ನಾಲ್ಕನೇ ʻಯುಪಿ ಜಾಗತಿಕ ಹೂಡಿಕೆದಾರರ ಸಮಾವೇಶ-2023ʼರ ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶದಾದ್ಯಂತ 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 14000 ಯೋಜನೆಗಳಿಗೆ ಚಾಲನೆ ನೀಡಿದರು
"ಉತ್ತರ ಪ್ರದೇಶದ ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಜನರ ಜೀವನವನ್ನು ಸುಗಮಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿದೆ"
"ಕಳೆದ 7 ವರ್ಷಗಳಲ್ಲಿ, ಉತ್ತರ ಪ್ರದೇಶದಲ್ಲಿ ವ್ಯಾಪಾರ, ಅಭಿವೃದ್ಧಿ ಮತ್ತು ವಿಶ್ವಾಸದ ವಾತಾವರಣವನ್ನು ಸೃಷ್ಟಿಸಲಾಗಿದೆ"
"ಬದಲಾವಣೆಯ ನೈಜ ಉದ್ದೇಶವಿದ್ದರೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಡಬಲ್ ಎಂಜಿನ್ ಸರ್ಕಾರ ತೋರಿಸಿದೆ"
"ಜಾಗತಿಕವಾಗಿ, ಭಾರತದ ಬಗ್ಗೆ ಅಭೂತಪೂರ್ವ ಸಕಾರಾತ್ಮಕತೆ ಇದೆ"
"ನಾವು ಉತ್ತರ ಪ್ರದೇಶದಲ್ಲಿ ಜೀವನವನ್ನು ಸುಗಮಗೊಳಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸಮಾನ ಒತ್ತು ನೀಡಿದ್ದೇವೆ"
"ಸರ್ಕಾರದ ಯೋಜನೆಗಳ ಪ್ರಯೋಜನಗಳು ಎಲ್ಲರಿಗೂ ತಲುಪುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ"
"ಉತ್ತರ ಪ್ರದೇಶವು ಅತಿ ಹೆಚ್ಚು ಎಕ್ಸ್‌ಪ್ರೆಸ್‌ ವೇʼಗಳು ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿದೆ"
ಇಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಲಿದೆ ಎಂದರು ಮತ್ತು ಹೂಡಿಕೆದಾರರು ಮತ್ತು ಯುವಕರನ್ನು ಅಭಿನಂದಿಸಿದರು.

ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕ್ರಿಯಾಶೀಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ನನ್ನ ಸಂಪುಟ ಸಹೋದ್ಯೋಗಿ, ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಜೀ, ಉತ್ತರ ಪ್ರದೇಶ ಉಪಮುಖ್ಯಮಂತ್ರಿ, ವಿಧಾನಸಭೆಯ ಸ್ಪೀಕರ್,ಇತರೆ ಗಣ್ಯರೆ, ಭಾರತ ಮತ್ತು ವಿದೇಶಗಳ ಕೈಗಾರಿಕಾ ಕ್ಷೇತ್ರದ ಎಲ್ಲಾ ಪ್ರತಿನಿಧಿಗಳೆ ಮತ್ತು ನನ್ನ ಕುಟುಂಬ ಸದಸ್ಯರೆ.

ಇಂದು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ನಾವು ಇಲ್ಲಿ ಒಂದಾಗಿದ್ದೇವೆ. ಪ್ರಸ್ತುತ, ತಂತ್ರಜ್ಞಾನದ ಮೂಲಕ, ಉತ್ತರ ಪ್ರದೇಶದ 400ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಲಕ್ಷಾಂತರ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇದ್ದಾರೆ. ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ನಾನು ಆತ್ಮೀಯ ಸ್ವಾಗತ ಕೋರುತ್ತೇನೆ. ಏಳೆಂಟು ವರ್ಷಗಳ ಹಿಂದೆ ಇದ್ದ ಉತ್ತರ ಪ್ರದೇಶಕ್ಕೂ, ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಪ್ರಸ್ತುತ ವಾತಾವರಣವನ್ನು ನಾವು ಊಹಿಸಲು ಸಾಧ್ಯವಾಗುತ್ತಿಲ್ಲ. ಅಪರಾಧಗಳು, ಗಲಭೆಗಳು ಮತ್ತು ಕಳ್ಳತನಗಳ ವರದಿಗಳು ಹೇರಳವಾಗಿದ್ದವು. ಆ ಸಮಯದಲ್ಲಿ, ಯಾರಾದರೂ ಉತ್ತರ ಪ್ರದೇಶವನ್ನು ಅಭಿವೃದ್ಧಿಪಡಿಸುವ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದ್ದರೆ, ಕೆಲವರು ಕೇಳುತ್ತಿದ್ದರು, ನಂಬುವುದನ್ನೇ ಬಿಟ್ಟುಬಿಟ್ಟಿದ್ದರು. ಆದರೆ, ಇಂದು ಉತ್ತರ ಪ್ರದೇಶಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳ ಹೂಡಿಕೆ ಹರಿದು ಬರುತ್ತಿದೆ. ಉತ್ತರ ಪ್ರದೇಶದ ಸಂಸದನಾಗಿ, ನನ್ನ ರಾಜ್ಯದ ಬೆಳವಣಿಗೆಗಳನ್ನು ನೋಡುವುದು ನನಗೆ ಅಪಾರ ಸಂತೋಷ ತುಂಬುತ್ತದೆ. ಇಂದು ಸಾವಿರಾರು ಯೋಜನೆಗಳ ಕಾಮಗಾರಿ ಆರಂಭವಾಗಿದೆ. ಮುಂಬರುವ ಈ ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಉತ್ತರ ಪ್ರದೇಶದ ಭೂದೃಶ್ಯವನ್ನು ಪರಿವರ್ತಿಸಲು ಸಿದ್ಧವಾಗಿವೆ. ಎಲ್ಲಾ ಹೂಡಿಕೆದಾರರಿಗೆ, ವಿಶೇಷವಾಗಿ ಉತ್ತರ ಪ್ರದೇಶದ ಯುವಕರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೆ,

ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆಯಾಗಿ 7 ವರ್ಷಗಳಾಗಿವೆ. ಈ ಸಮಯದಲ್ಲಿ, ಒಂದು ಕಾಲದಲ್ಲಿ ರಾಜ್ಯವನ್ನು ಕಾಡುತ್ತಿದ್ದ ಅಧಿಕಾರಶಾಹಿ ಅಡೆತಡೆಗಳನ್ನು (ರೆಡ್ ಟ್ಯಾಪಿಸಂ) ಕಿತ್ತೊಗೆಯಲಾಗಿದೆ. ವ್ಯಾಪಾರ ವ್ಯವಹಾರವನ್ನು ಸುಲಭವಾಗಿ ಮಾಡುವ ಸಂಸ್ಕೃತಿಗೆ ಕೆಂಪು ರತ್ನಗಂಬಳಿ ಹಾಸಲಾಗಿದೆ. ವ್ಯಾಪಾರ ಅವಕಾಶಗಳು ಪ್ರವರ್ಧಮಾನಕ್ಕೆ ಬಂದಾಗ ಅಪರಾಧ ದರಗಳು ಕಡಿಮೆಯಾಗಿದೆ. ಉತ್ತರ ಪ್ರದೇಶದ ವ್ಯಾಪಾರ, ಅಭಿವೃದ್ಧಿ ಮತ್ತು ನಂಬಿಕೆಯ ವಾತಾವರಣವನ್ನು ಬೆಳೆಸಿದೆ. ಬದಲಾವಣೆಯ ನಿಜವಾದ ಉದ್ದೇಶದಿಂದ, ಪ್ರಗತಿ ಅನಿವಾರ್ಯ ಎಂಬುದನ್ನು ಡಬಲ್ ಎಂಜಿನ್ ಸರ್ಕಾರವು ಪ್ರದರ್ಶಿಸಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶದ ರಫ್ತು ದ್ವಿಗುಣಗೊಂಡಿದೆ. ವಿದ್ಯುತ್ ಉತ್ಪಾದನೆಯಾಗಲಿ ಅಥವಾ ವಿದ್ಯುತ್ ಪ್ರಸರಣವಾಗಲಿ, ಇಂದು ಯುಪಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಗಮನಾರ್ಹವಾಗಿ, ಯುಪಿ, ಎಕ್ಸ್‌ಪ್ರೆಸ್‌ವೇಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ರಾಷ್ಟ್ರವನ್ನು ಮುನ್ನಡೆಸುತ್ತದೆ. ರಾಜ್ಯವು ದೇಶದ ಮೊದಲ ಕ್ಷಿಪ್ರ ರೈಲು ವ್ಯವಸ್ಥೆಗೆ ನೆಲೆಯಾಗಿದೆ. ಪಶ್ಚಿಮ ಮತ್ತು ಪೂರ್ವ ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳ ವ್ಯಾಪಕ ಜಾಲವು ಉತ್ತರ ಪ್ರದೇಶವನ್ನು ಹಾದುಹೋಗುತ್ತದೆ. ಯುಪಿಯಲ್ಲಿನ ನದಿಗಳ ವಿಶಾಲ ಜಾಲವನ್ನು ಸರಕು ಹಡಗುಗಳಿಗಾಗಿಯೂ ಬಳಸಲಾಗುತ್ತಿದೆ. ಈ ಬೆಳವಣಿಗೆಗಳು ಯುಪಿಯಲ್ಲಿ ಸುಲಭ ಸಂಚಾರ ಮತ್ತು ಹೆಚ್ಚು ಪರಿಣಾಮಕಾರಿ ಸಾರಿಗೆಗೆ ಅನುಕೂಲ ಮಾಡಿಕೊಟ್ಟಿವೆ.
 
ಸ್ನೇಹಿತರೆ,

ಇಂದಿನ ಈ ಶೃಂಗಸಭೆ ಕೇವಲ ಹೂಡಿಕೆಯ ಬಗ್ಗೆ ಅಲ್ಲ, ಇದು ವಿಶಾಲವಾದ ಆಶಾವಾದ ಮತ್ತು ಉತ್ತಮ ಆದಾಯದ ನಿರೀಕ್ಷೆಯನ್ನು ಸಂಕೇತಿಸುತ್ತದೆ. ಪ್ರಪಂಚದಾದ್ಯಂತ, ಭಾರತದ ಬೆಳವಣಿಗೆಯ ಪಥದ ಬಗ್ಗೆ ಅಭೂತಪೂರ್ವ ಸಕಾರಾತ್ಮಕತೆ ಇದೆ. ಕೆಲವು ದಿನಗಳ ಹಿಂದೆ ನಾನು ಯುಎಇ ಮತ್ತು ಕತಾರ್‌ ವಿದೇಶಿ ಪ್ರವಾಸದಿಂದ ಮರಳಿದೆ. ಪ್ರತಿಯೊಂದು ದೇಶವೂ ಭಾರತದ ಬೆಳವಣಿಗೆಯ ಯಶೋಗಾಥೆಯ ಬಗ್ಗೆ ವಿಶ್ವಾಸ ಹೊಂದಿದೆ. ದೇಶೀಯವಾಗಿ "ಮೋದಿ ಅವರ ಗ್ಯಾರಂಟಿ" ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವಾಗ, ಜಗತ್ತು ಭಾರತವನ್ನು ಉತ್ತಮ ಆದಾಯದ ಗ್ಯಾರಂಟಿ ಎಂದು ಪರಿಗಣಿಸುತ್ತಿದೆ. ಚುನಾವಣೆ ಸಮೀಪದಲ್ಲಿ ಜನರು, ಹೊಸ ಹೂಡಿಕೆಗಳನ್ನು ತಪ್ಪಿಸುವುದನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಇಂದು ಭಾರತ ಈ ಕಲ್ಪನೆಯನ್ನೂ ಮುರಿದಿದೆ. ಚುನಾವಣೆಯ ಪೂರ್ವದಲ್ಲಿಯೂ ಸಹ, ವಿಶ್ವದಾದ್ಯಂತ ಹೂಡಿಕೆದಾರರು ಭಾರತದ ಸ್ಥಿರತೆ, ನೀತಿಗಳು ಮತ್ತು ಆಡಳಿತದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಯುಪಿ ಮತ್ತು ಲಕ್ನೋದಲ್ಲಿಯೂ ಈ ಭಾವನೆ ಎದ್ದುಕಾಣುತ್ತಿದೆ.

 

ಸಹೋದರ, ಸಹೋದರಿಯರೆ,

ನಾನು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುವಾಗ, ಅದಕ್ಕೆ ಹೊಸ ದೃಷ್ಟಿಕೋನಗಳು ಮತ್ತು ಹೊಸ ನಿರ್ದೇಶನಗಳು ಬೇಕಾಗುತ್ತವೆ. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಚಾಲ್ತಿಯಲ್ಲಿದ್ದ ಹಳತಾದ ಮನಸ್ಥಿತಿಯು ಪ್ರಗತಿಗೆ ಅಡ್ಡಿಯಾಯಿತು. ನಾಗರಿಕರನ್ನು ಮೂಲಸೌಕರ್ಯಗಳಿಂದ ವಂಚಿಸಿ, ಜೀವನೋಪಾಯವನ್ನು ಒದಗಿಸುವತ್ತ ಮಾತ್ರ ಗಮನ ಹರಿಸಲಾಯಿತು. ಹಿಂದಿನ ಸರ್ಕಾರಗಳು ಬೆರಳೆಣಿಕೆಯಷ್ಟು ಪ್ರಮುಖ ನಗರಗಳಲ್ಲಿ ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಗಮನ ಕೇಂದ್ರೀಕರಿಸಿದವು, ದೇಶದ ಹೆಚ್ಚಿನ ಭಾಗವು ಅಭಿವೃದ್ಧಿಯಾಗಲಿಲ್ಲ. ಕಡಿಮೆ ಶ್ರಮ ಹಾಕಿದ್ದರಿಂದ ಇದನ್ನು ಮಾಡಲು ಸುಲಭವಾಯಿತು. ಈ ಹಿಂದೆಯೂ ಉತ್ತರ ಪ್ರದೇಶ ಇದೇ ರೀತಿಯ ನಿರ್ಲಕ್ಷ್ಯವನ್ನು ಎದುರಿಸಿತ್ತು. ಆದರೆ, ಡಬಲ್ ಇಂಜಿನ್ ಸರ್ಕಾರವು ಈ ಹಳತಾದ ರಾಜಕೀಯ ಮನಸ್ಥಿತಿಯನ್ನು ಛಿದ್ರಗೊಳಿಸಿದೆ. ಉತ್ತರ ಪ್ರದೇಶದ ಪ್ರತಿ ಕುಟುಂಬದ ಜೀವನದ ಗುಣಮಟ್ಟ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಜೀವನವು ಸುಲಭವಾದಾಗ, ವ್ಯವಹಾರ ನಡೆಸುವುದು ಸ್ವಾಭಾವಿಕವಾಗಿ ಸುಲಭವಾಗುತ್ತದೆ. ನಾವು ಬಡವರಿಗೆ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದ್ದೇವೆ. ನಗರ ಪ್ರದೇಶದ ಮಧ್ಯಮ ವರ್ಗದ ಕುಟುಂಬಗಳಿಗೆ ಅವರ ಮನೆ-ಮಾಲೀಕತ್ವದ ಕನಸು ನನಸಾಗಿಸಲು ಅಂದಾಜು 60,000 ಕೋಟಿ ರೂ ವೆಚ್ಚ ಮಾಡಿದ್ದೇವೆ. ಈ ಉಪಕ್ರಮದ ಮೂಲಕ, ಯುಪಿಯಲ್ಲಿ 1.5 ಲಕ್ಷ ಫಲಾನುಭವಿ ಕುಟುಂಬಗಳು ಸೇರಿದಂತೆ ನಗರ ಪ್ರದೇಶಗಳಲ್ಲಿನ 25 ಲಕ್ಷ ಮಧ್ಯಮ ವರ್ಗದ ಕುಟುಂಬಗಳು ಬಡ್ಡಿ ರಿಯಾಯಿತಿಗಳನ್ನು ಪಡೆದಿವೆ. ನಮ್ಮ ಸರ್ಕಾರ ಜಾರಿಗೆ ತಂದ ಆದಾಯ ತೆರಿಗೆ ಕಡಿತದಿಂದ ಮಧ್ಯಮ ವರ್ಗದವರೂ ಗಣನೀಯವಾಗಿ ಲಾಭ ಪಡೆದಿದ್ದಾರೆ. 2014ಕ್ಕೂ ಮೊದಲು 2 ಲಕ್ಷ ರೂ.ಗಿಂತ ಹೆಚ್ಚಿನ ಆದಾಯಕ್ಕೆ ಆದಾಯ ತೆರಿಗೆ ವಿಧಿಸಲಾಗುತ್ತಿತ್ತು. ಬಿಜೆಪಿ ಸರ್ಕಾರದ ಅಡಿ, 7 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ಆದಾಯ ತೆರಿಗೆ ವಿಧಿಸಲಾಗಿಲ್ಲ, ಮಧ್ಯಮ ವರ್ಗದ ಕೈಯಲ್ಲಿ ಗಣನೀಯ ಹಣ ಉಳಿಯುತ್ತಿದೆ.
 
ಸ್ನೇಹಿತರೆ,

ಉತ್ತರ ಪ್ರದೇಶದಲ್ಲಿ ಜೀವನದ ಗುಣಮಟ್ಟ ಸುಧಾರಿಸಲು ಮತ್ತು ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ನಾವು ಸಮಾನ ಒತ್ತು ನೀಡಿದ್ದೇವೆ. ಡಬಲ್ ಇಂಜಿನ್ ಸರ್ಕಾರದ ಉದ್ದೇಶವು ಯಾವುದೇ ಅರ್ಹ ಫಲಾನುಭವಿಯನ್ನು ಸರ್ಕಾರಿ ಯೋಜನೆಗಳಿಂದ ಹೊರಗಿಡದಂತೆ ನೋಡಿಕೊಳ್ಳುವುದಾಗಿದೆ. ಇತ್ತೀಚಿನ ವಿಕಸಿತ  ಭಾರತ ಸಂಕಲ್ಪ ಯಾತ್ರೆ ಸಮಯದಲ್ಲಿ, ಯುಪಿಯಲ್ಲಿ ಹಲವಾರು ಫಲಾನುಭವಿಗಳನ್ನು  ಹಲವು ಯೋಜನೆಗಳಿಗೆ ಲಿಂಕ್ ಮಾಡಲಾಗಿದೆ. ಮೋದಿ ಅವರ ಗ್ಯಾರಂಟಿ ವಾಹನವು ಪ್ರತಿ ಹಳ್ಳಿ ಮತ್ತು ನಗರವನ್ನು ತಲುಪಿದೆ, ವ್ಯಾಪಕ ವ್ಯಾಪ್ತಿಯನ್ನು ಖಚಿತಪಡಿಸುತ್ತಿದೆ. ಪರಿಪೂರ್ಣತೆ ಸಾಧಿಸುತ್ತಿದೆ. ಇದರಲ್ಲಿ ಸರ್ಕಾರವು 100 ಪ್ರತಿಶತ ಪ್ರಯೋಜನಗಳನ್ನು ಫಲಾನುಭವಿಗಳಿಗೆ ವಿಸ್ತರಿಸುತ್ತಿದೆ, ಇದು ನಿಜವಾದ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯನ್ನು ಸಾಕಾರಗೊಳಿಸುತ್ತದೆ. ಭ್ರಷ್ಟಾಚಾರ ಮತ್ತು ತಾರತಮ್ಯಕ್ಕೆ ಪ್ರಮುಖ ಕಾರಣಗಳನ್ನು ನೆನಪಿಸಿಕೊಳ್ಳಿ? ಹಿಂದಿನ ಸರ್ಕಾರಗಳ ಆಳ್ವಿಕೆಯಲ್ಲಿ, ಪ್ರಯೋಜನಗಳನ್ನು ಪಡೆಯಲು ವ್ಯಕ್ತಿಗಳು ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಅಧಿಕಾರಶಾಹಿಯ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬೇಕಾಗಿತ್ತು. ನಮ್ಮ ಸರ್ಕಾರವು ಈಗ ಬಡವರ ಮನೆ ಬಾಗಿಲಿಗೆ ನೇರವಾಗಿ ಸೇವೆಗಳನ್ನು ತಲುಪಿಸುತ್ತಿದೆ. ಪಡಿತರ, ಆರೋಗ್ಯ, ಪಕ್ಕಾ ಮನೆಗಳು ಅಥವಾ ವಿದ್ಯುತ್, ನೀರು ಮತ್ತು ಅನಿಲದಂತಹ ಅಗತ್ಯ ಉಪಯುಕ್ತತೆಗಳಾಗಲಿ, ಪ್ರತಿಯೊಬ್ಬ ಅರ್ಹ ಫಲಾನುಭವಿಯೂ ಅವರ ಅರ್ಹತೆಗೆ ತಕ್ಕ ಪ್ರಯೋಜನ ಪಡೆಯುವವರೆಗೆ ನಮ್ಮ ಸರ್ಕಾರ ಮುಂದುವರಿಯುತ್ತದೆ ಎಂಬುದು ಮೋದಿ ಅವರ ಭರವಸೆಯಾಗಿದೆ.

 

ಸ್ನೇಹಿತರೆ,

ಹಿಂದೆ ಕಡೆಗಣಿಸಿದವರಿಗೂ ಇಂದು ಮೋದಿ ಬೆಂಬಲ ನೀಡುತ್ತಿದ್ದಾರೆ. ನಮ್ಮ ಸರ್ಕಾರವು ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಪರಿಚಯಿಸುವವರೆಗೂ ಹಿಂದಿನ ಯಾವುದೇ ಸರ್ಕಾರವು ನಗರ ಬೀದಿ ವ್ಯಾಪಾರಿಗಳಿಗೆ ಸಹಾಯ ಮಾಡಲಿಲ್ಲ. ಇಲ್ಲಿಯವರೆಗೆ, ದೇಶಾದ್ಯಂತ ಬೀದಿಬದಿ ವ್ಯಾಪಾರಿಗಳಿಗೆ 10,000 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ, ಯುಪಿಯೊಂದರಲ್ಲೇ 22 ಲಕ್ಷ ಬೀದಿ ವ್ಯಾಪಾರಿಗಳಿಗೆ ಪ್ರಯೋಜನ ಲಭಿಸಿದೆ. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಪ್ರಭಾವವು ಆರ್ಥಿಕ ಬೆಂಬಲದೊಂದಿಗೆ ಆರ್ಥಿಕವಾಗಿ ಹಿಂದುಳಿದವರು ಅಭಿವೃದ್ಧಿ ಹೊಂದಬಹುದು ಎಂಬುದನ್ನು ತೋರಿಸುತ್ತದೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಅಧ್ಯಯನವು ಫಲಾನುಭವಿಗಳಲ್ಲಿ ಸರಾಸರಿ ವಾರ್ಷಿಕ ಗಳಿಕೆ 23,000 ರೂ. ಹೆಚ್ಚಳ ಆಗಿರುವುದನ್ನು ಬಹಿರಂಗಪಡಿಸಿದೆ, ಇದು ಹೆಚ್ಚುವರಿ ಆದಾಯದೊಂದಿಗೆ ಅವರಿಗೆ ಸಹಾಯ ಮಾಡುತ್ತದೆ. ಈ ಹೆಚ್ಚುವರಿ ಆದಾಯವು ಈ ಮಾರಾಟಗಾರರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ. ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಸೇರಿದಂತೆ ನಿರ್ಲಕ್ಷಿತ ಸಮುದಾಯಗಳಿಗೆ ಸೇರಿದ ಸುಮಾರು 75 ಪ್ರತಿಶತ ಫಲಾನುಭವಿಗಳು ಇದ್ದಾರೆ. ಈ ಫಲಾನುಭವಿಗಳಲ್ಲಿ ಅರ್ಧದಷ್ಟು ಮಹಿಳೆಯರು. ಹಿಂದೆ, ಈ ವ್ಯಕ್ತಿಗಳು ಮೇಲಾಧಾರದ ಕೊರತೆಯಿಂದಾಗಿ ಬ್ಯಾಂಕ್ ಸಾಲಗಳಿಗೆ ಸೀಮಿತ ಪ್ರವೇಶ ಹೊಂದಿದ್ದರು. ಇದೀಗ ಮೋದಿ ಅವರ ಗ್ಯಾರಂಟಿಯಿಂದ ಬ್ಯಾಂಕ್ ಗಳಿಂದ ನೆರವು ಪಡೆಯುತ್ತಿದ್ದಾರೆ. ಇದು ಜೆಪಿ ಮತ್ತು ಲೋಹಿಯಾ ಅವರಂತಹ ನಾಯಕರು ರೂಪಿಸಿದ ಸಾಮಾಜಿಕ ನ್ಯಾಯದ ರೂಪವನ್ನು ಪ್ರತಿನಿಧಿಸುತ್ತದೆ.
 
ಸ್ನೇಹಿತರೆ,

ನಮ್ಮ ಡಬಲ್ ಎಂಜಿನ್ ಸರ್ಕಾರದ ನಿರ್ಧಾರಗಳು ಮತ್ತು ಉಪಕ್ರಮಗಳು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮೃದ್ಧಿಗೆ ಕೊಡುಗೆ ನೀಡುತ್ತಿವೆ. ಲಖ್ಪತಿ ದೀದಿ ಉಪಕ್ರಮವನ್ನು ಪರಿಗಣಿಸಿ. ಕಳೆದ 1 ದಶಕದಲ್ಲಿ ದೇಶಾದ್ಯಂತ 10 ಕೋಟಿ ಮಹಿಳೆಯರಿಗೆ ಸ್ವಸಹಾಯ ಗುಂಪುಗಳ ರಚನೆಗೆ ಅನುಕೂಲ ಕಲ್ಪಿಸಿದ್ದೇವೆ. ಗಮನಾರ್ಹವೆಂದರೆ, ಒಂದು ಕೋಟಿ ಮಹಿಳೆಯರು ಈಗಾಗಲೇ ಲಖ್ಪತಿ ದೀದಿಗಳಾಗಿದ್ದಾರೆ. ಸರ್ಕಾರ ಈಗ 3 ಕೋಟಿ ಮಹಿಳೆಯರನ್ನು ಲಖ್ಪತಿ ಸ್ಥಾನಕ್ಕೆ ಏರಿಸುವ ಗುರಿ ಹೊಂದಿದೆ. ದೇಶಾದ್ಯಂತ ಸರಿಸುಮಾರು 2.5 ಲಕ್ಷ ಗ್ರಾಮ ಪಂಚಾಯತಿಗಳೊಂದಿಗೆ, ಲಖ್ಪತಿ ದೀದಿಗಳಾಗುವ ಪ್ರತಿಯೊಬ್ಬ 3 ಕೋಟಿ ಮಹಿಳೆಯರಿಗೆ ಕೊಳ್ಳುವ ಶಕ್ತಿಯಲ್ಲಿ ಗಣನೀಯ ಹೆಚ್ಚಳ ಆಗಿದೆ. ಈ ಉಪಕ್ರಮವು ಮಹಿಳೆಯರ ಜೀವನ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ.

 

ಸಹೋದರ, ಸಹೋದರಿಯರೆ,

ನಾವು ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶದ ಬಗ್ಗೆ ಮಾತನಾಡುವಾಗ, ಅದರ ಹಿಂದಿನ ಮತ್ತೊಂದು ಪ್ರೇರಕ ಶಕ್ತಿಯನ್ನು ನಾವು ಒಪ್ಪಿಕೊಳ್ಳಬೇಕು: ಅದರ ಎಂಎಸ್ಎಂಇಗಳು(ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು). ಡಬಲ್ ಇಂಜಿನ್ ಸರ್ಕಾರದ ಆರಂಭದಿಂದಲೂ, ಯುಪಿಯಲ್ಲಿ ಎಂಎಸ್‌ಎಂಇಗಳ ಅಭೂತಪೂರ್ವ ವಿಸ್ತರಣೆಯಾಗಿದೆ. ಎಂಎಸ್‌ಎಂಇಗಳಿಗೆ ಮಹತ್ವದ ಆರ್ಥಿಕ ನೆರವು ನೀಡಲಾಗಿದ್ದು, ಈ ಉದ್ದೇಶಕ್ಕಾಗಿ ಸಾವಿರಾರು ಕೋಟಿ ರೂ. ರಕ್ಷಣಾ ಕಾರಿಡಾರ್ ಮತ್ತು ಹೊಸ ಆರ್ಥಿಕ ಕಾರಿಡಾರ್‌ಗಳ ಅಭಿವೃದ್ಧಿಯು ಎಂಎಸ್‌ಎಂಇಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.
 
ಸ್ನೇಹಿತರೆ,

ಯುಪಿಯಲ್ಲಿನ ಪ್ರತಿಯೊಂದು ಜಿಲ್ಲೆಯು ಗುಡಿ ಕೈಗಾರಿಕೆಗಳ ಶ್ರೀಮಂತ ಸಂಪ್ರದಾಯ ಹೊಂದಿದೆ. ಬೀಗ ಹಾಕುವಿಕೆಯಿಂದ ಹಿಡಿದು ಹಿತ್ತಾಳೆ ಕೆಲಸ, ಕಂಬಳಿ ನೇಯುವಿಕೆಯಿಂದ ಬಳೆ ತಯಾರಿಕೆ, ಮಣ್ಣಿನ ಕಲೆಯಿಂದ ಚಿಕಂಕರಿ ಕಸೂತಿ, ಈ ಸಂಪ್ರದಾಯಗಳನ್ನು 'ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಯ ಮೂಲಕ ಬಲಪಡಿಸಲಾಗುತ್ತಿದೆ. ರಾಜ್ಯಾದ್ಯಂತ ರೈಲು ನಿಲ್ದಾಣಗಳಲ್ಲಿಯೂ ಸಹ ಈ ಯೋಜನೆಯ ಪ್ರಚಾರವನ್ನು ನೀವು ವೀಕ್ಷಿಸಬಹುದು. ಹೆಚ್ಚುವರಿಯಾಗಿ, ನಾವು 13 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಪರಿಚಯಿಸಿದ್ದೇವೆ, ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಆಧುನೀಕರಿಸುವ ಮತ್ತು ಅಂತಹ ಕರಕುಶಲತೆಯಲ್ಲಿ ತೊಡಗಿರುವ ವಿಶ್ವಕರ್ಮ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಗುರಿ ಹೊಂದಿದ್ದೇವೆ. ತಮ್ಮ ವ್ಯವಹಾರವನ್ನು ವಿಸ್ತರಿಸಲು ಬ್ಯಾಂಕ್‌ಗಳಿಂದ ಯಾವುದೇ ಮೇಲಾಧಾರವಿಲ್ಲದೆ ಕೈಗೆಟುಕುವ ಸಾಲಗಳನ್ನು ಪಡೆಯಲು ಇದು ಅವರಿಗೆ ಸಹಾಯ ಮಾಡುತ್ತದೆ.

 

ಸಹೋದರ, ಸಹೋದರಿಯರೆ,

ನಮ್ಮ ಪ್ರಯತ್ನಗಳು ಆಟಿಕೆ ತಯಾರಿಕಾ ವಲಯಕ್ಕೂ ವಿಸ್ತರಿಸುತ್ತಿವೆ. ಕಾಶಿ ಸಂಸದನಾಗಿ ನಾನು ಅಲ್ಲಿ ತಯಾರಾಗುವ ಮರದ ಆಟಿಕೆಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತೇನೆ.
 
ಸ್ನೇಹಿತರೆ,

ಬಹಳ ಹಿಂದೆಯೇ, ಆಟಿಕೆ ತಯಾರಿಕೆಯ ಶ್ರೀಮಂತ ಸಂಪ್ರದಾಯ ಹೊಂದಿದ್ದರೂ, ಭಾರತವು ಆಟಿಕೆ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ನಮ್ಮ ಕುಶಲಕರ್ಮಿಗಳು ತಲೆಮಾರುಗಳ ಕೌಶಲ್ಯ ಹೊಂದಿದ್ದಾರೆ, ಆದರೆ ಬೆಂಬಲ ಮತ್ತು ಆಧುನೀಕರಣದ ಕೊರತೆಯಿದೆ. ಪರಿಣಾಮವಾಗಿ, ವಿದೇಶಿ ಆಟಿಕೆಗಳು ಭಾರತೀಯ ಮಾರುಕಟ್ಟೆಗಳು ಮತ್ತು ಮನೆಗಳಲ್ಲಿ ಪ್ರಾಬಲ್ಯ ಸಾಧಿಸಿದವು. ಇದನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ, ನಾವು ರಾಷ್ಟ್ರವ್ಯಾಪಿ ಆಟಿಕೆ ತಯಾರಕರನ್ನು ಬೆಂಬಲಿಸಿದ್ದೇವೆ. ಇದರ ಪರಿಣಾಮವಾಗಿ ಆಮದುಗಳಲ್ಲಿ ಗಮನಾರ್ಹ ಕಡಿತ ಮತ್ತು ಆಟಿಕೆ ರಫ್ತುಗಳಲ್ಲಿ ಗಣನೀಯ ಹೆಚ್ಚಳವಾಗಿದೆ.

 

ಸ್ನೇಹಿತರೆ,

ಉತ್ತರ ಪ್ರದೇಶವು ಭಾರತದ ಪ್ರಮುಖ ಪ್ರವಾಸೋದ್ಯಮ ತಾಣವಾಗುವ ಸಾಮರ್ಥ್ಯ ಹೊಂದಿದೆ. ಇಂದು ದೇಶದ ಪ್ರತಿಯೊಬ್ಬ ವ್ಯಕ್ತಿಯು ವಾರಾಣಸಿ ಮತ್ತು ಅಯೋಧ್ಯೆಗೆ ಭೇಟಿ ನೀಡಲು ಬಯಸುತ್ತಾನೆ. ವಾರಾಣಸಿ ಮತ್ತು ಅಯೋಧ್ಯೆಯು ಪ್ರತಿದಿನ ಅಸಂಖ್ಯಾತ ಸಂದರ್ಶಕರನ್ನು ಆಕರ್ಷಿಸುತ್ತದೆ. ಯುಪಿಯಲ್ಲಿ ಸಣ್ಣ ಉದ್ಯಮಿಗಳು, ಏರ್‌ಲೈನ್‌ಗಳು ಮತ್ತು ಆತಿಥ್ಯ ವ್ಯವಹಾರಗಳಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಎಲ್ಲಾ ಪ್ರವಾಸಿಗರು ಮತ್ತು ಪ್ರಯಾಣಿಕರು ತಮ್ಮ ಪ್ರಯಾಣದ ಬಜೆಟ್‌ನಲ್ಲಿ 10% ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಮೀಸಲಿಡುವಂತೆ ನಾನು ಒತ್ತಾಯಿಸುತ್ತೇನೆ. ಪ್ರವಾಸಕ್ಕಾಗಿ ನೀವು ಈಗಾಗಲೇ ಬಜೆಟ್ ನಿಯೋಜಿಸಿರುವುದರಿಂದ ಇದು ನಿಮಗೆ ತುಂಬಾ ಕಷ್ಟಕರವಾಗಿರಬಾರದು. ಈ ರೀತಿಯಲ್ಲಿ ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸಿ ಅವರ ಬೆಳವಣಿಗೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಹೆಚ್ಚುವರಿಯಾಗಿ, ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ. ಶ್ರೀಮಂತರು ತಮ್ಮ ಮಕ್ಕಳಿಗೆ ವಿದೇಶದಲ್ಲಿ ಮದುವೆ ಮಾಡುತ್ತಾರೆ. ನಿಮ್ಮ ಮಕ್ಕಳು ಭಾರತದಂತಹ ವಿಶಾಲ ರಾಷ್ಟ್ರದಲ್ಲಿ ಮದುವೆಯಾಗಬಹುದಲ್ಲವೇ? ಇದರಿಂದ ಉದ್ಯೋಗ ಪಡೆಯುವವರ ಸಂಖ್ಯೆಯನ್ನು ಪರಿಗಣಿಸಿ. ಮದುವೆಗಳನ್ನು ವಿದೇಶದಲ್ಲಿ ನಡೆಯುವುದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ನಡೆಸಬೇಕೆಂದು ನಾನು ಪ್ರತಿಪಾದಿಸುತ್ತೇನೆ. ನಾನು "ವೆಡ್ ಇನ್ ಇಂಡಿಯಾ" ಅಭಿಯಾನ ಆರಂಭಿಸಿದಾಗಿನಿಂದ, ನಾನು ವ್ಯಕ್ತಿಗಳಿಂದ ಪತ್ರಗಳನ್ನು ಸ್ವೀಕರಿಸುತ್ತಿದ್ದೇನೆ. ಅವರು "ಸರ್, ನಾವು ಈಗಾಗಲೇ ವ್ಯವಸ್ಥೆ ಮಾಡಿದ್ದೇವೆ ಮತ್ತು ವಿದೇಶದಲ್ಲಿ ಮದುವೆಯಾಗಲು ತಯಾರಿ ನಡೆಸಿದ್ದೇವೆ, ಆದರೆ ನಿಮ್ಮ ಉಪಕ್ರಮ ಕೇಳಿದ ನಂತರ, ನಾವು ಆ ಯೋಜನೆಗಳನ್ನು ರದ್ದುಗೊಳಿಸಿ ಭಾರತದಲ್ಲಿ ನಮ್ಮ ಮದುವೆ ಆಯೋಜಿಸಲು ನಿರ್ಧರಿಸಿದ್ದೇವೆ" ಎಂದು ಅವರು ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಭಗತ್ ಸಿಂಗ್ ಅವರ ಹುತಾತ್ಮತೆಗೆ ಸಮಾನವಾದ ತ್ಯಾಗದಿಂದ ಮಾತ್ರ ದೇಶ ಸೇವೆಯನ್ನು ಸಾಧಿಸಲಾಗುತ್ತದೆ ಎಂಬುದು ತಪ್ಪು ಕಲ್ಪನೆ. ದೇಶ ಸೇವೆಯನ್ನು ಸಮರ್ಪಿತ ಕೆಲಸದ ಮೂಲಕವೂ ಸಾಧಿಸಬಹುದು. ಆದ್ದರಿಂದ, ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕ ಹೆಚ್ಚಿಸುವ ಪ್ರಾಮುಖ್ಯತೆಯನ್ನು ನಾನು ಒತ್ತಿಹೇಳುತ್ತೇನೆ. ಉತ್ತರ ಪ್ರದೇಶದೊಳಗೆ ಪ್ರಯಾಣ ಮಾಡುವುದು ಈಗ ಗಮನಾರ್ಹವಾಗಿ ಅನುಕೂಲಕರವಾಗಿದೆ. ಇತ್ತೀಚೆಗೆ, ನಾವು ವಾರಾಣಸಿಯಿಂದ ವಿಶ್ವದ ಅತಿ ಉದ್ದದ ಕ್ರೂಸ್ ಸೇವೆಯನ್ನು ಉದ್ಘಾಟಿಸಿದ್ದೇವೆ. 2025ರಲ್ಲಿ ನಡೆಯಲಿರುವ ಕುಂಭಮೇಳ ಕೂಡ ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಲಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳು ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಸಾಕ್ಷಿಯಾಗಲಿವೆ.
 
ಸ್ನೇಹಿತರೆ,

ನಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದು, ಅವುಗಳನ್ನು ಆಧುನೀಕರಿಸುವುದು ಮತ್ತು ಉದಯೋನ್ಮುಖ ವಲಯಗಳಲ್ಲಿ ಉತ್ತಮ ಸಾಧನೆ ಮಾಡುವುದು ನಮ್ಮ ಗುರಿಯಾಗಿದೆ. ಭಾರತವು ಪ್ರಸ್ತುತ ವಿದ್ಯುತ್ ಚಲನಶೀಲತೆ ಮತ್ತು ಹಸಿರು ಇಂಧನಕ್ಕೆ ಗಮನಾರ್ಹ ಒತ್ತು ನೀಡುತ್ತಿದೆ. ಅಂತಹ ತಂತ್ರಜ್ಞಾನಗಳು ಮತ್ತು ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನಾಗಿ ಸ್ಥಾಪಿಸಲು ನಾವು ಬಯಸುತ್ತೇವೆ. ದೇಶದ ಪ್ರತಿಯೊಂದು ಮನೆಯೂ ಸೌರಶಕ್ತಿ ಉತ್ಪಾದಕವಾಗಬೇಕು ಎಂಬುದು ನಮ್ಮ ಗುರಿ. ಆದ್ದರಿಂದ, ನಾವು ಪ್ರಧಾನ ಮಂತ್ರಿ ಸೂರ್ಯಘರ್-ಮುಕ್ತ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯಡಿ, 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು, ಜನರು ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು. ಆರಂಭದಲ್ಲಿ 1 ಕೋಟಿ ಕುಟುಂಬಗಳನ್ನು ಗುರಿಯಾಗಿಟ್ಟುಕೊಂಡು, ಪ್ರತಿ ಕುಟುಂಬದ ಬ್ಯಾಂಕ್ ಖಾತೆಗೆ ಸುಮಾರು 30,000ದಿಂದ 80,000 ರೂ. ಅನ್ನು ನೇರವಾಗಿ ಜಮಾ ಮಾಡಲಾಗುವುದು. ಮಾಸಿಕ 100 ಯೂನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿರುವವರು 30,000 ರೂ. ಸಹಾಯಧನ ಪಡೆಯುತ್ತಾರೆ. 300 ಯೂನಿಟ್ ಅಥವಾ ಅದಕ್ಕಿಂತ ಹೆಚ್ಚು ಉತ್ಪಾದಿಸುವವರಿಗೆ ಸುಮಾರು 80,000 ರೂ. ಹೆಚ್ಚುವರಿಯಾಗಿ ಸಿಗುತ್ತದೆ. ಬ್ಯಾಂಕುಗಳು ಕೈಗೆಟುಕುವ ಬಡ್ಡಿದರಕ್ಕೆ ಸಾಲಗಳನ್ನು ನೀಡುತ್ತವೆ. ಈ ಕುಟುಂಬಗಳು ಉಚಿತ ವಿದ್ಯುತ್ ಪಡೆಯುವುದು ಮಾತ್ರವಲ್ಲದೆ, ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವ ಮೂಲಕ ವಾರ್ಷಿಕ 18,000 ರೂ. ವರೆಗೆ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಈ ಉಪಕ್ರಮವು ಅನುಷ್ಟಾನ, ಪೂರೈಕೆ ಸರಪಳಿ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಹಲವಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದು ನಿರಂತರ 24 ಗಂಟೆಗಳ ವಿದ್ಯುತ್ ಸರಬರಾಜು ಮತ್ತು ನಿರ್ದಿಷ್ಟ ಮಿತಿಯವರೆಗೆ ಉಚಿತ ವಿದ್ಯುತ್ ಅನ್ನು ಸುಗಮಗೊಳಿಸುತ್ತದೆ.

 

ಸ್ನೇಹಿತರೆ,

ಸೌರಶಕ್ತಿಯ ಜತೆಗೆ, ನಾವು ಎಲೆಕ್ಟ್ರಿಕ್ ವಾಹನಗಳ (ಇವಿಗಳು) ಉತ್ಪಾದನೆಗೆ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಇವಿಗಳ ತಯಾರಕರು ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ತೆರಿಗೆ ವಿನಾಯಿತಿಗಳನ್ನು ಒದಗಿಸಲಾಗಿದೆ. ಪರಿಣಾಮವಾಗಿ, ಕಳೆದ 1 ದಶಕದಲ್ಲಿ ಸುಮಾರು 34.5 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ನಾವು ಎಲೆಕ್ಟ್ರಿಕ್ ಬಸ್‌ಗಳನ್ನು ತ್ವರಿತವಾಗಿ ನಿಯೋಜಿಸುತ್ತಿದ್ದೇವೆ, ಇದು ಉತ್ತರ ಪ್ರದೇಶದಲ್ಲಿ ಸೌರ ಮತ್ತು ಇವಿ ವಲಯಗಳಲ್ಲಿ ಗಣನೀಯ ಅವಕಾಶಗಳನ್ನು ಸೂಚಿಸುತ್ತದೆ.
 
ಸ್ನೇಹಿತರೆ,

ಇತ್ತೀಚಿಗೆ ನಮ್ಮ ಸರ್ಕಾರವು ರೈತ ಹೋರಾಟಗಾರ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದೆ. ಉತ್ತರ ಪ್ರದೇಶದ ಮಣ್ಣಿನ ಮಗ ಚೌಧರಿ ಸಾಹೇಬರನ್ನು ಗೌರವಿಸುವುದು ದೇಶಾದ್ಯಂತ ಇರುವ ಕೋಟ್ಯಂತರ ಕಾರ್ಮಿಕರು ಮತ್ತು ರೈತರಿಗೆ ನೀಡಿದ ಗೌರವವಾಗಿದೆ. ದುರದೃಷ್ಟವಶಾತ್, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಈ ಮಹತ್ವವನ್ನು ಗುರುತಿಸಲು ವಿಫಲವಾಗಿವೆ. ಸಂಸತ್ತಿನಲ್ಲಿ ಚೌಧರಿ ಚರಣ್ ಸಿಂಗ್ ಜಿ ಅವರ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಗಮನಿಸಿದಂತೆ, ಕಾಂಗ್ರೆಸ್ ಸದಸ್ಯರು ಅವರ ಹೆಸರು ಉಲ್ಲೇಖಿಸಲು ಅಡ್ಡಿಪಡಿಸಿದರು. ಕಾಂಗ್ರೆಸ್ ತನ್ನ ಕುಟುಂಬದ ಸದಸ್ಯರಿಗೆ ಮಾತ್ರ ಭಾರತ ರತ್ನ ಮೀಸಲಿಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಲ್ಲಿ ಅವರ ದಶಕಗಳ ವಿಳಂಬದಿಂದ ಈ ಮನಸ್ಥಿತಿ ಸ್ಪಷ್ಟವಾಗಿದೆ. ಬಡವರು, ದಲಿತರು, ಹಿಂದುಳಿದವರು, ರೈತರು ಮತ್ತು ಕೂಲಿಕಾರರ ಕಲ್ಯಾಣದ ಬಗ್ಗೆ ಕಾಂಗ್ರೆಸ್ ಅಸಡ್ಡೆ ತೋರುತ್ತಿದೆ. ಚೌಧರಿ ಚರಣ್ ಸಿಂಗ್ ಜಿ ಅವರ ಜೀವಿತಾವಧಿಯಲ್ಲಿಯೂ ಸಹ, ಕಾಂಗ್ರೆಸ್ ಅವರೊಂದಿಗೆ ರಾಜಕೀಯವಾಗಿ ಚೌಕಾಶಿ ಮಾಡಲು ಪ್ರಯತ್ನಿಸಿತು. ಪ್ರಧಾನಿ ಹುದ್ದೆ ತ್ಯಜಿಸಿದರೂ, ಚೌಧರಿ ಸಾಹೇಬರು ರಾಜಕೀಯ ಚೌಕಾಸಿ ತಿರಸ್ಕರಿಸಿ ತಮ್ಮ ತತ್ವಗಳಿಗೆ ಅಚಲರಾಗಿ ಉಳಿದಿದ್ದರು. ಅವರು ರಾಜಕೀಯ ಚೌಕಾಶಿ ದ್ವೇಷಿಸುತ್ತಿದ್ದರು. ಉತ್ತರ ಪ್ರದೇಶದ ರಾಜಕೀಯ ಪಕ್ಷಗಳು ಅವರ ಹೆಸರು ಹೇಳುತ್ತಿರುವುದು, ಅವರ ಆದರ್ಶಗಳನ್ನು ಅನುಸರಿಸಲು ವಿಫಲವಾಗಿದೆ ಎಂಬುದು ವಿಷಾದನೀಯ. ಸಣ್ಣ ರೈತರಿಗೆ ಚೌಧರಿ ಸಾಹೇಬರು ನೀಡಿದ ಕೊಡುಗೆಗಳನ್ನು ರಾಷ್ಟ್ರವು ಎಂದೆಂದಿಗೂ ಸ್ಮರಿಸುತ್ತದೆ. ಅವರಿಂದ ಸ್ಫೂರ್ತಿ ಪಡೆದು, ದೇಶಾದ್ಯಂತ ರೈತರನ್ನು ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ.

 

ಸ್ನೇಹಿತರೆ,

ದೇಶದ ಕೃಷಿಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ನಾವು ರೈತರಿಗೆ ಸಹಾಯ ಮಾಡುತ್ತಿದ್ದೇವೆ, ಪ್ರೋತ್ಸಾಹಿಸುತ್ತಿದ್ದೇವೆ. ಇದು ನೈಸರ್ಗಿಕ ಕೃಷಿ ಮತ್ತು ಸಿರಿಧಾನ್ಯಗಳತ್ತ ನಮ್ಮ ಗಮನದ ಹಿಂದಿನ ಗುರಿಯಾಗಿದೆ. ಪ್ರಸ್ತುತ, ಉತ್ತರ ಪ್ರದೇಶದ ಗಂಗಾ ನದಿಯ ತೀರದಲ್ಲಿ ನೈಸರ್ಗಿಕ ಕೃಷಿಯು ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿದೆ. ಕೃಷಿಯ ಈ ವಿಧಾನವು ರೈತರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ನೀಡುತ್ತದೆ. ಮಾಲಿನ್ಯ ತಡೆಗಟ್ಟುವ ಮೂಲಕ ಗಂಗಾ ನದಿಯಂತಹ ನಮ್ಮ ಪವಿತ್ರ ನದಿಗಳ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ. ಇಂದು ನಾನು ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಉದ್ಯಮಿಗಳಿಗೆ ವಿಶೇಷ ಮನವಿ ಮಾಡಲು ಬಯಸುತ್ತೇನೆ. ನೀವು ಶೂನ್ಯ ಇಂಗಾಲದ ಪರಿಣಾಮ, ಶೂನ್ಯ ದೋಷದ ಮಂತ್ರಕ್ಕೆ ಬದ್ಧರಾಗಿರಬೇಕು. ಮೇಡ್ ಇನ್ ಇಂಡಿಯಾ ಆಹಾರ ಉತ್ಪನ್ನಗಳನ್ನು ವಿಶ್ವಾದ್ಯಂತ ರಾಷ್ಟ್ರಗಳ ಡೈನಿಂಗ್ ಟೇಬಲ್‌ಗಳನ್ನು ಅಲಂಕರಿಸುವ ಗುರಿಯತ್ತ ಶ್ರಮಿಸಿ. ನಿಮ್ಮ ಪ್ರಯತ್ನಗಳಿಗೆ ಧನ್ಯವಾದಗಳು. ಸಿದ್ಧಾರ್ಥ್ ನಗರದಿಂದ ಕಲಾ ನಮಕ್ ಅಕ್ಕಿ ಮತ್ತು ಚಂದೌಲಿಯಿಂದ  ಕಪ್ಪು ಅಕ್ಕಿಯಂತಹ ಉತ್ಪನ್ನಗಳು ಗಣನೀಯ ಪ್ರಮಾಣದಲ್ಲಿ ರಫ್ತಾಗುತ್ತಿವೆ. ವಿಶೇಷವಾಗಿ ಸಿರಿಧಾನ್ಯ ಅಥವಾ ಶ್ರೀ ಅನ್ನಕ್ಕೆ ಸಂಬಂಧಿಸಿದಂತೆ ಹೊಸ ಪ್ರವೃತ್ತಿ ಹೊರಹೊಮ್ಮುತ್ತಿದೆ, ಈ ಉತ್ಕೃಷ್ಟ ಆಹಾರಗಳಲ್ಲಿ  ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು, ಪ್ಯಾಕೇಜಿಂಗ್ ತಂತ್ರಗಳನ್ನು ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಮಾರ್ಗದರ್ಶನ ನೀಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ರೈತ ಉತ್ಪಾದಕ ಸಂಘಗಳು(ಎಫ್‌ಪಿಒಗಳು) ಮತ್ತು ಸಹಕಾರ ಸಂಘಗಳನ್ನು ಸಬಲೀಕರಣಗೊಳಿಸುವ ಮೂಲಕ ಸಣ್ಣ, ಅತಿಸಣ್ಣ ರೈತರನ್ನು ಅಸಾಧಾರಣ ಮಾರುಕಟ್ಟೆ ಶಕ್ತಿಯಾಗಿ ಪರಿವರ್ತಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರಿಗೆ ತಾಂತ್ರಿಕ ಪರಿಣತಿ ಒದಗಿಸುವುದು ಮತ್ತು ಅವರ ಸರಕುಗಳ ಖರೀದಿಯನ್ನು ಖಾತ್ರಿಪಡಿಸಿಕೊಳ್ಳುವುದರಿಂದ ರೈತರಿಗೆ ಮತ್ತು ಮಣ್ಣಿಗೆ ಪ್ರಯೋಜನವನ್ನು ನೀಡುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ, ನಿಮ್ಮ ವ್ಯವಹಾರಗಳನ್ನು ಹೆಚ್ಚಿಸುತ್ತದೆ. ಉತ್ತರ ಪ್ರದೇಶವು ಐತಿಹಾಸಿಕವಾಗಿ ಭಾರತದ ಗ್ರಾಮೀಣ ಮತ್ತು ಕೃಷಿ ಆಧಾರಿತ ಆರ್ಥಿಕತೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆದ್ದರಿಂದ, ಈ ಅವಕಾಶವನ್ನು ಅದರ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಿ. ಉತ್ತರ ಪ್ರದೇಶದ ಜನರ ಸಹನೆ ಮತ್ತು ಡಬಲ್ ಇಂಜಿನ್ ಸರ್ಕಾರದ ಪರಿಶ್ರಮದ ಪ್ರಯತ್ನಗಳಲ್ಲಿ ನನಗೆ ಅಚಲವಾದ ವಿಶ್ವಾಸವಿದೆ. ಇಂದಿನ ಪ್ರಯತ್ನಗಳು ಉತ್ತರ ಪ್ರದೇಶ ಮತ್ತು ರಾಷ್ಟ್ರದ ಪ್ರಗತಿಗೆ ಭದ್ರ ಅಡಿಪಾಯ ಹಾಕುತ್ತವೆ. ಯೋಗಿ ಜಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ವಿಶೇಷ ಅಭಿನಂದನೆಗಳು. ಉತ್ತರ ಪ್ರದೇಶವು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಹಂಬಲದಲ್ಲಿದೆ ಎಂದು ಕೇಳಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಉತ್ತರ ಪ್ರದೇಶವನ್ನು ಅನುಕರಿಸಿ. ನಿಮ್ಮ ರಾಜ್ಯಗಳಲ್ಲಿ ಟ್ರಿಲಿಯನ್ ಡಾಲರ್ ಆರ್ಥಿಕತೆ  ನಿರ್ಮಿಸಲು ಶ್ರಮಿಸುವಂತೆ ನಾನು ಎಲ್ಲಾ ರಾಜ್ಯಗಳನ್ನು ಕೋರುತ್ತೇನೆ. ನಾವೆಲ್ಲರೂ ಮಹತ್ವಾಕಾಂಕ್ಷೆಯ ಕನಸುಗಳು ಮತ್ತು ನಿರ್ಣಯಗಳೊಂದಿಗೆ ಪ್ರಾರಂಭಿಸೋಣ. ನನ್ನ ಕೈಗಾರಿಕಾ ರಂಗದ ಸ್ನೇಹಿತರೆ, ಅಪರಿಮಿತ ಅವಕಾಶಗಳೊಂದಿಗೆ ಸಮಯ ಪಕ್ವವಾಗಿದೆ. ಬನ್ನಿ, ನಾವು ಸಿದ್ಧರಿದ್ದೇವೆ. ಒಟ್ಟಿಗೆ ಈ ಪ್ರಯಾಣ ಪ್ರಾರಂಭಿಸೋಣ.
 
ಸ್ನೇಹಿತರೆ,

ಉತ್ತರ ಪ್ರದೇಶದಾದ್ಯಂತ ಲಕ್ಷಾಂತರ ಜನರು ಇಂದು 400 ಸ್ಥಳಗಳಲ್ಲಿ ಜಮಾಯಿಸಿರುವುದರಿಂದ, ಉತ್ತರ ಪ್ರದೇಶವು ತನ್ನ ನಿರ್ಣಯಗಳನ್ನು ತ್ವರಿತವಾಗಿ ಅರಿತುಕೊಳ್ಳುತ್ತದೆ ಎಂದು ನೀವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ, ಜೊತೆಯಾಗಿ ಮುನ್ನುಗ್ಗೋಣ. ಈ ಆಶಯದೊಂದಿಗೆ, ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು, ತುಂಬು ಧನ್ಯವಾದಗಳು!
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From welfare to opportunity: How DPI 2.0 and AI will unlock India’s productivity

Media Coverage

From welfare to opportunity: How DPI 2.0 and AI will unlock India’s productivity
NM on the go

Nm on the go

Always be the first to hear from the PM. Get the App Now!
...
State Visit of Prime Minister to Seychelles
June 28, 2026

As part of Prime Minister Shri Narendra Modi’s State Visit to Seychelles from 27-29 June 2026, Prime Minister and the President of Seychelles, H.E. Dr. Patrick Herminie today held official talks at the State House in Victoria, Mahe.

The talks covered the full spectrum of bilateral relations, with the leaders agreeing to further strengthen cooperation in health, education, capacity building, digital transformation, sustainable development, social infrastructure, renewable energy, maritime security and defence. They also exchanged views on regional and global developments, including challenges in the Indian Ocean region, such as illegal fishing, drug trafficking and piracy. Both leaders expressed satisfaction at the progress made in the implementation of projects and initiatives under the Special Economic Package announced by India. Prime Minister reaffirmed India’s commitment to supporting the development priorities of Seychelles and to further deepen the close and enduring partnership between the two countries.

Following the official talks, both leaders released a joint commemorative logo marking 50 years of the establishment of diplomatic relations between the two countries. Several MoUs/agreements in the fields of Capacity Building, UPI, Health, Agriculture, Shipping, Space, Extradition and Line of Credit were exchanged thereafter. The amount of the Line of Credit stands at INR 1250 crores. The full list of MoUs/agreements may be seen here [link]. In addition, several announcements in the fields of food security, infrastructure, health, vocational training, maritime security and defence were made in support of the development needs of Seychelles. The details of these announcements may be seen here [link]. Seychelles also announced that it is joining the Coalition for Disaster Resilient Infrastructure [CDRI].

Later in the day, Prime Minister addressed an Extraordinary Sitting of the National Assembly of Seychelles, becoming the first Indian Prime Minister to do so. In his address, he highlighted the historical bonds of friendship between India and Seychelles and underscored the shared values of democracy, rule of law and people-centric governance that guide the two countries. He noted that mutual trust and close cooperation have shaped a robust partnership spanning development cooperation, maritime security, technology, innovation, health and capacity building. Prime Minister also called for enhanced parliamentary exchanges between the two democracies. The full address of Prime Minister may be seen here [link]

The Leader of Opposition of Seychelles, H.E. Mr. Bernard Georges, also called on Prime Minister. The two leaders discussed India-Seychelles bilateral ties and conveyed their strong support to further build the special friendship between the two countries.