ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರೊಂದಿಗೆ ಸಂವಾದ ನಡೆಸಿದರು.

 ಈ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಯವರು 2020ರ ಜನವರಿ 22ರಂದು ಪ್ರದಾನ ಮಾಡಿದ್ದರು. ಈ ಪ್ರಶಸ್ತಿ ಪುರಸ್ಕೃತರು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಲಿದ್ದಾರೆ.

ಈ 49 ಪ್ರಶಸ್ತಿ ಪುರಸ್ಕೃತರು ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಅರುಣಾಚಲ ಪ್ರದೇಶದ ತಲಾ ಒಬ್ಬರು ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಕಲೆ, ಸಂಸ್ಕೃತಿ, ನಾವಿನ್ಯ, ಪ್ರೌಢಿಮೆ, ಸಮಾಜ ಸೇವೆ, ಕ್ರೀಡೆ ಮತ್ತು ಶೌರ್ಯ ವಿಭಾಗದಲ್ಲಿ ಮಕ್ಕಳು ಪ್ರಶಸ್ತಿ ವಿಜೇತರಾಗಿದ್ದಾರೆ.

ಭಾರತ ಸರ್ಕಾರವು ಮಕ್ಕಳನ್ನು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾಲುದಾರರೆಂದು ಪರಿಗಣಿಸಿದೆ.

ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ವರ್ಷ ನಾವಿನ್ಯತೆ, ಪಾಂಡಿತ್ಯ, ಸಮಾಜ ಸೇವೆ, ಕಲೆ ಮತ್ತು ಸಂಸ್ಕೃತಿ, ಕ್ರೀಡೆ ಹಾಗೂ ಶೌರ್ಯ ವಿಭಾಗದಲ್ಲಿನ ಸಾಧನೆ ಗುರುತಿಸು ಪ್ರಶಸ್ತಿ ನೀಡುತ್ತಾ ಬಂದಿದೆ.