ಸಾರ್ಥಕ್ ಪಿಡಿಎಸ್ (SARTHAK PDS) ಗಾಗಿ ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳಲ್ಲಿ 25,530 ಕೋಟಿ ರೂ. ವೆಚ್ಚ ಮಾಡಲಿದೆ
ಹೆಚ್ಚಿನ ಎಫ್ ಪಿ ಎಸ್ (FPS) ವಿತರಕರ ಕಮಿಷನ್ ನೊಂದಿಗೆ ಆಹಾರ ಧಾನ್ಯಗಳ ಕಟ್ಟಕಡೆಯ ಹಂತದ ವಿತರಣೆಯನ್ನು ಖಚಿತಪಡಿಸಲು ಯೋಜನೆಗಳ ಮುಂದುವರಿಕೆ
ಪಿಡಿಎಸ್ (PDS) ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಲು, ಸುಧಾರಿತ ತಂತ್ರಜ್ಞಾನಗಳ ಮೂಲಕ ಬುದ್ಧಿವಂತಿಕೆಯಿಂದ ಅತ್ಯುತ್ತಮಗೊಳಿಸಲಾದ ಪಿಡಿಎಸ್ ಕಾರ್ಯಾಚರಣೆಗಳಿಗಾಗಿ ಸರ್ಕಾರವು ಶ್ರಮಿಸುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA), 16ನೇ ಹಣಕಾಸು ಆಯೋಗದ ಅವಧಿಯಲ್ಲಿ 25,530 ಕೋಟಿ ರೂಪಾಯಿಗಳ ಕೇಂದ್ರದ ಪಾಲಿನ ವೆಚ್ಚದೊಂದಿಗೆ "ಪಡಿತರ ಸಾಗಣೆ ಮತ್ತು ನಿರ್ವಹಣೆಯಲ್ಲಿ ಸಹಾಯ-ಪಿಡಿಎಸ್ನಲ್ಲಿ ಆಟೊಮೇಷನ್ನೊಂದಿಗೆ ಆದಾಯ" (SARTHAK PDS) ಯೋಜನೆಯನ್ನು ಒಂದು ಛತ್ರಿ ಯೋಜನೆಯಾಗಿ ಮುಂದುವರಿಸಲು ಅನುಮೋದನೆ ನೀಡಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಒಳಗಿನ ಆಹಾರ ಧಾನ್ಯಗಳ ಸಾಗಣೆ ಮತ್ತು ನಿರ್ವಹಣೆ ಹಾಗೂ ನ್ಯಾಯಬೆಲೆ ಅಂಗಡಿ (FPS) ಡೀಲರ್ ಗಳ ಲಾಭದ ಮಿತಿ ಗಾಗಿ ತಗಲುವ ವೆಚ್ಚವನ್ನು ಸರಿದೂಗಿಸಲು ಕೇಂದ್ರದ ನೆರವಿನ ನಿಯಮಗಳನ್ನು ಪರಿಷ್ಕರಿಸಲು ಮತ್ತು ಕೇಂದ್ರದ ನೆರವಿನ ಪ್ರಸ್ತುತ ಧನಸಹಾಯದ ಮಾದರಿಯನ್ನು ಮುಂದುವರಿಸಲು ಕೂಡ ಸಿಸಿಇಎ (CCEA) ನಿರ್ಧರಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 (NFSA) ಅನುಷ್ಠಾನವನ್ನು ಸಮಗ್ರವಾಗಿ ಬಲಪಡಿಸಲು, ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳಾದ: (i) "ಎನ್ ಎಫ್ ಎಸ್ ಎ ಅಡಿಯಲ್ಲಿ ಆಹಾರ ಧಾನ್ಯಗಳ ರಾಜ್ಯದೊಳಗಿನ ಸಾಗಣೆ ಮತ್ತು ಎಫ್ಪಿಎಸ್ ಡೀಲರ್ ಗಳ ಮಾರ್ಜಿನ್ ಗಾಗಿ ರಾಜ್ಯ ಏಜೆನ್ಸಿಗಳಿಗೆ ಸಹಾಯ" ಮತ್ತು (ii) "ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ ಮತ್ತು ಸುಧಾರಣೆಗಳ ಯೋಜನೆ (SMART PDS)" ಇವುಗಳನ್ನು ಸಂಯೋಜಿಸಿ ಈ ಯೋಜನೆಯನ್ನು ಒಂದು ಛತ್ರಿ ಯೋಜನೆಯಾಗಿ ರೂಪಿಸಲಾಗಿದೆ.

SARTHAK-PDS ಯೋಜನೆಯು (ಎ) ರಾಜ್ಯದೊಳಗಿನ ಸಾಗಣೆ, ನಿರ್ವಹಣೆ ಮತ್ತು ನ್ಯಾಯಬೆಲೆ ಅಂಗಡಿ (FPS) ಡೀಲರ್ ಗಳ ಲಾಭದ ಮಿತಿ ಗಾಗಿ ಖಾತರಿಪಡಿಸಿದ ಹಣಕಾಸಿನ ನೆರವನ್ನು ಒದಗಿಸುವ, ಮತ್ತು (ಬಿ) ಕೊನೆಯ ಹಂತದವರೆಗೂ ಸೇವೆ ತಲುಪಿಸುವುದನ್ನು ಖಚಿತಪಡಿಸುವ, ಸೋರಿಕೆಯನ್ನು ಕನಿಷ್ಠಗೊಳಿಸುವ ಹಾಗೂ ಎನ್ ಎಫ್ ಎಸ್ ಎ (NFSA) ಅಡಿಯಲ್ಲಿ ಆಹಾರ ಭದ್ರತೆಗೆ ದೇಶದ ಬದ್ಧತೆಯನ್ನು ಬಲಪಡಿಸುವ ಒಂದು ಏಕೀಕೃತ, ನಾಗರಿಕ-ಕೇಂದ್ರಿತ, ಬುದ್ಧಿವಂತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ಪಿಡಿಎಸ್ ರಚನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ವಿಲೀನಗೊಂಡ ಯೋಜನೆಯು 31.03.2031 ರವರೆಗೆ ಕಾರ್ಯನಿರ್ವಹಿಸಲಿದೆ.

SARTHAK-PDS ಯೋಜನೆಯು ತಂತ್ರಜ್ಞಾನ ಆಧಾರಿತ ಉಸ್ತುವಾರಿಗಾಗಿ ರಾಜ್ಯ ಕಮಾಂಡ್ ಕಂಟ್ರೋಲ್ ಕೇಂದ್ರಗಳು, ನೈಜ-ಸಮಯದ ಮೇಲ್ವಿಚಾರಣೆಗಾಗಿ ಪ್ರಮಾಣಿತ ರಚನೆಗಳು ಮತ್ತು ಏಕೀಕೃತ ಡೇಟಾಬೇಸ್ ಗಳನ್ನು ರಚಿಸುವ ಮೂಲಕ ಹಾಗೂ ಪಿಡಿಎಸ್ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಲು ಐ ಎಸ್ ಒ (ISO) ಪ್ರಮಾಣೀಕೃತ ಪ್ರಕ್ರಿಯೆಯ ಚೌಕಟ್ಟುಗಳನ್ನು ರೂಪಿಸುವ ಮೂಲಕ ಕೃತಕ ಬುದ್ಧಿಮತ್ತೆ (AI), ಮಷಿನ್ ಲರ್ನಿಂಗ್ (ML), ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಮತ್ತು ಬ್ಲಾಕ್ ಚೈನ್ನಂತಹ ಸುಧಾರಿತ ತಂತ್ರಜ್ಞಾನಗಳ ಮೂಲಕ ಪಿಡಿಎಸ್ ಕಾರ್ಯಾಚರಣೆಗಳನ್ನು ಆಧುನೀಕರಿಸಲು, ಸಂಯೋಜಿಸಲು ಮತ್ತು ಬುದ್ಧಿವಂತಿಕೆಯಿಂದ ಅತ್ಯುತ್ತಮವಾಗಿಸಲು ಶ್ರಮಿಸುತ್ತದೆ.

ಭಾರತ ಸರ್ಕಾರವು ದೇಶದ ಜನತೆಗೆ ಸಾಮಾಜಿಕ ಮತ್ತು ಕಾನೂನಾತ್ಮಕ ಬದ್ಧತೆಯನ್ನು ಹೊಂದಿದೆ - ಅಗತ್ಯ ಪ್ರಮಾಣದ ಗುಣಮಟ್ಟದ ಆಹಾರ ಧಾನ್ಯಗಳು ಲಭ್ಯವಾಗುವಂತೆ ಮಾಡುವ ಮೂಲಕ ಅವರಿಗೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತರಿಪಡಿಸಿ ಗೌರವಾನ್ವಿತ ಜೀವನವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. NFSA ಅಡಿಯಲ್ಲಿ ಒಳಪಡುವ 81.35 ಕೋಟಿ ಜನರಿಗೆ ಭಾರತ ಸರ್ಕಾರದ ಈ ಬದ್ಧತೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಯೋಜನೆಯು ಕಾರ್ಯನಿರ್ವಹಿಸಲಿದೆ. ಶಾಸನಬದ್ಧ ಮತ್ತು ನೀತಿ ಚೌಕಟ್ಟಿನ ಆಧಾರದ ಮೇಲೆ, SARTHAK-PDS ಹಣಕಾಸಿನ ನೆರವಿನ ಅಂಶವನ್ನು ಉಳಿಸಿಕೊಂಡು ಅದನ್ನು ವ್ಯವಸ್ಥಿತಗೊಳಿಸುತ್ತದೆ ಮತ್ತು ಅದೇ ಸಮಯದಲ್ಲಿ ಅದನ್ನು ಆಧುನಿಕ, ತಂತ್ರಜ್ಞಾನ ಆಧಾರಿತ ಪಿಡಿಎಸ್ ವ್ಯವಸ್ಥೆಯೊಳಗೆ ಅಳವಡಿಸುತ್ತದೆ.

ಕಳೆದ ದಶಕದಲ್ಲಿ, ಸರ್ಕಾರವು TPDS ಎಂಡ್-ಟು-ಎಂಡ್ ಗಣಕೀಕರಣ, ಪಿಡಿಎಸ್ ನ ಸಂಯೋಜಿತ ನಿರ್ವಹಣೆ (IM-PDS) ಮತ್ತು SMART PDS ನಂತಹ ಹಲವು ಡಿಜಿಟಲೀಕರಣ ಉಪಕ್ರಮಗಳನ್ನು ಜಾರಿಗೆ ತಂದಿದೆ; ಇದರೊಂದಿಗೆ ಮೇರಾ ರೇಷನ್, ಅನ್ನ ಮಿತ್ರ, ರೈಟ್ ಫುಲ್ ಟಾರ್ಗೆಟಿಂಗ್ ಡ್ಯಾಶ್ಬೋರ್ಡ್ ಮತ್ತು ಅನ್ನ ಸಹಾಯತಾ ದಂತಹ ನಾಗರಿಕ-ಕೇಂದ್ರಿತ ಅಪ್ಲಿಕೇಶನ್ ಗಳನ್ನು ಜಾರಿಗೆ ತರಲಾಗಿದೆ. ಅಲ್ಲದೆ 1 ನೇ ಏಪ್ರಿಲ್ 2023 ರಿಂದ, ಸ್ಮಾರ್ಟ್ ಪಿಡಿಎಸ್ ಯೋಜನೆಯು ತಂತ್ರಜ್ಞಾನ ಆಧಾರಿತ ಸುಧಾರಣೆಗಳ ಪ್ರಮುಖ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದ್ದು, 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಚೀಟಿಗಳ ಸಂಪೂರ್ಣ  ಡಿಜಿಟಲೀಕರಣ, ಆಧಾರ್ ಜೋಡಣೆ, ಇ-ಪಿಒಎಸ್ (e-PoS) ಮೂಲಕ ಎಫ್ ಪಿ ಎಸ್ (FPS) ಸ್ವಯಂಚಾಲನೆ, ಆನ್ ಲೈನ್ ಹಂಚಿಕೆ ಮತ್ತು ಗಣಕೀಕೃತ ಪೂರೈಕೆ ಸರಪಳಿ ನಿರ್ವಹಣೆಯನ್ನು ಸಾಧ್ಯವಾಗಿಸಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Auckland's Sky Tower lights up in India's tricolour as PM Modi begins historic New Zealand visit

Media Coverage

Auckland's Sky Tower lights up in India's tricolour as PM Modi begins historic New Zealand visit
NM on the go

Nm on the go

Always be the first to hear from the PM. Get the App Now!
...
Prime Minister expresses grief over boat accident involving Indian nationals near Phu Quoc, Vietnam
July 11, 2026

The Prime Minister, Shri Narendra Modi, has expressed deep grief over the tragic boat accident involving Indian nationals near Phu Quoc, Vietnam.

The Prime Minister conveyed his sincere condolences to the families who lost their loved ones and prayed for the early recovery of the injured survivors.

Shri Modi said that the Embassy and Consulate are providing all possible assistance. He also noted that Indian officials are in close contact with the Vietnamese authorities.

In a post on X, Shri Modi said;

“Extremely saddened to learn about the tragic news of a boat accident involving Indian nationals near Phu Quoc, Vietnam.

My sincere condolences to the families who lost their loved ones. My prayers for the early recovery of the injured survivors.

Our Embassy and Consulate are providing all possible assistance. Our officials are also in close contact with the Vietnamese authorities.”