"ಗುಜರಾತ್‌ನ ಸ್ವಾಗತ್ ಉಪಕ್ರಮವು ಜನರ ಕುಂದುಕೊರತೆ ಪರಿಹರಿಸಲು ತಂತ್ರಜ್ಞಾನವನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತಿದೆ"
“ನಾನು ಕುರ್ಚಿಯ ಸಂಕೋಲೆಗಳ ಗುಲಾಮನಾಗುವುದಿಲ್ಲ. ನಾನು ಜನರ ನಡುವೆ ಇರುತ್ತೇನೆ ಮತ್ತು ಅವರಿಗಾಗಿ ಇರುತ್ತೇನೆ.
"ಸ್ವಾಗತ್ ಸುಲಭವಾಗಿ ಜೀವನ ನಡೆಸುವ ಮತ್ತು ಜನರಿಗೆ ಆಡಳಿತ ತಲುಪಿಸುವ ಪರಿಕಲ್ಪನೆಯ ಮೇಲೆ ನಿಂತಿದೆ"
" ನಾವು ಸ್ವಾಗತ್ ಮೂಲಕ ಗುಜರಾತ್ ಜನರಿಗೆ ಸೇವೆ ಸಲ್ಲಿಸಬಹುದು ಎಂಬುದೇ ನನಗೆ ಸಿಕ್ಕಿರುವ ದೊಡ್ಡ ಬಹುಮಾನ"
"ಆಡಳಿತವು ಹಳೆಯ ನಿಯಮಗಳು ಮತ್ತು ಕಾನೂನುಗಳಿಗೆ ಸೀಮಿತವಾಗಿಲ್ಲ. ಆದರೆ ನಾವೀನ್ಯತೆಗಳು ಮತ್ತು ಹೊಸ ಆಲೋಚನೆಗಳಿಂದ ಆಡಳಿತ ನಡೆಯುತ್ತದೆ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ"
“ಆಡಳಿತದ ಅನೇಕ ಪರಿಹಾರಗಳಿಗೆ ಸ್ವಾಗತ್ ಸ್ಫೂರ್ತಿಯಾಯಿತು. ಅನೇಕ ರಾಜ್ಯಗಳು ಈ ರೀತಿಯ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
“ಕಳೆದ 9 ವರ್ಷಗಳಲ್ಲಿ ದೇಶದ ತ್ವರಿತ ಅಭಿವೃದ್ಧಿಯಲ್ಲಿ “ಪ್ರಗತಿ” ತಂತ್ರಜ್ಞಾನ ದೊಡ್ಡ ಪಾತ್ರ ವಹಿಸಿದೆ. ಇದು ಸ್ವಾಗತ್ ಪರಿಕಲ್ಪನೆಯನ್ನು ಆಧರಿಸಿದೆ"

ನೀವು ನನ್ನೊಂದಿಗೆ ನೇರವಾಗಿ ಸಂವಹನ ನಡೆಸುತ್ತೀರಿ. ಹಳೆಯ ಸಮಯದ ಸ್ನೇಹಿತರನ್ನು ಭೇಟಿಯಾಗಲು ನನಗೆ ಸಾಧ್ಯವಾಗಿರುವುದು ನನ್ನ ಸೌಭಾಗ್ಯ. ಮೊದಲು ಮಾತನಾಡಲು ಯಾರಿಗೆ ಅವಕಾಶ ಸಿಗುತ್ತದೆ ಎಂದು ನೋಡೋಣ.

ಪ್ರಧಾನ ಮಂತ್ರಿ: ನಿಮ್ಮ ಹೆಸರೇನು?

ಫಲಾನುಭವಿ: ಸೋಲಂಕಿ ಭರತ್ ಭಾಯ್ ಬಚುಜಿ

ಪ್ರಧಾನ ಮಂತ್ರಿ : ನಾವು 'ಸ್ವಾಗತ್' ಅನ್ನು ಪ್ರಾರಂಭಿಸಿದಾಗ ನೀವು ಮೊದಲು ಬಂದಿದ್ದೀರಾ?

ಫಲಾನುಭವಿ ಭರತ್ ಭಾಯ್ : ಹೌದು ಸರ್, ಅಲ್ಲಿಗೆ ಬಂದವರಲ್ಲಿ ನಾನೂ ಒಬ್ಬನಾಗಿದ್ದೆ.

ಪ್ರಧಾನ ಮಂತ್ರಿ : ಹಾಗಾದರೆ ನಿಮಗೆ ಇದರ ಬಗ್ಗೆ ಹೇಗೆ ತಿಳಿಯಿತು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನೀವು ಏನನ್ನಾದರೂ ಹೇಳಬೇಕಾದರೆ, ನೀವು 'ಸ್ವಾಗತ್' ಗೆ ಹೋಗಬೇಕು ಎಂದು ನಿಮಗೆ ಹೇಗೆ ಅನಿಸಿತು?

ಫಲಾನುಭವಿ ಭರತ್ ಭಾಯ್: ಹೌದು ಸರ್, ಅದೇನೆಂದರೆ, ದಹೇಗಂ ತಹಸಿಲ್ ನಿಂದ ಸರ್ಕಾರಿ ವಸತಿ ಯೋಜನೆಯ ಒಂದು ವಾರದ ಕಾರ್ಯಾದೇಶವನ್ನು ನಾನು 20-11-2000 ರಂದು ಪಡೆದಿದ್ದೆ. ಆದರೆ ನಾನು ಮನೆಯ ನಿರ್ಮಾಣ ಕಾರ್ಯವನ್ನು ಪ್ಲಿಂತ್ ವರೆಗೆ ಕಟ್ಟಿದ್ದೇನೆ, ತದನಂತರ 9 ಇಂಚು ಅಥವಾ 14 ಇಂಚುಗಳ ಗೋಡೆಯನ್ನು ನಿರ್ಮಿಸಬೇಕೆ ಎಂಬ ಬಗ್ಗೆ ನನಗೆ ಯಾವುದೇ ಅನುಭವವಿರಲಿಲ್ಲ. ಆ ಸಮಯದಲ್ಲಿ, ಭೂಕಂಪ ಸಂಭವಿಸಿತು. ಹೀಗಾಗಿ ನಾನು ನಿರ್ಮಿಸುತ್ತಿರುವ ಮನೆ 9 ಇಂಚುಗಳ ಗೋಡೆಯೊಂದಿಗೆ ಉಳಿಯುತ್ತದೆಯೇ ಅಥವಾ ಇಲ್ಲವೇ ಎಂದು ನನಗೆ ಸ್ವಲ್ಪ ಆತಂಕವಿತ್ತು. ನಂತರ ನಾನು ಕಠಿಣ ಪರಿಶ್ರಮದಿಂದ 9 ಇಂಚುಗಳ ಬದಲು 14 ಇಂಚುಗಳ ಗೋಡೆಯನ್ನು ನಿರ್ಮಿಸಿದೆ. ಆದರೆ ನಾನು ಎರಡನೇ ವಾರದ ಕೆಲಸಕ್ಕಾಗಿ ಹಣವನ್ನು ಕೇಳಿದಾಗ, ವಿಭಾಗೀಯ ಅಧಿಕಾರಿ ನಾನು 9 ಇಂಚುಗಳ ಬದಲು 14 ಇಂಚುಗಳ ಗೋಡೆಯನ್ನು ನಿರ್ಮಿಸಿರುವುದರಿಂದ ಎರಡನೇ ವಾರದ ಹಣವನ್ನು ನನಗೆ ಪಾವತಿಸಲಾಗುವುದಿಲ್ಲ ಎಂದು ತಿಳಿಸಿದರು. ಮೊದಲ ವಾರ ನಾನು ಪಡೆದ 8,253 ರೂ.ಗಳನ್ನು ಬಡ್ಡಿ ಸಹಿತ ವಿಭಾಗೀಯ ಕಚೇರಿಗೆ ಜಮಾ ಮಾಡುವಂತೆಯೂ ಅವರು ನನಗೆ ಸೂಚಿಸಿದರು. ನಾನು ದೂರು ಹೊತ್ತು ಹಲವಾರು ಬಾರಿ ಜಿಲ್ಲಾ ಮತ್ತು ವಿಭಾಗೀಯ ಕಚೇರಿಗಳಿಗೆ ಅಲೆದಾಡಿದೆ, ಆದರೆ ನನ್ನ ಅಳಲನ್ನು ಯಾರೂ ಕೇಳಲಿಲ್ಲ. ನಾನು ಗಾಂಧಿನಗರ ಜಿಲ್ಲೆಗೆ ಹೋದಾಗ, ಅಲ್ಲಿನ ಅಧಿಕಾರಿಯೊಬ್ಬರು ನಾನು ಪ್ರತಿದಿನ ಕಚೇರಿಯನ್ನು ಏಕೆ ಅಲಯುತ್ತಿದ್ದೇನೆ ಎಂದು ಕೇಳಿದರು. ನನ್ನ ಸಮಸ್ಯೆಯ ಬಗ್ಗೆ ನಾನು ಅವರಿಗೆ ಹೇಳಿದೆ. ನಾನು 9 ಇಂಚುಗಳ ಬದಲು 14 ಇಂಚುಗಳ ಗೋಡೆಯನ್ನು ನಿರ್ಮಿಸಿದ್ದು, ಒಂದು ವಾರದಿಂದ ನನ್ನ ಕೆಲಸಕ್ಕೆ ನನಗೆ ಹಣ ನೀಡುತ್ತಿರಲಿಲ್ಲ. ನನಗೆ ಬೇರೆ ಯಾವುದೇ ಮನೆಯಿಲ್ಲ ಮತ್ತು ನನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ ಎಂದು ನಾನು ಅವರಿಗೆ ಹೇಳಿದೆ. ನಾನು ಹಲವಾರು ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದು, ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ನಾನು ಅವರಿಗೆ ತಿಳಿಸಿದೆ. ಆಗ ಆ ಅಧಿಕಾರಿ ನನಗೆ ಹೇಳಿದರು 'ಕಾಕಾ, ನೀವು ಒಂದು ಕೆಲಸ ಮಾಡಿ. ನೀವು ಮಾನ್ಯ ಶ್ರೀ ನರೇಂದ್ರಭಾಯಿ ಮೋದಿ ಅವರ ಸಚಿವಾಲಯಕ್ಕೆ ಹೋಗಿ, ಅಲ್ಲಿ ಪ್ರತಿ ತಿಂಗಳು ಗುರುವಾರ ಸ್ವಾಗತ್ ನಡೆಯುತ್ತದೆ ಎಂದರು'. ಮಾನ್ಯರೇ ಹೀಗಾಗಿ, ನಾನು ಸಚಿವಾಲಯವನ್ನು ತಲುಪಿದೆ ಮತ್ತು ನಾನು ನನ್ನ ದೂರನ್ನು ನೇರವಾಗಿ ನಿಮಗೆ ತಿಳಿಸಿದೆ. ನೀವು ನನ್ನ ಮಾತನ್ನು ಬಹಳ ತಾಳ್ಮೆಯಿಂದ ಕೇಳಿದ್ದೀರಿ ಮತ್ತು ಶಾಂತವಾಗಿ ಉತ್ತರಿಸಿದ್ದೀರಿ. ನೀವು ಸಂಬಂಧಪಟ್ಟ ಅಧಿಕಾರಿಗೆ ಆದೇಶಿಸಿದ ನಂತರ ನಾನು ಗೋಡೆಯನ್ನು 9 ಇಂಚುಗಳ ಬದಲು 14 ಇಂಚುಗಳಷ್ಟು ನಿರ್ಮಿಸಲು ನನ್ನ ಬಾಕಿಯನ್ನು ಪಡೆಯಲು ಪ್ರಾರಂಭಿಸಿದೆ. ಇಂದು ನಾನು ಆರು ಮಕ್ಕಳ ನನ್ನ ಕುಟುಂಬದೊಂದಿಗೆ ನನ್ನ ಸ್ವಂತ ಮನೆಯಲ್ಲಿ ಸಂತೋಷದಿಂದ ವಾಸಿಸುತ್ತಿದ್ದೇನೆ. ಹೀಗಾಗಿ ನಿಮಗೆ, ತುಂಬಾ ಧನ್ಯವಾದಗಳು. 

ಪ್ರಧಾನ ಮಂತ್ರಿ : ಭರತ್ ಭಾಯ್, ನಿಮ್ಮ ಮೊದಲ ಅನುಭವವನ್ನು ಕೇಳಿದ ನಂತರ ನನಗೆ ಹಳೆಯ ದಿನಗಳು ನೆನಪಿಗೆ ಬರುತ್ತಿವೆ. 20 ವರ್ಷಗಳ ನಂತರ ನಿಮ್ಮನ್ನು ಭೇಟಿ ಮಾಡುವ ಅವಕಾಶ ಇಂದು ನನಗೆ ಸಿಕ್ಕಿದೆ. ಕುಟುಂಬದ ಎಲ್ಲಾ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆಯೇ ಅಥವಾ ಅವರು ಏನು ಮಾಡುತ್ತಿದ್ದಾರೆ?

ಭರತ್ ಭಾಯ್: ಸರ್, ನನ್ನ ನಾಲ್ವರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ ಮತ್ತು ಉಳಿದ ಇಬ್ಬರು ಹೆಣ್ಣುಮಕ್ಕಳಿಗೆ ಇನ್ನೂ ಮದುವೆಯಾಗಿಲ್ಲ. ಅವರಿಗೆ ಇನ್ನೂ 18 ವರ್ಷ ವಯಸ್ಸಾಗಿಲ್ಲ.

ಪ್ರಧಾನ ಮಂತ್ರಿ : ನಿಮ್ಮ ಮನೆ ಇನ್ನೂ ಹಾಗೇ ಇದೆಯೇ ಅಥವಾ 20 ವರ್ಷಗಳಲ್ಲಿ ಅದು ತುಂಬಾ ಹಳೆಯದಾಗಿದೆಯೇ?

ಭರತ್ ಭಾಯ್: ಮಾನ್ಯರೆ, ಈ ಹಿಂದೆ ಛಾವಣಿಯಿಂದ ಮಳೆ ನೀರು ಸೋರುತ್ತಿತ್ತು. ನೀರಿನ ಸಮಸ್ಯೆಯೂ ಇತ್ತು. ಮೇಲ್ಛಾವಣಿಯು ಸಿಮೆಂಟ್ ನಿಂದ ನಿರ್ಮಿಸಿಲ್ಲದ ಕಾರಣ ದುರ್ಬಲವಾಗಿದೆ.

ಪ್ರಧಾನ ಮಂತ್ರಿ: ನಿಮ್ಮ ಅಳಿಯಂದಿರು ಒಳ್ಳೆಯವರೇ?

ಭರತ್ ಭಾಯ್ : ಮಾನ್ಯರೆ, ಅವರೆಲ್ಲರೂ ತುಂಬಾ ಒಳ್ಳೆಯವರು.

ಪ್ರಧಾನ ಮಂತ್ರಿ: ಸರಿ, ಸಂತೋಷವಾಗಿರಿ. ಆದರೆ ನೀವು ಸ್ವಾಗತ್ ಕಾರ್ಯಕ್ರಮದ ಬಗ್ಗೆ ಇತರರಿಗೆ ಹೇಳಿದ್ದೀರಾ ಅಥವಾ ಇತರ ಜನರನ್ನು ಅಲ್ಲಿಗೆ ಕಳುಹಿಸಿದ್ದೀರೋ ಅಥವಾ ಇಲ್ಲವೋ?

ಭರತ್ ಭಾಯ್ : ಮಾನ್ಯರೆ, ನಾನು ಈ ಕಾರ್ಯಕ್ರಮಕ್ಕೆ ಇತರರನ್ನೂ ಕಳುಹಿಸುತ್ತಿದ್ದೆ. ಮುಖ್ಯಮಂತ್ರಿ ನರೇಂದ್ರ ಭಾಯಿ ಮೋದಿ ಅವರು ನನಗೆ ತೃಪ್ತಿಕರವಾದ ಉತ್ತರವನ್ನು ನೀಡಿದರು ಮತ್ತು ನನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು ಮತ್ತು ನನ್ನ ಕೆಲಸವನ್ನು ನನಗೆ ತೃಪ್ತಿಯಾಗುವಂತೆ ಮಾಡಿಕೊಟ್ಟರು ಎಂದು ನಾನು ಆಗಾಗ್ಗೆ ಅವರಿಗೆ ಹೇಳುತ್ತಿದ್ದೆ. ಆದ್ದರಿಂದ, ನಿಮಗೆ ಯಾವುದೇ ಸಮಸ್ಯೆ ಇದ್ದರೆ, ನೀವು ಸ್ವಾಗತ್ ಕಾರ್ಯಕ್ರಮಕ್ಕೆ ಹೋಗಬಹುದು. ಮತ್ತು ನಿಮಗೆ ಯಾವುದೇ ಸಮಸ್ಯೆ ಇದ್ದರೆ, ನಾನು ನಿಮ್ಮೊಂದಿಗೆ ಬರುತ್ತೇನೆ ಮತ್ತು ನಿಮಗೆ ಕಚೇರಿಯನ್ನು ತೋರಿಸುತ್ತೇನೆ ಎಂದು ಹೇಳುತ್ತಿದ್ದೆ.

ಪ್ರಧಾನ ಮಂತ್ರಿ: ಸರಿ, ಭರತ್ ಭಾಯ್. ನನಗೆ ಸಂತೋಷವಾಗಿದೆ.

ಪ್ರಧಾನ ಮಂತ್ರಿ : ಮುಂದಿನ ವ್ಯಕ್ತಿ ಯಾರು?

ವಿನಯ್ ಕುಮಾರ್: ನಮಸ್ಕಾರ ಸರ್, ನಾನು ಚೌಧರಿ ವಿನಯ್ ಕುಮಾರ್ ಬಾಲುಭಾಯ್ ಮತ್ತು ನಾನು ತಾಪಿ ಜಿಲ್ಲೆಯ ವಾಘ್ಮೇರಾ ಗ್ರಾಮದವನು.

ಪ್ರಧಾನ ಮಂತ್ರಿ: ವಿನಯ್ ಭಾಯ್, ನಮಸ್ಕಾರ.

ವಿನಯ್ ಭಾಯ್: ನಮಸ್ಕಾರ ಸರ್.

ಪ್ರಧಾನ ಮಂತ್ರಿ : ಹೇಗಿದ್ದೀರಿ?

ವಿನಯ್ ಭಾಯ್: ಮಾನ್ಯರೆ, ನಿಮ್ಮ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ.

ಪ್ರಧಾನ ಮಂತ್ರಿ : ಈಗ ನಾವು ನಿಮ್ಮಂತಹ ಜನರನ್ನು 'ದಿವ್ಯಾಂಗರು' ಎಂದು ಕರೆಯುತ್ತೇವೆ ಎಂಬುದು ನಿಮಗೆ ಗೊತ್ತಾ? ನಿಮ್ಮ ಹಳ್ಳಿಯಲ್ಲಿಯೂ ಜನರು ನಿಮ್ಮ ಬಗ್ಗೆ ಗೌರವದಿಂದ ಅದೇ ಪದವನ್ನು ಬಳಸಬೇಕು.

ವಿನಯ್ ಭಾಯ್: ಹೌದು ಸರ್.

ಪ್ರಧಾನ ಮಂತ್ರಿ : ಆ ಸಮಯದಲ್ಲಿ ನೀವು ನಿಮ್ಮ ಹಕ್ಕುಗಳಿಗಾಗಿ ತುಂಬಾ ಕಷ್ಟಪಟ್ಟು ಹೋರಾಡಿದ್ದೀರಿ ಎಂಬುದು ನನಗೆ ಚೆನ್ನಾಗಿ ನೆನಪಿದೆ. ಆ ಸಮಯದಲ್ಲಿ ನಿಮ್ಮ ಹೋರಾಟ ಹೇಗಿತ್ತು ಮತ್ತು ನೀವು ಮುಖ್ಯಮಂತ್ರಿಗಳ ಬಳಿಗೆ ಹೋಗಿ ನಿಮ್ಮ ಹಕ್ಕುಗಳನ್ನು ಪಡೆದಿದ್ದೀರಿ ಎಂಬುದನ್ನು ಎಲ್ಲರಿಗೂ ಹೇಳಿ. ಅದನ್ನು ಎಲ್ಲರಿಗೂ ವಿವರಿಸಿ.

ವಿನಯ್ ಭಾಯ್ : ಮಾನ್ಯರೆ, ಆ ಸಮಯದಲ್ಲಿ ನನ್ನ ಮುಂದಿದ್ದ ಸಮಸ್ಯೆ ಸ್ವಾವಲಂಬಿಯಾಗುವುದಾಗಿತ್ತು. ಆ ಸಮಯದಲ್ಲಿ, ನಾನು ಅಲ್ಪಸಂಖ್ಯಾತ ಹಣಕಾಸು ಆಯೋಗದಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ನನ್ನ ಅರ್ಜಿಯನ್ನು ಅನುಮೋದಿಸಲಾಗಿತ್ತು ಆದರೆ ನನಗೆ ಸಮಯಕ್ಕೆ ಸರಿಯಾಗಿ ಚೆಕ್ ಸಿಗಲಿಲ್ಲ. ನಾನು ತುಂಬಾ ಅಸಮಾಧಾನಗೊಂಡಿದ್ದೆ. ಆಗ ನನ್ನ ಸ್ನೇಹಿತರೊಬ್ಬರು ಗಾಂಧಿನಗರದಲ್ಲಿ ನಡೆಯುವ ಸ್ವಾಗತ್ ಕಾರ್ಯಕ್ರಮಕ್ಕೆ ಹೋದರೆ ನನ್ನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು. ನಾನು ಅಲ್ಲಿಗೆ ಹೋಗಿ ನನ್ನ ಸಮಸ್ಯೆಯನ್ನು ಹೇಳಿಕೊಳ್ಳುವಂತೆ ನನಗೆ ತಿಳಿಸಿದರು. ಸರ್, ನಾನು ತಾಪಿ ಜಿಲ್ಲೆಯ ವಾಘ್ಮೇರಾ ಗ್ರಾಮದಿಂದ ಬಸ್ಸಿನಲ್ಲಿ ಗಾಂಧಿನಗರಕ್ಕೆ ಬಂದೆ ಮತ್ತು ನಿಮ್ಮ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡೆ. ನೀವು ನನ್ನ ಸಮಸ್ಯೆಯನ್ನು ಆಲಿಸಿದಿರಿ ಮತ್ತು ತಕ್ಷಣವೇ 39,245 ರೂ.ಗಳ ಚೆಕ್ ಅನ್ನು ಖಚಿತಪಡಿಸಿದ್ದೀರಿ. ಆ ಹಣದಿಂದ, ನಾನು 2008 ರಲ್ಲಿ ನನ್ನ ಮನೆಯಲ್ಲಿ ಜನರಲ್ ಸ್ಟೋರ್ ತೆರೆದೆ. ನಾನು ಆ ಅಂಗಡಿಯೊಂದಿಗೆ ನನ್ನ ಮನೆಯ ಖರ್ಚುವೆಚ್ಚಗಳನ್ನು ನಿಭಾಯಿಸುತ್ತೇನೆ. ಮಾನ್ಯರೆ, ನನ್ನ ಅಂಗಡಿ ತೆರೆದ ಎರಡು ವರ್ಷಗಳಲ್ಲಿ ನಾನು ಮದುವೆಯಾದೆ. ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಮತ್ತು ಅವರು ಇಂದು ಚೆನ್ನಾಗಿ ಓದುತ್ತಿದ್ದಾರೆ. ಹಿರಿಯ ಮಗಳು 8 ನೇ ತರಗತಿಯಲ್ಲಿದ್ದಾಳೆ ಮತ್ತು ಕಿರಿಯ ಮಗಳು 6 ನೇ ತರಗತಿಯಲ್ಲಿದ್ದಾಳೆ. ಮತ್ತು ಕುಟುಂಬವು ಇಂದು ಸ್ವಾವಲಂಬಿಯಾಗಿದೆ. ಮತ್ತು ಕಳೆದ ಎರಡು ವರ್ಷಗಳಿಂದ, ನಾನು ಅಂಗಡಿಯನ್ನು ನಡೆಸುವುದರ ಜೊತೆಗೆ ನನ್ನ ಹೆಂಡತಿಯೊಂದಿಗೆ ಕೃಷಿ ಮಾಡುತ್ತಿದ್ದೇನೆ. ಇಂದು ನಾನು ಉತ್ತಮ ಆದಾಯವನ್ನು ಗಳಿಸುತ್ತಿದ್ದೇನೆ.

ಪ್ರಧಾನ ಮಂತ್ರಿ: ವಿನಯ್ ಭಾಯ್, ನೀವು ಅಂಗಡಿಯಲ್ಲಿ ಏನು ಮಾರಾಟ ಮಾಡುತ್ತೀರಿ?

ವಿನಯ್ ಭಾಯ್: ನಾವು ಎಲ್ಲಾ ಆಹಾರ ಧಾನ್ಯಗಳು ಮತ್ತು ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತೇವೆ.

ಪ್ರಧಾನ ಮಂತ್ರಿ: ನಾವು ಸ್ಥಳೀಯತೆಗೆ ಧ್ವನಿಯಾಗಿ (ವೋಕಲ್ ಫಾರ್ ಲೋಕಲ್)ಗೆ ಒತ್ತು ನೀಡಿದಾಗ, ಸ್ಥಳೀಯ ಉತ್ಪನ್ನಗಳಿಗಾಗಿ ಧ್ವನಿಯಾಗಿ ಖರೀದಿಸಲು ಜನರು ನಿಮ್ಮ ಅಂಗಡಿಗೆ ಬರುತ್ತಾರೆಯೇ?

ವಿಜಯ್ ಭಾಯ್: ಹೌದು ಸರ್, ಅವರು ಧಾನ್ಯಗಳು, ಬೇಳೆಕಾಳುಗಳು, ಅಕ್ಕಿ, ಸಕ್ಕರೆ ಇತ್ಯಾದಿಗಳನ್ನು ಖರೀದಿಸಲು ಬರುತ್ತಾರೆ.

ಪ್ರಧಾನ ಮಂತ್ರಿ : ಈಗ ನಾವು 'ಶ್ರೀ ಅನ್ನ' ಅಭಿಯಾನವನ್ನು ನಡೆಸುತ್ತಿದ್ದೇವೆ. ಪ್ರತಿಯೊಬ್ಬರೂ ಸಿರಿಧಾನ್ಯಗಳು, ಜೋಳ ಇತ್ಯಾದಿಗಳನ್ನು ಸೇವಿಸಬೇಕು. ಶ್ರೀ ಅನ್ನವನ್ನು ನಿಮ್ಮ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತದೆಯೇ ಅಥವಾ ಇಲ್ಲವೇ?

ವಿನಯ್ ಭಾಯ್: ಹೌದು ಸರ್.

ಪ್ರಧಾನ ಮಂತ್ರಿ : ನೀವು ಇತರರಿಗೆ ಉದ್ಯೋಗ ಕೊಡುತ್ತೀರಾ ಅಥವಾ ನಿಮ್ಮ ಹೆಂಡತಿಯೊಂದಿಗೆ ಕೆಲಸ ಮಾಡುತ್ತೀರಾ?

ವಿನಯ್ ಭಾಯ್: ನಾವು ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ.

ಪ್ರಧಾನ ಮಂತ್ರಿ: ಸರಿ. ನೀವು ಕಾರ್ಮಿಕರ ಸೇವೆಗಳನ್ನು ಬಳಸಬೇಕು. ನಿಮ್ಮಿಂದ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ?

ವಿನಯ್ ಭಾಯ್: ಹೊಲಗಳಲ್ಲಿ ಕೆಲಸ ಮಾಡಲು ಸುಮಾರು 4-5 ಜನರಿಗೆ ಉದ್ಯೋಗ ಸಿಕ್ಕಿದೆ.

ಪ್ರಧಾನ ಮಂತ್ರಿ : ಈಗ ನಾವು ಡಿಜಿಟಲ್ ಪಾವತಿ ಮಾಡುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇವೆ. ನೀವು ಅಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡುತ್ತೀರಾ? ನೀವು ಮೊಬೈಲ್ ಫೋನ್ ಗಳ ಮೂಲಕ ಡಿಜಿಟಲ್ ವಹಿವಾಟು ನಡೆಸುತ್ತೀರಾ ಅಥವಾ ಕ್ಯೂಆರ್ ಕೋಡ್ ಇತ್ಯಾದಿಗಳನ್ನು ಬಳಸುತ್ತೀರಾ?

ವಿನಯ್ ಭಾಯ್: ಹೌದು ಸರ್, ಅನೇಕ ಜನರು ನನ್ನ ಅಂಗಡಿಗೆ ಬರುತ್ತಾರೆ, ಅವರು ನನ್ನ ಕ್ಯೂಆರ್ ಕೋಡ್ ಕೇಳುತ್ತಾರೆ ಮತ್ತು ನನ್ನ ಖಾತೆಗೆ ಹಣವನ್ನು ಹಾಕುತ್ತಾರೆ.

ಪ್ರಧಾನ ಮಂತ್ರಿ : ಅದು ಒಳ್ಳೆಯದು. ಅಂದರೆ ನಿಮ್ಮ ಹಳ್ಳಿಯಲ್ಲಿ ಎಲ್ಲವೂ ಲಭ್ಯವಿದೆ.

ವಿನಯ್ ಭಾಯ್: ಹೌದು ಸರ್. ಎಲ್ಲ ಸೌಲಭ್ಯಗಳೂ ಇವೆ.

ಪ್ರಧಾನ ಮಂತ್ರಿ : ವಿನಯ್ ಭಾಯ್, ನಿಮ್ಮ ವಿಶೇಷತೆಯೆಂದರೆ ನೀವು 'ಸ್ವಾಗತ್' ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ ಮತ್ತು ಇತರರಿಗೂ 'ಸ್ವಾಗತ್' ಕಾರ್ಯಕ್ರಮದಿಂದ ನೀವು ಪಡೆದ ಪ್ರಯೋಜನಗಳ ಬಗ್ಗೆ ಕೇಳುತ್ತಿರಬಹುದು. ನೀವು ಎಷ್ಟು ಧೈರ್ಯವನ್ನು ತೋರಿಸಿದ್ದೀರಿ ಎಂದರೆ ನೀವು ಮುಖ್ಯಮಂತ್ರಿಯ ಬಳಿಗೇ ಹೋಗಿದ್ದೀರಿ. ನೀವು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದೀರಿ ಎಂದು ತಿಳಿದಾಗ ಅವರು ನಿಮಗೆ ಕಿರುಕುಳ ನೀಡಿದ್ದಾರೆಯೇ?

ವಿನಯ್ ಭಾಯ್: ಹೌದು ಸರ್.

ಪ್ರಧಾನ ಮಂತ್ರಿ: ಅದರ ನಂತರ ಎಲ್ಲವೂ ಸರಿಯಾಯಿತೆ?

ವಿನಯ್ ಭಾಯ್: ಹೌದು ಸರ್.

ಪ್ರಧಾನ ಮಂತ್ರಿ: ಈಗ ವಿನಯ್ ಭಾಯ್ ಅವರು ಮುಖ್ಯಮಂತ್ರಿಯೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಹಳ್ಳಿಯಲ್ಲಿ ಹೆಮ್ಮೆ ಪಡುತ್ತಿರಬೇಕು. ನೀವು ಅದನ್ನು ಮಾಡುವುದಿಲ್ಲ. ನೀನು ಮಾಡುತ್ತೀರಾ?

ವಿನಯ್ ಭಾಯ್: ಇಲ್ಲ ಸರ್.

ಪ್ರಧಾನ ಮಂತ್ರಿ: ಓಕೆ ವಿನಯ್ ಭಾಯ್. ನಿಮಗೆ ಅನೇಕ ಅಭಿನಂದನೆಗಳು. ನಿಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಕೆಲಸವನ್ನು ನೀವು ಮಾಡಿದ್ದೀರಿ. ಅವರಿಗೆ ಉತ್ತಮ ಶಿಕ್ಷಣ ನೀಡಿ, ಸರಿ.

ಪ್ರಧಾನ ಮಂತ್ರಿ: ನಿಮ್ಮ ಹೆಸರೇನು?

ರಾಕೇಶ್ ಭಾಯ್ ಪಾರೇಖ್: ರಾಕೇಶ್ ಭಾಯ್ ಪಾರೇಖ್.

ಪ್ರಧಾನ ಮಂತ್ರಿ: ರಾಕೇಶ್ ಭಾಯ್ ಪಾರೇಖ್, ನೀವು ಸೂರತ್ ಜಿಲ್ಲೆಯಿಂದ ಬಂದಿದ್ದೀರಾ?

ರಾಕೇಶ್ ಭಾಯ್ ಪಾರೇಖ್: ಹೌದು, ನಾನು ಸೂರತ್ ನಿಂದ ಬಂದಿದ್ದೇನೆ.

ಪ್ರಧಾನ ಮಂತ್ರಿ : ನೀವು ಸೂರತ್ ನಲ್ಲಿ ವಾಸಿಸುತ್ತಿದ್ದೀರಾ ಅಥವಾ ಸೂರತ್ ಸುತ್ತಮುತ್ತ ಎಲ್ಲಿಯಾದರೂ ವಾಸಿಸುತ್ತಿದ್ದೀರಾ?

ರಾಕೇಶ್ ಭಾಯ್ ಪಾರೇಖ್: ನಾನು ಸೂರತ್ ನ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದೇನೆ.

ಪ್ರಧಾನ ಮಂತ್ರಿ : ಹೌದು, ನಿಮ್ಮ ಅನುಭವದ ಬಗ್ಗೆ ಹೇಳಿ.

ರಾಕೇಶ್ ಭಾಯ್ ಪಾರೇಖ್: 2006ರಲ್ಲಿ ರೈಲು ಯೋಜನೆಗಾಗಿ, ನಮ್ಮ ಕಟ್ಟಡವನ್ನು ನೆಲಸಮಗೊಳಿಸಲಾಯಿತು. ಇದು 8 ಅಂತಸ್ತಿನ ಕಟ್ಟಡವಾಗಿತ್ತು, ಅದರಲ್ಲಿ 32 ಫ್ಲ್ಯಾಟ್ ಗಳು ಮತ್ತು 8 ಅಂಗಡಿಗಳಿದ್ದವು. ಅದು ಶಿಥಿಲಗೊಂಡಿತ್ತು; ಈ ಕಾರಣದಿಂದಾಗಿ ಕಟ್ಟಡವನ್ನು ನೆಲಸಮ ಮಾಡಬೇಕಾಗಿತ್ತು. ಅದಕ್ಕೆ ಅನುಮತಿ ಇರಲಿಲ್ಲ. ನಾವು ನಿಗಮಕ್ಕೆ ಹೋದೆವು, ಆದರೆ ಅಲ್ಲೂ ನಮಗೆ ಅನುಮತಿ ನೀಡಲಿಲ್ಲ. ನಾವೆಲ್ಲರೂ ಒಗ್ಗೂಡಿದೆವು, ಆಗ ಸಮಯದಲ್ಲಿ ನರೇಂದ್ರ ಮೋದಿ ಸಾಹೇಬ್ ಮುಖ್ಯಮಂತ್ರಿ ಆಗಿದ್ದರು. ನಾನು ದೂರು ದಾಖಲಿಸಿದೆ. ನಾನು ಆ ಸಮಯದಲ್ಲಿ ಶ್ರೀ ಗ್ಯಾಂಬಿಟ್ ಅವರನ್ನು ಭೇಟಿಯಾದೆ. ನನ್ನ ದೂರನ್ನು ಸ್ವೀಕರಿಸಲಾಗಿದೆ ಮತ್ತು ಸಾಧ್ಯವಾದಷ್ಟು ಬೇಗ ನನ್ನನ್ನು ಕರೆಯಲಾಗುವುದು ಎಂದು ಅವರು ನನಗೆ ಹೇಳಿದರು. ನನಗೆ ಮನೆ ಇಲ್ಲ ಎಂದು ತಿಳಿದು ಅವರು ಅಸಮಾಧಾನಗೊಂಡಿರುವುದಾಗಿ ತಿಳಿಸಿದರು. ಮರುದಿನ ಅವರು ನನಗೆ ಕರೆ ಮಾಡಿದರು. ಸ್ವಾಗತ್ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಆ ಸಮಯದಲ್ಲಿ, ನೀವು ನನಗೆ ಅನುಮೋದನೆ ನೀಡಿದ್ದೀರಿ. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ನಾನು 1೦ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ನಂತರ ನಾವು ಅನುಮೋದನೆ ಪಡೆದೆವು. ನಾವು ಇಡೀ ಕಟ್ಟಡವನ್ನು ಮೊದಲಿನಿಂದ ನಿರ್ಮಿಸಿದ್ದೇವೆ. ನೀವು ಅದನ್ನು ವಿಶೇಷ ಪ್ರಕರಣವೆಂದು ಉಲ್ಲೇಖಿಸಿದ್ದೀರಿ ಮತ್ತು ತಕ್ಷಣ ಅನುಮೋದನೆ ನೀಡಿದ್ದೀರಿ. ನಾವು ಎಲ್ಲಾ ನಿವಾಸಿಗಳ ಸಭೆಯನ್ನು ಕರೆದು, ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಕಟ್ಟಡವನ್ನು ನಿರ್ಮಿಸಿದ್ದೇವೆ. ನಾವು ಮತ್ತೆ ಅದೇ ಕಟ್ಟಡದಲ್ಲಿ ವಾಸಿಸಲು ಪ್ರಾರಂಭಿಸಿದೆವು. ಎಲ್ಲಾ 32 ಕುಟುಂಬಗಳು ಮತ್ತು 8 ಅಂಗಡಿಯವರು ನಿಮಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 

ಪ್ರಧಾನ ಮಂತ್ರಿ : ಪರೇಖ್ ಜೀ, ನೀವು ನಿಮಗೆ ಮಾತ್ರವಲ್ಲ, 32 ಕುಟುಂಬಗಳಿಗೂ ಒಳ್ಳೆಯದನ್ನು ಮಾಡಿದ್ದೀರಿ. ಮತ್ತು ಇಂದು 32 ಕುಟುಂಬಗಳು ಸಂತೋಷದಿಂದ ಬದುಕುತ್ತಿವೆ. ಈ 32 ಕುಟುಂಬಗಳು ಹೇಗಿವೆ? ಅವರೆಲ್ಲರೂ ಸಂತೋಷವಾಗಿದ್ದಾರೆಯೇ?

ರಾಕೇಶ್ ಭಾಯ್ ಪಾರೇಖ್: ಎಲ್ಲರೂ ಸಂತೋಷವಾಗಿದ್ದಾರೆ, ಆದರೆ ನಾನು ಸ್ವಲ್ಪ ತೊಂದರೆಯಲ್ಲಿದ್ದೇನೆ, ಸರ್.

ಪ್ರಧಾನ ಮಂತ್ರಿ: ಎಲ್ಲರೂ ಒಟ್ಟಿಗೆ ವಾಸಿಸುತ್ತಾರೆಯೇ?

ರಾಕೇಶ್ ಭಾಯ್ ಪಾರೇಖ್: ಹೌದು, ಎಲ್ಲರೂ ಒಟ್ಟಿಗೆ ವಾಸಿಸುತ್ತಾರೆ.

ಪ್ರಧಾನ ಮಂತ್ರಿ : ನೀವು ಮತ್ತೆ ತೊಂದರೆಗೆ ಸಿಲುಕಿದ್ದೀರಾ?

ರಾಕೇಶ್ ಭಾಯ್ ಪಾರೇಖ್: ಹೌದು ಸರ್, ನನಗೆ ಏನಾದರೂ ಸಮಸ್ಯೆ ಇದ್ದರೆ ನಾನು ನಿಮ್ಮ ಬಂಗಲೆಯಲ್ಲಿ ಉಳಿಯಬಹುದು ಎಂದು ನೀವು ಆ ಸಮಯದಲ್ಲಿ ನನಗೆ ಹೇಳಿದ್ದಿರಿ. ಕಟ್ಟಡ ನಿರ್ಮಾಣವಾಗುವವರೆಗೂ ನಾನು ನಿಮ್ಮ ಬಂಗಲೆಯಲ್ಲಿ ಉಳಿಯಬಹುದು ಎಂದು ನೀವು ಹೇಳಿದ್ದೀರಿ. ಆದರೆ ಅಂತಿಮವಾಗಿ ಕಟ್ಟಡವನ್ನು ನಿರ್ಮಿಸುವವರೆಗೂ ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ಈಗ ನಾನು ನನ್ನ ಕುಟುಂಬದೊಂದಿಗೆ ಮನೆಯಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾನು ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಶಾಂತಿಯುತವಾಗಿ ವಾಸಿಸುತ್ತಿದ್ದೇನೆ.

ಪ್ರಧಾನ ಮಂತ್ರಿ: ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ?

ರಾಕೇಶ್ ಭಾಯ್ ಪಾರೇಖ್: ಒಬ್ಬ ಮಗ ಕೆಲಸ ಮಾಡುತ್ತಿದ್ದಾನೆ ಮತ್ತು ಇನ್ನೊಬ್ಬನು ಅಡುಗೆ ಕೆಲಸ ಮಾಡುತ್ತಿದ್ದಾನೆ. ಇದನ್ನು ಹೋಟೆಲ್ ಮ್ಯಾನೇಜ್ಮೆಂಟ್ ಎಂದು ಕರೆಯಲಾಗುತ್ತದೆ. ಅವರು ಮೂಲತಃ ಮನೆಯನ್ನು ನಡೆಸುತ್ತಿದ್ದಾರೆ. ಪಿಂಚ್ ನರದ ಸಮಸ್ಯೆಯಿಂದಾಗಿ ನಾನು ನೋವಿನಲ್ಲಿದ್ದೇನೆ ಮತ್ತು ನನಗೆ ಓಡಾಡಲು ಆಗುತ್ತಿಲ್ಲ. ನಾನು ಕಳೆದ ಒಂದೂವರೆ ವರ್ಷದಿಂದ ಬಳಲುತ್ತಿದ್ದೇನೆ.

ಪ್ರಧಾನ ಮಂತ್ರಿ : ಆದರೆ ನೀವು ಯೋಗ ಇತ್ಯಾದಿಗಳನ್ನು ಮಾಡುತ್ತೀರೋ ಇಲ್ಲವೋ?

ರಾಕೇಶ್ ಭಾಯ್ ಪಾರೇಖ್: ಹೌದು ಸರ್, ವ್ಯಾಯಾಮ ಇತ್ಯಾದಿಗಳು ನಡೆಯುತ್ತಿವೆ.

ಪ್ರಧಾನ ಮಂತ್ರಿ : ಶಸ್ತ್ರಚಿಕಿತ್ಸೆಗೆ ಆತುರಪಡುವ ಮೊದಲು ನೀವು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಈಗ ಆಯುಷ್ಮಾನ್ ಕಾರ್ಡ್ ಕೂಡ ಇದೆ. ನೀವು ಆಯುಷ್ಮಾನ್ ಕಾರ್ಡ್ ಮಾಡಿದ್ದೀರಾ? ಇದು ಐದು ಲಕ್ಷ ರೂಪಾಯಿಗಳವರೆಗಿನ ವೆಚ್ಚವನ್ನು ನೋಡಿಕೊಳ್ಳಬಹುದು. ಮತ್ತು ಗುಜರಾತ್ ಸರ್ಕಾರವು ಮಾ ಕಾರ್ಡ್ ಯೋಜನೆಯಂತಹ ಹಲವಾರು ಯೋಜನೆಗಳನ್ನು ಸಹ ಹೊಂದಿದೆ. ಅವುಗಳ ಲಾಭವನ್ನು ಪಡೆದುಕೊಳ್ಳಿ ಮತ್ತು ಸಮಸ್ಯೆಯನ್ನು ಶಾಶ್ವತವಾಗಿ ತೊಡೆದುಹಾಕಿ.

ರಾಕೇಶ್ ಭಾಯ್ ಪಾರೇಖ್: ಹೌದು ಸರ್.

ಪ್ರಧಾನ ಮಂತ್ರಿ : ನಿಮಗೆ ಈ ರೀತಿ ದಣಿಯುವಷ್ಟು ವಯಸ್ಸಾಗಿಲ್ಲ.

ಸರಿ ರಾಕೇಶ್ ಭಾಯ್, ನೀವು ಸ್ವಾಗತ್ ಮೂಲಕ ಅನೇಕ ಜನರಿಗೆ ಸಹಾಯ ಮಾಡಿದ್ದೀರಿ. ಪ್ರಜ್ಞಾವಂತ ನಾಗರಿಕನು ಇತರರಿಗೆ ಹೇಗೆ ಸಹಾಯ ಮಾಡಬಹುದು ಎಂಬುದಕ್ಕೆ ನೀವು ಉದಾಹರಣೆ. ನಮ್ಮ ಸರ್ಕಾರ ನಿಮ್ಮನ್ನು ಮತ್ತು ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುದು ನನಗೆ ಸಂತೋಷವಾಗಿದೆ. ವರ್ಷಗಳ ಹಿಂದೆ ಪರಿಹರಿಸಲಾದ ಸಮಸ್ಯೆಯಿಂದ, ಈಗ ನಿಮ್ಮ ಮಕ್ಕಳು ಸಹ ನೆಲೆ ನಿಲ್ಲುವಂತಾಗಿದೆ. ಎಲ್ಲರಿಗೂ ನನ್ನ ಶುಭ ಹಾರೈಕೆಗಳನ್ನು ತಿಳಿಸಿ. 

ಸ್ನೇಹಿತರೇ,

ಈ ವಿಚಾರ ವಿನಿಮಯದ ನಂತರ, ನಾವು ಸ್ವಾಗತ್ ಕಾರ್ಯಕ್ರಮವನ್ನು ಪ್ರಾರಂಭಿಸಿದ ಉದ್ದೇಶ ಬಹುಮಟ್ಟಿಗೆ ಯಶಸ್ವಿಯಾಗಿದೆ ಎಂಬ ತೃಪ್ತಿ ನನಗಿದೆ. ಈ ಕಾರ್ಯಕ್ರಮದ ಮೂಲಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುತ್ತಿರುವುದು ಮಾತ್ರವಲ್ಲ, ರಾಕೇಶ್ ಜಿ ಅವರಂತಹ ಜನರು ತಮ್ಮೊಂದಿಗೆ ನೂರಾರು ಕುಟುಂಬಗಳ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. ಸಾಮಾನ್ಯ ಜನರು ತಮ್ಮ ಅಭಿಪ್ರಾಯಗಳನ್ನು ತನ್ನೊಂಗೆ ಹಂಚಿಕೊಳ್ಳುವಂತೆ, ಅದನ್ನು ಸ್ನೇಹಿತನೆಂದು ಪರಿಗಣಿಸಿ ಪರಿಹರಿಸುವ ನಡೆವಳಿಕೆ ಸರ್ಕಾರಕ್ಕೆ ಇರಬೇಕು ಎಂದು ನಾನು ನಂಬುತ್ತೇನೆ. ಭೂಪೇಂದ್ರಭಾಯಿ ಅವರು ಕೂಡ ಇಂದು ನಮ್ಮೊಂದಿಗಿದ್ದಾರೆ ಎಂಬುದು ನನಗೆ ಸಂತೋಷವಾಗಿದೆ. ಜಿಲ್ಲೆಗಳಲ್ಲಿ ಕೆಲವು ಮಂತ್ರಿಗಳು ಮತ್ತು ಅಧಿಕಾರಿಗಳು ಇರುವುದನ್ನು ನಾನು ನೋಡಿದೆ. ಈಗ ಅನೇಕ ಹೊಸ ಮುಖಗಳಿವೆ. ನನಗೆ ಕೆಲವೇ ಜನರ ಪರಿಚಯವಿದೆ.

ಗುಜರಾತ್ ನ ಕೋಟ್ಯಂತರ ನಾಗರಿಕರ ಸೇವೆಗೆ ಸಮರ್ಪಿತವಾದ 'ಸ್ವಾಗತ್' 20 ವರ್ಷಗಳನ್ನು ಪೂರೈಸುತ್ತಿದೆ. ಮತ್ತು ಕೆಲವು ಫಲಾನುಭವಿಗಳಿಂದ ಹಳೆಯ ಅನುಭವಗಳನ್ನು ಕೇಳಲು ಮತ್ತು ಹಳೆಯ ನೆನಪುಗಳನ್ನು ಪುನರುಜ್ಜೀವಗೊಳಿಸಲು ನನಗೆ ಅವಕಾಶ ಸಿಕ್ಕಿತು. ಅನೇಕ ಜನರ ಅವಿರತ ಪ್ರಯತ್ನಗಳು ಮತ್ತು ನಿಷ್ಠೆ ಸ್ವಾಗತ್ ಯಶಸ್ಸಿನ ಹಿಂದೆ ಇದೆ. ಈ ಸಂದರ್ಭದಲ್ಲಿ, ನಾನು ಆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಯಾವುದೇ ವ್ಯವಸ್ಥೆಯು ಹುಟ್ಟಿದಾಗ ಅಥವಾ ಅದನ್ನು ಸಿದ್ಧಪಡಿಸಿದಾಗ, ಅದರ ಹಿಂದೆ ಒಂದು ದೃಷ್ಟಿ ಮತ್ತು ಉದ್ದೇಶವಿರುತ್ತದೆ. ಭವಿಷ್ಯದಲ್ಲಿ ಆ ವ್ಯವಸ್ಥೆಯು ಎಷ್ಟು ದೂರ ಕ್ರಮಿಸುತ್ತದೆ, ಅದರ ಹಣೆಬರಹ, ಅಂತಿಮ ಫಲಿತಾಂಶವು ಆ ಉದ್ದೇಶದಿಂದ ನಿರ್ಧರಿತವಾಗುತ್ತದೆ. ನಾನು 2003ರಲ್ಲಿ 'ಸ್ವಾಗತ್' ಆರಂಭಿಸಿದಾಗ, ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಬಹಳ ಸಮಯವಾಗಿರಲಿಲ್ಲ. ಅದಕ್ಕೂ ಮೊದಲು, ನನ್ನ ಬದುಕನ್ನು ಒಬ್ಬ ಕಾರ್ಯಕರ್ತನಾಗಿ, ಸಾಮಾನ್ಯ ಮನುಷ್ಯರ ನಡುವೆ ನಡೆಸುತ್ತಿದ್ದೆ. ಮುಖ್ಯಮಂತ್ರಿಯಾದ ನಂತರ, ಸಾಮಾನ್ಯವಾಗಿ ಹೇಳುವ ಮಾತು, ಅಧಿಕಾರ ಪಡೆದ ನಂತರ ಎಲ್ಲವೂ ಬದಲಾಗುತ್ತದೆ, ಜನರು ಸಹ ಬದಲಾಗುತ್ತಾರೆ. ನಾನು ಇದನ್ನು ಕೇಳುತ್ತಿದ್ದೆ. ಆದರೆ ಜನರು ನನ್ನನ್ನು ರೂಪಿಸಿದಂತೆಯೇ ನಾನು ಮುಂದುವರಿಯುತ್ತೇನೆ ಎಂದು ನಾನು ಮನಸ್ಸು ಮಾಡಿದ್ದೆ. ಅವರಿಂದ ನಾನು ಏನನ್ನು ಕಲಿತಿದ್ದೇನೆ, ಅವರಿಂದ ಪಡೆದ ಅನುಭವಗಳು, ನಾನು ಯಾವುದೇ ಸಂದರ್ಭದಲ್ಲೂ ಕುರ್ಚಿಯ ಒತ್ತಡಗಳಿಗೆ ಮಣಿದು ಗುಲಾಮನಾಗುವುದಿಲ್ಲ. ನಾನು ಜನರ ನಡುವೆ ವಾಸಿಸುತ್ತೇನೆ ಮತ್ತು ಜನರಿಗಾಗಿ ಕೆಲಸ ಮಾಡುತ್ತೇನೆ. ಈ ಸಂಕಲ್ಪದೊಂದಿಗೆ, ತಂತ್ರಜ್ಞಾನದ ಆನ್ವಯಿಕಗಳ ಮೂಲಕ ಕುಂದುಕೊರತೆಗಳ ಬಗ್ಗೆ ರಾಜ್ಯವ್ಯಾಪಿ ಗಮನ ಹರಿಸಲಾಯಿತು, ಅಂದರೆ 'ಸ್ವಾಗತ್' ಹುಟ್ಟಿಕೊಂಡಿತು. ಸ್ವಾಗತ್ ನ ಹಿಂದಿನ ಸ್ಫೂರ್ತಿ - ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಶ್ರೀಸಾಮಾನ್ಯನನ್ನು ಸ್ವಾಗತಿಸುವುದಾಗಿತ್ತು! ಸ್ವಾಗತ್ ನ ಹಿಂದಿನ ಸ್ಫೂರ್ತಿ - ಶಾಸನವನ್ನು ಸ್ವಾಗತಿಸಿ, ಪರಿಹಾರವನ್ನು ಸ್ವಾಗತಿಸಿ! ಎಂಬುದಾಗಿತ್ತು, ಮತ್ತು ಇಂದು, 20 ವರ್ಷಗಳ ನಂತರವೂ, ಸ್ವಾಗತದ ಅರ್ಥವೆಂದರೆ - ಜೀವನವನ್ನು ಸುಗಮಗೊಳಿಸುವುದು, ಆಡಳಿತದ ವ್ಯಾಪ್ತಿ! ಪ್ರಾಮಾಣಿಕ ಪ್ರಯತ್ನದ ಫಲವಾಗಿ, ಈ ಗುಜರಾತ್ ಮಾದರಿ ಆಡಳಿತವು ಇಡೀ ಜಗತ್ತಿನಲ್ಲಿ ತನ್ನದೇ ಆದ ಅಸ್ಮಿತೆಯಾಗಿ ಮಾರ್ಪಟ್ಟಿದೆ.  ಮೊದಲನೆಯದಾಗಿ, ಅಂತಾರಾಷ್ಟ್ರೀಯ ದೂರಸಂಪರ್ಕ ಸಂಸ್ಥೆ ಇದನ್ನು ಇ-ಪಾರದರ್ಶಕತೆ ಮತ್ತು ಇ-ಉತ್ತರದಾಯಿತ್ವದ ಅತ್ಯುತ್ತಮ ಉದಾಹರಣೆ ಎಂದು ಕರೆದಿದೆ. ನಂತರ ವಿಶ್ವಸಂಸ್ಥೆ ಕೂಡ ಸ್ವಾಗತ್ ಅನ್ನು ಶ್ಲಾಘಿಸಿದೆ. ಇದು ವಿಶ್ವಸಂಸ್ಥೆಯ ಪ್ರತಿಷ್ಠಿತ ಸಾರ್ವಜನಿಕ ಸೇವಾ ಪ್ರಶಸ್ತಿಯನ್ನು ಸಹ ಪಡೆಯಿತು. 2011 ರಲ್ಲಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಗುಜರಾತ್ ಇ-ಆಡಳಿತದಲ್ಲಿ ಭಾರತ ಸರ್ಕಾರದ ಸುವರ್ಣ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮತ್ತು ಈ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದೆ.

ಸಹೋದರ ಸಹೋದರಿಯರೇ,

ನನಗೆ, ಸ್ವಾಗತ್ ನ ಯಶಸ್ಸಿಗೆ ದೊಡ್ಡ ಪ್ರಶಸ್ತಿಯೆಂದರೆ, ಇದರ ಮೂಲಕ ನಾವು ಗುಜರಾತ್ ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂಬುದಾಗಿದೆ. ನಾವು ಸ್ವಾಗತ್ ಮೂಲಕ ಪ್ರಾಯೋಗಿಕ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದೇವೆ. ವಿಭಾಗ ಮತ್ತು ತಹಸೀಲ್ ಮಟ್ಟದಲ್ಲಿ ಸಾರ್ವಜನಿಕ ವಿಚಾರಣೆಗೆ ವ್ಯವಸ್ಥೆ ಮಾಡಲಾಯಿತು. ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಜವಾಬ್ದಾರಿಯನ್ನು ನೀಡಲಾಯಿತು. ಮತ್ತು, ರಾಜ್ಯ ಮಟ್ಟದಲ್ಲಿ, ನಾನು ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಮತ್ತು ನಾನು ಇದರಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ. ನಾನು ನೇರವಾಗಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆಗಳನ್ನು ನಡೆಸುತ್ತಿದ್ದಾಗ, ಕೆಳಸ್ತರದ ಜನರು ಸರ್ಕಾರದಿಂದ ಪ್ರಯೋಜನ ಪಡೆಯುತ್ತಿದ್ದಾರೆಯೇ ಅಥವಾ ಇಲ್ಲವೇ, ಪ್ರಯೋಜನಗಳು ಅವರಿಗೆ ತಲುಪುತ್ತಿವೆಯೇ ಅಥವಾ ಇಲ್ಲವೇ, ಸರ್ಕಾರದ ನೀತಿಗಳಿಂದಾಗಿ ಅವರು ಏನಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ, ಕೆಲವು ಸ್ಥಳೀಯ ಸರ್ಕಾರಿ ಅಧಿಕಾರಿಯ ಉದ್ದೇಶದಿಂದ ಅವರು ಅಸಮಾಧಾನಗೊಂಡಿದ್ದಾರೆಯೇ? ಯಾರಾದರೂ ಅವರಿಗೆ ಸಿಗಬೇಕಾದ್ದನ್ನು ಕಸಿದುಕೊಳ್ಳುತ್ತಿದ್ದಾರೆಯೇ ಇತ್ಯಾದಿಗಳ ಬಗ್ಗೆ ನಾನು ಬಹಳ ಸುಲಭವಾಗಿ ಪ್ರತಿಕ್ರಿಯೆಗಳನ್ನು ಪಡೆಯಲು ಪ್ರಾರಂಭಿಸಿದೆ.  ಸ್ವಾಗತ್ ನ ಅಧಿಕಾರ ಮತ್ತು ಖ್ಯಾತಿಯು ಎಷ್ಟು ಹೆಚ್ಚಾಯಿತೆಂದರೆ ಗುಜರಾತ್ ನ ಸಾಮಾನ್ಯ ನಾಗರಿಕನೂ ಸಹ ಹಿರಿಯ ಅಧಿಕಾರಿಯ ಬಳಿಗೆ ಹೋಗಬಹುದು. ಮತ್ತು ಅವರು ಕೇಳದಿದ್ದರೆ ಅಥವಾ ಅವರ ಕೆಲಸವನ್ನು ಮಾಡದಿದ್ದರೆ, ಸರಿ: 'ನೀವು ನನ್ನ ಮಾತನ್ನು ಕೇಳದಿದ್ದರೆ, ನಾನು ಸ್ವಾಗತ್ ಗೆ ಹೋಗುತ್ತೇನೆ' ಎಂದು ಹೇಳುತ್ತಿದ್ದರು. ಅವರು ಸ್ವಾಗತ್ ಗೆ ಹೋಗುವುದಾಗಿ ಹೇಳಿದ ತಕ್ಷಣ, ಅಧಿಕಾರಿಗಳು ತಕ್ಷಣ ಎದ್ದು ನಿಂತು ಅವರ ದೂರನ್ನು ಆಲಿಸುತ್ತಿದ್ದರು.

ಸ್ವಾಗತ್ ಅಂತಹ ಖ್ಯಾತಿಯನ್ನು ಗಳಿಸಿತ್ತು. ಸಾಮಾನ್ಯ ಜನರ ದೂರುಗಳು, ಸಮಸ್ಯೆಗಳು ಮತ್ತು ತೊಂದರೆಗಳ ಬಗ್ಗೆ ನಾನು ನೇರ ಮಾಹಿತಿಯನ್ನು ಪಡೆಯುತ್ತಿದ್ದೆ. ಮತ್ತು ಮುಖ್ಯವಾಗಿ, ಅವರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ನಾನು ಸಾಕಷ್ಟು ತೃಪ್ತಿಯನ್ನು ಪಡೆಯುತ್ತಿದ್ದೆ.  ಅದು ಇಲ್ಲಿಗೇ ನಿಲ್ಲಲಿಲ್ಲ. ಸ್ವಾಗತ್ ಕಾರ್ಯಕ್ರಮವು ತಿಂಗಳಿಗೊಮ್ಮೆ ನಡೆಯುತ್ತಿತ್ತು ಆದರೆ ಕೆಲಸವನ್ನು ತಿಂಗಳಾದ್ಯಂತ ಮಾಡಬೇಕಾಗಿತ್ತು ಏಕೆಂದರೆ ನೂರಾರು ದೂರುಗಳು ಬರುತ್ತಿದ್ದವು ಮತ್ತು ನಾನು ಅದನ್ನು ವಿಶ್ಲೇಷಿಸುತ್ತಿದ್ದೆ. ದೂರುಗಳು ಪದೇ ಪದೇ ಬರುತ್ತಿರುವ ಯಾವುದೇ ಇಲಾಖೆ ಇದೆಯೇ, ದೂರುಗಳು ಪದೇ ಪದೇ ಬರುತ್ತಿರುವ ಯಾವುದೇ ಅಧಿಕಾರಿ ಇದ್ದಾರೆಯೇ ಅಥವಾ ದೂರುಗಳಿಂದ ತುಂಬಿರುವ ಯಾವುದೇ ಪ್ರದೇಶವಿದೆಯೇ? ಇದು ನೀತಿಗಳಿಂದಾಗಿ ಆಗುತ್ತಿದೆಯೇ ಅಥವಾ ವ್ಯಕ್ತಿಯ ಉದ್ದೇಶದಿಂದ ಆಗುತ್ತಿದೆಯೇ? ನಾವು ಎಲ್ಲವನ್ನೂ ವಿಶ್ಲೇಷಿಸುತ್ತಿದ್ದೆವು. ಅಗತ್ಯವಿದ್ದರೆ, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನಾವು ನಿಯಮಗಳು ಮತ್ತು ನೀತಿಗಳನ್ನು ಬದಲಾವಣೆ ಮಾಡುತ್ತಿದ್ದೆವು. ಮತ್ತು ವ್ಯಕ್ತಿಯಿಂದಾಗಿ ಸಮಸ್ಯೆ ಇದ್ದರೆ, ನಾವು ಆ ವ್ಯಕ್ತಿಯನ್ನು ಸಹ ಸರಿಯಾಗಿ ನೋಡಿಕೊಳ್ಳುತ್ತಿದ್ದೆವು. ಇದರ ಪರಿಣಾಮವಾಗಿ, ಸ್ವಾಗತ್ ಸಾರ್ವಜನಿಕರಲ್ಲಿ ಅದ್ಭುತ ನಂಬಿಕೆಯನ್ನು ಸೃಷ್ಟಿಸಿತು. ಇದು ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಹಿಡಿಯುವ ಪ್ರಜಾಪ್ರಭುತ್ವದ ಯಶಸ್ಸನ್ನು ಅಳೆಯುವ ಅತಿದೊಡ್ಡ ಮಾನದಂಡವಾಗಿದೆ ಎಂದು ನಾನು ನಂಬುತ್ತೇನೆ. ಸಾರ್ವಜನಿಕ ವಿಚಾರಣೆಯ ವ್ಯವಸ್ಥೆ ಎಂದರೇನು ಮತ್ತು ಪರಿಹಾರದ ವ್ಯವಸ್ಥೆ ಯಾವುದು. ಇದು ಪ್ರಜಾಪ್ರಭುತ್ವದ ಪರೀಕ್ಷೆ. ಇಂದು ಸ್ವಾಗತ್ ಎಂಬ ಹೆಸರಿನ ಈ ಬೀಜವು ಇಷ್ಟು ದೊಡ್ಡ ಆಲದ ಮರವಾಗಿ ಬೆಳೆದಿರುವುದನ್ನು ನೋಡಿದಾಗ ನನಗೆ ಹೆಮ್ಮೆ ಮತ್ತು ಸಂತೃಪ್ತಿಯಾಗುತ್ತದೆ. ಆ ಸಮಯದಲ್ಲಿ ಸ್ವಾಗತ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಮತ್ತು ಪ್ರಧಾನಮಂತ್ರಿ ಕಚೇರಿಯಲ್ಲಿ ನೇಮಕಗೊಂಡಿದ್ದ ನನ್ನ ಹಳೆಯ ಸಹೋದ್ಯೋಗಿ ಎ.ಕೆ.ಶರ್ಮಾ ಅವರು ಇಂದು ಎಕನಾಮಿಕ್ ಟೈಮ್ಸ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು ಸ್ವಾಗತ್ ಬಗ್ಗೆ ಉತ್ತಮ ಲೇಖನವನ್ನು ಬರೆದಿದ್ದಾರೆ ಎಂಬುದು ನನಗೆ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ, ಅವರು ನನ್ನ ವೃತ್ತಿಗೆ ಸಹ ಸೇರಿಕೊಂಡಿದ್ದಾರೆ, ಅವರು ರಾಜಕೀಯಕ್ಕೆ ಪ್ರವೇಶಿಸಿದ್ದು, ಉತ್ತರ ಪ್ರದೇಶದಲ್ಲಿ ಸಚಿವರಾಗಿದ್ದಾರೆ, ಆದರೆ ಆ ಸಮಯದಲ್ಲಿ ಅವರು ಸರ್ಕಾರಿ ಅಧಿಕಾರಿಯಾಗಿ ಸ್ವಾಗತ್ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು.

ಸ್ನೇಹಿತರೇ,

ದಶಕಗಳಿಂದ, ನಮ್ಮ ದೇಶದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅದು ಯಥಾಸ್ಥಿತಿಯನ್ನು ಅನುಸರಿಸಬೇಕು ಎಂಬ ನಂಬಿಕೆ ಇತ್ತು. ಸರ್ಕಾರವನ್ನು ನಡೆಸುವವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಿದ್ದರು, ರಿಬ್ಬನ್ ಗಳನ್ನು ಕತ್ತರಿಸುತ್ತಿದ್ದರು ಮತ್ತು ದೀಪಗಳನ್ನು ಬೆಳಗಿಸುತ್ತಿದ್ದರು. ಆದರೆ ಗುಜರಾತ್ ಈ ವಿಧಾನವನ್ನು ಸ್ವಾಗತ್ ಮೂಲಕ ಬದಲಾಯಿಸಲು ಪ್ರಯತ್ನಿಸಿದೆ. ಆಡಳಿತವು ನಿಯಮಗಳು, ಕಾನೂನುಗಳು ಮತ್ತು ಯಥಾಸ್ಥಿತಿಗೆ ಮಾತ್ರ ಸೀಮಿತವಾಗಿಲ್ಲ ಎಂದು ನಾವು ಒತ್ತಿಹೇಳಿದ್ದೇವೆ. ಆಡಳಿತವು ಆವಿಷ್ಕಾರಗಳ ಮೂಲಕ ನಡೆಯುತ್ತದೆ! ಹೊಸ ಆಲೋಚನೆಗಳ ಮೂಲಕ ಆಡಳಿತವನ್ನು ಮಾಡಲಾಗುತ್ತದೆ! ಆಡಳಿತವು ನಿರ್ಜೀವ ವ್ಯವಸ್ಥೆಯಲ್ಲ. ಆಡಳಿತವು ಜೀವಂತ ವ್ಯವಸ್ಥೆಯಾಗಿದೆ, ಆಡಳಿತವು ಸೂಕ್ಷ್ಮ ವ್ಯವಸ್ಥೆಯಾಗಿದೆ ಮತ್ತು ಆಡಳಿತವು ಜನರ ಜೀವನ, ಕನಸುಗಳು ಮತ್ತು ಅವರ ನಿರ್ಣಯಗಳಿಗೆ ಸಂಬಂಧಿಸಿದ ಪ್ರಗತಿಪರ ವ್ಯವಸ್ಥೆಯಾಗಿದೆ.

2003 ರಲ್ಲಿ ಸ್ವಾಗತ್ ಪ್ರಾರಂಭವಾದಾಗ, ತಂತ್ರಜ್ಞಾನ ಮತ್ತು ಇ-ಆಡಳಿತಕ್ಕೆ ಸರ್ಕಾರಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿರಲಿಲ್ಲ. ಪ್ರತಿಯೊಂದು ಕೆಲಸಕ್ಕೂ ಕಡತಗಳನ್ನು ತಯಾರಿಸಲಾಗುತ್ತಿತ್ತು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಕಡತಗಳು ಎಲ್ಲಿ ಕಣ್ಮರೆಯಾಗುತ್ತವೆ ಎಂದು ಯಾರಿಗೂ ತಿಳಿದಿರಲಿಲ್ಲ. ಹೆಚ್ಚಾಗಿ, ಒಮ್ಮೆ ಅರ್ಜಿ ಸಲ್ಲಿಸಿದ ನಂತರ, ದೂರುದಾರರ ಉಳಿದ ಜೀವನವನ್ನು ಆ ಕಾಗದವನ್ನು ಹುಡುಕುವುದರಲ್ಲಿ ಕಳೆಯಲಾಗುತ್ತಿತ್ತು. ವೀಡಿಯೊ ಕಾನ್ಫರೆನ್ಸಿಂಗ್ ನಂತಹ ವ್ಯವಸ್ಥೆಗಳೊಂದಿಗೆ ಜನರು ಕಡಿಮೆ ಪರಿಚಿತರಾಗಿದ್ದರು. ಈ ಪರಿಸ್ಥಿತಿಯಲ್ಲಿ, ಗುಜರಾತ್ ಭವಿಷ್ಯದ ಆಲೋಚನೆಗಳ ಮೇಲೆ ಕೆಲಸ ಮಾಡಿತು. ಮತ್ತು ಇಂದು, ಸ್ವಾಗತ್ ನಂತಹ ವ್ಯವಸ್ಥೆಯು ಹಲವಾರು ಆಡಳಿತ ಪರಿಹಾರಗಳಿಗೆ ಸ್ಫೂರ್ತಿಯಾಗಿದೆ. ಅನೇಕ ರಾಜ್ಯಗಳು ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿವೆ. ಅನೇಕ ರಾಜ್ಯ ನಿಯೋಗಗಳು ಗುಜರಾತ್ ಗೆ ಬಂದು, ಅದನ್ನು ಅಧ್ಯಯನ ಮಾಡಿ ತಮ್ಮ ರಾಜ್ಯಗಳಲ್ಲಿ ಜಾರಿಗೆ ತರುತ್ತಿದ್ದವು ಎಂಬುದು ನನಗೆ ನೆನಪಿದೆ. ನೀವು ನನ್ನನ್ನು ದೆಹಲಿಗೆ ಕಳುಹಿಸಿದಾಗ, ಸರ್ಕಾರದ ಕಾರ್ಯವೈಖರಿಯನ್ನು ಪರಿಶೀಲಿಸಲು ನಾವು ಕೇಂದ್ರದಲ್ಲಿ 'ಪ್ರಗತಿ' ಎಂಬ ವ್ಯವಸ್ಥೆಯನ್ನು ಮಾಡಿದೆವು. ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಕ್ಷಿಪ್ರ ಅಭಿವೃದ್ಧಿಯ ಹಿಂದೆ ಪ್ರಗತಿ ಪ್ರಮುಖ ಪಾತ್ರ ವಹಿಸಿದೆ. ಈ ಪರಿಕಲ್ಪನೆಯು ಸ್ವಾಗತ್ ಕಲ್ಪನೆಯನ್ನು ಸಹ ಆಧರಿಸಿದೆ. ಪ್ರಧಾನ ಮಂತ್ರಿಯಾಗಿ ನಾನು ಪ್ರಗತಿ ಸಭೆಗಳಲ್ಲಿ ಸುಮಾರು 16 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಪರಾಮರ್ಶಿಸಿದ್ದೇನೆ. ಇದು ದೇಶದಲ್ಲಿ ನೂರಾರು ಯೋಜನೆಗಳನ್ನು ವೇಗಗೊಳಿಸಲು ಶ್ರಮಿಸಿದೆ. ಈಗ ಪ್ರಗತಿಯ ಪರಿಣಾಮ ಹೇಗಿದೆಯೆಂದರೆ, ಒಂದು ಯೋಜನೆಯನ್ನು ಪರಿಶೀಲನೆಗಾಗಿ ಪಟ್ಟಿ ಮಾಡಿದ ತಕ್ಷಣ, ಎಲ್ಲಾ ರಾಜ್ಯಗಳು ಅದಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ಕೊನೆಗೊಳಿಸುತ್ತವೆ, ಇದರಿಂದಾಗಿ ಅದು ನಿಜವಾಗಿಯೂ ವಿಮರ್ಶೆಗಾಗಿ ನನ್ನ ಬಳಿಗೆ ಬಂದಾಗ, ಅವರು ಅದನ್ನು ಎರಡು ದಿನಗಳ ಹಿಂದೆ ಮಾಡಲಾಗಿದೆ ಎಂದು ಹೇಳಬಹುದು.

ಸ್ನೇಹಿತರೇ,

ಒಂದು ಬೀಜವು ಒಂದು ಮರಕ್ಕೆ ಜನ್ಮ ನೀಡಿದಾಗ, ಆ ಮರದಿಂದ ನೂರಾರು ಕೊಂಬೆಗಳು ಹೊರಬರುತ್ತವೆ ಮತ್ತು ಸಾವಿರಾರು ಬೀಜಗಳು ಸಾವಿರಾರು ಹೊಸ ಮರಗಳಿಗೆ ಜನ್ಮ ನೀಡುತ್ತವೆ. ಅಂತೆಯೇ, ಸ್ವಾಗತ್ ನ ಈ ಕಲ್ಪನೆಯು ಆಡಳಿತದಲ್ಲಿ ಸಾವಿರಾರು ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತದೆ ಎಂಬ ಖಾತ್ರಿ ನನಗಿದೆ. ಇದು ಸಾರ್ವಜನಿಕ ಆಧಾರಿತ ಆಡಳಿತದ ಮಾದರಿಯಾಗುವ ಮೂಲಕ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ. ನಿಮ್ಮೆಲ್ಲರ ನಡುವೆ ಬರಲು ನೀವು ಮತ್ತೊಮ್ಮೆ ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನಾನು ನನ್ನ ಕೆಲಸದಲ್ಲಿ ಎಷ್ಟು ನಿರತನಾಗಿದ್ದೆ ಎಂದರೆ ಅದು 20 ವರ್ಷಗಳನ್ನು ಪೂರೈಸುತ್ತಿದೆ ಎಂಬುದು ನಿಮ್ಮ ಆಹ್ವಾನದ ಮೂಲಕವೇ ನನಗೆ ತಿಳಿಯಿತು. ಆದರೆ ಆಡಳಿತದ ಉಪಕ್ರಮವನ್ನು ಹೊಸ ಜೀವನ, ಹೊಸ ಪ್ರಜ್ಞೆಯನ್ನು ಪಡೆಯುವ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ನನಗೆ ಸಂತೋಷವಾಗಿದೆ.. ಈಗ ಸ್ವಾಗತ್ ಕಾರ್ಯಕ್ರಮವು ಹೆಚ್ಚು ಉತ್ಸಾಹ ಮತ್ತು ವಿಶ್ವಾಸಾರ್ಹತೆಯೊಂದಿಗೆ ಮುಂದುವರಿಯುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ. ಗುಜರಾತಿನ ನನ್ನ ಎಲ್ಲ ಪ್ರೀತಿಯ ಸಹೋದರ ಸಹೋದರಿಯರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ಮತ್ತು ಒಂದು ವಾರದ ನಂತರ, ಗುಜರಾತ್ ತನ್ನ ಸಂಸ್ಥಾಪನಾ ದಿನವನ್ನು ಮೇ 1 ರಂದು ಆಚರಿಸಲಿದೆ. ಮತ್ತು ಈಗಿರುವಂತೆ, ಗುಜರಾತ್ ಸಂಸ್ಥಾಪನಾ ದಿನವನ್ನು ಅಭಿವೃದ್ಧಿಯ ಅವಕಾಶವಾಗಿ ಪರಿವರ್ತಿಸುತ್ತದೆ ಮತ್ತು ಇದು ಅಭಿವೃದ್ಧಿಯ ಉತ್ಸವವಾಗಿರುತ್ತದೆ. ಸಿದ್ಧತೆಗಳು ಬಹಳ ಉತ್ಸಾಹದಿಂದ ನಡೆಯಬೇಕು. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು. ಅಭಿನಂದನೆಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India-EU FTA: A trade deal that redefines India’s global economic position

Media Coverage

India-EU FTA: A trade deal that redefines India’s global economic position
NM on the go

Nm on the go

Always be the first to hear from the PM. Get the App Now!
...
Text of PM’s address during during centenary celebrations of Arya Vaidya Sala Charitable Hospital in Kerala
January 28, 2026
Ayurveda in India has transcended time and region, guiding humanity to understand life, achieve balance and live in harmony with nature: PM
We have consistently focused on preventive health, the National AYUSH Mission was launched with this vision: PM
We must adapt to the changing times and increase the use of modern technology and AI in Ayurveda: PM


Shri Rajendra Arlekar, Governor of Kerala, all the dignitaries associated with Arya Vaidya Sala, ladies and gentlemen,

It is a pleasure for me to join you all on this solemn occasion. Arya Vaidyasala has played a significant role in preserving, protecting, and advancing Ayurveda. In its 125-year journey, this institution has established Ayurveda as a powerful system of treatment. On this occasion, I remember the contributions of Arya Vaidyasala's founder, Vaidyaratnam P.S. Varier. His approach to Ayurveda and his dedication to public welfare continue to inspire us.

Friends,

Arya Vaidyasala in Kerala is a living symbol of India's healing tradition, which has served humanity for centuries. Ayurveda in India has not been confined to any one era or region. Throughout time, this ancient system of medicine has shown the way to understand life, achieve balance, and live in harmony with nature. Today, Arya Vaidyasala manufactures over 600 Ayurvedic medicines. The organization's hospitals in various parts of the country treat patients using Ayurvedic methods, including those from over 60 countries around the world. Arya Vaidyasala has built this trust through its work. When people are in pain, all of you become a great source of hope for them.

Friends,

For Arya Vaidya Sala, service is not just an idea, this spirit is also visible in their action, approach and institutions. The Charitable Hospital of the organization has been continuously serving the people for the last 100 years, 100 years is not a small time, for 100 years. Everyone associated with the hospital has contributed in this. I also congratulate the Vaidyas, doctors, nursing staff and all others of the hospital. You all deserve congratulations for completing the 100 years journey of the Charitable Hospital. The people of Kerala have kept the traditions of Ayurveda alive for centuries. You are preserving and promoting those traditions as well.

Friends,

For a long time, ancient medical systems in the country were viewed in silos. Over the last 10-11 years, this approach has undergone a significant shift. Healthcare is now being viewed holistically. We have brought Ayurveda, Unani, Homeopathy, Siddha, and Yoga under one umbrella, and a Ministry of AYUSH has been specifically created for this purpose. We have consistently focused on preventive health. With this vision, the National AYUSH Mission was launched, and more than 12,000 AYUSH Wellness Centers were opened, providing yoga, preventive care, and community health services. We have also connected other hospitals in the country with AYUSH services and focused on the regular supply of AYUSH medicines. The objective is clear: to ensure that people in every corner of the country benefit from the knowledge of India's traditional medicine.

Friends,

The government's policies have clearly shown an impact on the AYUSH sector. The AYUSH manufacturing sector has grown rapidly and expanded. To promote Indian traditional wellness to the world, the government has established the AYUSH Export Promotion Council. Our effort is to promote AYUSH products and services in global markets. We are seeing its very positive impact. In the year 2014, AYUSH and herbal products worth approximately Rs 3 thousand crores were exported from India. Now, AYUSH and herbal products worth Rs 6500 crores are being exported from India. The farmers of the country are also getting huge benefits from this.

Friends,

Today, India is also emerging as a trusted destination for AYUSH-based medical value travel. Therefore, we have taken steps like the AYUSH Visa. This is providing better access to AYUSH medical facilities to people coming from abroad.

Friends,

To promote ancient medical systems like Ayurveda, the government is proudly showcasing it on every major platform. Whether it's the BRICS summit or the G-20 meeting, wherever I got the opportunity, I presented Ayurveda as a medium for holistic health. The World Health Organization (WHO)'s Global Traditional Medicine Centre is also being established in Jamnagar, Gujarat. The Institute of Teaching and Research in Ayurveda has started functioning in Jamnagar itself. To meet the growing demand for Ayurvedic medicines, medicinal farming is also being promoted on the banks of the river Ganga.

Friends,

Today, I want to share with you another achievement of the country. You all know that a historic trade agreement has just been announced with the European Union. I am happy to inform you that this trade agreement will provide a major boost to Indian traditional medicine services and practitioners. In EU member states where regulations do not exist, our AYUSH practitioners will be able to provide their services based on their professional qualifications acquired in India. This will greatly benefit our youth associated with Ayurveda and Yoga. This agreement will also help in establishing AYUSH wellness centers in Europe. I congratulate all of you associated with Ayurveda and AYUSH on this agreement.

Friends,

Ayurveda has been used for treatment in India for centuries. However, it is unfortunate that we have to explain the importance of Ayurveda to people, both in the country and abroad. A major reason for this is the lack of evidence-based research and research papers. When the Ayurvedic system is tested on the principles of science, people's faith is strengthened. Therefore, I am happy that Arya Vaidya Shala has continuously tested Ayurveda on the touchstone of science and research. It is working in collaboration with institutions like CSIR and IIT. Drug research, clinical research, and cancer care have also been your focus. Establishing a Centre of Excellence for Cancer Research, in collaboration with the Ministry of AYUSH, is an important step in this direction.

Friends,

Now, we must increase the use of modern technology and AI in Ayurveda to adapt to the changing times. Much innovation can be done to diagnose disease and develop different treatments.

Friends,

Arya Vaidya Shala has demonstrated that tradition and modernity can coexist, and that healthcare can become a foundation of trust in people's lives. This institution has adapted to modern needs while preserving the ancient wisdom of Ayurveda. Treatment has been streamlined and services have been made accessible to patients. I once again congratulate Arya Vaidya Shala on this inspiring journey. I wish that this institution continues to improve people's lives with the same dedication and spirit of service in the years to come. Thank you very much.