ಬೆಂಗಳೂರಿನ ವಾತಾವರಣ, ಇಲ್ಲಿನ ಪರಿಸರವು ತುಂಬಾ ವಿಶಿಷ್ಟವಾದುದು; ಈ ನಗರವು ಸಾಫ್ಟ್‌ವೇರ್ ಮತ್ತು ಸೇವೆಗಳಿಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ, ಆದರೆ ಈ ನಗರವು ಭಾರತದ ಸಾಂಸ್ಕೃತಿಕ ಕುರುಹು, ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ: ಪ್ರಧಾನಮಂತ್ರಿ
ಸೇವೆಯೇ ಪರಮೋ ಧರ್ಮ (ಸೇವೆಯೇ ಸರ್ವೋಚ್ಚ ಕರ್ತವ್ಯ), ಇದು ನಮ್ಮ ಸಮಾಜದ ಸಹಜ ಗುಣವಾಗಿದೆ: ಪ್ರಧಾನಮಂತ್ರಿ
ನಮ್ಮ ಸ್ವಚ್ಛ ಭಾರತ ಅಭಿಯಾನವು ಕೇವಲ ಸರ್ಕಾರದ ಕಾರ್ಯಕ್ರಮವಲ್ಲ, ಅದು ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ; ಈಗ, ಇದು ಸಮಾಜದ ಶಕ್ತಿಯಿಂದ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
ಮಾನಸಿಕವಾಗಿ ಶಾಂತವಾಗಿರುವ, ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರುವ ಮತ್ತು ಸಮಾಜದ ಬಗ್ಗೆ ಸಂವೇದನಾಶೀಲರಾಗಿರುವ ಯುವಕರಿಂದ ಮಾತ್ರ ವಿಕಸಿತ ಭಾರತದ ಸಾಕ್ಷಾತ್ಕಾರ ಸಾಧ್ಯ: ಪ್ರಧಾನಮಂತ್ರಿ

ಗೌರವಾನ್ವಿತ ಶ್ರೀ ಶ್ರೀ ರವಿಶಂಕರ್ ಜೀ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಸಂತರೇ, ಸಹೋದರ ಸಹೋದರಿಯರೇ, ಎಲ್ಲರಿಗೂ  ನಮಸ್ಕಾರ.

ಈ ಬೆಳಗ್ಗೆ ಬಹಳ ವಿಶೇಷವಾದ ಅನುಭವವನ್ನು ತಂದಿದೆ. ಮಕ್ಕಳ ವೇದ ಪಠಣಗಳೊಂದಿಗೆ ಸ್ವಾಗತ, ಶ್ರೀ ಗಣೇಶನ ದರ್ಶನ, ಶ್ರೀ ಶ್ರೀ ರವಿಶಂಕರ್ ಜಿ ಅವರ 70 ವರ್ಷಗಳು ಮತ್ತು ಆರ್ಟ್ ಆಫ್ ಲಿವಿಂಗ್‌ನ 45 ವರ್ಷಗಳು - ಇವು ನನ್ನ ನೆನಪಿನಲ್ಲಿ ಸದಾ ಉಳಿಯುವ ಕ್ಷಣಗಳು. ಈ ಅದ್ಭುತ ಆಚರಣೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.

ಈಗ ಗುರುದೇವ್ ಅನೇಕ ವಿಷಯಗಳನ್ನು ಹೇಳಿದರು. ಅವರು ನನ್ನನ್ನು ಹೊಗಳುತ್ತಿದ್ದಾರೆಂದು ನೀವು ಭಾವಿಸಬಹುದು, ಆದರೆ ಅವರು ನನಗೆ ಕೆಲಸ ನಿಯೋಜಿಸುತ್ತಿದ್ದಾರೆಂದು ನಾನು ಭಾವಿಸಿದೆ. ನನಗೆ ಧನ್ಯವಾದ ಹೇಳಲು ಸಾಧ್ಯವಿಲ್ಲ ಎಂದು ನೀವು ಸರಿಯಾಗಿ ಹೇಳಿದ್ದೀರಿ, ನಾನು ನಿಮಗೆ ಸೇರಿದವನು, ನಾನು ನಿಮ್ಮ ನಡುವೆ ಮತ್ತು ನಿಮಗಾಗಿ ಬಂದಿದ್ದೇನೆ ಮತ್ತು ನಾನು ಎಲ್ಲಿದ್ದರೂ ಅದು ನಿಮ್ಮಿಂದಲೇ. ಇಂದು ಗುರುದೇವ್ ಅವರ 70 ವರ್ಷಗಳ ಕಾರ್ಯಕ್ರಮ, ಆದರೆ ನಾನು ಕುಟುಂಬದ ಭಾಗವಾಗಿರುವುದರಿಂದ, ನಿಮ್ಮ ಶತಮಾನೋತ್ಸವ ಆಚರಣೆ ಬಂದಾಗ, ನಾನು ಮತ್ತೆ ಬರುತ್ತೇನೆ ಎಂದು ನಾನು ಬಹಿರಂಗವಾಗಿ ಹೇಳುತ್ತೇನೆ.

ಇಂದು ದೈವಿಕ ಮತ್ತು ಭವ್ಯವಾದ ಧ್ಯಾನ ಮಂದಿರವನ್ನು ಉದ್ಘಾಟಿಸಲಾಗಿದೆ. ಸಂಕಲ್ಪ ಸ್ಪಷ್ಟವಾದಾಗ ಮತ್ತು ಸೇವೆಯ ಮನೋಭಾವದಿಂದ ಕೆಲಸ ಮಾಡಿದಾಗ, ಪ್ರತಿಯೊಂದು ಪ್ರಯತ್ನವೂ ಆಹ್ಲಾದಕರ ಫಲಿತಾಂಶವನ್ನು ನೀಡುತ್ತದೆ. ಏನಾದರೂ ಆಗಲಿ ಅಥವಾ ಆಗದಿರಲಿ, ನಾವೆಲ್ಲರೂ ಕಮಲದ ನೆರಳಿನಲ್ಲಿದ್ದೇವೆ. ತಿಳುವಳಿಕೆ ಬೆಳೆದಂತೆ, ಚಪ್ಪಾಳೆ ತಟ್ಟುತ್ತಲೇ ಇರಿ. ಮತ್ತು ಗುರುದೇವರ ಆಶೀರ್ವಾದದೊಂದಿಗೆ, ಕಮಲದ ನೆರಳು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಧ್ಯಾನ ಮಂದಿರಕ್ಕಾಗಿ ಆರ್ಟ್ ಆಫ್ ಲಿವಿಂಗ್ ಕುಟುಂಬಕ್ಕೆ ನಾನು ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಬೆಂಗಳೂರಿನ ವಾತಾವರಣ ಸದಾ ವಿಶಿಷ್ಟವಾಗಿರುತ್ತದೆ. ಈ ನಗರವು ಸಾಫ್ಟ್‌ವೇರ್ ಮತ್ತು ಸೇವೆಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಜೊತೆಗೆ ಈ ನಗರವು ಭಾರತದ ಸಾಂಸ್ಕೃತಿಕ ಗುರುತು, ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಗೆ ಹೊಸ ಎತ್ತರವನ್ನು ನೀಡಿದೆ. ಯೋಗ, ಧ್ಯಾನ, ಪ್ರಾಣಾಯಾಮ ಸದಾ ಭಾರತದ ಸಂಪ್ರದಾಯಗಳ ಅವಿಭಾಜ್ಯ ಅಂಗಗಳಾಗಿವೆ. ಮತ್ತು ಗುರುದೇವ್ ಹೇಳಿದಂತೆ, ಇಂದು ಪ್ರಪಂಚದಾದ್ಯಂತ ಜನರು ಭಾರತದ ಈ ಆಧ್ಯಾತ್ಮಿಕ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದಾರೆ ಹಾಗು ಭಾರತದ ಅನೇಕ ಸಂಸ್ಥೆಗಳು ಈ ಪ್ರಾಚೀನ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದಿವೆ.

ಸ್ನೇಹಿತರೇ,

ಈ ಸ್ಫೂರ್ತಿಯಿಂದ ಶ್ರೀ ಶ್ರೀ ರವಿಶಂಕರ್ ಜೀ  45 ವರ್ಷಗಳ ಹಿಂದೆ ಆರ್ಟ್ ಆಫ್ ಲಿವಿಂಗ್‌ನ ಬೀಜವನ್ನು ಬಿತ್ತಿದರು. ಇಂದು ಅದು ಒಂದು ದೊಡ್ಡ ಆಲದ ಮರವಾಗಿ ನಮ್ಮ ಮುಂದೆ ನಿಂತಿದೆ. ಈ ಆಲದ ಮರದ ಸಾವಿರಾರು ಕೊಂಬೆಗಳು ಪ್ರಪಂಚದಾದ್ಯಂತ ಅಸಂಖ್ಯಾತ ಜನರ ಜೀವನವನ್ನು ಸ್ಪರ್ಶಿಸುತ್ತಿವೆ. ಮತ್ತು ನಾನು ಸರ್ಕಾರಿ ಕೆಲಸಕ್ಕಾಗಿ ವಿದೇಶಕ್ಕೆ ಹೋದಲ್ಲೆಲ್ಲಾ, ನಾನು ಸದಾ ನಿಮ್ಮೊಂದಿಗೆ ಸಂಪರ್ಕ ಹೊಂದಿದ ಯಾರನ್ನಾದರೂ ಭೇಟಿಯಾಗುತ್ತಿರುತ್ತೇನೆ.

ಸ್ನೇಹಿತರೇ,

ಭಾರತವು ವೈವಿಧ್ಯತೆಯಿಂದ ತುಂಬಿರುವ ದೇಶ. ಹಲವು ಭಾಷೆಗಳು, ಹಲವು ಸಂಪ್ರದಾಯಗಳು, ವಿಭಿನ್ನ ಪದ್ಧತಿಗಳು, ವಿಭಿನ್ನ ಪೂಜಾ ವಿಧಾನಗಳು - ಇದನ್ನೆಲ್ಲಾ ನಾವು ನೋಡಿದಾಗ, ನಮ್ಮ ಮನಸ್ಸಿನಲ್ಲಿ ಒಂದು ನೈಸರ್ಗಿಕ ಪ್ರಶ್ನೆ ಉದ್ಭವಿಸುತ್ತದೆ: ಈ ಎಲ್ಲಾ ಸುಂದರ ವೈವಿಧ್ಯತೆಗಳನ್ನು ಒಂದುಗೂಡಿಸುವ ಮೂಲಭೂತ ಅಂಶ ಯಾವುದು? ಉತ್ತರ - ತನಗಾಗಿ ಅಲ್ಲ, ಇತರರಿಗಾಗಿ ಬದುಕುವುದು. ನಮ್ಮ ಧರ್ಮಗ್ರಂಥಗಳು ಹೇಳುತ್ತವೆ: ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಂ. ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್. ಅಂದರೆ, ಇತರರಿಗೆ ಸೇವೆ ಸಲ್ಲಿಸುವುದು ಪುಣ್ಯ, ಮತ್ತು ನೋವನ್ನು ಉಂಟುಮಾಡುವುದು ಪಾಪ. ಸೇವೆಯೇ ಪರಮ ಧರ್ಮ, ಇದು ನಮ್ಮ ಸಮಾಜದ ಸಹಜ ಗುಣ. ಪೀಳಿಗೆಯಿಂದ ಪೀಳಿಗೆಗೆ, ಈ ಮೌಲ್ಯಗಳ ಪ್ರವಾಹವು ನಮ್ಮನ್ನು ರೂಪಿಸಿದೆ, ನಮಗೆ ಸ್ಫೂರ್ತಿ ನೀಡಿದೆ, ನಮಗೆ ಶಕ್ತಿ ತುಂಬಿದೆ. ಭಾರತದ ಅನೇಕ ಆಧ್ಯಾತ್ಮಿಕ ಚಳುವಳಿಗಳು ಅಂತಿಮವಾಗಿ ಮಾನವೀಯತೆಯ ಸೇವೆಯ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸಿಕೊಂಡಿವೆ. ಆರ್ಟ್ ಆಫ್ ಲಿವಿಂಗ್‌ನ ಪ್ರತಿಯೊಂದು ಪ್ರಯತ್ನದಲ್ಲೂ, ಈ ಸೇವಾ ಮನೋಭಾವವು ಪ್ರತಿಫಲಿಸುತ್ತದೆ ಎಂದು ನನಗೆ ಸಂತೋಷವಾಗಿದೆ. ಈಗ ತೋರಿಸಿರುವ ವೀಡಿಯೊ ಸೇವೆಯಿಂದ ತುಂಬಿತ್ತು, ಜನರ ಕಲ್ಯಾಣದಿಂದ ತುಂಬಿತ್ತು. ಆರ್ಟ್ ಆಫ್ ಲಿವಿಂಗ್‌ನ ಪ್ರಯಾಣದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಸ್ವಯಂಸೇವಕರಿಗೂ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಯಾವುದೇ ಅಭಿಯಾನವು ಯಶಸ್ವಿಯಾಗುವುದು ಸಮಾಜದ ಶಕ್ತಿ ಅದರೊಂದಿಗೆ ಸೇರಿದಾಗ ಮಾತ್ರ. ಆದ್ದರಿಂದ, ಪ್ರತಿಯೊಂದು ಪ್ರಮುಖ ಆಂದೋಲನಕ್ಕೂ/ಧ್ಯೇಯಕ್ಕೂ, ಸಮಾಜದ ಶಕ್ತಿಯನ್ನು ಜಾಗೃತಗೊಳಿಸುವುದು ಬಹಳ ಅವಶ್ಯಕ. ಸಮಾಜವು ರಾಜಕೀಯ ಮತ್ತು ಸರ್ಕಾರಗಳಿಗಿಂತ ಹೆಚ್ಚು ಶಕ್ತಿಶಾಲಿ ಎಂದು ನಾನು ಯಾವಾಗಲೂ ನಂಬಿದ್ದೇನೆ. ಮತ್ತು ಸಮಾಜವು ರಾಷ್ಟ್ರನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಯಾವುದೇ ಸರ್ಕಾರವು ಯಶಸ್ವಿಯಾಗಲು ಸಾಧ್ಯ. ಉದಾಹರಣೆಗೆ ನಮ್ಮ ಸ್ವಚ್ಛ ಭಾರತ ಅಭಿಯಾನವನ್ನು ತೆಗೆದುಕೊಳ್ಳಿ. ಇದು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ, ಇದು ಜನರ ಜೀವನದ ನೈಸರ್ಗಿಕ ಭಾಗವಾಗಿದೆ. ಇದು ಸಮಾಜದ ಶಕ್ತಿಯೊಂದಿಗೆ ಮುಂದುವರಿಯುತ್ತಿದೆ.

ಸ್ನೇಹಿತರೇ,

ಸಮಾಜವು ಸಕ್ರಿಯವಾದಾಗ, ದೇಶದ ದೊಡ್ಡ ಸವಾಲುಗಳಿಗೂ ಸಾಮೂಹಿಕ ಪರಿಹಾರಗಳನ್ನು ಕಾಣಬಹುದು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯಾವಾಗಲೂ ಸಮಾಜದ ಶಕ್ತಿಯನ್ನು ತನ್ನೊಂದಿಗೆ ಕೊಂಡೊಯ್ದಿರುವುದನ್ನು ನೋಡುವುದು ತುಂಬಾ ಆಹ್ಲಾದಕರವಾಗಿರುತ್ತದೆ. ಅಭಿವೃದ್ಧಿ-ಸಂಬಂಧಿತ ಕಾರ್ಯಕ್ರಮಗಳಲ್ಲಿ ನೀವು ಸಾಮಾಜಿಕ ವಿಧಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೀರಿ. ಅದು ಗಿಡ ನೆಡುವ ಅಭಿಯಾನಗಳಾಗಲಿ, ಗ್ರಾಮೀಣ ಸ್ಮಾರ್ಟ್ ವಿಲೇಜ್ ಕೇಂದ್ರಗಳಾಗಲಿ, ಮಹಿಳೆಯರು ಮತ್ತು ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸುವ ಕಾರ್ಯಕ್ರಮಗಳಾಗಲಿ ಅಥವಾ ಕೈದಿಗಳ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಅಭಿಯಾನಗಳಾಗಲಿ - ಈ ಎಲ್ಲಾ ಪ್ರಯತ್ನಗಳು ದೇಶ ಮತ್ತು ಸಮಾಜದ ಅಭಿವೃದ್ಧಿ ಪ್ರಯಾಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.

ಸ್ನೇಹಿತರೇ,

ಇಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರನ್ನೂ ನಾನು ಇನ್ನೊಂದು ವಿಷಯಕ್ಕಾಗಿ ಹೊಗಳಲೇಬೇಕು, ಅದು ಯುವ ಶಕ್ತಿಯ ಮೇಲೆ ಗಮನ ಕೇಂದ್ರೀಕರಿಸುವುದು. ಇಂದಿನ ಜಗತ್ತಿನಲ್ಲಿ, ದೊಡ್ಡ ಬದಲಾವಣೆಗಳು ಬಹಳ ವೇಗವಾಗಿ ನಡೆಯುತ್ತಿವೆ. ಪ್ರತಿದಿನ ವಿಜ್ಞಾನವು ಸಾಧ್ಯತೆಗಳ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ. ಹೊಸ ಆವಿಷ್ಕಾರಗಳು ಇಡೀ ಆರ್ಥಿಕತೆಯನ್ನು ಪರಿವರ್ತಿಸುತ್ತಿವೆ. ಭಾರತವು ಈ ಬದಲಾವಣೆಯಲ್ಲಿ ಭಾಗವಹಿಸುವುದಲ್ಲದೆ, ಅನೇಕ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. ನಮ್ಮ ಡಿಜಿಟಲ್ ಕ್ರಾಂತಿಯು ಭಾರತವನ್ನು ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ. ಇಂದು ಮೂಲಸೌಕರ್ಯವು ಅಭೂತಪೂರ್ವ ವೇಗದಲ್ಲಿ ಮತ್ತು ಭವಿಷ್ಯದ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ. ಭಾರತವು ಅತ್ಯಂತ ತ್ವರಿತ ಗತಿಯಲ್ಲಿ  ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ನಮ್ಮ ಯುವಜನರು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದ್ದಾರೆ. ದೇಶದ ಈ ಎಲ್ಲಾ ಸಾಧನೆಗಳಿಗೆ ದೊಡ್ಡ ಕಾರಣ ನಮ್ಮ ಯುವ ಜನರು ಮತ್ತು ಆರ್ಟ್ ಆಫ್ ಲಿವಿಂಗ್. ಇಂದಿನ ಆಧುನಿಕ ಯುಗದ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಗುರುದೇವ್ ಮತ್ತು ಆರ್ಟ್ ಆಫ್ ಲಿವಿಂಗ್ ಯುವಜನರಿಗೆ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆ.

ಸ್ನೇಹಿತರೇ,

ಇಂದು, ತಂತ್ರಜ್ಞಾನದಿಂದಾಗಿ, ದೂರದಲ್ಲಿ ಕುಳಿತಿರುವ ಜನರು ಕ್ಷಣಾರ್ಧದಲ್ಲಿ ಪರಸ್ಪರ ಸಂಪರ್ಕ ಸಾಧಿಸುತ್ತಿದ್ದಾರೆ. ಆದರೆ ನಾವು ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತಿರಲಿ ಅಥವಾ ಇಲ್ಲದಿರಲಿ, ನಾವು ನಮ್ಮೊಂದಿಗೆ ಸಂಪರ್ಕ ಸಾಧಿಸುವುದು ಅವಶ್ಯಕ. ಮತ್ತು ಬೀಜವನ್ನು ಬಿತ್ತುತ್ತಿರಲಿ, ಪೋಷಿಸುತ್ತಿರಲಿ ಅಥವಾ ಅದನ್ನು ಸಬಲೀಕರಣಗೊಳಿಸುತ್ತಿರಲಿ, ನಮ್ಮೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವು ಈ ಮಹಾನ್ ಸಂಪ್ರದಾಯದ ಮೂಲಕ ಸಾಧ್ಯ. ಮಾನಸಿಕವಾಗಿ ಶಾಂತ, ಸಾಮಾಜಿಕವಾಗಿ ಜವಾಬ್ದಾರಿಯುತ ಮತ್ತು ಸಮಾಜದ ಬಗ್ಗೆ ಸೂಕ್ಷ್ಮವಾಗಿರುವ ಯುವಜನರಿಂದ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲಾಗುತ್ತದೆ. ಅದಕ್ಕಾಗಿಯೇ ಆಧ್ಯಾತ್ಮಿಕ ಯೋಗಕ್ಷೇಮ, ಮಾನಸಿಕ ಆರೋಗ್ಯ, ಯೋಗ, ಧ್ಯಾನ ಮತ್ತು ಇತರ ಅಂತಹ ಸಂಸ್ಥೆಗಳ ಮೇಲೆ ಕೆಲಸ ಮಾಡುವ ನಿಮ್ಮ ಪ್ರಮುಖ ಚಟುವಟಿಕೆಗಳು ಬಹಳ ಮುಖ್ಯ. ಅಂತಹ ಸಂಸ್ಥೆಗಳು ಜನರಲ್ಲಿ ಸಂಪರ್ಕ, ಸೇರುವಿಕೆ ಮತ್ತು ಸಾಮೂಹಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬಲಪಡಿಸುತ್ತವೆ. ಅದೇ ಸಮಯದಲ್ಲಿ, ಅಂತಹ ಸಂಸ್ಥೆಗಳು ಜನರಿಗೆ ತಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡುತ್ತವೆ. ಇಂದು ಉದ್ಘಾಟನೆಗೊಂಡ ಧ್ಯಾನ ಮಂದಿರವು ಮುಂದಿನ ಪೀಳಿಗೆಗೆ, ಸಾವಿರಾರು ಜನರಿಗೆ ಶಾಂತಿ ಮತ್ತು ನೆಮ್ಮದಿ ನೀಡುವ  ಕೇಂದ್ರವಾಗಲಿದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ನೀವೆಲ್ಲರೂ ದೇಶ ಮತ್ತು ಸಮಾಜದತ್ತ ನಿಮ್ಮ ಕರ್ತವ್ಯಗಳನ್ನು ಚೆನ್ನಾಗಿ ಪೂರೈಸುತ್ತಿದ್ದೀರಿ. ಆದರೆ ನಾನು ನಿಮ್ಮ ನಡುವೆ ಬಂದಾಗಲೆಲ್ಲಾ, ಕೆಲವು ವಿನಂತಿಗಳನ್ನು ಮಾಡುವುದನ್ನು ನನಗೆ  ತಡೆಯಲು ಸಾಧ್ಯವಾಗುವುದಿಲ್ಲ. ಗುರುದೇವರು ನಾನು ಮಾತನಾಡುವ ಮೊದಲೇ ನಿಮ್ಮ ಒಂಬತ್ತು ವಿನಂತಿಗಳನ್ನು ಸ್ವೀಕರಿಸಲಾಗಿದೆ, ಆದ್ದರಿಂದ ಹೇಳಲು ಏನೂ ಉಳಿದಿಲ್ಲ, ಆದರೆ ಅಭ್ಯಾಸಗಳು ದೂರವಾಗುವುದಿಲ್ಲ ಎಂದು ಹೇಳಿದ್ದಾರೆ. ಭಾರತದ ಸಮಗ್ರ ಅಭಿವೃದ್ಧಿಗಾಗಿ, ಅನೇಕ ಹಂತಗಳಲ್ಲಿ ಸಾಮೂಹಿಕ ಪ್ರಯತ್ನಗಳು ಅಗತ್ಯವಿವೆ. ಆರ್ಟ್ ಆಫ್ ಲಿವಿಂಗ್‌ನಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬಹುದು ಮತ್ತು ಈ ರೂಪಾಂತರದ ಬಲವಾದ ರಕ್ಷಕರಾಗಬಹುದು. ನಿಮ್ಮಲ್ಲಿ ಅನೇಕರು ರೈತರು ಮತ್ತು ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಾರೆ. ಇಲ್ಲಿ ಚಲನಚಿತ್ರದಲ್ಲಿ ತೋರಿಸಿರುವಂತೆ, ರೈತರನ್ನು ನೈಸರ್ಗಿಕ ಕೃಷಿಯೊಂದಿಗೆ ಸಂಪರ್ಕಿಸಲು ಹೆಚ್ಚಿನ ಪ್ರಯತ್ನಗಳು ಬೇಕಾಗುತ್ತವೆ. ಇಂದು, ಅನಾರೋಗ್ಯದಲ್ಲೂ ಸಹ, ಜನರು ನೈಸರ್ಗಿಕ ಚಿಕಿತ್ಸೆಗಾಗಿ ಹುಡುಕುತ್ತಿದ್ದಾರೆ, ಆದ್ದರಿಂದ ನಮ್ಮ ಭೂಮಾತೆಗೂ  ನೈಸರ್ಗಿಕ ಚಿಕಿತ್ಸೆ ಬೇಕು. ರಾಸಾಯನಿಕ ಗೊಬ್ಬರಗಳು ನಮ್ಮ ಹೊಲಗಳನ್ನು, ನಮ್ಮ ಭೂಮಾತೆಯನ್ನು ಧ್ವಂಸಗೊಳಿಸಿವೆ. ನಮ್ಮ ಭೂಮಾತೆಯನ್ನು ರಾಸಾಯನಿಕಗಳಿಂದ ರಕ್ಷಿಸುವುದು ಕೂಡ ಆರ್ಟ್ ಆಫ್ ಲಿವಿಂಗ್ ಆಗಿದೆ. "ತಾಯಿಗಾಗಿ ಒಂದು ಗಿಡ" ಅಭಿಯಾನವನ್ನು ವಿಸ್ತರಿಸಲು ನೀವು ಹೆಚ್ಚಿನ ಶಕ್ತಿಯನ್ನು ನೀಡಬಹುದು. ಏಕೆಂದರೆ ಪರಿಸರವನ್ನು ರಕ್ಷಿಸುವುದು ಜೀವನ ಕಲೆಯೂ ಆಗಿದೆ. ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. "ಪ್ರತಿ ಹನಿಗೆ ಹೆಚ್ಚಿನ ಬೆಳೆ" ಮೂಲಕ, ರೈತರಿಗೆ ನೀರಿನ ಉತ್ತಮ ಬಳಕೆಯನ್ನು ಕಲಿಸಲಾಗುತ್ತಿದೆ. ನಿಮ್ಮ ಸಹಕಾರದೊಂದಿಗೆ, ಇನ್ನೂ ಉತ್ತಮ ಫಲಿತಾಂಶಗಳು ಬರುತ್ತವೆ. ಏಕೆಂದರೆ ಪ್ರತಿ ಹನಿ ನೀರನ್ನು ಉಳಿಸುವುದು ಕೂಡ ಆರ್ಟ್ ಆಫ್ ಲಿವಿಂಗ್ ಆಗಿದೆ. ಕೆಲವು ವಾರಗಳಲ್ಲಿ, ಮಾನ್ಸೂನ್ ಬರಲಿದೆ. ನೀರಿನ ಸಂರಕ್ಷಣೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಇದು ಸರಿಯಾದ ಸಮಯ. ಅದೇ ರೀತಿ, ವಿದ್ಯುತ್ ಉಳಿತಾಯ, ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತಪ್ಪಿಸುವುದು, ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದು - ಇವೆಲ್ಲವೂ ಆರ್ಟ್ ಆಫ್ ಲಿವಿಂಗ್ ಕೂಡ. ಇಂದು ದೇಶವು ಮಿಷನ್ ಲೈಫ್ ಅನ್ನು ಸಹ ಒತ್ತಿ ಹೇಳುತ್ತಿದೆ. ಇದು ಹೆಚ್ಚಿನ ಜವಾಬ್ದಾರಿ ಮತ್ತು ಅರಿವಿನೊಂದಿಗೆ ಜೀವನವನ್ನು ನಡೆಸುವ ಜೀವಂತ ಅಭಿಯಾನವಾಗಿದೆ. ಇದು ಪ್ರಕೃತಿಯೊಂದಿಗೆ ಸಮತೋಲನದಲ್ಲಿ ಸಾಗುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದನ್ನು ಬಯಸುತ್ತದೆ. ಮತ್ತು ನನ್ನ ಅಭಿಪ್ರಾಯದಲ್ಲಿ, ಮಿಷನ್ ಲೈಫ್ ಕೂಡ ಆರ್ಟ್ ಆಫ್ ಲಿವಿಂಗ್‌ನ ಒಂದು ಅಭಿವ್ಯಕ್ತಿಯಾಗಿದೆ. ಮುಂಬರುವ ದಿನಗಳಲ್ಲಿ, ನೀವು ಯಾವಾಗಲೂ ಮಾಡಿದಂತೆ ಆರ್ಟ್ ಆಫ್ ಲಿವಿಂಗ್‌ನ ವಿವಿಧ ಅಂಶಗಳನ್ನು ವಿಸ್ತರಿಸಲು ಮತ್ತು ಅಭಿವೃದ್ಧಿಪಡಿಸಲು ಮುಂದುವರಿಯುತ್ತೀರಿ ಎಂದು ನನಗೆ ವಿಶ್ವಾಸವಿದೆ. ಸಮಾಜದ ದೊಡ್ಡ ವರ್ಗವನ್ನು ಸಂಪರ್ಕಿಸಲು ನೀವು ಹೆಚ್ಚಿನ ಆದ್ಯತೆ ನೀಡುತ್ತೀರಿ ಮತ್ತು ನಾವು ಗುರುದೇವ್ ಅವರ ಶತಮಾನೋತ್ಸವವನ್ನು ಆಚರಿಸಿದಾಗ, ನಾವು ಈ ಎಲ್ಲಾ ಗುರಿಗಳನ್ನು ಪೂರೈಸುತ್ತೇವೆ. ಮತ್ತೊಮ್ಮೆ, ಶ್ರೀ ಶ್ರೀ ರವಿಶಂಕರ್ ಜಿ, ಗುರುದೇವ್ ಅವರಿಗೆ ನಾನು ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆರ್ಟ್ ಆಫ್ ಲಿವಿಂಗ್ ಕುಟುಂಬದ ಪ್ರತಿಯೊಬ್ಬ ಸ್ವಯಂಸೇವಕರನ್ನು ಅವರ ಸೇವಾ ಮನೋಭಾವ ಮತ್ತು ಸಮರ್ಪಣಾ ಮನೋಭಾವಕ್ಕಾಗಿ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮತ್ತೊಮ್ಮೆ, ನೀವು ನನಗೆ ನಿಮ್ಮೊಂದಿಗೆ ಬರಲು, ಈ ಪವಿತ್ರ ವಾತಾವರಣದಲ್ಲಿ ಕೆಲವು ಕ್ಷಣಗಳನ್ನು ಕಳೆಯಲು, ಕಮಲದ ನೆರಳಿನಲ್ಲಿ ಯೋಚಿಸಲು ಅವಕಾಶ ನೀಡಿದ್ದೀರಿ. ಇದಕ್ಕಾಗಿ, ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಜೈ ಗುರುದೇವ್.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PMAY-U Nears 1.25 Crore Homes: Top 10 States With The Highest PMAY-U Completion Rates

Media Coverage

PMAY-U Nears 1.25 Crore Homes: Top 10 States With The Highest PMAY-U Completion Rates
NM on the go

Nm on the go

Always be the first to hear from the PM. Get the App Now!
...
PM chairs 52nd PRAGATI Meeting
June 24, 2026
PM reviews four key infrastructure projects worth around ₹30,000 crore spanning four states across Road, Power, Industrial Corridor and Metro Rail sectors
PM emphasises use of PM GatiShakti National Master Plan and timely updation of project, utility and infrastructure data on the portal for efficient planning
PM asks Ministries and State Governments to resolve pending issues in a mission-mode manner and ensure close monitoring
PM reviews TB Mukt Bharat Abhiyan and emphasizes need to leverage latest digital technologies including AI
PM reviews grievances related to Cyber Crime and Digital Arrest and stresses timely action, coordinated response and e-Zero FIR registration mechanism

Prime Minister Shri Narendra Modi chaired the 52nd meeting of PRAGATI, the ICT-enabled, multi-modal platform aimed at fostering Pro-Active Governance and Timely Implementation, by seamlessly integrating efforts of the Central and State Governments, earlier today at Seva Teerth.

During the meeting, the Prime Minister reviewed four critical infrastructure projects across the Road, Power, Industrial Corridor and Metro Rail sectors, covering four States and costing around ₹30,000 crore. These projects, important for economic growth, regional connectivity, industrial development and public welfare, were reviewed with focus on timelines, inter-agency coordination, issue resolution and timely completion.

Prime Minister underlined that delays in infrastructure projects not only lead to cost escalation, but also deprive people and industries of timely benefits. He asked the concerned Ministries and State Governments to resolve pending issues in a mission-mode manner and ensure close monitoring at the highest level.

Prime Minister emphasised the use of PM GatiShakti National Master Plan for efficient planning and timely implementation of infrastructure projects. He also underlined the need for regular and timely updation of project details, utilities, infrastructure layers, clearances and other field-level information on the portal. He further emphasised that the platform must reflect the latest ground situation so that bottlenecks can be identified in advance, inter-agency coordination can be improved and decisions can be taken on the basis of reliable, real-time data.

Prime Minister reviewed TB Mukt Bharat Abhiyan and emphasised the need to leverage latest digital technologies including Artificial Intelligence. He suggested a team of NCC cadets and MY Bharat volunteers, for awareness, patient follow-up and community mobilisation.

Prime Minister also reviewed grievances related to Cyber Crime and Digital Arrest. He expressed concern over the rising misuse of digital platforms to defraud citizens and stressed that such matters require coordinated, sensitive and time-bound handling by all concerned agencies. He noted that citizens should not be made to run from one department or agency to another. He also emphasized the need for clear ownership, faster response, better coordination among law enforcement agencies, banks and digital platforms, and stronger public awareness campaigns.

Prime Minister observed that in cases involving cyber fraud, timely action is crucial to prevent financial loss and restore public confidence. He asked all stakeholders to work in close coordination to strengthen prevention, reporting, investigation and grievance redressal mechanisms. He also emphasised that States should work towards enabling e-Zero FIR mechanisms for faster registration and response in cyber fraud cases.