Let us view our diaspora not only in terms of 'Sankhya' but let us see it as 'Shakti' : PM Modi
Pravasi Bharatiya Kendra shows what it means to be Indian, the meaning of association with India: PM Modi
World's keenness to engage with India has risen. Our diaspora can play a vital role in furthering India's engagement with the world: PM
Indian community all over the world is a strength that can convert brain drain to brain gain: PM Modi
In the last two years, our Government has rescued people from conflict situations, not just Indians but also foreigners: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಪ್ರವಾಸಿ ಭಾರತೀಯ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಥ ಕಾರ್ಯಕ್ರಮದ ಆಯೋಜನೆಗೆ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮ ಜಯಂತಿಯ ಈ ದಿನ ಅತ್ಯಂತ ಸೂಕ್ತ ಎಂದು ಹೇಳಿದರು. ಮಹಾತ್ಮಾ ಗಾಂಧಿ ಅವರು ಭಾರತವನ್ನು ಬಿಟ್ಟು ಹೋಗಿದ್ದರು, ಆದರೆ, ದೇಶದ ಕರೆ ಅವರನ್ನು ಮತ್ತೆ ಮರಳಿ ಕರೆತಂತು ಎಂದರು.

ವಿದೇಶಗಳಲ್ಲಿರುವ ಭಾರತೀಯ ಸಮುದಾಯ ಕೇವಲ ತನ್ನ ಸಂಖ್ಯೆಯಿಂದ ಮಾತ್ರ ನೋಡಬಾರದು, ಬದಲಾಗಿ ಅದರ ಶಕ್ತಿಯಿಂದ ನೋಡಬೇಕು ಎಂದರು. ಹಲವು ವರುಷಗಳಿಂದ‘ಪ್ರತಿಭಾ ಪಲಾಯನ’ಎಂಬ ವಾಡಿಕೆ ಇದೆ. ಆದರೆ, ವಿದೇಶದಲ್ಲಿರುವ ಸಮುದಾಯದ ನಮ್ಮ ಶಕ್ತಿಯನ್ನು ನೋಡಿದರೆ ನಾವು ಇದನ್ನು‘ಪ್ರತಿಭಾ ಗಳಿಕೆ’(ಬ್ರೈನ್ ಗೈನ್) ಎಂದು ಪರಿವರ್ತಿಸಬಹುದು ಎಂದರು.

ಒಂದು ಕಾಲದಲ್ಲಿ ವಿಶ್ವ ಭಾರತದೊಂದಿಗೆ‘ಅಪರಿಚಿತ ಎಂಬ ಭೀತಿ’ಯಿಂದ ವ್ಯವಹರಿಸುತ್ತಿತ್ತು, ಇದು ದೊಡ್ಡ ಅಡ್ಡಿಯೂ ಆಗಿತ್ತು, ಇದರಿಂದ ಹೊರಬರಲು ಭಾರತೀಯ ಸಮುದಾಯ ನೆರವಾಯಿತು ಎಂದರು.

ಭಾರತೀಯ ಸಮುದಾಯದೊಂದಿಗೆ ನಂಟು ಹೊಂದುವ ಮಹತ್ವವನ್ನು ಪ್ರತಿಪಾದಿಸಿದ ಅವರು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರವಾಸಿ ಭಾರತೀಯ ದಿವಸ್ ಎಂಬ ಕಲ್ಪನೆಯನ್ನು ಹುಟ್ಟು ಹಾಕಿದರು, ಅದನ್ನು ನಂತರದ ಸರ್ಕಾರಗಳು ಮುಂದುವರಿಸಿಕೊಂಡು ಬಂದಿವೆ ಎಂದರು. 

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ ಅದರಲ್ಲೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಣನೀಯ ಮಾನವೀಯ ಕಾರ್ಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಸಂಘರ್ಷ ಮತ್ತು ಪ್ರಕೋಪದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನಷ್ಟೇ ಅಲ್ಲ, ಹಲವು ಇತರ ರಾಷ್ಟ್ರಗಳ ಪ್ರಜೆಗಳನ್ನೂ ರಕ್ಷಿಸಲಾಗಿದೆ ಎಂದರು.

ಭಾರತವು ಎಂದಿಗೂ ಅನ್ಯ ರಾಷ್ಟ್ರದ ಮೇಲೆ ದಾಳಿ ಮಾಡಿಲ್ಲ ಎಂದು ಪ್ರಧಾನಿ ತಿಳಿಸಿದರು. ಎರಡು ವಿಶ್ವ ಯುದ್ಧಗಳ ಸಂದರ್ಭದಲ್ಲಿ ಭಾರತೀಯ ಯೋಧರು ವಿದೇಶೀ ನೆಲವನ್ನು ರಕ್ಷಿಸಲು ಮಾಡಿದ ತ್ಯಾಗವನ್ನು ಅವರು ಸ್ಮರಿಸಿದರು ಮತ್ತು ವಿಶ್ವ ಈ ತ್ಯಾಗ ಬಲಿದಾನವನ್ನು ಗುರುತಿಸಬೇಕು ಎಂದರು.

ಈ ಸಂದರ್ಭದಲ್ಲಿ,“ಗಾಂಧಿ – ಒಬ್ಬ ಪ್ರವಾಸಿ’ಎಂಬ ವಸ್ತು ಪ್ರದರ್ಶನಕ್ಕೂ ಪ್ರಧಾನಿ ಭೇಟಿ ನೀಡಿದರು. ಮಧುಮೇಹದ ನಿಯಂತ್ರಣಕ್ಕೆ ಯೋಗ ಶಿಷ್ಟಾಚಾರ (Yoga Protocol for Diabetes control) ಎಂಬ ಕೈಪಿಡಿಯನ್ನೂ ಅವರು ಬಿಡುಗಡೆ ಮಾಡಿದರು ಮತ್ತು‘ಭಾರತ ಅರಿಯಿರಿ’ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನೂ ವಿತರಿಸಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PMAY-U Nears 1.25 Crore Homes: Top 10 States With The Highest PMAY-U Completion Rates

Media Coverage

PMAY-U Nears 1.25 Crore Homes: Top 10 States With The Highest PMAY-U Completion Rates
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam emphasising that collective enthusiasm and actions prosper the nation
June 24, 2026

The Prime Minister, Shri Narendra Modi, shared a Sanskrit Subhashitam emphasising that the prosperity of the nation remains steadfast through collective dedication and endeavor. It is this very spirit that infuses society with new energy and paves the way to fulfill the resolutions of development.

The Prime Minister shared a Sanskrit Subhashitam-

"यत्रोत्साहसमारम्भो यत्रालस्यविहीनता।

नयविक्रमसंयोगस्तत्र श्रीरचला ध्रुवम्॥"

The Prime Minister posted on X:

"सामूहिक समर्पण और पुरुषार्थ से राष्ट्र की समृद्धि अक्षुण्ण रहती है। यही भावना समाज को नई ऊर्जा देती है और विकास के संकल्पों को सिद्धि तक पहुंचाने का मार्ग प्रशस्त करती है।

यत्रोत्साहसमारम्भो यत्रालस्यविहीनता।

नयविक्रमसंयोगस्तत्र श्रीरचला ध्रुवम्॥"