ಮಹಿಳೆಯರು ಏನನ್ನು ಬೇಕಾದರೂ ಮರೆಯಬಲ್ಲರು, ಆದರೆ ತಮ್ಮ ಘನತೆಗೆ ಮಾಡಿದ ಅಪಮಾನವನ್ನು ಅವರು ಎಂದಿಗೂ ಮರೆಯುವುದಿಲ್ಲ: ಪ್ರಧಾನಮಂತ್ರಿ
ಸಂಸತ್ತಿನಲ್ಲಿ ʻನಾರಿ ಶಕ್ತಿ ವಂದನ್ ಅಧಿನಿಯಮʼ ತಿದ್ದುಪಡಿಯನ್ನು ವಿರೋಧಿಸಿದ ಪಕ್ಷಗಳು ಮಹಿಳಾ ಶಕ್ತಿಯನ್ನು ಲಘುವಾಗಿ ಪರಿಗಣಿಸುತ್ತಿವೆ: ಪ್ರಧಾನಮಂತ್ರಿ
ʻನಾರಿ ಶಕ್ತಿ ವಂದನ್ ಅಧಿನಿಯಮ ತಿದ್ದುಪಡಿʼಯು 21ನೇ ಶತಮಾನದ ಮಹಿಳೆಯರನ್ನು ಸಬಲೀಕರಣಗೊಳಿಸುವ 'ಮಹಾಯಜ್ಞ'ವಾಗಿದೆ: ಪ್ರಧಾನಮಂತ್ರಿ
ವಂಶಪಾರಂಪರ್ಯ ರಾಜಕೀಯ ಪಕ್ಷಗಳು ʻನಾರಿ ಶಕ್ತಿ ವಂದನ್ ಅಧಿನಿಯಮʼವನ್ನು ವಿರೋಧಿಸಲು ಒಂದು ಪ್ರಮುಖ ಕಾರಣವೆಂದರೆ ಅವರ ಭಯ: ಪ್ರಧಾನಮಂತ್ರಿ
ದೇಶದ ಶೇ.100ರಷ್ಟು ನಾರಿ ಶಕ್ತಿಯ ಆಶೀರ್ವಾದ ನಮ್ಮೊಂದಿಗಿದೆ: ಪ್ರಧಾನಮಂತ್ರಿ
ಮಹಿಳಾ ಮೀಸಲಾತಿಗೆ ಅಡ್ಡಿಯಾಗುವ ಪ್ರತಿಯೊಂದು ಅಡೆತಡೆಗಳನ್ನು ನಾವು ತೊಡೆದುಹಾಕುತ್ತೇವೆ: ಪ್ರಧಾನಮಂತ್ರಿ
ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡ ಈ ಜನರು ಮೇಜುಗಳನ್ನು ಬಡಿದು ಸಂಭ್ರಮಿಸಿದರು; ಇದು ಮಹಿಳೆಯರ ಘನತೆಯ ಮೇಲೆ, ಅವರ ಸ್ವಾಭಿಮಾನದ ಮೇಲಿನ ದಾಳಿ: ಪ್ರಧಾನಮಂತ್ರಿ
ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ಪ್ರತಿಪಕ್ಷಗಳು ಎಸಗಿದ ಪಾಪಕ್ಕೆ ಶಿಕ್ಷೆಯಾಗಲಿದೆ: ಪ್ರಧಾನಮಂತ್ರಿ

ನಾನಿಂದು ಬಹು ಮುಖ್ಯವಾದ ವಿಷಯದ ಕುರಿತು ಮಾತನಾಡಲು ಬಂದಿದ್ದೇನೆ, ವಿಶೇಷವಾಗಿ ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ವಿಷಯ ಇದಾಗಿದೆ! ಇಂದು ಭಾರತದ ಪ್ರತಿಯೊಬ್ಬ ನಾಗರಿಕನು ಮಹಿಳಾ ಶಕ್ತಿಯ ಪಲಾಯನವನ್ನು ಹೇಗೆ ನಿಲ್ಲಿಸಲಾಗಿದೆ ಎಂಬುದನ್ನು ನೋಡುತ್ತಿದ್ದಾನೆ. ಅವರ ಕನಸುಗಳನ್ನು ನಿರ್ದಯವಾಗಿ ಪುಡಿ ಪುಡಿ ಮಾಡಲಾಗಿದೆ. ನಮ್ಮ ಅತ್ಯುನ್ನತ ಪ್ರಯತ್ನಗಳ ಹೊರತಾಗಿಯೂ, ನಾವು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ, ನಾರಿ ಶಕ್ತಿ ವಂದನ ಕಾಯ್ದೆಯ ತಿದ್ದುಪಡಿ ಅಂಗೀಕರಿಸಲು ಸಾಧ್ಯವಾಗಲಿಲ್ಲ! ಇದಕ್ಕಾಗಿ, ನಾನು ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಕ್ಷಮೆ ಯಾಚಿಸುತ್ತೇನೆ.

ಸ್ನೇಹಿತರೆ,

ನಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಅತ್ಯುನ್ನತವಾಗಿದೆ, ಆದರೆ ಕೆಲವು ಜನರಿಗೆ ಪಕ್ಷದ ಹಿತಾಸಕ್ತಿಯೇ ಎಲ್ಲವೂ ಆದಾಗ, ಪಕ್ಷದ ಹಿತಾಸಕ್ತಿ ರಾಷ್ಟ್ರೀಯ ಹಿತಾಸಕ್ತಿಗಿಂತ ದೊಡ್ಡದಾದಾಗ, ಮಹಿಳಾ ಶಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಬಾರಿಯೂ ಅದೇ ಸಂಭವಿಸಿದೆ. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳ ಸ್ವಾರ್ಥ ರಾಜಕೀಯವು ದೇಶದ ಮಹಿಳಾ ಶಕ್ತಿಗೆ ದೊಡ್ಡ ಹಾನಿ ಮಾಡಿದೆ.

ಸ್ನೇಹಿತರೆ,

ನಿನ್ನೆ ದೇಶದ ಕೋಟ್ಯಂತರ ಮಹಿಳೆಯರ ಕಣ್ಣುಗಳು ಸಂಸತ್ತಿನ ಮೇಲೆ ನೆಟ್ಟಿದ್ದವು, ದೇಶದ ಸ್ತ್ರೀಶಕ್ತಿ ನೋಡುತ್ತಿತ್ತು. ಮಹಿಳೆಯರ ಪರವಾದ ಈ ಪ್ರಸ್ತಾವನೆ ಸದನದ ಮುಂದೆ ಬಂದಾಗ, ಕುಟುಂಬ ಆಧಾರಿತ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿಯಂತಹ ಪಕ್ಷಗಳು ಸಂತೋಷದಿಂದ ಚಪ್ಪಾಳೆ ತಟ್ಟುತ್ತಿದ್ದುದನ್ನು ನೋಡಿ ನನಗೂ ತುಂಬಾ ದುಃಖವಾಯಿತು. ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ, ಅವರು ಮೇಜುಗಳನ್ನು ಬಡಿಯುತ್ತಿದ್ದರು. ಅವರು ಮಾಡಿದ್ದು ಕೇವಲ ಮೇಜುಗಳ ಮೇಲೆ ಬಡಿಯುವುದಲ್ಲ, ಅದು ಮಹಿಳೆಯರ ಸ್ವಾಭಿಮಾನ ಮತ್ತು ಘನತೆಗೆ ನೀಡಿದ ಬಹುದೊಡ್ಡ ಹೊಡೆತವಾಗಿತ್ತು. ಮಹಿಳೆಯರು ಎಲ್ಲವನ್ನೂ ಮರೆತುಬಿಡುತ್ತಾರೆ, ಆದರೆ ಅವರು ತಮ್ಮ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ. ಆದ್ದರಿಂದ, ಸಂಸತ್ತಿನಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವರ್ತನೆಯ ನೋವು ಯಾವಾಗಲೂ ಮಹಿಳೆಯರ ಹೃದಯದಲ್ಲಿ ಉಳಿಯುತ್ತದೆ. ದೇಶದ ಮಹಿಳೆಯರು ತಮ್ಮ ಪ್ರದೇಶಗಳಲ್ಲಿ ಈ ನಾಯಕರನ್ನು ನೋಡಿದಾಗಲೆಲ್ಲಾ, ಮಹಿಳಾ ಮೀಸಲಾತಿಯನ್ನು ನಿಲ್ಲಿಸಿದಾಗ ಸಂಸತ್ತಿನಲ್ಲಿ ಸಂಭ್ರಮ ಆಚರಿಸಿದವರು ಇದೇ ಜನರು, ಅವರು ಸಂತೋಷಪಟ್ಟರು ಎಂದು ಮಹಿಳೆಯರು ನೆನಪಿಸಿಕೊಳ್ಳುತ್ತಾರೆ. ನಿನ್ನೆ ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ್ ತಿದ್ದುಪಡಿ ವಿರೋಧಿಸಿದ ಪಕ್ಷಗಳಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ: ಈ ಜನರು ಮಹಿಳಾ ಶಕ್ತಿಯನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. 21ನೇ ಶತಮಾನದ ಮಹಿಳೆಯರು ದೇಶದ ಪ್ರತಿಯೊಂದು ಘಟನೆಯನ್ನು ಗಮನಿಸುತ್ತಿದ್ದಾರೆ, ಅವರ ಉದ್ದೇಶಗಳನ್ನು ಅವರು ಗ್ರಹಿಸುತ್ತಿದ್ದಾರೆ, ಅವರು ಸತ್ಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಅವರು ಮರೆಯುತ್ತಿದ್ದಾರೆ. ಆದ್ದರಿಂದ, ಮಹಿಳಾ ಮೀಸಲಾತಿ ವಿರೋಧಿಸಿದ್ದಕ್ಕಾಗಿ, ವಿರೋಧ ಪಕ್ಷಗಳು ಮಾಡಿದ ಪಾಪವು ಅವರಿಗೆ ಖಂಡಿತವಾಗಿಯೂ ಶಿಕ್ಷೆಯನ್ನು ನೀಡುತ್ತದೆ. ಈ ಪಕ್ಷಗಳು ಸಂವಿಧಾನದ ರಚನಕಾರರ ಭಾವನೆಗಳನ್ನು ಸಹ ಅವಮಾನಿಸಿವೆ, ಹಾಗಾಗಿ, ಅವರು ಜನರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಸ್ನೇಹಿತರೆ,

ನಾರಿ ಶಕ್ತಿ ವಂದನ ಅಧಿನಿಯಮ ತಿದ್ದುಪಡಿಯು ಯಾರಿಂದಲೂ ಏನನ್ನೂ ಕಸಿದುಕೊಳ್ಳುವ ಬಗ್ಗೆ ಅಲ್ಲ,  ನಾರಿ ಶಕ್ತಿ ವಂದನ ತಿದ್ದುಪಡಿಯು ಎಲ್ಲರಿಗೂ ಏನನ್ನಾದರೂ ಕೊಡುವ ಬಗ್ಗೆಯಾಗಿದೆ, ಅದನ್ನು ನೀಡುವ ತಿದ್ದುಪಡಿ ಇದಾಗಿತ್ತು. ಇದು 2029ರ ಲೋಕಸಭಾ ಚುನಾವಣೆಗೆ 40 ವರ್ಷಗಳಿಂದ ಬಾಕಿ ಇರುವ ಹಕ್ಕನ್ನು ಮಹಿಳೆಯರಿಗೆ ನೀಡುವ ಬಗ್ಗೆ ಆಗಿತ್ತು.

ನಾರಿ ಶಕ್ತಿ ವಂದನ ತಿದ್ದುಪಡಿಯು 21ನೇ ಶತಮಾನದ ಭಾರತದ ಮಹಿಳೆಯರ ಹಾದಿಯಲ್ಲಿ ಎದುರಾಗಿರುವ ಅಡೆತಡೆಗಳನ್ನು ತೆಗೆದುಹಾಕಲು ಹೊಸ ಅವಕಾಶಗಳನ್ನು ನೀಡುವ  ಒಂದು ಉತ್ತಮ ಪ್ರಯತ್ನವಾಗಿತ್ತು. ದೇಶದ ಜನಸಂಖ್ಯೆಯ 50% ಜನರಿಗೆ ಹಕ್ಕುಗಳನ್ನು ನೀಡಲು ಸ್ಪಷ್ಟ ಉದ್ದೇಶ ಮತ್ತು ಪ್ರಾಮಾಣಿಕತೆಯಿಂದ ಮಾಡಿದ ಪವಿತ್ರ ಪ್ರಯತ್ನವಾಗಿತ್ತು. ಭಾರತದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರನ್ನು ಸಹ-ಪ್ರಯಾಣಿಕರನ್ನಾಗಿ ಮಾಡಲು ಮತ್ತು ಎಲ್ಲರನ್ನೂ ಸೇರಿಸಲು ಇದು ಒಂದು ಪ್ರಯತ್ನವಾಗಿತ್ತು. ನಾರಿ ಶಕ್ತಿ ವಂದನ ತಿದ್ದುಪಡಿಯು ಈ ಕಾಲದ ಬೇಡಿಕೆಯಾಗಿದೆ. ನಾರಿ ಶಕ್ತಿ ವಂದನ ತಿದ್ದುಪಡಿಯು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಪ್ರತಿಯೊಂದು ರಾಜ್ಯದ ಬಲವನ್ನು ಸಮಾನವಾಗಿ ಹೆಚ್ಚಿಸುವ ಪ್ರಯತ್ನವಾಗಿತ್ತು. ಸಂಸತ್ತಿನಲ್ಲಿ ಪ್ರತಿಯೊಂದು ರಾಜ್ಯದ ಧ್ವನಿಗೆ ಹೆಚ್ಚಿನ ಬಲ ನೀಡುವ ಪ್ರಯತ್ನವಾಗಿತ್ತು. ರಾಜ್ಯ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಜನಸಂಖ್ಯೆ ಕಡಿಮೆ ಇರಲಿ ಅಥವಾ ಹೆಚ್ಚಿರಲಿ, ಎಲ್ಲರ ಬಲವನ್ನು ಸಮಾನ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಯತ್ನವಾಗಿತ್ತು. ಆದರೆ ಈ ಪ್ರಾಮಾಣಿಕ ಪ್ರಯತ್ನವನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭ್ರೂಣಹತ್ಯೆಗೆ ಒಳಪಡಿಸಿವೆ, ಅದು ನಿಜಕ್ಕೂ ಭ್ರೂಣಹತ್ಯೆಯಾಗಿದೆ. ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ - ಈ ಪಕ್ಷಗಳು ಈ ಭ್ರೂಣಹತ್ಯೆಯ ತಪ್ಪಿತಸ್ಥರಾಗಿದ್ದಾರೆ. ಅವರು ದೇಶದ ಸಂವಿಧಾನದ ವಿರೋಧಿ ಅಪರಾಧಿಗಳಾಗಿದ್ದಾರೆ, ಅವರು ದೇಶದ ಮಹಿಳಾ ಶಕ್ತಿಯ ವಿರೋಧಿ ಅಪರಾಧಿಗಳಾಗಿದ್ದಾರೆ.

ಸ್ನೇಹಿತರೆ,

ಕಾಂಗ್ರೆಸ್ ಮಹಿಳಾ ಮೀಸಲಾತಿ ವಿಷಯವನ್ನು ದ್ವೇಷಿಸುತ್ತದೆ, ಅದು ಯಾವಾಗಲೂ ಮಹಿಳಾ ಮೀಸಲಾತಿಯನ್ನು ತಡೆಯಲು ಪಿತೂರಿ ಮಾಡುತ್ತಾ ಬಂದಿದೆ. ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆದಾಗಲೆಲ್ಲಾ ಕಾಂಗ್ರೆಸ್ ಅವರನ್ನು ತಡೆಯಿತು. ಈ ಬಾರಿಯೂ ಸಹ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಿಳಾ ಮೀಸಲಾತಿ ತಡೆಯಲು ಒಂದರ ನಂತರ ಒಂದರಂತೆ ಸುಳ್ಳುಗಳನ್ನು ಅವಲಂಬಿಸಿದವು. ಕೆಲವೊಮ್ಮೆ ಸಂಖ್ಯೆಯ ಬಗ್ಗೆ, ಕೆಲವೊಮ್ಮೆ ಇತರೆ ರೀತಿಯಲ್ಲಿ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶವನ್ನು ದಾರಿ ತಪ್ಪಿಸಲು ಪ್ರಯತ್ನಿಸಿದವು. ಹಾಗೆ ಮಾಡುವ ಮೂಲಕ, ಈ ಪಕ್ಷಗಳು ಭಾರತದ ಮಹಿಳಾ ಶಕ್ತಿಯ ಮುಂದೆ ತಮ್ಮ ನಿಜವಾದ ಮುಖವನ್ನು ಬಹಿರಂಗಪಡಿಸಿವೆ. ಅವರು ತಮ್ಮ ಮುಖವಾಡವನ್ನು ತೆಗೆದುಹಾಕಿದ್ದಾರೆ.

 

ಸ್ನೇಹಿತರೆ,

ವೈಯಕ್ತಿಕವಾಗಿ, ಕಾಂಗ್ರೆಸ್ ತನ್ನ ದಶಕಗಳಷ್ಟು ಹಳೆಯ ತಪ್ಪನ್ನು ಸರಿಪಡಿಸಿಕೊಳ್ಳುತ್ತದೆ ಎಂದು ನಾನು ನಂಬಿದ್ದೆ. ಕಾಂಗ್ರೆಸ್ ತನ್ನ ಪಾಪಗಳಿಗೆ ಪಶ್ಚಾತ್ತಾಪ ಪಡುತ್ತದೆ. ಆದರೆ ಕಾಂಗ್ರೆಸ್ ಇತಿಹಾಸ ಸೃಷ್ಟಿಸುವ, ಮಹಿಳೆಯರ ಪರವಾಗಿ ನಿಲ್ಲುವ ಅವಕಾಶವನ್ನು ಕಳೆದುಕೊಂಡಿತು. ದೇಶದ ಹೆಚ್ಚಿನ ಭಾಗಗಳಲ್ಲಿ ಕಾಂಗ್ರೆಸ್ ಈಗಾಗಲೇ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಪರಾವಲಂಬಿಯಂತೆ ಬದುಕುಳಿಯುತ್ತಿದೆ, ಪ್ರಾದೇಶಿಕ ಪಕ್ಷಗಳ ಬೆನ್ನಿನ ಮೇಲೆ ಸವಾರಿ ಮಾಡುತ್ತಿದೆ. ಆದರೆ ಪ್ರಾದೇಶಿಕ ಪಕ್ಷಗಳು ಬಲವಾಗಿ ಬೆಳೆಯುವುದನ್ನು ಕಾಂಗ್ರೆಸ್ ಬಯಸುವುದಿಲ್ಲ, ಆದ್ದರಿಂದ ಕಾಂಗ್ರೆಸ್ ಈ ತಿದ್ದುಪಡಿಯನ್ನು ವಿರೋಧಿಸುವಂತೆ ಮಾಡುವ ಮೂಲಕ, ಅನೇಕ ಪ್ರಾದೇಶಿಕ ಪಕ್ಷಗಳ ಭವಿಷ್ಯವನ್ನು ಕಗ್ಗತ್ತಲೆಗೆ ತಳ್ಳಲು ರಾಜಕೀಯ ಪಿತೂರಿ ಮಾಡಿದೆ.

ಸ್ನೇಹಿತರೆ,

ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಟಿಎಂಸಿ ಮತ್ತು ಇತರೆ ಪಕ್ಷಗಳು ಹಲವು ವರ್ಷಗಳಿಂದ ಪ್ರತಿ ಬಾರಿಯೂ ಒಂದೇ ರೀತಿಯ ನೆಪಗಳನ್ನು, ಅದೇ ರೀತಿಯ ಸುಳ್ಳು ವಾದಗಳನ್ನು ಸೃಷ್ಟಿಸುತ್ತಿವೆ, ಯಾವಾಗಲೂ ಕೆಲವು ತಾಂತ್ರಿಕ ದೋಷಗಳನ್ನು ಸೇರಿಸುತ್ತಿವೆ, ಅವರು ಮಹಿಳೆಯರ ಹಕ್ಕುಗಳನ್ನು ಕಸಿದಿದ್ದಾರೆ. ದೇಶವು ರಾಜಕೀಯದ ಈ ಕೊಳಕು ಮಾದರಿಯನ್ನು ಅರ್ಥ ಮಾಡಿಕೊಂಡಿದೆ, ಅದರ ಹಿಂದಿನ ಕಾರಣವನ್ನೂ ಅದು ಅರ್ಥ ಮಾಡಿಕೊಂಡಿದೆ.

ಸಹೋದರ ಸಹೋದರಿಯರೆ,

ನಾರಿ ಶಕ್ತಿ ವಂದನ ಕಾಯ್ದೆ ವಿರೋಧಿಸಲು ಒಂದು ದೊಡ್ಡ ಕಾರಣವೆಂದರೆ, ಈ ಕುಟುಂಬ-ಆಧಾರಿತ ಪಕ್ಷಗಳ ಭಯ. ಮಹಿಳೆಯರು ಸಬಲೀಕರಣವಾದರೆ, ಈ ಕುಟುಂಬ-ಆಧಾರಿತ ಪಕ್ಷಗಳ ನಾಯಕತ್ವಕ್ಕೆ ಅಪಾಯ ಎದುರಾಗುತ್ತದೆ ಎಂದು ಅವರು ಭಯಪಡುತ್ತಾರೆ. ತಮ್ಮ ಕುಟುಂಬದ ಹೊರಗಿನ ಮಹಿಳೆಯರು ಮುಂದುವರಿಯುವುದನ್ನು ಅವರು ಎಂದಿಗೂ ಬಯಸುವುದಿಲ್ಲ. ಇಂದು ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಾವಿರಾರು ಮತ್ತು ಲಕ್ಷಾಂತರ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರು ಲೋಕಸಭೆ ಮತ್ತು ಶಾಸಕಾಂಗ ಸಭೆಗಳಿಗೆ ಮುಂದುವರಿಯಲು ಬಯಸಿದಾಗ, ಅವರು ದೇಶಕ್ಕೆ ಸೇವೆ ಸಲ್ಲಿಸಲು ಬಯಸಿದಾಗ, ಈ ಕುಟುಂಬ-ಆಧಾರಿತ ಪಕ್ಷಗಳು ಅಸುರಕ್ಷಿತವೆಂದು ಭಾವಿಸುತ್ತವೆ. ಕ್ಷೇತ್ರ ಪುನರ್ವಿಂಗಡಣೆಯ ನಂತರ, ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳು ಇರುತ್ತವೆ, ಮಹಿಳೆಯರ ಸ್ಥಾನಮಾನ ಹೆಚ್ಚಾಗುತ್ತದೆ, ಅದಕ್ಕಾಗಿಯೇ ಈ ಜನರು ನಾರಿ ಶಕ್ತಿ ವಂದನ ತಿದ್ದುಪಡಿ ವಿರೋಧಿಸಿದರು. ದೇಶದ ಮಹಿಳಾ ಶಕ್ತಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಈ ಪಾಪವನ್ನು ಎಂದಿಗೂ ಕ್ಷಮಿಸುವುದಿಲ್ಲ.

ನನ್ನ ಪ್ರೀತಿಯ ದೇಶವಾಸಿಗಳೆ,

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಗಡಿ ನಿರ್ಣಯದ ಬಗ್ಗೆ ನಿರಂತರವಾಗಿ ಸುಳ್ಳು ಹೇಳುತ್ತಿವೆ. ಈ ನೆಪದಲ್ಲಿ ಅವರು ವಿಭಜನೆಯ ಬೆಂಕಿ ಹೊತ್ತಿಸಲು ಬಯಸುತ್ತಾರೆ. ಏಕೆಂದರೆ "ಒಡೆದು ಆಳುವ" ರಾಜಕೀಯ ನೀತಿಯನ್ನು ಕಾಂಗ್ರೆಸ್, ಬ್ರಿಟಿಷರಿಂದ ಆನುವಂಶಿಕವಾಗಿ ಪಡೆದ ವಿಷಯವಾಗಿದೆ. ಕಾಂಗ್ರೆಸ್ ಇಂದಿಗೂ ಅದೇ ಹಾದಿಯಲ್ಲಿ ಸಾಗುತ್ತಿದೆ. ದೇಶದಲ್ಲಿ ಬಿರುಕುಗಳನ್ನು ಸೃಷ್ಟಿಸುವ ಭಾವನೆಗಳನ್ನು ಕಾಂಗ್ರೆಸ್ ಯಾವಾಗಲೂ ಹುಟ್ಟುಹಾಕುತ್ತಾ ಬಂದಿದೆ. ಆದ್ದರಿಂದ, ಗಡಿ ನಿರ್ಣಯವು ಕೆಲವು ರಾಜ್ಯಗಳಿಗೆ ಹಾನಿ ಮಾಡುತ್ತದೆ ಎಂದು ಈ ಸುಳ್ಳನ್ನು ಹರಡಲಾಯಿತು! ಆದರೆ ಸರ್ಕಾರವು ಮೊದಲ ದಿನದಿಂದಲೇ ಯಾವುದೇ ರಾಜ್ಯದ ಭಾಗವಹಿಸುವಿಕೆಯ ಪ್ರಮಾಣವು ಬದಲಾಗುವುದಿಲ್ಲ ಅಥವಾ ಯಾರ ಪ್ರಾತಿನಿಧ್ಯವೂ ಕಡಿಮೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವಾಸ್ತವವಾಗಿ, ಎಲ್ಲಾ ರಾಜ್ಯಗಳ ಸ್ಥಾನಗಳು ಸಮಾನ ಪ್ರಮಾಣದಲ್ಲಿ ಹೆಚ್ಚಾಗುತ್ತವೆ. ಆದರೂ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಸ್ನೇಹಿತರೆ,

ಈ ತಿದ್ದುಪಡಿ ಮಸೂದೆಯು ಎಲ್ಲಾ ಪಕ್ಷಗಳು ಮತ್ತು ಎಲ್ಲಾ ರಾಜ್ಯಗಳಿಗೆ ಒಂದು ಅವಕಾಶವಾಗಿತ್ತು. ಈ ಮಸೂದೆ ಅಂಗೀಕಾರವಾಗಿದ್ದರೆ, ತಮಿಳುನಾಡು, ಬಂಗಾಳ, ಉತ್ತರ ಪ್ರದೇಶ, ಕೇರಳ, ಪ್ರತಿಯೊಂದು ರಾಜ್ಯದ ಸ್ಥಾನಗಳು ಹೆಚ್ಚಾಗುತ್ತಿದ್ದವು. ಆದರೆ ಅವರ ಸ್ವಾರ್ಥ ರಾಜಕೀಯದಿಂದಾಗಿ, ಈ ಪಕ್ಷಗಳು ತಮ್ಮದೇ ರಾಜ್ಯಗಳ ಜನರಿಗೆ ಸಹ ದ್ರೋಹ ಬಗೆದವು. ಉದಾಹರಣೆಗೆ, ತಮಿಳುನಾಡಿನ ಧ್ವನಿಯನ್ನು ಬಲಪಡಿಸಲು ಡಿಎಂಕೆಗೆ ಹೆಚ್ಚಿನ ತಮಿಳು ಜನರನ್ನು ಸಂಸದರು ಮತ್ತು ಶಾಸಕರನ್ನಾಗಿ ಮಾಡುವ ಅವಕಾಶವಿತ್ತು! ಆದರೆ ಅದು ಆ ಅವಕಾಶವನ್ನು ಕಳೆದುಕೊಂಡಿತು. ಟಿಎಂಸಿ ಬಂಗಾಳದ ಜನರನ್ನು ಮುನ್ನಡೆಸುವ ಅವಕಾಶವನ್ನೂ ಹೊಂದಿತ್ತು. ಆದರೆ ಟಿಎಂಸಿ ಕೂಡ ಆ ಅವಕಾಶವನ್ನು ಕಳೆದುಕೊಂಡಿತು. ಸಮಾಜವಾದಿ ಪಕ್ಷವು ತನ್ನ ಮಹಿಳಾ ವಿರೋಧಿ ವರ್ಚಸ್ಸನ್ನು ಕಡಿಮೆ ಮಾಡುವ ಅವಕಾಶ ಹೊಂದಿತ್ತು, ಆದರೆ ಎಸ್‌ಪಿ ಕೂಡ ಅದನ್ನು ತಪ್ಪಿಸಿಕೊಂಡಿದೆ. ಎಸ್‌ಪಿ ಈಗಾಗಲೇ ಲೋಹಿಯಾ ಜಿ ಅವರನ್ನು ಮರೆತಿದೆ. ನಾರಿ ಶಕ್ತಿ ವಂದನ ತಿದ್ದುಪಡಿ ವಿರೋಧಿಸುವ ಮೂಲಕ, ಎಸ್‌ಪಿ ಲೋಹಿಯಾ ಜಿ ಅವರ ಎಲ್ಲಾ ಕನಸುಗಳನ್ನು ಭಗ್ನಗೊಳಿಸಿದೆ. ಎಸ್‌ಪಿಯ ಮಹಿಳಾ ಮೀಸಲಾತಿ ವಿರೋಧಿ ನೀತಿ, ಉತ್ತರ ಪ್ರದೇಶ ಮತ್ತು ದೇಶದ ಮಹಿಳೆಯರು ಇದನ್ನು ಎಂದಿಗೂ ಮರೆಯುವುದಿಲ್ಲ.

ಸ್ನೇಹಿತರೆ,

ಮಹಿಳಾ ಮೀಸಲಾತಿ ವಿರೋಧಿಸುವ ಮೂಲಕ, ಕಾಂಗ್ರೆಸ್ ಮತ್ತೊಮ್ಮೆ ಒಂದು ವಿಷಯವನ್ನು ಸಾಬೀತುಪಡಿಸಿದೆ. ಕಾಂಗ್ರೆಸ್ ಸುಧಾರಣೆಗಳ ವಿರೋಧಿ ಪಕ್ಷ. 21ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ, ಯಾವುದೇ ನಿರ್ಧಾರಗಳು, ಯಾವುದೇ ಸುಧಾರಣೆಗಳು ಅಗತ್ಯವಿದ್ದರೂ, ದೇಶವು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ, ಕಾಂಗ್ರೆಸ್ ಅವುಗಳನ್ನು ವಿರೋಧಿಸುತ್ತದೆ, ತಿರಸ್ಕರಿಸುತ್ತದೆ, ಅವುಗಳನ್ನು ತಡೆಯುತ್ತದೆ. ಇದು ಕಾಂಗ್ರೆಸ್‌ನ ಇತಿಹಾಸ ಮತ್ತು ಇದು ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯವಾಗಿದೆ.

ಸ್ನೇಹಿತರೆ,

ಜನಧನ್, ಆಧಾರ್, ಮೊಬೈಲ್ ಎಂಬ ತ್ರಿಮೂರ್ತಿಗಳನ್ನು ವಿರೋಧಿಸಿದ ಅದೇ ಕಾಂಗ್ರೆಸ್ ಇದಾಗಿದೆ. ಕಾಂಗ್ರೆಸ್ ಡಿಜಿಟಲ್ ಪಾವತಿಗಳನ್ನು ವಿರೋಧಿಸಿತು. ಕಾಂಗ್ರೆಸ್ ಜಿಎಸ್‌ಟಿಯನ್ನು ವಿರೋಧಿಸಿತು. ಕಾಂಗ್ರೆಸ್ ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ವಿರೋಧಿಸಿತು. ಕಾಂಗ್ರೆಸ್ ತ್ರಿವಳಿ ತಲಾಖ್ ವಿರುದ್ಧದ ಕಾನೂನನ್ನು ವಿರೋಧಿಸಿತು. 370ನೇ ವಿಧಿ ತೆಗೆದುಹಾಕುವುದನ್ನು ಕಾಂಗ್ರೆಸ್ ವಿರೋಧಿಸಿತು. ನಮ್ಮ ಸಂವಿಧಾನ, ನಮ್ಮ ನ್ಯಾಯಾಲಯಗಳು ಏಕರೂಪ ನಾಗರಿಕ ಸಂಹಿತೆ-ಯುಸಿಸಿ ಅಗತ್ಯ ಎಂದು ಹೇಳಿವೆ, ಆದರೆ ಕಾಂಗ್ರೆಸ್ ಅದನ್ನೂ ವಿರೋಧಿಸುತ್ತದೆ. ಸುಧಾರಣೆಯ ಪ್ರಸ್ತಾಪದಲ್ಲೇ, ಕಾಂಗ್ರೆಸ್ ಪ್ರತಿಭಟನೆಯ ಫಲಕಗಳನ್ನು ಹಿಡಿದು ಓಡುತ್ತದೆ. ದೇಶವನ್ನು ಬಲಪಡಿಸುವ ಯಾವುದೇ ಕೆಲಸ, ಕಾಂಗ್ರೆಸ್ ಅದರಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ತನ್ನೆಲ್ಲಾ ಶಕ್ತಿಯನ್ನು ಹಾಕುತ್ತದೆ. ಕಾಂಗ್ರೆಸ್ ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ವಿರೋಧಿಸುತ್ತದೆ. ದೇಶದಿಂದ ಒಳನುಸುಳುವವರನ್ನು ಓಡಿಸುವುದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಮತದಾರರ ಪಟ್ಟಿಯ ಶುದ್ಧೀಕರಣವನ್ನು ಕಾಂಗ್ರೆಸ್ ವಿರೋಧಿಸುತ್ತದೆ, ವಕ್ಫ್ ಮಂಡಳಿಯಲ್ಲಿನ ಸುಧಾರಣೆಗಳನ್ನು ಸಹ ಕಾಂಗ್ರೆಸ್ ವಿರೋಧಿಸುತ್ತದೆ.

ಸ್ನೇಹಿತರೆ,

ನಿರಾಶ್ರಿತರಿಗೆ ಭದ್ರತೆ ನೀಡುವ ಸಿಎಎ ಕಾನೂನನ್ನು ಕಾಂಗ್ರೆಸ್ ವಿರೋಧಿಸಿತು. ಸುಳ್ಳು ಹೇಳುವ ಮೂಲಕ ಮತ್ತು ವದಂತಿಗಳನ್ನು ಹರಡುವ ಮೂಲಕ ಅದು ದೇಶದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತು. ಮಾವೋವಾದಿ-ನಕ್ಸಲೀಯ ಹಿಂಸಾಚಾರವನ್ನು ಕೊನೆಗೊಳಿಸುವ ದೇಶದ ಪ್ರಯತ್ನಗಳನ್ನು ಕಾಂಗ್ರೆಸ್ ತಡೆಯುತ್ತದೆ. ಕಾಂಗ್ರೆಸ್ ಒಂದೇ ಒಂದು ಮಾದರಿ ಹೊಂದಿದೆ. ಅದೆಂದರೆ, ಸುಧಾರಣೆ ಬಂದಾಗಲೆಲ್ಲಾ ಸುಳ್ಳು ಹೇಳುವುದು, ಗೊಂದಲ ಹರಡುವುದು. ಇತಿಹಾಸವೇ ಸಾಕ್ಷಿಯಾಗಿದೆ, ಕಾಂಗ್ರೆಸ್ ಯಾವಾಗಲೂ ಈ ನಕಾರಾತ್ಮಕ ಮಾರ್ಗವನ್ನು ಆರಿಸಿಕೊಂಡಿದೆ.

 

ಸ್ನೇಹಿತರೆ,

ದೇಶಕ್ಕೆ ಯಾವುದೇ ನಿರ್ಧಾರ ಅಗತ್ಯವಿದ್ದರೂ, ಕಾಂಗ್ರೆಸ್ ಅದನ್ನು ಮುಚ್ಚಿಹಾಕುತ್ತದೆ. ಕಾಂಗ್ರೆಸ್‌ನ ಈ ಮನೋಭಾವದಿಂದಾಗಿ, ಭಾರತವು ಅರ್ಹವಾದ ಅಭಿವೃದ್ಧಿಯ ಉತ್ತುಂಗವನ್ನು ತಲುಪಿಲ್ಲ. ಸ್ವಾತಂತ್ರ್ಯ ಸಮಯದಲ್ಲಿ, ನಮ್ಮೊಂದಿಗೆ ಇತರೆ ಹಲವು ದೇಶಗಳು ಮುಕ್ತವಾಗಿದ್ದವು. ಆ ದೇಶಗಳಲ್ಲಿ ಹೆಚ್ಚಿನವು ನಮಗಿಂತ ಬಹಳ ಮುಂದೆ ಹೋದವು, ಕಾರಣವೆಂದರೆ ಕಾಂಗ್ರೆಸ್ ಪ್ರತಿಯೊಂದು ಸುಧಾರಣೆಯನ್ನು ತಡೆಯುತ್ತಲೇ ಇತ್ತು. ವಿಳಂಬ, ತಿರುವು, ಅಡಚಣೆ - ಇದು ಕಾಂಗ್ರೆಸ್‌ನ ತತ್ವವಾಗಿತ್ತು, ಇದು ಕಾಂಗ್ರೆಸ್‌ನ ಕೆಲಸದ ಸಂಸ್ಕೃತಿಯಾಗಿತ್ತು. ನೆರೆಯ ರಾಷ್ಟ್ರಗಳೊಂದಿಗೆ ಗಡಿ ವಿವಾದಗಳನ್ನು ಕಾಂಗ್ರೆಸ್ ವಿಳಂಬ ಮಾಡಿತು. ಪಾಕಿಸ್ತಾನದೊಂದಿಗೆ ನೀರು ಹಂಚಿಕೆ ವಿವಾದಗಳನ್ನು ಕಾಂಗ್ರೆಸ್ ವಿಳಂಬ ಮಾಡಿತು. ಒಬಿಸಿ ಮೀಸಲಾತಿ ನಿರ್ಧಾರವನ್ನು ಕಾಂಗ್ರೆಸ್ 40 ವರ್ಷಗಳ ಕಾಲ ವಿಳಂಬ ಮಾಡಿತು. ಸೈನಿಕರಿಗೆ ಒಂದು ಶ್ರೇಣಿ, ಒಂದು ಪಿಂಚಣಿಯನ್ನು ಕಾಂಗ್ರೆಸ್ 40 ವರ್ಷಗಳ ಕಾಲ ವಿಳಂಬ ಮಾಡಿತು.

ಸ್ನೇಹಿತರೆ,

ಕಾಂಗ್ರೆಸ್ಸಿನ ಈ ವರ್ತನೆ ಯಾವಾಗಲೂ ದೇಶಕ್ಕೆ ದೊಡ್ಡ ಹಾನಿ ಉಂಟುಮಾಡಿದೆ. ರಾಷ್ಟ್ರವು ಕಾಂಗ್ರೆಸ್ಸಿನ ಪ್ರತಿಯೊಂದು ವಿರೋಧ, ಪ್ರತಿಯೊಂದು ನಿರ್ಣಯದ ಕೊರತೆ, ಪ್ರತಿಯೊಂದು ವಂಚನೆಯಿಂದ ಬಳಲಿದೆ. ದೇಶದ ಅನೇಕ ತಲೆಮಾರುಗಳು ಇಂತಹ ಸಮಸ್ಯೆಗಳನ್ನು ಅನುಭವಿಸಿವೆ. ಇಂದು ದೇಶದ ಮುಂದಿರುವ ಎಲ್ಲಾ ಪ್ರಮುಖ ಸವಾಲುಗಳು ಕಾಂಗ್ರೆಸ್ಸಿನ ಈ ಮನೋಭಾವದಿಂದ ಹುಟ್ಟಿಕೊಂಡಿವೆ. ಆದ್ದರಿಂದ, ಈ ಹೋರಾಟವು ಕೇವಲ ಒಂದು ಕಾನೂನಿನ ಬಗ್ಗೆ ಅಲ್ಲ, ಈ ಹೋರಾಟವು ಕಾಂಗ್ರೆಸ್ಸಿನ ಸುಧಾರಣಾ ವಿರೋಧಿ ಮನಸ್ಥಿತಿಯ ವಿರುದ್ಧವಾಗಿದೆ, ಅದು ಕೇವಲ ನಕಾರಾತ್ಮಕತೆಯಿಂದ ತುಂಬಿದೆ. ದೇಶದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕಾಂಗ್ರೆಸ್ಸಿನ ಈ ಮನಸ್ಥಿತಿಗೆ ಬಲಿಷ್ಠ ಉತ್ತರ ನೀಡುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ಸ್ನೇಹಿತರೆ,

ಕೆಲವರು ದೇಶದ ಮಹಿಳೆಯರ ಕನಸುಗಳನ್ನು ಮುರಿಯುವುದನ್ನು ಸರ್ಕಾರದ ವೈಫಲ್ಯ ಎಂದು ಕರೆಯುತ್ತಿದ್ದಾರೆ. ಆದರೆ ಈ ವಿಷಯವು ಎಂದಿಗೂ ಯಶಸ್ಸು ಅಥವಾ ವೈಫಲ್ಯದ ಬಗ್ಗೆ ಅಲ್ಲ, ಎಂದಿಗೂ ಕ್ರೆಡಿಟ್ ಪಡೆಯುವ ಬಗ್ಗೆ ಅಲ್ಲ. ನಾನು ಸಂಸತ್ತಿನಲ್ಲಿಯೂ ಹೇಳಿದ್ದೆ, ಅರ್ಧದಷ್ಟು ಜನಸಂಖ್ಯೆಯು ಅವರ ಹಕ್ಕುಗಳನ್ನು ಪಡೆಯಲಿ, ನಾನು ಅವರ ಎಲ್ಲಾ ಫೋಟೊಗಳೊಂದಿಗೆ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ವಿರೋಧ ಪಕ್ಷಕ್ಕೆ ಕ್ರೆಡಿಟ್ ನೀಡುತ್ತೇನೆ. ಆದರೆ ಹಳೆಯ ಆಲೋಚನೆಯೊಂದಿಗೆ ಮಹಿಳೆಯರನ್ನು ನೋಡುವವರು ಇನ್ನೂ ತಮ್ಮ ಸುಳ್ಳುಗಳಿಗೆ ಅಂಟಿಕೊಂಡು ದೃಢವಾಗಿ ಉಳಿದರು!

ಸ್ನೇಹಿತರೆ,

ಮಹಿಳಾ ಶಕ್ತಿ ಭಾಗವಹಿಸುವಿಕೆಗೆ ಮಾಡುತ್ತಿರುವ ಹೋರಾಟವು ದಶಕಗಳಿಂದ ನಡೆಯುತ್ತಿದೆ. ವರ್ಷಗಳಿಂದ ನಾನು ಕೂಡ ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿರುವವರಲ್ಲಿ ಒಬ್ಬನಾಗಿದ್ದೇನೆ. ಅನೇಕ ಮಹಿಳೆಯರು ಈ ವಿಷಯವನ್ನು ನನ್ನ ಮುಂದೆ ಎತ್ತಿದ್ದಾರೆ. ಅನೇಕ ಸಹೋದರಿಯರು ಎಲ್ಲವನ್ನೂ ವಿವರಿಸುವ ಪತ್ರಗಳನ್ನು ನನಗೆ ಬರೆದಿದ್ದಾರೆ. ನನ್ನ ದೇಶದ ತಾಯಂದಿರು, ಸಹೋದರಿಯರು, ಹೆಣ್ಣು ಮಕ್ಕಳು - ನೀವೆಲ್ಲರೂ ಇಂದು ದುಃಖಿತರಾಗಿದ್ದೀರಿ ಎಂಬುದು ನನಗೆ ತಿಳಿದಿದೆ. ನಾನು ಕೂಡ ನಿಮ್ಮ ದುಃಖದಲ್ಲಿ ಭಾಗಿಯಾಗಿದ್ದೇನೆ. ಇಂದು ಮಸೂದೆಯನ್ನು ಅಂಗೀಕರಿಸಲು ನಮಗೆ ಅಗತ್ಯವಿರುವ 66 ಪ್ರತಿಶತ ಮತಗಳು ಸಿಗದಿದ್ದರೂ, ದೇಶದ 100 ಪ್ರತಿಶತ ಮಹಿಳಾ ಶಕ್ತಿ ನಮ್ಮನ್ನು ಆಶೀರ್ವದಿಸಿದೆ ಎಂಬುದು ನನಗೆ ತಿಳಿದಿದೆ. ದೇಶದ ಪ್ರತಿಯೊಬ್ಬ ಮಹಿಳೆಗೆ ನಾನು ಭರವಸೆ ನೀಡುತ್ತೇನೆ, ಮಹಿಳಾ ಮೀಸಲಾತಿಯ ಹಾದಿಯಲ್ಲಿರುವ ಪ್ರತಿಯೊಂದು ಅಡಚಣೆಯನ್ನು ನಾವು ತೆಗೆದುಹಾಕುತ್ತೇವೆ. ನಮ್ಮ ಧೈರ್ಯವು ಉನ್ನತವಾಗಿದೆ, ನಮ್ಮ ದೃಢಸಂಕಲ್ಪವನ್ನು ಮುರಿಯಲಾಗದು, ನಮ್ಮ ದೃಢಸಂಕಲ್ಪ ಅಚಲವಾಗಿದೆ. ಮಹಿಳಾ ಮೀಸಲಾತಿ ವಿರೋಧಿಸುವ ಪಕ್ಷಗಳು ಈ ದೇಶದ ಮಹಿಳಾ ಶಕ್ತಿಯು ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿ ತಮ್ಮ ಭಾಗವಹಿಸುವಿಕೆ ಹೆಚ್ಚಿಸುವುದನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ. ಇದು ಕೇವಲ ಸಮಯದ ವಿಷಯ. ಮಹಿಳಾ ಶಕ್ತಿಯ ಸಬಲೀಕರಣಕ್ಕಾಗಿ ಬಿಜೆಪಿ-ಎನ್‌ಡಿಎಯ ಸಂಕಲ್ಪವು ಅಖಂಡವಾಗಿದೆ. ನಿನ್ನೆ ನಮಗೆ ಸಂಖ್ಯಾಬಲವಿರಲಿಲ್ಲ, ಆದರೆ ನಾವು ಸೋತಿದ್ದೇವೆ ಎಂದರ್ಥವಲ್ಲ. ನಮ್ಮ ಆಂತರಿಕ ಶಕ್ತಿ ಅಜೇಯವಾಗಿದೆ. ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ನಮ್ಮ ಪ್ರಯತ್ನ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಮಗೆ ಮುಂದೆ ಹೆಚ್ಚಿನ ಅವಕಾಶಗಳಿವೆ. ಅರ್ಧದಷ್ಟು ಜನಸಂಖ್ಯೆಯ ಕನಸುಗಳಿಗಾಗಿ, ದೇಶದ ಭವಿಷ್ಯಕ್ಕಾಗಿ, ನಾವು ಈ ಸಂಕಲ್ಪವನ್ನು ಪೂರೈಸಬೇಕು, ಪೂರೈಸುತ್ತೇವೆ. ಎಲ್ಲರಿಗೂ ತುಂಬು ಧನ್ಯವಾದಗಳು.

 

ಸ್ನೇಹಿತರೆ,

ಕೆಲವರು ದೇಶದ ಮಹಿಳೆಯರ ಕನಸುಗಳನ್ನು ಮುರಿಯುವುದನ್ನು ಸರ್ಕಾರದ ವೈಫಲ್ಯ ಎಂದು ಕರೆಯುತ್ತಿದ್ದಾರೆ. ಆದರೆ ಈ ವಿಷಯವು ಎಂದಿಗೂ ಯಶಸ್ಸು ಅಥವಾ ವೈಫಲ್ಯದ ಬಗ್ಗೆ ಅಲ್ಲ, ಎಂದಿಗೂ ಕ್ರೆಡಿಟ್ ಪಡೆಯುವ ಬಗ್ಗೆ ಅಲ್ಲ. ನಾನು ಸಂಸತ್ತಿನಲ್ಲಿಯೂ ಹೇಳಿದ್ದೆ, ಅರ್ಧದಷ್ಟು ಜನಸಂಖ್ಯೆಯು ಅವರ ಹಕ್ಕುಗಳನ್ನು ಪಡೆಯಲಿ, ನಾನು ಅವರ ಎಲ್ಲಾ ಫೋಟೊಗಳೊಂದಿಗೆ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ವಿರೋಧ ಪಕ್ಷಕ್ಕೆ ಕ್ರೆಡಿಟ್ ನೀಡುತ್ತೇನೆ. ಆದರೆ ಹಳೆಯ ಆಲೋಚನೆಯೊಂದಿಗೆ ಮಹಿಳೆಯರನ್ನು ನೋಡುವವರು ಇನ್ನೂ ತಮ್ಮ ಸುಳ್ಳುಗಳಿಗೆ ಅಂಟಿಕೊಂಡು ದೃಢವಾಗಿ ಉಳಿದರು!

ಸ್ನೇಹಿತರೆ,

ಮಹಿಳಾ ಶಕ್ತಿ ಭಾಗವಹಿಸುವಿಕೆಗೆ ಮಾಡುತ್ತಿರುವ ಹೋರಾಟವು ದಶಕಗಳಿಂದ ನಡೆಯುತ್ತಿದೆ. ವರ್ಷಗಳಿಂದ ನಾನು ಕೂಡ ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿರುವವರಲ್ಲಿ ಒಬ್ಬನಾಗಿದ್ದೇನೆ. ಅನೇಕ ಮಹಿಳೆಯರು ಈ ವಿಷಯವನ್ನು ನನ್ನ ಮುಂದೆ ಎತ್ತಿದ್ದಾರೆ. ಅನೇಕ ಸಹೋದರಿಯರು ಎಲ್ಲವನ್ನೂ ವಿವರಿಸುವ ಪತ್ರಗಳನ್ನು ನನಗೆ ಬರೆದಿದ್ದಾರೆ. ನನ್ನ ದೇಶದ ತಾಯಂದಿರು, ಸಹೋದರಿಯರು, ಹೆಣ್ಣು ಮಕ್ಕಳು - ನೀವೆಲ್ಲರೂ ಇಂದು ದುಃಖಿತರಾಗಿದ್ದೀರಿ ಎಂಬುದು ನನಗೆ ತಿಳಿದಿದೆ. ನಾನು ಕೂಡ ನಿಮ್ಮ ದುಃಖದಲ್ಲಿ ಭಾಗಿಯಾಗಿದ್ದೇನೆ. ಇಂದು ಮಸೂದೆಯನ್ನು ಅಂಗೀಕರಿಸಲು ನಮಗೆ ಅಗತ್ಯವಿರುವ 66 ಪ್ರತಿಶತ ಮತಗಳು ಸಿಗದಿದ್ದರೂ, ದೇಶದ 100 ಪ್ರತಿಶತ ಮಹಿಳಾ ಶಕ್ತಿ ನಮ್ಮನ್ನು ಆಶೀರ್ವದಿಸಿದೆ ಎಂಬುದು ನನಗೆ ತಿಳಿದಿದೆ. ದೇಶದ ಪ್ರತಿಯೊಬ್ಬ ಮಹಿಳೆಗೆ ನಾನು ಭರವಸೆ ನೀಡುತ್ತೇನೆ, ಮಹಿಳಾ ಮೀಸಲಾತಿಯ ಹಾದಿಯಲ್ಲಿರುವ ಪ್ರತಿಯೊಂದು ಅಡಚಣೆಯನ್ನು ನಾವು ತೆಗೆದುಹಾಕುತ್ತೇವೆ. ನಮ್ಮ ಧೈರ್ಯವು ಉನ್ನತವಾಗಿದೆ, ನಮ್ಮ ದೃಢಸಂಕಲ್ಪವನ್ನು ಮುರಿಯಲಾಗದು, ನಮ್ಮ ದೃಢಸಂಕಲ್ಪ ಅಚಲವಾಗಿದೆ. ಮಹಿಳಾ ಮೀಸಲಾತಿ ವಿರೋಧಿಸುವ ಪಕ್ಷಗಳು ಈ ದೇಶದ ಮಹಿಳಾ ಶಕ್ತಿಯು ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿ ತಮ್ಮ ಭಾಗವಹಿಸುವಿಕೆ ಹೆಚ್ಚಿಸುವುದನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ. ಇದು ಕೇವಲ ಸಮಯದ ವಿಷಯ. ಮಹಿಳಾ ಶಕ್ತಿಯ ಸಬಲೀಕರಣಕ್ಕಾಗಿ ಬಿಜೆಪಿ-ಎನ್‌ಡಿಎಯ ಸಂಕಲ್ಪವು ಅಖಂಡವಾಗಿದೆ. ನಿನ್ನೆ ನಮಗೆ ಸಂಖ್ಯಾಬಲವಿರಲಿಲ್ಲ, ಆದರೆ ನಾವು ಸೋತಿದ್ದೇವೆ ಎಂದರ್ಥವಲ್ಲ. ನಮ್ಮ ಆಂತರಿಕ ಶಕ್ತಿ ಅಜೇಯವಾಗಿದೆ. ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ನಮ್ಮ ಪ್ರಯತ್ನ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಮಗೆ ಮುಂದೆ ಹೆಚ್ಚಿನ ಅವಕಾಶಗಳಿವೆ. ಅರ್ಧದಷ್ಟು ಜನಸಂಖ್ಯೆಯ ಕನಸುಗಳಿಗಾಗಿ, ದೇಶದ ಭವಿಷ್ಯಕ್ಕಾಗಿ, ನಾವು ಈ ಸಂಕಲ್ಪವನ್ನು ಪೂರೈಸಬೇಕು, ಪೂರೈಸುತ್ತೇವೆ. ಎಲ್ಲರಿಗೂ ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India identifies 102 GWp floating solar potential, eyes new push for reservoir-based projects

Media Coverage

India identifies 102 GWp floating solar potential, eyes new push for reservoir-based projects
NM on the go

Nm on the go

Always be the first to hear from the PM. Get the App Now!
...
PM Modi reiterates commitment to the agricultural sector
June 11, 2026

Prime Minister Shri Narendra Modi today emphasized that our farmer brothers and sisters are the pillars of the country's food security, nutrition, and prosperity, and the government is leaving no stone unturned to make their lives easier. He noted that initiatives like PM-Kisan Samman Nidhi and Fasal Bima Yojana are securing their income and empowering agriculture, while the PM-KUSUM scheme provides accessible solar energy, thereby reducing farming expenditures.

Shri Modi pointed out that the Kisan Credit Card is proving highly beneficial in providing easy, low-interest loans to farmers, cattle rearers, and fishermen, while the 'from seed to market' initiative is effectively ensuring fair prices for their crops.

The Prime Minister stated that the welfare of farmers is among the top priorities, which is why there has been a continuous emphasis on providing them with modern agricultural facilities. He highlighted that campaigns related to drones, soil health cards, and natural fertilizers are actively helping farmers increase their crop productivity.

In a series of posts, the Prime Minister shared on X:

"हमारे किसान भाई-बहन देश की अन्न सुरक्षा, पोषण और समृद्धि के आधारस्तंभ हैं। उनके जीवन को अधिक से अधिक आसान बनाने के लिए हमारी सरकार कोई कोर-कसर नहीं छोड़ रही है। पीएम-किसान सम्मान निधि और फसल बीमा योजना जैसी कई पहल उनकी आय की सुरक्षा के साथ-साथ खेती को अधिक सशक्त बना रही हैं। पीएम-कुसुम योजना से जहां खेती के लिए उन्हें सौर ऊर्जा सुलभ हुई है, वहीं इससे खेती पर होने वाला खर्च भी कम हुआ है।

#12YearsOfKisanSamriddhi" 

"खेती सहित अन्य जरूरतों के लिए कम ब्याज पर आसानी से ऋण उपलब्ध कराने में किसान क्रेडिट कार्ड किसानों, पशुपालकों और मछुआरों के बहुत काम आ रहा है। उनकी फसलों को उचित मूल्य दिलाने के लिए ‘बीज से बाजार तक’ की हमारी पहल भी बहुत कारगर साबित हो रही है।

#12YearsOfKisanSamriddhi"

"किसानों का कल्याण हमारी सर्वोच्च प्राथमिकताओं में है। इसलिए उन्हें कृषि से जुड़ी आधुनिक सुविधाएं उपलब्ध कराने पर हमारा निरंतर जोर रहा है। ड्रोन, सॉयल हेल्थ कार्ड और प्राकृतिक खाद से जुड़े अभियानों से भी किसानों को फसल की उत्पादकता बढ़ाने में मदद मिल रही है।

#12YearsOfKisanSamriddhi"