"ಶತಮಾನಗಳ ತಾಳ್ಮೆ, ಅಪರಿಮಿತ ತ್ಯಾಗ, ಪರಿತ್ಯಾಗ ಮತ್ತು ತಪಸ್ಸಿನ ನಂತರ ನಮ್ಮ ಶ್ರೀರಾಮ ಇಲ್ಲಿದ್ದಾನೆ"
"22ನೇ ಜನವರಿ 2024 ಕ್ಯಾಲೆಂಡರ್ ನಲ್ಲಿ ಕೇವಲ ಒಂದು ದಿನಾಂಕವಲ್ಲ, ಇದು ಹೊಸ 'ಕಾಲ ಚಕ್ರ'ದ ಆರಂಭವಾಗಿದೆ"
“ನ್ಯಾಯದ ಘನತೆಯನ್ನು ಕಾಪಾಡಿದ್ದಕ್ಕಾಗಿ ನಾನು ಭಾರತೀಯ ನ್ಯಾಯಾಂಗಕ್ಕೆ ಧನ್ಯವಾದ ಹೇಳುತ್ತೇನೆ. ನ್ಯಾಯದ ಪ್ರತಿರೂಪವಾದ ಭಗವಾನ್ ರಾಮನ ದೇವಾಲಯವನ್ನು ನ್ಯಾಯಯುತವಾಗಿ ನಿರ್ಮಿಸಲಾಗಿದೆ”
"ನನ್ನ 11 ದಿನಗಳ ಉಪವಾಸ ಮತ್ತು ಆಚರಣೆಯಲ್ಲಿ, ನಾನು ಶ್ರೀರಾಮನು ನಡೆದಾಡಿದ ಸ್ಥಳಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದೆ"
"ಸಮುದ್ರದಿಂದ ಸರಯೂ ನದಿಯವರೆಗೆ, ರಾಮನ ಹೆಸರಿನ ಅದೇ ಹಬ್ಬದ ಉತ್ಸಾಹವು ಎಲ್ಲೆಡೆ ಪಸರಿಸಿದೆ"
“ರಾಮಕಥೆಯು ಅನಂತವಾದುದು ಮತ್ತು ರಾಮಾಯಣಕ್ಕೂ ಅಂತ್ಯವೆಂಬುದಿಲ್ಲ. ರಾಮನ ಆದರ್ಶಗಳು, ಮೌಲ್ಯಗಳು ಮತ್ತು ಬೋಧನೆಗಳು ಎಲ್ಲೆಡೆಯೂ ಒಂದೇ ಆಗಿವೆ”
“ಇದು ರಾಮನ ರೂಪದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಮಂದಿರವಾಗಿದೆ. ಭಗವಾನ್ ರಾಮನು ಭಾರತದ ನಂಬಿಕೆ, ಬುನಾದಿ, ಆಲೋಚನೆ, ಕಾನೂನು, ಪ್ರಜ್ಞೆ, ಚಿಂತನೆ, ಪ್ರತಿಷ್ಠೆ ಮತ್ತು ವೈಭವವಾಗಿದ್ದಾನೆ"
"ಮುಂದಿನ ಒಂದು ಸಾವಿರ ವರ್ಷಗಳವರೆಗೆ ನಾವು ಭಾರತದ ಅಡಿಪಾಯವನ್ನು ಹಾಕಬೇಕಾಗಿದೆ"
"ನಾವು ನಮ್ಮ ಪ್ರಜ್ಞೆಯನ್ನು ದೇವನಿಂದ ದೇಶಕ್ಕೆ, ರಾಮನಿಂದ ರಾಷ್ಟ್ರಕ್ಕೆ - ದೈವದಿಂದ ರಾಷ್ಟ್ರಕ್ಕೆ ವಿಸ್ತರಿಸಬೇಕು"
"ಈ ಭವ್ಯವಾದ ದೇವಾಲಯವು ವೈಭವೋಪೇತವಾದ ಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ"
"ಇದು ಭಾರತದ ಸಮಯ ಮತ್ತು ನಾವು ಮುನ್ನಡೆಯುತ್ತಿದ್ದೇವೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದರು. ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಶ್ರಮಜೀವಿಗಳೊಂದಿಗೆ ಶ್ರೀ ಮೋದಿ ಸಂವಾದ ನಡೆಸಿದರು.

ಸಿಯಾವರ್ ರಾಮಚಂದ್ರ ದೀರ್ಘಕಾಲ ಬಾಳಲಿ!

ಸಿಯಾವರ್ ರಾಮಚಂದ್ರ ದೀರ್ಘಕಾಲ ಬಾಳಲಿ!

ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂತರು ಮತ್ತು ಸಾಧುಗಳಿಗೆ, ಇಲ್ಲಿ ಉಪಸ್ಥಿತರಿರುವ ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಸಂಪರ್ಕ ಹೊಂದಿರುವ ಎಲ್ಲಾ ರಾಮ ಭಕ್ತರಿಗೆ ನನ್ನ ಶುಭಾಶಯಗಳು. ಎಲ್ಲರಿಗೂ ರಾಮ್ ರಾಮ್!

ಇಂದು, ನಮ್ಮ ರಾಮ ಬಂದಿದ್ದಾನೆ! ಶತಮಾನಗಳ ನಿರೀಕ್ಷೆಯ ನಂತರ ನಮ್ಮ ರಾಮ ಬಂದಿದ್ದಾನೆ. ನಮ್ಮ ಭಗವಾನ್ ರಾಮನು ಅಭೂತಪೂರ್ವ ತಾಳ್ಮೆ, ಅಗಣಿತ ತ್ಯಾಗಗಳು, ಪರಿತ್ಯಾಗಗಳು ಮತ್ತು ತಪಸ್ಸಿನ ನಂತರ ಬಂದಿದ್ದಾನೆ. ಈ ಶುಭ ಕ್ಷಣದಲ್ಲಿ ನಿಮ್ಮೆಲ್ಲರಿಗೂ, ದೇಶದ ಎಲ್ಲ ನಾಗರಿಕರಿಗೆ ಅಭಿನಂದನೆಗಳು.

ಗರ್ಭಗುಡಿಯಲ್ಲಿ ದೈವಿಕ ಪ್ರಜ್ಞೆಗೆ ಸಾಕ್ಷಿಯಾದ ನಂತರ ನಾನು ನಿಮ್ಮ ಮುಂದೆ ಇದ್ದೇನೆ. ಹೇಳಲು ತುಂಬಾ ಇದೆ, ಆದರೆ ನನ್ನ ಗಂಟಲು ಕಟ್ಟಿದೆ. ನನ್ನ ದೇಹ ಇನ್ನೂ ನಡುಗುತ್ತಿದೆ ಮತ್ತು ನನ್ನ ಮನಸ್ಸು ಇನ್ನೂ ಆ ಕ್ಷಣದಲ್ಲಿ ಮುಳುಗಿದೆ. ನಮ್ಮ ರಾಮ್ ಲಲ್ಲಾ ಇನ್ನು ಮುಂದೆ ಟೆಂಟ್ ನಲ್ಲಿ ವಾಸಿಸುವುದಿಲ್ಲ. ನಮ್ಮ ರಾಮಲಲ್ಲಾ ಈಗ ಈ ದೈವಿಕ ದೇವಾಲಯದಲ್ಲಿ ವಾಸಿಸಲಿದ್ದಾರೆ. ಈಗ ಏನಾಗಿದೆಯೋ ಅದರ ಅನುಭವವನ್ನು ದೇಶ ಮತ್ತು ಪ್ರಪಂಚದಾದ್ಯಂತದ ರಾಮ ಭಕ್ತರು ಅನುಭವಿಸುತ್ತಾರೆ ಎಂದು ನನಗೆ ದೃಢವಾದ ನಂಬಿಕೆ ಮತ್ತು ಮೇರೆಯಿಲ್ಲದ ವಿಶ್ವಾಸ ಇದೆ. ಈ ಕ್ಷಣವು ಅತೀಂದ್ರಿಯವಾಗಿದೆ. ಇದು ಅತ್ಯಂತ ಪವಿತ್ರ ಕ್ಷಣಗಳು. ಈ ವಾತಾವರಣ, ಈ ಪರಿಸರ, ಈ ಶಕ್ತಿ, ಈ ಸಮಯ ... ಇದು ನಮ್ಮ ಮೇಲಿರುವ ಭಗವಾನ್ ಶ್ರೀ ರಾಮನ ಆಶೀರ್ವಾದ . 2024 ರ ಜನವರಿ 22 ದ ಸೂರ್ಯೋದಯವು ಗಮನಾರ್ಹ ಪ್ರಭೆಯನ್ನು ತಂದಿದೆ. 2024 ರ ಜನವರಿ 22  ಕ್ಯಾಲೆಂಡರ್ ನಲ್ಲಿ ಕೇವಲ ಒಂದು ದಿನಾಂಕವಲ್ಲ. ಇದು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ರಾಮ ಮಂದಿರದ ಭೂಮಿ ಪೂಜೆ ಸಮಾರಂಭದ ನಂತರ, ದೇಶಾದ್ಯಂತ ಸಂಭ್ರಮ ಮತ್ತು ಸಡಗರ ಪ್ರತಿದಿನ ಹೆಚ್ಚುತ್ತಿದೆ. ನಿರ್ಮಾಣವನ್ನು ನೋಡಿದಾಗ, ನಾಗರಿಕರಲ್ಲಿ ಹೊಸ ಆತ್ಮವಿಶ್ವಾಸದ ಪ್ರಜ್ಞೆ ಹುಟ್ಟುತ್ತಿತ್ತು. ಇಂದು, ನಾವು ಶತಮಾನಗಳಷ್ಟು ಹಳೆಯ ತಾಳ್ಮೆಯ ಪರಂಪರೆಯನ್ನು ಪಡೆದಿದ್ದೇವೆ; ಇಂದು, ನಾವು ಭಗವಾನ್ ರಾಮನ ದೇವಾಲಯವನ್ನು ಹೊಂದಿದ್ದೇವೆ. ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದು, ಹಿಂದಿನ ಪ್ರತಿಯೊಂದು ಸವಾಲಿನಿಂದ ಧೈರ್ಯವನ್ನು ತೆಗೆದುಕೊಂಡು, ರಾಷ್ಟ್ರವು ಹೊಸ ಇತಿಹಾಸದ ಉಗಮವನ್ನು ಸೃಷ್ಟಿಸುತ್ತಿದೆ. ಇಂದಿನಿಂದ ಒಂದು ಸಾವಿರ ವರ್ಷಗಳ ನಂತರವೂ, ಜನರು ಈ ದಿನಾಂಕವನ್ನು, ಈ ಕ್ಷಣವನ್ನು ಚರ್ಚಿಸುತ್ತಾರೆ. ನಾವು ಈ ಕ್ಷಣವನ್ನು ಜೀವಿಸುತ್ತಿದ್ದೇವೆ, ಅದು ಸಂಭವಿಸುವುದನ್ನು ನೋಡುತ್ತಿದ್ದೇವೆ ಎಂಬುದು ಭಗವಾನ್ ರಾಮನ ದೊಡ್ಡ ಆಶೀರ್ವಾದವಾಗಿದೆ. ಇಂದು, ದಿನಗಳು, ದಿಕ್ಕುಗಳು ಮತ್ತು ಪ್ರಪಂಚದ ಎಲ್ಲಾ ಮೂಲೆಗಳು ... ಎಲ್ಲವೂ ದೈವತ್ವದಿಂದ ತುಂಬಿದೆ. ಈ ಸಮಯ ಸಾಮಾನ್ಯವೇನಲ್ಲ. ಇವು ಶಾಶ್ವತ ಶಾಯಿಯಿಂದ ಕಾಲದ ಚಕ್ರದ ಮೇಲೆ ಕೆತ್ತಲಾದ ಅಳಿಸಲಾಗದ ನೆನಪಿನ ರೇಖೆಗಳಾಗಿವೆ.

 

ಸ್ನೇಹಿತರೇ,

ರಾಮನಿಗೆ ಸಂಬಂಧಿಸಿದ ಯಾವುದೇ ಕೆಲಸ ನಡೆದರೂ ಪವನಪುತ್ರ  ಹನುಮಾನ್ ಯಾವಾಗಲೂ ಇರುತ್ತಾನೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ನಾನು ರಾಮ ಭಕ್ತ ಹನುಮಾನ್ ಮತ್ತು ಹನುಮಾನ್ ಗರ್ಹಿಗೆ ನಮಿಸುತ್ತೇನೆ. ನಾನು ತಾಯಿ ಜಾನಕಿ, ಲಕ್ಷ್ಮಣ ಜೀ, ಭರತ-ಶತ್ರುಘ್ನ ಮತ್ತು ಪವಿತ್ರ ಅಯೋಧ್ಯೆಪುರಿ ಮತ್ತು ಪವಿತ್ರ ಸರಯೂ ನದಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ಈ ಕ್ಷಣದಲ್ಲಿ ನನಗೆ ದೈವಿಕ ಅನುಭವವಾಗುತ್ತಿದೆ, ಅವರ ಆಶೀರ್ವಾದದಿಂದ ಈ ಮಹಾನ್ ಕಾರ್ಯವನ್ನು ಸಾಧಿಸಲಾಗಿದೆ... ಆ ದೈವಿಕ ಆತ್ಮಗಳು, ಆ ದಿವ್ಯ ಅನುಭೂತಿಗಳು ಸಹ ಈ ಸಮಯದಲ್ಲಿ ನಮ್ಮ ಸುತ್ತಲೂ ಇರುತ್ತವೆ. ಈ ಎಲ್ಲಾ ದೈವಿಕ ಪ್ರಜ್ಞೆಗಳಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಮ್ಮ ಪ್ರಯತ್ನಗಳು, ತ್ಯಾಗಗಳು ಮತ್ತು ತಪಸ್ಸಿನಲ್ಲಿನ ಯಾವುದೇ ನ್ಯೂನತೆಗಳಿಗಾಗಿ ನಾನು ಇಂದು ಭಗವಾನ್ ಶ್ರೀ ರಾಮನಿಂದ ಕ್ಷಮೆ ಕೋರುತ್ತೇನೆ, ಅದು ಅನೇಕ ಶತಮಾನಗಳಿಂದ ಈ ಕಾರ್ಯವನ್ನು ಸಾಧಿಸಲು ನಮ್ಮನ್ನು ತಡೆಯಿತು. ಇಂದು, ಆ ನ್ಯೂನತೆ ಈಡೇರಿದೆ. ಭಗವಾನ್ ರಾಮ ಇಂದು ಖಂಡಿತವಾಗಿಯೂ ನಮ್ಮನ್ನು ಕ್ಷಮಿಸುತ್ತಾನೆ ಎಂದು ನಾನು ನಂಬುತ್ತೇನೆ.

 

ನನ್ನ ಪ್ರೀತಿಯ ದೇಶವಾಸಿಗಳೇ,

ತ್ರೇತಾಯುಗದಲ್ಲಿ ಭಗವಾನ್ ರಾಮನು ಹಿಂದಿರುಗಿದಾಗ, ತುಳಸೀದಾಸರು ಹೀಗೆ ಬರೆದರು -

ಪ್ರಭು ಬಿಲೋಕಿ ಹರ್ಷೆ ಪುರ್ಬಾಸಿ. ಜಾನಿತ್ ವಿಯೋಗ ಬಿಪತಿ ಸಬ್ ನಾಸಿ.

ಇದರರ್ಥ ಅಯೋಧ್ಯೆಯ ಎಲ್ಲಾ ನಿವಾಸಿಗಳು ಮತ್ತು ಇಡೀ ದೇಶವು ಭಗವಂತನ ಆಗಮನದಿಂದ ಸಂತೋಷದಿಂದ ತುಂಬಿತ್ತು. ದೀರ್ಘಕಾಲದ ಅಗಲುವಿಕೆಯಿಂದಾಗಿ ಉದ್ಭವಿಸಿದ ಬಿಕ್ಕಟ್ಟು ಕೊನೆಗೊಂಡಿತು. ಆ ಯುಗದಲ್ಲಿ, ಅಗಲುವಿಕೆಯು ಕೇವಲ 14 ವರ್ಷಗಳವರೆಗೆ ಇತ್ತು, ಮತ್ತು ಆಗಲೂ ಅದು ಅಸಹನೀಯವಾಗಿತ್ತು. ಈ ಯುಗದಲ್ಲಿ, ಅಯೋಧ್ಯೆ ಮತ್ತು ದೇಶದ ನಿವಾಸಿಗಳು ಶತಮಾನಗಳಿಂದ ಅಗಲುವಿಕೆಯನ್ನು ಸಹಿಸಿಕೊಂಡಿದ್ದಾರೆ. ನಮ್ಮ ಅನೇಕ ತಲೆಮಾರುಗಳು ಪ್ರತ್ಯೇಕತೆಯನ್ನು ಸಹಿಸಿಕೊಂಡಿವೆ. ನಮ್ಮ ಸಂವಿಧಾನದ ಮೊದಲ ಪುಟದಲ್ಲಿಯೂ ರಾಮನ ಪ್ರತಿಷ್ಠಾಪನೆ ಇದೆ. ಸಂವಿಧಾನದಲ್ಲಿ ಅಸ್ತಿತ್ವದಲ್ಲಿದ್ದರೂ, ರಾಮನ ಅಸ್ತಿತ್ವದ ಬಗ್ಗೆ ದಶಕಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. ನ್ಯಾಯದ ಘನತೆಯನ್ನು ಎತ್ತಿಹಿಡಿದ ಭಾರತೀಯ ನ್ಯಾಯಾಂಗಕ್ಕೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಭಗವಾನ್ ರಾಮನ ದೇವಾಲಯವನ್ನು ಸಹ ನ್ಯಾಯಯುತ ಮತ್ತು ಕಾನೂನುಬದ್ಧ ರೀತಿಯಲ್ಲಿ ನಿರ್ಮಿಸಲಾಗಿದೆ.

 

ಸ್ನೇಹಿತರೇ,

ಇಂದು, ಹಳ್ಳಿಗಳಲ್ಲಿ ಭಕ್ತಿಗೀತೆ ಮತ್ತು ಪಠಣದ ಸಭೆಗಳಿವೆ. ದೇವಾಲಯಗಳಲ್ಲಿ ಆಚರಣೆಗಳು ನಡೆಯುತ್ತಿವೆ ಮತ್ತು ಸ್ವಚ್ಚತಾ ಅಭಿಯಾನಗಳು ನಡೆಯುತ್ತಿವೆ. ಇಡೀ ದೇಶ ಇಂದು ದೀಪಾವಳಿಯಂತೆ ಆಚರಿಸುತ್ತಿದೆ. ಪ್ರತಿ ಮನೆಯಲ್ಲೂ ಸಂಜೆ ರಾಮನ 'ರಾಮ ಜ್ಯೋತಿ' (ದೈವಿಕ ದೀಪ) ಬೆಳಗಲು ಸಿದ್ಧತೆಗಳು ನಡೆಯುತ್ತಿವೆ. ನಿನ್ನೆ, ನಾನು ಭಗವಾನ್ ರಾಮನ ಆಶೀರ್ವಾದದೊಂದಿಗೆ ರಾಮ ಸೇತುವಿನ ಪ್ರಾರಂಭದ ಬಿಂದುವಾದ ಧನುಷ್ಕೋಡಿಯ ಅರಿಚಲ್ ಮುನೈನ ಪವಿತ್ರ ಸ್ಥಳದಲ್ಲಿದ್ದೆ. ಭಗವಾನ್ ರಾಮನು ಸಾಗರವನ್ನು ದಾಟಲು ಹೊರಟ ಕ್ಷಣವು ಸಮಯದ ಗತಿಯನ್ನು ಬದಲಾಯಿಸಿದ ಕ್ಷಣವಾಗಿತ್ತು. ಆ ಭಾವನಾತ್ಮಕ ಕ್ಷಣವನ್ನು ಅನುಭವಿಸಲು ಇದು ನನ್ನ ವಿನಮ್ರ ಪ್ರಯತ್ನವಾಗಿತ್ತು. ನಾನು ಅಲ್ಲಿ ಪುಷ್ಪ ನಮನ ಸಲ್ಲಿಸಿದೆ. ಆ ಕ್ಷಣದಲ್ಲಿ ಕಾಲದ ಚಕ್ರವು ಬದಲಾದಂತೆ, ಅದು ಈಗ ಮತ್ತೆ ಸಕಾರಾತ್ಮಕ ದಿಕ್ಕಿನಲ್ಲಿ ಬದಲಾಗುತ್ತದೆ ಎಂಬ ನಂಬಿಕೆಯನ್ನು ನಾನು ನನ್ನೊಳಗೆ ಅನುಭವಿಸಿದೆ. ನನ್ನ 11 ದಿನಗಳ ಆಚರಣೆಯಲ್ಲಿ, ನಾನು ಭಗವಾನ್ ರಾಮನ ಪಾದಗಳನ್ನು ಕ್ರಮಿಸಿದ ಸ್ಥಳಗಳನ್ನು ಸ್ಪರ್ಶಿಸುವ ಪ್ರಯತ್ನವನ್ನು ಮಾಡಿದ್ದೇನೆ. ಅದು ನಾಸಿಕ್ ನ ಪಂಚವಟಿ ಧಾಮ, ಕೇರಳದ ಪವಿತ್ರ ತ್ರಿಪ್ರಯಾರ್ ದೇವಾಲಯ, ಆಂಧ್ರಪ್ರದೇಶದ ಲೇಪಾಕ್ಷಿ, ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯ, ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯ ಅಥವಾ ಧನುಷ್ಕೋಡಿ... ಈ ಶುದ್ಧ ಮತ್ತು ಪವಿತ್ರ ಭಾವನೆಯೊಂದಿಗೆ ಸಾಗರದಿಂದ ಸರಯೂ ನದಿಗೆ ತೀರ್ಥಯಾತ್ರೆ ಕೈಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಸಾಗರದಿಂದ ಸರಯೂ ನದಿಯವರೆಗೆ ಎಲ್ಲೆಡೆ ರಾಮನ ಹೆಸರಿನ ಹಬ್ಬದ ಉತ್ಸಾಹ ಹರಡಿದೆ. ಭಗವಾನ್ ರಾಮನು ಭಾರತದ ಆತ್ಮದ ಪ್ರತಿಯೊಂದು ಕಣದೊಂದಿಗೆ ಸಂಪರ್ಕ ಹೊಂದಿದ್ದಾನೆ. ರಾಮನು ಭಾರತದ ಜನರ ಅಂತರಂಗದಲ್ಲಿ ನೆಲೆಸಿದ್ದಾನೆ. ನಾವು

 

ಭಾರತದಲ್ಲಿ ಯಾರೊಬ್ಬನ ಆಂತರಿಕ ಆತ್ಮವನ್ನು ಸ್ಪರ್ಶಿಸಿದರೆ, ನಾವು ಈ ಏಕತೆಯನ್ನು ಅನುಭವಿಸುತ್ತೇವೆ ಮತ್ತು ಈ ಭಾವನೆ ಎಲ್ಲೆಡೆ ಕಂಡುಬರುತ್ತದೆ. ದೇಶಕ್ಕೆ ಇದಕ್ಕಿಂತ ಶ್ರೇಷ್ಠವಾದ ಮತ್ತು ಹೆಚ್ಚು ಸಂಘಟನಾತ್ಮಕ ತತ್ವ ಬೇರೇನಿದೆ?

ನನ್ನ ಪ್ರೀತಿಯ ದೇಶವಾಸಿಗಳೇ,

ಕಳೆದ 11 ದಿನಗಳಲ್ಲಿ ದೇಶದ ವಿವಿಧ ಮೂಲೆಗಳಲ್ಲಿ ವಿವಿಧ ಭಾಷೆಗಳಲ್ಲಿ ರಾಮಾಯಣವನ್ನು ಕೇಳುವ ಅವಕಾಶ ನನಗೆ ಸಿಕ್ಕಿದೆ. ಭಗವಾನ್ ರಾಮನನ್ನು ವರ್ಣಿಸುತ್ತಾ, ಋಷಿಮುನಿಗಳು ಹೀಗೆ ಹೇಳಿದ್ದಾರೆ -रमन्ते यस्मिन् इति रामः॥ ಇದರರ್ಥ, ಒಬ್ಬನು ಯಾರಲ್ಲಿ ತತ್ಪರನಾಗುತ್ತಾನೋ ಅವನು ರಾಮ. ಹಬ್ಬಗಳಿಂದ ಹಿಡಿದು ಸಂಪ್ರದಾಯಗಳವರೆಗೆ ನೆನಪುಗಳಲ್ಲಿ ರಾಮ ಸರ್ವವ್ಯಾಪಿಯಾಗಿದ್ದಾನೆ. ಪ್ರತಿಯೊಂದು ಯುಗದಲ್ಲೂ ಜನರು ರಾಮನನ್ನು ಬದುಕಿದ್ದಾರೆ. ಪ್ರತಿ ಯುಗದಲ್ಲಿ, ಜನರು ರಾಮನನ್ನು ತಮ್ಮದೇ ಆದ ಮಾತುಗಳಲ್ಲಿ, ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಮತ್ತು ರಾಮನ ಈ ಸಾರವು ಜೀವನದ ಪ್ರವಾಹದಂತೆ ಹರಿಯುತ್ತಲೇ ಇದೆ. ಪ್ರಾಚೀನ ಕಾಲದಿಂದಲೂ, ಭಾರತದ ಮೂಲೆ ಮೂಲೆಯಲ್ಲಿರುವ ಜನರು ರಾಮನ ಸಾರವನ್ನು ಸವಿಯುತ್ತಿದ್ದಾರೆ. ರಾಮಕಥೆ ಅನಂತ ಮತ್ತು ರಾಮ ಶಾಶ್ವತ. ರಾಮನ ಆದರ್ಶಗಳು, ಮೌಲ್ಯಗಳು ಮತ್ತು ಬೋಧನೆಗಳು ಎಲ್ಲೆಡೆ ಒಂದೇ ಆಗಿವೆ.

 

ಪ್ರೀತಿಯ ದೇಶವಾಸಿಗಳೇ,

ಈ ಐತಿಹಾಸಿಕ ಕ್ಷಣದಲ್ಲಿ, ಈ ಶುಭ ದಿನಕ್ಕೆ ಸಾಕ್ಷಿಯಾಗಲು ಕಾರಣವಾದ ಕಾರ್ಯಗಳು ಮತ್ತು ಸಮರ್ಪಿತರಾದ ವ್ಯಕ್ತಿಗಳನ್ನು ರಾಷ್ಟ್ರವು ನೆನಪಿಸಿಕೊಳ್ಳುತ್ತಿದೆ. ರಾಮನ ಉದ್ದೇಶದ ಸೇವೆಯಲ್ಲಿ ಅನೇಕ ಜನರು ತ್ಯಾಗ ಮತ್ತು ತಪಸ್ಸಿನ ಪರಾಕಾಷ್ಠೆಯನ್ನು ತೋರಿಸಿದ್ದಾರೆ. ನಾವೆಲ್ಲರೂ ಅಸಂಖ್ಯಾತ ರಾಮ ಭಕ್ತರು, ಅಸಂಖ್ಯಾತ ಕರ ಸೇವಕರು ಮತ್ತು ಅಸಂಖ್ಯಾತ ಸಂತರು ಮತ್ತು ಆಧ್ಯಾತ್ಮಿಕ ನಾಯಕರಿಗೆ ಋಣಿಯಾಗಿದ್ದೇವೆ.

ಸ್ನೇಹಿತರೇ,

ಇಂದಿನ ಸಂದರ್ಭವು ಕೇವಲ ಆಚರಣೆ ಮಾತ್ರವಲ್ಲ, ಭಾರತೀಯ ಸಮಾಜದ ಪ್ರಬುದ್ಧತೆಯ ಸಾಕ್ಷಾತ್ಕಾರದ ಕ್ಷಣವೂ ಆಗಿದೆ. ಈ ಸಂದರ್ಭವು ವಿಜಯದ ಬಗ್ಗೆ ಮಾತ್ರವಲ್ಲ, ನಮಗೆ ನಮ್ರತೆಯ ಬಗ್ಗೆಯೂ ಆಗಿದೆ. ಅನೇಕ ರಾಷ್ಟ್ರಗಳು ತಮ್ಮದೇ ಆದ ಇತಿಹಾಸದಲ್ಲಿ ಸಿಲುಕಿಕೊಂಡಿವೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಈ ರಾಷ್ಟ್ರಗಳು ತಮ್ಮ ಇತಿಹಾಸದ ಜಟಿಲವಾದ ಗಂಟುಗಳನ್ನು ಬಿಚ್ಚಲು ಪ್ರಯತ್ನಿಸಿದಾಗಲೆಲ್ಲಾ, ಅವರು ಭಾರಿ ತೊಂದರೆಗಳನ್ನು ಎದುರಿಸಿದರು, ಮತ್ತು ಆಗಾಗ್ಗೆ ಪರಿಸ್ಥಿತಿ ಮೊದಲಿಗಿಂತ ಹೆಚ್ಚು ಜಟಿಲವಾಯಿತು. ಆದಾಗ್ಯೂ, ನಮ್ಮ ದೇಶವು ಇತಿಹಾಸದ ಈ ಅಧ್ಯಾಯವನ್ನು ಗಂಭೀರತೆ ಮತ್ತು ಭಾವನಾತ್ಮಕ ಉತ್ಸಾಹದಿಂದ ತೆರೆದ ರೀತಿ ನಮ್ಮ ಭವಿಷ್ಯವು ನಮ್ಮ ಭೂತಕಾಲಕ್ಕಿಂತ ಹೆಚ್ಚು ಸುಂದರವಾಗುತ್ತಿದೆ ಎಂದು ಸೂಚಿಸುತ್ತದೆ. ರಾಮ ಮಂದಿರವನ್ನು ನಿರ್ಮಿಸಿದರೆ ಅದು ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ಕೆಲವರು ಹೇಳಿಕೊಂಡ ಸಮಯವಿತ್ತು. ಅಂತಹ ವ್ಯಕ್ತಿಗಳು ಭಾರತದ ಸಾಮಾಜಿಕ ಭಾವನೆಗಳ ಪಾವಿತ್ರ್ಯವನ್ನು ಅರ್ಥಮಾಡಿಕೊಳ್ಳಲು ವಿಫಲರಾದರು. ರಾಮ್ ಲಲ್ಲಾಗಾಗಿ ಈ ದೇವಾಲಯದ ನಿರ್ಮಾಣವು ಭಾರತೀಯ ಸಮಾಜದ ಶಾಂತಿ, ತಾಳ್ಮೆ, ಪರಸ್ಪರ ಸಾಮರಸ್ಯ ಮತ್ತು ಸಮನ್ವಯವನ್ನು ಸೂಚಿಸುತ್ತದೆ. ಈ ನಿರ್ಮಾಣವು ಯಾವುದೇ ಬೆಂಕಿಯನ್ನು ಉಂಟುಮಾಡುತ್ತಿಲ್ಲ ಆದರೆ ವಾಸ್ತವವಾಗಿ, ಶಕ್ತಿಗೆ ಜನ್ಮ ನೀಡುತ್ತಿದೆ ಎಂದು ನಾವು ನೋಡುತ್ತಿದ್ದೇವೆ. ರಾಮ ಮಂದಿರದ ನಿರ್ಮಾಣವು ಉಜ್ವಲ ಭವಿಷ್ಯದ ಹಾದಿಯಲ್ಲಿ ಪ್ರಗತಿ ಸಾಧಿಸಲು ಸಮಾಜದ ಪ್ರತಿಯೊಂದು ವರ್ಗಕ್ಕೂ ಸ್ಫೂರ್ತಿಯ ಸಂಕೇತವಾಗಿದೆ. ನಾನು ಇಂದು ಆ ಜನರನ್ನು ಆಹ್ವಾನಿಸುತ್ತೇನೆ... ದಯವಿಟ್ಟು ಅದನ್ನು ಅನುಭವಿಸಿ, ನಿಮ್ಮ ದೃಷ್ಟಿಕೋನವನ್ನು ಮರುಪರಿಶೀಲಿಸಿ. ರಾಮ ಬೆಂಕಿಯಲ್ಲ; ರಾಮ ಎಂದರೆ ಶಕ್ತಿ. ರಾಮ ಎಂಬುದು ವಿವಾದವಲ್ಲ; ರಾಮ ಒಂದು ಪರಿಹಾರ. ರಾಮ ಕೇವಲ ನಮ್ಮವನಲ್ಲ; ರಾಮ ಎಲ್ಲರಿಗೂ ಸೇರಿದವನು. ರಾಮ ಕೇವಲ ಉಪಸ್ಥಿತನಲ್ಲ; ರಾಮ ಶಾಶ್ವತ.

 

ಸ್ನೇಹಿತರೇ,

ಇಂದು ರಾಮ ಮಂದಿರದ "ಪ್ರಾಣ ಪ್ರತಿಷ್ಠಾಪನೆ (ಪ್ರತಿಷ್ಠಾಪನಾ ಸಮಾರಂಭ) ದಂದು ಜಗತ್ತು ಒಗ್ಗೂಡಿದ ರೀತಿ, ನಾವು ಭಗವಾನ್ ರಾಮನ ಸಾರ್ವತ್ರಿಕತೆಗೆ ಸಾಕ್ಷಿಯಾಗುತ್ತಿದ್ದೇವೆ. ಈ ಆಚರಣೆಯು ಭಾರತದಲ್ಲಿ ನಡೆಯುತ್ತಿರುವಂತೆಯೇ, ಇತರ ಅನೇಕ ದೇಶಗಳಲ್ಲಿ ಇದೇ ರೀತಿಯ ಆಚರಣೆಗಳು ನಡೆಯುತ್ತಿವೆ. ಇಂದು, ಅಯೋಧ್ಯೆಯ ಈ ಹಬ್ಬವು ರಾಮಾಯಣದ ಜಾಗತಿಕ ಸಂಪ್ರದಾಯಗಳ ಆಚರಣೆಯಾಗಿದೆ. ರಾಮ್ ಲಲ್ಲಾ ಅವರ ಪ್ರತಿಷ್ಠಾಪನೆಯು 'ವಸುದೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ) ಪರಿಕಲ್ಪನೆಯ ಮಾನ್ಯತೆಯಾಗಿದೆ.

ಸ್ನೇಹಿತರೇ,

ಇದು ಇಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಮಾತ್ರವಲ್ಲ, ಭಗವಾನ್ ರಾಮನ ರೂಪದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಅಚಲ ನಂಬಿಕೆಯ ಪ್ರತಿಷ್ಠಾಪನೆಯಾಗಿದೆ. ಇದು ಮಾನವೀಯ ಮೌಲ್ಯಗಳು ಮತ್ತು ಅಂತಿಮ ಆದರ್ಶಗಳ ಪ್ರತಿಷ್ಠಾಪನೆಯಾಗಿದೆ. ಈ ಮೌಲ್ಯಗಳು ಮತ್ತು ಆದರ್ಶಗಳ ಅವಶ್ಯಕತೆ ಇಂದು ಸಾರ್ವತ್ರಿಕವಾಗಿದೆ. ರಾಮನ ಸಂಕಲ್ಪವು ಶತಮಾನಗಳಿಂದ ಪ್ರತಿಧ್ವನಿಸುತ್ತಿದೆ, ಮತ್ತು ಇಂದು, ಆ ಸಂಕಲ್ಪವು ರಾಮ ಮಂದಿರದ ರೂಪದಲ್ಲಿ ವ್ಯಕ್ತವಾಗಿದೆ. ಈ ದೇವಾಲಯವು ಕೇವಲ ದೇವಾಲಯವಲ್ಲ; ಇದು ಭಾರತದ ದೃಷ್ಟಿಕೋನ, ತತ್ವಶಾಸ್ತ್ರ ಮತ್ತು ಒಳನೋಟದ ಅಭಿವ್ಯಕ್ತಿಯಾಗಿದೆ. ಇದು ಭಗವಾನ್ ರಾಮನ ರೂಪದಲ್ಲಿ ರಾಷ್ಟ್ರೀಯ ಪ್ರಜ್ಞೆಯ ದೇವಾಲಯವಾಗಿದೆ. ರಾಮ ಎಂದರೆ ಭಾರತದ ನಂಬಿಕೆ; ರಾಮ ಭಾರತದ ಅಡಿಪಾಯ. ರಾಮ ಎಂಬುದು ಭಾರತದ ಚಿಂತನೆ; ರಾಮ ಭಾರತದ ಸಂವಿಧಾನ. ರಾಮ ಎಂದರೆ ಭಾರತದ ಪ್ರಜ್ಞೆ; ರಾಮನು ಭರತನ ಧ್ಯಾನ. ರಾಮ ಭಾರತದ ಹೆಮ್ಮೆ; ರಾಮ ಭಾರತದ ಮಹಿಮೆ. ರಾಮ ಒಂದು ನಿರಂತರ ಹರಿವು; ರಾಮ ಒಂದು ಪ್ರಭಾವ. ರಾಮ ಒಂದು ಕಲ್ಪನೆ; ರಾಮ ಕೂಡ ಒಂದು ನೀತಿ. ರಾಮ ಶಾಶ್ವತ, ರಾಮ ಶಾಶ್ವತ. ರಾಮ ಸರ್ವವ್ಯಾಪಿ, ರಾಮ ವಿಶ್ವವ್ಯಾಪಿ. ರಾಮ ಪ್ರಪಂಚದ ಆತ್ಮ. ಆದ್ದರಿಂದ, ರಾಮನ ಪ್ರತಿಷ್ಠಾಪನೆ ನಡೆದಾಗ, ಅದರ ಪರಿಣಾಮವು ಕೇವಲ ವರ್ಷಗಳು ಅಥವಾ ಶತಮಾನಗಳಿಗೆ ಅಲ್ಲ; ಇದರ ಪರಿಣಾಮವು ಸಾವಿರಾರು ವರ್ಷಗಳವರೆಗೆ ಇರುತ್ತದೆ. 

 

ಮಹರ್ಷಿ ವಾಲ್ಮೀಕಿ ಹೇಳಿದರು,

ರಾಯಂ ದಾಸ ಸಹಸ್ರಣಿ ಪ್ರಾಪ್ಯ ವರ್ಷಾನಿ ರಾಘವಂ.

ಇದರರ್ಥ, ರಾಮನ ರಾಜ್ಯವು ಸಾವಿರಾರು ವರ್ಷಗಳ ಕಾಲ ಸ್ಥಾಪಿತವಾಯಿತು, ಅಂದರೆ, ರಾಮರಾಜ್ಯವನ್ನು ಸಾವಿರಾರು ವರ್ಷಗಳ ಕಾಲ ಸ್ಥಾಪಿಸಲಾಯಿತು. ತ್ರೇತಾಯುಗದಲ್ಲಿ ರಾಮನು ಬಂದಾಗ, ರಾಮರಾಜ್ಯದ ಸ್ಥಾಪನೆಯು ಸಾವಿರಾರು ವರ್ಷಗಳ ಕಾಲ ನಡೆಯಿತು. ಸಾವಿರಾರು ವರ್ಷಗಳ ಕಾಲ, ರಾಮನು ಜಗತ್ತಿಗೆ ಮಾರ್ಗದರ್ಶನ ನೀಡುತ್ತಲೇ ಇದ್ದನು. ಆದ್ದರಿಂದ ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ಅಯೋಧ್ಯೆಯ ಪವಿತ್ರ ಭೂಮಿ ನಮ್ಮೆಲ್ಲರಿಗೂ, ಭಗವಾನ್ ರಾಮನ ಪ್ರತಿಯೊಬ್ಬ ಭಕ್ತನಿಗೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಒಂದು ಪ್ರಶ್ನೆಯನ್ನು ಮುಂದಿಡುತ್ತಿದೆ. ಭಗವಾನ್ ರಾಮನ ಭವ್ಯ ದೇವಾಲಯವನ್ನು ನಿರ್ಮಿಸಲಾಗಿದೆ, ಹಾಗಾದರೆ ಮುಂದಿನದು ಏನು? ಶತಮಾನಗಳ ಕಾಯುವಿಕೆ ಕೊನೆಗೊಂಡಿದೆ. ಈಗ, ಮುಂದೇನು? ಈ ಸಂದರ್ಭದಲ್ಲಿ, ನಮ್ಮನ್ನು ಆಶೀರ್ವದಿಸಲು ಇರುವ ದೈವಿಕ ಆತ್ಮಗಳು ನಮಗೆ ಸಾಕ್ಷಿಯಾಗುತ್ತಿವೆ; ನಾವು ಅವರಿಗೆ ಹೇಗೆ ವಿದಾಯ ಹೇಳುತ್ತೇವೆ? ಇಲ್ಲ, ಖಂಡಿತವಾಗಿಯೂ ಇಲ್ಲ. ಇಂದು ನಾನು ಸದ್ಗುಣಶೀಲ ಹೃದಯದಿಂದ ಸಮಯದ ಚಕ್ರ ತಿರುಗುತ್ತಿದೆ ಎಂದು ಭಾವಿಸುತ್ತೇನೆ. ಕಾಲಾತೀತ ಮಾರ್ಗದ ವಾಸ್ತುಶಿಲ್ಪಿಯಾಗಿ ನಮ್ಮ ಪೀಳಿಗೆಯನ್ನು ಆಯ್ಕೆ ಮಾಡಿರುವುದು ಸಂತೋಷದ ಕಾಕತಾಳೀಯ. ಸಾವಿರ ವರ್ಷಗಳ ನಂತರದ ತಲೆಮಾರುಗಳು ಇಂದು ನಮ್ಮ ರಾಷ್ಟ್ರ ನಿರ್ಮಾಣ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತವೆ. ಆದ್ದರಿಂದ, ನಾನು ಹೇಳುತ್ತೇನೆ - ಇದು ಸಮಯ, ಸರಿಯಾದ ಸಮಯ. ಇಂದಿನಿಂದ, ಈ ಪವಿತ್ರ ಕ್ಷಣದಿಂದ, ನಾವು ಭಾರತದ ಮುಂದಿನ ಸಾವಿರ ವರ್ಷಗಳಿಗೆ ಅಡಿಪಾಯ ಹಾಕಬೇಕು. ದೇವಾಲಯ ನಿರ್ಮಾಣದ ಆಚೆಗೆ, ಒಂದು ರಾಷ್ಟ್ರವಾಗಿ ನಾವು ಈ ಕ್ಷಣದಿಂದಲೇ ಸಮರ್ಥ ಮತ್ತು ವೈಭವಯುತ ಭಾರತವನ್ನು ನಿರ್ಮಿಸಲು ಪ್ರತಿಜ್ಞೆ ಮಾಡಬೇಕು. ರಾಮನ ಚಿಂತನೆಗಳು ಮನಸ್ಸಿನಲ್ಲಿ ಮತ್ತು ಜನರ ಮನಸ್ಸಿನಲ್ಲಿರಬೇಕು, ಇದು ರಾಷ್ಟ್ರ ನಿರ್ಮಾಣದ ಹೆಜ್ಜೆ.

 

ಸ್ನೇಹಿತರೇ,

ನಾವು ನಮ್ಮ ಪ್ರಜ್ಞೆಯನ್ನು ವಿಸ್ತರಿಸಬೇಕಾಗಿದೆ ಎಂಬುದು ಪ್ರಸ್ತುತ ಯುಗದ ಬೇಡಿಕೆಯಾಗಿದೆ. ನಮ್ಮ ಅರಿವು ದೈವಿಕತೆಯಿಂದ ರಾಷ್ಟ್ರಕ್ಕೆ, ರಾಮನಿಂದ ಇಡೀ ರಾಷ್ಟ್ರಕ್ಕೆ ವಿಸ್ತರಿಸಬೇಕು. ಹನುಮಂತನ ಭಕ್ತಿ, ಹನುಮಂತನ ಸೇವೆ, ಹನುಮಂತನ ಸಮರ್ಪಣೆ-ಈ ಗುಣಗಳನ್ನು ನಾವು ಹೊರಗೆ ಹುಡುಕಬಾರದು. ಪ್ರತಿಯೊಬ್ಬ ಭಾರತೀಯನಲ್ಲಿರುವ ಭಕ್ತಿ, ಸೇವೆ ಮತ್ತು ಸಮರ್ಪಣೆಯ ಭಾವನೆಗಳು ಸಮರ್ಥ ಮತ್ತು ಭವ್ಯ ಭಾರತದ ಅಡಿಪಾಯವನ್ನು ರೂಪಿಸುತ್ತವೆ. ಮತ್ತು ಇದು ಪ್ರಜ್ಞೆಯ ವಿಸ್ತರಣೆಯಾಗಿದೆ - ದೈವಿಕತೆಯಿಂದ ರಾಷ್ಟ್ರಕ್ಕೆ ಮತ್ತು ರಾಮನಿಂದ ಇಡೀ ರಾಷ್ಟ್ರಕ್ಕೆ! ದೂರದ ಕಾಡಿನ ದೂರದ ಗುಡಿಸಲಿನಲ್ಲಿ ತನ್ನ ಜೀವನವನ್ನು ಕಳೆದ ನನ್ನ ಬುಡಕಟ್ಟು ತಾಯಿ ಶಬರಿಯ ಬಗ್ಗೆ ಯೋಚಿಸಿದಾಗ, ನಂಬಲಾಗದ ನಂಬಿಕೆ ಎಚ್ಚರಗೊಳ್ಳುತ್ತದೆ. "ರಾಮ ಬರುತ್ತಾನೆ" ಎಂದು ತಾಯಿ ಶಬರಿ ಯುಗಾಂತರಗಳಿಂದ ಹೇಳುತ್ತಿದ್ದಳು. ಈ ನಂಬಿಕೆ, ಪ್ರತಿಯೊಬ್ಬ ಭಾರತೀಯನಲ್ಲಿರುವ ಭಕ್ತಿ, ಸೇವೆ ಮತ್ತು ಸಮರ್ಪಣೆಯ ಭಾವನೆಗಳು ಸಮರ್ಥ, ಭವ್ಯ ಮತ್ತು ದೈವಿಕ ಭಾರತದ ಅಡಿಪಾಯವನ್ನು ರೂಪಿಸುತ್ತವೆ. ಮತ್ತು ಇದು ಪ್ರಜ್ಞೆಯ ವಿಸ್ತರಣೆಯಾಗಿದೆ - ದೈವಿಕತೆಯಿಂದ ರಾಷ್ಟ್ರಕ್ಕೆ ಮತ್ತು ರಾಮನಿಂದ ಇಡೀ ರಾಷ್ಟ್ರಕ್ಕೆ! ನಿಶಾದ್ರಾಜ್ ಅವರ ಸ್ನೇಹವು ಎಲ್ಲಾ ಮಿತಿಗಳನ್ನು ಮೀರಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ರಾಮನ ಕಡೆಗೆ ನಿಷಾದ್ರಾಜನ ಆಕರ್ಷಣೆ ಮತ್ತು ನಿಷಾದ್ರಾಜ್ ಗೆ ಸೇರಿದ ರಾಮನ ಪ್ರಜ್ಞೆ, ಅದು ಎಷ್ಟು ಮೂಲಭೂತವಾಗಿದೆ! ಎಲ್ಲರೂ ನಮ್ಮವರು, ಎಲ್ಲರೂ ಸಮಾನರು. ಪ್ರತಿಯೊಬ್ಬ ಭಾರತೀಯನಲ್ಲೂ ಸ್ವಂತಿಕೆ ಮತ್ತು ಸಹೋದರತ್ವದ ಭಾವನೆಗಳು ಸಮರ್ಥ, ಭವ್ಯ ಮತ್ತು ದೈವಿಕ ಭಾರತದ ಅಡಿಪಾಯವನ್ನು ರೂಪಿಸುತ್ತವೆ. ಮತ್ತು ಇದು ಪ್ರಜ್ಞೆಯ ವಿಸ್ತರಣೆಯಾಗಿದೆ - ದೈವಿಕತೆಯಿಂದ ರಾಷ್ಟ್ರಕ್ಕೆ ಮತ್ತು ರಾಮನಿಂದ ಇಡೀ ರಾಷ್ಟ್ರಕ್ಕೆ!

 

ಸ್ನೇಹಿತರೇ,

ಇಂದು, ದೇಶದಲ್ಲಿ ಹತಾಶೆಗೆ ಸ್ಥಳವಿಲ್ಲ, ಸ್ವಲ್ಪವೂ ಇಲ್ಲ. ನಾನು ತುಂಬಾ ಸಾಮಾನ್ಯ, ನಾನು ತುಂಬಾ ಚಿಕ್ಕವನು; ಯಾರಾದರೂ ಹಾಗೆ ಭಾವಿಸಿದರೆ, ಅವರು ಅಳಿಲಿನ ಕೊಡುಗೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಳಿಲಿನ ಕೊಡುಗೆಯನ್ನು ನೆನಪಿಸಿಕೊಳ್ಳುವುದು ನಮ್ಮ ಹಿಂಜರಿಕೆಯನ್ನು ಹೋಗಲಾಡಿಸುತ್ತದೆ ಮತ್ತು ದೊಡ್ಡ ಅಥವಾ ಸಣ್ಣ ಪ್ರತಿಯೊಂದು ಪ್ರಯತ್ನಕ್ಕೂ ಅದರ ಶಕ್ತಿ ಮತ್ತು ಕೊಡುಗೆ ಇದೆ ಎಂದು ನಮಗೆ ಕಲಿಸುತ್ತದೆ. 'ಸಬ್ ಕಾ ಪ್ರಯಾಸ್' (ಪ್ರತಿಯೊಬ್ಬರ ಪ್ರಯತ್ನಗಳು) ಮನೋಭಾವವು ಸಮರ್ಥ, ಭವ್ಯ ಮತ್ತು ದೈವಿಕ ಭಾರತದ ಅಡಿಪಾಯವಾಗಲಿದೆ. ಮತ್ತು ಇದು ಪ್ರಜ್ಞೆಯ ವಿಸ್ತರಣೆಯಾಗಿದೆ - ದೈವಿಕತೆಯಿಂದ ರಾಷ್ಟ್ರಕ್ಕೆ ಮತ್ತು ರಾಮನಿಂದ ಇಡೀ ರಾಷ್ಟ್ರಕ್ಕೆ!

 

ಸ್ನೇಹಿತರೇ,

ಲಂಕೆಯ ರಾಜ ರಾವಣನು ಅಪಾರ ಜ್ಞಾನವನ್ನು ಹೊಂದಿದ್ದನು ಮತ್ತು ಅಪಾರ ಶಕ್ತಿಗಳನ್ನು ಹೊಂದಿದ್ದನು. ಆದಾಗ್ಯೂ, ಜಟಾಯುವಿನ ಅಚಲ ಭಕ್ತಿಯನ್ನು ನೋಡಿ; ಅವನು ಪ್ರಬಲ ರಾವಣನನ್ನು ಎದುರಿಸಿದನು. ರಾವಣನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದ್ದರೂ, ಅವರು ಇನ್ನೂ ಅವರಿಗೆ ಸವಾಲು ಹಾಕಿದರು. ಕರ್ತವ್ಯದ ಬಗೆಗಿನ ಈ ಬದ್ಧತೆಯು ಸಮರ್ಥ, ಭವ್ಯ ಮತ್ತು ದೈವಿಕ ಭಾರತದ ಅಡಿಪಾಯವಾಗಿದೆ. ಇದು ಪ್ರಜ್ಞೆಯ ವಿಸ್ತರಣೆಯಾಗಿದೆ- ದೈವಿಕತೆಯಿಂದ ರಾಷ್ಟ್ರಕ್ಕೆ ಮತ್ತು ರಾಮನಿಂದ ಇಡೀ ರಾಷ್ಟ್ರಕ್ಕೆ! ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ರಾಷ್ಟ್ರದ ನಿರ್ಮಾಣಕ್ಕಾಗಿ ಮುಡಿಪಾಗಿಡುವ ಸಂಕಲ್ಪ ಮಾಡೋಣ. ರಾಷ್ಟ್ರಕ್ಕಾಗಿ ಕೆಲಸ ಮಾಡುವುದು ರಾಮನ ಮೇಲಿನ ನಮ್ಮ ಭಕ್ತಿಯಾಗಲಿ ಮತ್ತು ಸಮಯದ ಪ್ರತಿ ಕ್ಷಣ, ನಮ್ಮ ದೇಹದ ಪ್ರತಿಯೊಂದು ಕಣವನ್ನು ರಾಷ್ಟ್ರದ ಸೇವೆಯ ಗುರಿಯೊಂದಿಗೆ ರಾಮನ ಸೇವೆಗೆ ಸಮರ್ಪಿಸೋಣ.

 

ನನ್ನ ದೇಶವಾಸಿಗಳೇ,

ಭಗವಾನ್ ಶ್ರೀ ರಾಮನ ಆರಾಧನೆ ನಮಗೆ ವಿಶೇಷವಾಗಿರಬೇಕು. ಈ ಪೂಜೆಯು ಆತ್ಮಕ್ಕಿಂತ ಮೇಲಕ್ಕೆ ಏರಬೇಕು ಮತ್ತು ಸಾಮೂಹಿಕವಾಗಿರಬೇಕು. ಈ ಪೂಜೆಯು ಅಹಂ ಅನ್ನು ಮೀರಬೇಕು ಮತ್ತು ಒಂದು ಸಮುದಾಯವಾಗಿ ನಮಗೆ ಇರಬೇಕು. ಭಗವಂತನಿಗೆ ಅರ್ಪಿಸುವ ಅರ್ಪಣೆಗಳು 'ವಿಕಸಿತ ಭಾರತ' ದ ಅಭಿವೃದ್ಧಿಗೆ ನಮ್ಮ ಸಮರ್ಪಣೆಯ ಪ್ರತಿಫಲವೂ ಆಗಿರುತ್ತದೆ. ನಾವು ಭಗವಾನ್ ರಾಮನಿಗೆ ನಿರಂತರ ಶೌರ್ಯ, ಪ್ರಯತ್ನ ಮತ್ತು ಸಮರ್ಪಣೆಯ ಅರ್ಪಣೆಗಳನ್ನು ನೀಡಬೇಕಾಗಿದೆ. ಈ ರೀತಿಯಾಗಿ ಭಗವಾನ್ ರಾಮನನ್ನು ನಿರಂತರವಾಗಿ ಪೂಜಿಸುವ ಮೂಲಕ, ನಾವು ಭಾರತವನ್ನು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇದು ಭಾರತದ ಅಭಿವೃದ್ಧಿಯ ಅಮೃತಕಾಲ. ಇಂದು, ಭಾರತವು ಯುವ ಶಕ್ತಿಯ ಜಲಾಶಯದಿಂದ ತುಂಬಿದೆ, ಶಕ್ತಿಯಿಂದ ತುಂಬಿದೆ. ಈ ರೀತಿಯ ಸಕಾರಾತ್ಮಕ ಸಂದರ್ಭಗಳು ಎಷ್ಟು ಸಮಯದ ಉದ್ಭವಿಸುತ್ತವೆ ಎಂದು ಯಾರಿಗೆ ಗೊತ್ತು. ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು; ನಾವು ಸುಮ್ಮನೆ ಕುಳಿತುಕೊಳ್ಳಬಾರದು. ನನ್ನ ದೇಶದ ಯುವಕರಿಗೆ ನಾನು ಹೇಳಲು ಬಯಸುತ್ತೇನೆ - ನಿಮ್ಮ ಮುಂದೆ ಸಾವಿರಾರು ವರ್ಷಗಳ ಸಂಪ್ರದಾಯದ ಸ್ಫೂರ್ತಿ ಇದೆ. ನೀವು ಭಾರತದ ಆ ಪೀಳಿಗೆಯನ್ನು ಪ್ರತಿನಿಧಿಸುತ್ತೀರಿ... ಇದು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದೆ, ಇದು 15 ಲಕ್ಷ ಕಿಲೋಮೀಟರ್ ಪ್ರಯಾಣಿಸುವ ಮೂಲಕ, ಸೂರ್ಯನ ಬಳಿ ಹೋಗುವ ಮೂಲಕ ಮಿಷನ್ ಆದಿತ್ಯವನ್ನು ಯಶಸ್ವಿಗೊಳಿಸುತ್ತಿದೆ, ಇದು ಆಕಾಶದಲ್ಲಿ ತೇಜಸ್ ಧ್ವಜವನ್ನು ಬೀಸುತ್ತಿದೆ... ಮತ್ತು ಸಾಗರದಲ್ಲಿ ವಿಕ್ರಾಂತ್ ನ ಧ್ವಜ. ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡಿ ಮತ್ತು ಭಾರತದ ಹೊಸ ಉದಯದ ಬಗ್ಗೆ ಬರೆಯಿರಿ. ಸಂಪ್ರದಾಯದ ಪಾವಿತ್ರ್ಯತೆ ಮತ್ತು ಆಧುನಿಕತೆಯ ಅಂತ್ಯವಿಲ್ಲದ ಸಾಧ್ಯತೆಗಳನ್ನು ಅಪ್ಪಿಕೊಳ್ಳುವ ಭಾರತವು ಈ ಎರಡೂ ಮಾರ್ಗಗಳಲ್ಲಿ ನಡೆಯುವ ಮೂಲಕ ಸಮೃದ್ಧಿಯ ಗುರಿಗಳನ್ನು ತಲುಪುತ್ತದೆ.

ನನ್ನ ಗೆಳೆಯರೇ 

ಮುಂಬರುವ ಸಮಯ ಈಗ ಯಶಸ್ಸಿನ ಸಮಯ. ಮುಂಬರುವ ಸಮಯವು ಈಗ ಸಾಧನೆಯ ಸಮಯವಾಗಿದೆ. ಈ ಭವ್ಯವಾದ ರಾಮ ಮಂದಿರವು ಭಾರತದ ಉದಯ, ಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ. ಈ ಭವ್ಯವಾದ ರಾಮ ಮಂದಿರವು ಭಾರತದ ಸಮೃದ್ಧಿಗೆ, ಭಾರತದ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ! ಗುರಿಯನ್ನು ಸತ್ಯದಿಂದ ಮೌಲ್ಯೀಕರಿಸಿದರೆ, ಗುರಿಯು ಸಾಮೂಹಿಕತೆ ಮತ್ತು ಸಂಘಟಿತ ಶಕ್ತಿಯಿಂದ ಹುಟ್ಟಿದರೆ, ಆ ಗುರಿಯನ್ನು ಸಾಧಿಸುವುದು ಅಸಾಧ್ಯವಲ್ಲ ಎಂದು ಈ ದೇವಾಲಯವು ನಮಗೆ ಕಲಿಸುತ್ತದೆ. ಇದು ಭಾರತದ ಸಮಯ, ಮತ್ತು ಭಾರತ ಈಗ ಮುಂದೆ ಸಾಗಲಿದೆ. ಶತಮಾನಗಳ ನಿರೀಕ್ಷೆಯ ನಂತರ, ನಾವು ಇಲ್ಲಿಗೆ ತಲುಪಿದ್ದೇವೆ. ನಾವೆಲ್ಲರೂ ಈ ಯುಗಕ್ಕಾಗಿ, ಈ ಅವಧಿಗಾಗಿ ಕಾಯುತ್ತಿದ್ದೇವೆ. ಈಗ, ನಾವು ನಿಲ್ಲಿಸುವುದಿಲ್ಲ. ನಾವು ಅಭಿವೃದ್ಧಿಯ ಎತ್ತರಕ್ಕೆ ಏರುವುದನ್ನು ಮುಂದುವರಿಸುತ್ತೇವೆ. ಈ ಉತ್ಸಾಹದಿಂದ, ರಾಮ್ ಲಲ್ಲಾ ಅವರ ಪಾದಗಳಿಗೆ ನಮಸ್ಕರಿಸುತ್ತಾ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಎಲ್ಲಾ ಸಂತರಿಗೆ ನನ್ನ ವಿನಮ್ರ ಗೌರವಗಳು!

ಸಿಯಾವರ್ ರಾಮಚಂದ್ರ ದೀರ್ಘಕಾಲ ಬಾಳಲಿ!

ಸಿಯಾವರ್ ರಾಮಚಂದ್ರ ದೀರ್ಘಕಾಲ ಬಾಳಲಿ!

ಸಿಯಾವರ್ ರಾಮಚಂದ್ರ ದೀರ್ಘಕಾಲ ಬಾಳಲಿ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM gifts Putin Russian version of Tamil text 'Thirukkural'

Media Coverage

PM gifts Putin Russian version of Tamil text 'Thirukkural'
NM on the go

Nm on the go

Always be the first to hear from the PM. Get the App Now!
...
We must strive to transform the Global South from rule-takers into rule-shapers: PM Modi at BRICS Summit Session – 1
September 12, 2026

Your Highness,
Excellencies,
नमस्कार!

भारत में आप सभी का स्वागत और अभिनंदन करते हुए मुझे अत्यंत खुशी हो रही है।

भारत की ब्रिक्स अध्यक्षता people-centric और humanity first approach पर आधारित है। Resilience, Innovation, Cooperation और Sustainability हमारी प्राथमिकताएं रही हैं। इन प्राथमिकताओं के साथ, हमने BRICS सहयोग को सामान्य जन से जोड़ने पर विशेष बल दिया है।

इसी सोच के साथ साढ़े तीन सौ से अधिक बैठकों का आयोजन किया गया। लगभग तीस शहरों में आपकी टीम्स का स्वागत करने का हमें अवसर मिला। भारत की ब्रिक्स अध्यक्षता को सफल बनाने में सक्रिय योगदान और समर्थन के लिए मैं आप सभी का हार्दिक आभार व्यक्त करता हूँ।

Friends,

इस वर्ष की ब्रिक्स Summit एक ऐतिहासिक पड़ाव है। हम ब्रिक्स की बीसवीं वर्षगांठ मना रहे हैं। मानव जीवन में बीस वर्ष की आयु, maturity और responsibility के नए चरण का आरंभ होती है। यह वह अवस्था होती है, जब सपनों के साथ जिम्मेदारियाँ जुड़ती हैं, सामर्थ्य को नई दिशा मिलती है।

आज ब्रिक्स भी अपने ‘coming of age’ के क्षण में है। पिछले बीस वर्षों में ब्रिक्स ने वैश्विक मंच पर अपनी विशिष्ट पहचान बनाई है। हम एक-दूसरे के दृष्टिकोण का सम्मान करते हैं और consensus से आगे बढ़ते हैं। हम किसी के विरुद्ध नहीं, बल्कि सबको साथ लेकर चलने की सोच के साथ आगे बढ़ने का प्रयास करते हैं।

अब समय है, कि हम ब्रिक्स में हमारी एकता और सहमति को वैश्विक मंच पर ठोस परिणामों में बदलें। अगले बीस वर्षों के लिए हमें एक नए और ambitious agenda पर काम करना होगा। इसकी शुरुआत हमें अपने खुद के वर्किंग सिस्टम से करनी होगी।

ब्रिक्स की अध्यक्षता हर वर्ष बदलती है, किन्तु इसकी वजह से हमारा institutional momentum नहीं रुकना चाहिए। मैं BRICS Continuity and Implementation Mechanism का प्रस्ताव रखता हूँ। इसके तहत Troika के माध्यम से सभी initiatives और outcomes का follow up हो सकेगा।

हम एक secure digital repository बना सकते हैं। इसमें हर निर्णय के साथ nodal point, समय-सीमा और implementation status दर्ज किया जा सकता है।

Friends,

ब्रिक्स को मजबूत करते हुए, हमें global reform की दिशा भी तय करनी होगी। Global Governance का वर्तमान structure, एक pyramid जैसा दिखाई देता है। इसके ऊपरी भाग में power और decision making केंद्रित हैं, और निचले भाग में वे देश हैं जो इन decisions से प्रभावित तो होते हैं, लेकिन उन्हें आकार नहीं दे पाते।

Global South आज वैश्विक संकटों की front row में है, लेकिन decision-making की back row में। हमें इस “pyramid of privilege” को “platform of partnership” में बदलना है, जहां हर देश की आवाज़ हो, हर सदस्य का stake हो और हर प्रयास के केंद्र में मानवता का विकास हो।

इस उद्देश्य से मैं प्रस्ताव रखता हूँ कि हम मिलकर global governance reform के दस proposals तैयार करें, जिसे हम अगली Summit तक एक BRICS Reform Roadmap का रूप देने का प्रयास कर सकते हैं।

इस roadmap को बनाने में हमें तीन मुख्य पहलुओं- Representation, Responsiveness and Rule-making का ध्यान रखना होगा।

पहला, Representation के संबंध में मैं कहना चाहूंगा, UN Security Council में reform अब और टाला नहीं जा सकता। इस विषय पर text-based negotiations को निश्चित समय-सीमा और स्पष्ट परिणाम से जोड़ना होगा।

उसी तरह, financial institutions में voting power, leadership positions और policy priorities आज की इकोनॉमिक रियेलिटीज़ के अनुसार होनी चाहिए। जो देश global economic growth को गति देते हैं, उन्हें global economic governance को दिशा देने में भी उचित भूमिका मिलनी चाहिए।

दूसरा, Responsiveness। वैश्विक संस्थानों में मानवता का विश्वास तभी बनेगा जब वे समस्याओं का प्रभावी समाधान करने में सक्षम होंगे। हमें collective response के speed, scale और last mile impact पर ध्यान देना होगा।

Seafarers का वैश्विक व्यापार में बहुत बड़ा योगदान है, किन्तु अक्सर मुश्किल समय में उन्हें सहारे की कमी महसूस होती है। मेरा प्रस्ताव है कि क्या हम Seafarers Emergency Support Network बना सकते हैं? इसके माध्यम से संबंधित देशों की Maritime authorities और missions को जोड़ा जाएगा। इससे distress alerts, medical assistance, परिवारों को सूचना तथा evacuation में सहयोग दिया जा सकता है।

और तीसरी मैं कहना चाहता हूँ Rule Making के संबंध में। भविष्य के global rules तय करने में समान भागीदारी सुनिश्चित करना अत्यंत महत्वपूर्ण है।

AI, cyberspace, outer space, biotechnology और critical technologies, भविष्य के अवसरों के साथ भविष्य के नियम भी तय कर रहे हैं।

हमें ग्लोबल साउथ को rule-taker से rule-shaper बनाने के लिए प्रयास करने होंगे। ब्रिक्स के माध्यम से हम ग्लोबल साउथ के देशों के युवा diplomats और policymakers को negotiations skills, practical training और legal expertise प्रदान कर सकते हैं।

सुखद संयोग से आज United Nations Day for South-South Cooperation है। Global South को समर्पित इस दिन पर ऐसा निर्णय लिया जाना विशेष महत्व रखता है। भारत इस विषय में lead लेने के लिए तैयार है।

Friends,

भारत में आयोजित इस ब्रिक्स समिट का संदेश स्पष्ट होना चाहिए: यदि हमारा भविष्य साझा है, तो उसके निर्माण का अधिकार भी साझा होना चाहिए।

From voice to impact. From privilege to partnership.

यही ब्रिक्स at 20 का संकल्प हो।

बहुत-बहुत धन्यवाद।