"ಸನಾತನ ಕೇವಲ ಒಂದು ಪದವಲ್ಲ, ಅದು ಸದಾ ಹೊಸದು, ಸದಾ ಬದಲಾಗುತ್ತದೆ. ಸನಾತನವು ಗತ ಕಾಲದಿಂದ ತನ್ನನ್ನು ತಾನು ಸುಧಾರಿಸಿಕೊಳ್ಳುವ ಅಂತರ್ಗತ ಬಯಕೆಯನ್ನು ಹೊಂದಿದೆ ಹಾಗಾಗಿ ಅದು ಶಾಶ್ವತ ಮತ್ತು ಅಮರವಾದದ್ದು"
"ಯಾವುದೇ ರಾಷ್ಟ್ರದ ಪ್ರಯಾಣವು ಅದರ ಸಮಾಜದ ಪ್ರಯಾಣದಲ್ಲಿ ಪ್ರತಿಫಲಿಸುತ್ತದೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕಡ್ವಾ ಪಾಟೀದಾರ್ ಸಮಾಜದ 100ನೇ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದರು.
ಸನಾತನವು ಗತಕಾಲದಿಂದ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳುವ ಅಂತರ್ಗತ ಬಯಕೆಯನ್ನು ಹೊಂದಿದೆ. ಆದ್ದರಿಂದ ಅದು ಶಾಶ್ವತ ಮತ್ತು ಅಮರವಾದದ್ದು,ʼʼ ಎಂದು ಪ್ರಧಾನಿ ಹೇಳಿದರು
ನೀರಿನ ಕೊರತೆ, ಹಸಿವು, ಪ್ರಾಣಿಗಳ ಸಾವು, ವಲಸೆ ಮತ್ತು ಗೋಳಾಟಗಳೇ ಹೆಗ್ಗುರುತಾಗಿ ಹೊಂದಿದ್ದ ಕಛ್‌ ಅನ್ನು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು ಎಂದು ಹೇಳಿದರು.

ಎಲ್ಲರಿಗೂ ಹರಿ ಓಂ, ಜೈ ಉಮಿಯಾ ಮಾ, ಜೈ ಲಕ್ಷ್ಮಿನಾರಾಯಣ!

ಕಛಿ ಪಟೇಲರು ಕಛ್ ನ ಹೆಮ್ಮೆ ಮಾತ್ರವಲ್ಲ, ಇಡೀ ಭಾರತದ ಹೆಮ್ಮೆ. ನಾನು ಭಾರತದ ಯಾವುದೇ ಭಾಗಕ್ಕೆ ಹೋದಾಗಲೆಲ್ಲಾ, ಅಲ್ಲಿ ಈ ಸಮುದಾಯದ ಜನರನ್ನು ನಾನು ಕಾಣುತ್ತೇನೆ. ಅದಕ್ಕಾಗಿಯೇ ಹೇಳಲಾಗುತ್ತದೆ - ಕಛ್ ನ ಜನರು ಸಮುದ್ರದಲ್ಲಿ ಮೀನಿನಂತೆ ಪ್ರಪಂಚದಾದ್ಯಂತ ತಿರುಗಾಡುತ್ತಾರೆ. ಅವರು ಎಲ್ಲಿ ವಾಸಿಸುತ್ತಾರೋ, ಅಲ್ಲಿ ಅವರು ಕಛ್ ನ ಸಂಪ್ರದಾಯದಲ್ಲಿ ನೆಲೆಸುತ್ತಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶಾರದಾ ಪೀಠದ ಜಗದ್ಗುರು ಪೂಜ್ಯ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪುರುಷೋತ್ತಮ ಭಾಯಿ ರೂಪಾಲಾ, ಅಖಿಲ ಭಾರತ ಕಛ್ ಕಡ್ವಾ ಪಾಟೀದಾರ್ ಸಮಾಜದ ಅಧ್ಯಕ್ಷ ಶ್ರೀ ಅಬ್ಜಿ ಭಾಯ್ ವಿಶ್ರಾಮ್ ಭಾಯ್ ಕನಾನಿ, ಇತರ ಎಲ್ಲಾ ಪದಾಧಿಕಾರಿಗಳು ಮತ್ತು ಭಾರತ ಮತ್ತು ವಿದೇಶಗಳ ನನ್ನ ಎಲ್ಲಾ ಸಹೋದರ ಸಹೋದರಿಯರೇ 

ನಿಮ್ಮೆಲ್ಲರಿಗೂ ಸನಾತನ ಶತಾಬ್ದಿ ಮಹೋತ್ಸವದ ಶುಭಾಶಯಗಳು. ಏಕೆಂದರೆ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರು ಶಂಕರಾಚಾರ್ಯರ ಹುದ್ದೆಯನ್ನು ವಹಿಸಿಕೊಂಡ ನಂತರ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿರುವುದು ಇದೇ ಮೊದಲು. ಅವರ ವಾತ್ಸಲ್ಯ ಯಾವಾಗಲೂ ನನ್ನ ಮೇಲೆ, ನಮ್ಮೆಲ್ಲರ ಮೇಲೆ ಇದೆ ಮತ್ತು ಇಂದು ಅವರನ್ನು ಸ್ವಾಗತಿಸುವ ಅವಕಾಶ ನನಗೆ ಸಿಕ್ಕಿದೆ.

ಸ್ನೇಹಿತರೇ,

ಸಮಾಜಕ್ಕೆ 100 ವರ್ಷಗಳ ಸೇವೆ, ಯುವ ಘಟಕದ 50 ನೇ ವರ್ಷ ಮತ್ತು ಮಹಿಳಾ ವಿಭಾಗದ 25 ನೇ ವರ್ಷದ ಶುಭ ಅವಧಿಯ ರೂಪದಲ್ಲಿ 'ತ್ರಿವೇಣಿ ಸಂಗಮ' ಬಹಳ ಸಂತೋಷದ ಕಾಕತಾಳೀಯವಾಗಿದೆ. ಸಮಾಜದ ಯುವಕರು, ತಾಯಂದಿರು ಮತ್ತು ಸಹೋದರಿಯರು ತಮ್ಮ ಸಮಾಜದ ಜವಾಬ್ದಾರಿಯನ್ನು ತೆಗೆದುಕೊಂಡಾಗ, ಅದರ ಯಶಸ್ಸು ಮತ್ತು ಸಮೃದ್ಧಿ ಖಚಿತವಾಗಿರುತ್ತದೆ. ಶ್ರೀ ಅಖಿಲ ಭಾರತೀಯ ಕಛ್ ಕಡ್ವಾ ಪಾಟೀದಾರ್ ಸಮಾಜದ ಯುವ ಮತ್ತು ಮಹಿಳಾ ಘಟಕಗಳ ಈ ನಿಷ್ಠೆ ಈ ಹಬ್ಬದ ರೂಪದಲ್ಲಿ ಇಂದು ಎಲ್ಲೆಡೆ ಗೋಚರಿಸುತ್ತಿದೆ ಎಂದು ನನಗೆ ಸಂತೋಷವಾಗಿದೆ. ನಿಮ್ಮ ಕುಟುಂಬದ ಸದಸ್ಯನಾಗಿ ನನ್ನನ್ನು ಸನಾತನ ಶತಾಬ್ದಿ ಮಹೋತ್ಸವದ ಭಾಗವನ್ನಾಗಿ ಮಾಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸನಾತನ ಕೇವಲ ಒಂದು ಪದವಲ್ಲ; ಇದು ಯಾವಾಗಲೂ ಹೊಸದು, ಯಾವಾಗಲೂ ಬದಲಾಗುತ್ತದೆ. ಇದು ಗತಕಾಲದಿಂದ ತನ್ನನ್ನು ಸುಧಾರಿಸಿಕೊಳ್ಳುವ ಅಂತರ್ಗತ ಬಯಕೆಯನ್ನು ಹೊಂದಿದೆ, ಮತ್ತು ಆದ್ದರಿಂದ, ಸನಾತನವು ಅಮರವಾಗಿದೆ.

ಸ್ನೇಹಿತರೇ,

ಯಾವುದೇ ರಾಷ್ಟ್ರದ ಪ್ರಯಾಣವು ಅದರ ಸಮಾಜದ ಪ್ರಯಾಣದ ಪ್ರತಿಬಿಂಬವಾಗಿದೆ. ಪಾಟೀದಾರ್ ಸಮಾಜದ ನೂರು ವರ್ಷಗಳ ಇತಿಹಾಸ, ಶ್ರೀ ಅಖಿಲ ಭಾರತೀಯ ಕಛ್ ಕಡ್ವಾ ಸಮಾಜದ ನೂರು ವರ್ಷಗಳ ಪ್ರಯಾಣ ಮತ್ತು ಭವಿಷ್ಯದ ದೃಷ್ಟಿಕೋನವು ಭಾರತ ಮತ್ತು ಗುಜರಾತ್ ಅನ್ನು ಒಂದು ರೀತಿಯಲ್ಲಿ ತಿಳಿದುಕೊಳ್ಳಲು ಮತ್ತು ನೋಡಲು ಒಂದು ಮಾಧ್ಯಮವಾಗಿದೆ. ವಿದೇಶಿ ಆಕ್ರಮಣಕಾರರು ನೂರಾರು ವರ್ಷಗಳಿಂದ ಈ ಸಮಾಜದ ಮೇಲೆ ಎಂತಹ ದೌರ್ಜನ್ಯಗಳನ್ನು ಮಾಡಲಿಲ್ಲ! ಆದರೂ, ಸಮಾಜದ ಪೂರ್ವಜರು ತಮ್ಮ ಗುರುತನ್ನು ಅಳಿಸಿಹಾಕಲು ಬಿಡಲಿಲ್ಲ, ಅವರ ನಂಬಿಕೆಯನ್ನು ನಾಶಪಡಿಸಲು ಅನುಮತಿಸಲಿಲ್ಲ. ಈ ಯಶಸ್ವಿ ಸಮಾಜದ ಇಂದಿನ ಪೀಳಿಗೆಯಲ್ಲಿ ಶತಮಾನಗಳ ಹಿಂದಿನ ತ್ಯಾಗಗಳ ಪರಿಣಾಮವನ್ನು ನಾವು ನೋಡಬಹುದು. ಇಂದು ಕಛ್ ಕಡ್ವಾ ಪಾಟೀದಾರ್ ಸಮುದಾಯದ ಜನರು ದೇಶ ಮತ್ತು ವಿದೇಶಗಳಲ್ಲಿ ತಮ್ಮ ಯಶಸ್ಸಿನ ಧ್ವಜವನ್ನು ಹಾರಿಸುತ್ತಿದ್ದಾರೆ. ಅವರು ಎಲ್ಲೇ ಇದ್ದರೂ, ಅವರು ತಮ್ಮ ಶ್ರಮ ಮತ್ತು ಸಾಮರ್ಥ್ಯದೊಂದಿಗೆ ಮುಂದುವರಿಯುತ್ತಿದ್ದಾರೆ. ಮರಮುಟ್ಟು, ಪ್ಲೈವುಡ್, ಹಾರ್ಡ್ ವೇರ್, ಅಮೃತಶಿಲೆ ಅಥವಾ ಕಟ್ಟಡ ಸಾಮಗ್ರಿಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಇದ್ದೀರಿ. ಇದರೊಂದಿಗೆ, ನಿಮ್ಮ ಸಂಪ್ರದಾಯಗಳ ಗೌರವ ಮತ್ತು ಗೌರವವನ್ನು ಪೀಳಿಗೆಯಿಂದ ಪೀಳಿಗೆಗೆ, ವರ್ಷದಿಂದ ವರ್ಷಕ್ಕೆ ವಿಸ್ತರಿಸಿದ್ದೀರಿ ಎಂದು ನನಗೆ ಸಂತೋಷವಾಗಿದೆ. ಈ ಸಮಾಜವು ತನ್ನ ವರ್ತಮಾನವನ್ನು ನಿರ್ಮಿಸಿತು ಮತ್ತು ಅದರ ಭವಿಷ್ಯದ ಅಡಿಪಾಯವನ್ನು ಹಾಕಿತು!

ಸ್ನೇಹಿತರೇ,

ನಾನು ರಾಜಕೀಯ ಜೀವನದಲ್ಲಿ ನಿಮ್ಮೆಲ್ಲರಿಂದ ಸಾಕಷ್ಟು ಕಲಿತಿದ್ದೇನೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅನೇಕ ವಿಷಯಗಳಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶವೂ ನನಗೆ ಸಿಕ್ಕಿತು. ಕಛ್ ಭೂಕಂಪದ ಕಷ್ಟದ ಸಮಯವಾಗಲಿ, ಅಥವಾ ನಂತರದ ದೀರ್ಘಕಾಲದ ಪರಿಹಾರ ಮತ್ತು ಪುನರ್ನಿರ್ಮಾಣ ಪ್ರಯತ್ನಗಳಾಗಲಿ, ಈ ಸಮುದಾಯದ ಶಕ್ತಿಯು ಯಾವಾಗಲೂ ನನಗೆ ಆತ್ಮವಿಶ್ವಾಸವನ್ನು ನೀಡಿತು. ನನಗೆ ಕಛ್ ನ ದಿನಗಳು ನೆನಪಾದಾಗ, ಅದು ಗತಕಾಲದ ನೆನಪುಗಳನ್ನು ಮರಳಿ ತರುತ್ತದೆ. ಒಂದು ಕಾಲದಲ್ಲಿ ಕಛ್ ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿತ್ತು. ನೀರಿನ ಕೊರತೆ, ಹಸಿವು, ಪ್ರಾಣಿಗಳ ಸಾವು, ವಲಸೆ ಮತ್ತು ದುಃಖ - ಇದು ಕಛ್ ನ ಗುರುತಾಗಿತ್ತು. ಒಬ್ಬ ಅಧಿಕಾರಿಯನ್ನು ಕಛ್ ಗೆ ವರ್ಗಾಯಿಸಿದರೆ, ಅದನ್ನು 'ಕಾಲಾ ಪಾನಿ' ಎಂದು ಪರಿಗಣಿಸಲಾಗುತ್ತಿತ್ತು. ಆದರೆ ವರ್ಷಗಳಲ್ಲಿ, ನಾವು ಒಟ್ಟಾಗಿ ಕಛ್ ಅನ್ನು ಪರಿವರ್ತಿಸಿದ್ದೇವೆ. ಕಛ್ ನ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡಿದ ರೀತಿ, ನಾವು ಕಚ್ ಅನ್ನು ವಿಶ್ವದ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಿದ ರೀತಿ ' ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಗೆ ಉತ್ತಮ ಉದಾಹರಣೆಯಾಗಿದೆ. ಇಂದು ಕಛ್ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ ಎಂಬುದನ್ನು ನೋಡಲು ನನಗೆ ಹೆಮ್ಮೆ ಎನಿಸುತ್ತಿದೆ. ಕಛ್  ನ ಸಂಪರ್ಕವು ಸುಧಾರಿಸುತ್ತಿದೆ ಮತ್ತು ದೊಡ್ಡ ಕೈಗಾರಿಕೆಗಳು ಅಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುತ್ತಿವೆ. ಒಂದು ಕಾಲದಲ್ಲಿ ಕೃಷಿಯ ಬಗ್ಗೆ ಯೋಚಿಸುವುದು ಸಹ ಕಷ್ಟಕರವಾಗಿದ್ದಲ್ಲಿ, ಇಂದು ಕೃಷಿ ಉತ್ಪನ್ನಗಳನ್ನು ಕಛ್ ನಿಂದ ಜಗತ್ತಿಗೆ ರಫ್ತು ಮಾಡಲಾಗುತ್ತಿದೆ. ಈ ಪರಿವರ್ತನೆಯಲ್ಲಿ ನೀವೆಲ್ಲರೂ ದೊಡ್ಡ ಪಾತ್ರ ವಹಿಸಿದ್ದೀರಿ.

ಸಹೋದರ ಸಹೋದರಿಯರೇ,

ನಾರಾಯಣ್ ರಾಮ್ಜಿ ಲಿಂಬಾನಿ ಅವರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ. ಶ್ರೀ ಅಖಿಲ ಭಾರತೀಯ ಕಛ್ ಕಡ್ವಾ ಪಾಟೀದಾರ್ ಸಮಾಜವನ್ನು ಮುನ್ನಡೆಸುತ್ತಿರುವ ಅನೇಕ ಜನರೊಂದಿಗೆ ನಾನು ನಿಕಟ ಸಂಬಂಧವನ್ನು ಹೊಂದಿದ್ದೇನೆ. ಆದ್ದರಿಂದ, ನಾನು ಕಾಲಕಾಲಕ್ಕೆ ಈ ಸಮಾಜದ ಉಪಕ್ರಮಗಳು ಮತ್ತು ಅಭಿಯಾನಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಲೇ ಇರುತ್ತೇನೆ. ಕರೋನಾ ಬಿಕ್ಕಟ್ಟಿನ ಸಮಯದಲ್ಲಿಯೂ ನೀವೆಲ್ಲರೂ ಶ್ಲಾಘನೀಯ ಕೆಲಸ ಮಾಡಿದ್ದೀರಿ. ಸನಾತನ ಶತಾಬ್ದಿ ಆಚರಣೆಯ ಜೊತೆಗೆ, ನೀವು ಮುಂದಿನ 25 ವರ್ಷಗಳ ದೃಷ್ಟಿಕೋನ ಮತ್ತು ಸಂಕಲ್ಪಗಳನ್ನು ಸಹ ಮಂಡಿಸಿದ್ದೀರಿ ಎಂದು ನನಗೆ ಸಂತೋಷವಾಗಿದೆ. ದೇಶವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಮುಂದಿನ 25 ವರ್ಷಗಳ ನಿಮ್ಮ ಸಂಕಲ್ಪಗಳು ಈಡೇರುತ್ತವೆ. ಆರ್ಥಿಕತೆಯಿಂದ ತಂತ್ರಜ್ಞಾನದವರೆಗೆ, ಸಾಮಾಜಿಕ ಸಾಮರಸ್ಯದಿಂದ ಪರಿಸರಕ್ಕೆ ಮತ್ತು ನೈಸರ್ಗಿಕ ಕೃಷಿಯವರೆಗೆ ನೀವು ತೆಗೆದುಕೊಂಡ ನಿರ್ಣಯಗಳು ದೇಶದ 'ಅಮೃತ ' ನಿರ್ಣಯಗಳೊಂದಿಗೆ ಸಂಬಂಧ ಹೊಂದಿವೆ. ಶ್ರೀ ಅಖಿಲ ಭಾರತೀಯ ಕಛ್ ಕಡ್ವಾ ಸಮಾಜದ ಪ್ರಯತ್ನಗಳು ಈ ದಿಕ್ಕಿನಲ್ಲಿ ದೇಶದ ನಿರ್ಣಯಗಳಿಗೆ ಬಲ ನೀಡುತ್ತವೆ ಮತ್ತು ಅವುಗಳನ್ನು ಯಶಸ್ಸಿನತ್ತ ಕರೆದೊಯ್ಯುತ್ತವೆ ಎಂದು ನನಗೆ ವಿಶ್ವಾಸವಿದೆ. ಈ ಸ್ಫೂರ್ತಿಯೊಂದಿಗೆ, ನಾನು ಮತ್ತೊಮ್ಮೆ ನಿಮಗೆ ಶುಭ ಹಾರೈಸುತ್ತೇನೆ.

ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India-New Zealand elevate ties to strategic partnership; Scripts 2030 roadmap, $20bn investment & Indo-Pacific security

Media Coverage

India-New Zealand elevate ties to strategic partnership; Scripts 2030 roadmap, $20bn investment & Indo-Pacific security
NM on the go

Nm on the go

Always be the first to hear from the PM. Get the App Now!
...
Prime Minister condoles the passing of Father Amir of State of Qatar HH Sheikh Hamad bin Khalifa Al Thani
July 12, 2026

The Prime Minister, Shri Narendra Modi, has expressed deep grief over the passing of the Father Amir of the State of Qatar, HH Sheikh Hamad bin Khalifa Al Thani.

The Prime Minister described him as a visionary leader who led Qatar to great levels of development and prosperity. Shri Modi also remembered him as a true friend whom he had the honour of meeting during his visit to Qatar in February 2024.

The Prime Minister conveyed his sincere condolences to the Amir of Qatar, HH Sheikh Tamim bin Hamad Al Thani, the entire royal family and the people of Qatar.

The Prime Minister wrote on X;

“We deeply mourn the passing of Father Amir of State of Qatar, HH Sheikh Hamad bin Khalifa Al Thani. A visionary leader who led Qatar to great levels of development and prosperity, we remember him also as a true friend whom I had the honour of meeting during my last visit to Qatar in February 2024. I convey my sincere condolences to the Amir of Qatar, HH Sheikh Tamim bin Hamad Al Thani and the entire royal family and people of Qatar. May the departed soul rest in eternal peace.

@TamimBinHamad”