ಶತಮಾನಗಳಿಂದಲೂ, ಭಾರತ ಮತ್ತು ಭೂತಾನ್ ಅತ್ಯಂತ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹಂಚಿಕೊಂಡಿವೆ, ಮತ್ತು ಹಾಗಾಗಿಯೇ, ಈ ಮಹತ್ವದ ಸಂದರ್ಭದಲ್ಲಿ ಭಾಗವಹಿಸುವುದು ಭಾರತದ ಮತ್ತು ನನ್ನ ಬದ್ಧತೆಯಾಗಿತ್ತು, ಆದರೆ ಇಂದು, ನಾನು ಅತ್ಯಂತ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ: ಪ್ರಧಾನಮಂತ್ರಿ
ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಘೋರ ದುರ್ಘಟನೆಯು ಪ್ರತಿಯೊಬ್ಬರನ್ನೂ ಕಲಕಿದೆ, ನಮ್ಮ ತನಿಖಾ ಸಂಸ್ಥೆಗಳು ಈ ಪಿತೂರಿಯ ಆಳಕ್ಕಿಳಿಯಲಿವೆ, ಇದರ ಹಿಂದಿರುವ ಸೂತ್ರಧಾರರನ್ನು ಬಿಡುವುದಿಲ್ಲ, ಈ ಕೃತ್ಯಕ್ಕೆ ಕಾರಣರಾದ ಎಲ್ಲರನ್ನೂ ಕಾನೂನಿನ ಮುಂದೆ ತರಲಾಗುವುದು: ಪ್ರಧಾನಮಂತ್ರಿ
'ವಸುಧೈವ ಕುಟುಂಬಕಂ', ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ತನ್ನ ಪ್ರಾಚೀನ ಆದರ್ಶದಿಂದ ಭಾರತವು ಸ್ಫೂರ್ತಿ ಪಡೆಯುತ್ತದೆ, ನಾವು ಪ್ರತಿಯೊಬ್ಬರ ಸಂತೋಷಕ್ಕೂ ಒತ್ತು ನೀಡುತ್ತೇವೆ: ಪ್ರಧಾನಮಂತ್ರಿ
ಭೂತಾನ್ನ ಘನತೆವೆತ್ತ ದೊರೆಯವರು ಪ್ರಸ್ತಾಪಿಸಿದ "ಒಟ್ಟು ರಾಷ್ಟ್ರೀಯ ಸಂತೋಷ" ಎಂಬ ಪರಿಕಲ್ಪನೆಯು, ವಿಶ್ವಾದ್ಯಂತ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಒಂದು ಪ್ರಮುಖ ಮಾನದಂಡವಾಗಿದೆ: ಪ್ರಧಾನಮಂತ್ರಿ
ಭಾರತ ಮತ್ತು ಭೂತಾನ್ ಕೇವಲ ಗಡಿಗಳಿಂದ ಸಂಪರ್ಕ ಹೊಂದಿಲ್ಲ, ಅವು ಸಂಸ್ಕೃತಿಗಳಿಂದ ಬೆಸೆದುಕೊಂಡಿವೆ, ನಮ್ಮ ಸಂಬಂಧವು ಮೌಲ್ಯಗಳು, ಭಾವನೆಗಳು, ಶಾಂತಿ ಮತ್ತು ಪ್ರಗತಿಯ ಸಂಬಂಧವಾಗಿದೆ: ಪ್ರಧಾನಮಂತ್ರಿ
ಇಂದು, ಭೂತಾನ್ ವಿಶ್ವದ ಮೊದಲ ಇಂಗಾಲ-ಋಣಾತ್ಮಕ ದೇಶವಾಗಿ ಹೊರಹೊಮ್ಮಿದೆ, ಇದೊಂದು ಅಸಾಧಾರಣ ಸಾಧನೆಯಾಗಿದೆ: ಪ್ರಧಾನಮಂತ್ರಿ
ಭೂತಾನ್ ತಲಾ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಸ್ಥಾನ ಪಡೆದಿದೆ, ತನ್ನ 100% ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುತ್ತದೆ, ಈ ಸಾಮರ್ಥ್ಯವನ್ನು ವಿಸ್ತರಿಸುತ್ತಾ, ಇಂದು ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲಾಗುತ್ತಿದೆ: ಪ್ರಧಾನಮಂತ್ರಿ
ಸಂಪರ್ಕವು ಅವಕಾಶವನ್ನು ಸೃಷ್ಟಿಸುತ್ತದೆ, ಮತ್ತು ಅವಕಾಶವು ಸಮೃದ್ಧಿಯನ್ನು ತರುತ್ತದೆ, ಭಾರತ ಮತ್ತು ಭೂತಾನ್ ಶಾಂತಿ, ಸಮೃದ್ಧಿ ಮತ್ತು ಸಹಭಾಗಿತ್ವದ ಪ್ರಗತಿಯ ಪಥದಲ್ಲಿ ಮುನ್ನಡೆಯಲಿ: ಪ್ರಧಾನಮಂತ್ರಿ

ಭೂತಾನ್ ನ ಮಹಾರಾಜರವರೇ,
ನಾಲ್ಕನೇ ರಾಜರವರೇ,
ರಾಜಮನೆತನದ ಗೌರವಾನ್ವಿತ ಸದಸ್ಯರುಗಳೇ,
ಭೂತಾನ್ ನ ಪ್ರಧಾನಮಂತ್ರಿ ಅವರೇ,
ಇತರ ಗಣ್ಯರೇ,
ಮತ್ತು ಭೂತಾನ್ ನ ನನ್ನ ಸಹೋದರ ಸಹೋದರಿಯರೇ!

ಕುಜುಜಾಂಗ್ಪೋ ಲಾ! 

ಇಂದು ಭೂತಾನ್‌ ಗೆ, ಭೂತಾನ್ ರಾಜಮನೆತನಕ್ಕೆ ಮತ್ತು ವಿಶ್ವ ಶಾಂತಿಯಲ್ಲಿ ನಂಬಿಕೆ ಇಡುವ ಎಲ್ಲರಿಗೂ ಬಹಳ ಮುಖ್ಯವಾದ ದಿನ.

ಭಾರತ ಮತ್ತು ಭೂತಾನ್ ದೇಶಗಳು ಶತಮಾನಗಳಿಂದ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹಂಚಿಕೊಂಡಿವೆ. ಆದ್ದರಿಂದ, ಈ ಮಹತ್ವದ ಸಂದರ್ಭದಲ್ಲಿ ಭಾಗವಹಿಸುವುದು ಭಾರತ ಮತ್ತು ನನ್ನ ಬದ್ಧತೆಯಾಗಿತ್ತು.

ಆದರೆ, ಇಂದು ನಾನು ತುಂಬಾ ಅತ್ಯಂತ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭಯಾನಕ ಘಟನೆಯು ನಮ್ಮೆಲ್ಲರನ್ನೂ ತೀವ್ರವಾಗಿ ದುಃಖಿತರನ್ನಾಗಿ ಮಾಡಿದೆ. ಈ ನಷ್ಟ-ಕಷ್ಟಗಳನ್ನು ಅನುಭವಿಸಿದ ಕುಟುಂಬಗಳ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ರಾಷ್ಟ್ರವು ಅವರ ದುಃಖ ಮತ್ತು ಬೆಂಬಲದಲ್ಲಿ ಅವರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು ಮತ್ತು ಪ್ರಮುಖ ಅಧಿಕಾರಿಗಳೊಂದಿಗೆ ನಾನು ರಾತ್ರಿಯಿಡೀ ಸಂಪರ್ಕದಲ್ಲಿದ್ದೆ. ಚರ್ಚೆಗಳು ನಡೆಯುತ್ತಿದ್ದವು ಮತ್ತು ಮಾಹಿತಿಯ ತುಣುಕುಗಳನ್ನು ಒಟ್ಟುಗೂಡಿಸಲಾಗುತ್ತಿತ್ತು.

ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಬಿಡಲಾಗುವುದಿಲ್ಲ.

 

ಈ ಘಟನೆ ಸಂಭವಿಸಲು ಕಾರಣರಾಗಿರುವ ಎಲ್ಲ ಜವಾಬ್ದಾರಿಯುತರನ್ನು ನ್ಯಾಯದ ಪರಿಧಿ ಒಳಗೆ ಕರೆ ತರಲಾಗುವುದು.

ಸ್ನೇಹಿತರೇ,

ಇಂದು, ಒಂದೆಡೆ, ಗುರು ಪದ್ಮಸಂಭವ ಅವರ ಆಶೀರ್ವಾದದಡಿಯಲ್ಲಿ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವಕ್ಕಾಗಿ ನಾವು ಇಲ್ಲಿ ಒಟ್ಟುಗೂಡಿದ್ದೇವೆ, ಮತ್ತೊಂದೆಡೆ, ಭಗವಾನ್ ಬುದ್ಧನ ಪವಿತ್ರ ಪಿಪ್ರಾಹ್ವಾ ಅವಶೇಷಗಳನ್ನು ನಾವು ಪ್ರದರ್ಶನಕ್ಕೆ ಇಡುತ್ತೇವೆ. ಇದರೊಂದಿಗೆ, ನಾವು ನಾಲ್ಕನೇ ರಾಜ ಮಹಾರಾಜ ಅವರ 70ನೇ ಹುಟ್ಟುಹಬ್ಬವನ್ನು ಸಹ ಆಚರಿಸುತ್ತಿದ್ದೇವೆ.

ಈ ಘಟನೆ ಮತ್ತು ನಿಮ್ಮಲ್ಲಿ ಅನೇಕರ ಗೌರವಾನ್ವಿತ ಉಪಸ್ಥಿತಿಯು ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಬಲವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.

ಸ್ನೇಹಿತರೇ,

ಭಾರತದಲ್ಲಿ, ನಮ್ಮ ಪೂರ್ವಜರು ನಮಗೆ "ವಸುಧೈವ ಕುಟುಂಬಕಮ್" ಎಂದು ಕಲಿಸಿದರು, ಅಂದರೆ ಇಡೀ ಜಗತ್ತು ಒಂದೇ ಕುಟುಂಬ.

ನಾವು ಹೇಳುತ್ತೇವೆ - ಸರ್ವೇ ಭವಂತು ಸುಖಿನ್:, ಅಂದರೆ, ಈ ಭೂಮಿಯ ಮೇಲೆ ಎಲ್ಲರೂ ಸಂತೋಷವಾಗಿರಲಿ.

ನಾವು ಹೇಳುತ್ತೇವೆ-
ದ್ಯೌಃ ಶಾಂತಿಃ
ಅಂತರಿಕ್ಷಮ್ ಶಾಂತಿಃ
ಪೃಥಿವಿ ಶಾಂತಿಃ
ಆಪಃ ಶಾಂತಿಃ
ಓಷಧಯಃ ಶಾಂತಿಃ

ಅಂದರೆ, ವಿಶ್ವದಾದ್ಯಂತ, ಆಕಾಶದಲ್ಲಿ, ಬಾಹ್ಯಾಕಾಶದಲ್ಲಿ, ಭೂಮಿಯಲ್ಲಿ, ನೀರಿನಲ್ಲಿ, ಔಷಧಿಗಳಲ್ಲಿ, ಸಸ್ಯಗಳಲ್ಲಿ ಮತ್ತು ಎಲ್ಲಾ ಜೀವಿಗಳಲ್ಲಿ ಶಾಂತಿ ನೆಲೆಸಲಿ. ಈ ಮನೋಭಾವದಿಂದ, ಭಾರತ ಇಂದು ಭೂತಾನ್ ನಲ್ಲಿ ನಡೆಯುತ್ತಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಸೇರಿಕೊಂಡಿದೆ.

ಇಂದು, ಪ್ರಪಂಚದಾದ್ಯಂತದ ಸಂತರು ವಿಶ್ವ ಶಾಂತಿಗಾಗಿ ಒಟ್ಟಾಗಿ ಪ್ರಾರ್ಥಿಸುತ್ತಿದ್ದಾರೆ. ಮತ್ತು ಇದರಲ್ಲಿ 1.4 ಶತಕೋಟಿ ಭಾರತೀಯರ ಪ್ರಾರ್ಥನೆಗಳು ಸೇರಿವೆ.

ಹಲವರಿಗೆ ತಿಳಿದಿಲ್ಲದಿರಬಹುದು, ಆದರೆ ನನ್ನ ಜನ್ಮಸ್ಥಳವಾದ ವಡ್‌ ನಗರವು ಬಹಳ ಹಿಂದಿನಿಂದಲೂ ಬೌದ್ಧ ಪರಂಪರೆಯ ಪವಿತ್ರ ಕೇಂದ್ರವಾಗಿದೆ. ಮತ್ತು ನನ್ನ ಕೆಲಸದ ಸ್ಥಳವಾದ ವಾರಣಾಸಿಯು ಬೌದ್ಧ ಭಕ್ತಿಯ ಪೂಜ್ಯ ಸ್ಥಾನವೂ ಆಗಿದೆ. ಅದಕ್ಕಾಗಿಯೇ ಈ ಸಮಾರಂಭದ ಭಾಗವಾಗುವುದು ವಿಶೇಷ ಅರ್ಥವನ್ನು ಹೊಂದಿದೆ. ಈ ಶಾಂತಿಯ ದೀಪವು ಭೂತಾನ್ ಮತ್ತು ಪ್ರಪಂಚದಾದ್ಯಂತದ ಪ್ರತಿಯೊಂದು ಮನೆಗೂ ತನ್ನ ಬೆಳಕನ್ನು ಹರಡಲಿ ಎಂದು ನಾನು ಪ್ರಾರ್ಥಿಸುತ್ತೇನೆ.

 

ಸ್ನೇಹಿತರೇ,

ಭೂತಾನ್ ನ ನಾಲ್ಕನೇ ಮಹಾರಾಜ ಅವರ ಜೀವನವು ಬುದ್ಧಿವಂತಿಕೆ, ಸರಳತೆ, ಧೈರ್ಯ ಮತ್ತು ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆಯ ಸಂಯೋಜನೆಯಾಗಿದೆ.

ಅವರು ಕೇವಲ 16 ವರ್ಷ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ತಮ್ಮ ದೇಶಕ್ಕೆ ತಂದೆಯ ವಾತ್ಸಲ್ಯವನ್ನು ನೀಡಿದರು ಮತ್ತು ಅದನ್ನು ಒಂದು ಉತ್ತಮ ದೃಷ್ಟಿಕೋನದಿಂದ ಮುನ್ನಡೆಸಿದರು. ಅವರ 34 ವರ್ಷಗಳ ಆಳ್ವಿಕೆಯಲ್ಲಿ, ಅವರು ಭೂತಾನ್ ನ ಪರಂಪರೆ ಮತ್ತು ಅಭಿವೃದ್ಧಿ ಎರಡನ್ನೂ ಸಾಕಷ್ಟು ಮುಂದಕ್ಕೆ ಕೊಂಡೊಯ್ದರು.

ಭೂತಾನ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಸ್ಥಾಪಿಸುವಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸುವಲ್ಲಿ ಮಹಾರಾಜರು ನಿರ್ಣಾಯಕ ಪಾತ್ರ ವಹಿಸಿದರು.

ನೀವು ಪರಿಚಯಿಸಿದ "ಒಟ್ಟು ರಾಷ್ಟ್ರೀಯ ಸಂತೋಷ" ಎಂಬ ಕಲ್ಪನೆಯು ಇಂದು ಪ್ರಪಂಚದಾದ್ಯಂತ ಅಭಿವೃದ್ಧಿಯ ಪ್ರಮುಖ ಅಳತೆಯಾಗಿದೆ. ರಾಷ್ಟ್ರ ನಿರ್ಮಾಣವು ಜಿ.ಡಿ.ಪಿಯ ಬಗ್ಗೆ ಮಾತ್ರವಲ್ಲ, ಮಾನವೀಯತೆಯ ಯೋಗಕ್ಷೇಮದ ಬಗ್ಗೆಯೂ ಆಗಿದೆ ಎಂದು ನೀವು ತೋರಿಸಿದ್ದೀರಿ

ಸ್ನೇಹಿತರೇ,

ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸುವಲ್ಲಿ ಮಹಾರಾಜರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಹಾಕಿದ ಅಡಿಪಾಯದ ಮೇಲೆ ನಮ್ಮ ಎರಡು ದೇಶಗಳ ನಡುವಿನ ಬಾಂಧವ್ಯವು ಬೆಳೆಯುತ್ತಲೇ ಇದೆ.

ಎಲ್ಲಾ ಭಾರತೀಯರ ಪರವಾಗಿ, ನಾನು ಮಹಾರಾಜರವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ.

ಸ್ನೇಹಿತರೇ,

ಭಾರತ ಮತ್ತು ಭೂತಾನ್ ದೇಶಗಳು ಕೇವಲ ಗಡಿಗಳಿಂದ ಮಾತ್ರವಲ್ಲದೆ ಸಂಸ್ಕೃತಿಗಳಿಂದಲೂ ಸಂಪರ್ಕ ಹೊಂದಿವೆ. ನಮ್ಮ ಸಂಬಂಧವು ಮೌಲ್ಯಗಳು, ಭಾವನೆಗಳು, ಶಾಂತಿ ಮತ್ತು ಪ್ರಗತಿಯ ಸಂಬಂಧವಾಗಿದೆ.

2014ರಲ್ಲಿ ನಾನು ಪ್ರಧಾನಮಂತ್ರಿಯಾದಾಗ, ನನ್ನ ಮೊದಲ ವಿದೇಶ ಪ್ರವಾಸವು ಭೂತಾನ್‌ ಆಗಿತ್ತು. ಈಗಲೂ ಆ ನೆನಪುಗಳು ನನ್ನ ಹೃದಯವನ್ನು ಮುಟ್ಟುತ್ತವೆ. ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸ್ನೇಹವು ಹೆಚ್ಚಿನ ಆಳ ಮತ್ತು ಶಕ್ತಿಯನ್ನು ಹೊಂದಿದೆ. ಕಷ್ಟದ ಸಮಯದಲ್ಲಿ ನಾವು ಪರಸ್ಪರ ಬೆಂಬಲಿಸಿದ್ದೇವೆ, ನಾವು ಒಟ್ಟಿಗೆ ಸವಾಲುಗಳನ್ನು ಎದುರಿಸಿದ್ದೇವೆ ಮತ್ತು ಇಂದು, ನಾವು ಅಭಿವೃದ್ಧಿ ಮತ್ತು ಸಮೃದ್ಧಿಯತ್ತ ಮುನ್ನಡೆಯುತ್ತಿರುವಾಗ, ಈ ಬಾಂಧವ್ಯವು ಇನ್ನಷ್ಟು ಬಲಗೊಳ್ಳುತ್ತಿದೆ.

 

ಗೌರವಾನ್ವಿತ ಮಹಾರಾಜ ಅವರು ಭೂತಾನ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಭಾರತ ಮತ್ತು ಭೂತಾನ್ ದೇಶಗಳ ನಡುವಿನ ನಂಬಿಕೆ ಮತ್ತು ಅಭಿವೃದ್ಧಿಯ ಪಾಲುದಾರಿಕೆಯು ಇಡೀ ಪ್ರದೇಶಕ್ಕೆ ಮಾದರಿಯಾಗಿದೆ.

ಸ್ನೇಹಿತರೇ,

ಇಂದು, ನಮ್ಮ ಎರಡೂ ದೇಶಗಳು ವೇಗವಾಗಿ ಪ್ರಗತಿ ಹೊಂದುತ್ತಿರುವಾಗ, ನಮ್ಮ ಇಂಧನ ಪಾಲುದಾರಿಕೆಯು ಈ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತಿದೆ. ಭಾರತ-ಭೂತಾನ್ ಜಲವಿದ್ಯುತ್ ಪಾಲುದಾರಿಕೆಯ ಅಡಿಪಾಯವನ್ನು ಸಹ ಗೌರವಾನ್ವಿತ ನಾಲ್ಕನೇ ಮಹಾರಾಜರ ನೇತೃತ್ವದಲ್ಲಿ ಹಾಕಲಾಯಿತು.

ನಾಲ್ಕನೇ ಮಹಾರಾಜರವರು ಮತ್ತು ಐದನೇ ಮಹಾರಾಜರವರು , ಈ ಇಬ್ಬರೂ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರವನ್ನು ರಕ್ಷಿಸುವ ಕಲ್ಪನೆಯನ್ನು ಉತ್ತೇಜಿಸಿದ್ದಾರೆ. ಈ ದೃಷ್ಟಿಕೋನದಿಂದಾಗಿ, ಭೂತಾನ್ ವಿಶ್ವದ ಮೊದಲ ಇಂಗಾಲ-ಋಣಾತ್ಮಕ ದೇಶವಾಗಿದೆ - ಇದು ಅತ್ಯಂತ ಗಮನಾರ್ಹ ಸಾಧನೆ. ಇಂದು, ತಲಾ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭೂತಾನ್ ಕೂಡ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ.

ಸ್ನೇಹಿತರೇ,

ಭೂತಾನ್ ದೇಶವು ಪ್ರಸ್ತುತ ತನ್ನ 100% ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನದಿಂದ ಉತ್ಪಾದಿಸುತ್ತಿದೆ. ಈ ಪ್ರಗತಿಯನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ, ಇಂದು ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗುತ್ತಿದೆ. 1,000 ಮೆಗಾವ್ಯಾಟ್‌ ಗಿಂತ ಹೆಚ್ಚಿನ ಹೊಸ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ, ಇದು ಭೂತಾನ್ ನ ಜಲವಿದ್ಯುತ್ ಸಾಮರ್ಥ್ಯವನ್ನು ಸುಮಾರು 40% ಹೆಚ್ಚಿಸುತ್ತದೆ. ಇದರ ಜೊತೆಗೆ, ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಮತ್ತೊಂದು ಜಲವಿದ್ಯುತ್ ಯೋಜನೆಯ ಕೆಲಸವನ್ನೂ ಪುನರಾರಂಭಿಸಲಾಗುತ್ತಿದೆ.

ಮತ್ತು ನಮ್ಮ ಪಾಲುದಾರಿಕೆ ಜಲವಿದ್ಯುತ್‌ ಗೆ ಸೀಮಿತವಾಗಿಲ್ಲ. ನಾವು ಈಗ ಸೌರಶಕ್ತಿಯಲ್ಲಿ ಒಟ್ಟಾಗಿ ಪ್ರಮುಖ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಪ್ರಮುಖ ಒಪ್ಪಂದಗಳನ್ನು ಇಂದು ಮಾಡಿಕೊಳ್ಳಲಾಗಿದೆ.

ಸ್ನೇಹಿತರೇ,

ಇಂದು, ಇಂಧನ ಸಹಕಾರದ ಜೊತೆಗೆ, ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವತ್ತ ನಮ್ಮ ಗಮನವಿದೆ.

 

ನಮಗೆಲ್ಲರಿಗೂ ತಿಳಿದಿದೆ:

ಸಂಪರ್ಕವು ಅವಕಾಶವನ್ನು ಸೃಷ್ಟಿಸುತ್ತದೆ, 
ಮತ್ತು ಅವಕಾಶವು ಸಮೃದ್ಧಿಯನ್ನು ಸೃಷ್ಟಿಸುತ್ತದೆ.

ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಭೂತಾನ್ ನ ಗೆಲೆಫು ಮತ್ತು ಸ್ಯಾಮ್ಟ್ಸೆಯನ್ನು ಭಾರತದ ವ್ಯಾಪಕ ರೈಲು ಜಾಲಕ್ಕೆ ಸಂಪರ್ಕಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಮ್ಮೆ ಪೂರ್ಣಗೊಂಡ ನಂತರ, ಈ ಯೋಜನೆಯು ಭೂತಾನ್ ದೇಶದ ಕೈಗಾರಿಕೆಗಳು ಮತ್ತು ರೈತರಿಗೆ ಭಾರತದ ದೊಡ್ಡ ಮಾರುಕಟ್ಟೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತವೆ.

ಸ್ನೇಹಿತರೇ,

ರೈಲು ಮತ್ತು ರಸ್ತೆ ಸಂಪರ್ಕದ ಜೊತೆಗೆ, ನಾವು ಗಡಿ ಮೂಲಸೌಕರ್ಯದಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದೇವೆ.

ಗೆಲೆಫು ಮೈಂಡ್‌ ಫುಲ್‌ ನೆಸ್ ಸಿಟಿಯ ಬಗ್ಗೆ ಮಹಾರಾಜರವರ ಪರಿಕಲ್ಪನೆಯ ದೃಷ್ಟಿಕೋನಕ್ಕೆ ಭಾರತವು ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಇಂದು, ನಾನು ಮತ್ತೊಂದು ಪ್ರಮುಖ ಘೋಷಣೆಯನ್ನು ಮಾಡಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ, ಇಲ್ಲಿಗೆ ಬರುವ ಸಂದರ್ಶಕರು ಮತ್ತು ಹೂಡಿಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಪೂರಕವಾಗಿ ಭಾರತವು ಗೆಲೆಫು ಬಳಿ ವಿಶೇಷ ವಲಸೆ ಚೆಕ್‌ ಪಾಯಿಂಟ್ ಅನ್ನು ಸ್ಥಾಪಿಸಲಿದೆ.

ಸ್ನೇಹಿತರೇ,

ಭಾರತ ಮತ್ತು ಭೂತಾನ್‌ ದೇಶಗಳು ಪ್ರಗತಿ ಮತ್ತು ಸಮೃದ್ಧಿ ನಿಕಟ ಸಂಬಂಧ ಹೊಂದಿದೆ. ಈ ಉತ್ಸಾಹದಲ್ಲಿ, ಕಳೆದ ವರ್ಷ ಭಾರತ ಸರ್ಕಾರವು ಭೂತಾನ್ ನ ಪಂಚವಾರ್ಷಿಕ ಯೋಜನೆಯನ್ನು ಬೆಂಬಲಿಸಲು ಹತ್ತು ಸಾವಿರ ಕೋಟಿ ರೂಪಾಯಿಗಳ ಕೊಡುಗೆಯನ್ನು ಘೋಷಿಸಿತು. ಈ ಹಣವನ್ನು ರಸ್ತೆಗಳಿಂದ ಕೃಷಿಯವರೆಗೆ, ಹಣಕಾಸಿನಿಂದ ಆರೋಗ್ಯ ರಕ್ಷಣೆಯವರೆಗೆ, ಭೂತಾನ್ ಜನರ ಜೀವನ ಸುಲಭತೆಯನ್ನು ಸುಧಾರಿಸಲು ಸಹಾಯ ಮಾಡುವ ಎಲ್ಲಾ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ.

ಹಿಂದೆ, ಭೂತಾನ್ ಜನರಿಗೆ ಅಗತ್ಯ ವಸ್ತುಗಳ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.

ಮತ್ತು ಈಗ, ಯು.ಪಿ.ಐ ಪಾವತಿಗಳ ಲಭ್ಯತೆ ಭೂತಾನ್ ನಲ್ಲಿ ವಿಸ್ತರಿಸುತ್ತಿದೆ. ಭೂತಾನ್ ನಾಗರಿಕರು ಭಾರತಕ್ಕೆ ಭೇಟಿ ನೀಡಿದಾಗ ಯುಪಿಐ ಪ್ರವೇಶವನ್ನು ಹೊಂದುವಂತೆ ನಾವು ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೇ,

ಭಾರತ ಮತ್ತು ಭೂತಾನ್ ನಡುವಿನ ಬಲವಾದ ಪಾಲುದಾರಿಕೆಯ ಅತಿದೊಡ್ಡ ಫಲಾನುಭವಿಗಳಲ್ಲಿ ನಮ್ಮ ಯುವಕರು ಸೇರಿದ್ದಾರೆ. ರಾಷ್ಟ್ರೀಯ ಸೇವೆ, ಸ್ವಯಂಸೇವಾ ಕಾರ್ಯಕ್ರಮಗಳು ಮತ್ತು ನಾವೀನ್ಯತೆಗಳಲ್ಲಿ ಮಹಾರಾಜ ಅವರು ಅತ್ಯುತ್ತಮ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಯುವಜನರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ತಂತ್ರಜ್ಞಾನದಿಂದ ಸಜ್ಜುಗೊಳಿಸುವ ಅವರ ಪರಿಕಲ್ಪನೆಯ ದೃಷ್ಟಿಕೋನವು ಭೂತಾನ್ ನ ಯುವಕರಿಗೆ ಗಮನಾರ್ಹ ರೀತಿಯಲ್ಲಿ ಸ್ಫೂರ್ತಿ ನೀಡುತ್ತಿದೆ.

ಭಾರತ ಮತ್ತು ಭೂತಾನ್ ನ ಯುವಕರ ನಡುವಿನ ಸಹಕಾರವು ಶಿಕ್ಷಣ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ, ಕ್ರೀಡೆ, ಬಾಹ್ಯಾಕಾಶ ಮತ್ತು ಸಂಸ್ಕೃತಿಯಂತಹ ಹಲವು ಕ್ಷೇತ್ರಗಳಲ್ಲಿ ವಿಸ್ತರಿಸುತ್ತಿದೆ. ಇಂದು, ನಮ್ಮ ಯುವಜನರು ಉಪಗ್ರಹವನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಎರಡೂ ರಾಷ್ಟ್ರಗಳಿಗೆ ಹೆಮ್ಮೆಯ ಸಾಧನೆಯಾಗಿದೆ.

 

ಸ್ನೇಹಿತರೇ,

ಭಾರತದ ಶ್ರೇಷ್ಠ ಸ್ತಂಭಗಳಲ್ಲಿ ಒಂದಾದ - ಭೂತಾನ್ ನ ಸ್ನೇಹವು ನಮ್ಮ ಹಂಚಿಕೆಯ ಆಧ್ಯಾತ್ಮಿಕ ಪರಂಪರೆಯಾಗಿದೆ. ಕೇವಲ ಎರಡು ತಿಂಗಳ ಹಿಂದೆ, ರಾಜಗೀರ್‌ ನಲ್ಲಿ ರಾಯಲ್ ಭೂತಾನ್ ನ ದೇವಾಲಯವನ್ನು ಉದ್ಘಾಟಿಸಲಾಯಿತು, ಮತ್ತು ಈಗ ಈ ಉಪಕ್ರಮವು ಭಾರತದ ಇತರ ಪ್ರದೇಶಗಳಿಗೆ ಹರಡುತ್ತಿದೆ.

ಭೂತಾನ್ ನ ಜನರು ವಾರಣಾಸಿಯಲ್ಲಿ ಭೂತಾನ್ ನ ದೇವಾಲಯ ಮತ್ತು ಅತಿಥಿ ಗೃಹಕ್ಕಾಗಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಈ ಉದ್ದೇಶಕ್ಕಾಗಿ ಭಾರತ ಸರ್ಕಾರವು ಅಗತ್ಯವಾದ ಭೂಮಿಯನ್ನು ಒದಗಿಸುತ್ತಿದೆ. ಈ ದೇವಾಲಯಗಳು ನಮ್ಮ ಎರಡು ರಾಷ್ಟ್ರಗಳ ನಡುವಿನ ಪಾಲಿಸಬೇಕಾದ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವುದನ್ನು ಇನ್ನಷ್ಟು ಮುಂದುವರಿಸಲಿವೆ.

ಸ್ನೇಹಿತರೇ,

ಭಾರತ ಮತ್ತು ಭೂತಾನ್ ನ ಶಾಂತಿ, ಸಮೃದ್ಧಿ ಮತ್ತು ಪರಸ್ಪರ ಬೆಳವಣಿಗೆಯಲ್ಲಿ ಒಟ್ಟಾಗಿ ಮುಂದುವರಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಭಗವಾನ್ ಬುದ್ಧ ಮತ್ತು ಗುರು ರಿನ್‌ ಪೋಚೆ ಅವರ ಆಶೀರ್ವಾದಗಳು ನಮ್ಮ ಎರಡೂ ದೇಶಗಳಿಗೆ ಮಾರ್ಗದರ್ಶನ ಮತ್ತು ರಕ್ಷಣೆ ನೀಡಲಿ.

ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು

ಧನ್ಯವಾದಗಳು!!!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Auto industry contributes over ₹22.75 lakh crore to Indian economy: SIAM

Media Coverage

Auto industry contributes over ₹22.75 lakh crore to Indian economy: SIAM
NM on the go

Nm on the go

Always be the first to hear from the PM. Get the App Now!
...
Prime Minister congratulates Italian PM Giorgia Meloni on becoming the longest continuously serving Prime Minister in Italy's postwar history
September 04, 2026

Prime Minister Shri Narendra Modi today congratulated Italian Prime Minister Giorgia Meloni on becoming the longest continuously serving Prime Minister in Italy's postwar history.

The Prime Minister stated that this milestone is a reflection of the trust and confidence of the Italian people in her leadership. He further noted that her friendship has been instrumental in strengthening the India-Italy Special Strategic Partnership, adding that he looks forward to continuing their close cooperation to build a prosperous future for the people of both countries. He extended his best wishes for her continued success in the years ahead.

In a post on X, the Prime Minister shared:

"Congratulations to my friend Prime Minister Meloni on becoming the longest continuously serving Prime Minister in Italy's postwar history. This milestone is a reflection of the trust and confidence of the Italian people in her leadership.

Her friendship has also been instrumental in strengthening the India-Italy Special Strategic
Partnership and I look forward to continuing our close cooperation to build a prosperous future for the people of our countries.

My best wishes for her continued success in the years ahead.

@GiorgiaMeloni"