ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ವಲಸೆ, ವೀಸಾ, ವಿದೇಶಿಯರ ನೋಂದಣಿ ಮತ್ತು ಟ್ರ್ಯಾಕಿಂಗ್ (ಐ ವಿ ಎಫ್‌ ಆರ್‌ ಟಿ) ಯೋಜನೆಯನ್ನು 31 ಮಾರ್ಚ್ 2026 ರ ನಂತರವೂ, ಅಂದರೆ 01 ಏಪ್ರಿಲ್ 2026 ರಿಂದ 31 ಮಾರ್ಚ್ 2031 ರವರೆಗೆ ಐದು ವರ್ಷಗಳ ಅವಧಿಗೆ 1800 ಕೋಟಿ ರೂ. ಗಳ ಬಜೆಟ್ ವೆಚ್ಚದೊಂದಿಗೆ ಮುಂದುವರಿಸಲು ಅನುಮೋದನೆ ನೀಡಿದೆ.

ಐ ವಿ ಎಫ್ ಆರ್ ಟಿ ವೇದಿಕೆಯು ಭಾರತದಲ್ಲಿ ವಲಸೆ, ವೀಸಾ ವಿತರಣೆ ಮತ್ತು ವಿದೇಶಿಯರ ನೋಂದಣಿಗೆ ಸಂಬಂಧಿಸಿದ ಕಾರ್ಯಗಳನ್ನು ಪರಸ್ಪರ ಜೋಡಿಸಲು ಮತ್ತು ಸುಗಮಗೊಳಿಸಲು ಶ್ರಮಿಸುತ್ತದೆ. ಸುರಕ್ಷಿತ ಮತ್ತು ಸಂಯೋಜಿತ ಸೇವಾ ವಿತರಣಾ ಚೌಕಟ್ಟಿನೊಳಗೆ ವಲಸೆ ಮತ್ತು ವೀಸಾ ಸೇವೆಗಳನ್ನು ಆಧುನೀಕರಿಸುವುದು ಹಾಗೂ ಮೇಲ್ದರ್ಜೆಗೇರಿಸುವುದು ಐ ವಿ ಎಫ್ ಆರ್ ಟಿ ಯೋಜನೆಯ ಮೂಲ ಉದ್ದೇಶವಾಗಿದೆ. ಇದು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಜೊತೆಗೆ ಕಾನೂನುಬದ್ಧ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು 13.05.2010 ರಂದು 1011 ಕೋಟಿ ರೂ.ಗಳ ಬಜೆಟ್ ವೆಚ್ಚದಲ್ಲಿ ಸೆಪ್ಟೆಂಬರ್ 2014 ರವರೆಗೆ ಅನುಮೋದಿಸಿತ್ತು. ಯೋಜನೆಯ ಬಜೆಟ್ ವೆಚ್ಚವನ್ನು 2015 ರಲ್ಲಿ 638.90 ಕೋಟಿ ರೂ.ಗಳಿಗೆ ಪರಿಷ್ಕರಿಸಲಾಯಿತು ಮತ್ತು ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದೆ ಅನುಷ್ಠಾನದ ಅವಧಿಯನ್ನು 31 ಮಾರ್ಚ್ 2017 ರವರೆಗೆ ಮತ್ತು ನಂತರ 31 ಮಾರ್ಚ್ 2021 ರವರೆಗೆ ವಿಸ್ತರಿಸಲಾಯಿತು. ಒಟ್ಟು ಪರಿಷ್ಕೃತ ವೆಚ್ಚ 638.90 ಕೋಟಿ ರೂ.ಗಳ ಪೈಕಿ 613.28 ಕೋಟಿ ರೂ.ಗಳನ್ನು ವ್ಯಯಿಸಲಾಯಿತು. ಯೋಜನೆಯನ್ನು 01.04.2021 ರಿಂದ 31.03.2026 ರವರೆಗೆ ಮತ್ತಷ್ಟು ಐದು ವರ್ಷಗಳ ಅವಧಿಗೆ ಮುಂದುವರಿಸಲು 19.01.2022 ರಂದು ಸಚಿವ ಸಂಪುಟವು 1365 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ ಅನುಮೋದನೆ ನೀಡಿತ್ತು.

ಈ ಯೋಜನೆಯು ಅಸ್ತಿತ್ವದಲ್ಲಿರುವ ರಚನೆಯನ್ನು ಮರುರೂಪಿಸುವ ಮತ್ತು ನವೀಕರಿಸುವುದು ಮಾತ್ರವಲ್ಲದೆ, ಭದ್ರತಾ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಬಳಕೆದಾರರ ಅನುಭವವನ್ನು ಸುಧಾರಿಸಲು ಅತ್ಯಾಧುನಿಕ ತಾಂತ್ರಿಕ ಪರಿಹಾರಗಳನ್ನು ಪರಿಚಯಿಸುವ ಮೂಲಕ ಅಸ್ತಿತ್ವದಲ್ಲಿರುವ ಐ ವಿ ಎಫ್ ಆರ್ ಟಿ ಯೋಜನೆಯ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ವಿಸ್ತರಿಸಲು ಹಾಗೂ ಬಲಪಡಿಸಲು ಶ್ರಮಿಸುತ್ತದೆ. ಜಾಗತಿಕ ಪ್ರಯಾಣದ ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸಲು ಮತ್ತು ಹೊಸ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ಐ ವಿ ಎಫ್ ಆರ್ ಟಿ ಯೋಜನೆಯ ಆಧುನೀಕರಣ ಅತ್ಯಗತ್ಯವಾಗಿದೆ. ಇತ್ತೀಚಿನ 'ವಲಸೆ ಮತ್ತು ವಿದೇಶಿಯರ ಕಾಯ್ದೆ, 2025' ಮತ್ತು ಅದರ ನಂತರದ ನಿಯಮಗಳು ಹಾಗೂ ಆದೇಶಗಳ ಜಾರಿಯ ನಂತರ, ಅಕ್ರಮ ವಲಸೆ ಸೇರಿದಂತೆ ವಲಸೆ ನಿಯಂತ್ರಣ ಮತ್ತು ವಿದೇಶಿಯರ ನಿರ್ವಹಣಾ ಕ್ಷೇತ್ರದಲ್ಲಿ ಉದಯೋನ್ಮುಖ ಅವಶ್ಯಕತೆಗಳು ಹಾಗೂ ಭವಿಷ್ಯದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಐ ವಿ ಎಫ್ ಆರ್ ಟಿ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಆಧುನೀಕರಿಸುವುದು ಅನಿವಾರ್ಯವಾಗಿದೆ. ಈ ಯೋಜನೆಯ ಮುಂದುವರಿಕೆಯು ಕೇವಲ ತಾಂತ್ರಿಕ ಸುಧಾರಣೆಯಲ್ಲ, ಬದಲಿಗೆ ವಿಶ್ವದರ್ಜೆಯ ವಲಸೆ ಮತ್ತು ವೀಸಾ ವಿತರಣಾ ವ್ಯವಸ್ಥೆಯ ಮೂಲಕ ಅಂತರರಾಷ್ಟ್ರೀಯ ಸಂಚಾರವನ್ನು ಉತ್ತೇಜಿಸುವ ಭಾರತ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ ಕೈಗೊಂಡ ಕಾರ್ಯತಂತ್ರದ ಪರಿವರ್ತನೆಯಾಗಿದೆ. ಮುಂದಿನ ಹಂತವು ಮೂರು ವಿಶಾಲ ಕ್ಷೇತ್ರಗಳ ಮೇಲೆ ಗಮನ ಹರಿಸಲಿದೆ: (ಅ) ಉದಯೋನ್ಮುಖ ತಂತ್ರಜ್ಞಾನದ ನಾವೀನ್ಯತೆಗಳು, (ಆ) ಮೂಲಸೌಕರ್ಯದ ರೂಪಾಂತರ ಮತ್ತು (ಇ) ತಂತ್ರಜ್ಞಾನ ಮತ್ತು ಸೇವೆಯ ಉತ್ತಮ ಬಳಕೆ.

ಈ ಯೋಜನೆಯು ಪ್ರಯಾಣಿಕರ ತಡೆರಹಿತ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಮೊಬೈಲ್ ಆಧಾರಿತ ಸೇವೆಗಳು ಮತ್ತು ಸ್ವಯಂ ಸೇವಾ ಕಿಯೋಸ್ಕ್‌ ಗಳು ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ವಲಸೆ ಮತ್ತು ವೀಸಾ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸುತ್ತದೆ. ಇದು ದೇಶಾದ್ಯಂತ ಸ್ಥಿತಿಸ್ಥಾಪಕ ಮತ್ತು ವಿಸ್ತರಿಸಬಹುದಾದ ವ್ಯವಸ್ಥೆಯನ್ನು ನಿರ್ಮಿಸಲು ವಲಸೆ ಚೆಕ್‌ಪೋಸ್ಟ್‌ ಗಳು, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗಳು ಮತ್ತು ಡೇಟಾ ಸೆಂಟರ್‌ ಗಳಲ್ಲಿನ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುತ್ತದೆ ಮತ್ತು ವಿಸ್ತರಿಸುತ್ತದೆ. ಹೆಚ್ಚುವರಿಯಾಗಿ, ಏಕೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳನ್ನು ಪರಿಚಯಿಸುವ ಮೂಲಕ, ಅಪ್ಲಿಕೇಶನ್ ವಿನ್ಯಾಸವನ್ನು ನವೀಕರಿಸುವ ಮೂಲಕ ಮತ್ತು ಸುಧಾರಿತ ದಕ್ಷತೆ ಹಾಗೂ ಬಳಕೆದಾರರ ಅನುಭವಕ್ಕಾಗಿ ನೆಟ್‌ವರ್ಕ್ ಚೌಕಟ್ಟುಗಳನ್ನು ಬಲಪಡಿಸುವ ಮೂಲಕ ತಂತ್ರಜ್ಞಾನ ಮತ್ತು ಸೇವಾ ವಿತರಣೆಯನ್ನು ಉತ್ತಮಗೊಳಿಸುತ್ತದೆ. ಇದು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಜೊತೆಗೆ ಕಾನೂನುಬದ್ಧ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ. ಇದು ಸೇವೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಮತ್ತು ಭವಿಷ್ಯದಲ್ಲಿ ಭಾರತಕ್ಕೆ ಹೆಚ್ಚಿನ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ನವೀನ ತಾಂತ್ರಿಕ ಪರಿಹಾರಗಳನ್ನು ಅಳವಡಿಸಲು ಸಹಾಯ ಮಾಡುತ್ತದೆ. ಇದರಿಂದ ಪ್ರವಾಸೋದ್ಯಮ, ವೈದ್ಯಕೀಯ ಮತ್ತು ವ್ಯಾಪಾರ ಕ್ಷೇತ್ರಗಳಿಗೆ ಉತ್ತೇಜನ ಸಿಗಲಿದೆ. ಐ ವಿ ಎಫ್ ಆರ್ ಟಿ ಯು ಅಂತರರಾಷ್ಟ್ರೀಯ ಸಂಚಾರ, ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಅಗಾಧವಾದ ಸಕಾರಾತ್ಮಕ ಪರಿಣಾಮಗಳನ್ನು ಹೊಂದಿದೆ. ಇದು ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ ಮತ್ತು ಆ ಮೂಲಕ ಉದ್ಯೋಗಾವಕಾಶಗಳಿಗೆ ಕೊಡುಗೆ ನೀಡುತ್ತದೆ.

ಈ ಯೋಜನೆಯು ದೇಶಾದ್ಯಂತ 117 ವಲಸೆ ಚೆಕ್‌ಪೋಸ್ಟ್‌ ಗಳು, 15 ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗಳು ಮತ್ತು 854 ವಿದೇಶಿಯರ ನೋಂದಣಿ ಅಧಿಕಾರಿಗಳು/ ಪೊಲೀಸ್ ಅಧೀಕ್ಷಕರು/ ಪೊಲೀಸ್ ಉಪ ಆಯುಕ್ತರನ್ನು ಒಳಗೊಂಡಿದೆ.

ಐ ವಿ ಎಫ್ ಆರ್ ಟಿ ವ್ಯವಸ್ಥೆಯು ವಲಸೆ ಮತ್ತು ವೀಸಾ ಕಾರ್ಯಗಳಲ್ಲಿ ಸೇವಾ ವಿತರಣೆ ಮತ್ತು ಕಾರ್ಯಾಚರಣೆಯ ದಕ್ಷತೆಯಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗಿದೆ. ಈ ವ್ಯವಸ್ಥೆಯು ಆನ್‌ಲೈನ್ ಅಪಾಯಿಂಟ್‌ಮೆಂಟ್ ವೇಳಾಪಟ್ಟಿ ಮತ್ತು ಪಾವತಿ ಸೌಲಭ್ಯಗಳೊಂದಿಗೆ ಶೇ. 100 ಸಂಪರ್ಕರಹಿತ ಮತ್ತು ಮುಖಾಮುಖಿರಹಿತ ವೀಸಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಿದೆ. ಇದರಿಂದ ವೀಸಾ ಪ್ರಕ್ರಿಯೆ ವೇಗವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಶೇ. 91.24 ರಷ್ಟು ಇ-ವೀಸಾ ಅರ್ಜಿಗಳನ್ನು 72 ಗಂಟೆಗಳ ಒಳಗೆ ವಿಲೇವಾರಿ ಮಾಡಲಾಗಿದೆ. ವಲಸೆ ಚೆಕ್‌ಪೋಸ್ಟ್‌ ಗಳಲ್ಲಿ ಪ್ರಯಾಣಿಕರ ತಪಾಸಣೆಯ ಸರಾಸರಿ ಸಮಯವು (ಬಯೋಮೆಟ್ರಿಕ್ಸ್ ಸೇರಿದಂತೆ) ಸಾಂಪ್ರದಾಯಿಕ 5-6 ನಿಮಿಷಗಳಿಂದ 2.5-3 ನಿಮಿಷಗಳಿಗೆ ಇಳಿಕೆಯಾಗಿದೆ.

13 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಸ್ವಯಂಚಾಲಿತ ಇ-ಗೇಟ್‌ ಗಳ ಮೂಲಕ 'ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ' (ಎಫ್‌ ಟಿ ಐ-ಟಿಟಿಪಿ), ವಲಸೆ ತಪಾಸಣೆಗೆ ತೆಗೆದುಕೊಳ್ಳುವ ಸಮಯವನ್ನು 2.5-3 ನಿಮಿಷಗಳಿಂದ 30 ಸೆಕೆಂಡುಗಳಿಗೆ ಕಡಿಮೆ ಮಾಡುತ್ತದೆ. ಇದರ ನೋಂದಣಿಯು ಸದ್ಯಕ್ಕೆ ಉಚಿತವಾಗಿದ್ದು, ಭಾರತೀಯ ನಾಗರಿಕರು ಮತ್ತು ಒಸಿಐ (ಒಸಿಐ) ಕಾರ್ಡ್‌ ದಾರರಿಗೆ ಲಭ್ಯವಿದೆ.

ಐ ವಿ ಎಫ್ ಆರ್ ಟಿ ವ್ಯವಸ್ಥೆಯಿಂದಾಗಿ ವ್ಯವಹಾರ ಸುಲಭವಾಗುವಿಕೆ, ಅನುಕೂಲತೆ ಮತ್ತು ಭದ್ರತೆಯ ಭರವಸೆಯಿಂದಾಗಿ ಅಪಾರ ಆರ್ಥಿಕ ಪ್ರಯೋಜನಗಳು ಲಭಿಸಿವೆ. ಪ್ರವಾಸೋದ್ಯಮ, ವ್ಯಾಪಾರ, ವಾಣಿಜ್ಯ, ಸೇವಾ ಉದ್ಯಮ ವಿಶೇಷವಾಗಿ ವಾಯುಯಾನ ಮತ್ತು ಆತಿಥ್ಯ ಕ್ಷೇತ್ರಗಳು ಐ ವಿ ಎಫ್ ಆರ್ ಟಿ ವ್ಯವಸ್ಥೆಯಿಂದ ಹೆಚ್ಚಿನ ಪ್ರಯೋಜನ ಪಡೆದಿವೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From 17,000 Violent Incidents To Bastar Olympics: How PM Modi Got The Maoists To Turn In

Media Coverage

From 17,000 Violent Incidents To Bastar Olympics: How PM Modi Got The Maoists To Turn In
NM on the go

Nm on the go

Always be the first to hear from the PM. Get the App Now!
...
Prime Minister Shri Narendra Modi receives a telephone call from the Amir of Qatar
June 23, 2026
Qatar Amir expresses condolences over the loss of lives of Indian nationals in an accident in Qatar.
PM thanks him and conveys appreciation for prompt medical help to the injured.
The two leaders reaffirm their commitment to ensure the wellbeing and safety of their citizens.
PM conveys appreciation for Qatar’s positive contribution in the peace efforts in West Asia.
The two leaders reaffirm their commitment to expand bilateral cooperation.

Prime Minister Shri Narendra Modi received a telephone call today from the Amir of the State of Qatar, H.H. Sheikh Tamim Bin Hamad Al-Thani.

Qatar Amir expressed condolences over the loss of lives of Indian nationals in an accident at Ras Laffan Industrial City in Qatar on June 21 and conveyed wishes for speedy recovery of those injured.

PM thanked him for his words of sympathy towards affected families and conveyed appreciation for providing prompt medical help to the injured.

The two leaders reaffirmed their commitment to ensure the wellbeing and safety of their citizens and reiterated their support and solidarity with each other.

While discussing the situation in West Asia, PM conveyed appreciation for Qatar’s positive contribution in the peace efforts and expressed hope that they would lead to lasting peace and stability in the region.

The two leaders also reaffirmed their commitment to expand bilateral cooperation in all areas.

They agreed to remain in close touch.