ಲಿ ವಿಭಿನ್ನ ಅಭಿಪ್ರಾಯಗಳು ಸರಿಯಾಗಿದ್ದರೂ, ವೈಯಕ್ತಿಕ ಭಿನ್ನಾಭಿಪ್ರಾಯಗಳು ಸರಿಯಲ್ಲ ಎಂದು ಒತ್ತಿ ಹೇಳಿದರು. ಸ್ವಾತಂತ್ರ್ಯದ ನಂತರ, ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡವರು " ವಿ ದ ಪೀಪಲ್‌ (ನಾವು ಜನರು)" ಎಂಬ ಮನೋಭಾವವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು ಎಂದು ಅವರು ಕಳವಳ ವ್ಯಕ್ತಪಡಿಸಿದರು. ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಜನರು ಮತ್ತು ಸಂಘಟನೆಗಳನ್ನು ನಿಂದಿಸಲಾಯಿತು ಮತ್ತು ರಾಜಕೀಯ ಅಸ್ಪೃಶ್ಯತೆಯನ್ನು ಸಾಂಸ್ಥಿಕಗೊಳಿಸಲಾಯಿತು ಎಂದು ಅವರು ಹೇಳಿದರು. ಹಿಂದಿನ ಸರ್ಕಾರಗಳು ಸರ್ದಾರ್ ಪಟೇಲ್ ಮತ್ತು ಅವರ ಪರಂಪರೆಯನ್ನು ನಡೆಸಿಕೊಂಡ ರೀತಿಯಲ್ಲೇ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವರ ಜೀವಿತಾವಧಿಯಲ್ಲಿ ಮತ್ತು ಅವರ ಮರಣದ ನಂತರವೂ ಅದೇ ರೀತಿ ಕಡೆಗಣಿಸಿದ್ದವು ಎಂದು ಅವರು ಹೇಳಿದರು. ಡಾ. ರಾಮ್ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರಂತಹ ನಾಯಕರ ಬಗ್ಗೆ ಹಿಂದಿನ ಸರ್ಕಾರಗಳು ಇದೇ ರೀತಿಯ ಮನೋಭಾವವನ್ನು ಹೊಂದಿದ್ದವು ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ ಎಸ್‌ ಎಸ್) ಈ ವರ್ಷ ತನ್ನ ಅಸ್ತಿತ್ವದ 100 ವರ್ಷಗಳನ್ನು ಪೂರೈಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಸಂಘಟನೆಯ ವಿರುದ್ಧದ ವಿವಿಧ ದಾಳಿಗಳು ಮತ್ತು ಪಿತೂರಿಗಳನ್ನು ಎತ್ತಿ ತೋರಿಸಿದರು. ಪ್ರತಿಯೊಬ್ಬ ವ್ಯಕ್ತಿ ಮತ್ತು ವಿಚಾರವನ್ನು ಒಂದು ಪಕ್ಷ ಮತ್ತು ಒಂದು ಕುಟುಂಬದಿಂದ ಬೇರ್ಪಡಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

 

ಒಂದು ಕಾಲದಲ್ಲಿ ರಾಷ್ಟ್ರವನ್ನು ವಿಭಜಿಸಿದ್ದ ರಾಜಕೀಯ ಅಸ್ಪೃಶ್ಯತೆಯನ್ನು ಕೊನೆಗೊಳಿಸಿದ್ದಕ್ಕೆ ದೇಶ ಹೆಮ್ಮೆಪಡುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ಏಕತಾ ಪ್ರತಿಮೆ ನಿರ್ಮಾಣ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಮರ್ಪಿತವಾದ ಪಂಚತೀರ್ಥ ಸ್ಥಾಪನೆಯ ಬಗ್ಗೆ ಅವರು ಗಮನಸೆಳೆದರು. ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ಬಾಬಾ ಸಾಹೇಬ್ ಅವರ ನಿವಾಸ ಮತ್ತು ದೆಹಲಿಯ ಮಹಾಪರಿನಿರ್ವಾಣ ಸ್ಥಳವು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು, ಆದರೆ ಈಗ ಅದನ್ನು ಐತಿಹಾಸಿಕ ಸ್ಮಾರಕವಾಗಿ ಪರಿವರ್ತಿಸಲಾಗಿದೆ ಎಂದು ಅವರು ನೆನಪಿಸಿಕೊಂಡರು. ಹಿಂದಿನ ಸರ್ಕಾರದ ಅವಧಿಯಲ್ಲಿ, ಕೇವಲ ಒಬ್ಬ ಮಾಜಿ ಪ್ರಧಾನಮಂತ್ರಿ ಮಾತ್ರ ಮೀಸಲಾದ ವಸ್ತುಸಂಗ್ರಹಾಲಯವನ್ನು ಹೊಂದಿದ್ದರು ಎಂದು ಪ್ರಧಾನಮಂತ್ರಿ ಗಮನಸೆಳೆದರು. ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಸರ್ಕಾರವು ಎಲ್ಲಾ ಮಾಜಿ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಗೌರವಿಸಲು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಲಾಯಿತು ಮತ್ತು ತಮ್ಮ ಇಡೀ ಜೀವನವನ್ನು ವಿರೋಧ ಪಕ್ಷದಲ್ಲಿ ಕಳೆದ ಶ್ರೀ ಪ್ರಣಬ್ ಮುಖರ್ಜಿ ಅವರಿಗೂ ಭಾರತ ರತ್ನ ನೀಡಿ ಗೌರವಿಸಲಾಯಿತು ಎಂದು ಅವರು ಹೇಳಿದರು. ಮುಲಾಯಂ ಸಿಂಗ್ ಯಾದವ್ ಅವರಂತಹ ವೈವಿಧ್ಯಮಯ ಸಿದ್ಧಾಂತಗಳನ್ನು ಹೊಂದಿರುವ ನಾಯಕರಿಗೂ ಪದ್ಮ ಪ್ರಶಸ್ತಿಗಳನ್ನು ನೀಡಲಾಯಿತು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆಪರೇಷನ್ ಸಿಂಧೂರದ ನಂತರ ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಬಹು-ಪಕ್ಷ ನಿಯೋಗಗಳಲ್ಲಿಯೂ ಈ ಒಳಗೊಳ್ಳುವಿಕೆ ವಿಧಾನವು ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.

"ರಾಜಕೀಯ ಲಾಭಕ್ಕಾಗಿ ದೇಶದ ಏಕತೆಯ ಮೇಲೆ ದಾಳಿ ಮಾಡುವ ಮನಸ್ಥಿತಿ ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು ಮತ್ತು ಪ್ರಸ್ತುತ ವಿರೋಧ ಪಕ್ಷವು ಬ್ರಿಟಿಷರಿಂದ ಅಧಿಕಾರ ಮತ್ತು ಪಕ್ಷದ ರಚನೆಯನ್ನು ಆನುವಂಶಿಕವಾಗಿ ಪಡೆದಿರುವುದು ಮಾತ್ರವಲ್ಲದೆ, ಗುಲಾಮಗಿರಿಯ ಮನಸ್ಥಿತಿಯನ್ನು ಸಹ ಅಳವಡಿಸಿಕೊಂಡಿದೆ ಎಂದು ಹೇಳಿದರು. ಕೆಲವೇ ದಿನಗಳಲ್ಲಿ ದೇಶವು ರಾಷ್ಟ್ರೀಯ ಗೀತೆಯಾದ ವಂದೇ ಮಾತರಂನ 150 ವರ್ಷಗಳನ್ನು ಆಚರಿಸಲಿದೆ ಎಂದು ಹೇಳಿದ ಶ್ರೀ ಮೋದಿ, 1905 ರಲ್ಲಿ ಬ್ರಿಟಿಷರು ಬಂಗಾಳವನ್ನು ವಿಭಜಿಸಿದಾಗ, ವಂದೇ ಮಾತರಂ ಪ್ರತಿಭಟನೆಯ ಧ್ವನಿಯಾಯಿತು ಮತ್ತು ಪ್ರತಿಯೊಬ್ಬ ಭಾರತೀಯನ ಏಕತೆ ಮತ್ತು ಒಗ್ಗಟ್ಟಿನ ಸಂಕೇತವಾಯಿತು ಎಂದು ನೆನಪಿಸಿಕೊಂಡರು. ಬ್ರಿಟಿಷರು ವಂದೇ ಮಾತರಂ ಘೋಷಣೆಯನ್ನು ನಿಷೇಧಿಸಲು ಪ್ರಯತ್ನಿಸಿದರು, ಆದರೆ ವಿಫಲರಾದರು ಎಂದು ಪ್ರಧಾನಮಂತ್ರಿ ಹೇಳಿದರು. ಆದಾಗ್ಯೂ, ಬ್ರಿಟಿಷರು ಮಾಡಲು ವಿಫಲವಾದದ್ದನ್ನು ಹಿಂದಿನ ಸರ್ಕಾರ ಅಂತಿಮವಾಗಿ ಸಾಧಿಸಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸಮಾಜವನ್ನು ವಿಭಜಿಸುವ ಮತ್ತು ವಸಾಹತುಶಾಹಿ ಕಾರ್ಯಸೂಚಿಯನ್ನು ಮುಂದುವರೆಸುವ ವಂದೇ ಮಾತರಂನ ಒಂದು ಭಾಗವನ್ನು ಅವರು ಧಾರ್ಮಿಕ ಆಧಾರದ ಮೇಲೆ ತೆಗೆದುಹಾಕಿದರು ಎಂದು ಅವರು ಹೇಳಿದರು. ಪ್ರಸ್ತುತ ವಿರೋಧ ಪಕ್ಷವು ವಂದೇ ಮಾತರಂ ಅನ್ನು ವಿಭಜಿಸಲು ಮತ್ತು ಸಂಕ್ಷಿಪ್ತಗೊಳಿಸಲು ನಿರ್ಧರಿಸಿದ ದಿನವೇ ಭಾರತದ ವಿಭಜನೆಗೆ ಅಡಿಪಾಯ ಹಾಕಲಾಯಿತು. ಅವರು ಆ ಗಂಭೀರ ತಪ್ಪನ್ನು ಮಾಡದಿದ್ದರೆ, ಇಂದು ಭಾರತದ ಚಿತ್ರಣವು ತುಂಬಾ ವಿಭಿನ್ನವಾಗಿರುತ್ತಿತ್ತು ಎಂದು ಅವರು ಹೇಳಿದರು.

ಆ ಸಮಯದಲ್ಲಿ ಅಧಿಕಾರದಲ್ಲಿದ್ದವರ ಮನಸ್ಥಿತಿಯಿಂದಾಗಿ, ದೇಶವು ದಶಕಗಳ ಕಾಲ ವಸಾಹತುಶಾಹಿ ಆಳ್ವಿಕೆಯ ಪರಂಪರೆಯನ್ನು ಮುಂದುವರೆಸಿತು ಎಂದು ಶ್ರೀ ಮೋದಿ ಹೇಳಿದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಭಾರತೀಯ ನೌಕಾಪಡೆಯ ಧ್ವಜದಿಂದ ವಸಾಹತುಶಾಹಿ ಆಳ್ವಿಕೆಯ ಸಂಕೇತವನ್ನು ತೆಗೆದುಹಾಕಲಾಯಿತು ಎಂದು ಅವರು ನೆನಪಿಸಿಕೊಂಡರು. ಈ ಬದಲಾವಣೆಯ ಭಾಗವಾಗಿ, ರಾಜಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲಾಯಿತು ಎಂದು ಅವರು ವಿವರಿಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತ್ಯಾಗ ಬಲಿದಾನಗಳ ತಾಣವಾಗಿದ್ದ ಅಂಡಮಾನ್‌ ನ ಸೆಲ್ಯುಲಾರ್ ಜೈಲಿಗೆ ಮೊರಾರ್ಜಿ ದೇಸಾಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ನೀಡಲಾಯಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇತ್ತೀಚಿನವರೆಗೂ, ಅಂಡಮಾನ್‌ ನಲ್ಲಿರುವ ಅನೇಕ ದ್ವೀಪಗಳು ಬ್ರಿಟಿಷ್ ವ್ಯಕ್ತಿಗಳ ಹೆಸರುಗಳನ್ನು ಹೊಂದಿದ್ದವು ಎಂದು ಅವರು ಗಮನಸೆಳೆದರು. ಇವುಗಳನ್ನು ಈಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥವಾಗಿ ಮರುನಾಮಕರಣ ಮಾಡಲಾಗಿದೆ ಮತ್ತು ನವದೆಹಲಿಯ ಇಂಡಿಯಾ ಗೇಟ್‌ ನಲ್ಲಿ ನೇತಾಜಿ ಸುಭಾಷ್ ಅವರ ಪ್ರತಿಮೆಯನ್ನು ಸ್ಥಾಪಿಸುವುದರ ಜೊತೆಗೆ ಹಲವಾರು ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗಿದೆ ಎಂದು ಅವರು ಹೇಳಿದರು.

 

ವಸಾಹತುಶಾಹಿ ಮನಸ್ಥಿತಿಯಿಂದಾಗಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೂ ಸರಿಯಾದ ಗೌರವ ಸಿಗಲಿಲ್ಲ ಎಂದು ಹೇಳಿದ ಪ್ರಧಾನಮಂತ್ರಿ, ರಾಷ್ಟ್ರೀಯ ಯುದ್ಧ ಸ್ಮಾರಕದ ಸ್ಥಾಪನೆಯು ಅವರ ನೆನಪುಗಳನ್ನು ಅಮರಗೊಳಿಸಿದೆ ಎಂದು ಎತ್ತಿ ತೋರಿಸಿದರು. ಪೊಲೀಸ್, ಬಿ ಎಸ್‌ ಎಫ್, ಐಟಿಬಿಪಿ, ಸಿ ಐ ಎಸ್‌ ಎಫ್, ಸಿ ಆರ್‌ ಪಿ ಎಫ್ ಮತ್ತು ಇತರ ಅರೆಸೈನಿಕ ಪಡೆಗಳ ಸಿಬ್ಬಂದಿ ಸೇರಿದಂತೆ 36,000 ಸಿಬ್ಬಂದಿ ಆಂತರಿಕ ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ, ಅವರ ಶೌರ್ಯಕ್ಕೆ ಬಹಳ ಹಿಂದಿನಿಂದಲೂ ಸೂಕ್ತ ಮನ್ನಣೆ ಸಿಗಲಿಲ್ಲ. ಆ ಹುತಾತ್ಮರನ್ನು ಗೌರವಿಸಲು ಪೊಲೀಸ್ ಸ್ಮಾರಕವನ್ನು ನಿರ್ಮಿಸಿದ್ದು ತಮ್ಮ ಸರ್ಕಾರ ಎಂದು ಶ್ರೀ ಮೋದಿ ಹೇಳಿದರು. "ದೇಶವು ಈಗ ವಸಾಹತುಶಾಹಿ ಚಿಂತನೆಯ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕುತ್ತಿದೆ ಮತ್ತು ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸುವ ಮೂಲಕ 'ರಾಷ್ಟ್ರ ಮೊದಲು' ಎಂಬ ಮನೋಭಾವವನ್ನು ಬಲಪಡಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

ರಾಷ್ಟ್ರ ಮತ್ತು ಸಮಾಜದ ಅಡಿಪಾಯವೇ ಏಕತೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸಮಾಜದಲ್ಲಿ ಏಕತೆ ಇರುವವರೆಗೆ, ರಾಷ್ಟ್ರದ ಏಕತೆ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು, ರಾಷ್ಟ್ರದ ಏಕತೆಯನ್ನು ಮುರಿಯುವ ಪ್ರತಿಯೊಂದು ಪಿತೂರಿಯನ್ನು ಸೋಲಿಸಬೇಕು ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು ದೇಶವು ಪ್ರತಿಯೊಂದು ರಂಗದಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಭಾರತದ ಏಕತೆಯ ನಾಲ್ಕು ಮೂಲಭೂತ ಸ್ತಂಭಗಳ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು, ಅದರಲ್ಲಿ ಮೊದಲನೆಯದು ಸಾಂಸ್ಕೃತಿಕ ಏಕತೆ. ಭಾರತದ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ರಾಜಕೀಯ ಸಂದರ್ಭಗಳನ್ನು ಲೆಕ್ಕಿಸದೆ ದೇಶವನ್ನು ಒಂದು ಒಗ್ಗಟ್ಟಿನ ಅಸ್ತಿತ್ವವಾಗಿ ಜೀವಂತವಾಗಿರಿಸಿದೆ ಎಂದು ಅವರು ಹೇಳಿದರು. ಹನ್ನೆರಡು ಜ್ಯೋತಿರ್ಲಿಂಗಗಳು, ಏಳು ಪವಿತ್ರ ನಗರಗಳು, ನಾಲ್ಕು ಧಾಮಗಳು, ಐವತ್ತಕ್ಕೂ ಹೆಚ್ಚು ಶಕ್ತಿಪೀಠಗಳು ಮತ್ತು ತೀರ್ಥಕ್ಷೇತ್ರಗಳ ಪರಂಪರೆಯು ಭಾರತವನ್ನು ಪ್ರಜ್ಞಾಪೂರ್ವಕ ಮತ್ತು ಚೈತನ್ಯಶೀಲ ರಾಷ್ಟ್ರವನ್ನಾಗಿ ಮಾಡುವ ಅಗತ್ಯ ಶಕ್ತಿಯಾಗಿದೆ ಎಂದು ಅವರು ಬಣ್ಣಿಸಿದರು. ಸೌರಾಷ್ಟ್ರ ತಮಿಳು ಸಂಗಮ ಮತ್ತು ಕಾಶಿ ತಮಿಳು ಸಂಗಮದಂತಹ ಕಾರ್ಯಕ್ರಮಗಳ ಮೂಲಕ ಈ ಪರಂಪರೆಯನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಂತರರಾಷ್ಟ್ರೀಯ ಯೋಗ ದಿನದ ಮೂಲಕ, ಭಾರತದ ಯೋಗ ವಿಜ್ಞಾನವು ಪ್ರಪಂಚದಾದ್ಯಂತ ಹೊಸ ಮನ್ನಣೆಯನ್ನು ಪಡೆಯುತ್ತಿದೆ ಮತ್ತು ಯೋಗವು ಜನರನ್ನು ಸಂಪರ್ಕಿಸುವ ಮಾಧ್ಯಮವಾಗುತ್ತಿದೆ ಎಂದು ಅವರು ಹೇಳಿದರು.

 

ಭಾರತದ ಏಕತೆಯ ಎರಡನೇ ಸ್ತಂಭವಾದ ಭಾಷಾ ಏಕತೆಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಭಾರತದ ನೂರಾರು ಭಾಷೆಗಳು ಮತ್ತು ಉಪಭಾಷೆಗಳು ದೇಶದ ಮುಕ್ತ ಮತ್ತು ಸೃಜನಶೀಲ ಚಿಂತನೆಯ ಪ್ರತಿಬಿಂಬವಾಗಿವೆ ಎಂದು ಹೇಳಿದರು. ಭಾರತದಲ್ಲಿ, ಯಾವುದೇ ಸಮುದಾಯ, ಆಡಳಿತ ಅಥವಾ ಪಂಥವು ಎಂದಿಗೂ ಭಾಷೆಯನ್ನು ದುರ್ಬಳಕೆ ಮಾಡಿಕೊಂಡಿಲ್ಲ ಅಥವಾ ಒಂದು ಭಾಷೆಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸಿಲ್ಲ ಎಂದು ಅವರು ಒತ್ತಿ ಹೇಳಿದರು. ಭಾಷಾ ವೈವಿಧ್ಯತೆಯ ವಿಷಯದಲ್ಲಿ ಭಾರತವು ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಲು ಇದೇ ಕಾರಣ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಭಾರತದ ಭಾಷೆಗಳನ್ನು ದೇಶದ ಅಸ್ಮಿತೆಯನ್ನು ಬಲಪಡಿಸುವ ಸಂಗೀತ ಸ್ವರಗಳಿಗೆ ಹೋಲಿಸಿದರು. ಪ್ರತಿಯೊಂದು ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಪರಿಗಣಿಸಲಾಗುತ್ತದೆ ಮತ್ತು ಭಾರತವು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ತಮಿಳು ಮತ್ತು ಜ್ಞಾನದ ನಿಧಿಯಾದ ಸಂಸ್ಕೃತದ ನೆಲೆಯಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಪ್ರತಿಯೊಂದು ಭಾರತೀಯ ಭಾಷೆಯ ವಿಶಿಷ್ಟ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಅವರು ವಿವರಿಸಿದರು ಮತ್ತು ಸರ್ಕಾರವು ಅವೆಲ್ಲವನ್ನೂ ಸಕ್ರಿಯವಾಗಿ ಉತ್ತೇಜಿಸುತ್ತಿದೆ ಎಂದು ಹೇಳಿದರು. ಭಾರತದ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿ ಬೆಳೆಯಬೇಕು ಮತ್ತು ನಾಗರಿಕರು ಇತರ ಭಾರತೀಯ ಭಾಷೆಗಳನ್ನು ಕಲಿಯಬೇಕು ಮತ್ತು ಪ್ರಶಂಸಿಸಬೇಕು ಎಂಬ ಬಯಕೆಯನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. ಭಾಷೆಗಳು ಏಕತೆಯ ಎಳೆಗಳಾಗಬೇಕು ಮತ್ತು ಇದು ಒಂದು ದಿನದ ಕೆಲಸವಲ್ಲ, ಬದಲಾಗಿ ಸಾಮೂಹಿಕ ಜವಾಬ್ದಾರಿಯ ಅಗತ್ಯವಿರುವ ನಿರಂತರ ಪ್ರಯತ್ನ ಎಂದು ಅವರು ಒತ್ತಿ ಹೇಳಿದರು.

ಭಾರತದ ಏಕತೆಯ ಮೂರನೇ ಸ್ತಂಭ ತಾರತಮ್ಯ ರಹಿತ ಅಭಿವೃದ್ಧಿ ಎಂದು ಹೇಳಿದ ಶ್ರೀ ಮೋದಿ, ಬಡತನ ಮತ್ತು ಅಸಮಾನತೆಯು ಸಾಮಾಜಿಕ ರಚನೆಯಲ್ಲಿನ ಅತಿದೊಡ್ಡ ದೌರ್ಬಲ್ಯಗಳಾಗಿವೆ, ಇದನ್ನು ಹೆಚ್ಚಾಗಿ ದೇಶದ ವಿರೋಧಿಗಳು ಬಳಸಿಕೊಳ್ಳುತ್ತಾರೆ ಎಂದು ಒತ್ತಿ ಹೇಳಿದರು. ಬಡತನವನ್ನು ಎದುರಿಸಲು ಸರ್ದಾರ್ ಪಟೇಲ್ ಅವರು ದೀರ್ಘಾವಧಿಯ ಯೋಜನೆಯನ್ನು ರೂಪಿಸಲು ಬಯಸಿದ್ದರು ಎಂದು ಅವರು ನೆನಪಿಸಿಕೊಂಡರು. 1947 ಕ್ಕಿಂತ ಹತ್ತು ವರ್ಷಗಳ ಮೊದಲು ಭಾರತ ಸ್ವಾತಂತ್ರ್ಯ ಪಡೆದಿದ್ದರೆ, ಆ ಹೊತ್ತಿಗೆ ದೇಶವು ಆಹಾರ ಕೊರತೆಯ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು ಎಂಬ ಸರ್ದಾರ್ ಪಟೇಲ್ ಅವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ರಾಜಪ್ರಭುತ್ವದ ರಾಜ್ಯಗಳನ್ನು ವಿಲೀನಗೊಳಿಸುವ ಸವಾಲನ್ನು ಪರಿಹರಿಸಿದಂತೆಯೇ, ಆಹಾರದ ಕೊರತೆಯನ್ನು ಸಹ ಅಷ್ಟೇ ದೃಢಸಂಕಲ್ಪದಿಂದ ನಿಭಾಯಿಸಬಹುದೆಂದು ಸರ್ದಾರ್ ಪಟೇಲ್ ನಂಬಿದ್ದರು ಎಂದು ಹೇಳಿದರು. ಸರ್ದಾರ್ ಪಟೇಲ್ ಅವರ ಸಂಕಲ್ಪವೂ ಇದೇ ರೀತಿಯದ್ದಾಗಿತ್ತು ಮತ್ತು ಇಂದಿನ ದೊಡ್ಡ ಸವಾಲುಗಳನ್ನು ಎದುರಿಸಲು ಅದೇ ಮನೋಭಾವದ ಅಗತ್ಯವಿದೆ ಎಂದು ಶ್ರೀ ಮೋದಿ ಹೇಳಿದರು. ಸರ್ದಾರ್ ಪಟೇಲ್ ಅವರ ಅಪೂರ್ಣ ಬದ್ಧತೆಗಳನ್ನು ಈಡೇರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಕಳೆದ ಹತ್ತು ವರ್ಷಗಳಲ್ಲಿ, 250 ಮಿಲಿಯನ್ ಜನರನ್ನು ಬಡತನದಿಂದ ಹೊರತರಲಾಗಿದೆ. ಲಕ್ಷಾಂತರ ಬಡ ಕುಟುಂಬಗಳು ಮನೆಗಳನ್ನು ಪಡೆಯುತ್ತಿವೆ, ಶುದ್ಧ ಕುಡಿಯುವ ನೀರು ಪ್ರತಿ ಮನೆಗೂ ತಲುಪುತ್ತಿದೆ ಮತ್ತು ಉಚಿತ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕನಿಗೂ ಘನತೆಯ ಜೀವನವನ್ನು ಖಚಿತಪಡಿಸಿಕೊಳ್ಳುವುದು ದೇಶದ ಧ್ಯೇಯ ಮತ್ತು ದೃಷ್ಟಿಕೋನವಾಗಿದೆ ಎಂದು ಅವರು ಹೇಳಿದರು. ತಾರತಮ್ಯ ಮತ್ತು ಭ್ರಷ್ಟಾಚಾರದಿಂದ ಮುಕ್ತವಾದ ಈ ನೀತಿಗಳು ರಾಷ್ಟ್ರದ ಏಕತೆಯನ್ನು ಬಲಪಡಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು.

 

ಸಂಪರ್ಕದ ಮೂಲಕ ಹೃದಯಗಳನ್ನು ಬೆಸೆಯುವ ರಾಷ್ಟ್ರೀಯ ಏಕತೆಯ ನಾಲ್ಕನೇ ಸ್ತಂಭದ ಬಗ್ಗೆ ಮಾತನಾಡಿದ ಶ್ರೀ ಮೋದಿ, ದೇಶಾದ್ಯಂತ ದಾಖಲೆ ಸಂಖ್ಯೆಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು. ವಂದೇ ಭಾರತ್ ಮತ್ತು ನಮೋ ಭಾರತ್‌ ನಂತಹ ರೈಲುಗಳು ಭಾರತೀಯ ರೈಲ್ವೆಯನ್ನು ಪರಿವರ್ತಿಸುತ್ತಿವೆ. ಸಣ್ಣ ನಗರಗಳು ಸಹ ಈಗ ವಿಮಾನ ನಿಲ್ದಾಣ ಸೌಲಭ್ಯಗಳನ್ನು ಹೊಂದಿವೆ ಎಂದು ಅವರು ಹೇಳಿದರು. ಈ ಆಧುನಿಕ ಮೂಲಸೌಕರ್ಯವು ಭಾರತದ ಬಗ್ಗೆ ಪ್ರಪಂಚದ ಗ್ರಹಿಕೆಯನ್ನು ಬದಲಾಯಿಸಿರುವುದು ಮಾತ್ರವಲ್ಲದೆ ಉತ್ತರ ಮತ್ತು ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ನಡುವಿನ ಅಂತರವನ್ನು ಕಡಿಮೆ ಮಾಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕಾಗಿ ಜನರು ಈಗ ರಾಜ್ಯಗಳ ನಡುವೆ ಸುಲಭವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇದು ಜನರು-ಜನರ ನಡುವಿನ ಸಂಬಂಧಗಳು ಮತ್ತು ಸಾಂಸ್ಕೃತಿಕ ವಿನಿಮಯದ ಹೊಸ ಯುಗವಾಗಿದ್ದು, ಇದು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತಿದೆ. ಡಿಜಿಟಲ್ ಸಂಪರ್ಕವು ಜನರ ನಡುವಿನ ಸಂಬಂಧಗಳನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು.

ದೇಶ ಸೇವೆ ಮಾಡುವುದರಿಂದ ತಮಗೆ ಅತ್ಯಂತ ಹೆಚ್ಚಿನ ಸಂತೋಷ ದೊರೆಯುತ್ತದೆ ಎಂಬ ಸರ್ದಾರ್ ಪಟೇಲ್ ಅವರ ಮಾತುಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಪ್ರತಿಯೊಬ್ಬ ನಾಗರಿಕರೂ ಅದೇ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ದೇಶಕ್ಕಾಗಿ ಕೆಲಸ ಮಾಡುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ ಮತ್ತು ಭಾರತ ಮಾತೆಗೆ ನಿಷ್ಠೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯುನ್ನತ ಪೂಜೆಯಾಗಿದೆ ಎಂದು ಅವರು ಒತ್ತಿ ಹೇಳಿದರು. 140 ಕೋಟಿ ಭಾರತೀಯರು ಒಟ್ಟಾಗಿ ನಿಂತಾಗ, ಪರ್ವತಗಳು ಸಹ ದಾರಿ ಮಾಡಿಕೊಡುತ್ತವೆ ಮತ್ತು ಅವರು ಒಕ್ಕೊರಲಿನಲ್ಲಿ ಮಾತನಾಡಿದಾಗ, ಅವರ ಮಾತುಗಳು ಭಾರತದ ಯಶಸ್ಸಿನ ಘೋಷಣೆಯಾಗುತ್ತವೆ ಎಂದು ಶ್ರೀ ಮೋದಿ ಹೇಳಿದರು. ರಾಷ್ಟ್ರವು ಏಕತೆಯನ್ನು ದೃಢ ಸಂಕಲ್ಪವನ್ನಾಗಿ ಮಾಡಿಕೊಂಡು, ಅವಿಭಜಿತ ಮತ್ತು ಅಚಲವಾಗಿ ಉಳಿಯಬೇಕು. ಇದು ಸರ್ದಾರ್ ಪಟೇಲ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಹೇಳಿದರು. ರಾಷ್ಟ್ರವು ಒಟ್ಟಾಗಿ 'ಏಕ್ ಭಾರತ್, ಶ್ರೇಷ್ಠ ಭಾರತ್' ದೃಷ್ಟಿಕೋನವನ್ನು ಬಲಪಡಿಸುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಈ ಭಾವನೆಯೊಂದಿಗೆ ಅವರು ಮತ್ತೊಮ್ಮೆ ಸರ್ದಾರ್ ಪಟೇಲ್ ಅವರ ಪಾದಗಳಿಗೆ ನಮನ ಸಲ್ಲಿಸಿದರು.

ಹಿನ್ನೆಲೆ

ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಏಕತಾ ದಿನದ ಪ್ರತಿಜ್ಞೆ ಬೋಧಿಸಿದರು ಮತ್ತು ಏಕತಾ ದಿನದ ಪರೇಡ್‌ ಅನ್ನು ವೀಕ್ಷಿಸಿದರು.

ಈ ಪರೇಡ್‌ ನಲ್ಲಿ ಬಿ ಎಸ್‌ ಎಫ್, ಸಿ ಆರ್‌ ಪಿ ಎಫ್, ಸಿ ಐ ಎಸ್‌ ಎಫ್, ಐಟಿಬಿಪಿ ಮತ್ತು ಎಸ್‌ ಎಸ್‌ಬಿ ಹಾಗೂ ವಿವಿಧ ರಾಜ್ಯ ಪೊಲೀಸ್ ಪಡೆಗಳ ತುಕಡಿಗಳು ಭಾಗವಹಿಸಿದ್ದವು. ಈ ವರ್ಷದ ಪ್ರಮುಖ ಆಕರ್ಷಣೆಗಳಲ್ಲಿ ರಾಂಪುರ್ ಹೌಂಡ್ಸ್ ಮತ್ತು ಮುಧೋಳ ಹೌಂಡ್ಸ್ ನಂತಹ ಭಾರತೀಯ ತಳಿಯ ಶ್ವಾನಗಳನ್ನು ಒಳಗೊಂಡ ಬಿ ಎಸ್ ಎಫ್ ಪರೇಡ್‌, ಗುಜರಾತ್ ಪೊಲೀಸರ ಅಶ್ವದಳ, ಅಸ್ಸಾಂ ಪೊಲೀಸರ ಮೋಟಾರ್ ಸೈಕಲ್ ಡೇರ್ ಡೆವಿಲ್ ಶೋ, ಮತ್ತು ಬಿ ಎಸ್ ಎಫ್ ನ ಒಂಟೆ ತುಕಡಿ ಮತ್ತು ಒಂಟೆ ಸವಾರಿಯ ಬ್ಯಾಂಡ್ ಸೇರಿದ್ದವು.

 

ಜಾರ್ಖಂಡ್‌ ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಸಿ ಆರ್‌ ಪಿ ಎಫ್‌ ನ ಐವರು ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರು ಮತ್ತು ಬಿ ಎಸ್‌ ಎಫ್‌ ನ ಹದಿನಾರು ಶೌರ್ಯ ಪದಕ ವಿಜೇತರನ್ನು ಪರೇಡ್‌ ನಲ್ಲಿ ಸನ್ಮಾನಿಸಲಾಯಿತು. ಆಪರೇಷನ್ ಸಿಂಧೂರ್ ಸಮಯದಲ್ಲಿ ಬಿ ಎಸ್‌ ಎಫ್ ಸಿಬ್ಬಂದಿ ತೋರಿದ ಧೈರ್ಯಕ್ಕಾಗಿಯೂ ಅವರನ್ನು ಗೌರವಿಸಲಾಯಿತು.

 

ಈ ವರ್ಷದ ರಾಷ್ಟ್ರೀಯ ಏಕತಾ ದಿನದ ಪರೇಡ್‌ ನಲ್ಲಿ ಎನ್‌ ಎಸ್‌ ಜಿ, ಎನ್‌ ಡಿ ಆರ್‌ ಎಫ್, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ, ಮಹಾರಾಷ್ಟ್ರ, ಛತ್ತೀಸಗಢ, ಉತ್ತರಾಖಂಡ ಮತ್ತು ಪುದುಚೇರಿಯ ಹತ್ತು ಸ್ತಬ್ಧಚಿತ್ರಗಳು 'ವೈವಿಧ್ಯತೆಯಲ್ಲಿ ಏಕತೆ' ಎಂಬ ವಿಷಯದೊಂದಿಗೆ ಪ್ರದರ್ಶನಗೊಂಡವು. 900 ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ ಶಾಸ್ತ್ರೀಯ ಭಾರತೀಯ ನೃತ್ಯಗಳು ಪ್ರದರ್ಶನಗೊಂಡವು. ಈ ವರ್ಷದ ರಾಷ್ಟ್ರೀಯ ಏಕತಾ ದಿನಾಚರಣೆಯು ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜಯಂತಿಯನ್ನು ಆಚರಿಸುತ್ತಿರುವುದರಿಂದ ವಿಶೇಷ ಮಹತ್ವವನ್ನು ಪಡೆಯಿತು.

ಆರಂಭ್ 7.0 ರ ಸಮಾರೋಪದಲ್ಲಿ ಪ್ರಧಾನಮಂತ್ರಿಯವರು 100ನೇ ಫೌಂಡೇಶನ್ ಕೋರ್ಸ್‌ ನ ಅಧಿಕಾರಿ ತರಬೇತಿದಾರರೊಂದಿಗೆ ಸಂವಾದ ನಡೆಸಿದರು. ಆರಂಭ್‌ ನ 7ನೇ ಆವೃತ್ತಿಯು "ಆಡಳಿತದ ಮರುಕಲ್ಪನೆ" ಎಂಬ ವಿಷಯದ ಮೇಲೆ ನಡೆಯುತ್ತಿದೆ. 100ನೇ ಫೌಂಡೇಶನ್ ಕೋರ್ಸ್ ಭಾರತದ 16 ನಾಗರಿಕ ಸೇವೆಗಳು ಮತ್ತು ಭೂತಾನ್‌ ನ 3 ನಾಗರಿಕ ಸೇವೆಗಳ 660 ಅಧಿಕಾರಿ ತರಬೇತಿದಾರರನ್ನು ಒಳಗೊಂಡಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
List of Outcomes: Visit of His Highness Sheikh Mohamed bin Zayed Al Nahyan, President of UAE to India
January 19, 2026
S.NoAgreements / MoUs / LoIsObjectives

1

Letter of Intent on Investment Cooperation between the Government of Gujarat, Republic of India and the Ministry of Investment of the United Arab Emirates for Development of Dholera Special Investment region

To pursue investment cooperation for UAE partnership in development of the Special Investment Region in Dholera, Gujarat. The envisioned partnership would include the development of key strategic infrastructure, including an international airport, a pilot training school, a maintenance, repair and overhaul (MRO) facility, a greenfield port, a smart urban township, railway connectivity, and energy infrastructure.

2

Letter of Intent between the Indian National Space Promotion and Authorisation Centre (IN-SPACe) of India and the Space Agency of the United Arab Emirates for a Joint Initiative to Enable Space Industry Development and Commercial Collaboration

To pursue India-UAE partnership in developing joint infrastructure for space and commercialization, including launch complexes, manufacturing and technology zones, incubation centre and accelerator for space start-ups, training institute and exchange programmes.

3

Letter of Intent between the Republic of India and the United Arab Emirates on the Strategic Defence Partnership

Work together to establish Strategic Defence Partnership Framework Agreement and expand defence cooperation across a number of areas, including defence industrial collaboration, defence innovation and advanced technology, training, education and doctrine, special operations and interoperability, cyber space, counter terrorism.

4

Sales & Purchase Agreement (SPA) between Hindustan Petroleum Corporation Limited, (HPCL) and the Abu Dhabi National Oil Company Gas (ADNOC Gas)

The long-term Agreement provides for purchase of 0.5 MMPTA LNG by HPCL from ADNOC Gas over a period of 10 years starting from 2028.

5

MoU on Food Safety and Technical requirements between Agricultural and Processed Food Products Export Development Authority (APEDA), Ministry of Commerce and Industry of India, and the Ministry of Climate Change and Environment of the United Arab Emirates.

The MoU provides for sanitary and quality parameters to facilitate the trade, exchange, promotion of cooperation in the food sector, and to encourage rice, food products and other agricultural products exports from India to UAE. It will benefit the farmers from India and contribute to food security of the UAE.

S.NoAnnouncementsObjective

6

Establishment of a supercomputing cluster in India.

It has been agreed in principle that C-DAC India and G-42 company of the UAE will collaborate to set up a supercomputing cluster in India. The initiative will be part of the AI India Mission and once established the facility be available to private and public sector for research, application development and commercial use.

7

Double bilateral Trade to US$ 200 billion by 2032

The two sides agreed to double bilateral trade to over US$ 200 billion by 2032. The focus will also be on linking MSME industries on both sides and promote new markets through initiatives like Bharat Mart, Virtual Trade Corridor and Bharat-Africa Setu.

8

Promote bilateral Civil Nuclear Cooperation

To capitalise on the new opportunities created by the Sustainable Harnessing and Advancement of Nuclear Energy for Transforming India (SHANTI) Act 2025, it was agreed to develop a partnership in advance nuclear technologies, including development and deployment of large nuclear reactors and Small Modular Reactors (SMRs) and cooperation in advance reactor systems, nuclear power plant operations and maintenance, and Nuclear Safety.

9

Setting up of offices and operations of UAE companies –First Abu Dhabi Bank (FAB) and DP World in the GIFT City in Gujarat

The First Abu Dhabi Bank will have a branch in GIFT that will promote trade and investment ties. DP World will have operations from the GIFT City, including for leasing of ships for its global operations.

10

Explore Establishment of ‘Digital/ Data Embassies’

It has been agreed that both sides would explore the possibility of setting up Digital Embassies under mutually recognised sovereignty arrangements.

11

Establishment of a ‘House of India’ in Abu Dhabi

It has been agreed in Principle that India and UAE will cooperate on a flagship project to establish a cultural space consisting of, among others, a museum of Indian art, heritage and archaeology in Abu Dhabi.

12

Promotion of Youth Exchanges

It has been agreed in principle to work towards arranging visits of a group of youth delegates from either country to foster deeper understanding, academic and research collaboration, and cultural bonds between the future generations.