ನಮಸ್ಕಾರಗಳು,

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜೀ, ಶ್ರೀ ಸಂಜಯ್ ಧೋತ್ರೇ ಜೀ, ಐ.ಐ.ಟಿ. ಖರಗ್ ಪುರ್ ನ ಅಧ್ಯಕ್ಷರಾದ ಶ್ರೀ ಸಂಜೀವ್ ಗೋಯೆಂಕಾ ಜೀ, ನಿರ್ದೇಶಕರಾದ ಶ್ರೀ ವಿ.ಕೆ. ತಿವಾರಿ ಜೀ, ಮತ್ತು ಇತರ ಬೋಧಕ ವರ್ಗದ ಸದಸ್ಯರೇ, ಎಲ್ಲ ಸಿಬ್ಬಂದಿ, ಪೋಷಕರೇ ಮತ್ತು ನನ್ನ ಯುವ ಸಹೋದ್ಯೋಗಿಗಳೇ!!.

ಇಂದಿನ ದಿನ ಪದವಿ ಪಡೆಯುತ್ತಿರುವ ಖರಗ್ ಪುರ ಐ.ಐ.ಟಿ.ಯ ವಿದ್ಯಾರ್ಥಿಗಳಿಗೆ ಬಹಳ ಪ್ರಮುಖ ದಿನ ಮಾತ್ರವಲ್ಲ, ಇಂದಿನ ದಿನವು ನವ ಭಾರತ ನಿರ್ಮಾಣ ಮಾಡುವುದಕ್ಕೂ ಅಷ್ಟೇ ಮಹತ್ವದ ದಿನ. ನಿಮ್ಮಿಂದ ನಿರೀಕ್ಷೆಗಳನ್ನು ಮಾಡುತ್ತಿರುವವರು ನಿಮ್ಮ ಪೋಷಕರು ಮತ್ತು ನಿಮ್ಮ ಪ್ರಾಧ್ಯಾಪಕರು ಮಾತ್ರವಲ್ಲ, ನೀವು ಭಾರತದ ೧೩೦ ಕೋಟಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತಿದ್ದೀರಿ. ಆದುದರಿಂದ, 21ನೇ ಶತಮಾನದ ಸ್ವಾವಲಂಬಿ ಭಾರತ ಈ ಸಂಸ್ಥೆಯಿಂದ ಹೊಸ ಪರಿಸರ ವ್ಯವಸ್ಥೆಗಾಗಿ ಹೊಸ ನಾಯಕತ್ವವನ್ನು ನಿರೀಕ್ಷಿಸುತ್ತಿದೆ. ಭಾರತವು ನಮ್ಮ ನವೋದ್ಯಮಗಳ ಹೊಸ ಪರಿಸರ ವ್ಯವಸ್ಥೆ, ನಮ್ಮ ಅನ್ವೇಷಣಾ ಸಂಶೋಧನೆಯ ಜಗತ್ತಿನಲ್ಲಿ ಹೊಸ ಪರಿಸರ ವ್ಯವಸ್ಥೆ, ನಮ್ಮ ಸಾಂಸ್ಥಿಕ ಜಗತ್ತಿನಲ್ಲಿ ಹೊಸ ಪರಿಸರ ವ್ಯವಸ್ಥೆ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಪರಿಸರ ವ್ಯವಸ್ಥೆಯನ್ನು ನಿರೀಕ್ಷಿಸುತ್ತಿದೆ.

ಈ ಕ್ಯಾಂಪಸ್ಸಿನಿಂದ ಪದವಿ ಪಡೆದ ಬಳಿಕ ನೀವು ನಿಮಗಾಗಿ ಹೊಸ ಜೀವನವನ್ನು ಆರಂಭಿಸುತ್ತಿರುವುದು ಮಾತ್ರವಲ್ಲ ನೀವು ನಿಮ್ಮಲ್ಲೇ ನವೋದ್ಯಮವಾಗಬೇಕು ಮತ್ತು ಅದು ದೇಶದ ಮಿಲಿಯಾಂತರ ಜನರ ಬದುಕನ್ನು ಬದಲಾಯಿಸಲಿದೆ. ಆದುದರಿಂದ ಈ ಪದವಿ, ನಿಮ್ಮ ಕೈಗಳಲ್ಲಿರುವ ಪದಕ, ನೀವು ಈಡೇರಿಸಬೇಕಾಗಿರುವ ಮಿಲಿಯಾಂತರ ಜನರ ಆಶೋತ್ತರಗಳ ಪತ್ರದಂತಿದೆ. ನೀವು ವರ್ತಮಾನದ ಮೇಲೆ ಕಣ್ಣು ನೆಟ್ಟು ಭವಿಷ್ಯವನ್ನು ಊಹಿಸುವಂತಾಗಬೇಕು. ನಾವು ಇಂದು ನಮ್ಮ ಈಗಿನ ಆವಶ್ಯಕತೆಗಳ ನಿಟ್ಟಿನಲ್ಲಿ ಮತ್ತು ಇನ್ನು ಹತ್ತು ವರ್ಷಗಳ ಬಳಿಕದ ಆವಶ್ಯಕತೆಗಳ ನಿಟ್ಟಿನಲ್ಲಿ ಕೆಲಸ ಮಾಡಲು ಆರಂಭಿಸಿದರೆ ಆಗ ಭಾರತವು ನಾಳಿನ ಅನುಶೋಧನೆಗಳನ್ನು ಇಂದು ಮಾಡಲು ಶಕ್ತವಾಗುತ್ತದೆ.

ಸ್ನೇಹಿತರೇ,

ಇಂಜಿನಿಯರ್ ಆಗಿ ನಿಮ್ಮಲ್ಲಿ ಅಂತರ್ಗತವಾದಂತಹ ಸಾಮರ್ಥ್ಯವಿದೆ ಮತ್ತು ಅದು ಮಾದರಿಯಿಂದ ಪೇಟೆಂಟ್ ವರೆಗೆ ಸಂಗತಿಗಳನ್ನು ಅಭಿವೃದ್ಧಿ ಮಾಡುವ ಸಾಮರ್ಥ್ಯ. ಈ ರೀತಿಯಲ್ಲಿ, ನೀವು ವಿಷಯಗಳ ಬಗ್ಗೆ ನಿರ್ದಿಷ್ಟ ರೀತಿಯಲ್ಲಿ ಗಮನಿಸುವ ಸಾಮರ್ಥ್ಯವನ್ನೂ ಹೊಂದಿದ್ದೀರಿ. ಮತ್ತು ಅದನ್ನು ಹೊಸ ದೃಷ್ಟಿಕೋನದಿಂದ ನೋಡಲು ನಿಮಗೆ ಸಾಧ್ಯವಿದೆ. ಆದುದರಿಂದ, ನೀವು ಸಮಸ್ಯೆಗಳು ಮತ್ತು ಅದರ ರೀತಿ ರಿವಾಜುಗಳನ್ನು, ನಮ್ಮ ಸುತ್ತ ಇರುವ ಇರುವ ಮಾಹಿತಿಗಳ ಗಾಳಿಯಿಂದಲೇ ಅರಿಯುವಷ್ಟು ಸಮರ್ಥರಾಗಿರುತ್ತೀರಿ. ಸಮಸ್ಯೆಗಳನ್ನು ಅರಿಯುವಾಗ ಅವುಗಳು ಯಾವ ರೀತಿಯಲ್ಲಿ ಎದುರಾಗುತ್ತವೆ ಎಂಬುದನ್ನು ಅರಿತುಕೊಂಡರೆ ಅವುಗಳಿಗೆ ಧೀರ್ಘಕಾಲೀನ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಈ ತಿಳಿವಳಿಕೆ ಹೊಸ ಹುಡುಕಾಟಗಳಿಗೆ ಮತ್ತು ಭವಿಷ್ಯದಲ್ಲಿ ಪ್ರಮುಖ ಶೋಧನೆಗಳಿಗೆ ಮೈಲಿಗಲ್ಲಾಗುತ್ತದೆ. ಕಲ್ಪಿಸಿಕೊಳ್ಳಿ, ನೀವು ಎಷ್ಟು ಜೀವಗಳನ್ನು ಬದಲಾಯಿಸಬಹುದು ಎಂಬುದನ್ನು. ನೀವು ಎಷ್ಟು ಜೀವಗಳನ್ನು ಉಳಿಸಬಹುದು, ದೇಶದ ಸಂಪನ್ಮೂಲಗಳನ್ನು ಉಳಿಸಬಹುದು ಎಂಬುದನ್ನು ಗಮನಿಸಿ. ನೀವು ಸಮಸ್ಯೆಗಳ ರೀತಿ, ಮಾದರಿಗಳನ್ನು ಅರಿತುಕೊಂಡು ಪರಿಹಾರಗಳನ್ನು ರೂಪಿಸಿದರೆ ದೇಶದ ಸಂಪನ್ಮೂಲಗಳನ್ನು ಉಳಿಸಲು ಸಾಧ್ಯವಿದೆ. ಮತ್ತು ಅದೇ ಪರಿಹಾರ ನಿಮಗೆ ಭವಿಷ್ಯದಲ್ಲಿ ವಾಣಿಜ್ಯಿಕ ಯಶಸ್ಸನ್ನು ನೀಡಲೂಬಹುದು.

ಸ್ನೇಹಿತರೇ,

ಸಂಶಯವೇ ಬೇಡ, ನೀವು ನಿಮ್ಮ ಜೀವನದ ಪ್ರಯಾಣವನ್ನು ಆರಂಭಿಸುವಾಗ ನೀವು ಹಲವಾರು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಅದು ಸರಿ ಇರುತ್ತದೋ, ಅಥವಾ ತಪ್ಪು ಇರುತ್ತದೋ, ಅದು ಮುನ್ನಡೆ ಒದಗಿಸುತ್ತದೋ ಅಥವಾ ಹಿನ್ನಡೆ ತರುತ್ತದೋ, ಅಥವಾ ಸಮಯ ಹಾಳು ಮಾಡುತ್ತದೋ-ಇಂತಹ ಹಲವು ಪ್ರಶ್ನೆಗಳು, ಸಂಶಯಗಳು ನಿಮ್ಮ ತಲೆಯಲ್ಲಿ ಸುತ್ತು ಹೊಡೆಯುತ್ತಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸ್ವಂತದ ಮೂರು. ನಾನು ಇಲ್ಲಿ ಸೆಲ್ಫೀ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಸ್ವಯಂ ಮೂರರ ಬಗ್ಗೆ ಮಾತನಾಡುತ್ತಿದ್ದೇನೆ. ಅವುಗಳೆಂದರೆ ಸ್ವ-ಜಾಗೃತಿ, ಆತ್ಮ ವಿಶ್ವಾಸ ಮತ್ತು ಬಹಳ ಮುಖ್ಯವಾದುದು ಸ್ವಾರ್ಥರಹಿತವಾದದ್ದು. ನೀವು ನಿಮ್ಮ ಬಲವನ್ನು ಗುರುತಿಸಿಕೊಳ್ಳಬೇಕು ಮತ್ತು ವಿಶ್ವಾಸದಿಂದ ಹಾಗು ಸ್ವಾರ್ಥರಹಿತವಾಗಿ ಮುನ್ನಡೆಯಬೇಕು. ನಮಗೆ ಹೇಳಲಾಗುತ್ತಿತ್ತು: शनैः पन्थाः शनैः कन्था शनैः पर्वतलंघनम । शनैर्विद्या शनैर्वित्तं पञ्चतानि शनैः शनैः ಅಂದರೆ ದಾರಿ ಬಹಳ ಧೀರ್ಘವಾಗಿರುವಾಗ ತಾಳ್ಮೆಯಿಂದಿರಬೇಕು. ಪುಟಗಳನ್ನು ಜೋಡಿಸಲಿಕ್ಕಿದೆ, ಪರ್ವತಗಳನ್ನು ಏರಲಿಕ್ಕಿದೆ. ಕಲಿಕೆ ಮಾಡಲಿಕ್ಕಿದೆ, ಜೀವನಕ್ಕಾಗಿ ಗಳಿಕೆಯನ್ನು ಮಾಡಲಿಕ್ಕಿದೆ. ನೂರಾರು ವರ್ಷಗಳ ಈ ಹಿಂದಿನ ಸಮಸ್ಯೆಯನ್ನು ವಿಜ್ಞಾನ ಇಂದು ಸರಳ ಮಾಡಿದೆ. ಆದರೆ ಜ್ಞಾನ ಮತ್ತು ವಿಜ್ಞಾನದಲ್ಲಿ ಮಾಡಲಾದ ಪ್ರಯೋಗಗಳನ್ನು ಪರಿಗಣಿಸಿದರೆ ತಾಳ್ಮೆಯಿಂದಿರಬೇಕು ಎಂಬುದು ಶಾಶ್ವತವಾದ ಸಂಗತಿ. ವಿಜ್ಞಾನದಲ್ಲಿ, ತಂತ್ರಜ್ಞಾನದಲ್ಲಿ ಮತ್ತು ಅನುಶೋಧನೆಯಲ್ಲಿ ತ್ವರಿತಗತಿಗೆ ಅವಕಾಶ ಇಲ್ಲ. ನಿಮ್ಮ ಉದ್ದೇಶಿತ ಅನುಶೋಧನೆಯಲ್ಲಿ ನಿಮಗೆ ಪೂರ್ಣ ಯಶಸ್ಸು ಸಿಗದೇ ಇರಬಹುದು. ಆದರೆ ಆ ವೈಫಲ್ಯವನ್ನು ಕೂಡಾ ಯಶಸ್ಸು ಎಂದು ಪರಿಗಣಿಸಬೇಕಾಗುತ್ತದೆ, ಯಾಕೆಂದರೆ ವೈಫಲ್ಯ ಕೂಡಾ ನಿಮಗೆ ಕೆಲವಂಶಗಳನ್ನು ಕಲಿಸುತ್ತದೆ. ನೀವು ನೆನಪಿಡಬೇಕು ಏನೆಂದರೆ ಪ್ರತೀ ವೈಜ್ಞಾನಿಕ ಮತ್ತು ತಾಂತ್ರಿಕ ವೈಫಲ್ಯ ಹೊಸ ಶೋಧನೆಗೆ ದಾರಿ ಮಾಡಿಕೊಡುತ್ತದೆ, ಮತ್ತು ನೀವು ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗುವುದನ್ನು ನಾನು ನೋಡಲು ಇಚ್ಛಿಸುತ್ತೇನೆ. ವೈಫಲ್ಯ ಕೂಡಾ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು.

ಸ್ನೇಹಿತರೇ,

21 ನೇ ಶತಮಾನದ ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ. ಆವಶ್ಯಕತೆಗಳು ಕೂಡಾ ಬದಲಾಗಿವೆ. ಅದೇ ರೀತಿ ಆಶೋತ್ತರಗಳು ಕೂಡಾ. ಈಗ ಐ.ಐ.ಟಿ.ಗಳನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಮಟ್ಟದಿಂದ ಮುಂದಿನ ಹಂತವಾದ ದೇಶೀಯ ತಂತ್ರಜ್ಞಾನದ ಹಂತಕ್ಕೆ ಕೊಂಡೊಯ್ಯಬೇಕಾಗಿದೆ. ಭಾರತದ ಸವಾಲುಗಳನ್ನು ಎದುರಿಸಲು ನಮ್ಮ ಐ.ಐ.ಟಿ. ಗಳು ಸಂಶೋಧನೆಗಳನ್ನು ಮಾಡಿದಷ್ಟೂ ಅವುಗಳು ಭಾರತಕ್ಕೆ ಪರಿಹಾರಗಳನ್ನು ನಿರ್ಮಾಣ ಮಾಡುತ್ತವೆ. ಮತ್ತು ಅವು ಹೆಚ್ಚು ಹೆಚ್ಚು ಜಾಗತಿಕವಾಗಿ ಅನ್ವಯಿಸುವಿಕೆಯ ಮಾಧ್ಯಮಗಳಾಗುತ್ತವೆ. ಇಷ್ಟೊಂದು ಬೃಹತ್ ಜನಸಂಖ್ಯೆಯಲ್ಲಿ ನಿಮ್ಮ ಯಶಸ್ವೀ ಪ್ರಯೋಗಗಳು ಜಗತ್ತಿನ ಯಾವ ಭಾಗದಲ್ಲಿಯೂ ವಿಫಲ ಆಗಲಾರವು.

ಸ್ನೇಹಿತರೇ,

ಜಗತ್ತು ವಾತಾವರಣ ಬದಲಾವಣೆಯ ಸವಾಲನ್ನು ಎದುರಿಸುತ್ತಿರುವಾಗ, ನಿಮಗೆ ತಿಳಿದಿದೆ, ಭಾರತವು ಅಂತಾರಾಷ್ಟ್ರೀಯ ಸೌರ ಮಿತ್ರಕೂಟ (ಐ.ಎಸ್.ಎ.) ಯನ್ನು ಜಗತ್ತಿನೆದುರು ಇಟ್ಟಿತು. ಮತ್ತು ಅದನ್ನು ವಾಸ್ತವಕ್ಕೆ ತಂದಿತು. ಇಂದು ವಿಶ್ವದ ಹಲವು ರಾಷ್ಟ್ರಗಳು ಭಾರತ ಆರಂಭಿಸಿದ ಆಂದೋಲನದಲ್ಲಿ ಸೇರ್ಪಡೆಯಾಗುತ್ತಿವೆ. ನಾವೀಗ ಈ ಜವಾಬ್ದಾರಿಯನ್ನು ಇನ್ನಷ್ಟು ಮುಂದೆ ಕೊಂಡೊಯ್ಯುವ ಹೊಣೆಗಾರಿಕೆಯನ್ನು ಹೊಂದಿದ್ದೇವೆ. ಭಾರತದ ಉಪಕ್ರಮವನ್ನು ಹೆಚ್ಚು ವಿಸ್ತಾರಗೊಳಿಸಲು ಮತ್ತು ಭಾರತದ ಗುರುತಿಸುವಿಕೆಯನ್ನು ಇನ್ನಷ್ಟು ಬಲಿಷ್ಟಗೊಳಿಸಲು ನಾವು ಕಡಿಮೆ ಖರ್ಚಿನ, ಕೈಗೆಟಕುವ ದರದಲ್ಲಿ, ಪರಿಸರ ಸ್ನೇಹೀ ತಂತ್ರಜ್ಞಾನವನ್ನು ಜಗತ್ತಿಗೆ ಒದಗಿಸಬಹುದೇ?. ಇಂದು ಸೌರ ವಿದ್ಯುತ್ತಿಗೆ ಯೂನಿಟೊಂದಕ್ಕೆ ಅತ್ಯಂತ ಕಡಿಮೆ ದರ ವಿಧಿಸುತ್ತಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಆದರೆ ಮನೆ ಮನೆಗೆ ಸೌರ ವಿದ್ಯುತ್ ಒದಗಿಸುವಲ್ಲಿ ಬಹಳಷ್ಟು ಸವಾಲುಗಳಿವೆ. ನಾನೊಮ್ಮೆ ಹೇಳಿದ್ದೆ, “ನಾನು ಐ.ಐ.ಟಿ. ವಿದ್ಯಾರ್ಥಿಗಳಿಗೆ ಹೇಳುತ್ತೇನೆ ನಾವು ಸ್ವಚ್ಚ ಅಡುಗೆ ಆಂದೋಲನವನ್ನು ಆರಂಭಿಸಿದರೆ ಮತ್ತು ಸೌರ ಶಕ್ತಿ ಆಧಾರಿತ ಸ್ಟೌವ್ ಅಭಿವೃದ್ಧಿ ಮಾಡಿದರೆ ಮತ್ತು ಮನೆಗೆ ಅವಶ್ಯವಾದ ಸೌರ ಶಕ್ತಿ ಸಂಗ್ರಾಹಕ ದಾಸ್ತಾನು ಬ್ಯಾಟರಿಯನ್ನು ನಿರ್ಮಾಣ ಮಾಡಿದರೆ” ಎಂದು. ನೀವು ನೋಡಿ, ದೇಶದಲ್ಲಿ 25 ಕೋಟಿ ಸ್ಟೌವ್ ಗಳಿವೆ. ಅಲ್ಲಿ 25 ಕೋಟಿಯ ಮಾರುಕಟ್ಟೆ ಇದೆ. ಇದು ಯಶಸ್ವಿಯಾದರೆ, ಇಲೆಕ್ಟ್ರಾನಿಕ್ ವಾಹನಗಳಿಗಾಗಿ ಅಭಿವೃದ್ಧಿ ಮಾಡಲಾಗುತ್ತಿರುವ ಕಡಿಮೆ ಖರ್ಚಿನ ಬ್ಯಾಟರಿ ಇದಕ್ಕೆ ಪೂರಕವಾಗಬಲ್ಲದು. ಈಗ ಇದನ್ನು ಮಾಡಲು ಐ.ಐ.ಟಿ.ಯ ಯುವಜನತೆಯಲ್ಲದೆ ಬೇರೆ ಯಾರು ಉತ್ತಮ ವ್ಯಕ್ತಿಗಳಿದ್ದಾರೆ?. ಪರಿಸರಕ್ಕೆ ಅತ್ಯಂತ ಕಡಿಮೆ ಹಾನಿ ಮಾಡುವಂತಹ ತಂತ್ರಜ್ಞಾನ ಭಾರತಕ್ಕೆ ಅವಶ್ಯವಿದೆ. ಅದು ಬಾಳಿಕೆ ಬರಬೇಕು ಮತ್ತು ಜನತೆ ಅದನ್ನು ಸುಲಭದಲ್ಲಿ ಬಳಸುವಂತಿರಬೇಕು.

 

 

ಸ್ನೇಹಿತರೇ,

ವಿಪತ್ತು ನಿರ್ವಹಣೆ ವಿಷಯದಲ್ಲಿ ಭಾರತವು ವಿಶ್ವದ ಗಮನವನ್ನು ಸೆಳೆದಿದೆ. ದೊಡ್ಡ ವಿಪತ್ತುಗಳು ಜೀವಗಳನ್ನು ಬಲಿತೆಗೆದುಕೊಳ್ಳುವುದಲ್ಲದೆ ಮೂಲಸೌಕರ್ಯಗಳಿಗೂ ಭಾರೀ ಪ್ರಮಾಣದ ಹಾನಿಯನ್ನು ಉಂಟು ಮಾಡುತ್ತವೆ. ಇದನ್ನು ಮನಗಂಡ ಭಾರತವು ಎರಡು ವರ್ಷಗಳ ಹಿಂದೆ ವಿಶ್ವ ಸಂಸ್ಥೆಯಲ್ಲಿ ವಿಪತ್ತು ಪುನಶ್ಚೇತನ ಮೂಲಸೌಕರ್ಯಕ್ಕಾಗಿರುವ ಮಿತ್ರಕೂಟದ (ಸಿ.ಡಿ.ಆರ್.ಐ.) ರಚನೆಗೆ ಆಗ್ರಹ ಮಂಡಿಸಿತು. ವಿಪತ್ತು ನಿರ್ವಹಣೆಯಲ್ಲಿ ಭಾರತದ ಕಳವಳವನ್ನು ಮತ್ತು ಉಪಕ್ರಮವನ್ನು ಅರಿತುಕೊಂಡು ಜಗತ್ತಿನ ಹಲವು ದೇಶಗಳು ಅದರೊಂದಿಗೆ ಸೇರುತ್ತಿವೆ. ಮತ್ತು ವಿಶ್ವವು ಈ ಉಪಕ್ರಮವನ್ನು ಸ್ವಾಗತಿಸುತ್ತಿದೆ. ಇಂತಹ ಸಮಯದಲ್ಲಿ ಭಾರತೀಯ ತಜ್ಞರು ವಿಶ್ವಕ್ಕೆ ಯಾವ ರೀತಿಯ ವಿಪತ್ತು ಪುನಶ್ಚೇತನ ಮೂಲಸೌಕರ್ಯವನ್ನು ಒದಗಿಸುತ್ತಾರೆ ಎಂಬ ಕುತೂಹಲ ಇರುವುದು ಸಹಜ. ನಾವು ಹೇಗೆ ವಿಪತ್ತನ್ನು ತಡೆಯಬಲ್ಲಂತಹ ಮನೆಗಳನ್ನು ಮತ್ತು ಕಟ್ಟಡಗಳನ್ನು ತಂತ್ರಜ್ಞಾನ ಬಳಸಿ ದೇಶದಲ್ಲಿ ನಿರ್ಮಾಣ ಮಾಡಬಹುದು ಎಂಬ ಬಗ್ಗೆ ಯೋಚಿಸಬೇಕಾಗಿದೆ. ಬೃಹತ್ ಸೇತುವೆಗಳು ಚಂಡಮಾರುತದಲ್ಲಿ ನಿರ್ನಾಮವಾಗುತ್ತಿವೆ. ಉತ್ತರಾಖಂಡದಲ್ಲಿ ಏನಾಯಿತು ಎಂಬುದನ್ನು ನಾವು ಈಗಷ್ಟೇ ನೋಡಿದ್ದೇವೆ. ನಾವು ಇಂತಹ ವ್ಯವಸ್ಥೆಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು?.

ಸ್ನೇಹಿತರೇ,

ಗುರುದೇವ್ ಠಾಗೋರ್ ಅವರೊಮ್ಮೆ ಹೇಳಿದ್ದರು: “ ನಿಮ್ಮ ರಾಷ್ಟ್ರವನ್ನು ಹೊಂದುವುದೆಂದರೆ, ವಿಸ್ತರಿತ ರೀತಿಯಲ್ಲಿ ನಿಮ್ಮ ಆತ್ಮವನ್ನು ಕಂಡುಕೊಳ್ಳುವುದು. ನಾವು ನಮ್ಮ ರಾಷ್ಟ್ರವನ್ನು ಚಿಂತನೆಗಳು, ಕೆಲಸ ಮತ್ತು ಸೇವೆಯ ಮೂಲಕ ಮರುರೂಪಿಸಲು ಆರಂಭಿಸಿದಾಗ, ಆಗ ಮಾತ್ರ ನಮ್ಮ ರಾಷ್ಟ್ರದಲ್ಲಿ ನಾವು ನಮ್ಮದೇ ಆತ್ಮವನ್ನು ಕಾಣಬಲ್ಲೆವು”. ಇಂದು ದೇಶವು ಖರಗ್ ಪುರ ಸಹಿತ ಇಡೀ ಐ.ಐ.ಟಿ. ಜಾಲವು ಅದರ ಪಾತ್ರವನ್ನು ವಿಸ್ತರಿಸಿಕೊಳ್ಳಬೇಕು ಎಂದು ನಿರೀಕ್ಷೆ ಮಾಡುತ್ತಿದೆ. ನೀವು ಇದಕ್ಕಾಗಿ ಈಗಾಗಲೇ ಶ್ರೀಮಂತ ಪರಿಸರ ವ್ಯವಸ್ಥೆಯನ್ನು ಹೊದಿದ್ದೀರಿ. ಇಲ್ಲಿ ಕೈಗಾರಿಕೆ 4.0 ಗೆ ಅವಶ್ಯವಾದ ಪ್ರಮುಖ ಅನ್ವೇಷಣೆಗಳಿಗೆ ಈಗಾಗಲೇ ಒತ್ತು ದೊರೆತಿದೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಗೆ ಸಂಬಂಧಿಸಿದ ಅಕಾಡೆಮಿಕ್ ಸಂಶೋಧನೆಯನ್ನು ಕೈಗಾರಿಕಾ ಮಟ್ಟಕ್ಕೆ ಕೊಂಡೊಯ್ಯಲು ನೀವು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೀರಿ. ಐ.ಐ.ಟಿ. ಖರಗ್ ಪುರ ಇಂಟರ್ ನೆಟ್ ಆಫ್ ಥಿಂಗ್ಸ್ ಮತ್ತು ಆಧುನಿಕ ನಿರ್ಮಾಣ ತಂತ್ರಜ್ಞಾನದಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ನಿಮ್ಮ ಸಾಫ್ಟ್ ವೇರ್ ಪರಿಹಾರಗಳು ದೇಶಕ್ಕೆ ಬಹು ಉಪಯುಕ್ತವಾಗಿರುವುದನ್ನು ಸಾಬೀತು ಮಾಡಿವೆ. ನೀವು ಇನ್ನು ಆರೋಗ್ಯ ತಂತ್ರಜ್ಞಾನದ ಭವಿಷ್ಯದ ಪರಿಹಾರಗಳಿಗಾಗಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನಾನು ಆರೋಗ್ಯ ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ದತ್ತಾಂಶ, ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ , ಉಪಕರಣಗಳ ಬಗ್ಗೆ ಮಾತ್ರ ಮಾತನಾಡುತ್ತಿರುವುದಲ್ಲ, ಬದಲು ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದೇನೆ. ದೇಶಕ್ಕೆ ನಾವು ರೋಗ ಪ್ರತಿಬಂಧಕದಿಂದ ಹಿಡಿದು ಗುಣ ಪಡಿಸುವವರೆಗಿನ ಪರಿಹಾರಗಳನ್ನು ಒದಗಿಸಬೇಕಾಗಿದೆ. ಕೊರೊನಾದ ಈ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯ ರಕ್ಷಣಾ ಸಲಕರಣೆಗಳು ಹೇಗೆ ಬೃಹತ್ ಮಾರುಕಟ್ಟೆಯಾಗಿ ಮೂಡಿ ಬಂದವು ಎಂಬುದನ್ನು ನಾವು ನೋಡಿದ್ದೇವೆ. ಈ ಮೊದಲು ಜನರು ಥರ್ಮಾಮೀಟರು ಮತ್ತು ಅವಶ್ಯ ಔಷಧಿಗಳನ್ನು ಮನೆಯಲ್ಲಿ ಇಟ್ಟಿರುತ್ತಿದ್ದರು. ಆದರೆ ಈಗ ಅವರು ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಅಂಶ, ರಕ್ತದಲ್ಲಿ ಆಮ್ಲಜನಕದ ಅಂಶಗಳನ್ನು ಪತ್ತೆ ಮಾಡುವ ಉಪಕರಣ ಇತ್ಯಾದಿಗಳನ್ನು ಮನೆಗಳಲ್ಲಿ ಇಡುತ್ತಿದ್ದಾರೆ. ಆರೋಗ್ಯ ಮತ್ತು ದೈಹಿಕ ಕ್ಷಮತೆ ಕಾಪಾಡುವ ಉಪಕರಣಗಳಿಗೂ ಮನೆಗಳಲ್ಲಿ ಭಾರೀ ಬೇಡಿಕೆ ಇದೆ. ವೈಯಕ್ತಿಕ ಆರೋಗ್ಯ ರಕ್ಷಣಾ ಉಪಕರಣಗಳನ್ನು ಒದಗಿಸುವಲ್ಲಿ ತಂತ್ರಜ್ಞಾನದ ಸಹಾಯದೊಂದಿಗೆ ಹೊಸ ಪರಿಹಾರಗಳನ್ನು ಅಭಿವೃದ್ಧಿ ಮಾಡುವ ಅಗತ್ಯ ಇದೆ. ಅವುಗಳು ಕೈಗೆಟಕುವ ದರದಲ್ಲಿರಬೇಕು ಮತ್ತು ಖಚಿತ ಮಾಹಿತಿ ಒದಗಿಸುವಂತಿರಬೇಕು.

ಸ್ನೇಹಿತರೇ,

ಕೊರೊನಾ ಬಳಿಕದ ಜಾಗತಿಕ ಪರಿಸರದಲ್ಲಿ ಭಾರತವು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಅನುಶೋಧನೆಯಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಮೂಡಿಬರಬಲ್ಲದು. ಈ ಚಿಂತನೆಯೊಂದಿಗೆ, ಈ ವರ್ಷದ ಆಯವ್ಯಯದಲ್ಲಿ ವಿಜ್ಞಾನ ಮತು ತಂತ್ರಜ್ಞಾನ ಹಾಗು ಸಂಶೋಧನೆಗೆ ಮೊತ್ತವನ್ನು ಗಮನೀಯವಾಗಿ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಸಂಶೋಧನಾ ಫೆಲೋ ಯೋಜನೆಯು ನಿಮ್ಮಂತಹ ಪ್ರತಿಭಾ ಸಂಪನ್ನರಿಗೆ ಸಂಶೋಧನೆಗೆ ಹೊಸ ಮಾಧ್ಯಮವಾಗಿ ಒದಗಿ ಬಂದಿದೆ. ನಿಮ್ಮ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ನವೋದ್ಯಮ ಭಾರತ ಆಂದೋಲನವು ನಿಮಗೆ ಸಹಾಯ ಮಾಡಲಿದೆ. ಕೆಲವು ದಿನಗಳ ಹಿಂದೆ ಪ್ರಮುಖ ನೀತಿ ಸುಧಾರಣೆಯನ್ನು ಮಾಡಲಾಗಿದೆ, ಅದನ್ನು ನಿರ್ದಿಷ್ಟವಾಗಿ ನಿಮಗೆ ನಾನು ಹೇಳಲಿಚ್ಛಿಸುತ್ತೇನೆ. ಸರಕಾರವು ಮ್ಯಾಪ್ ಮತ್ತು ಭೂ ವ್ಯೋಮ ದತ್ತಾಂಶವನ್ನು ನಿಯಂತ್ರಣದಿಂದ ಮುಕ್ತ ಮಾಡಿದೆ. ಇದು ನಮ್ಮ ತಂತ್ರಜ್ಞಾನ ಆಧಾರಿತ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಹಳಷ್ಟು ಬಲಿಷ್ಟಪಡಿಸಲಿದೆ. ಈ ಕ್ರಮ ಆತ್ಮನಿರ್ಭರ ಭಾರತದ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸಲಿದೆ. ಹಾಗು ಇದು ದೇಶದ ಯುವ ನವೋದ್ಯಮಗಳಿಗೆ ಮತ್ತು ಅನ್ವೇಷಕರಿಗೆ ಹೊಸ ಸ್ವಾತಂತ್ರ್ಯವನ್ನು ಒದಗಿಸಲಿದೆ.

ಸ್ನೇಹಿತರೇ,

ನೀವು ಜಿಮ್ಕಾನದಲ್ಲಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಮತ್ತು ಇತರ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೀರಿ ಎಂದು ನನಗೆ ತಿಳಿಸಲಾಗಿದೆ. ಇದು ಬಹಳ ಮುಖ್ಯ. ನಮ್ಮ ಆದ್ಯತೆ ನಮ್ಮ ತಜ್ಞತೆಗಷ್ಟೇ ಮಿತಿಗೊಂಡಿರಬಾರದು. ನಮ್ಮ ಜ್ಞಾನ ಮತ್ತು ಧೋರಣೆಯು ಸಮಗ್ರವಾಗಿ ವಿಸ್ತಾರಗೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯು ಬಹು ಶಿಸ್ತೀಯ ಧೋರಣೆಯ ಚಿಂತನೆಯನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಐ.ಐ.ಟಿ. ಖರಗ್ ಪುರ ಈಗಾಗಲೇ ಉತ್ತಮ ಕೆಲಸ ಮಾಡುತ್ತಿರುವುದಕ್ಕೆ ನಾನು ಸಂತೋಷಗೊಂಡಿದ್ದೇನೆ. ನಾನು ಖರಗ್ ಪುರ ಐ.ಐ.ಟಿ.ಗೆ ಇನ್ನೊಂದು ಕಾರಣಕ್ಕಾಗಿ ಅಭಿನಂದಿಸುತ್ತೇನೆ. ನೀವು ನಿಮ್ಮ ಭೂತಕಾಲವನ್ನು ಅನ್ವೇಷಣೆ ಮಾಡುತ್ತಿರುವ ರೀತಿ, ನಿಮ್ಮ ಪ್ರಾಚೀನ ಜ್ಞಾನ ವಿಜ್ಞಾನ ನಿಮ್ಮ ಭವಿಷ್ಯದ ಅನ್ವೇಷಣೆಗಳ ಶಕ್ತಿ. ಅದು ನಿಜವಾಗಿಯೂ ಶ್ಲಾಘನೀಯವಾದುದು. ನೀವು ವೇದಗಳಿಂದ ಹಿಡಿದು ಉಪನಿಷದ್ ಗಳವರೆಗೆ ಮತ್ತು ಇತರ ಸಂಕೇತಗಳ ಬಗೆಗಿನ ಜ್ಞಾನ ಭಂಡಾರದ ಬಗ್ಗೆ ಅಧ್ಯಯನ ಕೈಗೊಳ್ಳುವ ಮೂಲಕ ಅದಕ್ಕೆ ಉತ್ತೇಜನ ನೀಡುತ್ತಿರುವಿರಿ. ಅದನ್ನು ನಾನು ಬಹಳ ಮೆಚ್ಚುತ್ತೇನೆ.

ಸ್ನೇಹಿತರೇ,

ಈ ವರ್ಷ, ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಡುತ್ತಿದೆ. ಐ.ಐ.ಟಿ. ಖರಗ್ ಪುರಕ್ಕೆ ಈ ವರ್ಷ ಬಹಳ ವಿಶೇಷವಾದುದಾಗಿದೆ, ಯಾಕೆಂದರೆ ಈ ಸ್ಥಳ, ನೀವು ಜೀವನಕ್ಕೆ ಹೊಸ ಆಯಾಮ ಕೊಟ್ಟಂತಹ, ನೀವು ಕಾರ್ಯಚಟುವಟಿಕೆ ನಿರತರಾದಂತಹ ಸ್ಥಳವು ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಸಂಬಂಧಿಸಿದುದಾಗಿದೆ. ಈ ಚಳವಳಿಯಲ್ಲಿ ಹುತಾತ್ಮರಾದ ಯುವಜನತೆಯ ನೈತಿಕ ಶಕ್ತಿಯನ್ನು ಈ ಭೂಮಿ ಸಾಕ್ಷೀಕರಿಸಿದೆ. ಠಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಾರ್ಯನಿರ್ವಹಿಸಿದ ಭೂಮಿ ಇದು. ಹಿಂದೆ ಖರಗ್ ಪುರ ಐ.ಐ.ಟಿ ಮಾಡಿರುವ 75 ದೊಡ್ಡ ಅನ್ವೇಷಣೆಗಳನ್ನು ಮತ್ತು ಅಭಿವೃದ್ಧಿ ಮಾಡಿದ ಪರಿಹಾರಗಳನ್ನು ಸಂಕಲಿಸಬೇಕು ಎಂದು ನಾನು ನಿಮ್ಮನ್ನು ಕೋರುತ್ತೇನೆ. ಅವುಗಳನ್ನು ದೇಶದೆದುರು ಮತ್ತು ಜಗತ್ತಿನೆದುರು ಮಂಡಿಸಿ. ಹಿಂದಿನ ಕಾಲದ ಈ ಪ್ರೇರಣೆಯು ಬರಲಿರುವ ವರ್ಷಗಳಲ್ಲಿ ದೇಶಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಮತ್ತು ಯುವಜನತೆಗೆ ಹೊಸ ವಿಶ್ವಾಸವನ್ನು ಒದಗಿಸುತ್ತದೆ. ನೀವು ದೇಶದ ನಿರೀಕ್ಷೆಗಳನ್ನು ಮರೆಯದೆ ವಿಶ್ವಾಸದೊಂದಿಗೆ ಮುನ್ನಡೆಯಲು ನಿಮಗೆ ಇದರಿಂದ ಸಾಧ್ಯವಾಗುತ್ತದೆ. ಈ ಪ್ರಮಾಣಪತ್ರಗಳನ್ನು ಗೋಡೆಯ ಮೇಲೆ ನೇತು ಹಾಕುವುದಕ್ಕೆ ಅಥವಾ ನಿಮ್ಮ ಸ್ವ-ವಿವರದ ಭಾಗವಾಗಿಯಷ್ಟೇ ಸೀಮಿತಗೊಳ್ಳಬಾರದು. ಇಂದು ನೀವು ಪಡೆಯುತ್ತಿರುವ ಪ್ರಮಾಣಪತ್ರವು ದೇಶದ 130 ಕೋಟಿ ಜನರ ಆಶೋತ್ತರಗಳ ಬೇಡಿಕೆಯ ಪಟ್ಟಿ. ಇದು ಆತ್ಮವಿಶ್ವಾಸದ ಪತ್ರ ಮತ್ತು ಭರವಸೆಯ ಪತ್ರ. ಈ ಪವಿತ್ರ ಸಂದರ್ಭದಲ್ಲಿ ಇಂದು ನಾನು ನಿಮಗೆ ಶುಭಾಶಯಗಳನ್ನು ಹೇಳುತ್ತೇನೆ. ನಿಮ್ಮ ಪೋಷಕರು, ನಿಮ್ಮ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ನಿಮ್ಮ ಶಿಕ್ಷಕರು ನಿಮಗಾಗಿ ಕಠಿಣ ಪರಿಶ್ರಮ ಮಾಡಿದ್ದಾರೆ, ಅವರು ನಿಮ್ಮ ಪ್ರಯತ್ನಗಳಿಂದ, ಕನಸುಗಳಿಂದ, ನಿರ್ಧಾರಗಳಿಂದ ಮತ್ತು ನಿಮ್ಮ ಮುನ್ನಡೆಯ ಪ್ರಯಾಣದಿಂದ ತೃಪ್ತಿಯನ್ನು ಅನುಭವಿಸುತ್ತಾರೆ. ಈ ನಿರೀಕ್ಷೆಗಳೊಂದಿಗೆ ನಿಮಗೆ ಶುಭವಾಗಲಿ, ಬಹಳ ಧನ್ಯವಾದಗಳು ನಿಮಗೆ!!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
Text of Prime Minister addresses the Indian Community in Paris
June 18, 2026

नमस्ते!

बों जू!

ऐसा लग रहा है, आप सब छुट्टी के मूड में हैं।

साथियों,

ये पेरिस शहर, Lights का शहर है, रंगों का शहर है, यहां Art है, Ideas हैं, और innovation की प्रेरणा भी है। इस शहर को भारत के अलग-अलग राज्यों से आए आप सभी लोग और भी खूबसूरत बना देते हैं। नए नए रंगों से भर देते हैं।

कोई तमिल है, कोई पंजाबी है, कोई गुजराती है, तो कोई मराठी है, और कोई बंगाली है। भारत के हर कोने का प्रतिनिधित्व यहां दिखाई देता है।

साथियों,

मैं जब 14 जून को नीस पहुंचा था तो सबसे पहले भारत इनोवेट्स कार्यक्रम में शामिल हुआ था। आज जब मैं फ्रांस से वापसी की तैयारी में हूं तो लग रहा है जैसे भारत कनेक्ट्स कार्यक्रम में आ गया हूं।

फ्रांस में रहने वाले आप लोगों ने 21वीं सदी के भारत-फ्रांस रिश्तों को जिस तरह कनेक्ट किया है, वो हमारी Strategic Partnership की बहुत बड़ी ताकत बन रही है। मैं आप सभी के लिए भारत से 140 करोड़ देशवासियों की शुभकामनाएं लेकर आया हूं। इस आत्मीय स्वागत के लिए, मैं आप सभी का हृदय से आभार व्यक्त करता हूं।

साथियों,

आज मैं ऐसे समय में फ्रांस आया हूं जब कुछ ही दिन पहले हमारी सरकार के 12 वर्ष पूरे हुए हैं। चुने हुए प्रधानमंत्री के रूप निरंतर 12 साल तक देश की सेवा करना मेरे जीवन का बहुत बड़ा सौभाग्य रहा है। यह भारत के लोकतंत्र की शक्ति है जिसने एक चायवाले को यहां तक पहुंचा दिया।

साथियों,

बीते 12 वर्ष, 140 करोड़ भारतीयों के अद्भुत सामर्थ्य के रहे हैं। 12 साल के इस कालखंड में भारत का GDP दोगुना हुआ है। Airports की संख्या दोगुनी हुई है। Universities की संख्या भी दोगुनी हो गई है। Highway Construction की स्पीड तीन गुना बढ़ गई। और Metro Network, चार गुणा बड़ा हो गया है।

मैं आपको कुछ और फैक्ट्स दूंगा, उससे आप अंदाजा लगा पाएंगे कि भारत किस स्पीड और कितने बड़े स्केल पर काम कर रहा है। पिछले 12 वर्षों में भारत का Defence Export 35 गुणा यानि Thirty Five Times बढ़ गया है।

औऱ एक फैक्ट सुनिए भारत में मोबाइल मैन्यूफैक्टरिंग यूनिट्स में, 100 गुणा की बढ़ोतरी हुई है। 100 times. भारत अब दुनिया का दूसरा सबसे बड़ा mobile phone manufacturer है। इसी गति, इसी प्रगति का नतीजा है कि आज भारत दुनिया की Fastest Growing Major Economy है।

साथियों,

आज भारत की कहानी सिर्फ Economic Progress की कहानी नहीं है। सिर्फ यहाँ अटक नहीं जाती है। ये Social Transformation की भी कहानी है।

पिछले 12 साल में देश में 25 करोड़ लोग गरीबी से बाहर निकले हैं। यानि एक ऐसी प्रगति जिसका लाभ समाज के अंतिम व्यक्ति तक पहुंच रहा है। फ्रांस में जितने घर हैं, उससे भी अधिक पक्के घर बीते 12 वर्ष में हमने जरूरतमंदों के लिए बनाए हैं।

अब हर परिवार के पास, गरीब से गरीब क्यों न हो, Bank Account है। Financial Inclusion एक सरकारी कार्यक्रम नहीं, बल्कि सामाजिक परिवर्तन का अभियान बना है।

साथियों,

इन 12 वर्षों की उपलब्धियों में, एक उपलब्धि ऐसी भी है जिसे किसी आंकड़े से, या अंकों से, नहीं मापा जा सकता। वह है 140 करोड़ भारतीयों का आत्मविश्वास।

आज का भारत और आज के भारत का युवा बहुत बड़े सपने देख रहा है। भारत का किसान नई संभावनाओं के साथ आगे बढ़ रहा है। भारत की महिलाएं नए नेतृत्व का परिचय दे रही हैं। इसलिए ये सिर्फ Achievements के 12 साल नहीं हैं, ये भारत की एस्पिरेशन्स को नई बुलंदी देने का कालखंड रहा है।

साथियों,

एक समय था जब दूर-दराज के गांवों तक आधुनिक सुविधाएं पहुंचाना वाकई बहुत मुश्किल भरा था। आज उन्हीं गांवों में बिजली भी है, इंटरनेट भी है, और डिजिटल सेवाओं की पूरी दुनिया भी है। आज एक क्लिक पर, कभी भी, कहीं भी बैंकिंग सेवाएं उपलब्ध हैं।

आज मोबाइल फोन, भारत के नागरिकों को अनेक सुविधाओं से कनेक्ट कर रहा है। हमारे किसान, हमारे मछुआरे, हमारे dairy farmers, हमारी महिलाएं, हमारे स्टूडेंट्स, सभी टेक्नोलॉजी के माध्यम से सशक्त हो रहे हैं, और अपने लिए नए अवसर बना रहे हैं।

साथियों,

आपने 125 करोड़ से अधिक Aadhaar IDs के बारे में सुना है। लेकिन आज भारत सिर्फ पहचान को डिजिटल नहीं बना रहा। आज करीब 90 करोड़ भारतीयों की Unique Digital Health IDs बनाई जा चुकी हैं। जिससे मेडिकल रिकॉर्ड सुरक्षित और accessible बन गए हैं। इससे हेल्थकेयर डिलीवरी और अधिक आसान और efficient हो रही है।

साथियों,

इन उपलब्धियों की सबसे बड़ी विशेषता यह है कि इनमें से अधिकांश चीजें कुछ वर्ष पहले तक कल्पना जैसी लगती थीं। कौन सोच सकता था कि गांव-गांव तक हाई-स्पीड इंटरनेट पहुंचेगा ? कौन सोच सकता था कि दूर-सुदूर के गांवों में भी QR code जीवन का हिस्सा बन जायेगा ? गांव में कोई बहन, ड्रोन से खेती करने में मदद करेगी, ये भी असंभव लगता था।

लेकिन आज यह सब, भारत के करोड़ों लोगों के जीवन का सामान्य हिस्सा बनता जा रहा है। और आपको गर्व होगा साथियों, यही नए भारत की पहचान है।

जो कभी सपना था, वह आज सच्चाई है। जो कभी नामुमकिन लगता था, वो आज मुमकिन हुआ है, औऱ ये करने के पीछे सबसे बड़ी ताकत क्या है? किसकी वजह से ये सब संभव हुआ है? यह मोदी के कारण नहीं, वो ताकत है- भारत का लोकतंत्र, भारत की डेमोक्रेसी। इस डेमोक्रेसी में सबका साथ है, सबका विकास है।

साथियों,

आज से 50 या 100 साल बाद जब भारत के इस कालखंड की समीक्षा होगी, तो ये बात उभरकर सामने आएगी कि इस कालखंड को भारत की Aspirations ने ड्राइव किया। यह भारत के एस्पिरेशन्स का नया युग है।

जहां बिजली पहुंची है, वहां लोग सिर्फ बिजली नहीं चाहते, वे Smart Living चाहते हैं। जहां ट्रेन पहुंची है, वहां लोग High-Speed Connectivity चाहते हैं। जहां हाईवे बने हैं, वहां लोग World-Class Expressways चाहते हैं। जहां इंटरनेट पहुंचा है, वहां लोग AI और Digital Innovation में नेतृत्व चाहते हैं।

यानि आज भारत के लोग अपने जीवन को भी Next Level पर ले जाना चाहते हैं, और भारत को भी Next Level पर ले जाना उनका मकसद है, उनका संकल्प है, उनके सपने है।

और साथियों,

यही Aspirations आज भारत की विकास यात्रा की सबसे बड़ी शक्ति हैं। मैं आपको भारत की Space Journey का उदाहरण दूंगा।

भारत ने चंद्रयान को चंद्रमा के South Pole पर उतारा। दुनिया ने इसे एक बहुत बड़ी उपलब्धि माना। लेकिन भारत इसे अपनी मंजिल मानकर रुका नहीं। आज देश गगनयान की तैयारी कर रहा है। भारत अंतरिक्ष में अपना Space Station बनाने की दिशा में आगे बढ़ रहा है।

हमारे Space Startups Global Space Economy में अपनी जगह बनाने के लिए पुरजोश काम कर रहे हैं, आगे बढ़ रहे हैं।

साथियों,

Green Energy के क्षेत्र में भी भारत की यही एस्पिरेशंस दिखाई देती है। Solar Power में भारत की उपलब्धियों की दुनिया भर में लगातार चर्चा हो रही हैं। लेकिन भारत अगली छलांग की तैयारी कर रहा है।

Green Hydrogen में बड़े निवेश हो रहे हैं। Advanced Nuclear Energy पर तेजी से काम हो रहा है। आपने भारत के Fast Breeder nuclear Reactor से जुड़ी प्रोग्रेस के बारे में भी सुना ज़रूर होगा। ये भारत के न्यूक्लियर एनर्जी लैंडस्केप में क्रांतिकारी परिवर्तन करने का बहुत बड़ा अचीवमेंट हमारे सीसेन्टिस्टों ने किया है।

साथियों,

आज का भारत भविष्य का पूरा Ecosystem बना रहा है। भारत एक साथ हर उस क्षेत्र में निवेश कर रहा है, जो आने वाले दशकों की दिशा तय करेगा।

अभी आपने कुछ दिन पहले ही देखा है नीस में भारत इनोवेट्स का एक आयोजन किया। ये इवेंट भारत के डीप टेक सामर्थ्य को दुनिया तक पहुंचाने का एक और माध्यम था। इसमें भारत के 120 Deep-Tech Startups उपस्थित थे। Bharat Innovates में करीब एक हजार चार सौ B2B Meetings हुईं है। कई Startups के लिए Investment Commitments आगे बढ़ीं, Commercial Orders के लिए रास्ते खुले। French और European Universities तथा Incubators के साथ Engagements बढ़ रही हैं।

Student Exchanges, Joint Research, और Innovation Support के नए रास्ते बने। इसलिए Bharat Innovates सिर्फ एक Summit नहीं रहा। यह Innovation Diplomacy का एक नया मॉडल बना है।

और आज ही पेरिस में VivaTech इवेंट के जरिए, इस यात्रा को हमने और आगे बढ़ाया। नीस में हमने Ideas को Capital से जोड़ा और पेरिस में Indian Innovation को Global Scale से जोड़ा। आज दुनिया देख रही है भारत केवल भविष्य के लिए तैयार नहीं हो रहा है। भारत भविष्य को आकार दे रहा है।

साथियों,

एक समय था, जब देशों के बीच रिश्ते केवल व्यापार से तय होते थे। आज व्यापार के साथ-साथ Trust यानि भरोसा भी उतना ही महत्वपूर्ण हो गया है।

हर देश Reliable Supply Chains चाहता है। हर देश Stable Partnerships चाहता है। हर देश ऐसे साथियों की तलाश में है, जिन पर लंबे समय तक भरोसा किया जा सके। और ऐसे समय में, भारत विश्व में एक Trusted Partner के रूप में उभर रहा है।

एवियां में G7 बैठक के दौरान मैंने trust based partnerships बनाने पर ज़ोर दिया। ग्लोबल साउथ के देशों के साथ equal पार्टनर्स के रूप में आगे बढ़ने का आह्वान किया। भारत का G7 समिट में संदेश था Global Governance तभी प्रभावी होगी जब वह Inclusive होगी। Global Growth तभी Sustainable होगी जब वह शेयर्ड होगी। और Global Technology तभी मानवता के लिए उपयोगी होगी जब वह Trusted होगी।

साथियों,

भारत और दुनिया के बीच व्यापारिक रिश्तों में नई ऊर्जा नज़र आ रही है। फ्रांस के साथ भारत का ट्रेड लगतार बढ़ रहा है। पिछले कुछ वर्षों में भारत ने दुनिया के अनेक देशों के साथ Free Trade Agreements किए हैं। यूरोपियन यूनियन हो, यूनाइटेड किंगडम हो दुनिया के हर देश, हर रीजन के साथ भारत समझौते कर रहा है।

अगले महीने से भारत और UK के बीच ट्रेड एग्रीमेंट भी लागू हो जाएगा। यह एग्रीमेंट भारत के farmers, workers और innovators को अनेक नए अवसर प्रदान करेगा।

साथियों,

आज दुनिया Uncertainty और Disruption के दौर से गुजर रही है। ऐसे समय में भारत और फ्रांस की साझेदारी विश्वास, स्थिरता और सहयोग का एक मजबूत स्तंभ बन रहा है।

इस वर्ष हमने भारत और फ्रांस के संबंधों को Special Global Strategic Partnership का दर्जा दिया था। नीस में मेरे मित्र President Macron और मैंने हमारे संबंधों को force for global good बनाने पर चर्चा की। Defence से लेकर space और नुक्लियर तक AI और क्रिटीकल मिनरल्स से लेकर high speed railway तक, हर क्षेत्र में हम मिलकर आगे बढ़ेंगे।

साथियों,

Solar energy हो, या AI के क्षेत्र में सहयोग हो, भारत और फ्रांस मिलकर ऐसे समाधान विकसित कर रहे हैं जो पूरी मानवता के हित में हैं। पिछले वर्ष पेरिस में और इस वर्ष दिल्ली में हमने AI Summit को Co-chair किया।

अब हम साथ मिलकर अगले वर्ष “तृष्णा” satellite को लॉन्च करने जा रहें हैं। यह “तृष्णा” satellite जो विश्व में फूड और वाटर सिक्युरिटी सुनिश्चित करने में योगदान देगा।

और साथियों,

यह सभी गवर्नमेंट टू गवर्नमेंट पहलो में आप सभी का योगदान बहुत महत्वपूर्ण है। ये आप हैं जो भारत और यूरोप के बीच सबसे मजबूत सेतु हैं। आप दोनों समाजों को समझते हैं। दोनों बाजारों को समझते हैं। आने वाले समय में Talent, Trade, Technology, Tourism और Investment के नए अवसरों को आगे बढ़ाने में आपकी भूमिका लगातार बढ़ने वाली हैं।

साथियों,

भारत और फ्रांस के रिश्तों को साझा इतिहास, साझा मूल्यों और साझा विश्वास ने आगे बढ़ाया है। विश्व युद्धों के दौरान फ्रांस की धरती पर बलिदान देने वाले भारतीय सैनिकों की स्मृतियां आज भी हमें जोड़ती हैं।

मुझे पहले नव शापेल में श्रद्धांजलि देने का अवसर मिला, पिछले वर्ष प्रेसिडेंट मैक्रों के साथ मार्सेय के वॉर मेमोरियल जाने का अवसर भी मिला। ये हमारी साझा विरासत है।

फ्रांस, भारतीयों के योगदान को संजोता भी है और सराहता भी है। भारतीय मूल की नूर इनायत खान हों, जिन्होंने फ्रांस की Resistance के लिए अपना जीवन बलिदान किया, या महाराजा रणजीत सिंह के साथ काम करने वाले जनरल जां फ्रांस्वा अलार हों ये सभी भारत और फ्रांस की साझा विरासत के प्रतीक हैं।

भारत के राज्य पुडुचेरी में भी फ्रेंच विरासत की झलक दिखाई देती है। वहां का Architecture, वहां की कला-संस्कृति और खान-पान सभी में हमारे संबंधों की महेक है।

साथियों,

इस समय फ्रांस समेत पूरी दुनिया में International Yoga Day की तैयारी भी चल रही है। इस अवसर पर मैं, फ्रांस में योग को आगे बढ़ाने वाले श्रीमान महेश घाट्राड्याल जी को भी आदरपूर्वक श्रद्धांजलि देता हूं। मैं पद्म पुरस्कार से सम्मानित, शार्लोत शोपां जी को भी प्रणाम करता हूं। जिन्होंने सौ वर्ष की आयु में भी, योग के माध्यम से फ़्रांस को भारत की विरासत से जोड़ा है। उनका जीवन यह सिद्ध करता है: Yoga does not add years to life, it adds life to years.

साथियों,

मैं फ्रेद नेग्री जी को भी आदरपूर्वक श्रद्धापूर्वक याद करता हूं। भारतीय विरासत को संरक्षित करने में उनका योगदान अतुल्य रहा है।

साथियों,

भारत और फ्रांस को कनेक्ट करने वाली एक और चीज है, और वो है फुटबॉल। इस वक्त यहां फुटबॉल फीवर पूरे जोर पर है। फ्रांस में इसकी दीवानगी, चप्पे-चप्पे पर दिखती है। लेकिन भारत में भी फुटबॉल का क्रेज़ सिर चढ़कर बोलता है।

खासतौर पर फ्रांस की टीम के फैन्स भारत में बहुत अधिक हैं। फ़्रांस ने इस वर्ल्ड कप की शुरुआत एक जोरदार जीत से शुरू की है। मैं फ्रांस की टीम को बहुत-बहुत शुभकामनाएं देता हूं।

साथियों,

जाने से पहले, आप सभी के लिए कुछ और अच्छी खबरें भी लेकर के आया हूँ। वो आपके लिए हैं। पिछले वर्ष, मार्सेय में कॉन्सुलेट खोला गया, इससे काफी अधिक सुविधा मिल रही है। कुछ हफ्ते पहले, Indian Nationals के लिए French Airports पर Visa-free Transit की व्यवस्था शुरू हो गई है।

Students और Professionals की Mobility बढ़ाना हो, या Educational Qualifications की Mutual Recognition की बात हो, या फिर French Universities के भारत में Campus खोलना हो, इन सभी पर हम मिलकर आगे बढ़ रहें हैं।

अब फ्रांस में UPI के उपयोग का दायरा भी और बढ़ने जा रहा है। यानि भारत-फ्रांस कनेक्ट भी Instant और आपसी Payment भी Instant!

साथियों,

इन सभी पहलों से, हम भारत और फ़्रांस को और करीब ला रहें हैं। और मैं फिर कहूंगा इस साझेदारी की नींव, इस रिश्ते की असली ताकत आप सभी हैं। आप सब मेरे देशवासी हैं।

आज जब भारत तेज़ी से विकसित भारत के लक्ष्य की ओर बढ़ रहा है, तो मैं आप सभी से भारत के साथ और गहराई से जुडने का आग्रह करूंगा। इससे भारत की विकास यात्रा को नई शक्ति मिलेगी, और आपको अपनी पुरखों की धरती की सेवा करने का अवसर भी मिलेगा।

इन्हीं शब्दों के साथ आप सभी के प्रेम आपके उत्साह और इस आत्मीय स्वागत के लिए मैं एक बार फिर आप सभी का आभार व्यक्त करता हूं।

भारत माता की जय!

बहुत बहुत धन्यवाद।