ಭಾರತದ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ನಿರ್ಮಿಸಲಾಗಿದೆ: ಪ್ರಧಾನಮಂತ್ರಿ
ನಾವು ವಿಕಸಿತ ಭಾರತದತ್ತ ಸಾಗುತ್ತಿರುವಾಗ, ವಸಾಹತುಶಾಹಿ ಮನಸ್ಥಿತಿಯ ಪ್ರತಿಯೊಂದು ಕುರುಹುಗಳನ್ನೂ ಭಾರತವು ತೆಗೆದುಹಾಕುವುದು ಅತ್ಯಗತ್ಯ: ಪ್ರಧಾನಮಂತ್ರಿ
ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು, ಇದು ಕೇವಲ ಹೆಸರಿನ ಬದಲಾವಣೆಯಾಗಿರಲಿಲ್ಲ, ಅಧಿಕಾರದ ಮನಸ್ಥಿತಿಯನ್ನು ಸೇವಾ ಮನೋಭಾವವಾಗಿ ಪರಿವರ್ತಿಸುವ ಪ್ರಯತ್ನವಾಗಿತ್ತು: ಪ್ರಧಾನಮಂತ್ರಿ
ಹೊಸ ಪ್ರಧಾನಮಂತ್ರಿ ಕಚೇರಿಗೆ ಸೇವಾ ತೀರ್ಥ ಎಂದು ಹೆಸರಿಡಲಾಗಿದೆ; ಸೇವಾ ಅಥವಾ ಸೇವಾ ಮನೋಭಾವವು ಭಾರತದ ಆತ್ಮ, ಅದು ಭಾರತದ ಗುರುತು: ಪ್ರಧಾನಮಂತ್ರಿ

ಕೇಂದ್ರ ಸರ್ಕಾರದ ಗೌರವಾನ್ವಿತ ಮಂತ್ರಿಗಳೇ, ಸಂಸತ್ ಸದಸ್ಯರು, ಸರ್ಕಾರಿ ನೌಕರರು, ಗೌರವಾನ್ವಿತ ಅತಿಥಿಗಳು ಮತ್ತು ನನ್ನ ಆತ್ಮೀಯ ಸಹಚರರೇ!

ಇಂದು, ನಾವು ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದ್ದೇವೆ. 2082 ರ ವಿಕ್ರಮ ಸಂವತದ ಈ ಶುಭ ದಿನದಂದು, ಫಾಲ್ಗುಣ ಕೃಷ್ಣ ಪಕ್ಷ, ವಿಜಯ ಏಕಾದಶಿ - ಇದು ಮಾಘ 24, ಶಕ ಸಂವತ 1947 ಮತ್ತು ಇಂದಿನ ಸಾಮಾನ್ಯ ಕ್ಯಾಲೆಂಡರ್‌ನಲ್ಲಿ ಫೆಬ್ರವರಿ 13ಕ್ಕೆ ಸರಿಹೊಂದುತ್ತದೆ - ಭಾರತದ ಅಭಿವೃದ್ಧಿ ಪ್ರಯಾಣವು ಹೊಸ ಅಧ್ಯಾಯವನ್ನು ಪ್ರವೇಶಿಸುತ್ತಿದೆ. ನಮ್ಮ ಧರ್ಮಗ್ರಂಥಗಳಲ್ಲಿ, ವಿಜಯ ಏಕಾದಶಿ ಬಹಳ ಮಹತ್ವದ್ದಾಗಿದೆ; ಈ ದಿನದಂದು ತೆಗೆದುಕೊಂಡ ಯಾವುದೇ ಸಂಕಲ್ಪವು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ.  ಇಂದು, ನಾವು ಕೂಡ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಪ್ರವೇಶಿಸುತ್ತಿದ್ದೇವೆ. ವಿಜಯದ ದೈವಿಕ ಆಶೀರ್ವಾದ ನಮ್ಮ ಧ್ಯೇಯದಲ್ಲಿ ನಮ್ಮೊಂದಿಗಿದೆ. ಸೇವಾ ತೀರ್ಥ ಮತ್ತು ಹೊಸ ಕಟ್ಟಡಗಳ ಉದ್ಘಾಟನೆಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ, ಇಡೀ ಪಿಎಂಒ ತಂಡ, ಕ್ಯಾಬಿನೆಟ್ ಸೆಕ್ರೆಟರಿಯೇಟ್ ಮತ್ತು ವಿವಿಧ ಇಲಾಖೆಗಳ ನೌಕರರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವುಗಳ ನಿರ್ಮಾಣಕ್ಕೆ ಸಹಕರಿಸಿದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

 

ಸ್ನೇಹಿತರೇ,

ಸ್ವಾತಂತ್ರ್ಯದ ನಂತರ, ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನ ಕಟ್ಟಡಗಳಲ್ಲಿ ಅನೇಕ ನಿರ್ಣಾಯಕ ನಿರ್ಧಾರಗಳು ಮತ್ತು ನೀತಿಗಳನ್ನು ಕೈಗೊಳ್ಳಲಾಯಿತು. ಆದರೆ ಈ ರಚನೆಗಳನ್ನು ಬ್ರಿಟಿಷ್ ಸಾಮ್ರಾಜ್ಯದ ಸಂಕೇತಗಳಾಗಿ ನಿರ್ಮಿಸಲಾಗಿದೆ ಎಂಬುದು ನಿಜ. ಭಾರತವನ್ನು ಶತಮಾನಗಳ ಕಾಲ ಗುಲಾಮಗಿರಿಯಲ್ಲಿ ಬಂಧಿಸುವುದು ಅವರ ಉದ್ದೇಶವಾಗಿತ್ತು.

ಸ್ನೇಹಿತರೇ,

ಒಂದು ಕಾಲದಲ್ಲಿ, ಕೋಲ್ಕತ್ತಾ ಭಾರತದ ರಾಜಧಾನಿಯಾಗಿತ್ತು ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಆದರೆ 1905 ರಲ್ಲಿ ಬಂಗಾಳ ವಿಭಜನೆಯ ಸಮಯದಲ್ಲಿ, ಕೋಲ್ಕತ್ತಾ ಬ್ರಿಟಿಷ್ ವಿರೋಧಿ ಚಳುವಳಿಗಳ ಭದ್ರಕೋಟೆಯಾಗಿತ್ತು. ಆದ್ದರಿಂದ, 1911 ರಲ್ಲಿ, ಬ್ರಿಟಿಷರು ರಾಜಧಾನಿಯನ್ನು ಕೋಲ್ಕತ್ತಾದಿಂದ ದಿಲ್ಲಿಗೆ ಸ್ಥಳಾಂತರಿಸಿದರು. ತರುವಾಯ, ವಸಾಹತುಶಾಹಿ ಆಳ್ವಿಕೆಯ ಅಗತ್ಯತೆಗಳು ಮತ್ತು ಮನಸ್ಥಿತಿಯನ್ನು ಪೂರೈಸಲು ವಿನ್ಯಾಸಗೊಳಿಸಲಾದ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್‌ನ ನಿರ್ಮಾಣ ಪ್ರಾರಂಭವಾಯಿತು. ರೈಸಿನಾ ಬೆಟ್ಟಗಳ ಮೇಲಿನ ಈ ಕಟ್ಟಡಗಳನ್ನು ಉದ್ಘಾಟಿಸಿದಾಗ, ಆಗಿನ ವೈಸ್‌ರಾಯ್ ಅವರು ಬ್ರಿಟಿಷ್ ರಾಜಮನೆತನದ  ಆಶಯಗಳನ್ನು ಇವು ಪ್ರತಿಬಿಂಬಿಸುತ್ತವೆ ಎಂದು ಘೋಷಿಸಿದ್ದರು, ಅಂದರೆ ಅವು ಗುಲಾಮಗಿರಿಯಲ್ಲಿರುವ ಭಾರತದ ಮೇಲೆ ರಾಜ ವಂಶದ ದೃಷ್ಟಿಕೋನವನ್ನು ಹೇರುವ ಸಾಧನಗಳಾಗಿದ್ದವು. ರೈಸಿನಾ ಬೆಟ್ಟಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಯಿತು ಆದ್ದರಿಂದ ಈ ಕಟ್ಟಡಗಳು ಎಲ್ಲಕ್ಕಿಂತ ಮೇಲೆ ಇರುತ್ತವೆ.  ಎತ್ತರದಲ್ಲಿ ಇವಕ್ಕೆ ಸಾಟಿಯಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಸೇವಾ ತೀರ್ಥವು ಬೆಟ್ಟದ ಮೇಲೆ ಅಲ್ಲ ಆದರೆ ನೆಲಕ್ಕೆ, ಮಣ್ಣಿಗೆ ಹತ್ತಿರದಲ್ಲಿದೆ. ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ ವಸಾಹತುಶಾಹಿ ಚಿಂತನೆಯನ್ನು ಸಾಕಾರಗೊಳಿಸಿದರೆ, ಇಂದು ನಾನು ಸೇವಾ ತೀರ್ಥ ಮತ್ತು ಕರ್ತವ್ಯ ಭವನವು ಭಾರತೀಯ ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸುತ್ತವೆ ಎಂದು ಹೆಮ್ಮೆಯಿಂದ ಘೋಷಿಸುತ್ತೇನೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ರಾಜನ ಇಚ್ಛೆಯನ್ನು ಪ್ರತಿಬಿಂಬಿಸುವುದಿಲ್ಲ, ಆದರೆ 1.4 ಶತಕೋಟಿ ನಾಗರಿಕರ ನಿರೀಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಈ ಮನೋಭಾವದಿಂದ, ನಾನು ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಭಾರತದ ಜನರಿಗೆ ಅರ್ಪಿಸುತ್ತೇನೆ.

ಸ್ನೇಹಿತರೇ,

21ನೇ ಶತಮಾನದ ಮೊದಲ ಕಾಲು ಶತಮಾನದಷ್ಟು ಕಾಲಾವಧಿ  ಈಗ ಮುಕ್ತಾಯಗೊಂಡಿದೆ. ಅಭಿವೃದ್ಧಿ ಹೊಂದಿದ ಭಾರತದ ನಮ್ಮ ದೃಷ್ಟಿಕೋನವು ನೀತಿಗಳು ಮತ್ತು ಯೋಜನೆಗಳಲ್ಲಿ ಮಾತ್ರವಲ್ಲದೆ ನಮ್ಮ ಕೆಲಸದ ಸ್ಥಳಗಳು ಮತ್ತು ಸಂಸ್ಥೆಗಳಲ್ಲಿಯೂ ಪ್ರತಿಫಲಿಸಬೇಕು. ರಾಷ್ಟ್ರವನ್ನು ಆಳುವ ಸ್ಥಳಗಳು ಪರಿಣಾಮಕಾರಿ ಮತ್ತು ಸ್ಪೂರ್ತಿದಾಯಕ, ಪ್ರಭಾವಶಾಲಿಯಾಗಿರಬೇಕು ಜೊತೆಗೆ  ಆದರೆ ಪ್ರೇರಕವಾಗಿರಬೇಕು. ಹೊಸ ತಂತ್ರಜ್ಞಾನಗಳು ನಮ್ಮ ಪರಿಸರವನ್ನು ವೇಗವಾಗಿ ಪರಿವರ್ತಿಸುತ್ತಿವೆ, ಆದರೆ ಹಳೆಯ ಕಟ್ಟಡಗಳು ಈ ಪ್ರಗತಿಯನ್ನು ಸರಿಹೊಂದಿಸಲು ಅಸಮರ್ಪಕವಾಗಿವೆ. ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ ಸ್ಥಳಾವಕಾಶದ ನಿರ್ಬಂಧಗಳನ್ನು, ಸೀಮಿತ ಸೌಲಭ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದವು ಮತ್ತು ಅವು ಸುಮಾರು ಒಂದು ಶತಮಾನದಷ್ಟು ಹಳೆಯದಾಗಿದ್ದವು, ಒಳಗಿನಿಂದ ಹದಗೆಟ್ಟಿದ್ದವು. ಇದಲ್ಲದೆ, ಸವಾಲುಗಳು, ಸಮಸ್ಯೆಗಳು ಮುಂದುವರೆದಿದ್ದವು: ಸ್ವಾತಂತ್ರ್ಯದ ದಶಕಗಳ ನಂತರವೂ, ಸಚಿವಾಲಯಗಳು ದಿಲ್ಲಿಯಾದ್ಯಂತ 50 ಕ್ಕೂ ಹೆಚ್ಚು ವಿಭಿನ್ನ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿದ್ದವು. ಪ್ರತೀವರ್ಷ  ಈ ಕಟ್ಟಡಗಳ ಬಾಡಿಗೆಗೆ ₹1,500 ಕೋಟಿಗಿಂತ ಹೆಚ್ಚು ಖರ್ಚು ಮಾಡಲಾಗುತ್ತಿತ್ತು. ಕಚೇರಿಗಳ ನಡುವೆ ಚಲಿಸುವ 8,000–10,000 ಉದ್ಯೋಗಿಗಳಿಗೆ ದೈನಂದಿನ ಲಾಜಿಸ್ಟಿಕ್ಸ್ ಮತ್ತಷ್ಟು ವೆಚ್ಚವನ್ನು ಹೆಚ್ಚಿಸುತ್ತಿತ್ತು. ಸೇವಾ ತೀರ್ಥ ಮತ್ತು ಕರ್ತವ್ಯ ಭವನದ ನಿರ್ಮಾಣದೊಂದಿಗೆ, ಈ ವೆಚ್ಚಗಳು ಕಡಿಮೆಯಾಗುತ್ತವೆ, ಸಮಯ ಉಳಿತಾಯವಾಗುತ್ತವೆ ಮತ್ತು ಉತ್ಪಾದಕತೆ ಹೆಚ್ಚಾಗುತ್ತದೆ.

 

ಸ್ನೇಹಿತರೇ,

ಈ ರೂಪಾಂತರದ/ಪರಿವರ್ತನೆಯ ನಡುವೆಯೂ, ಹಳೆಯ ಕಟ್ಟಡಗಳ ನೆನಪುಗಳು ನಮ್ಮೊಂದಿಗೆ ಉಳಿಯುತ್ತವೆ. ವಿಭಿನ್ನ ಸವಾಲುಗಳನ್ನು ಎದುರಿಸುತ್ತಿರುವಾಗಲೂ ಅಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಆ ಆವರಣಗಳು ರಾಷ್ಟ್ರಕ್ಕೆ ದಿಕ್ಕು ದಿಸೆಯನ್ನು ನಿರ್ದೇಶನ ಮಾಡಿವೆ ಮತ್ತು ಹಲವಾರು ಸುಧಾರಣೆಗಳಿಗೆ ಸಾಕ್ಷಿಯಾಗಿವೆ. ಅವು ಭಾರತದ ಇತಿಹಾಸದ ಅಮರ ಭಾಗವಾಗಿವೆ. ಆದ್ದರಿಂದ, ನಾವು ಆ ಕಟ್ಟಡಗಳನ್ನು ರಾಷ್ಟ್ರಕ್ಕಾಗಿ ವಸ್ತುಸಂಗ್ರಹಾಲಯಗಳಾಗಿ ಅರ್ಪಿಸಲು ನಿರ್ಧರಿಸಿದ್ದೇವೆ. ಅವು ಯುಗೇ ಯುಗೀನ್ ಭಾರತ್ ವಸ್ತುಸಂಗ್ರಹಾಲಯದ ಭಾಗವಾಗುತ್ತವೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಯುವಜನರು ಭೇಟಿ ನೀಡಿದಾಗ, ಐತಿಹಾಸಿಕ ಪರಂಪರೆ ಅವರಿಗೆ ಮಾರ್ಗದರ್ಶನ ನೀಡುತ್ತದೆ.

ಸ್ನೇಹಿತರೇ,

ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಈ ಪ್ರಯಾಣದಲ್ಲಿ, ನಾವು ಗುಲಾಮಗಿರಿಯ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಬೇಕು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರವೂ ವಸಾಹತುಶಾಹಿ ಆಳ್ವಿಕೆಯ ಚಿಹ್ನೆಗಳು ನಮ್ಮ ಮೇಲೆ ಹೊರೆಯಾಗುತ್ತಲೇ ಇದ್ದವು. ಹಿಂದಿನ ಪರಿಸ್ಥಿತಿಯನ್ನು ಪರಿಗಣಿಸಿ: ಪ್ರಧಾನ ಮಂತ್ರಿಗಳ ನಿವಾಸವನ್ನು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು. ಉಪರಾಷ್ಟ್ರಪತಿಗಳಿಗೆ ಯಾವುದೇ ಗೊತ್ತುಪಡಿಸಿದ ನಿವಾಸವಿರಲಿಲ್ಲ. ರಾಷ್ಟ್ರಪತಿ ಭವನಕ್ಕೆ ಹೋಗುವ ರಸ್ತೆಯನ್ನು ಪ್ರಜಾಪ್ರಭುತ್ವದಲ್ಲಿ ರಾಜಪಥ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ ತಮ್ಮ ಪ್ರಾಣ ತ್ಯಾಗ ಮಾಡಿದ ಸೈನಿಕರಿಗಾಗಲಿ, ತಮ್ಮ ಪ್ರಾಣವನ್ನೇ ಅರ್ಪಿಸಿದ ಪೊಲೀಸ್ ಸಿಬ್ಬಂದಿಗಾಗಲಿ ಯಾವುದೇ ಸ್ಮಾರಕವಿರಲಿಲ್ಲ. ಹೀಗಾಗಿ, ಸ್ವತಂತ್ರ ಭಾರತದ ರಾಜಧಾನಿ ವಸಾಹತುಶಾಹಿ ಮನಸ್ಥಿತಿಯಲ್ಲಿ ಆಳವಾಗಿ ಸಿಲುಕಿಕೊಂಡಿತ್ತು, ಅದರ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳು ಅಧೀನತೆಯ ಸಂಕೇತಗಳಿಂದ ಗುರುತಿಸಲ್ಪಟ್ಟಿದ್ದವು.

ಆದರೆ ಸ್ನೇಹಿತರೇ,

ಅವರು ಹೇಳಿದಂತೆ, ಕಾಲ ಎಂದಿಗೂ ಒಂದೇ ಆಗಿರುವುದಿಲ್ಲ. 2014 ರಲ್ಲಿ, ವಸಾಹತುಶಾಹಿ ಮನಸ್ಥಿತಿ ಇನ್ನು ಮುಂದೆ ಮೇಲುಗೈ ಸಾಧಿಸುವುದಿಲ್ಲ ಎಂದು ರಾಷ್ಟ್ರವು ನಿರ್ಧರಿಸಿತು. ಅದನ್ನು ಬದಲಾಯಿಸಲು ನಾವು ಅಭಿಯಾನವನ್ನು ಪ್ರಾರಂಭಿಸಿದೆವು. ನಮ್ಮ ಹುತಾತ್ಮರನ್ನು ಗೌರವಿಸಲು ನಾವು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಿದ್ದೇವೆ. ನಮ್ಮ ಪೊಲೀಸರ ಶೌರ್ಯವನ್ನು ಗೌರವಿಸಲು ನಾವು ಪೊಲೀಸ್ ಸ್ಮಾರಕವನ್ನು ನಿರ್ಮಿಸಿದ್ದೇವೆ. ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು. ಇದು ಕೇವಲ ಹೆಸರಿನ ಬದಲಾವಣೆಯಲ್ಲ, ಬದಲು ಆಡಳಿತದ ಮನೋಭಾವವನ್ನು ಸೇವೆಯ ಮನೋಭಾವವಾಗಿ ಪರಿವರ್ತಿಸುವ ಪವಿತ್ರ ಪ್ರಯತ್ನವಾಗಿತ್ತು.

 

ಸ್ನೇಹಿತರೇ,

ಈ ನಿರ್ಧಾರಗಳ ಹಿಂದೆ ಆಳವಾದ ಭಾವನೆ, ದೃಷ್ಟಿಕೋನವಿದೆ. ಇದು ನಮ್ಮ ವರ್ತಮಾನ, ಭೂತ ಮತ್ತು ಭವಿಷ್ಯವನ್ನು ಭಾರತದ ಹೆಮ್ಮೆಯೊಂದಿಗೆ ಸಂಪರ್ಕಿಸುತ್ತದೆ. ಒಂದು ಕಾಲದಲ್ಲಿ ರಾಜಪಥ ಎಂದು ಕರೆಯಲ್ಪಡುತ್ತಿದ್ದ ಸ್ಥಳದಲ್ಲಿ ನಾಗರಿಕರಿಗೆ ಸಾಕಷ್ಟು ಸೌಲಭ್ಯಗಳು ಮತ್ತು ವ್ಯವಸ್ಥೆಗಳಿರಲಿಲ್ಲ. ನಾವು ಅದನ್ನು ಕರ್ತವ್ಯ  ಪಥ ಎಂದು ಮರುಅಭಿವೃದ್ಧಿಪಡಿಸಿದ್ದೇವೆ, ಇದು ಇಂದು ಕುಟುಂಬಗಳು, ಮಕ್ಕಳು ಮತ್ತು ದೇಶಾದ್ಯಂತದ ಸಂದರ್ಶಕರಿಗೆ ಒಂದು ರೋಮಾಂಚಕ ಸಾರ್ವಜನಿಕ ಸ್ಥಳವಾಗಿದೆ. ಇದೇ ಸಂಕೀರ್ಣದಲ್ಲಿ, ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ದೀರ್ಘಕಾಲದವರೆಗೆ, ನಮ್ಮ ರಾಜಧಾನಿಯು ನಮ್ಮ ವೀರರಿಗೆ ಅಂತಹ ಗೌರವಗಳನ್ನು ಹೊಂದಿರಲಿಲ್ಲ.  ಹೊಸ ಪೀಳಿಗೆಯು ರಾಜಧಾನಿಯ ಹೃದಯಭಾಗದಲ್ಲಿರುವ ಅವರಿಂದ ಸ್ಫೂರ್ತಿ ಪಡೆಯಬೇಕು ಎಂದು ನಾವು ನಿರ್ಧರಿಸಿದ್ದೇವೆ. ರಾಷ್ಟ್ರಪತಿ ಭವನದ ಸಂಕೀರ್ಣದಲ್ಲಿಯೂ ಬದಲಾವಣೆಗಳನ್ನು ಮಾಡಲಾಯಿತು: ಮೊಘಲ್ ಉದ್ಯಾನವನ್ನು ಅಮೃತ ಉದ್ಯಾನ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಿದಾಗ, ನಾವು ಹಳೆಯದನ್ನು ಮರೆತಿಲ್ಲ; ನಾವು ಅದಕ್ಕೆ ಸಂವಿಧಾನ್ ಸದನ ಎಂದು ಹೊಸ ಗುರುತನ್ನು ನೀಡಿದ್ದೇವೆ. ಸಚಿವಾಲಯಗಳನ್ನು ಒಂದು ಸಂಕೀರ್ಣದಲ್ಲಿ ಒಟ್ಟುಗೂಡಿಸಿದಾಗ, ಆ ಕಟ್ಟಡಗಳಿಗೆ ಕರ್ತವ್ಯ ಭವನ ಎಂದು ಹೆಸರಿಸಲಾಯಿತು. ಮರುನಾಮಕರಣದ ಈ ಉಪಕ್ರಮಗಳು ಕೇವಲ ಪದಗಳ ಆಟವಲ್ಲ; ವಸಾಹತುಶಾಹಿ ಗುರುತುಗಳಿಂದ ಮುಕ್ತವಾದ ಸ್ವತಂತ್ರ ಭಾರತದ  ಸ್ವತಂತ್ರ ಗುರುತುಗಳಾಗಿ ಅವು ಸ್ಥಿರವಾದ ಸೈದ್ಧಾಂತಿಕ ನೇಯ್ಗೆಯನ್ನು ಪ್ರತಿಬಿಂಬಿಸುತ್ತವೆ .  

ಸ್ನೇಹಿತರೇ,

ಹೊಸ ಪ್ರಧಾನಮಂತ್ರಿ ಕಚೇರಿಗೆ ಸೇವಾ ತೀರ್ಥ ಎಂದು ಹೆಸರಿಸಲಾಗಿದೆ. ಸೇವಾ ಮನೋಭಾವವೇ ಭಾರತದ ಆತ್ಮ, ಭಾರತದ ನಿಜವಾದ ಗುರುತು. ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು: ಶಿವ ಜ್ಞಾನ ಸೇ ಜೀವ ಜ್ಞಾನ ಸೇವಾ - ಮಾನವೀಯತೆಗೆ ಮಾಡುವ ಸೇವೆಯೇ ದೇವರ ಸೇವೆ. ಇದು ಕೇವಲ ಆಧ್ಯಾತ್ಮಿಕ ಚಿಂತನೆಯಲ್ಲ, ರಾಷ್ಟ್ರ ನಿರ್ಮಾಣದ ತತ್ವಶಾಸ್ತ್ರ. ಈ ಕಟ್ಟಡವು ಆಡಳಿತ ಎಂದರೆ ಸೇವೆ, ಜವಾಬ್ದಾರಿ ಎಂದರೆ ಸಮರ್ಪಣೆ ಎಂಬುದನ್ನು ಪ್ರತಿ ಕ್ಷಣವೂ ನಮಗೆ ನೆನಪಿಸುತ್ತದೆ. ನಮ್ಮ ಧರ್ಮಗ್ರಂಥಗಳು ಹೇಳುತ್ತವೆ: ಸೇವಾ ಪರಮೋ ಧರ್ಮಃ - ಸೇವೆಯೇ ಅತ್ಯುನ್ನತ ಕರ್ತವ್ಯ. ಇದು ಪ್ರಧಾನ ಮಂತ್ರಿ ಕಚೇರಿ ಮತ್ತು ಸರ್ಕಾರದ ದೃಷ್ಟಿಕೋನ. ಆದ್ದರಿಂದ, ಸೇವಾ ತೀರ್ಥವು ಕೇವಲ ಹೆಸರಲ್ಲ, ಆದರೆ ಸಂಕಲ್ಪ. ಸೇವಾ ತೀರ್ಥ ಎಂದರೆ ನಾಗರಿಕರಿಗೆ ಸೇವೆಯೊದಗಿಸುವ ಪವಿತ್ರವಾದ ಸ್ಥಳ, ಸೇವೆಯ ಸಂಕಲ್ಪವನ್ನು ಪೂರೈಸುವ ಸ್ಥಳ. ತೀರ್ಥ ಎಂದರೆ " ದಾಟಲು, ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಸ್ಥಳ." ಇಂದು, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ, ಸ್ವಾವಲಂಬಿಯಾಗುವ ಗುರಿಯನ್ನು ಎದುರಿಟ್ಟುಕೊಂಡಿದೆ. ನಾವು ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸಬೇಕು, ರಾಷ್ಟ್ರವನ್ನು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸಬೇಕು - ಮತ್ತು ಇದನ್ನು ಸೇವೆಯ ಶಕ್ತಿಯ ಮೂಲಕ ಮಾತ್ರ ಸಾಧಿಸಬಹುದಾಗಿದೆ.

ಸ್ನೇಹಿತರೇ,

ಇಂದು, ಭಾರತವು ಸುಧಾರಣಾ ಎಕ್ಸ್‌ಪ್ರೆಸ್‌ನಲ್ಲಿ ಸಾಗುತ್ತಿರುವಾಗ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಭಾರತವು ಹೊಸ ಅಧ್ಯಾಯವನ್ನು ಬರೆಯುತ್ತಿರುವಾಗ, ಹೊಸ ವ್ಯಾಪಾರ ಒಪ್ಪಂದಗಳು ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತಿರುವಾಗ ಮತ್ತು ರಾಷ್ಟ್ರವು ಪರಿಪೂರ್ಣತೆ ಸಾಧಿಸುವ ಗುರಿಯತ್ತ ವೇಗವಾಗಿ ಸಾಗುತ್ತಿರುವಾಗ, ನಿಮ್ಮ ಕೆಲಸದ ಹೊಸ ವೇಗ ಮತ್ತು ಸೇವಾ ತೀರ್ಥ ಹಾಗು ಕರ್ತವ್ಯ ಭವನದೊಳಗಿನ ನಿಮ್ಮ ನವೀಕೃತ ವಿಶ್ವಾಸವು ದೇಶದ ಉದ್ದೇಶಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

ಸ್ನೇಹಿತರೇ,

ನಮ್ಮ ಸಂಸ್ಕೃತಿಯು ನಮಗೆ ಕಲಿಸುತ್ತದೆ ಏನೆಂದರೆ, ಪ್ರತಿಯೊಂದು ಶುಭ ಕಾರ್ಯಕ್ಕೂ ಮೊದಲು, ನಾವು ಆಶೀರ್ವಾದಗಳನ್ನು ಬೇಡುತ್ತೇವೆ, ಯೋಗಕ್ಷೇಮವನ್ನು ಬಯಸುತ್ತೇವೆ ಮತ್ತು ಒಳ್ಳೆಯತನದ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆ. ವೇದ ಮಂತ್ರವು ನಮಗೆ ಮಾರ್ಗದರ್ಶನ ನೀಡುತ್ತದೆ: “ಆ ನೋ ಭದ್ರಃ ಕೃತವೋ ಯಂತು ವಿಶ್ವತಃ” - ಎಲ್ಲಾ ದಿಕ್ಕಿನಿಂದಲೂ ಉದಾತ್ತ ಆಲೋಚನೆಗಳು ನಮಗೆ ಬರಲಿ. ಇದು ಈ ಕಟ್ಟಡದ ಆತ್ಮವಾಗಿರಬೇಕು. ಭಾರತದ ಮಹಾನ್ ಪ್ರಜಾಪ್ರಭುತ್ವದಲ್ಲಿ, ಜನರ ಆಲೋಚನೆಗಳು ನಮ್ಮ ಶಕ್ತಿ, ಅವರ ಕನಸುಗಳು ನಮ್ಮ ಬಂಡವಾಳ, ಅವರ ನಿರೀಕ್ಷೆಗಳು ನಮ್ಮ ಆದ್ಯತೆ ಮತ್ತು ಅವರ ಆಕಾಂಕ್ಷೆಗಳು ನಮಗೆ ಮಾರ್ಗದರ್ಶಕ ಬೆಳಕು. ಈ ಭಾವನೆಗಳು ಮತ್ತು ಈ ಸಂಸ್ಥೆಯ ನಡುವೆ ಯಾವುದೇ ಗೋಡೆ ಇರಬಾರದು, ಯಾವುದೇ ಅಂತರ ಇರಬಾರದು. ನೀವು ಜನರ ಕನಸುಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ನೀತಿಗಳು ಜೀವಂತಿಕೆ ಪಡೆಯುತ್ತವೆ. ನೀವು ಜನರ ಆಕಾಂಕ್ಷೆಗಳನ್ನು ಅನುಭವಿಸಿದಾಗ ಮಾತ್ರ ನಿರ್ಧಾರಗಳು ಪರಿಣಾಮಕಾರಿಯಾಗಿರುತ್ತವೆ. ಕಳೆದ 11 ವರ್ಷಗಳಲ್ಲಿ, ನಾವು ಹೊಸ ಆಡಳಿತ ಮಾದರಿಯನ್ನು ನೋಡಿದ್ದೇವೆ - ಪ್ರತಿಯೊಂದು ನಿರ್ಧಾರದ ಕೇಂದ್ರದಲ್ಲಿ ನಾಗರಿಕರು ಇದ್ದಾರೆ. “ನಾಗರಿಕ್ ದೇವೋ ಭವ” - ನಾಗರಿಕನು ದೇವರಂತೆ - ಇದು ಕೇವಲ ಒಂದು ನುಡಿಗಟ್ಟು ಅಲ್ಲ, ಅದು ನಮ್ಮ ಕೆಲಸದ ಸಂಸ್ಕೃತಿ. ನೀವು ಈ ಹೊಸ ಕಟ್ಟಡಗಳನ್ನು ಪ್ರವೇಶಿಸುವಾಗ ಈ ಚೈತನ್ಯವನ್ನು ಸಾಕಾರಗೊಳಿಸಬೇಕು. ಸೇವಾ ತೀರ್ಥದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಇಲ್ಲಿ ಸಂಸ್ಕರಿಸುವ ಪ್ರತಿಯೊಂದು ಕಡತ, ಇಲ್ಲಿ ಕಳೆಯುವ ಪ್ರತಿ ಕ್ಷಣವೂ 1.4 ಬಿಲಿಯನ್ ಭಾರತೀಯರ ಜೀವನವನ್ನು ಸುಧಾರಿಸಲು ಮೀಸಲಿಡಬೇಕು. ಪ್ರತಿಯೊಬ್ಬ ಅಧಿಕಾರಿ, ಪ್ರತಿಯೊಬ್ಬ ಉದ್ಯೋಗಿ, ಪ್ರತಿಯೊಬ್ಬ ಕರ್ಮಯೋಗಿಯನ್ನು ನಾನು ಆಗ್ರಹಿಸುತ್ತೇನೆ: ನೀವು ಈ ಕಟ್ಟಡಕ್ಕೆ ಕಾಲಿಡುವಾಗಲೆಲ್ಲಾ, ಒಂದು ಕ್ಷಣ ವಿರಾಮದಲ್ಲಿ ನಿಂತು ಚಿಂತಿಸಿ, ಮತ್ತು ನಿಮ್ಮನ್ನು ಕೇಳಿಕೊಳ್ಳಿ - ನನ್ನ ಇಂದಿನ ಕೆಲಸವು ಲಕ್ಷಾಂತರ ನಾಗರಿಕರಿಗೆ ಜೀವನವನ್ನು ಸುಲಭಗೊಳಿಸುತ್ತದೆಯೇ? ಎಂದು. ಈ ಆತ್ಮಾವಲೋಕನವು ಈ ಸ್ಥಳದ ದೊಡ್ಡ ಶಕ್ತಿಯಾಗುತ್ತದೆ.

ಸ್ನೇಹಿತರೇ,

ನಾವು ಅಧಿಕಾರವನ್ನು ಪ್ರದರ್ಶಿಸಲು ಇಲ್ಲಿರುವುದಲ್ಲ; ಜವಾಬ್ದಾರಿಯನ್ನು ಪೂರೈಸಲು ಇಲ್ಲಿದ್ದೇವೆ. ಮತ್ತು ಆಡಳಿತವು ಸೇವಾ ಮನೋಧರ್ಮದಿಂದ ನಡೆಸಲ್ಪಟ್ಟಾಗ, ಫಲಿತಾಂಶಗಳು ಅಸಾಧಾರಣವಾಗಿರುತ್ತವೆ ಎಂಬುದನ್ನು ನಾವು ನೋಡಿದ್ದೇವೆ. 250 ಮಿಲಿಯನ್ ಜನರು ಬಡತನದಿಂದ ಹೊರಬರುವುದು ಹೀಗೆಯೇ, ಆರ್ಥಿಕತೆಯು ಹೊಸ ವೇಗವನ್ನು ಪಡೆಯುವುದು ಕೂಡಾ ಹೀಗೆಯೇ.

 

ಸ್ನೇಹಿತರೇ,

2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ಎಂಬುದು ಬರೇ  ನಮ್ಮ ಗುರಿ ಮಾತ್ರವಲ್ಲ. - ಇದು ಪ್ರಪಂಚದ ಮುಂದೆ ಭಾರತದ ಪ್ರತಿಜ್ಞೆಯಾಗಿದೆ. ಆದ್ದರಿಂದ, ಇಲ್ಲಿ ರೂಪಿಸಲಾದ ಪ್ರತಿಯೊಂದು ನೀತಿ, ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ನಿರಂತರ ಸೇವೆಯ ಮನೋಭಾವದಿಂದ ಪ್ರೇರಿತವಾಗಿರಬೇಕು. ಮತ್ತು ಒಂದು ದಿನ, ನೀವು ನಿವೃತ್ತರಾದಾಗ ಅಥವಾ ಈ ಕಟ್ಟಡದಿಂದ ಸ್ಥಳಾಂತರಗೊಂಡಾಗ, ನೀವು ಈ ದಿನಗಳನ್ನು ಹೆಮ್ಮೆಯಿಂದ ಹಿಂತಿರುಗಿ ನೋಡುವಂತಾಗುತ್ತದೆ. ಆಗ ನೀವು ಹೀಗೆ ಹೇಳಲು ಸಾಧ್ಯವಾಗುತ್ತದೆ: ಹೌದು, ಸೇವಾ ತೀರ್ಥ ಮತ್ತು ಕರ್ತವ್ಯ ಭವನದಲ್ಲಿ ನನ್ನ ಸಮಯದಲ್ಲಿ, ನಾನು ಪ್ರತಿದಿನ ನಾಗರಿಕರಿಗೆ ಸೇವೆ ಸಲ್ಲಿಸಿದ್ದೇನೆ. ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವು ರಾಷ್ಟ್ರದ ಹಿತಾಸಕ್ತಿಯನ್ನು ಹೊಂದಿತ್ತು. ಆ ಕ್ಷಣ ನಿಮಗೆ ಶಾಂತಿಯನ್ನು ತರುತ್ತದೆ, ಆ ಕ್ಷಣ ನಿಮ್ಮ ಶ್ರೇಷ್ಠ ಸಾಧನೆಯಾಗಿರುತ್ತದೆ, ಆ ಕ್ಷಣ ನಿಮ್ಮ ವೈಯಕ್ತಿಕ ನಿಧಿಯಾಗಿರುತ್ತದೆ ಮತ್ತು ಆ ನಿಧಿ ನಿಮ್ಮ ಜೀವನವನ್ನು ಗೌರವದಿಂದ ತುಂಬುತ್ತದೆ.

ಸ್ನೇಹಿತರೇ,

ಹಕ್ಕುಗಳ ಭವ್ಯ ಸೌಧವು ಕರ್ತವ್ಯದ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿರುತ್ತದೆ ಎಂದು ಮಹಾತ್ಮಾ ಗಾಂಧಿಯವರು ನಂಬಿದ್ದರು. ನಾವು ನಮ್ಮ ಕರ್ತವ್ಯಗಳನ್ನು ಪೂರೈಸಿದಾಗ, ನಾವು ದೊಡ್ಡ ಸವಾಲುಗಳನ್ನು ಸಹ ಎದುರಿಸಬಹುದು ಮತ್ತು ಪರಿಹಾರಗಳನ್ನು ಕಂಡುಕೊಳ್ಳಬಹುದು. ನಮ್ಮ ಸಂವಿಧಾನ ತಯಾರಕರು ಈ ಕಾರಣಕ್ಕಾಗಿಯೇ ಕರ್ತವ್ಯಗಳನ್ನು ಒತ್ತಿ ಹೇಳಿದರು. ನಾವು ನೆನಪಿನಲ್ಲಿಟ್ಟುಕೊಳ್ಳಬೇಕು: ಲಕ್ಷಾಂತರ ನಾಗರಿಕರ ಕನಸುಗಳ ಸಾಕಾರವು ಕರ್ತವ್ಯದ ಮೇಲೆ ನಿಂತಿದೆ. ಕರ್ತವ್ಯವು ಆರಂಭ, ಕರ್ತವ್ಯವು ಈ ಚೈತನ್ಯಶೀಲ ರಾಷ್ಟ್ರದ ಜೀವಾಳ. ಕರ್ತವ್ಯವು ಕರುಣೆ ಮತ್ತು ಶ್ರದ್ಧೆಯ ಬಂಧವಾಗಿದೆ. ಕರ್ತವ್ಯವು ನಿರ್ಣಯಗಳ ಭರವಸೆ, ಕಠಿಣ ಪರಿಶ್ರಮದ ಪರಾಕಾಷ್ಠೆ, ಪ್ರತಿಯೊಂದು ಸಮಸ್ಯೆಗೆ ಪರಿಹಾರ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಂಬಿಕೆ. ಕರ್ತವ್ಯವು ಸಮಾನತೆ, ಕರ್ತವ್ಯವು ವಾತ್ಸಲ್ಯ, ಕರ್ತವ್ಯ ಸಾರ್ವತ್ರಿಕ, ಕರ್ತವ್ಯವು ಸರ್ವವ್ಯಾಪಿ. ಕರ್ತವ್ಯವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ನಲ್ಲಿ ಹೆಣೆಯಲಾದ ಮಂತ್ರವಾಗಿದೆ. ಕರ್ತವ್ಯವು ರಾಷ್ಟ್ರಕ್ಕೆ ಸಮರ್ಪಣೆಯ ಮನೋಭಾವ. ಕರ್ತವ್ಯವು ಪ್ರತಿ ಜೀವನವನ್ನು ಬೆಳಗಿಸುವ ಇಚ್ಛಾಶಕ್ತಿಯಾಗಿದೆ. ಕರ್ತವ್ಯವು ಸ್ವಾವಲಂಬಿ ಭಾರತದ ಸಂತೋಷ. ಕರ್ತವ್ಯವು ಮುಂಬರುವ ಪೀಳಿಗೆಗೆ ಉಜ್ವಲ ಭವಿಷ್ಯದ ಖಾತರಿಯಾಗಿದೆ. ಕರ್ತವ್ಯವು ಭಾರತ ಮಾತೆಯ ಜೀವಶಕ್ತಿಯ ಧ್ವಜಧಾರಿ. ಕರ್ತವ್ಯವು ರಾಷ್ಟ್ರಕ್ಕೆ ಭಕ್ತಿಯಿಂದ ನಿರ್ವಹಿಸುವ ಪ್ರತಿಯೊಂದು ಕಾರ್ಯವಾಗಿದೆ. ಕರ್ತವ್ಯವು ನಾಗರಿಕ ದೇವೋ ಭವವನ್ನು ಅನುಷ್ಠಾನ  ಮಾಡುವ ಜಾಗೃತ ಮಾರ್ಗವಾಗಿದೆ.

 

ಸ್ನೇಹಿತರೇ,

ಕರ್ತವ್ಯದ ಈ ಮನೋಭಾವದೊಂದಿಗೆ, ಅದನ್ನು ಸರ್ವೋಚ್ಚವಾಗಿಟ್ಟುಕೊಂಡು, ನಾವು ಸೇವಾ ತೀರ್ಥ ಮತ್ತು ಹೊಸದಾಗಿ ನಿರ್ಮಿಸಲಾದ ಸಂಕೀರ್ಣಗಳನ್ನು ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಪ್ರವೇಶಿಸಬೇಕು.

ಸ್ನೇಹಿತರೇ,

ಇಂದು, ಭಾರತವು ಹೊಸ ಎತ್ತರಗಳತ್ತ, ಹೊಸ ಯುಗದತ್ತ ವೇಗವಾಗಿ ಮುನ್ನಡೆಯುತ್ತಿದೆ. ಮುಂಬರುವ ವರ್ಷಗಳಲ್ಲಿ, ನಮ್ಮ ಗುರುತನ್ನು ಕೇವಲ ಆರ್ಥಿಕತೆಯಿಂದ ವ್ಯಾಖ್ಯಾನಿಸಲಾಗುವುದಿಲ್ಲ, ಆದರೆ ನಮ್ಮ ಆಡಳಿತದ ಗುಣಮಟ್ಟ, ನಮ್ಮ ನೀತಿಗಳ ಸ್ಪಷ್ಟತೆ ಮತ್ತು ನಮ್ಮ ಕರ್ಮಯೋಗಿಗಳ ಸಮರ್ಪಣೆಯಿಂದ ವ್ಯಾಖ್ಯಾನಿಸಲಾಗುತ್ತದೆ. ಸೇವಾ ತೀರ್ಥ ಮತ್ತು ಕರ್ತವ್ಯ ಭವನದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಕೇವಲ ಒಂದು ಕಡತದ ನಿರ್ಣಯವಾಗಿರುವುದಿಲ್ಲ - ಇದು 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ದಿಕ್ಕನ್ನು ರೂಪಿಸುತ್ತದೆ. ನೆನಪಿಡಿ, 2047 ಕೇವಲ ದಿನಾಂಕವಲ್ಲ; ಇದು 1.4 ಶತಕೋಟಿ ಕನಸುಗಳಿಗೆ ಗಡುವು. ಈ ಪ್ರಯಾಣದಲ್ಲಿ, ಪ್ರತಿಯೊಂದು ಸಂಸ್ಥೆಯೂ ಮುಖ್ಯವಾಗಿದೆ, ಪ್ರತಿಯೊಬ್ಬ ಅಧಿಕಾರಿಯೂ ಮುಖ್ಯವಾಗಿದ್ದಾರೆ, ಪ್ರತಿಯೊಬ್ಬ ಉದ್ಯೋಗಿಯೂ, ಪ್ರತಿಯೊಬ್ಬ ಕರ್ಮಯೋಗಿಯೂ ಮುಖ್ಯವಾಗಿದ್ದಾರೆ. ಸೇವಾ ತೀರ್ಥವು ಸೂಕ್ಷ್ಮ ಆಡಳಿತದ ಸಂಕೇತವಾಗಬೇಕೆಂದು, ನಾಗರಿಕ ಕೇಂದ್ರಿತ ಆಡಳಿತದ  ಮಾದರಿಯಾಗಬೇಕೆಂದು, ಅಧಿಕಾರವಲ್ಲ, ಸೇವೆ ಗೋಚರಿಸುವ ಸ್ಥಳವಾಗಬೇಕೆಂದು ನಾನು ಬಯಸುತ್ತೇನೆ; ಅಲ್ಲಿ ಬದ್ಧತೆ ಇರುತ್ತದೆ, ಸ್ಥಾನಮಾನವಲ್ಲ, ಅಲ್ಲಿ ಸ್ಪಷ್ಟತೆ ಇರುತ್ತದೆ; ಅಲ್ಲಿ ಜವಾಬ್ದಾರಿ, ಇರುತ್ತದೆ, ಅಧಿಕಾರವಲ್ಲ. ನಮ್ಮ ಸಂಕಲ್ಪವು ಇತಿಹಾಸವನ್ನು ಬರೆಯುತ್ತದೆ ಮತ್ತು ನಮ್ಮ ಕಠಿಣ ಪರಿಶ್ರಮವು ಪೀಳಿಗೆಗೆ ಮಾರ್ಗದರ್ಶನ ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ. ನಾನು ಕೆಂಪು ಕೋಟೆಯಿಂದ ಹೇಳಿದಂತೆ: "ಇದು ಸಮಯ, ಇದು ಸರಿಯಾದ ಸಮಯ." ಪ್ರತಿ ಕ್ಷಣವನ್ನು ಉತ್ತಮವಾಗಿ ಬಳಸಿಕೊಳ್ಳೋಣ. "ರಾಷ್ಟ್ರ ಮೊದಲು" ಎಂಬ ಮನೋಭಾವದಿಂದ ನಾವು ವರ್ತಿಸೋಣ, ಇದರಿಂದ ಭವಿಷ್ಯದ ಶತಮಾನಗಳು ಹೇಳಬಹುದು-, ಇದು ಭಾರತವು ತನ್ನ ಹಣೆಬರಹವನ್ನು ಮರು ವ್ಯಾಖ್ಯಾನಿಸಿದ ಸಮಯ; ಭಾರತವು ಹೊಸ ಶಕ್ತಿ ಮತ್ತು ಹೊಸ ವೇಗದೊಂದಿಗೆ ಸಾವಿರ ವರ್ಷಗಳ ಉಜ್ವಲ ಭವಿಷ್ಯದತ್ತ ದಿಟ್ಟ ಹೆಜ್ಜೆಗಳನ್ನು ಇಟ್ಟ ಸಮಯ ಎಂದು. ಈ ದೃಢನಿಶ್ಚಯದೊಂದಿಗೆ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ತುಂಬಾ ಧನ್ಯವಾದಗಳು.

ವಂದೇ ಮಾತರಂ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
GIFT City scales new heights as India's 1st international finance and IT hub

Media Coverage

GIFT City scales new heights as India's 1st international finance and IT hub
NM on the go

Nm on the go

Always be the first to hear from the PM. Get the App Now!
...
Prime Minister shares address by Shri Amit Shah in Lok Sabha on India’s decisive fight against Naxalism
March 30, 2026

The Prime Minister, Shri Narendra Modi shared the outstanding speech delivered by Union Home Minister Shri Amit Shah ji, noting that it was filled with important facts, historical context, and a detailed account of the Government’s efforts over the past decade. Shri Modi highlighted that for decades, the retrograde Maoist ideology had an adverse impact on the development of several regions, with Left Wing Extremism severely affecting the future of countless youngsters.

He further underlined that over the last ten years, the Government has worked towards uprooting this menace, while simultaneously ensuring that the benefits of development reach areas affected by Naxalism. The Prime Minister reaffirmed that the Government will continue to focus on strengthening good governance and ensuring peace and prosperity for all.

The Prime Minister posted on X:

“This is an outstanding speech by the Home Minister, Shri Amit Shah Ji, filled with important facts, historical context and the efforts of our Government in the last decade.

For decades, the retrograde Maoist ideology had an adverse impact on the development of several regions. Left Wing Extremism has ruined the future of countless youngsters.

In the last decade, our Government has worked towards uprooting this menace and at the same time ensuring the fruits of development reach areas affected by Naxalism. We will keep focusing on furthering good governance and ensuring peace and prosperity for all.”