ನನ್ನ ಸಂಪುಟ ಸಹೋದ್ಯೋಗಿಗಳಾದ ಡಾ. ಜಿತೇಂದ್ರ ಸಿಂಗ್, ಪಿ.ಕೆ ಮಿಶ್ರಾ ಜಿ, ರಾಜೀವ್ ಗೌಬಾ ಜಿ, ಶ್ರೀ ವಿ.ಶ್ರೀನಿವಾಸನ್ ಜಿ ಮತ್ತು ದೇಶಾದ್ಯಂತ ವರ್ಚುವಲ್ ಮಾದರಿಯಲ್ಲಿ ಈ ಕಾರ್ಯಕ್ರಮಕ್ಕೆ ಪಾಲ್ಗೊಂಡಿರುವ ಎಲ್ಲಾ ನಾಗರಿಕ ಸೇವೆಗಳ ಸದಸ್ಯರು ಮತ್ತು ಇಲ್ಲಿ ಉಪಸ್ಥಿತರಿರುವ ಇತರೆ ಸಹೋದ್ಯೋಗಿಗಳು, ಮಹಿಳೆಯರು ಮತ್ತು ಮಹನೀಯರೇ! ಎಲ್ಲಾ ಕರ್ಮಯೋಗಿಗಳಿಗೆ ನಾಗರಿಕ ಸೇವಾ ದಿನದ ಶುಭಾಶಯಗಳು. ಇಂದು ಈ ಪ್ರಶಸ್ತಿಗಳನ್ನು ಪಡೆದ ಗೆಳೆಯರಿಗೆ ಹಾಗೂ ಅವರ ಇಡೀ ತಂಡಕ್ಕೆ ಮತ್ತು ಅವರು ಸೇರಿರುವ ರಾಜ್ಯಗಳಿಗೆ ಅಭಿನಂದನೆಗಳು.
ನನ್ನ ಈ ಅಭ್ಯಾಸ ಒಳ್ಳೆಯದಲ್ಲ. ಆದರೆ, ನಾನು ಯಾವುದೇ ಉದ್ದೇಶವಿಲ್ಲದೆ ಅಭಿನಂದಿಸಲು ಹೋಗುವುದಿಲ್ಲ. ನಾವು ಕೆಲವು ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಬಹುದೇ? ನನ್ನ ಮನಸ್ಸಿನಲ್ಲಿ ಕೆಲವು ಸಮಸ್ಯೆಗಳಿವೆ, ನಿಮ್ಮ ಆಡಳಿತ ವ್ಯವಸ್ಥೆಗೆ ಅನುಗುಣವಾಗಿ ನೀವು ನಡೆಯಬೇಕು, ಆತುರದ ಅನುಸರಣೆ ಸರಿಯಲ್ಲ. ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಹಲವಾರು ತರಬೇತಿ ಸಂಸ್ಥೆಗಳು ದೇಶಾದ್ಯಂತ ಹರಡಿಕೊಂಡಿವೆ. ಅದು ವಿದೇಶಾಂಗ ವ್ಯವಹಾರಗಳ ಸಚಿವಾಲಯವಿರಬಹುದು, ಪೊಲೀಸ್ ಇಲಾಖೆಯೇ ಇರಬಹುದು, ಕಂದಾಯ ಇಲಾಖೆಯೇ ಇರಬಹುದು. ಪ್ರಶಸ್ತಿ ವಿಜೇತರು ಪ್ರತಿ ವಾರ ಕನಿಷ್ಠ ಒಂದು ಅಥವಾ ಒಂದೂವರೆ ತಾಸು ಅಲ್ಲಿ ಕಾಲ ಕಳೆಯಬೇಕು ಮತ್ತು ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಅವರ ಪರಿಕಲ್ಪನೆಗಳು (ನಾಗರಿಕ ಸೇವೆಗಳಿಗೆ), ಅವರ ತಯಾರಿ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಾಸ್ತವ ಪ್ರಸ್ತುತಿ ನೀಡಬೇಕು. ಪ್ರತಿ ವಾರ ಇಬ್ಬರು ಪ್ರಶಸ್ತಿ ವಿಜೇತರು ಮತ್ತು ಪ್ರಶಿಕ್ಷಣಾರ್ಥಿಗಳ ನಡುವೆ ಪ್ರಶ್ನೋತ್ತರ ಅವಧಿಯಿದ್ದರೆ, ಹೊಸ ಪೀಳಿಗೆಗೆ ಅವರ ಪ್ರಾಯೋಗಿಕ ಅನುಭವಗಳಿಂದ ಸಾಕಷ್ಟು ಪ್ರಯೋಜನವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸಾಧಕರಿಗೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಸಂತಸ ನೀಡುತ್ತದೆ. ಕ್ರಮೇಣ, ಆವಿಷ್ಕಾರಗಳು ಮತ್ತು ಹೊಸ ಸೇರ್ಪಡೆಗಳು ಇರುತ್ತವೆ. ಎರಡನೆಯದಾಗಿ, ಪ್ರಶಸ್ತಿ ಪಡೆದ 16 ಸಹೋದ್ಯೋಗಿಗಳು ತಾವು ಪ್ರತಿನಿಧಿಸುವ 16 ಜಿಲ್ಲೆಗಳಿಗೆ ಒಂದು ಯೋಜನೆ ಆಯ್ಕೆ ಮಾಡಿಕೊಳ್ಳಬೇಕು. ಯಾರನ್ನಾದರೂ ಉಸ್ತುವಾರಿಯನ್ನಾಗಿ ಮಾಡಿ. 3 ಅಥವಾ 6 ತಿಂಗಳಲ್ಲಿ ಆ ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ಉದ್ದೇಶಪೂರ್ವಕವಾಗಿ ಯೋಚಿಸಿ. ಉದಾಹರಣೆಗೆ, ಒಂದು ನಿರ್ದಿಷ್ಟ ಯೋಜನೆಯನ್ನು ಆಯ್ಕೆ ಮಾಡಿದ 20 ಜಿಲ್ಲೆಗಳಿದ್ದರೆ. ಎಲ್ಲಾ 20 ಜಿಲ್ಲೆಗಳಲ್ಲಿ ಆ ಯೋಜನೆಯ ಉಸ್ತುವಾರಿ ಹೊಂದಿರುವ ಜನರೊಂದಿಗೆ ವರ್ಚುವಲ್ ಶೃಂಗಸಭೆ ನಡೆಸಬೇಕು. ಆ ಯೋಜನೆ ಅನುಷ್ಠಾನಗೊಳಿಸಲು ಯಾವ ಜಿಲ್ಲೆ ಉತ್ತಮವಾಗಿದೆ ಎಂಬುದನ್ನು ಕಂಡುಕೊಳ್ಳಬೇಕು. ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುವಂತೆ ಇದನ್ನು ಸಾಂಸ್ಥಿಕಗೊಳಿಸಬೇಕು. ‘ಒಂದು ಯೋಜನೆ, ಒಂದು ಜಿಲ್ಲೆ’ ಎಂಬ ವಿಷಯದಲ್ಲೂ ಸ್ಪರ್ಧೆ ನಡೆಸಬಹುದು. ಒಂದು ವರ್ಷದ ನಂತರ ನೀವು ಭೇಟಿಯಾದಾಗ, ಆ ಯೋಜನೆಯ ಬಗ್ಗೆ ಚರ್ಚೆಯಾಗಬೇಕು. ಇದಕ್ಕಾಗಿ ಪ್ರಶಸ್ತಿಗಳು ಇರಲೇಬೇಕು ಎಂದೇನೂ ಇಲ್ಲ. ಆದರೆ 2022ರ ವಿಜೇತರು ಆ ಯೋಜನೆಯನ್ನು ಹೇಗೆ ಜಾರಿಗೆ ತಂದರು ಎಂಬುದನ್ನು ಚರ್ಚಿಸಬೇಕು. ಇದನ್ನು ಸಾಂಸ್ಥಿಕಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ. ಎಲ್ಲಿಯವರೆಗೆ ಯಾವುದನ್ನಾದರೂ ದಾಖಲೆಯಲ್ಲಿ ಇಡುವುದಿಲ್ಲವೋ ಅಲ್ಲಿಯವರೆಗೆ ಅದು ಮುಂದೆ ಹೋಗುವುದಿಲ್ಲ ಎಂಬ ಸರ್ಕಾರದ ಸ್ವಭಾವವನ್ನು ನಾನು ನೋಡಿದ್ದೇನೆ. ಆದ್ದರಿಂದ, ಕೆಲವೊಮ್ಮೆ, ಏನನ್ನಾದರೂ ಸಾಂಸ್ಥಿಕಗೊಳಿಸಲು ಒಂದು ಸಂಸ್ಥೆ ಸ್ಥಾಪಿಸಬೇಕಾಗುತ್ತದೆ. ಆದ್ದರಿಂದ, ಅಗತ್ಯವಿದ್ದರೆ, ಈ ವ್ಯವಸ್ಥೆಯನ್ನು ಸಹ ರಚಿಸಬೇಕು. ಇಲ್ಲವಾದರೆ ಏನಾಗುತ್ತದೆ ಎಂದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ನಿರ್ಧರಿಸಿ 365 ದಿನಗಳನ್ನು ಅದರಲ್ಲೇ ಕಳೆಯುತ್ತಾರೆ. ಕೆಲವರು ತಮ್ಮ ಸಾಧನೆಯನ್ನು ಸಾಧಿಸುತ್ತಾರೆ ಮತ್ತು ಪ್ರಶಸ್ತಿಗಳನ್ನು ಸಹ ಪಡೆಯುತ್ತಾರೆ. ಆದರೆ ಇನ್ನೂ ಅನೇಕರು ಹಿಂದುಳಿಯುತ್ತಾರೆ, ಅಂತಹ ನ್ಯೂನತೆಗಳು ಇರಬಾರದು. ಆರೋಗ್ಯಕರ ಸ್ಪರ್ಧೆಯ ವಾತಾವರಣ ಇರಬೇಕು. ನಾವು ಆ ದಿಕ್ಕಿನಲ್ಲಿ ಏನಾದರೂ ಯೋಚಿಸಿದರೆ, ಬಹುಶಃ ನಾವು ಬಯಸಿದ ಬದಲಾವಣೆಯನ್ನು ತರಬಹುದು.
ಸ್ನೇಹಿತರೆ,
ನಾನು ಕಳೆದ 20-22 ವರ್ಷಗಳಿಂದ ನಿಮ್ಮಂತಹ ಸಹೋದ್ಯೋಗಿಗಳೊಂದಿಗೆ ಈ ರೀತಿಯ ವಿಚಾರ ವಿನಿಮಯ ನಡೆಸುತ್ತಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅದು ಚಿಕ್ಕ ರೂಪದಲ್ಲಿತ್ತು. ಆದರೆ ಈಗ ನಾನು ಪ್ರಧಾನಿಯಾದ ನಂತರ ಅದನ್ನು ವಿಸ್ತರಿಸಿದ್ದೇನೆ. ಪರಿಣಾಮವಾಗಿ, ನಾನು ನಿಮ್ಮಿಂದ ಏನನ್ನಾದರೂ ಕಲಿಯುತ್ತೇನೆ, ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತಿದೆ. ಈ ವಿಚಾರ ವಿನಿಮಯಗಳು ಉತ್ತಮ ಸಂವಹನ ಸಾಧನವಾಗಿ ಮಾರ್ಪಟ್ಟಿವೆ. ನಿಮ್ಮೊಂದಿಗೆ ಇದು ಒಂದು ರೀತಿಯ ಸಂಪ್ರದಾಯವಾಗಿದೆ. ಕೊರೊನಾ ಸಮಯದಲ್ಲಿ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ನನಗೆ ಸ್ವಲ್ಪ ಕಷ್ಟವಾಯಿತು. ಇಲ್ಲದಿದ್ದರೆ, ನಾನು ಯಾವಾಗಲೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಪ್ರಯತ್ನಿಸುತ್ತಿದ್ದೆ. ನಿಮ್ಮಿಂದ ಕಲಿಯಲು, ನಿಮ್ಮಿಂದ ಅರ್ಥ ಮಾಡಿಕೊಳ್ಳಲು ಮತ್ತು ಸಾಧ್ಯವಾದರೆ, ನನ್ನ ವೈಯಕ್ತಿಕ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಅಥವಾ ಅವುಗಳನ್ನು ವ್ಯವಸ್ಥೆಗಳಲ್ಲಿ ಪರಿಚಯಿಸಲು ಪ್ರಯತ್ನಿಸುತ್ತೇನೆ. ಇದು ನಮ್ಮನ್ನು ಮುಂದಕ್ಕೆ ಕೊಂಡೊಯ್ಯುವ ಒಂದು ಪ್ರಕ್ರಿಯೆ. ಯಾರೊಂದಿಗಾದರೂ ಕಲಿಯಲು ಯಾವಾಗಲೂ ಅವಕಾಶವಿದ್ದೇ ಇದೆ. ಪ್ರತಿಯೊಬ್ಬರೂ ಏನನ್ನಾದರೂ ಅಥವಾ ಇನ್ನೊಂದನ್ನು ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದಾದರೆ ನಾವು ಆ ಅಭ್ಯಾಸವನ್ನು ಬೆಳೆಸಿಕೊಂಡರೆ ಅದನ್ನು ಸ್ವಾಭಾವಿಕವಾಗಿ ಸ್ವೀಕರಿಸಬೇಕು ಎಂದು ನಮಗೆ ಅನಿಸುತ್ತಿದೆ.
ಸ್ನೇಹಿತರೆ,
ಇದು ನಿತ್ಯದ ಕಾರ್ಯಕ್ರಮವಲ್ಲ. ನಾನು ಇದನ್ನು ವಿಶೇಷವಾಗಿ ಪರಿಗಣಿಸುತ್ತೇನೆ, ಏಕೆಂದರೆ ದೇಶವು ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಮಯದಲ್ಲಿ ಈ ಘಟನೆ ನಡೆಯುತ್ತಿದೆ. ನಾವು ಒಂದು ಕೆಲಸ ಮಾಡಬಹುದೇ? ಸ್ವಾಭಾವಿಕವಾಗಿ ಹೊಸ ಉತ್ಸಾಹ ಹುಟ್ಟುಹಾಕುವ ಕೆಲವು ವಿಷಯಗಳಿವೆ. ಉದಾಹರಣೆಗೆ, ಕಳೆದ 75 ವರ್ಷಗಳಲ್ಲಿ ಜಿಲ್ಲೆಯ ಮುಖ್ಯಸ್ಥರಾಗಿ ಕೆಲಸ ಮಾಡಿದ ಎಲ್ಲ ಜನರನ್ನು ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ನೀವು ಆಹ್ವಾನಿಸಬಹುದು. ಕೆಲವರು ಬದುಕಿರಬಹುದು, ಕೆಲವರು ಇಲ್ಲದಿರಬಹುದು. ಅವರು 30-40 ವರ್ಷಗಳ ನಂತರ ಹಿಂದಿರುಗಲು ಮತ್ತು ತಮ್ಮ ಸಮಯವನ್ನು ನೆನಪಿಸಿಕೊಳ್ಳಲು ಶಕ್ತರಾಗುತ್ತಾರೆ. 30 ಅಥವಾ 40 ವರ್ಷಗಳ ಹಿಂದೆ ಆ ಜಿಲ್ಲೆಯಲ್ಲಿ ಕೆಲಸ ಮಾಡಿದವರು ಹೊಸ ಶಕ್ತಿಯೊಂದಿಗೆ ಹಿಂದಿರುಗುತ್ತಾರೆ. ಆ ಜಿಲ್ಲೆಯಲ್ಲಿ ಹಿಂದೆ ಕೆಲಸ ಮಾಡಿದ ಯಾರಾದರೂ ಸಂಪುಟ ಕಾರ್ಯದರ್ಶಿಯಾಗಿರಬಹುದು. ನಾವು ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಗೋಡ್ಬೋಲೆ ಜೀ ಅಥವಾ ದೇಶಮುಖ್ ಜೀ ಇದ್ದುದರಿಂದ ಈ ಆಲೋಚನೆಯು ಮನಸ್ಸಿಗೆ ಬಂತು. ನಾನು ಒಬ್ಬರ ಹೆಸರು ಮರೆತಿದ್ದೇನೆ, ಅವರು ಸಂಪುಟ ಕಾರ್ಯದರ್ಶಿಯಾಗಿದ್ದರು. ಅವರು ತಮ್ಮ ನಿವೃತ್ತಿಯ ನಂತರ ರಕ್ತದಾನ ಅಭಿಯಾನದಲ್ಲಿ ತಮ್ಮ ಜೀವನಪೂರ್ತಿ ಕಳೆದರು. ಒಮ್ಮೆ ಅವರು ಇದೇ ಪ್ರಚಾರಕ್ಕಾಗಿ ಗುಜರಾತ್ಗೆ ಬಂದಿದ್ದರು. ನಾನು ಅವರನ್ನು ಭೇಟಿಯಾದಾಗ ಬಾಂಬೆ ರಾಜ್ಯ ಇತ್ತು. ಆಗ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರತ್ಯೇಕವಾಗಿರಲಿಲ್ಲ. ಅವರು ಬನಸ್ಕಾಂತದಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ಮಹಾರಾಷ್ಟ್ರ ರಚನೆಯಾದ ನಂತರ ಅವರು ಮಹಾರಾಷ್ಟ್ರ ಕೇಡರ್ಗೆ ಹೋದರು. ನಂತರ ಅವರು ಭಾರತ ಸರ್ಕಾರಕ್ಕೆ ಸೇರಿದರು. ಅವರ ಸಾಧನೆ ಕೇಳಿದ ತಕ್ಷಣ, ನಾನು ಅವರೊದಿಗೆ ಸಂಪರ್ಕ ಹೊಂದಿದ್ದೇನೆ. ಹಾಗಾಗಿ, ಬನಸ್ಕಾಂತ ಕೇಡರ್ನಲ್ಲಿ ಸಮಯ ಹೇಗಿತ್ತು ಮತ್ತು ಅವರು ಹೇಗೆ ಕೆಲಸ ಮಾಡುತ್ತಿದ್ದರು ಎಂದು ನಾನು ಅವರನ್ನು ಕೇಳಿದೆ. ಕೆಲವು ವಿಷಯಗಳು ಚಿಕ್ಕದಾಗಿ ಕಾಣಿಸಬಹುದು, ಆದರೆ ಅವುಗಳ ಸಾಮರ್ಥ್ಯ ದೊಡ್ಡದಾಗಿದೆ. ಕೆಲವೊಮ್ಮೆ ಏಕತಾನತೆಯ ವ್ಯವಸ್ಥೆಗೆ ಜೀವನವನ್ನು ತರುವುದು ಬಹಳ ಮುಖ್ಯವಾಗುತ್ತದೆ. ವ್ಯವಸ್ಥೆಗಳು ಜೀವಂತವಾಗಿರಬೇಕು ಮತ್ತು ಕ್ರಿಯಾತ್ಮಕವಾಗಿರಬೇಕು. ನಾವು ವಯಸ್ಸಾದವರನ್ನು ಭೇಟಿಯಾದಾಗ, ಅವರ ಕಾಲದಲ್ಲಿ ವ್ಯವಸ್ಥೆಗಳು ಹೇಗೆ ಅಭಿವೃದ್ಧಿಗೊಂಡವು ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. ಅವರು ನಮಗೆ ಹಿನ್ನೆಲೆ ಮಾಹಿತಿ ಮತ್ತು ಅದೇ ಸಂಪ್ರದಾಯವನ್ನು ಮುಂದುವರಿಸಬೇಕೆ ಅಥವಾ ಬದಲಾವಣೆಗಳನ್ನು ಪರಿಚಯಿಸಬೇಕೆ ಎಂಬುದರ ಕುರಿತು ನಮಗೆ ಬಹಳಷ್ಟು ಕಲಿಸುತ್ತಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಿಮ್ಮ ಜಿಲ್ಲೆಯ ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳನ್ನು ಆಹ್ವಾನಿಸುವ ಮೂಲಕ ನೀವು ಕಾರ್ಯಕ್ರಮವನ್ನು ನಡೆಸಬೇಕೆಂದು ನಾನು ಬಯಸುತ್ತೇನೆ. ಇದು ನಿಮ್ಮ ಜಿಲ್ಲೆಗೆ ಹೊಸ ಅನುಭವವಾಗಲಿದೆ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ಹಿಂದಿನ ಎಲ್ಲ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ಕರೆಯಬೇಕು. ಪ್ರಧಾನಿಯವರು ಹಿಂದಿನ ಎಲ್ಲಾ ಸಂಪುಟ ಕಾರ್ಯದರ್ಶಿಗಳ ಜೊತೆಯೂ ಸಭೆ ನಡೆಸಬೇಕು. ಇಂದು ಜೀವಂತವಾಗಿರುವ ಮತ್ತು ದೇಶಕ್ಕೆ ಕೊಡುಗೆ ನೀಡಿದ ಅನೇಕ ನಾಗರಿಕ ಸೇವೆಗಳ ಅಧಿಕಾರಿಗಳಿದ್ದಾರೆ. 75 ವರ್ಷಗಳ ಸ್ವಾತಂತ್ರ್ಯದ ಈ ಪಯಣದಲ್ಲಿ ನಾಗರಿಕ ಸೇವೆಯು ಸರ್ದಾರ್ ಪಟೇಲ್ ನೀಡಿದ ಕೊಡುಗೆಯಾಗಿದೆ. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅವರನ್ನು ಸ್ಮರಿಸಿ ಗೌರವಿಸುವುದು ಇಡೀ ನಾಗರಿಕ ಸೇವೆಗಳನ್ನು ಗೌರವಿಸಿದಂತಾಗುತ್ತದೆ. ಈ 75 ವರ್ಷಗಳ ಪ್ರಯಾಣವನ್ನು ವೈಭವೀಕರಿಸುವ ಮೂಲಕ ಮತ್ತು ಹೊಸ ಪ್ರಜ್ಞೆಯೊಂದಿಗೆ ಮುನ್ನಡೆಯುವ ಮೂಲಕ ನಾನು ಗೌರವ ಅರ್ಪಿಸಲು ಬಯಸುತ್ತೇನೆ. ಈ ದಿಕ್ಕಿನಲ್ಲಿ ನಾವು ಪ್ರಯತ್ನಗಳನ್ನು ಮಾಡಬಹುದು.
ಸ್ನೇಹಿತರೆ,
ಈ ಅಮೃತ ಕಾಲವು ಕಳೆದ 7 ದಶಕಗಳನ್ನು ಮಾತ್ರ ವೈಭವೀಕರಿಸುತ್ತಿಲ್ಲ. ನಾವು 60ರಿಂದ 70ರ ದಶಕದಲ್ಲಿ ಮತ್ತು ನಂತರ 75ರ ದಶಕಕ್ಕೆ ಹಿಂದಿರುಗಿ ನೋಡಿದಾಗ ಇದು ವಾಡಿಕೆಯ ವ್ಯವಹಾರವಾಗಿದೆ. ಆದರೆ 2047ರಲ್ಲಿ ಭಾರತವು ಸ್ವಾತಂತ್ರ್ಯ ಗಳಿಸಿದ ಶತಮಾನೋತ್ಸವ ಆಚರಿಸುವಾಗ, ಅದು ಸಾಂಪ್ರದಾಯಿಕ ದಿನಚರಿಯಾಗಲು ಸಾಧ್ಯವಿಲ್ಲ. ಈ ಅಮೃತ ಮಹೋತ್ಸವವು ಮುಂದಿನ 25 ವರ್ಷಗಳ ಸಾಧನೆಗೆ, ಇಚ್ಛಿತ ಗುರಿ ಸಾಧನೆಗೆ ರಾಜಮಾರ್ಗವಾಗಬೇಕು. ಭಾರತ@100 ದೃಷ್ಟಿಕೋನವು ದೇಶದ ಎಲ್ಲಾ ಜಿಲ್ಲೆಗಳಿಗೆ ಹರಡಬೇಕು. 25 ವರ್ಷಗಳ ನಂತರ ನಿಮ್ಮ ಜಿಲ್ಲೆ ಹೇಗಿರಬೇಕು? ಏನೆಲ್ಲ ಸಾಧಿಸಬೇಕು ಎಂಬುದರ ವಿವರವಾದ ಪಟ್ಟಿ ಮಾಡಿ ಮತ್ತು ಸಾಧ್ಯವಾದರೆ, ಆ ಪಟ್ಟಿಯನ್ನು ಜಿಲ್ಲಾ ಕಚೇರಿಗಳಲ್ಲಿ ಪ್ರಕಟಿಸಿದರೆ, ಹೊಸ ಸ್ಫೂರ್ತಿ ಮತ್ತು ಹೊಸ ಉತ್ಸಾಹ ಇರುತ್ತದೆ. ಜಿಲ್ಲೆಯನ್ನು ಉನ್ನತೀಕರಿಸಲು ಹಲವಾರು ಚಟುವಟಿಕೆಗಳು ನಡೆಯಬೇಕು. ಕಳೆದ 75 ವರ್ಷಗಳಲ್ಲಿ, ನಾವು ನಮ್ಮ ರಾಜ್ಯ, ನಮ್ಮ ದೇಶವನ್ನು ನಿರ್ದಿಷ್ಟ ಸ್ಥಾನಕ್ಕೆ ಕೊಂಡೊಯ್ಯುವ ಗುರಿಗಳೊಂದಿಗೆ ಮುನ್ನಡೆದಿದ್ದೇವೆ. ಭಾರತ@100ರಲ್ಲಿ ಭಾರತದ ಜಿಲ್ಲೆಗಳನ್ನು ಎಲ್ಲಿಗೆ ಕೊಂಡೊಯ್ಯಬೇಕು? ನಿಮ್ಮ ಜಿಲ್ಲೆಯನ್ನು ಭಾರತದಲ್ಲಿಯೇ ನಂಬರ್ 1 ಮಾಡಲು ಪ್ರಯತ್ನಿಸಬೇಕು. ನಿಮ್ಮ ಜಿಲ್ಲೆ ಹಿಂದುಳಿದಿರುವ ಯಾವುದೇ ಕ್ಷೇತ್ರ ಇರಬಾರದು, ನಿಮ್ಮ ಜಿಲ್ಲೆ ಎಷ್ಟೇ ಪ್ರಾಕೃತಿಕ ಸಮಸ್ಯೆಗಳಿಂದ ನಲುಗಿದ್ದರೂ ಆ ಗುರಿ ಸಾಧಿಸಲು ನಿಮ್ಮ ಪ್ರಯತ್ನವಾಗಬೇಕು. ಈ ಸ್ಫೂರ್ತಿ, ಕನಸು ಮತ್ತು ಸಂಕಲ್ಪದೊಂದಿಗೆ ನಾವು ಮುಂದೆ ಸಾಗಿದರೆ ಮತ್ತು ಸಂಘಟಿತ ಪ್ರಯತ್ನಗಳನ್ನು ಮಾಡಿದರೆ, ಅದು ನಾಗರಿಕ ಸೇವೆಗಳಿಗೆ ಸ್ಫೂರ್ತಿಯಾಗಬಹುದು.
ಸ್ನೇಹಿತರೆ,
ಪ್ರತಿಯೊಬ್ಬ ಭಾರತೀಯನು ನಿಮ್ಮನ್ನು ಭರವಸೆ ಮತ್ತು ಆಶಾವಾದದಿಂದ ನೋಡುತ್ತಿದ್ದಾನೆ. ಅದನ್ನು ಅರಿತುಕೊಳ್ಳುವ ನಿಮ್ಮ ಪ್ರಯತ್ನಗಳಲ್ಲಿ ಯಾವುದೇ ಕೊರತೆ ಇರಬಾರದು. ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಫೂರ್ತಿ, ಸಂದೇಶ ಮತ್ತು ಸಂಕಲ್ಪವನ್ನು ಪುನರಾವರ್ತಿಸಬೇಕಾಗಿದೆ. ಆ ಸಂಕಲ್ಪಕ್ಕೆ ಬದ್ಧರಾಗಿ ಇಲ್ಲಿಂದ ಮುಂದೆ ಸಾಗಬೇಕಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಮತ್ತು ನಮ್ಮ ಮುಂದೆ 3 ಗುರಿಗಳು ಸ್ಪಷ್ಟವಾಗಿ ಇರಬೇಕು, ಅದರಲ್ಲಿ ಯಾವುದೇ ರಾಜಿ ಇರಬಾರದು ಎಂದು ನಾನು ನಂಬುತ್ತೇನೆ. ಇದು ಕೇವಲ 3 ಗುರಿಗಳಾಗಿರಬಾರದು; ಇತರ ಗುರಿಗಳೂ ಸೇರಬಹುದು. ಆದರೆ ನಾನು ಇಂದು ಕೇವಲ 3 ಗುರಿಗಳನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಮೊದಲನೆಯದಾಗಿ, ನಾವು ಯಾರಿಗಾಗಿ ದೇಶದಲ್ಲಿ ವ್ಯವಸ್ಥೆಗಳನ್ನು ನಡೆಸುತ್ತೇವೆ, ನಾವು ಖರ್ಚು ಮಾಡುವ ಬಜೆಟ್ ಮತ್ತು ನಾವು ಪಡೆಯುವ ಸ್ಥಾನಮಾನ? ಏಕೆ? ಈ ಕಠಿಣ ಕೆಲಸ ಯಾವುದಕ್ಕಾಗಿ? ಆದ್ದರಿಂದ ದೇಶದ ಶ್ರೀಸಾಮಾನ್ಯನ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಮೊದಲ ಗುರಿಯಾಗಬೇಕು, ಅವನ ಜೀವನ ಸುಖಕರವಾಗಿರಬೇಕು, ಅವನೂ ಅದನ್ನು ಅರಿತುಕೊಳ್ಳಬೇಕು. ದೇಶದ ಸಾಮಾನ್ಯ ನಾಗರಿಕರು ತಮ್ಮ ಸಾಮಾನ್ಯ ಜೀವನಕ್ಕಾಗಿ ಕಷ್ಟಪಡಬಾರದು, ಅವರಿಗೆ ಎಲ್ಲವೂ ಸುಲಭವಾಗಿ ಲಭ್ಯವಾಗಬೇಕು. ಈ ಗುರಿಯು ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿರಬೇಕು. ದೇಶದ ಶ್ರೀಸಾಮಾನ್ಯನ ಕನಸುಗಳನ್ನು ಸಂಕಲ್ಪವನ್ನಾಗಿ ಪರಿವರ್ತಿಸುವುದೇ ನಮ್ಮ ಪ್ರಯತ್ನಗಳ ದಿಕ್ಕು. ಅವನ ಕನಸುಗಳು ನಿಜವಾಗುವಂತೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ವ್ಯವಸ್ಥೆಯ ಜವಾಬ್ದಾರಿಯಾಗಿದೆ. ನಾವು ಸಹೋದ್ಯೋಗಿಯಾಗಿ ಅವರೊಂದಿಗೆ ಇರಬೇಕು. ಅವರ ಕನಸುಗಳು ನನಸಾಗುವವರೆಗೆ ಅವರನ್ನು ಹಿಡಿದಿಟ್ಟುಕೊಳ್ಳಬೇಕು. ಜೀವನವನ್ನು ಸುಲಭಗೊಳಿಸಲು ನಾವು ಏನು ಮಾಡಬಹುದೋ ಅದನ್ನು ಮಾಡಬೇಕು. ನಾನು ಎರಡನೇ ಗುರಿಯ ಬಗ್ಗೆ ಮಾತನಾಡಿದರೆ, ಅದು ಜಾಗತೀಕರಣದ ಬಗ್ಗೆ. ಜಾಗತೀಕರಣ ಎಂಬ ಪದವನ್ನು ಕಳೆದ ಹಲವು ದಶಕಗಳಿಂದ ಕೇಳುತ್ತಲೇ ಬಂದಿದ್ದೇವೆ. ಹಿಂದೆ, ಬಹುಶಃ, ಭಾರತವು ಈ ವಿಷಯಗಳನ್ನು ದೂರದಿಂದಲೇ ನೋಡುತ್ತಿತ್ತು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ. ಇಂದು ಭಾರತದ ಸ್ಥಾನ ಬದಲಾಗುತ್ತಿದೆ. ಜಾಗತಿಕ ಸನ್ನಿವೇಶದಲ್ಲಿ ಎಲ್ಲವನ್ನೂ ಮಾಡುವುದು ಸಮಯದ ಅಗತ್ಯವಾಗಿದೆ. ನಾವು ವಿಶ್ವದ ಅಗ್ರಸ್ಥಾನವನ್ನು ಹೇಗೆ ತಲುಪುತ್ತೇವೆ? ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ, ನಾವು ಕ್ಷೇತ್ರಗಳನ್ನು ಗುರುತಿಸಿ ತುಲನಾತ್ಮಕ ಅಧ್ಯಯನ ಮಾಡಬೇಕಾಗಿದೆ. ಈ ಸಂಕಲ್ಪದೊಂದಿಗೆ ನಾವು ನಮ್ಮ ಯೋಜನೆಗಳನ್ನು ಮತ್ತು ನಮ್ಮ ಆಡಳಿತದ ಮಾದರಿಗಳನ್ನು ರೂಪಿಸಬೇಕು. ನಮ್ಮ ಪ್ರಯತ್ನಗಳಲ್ಲಿ ಯಾವಾಗಲೂ ನಾವೀನ್ಯತೆ (ಹೊಸತನ) ಮತ್ತು ಆಧುನಿಕತೆ ಇರಬೇಕು ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಕಳೆದ ಶತಮಾನದ ಧೋರಣೆಗಳು ಮತ್ತು ನೀತಿಗಳಿಂದ ಮುಂದಿನ ಶತಮಾನದ ಶಕ್ತಿಯನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಹಿಂದೆ, ನಮ್ಮ ವ್ಯವಸ್ಥೆಗಳು, ನೀತಿಗಳು ಮತ್ತು ನಮ್ಮ ಸಂಪ್ರದಾಯಗಳಲ್ಲಿ ಬದಲಾವಣೆಯನ್ನು ತರಲು 30-40 ವರ್ಷಗಳನ್ನು ತೆಗೆದುಕೊಂಡರೆ, ನಾವು ಈಗ ವೇಗವಾಗಿ ಬದಲಾಗುತ್ತಿರುವ ಪ್ರಪಂಚದೊಂದಿಗೆ ಹೆಜ್ಜೆ ಹಾಕಬೇಕಾಗಿದೆ. ಇದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ನಾನು 3ನೇ ಗುರಿಯ ಬಗ್ಗೆ ಮಾತನಾಡಿದರೆ, ನಾಗರಿಕ ಸೇವೆಗಳು ಅದನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ನಾವು ಯಾವುದೇ ಸ್ಥಾನದಲ್ಲಿರಲಿ, ದೇಶದ ಏಕತೆ ಮತ್ತು ಸಮಗ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದಿರುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ. ಸ್ಥಳೀಯ ಮಟ್ಟದಲ್ಲಿ ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಎಷ್ಟೇ ಆಕರ್ಷಕವಾಗಿ ಅಥವಾ ಶ್ಲಾಘನೀಯವಾಗಿ ಕಂಡುಬಂದರೂ, ಅಂತಹ ನಿರ್ಧಾರವು ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಇದು ಇಂದು ಉತ್ತಮವಾಗಿ ಕಾಣಿಸಬಹುದು, ಆದರೆ ಅದು ಯೋಗ್ಯವಾಗಿರಬೇಕು. ಮಹಾತ್ಮ ಗಾಂಧೀಜಿ ಯಾವಾಗಲೂ ಅದನ್ನು ಒತ್ತಿ ಹೇಳುತ್ತಿದ್ದರು. ಹಾಗಾಗಿ, ಅವರನ್ನು ಸದಾ ಅನುಸರಿಸೋಣ. ನಕಾರಾತ್ಮಕತೆ ತ್ಯಜಿಸಿ, ನಮ್ಮ ನಿರ್ಧಾರಗಳು ದೇಶದ ಏಕತೆಯನ್ನು ಬಲಪಡಿಸುವ ಉತ್ಸಾಹದಲ್ಲಿರಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ವೈವಿಧ್ಯಮಯ ಭಾರತದಲ್ಲಿ ದೇಶದ ಏಕತೆ ಅತ್ಯುನ್ನತವಾಗಿರಬೇಕು. ಅದು ಮುಂದಿನ ಪೀಳಿಗೆಯ ಮಂತ್ರವಾಗಬೇಕು. ಆದ್ದರಿಂದ, ನಾನು ಹಿಂದೆಯೂ ಹೇಳಿದ್ದೇನೆ, ಇಂದು ಸಹ ಪುನರಾವರ್ತಿಸುತ್ತೇನೆ, ಮುಂದೆಯೂ ಹೇಳುತ್ತೇನೆ, ನಾವು ಏನು ಮಾಡಿದರೂ ಭಾರತ ಮೊದಲು ಎಂಬುದು ನಮ್ಮ ಆದ್ಯತೆಯಾಗಬೇಕು. ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗಳಲ್ಲಿ ವಿಭಿನ್ನ ರಾಜಕೀಯ ಸಿದ್ಧಾಂತಗಳಿರಬಹುದು, ಪ್ರಜಾಪ್ರಭುತ್ವದಲ್ಲಿ ಇದು ಅವಶ್ಯಕವಾಗಿದೆ. ಆದರೆ ದೇಶದ ಏಕತೆ ಮತ್ತು ಸಮಗ್ರತೆ ಬಲಪಡಿಸುವ ಮಂತ್ರವನ್ನು ನಾವು ನಿರಂತರವಾಗಿ ಮುಂದುವರಿಸಬೇಕು. ಅದು ಆಡಳಿತದ ವಿವಿಧ ಘಟಕಗಳ, ವಿಭಾಗಗಳ ಪ್ರಮುಖ ಸಾರವಾಗಿರಬೇಕು.
ಸ್ನೇಹಿತರೆ,
ನಾವು ಜಿಲ್ಲೆ, ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದರೆ ನನ್ನ ಜಿಲ್ಲೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಾನು ಏನನ್ನು ಆರಿಸಿಕೊಳ್ಳಬೇಕು ಎಂಬುದರ ಕುರಿತು ಪ್ರತ್ಯೇಕ ಸುತ್ತೋಲೆ ಇರಬೇಕೇ? ಇವುಗಳಲ್ಲಿ ಯಾವುದನ್ನು ಕಾರ್ಯಗತಗೊಳಿಸಬೇಕು? ಈ ಬಾರಿಯ ಒಲಿಂಪಿಕ್ಸ್ ಬಳಿಕ ದೇಶದಲ್ಲಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಿದ ಬೆನ್ನಲ್ಲೇ ಜಿಲ್ಲಾ ಮಟ್ಟದಲ್ಲಿ ಆಟಗಾರರನ್ನು ತಯಾರು ಮಾಡುವಲ್ಲಿ ಮುಂದಾಳತ್ವ ವಹಿಸುವವರು ಯಾರು? ಅದು ಯಾರ ಜವಾಬ್ದಾರಿ - ಅದು ಕ್ರೀಡಾ ಇಲಾಖೆಯೇ ಅಥವಾ ಇಡೀ ಆಡಳಿತವೇ? ಡಿಜಿಟಲ್ ಇಂಡಿಯಾದ ದೂರದೃಷ್ಟಿಯನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸುವುದು ಹೇಗೆ? ಇದಕ್ಕೆ ಈಗ ಯಾವುದೇ ಮಾರ್ಗಸೂಚಿಗಳ ಅಗತ್ಯವಿಲ್ಲ. ಇಂದು 2 ಕಾಫಿ ಟೇಬಲ್ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಕಾಫಿ ಟೇಬಲ್ ಪುಸ್ತಕಗಳು ಹಾರ್ಡ್ ಕಾಪಿಗಳಲ್ಲ, ಆದರೆ ಇ-ಕಾಪಿ ರೂಪದಲ್ಲಿವೆ ಎಂಬುದನ್ನು ಮರೆಯಬೇಡಿ. ಹಾರ್ಡ್ ಕಾಪಿಗಳ ಅಭ್ಯಾಸದಿಂದ ನಾವು ಹೊರಬರಬೇಕು. ಇಲ್ಲದಿದ್ದರೆ, ಏನಾಗುತ್ತದೆ ಎಂದರೆ ನಾವು ಹಲವಾರು ಪ್ರತಿಗಳನ್ನು ಪ್ರಕಟಿಸುತ್ತೇವೆ, ಆದರೆ ಯಾವುದೇ ಖರೀದಿದಾರರಿಲ್ಲ. ಇ-ಕಾಫಿ ಟೇಬಲ್ ಪುಸ್ತಕಗಳನ್ನು ತಯಾರಿಸುವ ಅಭ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕು. ಇಂತಹ ವಿಷಯಗಳನ್ನು ಹೇಳುವುದು ನಮ್ಮ ಜವಾಬ್ದಾರಿ. ಇದು ಸ್ಥಳೀಯ ಮಟ್ಟಕ್ಕೆ ಇಳಿಯಬೇಕು. ನಾನು ಹೇಳಬೇಕೆಂದರೆ ಎಲ್ಲವೂ ಲಭ್ಯವಿದೆ, ಜಿಲ್ಲೆಗಳಿಗೆ ಯಾವುದೇ ಮಾರ್ಗಸೂಚಿಗಳ ಅಗತ್ಯವಿಲ್ಲ. ಇಡೀ ಜಿಲ್ಲೆ ಏನನ್ನಾದರೂ ಸಾಧಿಸುವ ಸಂದರ್ಭಕ್ಕೆ ಏರಿದರೆ, ಅದು ಒಟ್ಟಾರೆ ಸಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ.
ಸ್ನೇಹಿತರೆ,
ಭಾರತದ ಶ್ರೇಷ್ಠ ಸಂಸ್ಕೃತಿಯ ವಿಶೇಷತೆ ಎಂದರೆ, ನಮ್ಮ ದೇಶವು ರಾಜ ಪ್ರಭುತ್ವ ಅಥವಾ ರಾಜ್ಯಗಳ ವ್ಯವಸ್ಥೆಗಳಿಂದ ರೂಪಿತವಾಗಿಲ್ಲ, ನಮ್ಮ ದೇಶದಲ್ಲಿ ಸಿಂಹಾಸನ ರಾಜರ ಪರಂಪರೆಯಿಂದ ರೂಪಿತವಾಗಿಲ್ಲ ಎಂದು ನಾನು ಬಹಳ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಈ ದೇಶದ ಶತಮಾನಗಳ ಹಿಂದಿನ ಸಂಪ್ರದಾಯ ಶ್ರಿಸಾಮಾನ್ಯನ ಸಾಮರ್ಥ್ಯ ಮತ್ತು ತಾಕತ್ತುಗಳೊಂದಿಗೆ ಮುನ್ನಡೆಯುವುದೇ ಆಗಿದೆ. ಇಂದು ನಾವು ಸಾಧಿಸಿದ್ದೆಲ್ಲವೂ ಸಾರ್ವಜನಿಕ ಸಹಭಾಗಿತ್ವ ಮತ್ತು ಸಮಾಜದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಅನೇಕ ಪೀಳಿಗೆಗಳ ಕೊಡುಗೆಯಿಂದಾಗಿ. ನಾವು ಬದಲಾವಣೆಗಳನ್ನು ಸ್ವೀಕರಿಸುವ ಮತ್ತು ಪುರಾತನ ಸಂಪ್ರದಾಯಗಳಿಗೆ ಕುರುಡಾಗಿ ಅಂಟಿಕೊಳ್ಳದ ಅಭಿವೃದ್ಧಿ ಹೊಂದುತ್ತಿರುವ ಸಮಾಜವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಜನ ನಾವು. ಬಹಳ ಹಿಂದೆಯೇ, ನಾನು ಅಮೆರಿಕದ ವಿದೇಶಾಂಗ ಸಚಿವಾಲಯದ ಜತೆ ಚರ್ಚೆ ನಡೆಸಿದ್ದೆ. ಆಗ ನನಗೆ ರಾಜಕೀಯದಲ್ಲಿ ಯಾವುದೇ ಐಡೆಂಟಿಟಿ ಇರಲಿಲ್ಲ. ನಾನೊಬ್ಬ ಸಾಮಾನ್ಯ ರಾಜಕೀಯ ಕಾರ್ಯಕರ್ತನಾಗಿದ್ದೆ. ಜಗತ್ತಿನಲ್ಲಿ ಯಾರಾದರೂ ನಂಬಿಕೆಯುಳ್ಳವರಾಗಲಿ ಅಥವಾ ನಾಸ್ತಿಕರಾಗಲಿ ಸಾವಿನ ನಂತರ ಮೌಲ್ಯಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ನಂಬುವುದಿಲ್ಲ ಎಂದು ನಾನು ಹೇಳಿದೆ. ಅದು ವೈಜ್ಞಾನಿಕವಾಗಿರಲಿ, ಇಲ್ಲದಿರಲಿ, ಸೂಕ್ತವಿರಲಿ, ಇಲ್ಲದಿರಲಿ ಬದಲಾವಣೆಗಳನ್ನು ಬಯಸುವುದಿಲ್ಲ. ಸಾವಿನ ನಂತರವೂ ಅವನು ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಬದ್ಧನಾಗಿರುತ್ತಾನೆ. ಗಂಗಾ ನದಿಯ ದಡದಲ್ಲಿ ಶ್ರೀಗಂಧದ ಮರದಲ್ಲಿ ಜ್ವಾಲೆಗೆ ದೇಹವನ್ನು ಒಪ್ಪಿಸಿದಾಗ ಮಾತ್ರ ಅಂತ್ಯಕ್ರಿಯೆಗಳು ಪೂರ್ಣಗೊಳ್ಳುತ್ತವೆ ಎಂದು ಹಿಂದೂ ಸಮಾಜ ನಂಬುತ್ತದೆ ಎಂದು ನಾನು ಹೇಳಿದೆ. ಆದರೆ ವಿದ್ಯುತ್ ಚಿತಾಗಾರಗಳು ಬಂದಾಗ ಅದೇ ಸಮಾಜ ಹಿಂಜರಿಯಲಿಲ್ಲ. ಈ ಸಮಾಜದಲ್ಲಿ ಬದಲಾವಣೆ ಒಪ್ಪಿಕೊಳ್ಳುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇರೊಂದಿಲ್ಲ. ಜಗತ್ತಿನಲ್ಲಿ ಸಮಾಜ ಎಷ್ಟೇ ಆಧುನಿಕವಾಗಿದ್ದರೂ ಮರಣಾ ನಂತರದ ನಂಬಿಕೆಗಳನ್ನು ಬದಲಾಯಿಸುವ ಶಕ್ತಿ ಅದಕ್ಕಿಲ್ಲ. ನಾವು ಮರಣೋತ್ತರ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿರುವ ಸಮಾಜಕ್ಕೆ ಸೇರಿದವರು. ಆದ್ದರಿಂದ, ಈ ದೇಶವು ಬದಲಾವಣೆಗಳನ್ನು ಸ್ವೀಕರಿಸಲು ಎಂದಿಗೂ ಸಿದ್ಧವಾಗಿದೆ ಮತ್ತು ಈಗ ಆ ಶ್ರೇಷ್ಠ ಸಂಪ್ರದಾಯಕ್ಕೆ ಪ್ರಚೋದನೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಾನು ಹೇಳುತ್ತೇನೆ. ನಾವು ಅದನ್ನು ವೇಗಗೊಳಿಸಲು ಕೆಲಸ ಮಾಡುತ್ತಿದ್ದೇವೆಯೇ? ಸ್ನೇಹಿತರೇ, ಫೈಲ್ಗಳನ್ನು ತಳ್ಳುವುದರಿಂದ ಜೀವನ ಬದಲಾಗುವುದಿಲ್ಲ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಆಡಳಿತಕ್ಕೆ ನಾಯಕತ್ವ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಇದು ಕೇವಲ ರಾಜಕೀಯ ನಾಯಕರ ಕೆಲಸವಲ್ಲ. ನಾಗರಿಕ ಸೇವೆಗಳಲ್ಲಿ ಪ್ರತಿಯೊಬ್ಬರೂ ನಾಯಕತ್ವ ನೀಡಬೇಕು. ಸಮಾಜದಲ್ಲಿ ಬದಲಾವಣೆಗಳನ್ನು ತರಲು ನೀವು ಸಿದ್ಧರಾಗಿರಬೇಕು. ಆಗ ಮಾತ್ರ ನಾವು ಬದಲಾವಣೆಗಳನ್ನು ತರಬಹುದು. ದೇಶವು ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಜಗತ್ತು ನಮ್ಮತ್ತ ಹೆಚ್ಚಿನ ಭರವಸೆಯಿಂದ ನೋಡುತ್ತಿದೆ. ಅದನ್ನು ಪೂರೈಸಲು ಸಿದ್ಧರಾಗುವುದು ನಮ್ಮ ಕರ್ತವ್ಯ. ನಿಯಮಗಳು ಮತ್ತು ಕಾನೂನುಗಳ ಜಾಲದಲ್ಲಿ ಹೊಸ ಪೀಳಿಗೆಯ ಧೈರ್ಯ ಮತ್ತು ಸಾಮರ್ಥ್ಯವನ್ನು ನಾವು ಹಿಡಿದಿಟ್ಟುಕೊಳ್ಳುವುದನ್ನು ನಾವು ನೋಡಬೇಕಾಗಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಹೆಜ್ಜೆಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು, ಸಮಯದೊಂದಿಗೆ ಚಲಿಸುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿರಬಹುದು. ಇದರಿಂದ ಹೊರಬಂದರೆ ಈ ಪರಿಸ್ಥಿತಿಯನ್ನು ಬದಲಾಯಿಸಬಹುದು. ಈಗ ನೀವು ನೋಡಿ, ಐಟಿ ವಲಯ ಇಡೀ ವಿಶ್ವದಲ್ಲೇ ಭಾರತದ ವರ್ಚಸ್ಸು ನಿರ್ಮಿಸಲು ಯಾರಾದರೂ ಪಾತ್ರ ವಹಿಸಿದ್ದರೆ, ಅದು 20-22-25 ವರ್ಷಗಳ ಯುವಕರು. ನಾವು ಅಡೆತಡೆಗಳನ್ನು ಸೃಷ್ಟಿಸಿ ನಿಯಮಗಳು ಮತ್ತು ನಿಬಂಧನೆಗಳನ್ನು ಹೇರಿದ್ದರೆ, ಈ ಐಟಿ ಕ್ಷೇತ್ರವು ಇಷ್ಟು ಅಭಿವೃದ್ಧಿ ಹೊಂದುತ್ತಿರಲಿಲ್ಲ. ಅದು ವಿಶ್ವಮಾನ್ಯವಾಗುತ್ತಿರಲಿಲ್ಲ.
ಸ್ನೇಹಿತರೆ,
ನಾವು ಅಂತಹ ನಿರ್ಬಂಧ, ನಿಬಂಧನೆಗಳಿಂದ ದೂರ ಉಳಿದಿದ್ದರಿಂದ ಅವರು ಮುಂದೆ ಹೋಗಲು ಸಾಧ್ಯವಾಯಿತು. ಆದ್ದರಿಂದ ಅವುಗಳಿಂದ ದೂರವಿದ್ದು, ಅವರನ್ನು ಪ್ರೋತ್ಸಾಹಿಸುವ ಮೂಲಕ ಜಗತ್ತನ್ನು ಬದಲಾಯಿಸಬಹುದು ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ನವೋದ್ಯಮಗಳ ಬಗ್ಗೆ ನಾವು ಹೆಮ್ಮೆ ಪಡಬಹುದು. 2022ರ ಮೊದಲ ತ್ರೈಮಾಸಿಕದಲ್ಲಿ, 14 ನವೋದ್ಯಮಗಳು ಯುನಿಕಾರ್ನ್ಗಳಾಗಿ ಮಾರ್ಪಟ್ಟಿವೆ. ಸ್ನೇಹಿತರ, ಇದೊಂದು ದೊಡ್ಡ ಸಾಧನೆ. ಈ ವರ್ಷದ ಕೇವಲ 3 ತಿಂಗಳಲ್ಲಿ ದೇಶದ ಯುವಕರು 14 ಯುನಿಕಾರ್ನ್ಗಳ ಸಾಧನೆ ಮಾಡಿದ್ದಾರೆ. ನಮ್ಮ ಪಾತ್ರವೇನು? ಕೆಲವೊಮ್ಮೆ ನಮ್ಮ ಜಿಲ್ಲೆಯ ಅಥವಾ 2ನೇ ಶ್ರೇಣಿಯ ನಗರದ ಯುವಕರ ಸಾಧನೆಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ, ಪತ್ರಿಕೆಗಳ ಮೂಲಕ ನಾವು ತಿಳಿದುಕೊಳ್ಳುತ್ತೇವೆ. ಆಡಳಿತ ವ್ಯವಸ್ಥೆಯ ಹೊರಗೂ ಸಮಾಜದ ಸಾಮರ್ಥ್ಯ ದೊಡ್ಡದಾಗಿದೆ ಎಂಬುದನ್ನು ಇದು ತೋರಿಸುತ್ತಿದೆ. ಮುಖ್ಯ ವಿಷಯವೆಂದರೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಅವರ ಪ್ರಯತ್ನಗಳನ್ನು ಗುರುತಿಸುತ್ತೇವೆ, ಹಾಗಾಗಬಾರದು. ಅವರೇಕೆ ಸರಕಾರದ ಭಾಗಾಗಲಿಲ್ಲ ಎಂದು ಹೇಳಬೇಕು. ನೀವು ಅವರನ್ನು ಶ್ಲಾಘಿಸಬೇಕು. ಏಕೆಂದರೆ ಅವರು ನಿಮ್ಮ ಸಮಯವನ್ನು ವ್ಯರ್ಥ ಮಾಡದೆ, ನಿಮಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ.
ಸ್ನೇಹಿತರೆ,
ನಾನು 2 ವಿಷಯಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ, ಆದರೆ ಕೃಷಿ ವಲಯದಲ್ಲೂ ಇಂತಹ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ನಮ್ಮ ದೇಶದ ರೈತರು ಆಧುನಿಕತೆ ಸ್ವೀಕರಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಬಹುಶಃ, ಅವರು ಸಂಖ್ಯೆಯಲ್ಲಿ ಕಡಿಮೆ ಇರಬಹುದು. ಆದರೆ ನನ್ನ ದೃಷ್ಟಿಕೋನದಲ್ಲಿ ಅವರು ನಿಂತ ನೀರಾಗಿದ್ದಾರೆಯೇ?
ಆದರೆ ಸ್ನೇಹಿತರೆ,
ನಾವು ಈ ಕೆಲಸಗಳನ್ನು ಮಾಡಿದರೆ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ನಾನು ಭಾವಿಸುತ್ತೇನೆ. ನಾನು ಹೇಳಲು ಬಯಸುವ ಇನ್ನೊಂದು ವಿಷಯವೆಂದರೆ ಕೆಲವೊಮ್ಮೆ ವಿಷಯಗಳನ್ನು ಲಘುವಾಗಿ ಪರಿಗಣಿಸುವುದು ಹೆಚ್ಚಿನ ಜನರ ಸ್ವಭಾವವಾಗಿದೆ. "ನಾನು ಎಷ್ಟು ದಿನ ಇಲ್ಲೇ ಇರುತ್ತೇನೆ? 2 ಅಥವಾ 3 ವರ್ಷಗಳ ನಂತರ ನಾನು ಹೊರಡುತ್ತೇನೆ." ನಾನು ಯಾರನ್ನೂ ದೂಷಿಸುವುದಿಲ್ಲ, ಆದರೆ ಕಾರ್ಯ ಸ್ಥಳದಲ್ಲಿ ಖಚಿತ ವ್ಯವಸ್ಥೆ ಇದ್ದರೆ ಮತ್ತು ಜೀವನದ ಸುರಕ್ಷತೆ ಖಾತ್ರಿಪಡಿಸಿದರೆ, ಸ್ಪರ್ಧೆಯ ಭಾವನೆ ಇರುವುದಿಲ್ಲ. “ಎಲ್ಲವೂ ಇದೆ, ಹೊಸ ತೊಂದರೆಗಳಿಗೆ ಏಕೆ ಸಿಲುಕಬೇಕು? ಮಕ್ಕಳು ಬೆಳೆಯುತ್ತಾರೆ, ಅವರಿಗೆ ಎಲ್ಲೋ ಅವಕಾಶಗಳು ಸಿಗುತ್ತವೆ. ನಾವೇನು ಮಾಡಬೇಕು?" ಅವರು ತಮ್ಮ ಬಗ್ಗೆ ಅಸಡ್ಡೆ ಹೊಂದುತ್ತಾರೆ ಎಂಬ ಮನೋಭಾವ ಬಿಡಿ, ಇದು ಬದುಕುವ ದಾರಿಯಲ್ಲ ಗೆಳೆಯರೇ. ನಿಮ್ಮ ಬಗ್ಗೆ ನೀವು ಎಂದಿಗೂ ಅಸಡ್ಡೆ ತೋರಬಾರದು. ಒಬ್ಬ ವ್ಯಕ್ತಿಯು ಜೀವನವನ್ನು ಪೂರ್ಣವಾಗಿ ಆನಂದಿಸಬೇಕು. ಒಬ್ಬನು ತನ್ನ ಕೆಲಸದ ಪ್ರತಿ ಕ್ಷಣವನ್ನು ನಿರ್ಣಯಿಸಬೇಕು. ಹಾಗಾದಾಗ ಮಾತ್ರ ಜೀವನದ ಆನಂದ ಇರುತ್ತದೆ. ನಾನು ಹಿಂದೆ ಏನು ಸಾಧಿಸಿದೆ? ನಾನು ಹಿಂದೆ ಏನು ಮಾಡಿದ್ದೆ? ಈ ಎಲ್ಲಾ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವ ಸ್ವಭಾವ ಯಾರಿಗಾದರೂ ಇಲ್ಲದಿದ್ದರೆ, ನಂತರ ಜೀವನವು ಅವನನ್ನು ಕ್ರಮೇಣ ದುಃಖಕ್ಕೆ ಈಡು ಮಾಡುತ್ತದೆ. ನಂತರ ಅವನು ಬದುಕುವ ಉತ್ಸಾಹ ಕಳೆದುಕೊಳ್ಳುತ್ತಾನೆ. ಸಿತಾರ್ ವಾದಕ ಮತ್ತು ಟೈಪಿಸ್ಟ್ ನಡುವಿನ ವ್ಯತ್ಯಾಸವನ್ನು ನೀವು ನೋಡಿದ್ದೀರಾ? ಕಂಪ್ಯೂಟರ್ ಆಪರೇಟರ್ ತನ್ನ ಬೆರಳುಗಳಿಂದ ಆಟವಾಡುತ್ತಾನೆ, ಆದರೆ ಅವನು 45-50 ವರ್ಷ ತಲುಪಿದಾಗ, ಅವನು ವಿರಳವಾಗಿ ನೋಡುತ್ತಾನೆ. ಒಮ್ಮೊಮ್ಮೆ ಹೇಳಿದರೂ ಕೇಳುವುದಿಲ್ಲ. ನೀವು ವಿನಂತಿ ಮಾಡಿದರೆ, ಆಗ ಮಾತ್ರ ಅವನು ನಿಮ್ಮ ಸಮಸ್ಯೆ ಕೇಳುತ್ತಾನೆ. ಅವನು ಅರೆಬೆಂದ ಜೀವನ ನಡೆಸುತ್ತಿದ್ದಾನೆ, ಜೀವನವೇ ಹೊರೆಯಾಗಿದೆ. ಅವನು ತನ್ನ ಬೆರಳುಗಳನ್ನು ಮಾತ್ರ ಬಳಸುತ್ತಾನೆ. ಅವನು ಟೈಪ್ ರೈಟರ್ ನಲ್ಲಿ ತನ್ನ ಬೆರಳುಗಳನ್ನು ಮಾತ್ರ ತಿರುಗಿಸುತ್ತಾನೆ. ಮತ್ತೊಂದೆಡೆ, ಕುಳಿತುಕೊಳ್ಳುವ ಆಟಗಾರನೂ ತನ್ನ ಬೆರಳುಗಳಿಂದ ಆಡುತ್ತಾನೆ, ಆದರೆ ಅವನು 80ನೇ ವಯಸ್ಸಿನಲ್ಲಿಯೂ ಫ್ರೆಶ್ ಆಗಿ ಕಾಣುತ್ತಾನೆ. ಅವನಿಗೆ ಜೀವನ ಚೈತನ್ಯದಿಂದ ತುಂಬಿದೆ, ಅವನು ಕನಸುಗಳೊಂದಿಗೆ ಬದುಕುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆಲ ಇಬ್ಬರೂ ತಮ್ಮ ಬೆರಳುಗಳನ್ನು ಬಳಸಿ ತಮ್ಮ ಸಮಯ ಕಳೆದಿದ್ದಾರೆ, ಆದರೆ ಒಬ್ಬರು ಆಸಕ್ತಿ ಕಳೆದುಕೊಳ್ಳುತ್ತಾರೆ, ಇನ್ನೊಬ್ಬರು ತಮ್ಮ ಜೀವನವನ್ನು ಆನಂದದಿಂದ ನಡೆಸುತ್ತಾರೆ. ಬದುಕನ್ನು ಒಳಗಿನಿಂದ ಬದಲಾಯಿಸುವ ಸಂಕಲ್ಪ ಇರುವವರೆಗೆ ಮಾತ್ರ ಜೀವನವನ್ನು ಬದಲಾಯಿಸಲು ಸಾಧ್ಯ. ಆದ್ದರಿಂದ, ಪ್ರಜ್ಞೆ ಇರಬೇಕು, ಸಾಮರ್ಥ್ಯ ಇರಬೇಕು, ಏನನ್ನಾದರೂ ಮಾಡುವ ಇಚ್ಛೆ ಇರಬೇಕು, ಆಗ ಮಾತ್ರ ಒಬ್ಬನು ತನ್ನ ಜೀವನವನ್ನು ಆನಂದಿಸಬಹುದು ಎಂದು ನಾನು ದೇಶಾದ್ಯಂತ ನನ್ನ ಲಕ್ಷಾಂತರ ಜನರಿಗೆ, ಸ್ನೇಹಿತರಿಗೆ ಕರೆ ನೀಡುತ್ತೇನೆ. ಕೆಲವೊಮ್ಮೆ, ನಾನು ದಣಿದಿಲ್ಲವೇ ಎಂದು ಜನರು ನನ್ನನ್ನು ಕೇಳುತ್ತಾರೆ. ನಾನು ಸುಸ್ತಾಗದಿರಲು ಇದೇ ಕಾರಣ. ನಾನು ಪ್ರತಿ ಕ್ಷಣವನ್ನು ಇತರರಿಗಾಗಿ ಬದುಕಲು ಬಯಸುತ್ತೇನೆ.
ಸ್ನೇಹಿತರೆ,
ಇದರ ಫಲವೇನು? ನಾವು ಕೇವಲ ಒಂದು ಜೀವನ ಮಾದರಿಗೆ ನಮ್ಮನ್ನು ರೂಪಿಸಿಕೊಳ್ಳುತ್ತೇವೆ. ನಿಮ್ಮನ್ನು ರೂಪಿಸಿಕೊಳ್ಳುವಲ್ಲಿ ನೀವು ಸಮರ್ಥರು. ಕೆಲವರಿಗೆ ಇಷ್ಟವಾಗಬಹುದು, ಆದರೆ ಇದು ಜೀವನವಲ್ಲ ಎಂದು ನನಗೆ ತೋರುತ್ತದೆ. ಅಗತ್ಯವಿದ್ದಾಗ ಗುರಾಣಿಯಾಗಿ ವ್ಯವಸ್ಥೆಯನ್ನು ಬದಲಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ನಾವು ಸಹಜವಾಗಿಯೇ ಆಡಳಿತದಲ್ಲಿ ಸುಧಾರಣೆಗಳನ್ನು ಮಾಡಿದ್ದೇವೆಯೇ? ಸಣ್ಣಪುಟ್ಟ ಸಮಸ್ಯೆಗಳಿಗೆ ಆಯೋಗಗಳನ್ನು ಸ್ಥಾಪಿಸಬೇಕೇ? ನಾವು ವೆಚ್ಚವನ್ನು ಕಡಿತಗೊಳಿಸಬೇಕಾದರೆ, ಸ್ವಲ್ಪ ಆಯೋಗವನ್ನು ಹೊಂದಿಸಿ! ಆಡಳಿತಕ್ಕೆ ಬದಲಾವಣೆಗಳ ಅಗತ್ಯವಿದ್ದರೆ, ಇನ್ನೊಂದು ಆಯೋಗವನ್ನು ಸ್ಥಾಪಿಸಿ. ನಂತರ 6-12 ತಿಂಗಳ ನಂತರ ವರದಿ ಬಂದ ನಂತರ ಸಮಿತಿ ರಚಿಸಿ. ನಂತರ ಆ ವರದಿಯನ್ನು ಪರಿಶೀಲಿಸಲು ಇನ್ನೊಂದು ಸಮಿತಿಯನ್ನು ಸ್ಥಾಪಿಸಿ. ನಂತರ ಆ ಸಮಿತಿಯ ಸಲಹೆಗಳ ಅನುಷ್ಠಾನಕ್ಕಾಗಿ ಮತ್ತೊಂದು ಆಯೋಗ ಸ್ಥಾಪಿಸಿ. ನಾವು ಇದನ್ನೇ ಮಾಡುತ್ತಾ ಬಂದಿದ್ದೇವೆ. ಆಡಳಿತದಲ್ಲಿ ಸಮಯೋಚಿತ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ. ಹಿಂದಿನ ಕಾಲದಲ್ಲಿ ಯುದ್ಧಗಳ ಸಮಯದಲ್ಲಿ ಆನೆಗಳು ಇದ್ದವು, ಅವುಗಳನ್ನು ಕುದುರೆಗಳಿಂದ ಬದಲಾಯಿಸಲಾಯಿತು. ಇಂದು, ಆನೆ ಅಥವಾ ಕುದುರೆ ಅಗತ್ಯವಿಲ್ಲ, ಬೇರೆ ಏನಾದರೂ ಬೇಕು. ಈ ಸುಧಾರಣೆಯು ಸುಲಭವಾಗಿದೆ. ಏಕೆಂದರೆ ಯುದ್ಧದ ಒತ್ತಡವು ನಮ್ಮನ್ನು ಸುಧಾರಣೆಗೆ ಒತ್ತಾಯಿಸುತ್ತಿದೆ. ದೇಶದ ಭರವಸೆಗಳು ಮತ್ತು ಆಕಾಂಕ್ಷೆಗಳು ನಮ್ಮನ್ನು ಬದಲಾವಣೆಗಳನ್ನು ತರಲು ಒತ್ತಾಯಿಸುತ್ತಿಲ್ಲವೇ? ನಾವು ದೇಶದ ಭರವಸೆ ಮತ್ತು ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳದ ಹೊರತು, ನಾವು ಸ್ವಂತವಾಗಿ ಆಡಳಿತವನ್ನು ಸುಧಾರಿಸಲು ಸಾಧ್ಯವಿಲ್ಲ. ಆಡಳಿತದಲ್ಲಿ ಸುಧಾರಣೆ ನಿಯಮಿತ ಪ್ರಕ್ರಿಯೆಯಾಗಬೇಕು, ಅದು ಸುಗಮ ಪ್ರಕ್ರಿಯೆಯಾಗಬೇಕು ಮತ್ತು ಪ್ರಾಯೋಗಿಕ ವ್ಯವಸ್ಥೆ ಇರಬೇಕು. ಪ್ರಯೋಗ ಯಶಸ್ವಿಯಾಗದಿದ್ದರೆ ಅದನ್ನು ಕೈಬಿಡುವ ಧೈರ್ಯವಿರಬೇಕು. ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕು ಮತ್ತು ಹೊಸದನ್ನು ಒಪ್ಪಿಕೊಳ್ಳಲು ಸಿದ್ಧನಾಗಿರಬೇಕು. ಆಗ ಮಾತ್ರ ಬದಲಾವಣೆ ಬರುತ್ತದೆ. ಈಗ ನೀವು ನೋಡುತ್ತಿದ್ದೀರಿ, ನೂರಾರು ಕಾನೂನುಗಳು ದೇಶದ ನಾಗರಿಕರಿಗೆ ಹೊರೆಯಾಗಿವೆ ಎಂದು ನಾನು ನಂಬಿದ್ದೇನೆ. ನನ್ನ ಪಕ್ಷವು 2013ರಲ್ಲಿ ಮೊದಲ ಬಾರಿಗೆ ನನ್ನ ಹೆಸರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ದೆಹಲಿಯ ಉದ್ಯಮ ಸಮುದಾಯ ನನ್ನನ್ನು ಕರೆದರು. 2014ರ ಚುನಾವಣೆಗೆ 4-6 ತಿಂಗಳು ಉಳಿದಿವೆ. ಅವರು ನನ್ನ ಯೋಜನೆಯ ಬಗ್ಗೆ ಕೇಳಿದರು. ನಾನು ಪ್ರತಿದಿನ ಒಂದು ಕಾನೂನು ರದ್ದುಪಡಿಸುತ್ತೇನೆ ಮತ್ತು ಹೊಸ ಕಾನೂನುಗಳನ್ನು ರೂಪಿಸುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅವರಿಗೆ ಆಶ್ಚರ್ಯವಾಯಿತು. ನಾನು ಮೊದಲ 5 ವರ್ಷಗಳಲ್ಲಿ 1,500 ಕಾನೂನುಗಳನ್ನು ರದ್ದುಗೊಳಿಸಿದೆ. ಹೇಳಿ ಸ್ನೇಹಿತರೇ, ನಮಗೆ ಅಂತಹ ಕಾನೂನುಗಳು ಏಕೆ ಬೇಕು? ಇಂದಿಗೂ ಸಹ, ನಿಷ್ಪ್ರಯೋಜಕವಾಗಿರುವ ಇಂತಹ ಅನೇಕ ಕಾನೂನುಗಳಿವೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಸ್ನೇಹಿತರೇ, ಉಪಕ್ರಮಗಳನ್ನು ಕೈಗೊಳ್ಳಿ. ಕ್ಲಿಷ್ಟ ಕಾನೂನುಗಳನ್ನು ಕೊನೆಗೊಳಿಸಿ ಮತ್ತು ದೇಶವನ್ನು ಈ ಬಲೆಯಿಂದ ಹೊರತನ್ನಿ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ, ನೀವು ನಾಗರಿಕರನ್ನು ಏಕೆ ಕ್ಲಿಷ್ಟ ಕಾನೂನುಗಳ ಅನುಸರಣೆಯಲ್ಲಿ ಸಿಲುಕಿಸುತ್ತೀರಿ? ಕಚೇರಿಯಲ್ಲಿ 6 ಜನರು ಇರುತ್ತಾರೆ, ಪ್ರತಿಯೊಬ್ಬ ವ್ಯಕ್ತಿಯು ಎಲ್ಲಾ ಮಾಹಿತಿಯನ್ನು ಹೊಂದಿರುತ್ತಾನೆ, ಆದರೆ ಅದೇ ಮಾಹಿತಿಯನ್ನು ಅವರು ಪ್ರತ್ಯೇಕವಾಗಿ ಕೇಳುತ್ತಾರೆ ಮತ್ತು ಅವರ ಪಕ್ಕದಲ್ಲಿ ಕುಳಿತ ವ್ಯಕ್ತಿ ಅದನ್ನು ತೆಗೆದುಕೊಳ್ಳುವುದಿಲ್ಲ. ನಾವು ನಾಗರಿಕರನ್ನು ಪದೇಪದೆ ಕೇಳುತ್ತಿದ್ದೇವೆ. ಇಂದು ತಂತ್ರಜ್ಞಾನದ ಯುಗ. ದೇಶವನ್ನು ಅನುಸರಣೆಯ ಹೊರೆಯಿಂದ ಮುಕ್ತಗೊಳಿಸಲು ನಾವು ಅಂತಹ ವ್ಯವಸ್ಥೆಗಳನ್ನು ಏಕೆ ಅಭಿವೃದ್ಧಿಪಡಿಸಬಾರದು? ನನಗೆ ಆಶ್ಚರ್ಯವಾಯಿತು. ನಮ್ಮ ಸಂಪುಟ ಕಾರ್ಯದರ್ಶಿ ಇತ್ತೀಚೆಗೆ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳಿಗೆ ವ್ಯಕ್ತಿಯನ್ನು ಜೈಲಿಗೆ ಹಾಕಲಾಗುತ್ತದೆ. ಕಾರ್ಖಾನೆಗಳಲ್ಲಿನ ಶೌಚಾಲಯಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಹೊಸದಾಗಿ ಲೇಪನ ಮಾಡದಿದ್ದರೆ, ಜೈಲು ಶಿಕ್ಷೆಗೆ ಅವಕಾಶವಿದೆ ಎಂಬ ಕಾನೂನನ್ನು ನಾನು ನೋಡಿದ್ದೇನೆ. ಈಗ ಹೇಳಿ, ಇಂತಹ ಕಾನೂನುಗಳಿಂದ ದೇಶವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಲು ಸಾಧ್ಯ? ಈ ಎಲ್ಲಾ ಸಂಗತಿಗಳನ್ನು ನಾವು ತೊಡೆದುಹಾಕಬೇಕಾಗಿದೆ. ಸುಗಮ ಪ್ರಕ್ರಿಯೆ ನಡೆಯಬೇಕು ಮತ್ತು ಈ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸುವ ಅಗತ್ಯವಿಲ್ಲ. ಅಂತಹ ಯಾವುದೇ ಕಾನೂನು ನಿಮ್ಮ ಗಮನಕ್ಕೆ ಬಂದರೆ ಮತ್ತು ಅದು ಆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದರೆ ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತನ್ನಿ. ಅದೇ ರೀತಿ, ಭಾರತ ಸರ್ಕಾರಕ್ಕೂ ತಿಳಿಸಿ, ಹಿಂಜರಿಯಬೇಡಿ ಸಹೋದರರೇ. ಈ ಹೊರೆಯಿಂದ ನಾಗರಿಕರನ್ನು ಎಷ್ಟು ಮುಕ್ತಗೊಳಿಸುತ್ತೇವೋ ಅಷ್ಟು ಅವರು ಅರಳುತ್ತಾರೆ. ಒಂದು ದೊಡ್ಡ ಮರದ ಕೆಳಗೆ ಒಳ್ಳೆಯ ಹೂವಿನ ಗಿಡವನ್ನು ನೆಡಬೇಕೆಂದರೆ ಅದು ಆ ಮರದ ನೆರಳಿನಿಂದ ಬೆಳೆಯುವುದಿಲ್ಲ. ಅದೇ ಸಸ್ಯವನ್ನು ತೆರೆದ ಆಕಾಶದ ಕೆಳಗೆ ಬಿಟ್ಟರೆ, ಅದು ಬಲವಾಗಿ ಬೆಳೆಯುತ್ತದೆ. ಆದ್ದರಿಂದ, ನಾಗರಿಕರನ್ನು ಈ ಕ್ಲಿಷ್ಟ ಕಾನೂನುಗಳ ಹೊರೆಯಿಂದ ಮುಕ್ತಗೊಳಿಸಿ.
ಸ್ನೇಹಿತರೆ,
ಇದು ಸಾಮಾನ್ಯವಾಗಿ ಕಂಡುಬರುವ ಸಂಗತಿ ಮತ್ತು ನಾನು ಮೊದಲೇ ಹೇಳಿದಂತೆ ಜನರು ಅಸ್ತಿತ್ವದಲ್ಲಿರುವ ವ್ಯವಸ್ಥೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ, ತಮ್ಮ ಅಧಿಕಾರಾವಧಿಯಲ್ಲಿ ಅದನ್ನು ಮುಂದುವರಿಸುತ್ತಾರೆ. ಕಳೆದ 7 ದಶಕಗಳನ್ನು ನಾವು ವಿಶ್ಲೇಷಿಸಿದರೆ, ನೀವು ಒಂದು ವಿಷಯ ಗಮನಿಸಬಹುದು. ಬಿಕ್ಕಟ್ಟು, ನೈಸರ್ಗಿಕ ವಿಕೋಪ ಅಥವಾ ಇನ್ನಾವುದೇ ಒತ್ತಡ ಬಂದಾಗಲೆಲ್ಲಾ ನಾವು ಬದಲಾಗಿದ್ದೇವೆ. ಕೊರೊನಾ ಬಂದಾಗ, ನಾವು ನಮ್ಮ ಸ್ವಂತ ಹಿತಾಸಕ್ತಿಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ. ಆದರೆ ಇದು ಒಳ್ಳೆಯದು? ಒತ್ತಡ ಬಂದಾಗ ಮಾತ್ರ ನಾವು ಬದಲಾಗುವುದು ಇದೇನಾ? ನಾವು ಅಭಾವದಿಂದ ಬದುಕುತ್ತಿದ್ದ ಕಾಲವಿತ್ತು. ನಮ್ಮ ಹೆಚ್ಚಿನ ನಿಯಮಗಳನ್ನು ಅದಕ್ಕೆ ಅನುಗುಣವಾಗಿ ರೂಪಿಸಲಾಗಿದೆ. ಆದರೆ ಈಗ ನಾವು ಕೊರತೆಯಿಂದ ಹೊರಬಂದಾಗ, ಆ ಎಲ್ಲಾ ಕಾನೂನುಗಳನ್ನು ವ್ಯವಸ್ಥೆಯಿಂದ ಹೊರತನ್ನಿ. ನಾವು ಈಗ ಸಮೃದ್ಧಿಯ ಬಗ್ಗೆ ಯೋಚಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ನಿಯಮಗಳನ್ನು ರೂಪಿಸಬೇಕು. ಉದಾಹರಣೆಗೆ, ನಾವು ಈಗ ಕೃಷಿಯಲ್ಲಿ ಮುನ್ನಡೆಯುತ್ತಿದ್ದೇವೆ. ನಾವು ಮೊದಲೇ ಆಹಾರ ಸಂಸ್ಕರಣಾ ವ್ಯವಸ್ಥೆಯನ್ನು ರಚಿಸಿದ್ದರೆ ರೈತರಿಗೆ ಹೊರೆಯಾಗುವ ಕೆಲವು ಸಮಸ್ಯೆಗಳು ಇರುತ್ತಿರಲಿಲ್ಲ. ಬಿಕ್ಕಟ್ಟಿನಿಂದ ಹೊರಬರುವ ಮಾರ್ಗವನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ಸರ್ಕಾರವು ಕಲಿತಿದೆ, ಆದರೆ ನಾವು ವ್ಯವಸ್ಥೆಗಳನ್ನು ಸಮರ್ಥನೀಯ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಾಗಿದೆ. ನಾವು ಸಂಭವನೀಯ ಸಮಸ್ಯೆಗಳನ್ನು ದೃಶ್ಯೀಕರಿಸಬೇಕು ಮತ್ತು ಅವುಗಳ ಪರಿಹಾರಗಳಿಗೆ ಕೆಲಸ ಮಾಡಬೇಕು. ಅದೇ ರೀತಿ ಸವಾಲುಗಳ ಹಿಂದೆ ಓಡುವಂತೆ ಒತ್ತಾಯಿಸಿದರೆ ಅದು ಸರಿಯಲ್ಲ. ನಾವು ಸವಾಲುಗಳನ್ನು ಮುಂಗಾಣಬೇಕು. ತಂತ್ರಜ್ಞಾನವು ಜಗತ್ತನ್ನು ಬದಲಾಯಿಸಿದ್ದರೆ, ಆಡಳಿತದಲ್ಲಿ ಇರುವ ಸವಾಲುಗಳನ್ನು ನಾವು ತಿಳಿದುಕೊಳ್ಳಬೇಕು ಮತ್ತು ಅದಕ್ಕೆ ಸಿದ್ಧರಾಗಿರಬೇಕು. ಆದ್ದರಿಂದ, ಆಡಳಿತದಲ್ಲಿನ ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಬೇಕು ಎಂದು ನಾನು ಪ್ರಸ್ತಾಪಿಸುತ್ತೇನೆ. ನಾವು ನಿವೃತ್ತರಾದಾಗಲೆಲ್ಲಾ ಒಳಗಿನಿಂದ ಒಂದು ಧ್ವನಿ ಹೊರಬರಬೇಕು ಎಂದು ನಾನು ಹೇಳುತ್ತೇನೆ. ನನ್ನ ಅವಧಿಯಲ್ಲಿ ಆಡಳಿತದಲ್ಲಿ ಹಲವು ಸುಧಾರಣೆಗಳನ್ನು ಮಾಡಿದ್ದೇನೆ. ಅದು ಬಹುಶಃ ಮುಂದಿನ 25-30 ವರ್ಷಗಳವರೆಗೆ ದೇಶಕ್ಕೆ ಉಪಯುಕ್ತವಾಗಲಿದೆ. ಬದಲಾವಣೆ ಆಗುವುದು ಹೀಗೆ.
ಸ್ನೇಹಿತರು,
ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ನಡವಳಿಕೆಯ ಬದಲಾವಣೆಯು ಅಂತಹ ಅನೇಕ ಅಭಿಯಾನಗಳ ಮಧ್ಯಭಾಗದಲ್ಲಿದೆ. ಇವು ಕಷ್ಟದ ಕೆಲಸಗಳು ಮತ್ತು ರಾಜಕಾರಣಿಗಳು ಅವುಗಳನ್ನು ಮುಟ್ಟಲು ಎಂದಿಗೂ ಧೈರ್ಯ ಮಾಡುವುದಿಲ್ಲ. ಆದರೆ ನಾನು ರಾಜಕೀಯವನ್ನು ಮೀರಿದವನು ಗೆಳೆಯರೇ. ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆ ಇದೆ, ಆದರೆ ನಾನು ರಾಜಕೀಯದ ಮೂಲಕ ಬಂದಿದ್ದೇನೆ ಎಂಬುದು ಬೇರೆ ವಿಷಯ. ನನ್ನ ಸ್ವಭಾವ ಮೂಲತಃ ರಾಜಕೀಯವಲ್ಲ. ನಾನು ಸಾರ್ವಜನಿಕ ನೀತಿಗೆ ಸಂಬಂಧಿಸಿದ ವ್ಯಕ್ತಿ. ನಾನು ಸಾಮಾನ್ಯರ ಜೀವನದೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿ.
ಸ್ನೇಹಿತರೆ,
ನಡವಳಿಕೆಯನ್ನು ಬದಲಾಯಿಸುವ ನನ್ನ ಪ್ರಯತ್ನ ಮತ್ತು ಸಮಾಜದ ಮೂಲಭೂತ ಅವಶ್ಯಕತೆಗಳಲ್ಲಿ ಬದಲಾವಣೆಯನ್ನು ತರಲು ಮಾಡಿದ ಪ್ರಯತ್ನವು ನನ್ನ ಭರವಸೆ ಮತ್ತು ಆಕಾಂಕ್ಷೆಯ ಭಾಗವಾಗಿದೆ. ನಾನು ಸಮಾಜದ ಬಗ್ಗೆ ಮಾತನಾಡುವಾಗ, ನನ್ನ ಪ್ರಕಾರ ಆಡಳಿತದಲ್ಲಿರುವವರು ಬೇರೆಯಲ್ಲ ಮತ್ತು ಅವರು ಬೇರೆ ಯಾವುದೇ ಗ್ರಹದಿಂದ ಬಂದವರಲ್ಲ, ಅವರೂ ಅದರ ಭಾಗವಾಗಿದ್ದಾರೆ. ಕೆಲವೊಮ್ಮೆ, ಕೆಲವು ಅಧಿಕಾರಿಗಳು ಮದುವೆ ಕಾರ್ಡ್ನೊಂದಿಗೆ ನನ್ನ ಬಳಿಗೆ ಬರುತ್ತಾರೆ. ಅವರು ತುಂಬಾ ದುಬಾರಿ ಕಾರ್ಡ್ಗಳನ್ನು ತರುವುದಿಲ್ಲ. ಇವುಗಳು ಅತ್ಯಂತ ಕೆಳಮಟ್ಟದ ಗುಣಮಟ್ಟದ ಕಾರ್ಡ್ಗಳಾಗಿವೆ, ಆದರೆ ಅವುಗಳ ಮೇಲೆ ಪಾರದರ್ಶಕ ಪ್ಲಾಸ್ಟಿಕ್ ಕವರ್ ಆದ್ದರಿಂದ, ಅವರು ಇನ್ನೂ ಏಕ-ಬಳಕೆಯ ಪ್ಲಾಸ್ಟಿಕ್ ಬಳಸುವುದನ್ನು ಮುಂದುವರೆಸಬೇಕೆ ಎಂದು ನಾನು ಸಹಜವಾಗಿ ಅವರನ್ನು ಕೇಳುತ್ತೇನೆ? ಅವರು ನಾಚಿಕೆಪಡುತ್ತಾರೆ. ನನ್ನ ಉದ್ದೇಶವೆಂದರೆ ದೇಶವು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಬಳಸಬಾರದು ಎಂದು ನಾವು ನಿರೀಕ್ಷಿಸಿದರೆ, ನಾನು ಕಚೇರಿಯಲ್ಲಿದ್ದಾಗ ನನ್ನ ಜೀವನದಲ್ಲಿ ಬದಲಾವಣೆ ತರುತ್ತಿದ್ದೇನೆ. ನಾನು ಸಾಮಾನ್ಯವಾಗಿ ಚಿಕ್ಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತೇನೆ, ಏಕೆಂದರೆ ನಾವು ದೊಡ್ಡ ಸಮಸ್ಯೆಗಳಲ್ಲಿ ಮುಳುಗಿದ್ದೇವೆ ಮತ್ತು ನಾವು ಚಿಕ್ಕ ಸಮಸ್ಯೆಗಳಿಗೆ ಅಲೆಯುತ್ತೇವೆ. ಇದು ಸಂಭವಿಸಿದಾಗ, ಜನರ ನಡುವೆ ಕಂದಕಗಳು ಸೃಷ್ಟಿಯಾಗುತ್ತವೆ. ನಾನು ಈ ಕಂದಕಗಳನ್ನು ಮುಚ್ಚಬೇಕಾಗಿದೆ. ಇನ್ನು ಸ್ವಚ್ಛತಾ ಅಭಿಯಾನಕ್ಕೆ ಸಂಬಂಧಿಸಿದಂತೆ ನನ್ನ ಇಲಾಖೆಯಲ್ಲಿ 15 ದಿನಕ್ಕೊಮ್ಮೆ ನಿಗಾ ವಹಿಸಬೇಕು. 5 ವರ್ಷಗಳಿಂದ ಈ ಅಭಿಯಾನ ನಡೆಯುತ್ತಿರುವುದು ಈಗ ನಮ್ಮ ಇಲಾಖೆಯ ಪಾತ್ರವಾಗಬೇಕಲ್ಲವೇ? ಅವರು ಈ ಮನೋಭಾವ ಬೆಳೆಸಿಕೊಳ್ಳದಿದ್ದರೆ, ದೇಶದ ಸಾಮಾನ್ಯ ನಾಗರಿಕರಿಂದ ನಿರೀಕ್ಷಿಸುವುದು ತುಂಬಾ ಹೆಚ್ಚು. ನಾವು ಡಿಜಿಟಲ್ ಇಂಡಿಯಾ ಮತ್ತು ಹಣಕಾಸು ತಂತ್ರಜ್ಞಾನದಲ್ಲಿ ಭಾರತ ತಂದ ಆವೇಗ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡುತ್ತೇವೆ. ಕಾಶಿಯ ಯುವಕನೊಬ್ಬನಿಗೆ ಬಹುಮಾನ ಬಂದರೆ ನಮ್ಮ ಅಧಿಕಾರಿಗೆ ಚಪ್ಪಾಳೆ ತಟ್ಟಬೇಕು ಅನಿಸುತ್ತದೆ. ಏಕೆಂದರೆ ಆ ಬೀದಿ ವ್ಯಾಪಾರಿ ಡಿಜಿಟಲ್ ಪಾವತಿ ಮಾಡುತ್ತಾನೆ. ಆದರೆ ನನ್ನ ಅಧಿಕಾರಿ ಡಿಜಿಟಲ್ ಪಾವತಿ ಮಾಡದಿದ್ದರೆ, ವ್ಯವಸ್ಥೆಯಲ್ಲಿ ಕುಳಿತವರು ಡಿಜಿಟಲ್ ಪಾವತಿಗಳನ್ನು ಮಾಡದಿದ್ದರೆ, ಅವರು ಅದನ್ನು ಒಂದು ಸಾಮೂಹಿಕ ಚಳುವಳಿ ಮಾಡಲು ಅಡ್ಡಿಯಾಗಿದ್ದಾರೆ ಎಂದರ್ಥ. ನಾಗರಿಕ ಸೇವೆಗಳ ದಿನದಂದು ನಾವು ಇದನ್ನು ಚರ್ಚಿಸಬೇಕಲ್ಲವೇ? ಭಿನ್ನಾಭಿಪ್ರಾಯಗಳಿರಬಹುದು. ಆದ್ದರಿಂದ, ಸ್ನೇಹಿತರೇ, ಸಮಾಜದಿಂದ ನಾವು ನಿರೀಕ್ಷಿಸುವ ವಿಷಯಗಳನ್ನು ನಾವೇ ಪ್ರಾರಂಭಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೆ ಬಹುದೊಡ್ಡ ಬದಲಾವಣೆ ತರಬಹುದು. ನಾವು ಜಿಇಎಂ ಪೋರ್ಟಲ್ಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಸುತ್ತೋಲೆಗಳನ್ನು ಹೊರಡಿಸಬೇಕೇ ಮತ್ತು ಅದರ ಬಳಕೆಯನ್ನು ಶೇ.100 ರ ಮಟ್ಟಕ್ಕೆ ಕೊಂಡೊಯ್ಯವುದು ಹೇಗೆ? ಸ್ನೇಹಿತರೇ, ನಮ್ಮ ಯುಪಿಐ ಪ್ರಬಲ ಮಾಧ್ಯಮವಾಗಿದೆ, ಜಾಗತಿಕವಾಗಿ ಮೆಚ್ಚುಗೆ ಪಡೆಯುತ್ತಿದೆ. ನನ್ನ ಮೊಬೈಲ್ ಫೋನ್ನಲ್ಲಿ ನಾನು ಯುಪಿಐ ಸಕ್ರಿಯಗೊಳಿಸಿದ್ದೇನೆಯೇ? ನಾನು ಯುಪಿಐ ಬಳಸಿದ್ದೇನೆಯೇ? ನನ್ನ ಕುಟುಂಬದ ಸದಸ್ಯರು ಇದನ್ನು ಬಳಸುತ್ತಿದ್ದಾರೆಯೇ? ನಮ್ಮ ಕೈಯಲ್ಲಿ ಸಾಕಷ್ಟು ಶಕ್ತಿ ಇದೆ, ಆದರೆ ನಾವು ಯುಪಿಐ ಸಾಮರ್ಥ್ಯವನ್ನು ಒಪ್ಪಿಕೊಳ್ಳದಿದ್ದರೆ, ಗೂಗಲ್ ವಿದೇಶಿ ಮೂಲ ಎಂದು ನಾನು ಹೇಳುತ್ತೇನೆ, ಆದರೆ ನಾವು ಯುಪಿಐ ಅಳವಡಿಸಿಕೊಂಡರೆ ಅದು ಗೂಗಲ್ ಹಿಂದಿಕ್ಕಬಹುದು. ಅದಕ್ಕೆ ತುಂಬಾ ಶಕ್ತಿ ಇದೆ. ಇದು ಹಣಕಾಸು ತಂತ್ರಜ್ಞಾನ ಜಗತ್ತಿನಲ್ಲಿ ಹೆಸರು ಮಾಡಬಹುದು. ಇದು ತಾಂತ್ರಿಕವಾಗಿ ಸಮರ್ಥ ಎಂದು ಸಾಬೀತಾಗಿದೆ, ವಿಶ್ವ ಬ್ಯಾಂಕ್ ಇದನ್ನು ಹೊಗಳುತ್ತಿದೆ. ಅದು ನಮ್ಮದೇ ವ್ಯವಸ್ಥೆಯ ಭಾಗವಾಗುವುದಿಲ್ಲ ಏಕೆ? ಸಶಸ್ತ್ರ ಪಡೆಗಳು ತಮ್ಮ ಕ್ಯಾಂಟೀನ್ಗಳಲ್ಲಿ ಇದನ್ನು ಕಡ್ಡಾಯಗೊಳಿಸಿರುವುದನ್ನು ನಾನು ನೋಡಿದ್ದೇನೆ. ಅವರು ಡಿಜಿಟಲ್ ಪಾವತಿಗಳನ್ನು ಮಾತ್ರ ಮಾಡುತ್ತಾರೆ. ಆದರೆ ಇಂದಿಗೂ ನಮ್ಮ ಸಚಿವಾಲಯದಲ್ಲಿ ಕ್ಯಾಂಟೀನ್ಗಳಿದ್ದು ಅದನ್ನು ಬಳಸುತ್ತಿಲ್ಲ. ನಾವು ಈ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲವೇ? ಈ ಸಮಸ್ಯೆಗಳು ಚಿಕ್ಕದಾಗಿ ಕಾಣಿಸಬಹುದು ಆದರೆ ನಾವು ಪ್ರಯತ್ನಿಸಿದರೆ, ದೊಡ್ಡದನ್ನು ಸಾಧಿಸಬಹುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಿಯಾದ ಪ್ರಯೋಜನಗಳನ್ನು ನೀಡಲು ನಾವು ನಿರಂತರವಾಗಿ ಪರಿಪೂರ್ಣ ತಡೆರಹಿತ ಕಾರ್ಯವಿಧಾನವನ್ನು ರಚಿಸಬೇಕಾಗಿದೆ. ನಾವು ಈ ಕಾರ್ಯವಿಧಾನವನ್ನು ಎಷ್ಟು ಹೆಚ್ಚು ನಿರ್ಮಿಸುತ್ತೇವೊ, ಅಷ್ಟು ದೇಶದ ಕೊನೆಯ ವ್ಯಕ್ತಿಯ ಸಬಲೀಕರಣದ ಧ್ಯೇಯವನ್ನು ನಾವು ಸಾಧಿಸಬಹುದು ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರು,
ನಾನು ನಿಮ್ಮ ಸಮಯವನ್ನು ಸಾಕಷ್ಟು ತೆಗೆದುಕೊಂಡಿದ್ದೇನೆ. ನಾನು ನಿಮ್ಮೊಂದಿಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಆದರೆ ನಾನು ಈ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇನೆ. ಈ ನಾಗರಿಕ ಸೇವಾ ದಿನವು ನಮ್ಮೊಳಗೆ ಹೊಸ ಶಕ್ತಿಯನ್ನು ತುಂಬುವ ಮತ್ತು ಹೊಸ ಸಂಕಲ್ಪಗಳನ್ನು ಮಾಡುವ ಅವಕಾಶವಾಗಬೇಕು. ನಾವು ಹೊಸ ಅಧಿಕಾರಿಗಳನ್ನು ಹೊಸ ಉತ್ಸಾಹದಿಂದ ಹಿಡಿಯಬೇಕು. ಈ ವ್ಯವಸ್ಥೆಯ ಭಾಗವಾಗಲು ನಾವು ಅವರಲ್ಲಿ ಉತ್ಸಾಹ ತುಂಬಬೇಕು. ನಮ್ಮ ಜೀವನವನ್ನು ಪೂರ್ಣವಾಗಿ ಜೀವಿಸುವಾಗ ನಾವು ನಮ್ಮ ಸಹೋದ್ಯೋಗಿಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು. ಈ ಎಲ್ಲಾ ನಿರೀಕ್ಷೆಗಳೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ. ತುಂಬು ಧನ್ಯವಾದಗಳು!
Leadership That Leads by Example: PM Modi's Push for Mindful Growth, Innovation & Infrastructure
Modiji’s appeal for mindful domestic travel is a win-win for India, Hospitality chains are seeing strong opportunities for growth, employment generation, and infrastructure utilisation. This is how we build a stronger, more self-reliant tourism ecosystem.https://t.co/TRKcpmpuso
— Pranjal Kapoor (@PranjalKapoor08) May 13, 2026
Initiative of PM Modi #ODOP aims 2turn districts into export hubs &promote local sustainable growth,across sectrs like agriculture,handlooms,handicrafts &food processing.
— Rukmani Varma 🇮🇳 (@pointponder) May 13, 2026
It empowers local exports generate employment,strengthen rural economies&promote Made in 🇮🇳 products globally pic.twitter.com/x6Of8Clveo
Big win for Indian banking,PSBs record ₹1.98 trillion net profit under PM @narendramodi ji’s leadership. This historic performance shows improved efficiency, better governance and strong economic fundamentals. https://t.co/kzyxQ9spby
— Manika Rawat (@manikarawa46306) May 13, 2026
A beautiful transformation in connectivity.With nearly 45000 passengers in just 10 days, the Jammu Tawi–Srinagar Vande Bharat Express is bringing faster, more comfortable travel to the Kashmir Valley.Grateful to PM Modi for making modern rail connectivity a reality for the region pic.twitter.com/3tdyAVGxhP
— Sonali sharma (@Sonalis91285385) May 13, 2026
Perfect example of "Practice what you preach" for which our PM @narendramodi ji known and respected.
— Nishant🇮🇳 (@iNishant4) May 13, 2026
Before appealing to the public to reduce unnecessary fuel usage amid the ongoing global tensions, he demonstrated himself by minimising his convoy and instructed SPG to cut… pic.twitter.com/ZTB7UCwzlw
Salute to Hon’ble PM @narendramodi ji! India & Iran continue to strengthen their strategic partnership even in an uncertain world. Your visionary and balanced foreign policy is safeguarding India’s interests while maintaining geopolitical flexibility. pic.twitter.com/TJdDbxa2z2
— Divaker Kumar (@officialdivaker) May 13, 2026
India takes a significant leap with IMD launching two AI-powered monsoon prediction models.
— Happy Samal (@Samal_Happy) May 13, 2026
PM #Modi’s vision for integrating AI in governance is delivering practical benefits. Kudos for enhancing the accuracy of weather forecasts that directly impact millions of farmers. pic.twitter.com/UMm2INkt5B
PM @narendramodi
— Chandani (@Chandani_ya) May 13, 2026
ji’s speech on food and fertilisers is a wake-up call for sustainable living. Stressing restraint in consumption and celebrating India’s food diversity reflects your commitment to long-term environmental and agricultural balance. pic.twitter.com/AYzNZNtmMW
National Technology Day Special: India’s patent boom is rewiring the auto industry
— Zahid Patka (Modi Ka Parivar) (@zahidpatka) May 13, 2026
From nuclear energy to renewable power and indigenous defence manufacturing, India is scripting a new growth story under
PM @narendramodi Ji. 🇮🇳#ViksitBharat https://t.co/TXASnVGXbP@PMOIndia pic.twitter.com/NYkUQgtpFU
India’s clean energy push is now a growth engine. Thank you PM Modi ji, for anchoring it in Aatmanirbharta. From 81 GW to 288 GW non-fossil capacity since 2014, India is building a self-reliant, globally competitive energy ecosystem #AatmanirbharBharathttps://t.co/pWkEiDO9Tx
— suman verma (@Sumanverma23) May 13, 2026


