ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಮರ್ಪಣೆ
"ಸಬ್ಕಾ ಪ್ರಯಾಸ್" ನೊಂದಿಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿದೆ"
"ಕರ್ನಾಟಕವು ಬಡವರ ಸೇವೆ ಮಾಡುವ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ವೈಭವಯುತ ಪರಂಪರೆಯನ್ನು ಹೊಂದಿದೆ"
ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಇದು ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣದ ಆಯ್ಕೆಯನ್ನು ಒದಗಿಸಿದೆ.
ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯಕ್ಕೆ ನಾವು ಆದ್ಯತೆ ನೀಡಿದ್ದೇವೆ.
ಆರೋಗ್ಯ ಸಂಬಂಧಿತ ನೀತಿಗಳಲ್ಲಿ ನಾವು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ

ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಜೀ, ಸದ್ಗುರು ಶ್ರೀ ಮಧುಸೂದನ್ ಸಾಯಿ ಜೀ, ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನಮಸ್ಕಾರ!

ನೀವೆಲ್ಲರೂ ಅನೇಕ ಕನಸುಗಳು ಮತ್ತು ಹೊಸ ಸಂಕಲ್ಪಗಳೊಂದಿಗೆ ಅಸಾಧಾರಣ ಉತ್ಸಾಹ ಮತ್ತು ಉತ್ಸಾಹದಿಂದ ಈ ಮಹಾನ್ ಸೇವೆಯಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮನ್ನು ನೋಡುವುದು ನನಗೂ ಒಂದು ಸೌಭಾಗ್ಯ. ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಆಧುನಿಕ ಭಾರತದ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮಸ್ಥಳ ಚಿಕ್ಕಬಳ್ಳಾಪುರ. ಸ್ವಲ್ಪ ಸಮಯದ ಹಿಂದೆ, ಸರ್ ವಿಶ್ವೇಶ್ವರಯ್ಯನವರ ಸಮಾಧಿಗೆ ಪುಷ್ಪ ನಮನ ಸಲ್ಲಿಸುವ ಮತ್ತು ಅವರ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿತು. ನಾನು ಈ ಪುಣ್ಯಭೂಮಿಗೆ ತಲೆ ಬಾಗುತ್ತೇನೆ. ಈ ಪುಣ್ಯಭೂಮಿಯಿಂದ ಸ್ಫೂರ್ತಿ ಪಡೆದ ಸರ್ ಎಂವಿ,  ರೈತರು ಮತ್ತು ಜನಸಾಮಾನ್ಯರಿಗೆ ಹೊಸ ಆವಿಷ್ಕಾರಗಳನ್ನು ಮಾಡಿದರು ಮತ್ತು ಅತ್ಯುತ್ತಮ ಎಂಜಿನಿಯರಿಂಗ್ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು.

ಸ್ನೇಹಿತರೆ,

ಸತ್ಯಸಾಯಿ ಗ್ರಾಮವಾಗಿಯೂ ಈ ಭೂಮಿ ದೇಶಕ್ಕೆ ಅದ್ಭುತವಾದ ಸೇವೆಯನ್ನು ನೀಡಿದೆ. ಇಲ್ಲಿ ಶಿಕ್ಷಣ ಮತ್ತು ಆರೋಗ್ಯದ ಮೂಲಕ ಮಾನವ ಸೇವೆಯ ಧ್ಯೇಯವು ಸಾಗುತ್ತಿರುವ ರೀತಿ ನಿಜಕ್ಕೂ ಅದ್ಭುತ. ಇಂದು ಉದ್ಘಾಟನೆಗೊಂಡಿರುವ ವೈದ್ಯಕೀಯ ಕಾಲೇಜು ಈ ಧ್ಯೇಯೋದ್ದೇಶಕ್ಕೆ ಇಂಬು ನೀಡಲಿದೆ. ಪ್ರತಿ ವರ್ಷ, ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ದೇಶದ ಲಕ್ಷಾಂತರ ಜನರ ಸೇವೆಯಲ್ಲಿ ಅನೇಕ ಹೊಸ ಪ್ರತಿಭಾವಂತ ವೈದ್ಯರನ್ನು ಸೃಷ್ಟಿಸುತ್ತದೆ. ನಾನು ಈ ಪ್ರತಿಷ್ಠಿತ ಸಂಸ್ಥೆಯನ್ನು ಮತ್ತು ಚಿಕ್ಕಬಳ್ಳಾಪುರದ ಎಲ್ಲಾ ಜನರನ್ನು ಅಭಿನಂದಿಸುತ್ತೇನೆ.

ಸಹೋದರ ಸಹೋದರಿಯರೆ,

ಸ್ವಾತಂತ್ರ್ಯದ ‘ಅಮೃತ ಮಹೋತ್ಸವ’ ಕಾಲಘಟ್ಟದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಸಂಕಲ್ಪ ಮಾಡಿದೆ. 2047ರಲ್ಲಿ ಸ್ವಾತಂತ್ರ್ಯದ 100 ವರ್ಷ ಅಥವಾ ಶತಮಾನೋತ್ಸವ ಆಚರಿಸುವ ಇಷ್ಟು ಕಡಿಮೆ ಸಮಯದಲ್ಲಿ ಭಾರತವು ಹೇಗೆ ಅಭಿವೃದ್ಧಿ ಹೊಂದುತ್ತದೆ ಎಂದು ಅನೇಕ ಬಾರಿ ಜನರು ನನ್ನನ್ನು ಕೇಳುತ್ತಾರೆ. 'ಹಲವು ಸವಾಲುಗಳಿವೆ ಮತ್ತು ಮಾಡಲು ತುಂಬಾ ಕೆಲಸಗಳಿವೆ. ಇಷ್ಟು ಕಡಿಮೆ ಸಮಯದಲ್ಲಿ ಅದು ಹೇಗೆ ನೆರವೇರುತ್ತದೆ? ಈ ಪ್ರಶ್ನೆಗೆ ಒಂದೇ ಉತ್ತರವಿದೆ, ಬಲವಾದ ಉತ್ತರ, ದೃಢವಾದ ಉತ್ತರ, ಸಾಧನೆಗಳನ್ನು ಸಾಧಿಸುವ ಶಕ್ತಿಯುಳ್ಳ ಉತ್ತರ ಮತ್ತು ಆ ಉತ್ತರವು ‘ಸಬ್ಕಾ ಪ್ರಾಯಸ್’ (ಎಲ್ಲರ ಪ್ರಯತ್ನ). ಪ್ರತಿಯೊಬ್ಬ ದೇಶವಾಸಿಗಳ ಜಂಟಿ ಪ್ರಯತ್ನದಿಂದ ಇದು ಸಾಧ್ಯವಾಗಲಿದೆ. ಹಾಗಾಗಿ ಬಿಜೆಪಿ ಸರಕಾರ ನಿರಂತರವಾಗಿ ಎಲ್ಲರ ಸಹಭಾಗಿತ್ವಕ್ಕೆ ಒತ್ತು ನೀಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸುವಲ್ಲಿ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಪಾತ್ರವೂ ಅತ್ಯುನ್ನತವಾಗಿದೆ. ಕರ್ನಾಟಕವು ಸಾಧು ಸಂತರು, ಆಶ್ರಮಗಳು ಮತ್ತು ಮಠಗಳ ಶ್ರೇಷ್ಠ ಸಂಪ್ರದಾಯ ಹೊಂದಿದೆ. ಈ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಜತೆಗೆ ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಿವೆ. ನಿಮ್ಮ ಸಂಸ್ಥೆಯು ಮಾಡುತ್ತಿರುವ ಸಾಮಾಜಿಕ ಕಾರ್ಯಗಳು 'ಸಬ್ಕಾ ಪ್ರಾಯಸ್'ನ ಉತ್ಸಾಹವನ್ನು ಬಲಪಡಿಸುತ್ತದೆ.

ಸ್ನೇಹಿತರೆ,

ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಧ್ಯೇಯವಾಕ್ಯ "ಯೋಗಃ ಕರ್ಮಸು ಕೌಶಲಂ" ಎಂಬುದನ್ನು ನಾನು ಗಮನಿಸಿದ್ದೇನೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯೋಗವು ಕೆಲಸದ ಶ್ರೇಷ್ಠತೆಯಾಗಿದೆ. ಭಾರತದಲ್ಲಿಯೂ ನಾವು ಕಳೆದ 9 ವರ್ಷಗಳಲ್ಲಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದು ಸರಕಾರಕ್ಕೆ ಹಾಗೂ ಇತರೆ ಸಂಸ್ಥೆಗಳಿಗೆ ಸುಲಭವಾಗಿದೆ. ಸರಕಾರವಿರಲಿ, ಖಾಸಗಿ ವಲಯವಿರಲಿ, ಸಾಮಾಜಿಕ ಕ್ಷೇತ್ರವಿರಲಿ, ಸಾಂಸ್ಕೃತಿಕ ಸಂಸ್ಥೆಗಳಿರಲಿ ಎಲ್ಲರ ಶ್ರಮದ ಫಲ ಇಂದು ಕಾಣುತ್ತಿದೆ. 2014ರವರೆಗೆ ನಮ್ಮ ದೇಶದಲ್ಲಿ 380 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳಿದ್ದವು. ಇಂದು ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 650ಕ್ಕಿಂತ ಹೆಚ್ಚಿದೆ. ಇವುಗಳಲ್ಲಿ 40 ವೈದ್ಯಕೀಯ ಕಾಲೇಜುಗಳನ್ನು ಅಭಿವೃದ್ಧಿಯ ಪ್ರತಿಯೊಂದು ಅಂಶದಲ್ಲಿ ಹಿಂದುಳಿದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ.

ಸ್ನೇಹಿತರೆ,

ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. ಮುಂದಿನ 10 ವರ್ಷಗಳಲ್ಲಿ ವೈದ್ಯರ ಸಂಖ್ಯೆಯು ದೇಶದ ಸ್ವಾತಂತ್ರ್ಯದ 75 ವರ್ಷಗಳ ವೈದ್ಯರ ಸಾಮರ್ಥ್ಯಕ್ಕೆ ಸಮನಾಗಿರುತ್ತದೆ. ಈ ಪ್ರಯತ್ನದ ಲಾಭವನ್ನು ಕರ್ನಾಟಕವೂ ಪಡೆಯುತ್ತಿದೆ. ಇಂದು ಕರ್ನಾಟಕದಲ್ಲಿ ಸುಮಾರು 70 ವೈದ್ಯಕೀಯ ಕಾಲೇಜುಗಳಿವೆ. ಡಬಲ್ ಇಂಜಿನ್ ಸರ್ಕಾರದ ಪ್ರಯತ್ನದಿಂದ ಕಳೆದ ಕೆಲವು ವರ್ಷಗಳಲ್ಲಿ ನಿರ್ಮಾಣವಾದ ವೈದ್ಯಕೀಯ ಕಾಲೇಜುಗಳಲ್ಲಿ ಒಂದನ್ನು ಚಿಕ್ಕಬಳ್ಳಾಪುರದಲ್ಲಿ ನಿರ್ಮಿಸಲಾಗಿದೆ. ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ 150 ನರ್ಸಿಂಗ್‌ ಸಂಸ್ಥೆಗಳನ್ನು ನಿರ್ಮಿಸುವ ಯೋಜನೆಯನ್ನೂ ಘೋಷಿಸಿದ್ದೇವೆ. ಇದರಿಂದ ನರ್ಸಿಂಗ್ ಕ್ಷೇತ್ರದಲ್ಲೂ ಯುವಕರಿಗೆ ಹಲವು ಅವಕಾಶಗಳು ಸೃಷ್ಟಿಯಾಗಲಿವೆ.

ಸ್ನೇಹಿತರೆ,

ನಾನು ನಿಮ್ಮ ಎದುರು ಇರುವಾಗ, ಭಾರತದ ವೈದ್ಯಕೀಯ ವೃತ್ತಿ ಎದುರಿಸುತ್ತಿರುವ ಸವಾಲಿನ ಬಗ್ಗೆ ಮಾತನಾಡಲು ಬಯಸುತ್ತೇನೆ. ಹಳ್ಳಿಗಳ ಬಡವರು, ಹಿಂದುಳಿದವರು, ಯುವಕರು ವೈದ್ಯರಾಗುವುದು ತುಂಬಾ ಕಷ್ಟವಾಗಿತ್ತು. ಕೆಲವು ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಮತ ಬ್ಯಾಂಕ್‌ಗಾಗಿ ಭಾಷೆಗಳ ವಿಷಯದಲ್ಲಿ ಆಟವಾಡಿದವು. ಆದರೆ ವಾಸ್ತವದಲ್ಲಿ, ಅವರು ಭಾಷೆಯನ್ನು ಬಲಪಡಿಸಲು ಹೆಚ್ಚು ಕೆಲಸ ಮಾಡಿಲ್ಲ. ಕನ್ನಡ ಭಾಷೆಯು ದೇಶವನ್ನು ವೈಭವೀಕರಿಸುವ ಶ್ರೀಮಂತ ಭಾಷೆಯಾಗಿದೆ. ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಕನ್ನಡದಲ್ಲಿ ದೊರೆಯುವಂತೆ ಹಿಂದಿನ ಸರಕಾರಗಳು ಕ್ರಮ ಕೈಗೊಂಡಿರಲಿಲ್ಲ. ಹಳ್ಳಿಗಳ ಬಡವರು, ದಲಿತರು ಮತ್ತು ಹಿಂದುಳಿದವರು ಡಾಕ್ಟರ್, ಇಂಜಿನಿಯರ್ ಆಗುವುದು ಈ ರಾಜಕೀಯ ಪಕ್ಷಗಳಿಗೆ ಇಷ್ಟವಿರಲಿಲ್ಲ. ಬಡವರ ಹಿತಾಸಕ್ತಿಗಾಗಿ ಕೆಲಸ ಮಾಡುವ ನಮ್ಮ ಸರ್ಕಾರ ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಅಧ್ಯಯನದ ಆಯ್ಕೆ  ನೀಡಿದೆ.

ಸಹೋದರ ಸಹೋದರಿಯರೆ,

ಬಡವರನ್ನು ಕೇವಲ ವೋಟ್ ಬ್ಯಾಂಕ್ ಎಂದು ಪರಿಗಣಿಸುತ್ತಿದ್ದ ದೇಶದಲ್ಲಿ ಇಂತಹ ರಾಜಕಾರಣ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮತ್ತೊಂದೆಡೆ, ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ತನ್ನ ಅತ್ಯುನ್ನತ ಕರ್ತವ್ಯವೆಂದು ಪರಿಗಣಿಸಿದೆ. ಬಡ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಆದ್ಯತೆ ನೀಡಿದ್ದೇವೆ. ನಾವು ದೇಶದಲ್ಲಿ ಜನೌಷಧಿ ಕೇಂದ್ರಗಳ ರೂಪದಲ್ಲಿ ಕೈಗೆಟುಕುವ ಔಷಧಿ ಅಂಗಡಿಗಳನ್ನು ತೆರೆದಿದ್ದೇವೆ. ಇಂದು ದೇಶಾದ್ಯಂತ ಸುಮಾರು 10,000 ಜನೌಷಧಿ ಕೇಂದ್ರಗಳಿವೆ, ಕರ್ನಾಟಕದಲ್ಲಿ 1,000ಕ್ಕೂ ಹೆಚ್ಚು ಕೇಂದ್ರಗಳಿವೆ. ಈ ಕೇಂದ್ರಗಳಿಂದಾಗಿ ಕರ್ನಾಟಕದ ಬಡಜನರು ಸಾವಿರಾರು ಕೋಟಿ ರೂಪಾಯಿಗಳನ್ನು ಔಷಧಿಗಳಿಗಾಗಿ ಖರ್ಚು ಮಾಡುವುದನ್ನು ಉಳಿಸಲಾಗಿದೆ.

ಸ್ನೇಹಿತರೆ,

ಬಡವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ಧೈರ್ಯವಿಲ್ಲದ ಆ ದಿನಗಳನ್ನು ನೆನಪಿಸಿಕೊಳ್ಳುವಂತೆ ನಾನು ನಿಮ್ಮನ್ನು ಇಲ್ಲಿ ಒತ್ತಾಯಿಸುತ್ತೇನೆ. ಬಿಜೆಪಿ ಸರ್ಕಾರ ಬಡವರ ಈ ಕಾಳಜಿಯನ್ನು ಗಮನಿಸಿ ಅದನ್ನು ಪರಿಹರಿಸಿದೆ. ಇಂದು ಆಯುಷ್ಮಾನ್ ಭಾರತ್ ಯೋಜನೆ ಬಡ ಕುಟುಂಬಗಳಿಗೆ ಉತ್ತಮ ಆಸ್ಪತ್ರೆಗಳ ಬಾಗಿಲು ತೆರೆದಿದೆ. ಬಿಜೆಪಿ ಸರಕಾರ ಬಡವರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದೆ. ಕರ್ನಾಟಕದ ಲಕ್ಷಾಂತರ ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ.

ಸ್ನೇಹಿತರೆ,

ಹಿಂದಿನ ಹೃದಯ ಶಸ್ತ್ರಚಿಕಿತ್ಸೆಗಳು, ಮೊಣಕಾಲು ಬದಲಿ, ಡಯಾಲಿಸಿಸ್ ಇತ್ಯಾದಿಗಳು ತುಂಬಾ ದುಬಾರಿಯಾಗಿತ್ತು. ಬಡವರ ಸರ್ಕಾರ, ಬಿಜೆಪಿ ಸರ್ಕಾರ ಇವೆಲ್ಲವನ್ನೂ ಕೈಗೆಟುಕುವಂತೆ ಮಾಡಿದೆ. ಉಚಿತ ಡಯಾಲಿಸಿಸ್ ಸೌಲಭ್ಯದಿಂದ ಬಡವರು ಸಾವಿರಾರು ಕೋಟಿ ರೂ. ಉಳಿಸುತ್ತಿದೆ.

ಸ್ನೇಹಿತರೆ,

ನಮ್ಮ ಆರೋಗ್ಯ-ಸಂಬಂಧಿತ ನೀತಿಗಳಲ್ಲಿ ನಾವು ತಾಯಿ ಮತ್ತು ಸಹೋದರಿಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ತಾಯಿಯ ಆರೋಗ್ಯ ಮತ್ತು ಪೋಷಣೆ ಉತ್ತಮವಾದಾಗ, ಇಡೀ ಪೀಳಿಗೆಯ ಆರೋಗ್ಯ ಸುಧಾರಿಸುತ್ತದೆ. ಶೌಚಾಲಯ ನಿರ್ಮಾಣದ ಯೋಜನೆಯಾಗಲಿ, ಉಚಿತ ಗ್ಯಾಸ್ ಸಂಪರ್ಕ ನೀಡುವ ಯೋಜನೆಯಾಗಲಿ, ಪ್ರತಿ ಮನೆಗೆ ನಲ್ಲಿ ನೀರು ನೀಡುವ ಯೋಜನೆಯಾಗಲಿ, ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ಯೋಜನೆಯಾಗಲಿ ಅಥವಾ ನೇರವಾಗಿ ಹಣ ಕಳುಹಿಸುವ ಯೋಜನೆಯಾಗಲಿ ಸಹೋದರಿಯರ ಮತ್ತು ತಾಯಂದಿರ ಆರೋಗ್ಯ ಮುಖ್ಯ. ಪೌಷ್ಟಿಕ ಆಹಾರಕ್ಕಾಗಿ ಈ ತಾಯಂದಿರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗುತ್ತಿದೆ. ಸ್ತನ ಕ್ಯಾನ್ಸರ್ ಬಗ್ಗೆ ಬಿಜೆಪಿ ಸರ್ಕಾರವು ವಿಶೇಷವಾಗಿ ಜಾಗರೂಕವಾಗಿದೆ. ಹಳ್ಳಿಗಳಲ್ಲಿ ತೆರೆಯುತ್ತಿರುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಇಂತಹ ಕಾಯಿಲೆಗಳನ್ನು ಪರೀಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಆರಂಭಿಕ ಹಂತಗಳಲ್ಲಿಯೇ ರೋಗಗಳನ್ನು ಗುರುತಿಸುವುದು ಇದರ ಗುರಿಯಾಗಿದೆ. ಪರಿಣಾಮವಾಗಿ, ದೊಡ್ಡ ಬಿಕ್ಕಟ್ಟಿನಿಂದ ತಾಯಂದಿರು ಮತ್ತು ಸಹೋದರಿಯರನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕರ್ನಾಟಕದಲ್ಲಿ 9,000ಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೆರೆದಿರುವ ಬೊಮ್ಮಾಯಿ ಜಿ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಸರ್ಕಾರವು ಹೆಣ್ಣು ಮಕ್ಕಳಿಗೆ ಅಂತಹ ಸ್ವಾಸ್ಥ್ಯ ಜೀವನ ಒದಗಿಸುವಲ್ಲಿ ತೊಡಗಿದೆ, ಇದರಿಂದ ಅವರು ಸ್ವತಃ ಆರೋಗ್ಯವಾಗಿರುತ್ತಾರೆ ಮತ್ತು ಭವಿಷ್ಯದಲ್ಲಿ ಅವರ ಮಕ್ಕಳು ಸಹ ಆರೋಗ್ಯವಾಗಿರುತ್ತಾರೆ.

ಸಹೋದರ ಸಹೋದರಿಯರೆ,

ಇನ್ನೊಂದು ಕಾರಣಕ್ಕಾಗಿ ಇಂದು ನಾನು ಕರ್ನಾಟಕ ಸರ್ಕಾರವನ್ನು ಪ್ರಶಂಸಿಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಅಂಗನವಾಡಿ ಮತ್ತು ಆಶಾ ಸಹೋದರಿಯರನ್ನು ಮತ್ತಷ್ಟು ಸಬಲೀಕರಣಗೊಳಿಸಿದೆ. ಅವರಿಗೆ ಆಧುನಿಕ ತಂತ್ರಜ್ಞಾನದ ಗ್ಯಾಜೆಟ್‌ಗಳನ್ನು ಒದಗಿಸಲಾಗಿದ್ದು, ಇದು ಅವರ ಕೆಲಸವನ್ನು ಸುಲಭಗೊಳಿಸಿದೆ. ಕರ್ನಾಟಕವು ಇಂದು ಸುಮಾರು 50,000 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸುಮಾರು 1 ಲಕ್ಷ ನೋಂದಾಯಿತ ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನು ಹೊಂದಿದೆ. ಸಾಧ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಸುಲಭಗೊಳಿಸಲು ಡಬಲ್ ಎಂಜಿನ್ ಸರ್ಕಾರವು ಬದ್ಧವಾಗಿದೆ.

ಸ್ನೇಹಿತರೆ,

ಆರೋಗ್ಯದ ಜತೆಗೆ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕೆ ಡಬಲ್ ಇಂಜಿನ್ ಸರ್ಕಾರವು ಸಂಪೂರ್ಣ ಗಮನ ಹರಿಸುತ್ತಿದೆ. ಈ ಪುಣ್ಯ ಭೂಮಿಯು ಹಾಲು ಮತ್ತು ರೇಷ್ಮೆ ನಾಡಾಗಿದೆ. ಹೈನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಒದಗಿಸಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರವು ಜಾನುವಾರು ಆರೋಗ್ಯಕ್ಕಾಗಿ ಅತಿದೊಡ್ಡ ಉಚಿತ ಲಸಿಕೆ ಅಭಿಯಾನ ಪ್ರಾರಂಭಿಸಿದೆ. ಈ ಅಭಿಯಾನಕ್ಕೆ ಸುಮಾರು 12,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಡೇರಿ ಸಹಕಾರಿ ಸಂಘಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ವಿಸ್ತರಿಸಲು ಡಬಲ್ ಎಂಜಿನ್ ಸರ್ಕಾರದ ಪ್ರಯತ್ನವೂ ಸಾಗಿದೆ. ಗ್ರಾಮಗಳಲ್ಲಿರುವ ಮಹಿಳೆಯರ ಸ್ವಸಹಾಯ ಸಂಘಗಳಿಗೂ ಅಧಿಕಾರ ನೀಡಲಾಗುತ್ತಿದೆ.

ಸ್ನೇಹಿತರೆ,

ಯಾವಾಗ ದೇಶವು ಆರೋಗ್ಯವಾಗಿರುತ್ತದೋ, ಯಾವಾಗ 'ಸಬ್ಕಾ ಪ್ರಯಾಸ್' ಅಭಿವೃದ್ಧಿಯಲ್ಲಿ ತೊಡಗಿಕೊಂಡಿತೋ, ಆಗ ನಾವು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ವೇಗವಾಗಿ ಸಾಧಿಸುತ್ತೇವೆ. ಮತ್ತೊಮ್ಮೆ, ಈ ಮಹತ್ತರವಾದ ಮಾನವ ಸೇವೆಗಾಗಿ ಶ್ರೀ ಮಧುಸೂದನ ಸಾಯಿ ಸಂಸ್ಥೆಗೆ ಸಂಬಂಧಿಸಿದ ಎಲ್ಲಾ ಸಹೋದ್ಯೋಗಿಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.  ನಾನು ಭಗವಾನ್ ಸಾಯಿಬಾಬಾ ಮತ್ತು ಶ್ರೀನಿವಾಸ್ ಜೀ ಅವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದೆ. ಅವರೊದಿಗಿನ ಈ ಸಂಬಂಧವು ಸುಮಾರು 40 ವರ್ಷ ಹಳೆಯದು. ಆದುದರಿಂದ ನಾನು ಇಲ್ಲಿ ಅತಿಥಿಯಲ್ಲ, ಈ ಮಣ್ಣಿನ ಮಗ. ನಾನು ನಿಮ್ಮ ನಡುವೆ ಬಂದಾಗಲೆಲ್ಲಾ, ಸಂಬಂಧವು ನವೀಕರಿಸಲ್ಪಡುತ್ತದೆ, ಹಳೆಯ ನೆನಪುಗಳು ಉಲ್ಲಾಸ ತರುತ್ತವೆ ಮತ್ತು ನಿಮ್ಮೊಂದಿಗೆ ಇನ್ನಷ್ಟು ಹತ್ತಿರದಿಂದ ಸಂಪರ್ಕಿಸಿದ್ದೇನೆ ಎಂದು ನನಗೆ ಅನಿಸುತ್ತದೆ.

ನನ್ನನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕಾಗಿ ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ತುಂಬಾ ಕೃತಜ್ಞನಾಗಿದ್ದೇನೆ. ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿಗಳ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
GST cuts on fertilisers & agri-equipments lowered farming costs: Nadda

Media Coverage

GST cuts on fertilisers & agri-equipments lowered farming costs: Nadda
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in fire mishap in Arpora, Goa
December 07, 2025
Announces ex-gratia from PMNRF

The Prime Minister, Shri Narendra Modi has condoled the loss of lives in fire mishap in Arpora, Goa. Shri Modi also wished speedy recovery for those injured in the mishap.

The Prime Minister informed that he has spoken to Goa Chief Minister Dr. Pramod Sawant regarding the situation. He stated that the State Government is providing all possible assistance to those affected by the tragedy.

The Prime Minister posted on X;

“The fire mishap in Arpora, Goa is deeply saddening. My thoughts are with all those who have lost their loved ones. May the injured recover at the earliest. Spoke to Goa CM Dr. Pramod Sawant Ji about the situation. The State Government is providing all possible assistance to those affected.

@DrPramodPSawant”

The Prime Minister also announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

The Prime Minister’s Office posted on X;

“An ex-gratia of Rs. 2 lakh from PMNRF will be given to the next of kin of each deceased in the mishap in Arpora, Goa. The injured would be given Rs. 50,000: PM @narendramodi”