ರಾಜಸ್ಥಾನದಲ್ಲಿ 17,000 ಕೋಟಿ ರೂ.ಗಳ ಬಹುವಿಧದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.
ರಾಜಸ್ಥಾನದಲ್ಲಿ ರೂ.5000 ಕೋಟಿ ಗಿಂತ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು
ಸುಮಾರು ರೂ.2300 ಕೋಟಿ ಮೌಲ್ಯದ ಎಂಟು ಪ್ರಮುಖ ರೈಲ್ವೇ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು
ಖಾತೀಪುರ ರೈಲು ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಸುಮಾರು ರೂ.5300 ಕೋಟಿ ಮೌಲ್ಯದ ರಾಷ್ಟ್ರದ ಪ್ರಮುಖ ಸೌರ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು
ರೂ.2100 ಕೋಟಿಗೂ ಹೆಚ್ಚು ಮೌಲ್ಯದ ರಾಷ್ಟ್ರ ವಿದ್ಯುತ್ ಪ್ರಸರಣ ವಲಯದ ಯೋಜನೆಗಳನ್ನು ಸಮರ್ಪಿಸಿದರು
ಜಲ ಜೀವನ್ ಮಿಷನ್ ಅಡಿಯಲ್ಲಿ ಯೋಜನೆಗಳು ಸೇರಿದಂತೆ ಸುಮಾರು ರೂಪಾಯಿ2400 ಕೋಟಿ ಗಳ ಬಹುವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು
ಜೋಧ್ ಪುರದಲ್ಲಿರುವ ಇಂಡಿಯನ್ ಆಯಿಲ್ ನ ಎಲ್.ಪಿ.ಜಿ. ಬಾಟ್ಲಿಂಗ್ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
"ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ವಿಕಸಿತ ರಾಜಸ್ಥಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ"
"ಹಿಂದಿನ ಹತಾಶೆಯನ್ನು ಬಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆಯಲು ಭಾರತಕ್ಕೆ ಅವಕಾಶವಿದೆ"
“ನಾನು ವಿಕಸಿತ ಭಾರತ ಕುರಿತು ಮಾತನಾಡುವಾಗ, ಇದು ಕೇವಲ ಒಂದು ಪದ ಅಥವಾ ಭಾವನೆಯಲ್ಲ, ಇದು ಪ್ರತಿ ಕುಟುಂಬದ ಜೀವನವನ್ನು ಸಮೃದ್ಧಗೊಳಿಸುವ ಅಭಿಯಾನವಾಗಿದೆ. ವಿಕಸಿತ ಭಾರತ ಎಂಬುದು ಬಡತನವನ್ನು ತೊಡೆದುಹಾಕಲು, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸುವ ಅಭಿಯಾನವಾಗಿದೆ.
"ಇಂದು ಭಾರತವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ವಿಷಯದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ"
"ಯುವಕರು, ಮಹಿಳೆಯರು, ರೈತರು ಮತ್ತು ಬಡವರು ಎಂಬವರು ನಮಗೆ 4 ದೊಡ್ಡ ಜಾತಿಗಳಾಗಿದ್ದಾರೆ, ಮತ್ತು ಈ ವರ್ಗಗಳ ಸಬಲೀಕರಣಕ್ಕಾಗಿ ಮೋದಿ ಅವರು ನೀಡಿದ ಭರವಸೆಗಳನ್ನು ಡಬಲ್ ಇಂಜಿನ್ ಸರ್ಕಾರವು ಪೂರೈಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ"
"ಇಂದಿನ ಮೊದಲ ಬಾರಿಯ ಮತದಾರರು ವಿಕಸಿತ ಭಾರತ ದೃಷ್ಟಿಕೋನ ಹೊಂದಿದ್ದಾರೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಮಾವೇಶ ಮೂಲಕ ‘ವಿಕಸಿತ ಭಾರತ ವಿಕಸಿತ ರಾಜಸ್ಥಾನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು 17,000 ಕೋಟಿ ರೂ.ಗಳ ಬಹುವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು. ಯೋಜನೆಗಳು ರಸ್ತೆಗಳು, ರೈಲ್ವೇಗಳು, ಸೌರಶಕ್ತಿ, ವಿದ್ಯುತ್ ಪ್ರಸರಣ, ಕುಡಿಯುವ ನೀರು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳನ್ನು ಪೂರೈಸುತ್ತವೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ‘ವಿಕಸಿತ ಭಾರತ ವಿಕಸಿತ ರಾಜಸ್ಥಾನ’ ಕಾರ್ಯಕ್ರಮದೊಂದಿಗೆ ರಾಜಸ್ಥಾನದ ಎಲ್ಲಾ ಕ್ಷೇತ್ರಗಳ ಲಕ್ಷಾಂತರ ಜನರ ಜೊತೆಗೆ ನೇರ ಸಂಪರ್ಕ ಸಾಧ್ಯವಾಯಿತು.  ಅಪಾರ ಪ್ರಮಾಣದ ಉಪಸ್ಥಿತಿಗಾಗಿ ಅವರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಎಲ್ಲಾ ಫಲಾನುಭವಿಗಳನ್ನು ಒಂದೇ ಸೂರಿನಡಿ ಸೇರಿಸಲು ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿದ್ದಕ್ಕಾಗಿ ರಾಜಸ್ಥಾನದ ಮುಖ್ಯಮಂತ್ರಿಯನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ರಾಜಸ್ಥಾನದ ಜನರ ಗುಣಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೆಲವು ದಿನಗಳ ಹಿಂದೆ ರಾಜಸ್ಥಾನದಲ್ಲಿ ಫ್ರೆಂಚ್ ಅಧ್ಯಕ್ಷ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಸ್ವಾಗತವನ್ನು ನೆನಪಿಸಿಕೊಂಡರು. ಅದರ ಪ್ರತಿಧ್ವನಿ, ಇಂದು ಭಾರತದಾದ್ಯಂತ ಮಾತ್ರವಲ್ಲದೆ ಫ್ರಾನ್ಸ್ ನಲ್ಲೂ ಕೇಳಿಬರುತ್ತಿವೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿದಾಗ ಜನರು ನೀಡಿದ ಆಶೀರ್ವಾದವನ್ನು ನೆನಪಿಸಿಕೊಂಡರು ಮತ್ತು ಡಬಲ್ ಎಂಜಿನ್ ಸರ್ಕಾರ ರಚನೆಗೆ ಕಾರಣವಾಗುವ ‘ಮೋದಿ ಕಿ ಗ್ಯಾರಂಟಿ’ ಮೇಲಿನ ನಂಬಿಕೆಯನ್ನು ಪುನರುಚ್ಚರಿಸಿದರು. ರಸ್ತೆಗಳು, ರೈಲ್ವೆ, ಸೌರಶಕ್ತಿ, ವಿದ್ಯುತ್ ಪ್ರಸರಣ, ಕುಡಿಯುವ ನೀರು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳಲ್ಲಿ ಇಂದಿನ 17,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗಾಗಿ ರಾಜಸ್ಥಾನದ ಜನರನ್ನು ಅವರು ಅಭಿನಂದಿಸಿದರು ಮತ್ತು ಇದು ರಾಜ್ಯದಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. 

 

ಕೆಂಪು ಕೋಟೆಯ ಆವರಣದಿಂದ ತಮ್ಮ ಕರೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಪ್ರಸ್ತುತ ಸಮಯವನ್ನು ಸುವರ್ಣ ಅವಧಿ ಎಂದು ಬಣ್ಣಿಸಿದರು ಮತ್ತು ಹಿಂದಿನ ಹತಾಶೆಯನ್ನು ಬಿಟ್ಟು ಭಾರತವು ಸಂಪೂರ್ಣ ಆತ್ಮವಿಶ್ವಾಸದಿಂದ ಮುನ್ನಡೆಯಬಹುದು ಎಂದು ಹೇಳಿದರು. 2014 ರ ಮೊದಲು ದಶಕಗಳ ಕಾಲ ಹಗರಣಗಳು, ಅಭದ್ರತೆ ಮತ್ತು ಭಯೋತ್ಪಾದನೆ…, ಇಂತಹ ಮಾತಿಗೆ ವಿರುದ್ಧವಾಗಿ, ಈಗ ನಾವು ವಿಕಸಿತ ಭಾರತ ಮತ್ತು ವಿಕಸಿತ ರಾಜಸ್ಥಾನದ ಗುರಿಯ ಮೇಲೆ ಕೇಂದ್ರೀಕರಿಸಿದ್ದೇವೆ. "ಇಂದು ನಾವು ದೊಡ್ಡ ಸಂಕಲ್ಪಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ದೊಡ್ಡ ಕನಸುಗಳನ್ನು ಕಾಣುತ್ತಿದ್ದೇವೆ ಮತ್ತು ಅವುಗಳನ್ನು ಸಾಧಿಸಲು ನಾವು ನಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದೇವೆ" ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು  ಹೇಳಿದರು. "ನಾನು ವಿಕಸಿತ ಭಾರತ ಬಗ್ಗೆ ಮಾತನಾಡುವಾಗ, ಇದು ಕೇವಲ ಒಂದು ಪದ ಅಥವಾ ಭಾವನೆಯಲ್ಲ, ಆದರೆ ಇದು ಪ್ರತಿ ಕುಟುಂಬದ ಜೀವನವನ್ನು ಸಮೃದ್ಧಗೊಳಿಸುವ ಅಭಿಯಾನವಾಗಿದೆ" ಎಂದು ಅವರು ಹೇಳಿದರು. ವಿಕಸಿತ ಭಾರತ ಎಂಬುದು ಬಡತನವನ್ನು ತೊಡೆದುಹಾಕಲು, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸುವ ಅಭಿಯಾನವಾಗಿದೆ ಎಂದು ಅವರು ಹೇಳಿದರು. ತಮ್ಮ ವಿದೇಶಿ ಭೇಟಿಯಲ್ಲಿ ಜಾಗತಿಕ ನಾಯಕರೊಂದಿಗಿನ ಅವರ ಸಂವಾದವನ್ನು ಸವಿವರವಾಗಿ ಚಿತ್ರಿಸಿದ ಪ್ರಧಾನಮಂತ್ರಿ ಶ್ರೀ ಮೋದಿ ಅವರು, “ಭಾರತವು  ಇಂದು ದೊಡ್ಡ ಕನಸುಗಳನ್ನು ಕಾಣುತ್ತಿದೆ ಮತ್ತು ಆ ಕನಸುಗಳನ್ನು ಸಾಧಿಸಬಹುದು ಎಂದು ವಿಶ್ವ ನಾಯಕರು ಒಪ್ಪಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.

"ವಿಕಸಿತ ಭಾರತ ಅಭಿವೃದ್ಧಿಗೆ ವಿಕಸಿತ ರಾಜಸ್ಥಾನದ ಅಭಿವೃದ್ಧಿಯು ಅತ್ಯಗತ್ಯವಾಗಿದೆ" ಎಂದು ಹೇಳುತ್ತಾ, ರೈಲು, ರಸ್ತೆ, ವಿದ್ಯುತ್ ಮತ್ತು ನೀರಿನ ಅಗತ್ಯ ಕ್ಷೇತ್ರಗಳ ವೇಗದ ಅಭಿವೃದ್ಧಿಯ ಅಗತ್ಯವನ್ನು ವಿವರಿಸಿದರು. “ಇಂತಹ ಕ್ಷೇತ್ರಗಳ ಅಭಿವೃದ್ಧಿಯಿಂದ ರೈತರಿಗೆ, ಪಶುಪಾಲಕರಿಗೆ, ಕೈಗಾರಿಕೆಗಳಿಗೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಮತ್ತು ರಾಜ್ಯಕ್ಕೆ ಹೊಸ ಹೂಡಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ತರುತ್ತದೆ. ಈ ವರ್ಷದ ಕೇಂದ್ರ ಬಜೆಟ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ದಾಖಲೆಯ 11 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ಇದು ಹಿಂದಿನ ಯಾವುದೇ ಸರ್ಕಾರಕ್ಕಿಂತ 6 ಪಟ್ಟು ಹೆಚ್ಚಾಗಿದೆ. ಈ ಬಜೆಟ್ ವೆಚ್ಚವು ಸಿಮೆಂಟ್, ಕಲ್ಲುಗಳು ಮತ್ತು ಸೆರಾಮಿಕ್ಸ್ ಉದ್ಯಮಗಳಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹೇಳಿದರು.

ಗ್ರಾಮೀಣ ರಸ್ತೆಗಳಲ್ಲಿ ಅಭೂತಪೂರ್ವ ಹೂಡಿಕೆಯನ್ನು ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು, ಹಾಗೂ “ಕಳೆದ 10 ವರ್ಷಗಳಲ್ಲಿ ರಾಜಸ್ಥಾನದಲ್ಲಿ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳು ಆಗುತ್ತಿದ್ದು, ಇಂದು ರಾಜಸ್ಥಾನವು ಗುಜರಾತ್ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳೊಂದಿಗೆ ಜೊತೆಗೆ ಪಂಜಾಬ್ ಗೆ ಕೂಡಾ ವಿಶಾಲವಾದ ಹೆದ್ದಾರಿಗಳ ಮೂಲಕ ಸಂಪರ್ಕ ಸಾಧಿಸುತ್ತಿದೆ. ಇಂದಿನ ಯೋಜನೆಗಳು ಕೋಟಾ, ಉದಯಪುರ, ಟೋಂಕ್, ಸವಾಯಿ ಮಾಧೋಪುರ್, ಬೂಂದಿ, ಅಜ್ಮೀರ್, ಭಿಲ್ವಾರಾ ಮತ್ತು ಚಿತ್ತೋರ್ಗಢದಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ. ಈ ರಸ್ತೆಗಳು ದೆಹಲಿ, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರಗಳೊಂದಿಗೆ ಉತ್ತಮ ಸಂಪರ್ಕವನ್ನು ಖಚಿತಪಡಿಸುತ್ತದೆ” ಎಂದು  ಹೇಳಿದರು.

ಇಂದಿನ ಕಾರ್ಯಕ್ರಮದ ಭಾಗವಾಗಿದ್ದ ರೈಲ್ವೇಯ ವಿದ್ಯುದೀಕರಣ, ನವೀಕರಣ ಮತ್ತು ದುರಸ್ತಿ ಕಾರ್ಯಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ಬಂಡಿಕುಯಿ-ಆಗ್ರಾ ಫೋರ್ಟ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವುದರಿಂದ ಮೆಹಂದಿಪುರ ಬಾಲಾಜಿ ಮತ್ತು ಆಗ್ರಾಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ. ಅಂತೆಯೇ, ಖತಿಪುರ (ಜೈಪುರ) ನಿಲ್ದಾಣವು ಹೆಚ್ಚಿನ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುತ್ತದೆ” ಎಂದು ಅವರು ಹೇಳಿದರು.

ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಆದಾಯವನ್ನು ಸೃಷ್ಟಿಸುವ ಜೊತೆಗೆ ನಾಗರಿಕರು ತಮ್ಮ ಸ್ವಂತ ಮನೆಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುವ ಸರ್ಕಾರದ ಪ್ರಯತ್ನ - ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಅಥವಾ ಉಚಿತ ವಿದ್ಯುತ್ ಯೋಜನೆಯ ಪ್ರಾರಂಭವನ್ನು ಶ್ರೀ ಮೋದಿ ಅವರು ಎತ್ತಿ ತೋರಿಸಿದರು.  “ಇದರಲ್ಲಿ ಸರ್ಕಾರವು 300 ಯೂನಿಟ್ ಉಚಿತ ವಿದ್ಯುತ್ ವ್ಯವಸ್ಥೆ ಮಾಡುತ್ತದೆ. ಕೇಂದ್ರ ಸರ್ಕಾರವು 1 ಕೋಟಿ ಕುಟುಂಬಗಳಿಗೆ ಟೆರೇಸ್ನಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲಿದೆ. ಈ ಯೋಜನೆಯಲ್ಲಿ ಯೋಜನೆಯ ಒಟ್ಟು ವೆಚ್ಚ ಸುಮಾರು ರೂ. 75,000 ಕೋಟಿಯಾಗಲಿದೆ, ಹಾಗೂ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗದ ಸಮಾಜಕ್ಕೆ ಇದರಿಂದ ಹೆಚ್ಚಿನ ಲಾಭವಾಗಲಿದೆ. ಬ್ಯಾಂಕ್ಗಳು ಸುಲಭವಾಗಿ ಸಾಲ ವಿತರಣೆಗೆ ಅನುಕೂಲ ಮಾಡಿಕೊಡುತ್ತವೆ” ಎಂದು ಹೇಳಿದರು. "ರಾಜಸ್ಥಾನದಲ್ಲಿ, ಸರ್ಕಾರವು 5 ಲಕ್ಷ ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಯೋಜಿಸಿದೆ" ಎಂದು ಶ್ರೀ ಮೋದಿ ಅವರು ಬಡ ಮತ್ತು ಮಧ್ಯಮ ವರ್ಗದವರ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದರು.

ಯುವಕರು, ಮಹಿಳೆಯರು, ಕಿಸಾನ್ ಮತ್ತು ಬಡವರ – ಎಂಬ ನಾಲ್ಕು ವಿಭಾಗಗಳ ಅಭಿವೃದ್ಧಿಗೆ ಒತ್ತು ನೀಡುವುದನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. "ಇವು ನಮಗೆ 4 ದೊಡ್ಡ ಜಾತಿಗಳಾಗಿವೆ ಮತ್ತು ಈ ವರ್ಗಗಳ ಸಬಲೀಕರಣಕ್ಕಾಗಿ ಮೋದಿ ಅವರು ನೀಡಿದ ಭರವಸೆಗಳನ್ನು ಡಬಲ್ ಇಂಜಿನ್ ಸರ್ಕಾರವು ಪೂರೈಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ" ಎಂದು ಅವರು ಹೇಳಿದರು. ಹೊಸ ರಾಜಸ್ಥಾನ ಸರ್ಕಾರದ ಮೊದಲ ಬಜೆಟ್ನಲ್ಲಿ ಪ್ರಸ್ತಾಪಿಸಲಾದ 70 ಸಾವಿರ ಉದ್ಯೋಗಗಳನ್ನು ಅವರು ಪ್ರಶಂಸಿಸಿದರು. ಕಾಗದ ಸೋರಿಕೆ ಘಟನೆಗಳಿಗಾಗಿ ಎಸ್ಐಟಿ ರಚನೆ ಮಾಡಿದ್ದಕ್ಕಾಗಿ ಅವರು ಹೊಸ ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು. ಕಾಗದ ಸೋರಿಕೆ ವಿರುದ್ಧ ಕಟ್ಟುನಿಟ್ಟಾದ ಹೊಸ ಕೇಂದ್ರ ಕಾನೂನು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಮಾಹಿತಿ ನೀಡಿದರು, 

ಬಡ ಕುಟುಂಬಗಳಿಗೆ 450 ರೂಗಳಲ್ಲಿ ಗ್ಯಾಸ್ ಸಿಲಿಂಡರ್ಗಳನ್ನು ಒದಗಿಸುವ ರಾಜ್ಯ ಸರ್ಕಾರದ ಭರವಸೆ ಕುರಿತಾಗಿ, ಇದು ರಾಜಸ್ಥಾನದ ಲಕ್ಷಾಂತರ ಮಹಿಳೆಯರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಹೇಳಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಜಲ ಜೀವನ್ ಮಿಷನ್ ನಲ್ಲಿನ ಹಗರಣಗಳನ್ನು ಎತ್ತಿ ತೋರಿಸಿದ ಶ್ರೀ ಮೋದಿ ಅವರು, ಈಗ ಕೆಲಸವು ತ್ವರಿತ ಗತಿಯಲ್ಲಿ ಸಾಗಿದೆ ಎಂದು ಹೇಳಿದರು. ರಾಜಸ್ಥಾನದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಪ್ರಸ್ತುತ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು 2,000 ರೂಪಾಯಿ ಹೆಚ್ಚಿಸಿ, ರೂ 8000 ಮೊತ್ತಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. “ನಾವು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಭರವಸೆಗಳನ್ನು ಒಂದೊಂದಾಗಿ ಈಡೇರಿಸುತ್ತಿದ್ದೇವೆ. ನಮ್ಮ ಖಾತರಿಗಳ ಬಗ್ಗೆ ನಾವು ಗಂಭೀರವಾಗಿರುತ್ತೇವೆ. ಅದಕ್ಕಾಗಿಯೇ ಜನರು ಹೇಳುತ್ತಾರೆ - ಮೋದಿಯವರ ಗ್ಯಾರಂಟಿ ಎಂದರೆ ಈಡೇರಿಸುವ ಭರವಸೆ” ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು.

 

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿ, “ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಹಕ್ಕುಗಳನ್ನು ತ್ವರಿತವಾಗಿ ಪಡೆಯುತ್ತಾರೆ ಮತ್ತು ಯಾರೂ ವಂಚಿತರಾಗದಂತೆ ನೋಡಿಕೊಳ್ಳುವುದು ಮೋದಿಯವರ ಪ್ರಯತ್ನವಾಗಿದೆ” ಎಂದು ಹೇಳಿದರು. ಸುಮಾರು 3 ಕೋಟಿ ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದ್ದು, 1 ಕೋಟಿ ಹೊಸ ಆಯುಷ್ಮಾನ್ ಕಾರ್ಡ್ಗಳನ್ನು ಮಾಡಲಾಗಿದೆ, 15 ಲಕ್ಷ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ಗೆ ನೋಂದಾಯಿಸಿದ್ದಾರೆ, ಸುಮಾರು 6.5 ಲಕ್ಷ ರೈತರು ಅರ್ಜಿ ಸಲ್ಲಿಸಿದ್ದಾರೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ. - ಇದರಲ್ಲಿ ರಾಜಸ್ಥಾನದ ಕೋಟ್ಯಂತರ ನಾಗರಿಕರ ಭಾಗವಹಿಸುವಿಕೆ ಇದೆ ಎಂದು ಹೇಳಿದರು. ಪ್ರಧಾನಮಂತ್ರಿ ಉಜ್ವಲ ಅನಿಲ ಸಂಪರ್ಕಕ್ಕಾಗಿ ಸುಮಾರು 8 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ, ಈ ಅವಧಿಯಲ್ಲಿ ಈಗಾಗಲೇ 2.25 ಲಕ್ಷ ಸಂಪರ್ಕಗಳನ್ನು ನೀಡಲಾಗಿದೆ. ರಾಜಸ್ಥಾನದ 16 ಲಕ್ಷ ಜನರು ತಲಾ 2 ಲಕ್ಷ ರೂಪಾಯಿಗಳ ವಿಮಾ ಯೋಜನೆಗೆ ಸೇರಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಹತಾಶೆಯ ವಾತಾವರಣವನ್ನು ಉತ್ತೇಜಿಸುವ ಮತ್ತು ದೇಶದ ಯಶಸ್ಸನ್ನು ಆಚರಿಸುವುದನ್ನು ತಡೆಯುವ ಶಕ್ತಿಗಳ ಕಡೆಗೆ ಪ್ರಧಾನಮಂತ್ರಿಯವರು  ಗಮನ ಸೆಳೆದರು. ವಂಶ ರಾಜಕಾರಣದ ವಿರುದ್ಧವೂ ಎಚ್ಚರಿಕೆ ನೀಡಿದರು. ಇಂತಹ ರಾಜಕೀಯ ಯುವಕರಿಗೆ ಎಂದಿಗೂ ಸ್ಫೂರ್ತಿ ನೀಡುವುದಿಲ್ಲ ಎಂದು ಹೇಳಿದರು. ಮೊದಲ ಬಾರಿಗೆ ಮತದಾರರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅಂತಹ ಯುವಕರು “ವಿಕಸಿತ ಭಾರತದ ದೃಷ್ಟಿಕೋನದೊಂದಿಗೆ ನಿಂತಿದ್ದಾರೆ, ಹಾಗೂ ವಿಕಸಿತ ರಾಜಸ್ಥಾನ ಮತ್ತು ವಿಕಸಿತ ಭಾರತದ ದೃಷ್ಟಿಕೋನ ಅಂತಹ ಮೊದಲ ಬಾರಿಗೆ ಮತದಾರರಲ್ಲಿ ತುಂಬಿದೆ. ” ಎಂದು ಹೇಳಿದರು.

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ರಾಜಸ್ಥಾನ ಸರ್ಕಾರದ ಇತರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳು ಸಮಾರಂಭದಲ್ಲಿ ಈ ಸಂದರ್ಭದಲ್ಲಿ ಪಾಲ್ಗೊಂಡರು.


ಹಿನ್ನೆಲೆ

ರಾಜಸ್ಥಾನದಲ್ಲಿ ರೂ.5000 ಕೋಟಿ ಗೂ ಅಧಿಕ ಮೊತ್ತದ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು 8-ಲೇನ್ ದೆಹಲಿ - ಮುಂಬೈ ಗ್ರೀನ್ ಫೀಲ್ಡ್ ಅಲೈನ್ಮೆಂಟ್ (ಎನ್ಇ-4) ನ ಮೂರು ಪ್ಯಾಕೇಜ್ಗಳನ್ನು - ಬಾನ್ಲಿ-ಜಲೈ ರಸ್ತೆಯಿಂದ ಮುಯಿ ಗ್ರಾಮಕ್ಕೆ; ಹರ್ದೆಯೋಗಂಜ್ ಗ್ರಾಮದಿಂದ ಮೆಜ್ ನದಿಯ ಭಾಗ; ಮತ್ತು ತಕ್ಲಿಯಿಂದ ರಾಜಸ್ಥಾನ/ಎಂಪಿ ಬಾರ್ಡರ್ವರೆಗಿನ ವಿಭಾಗ ಹೀಗೆ ಮೂರು ದಾರಿಗಳನ್ನು ಉದ್ಘಾಟಿಸಿದರು. ಈ ವಿಭಾಗಗಳು ಹಾದು ಹೋಗುವ ಪ್ರದೇಶದಲ್ಲಿ ವೇಗದ ಮತ್ತು ಸುಧಾರಿತ ಸಂಪರ್ಕವನ್ನು ಒದಗಿಸುತ್ತವೆ. ಈ ವಿಭಾಗಗಳು ವನ್ಯಜೀವಿಗಳ ಅಡೆತಡೆಯಿಲ್ಲದ ಚಲನೆಗೆ ಅನುಕೂಲವಾಗುವಂತೆ ಮರೆಮಾಚುವಿಕೆಯೊಂದಿಗೆ ಅನಿಮಲ್ ಅಂಡರ್ಪಾಸ್ ಮತ್ತು ಅನಿಮಲ್ ಓವರ್ಪಾಸ್ನೊಂದಿಗೆ ಸುಸಜ್ಜಿತವಾಗಿವೆ. ಇದಲ್ಲದೆ, ವನ್ಯಜೀವಿಗಳ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಶಬ್ದ ತಡೆಗಳನ್ನು ಸಹ ಒದಗಿಸಲಾಗಿದೆ. ಪ್ರಧಾನಮಂತ್ರಿಯವರು 6-ಲೇನ್ ಗ್ರೀನ್‌ಫೀಲ್ಡ್ ಉದಯಪುರ ಬೈಪಾಸ್ ಅನ್ನು ರಾ.ಹೆ.-48 ರ ಚಿತ್ತೋರ್ಗಢ-ಉದೈಪುರ ಹೆದ್ದಾರಿ ವಿಭಾಗವನ್ನು ದೇಬರಿಯಲ್ಲಿ ಮತ್ತು ರಾ.ಹೆ.-48 ರ ಉದಯಪುರ-ಶಾಮಲಾಜಿ ವಿಭಾಗವನ್ನು ಕಾಯಾ ಗ್ರಾಮದಲ್ಲಿ ಉದ್ಘಾಟಿಸಿದರು. ಈ ಬೈಪಾಸ್ ಉದಯಪುರ ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾಜಸ್ಥಾನದ ಜುಂಜುನು, ಅಬು ರೋಡ್ ಮತ್ತು ಟೋಂಕ್ ಜಿಲ್ಲೆಗಳಲ್ಲಿ ರಸ್ತೆ ಮೂಲಸೌಕರ್ಯವನ್ನು ಸುಧಾರಿಸುವ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿಯವರು  ಉದ್ಘಾಟಿಸಿದರು.

ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ, ಪ್ರಧಾನಮಂತ್ರಿಯವರು ರೈಲು ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಸುಮಾರು 2300 ಕೋಟಿ ರೂಪಾಯಿ ಮೌಲ್ಯದ ರಾಜಸ್ಥಾನದ ಎಂಟು ಪ್ರಮುಖ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿರುವ ರೈಲು ಯೋಜನೆಗಳು ಜೋಧ್‌ಪುರ-ರಾಯ್ ಕಾ ಬಾಗ್-ಮೆರ್ಟಾ ರಸ್ತೆ-ಬಿಕಾನೇರ್ ವಿಭಾಗ (277 ಕಿಮೀ) ಸೇರಿದಂತೆ ರೈಲು ಮಾರ್ಗಗಳ ವಿದ್ಯುದ್ದೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಒಳಗೊಂಡಿವೆ; ಜೋಧಪುರ-ಫಲೋಡಿ ವಿಭಾಗ (136 ಕಿಮೀ); ಮತ್ತು ಬಿಕಾನೇರ್-ರತಂಗಢ-ಸದುಲ್ಪುರ್-ರೇವಾರಿ ವಿಭಾಗ (375 ಕಿಮೀ). ಪ್ರಧಾನಮಂತ್ರಿಯವರು ‘ಖಾತಿಪುರ ರೈಲು ನಿಲ್ದಾಣ’ವನ್ನೂ ರಾಷ್ಟ್ರಕ್ಕೆ ಸಮರ್ಪಿಸಿದರು. ರೈಲ್ವೇ ನಿಲ್ದಾಣವನ್ನು ಜೈಪುರದ ಉಪಗ್ರಹ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ರೈಲುಗಳು ಪ್ರಾರಂಭವಾಗುವ ಮತ್ತು ಕೊನೆಗೊಳ್ಳುವ 'ಟರ್ಮಿನಲ್ ಸೌಲಭ್ಯ'ವನ್ನು ಹೊಂದಿದೆ. ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡುತ್ತಿರುವ ರೈಲು ಯೋಜನೆಗಳಲ್ಲಿ ಭಗತ್ ಕಿ ಕೋಠಿಯಲ್ಲಿ (ಜೋಧ್‌ಪುರ) ವಂದೇ ಭಾರತ ಸ್ಲೀಪರ್ ರೈಲುಗಳ ನಿರ್ವಹಣಾ ಸೌಲಭ್ಯ; ಖತಿಪುರದಲ್ಲಿ (ಜೈಪುರ) ವಂದೇ ಭಾರತ, ಎಲ್.ಎಚ್.ಬಿ. ಇತ್ಯಾದಿ ಎಲ್ಲಾ ರೀತಿಯ ರೇಕ್ಗಳ ನಿರ್ವಹಣೆ; ಹನುಮಾನ್ ಗಢದಲ್ಲಿ ರೈಲುಗಳ ನಿರ್ವಹಣೆಗಾಗಿ ಕೋಚ್ ಕೇರ್ ಕಾಂಪ್ಲೆಕ್ಸ್ ನಿರ್ಮಾಣ; ಮತ್ತು ಬಾಂಡಿಕುಯಿಯಿಂದ ಆಗ್ರಾ ಫೋರ್ಟ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವುದು, ಇತ್ಯಾದಿ ಸೇರಿದೆ. ರೈಲ್ವೆ ವಲಯದ ನೂತನ ಯೋಜನೆಗಳು  -  ರೈಲು ಮೂಲಸೌಕರ್ಯವನ್ನು ಆಧುನೀಕರಿಸುವುದು, ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವುದು, ಸಂಪರ್ಕವನ್ನು ಸುಧಾರಿಸುವುದು ಮತ್ತು ಸರಕುಗಳು ಮತ್ತು ಜನರ ಚಲನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸುಗಮಗೊಳಿಸುವ ಗುರಿಯನ್ನು ಹೊಂದಿವೆ.

ಈ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಉತ್ತೇಜಿಸಲು, ಪ್ರಧಾನಮಂತ್ರಿಯವರು ರಾಜಸ್ಥಾನದಲ್ಲಿ ಸುಮಾರು 5300 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ಸೌರ ಯೋಜನೆಗಳಿಗೆ ಅಡಿಪಾಯ ಹಾಕಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಜಸ್ಥಾನದ ಬಿಕಾನೇರ್ ನಲ್ಲಿರುವ ಬಾರ್ಸಿಂಗ್ ಸರ್ ಥರ್ಮಲ್ ಪವರ್ ಸ್ಟೇಷನ್ ಬಳಿ ಸ್ಥಾಪಿಸಲಿರುವ 300 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯಾದ ಎನ್.ಎಲ್.ಸಿ.ಐ.ಎಲ್. ಬಾರ್ಸಿಂಗ್‌ಸರ್ ಸೋಲಾರ್ ಪ್ರಾಜೆಕ್ಟ್ ನ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ಆತ್ಮನಿರ್ಭರ ಭಾರತಕ್ಕೆ ಅನುಗುಣವಾಗಿ ಭಾರತದಲ್ಲಿ ತಯಾರಿಸಲಾದ ಉನ್ನತ-ದಕ್ಷತೆಯ ಬೈಫೇಶಿಯಲ್ ಮಾಡ್ಯೂಲ್‌ಗಳೊಂದಿಗೆ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸೌರ ಯೋಜನೆಯನ್ನು ಸ್ಥಾಪಿಸಲಾಗುತ್ತಿದೆ. ಅವರು ಸಿ.ಪಿ.ಎಸ್.ಯು  ಯೋಜನೆ ಹಂತ-II (ಟ್ರಾಂಚ್  -III) ಅಡಿಯಲ್ಲಿ ಎನ್.ಹೆಚ್.ಪಿ.ಸಿ ಲಿಮಿಟೆಡ್ 300 ಎಂ.ಡಬ್ಲ್ಯೂ. ಸೌರ ವಿದ್ಯುತ್ ಯೋಜನೆಯ ಅಡಿಗಲ್ಲು ಹಾಕಿದರು, ರಾಜಸ್ಥಾನದ ಬಿಕಾನೇರ್ ನಲ್ಲಿ ಸೌರ ವಿದ್ಯುತ್ ಯೋಜನೆ ಅಭಿವೃದ್ಧಿಪಡಿಸಲಾಗುವುದು. ಬಿಕಾನೇರ್ ರಾಜಸ್ಥಾನದಲ್ಲಿ ಅಭಿವೃದ್ಧಿಪಡಿಸಲಾದ 300 ಮೆಗಾವ್ಯಾಟ್ ಎನ್.ಟಿ.ಪಿ.ಸಿ. ಗ್ರೀನ್ ಎನರ್ಜಿ ಲಿಮಿಟೆಡ್ ನೋಖ್ರಾ ಸೋಲಾರ್ ಪಿ.ವಿ. ಯೋಜನೆಯನ್ನು ಸಹ ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಸೌರ ಯೋಜನೆಗಳು ಹಸಿರು ಶಕ್ತಿಯನ್ನು ಉತ್ಪಾದಿಸುತ್ತವೆ, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

ರಾಜಸ್ಥಾನದಲ್ಲಿ 2100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿದ್ಯುತ್ ಪ್ರಸರಣ ವಲಯದ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳು ರಾಜಸ್ಥಾನದ ಸೌರಶಕ್ತಿ ವಲಯಗಳಿಂದ ವಿದ್ಯುತ್ ತೆರವು ಮಾಡಲು ಉದ್ದೇಶಿಸಲಾಗಿದೆ, ಇದರಿಂದಾಗಿ ಈ ವಲಯಗಳಲ್ಲಿ ಉತ್ಪತ್ತಿಯಾಗುವ ಸೌರ ಶಕ್ತಿಯನ್ನು ಸೂಕ್ತ ಫಲಾನುಭವಿಗಳಿಗೆ ರವಾನಿಸಬಹುದು. ಹಂತ-II ಭಾಗ ಎ ಅಡಿಯಲ್ಲಿ ರಾಜಸ್ಥಾನದ (8.1 ಜಿ.ಡಬ್ಲ್ಯೂ) ಸೌರ ಶಕ್ತಿ ವಲಯಗಳಿಂದ ವಿದ್ಯುತ್ ಸ್ಥಳಾಂತರಿಸುವಿಕೆಗಾಗಿ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆಗಳನ್ನು ಒಳಗೊಂಡಿದೆ; ಹಂತ-II ಭಾಗ-ಬಿ1 ಅಡಿಯಲ್ಲಿ ರಾಜಸ್ಥಾನದ (8.1 ಜಿ.ಡಬ್ಲ್ಯೂ) ಸೌರ ಶಕ್ತಿ ವಲಯಗಳಿಂದ ವಿದ್ಯುತ್ ಸ್ಥಳಾಂತರಿಸುವಿಕೆಗಾಗಿ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆ; ಮತ್ತು ಬಿಕಾನೇರ್ (ಪಿಜಿ), ಫತೇಘರ್-II ಮತ್ತು ಭದ್ಲಾ-II ನಲ್ಲಿ ಆರ್.ಇ ಯೋಜನೆಗಳಿಗೆ ಸಂಪರ್ಕವನ್ನು ಒದಗಿಸಲು ಪ್ರಸರಣ ವ್ಯವಸ್ಥೆಯ ಯೋಜನೆಗಳನ್ನು ಒಳಗೊಂಡಿದೆ.

ರಾಜಸ್ಥಾನದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಜಲ ಜೀವನ್ ಮಿಷನ್ ಅಡಿಯಲ್ಲಿ ಯೋಜನೆಗಳು ಸೇರಿದಂತೆ ಸುಮಾರು 2400 ಕೋಟಿ ರೂಪಾಯಿ ಮೌಲ್ಯದ ಬಹು ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಿದರು. ಈ ಯೋಜನೆಗಳು ದೇಶದಾದ್ಯಂತ ವೈಯಕ್ತಿಕ ಮನೆಗಳಲ್ಲಿ ನಲ್ಲಿ(ಟ್ಯಾಪ್) ಸಂಪರ್ಕಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಪ್ರಧಾನಮಂತ್ರಿಯವರ ಸಮರ್ಪಣಾ ಮನೋಭಾವವನ್ನು ಸೂಚಿಸುತ್ತವೆ.

ಜೋಧ್ ಪುರದಲ್ಲಿರುವ ಇಂಡಿಯನ್ ಆಯಿಲ್ ನ ಎಲ್.ಪಿ.ಜಿ. ಬಾಟ್ಲಿಂಗ್ ಘಟಕವನ್ನು ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಿದರು. ಕಾರ್ಯಾಚರಣೆ ಮತ್ತು ಸುರಕ್ಷತೆಗಾಗಿ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಯಾಂತ್ರೀಕೃತಗೊಂಡ ವ್ಯವಸ್ಥೆಯನ್ನು ಹೊಂದಿರುವ ಬಾಟ್ಲಿಂಗ್ ಘಟಕವು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಮತ್ತು ಈ ಪ್ರದೇಶದ ಲಕ್ಷಾಂತರ ಗ್ರಾಹಕರ ಎಲ್.ಪಿ.ಜಿ. ಅಗತ್ಯಗಳನ್ನು ಪೂರೈಸುತ್ತದೆ.

ರಾಜಸ್ಥಾನದಲ್ಲಿ ಈ ಅಭಿವೃದ್ಧಿ ಯೋಜನೆಗಳ ಪ್ರಾರಂಭವು ರಾಜಸ್ಥಾನದ ಮೂಲಸೌಕರ್ಯದ ಭೂಚೌಕಟ್ಟನ್ನು ಪರಿವರ್ತಿಸಲು ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸಲು ಪ್ರಧಾನಮಂತ್ರಿಯವರ ನಿರಂತರ ಪ್ರಯತ್ನಗಳನ್ನು ಒತ್ತಿಹೇಳುತ್ತದೆ. ರಾಜಸ್ಥಾನದ ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 200 ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಮುಖ್ಯ ಕಾರ್ಯಕ್ರಮವನ್ನು ಜೈಪುರದಲ್ಲಿ ಆಯೋಜಿಸಲಾಗಿದೆ. ರಾಜ್ಯಾದ್ಯಂತ ನಡೆದ ಕಾರ್ಯಕ್ರಮದಲ್ಲಿ ಕೇಂಧ್ರ ಸರ್ಕಾರದ ವಿವಿಧ ಯೋಜನೆಗಳ ಲಕ್ಷಾಂತರ ಫಲಾನುಭವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ, ರಾಜಸ್ಥಾನ ಸರ್ಕಾರದ ಇತರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳು ಸಹ ಭಾಗವಹಿಸಿದ್ದಾರೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi hails India’s ‘Mission Drishti’ launch as ‘world’s first OptoSAR satellite’ enters orbit

Media Coverage

PM Modi hails India’s ‘Mission Drishti’ launch as ‘world’s first OptoSAR satellite’ enters orbit
NM on the go

Nm on the go

Always be the first to hear from the PM. Get the App Now!
...
Puducherry renews faith... BJP-NDA secures another term
May 04, 2026

The people of Puducherry have once again placed their trust in the BJP-NDA, delivering a renewed mandate based on its track record of good governance and the work of the government led by Shri N. Rangasamy. This continued support will further strengthen efforts to advance development and effective governance in the Union Territory.

Expressing gratitude, the Prime Minister thanked the people of Puducherry for their blessings and reaffirmed the NDA’s commitment to serving them with dedication and integrity.

PM Modi said, “I’m very proud of our NDA Karyakartas of Puducherry for their exceptional efforts on the ground. They have constantly been among the people and elaborated on our vision and track record. This has ensured people blessed us again.”