ಸಾವಿರ ವರ್ಷಗಳ ನಂತರವೂ ಸೋಮನಾಥ ದೇವಾಲಯದ ಮೇಲೆ ಹಾರಾಡುತ್ತಿರುವ ಧ್ವಜವು ಭಾರತದ ಶಕ್ತಿ ಮತ್ತು ಚೈತನ್ಯವನ್ನು ಜಗತ್ತಿಗೆ ಸಾರುತ್ತಿದೆ: ಪ್ರಧಾನಮಂತ್ರಿ
ಸೋಮನಾಥ ಸ್ವಾಭಿಮಾನ ಪರ್ವವು ಸಾವಿರ ವರ್ಷಗಳ ಪಯಣದ ಸಂಕೇತವಾಗಿದೆ, ಇದು ಭಾರತದ ಅಸ್ತಿತ್ವ ಮತ್ತು ಸ್ವಾಭಿಮಾನದ ಆಚರಣೆಯಾಗಿದೆ: ಪ್ರಧಾನಮಂತ್ರಿ
ಸೋಮನಾಥದ ಇತಿಹಾಸವು ವಿನಾಶ ಅಥವಾ ಸೋಲಿನ ಇತಿಹಾಸವಲ್ಲ, ಅದು ವಿಜಯ ಮತ್ತು ನವೋದಯದ ಇತಿಹಾಸವಾಗಿದೆ: ಪ್ರಧಾನಮಂತ್ರಿ
ಸೋಮನಾಥವನ್ನು ನಾಶಮಾಡುವ ಉದ್ದೇಶದಿಂದ ಬಂದವರು ಇಂದು ಇತಿಹಾಸದ ಕೆಲವು ಪುಟಗಳಿಗೆ ಸೀಮಿತವಾಗಿದ್ದಾರೆ; ಆದರೆ ಸೋಮನಾಥ ದೇವಾಲಯವು ವಿಶಾಲ ಸಮುದ್ರ ತೀರದಲ್ಲಿ ತನ್ನ ನಂಬಿಕೆಯ ಧ್ವಜವನ್ನು ಎತ್ತರದಲ್ಲಿ ಹಾರಿಸುತ್ತಾ ಇಂದಿಗೂ ಭವ್ಯವಾಗಿ ನಿಂತಿದೆ: ಪ್ರಧಾನಮಂತ್ರಿ
ಸೃಷ್ಟಿಯ ಪ್ರಕ್ರಿಯೆಯು ಸಮಯವನ್ನು ತೆಗೆದುಕೊಳ್ಳಬಹುದು, ಆದರೆ ಅದು ಮಾತ್ರವೇ ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಸೋಮನಾಥ ತೋರಿಸಿಕೊಡುತ್ತದೆ: ಪ್ರಧಾನಮಂತ್ರಿ

ಜೈ ಸೋಮನಾಥ.

ಜೈ ಸೋಮನಾಥ.

ಗುಜರಾತ್‌ನ ಗೌರವಾನ್ವಿತ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಶಕ್ತಿಶಾಲಿ ಉಪಮುಖ್ಯಮಂತ್ರಿ ಹರ್ಷ ಸಂಘವಿ ಜಿ, ಗುಜರಾತ್ ಸರ್ಕಾರದ ಸಚಿವರಾದ ಜಿತುಭಾಯಿ ವಾಘಾನಿ, ಅರ್ಜುನ್‌ಭಾಯಿ ಮೋಧ್ವಾಡಿಯಾ, ಡಾ. ಪ್ರದ್ಯುಮ್ನ ವಾಜ, ಕೌಶಿಕ್‌ಭಾಯಿ ವೆಕಾರಿಯಾ, ಸಂಸತ್ ಸದಸ್ಯ ರಾಜೇಶ್‌ಭಾಯಿ, ಇಲ್ಲಿರುವ ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ. ಇಂದು ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರಿಗೂ ಸಹ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ - ಸೋಮನಾಥನಿಗೆ ವಿಜಯವಾಗಲಿ.

ಸ್ನೇಹಿತರೆ,

ಈ ಅದ್ಭುತ ಕ್ಷಣ ಅಸಾಧಾರಣ ಎನಿಸಿದೆ, ಈ ಆಹ್ಲಾದಕರ ವಾತಾವರಣವೂ ಅಸಾಧಾರಣವಾಗಿದೆ, ಈ ಆಚರಣೆಯೂ ಅಸಾಧಾರಣವಾಗಿದೆ. ಒಂದೆಡೆ, ಮಹಾದೇವ ಪ್ರಭು, ಮತ್ತೊಂದೆಡೆ ಸಾಗರದ ವಿಶಾಲ ಅಲೆಗಳು; ಸೂರ್ಯನ ಕಿರಣಗಳು, ಪವಿತ್ರ ಮಂತ್ರಗಳ ಅನುರಣನ, ಭಕ್ತಿಯ ಉಬ್ಬರ... ಈ ದೈವಿಕ ಪರಿಸರದಲ್ಲಿ ಸೋಮನಾಥನ ಎಲ್ಲಾ ಭಕ್ತರ ಉಪಸ್ಥಿತಿಯು ಈ ಸಂದರ್ಭವನ್ನು ದೈವಿಕವಾಗಿಸಿದೆ ಮತ್ತು ಭವ್ಯವಾಗಿಸಿದೆ. ಸೋಮನಾಥ ದೇವಾಲಯ ಟ್ರಸ್ಟ್‌ ಅಧ್ಯಕ್ಷನಾಗಿ, ಸೋಮನಾಥ ಹೆಮ್ಮೆ(ಆತ್ಮಾಭಿಮಾನ) ಉತ್ಸವದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ದೊಡ್ಡ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ದಯವಿಟ್ಟು ಧ್ವನಿವರ್ಧಕದ ಶಬ್ದವನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ.

72 ತಾಸುಗಳ ಕಾಲ ಓಂಕಾರದ ನಿರಂತರ ಅನುರಣನ, 72 ತಾಸುಗಳ ನಿರಂತರ ಮಂತ್ರ ಪಠಣ. ನಿನ್ನೆ ಸಂಜೆ ಸೋಮನಾಥನ ಸಾವಿರ ವರ್ಷಗಳ ಕಥೆಯನ್ನು ಪ್ರಸ್ತುತಪಡಿಸುವ ವೇದ ಗುರುಕುಲಗಳ ಸಾವಿರ ವಿದ್ಯಾರ್ಥಿಗಳ ಜೊತೆಗೂಡಿ ಸಾವಿರ ಡ್ರೋನ್‌ಗಳು ಬಂದಿರುವುದನ್ನು ನಾನು ನೋಡಿದೆ. ಇಂದು ಮಂತ್ರಗಳು ಮತ್ತು ಸ್ತೋತ್ರಗಳ ಮೋಡಿ ಮಾಡುವ ಪ್ರಸ್ತುತಿಯೊಂದಿಗೆ 108 ಕುದುರೆಗಳ ಶೌರ್ಯ ಮೆರವಣಿಗೆ ದೇವಾಲಯವನ್ನು ತಲುಪುವುದು - ಇವೆಲ್ಲವೂ ಮೋಡಿ ಮಾಡುವಂತಿದೆ. ಈ ಅನುಭವವನ್ನು ಪದಗಳಲ್ಲಿ ಹೊರಹಾಕಲು ಸಾಧ್ಯವಿಲ್ಲ, ಕಾಲ ಮಾತ್ರ ಅದನ್ನು ಸಂರಕ್ಷಿಸಬಲ್ಲದು. ಈ ಆಚರಣೆಯು ಹೆಮ್ಮೆ, ಘನತೆ, ವೈಭವ ಮತ್ತು ಬುದ್ಧಿವಂತಿಕೆಯನ್ನು ಸಾಕಾರಗೊಳಿಸುತ್ತದೆ. ಇದು ಭವ್ಯತೆಯ ಪರಂಪರೆ, ಆಧ್ಯಾತ್ಮಿಕತೆಯ ಸಾರ, ಅನುಭವದ ಸಂತೋಷ, ಒಗ್ಗಟ್ಟಿನ ಪ್ರದರ್ಶನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಭಗವಾನ್ ಮಹಾದೇವನ ಆಶೀರ್ವಾದಗಳನ್ನು ಹೊಂದಿದೆ. ಬನ್ನಿ, ನನ್ನೊಂದಿಗೆ ಜಪದಲ್ಲಿ ಪಾಲ್ಗೊಳ್ಳಿ, ನಮಃ ಪಾರ್ವತಿ ಪತಯೇ... ಹರ್ ಹರ್ ಮಹಾದೇವ್!

 

ಸ್ನೇಹಿತರೆ,

ನಾನು ಇಂದು ನಿಮ್ಮೊಂದಿಗೆ ಮಾತನಾಡುವಾಗ, ನನ್ನ ಮನಸ್ಸು ಪದೇಪದೆ ಕೇಳುತ್ತಿದೆ, ನಿಖರವಾಗಿ 1 ಸಾವಿರ ವರ್ಷಗಳ ಹಿಂದೆ ನೀವು ಕುಳಿತಿರುವ ಈ ಸ್ಥಳದಲ್ಲಿ, ವಾತಾವರಣ ಹೇಗಿತ್ತು? ಇಂದು ಇಲ್ಲಿರುವವರು ನಿಮ್ಮ ಪೂರ್ವಜರು, ನಮ್ಮ ಪೂರ್ವಜರು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ತಮ್ಮ ನಂಬಿಕೆಗಾಗಿ, ಭಕ್ತಿಗಾಗಿ, ತಮ್ಮ ಮಹಾದೇವನಿಗಾಗಿ, ಅವರು ಎಲ್ಲವನ್ನೂ ತ್ಯಾಗ ಮಾಡಿದರು. ಸಾವಿರ ವರ್ಷಗಳ ಹಿಂದೆ, ಆ ಆಕ್ರಮಣಕಾರರು ತಾವು ಜಯ ಗಳಿಸಿದ್ದೇವೆಂದು ಭಾವಿಸಿದ್ದರು. ಆದರೆ ಇಂದು ಸಾವಿರ ವರ್ಷಗಳ ನಂತರ, ಸೋಮನಾಥ ದೇವಾಲಯದ ಮೇಲೆ ಹಾರುತ್ತಿರುವ ಧ್ವಜವು ಇಡೀ ಮನುಕುಲ ಸೃಷ್ಟಿಗೆ ಭಾರತದ ನಿಜವಾದ ಶಕ್ತಿ ಮತ್ತು ಚೈತನ್ಯವನ್ನು ಘೋಷಿಸುತ್ತಿದೆ. ಪ್ರಭಾಸ್ ಪಟಾನ್‌ನ ಈ ಪವಿತ್ರ ಭೂಮಿಯಲ್ಲಿರುವ ಪ್ರತಿಯೊಂದು ಮಣ್ಣಿನ ಕಣವು ಶೌರ್ಯ, ಧೈರ್ಯ ಮತ್ತು ಸ್ಥೈರ್ಯಕ್ಕೆ ಸಾಕ್ಷಿಯಾಗಿದೆ. ಸೋಮನಾಥನ ಈ ರೂಪಕ್ಕಾಗಿ, ಶಿವನ ಅಸಂಖ್ಯಾತ ಭಕ್ತರು, ಸಂಸ್ಕೃತಿಯ ಅಸಂಖ್ಯಾತ ಆರಾಧಕರು, ಸಂಪ್ರದಾಯದ ಅಸಂಖ್ಯಾತ ಜನರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಈ ಸೋಮನಾಥ ಹೆಮ್ಮೆಯ ಉತ್ಸವದಲ್ಲಿ, ಸೋಮನಾಥನ ರಕ್ಷಣೆಗಾಗಿ, ದೇವಾಲಯದ ಪುನರ್ನಿರ್ಮಾಣಕ್ಕಾಗಿ ಮತ್ತು ಭಗವಾನ್ ಮಹಾದೇವನಿಗೆ ಎಲ್ಲವನ್ನೂ ಅರ್ಪಿಸಿದ ಪ್ರತಿಯೊಬ್ಬ ಧೈರ್ಯಶಾಲಿ ಪುರುಷ ಮತ್ತು ಮಹಿಳೆಗೆ ನಾನು ಮೊದಲು ನಮಸ್ಕರಿಸುತ್ತೇನೆ.

ಸಹೋದರ ಸಹೋದರಿಯರೆ,

ಪ್ರಭಾಸ್ ಪಠಾಣ್ ನ ಈ ಭೂಮಿ ಶಿವನ ಕ್ಷೇತ್ರ ಮಾತ್ರವಲ್ಲದೆ, ಅದರ ಪಾವಿತ್ರ್ಯವು ಭಗವಾನ್ ಶ್ರೀ ಕೃಷ್ಣನೊಂದಿಗೆ ಸಂಬಂಧ ಹೊಂದಿದೆ. ಮಹಾಭಾರತ ಯುಗದಲ್ಲಿ ಪಾಂಡವರು ಸಹ ಈ ಪವಿತ್ರ ಸ್ಥಳದಲ್ಲಿ ತಪಸ್ಸು ಮಾಡಿದರು. ಆದ್ದರಿಂದ, ಈ ಸಂದರ್ಭವು ಭಾರತದ ಅಸಂಖ್ಯಾತ ಆಯಾಮಗಳಿಗೆ ನಮಸ್ಕರಿಸುವ ಅವಕಾಶವೂ ಆಗಿದೆ. ಸೋಮನಾಥನ ಹೆಮ್ಮೆಯ ಸಾವಿರ ವರ್ಷಗಳ ಪ್ರಯಾಣವನ್ನು ಇಂದು ಸ್ಮರಿಸಲಾಗುತ್ತಿದ್ದು, 1951ರಲ್ಲಿ ಅದರ ಪುನರ್ನಿರ್ಮಾಣದಿಂದ 75 ವರ್ಷಗಳನ್ನು ಆಚರಿಸಲಾಗುತ್ತಿದೆ ಎಂಬುದು ಸಂತೋಷದ ಕಾಕತಾಳೀಯ ಸಂದರ್ಭವಾಗಿದೆ. ಸೋಮನಾಥ ಹೆಮ್ಮೆಯ ಉತ್ಸವದಂದು ವಿಶ್ವಾದ್ಯಂತದ ಲಕ್ಷಾಂತರ ಭಕ್ತರಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಸೋಮನಾಥ ಹೆಮ್ಮೆಯ ಉತ್ಸವವು ಕೇವಲ ಸಾವಿರ ವರ್ಷಗಳ ಹಿಂದೆ ನಡೆದ ವಿನಾಶದ ಸ್ಮರಣೆಯಲ್ಲ. ಇದು ಸಾವಿರ ವರ್ಷಗಳ ಪ್ರಯಾಣದ ಆಚರಣೆಯಾಗಿದೆ. ಇದು ಭಾರತದ ಅಸ್ತಿತ್ವ ಮತ್ತು ಹೆಮ್ಮೆಯ ಉತ್ಸವವೂ ಆಗಿದೆ. ಏಕೆಂದರೆ ಪ್ರತಿ ಹೆಜ್ಜೆಯಲ್ಲಿ, ಪ್ರತಿ ಮೈಲಿಗಲ್ಲಿನಲ್ಲಿ, ಸೋಮನಾಥ ಮತ್ತು ಭಾರತದ ನಡುವೆ ವಿಶಿಷ್ಟವಾದ ಸಮಾನಾಂತರ ಸನ್ನಿವೇಶಗಳನ್ನು ನಾವು ನೋಡುತ್ತೇವೆ. ಸೋಮನಾಥವನ್ನು ನಾಶ ಮಾಡಲು ಪದೇಪದೆ ಪ್ರಯತ್ನಗಳು, ಪದೇಪದೆ ಪಿತೂರಿಗಳು ನಡೆಯುತ್ತಾ ಬಂದಂತೆ, ಅದೇ ರೀತಿಯಲ್ಲಿ, ವಿದೇಶಿ ಆಕ್ರಮಣಕಾರರು ಶತಮಾನಗಳಿಂದ ಭಾರತವನ್ನು ನಾಶ ಮಾಡಲು ಪ್ರಯತ್ನಿಸಿದರು. ಆದರೂ ಸೋಮನಾಥ ನಾಶವಾಗಲಿಲ್ಲ, ಭಾರತ ನಾಶವಾಗಲಿಲ್ಲ! ಏಕೆಂದರೆ ಭಾರತ ಮತ್ತು ಭಾರತದ ನಂಬಿಕೆಯ ಕೇಂದ್ರಗಳು ಬೇರ್ಪಡಿಸಲಾಗದಂತೆ ಬಂಧಿಸಲ್ಪಟ್ಟಿವೆ.

 

ಸ್ನೇಹಿತರೆ,

ಇತಿಹಾಸವನ್ನು ನೀವೇ ಊಹಿಸಿ - ನಿಖರವಾಗಿ 1 ಸಾವಿರ ವರ್ಷಗಳ ಹಿಂದೆ, 1026ರಲ್ಲಿ, ಘಜ್ನಿ ಮಹಮೂದ್ ಮೊದಲು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಕೆಡವಿದ. ಅವನು ಸೋಮನಾಥನ ಅಸ್ತಿತ್ವವನ್ನೇ ಅಳಿಸಿ ಹಾಕಿದ್ದಾನೆಂದು ಭಾವಿಸಿದ. ಆದರೆ ಕೆಲವೇ ವರ್ಷಗಳಲ್ಲಿ, ಸೋಮನಾಥವನ್ನು ಪುನರ್ನಿರ್ಮಿಸಲಾಯಿತು. 12ನೇ ಶತಮಾನದಲ್ಲಿ, ರಾಜ ಕುಮಾರಪಾಲನು ದೇವಾಲಯದ ಭವ್ಯವಾದ ಪುನಃಸ್ಥಾಪನೆ ಮಾಡಿದ. 13ನೇ ಶತಮಾನದ ಕೊನೆಯಲ್ಲಿ, ಅಲಾವುದ್ದೀನ್ ಖಿಲ್ಜಿ ಮತ್ತೆ ಸೋಮನಾಥನ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ. ಜಾಲೋರ್‌ನ ಆಡಳಿತಗಾರ ಖಿಲ್ಜಿಯ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದ ಎಂದು ಹೇಳಲಾಗುತ್ತದೆ. ಶೀಘ್ರದಲ್ಲೇ, 14ನೇ ಶತಮಾನದ ಆರಂಭದಲ್ಲಿ ಜುನಾಗಢದ ರಾಜ ಮತ್ತೊಮ್ಮೆ ಸೋಮನಾಥನ ಪಾವಿತ್ರ್ಯವನ್ನು ಪುನಃಸ್ಥಾಪಿಸಿದ. 14ನೇ ಶತಮಾನದ ನಂತರದ ವರ್ಷಗಳಲ್ಲಿ, ಮುಜಾಫರ್ ಖಾನ್ ಸೋಮನಾಥದ ಮೇಲೆ ದಾಳಿ ಮಾಡಿದ, ಆದರೆ ಆ ದಾಳಿಯೂ ವಿಫಲವಾಯಿತು.

15ನೇ ಶತಮಾನದಲ್ಲಿ, ಸುಲ್ತಾನ್ ಅಹ್ಮದ್ ಶಾ ದೇವಾಲಯವನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದ, ನಂತರ ಅವನ ಮೊಮ್ಮಗ ಸುಲ್ತಾನ್ ಮಹ್ಮದ್ ಬೇಗಡ ಸೋಮನಾಥವನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಿದ. ಆದರೂ, ಮಹಾದೇವನ ಭಕ್ತರ ಪ್ರಯತ್ನದಿಂದ, ದೇವಾಲಯವು ಮತ್ತೊಮ್ಮೆ ಜೀವಂತವಾಯಿತು. 17-18ನೇ ಶತಮಾನಗಳಲ್ಲಿ ಔರಂಗಜೇಬನ ಯುಗ ಬಂತು. ಅವನು ದೇವಾಲಯವನ್ನು ಅಪವಿತ್ರಗೊಳಿಸಿ ಅದನ್ನು ಮಸೀದಿಯನ್ನಾಗಿ ಮಾಡಲು ಮತ್ತೆ ಪ್ರಯತ್ನಿಸಿದ. ಅದರ ನಂತರವೂ, ಅಹಲ್ಯಾಬಾಯಿ ಹೋಳ್ಕರ್ ಹೊಸ ದೇವಾಲಯ ಸ್ಥಾಪಿಸಿದರು ಮತ್ತು ಸೋಮನಾಥ ಮತ್ತೊಮ್ಮೆ ಪ್ರಕಟವಾಯಿತು.

ಹೀಗಾಗಿ, ಸೋಮನಾಥದ ಇತಿಹಾಸವು ವಿನಾಶ ಮತ್ತು ಸೋಲಿನ ಇತಿಹಾಸವಲ್ಲ. ಇದು ಗೆಲುವು ಮತ್ತು ಪುನರ್ನಿರ್ಮಾಣದ ಇತಿಹಾಸ. ಇದು ನಮ್ಮ ಪೂರ್ವಜರ ಶೌರ್ಯದ ಇತಿಹಾಸ, ಅವರ ತ್ಯಾಗ ಮತ್ತು ಸಮರ್ಪಣೆಯ ಇತಿಹಾಸ. ಆಕ್ರಮಣಕಾರರು ಬರುತ್ತಲೇ ಇದ್ದರು, ಧಾರ್ಮಿಕ ಮತಾಂಧತೆಯ ಹೊಸ ಅಲೆಗಳು ದಾಳಿ ಮಾಡುತ್ತಲೇ ಇದ್ದವು, ಆದರೆ ಪ್ರತಿ ಯುಗದಲ್ಲೂ ಸೋಮನಾಥವನ್ನು ಮತ್ತೆ ಮತ್ತೆ ಸ್ಥಾಪಿಸಲಾಯಿತು. ಅಂತಹ ಶತಮಾನಗಳ ಹೋರಾಟ, ಅಂತಹ ದೀರ್ಘಕಾಲದ ಪ್ರತಿರೋಧ, ಅಂತಹ ಮಹಾನ್ ತಾಳ್ಮೆ, ಸೃಜನಶೀಲತೆ ಮತ್ತು ಪುನರ್ನಿರ್ಮಾಣದಲ್ಲಿ ಚೇತರಿಕೆ - ಅಂತಹ ಶಕ್ತಿ, ಸಂಸ್ಕೃತಿಯಲ್ಲಿ ಅಂತಹ ನಂಬಿಕೆ, ಅಂತಹ ಭಕ್ತಿ - ಇಂತಹ ಉದಾಹರಣೆಗಳು ಪ್ರಪಂಚದ ಇತಿಹಾಸದಲ್ಲಿ ಅಪರೂಪ. ಹೇಳಿ, ನಮ್ಮ ಪೂರ್ವಜರ ಶೌರ್ಯವನ್ನು ನಾವು ನೆನಪಿಸಿಕೊಳ್ಳಬೇಕಲ್ಲವೇ? ಅವರ ಧೈರ್ಯದ ಕಾರ್ಯಗಳಿಂದ ನಾವು ಸ್ಫೂರ್ತಿ ಪಡೆಯಬೇಕಲ್ಲವೇ? ಯಾವ ಮಗ, ಯಾವ ವಂಶಸ್ಥರು ತಮ್ಮ ಪೂರ್ವಜರ ಶೌರ್ಯವನ್ನು ಮರೆತಂತೆ ನಟಿಸುತ್ತಾರೆ?

 

ಸಹೋದರ ಸಹೋದರಿಯರೆ,

ಘಜ್ನಿಯಿಂದ ಔರಂಗಜೇಬನವರೆಗೆ, ಅಸಂಖ್ಯಾತ ಆಕ್ರಮಣಕಾರರು ಸೋಮನಾಥನ ಮೇಲೆ ದಾಳಿ ಮಾಡಿದರು. ಅವರ ಕತ್ತಿಗಳು ಶಾಶ್ವತ ಸೋಮನಾಥವನ್ನು ವಶಪಡಿಸಿಕೊಳ್ಳುತ್ತಿವೆ ಎಂದು ಅವರು ನಂಬಿದ್ದರು. ಆದರೆ ಆ ಮತಾಂಧರಿಗೆ ಸೋಮನಾಥ ಎಂಬ ಹೆಸರಿನಿಂದಲೇ ಅಮರತ್ವದ ಅಮೃತತ್ವದ ಸೋಮನಾಥನನ್ನು ಎದ್ದು ನಿಲ್ಲಿಸುತ್ತದೆ ಎಂಬುದು ಅರ್ಥವಾಗಲಿಲ್ಲ. ಇದು ವಿಷವನ್ನು ಕುಡಿದು ಅಮರನಾಗಿ ಉಳಿಯುವ ಕಲ್ಪನೆಯನ್ನು ಸಾಕಾರಗೊಳಿಸುತ್ತದೆ. ಅದರೊಳಗೆ ಸದಾಶಿವ ಮಹಾದೇವನ ಪ್ರಜ್ಞಾಪೂರ್ವಕ ಶಕ್ತಿ ನೆಲೆಸಿದೆ, ಅವನು "ಪ್ರಚಂಡ ತಾಂಡವಃ ಶಿವಃ"ನಾಗಿ ವ್ಯಕ್ತಪಡಿಸಿದ ದಾನಶೀಲ ಮತ್ತು ಶಕ್ತಿಯ ಮೂಲವಾಗಿದ್ದಾನೆ.

ಸಹೋದರ ಸಹೋದರಿಯರೆ,

ಸೋಮನಾಥದಲ್ಲಿ ಪ್ರತಿಷ್ಠಾಪಿಸಲಾದ ಮಹಾದೇವನನ್ನು ಮೃತ್ಯುಂಜಯ ಎಂದೂ ಕರೆಯಲಾಗುತ್ತದೆ – ಮರಣವನ್ನೇ ಜಯಿಸಿದವನು, ಕಾಲದ ಸಾಕಾರ. ಯತೋ ಜಯತೇ ಪಲ್ಯತೇ ಯೇನ ವಿಶ್ವಂ, ತಮಿಶಂ ಭಜೇ ಲಿಯತೇ ಯತ್ರ ವಿಶ್ವಂ! ಅಂದರೆ, ವಿಶ್ವವು ಅವನಿಂದ ಹುಟ್ಟಿ, ಅವನಿಂದ ಪೋಷಿಸಲ್ಪಟ್ಟಿದೆ ಮತ್ತು ಅವನಲ್ಲೇ ಮತ್ತೆ ಕರಗುತ್ತದೆ. ನಾವು ಈ ಕೆಳಗಿನ ಸಾಲುಗಳನ್ನು ನಂಬುತ್ತೇವೆ:

ತ್ವಮೇಕೋ ಜಗತ್ ವ್ಯಾಪಕೋ ವಿಶ್ವ ರೂಪ!

ಅಂದರೆ, ಶಿವನು ಇಡೀ ವಿಶ್ವವನ್ನೇ ವ್ಯಾಪಿಸಿದ್ದಾನೆ.

ಅದಕ್ಕಾಗಿಯೇ ನಾವು ಪ್ರತಿಯೊಂದು ಕಣದಲ್ಲಿಯೂ, ಪ್ರತಿಯೊಂದು ಕಲ್ಲಿನಲ್ಲಿಯೂ ಶಂಕರನನ್ನು ನೋಡುತ್ತೇವೆ. ಹಾಗಾದರೆ ಯಾರಾದರೂ ಶಂಕರನ ಅಸಂಖ್ಯಾತ ರೂಪಗಳನ್ನು ಹೇಗೆ ನಾಶ ಮಾಡಲು ಸಾಧ್ಯ? ಜೀವಿಯಲ್ಲಿಯೂ ಸಹ ಶಿವನನ್ನು ನೋಡುವವರು ನಾವು! ಯಾರಾದರೂ ನಮ್ಮ ನಂಬಿಕೆಯನ್ನು ಹೇಗೆ ಅಲುಗಾಡಿಸಲು ಸಾಧ್ಯ?

ಸ್ನೇಹಿತರೆ,

ಇದು ಕಾಲಚಕ್ರ - ಸೋಮನಾಥನನ್ನು ನಾಶ ಮಾಡುವ ಉದ್ದೇಶದಿಂದ ಬಂದ ಧಾರ್ಮಿಕ ಮತಾಂಧರು ಇಂದು ಇತಿಹಾಸದ ಕೆಲವು ಪುಟಗಳಿಗೆ ಸೀಮಿತರಾಗಿದ್ದಾರೆ. ಆದರೂ, ಸೋಮನಾಥ ದೇವಾಲಯವು ಇನ್ನೂ ವಿಶಾಲ ಸಾಗರದ ತೀರದಲ್ಲಿ ಎತ್ತರವಾಗಿ ನಿಂತಿದೆ, ಧರ್ಮದ ತನ್ನ ಎತ್ತರದ ಧ್ವಜವನ್ನು ಮೇಲಕ್ಕೆತ್ತಿ ನಿಂತಿದೆ. ಸೋಮನಾಥದ ಶಿಖರವು ಹೀಗೆ ಘೋಷಿಸುತ್ತದೆ: ಚಂದ್ರಶೇಖರಂ ಆಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ! — “ನಾನು ಚಂದ್ರಶೇಖರ ಶಿವನಲ್ಲಿ ಆಶ್ರಯ ಪಡೆದಿದ್ದೇನೆ; ಕಾಲವೂ ಸಹ ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದರ್ಥ.

 

ಸ್ನೇಹಿತರೆ,

ಸೋಮನಾಥ ಹೆಮ್ಮೆಯ ಉತ್ಸವವು ಐತಿಹಾಸಿಕ ವೈಭವದ ಆಚರಣೆ ಮಾತ್ರವಲ್ಲ, ಭವಿಷ್ಯಕ್ಕಾಗಿ ಶಾಶ್ವತ ಪ್ರಯಾಣವನ್ನು ಜೀವಂತಗೊಳಿಸುವ ಮಾಧ್ಯಮವೂ ಆಗಿದೆ. ನಮ್ಮ ಗುರುತು ಮತ್ತು ಅಸ್ತಿತ್ವವನ್ನು ಬಲಪಡಿಸಲು ನಾವು ಈ ಸಂದರ್ಭವನ್ನು ಬಳಸಬೇಕು. ನೋಡಿ, ಯಾವುದೇ ದೇಶವು ಕೆಲವು 100 ವರ್ಷಗಳಷ್ಟು ಹಳೆಯದಾದ ಪರಂಪರೆಯನ್ನು ಹೊಂದಿದ್ದರೆ, ಅದು ಆ ಪರಂಪರೆಯನ್ನು ಜಗತ್ತಿಗೆ ತನ್ನ ಗುರುತಾಗಿ ಪ್ರಸ್ತುತಪಡಿಸುತ್ತದೆ. ಆದಾಗ್ಯೂ, ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಸೋಮನಾಥದಂತಹ ಪವಿತ್ರ ತಾಣಗಳನ್ನು ಹೊಂದಿದೆ. ಈ ಸ್ಥಳಗಳು ನಮ್ಮ ಶಕ್ತಿ, ಹೊಂದಾಣಿಕೆ ಮತ್ತು ಸಂಪ್ರದಾಯದ ಸಂಕೇತಗಳಾಗಿವೆ. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ, ಗುಲಾಮಗಿರಿಯ ಮನಸ್ಥಿತಿ ಹೊಂದಿರುವವರು ಈ ಪರಂಪರೆಯಿಂದ ದೂರವಿರಲು ಪ್ರಯತ್ನಿಸಿದರು. ಈ ಇತಿಹಾಸವನ್ನು ಅಳಿಸಿಹಾಕಲು ದುರುದ್ದೇಶಪೂರಿತ ಪ್ರಯತ್ನಗಳು ನಡೆದವು.

ಸೋಮನಾಥದ ರಕ್ಷಣೆಗಾಗಿ ರಾಷ್ಟ್ರವು ಹೇಗೆ ತ್ಯಾಗ ಮಾಡಿತು ಎಂಬುದು ನಮಗೆ ತಿಳಿದಿದೆ. ರಾವಲ್ ಕನ್ಹದ್ದೇವ್‌ನಂತಹ ಆಡಳಿತಗಾರರ ಪ್ರಯತ್ನಗಳು, ವೀರ್ ಹಮೀರ್ಜಿ ಗೋಹಿಲ್‌ನ ಶೌರ್ಯ, ವೇಗ್ಡಾ ಭಿಲ್‌ನ ಶೌರ್ಯ ಹೀಗೆ ಅನೇಕ ವೀರರು ಸೋಮನಾಥ ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದ್ದಾರೆ. ಆದರೂ, ದುಃಖಕರವೆಂದರೆ, ಅವರಿಗೆ ಎಂದಿಗೂ ಸರಿಯಾದ ಮನ್ನಣೆ ನೀಡಲಾಗಿಲ್ಲ. ಬದಲಾಗಿ, ಕೆಲವು ಇತಿಹಾಸಕಾರರು ಮತ್ತು ರಾಜಕಾರಣಿಗಳು ಆಕ್ರಮಣಗಳ ಇತಿಹಾಸದ ಸತ್ಯವನ್ನು ತೊಳೆಯಲು" ಪ್ರಯತ್ನಿಸಿದರು. ಧಾರ್ಮಿಕ ಮತಾಂಧತೆಯನ್ನು ಕೇವಲ ಲೂಟಿ ಎಂದು ಮರೆಮಾಚಲು ಪುಸ್ತಕಗಳನ್ನು ಬರೆಯಲಾಗಿದೆ. ಆದರೆ ಸೋಮನಾಥದ ಮೇಲೆ ಒಮ್ಮೆ ದಾಳಿ ಮಾಡಲಾಗಿಲ್ಲ - ಅದರ ಮೇಲೆ ಪದೇಪದೆ ದಾಳಿ ಮಾಡಲಾಯಿತು. ದಾಳಿಗಳು ಕೇವಲ ಲೂಟಿಗಾಗಿ ಆಗಿದ್ದರೆ, ಸಾವಿರ ವರ್ಷಗಳ ಹಿಂದೆ ನಡೆದ ಮೊದಲ ದೊಡ್ಡ ಲೂಟಿಯ ನಂತರ ಅವು ನಿಲ್ಲುತ್ತಿದ್ದವು. ಆದರೆ ಹಾಗಾಗಲಿಲ್ಲ. ಸೋಮನಾಥದ ಪವಿತ್ರ ವಿಗ್ರಹವನ್ನು ಅಪವಿತ್ರಗೊಳಿಸಲಾಯಿತು, ದೇವಾಲಯದ ರೂಪವನ್ನು ಪದೇಪದೆ ಬದಲಾಯಿಸಲಾಯಿತು. ಸೋಮನಾಥವನ್ನು ಲೂಟಿಗಾಗಿ ಮಾತ್ರ ನಾಶಪಡಿಸಲಾಯಿತು ಎಂದು ನಮಗೆ ಕಲಿಸಲಾಯಿತು. ದ್ವೇಷ, ದಬ್ಬಾಳಿಕೆ ಮತ್ತು ಭಯೋತ್ಪಾದನೆಯ ಕ್ರೂರ ಇತಿಹಾಸವನ್ನು ನಮ್ಮಿಂದ ಮರೆ ಮಾಡಲಾಗಿದೆ.

ತಮ್ಮ ಧರ್ಮಕ್ಕೆ ನಿಜವಾಗಿಯೂ ನಿಷ್ಠರಾಗಿರುವ ಯಾವುದೇ ವ್ಯಕ್ತಿ ಅಂತಹ ಮತಾಂಧತೆಯನ್ನು ಬೆಂಬಲಿಸುವುದಿಲ್ಲ. ಆದರೂ, ಸಮಾಧಾನಪಡಿಸುವ ಜನರು ಯಾವಾಗಲೂ ಈ ಮನಸ್ಥಿತಿಯ ಮುಂದೆ ತಲೆಬಾಗುತ್ತಾರೆ. ಭಾರತವು ಗುಲಾಮಗಿರಿಯ ಸರಪಳಿಯಿಂದ ಮುಕ್ತವಾದಾಗ, ಸರ್ದಾರ್ ಪಟೇಲ್ ಸೋಮನಾಥವನ್ನು ಪುನರ್ನಿರ್ಮಿಸುವ ಪ್ರತಿಜ್ಞೆ ಮಾಡಿದಾಗ, ಅವರನ್ನು ತಡೆಯಲು ಪ್ರಯತ್ನಗಳು ನಡೆದವು. 1951ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಇಲ್ಲಿಗೆ ಬಂದಾಗಲೂ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಆ ಸಮಯದಲ್ಲಿ, ಸೌರಾಷ್ಟ್ರದ ಅತ್ಯಂತ ಪ್ರಸಿದ್ಧ ಆಡಳಿತಗಾರ, ನಮ್ಮ ಜಾಮ್ ಸಾಹೇಬ್ ಮಹಾರಾಜ ದಿಗ್ವಿಜಯ್ ಸಿಂಗ್ ಜಿ ಮುಂದೆ ಬಂದರು. ಭೂಸ್ವಾಧೀನದಿಂದ ಭದ್ರತಾ ವ್ಯವಸ್ಥೆಗಳವರೆಗೆ, ಅವರು ರಾಷ್ಟ್ರೀಯ ಹೆಮ್ಮೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಮುಂದೆ ಇರಿಸಿದರು. ಆ ಯುಗದಲ್ಲಿ, ಜಾಮ್ ಸಾಹೇಬ್ ಸೋಮನಾಥ ದೇವಾಲಯಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದರು, ಜತೆಗೆ ಟ್ರಸ್ಟ್‌ನ ಮೊದಲ ಅಧ್ಯಕ್ಷರಾಗಿ, ದೊಡ್ಡ ಜವಾಬ್ದಾರಿ ವಹಿಸಿಕೊಂಡರು.

 

ಸಹೋದರ ಸಹೋದರಿಯರೆ,

ದುಃಖಕರವೆಂದರೆ, ಇಂದಿಗೂ ಸಹ ಸೋಮನಾಥದ ಪುನರ್ನಿರ್ಮಾಣ ವಿರೋಧಿಸುವ ಶಕ್ತಿಗಳು ನಮ್ಮ ದೇಶದಲ್ಲಿ ಸಕ್ರಿಯವಾಗಿವೆ. ಇಂದು ಕತ್ತಿಗಳ ಬದಲಿಗೆ ಭಾರತದ ವಿರುದ್ಧ ಪಿತೂರಿಗಳು ಇತರ ದುರುದ್ದೇಶಪೂರಿತ ರೂಪಗಳನ್ನು ಹೊಂದಿವೆ. ಅದಕ್ಕಾಗಿಯೇ ನಾವು ಹೆಚ್ಚು ಜಾಗರೂಕರಾಗಿರಬೇಕು, ನಾವು ನಮ್ಮನ್ನು ಬಲಪಡಿಸಿಕೊಳ್ಳಬೇಕು. ನಾವು ಒಗ್ಗಟ್ಟಿನಿಂದ ಇರಬೇಕು, ಒಟ್ಟಾಗಿ ನಿಲ್ಲಬೇಕು ಮತ್ತು ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಪ್ರತಿಯೊಂದು ಶಕ್ತಿಯನ್ನೂ ಸೋಲಿಸಬೇಕು.

ಸ್ನೇಹಿತರೆ,

ನಾವು ನಮ್ಮ ನಂಬಿಕೆಗೆ, ನಮ್ಮ ಬೇರುಗಳಿಗೆ ಸಂಪರ್ಕದಲ್ಲಿರುವಾಗ, ನಾವು ನಮ್ಮ ಪರಂಪರೆಯನ್ನು ಹೆಮ್ಮೆ ಮತ್ತು ಜಾಗರೂಕತೆಯಿಂದ ಸಂರಕ್ಷಿಸಿದಾಗ, ನಮ್ಮ ನಾಗರಿಕತೆಯ ಬೇರುಗಳು ಬಲಗೊಳ್ಳುತ್ತವೆ. ಅದಕ್ಕಾಗಿಯೇ ಈ ಸಾವಿರ ವರ್ಷಗಳ ಪ್ರಯಾಣವು ಮುಂದಿನ ಸಾವಿರ ವರ್ಷಗಳಿಗೆ ಸಿದ್ಧರಾಗಲು ನಮಗೆ ಸ್ಫೂರ್ತಿ ನೀಡುತ್ತದೆ.

 

ಸ್ನೇಹಿತರೆ,

ರಾಮಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ಸಂದರ್ಭದಲ್ಲಿ, ನಾನು ಮುಂದಿನ ಸಾವಿರ ವರ್ಷಗಳವರೆಗೆ ಭಾರತದ ಮುಂದೆ ಒಂದು ಭವ್ಯ ದೃಷ್ಟಿಕೋನ ಇರಿಸಿದ್ದೆ. "ದೈವಿಕತೆಯಿಂದ ರಾಷ್ಟ್ರಕ್ಕೆ" ಎಂಬ ದೃಷ್ಟಿಕೋನದೊಂದಿಗೆ ಮುನ್ನಡೆಯುವ ಬಗ್ಗೆ ನಾನು ಮಾತನಾಡಿದ್ದೆ. ಇಂದು ಭಾರತದ ಸಾಂಸ್ಕೃತಿಕ ಪುನರುಜ್ಜೀವನವು ಲಕ್ಷಾಂತರ ನಾಗರಿಕರಲ್ಲಿ ಹೊಸ ವಿಶ್ವಾಸ ತುಂಬುತ್ತಿದೆ. ಇಂದು ಪ್ರತಿಯೊಬ್ಬ ಭಾರತೀಯನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ನಂಬಿಕೆ ಹೊಂದಿದ್ದಾನೆ. ಇಂದು 1.4 ಶತಕೋಟಿ ಭಾರತೀಯರು ಭವಿಷ್ಯದ ಗುರಿಗಳ ಕಡೆಗೆ ದೃಢನಿಶ್ಚಯ ಹೊಂದಿದ್ದಾರೆ. ಭಾರತವು ತನ್ನ ವೈಭವವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ. ಬಡತನ ವಿರುದ್ಧದ ನಮ್ಮ ಯುದ್ಧವನ್ನು ನಾವು ಗೆಲ್ಲುತ್ತೇವೆ. ನಾವು ಅಭಿವೃದ್ಧಿಯ ಹೊಸ ಶಿಖರಗಳನ್ನು ತಲುಪುತ್ತೇವೆ. ಮೊದಲನೆಯದಾಗಿ, ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿ ಮತ್ತು ನಂತರ ಅದರಾಚೆಗಿನ ಪ್ರಯಾಣ - ಆ ಮಾರ್ಗವು ಈಗ ಸಿದ್ಧವಾಗಿದೆ. ಸೋಮನಾಥ ದೇವಾಲಯದ ಅದ್ಭುತ ಶಕ್ತಿಯು ಈ ನಿರ್ಣಯಗಳನ್ನು ಆಶೀರ್ವದಿಸುತ್ತಿದೆ.

ಸ್ನೇಹಿತರೆ,

ಇಂದಿನ ಭಾರತವು ಪರಂಪರೆಯಿಂದ ಅಭಿವೃದ್ಧಿಯತ್ತ ಮುನ್ನೋಟದ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತಿದೆ. ಸೋಮನಾಥದಲ್ಲಿ, ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಒಟ್ಟಿಗೆ ಸಾಕಾರಗೊಳಿಸಲಾಗುತ್ತಿದೆ. ಒಂದೆಡೆ, ಸೋಮನಾಥ ದೇವಾಲಯದ ಸಾಂಸ್ಕೃತಿಕ ವಿಸ್ತರಣೆ, ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆ, ಮಾಧವಪುರ ಜಾತ್ರೆಯ ಚೈತನ್ಯ - ಇವೆಲ್ಲವೂ ನಮ್ಮ ಪರಂಪರೆಯನ್ನು ಬಲಪಡಿಸುತ್ತವೆ. ಗಿರ್ ಸಿಂಹಗಳ ಸಂರಕ್ಷಣೆ ಈ ಪ್ರದೇಶದ ನೈಸರ್ಗಿಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಪ್ರಭಾಸ್ ಪಟಾನ್‌ನಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೃಷ್ಟಿಸಲಾಗುತ್ತಿದೆ. ಕೇಶೋಡ್ ವಿಮಾನ ನಿಲ್ದಾಣ ವಿಸ್ತರಣೆಯು ದೇಶಾದ್ಯಂತ ಮತ್ತು ವಿದೇಶಗಳಿಂದ ಯಾತ್ರಾರ್ಥಿಗಳು ಸೋಮನಾಥವನ್ನು ನೇರವಾಗಿ ತಲುಪಲು ಅನುವು ಮಾಡಿಕೊಡುತ್ತದೆ. ಅಹಮದಾಬಾದ್-ವೆರಾವಲ್ ವಂದೇ ಭಾರತ್ ರೈಲಿನ ಉದ್ಘಾಟನೆಯು ಯಾತ್ರಿಕರು ಮತ್ತು ಪ್ರವಾಸಿಗರ ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ. ಈ ಪ್ರದೇಶದಲ್ಲಿ ತೀರ್ಥಯಾತ್ರೆಯ ಸರ್ಕ್ಯೂಟ್‌ನ ಅಭಿವೃದ್ಧಿಯೂ ನಡೆಯುತ್ತಿದೆ. ಹೀಗಾಗಿ, ಇಂದಿನ ಭಾರತವು ನಂಬಿಕೆಯನ್ನು ನೆನಪಿಸಿಕೊಳ್ಳುವುದಲ್ಲದೆ, ಮೂಲಸೌಕರ್ಯ, ಸಂಪರ್ಕ ಮತ್ತು ತಂತ್ರಜ್ಞಾನದ ಮೂಲಕ ಭವಿಷ್ಯಕ್ಕಾಗಿ ಅದನ್ನು ಸಬಲೀಕರಣಗೊಳಿಸುತ್ತಿದೆ.

ಸ್ನೇಹಿತರೆ,

ನಮ್ಮ ನಾಗರಿಕತೆಯ ಸಂದೇಶವು ಎಂದಿಗೂ ಇತರರನ್ನು ಸೋಲಿಸುವುದು ಅಲ್ಲ, ಆದರೆ ಜೀವನವನ್ನು ಸಮತೋಲನದಲ್ಲಿಡುವುದೇ ಆಗಿದೆ. ನಮ್ಮ ಸಂಪ್ರದಾಯದಲ್ಲಿ ನಂಬಿಕೆಯ ಮಾರ್ಗವು ದ್ವೇಷಕ್ಕೆ ಕಾರಣವಾಗುವುದಿಲ್ಲ. ನಮ್ಮ ಶಕ್ತಿ ನಮಗೆ ವಿನಾಶದ ದುರಹಂಕಾರವನ್ನು ನೀಡುವುದಿಲ್ಲ. ಸೃಷ್ಟಿಯ ಹಾದಿ ದೀರ್ಘವಾದರೂ ಅದು ಶಾಶ್ವತ, ಶಾಶ್ವತ ಎಂದು ಸೋಮನಾಥರು ನಮಗೆ ಕಲಿಸಿದ್ದಾರೆ. ಕತ್ತಿಯ ತುದಿಯಿಂದ ಹೃದಯಗಳನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಇತರರನ್ನು ಅಳಿಸಿಹಾಕುವ ಮೂಲಕ ಮುನ್ನಡೆಯಲು ಬಯಸುವ ನಾಗರಿಕತೆಗಳು ಕಾಲಕ್ರಮೇಣ ನಶಿಸಿ ಹೋಗಿವೆ. ಅದಕ್ಕಾಗಿಯೇ ಭಾರತವು ಇತರರನ್ನು ಸೋಲಿಸುವ ಮೂಲಕ ಹೇಗೆ ಗೆಲ್ಲುವುದು ಎಂದು ಜಗತ್ತಿಗೆ ಕಲಿಸಿಲ್ಲ, ಆದರೆ ಹೃದಯಗಳನ್ನು ಗೆಲ್ಲುವ ಮೂಲಕ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದೆ. ಈ ಚಿಂತನೆಯೇ ಇಂದು ಜಗತ್ತಿಗೆ ಬೇಕಾಗಿದೆ. ಸೋಮನಾಥನ ಸಾವಿರ ವರ್ಷಗಳ ಇತಿಹಾಸವು ಎಲ್ಲಾ ಮಾನವತೆಗೆ ಈ ಪಾಠವನ್ನು ನೀಡುತ್ತದೆ.

ಆದ್ದರಿಂದ ನಾವು ದೃಢಸಂಕಲ್ಪ ಮಾಡೋಣ - ಅಭಿವೃದ್ಧಿಯತ್ತ ಮುನ್ನಡೆಯಲು, ಹೆಜ್ಜೆಯಿಂದ ಹೆಜ್ಜೆಗೆ ಒಟ್ಟಿಗೆ ನಡೆಯಲು, ಭುಜದಿಂದ ಭುಜಕ್ಕೆ, ಹೃದಯದಿಂದ ಹೃದಯಕ್ಕೆ, ನಮ್ಮ ಗುರಿಗಳನ್ನು ಕಳೆದುಕೊಳ್ಳದೆ, ನಮ್ಮ ಹಿಂದಿನ ಮತ್ತು ನಮ್ಮ ಪರಂಪರೆಯೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸೋಣ. ನಮ್ಮ ಪ್ರಜ್ಞೆಯನ್ನು ಕಾಪಾಡಿಕೊಳ್ಳುವಾಗ ಆಧುನಿಕತೆಯನ್ನು ಅಳವಡಿಸಿಕೊಳ್ಳೋಣ. ಸೋಮನಾಥ ಪ್ರೈಡ್ ಫೆಸ್ಟಿವಲ್‌ನಂತಹ ಹಬ್ಬಗಳಿಂದ ಸ್ಫೂರ್ತಿ ಪಡೆದು ಪ್ರಗತಿಯ ಹಾದಿಯಲ್ಲಿ ವೇಗವಾಗಿ ಸಾಗೋಣ. ಪ್ರತಿಯೊಂದು ಸವಾಲನ್ನು ಜಯಿಸಿ ನಮ್ಮ ಗುರಿಗಳನ್ನು ತಲುಪೋಣ. ಈ ಕಾರ್ಯಕ್ರಮ ಇಂದು ಪ್ರಾರಂಭವಾಗುತ್ತದೆ, ಆದರೆ ನಾವು ದೇಶಾದ್ಯಂತದ ಈ ಸಾವಿರ ವರ್ಷಗಳ ಪ್ರಯಾಣವನ್ನು ಸ್ಮರಿಸಬೇಕು, ನಮ್ಮ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಬೇಕು, ಈ ಹೊಸ 75 ವರ್ಷಗಳ ಮೈಲಿಗಲ್ಲು ಆಚರಿಸಬೇಕು, ಈ ಆಚರಣೆಯನ್ನು 2027 ಮೇ  ತನಕ ಮುಂದುವರಿಸಬೇಕು. ನಾವು ಪ್ರತಿಯೊಬ್ಬ ನಾಗರಿಕನನ್ನು ಜಾಗೃತಗೊಳಿಸೋಣ ಮತ್ತು ಜಾಗೃತ ರಾಷ್ಟ್ರವು ತನ್ನ ಕನಸುಗಳನ್ನು ನನಸಾಗಿಸಲು ಮುಂದುವರಿಯಲಿ. ಈ ಆಶಯದೊಂದಿಗೆ, ಮತ್ತೊಮ್ಮೆ, ನನ್ನ ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಹರ ಹರ ಮಹಾದೇವ್.

ಜೈ ಸೋಮನಾಥ್.

ಜೈ ಸೋಮನಾಥ್.

ಜೈ ಸೋಮನಾಥ್.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI at 10: From payments pipe to backbone of India’s digital financial ecosystem

Media Coverage

UPI at 10: From payments pipe to backbone of India’s digital financial ecosystem
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a mishap in Katihar, Bihar
April 11, 2026
PM announces ex-gratia from PMNRF

Prime Minister Shri Narendra Modi today expressed profound grief over the tragic mishap in Katihar, Bihar, describing the incident as extremely painful.

The Prime Minister extended his heartfelt condolences to the families who have lost their loved ones and prayed for the earliest recovery of those who sustained injuries. Shri Modi further announced an ex-gratia of Rs. 2 lakh from the Prime Minister’s National Relief Fund (PMNRF) for the next of kin of each deceased, noting that Rs. 50,000 would be provided to those injured in the accident.

The Prime Minister wrote on X:

"The mishap in Katihar, Bihar, is extremely painful. Condolences to those who have lost their loved ones. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000."