ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನೀತಿ ಆಯೋಗದ ಪುನರ್ ರಚನೆಗೆ ಶುಭ ಹಾರೈಸಿದ್ದಾರೆ. ನೀತಿ ಆಯೋಗವು ಭಾರತದ ನೀತಿ ನಿರೂಪಣೆಯ ವಾಸ್ತುಶಿಲ್ಪದಲ್ಲಿ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಪ್ರಮುಖ ಸುಧಾರಣೆಗಳಿಗೆ ಚಾಲನೆ ನೀಡಿದೆ ಮತ್ತು ನಾಗರಿಕರಿಗೆ 'ಸುಗಮ ಜೀವನ'ವನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು. ಈ ಸಂಸ್ಥೆಯು ನಾವೀನ್ಯತೆ ಮತ್ತು ಕ್ಷೇತ್ರಗಳಾದ್ಯಂತ ದೀರ್ಘಕಾಲೀನ ಕಾರ್ಯತಂತ್ರದ ಚಿಂತನೆಗೆ ಕ್ರಿಯಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
ನೀತಿ ಆಯೋಗದ ಪುನರ್ ರಚನೆಯ ಕುರಿತಂತೆ, ಉಪಾಧ್ಯಕ್ಷರಾಗಿ ನೇಮಕಗೊಂಡ ಶ್ರೀ ಅಶೋಕ್ ಕುಮಾರ್ ಲಹಿರಿ ಅವರಿಗೆ ಪ್ರಧಾನಮಂತ್ರಿ ಅವರು ಶುಭ ಕೋರಿದರು. ಪೂರ್ಣಾವಧಿಯ ಸದಸ್ಯರಾಗಿ ನೇಮಕಗೊಂಡ ಶ್ರೀ ರಾಜೀವ್ ಗೌಬಾ ಜಿ, ಪ್ರೊ. ಕೆ.ವಿ. ರಾಜು ಜಿ, ಪ್ರೊ. ಗೋಬರ್ಧನ್ ದಾಸ್ ಜಿ, ಪ್ರೊ. ಅಭಯ್ ಕರಂಡಿಕರ್ ಜಿ ಮತ್ತು ಡಾ. ಎಂ. ಶ್ರೀನಿವಾಸ್ ಅವರಿಗೆ ತಮ್ಮ ಅಭಿನಂದನೆಗಳನ್ನು ತಿಳಿಸಿದರು.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ:
"ನೀತಿ ಆಯೋಗವು ಭಾರತದ ನೀತಿ ನಿರೂಪಣೆಯ ವಾಸ್ತುಶಿಲ್ಪದಲ್ಲಿ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ, ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ, ಸುಧಾರಣೆಗಳನ್ನು ಹೆಚ್ಚಿಸುತ್ತಿದೆ ಮತ್ತು 'ಸುಗಮ ಜೀವನ'ವನ್ನು ಹೆಚ್ಚಿಸುತ್ತಿದೆ. ಇದು ಕ್ಷೇತ್ರಗಳಾದ್ಯಂತ ನಾವೀನ್ಯತೆ ಮತ್ತು ದೀರ್ಘಕಾಲೀನ ಕಾರ್ಯತಂತ್ರದ ಚಿಂತನೆಗೆ ಕ್ರಿಯಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ನೀತಿ ಆಯೋಗವನ್ನು ಪುನಾರಚಿಸಿದೆ. ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಲಹಿರಿ ಅವರಿಗೆ ನನ್ನ ಶುಭಾಶಯಗಳು. ಶ್ರೀ ರಾಜೀವ್ ಗೌಬಾ ಜಿ, ಪ್ರೊ. ಕೆ.ವಿ. ರಾಜು ಜಿ, ಪ್ರೊ. ಗೋಬರ್ಧನ್ ದಾಸ್ ಜಿ, ಪ್ರೊ. ಅಭಯ್ ಕರಂದೀಕರ್ ಜಿ ಮತ್ತು ಡಾ. ಎಂ. ಶ್ರೀನಿವಾಸ್ ಜಿ ನೀತಿ ಆಯೋಗದ ಪೂರ್ಣ ಸಮಯದ ಸದಸ್ಯರಾಗಿದ್ದಕ್ಕಾಗಿ ನನ್ನ ಶುಭಾಶಯಗಳು.
ಅವರೆಲ್ಲರಿಗೂ ಫಲಪ್ರದ ಮತ್ತು ಪ್ರಭಾವಶಾಲಿ ಅಧಿಕಾರಾವಧಿ ಸಿಗಲಿ ಎಂದು ಹಾರೈಸುತ್ತೇನೆ."
@NITIAayog
NITI Aayog has emerged as a vital pillar in India’s policy-making architecture, fostering cooperative federalism, furthering reforms and boosting ‘Ease of Living.’ It serves as a dynamic platform for innovation and long-term strategic thinking across sectors.
— Narendra Modi (@narendramodi) April 25, 2026
The Government has…


