PM Modi hoists the National Flag at Red Fort to commemorate the 75th anniversary of establishment of Azad Hind Government
Azad Hind government represented the vision laid down by Subhas Chandra Bose, of a strong undivided India: PM Modi
Subhas Chandra Bose was a visionary, who united Indians to fight against the powerful colonial British rule, says PM Modi
Netaji was an inspiration for all those who were fighting for self-determination and freedom in countries all over the world, says the Prime Minister

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ಸ್ಥಾಪಿತವಾದ ಆಜಾದ್ ಹಿಂದ್ ಸರಕಾರ ರಚನೆಯ 75ನೇ ವಾರ್ಷಿಕ ದಿನದ ಸ್ಮರಣಾರ್ಥ ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಅವರು ರಾಷ್ಟ್ರಧ್ವಜಾರೋಹಣ ಮಾಡಿದರು.

ಆಜಾದ್ ಹಿಂದ್ ಸರಕಾರದ ರಚನೆಯ 75ನೇ ವಾರ್ಷಿಕ ದಿನದ ಹೆಮ್ಮೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ದೇಶವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಅವರು, ಸುಭಾಷ್ ಚಂದ್ರ ಬೋಸ್ ಅವರು ಹಾಕಿಕೊಟ್ಟ, ಅಖಂಡ ಭಾರತದ ಸಂಕಲ್ಪ-ಮಾರ್ಗದರ್ಶನಗಳನ್ನು ಆಜಾದ್ ಹಿಂದ್ ಸರಕಾರ ಪ್ರತಿನಿಧಿಸಿತ್ತು ಎಂದು ಹೇಳಿದರು. ಆಜಾದ್ ಹಿಂದ್ ಸರಕಾರವುರಾಷ್ಟ್ರ ನಿರ್ಮಾಣದ ಕಾರ್ಯಚಟುವಟಿಕೆಗಳಲ್ಲಿ ಸಂಪೂರ್ಣ ಮಗ್ನವಾಗಿತ್ತು ಹಾಗೂ ಸ್ವಂತ ಬ್ಯಾಂಕ್, ಕರೆನ್ಸಿ ಮತ್ತು ಸ್ಟ್ಯಾಂಪ್ ಗಳನ್ನು ಹೊಂದಿತ್ತು ಎಂದು ಪ್ರಧಾನಮಂತ್ರಿ ಹೇಳಿದರು.

ನೇತಾಜಿ ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸುಭಾಷ್ ಚಂದ್ರ ಬೋಸ್ ಅವರು ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು. ವಸಾಹತುಶಾಹಿ ಬ್ರಿಟಿಷರಪ್ರಭಾವಶಾಲಿ ಆಡಳಿತದ ವಿರುದ್ಧ ಹೋರಾಟ ಮಾಡಲು ಭಾರತೀಯರನ್ನು ಒಂದಾಗಿಸಿದರು. ಬೋಸ್ ಅವರು ತಮ್ಮ ತಾಯಿಗೆ ಬರೆದ ಪತ್ರಗಳನ್ನು ಓದಿದರೆ ಚಿಕ್ಕಂದಿನಿಂದಲೇ ಅವರಲ್ಲಿ ದೇಶಪ್ರೇಮ ಇದ್ದುದು ತಿಳಿದುಬರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ನೇತಾಜಿ ಅವರು ಕೇವಲ ಭಾರತೀಯರಿಗೆ ಮಾತ್ರವಲ್ಲ, ವಿಶ್ವದೆಲ್ಲಡೆ ಸ್ವಾತಂತ್ರ್ಯ ಹೋರಾಟ ಮಾಡುವ, ದೇಶ ಮತ್ತು ಸ್ವಸಂಕಲ್ಪಕ್ಕಾಗಿ ಹೋರಾಟ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಪ್ರೇರಣೆಯಾಗಿದ್ದಾರೆ.ದಕ್ಷಿಣ ಆಫ್ರಿಕಾದ ನಾಯಕ ಶ್ರೀ ನೆಲ್ಸನ್ ಮಂಡೆಲಾ ಅವರು ನೇತಾಜಿಯವರಿಂದ ಯಾವರೀತಿಯಲ್ಲಿ ಪ್ರೇರಿತರಾದರು ಎಂದು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಸುಭಾಷ್ ಚಂದ್ರ ಬೋಸ್ ಅವರ ಕಲ್ಪನೆಯ ನವಭಾರತ ನಿರ್ಮಾಣಕ್ಕಾಗಿ ನಾವು ಇನ್ನೂ ಬಹಳಷ್ಟು ದೂರ ಸಾಗಬೇಕಾಗಿದೆ ಎಂದು ದೇಶಕ್ಕೆ ನೆನಪಿಸಿದ ಪ್ರಧಾನಮಂತ್ರಿ ಅವರು, ನಾಗರಿಕರುನೇತಾಜಿಯಿಂದ ಪ್ರೇರಣೆಹೊಂದಬೇಕು ಮತ್ತು ದೇಶದ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಹೇಳಿದರು. ಭಾರತವು ಬಹಳಷ್ಟು ತ್ಯಾಗ-ಸಮರ್ಪಣೆಗಳ ನಂತರ ಸ್ವಾತಂತ್ರ್ಯಗಳಿಸಿದೆ ಮತ್ತು ಈಸ್ವಾತಂತ್ರ್ಯವನ್ನು ರಕ್ಷಿಸಿ-ಕಾಪಾಡುವುದು ನಾಗರಿಕರ ಕರ್ತವ್ಯವಾಗಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.

ನೆರೆದ ಸಭಿಕರನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು “ರಾಣಿ ಝಾನ್ಸಿ ರೆಜಿಮೆಂಟ್” ರೂಪಿಸಿ, ಮೊತ್ತಮೊದಲ ಬಾರಿ ಸಶಸ್ತ್ರ ಸೇನೆಯಲ್ಲಿಮಹಿಳೆಯರಿಗೂ ಸಮಾನ ಅವಕಾಶಗಳನ್ನು ನೀಡಿದರು. ಈ ಪರಂಪರೆಯನ್ನು ಸರಕಾರವು ಸರಿಯಾದ ರೀತಿಯಲ್ಲಿಂದು ಮುಂದುವರಿಸುತ್ತಿದೆ ಮತ್ತು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಖಾಯಂ ನಿಯೋಜನೆಯ ಸಮಾನ ಅವಕಾಶ ಕಲ್ಪಿಸಲಾಗಿದೆ.

Click here to read full text speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India Remains Fastest-Growing Economy At

Media Coverage

India Remains Fastest-Growing Economy At "Precarious Moment" For World: UN
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಮೇ 2025
May 16, 2025

Appreciation for PM Modi’s Vision for a Stronger, Sustainable and Inclusive India