ಸುಮಾರು 5000 ಕೋಟಿ ರೂಪಾಯಿ ಮೌಲ್ಯದ ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
ಸ್ವದೇಶ್ ದರ್ಶನ್ ಮತ್ತು ಪ್ರಸಾದ್ ಯೋಜನೆಯಡಿಯಲ್ಲಿ 1400 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 52 ಪ್ರವಾಸೋದ್ಯಮ ವಲಯದ ಯೋಜನೆಗಳನ್ನು ಲೋಕಾಪರ್ಣೆ ಮಾಡಿದರು ಮತ್ತು ಉದ್ಘಾಟಿಸಿದರು
ಶ್ರೀನಗರದ ‘ಹಜರತ್‌ ಬಾಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ’ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದರು
ಸವಾಲು ಆಧರಿತ ಗಮ್ಯಸ್ಥಾನ ಅಭಿವೃದ್ಧಿ ಯೋಜನೆ (ಚಾಲೆಂಜ್ ಬೇಸ್ಡ್ ಡೆಸ್ಟಿನೇಶನ್ ಡೆವಲಪ್ ಮೆಂಟ್ ಸ್ಕೀಮ್) ಅಡಿಯಲ್ಲಿ ಆಯ್ಕೆ ಮಾಡಲಾದ ಪ್ರವಾಸಿ ತಾಣಗಳನ್ನು ಘೋಷಿಸಿದರು
‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ 2024’ ಮತ್ತು ‘ಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೊರಾ ಅಭಿಯಾನ’ ಕ್ಕೆ ಚಾಲನೆ ನೀಡಿದರು
ಜಮ್ಮು ಮತ್ತು ಕಾಶ್ಮೀರದ ಹೊಸ ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು
“ಮೋದಿಯು ಈ ಪ್ರೀತಿಯ ಋಣವನ್ನು ತೀರಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ನಿಮ್ಮ ಹೃದಯವನ್ನು ಗೆಲ್ಲಲು ನಾನು ಈ ಎಲ್ಲಾ ಕಠಿಣ ಕೆಲಸವನ್ನು ಮಾಡುತ್ತಿದ್ದೇನೆ ಮತ್ತು ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂದು ನನಗೆ ವಿಶ್ವಾಸವಿದೆ”
"ಅಭಿವೃದ್ಧಿಯ ಶಕ್ತಿ, ಪ್ರವಾಸೋದ್ಯಮದ ಸಾಮರ್ಥ್ಯ, ರೈತರ ದಕ್ಷತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಜನರ ನಾಯಕತ್ವವು ವಿಕಸಿತ ಜಮ್ಮು ಕಾಶ್ಮೀರಕ್ಕೆ ದಾರಿ ಮಾಡಿಕೊಡುತ್ತದೆ
ಶ್ರೀ ನಜೀಮ್ ಅವರು ಭಾರತದ ಯುವಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದು ಅವರು ಹೇಳಿದರು.
ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿ ಪರಿಸರ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು
"ಜಮ್ಮು ಮತ್ತು ಕಾಶ್ಮೀರದ ಜನರ ನಗುಮುಖವನ್ನು ನೋಡಿದಾಗ ದೇಶದ 140 ಕೋಟಿ ನಾಗರಿಕರು ನೆಮ್ಮದಿಯಿಂದ ಇರುತ್ತಾರೆ" ಎಂದು ಪ್ರಧಾನಿ ಮೋದಿ ಹೇಳಿದರು.
ಇದು ಮೋದಿಯ ಗ್ಯಾರಂಟಿ ಮತ್ತು ಮೋದಿಯ ಗ್ಯಾರಂಟಿ ಎಂದರೆ ಗ್ಯಾರಂಟಿಯನ್ನು ಈಡೇರಿಸುವ ಗ್ಯಾರಂಟಿ ಎಂದು ನಿಮಗೆಲ್ಲರಿಗೂ ತಿಳಿದಿದೆ” ಎಂದು ಹೇಳಿದರು.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಜಿ, ನನ್ನ ಸಂಪುಟ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜಿ, ನನ್ನ ಗೌರವಾನ್ವಿತ ಸಂಸದೀಯ ಸಹೋದ್ಯೋಗಿ ಮತ್ತು ಈ ಮಣ್ಣಿನ ಮಗ ಗುಲಾಂ ಅಲಿ ಜಿ ಮತ್ತು ಜಮ್ಮು-ಕಾಶ್ಮೀರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ನನ್ನ ಕಾಶ್ಮೀರಿ ಸಹೋದರ ಸಹೋದರಿಯರೆ, ಭೂಮಿಯ ಮೇಲಿನ ಈ ಸ್ವರ್ಗದಲ್ಲಿರುವಾಗ, ಈ ಅಪೂರ್ವವಾದ ಪ್ರಕೃತಿ ಸೌಂದರ್ಯ ಅನುಭವಿಸುವ, ಈ ಶುದ್ಧ ಗಾಳಿಯನ್ನು ಉಸಿರಾಡುವ ಮತ್ತು ನಿಮ್ಮ ಪ್ರೀತಿಯ ಬೆಚ್ಚಗಾಗುವ ಭಾವನೆ  ಸೆರೆಹಿಡಿಯಲು ನನಗೆ ಪದಗಳೇ ನಿಲುಕುತ್ತಿಲ್ಲ!

ಇಡೀ ಜಮ್ಮು-ಕಾಶ್ಮೀರದ ಜನರು ಕ್ರೀಡಾಂಗಣದ ಹೊರಗೆ ಜಮಾಯಿಸಿದ್ದರೆ, 285 ಬ್ಲಾಕ್‌ಗಳಿಂದ ಸುಮಾರು 1 ಲಕ್ಷ ಜನರು ತಂತ್ರಜ್ಞಾನದ ಮೂಲಕ ಸಂಪರ್ಕ ಹೊಂದಿದ್ದಾರೆ ಎಂದು ಗವರ್ನರ್ ಸಾಹೇಬ್ ಉಲ್ಲೇಖಿಸಿದ್ದಾರೆ. ಇಂದು ನಾನು ಜಮ್ಮು- ಕಾಶ್ಮೀರದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇದು ನಾವು ದಶಕಗಳಿಂದ ಕಾತುರದಿಂದ ಕಾಯುತ್ತಿರುವ ಹೊಸ ಜಮ್ಮು-ಕಾಶ್ಮೀರವಾಗಿದೆ. ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹೊಸ ಜಮ್ಮು-ಕಾಶ್ಮೀರ ಇದು. ಈ ಹೊಸ ಜಮ್ಮು-ಕಾಶ್ಮೀರದ ಭವಿಷ್ಯವು ಉಜ್ವಲವಾಗಿ ಹೊಳೆಯುತ್ತದೆ, ಈ ಹೊಸ ಜಮ್ಮು-ಕಾಶ್ಮೀರವು ಸವಾಲುಗಳನ್ನು ಜಯಿಸುವ ಆತ್ಮವಿಶ್ವಾಸ ಹೊಂದಿದೆ. ನಿಮ್ಮ ಮಂದಹಾಸದ ಮುಖಗಳಿಗೆ ಇಡೀ ರಾಷ್ಟ್ರವೇ ಸಾಕ್ಷಿಯಾಗಿದೆ, ಇಂದು 140 ಕೋಟಿ ದೇಶವಾಸಿಗಳು ನೆಮ್ಮದಿಯ ಭಾವ ಅನುಭವಿಸುತ್ತಿದ್ದಾರೆ.

 

ಸ್ನೇಹಿತರೆ,

ನಾವು ಮನೋಜ್ ಸಿನ್ಹಾ ಅವರ ಭಾಷಣ ಆಲಿಸಿದೆವು. ಅಭಿವೃದ್ಧಿಯ ವಿಷಯಕ್ಕೆ ಸಂಬಂಧಿಸಿದಂತೆ ಅವರು ಅಂತಹ ವಾಕ್ಚಾತುರ್ಯ ಮತ್ತು ವಿವರವಾದ ಅಂಶಗಳನ್ನು ಸ್ಪಷ್ಟಪಡಿಸಿದರು, ಬಹುಶಃ ಇನ್ನೂ ಹೆಚ್ಚಿನ ಭಾಷಣದ ಅಗತ್ಯವಿಲ್ಲ. ಆದಾಗ್ಯೂ, ನಿಮ್ಮ ಅಗಾಧವಾದ ಪ್ರೀತಿ ಮತ್ತು ಉಪಸ್ಥಿತಿ, ಲಕ್ಷಾಂತರ ಜನರೊಂದಿಗೆ ಸೇರಿರುವುದು ನನಗೆ ಸಮಾನ ಸಂತೋಷ ಮತ್ತು ಕೃತಜ್ಞತೆ ತುಂಬುತ್ತದೆ. ಈ ಪ್ರೀತಿಯ ಋಣ ತೀರಿಸುವಲ್ಲಿ ಮೋದಿ ಅವರು ಯಾವುದೇ ಪ್ರಯತ್ನ ಬಿಡಲಾರರು. 2014ರಿಂದ ಪ್ರತಿ ಭೇಟಿಯಲ್ಲೂ, ನಿಮ್ಮ ಹೃದಯಗಳನ್ನು ಗೆಲ್ಲುವ ನನ್ನ ಬದ್ಧತೆಯನ್ನು ನಾನು ಸತತವಾಗಿ ವ್ಯಕ್ತಪಡಿಸಿದ್ದೇನೆ. ದಿನದಿಂದ ದಿನಕ್ಕೆ, ಆ ಗುರಿ ಸಾಧಿಸುವತ್ತ ಪ್ರಗತಿಯನ್ನು ನಾನು ನೋಡುತ್ತಾ ಬಂದಿದ್ದೇನೆ, ಭವಿಷ್ಯದಲ್ಲೂ ನಿಮ್ಮ ಹೃದಯ ಗೆಲ್ಲುವ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ. ಇದು 'ಮೋದಿ ಗ್ಯಾರಂಟಿ'! ನಿಮಗೆಲ್ಲಾ ತಿಳಿದಿರುವಂತೆ, ಮೋದಿ ಅವರ ಗ್ಯಾರಂಟಿ ಎಂದರೆ ಭರವಸೆಗಳನ್ನು ಈಡೇರಿಸುವ ಭರವಸೆಯಾಗಿದೆ.

ಸ್ನೇಹಿತರೆ,

ಸ್ವಲ್ಪ ಸಮಯದ ಹಿಂದೆ ನಾನು ಜಮ್ಮುವಿಗೆ ಭೇಟಿ ನೀಡಿದ್ದೆ. ಅಲ್ಲಿ ನಾನು 32,000 ಕೋಟಿ ರೂಪಾಯಿ ಮೊತ್ತದ ಮೂಲಸೌಕರ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಆರಂಭಿಸಿದೆ. ಇಂದು ಅಲ್ಪಾವಧಿಯಲ್ಲಿ, ನಿಮ್ಮೆಲ್ಲರನ್ನು ಭೇಟಿಯಾಗಲು ನಾನು ಶ್ರೀನಗರದಲ್ಲಿರುವ ಭಾಗ್ಯ ಪಡೆದುಕೊಂಡಿದ್ದೇನೆ. ಇಲ್ಲಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಒತ್ತು ನೀಡುವ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುವ ಗೌರವ ನನಗೆ ಇದೆ. ಹೆಚ್ಚುವರಿಯಾಗಿ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ನಮ್ಮ ರೈತರಿಗೆ ಅರ್ಪಿಸಲಾಗಿದೆ. 1000 ಯುವಕರು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ. ಅಭಿವೃದ್ಧಿಯ ಸಾಮರ್ಥ್ಯ, ಪ್ರವಾಸೋದ್ಯಮದ ನಿರೀಕ್ಷೆಗಳು, ನಮ್ಮ ರೈತರ ಸಾಮರ್ಥ್ಯಗಳು ಮತ್ತು ಜಮ್ಮು-ಕಾಶ್ಮೀರದಲ್ಲಿ ಯುವಕರ ನಾಯಕತ್ವವು 'ಅಭಿವೃದ್ಧಿ ಹೊಂದಿದ ಜಮ್ಮು-ಕಾಶ್ಮೀರ'ವನ್ನು ನಿರ್ಮಿಸುವಲ್ಲಿ ಪ್ರಮುಖವಾಗಿದೆ. ಜಮ್ಮು-ಕಾಶ್ಮೀರವು ಕೇವಲ ಭೌಗೋಳಿಕ ಪ್ರದೇಶವಲ್ಲ, ಇದು ಭಾರತದ 'ಶಿರ'ವನ್ನು ಪ್ರತಿನಿಧಿಸುತ್ತದೆ, ಇದು ಭಾರತದ ಘನತೆಯನ್ನು ಸಂಕೇತಿಸುತ್ತದೆ. ಮತ್ತು ಎತ್ತರದ ಶಿರದ ಮೇಲೆ ಪ್ರಗತಿ ಮತ್ತು ಗೌರವವನ್ನು ಸೂಚಿಸುತ್ತದೆ. ಆದ್ದರಿಂದ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಅಭಿವೃದ್ಧಿ ಹೊಂದಿದ ಜಮ್ಮು-ಕಾಶ್ಮೀರ  ಅತಿ ಮುಖ್ಯವಾಗಿದೆ.

 

ಸ್ನೇಹಿತರೆ,

ದೇಶದ ಇತರ ಭಾಗಗಳಿಗೆ ಅನ್ವಯಿಸುವ ಕಾನೂನುಗಳನ್ನು ಜಮ್ಮು-ಕಾಶ್ಮೀರಕ್ಕೂ ವಿಸ್ತರಿಸಲು ಬಳಸದ ಸಮಯ ಒಂದಿತ್ತು. ಅದೇ ರೀತಿ, ಬಡವರ ಕಲ್ಯಾಣ ಯೋಜನೆಗಳು ರಾಷ್ಟ್ರವ್ಯಾಪಿ ಜಾರಿಯಾಗಿದ್ದರೂ, ಜಮ್ಮು-ಕಾಶ್ಮೀರದಲ್ಲಿರುವ ನನ್ನ ಸಹೋದರ ಸಹೋದರಿಯರಿಗೆ ಪ್ರಯೋಜನಗಳು ಹೆಚ್ಚಾಗಿ ತಲುಪಲಿಲ್ಲ. ಆದಾಗ್ಯೂ, ಸಮಯವು ತೀವ್ರವಾಗಿ ಬದಲಾಗಿದೆ. ಇಂದು ಶ್ರೀನಗರದಲ್ಲಿ ಸ್ಥಳೀಯ ನಿವಾಸಿಗಳಿಗೆ ಮಾತ್ರವಲ್ಲದೆ, ಇಡೀ ರಾಷ್ಟ್ರಕ್ಕೂ ಪ್ರಯೋಜನಕಾರಿಯಾದ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಶ್ರೀನಗರವು ಜಮ್ಮು-ಕಾಶ್ಮೀರಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಹೊಸ ಪ್ರವಾಸೋದ್ಯಮ ಉಪಕ್ರಮಗಳನ್ನು ಮುನ್ನಡೆಸುತ್ತಿದೆ. ಆದ್ದರಿಂದ, ಜಮ್ಮು- ಕಾಶ್ಮೀರದ ಜನರನ್ನು ಹೊರತುಪಡಿಸಿ, ದೇಶಾದ್ಯಂತ 50ಕ್ಕೂ ಹೆಚ್ಚು ನಗರಗಳ ಜನರು ಇಂದು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಹಾಗಾಗಿ, ರಾಷ್ಟ್ರವು ಶ್ರೀನಗರಕ್ಕೆ ಸಂಪರ್ಕ ಹೊಂದಿದೆ. ಇಂದು ಸ್ವದೇಶ್ ದರ್ಶನ್ ಯೋಜನೆಯಡಿ, ಅದರ ಮುಂದಿನ ಹಂತದಲ್ಲಿ 6 ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಇದರ ಅಡಿ, ಜಮ್ಮು-ಕಾಶ್ಮೀರ ಮತ್ತು ದೇಶದ ಇತರ ಭಾಗಗಳಿಗೆ 30 ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದಲ್ಲದೆ, ಪ್ರಸಾದ್ ಯೋಜನೆ ಅಡಿ, 3 ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಜತೆಗೆ, ಹೆಚ್ಚುವರಿ 14 ಯೋಜನೆಗಳು. ಪವಿತ್ರ ಹಜರತ್‌ಬಾಲ್ ದರ್ಗಾದಲ್ಲಿ ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಉಪಕ್ರಮಗಳನ್ನು ಸಹ ಪೂರ್ಣಗೊಳಿಸಲಾಗಿದೆ. ಇದಲ್ಲದೆ, ಮುಂದಿನ 2 ವರ್ಷಗಳಲ್ಲಿ 40ಕ್ಕೂ ಹೆಚ್ಚು ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಗುರುತಿಸಿದೆ. ಒಂದು ವಿಶಿಷ್ಟ ಅಭಿಯಾನ, 'ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್' ಅಭಿಯಾನವನ್ನು ಇಂದು ಉದ್ಘಾಟಿಸಲಾಗಿದೆ. ಇದರಲ್ಲಿ ದೇಶದಾದ್ಯಂತದ ಜನರು ಆನ್‌ಲೈನ್‌ಗೆ ಹೋಗಬಹುದು ಮತ್ತು ಭೇಟಿ ನೀಡಲು ಯೋಗ್ಯವಾದ ಸ್ಥಳಗಳನ್ನು ನಾಮನಿರ್ದೇಶನ ಮಾಡಬಹುದು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಹೆಚ್ಚು ಜನಪ್ರಿಯ ತಾಣಗಳನ್ನು ಸರ್ಕಾರವು ಪ್ರವಾಸಿ ಆಕರ್ಷಣೆಗಳಾಗಿ ಅಭಿವೃದ್ಧಿಪಡಿಸಲಾಗುವುದು. ಇಂದಿನಿಂದ ನಾವು 'ಚಲೋ ಇಂಡಿಯಾ' ಅಭಿಯಾನದ ಮೂಲಕ ಭಾರತದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ವಿಶ್ವಾದ್ಯಂತ ಅನಿವಾಸಿ ಭಾರತೀಯರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಭಾರತಕ್ಕೆ ಭೇಟಿ ನೀಡಲು ಕನಿಷ್ಠ 5 ಭಾರತೀಯರಲ್ಲದ ಕುಟುಂಬಗಳನ್ನು ಆಹ್ವಾನಿಸಲು ಅನಿವಾಸಿ ಭಾರತೀಯರನ್ನು ಒತ್ತಾಯಿಸಲಾಗಿದೆ. ಹೆಚ್ಚುವರಿಯಾಗಿ, 'ಚಲೋ ಇಂಡಿಯಾ' ಅಭಿಯಾನದ ಅಡಿ, ವಿದೇಶದಲ್ಲಿ ವಾಸಿಸುವ ಜನರನ್ನು ಭಾರತಕ್ಕೆ ಭೇಟಿ ನೀಡಲು ಪ್ರೇರೇಪಿಸುವಂತೆ ವೆಬ್‌ಸೈಟ್ ಪ್ರಾರಂಭಿಸಲಾಗಿದೆ. ಈ ಯೋಜನೆಗಳು ಮತ್ತು ಅಭಿಯಾನಗಳಿಂದ ಜಮ್ಮು-ಕಾಶ್ಮೀರದ ಜನರು ಗಮನಾರ್ಹ ಪ್ರಯೋಜನಗಳನ್ನು ಪಡೆಯಲು ಸಿದ್ಧರಾಗಿದ್ದಾರೆ. ಇದಲ್ಲದೆ, ನಾನು ಇನ್ನೊಂದು ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಭಾರತೀಯ ಪ್ರವಾಸಿಗರು ತಮ್ಮ ಪ್ರಯಾಣ ಸಮಯದಲ್ಲಿ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವಂತೆ ಒತ್ತಾಯಿಸುತ್ತೇನೆ. ಪ್ರವಾಸಿಗರು ತಮ್ಮ ಒಟ್ಟು ಪ್ರಯಾಣದ ಬಜೆಟ್‌ನಲ್ಲಿ ಕನಿಷ್ಠ 5-10% ರಷ್ಟು ಸ್ಥಳೀಯ ಉತ್ಪನ್ನಗಳನ್ನು ಅವರು ಹೋದಲ್ಲೆಲ್ಲಾ ಖರೀದಿಸುವಂತೆ ನಾನು ಸಲಹೆ ನೀಡುತ್ತೇನೆ. ಇದು ಸ್ಥಳೀಯ ಆದಾಯ ಮತ್ತು ಉದ್ಯೋಗವನ್ನು ಹೆಚ್ಚಿಸುವುದಲ್ಲದೆ, ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇದು ಕೇವಲ ಭೇಟಿ ಬಗ್ಗೆ ಅಲ್ಲ, ಇದು ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವ ಬಗ್ಗೆ. ನಾನು ಕೂಡ ಇಂದು ಶ್ರೀನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪದ್ಧತಿಯನ್ನು ಅನುಸರಿಸಿದ್ದೇನೆ. ನಾನು ಒಳ್ಳೆಯದನ್ನು ನೋಡಿದೆ ಮತ್ತು ಅದನ್ನು ಖರೀದಿಸಲು ನಿರ್ಧರಿಸಿದೆ. ಈ ಉಪಕ್ರಮವು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ ಗುರಿ ಹೊಂದಿದೆ.

 

ಸ್ನೇಹಿತರೆ,

ಈ ಯೋಜನೆಗಳ ಅನುಷ್ಠಾನದಿಂದ, ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಅಭಿವೃದ್ಧಿಯ ಪ್ರಯತ್ನಗಳಿಗಾಗಿ ನಾನು ಜಮ್ಮು-ಕಾಶ್ಮೀರದ ನನ್ನ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ ನಾನು ನಿಮಗೆ ಹೊಸ ಉಪಕ್ರಮವನ್ನು ಪರಿಚಯಿಸಲು ಬಯಸುತ್ತೇನೆ. ಈ ಪ್ರದೇಶವು ಬಹುಕಾಲದಿಂದ ಚಲನಚಿತ್ರಗಳ ಚಿತ್ರೀಕರಣಕ್ಕೆ ನೆಚ್ಚಿನ ತಾಣವಾಗಿದೆ. ಭಾರತದಲ್ಲಿ ವಿವಾಹಗಳನ್ನು ಉತ್ತೇಜಿಸುವುದು ನನ್ನ ಮುಂದಿನ ಉದ್ದೇಶವಾಗಿದೆ. ವಿದೇಶದಲ್ಲಿ ಮದುವೆಯಾಗಲು ಜನರು ಸಾಮಾನ್ಯವಾಗಿ ಗಮನಾರ್ಹ ಪ್ರಮಾಣದ ಹಣ ಖರ್ಚು ಮಾಡುತ್ತಾರೆ. ಆದಾಗ್ಯೂ, ನಾನು ಭಾರತದಲ್ಲಿ ತಮ್ಮ ವಿವಾಹಗಳನ್ನು ಆಯೋಜಿಸುವುದನ್ನು ಪರಿಗಣಿಸುವಂತೆ ಜನರನ್ನು ಉತ್ತೇಜಿಸುವ 'ಭಾರತದಲ್ಲಿ ವಿವಾಹ' ಎಂಬ ಪರಿಕಲ್ಪನೆ ಪ್ರಸ್ತಾಪಿಸುತ್ತೇನೆ. ಜನರು ತಮ್ಮ ಮದುವೆಗಳನ್ನು ಜಮ್ಮು-ಕಾಶ್ಮೀರದಲ್ಲಿ ನಡೆಸುವ ಬಯಕೆಯನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಮದುವೆಗಳನ್ನು ಆಯೋಜಿಸುವ ಮೂಲಕ, ಕುಟುಂಬಗಳು 3-4 ದಿನಗಳ ಕಾಲ ಅದ್ದೂರಿ ಆಚರಣೆಗಳನ್ನು ಆನಂದಿಸಬಹುದು, ಇದು ಸ್ಥಳೀಯರಿಗೆ ಜೀವನೋಪಾಯ ಅವಕಾಶಗಳನ್ನು ಒದಗಿಸುತ್ತದೆ. ಈ ಅಭಿಯಾನವನ್ನು ಬೆಂಬಲಿಸಲು ನಾನು ಸಂಪೂರ್ಣ ಸಮರ್ಪಿತನಾಗಿದ್ದೇನೆ.

ಸ್ನೇಹಿತರೆ,

ಉದ್ದೇಶಗಳು ಶುದ್ಧವಾಗಿದ್ದಾಗ, ಗುರಿಗಳನ್ನು ಸಾಧಿಸುವ ಬದ್ಧತೆ ಇದ್ದಾಗ, ಫಲಿತಾಂಶಗಳು ಸಹ ಉತ್ತಮವಾಗಿ ಅನಿವಾರ್ಯವಾಗಿ ಅನುಸರಿಸುತ್ತವೆ. ಜಮ್ಮು-ಕಾಶ್ಮೀರದಲ್ಲಿ ನಡೆದ ಜಿ-20 ಶೃಂಗಸಭೆಯ ಯಶಸ್ವಿ ಸಂಘಟನೆಗೆ ವಿಶ್ವವೇ ಸಾಕ್ಷಿಯಾಗಿದೆ. ಈ ಹಿಂದೆ, ಜಮ್ಮು-ಕಾಶ್ಮೀರವು ಪ್ರವಾಸಿ ತಾಣವಾಗಿ ಅದರ ಭದ್ರತೆಯ ನೈಜ ಸಾಮರ್ಥ್ಯಗಳ ಬಗ್ಗೆ ಅನುಮಾನಗಳಿದ್ದವು. ಆದರೆ, ಇಂದು ಈ ಪ್ರದೇಶದಲ್ಲಿ ಎಲ್ಲಾ ಪ್ರವಾಸೋದ್ಯಮ ದಾಖಲೆಗಳು ಮುರಿಯುತ್ತಿವೆ. 2023ರಲ್ಲೇ 2 ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ದಶಕದಲ್ಲಿ ಅಮರನಾಥ ಯಾತ್ರೆಯಲ್ಲಿ ಅತಿ ಹೆಚ್ಚು ಯಾತ್ರಿಗಳು ಭಾಗವಹಿಸಿದ್ದರು. ವೈಷ್ಣೋದೇವಿಗೆ ಅಭೂತಪೂರ್ವ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ವಿದೇಶಿ ಪ್ರವಾಸಿಗರ ಆಗಮನವೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಗಮನಾರ್ಹವಾಗಿ, ಪ್ರಮುಖ ವ್ಯಕ್ತಿಗಳು ಮತ್ತು ವಿದೇಶಿ ಗಣ್ಯರು ಸಹ ಕಾಶ್ಮೀರಕ್ಕೆ ಸೆಳೆಯಲ್ಪಡುತ್ತಿದ್ದಾರೆ. ಇಲ್ಲಿಯ ಕಣಿವೆಗಳ ಸೌಂದರ್ಯವನ್ನು ವೀಡಿಯೊಗಳು ಮತ್ತು ರೀಲ್‌ಗಳಲ್ಲಿ ಸೆರೆಹಿಡಿಯುತ್ತಿದ್ದಾರೆ, ಅದು ನಂತರ ವೈರಲ್ ಆಗುತ್ತಿದೆ.

ಸ್ನೇಹಿತರೆ,

ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮದ ಜತೆಗೆ ಕೃಷಿ ಮತ್ತು ಕೃಷಿ ಉತ್ಪನ್ನಗಳು ಮಹತ್ವದ ಪಾತ್ರ ವಹಿಸುತ್ತಿವೆ. ಜಮ್ಮು-ಕಾಶ್ಮೀರದ ಕೇಸರಿ, ಸೇಬು, ಒಣ ಹಣ್ಣುಗಳು ಮತ್ತು ಚೆರ್ರಿಗಳು ಇದನ್ನು ಪ್ರಮುಖ ಬ್ರಾಂಡ್ ಆಗಿ ಸ್ಥಾಪಿಸಿವೆ. 5,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳು ಮುಂದಿನ 5 ವರ್ಷಗಳಲ್ಲಿ ಈ ವಲಯವನ್ನು ಮತ್ತಷ್ಟು ಬಲಪಡಿಸುತ್ತದೆ, ವಿಶೇಷವಾಗಿ ತೋಟಗಾರಿಕೆ ಮತ್ತು ಜಾನುವಾರುಗಳಿಗೆ ಪ್ರಯೋಜನ ನೀಡುತ್ತದೆ. ಸೋದರಿ ಹಮೀದಾ ಅವರೊಂದಿಗಿನ ನನ್ನ ಇತ್ತೀಚಿನ ಸಂಭಾಷಣೆಯಲ್ಲಿ ಈ ಉಪಕ್ರಮದಿಂದ ಪಶುಸಂಗೋಪನೆಗೆ ಸಿಗುವ ಸಂಭಾವ್ಯ ಉತ್ತೇಜನಗಳನ್ನು ನಾವು ಚರ್ಚಿಸಿದ್ದೇವೆ. ಇದು ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಭಾರತ ಸರ್ಕಾರವು ಈಗಾಗಲೇ ರೈತರ ಖಾತೆಗಳಿಗೆ ಸುಮಾರು 3,000 ಕೋಟಿ ರೂ. ಹಣವನ್ನು ನೇರವಾಗಿ ವಿತರಿಸಿದೆ. ಇದಲ್ಲದೆ, ಜಮ್ಮು- ಕಾಶ್ಮೀರದಲ್ಲಿ ಶೇಖರಣಾ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನಗಳು, ವಿಶ್ವದ ಅತಿದೊಡ್ಡ ಶೇಖರಣಾ ಯೋಜನೆಯ ಇತ್ತೀಚಿನ ಪ್ರಾರಂಭವೂ ಸೇರಿದಂತೆ, ಹಣ್ಣುಗಳು ಮತ್ತು ತರಕಾರಿಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಕೊಡುಗೆ ನೀಡುತ್ತದೆ. ಈ ಉಪಕ್ರಮದ ಭಾಗವಾಗಿ ಈ ಪ್ರದೇಶದಲ್ಲಿ ಹಲವಾರು ಹೊಸ ಗೋದಾಮುಗಳನ್ನು ಸಹ ನಿರ್ಮಿಸಲಾಗುವುದು.

 

ಸ್ನೇಹಿತರೆ,

ಜಮ್ಮು-ಕಾಶ್ಮೀರವು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಈ ಪ್ರದೇಶವು ಶೀಘ್ರದಲ್ಲೇ ಒಂದಲ್ಲ ಎರಡಲ್ಲ ಹಲವು ಏಮ್ಸ್ ಸೌಲಭ್ಯಗಳನ್ನು ಹೊಂದಲಿದೆ, ಏಮ್ಸ್-ಜಮ್ಮು ಈಗಾಗಲೇ ಉದ್ಘಾಟನೆಗೊಂಡಿ, ಏಮ್ಸ್-ಕಾಶ್ಮೀರದ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ. ಹೆಚ್ಚುವರಿಯಾಗಿ, 7 ಹೊಸ ವೈದ್ಯಕೀಯ ಕಾಲೇಜುಗಳು ಮತ್ತು 2 ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಐಐಟಿ ಮತ್ತು ಐಐಎಂನಂತಹ ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಸಹ ಸ್ಥಾಪಿಸಲಾಗಿದೆ. 2 ವಂದೇ ಭಾರತ್ ರೈಲುಗಳು ಈಗ ಜಮ್ಮು-ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಶ್ರೀನಗರದಿಂದ ಸಂಗಲ್ದಾನ್‌ಗೆ ಮತ್ತು ಸಂಗಲ್ದಾನ್‌ನಿಂದ ಬಾರಾಮುಲ್ಲಾಗೆ ರೈಲು ಸೇವೆಯೂ ಪ್ರಾರಂಭವಾಗಿದೆ. ವಿಸ್ತೃತ ಸಂಪರ್ಕವು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದೆ. ಹೊಸ ಮೂಲಸೌಕರ್ಯ ಯೋಜನೆಗಳ ಮೂಲಕ ಜಮ್ಮು ಮತ್ತು ಶ್ರೀನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಭವಿಷ್ಯದಲ್ಲಿ, ಜಮ್ಮು-ಕಾಶ್ಮೀರದ ಯಶೋಗಾಥೆಯು ನಿಸ್ಸಂದೇಹವಾಗಿ ಜಾಗತಿಕ ಗಮನವನ್ನು ಸೆಳೆಯುತ್ತದೆ. ನೀವು ರೇಡಿಯೊದಲ್ಲಿ ಕೇಳಿರಬಹುದು. ನನ್ನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಮ್ಮು-ಕಾಶ್ಮೀರದ ಸಾಧನೆಗಳ ಬಗ್ಗೆ ನಾನು ಆಗಾಗ್ಗೆ ಬೆಳಕು ಚೆಲ್ಲುತ್ತಿರುತ್ತೇನೆ. ಸ್ವಚ್ಛತಾ ಅಭಿಯಾನಗಳು ಮತ್ತು ಪ್ರದೇಶದ ಶ್ರೀಮಂತ ಕರಕುಶಲ ಮತ್ತು ಕರಕುಶಲತೆಯಂತಹ ಉಪಕ್ರಮಗಳನ್ನು ಚರ್ಚಿಸುತ್ತೇನೆ. ಉದಾಹರಣೆಗೆ, ನಾನು ಒಮ್ಮೆ ಮನ್ ಕಿ ಬಾತ್‌ನ ಒಂದು ಭಾಗವನ್ನು ನಾದ್ರು ಅಥವಾ ಕಮಲದ ಕಾಂಡದ ಜಟಿಲತೆಗಳಿಗೆ ಅರ್ಪಿಸಿದೆ. ಇಲ್ಲಿನ ಕೆರೆಗಳಲ್ಲಿ ಎಲ್ಲೆಂದರಲ್ಲಿ ಕಮಲಗಳು ಕಾಣಸಿಗುತ್ತವೆ. ಗಮನಾರ್ಹವಾಗಿ, ಬಿಜೆಪಿಯ ಚಿಹ್ನೆಯಾಗಿರುವ ಕಮಲವು ಜಮ್ಮು-ಕಾಶ್ಮೀರದಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿದೆ. ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‌ನ ಲೋಗೊವನ್ನು ಸಹ ಅಲಂಕರಿಸಿದೆ. ಈ ಪ್ರದೇಶ ಮತ್ತು ಕಮಲದ ನಡುವೆ ಆಳವಾಗಿ ಬೇರೂರಿರುವ ಸಂಬಂಧವನ್ನು ಇದು ಒತ್ತಿಹೇಳುತ್ತದೆ.

ಸ್ನೇಹಿತರೆ,

ನಮ್ಮ ಸರ್ಕಾರವು ಜಮ್ಮು-ಕಾಶ್ಮೀರದ ಯುವಕರನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಸುವ ನಿಟ್ಟಿನಲ್ಲಿ ದೃಢವಾಗಿ ಕಾರ್ಯನಿ ರ್ವಹಿಸುತ್ತಿದೆ. ಕೌಶಲಾಭಿವೃದ್ಧಿಯಿಂದ ಹಿಡಿದು ಕ್ರೀಡೆಯವರೆಗೆ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಪ್ರಸ್ತುತ, ಜಮ್ಮು - ಕಾಶ್ಮೀರದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. 17 ಜಿಲ್ಲೆಗಳಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಹಲವು ವರ್ಷಗಳಲ್ಲಿ, ಜಮ್ಮು-ಕಾಶ್ಮೀರವು ಹಲವಾರು ರಾಷ್ಟ್ರೀಯ ಕ್ರೀಡಾ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಿದೆ. ಈಗ, ಇದು ದೇಶದ ಚಳಿಗಾಲದ ಕ್ರೀಡಾ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ. ಇದು ನಾನು ಊಹಿಸುವ ಜಮ್ಮು-ಕಾಶ್ಮೀರವಾಗಿದೆ. ಇತ್ತೀಚೆಗೆ, ದೇಶದಾದ್ಯಂತ ಸುಮಾರು 1000 ಆಟಗಾರರು ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು.

 

ಸ್ನೇಹಿತರೆ,

ಇಂದು ಜಮ್ಮು-ಕಾಶ್ಮೀರವು ಮುಕ್ತವಾಗಿ ಉಸಿರಾಡುತ್ತಿರುವುದರಿಂದ ಅಭಿವೃದ್ಧಿಯ ಹೊಸ ಎತ್ತರಗಳನ್ನು ಏರುತ್ತಿದೆ. ಹಲವು ನಿರ್ಬಂಧಗಳಿಂದ ಈ ವಿಮೋಚನೆಯು 370ನೇ ವಿಧಿಯ ರದ್ದತಿಯಿಂದ ಸಾಧ್ಯವಾಯಿತು. ದಶಕಗಳ ಕಾಲ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ರಾಜಕೀಯ ಲಾಭಕ್ಕಾಗಿ 370 ನೇ ವಿಧಿಯ ಹೆಸರಿನಲ್ಲಿ ಜಮ್ಮು-ಕಾಶ್ಮೀರದ ಜನರನ್ನು ಮತ್ತು ರಾಷ್ಟ್ರವನ್ನು ದಾರಿ ತಪ್ಪಿಸಿದವು. 370ನೇ ವಿಧಿಯಿಂದ ಜಮ್ಮು-ಕಾಶ್ಮೀರವು ನಿಜವಾಗಿಯೂ ಪ್ರಯೋಜನಗಳನ್ನು ಪಡೆದಿದೆಯೇ ಅಥವಾ ಕೆಲವು ರಾಜಕೀಯ ಕುಟುಂಬಗಳ ಹಿತಾಸಕ್ತಿಗಳನ್ನು ಪೂರೈಸಿದೆಯೇ ಎಂಬ ಸತ್ಯವನ್ನು ಜಮ್ಮು -ಕಾಶ್ಮೀರ ಜನರು ಅರಿತುಕೊಂಡಿದ್ದಾರೆ. ವಿಪಕ್ಷಗಳು ಜನರ ದಾರಿ ತಪ್ಪಿಸಿದ್ದರು. 370ನೇ ವಿಧಿಯು ಆಯ್ದ ಕೆಲವು ಕುಟುಂಬಗಳ ಅನುಕೂಲಕ್ಕಾಗಿ ಜಮ್ಮು-ಕಾಶ್ಮೀರವನ್ನು ಸಂಕೋಲೆಯಲ್ಲಿ ಇರಿಸಿತ್ತು. ಆದರೆ ಇಂದು ಅದರ ರದ್ದತಿಯೊಂದಿಗೆ, ಜಮ್ಮು-ಕಾಶ್ಮೀರದ ಯುವಕರ ಪ್ರತಿಭೆಯನ್ನು ಸರಿಯಾಗಿ ಗುರುತಿಸಲಾಗುತ್ತಿದೆ, ಅವರಿಗೆ ಹೊಸ ಅವಕಾಶಗಳನ್ನು ನೀಡಲಾಗುತ್ತಿದೆ. ಸಮಾನ ಹಕ್ಕುಗಳು ಮತ್ತು ಅವಕಾಶಗಳು ಈಗ ಎಲ್ಲರಿಗೂ ಪ್ರವೇಶ ಸಿಗುತ್ತಿದೆ. ಹಿಂದೆ ನಿರಾಶ್ರಿತ ಗುಂಪುಗಳಾದ ಪಾಕಿಸ್ತಾನದ ನಿರಾಶ್ರಿತರು, ವಾಲ್ಮೀಕಿ ಸಮುದಾಯದ ಸದಸ್ಯರು ಮತ್ತು 70 ವರ್ಷಗಳಿಂದ ಮತದಾನದ ಹಕ್ಕುಗಳನ್ನು ನಿರಾಕರಿಸಿದ ನೈರ್ಮಲ್ಯ ಕೆಲಸಗಾರರು ಈಗ ಅವುಗಳನ್ನು ಆನಂದಿಸುತ್ತಿದ್ದಾರೆ. ವಾಲ್ಮೀಕಿ ಸಮುದಾಯವನ್ನು ಎಸ್‌ಸಿ ವರ್ಗಕ್ಕೆ ಸೇರಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದೆ. ಹೆಚ್ಚುವರಿಯಾಗಿ, ಪರಿಶಿಷ್ಟ ಪಂಗಡಗಳಿಗೆ ಅಸೆಂಬ್ಲಿಯಲ್ಲಿ ಸ್ಥಾನಗಳನ್ನು ಮೀಸಲಿಡಲಾಗಿದೆ. ಅಲ್ಲದೆ, 'ಪದ್ದರಿ ಬುಡಕಟ್ಟು', 'ಪಹಾರಿ ಜನಾಂಗ', 'ಗಡ್ಡಾ ಬ್ರಾಹ್ಮಣ' ಮತ್ತು 'ಕೋಲಿ' ಮುಂತಾದ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳೆಂದು ಗುರುತಿಸಲಾಗಿದೆ. ನಮ್ಮ ಸರ್ಕಾರವು ಇತರ ಹಿಂದುಳಿದ ವರ್ಗಗಳಿಗೆ ಪಂಚಾಯತ್‌ಗಳು, ಪುರಸಭೆಗಳು ಮತ್ತು ಮಹಾನಗರಪಾಲಿಕೆಗಳಲ್ಲಿ ಮೀಸಲಾತಿ ಖಾತ್ರಿಪಡಿಸಿದೆ. 'ಪರ್ವಿವರ್ವಾದಿ' (ವಂಶ ಪಾರಂಪರ್ಯ) ಪಕ್ಷಗಳು ದಶಕಗಳಿಂದ ಜಮ್ಮು-ಕಾಶ್ಮೀರದ ಜನರಿಗೆ ಈ ಹಕ್ಕುಗಳನ್ನು ವಂಚಿಸಿವೆ. ಇಂದು ಸಮಾಜದ ಪ್ರತಿಯೊಂದು ವರ್ಗವೂ ತನ್ನ ಹಕ್ಕುಗಳನ್ನು ಮರಳಿ ಪಡೆಯುತ್ತಿದೆ.

 

ಸ್ನೇಹಿತರೆ,

ನಮ್ಮ ಜೆ&ಕೆ ಬ್ಯಾಂಕ್ ಜಮ್ಮು-ಕಾಶ್ಮೀರದಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ಬಹಳಷ್ಟು ನರಳಿದೆ. ಹಿಂದಿನ ಸರ್ಕಾರಗಳು ಈ ಬ್ಯಾಂಕನ್ನು ದುರ್ಬಲಗೊಳಿಸಲು ಯಾವುದೇ ಪ್ರಯತ್ನವನ್ನು ಬಿಡಲಿಲ್ಲ, ಅವರ ಸಂಬಂಧಿಕರು ಮತ್ತು ಸೋದರಿಯರಿಗೆ ಬ್ಯಾಂಕ್ ಹುದ್ದೆಗಳನ್ನ ಭರ್ತಿ ಮಾಡಿತು, ಇದು ಅದರ ಕಾರ್ಯಾಚರಣೆಯನ್ನು ದುರ್ಬಲಗೊಳಿಸಿತು. ಅಸಮರ್ಪಕ ನಿರ್ವಹಣೆಯು ಗಮನಾರ್ಹ ನಷ್ಟಕ್ಕೆ ಕಾರಣವಾಯಿತು, ಸಾವಿರಾರು ಕೋಟಿ ರೂಪಾಯಿಗಳನ್ನು ಅಪಾಯಕ್ಕೆ ತಳ್ಳಿತು. ಬಡವರ ಹಣ, ನೀವು, ನನ್ನ ಸಹೋದರ ಸಹೋದರಿಯರು ಸೇರಿದಂತೆ ಕಾಶ್ಮೀರದ ಜನರ ಕಷ್ಟಪಟ್ಟು ಸಂಪಾದಿಸಿದ ಹಣ. ಜೆ & ಕೆ ಬ್ಯಾಂಕ್ ಅನ್ನು ರಕ್ಷಿಸಲು, ನಮ್ಮ ಸರ್ಕಾರವು ಸುಧಾರಣೆಗಳ ಸರಣಿಯನ್ನು ಜಾರಿಗೆ ತಂದು, 1,000 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡಿತು. ಭ್ರಷ್ಟಾಚಾರ ನಿಗ್ರಹ ದಳವು ಇಂದಿಗೂ ಇಂತಹ ಸಾವಿರಾರು ಪ್ರಕರಣಗಳ ತನಿಖೆ ನಡೆಸುವುದರೊಂದಿಗೆ ನಾವು ಬ್ಯಾಂಕ್‌ನಲ್ಲಿ ಅಕ್ರಮ ನೇಮಕಾತಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಳೆದ 5 ವರ್ಷಗಳಲ್ಲಿ, ಜಮ್ಮು-ಕಾಶ್ಮೀರದಲ್ಲಿ ಸಾವಿರಾರು ಯುವಕರು ಪಾರದರ್ಶಕ ಪ್ರಕ್ರಿಯೆಗಳ ಮೂಲಕ ಬ್ಯಾಂಕ್ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇಂದು ಸರ್ಕಾರದ ನಿರಂತರ ಪ್ರಯತ್ನದಿಂದಾಗಿ, ಜೆ&ಕೆ ಬ್ಯಾಂಕ್ ಮತ್ತೆ ಬಲ ಪಡೆದುಕೊಂಡಿದೆ. ಮೋದಿ ಅವರ ಗ್ಯಾರಂಟಿಯಿಂದ ಒಂದು ಕಾಲದಲ್ಲಿ ಸಂಕಷ್ಟದಲ್ಲಿದ್ದ ಈ ಬ್ಯಾಂಕಿನ ಲಾಭಾಂಶ ಈಗ 1,700 ಕೋಟಿ ರೂ.ಗೆ ಏರಿಕೆ ಕಂಡಿದೆ. ಇದು ನಿಮ್ಮ ಹಣ, ನ್ಯಾಯಯುತವಾಗಿ ನಿಮ್ಮದು, ಆದರೆ ಮೋದಿ ಕಾವಲುಗಾರನಂತೆ ಕಾವಲು ನಿಂತಿದ್ದಾರೆ. 5 ವರ್ಷಗಳ ಹಿಂದೆ ಬ್ಯಾಂಕ್ ನ ಒಟ್ಟು ವ್ಯವಹಾರ ಕೇವಲ 1.25 ಲಕ್ಷ ಕೋಟಿ ರೂ.ಗೆ ಕುಸಿದಿತ್ತು. ಪ್ರಸ್ತುತ, ಇದು 2.25 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಅದರ ಗಾತ್ರ ಸುಮಾರು ದಪ್ಪಟ್ಟಾಗಿದೆ. ಅದೇ ರೀತಿ, 5 ವರ್ಷಗಳ ಹಿಂದೆ, ಠೇವಣಿಗಳು ರೂ 80 ಸಾವಿರ ಕೋಟಿಗೆ ಇಳಿಕೆ ಕಂಡಿತ್ತು. ಈಗ ಅದು ಗಾತ್ರದಲ್ಲಿ ಸುಮಾರು ದುಪ್ಪಟ್ಟಾಗಿ 1.25 ಲಕ್ಷ ಕೋಟಿ ರೂ. ದಾಟಿದೆ. 5 ವರ್ಷಗಳ ಹಿಂದೆ ಶೇಕಡ 11ರಷ್ಟು ದಾಟಿದ್ದ ಬ್ಯಾಂಕ್‌ನ ಅನುತ್ಪಾದಕ ಆಸ್ತಿಗಳ (ಎನ್‌ಪಿಎ) ಅನುಪಾತವು ಈಗ ಶೇಕಡ 5ಕ್ಕಿಂತ ಕಡಿಮೆಯಾಗಿದೆ. ಕಳೆದ 5 ವರ್ಷಗಳಲ್ಲಿ, ಜೆ&ಕೆ ಬ್ಯಾಂಕ್‌ನ ಷೇರಿನ ಬೆಲೆಯು ಸುಮಾರು 12 ಪಟ್ಟು ಏರಿಕೆಯಾಗಿದೆ. ಅದರೆ 12 ರೂ.ನಿಂದ ಸರಿಸುಮಾರು 140 ರೂ.ಗೆ ಏರಿದೆ. ಸಾರ್ವಜನಿಕ ಕಲ್ಯಾಣಕ್ಕೆ ಬದ್ಧವಾಗಿರುವ ಪ್ರಾಮಾಣಿಕ ಸರ್ಕಾರವಿದ್ದಾಗ, ಜನರ ಯೋಗಕ್ಷೇಮ ಖಾತ್ರಿಪಡಿಸುವ ಜತೆಗೆ, ಸವಾಲುಗಳನ್ನು ಸಹ ಜಯಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಸ್ನೇಹಿತರೆ,

ಜಮ್ಮು-ಕಾಶ್ಮೀರವು ಸ್ವಾತಂತ್ರ್ಯದ ನಂತರ ವಂಶ ಪಾರಂಪರ್ಯ ರಾಜಕಾರಣದಿಂದ ಬಹಳ ಕಾಲ ನರಳಿದೆ. ದೇಶ ಮತ್ತು ಜಮ್ಮು-ಕಾಶ್ಮೀರದ ಅಭಿವೃದ್ಧಿಯಿಂದ ಅಸಮಾಧಾನಗೊಂಡಿರುವವರು ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಮೋದಿಗೆ ಕುಟುಂಬವಿಲ್ಲ ಎಂದು ಅವರು ಹೇಳಿಕೊಳ್ಳುತ್ತಾರೆ, ಆದರೆ ದೇಶವು ಅವರಿಗೆ ತಕ್ಕ ಪ್ರತಿಕ್ರಿಯೆ ನೀಡುತ್ತಿದೆ. ದೇಶಾದ್ಯಂತ ಜನರು "ನಾನು ಮೋದಿ ಅವರ ಕುಟುಂಬ!" ನಾನು ಯಾವಾಗಲೂ ಜಮ್ಮು-ಕಾಶ್ಮೀರವನ್ನು ನನ್ನ ಕುಟುಂಬ ಎಂದು ಪರಿಗಣಿಸಿದ್ದೇನೆ - ಕುಟುಂಬವು ಹೃದಯ ಮತ್ತು ಮನಸ್ಸಿನಲ್ಲಿ ನೆಲೆಸಿದೆ. ಅದಕ್ಕಾಗಿಯೇ ಕಾಶ್ಮೀರಿಗಳು ಈ ಭಾವನೆ ಹಂಚಿಕೊಳ್ಳುತ್ತಿದ್ದಾರೆ - "ನಾನು ಮೋದಿ ಅವರ ಕುಟುಂಬ! ನಾನು ಮೋದಿ ಅವರ ಕುಟುಂಬ!" ಎಂಬುದಾಗಿ. ಜಮ್ಮು-ಕಾಶ್ಮೀರದ ಅಭಿವೃದ್ಧಿ ಪಯಣ ನಿರಂತರ ಮುಂದುವರಿಯಲಿದೆ ಎಂಬ ಭರವಸೆಯೊಂದಿಗೆ ಮೋದಿ ತಮ್ಮ ಕುಟುಂಬ ತೊರೆದಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಜಮ್ಮು-ಕಾಶ್ಮೀರ ಹೆಚ್ಚು ವೇಗವಾಗಿ ಅಭಿವೃದ್ಧಿ ಹೊಂದಲಿದೆ.

ಸ್ನೇಹಿತರೆ,

ಶಾಂತಿ ಮತ್ತು ಭಕ್ತಿಯ ತಿಂಗಳು ರಂಜಾನ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನಾವು ಈ ಪವಿತ್ರ ಮಾಸವನ್ನು ಸಮೀಪಿಸುತ್ತಿರುವಾಗ ಜಮ್ಮು-ಕಾಶ್ಮೀರದ ಪವಿತ್ರ ಮಣ್ಣಿನಿಂದ, ನಾನು ಇಡೀ ರಾಷ್ಟ್ರಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಂಜಾನ್‌ನಿಂದ ಸಾಕಾರಗೊಂಡ ಶಾಂತಿ ಮತ್ತು ಏಕತೆಯ ಸಾರವು ಎಲ್ಲರಿಗೂ ಅನುರಣಿಸಲಿ.

 

ನನ್ನ ಸ್ನೇಹಿತರೆ,

ಈ ಭೂಮಿ ಆದಿ ಶಂಕರಾಚಾರ್ಯರ ಪಾದಸ್ಪರ್ಶದಿಂದ ಪಾವನವಾಗಿದೆ. ನಾಳೆ ಮಹಾಶಿವರಾತ್ರಿಯ ಶುಭ ಸಂದರ್ಭವನ್ನು ಗುರುತಿಸುತ್ತದೆ, ಈ ಮಂಗಳಕರ ಹಬ್ಬದಂದು ನಾನು ನಿಮಗೆ ಮತ್ತು ನಮ್ಮ ಎಲ್ಲಾ ದೇಶವಾಸಿಗಳಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಮತ್ತೊಮ್ಮೆ, ಇಂದು ಈ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇನೆ. ಜಮ್ಮು- ಕಾಶ್ಮೀರದಲ್ಲಿ ಲಕ್ಷಾಂತರ ಜನರ ನಡುವೆ ನಿಂತು ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಪಡೆಯುವುದು ನನಗೆ ನಿಜವಾಗಿಯೂ ಗೌರವವಾಗಿದೆ.

ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
GIFT City scales new heights as India's 1st international finance and IT hub

Media Coverage

GIFT City scales new heights as India's 1st international finance and IT hub
NM on the go

Nm on the go

Always be the first to hear from the PM. Get the App Now!
...
PM Modi’s interaction with BJP booth Karyakartas from Assam ahead of Assembly Elections
March 30, 2026
‘Seva, Sangathan, and Samarpan’, PM Modi says Assam’s BJP karyakartas embody the true spirit of the organisation
When every booth becomes strong, victory becomes certain, and Assam’s future becomes brighter: PM Modi lauding the efforts of BJP karyakartas
The importance of protecting Assam’s identity and tackling issues like illegal infiltration is not just a political issue but one of security, culture and justice: PM Modi
Over a dozen key peace agreements have brought lasting stability, especially in regions like Bodoland: PM Modi

PM Modi interacted with BJP booth karyakartas across Assam as a part of the ‘Mera Booth, Sabse Mazboot’ programme via NaMo App. He energised booth-level members and reaffirmed that every booth remains the foundation of the party’s strength and electoral success. He hailed the true spirit of Assam, calling it a powerful force driving BJP’s growth in the Northeast.

Opening the interaction, PM Modi described himself as a karyakarta first, expressing pride in working alongside the grassroots cadre. He lauded booth karyakartas for their tireless dedication, emphasising that their connect with every household is the BJP’s greatest strength. “Booth jeetoge toh chunav jeetoge,” he reiterated.

Highlighting Assam’s transformation over the past decade, PM Modi underlined the shift from instability and violence to peace, progress, and prosperity under the double engine government. He noted that over a dozen key peace agreements have brought lasting stability, especially in regions like Bodoland.

He stressed the importance of educating first-time voters about Assam’s past challenges, urging karyakartas to actively communicate the contrast between earlier regimes marked by unrest and the current era of stability. He encouraged innovative booth-level engagements to emotionally connect with voters while showcasing developmental achievements.

PM Modi also called for focused outreach to beneficiaries of key welfare schemes such as PM Awas Yojana, PM-Kisan, Ujjwala, and others, urging workers to compile beneficiary lists and strengthen direct engagement. He emphasised turning polling day into a Jan Utsav, with collective participation ensuring maximum voter turnout.
Encouraging youth and women’s participation, PM Modi praised Assam’s Nari Shakti and highlighted initiatives empowering women economically and socially. He urged workers to leverage platforms like the NaMo App and social media to share real-life stories.

Addressing key regional concerns, PM Modi underscored the importance of protecting Assam’s identity and tackling issues like illegal infiltration, calling it not just a political issue but one of security, culture, and justice. He urged karyakartas to raise awareness at the grassroots and support efforts ensuring the rights and dignity of indigenous communities.

He also highlighted the empowerment of tea garden workers through land rights and welfare schemes, calling it a historic step towards dignity and long-term security for lakhs of families.

Reaffirming the guiding principles of ‘Seva, Sangathan, and Samarpan’, PM Modi said that Assam’s BJP karyakartas embody the true spirit of the organisation.

He concluded with a powerful call to action:“When every booth becomes strong, victory becomes certain, and Assam’s future becomes brighter.”