ಹೂಡಿಕೆದಾರರು ಮತ್ತು ಠೇವಣಿದಾರರಿಬ್ಬರಿಗೂ ಪಾರದರ್ಶಕತೆ ಮತ್ತು ವಿಶ್ವಾಸದ ಖಾತ್ರಿ ಪಡಿಸುವುದು ನಮ್ಮ ಉನ್ನತ ಆದ್ಯತೆಯಾಗಿದೆ
ದೇಶವನ್ನು ಪಾರದರ್ಶಕವಲ್ಲದ ಸಾಲ ಸಂಸ್ಕೃತಿಯಿಂದ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ
ಹಣ ಪೂರಣದ ತರುವಾಯ, ದೇಶ ತ್ವರಿತವಾಗಿ ಆರ್ಥಿಕ ಸಬಲೀಕರಣದತ್ತ ಸಾಗುತ್ತಿದೆ: ಪ್ರಧಾನಮಂತ್ರಿ

ಹಣಕಾಸು ವಲಯಕ್ಕೆ ಸಂಬಂಧಿಸಿದ ಎಲ್ಲ ಸಹೋದ್ಯೋಗಿಗಳಿಗೆ ನಮಸ್ಕಾರಗಳು. ಈ ವರ್ಷದ ಬಜೆಟ್ ನಲ್ಲಿ ಹಣಕಾಸು ವಲಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಈ ಬಜೆಟ್ ನಲ್ಲಿ ಹಣಕಾಸು ವಲಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳಲ್ಲಿಯೂ ಅದರಲ್ಲಿಯೂ ವಿಶೇಷವಾಗಿ ಬ್ಯಾಂಕಿಂಗ್, ಬ್ಯಾಂಕಿಂಗೇತರ ಅಥವಾ ವಿಮಾ ವಲಯಗಳ ಬಲವರ್ಧನೆಗೆ ನೀಲನಕ್ಷೆಯನ್ನು ಪ್ರಸ್ತುತಪಡಿಸಲಾಗಿದೆ. ಅಲ್ಲದೆ ನಾವು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಸದೃಢಗೊಳಿಸಲು ಮತ್ತು ಖಾಸಗಿ ವಲಯದ ಸಹಭಾಗಿತ್ವವನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಂಡಿರುವುದನ್ನು ಪ್ರಸ್ತಾಪಿಸಿದ್ದೇವೆ. ಬಜೆಟ್ ನಂತರ ಈ ಸಮಾಲೋಚನೆ ಅತ್ಯಂತ ಮುಖ್ಯವಾಗಿದೆ. ಕಾರಣ ಸಾರ್ವಜನಿಕ ಮತ್ತು ಖಾಸಗಿ ವಲಯದಿಂದ ಈ ಎಲ್ಲ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ನೀವು ಸರ್ಕಾರದ ಆದ್ಯತೆಗಳು ಮತ್ತು ಬದ್ಧತೆಗಳ ಬಗ್ಗೆ ತಿಳಿದುಕೊಂಡಿರಬೇಕಿದೆ ಮತ್ತು ಅದಕ್ಕೂ ಮುಖ್ಯವಾಗಿ ಸರ್ಕಾರ ಕೂಡ ನಿಮ್ಮ ಸಲಹೆಗಳು ಮತ್ತು ಆತಂಕಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. 21ನೇ ಶತಮಾನದಲ್ಲಿ ದೇಶವನ್ನು ಮುಂದೆ ಅತ್ಯಂತ ವೇಗವಾಗಿ ಮುಂದೆ ಕೊಂಡೊಯ್ಯಲು ನಿಮ್ಮ ಕೊಡುಗೆ ಅತ್ಯಗತ್ಯ ಹಾಗು ಇಂದಿನ ಸಂವಾದ ಕೂಡ ಪ್ರಸಕ್ತ ಜಾಗತಿಕ ಸನ್ನಿವೇಶದ ಲಾಭವನ್ನು ಪಡೆಯಲು ಅಷ್ಟೇ ಪ್ರಮುಖವಾದುದಾಗಿದೆ.

ಮಿತ್ರರೇ,

ದೇಶದ ಹಣಕಾಸು ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುನ್ನೋಟ ಅತ್ಯಂತ ಸ್ಪಷ್ಟವಾಗಿದೆ. ಆದರೆ ಮತ್ತು ಎಂದರೆ ಎಂಬ ಪದಗಳಿಗೆ ಜಾಗವಿಲ್ಲ. ನಮ್ಮ ಅಗ್ರ ಆದ್ಯತೆ ಹೂಡಿಕೆದಾರರು ಮತ್ತು ಠೇವಣಿದಾರರಿಬ್ಬರೂ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯ ಅನುಭವ ಪಡೆಯಬೇಕು ಎಂಬುದು. ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಒಂದು ವಿಷಯದ ಮೇಲೆ ನಡೆಯುತ್ತಿದೆ. ಅದೆಂದರೆ ವಿಶ್ವಾಸ – ವಿಶ್ವಾಸ ತಮ್ಮ ಗಳಿಕೆಯ ಮೇಲಿನ ಭದ್ರತೆ, ಹೂಡಿಕೆಗಳ ಮೇಲಿನ ವಿಶ್ವಾಸ ಮತ್ತು ದೇಶದ ಅಭಿವೃದ್ಧಿ ಬಗೆಗಿನ ವಿಶ್ವಾಸವಾಗಿದೆ. ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ವಲಯಗಳಲ್ಲಿ ಈ ಹಿಂದಿನ ಪದ್ಧತಿಗಳು ಮತ್ತು ವ್ಯವಸ್ಥೆಗಳಲ್ಲಿ ಸ್ವಾಭಾವಿಕವಾಗಿ ಮಹತ್ವದ ಬದಲಾವಣೆಗಳಾಗುತ್ತಿವೆ ಮತ್ತು ಆ ಬದಲಾವಣೆಗಳು ನಮಗೂ ಕೂಡ ಕಡ್ಡಾಯವಾಗಿವೆ. ದೇಶದ ಹಣಕಾಸು ಮತ್ತು ಬ್ಯಾಂಕಿಂಗ್ ವಲಯ ಕಳೆದ ಹತ್ತು-ಹನ್ನೆರಡು ವರ್ಷಗಳಿಂದೀಚೆಗೆ ಹೇಗೆ ಬದಲಾವಣೆಯಾಗಿವೆ ಹಾಗೂ ಅವುಗಳ ಸಾಲ ನೀಡಿಕೆ ವ್ಯವಸ್ಥೆ ಎಷ್ಟು ತೀವ್ರತೆ ಪಡೆದಿದೆ ಎಂಬುದನ್ನು ನೀವೆಲ್ಲಾ ತಿಳಿದಿದ್ದೀರಿ. ಪಾರದರ್ಶಕವಲ್ಲದ ಸಾಲ ಸಂಸ್ಕೃತಿಯಿಂದ ದೇಶವನ್ನು ಮುಕ್ತಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಲೆಕ್ಕವನ್ನು ಮರೆ ಮಾಚುವುದು ಅಥವಾ ನೆಲಹಾಸಿನ ಕೆಳಗೆ ಹಾಕುವಂತಿಲ್ಲ, ಪ್ರತಿದಿನವೂ ಎನ್ ಪಿ ಎ ವರದಿ ಸಲ್ಲಿಸುವುದರಿಂದ ತಪ್ಪಿಸಿಕೊಳ್ಳಲಾಗದು.

 

ಮಿತ್ರರೇ,

ವ್ಯಾಪಾರ ವಹಿವಾಟಿನಲ್ಲಿ ಏರಿಳಿಕೆ ಇದ್ದೇ ಇರುತ್ತದೆ ಎಂಬುದನ್ನು ಸರ್ಕಾರವೂ ಕೂಡ ಚೆನ್ನಾಗಿ ಅರಿತುಕೊಂಡಿದೆ. ಪ್ರತಿಯೊಬ್ಬ ವಾಣಿಜ್ಯೋದ್ಯಮಿ ಕೂಡ ಲಾಭಗಳಿಸಲು ಸಾಧ್ಯವಿಲ್ಲ ಮತ್ತು ನಿರೀಕ್ಷಿಸಿದಷ್ಟು ಫಲಿತಾಂಶಗಳಿಸುವುದು ಅಸಾಧ್ಯ ಎಂಬುದನ್ನು ಸರ್ಕಾರವೂ ಕೂಡ ಒಪ್ಪುತ್ತದೆ. ಕೆಲವೊಮ್ಮೆ ತಮ್ಮ ಪುತ್ರ ಅಥವಾ ಕುಟುಂಬದ ಇತರೆ ಸದಸ್ಯರು ನಿರೀಕ್ಷಿಸಿದಷ್ಟು ಗಳಿಸಲಿಲ್ಲ ಎಂಬುದನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ತಮ್ಮ ಪುತ್ರ ಯಶಸ್ವಿಯಾಗುವುದನ್ನು ಯಾರು ತಾನೇ ಬಯಸುವುದಿಲ್ಲ ಹೇಳಿ. ಆದರೆ ಕೆಲವೊಮ್ಮೆ ಅದು ಘಟಿಸುವುದಿಲ್ಲ. ಆದ್ದರಿಂದ ಸರ್ಕಾರ ಈ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುತ್ತದೆ. ಕನಿಷ್ಠ ನಮ್ಮ ಸರ್ಕಾರ ಪ್ರತಿಯೊಂದು ವ್ಯಾವಹಾರಿಕ ನಿರ್ಣಯದಲ್ಲೂ ಸ್ವಾರ್ಥವಿರುತ್ತದೆ ಅಥವಾ ಕೆಟ್ಟ ಉದ್ದೇಶವಿರುತ್ತದೆ ಎಂಬುದನ್ನು ಊಹಿಸಿಕೊಳ್ಳುವುದಿಲ್ಲ. ಆದ್ದರಿಂದ ಸೂಕ್ತ ನಿಟ್ಟಿನಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಸರ್ಕಾರ ಬದ್ಧತೆ ಹಾಗೂ ಹೊಣೆಗಾರಿಕೆ ಹೊಂದಿದ್ದು, ನಾವು ಅದನ್ನು ಮಾಡುತ್ತಿದ್ದೇವೆ ಮತ್ತು ನಾವು ಅದನ್ನೇ ಮುಂದುವರಿಸುತ್ತೇವೆ. ನಾನು ಹಣಕಾಸು ವಲಯದ ಎಲ್ಲ ಜನರಿಗೆ ಹೇಳ ಬಯಸುವುದೇನೆಂದರೆ ನಾನು ಒಳ್ಳೆಯ ಉದ್ದೇಶದಿಂದ ನೀವು ಏನೆಲ್ಲಾ ಮಾಡುತ್ತೀರೋ ಅವುಗಳಿಗೆ ಸದಾ ನಿಮ್ಮ ಜೊತೆ ಇರುತ್ತೇನೆ, ಇದು ನನ್ನ ಮಾತು. ದಿವಾಳಿ ಮತ್ತು ದಿವಾಳಿಸಂಹಿತೆಯಂತಹ ಕಾರ್ಯತಂತ್ರಗಳಿಂದಾಗಿ ಹೂಡಿಕೆದಾರರು ಮತ್ತು ಸಾಲಗಾರರಲ್ಲಿ ಇಂದು ನಂಬಿಕೆ ಬಂದಿದೆ.

ಮಿತ್ರರೇ,

ಸಾಮಾನ್ಯ ಕುಟುಂಬದ ಗಳಿಕೆಯ ಭದ್ರತೆ, ಸರ್ಕಾರದ ಪ್ರಯೋಜನಗಳನ್ನು ಬಡವರಿಗೆ ಅತ್ಯಂತ ಪರಿಣಾಮಕಾರಿಯಾಗಿ ಯಾವುದೇ ಸೋರಿಕೆ ಇಲ್ಲದೆ ತಲುಪಿಸುವುದು, ದೇಶದ ಅಭಿವೃದ್ಧಿಗೆ ಮೂಲಸೌಕರ್ಯ ಹೂಡಿಕೆಗೆ ಉತ್ತೇಜನ ನೀಡುವುದು ಇವೆಲ್ಲಾ ಸರ್ಕಾರದ ಆದ್ಯತೆಗಳಾಗಿವೆ. ಈ ವಲಯದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಮಾಡಿರುವ ಸುಧಾರಣೆಗಳು ಈ ಗುರಿಗಳನ್ನು ಪ್ರತಿಬಿಂಬಿಸುತ್ತದೆ. ಅದು ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಯೋಜನೆಯಾಗಿರಬಹುದು, ಬೃಹತ್ ಡಿಜಿಟಲ್ ಸೇರ್ಪಡೆಯಾಗಿರಬಹುದು, ಭಾರೀ ನೇರ ನಗದು ವರ್ಗಾವಣೆ ವ್ಯವಸ್ಥೆಯಾಗಿರಬಹುದು ಅಥವಾ ಸಣ್ಣ ಬ್ಯಾಂಕುಗಳ ವಿಲೀನ, ಈ ಎಲ್ಲ ಕ್ರಮಗಳು ಭಾರತದ ಅರ್ಥ ವ್ಯವಸ್ಥೆಯನ್ನು ಉತ್ಕೃಷ್ಟ ಮತ್ತು ಕ್ರಿಯಾಶೀಲವಾಗಿ ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದೆ. ಈ ವರ್ಷದ ಬಜೆಟ್ ನಲ್ಲೂ ಸಹ ನಾವು ಅದೇ ದೂರದೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವುದನ್ನು ನೀವು ಕಾಣಬಹುದು.

ಮಿತ್ರರೇ,

ಈ ವರ್ಷ ನಾವು ಹೊಸ ಸಾರ್ವಜನಿಕ ವಲಯ ನೀತಿಯನ್ನು ಘೋಷಿಸಿದ್ದೇವೆ. ಈ ನೀತಿ ಕೂಡ ಹಣಕಾಸು ವಲಯವನ್ನು ಒಳಗೊಂಡಿವೆ. ನಮ್ಮ ಆರ್ಥಿಕತೆಯಲ್ಲಿ ಬ್ಯಾಂಕಿಂಗ್ ಮತ್ತು ವಿಮಾ ವಲಯದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳ ಹಿನ್ನೆಲೆಯಲ್ಲಿ ಈ ಬಜೆಟ್ ನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಅವುಗಳಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ, ವಿಮಾ ವಲಯದಲ್ಲಿ ಎಫ್ ಡಿ ಐ ಮಿತಿ ಶೇ.74ಕ್ಕೆ ಹೆಚ್ಚಳ ಅಥವಾ ಎಲ್ಐಸಿಯ ಐಪಿಒಗೆ ಚಾಲನೆ ಸೇರಿವೆ.

ಮಿತ್ರರೇ,

ಸಾಧ್ಯವಾದಷ್ಟು ನಾವು ಖಾಸಗಿ ಉದ್ಯಮಗಳನ್ನು ಉತ್ತೇಜಿಸಲು ನಿರಂತರ ಕ್ರಮಗಳನ್ನು ಕೈಗೊಂಡಿದ್ದೇವೆ. ಇದೇ ವೇಳೆ ಬ್ಯಾಂಕಿಂಗ್ ಮತ್ತು ವಿಮಾ ವಲಯದಲ್ಲಿ ಪರಿಣಾಮಕಾರಿ ಸಾರ್ವಜನಿಕ ವಲಯದ ಪಾಲುದಾರಿಕೆ ಕೂಡ ದೇಶಕ್ಕೆ ತುಂಬಾ ಅತ್ಯಗತ್ಯವಾಗಿ ಬೇಕಾಗಿದೆ. ಬಡವರು ಮತ್ತು ದುರ್ಬಲ ವರ್ಗದವರ ರಕ್ಷಣೆ ಅತ್ಯಂತ ಅಗತ್ಯವಾಗಿದೆ. ಸಾರ್ವಜನಿಕ ವಲಯದ ಬಲವರ್ಧನೆಗೆ ಬಂಡವಾಳ ಸೇರ್ಪಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಬ್ಯಾಂಕುಗಳ ಎನ್ ಪಿ ಎ ಬಗ್ಗೆ ನಿಗಾವಹಿಸಲು ಹೊಸ ಎ ಆರ್ ಸಿ ವ್ಯವಸ್ಥೆಯನ್ನೂ ಸಹ ಸೃಷ್ಟಿಸಲಾಗುತ್ತಿದೆ. ಈ ಎ ಆರ್ ಸಿ ಸಾಲಗಳ ಮೇಲೆ ನಿರ್ದಿಷ್ಟ ರೀತಿಯಲ್ಲಿ ನಿಗಾವಹಿಸುವುದನ್ನು ಮುಂದುವರಿಸುತ್ತದೆ. ಇದರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ಬಲವರ್ಧನೆಯಾಗುವುದೇ ಅಲ್ಲದೆ ಅವುಗಳ ಸಾಲ ನೀಡುವ ಸಾಮರ್ಥ್ಯ ಹೆಚ್ಚಾಗಲಿದೆ.

ಮಿತ್ರರೇ,

ಅಂತೆಯೇ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೆಲವು ಕೈಗಾರಿಕಾ ಯೋಜನೆಗಳಿಗಾಗಿ ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನು ಸೃಷ್ಟಿಸಲಾಗುವುದು. ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಿಗೆ ದೀರ್ಘಕಾಲದ ಆರ್ಥಿಕ ನೆರವಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಸಾವರಿನ್ ವೆಲ್ತ್ ನಿಧಿ, ಪಿಂಚಣಿ ನಿಧಿ ಮತ್ತು ವಿಮಾ ಕಂಪನಿಗಳನ್ನು ಉತ್ತೇಜಿಸಲಾಗುತ್ತಿದ್ದು, ಅವುಗಳಿಂದ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಕಾರ್ಪೊರೇಟ್ ಷೇರು ಮಾರುಕಟ್ಟೆಗೆ ದೀರ್ಘಾವಧಿಯ ಬಾಂಡ್ ಗಳ ವಿತರಣೆಗೆ ಅವಕಾಶ ಮಾಡಿಕೊಡಲು ಹೊಸ ಬ್ಯಾಕ್ ಸ್ಟಾಪ್ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಮಿತ್ರರೇ,

ಆತ್ಮನಿರ್ಭರ ಭಾರತ ಭಾವನೆಯನ್ನೂ ಸಹ ಖಚಿತವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ದೊಡ್ಡ ಕೈಗಾರಿಕೆಗಳು ಮತ್ತು ದೊಡ್ಡ ನಗರಗಳಿಂದ ಮಾತ್ರ ಆತ್ಮನಿರ್ಭರ ಭಾರತ ಸಾಧನೆ ಅಸಾಧ್ಯ. ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳ, ಸಣ್ಣ ಉದ್ಯಮಿಗಳ ಕೊಡುಗೆ ಮತ್ತು ಸಾಮಾನ್ಯ ಜನರ ಕಠಿಣ ಪರಿಶ್ರಮ ಕೂಡ ಆತ್ಮನಿರ್ಭರ ಭಾರತ ಮಿಷನ್ ಸಾಧನೆಗೆ ಅತ್ಯಂತ ಪ್ರಮುಖವಾಗಿ ಬೇಕಾಗಿದೆ. ಆತ್ಮನಿರ್ಭರ ಭಾರತ ಕನಸನ್ನು ರೈತರ ಮೂಲಕ ನನಸಾಗಿಸಲಾಗುವುದು ಮತ್ತು ಕೃಷಿ ಉತ್ಪನ್ನ ಘಟಕಗಳನ್ನು ಸುಧಾರಿಸಲಾಗುವುದು. ಆತ್ಮನಿರ್ಭರ ಭಾರತವನ್ನು ನಮ್ಮ ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಂದ ಸೃಷ್ಟಿಸಲಾಗುವುದು. ನಮ್ಮ ಆತ್ಮನಿರ್ಭರ ಭಾರತದ ಪ್ರಮುಖ ಹೆಗ್ಗುರುತೆಂದರೆ ನಮ್ಮ ನವೋದ್ಯಮಗಳು ಮತ್ತು ಎಂಎಸ್ಎಂಇಗಳು, ಆದ್ದರಿಂದ ಕೊರೊನಾ ಸಮಯದಲ್ಲಿ ಎಂಎಸ್ಎಂಇಗಳಿಗೆ ವಿಶೇಷ ಯೋಜನೆಗಳನ್ನು ರೂಪಿಸಲಾಯಿತು. ಸುಮಾರು 90 ಲಕ್ಷ ಉದ್ದಿಮೆಗಳಿಗೆ ಈ ಯೋಜನೆಗಳ ಲಾಭ ದೊರೆತಿದೆ ಮತ್ತು ಅವುಗಳು 2.4 ಟ್ರಿಲಿಯನ್ ರೂ. ಸಾಲವನ್ನು ಪಡೆದಿವೆ. ಈ ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಗೆ ಸಾಲದ ಹರಿವಿನ ವಿಸ್ತರಣೆ ಮತ್ತು ಬೆಂಬಲದ ಪ್ರಾಮುಖ್ಯವನ್ನು ನೀವು ಕೂಡ ಅರ್ಥ ಮಾಡಿಕೊಂಡಿದ್ದೀರಿ. ಸರ್ಕಾರ ಕೃಷಿ, ಕಲ್ಲಿದ್ದಲು ಮತ್ತು ಬಾಹ್ಯಾಕಾಶ ಸೇರಿದಂತೆ ಹಲವು ವಲಯಗಳಲ್ಲಿ ಸುಧಾರಣೆಗಳ ಮೂಲಕ ಮುಕ್ತಗೊಳಿಸಿದೆ. ಈಗ ಗ್ರಾಮಗಳು ಮತ್ತು ಸಣ್ಣ ನಗರಗಳಲ್ಲಿನ ಆಶೋತ್ತರಗಳನ್ನು ಗುರುತಿಸುವುದು ಹಣಕಾಸು ವಲಯದ ಹೊಣೆಗಾರಿಕೆಯಾಗಿದೆ ಮತ್ತು ಆ ಮೂಲಕ ಆತ್ಮನಿರ್ಭರ ಭಾರತ ಬಲವರ್ಧನೆಗೊಳಿಸಬೇಕಾಗಿದೆ.

ಮಿತ್ರರೇ,

ನಮ್ಮ ಆರ್ಥಿಕತೆ ಕ್ಷಿಪ್ರವಾಗಿ ಬೆಳೆಯುತ್ತಿದೆ. ಸಾಲದ ಹರಿವು ಕೂಡ ಅಷ್ಟೇ ಪ್ರಮುಖವಾದುದು. ಹೊಸ ವಲಯಗಳಿಗೆ ಮತ್ತು ಹೊಸ ಉದ್ದಿಮೆಗಳಿಗೆ ಹೇಗೆ ಸಾಲ ಲಭ್ಯವಾಗುತ್ತದೆ ಎಂಬುದನ್ನು ನೀವು ನೋಡಬೇಕಿದೆ. ನೀವು ಹೊಸ ಮತ್ತು ಸುಧಾರಿತ ಹಣಕಾಸು ಉತ್ಪನ್ನಗಳನ್ನು ಹೊಸ ನವೋದ್ಯಮಗಳು ಮತ್ತು ಹಣಕಾಸು-ತಂತ್ರಜ್ಞಾನ ಸಂಸ್ಥೆಗಳು( ಫಿನ್-ಟೆಕ್ ) ಗಳಿಗೆ ನೀಡಬೇಕಿದೆ. ಇಂದು ಫಿನ್-ಟೆಕ್ ನವೋದ್ಯಮಗಳು ಅತ್ಯಂತ ಶ್ರೇಷ್ಠ ಕೆಲಸವನ್ನು ಮಾಡುತ್ತಿವೆ ಎಂಬುದನ್ನು ನೀವೆಲ್ಲಾ ಚೆನ್ನಾಗಿ ತಿಳಿದಿದ್ದೀರಿ ಮತ್ತು ಆ ವಲಯದಲ್ಲಿರುವ ಪ್ರತಿಯೊಂದು ಸಂಭವನೀಯತೆನ್ನು ಗುರುತಿಸಿ. ನಮ್ಮ ಫಿನ್-ಟೆಕ್ ಗಳು ಕೊರೊನಾದ ಸಂಕಷ್ಟದ ಸಮಯದಲ್ಲಿ ಅಂತಿಮಗೊಂಡ ನವೋದ್ಯಮ ಒಪ್ಪಂದಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪಾಲನ್ನು ಹೊಂದಿವೆ. ಆ ತೀವ್ರಗೊಂಡಿರುವ ಚಟುವಟಿಕೆಗಳು ಈ ವರ್ಷವೂ ಸಹ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಹಾಗಾಗಿ ನೀವು ಹೊಸ ಸಾಧ್ಯತೆಗಳನ್ನು ಅನ್ವೇಷಿಸಬೇಕು. ಅಂತೆಯೇ ನಮ್ಮ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಸಾರ್ವತ್ರಿಕಗೊಳಿಸುವಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ಸಹ ಪರಿಗಣಿಸಬೇಕು. ಈ ವಲಯವನ್ನು ನೀವು ಆಳವಾಗಿ ಅರ್ಥಮಾಡಿಕೊಂಡಿರುವುದರಿಂದ ವೆಬಿನಾರ್ ನಿಂದ ಉತ್ತಮ ಸಲಹೆಗಳು ಮತ್ತು ಪರಿಹಾರಗಳು ಲಭಿಸಲಿವೆ ಮತ್ತು ನಾನು ಇಂದು ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ಎಂದು ಹೇಳಲು ಬಯಸುತ್ತೇನೆ. ಇಂದಿನ ಈ ಸಂವಾದದ ವೇಳೆ ಹೊರಹೊಮ್ಮುವ ಸಲಹೆಗಳು ಆತ್ಮನಿರ್ಭರ ಭಾರತ ಸಾಧನೆಗೆ ಮತ್ತು ಸಾರ್ವಜನಿಕ ಕಲ್ಯಾಣ ಚಟುವಟಿಕೆಗಳಿಗೆ ಅತ್ಯಂತ ಉಪಯುಕ್ತವಾಗುತ್ತವೆ. ವಿಶ್ವಾಸವನ್ನು ವೃದ್ಧಿಸುತ್ತವೆ ಎಂದು ನಾನು ಬಲವಾಗಿ ನಂಬಿದ್ದೇನೆ.

ಮಿತ್ರರೇ,

ಕಳೆದ ಕೆಲವು ವರ್ಷಗಳಿಂದೀಚೆಗೆ ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಹೊಸ ಆಯಾಮಗಳ ಸೃಷ್ಟಿ ಹಣಕಾಸು ಸೇರ್ಪಡೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿವೆ. ಇಂದು ದೇಶದ 130 ಕೋಟಿ ಜನರು ಆಧಾರ್ ಕಾರ್ಡ್ ಗಳನ್ನು ಹೊಂದಿದ್ದಾರೆ; 41 ಕೋಟಿಗೂ ಅಧಿಕ ದೇಶವಾಸಿಗಳು ಜನ್ ಧನ್ ಖಾತೆಯನ್ನು ಹೊಂದಿದ್ದಾರೆ. ಜನ್ ಧನ್ ಖಾತೆ ಹೊಂದಿರುವ ಶೇ.55ರಷ್ಟು ಮಹಿಳೆಯರಿದ್ದಾರೆ ಮತ್ತು ಆ ಖಾತೆಗಳಲ್ಲಿ 1.5 ಲಕ್ಷ ಕೋಟಿ ರೂ. ಠೇವಣಿ ಇದೆ. ಕೊರೊನಾದ ಸಮಯದಲ್ಲೂ ಸಹ ಈ ಜನ್ ಧನ್ ಖಾತೆಗಳ ಮೂಲಕ ಲಕ್ಷಾಂತರ ಸಹೋದರಿಯರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಾಯಿತು. ಇಂದು ಯುಪಿಐನಿಂದ ಪ್ರತಿ ತಿಂಗಳು ಸುಮಾರು 4 ಲಕ್ಷ ಕೋಟಿ ರೂ. ಸರಾಸರಿ ವಹಿವಾಟು ನಡೆಯುತ್ತಿದೆ ಮತ್ತು ರುಪೆ ಕಾರ್ಡ್ ಗಳ ಸಂಖ್ಯೆ 60 ಕೋಟಿ ತಲುಪಿದೆ. ಆಧಾರ್ ಮತ್ತು ಸ್ಥಳದಲ್ಲೇ ದೃಢೀಕರಣದ ಮೂಲಕ ದೂರದ ಗುಡ್ಡಗಾಡು ಪ್ರದೇಶಗಳಲ್ಲೂ ಸಹ ಹಣಕಾಸು ಸೇವೆಗಳು ಲಭ್ಯವಾಗುತ್ತಿವೆ. ಭಾರತೀಯ ಅಂಚೆ ಬ್ಯಾಂಕ್ ಜಾಲ ವಿಸ್ತರಣೆಯಾಗಿದೆ ಮತ್ತು ಲಕ್ಷಾಂತರ ಸಾಮಾನ್ಯ ಸೇವಾ ಕೇಂದ್ರಗಳೂ ಸಹ ಸೇವೆ ನೀಡುತ್ತಿವೆ. ಇಂದು ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಬ್ಯಾಂಕ್ ಮಿತ್ರರು ಆಧಾರ್ ಆಧರಿತ ಪಾವತಿ ವ್ಯವಸ್ಥೆ(ಎಇಪಿಎಸ್) ಸಾಧನದ ನೆರವಿನಿಂದ ಗ್ರಾಮಗಳಲ್ಲಿ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದ್ದಾರೆ. 1.25 ಲಕ್ಷಕ್ಕೂ ಅಧಿಕ ಅಂಚೆ ಕಚೇರಿಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತಿವೆ. ನಿಮಗೆ ಆಶ್ಚರ್ಯವಾಗಬಹುದು. ಈ ಬ್ಯಾಂಕ್ ಮಿತ್ರರು ಎಇಪಿಎಸ್ ಸಾಧನದ ಮೂಲಕ ಕಳೆದ ವರ್ಷ ಏಪ್ರಿಲ್ ನಿಂದ ಜೂನ್ ವರೆಗೆ 53,000 ಕೋಟಿ ರೂ. ವಹಿವಾಟಿನ ಮೂಲಕ ಗ್ರಾಮೀಣ ಜನರಿಗೆ ನೆರವಾಗಿದ್ದಾರೆ. ಈ ಚಟುವಟಿಕೆ ಕೊರೊನಾದ ಅವಧಿಯಲ್ಲಿ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದಾಗ ನಡೆದಿದೆ ಎಂಬುದನ್ನು ನೀವು ನೆನಪಿಸಿಕೊಳ್ಳಿ.

ಮಿತ್ರರೇ,

ದೇಶದ ಪ್ರತಿಯೊಂದು ವಿಭಾಗದಲ್ಲೂ ಒಂದಲ್ಲಾ ಒಂದು ರೀತಿ ಹಣಕಾಸು ಸೇವಾ ವಲಯಗಳು ಸೇರ್ಪಡೆಯಾಗಿವೆ ಎಂಬುದಕ್ಕೆ ಭಾರತ ಹೆಮ್ಮೆ ಪಡುವಂತಾಗಿದೆ. ದಶಕಗಳ ಆರ್ಥಿಕ ಹೊರಗಿಡುವಿಕೆಯಿಂದ ಹೊರಗುಳಿದಿದ್ದ ಭಾರತ ಇದೀಗ ಸದೃಢಗೊಳ್ಳುತ್ತಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರ ಹಣಕಾಸು ವಲಯದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಬಡವರು, ರೈತರು, ಜಾನುವಾರು ಸಾಕಾಣಿಕೆ ರೈತರು, ಮೀನುಗಾರರು ಅಥವಾ ಸಣ್ಣಪುಟ್ಟ ಅಂಗಡಿಗಳ ಮಾಲಿಕರು ಸೇರಿದಂತೆ ಎಲ್ಲರಿಗೂ ಸಾಲ ಪಡೆಯುವುದು ಸುಲಭವಾಗಿದೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ಮುದ್ರಾ ಯೋಜನೆಯ ಮೂಲಕ ಸಣ್ಣ ಉದ್ದಿಮೆದಾರರಿಗೆ ಸುಮಾರು 15 ಲಕ್ಷ ಕೋಟಿ ರೂ.ಗಳ ಸಾಲಗಳು ಲಭ್ಯವಾಗಿವೆ. ಇದರಲ್ಲಿ ಶೇ.70ರಷ್ಟು ಮಹಿಳೆಯರು ಮತ್ತು ಶೇ.50ಕ್ಕೂ ಅಧಿಕ ದಲಿತರು, ಶೋಷಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದ ಉದ್ದಿಮೆದಾರರು ಸೇರಿದ್ದಾರೆ. ಪಿಎಂ ಕಿಸಾನ್ ಯೋಜನೆ ಅಡಿ ಸುಮಾರು 11 ಕೋಟಿಗೂ ಅಧಿಕ ರೈತ ಕುಟುಂಬಗಳ ಖಾತೆಗೆ 1,15,000 ಕೋಟಿ ರೂ.ಗೂ ಅಧಿಕ ಹಣವನ್ನು ಠೇವಣಿ ಮಾಡಲಾಗಿದೆ. ಕೆಲವು ತಿಂಗಳ ಹಿಂದೆ ನಮ್ಮ ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ವಲಯವನ್ನು ಇದೇ ಮೊದಲ ಬಾರಿಗೆ ದೇಶದ ಹಣಕಾಸು ವಲಯಕ್ಕೆ ಸೇರ್ಪಡೆ ಮಾಡಲಾಗಿದೆ. ಈವರೆಗೆ ಸುಮಾರು 15 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10,000 ರೂ. ಸಾಲವನ್ನು ನೀಡಲಾಗಿದೆ. ಇದು ಕೇವಲ ಒಂದು ಬಾರಿಯ ಸೇರ್ಪಡೆಯಲ್ಲ. ಅವರ ಸಾಲದ ಇತಿಹಾಸ ಭವಿಷ್ಯದಲ್ಲಿ ಹೆಚ್ಚಿನ ಸಾಲಗಳನ್ನು ಪಡೆಯಲು ನೆರವಾಗಲಿದೆ. ಅಂತೆಯೇ ವ್ಯಾಪಾರ ಮತ್ತು ಪಿಎಸ್ಬಿ ಸಾಲಗಳಿಗೆ ಡಿಜಿಟಲ್ ವಿಧಾನದ ಮೂಲಕ ಎಂಎಸ್ಎಂಇಗಳಿಗೂ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ಒದಗಿಸಲಾಗುತ್ತಿದೆ. ರೈತರಿಗೆ ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ ಹಾಗೂ ಅವರನ್ನು ಅಸಾಂಸ್ಥಿಕ ವಲಯದ ಸಾಲದ ವಿಷ ವರ್ತುಲದಿಂದ ಹೊರ ತರಲಾಗುತ್ತಿದೆ.

ಮಿತ್ರರೇ,

ನಮ್ಮ ಸಮಾಜದಲ್ಲಿನ ಈ ವರ್ಗದವರಿಗೆ ನೆರವಾಗಲು ಇದೀಗ ಖಾಸಗಿ ವಲಯ ಕೂಡ ವಿನೂತನ ಹಣಕಾಸು ಉತ್ಪನ್ನಗಳನ್ನು ಪರಿಚಯಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿವೆ. ನಮ್ಮ ಸ್ವಸಹಾಯ ಗುಂಪುಗಳು, ಉತ್ಪಾದನೆಯಿಂದ ಹಿಡಿದು ಸೇವೆಗಳವರೆಗೂ ಪ್ರತಿಯೊಂದು ವಲಯದಲ್ಲೂ ಭಾರೀ ಸಾಮರ್ಥ್ಯವನ್ನು ಹೊಂದಿವೆ. ಈ ಗುಂಪುಗಳ ಸಾಲದ ಶಿಸ್ತು ಅತ್ಯುತ್ತಮವಾಗಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಈ ಗುಂಪುಗಳ ಮೂಲಕ ಖಾಸಗಿ ವಲಯ ಕೂಡ ಗ್ರಾಮೀಣ ಮೂಲಸೌಕರ್ಯ ವಲಯದಲ್ಲಿ ಹೂಡಿಕೆಯ ಸಂಭವನೀಯ ಅವಕಾಶಗಳ ಬಗ್ಗೆ ಪರಿಶೀಲಿಸಬಹುದು. ಇದು ಕೇವಲ ಕಲ್ಯಾಣದ ವಿಚಾರವಲ್ಲ, ಅತ್ಯುತ್ತಮ ವಾಣಿಜ್ಯ ಮಾದರಿಯನ್ನು ಸಾಬೀತುಪಡಿಸುವ ವಿಚಾರವಾಗಿದೆ.

ಮಿತ್ರರೇ,

ದೇಶಗಳು ಇದೀಗ ಅತ್ಯಂತ ವೇಗವಾಗಿ ಹಣಕಾಸು ಸಬಲೀಕರಣ ಮತ್ತು ಹಣಕಾಸು ಸೇರ್ಪಡೆಯತ್ತ ಮುನ್ನಡೆಯುತ್ತಿವೆ. ಭಾರತದ ಫಿನ್-ಟೆಕ್ ಮಾರುಕಟ್ಟೆ ಮುಂದಿನ ಐದು ವರ್ಷಗಳಲ್ಲಿ ಸುಮಾರು ಆರು ಟ್ರಿಲಿಯನ್ ತಲುಪಲಿದೆ ಎಂದು ಅಂದಾಜಿಸಿದೆ. ಫಿನ್ ಟೆಕ್ ವಲಯದ ಸಂಭವನೀಯ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಐ ಎಫ್ ಎಸ್ ಸಿ ಗಿಫ್ಟ್ ಸಿಟಿಯನ್ನು ವಿಶ್ವ ದರ್ಜೆಯ ಆರ್ಥಿಕ ತಾಣವನ್ನಾಗಿ ನಿರ್ಮಿಸಲಾಗುತ್ತಿದೆ. ಭಾರತದಲ್ಲಿ ಅತ್ಯಾಧುನಿಕ ಮೂಲಸೌಕರ್ಯವನ್ನು ನಿರ್ಮಾಣ ಮಾಡುವುದು ಕೇವಲ ನಮ್ಮ ಆಶಯ ಮಾತ್ರವಲ್ಲ. ಅದು ಸ್ವಾವಲಂಬಿ ಭಾರತಕ್ಕೆ ಅತ್ಯಂತ ಅತ್ಯಗತ್ಯ. ಆದ್ದರಿಂದ ಈ ವಲಯದಲ್ಲಿ ಮೂಲಸೌಕರ್ಯಕ್ಕೆ ಹಲವು ದಿಟ್ಟ ಗುರಿಗಳನ್ನು ನಿಗದಿಪಡಿಸಲಾಗಿದೆ. ಆ ಗುರಿಗಳನ್ನು ತಲುಪಲು ಹೂಡಿಕೆ ಅತ್ಯವಶ್ಯಕ. ಆ ಉದ್ದೇಶಕ್ಕಾಗಿ ಬಂಡವಾಳ ಹೂಡಿಕೆಯನ್ನು ತರಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು. ಇಡೀ ಹಣಕಾಸು ವಲಯದ ಸಕ್ರಿಯ ಬೆಂಬಲದಿಂದ ಮಾತ್ರ ಈ ಗುರಿಗಳನ್ನು ಸಾಧಿಸಲು ಸಾಧ್ಯ.

ಮಿತ್ರರೇ,

ನಮ್ಮ ಹಣಕಾಸು ವ್ಯವಸ್ಥೆಯ ಬಲವರ್ಧನೆಗಾಗಿ ಬ್ಯಾಂಕಿಂಗ್ ವಲಯದ ಸಬಲೀಕರಣಕ್ಕೆ ಸರ್ಕಾರ ಕೂಡ ಬದ್ಧವಾಗಿದೆ. ಈವರೆಗೆ ಕೈಗೊಂಡಿರುವ ಎಲ್ಲಾ ಬ್ಯಾಂಕಿಂಗ್ ಸುಧಾರಣೆಗಳು ಮುಂದೆಯೂ ಸಹ ಮುಂದುವರಿಯಲಿದೆ. ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಅಂಶಗಳ ಅನುಷ್ಠಾನಕ್ಕೆ ಮತ್ತು ಸುಧಾರಣೆಗಳ ಕುರಿತಂತೆ ನೀವು ಅರ್ಥಪೂರ್ಣ ಸಲಹೆಗಳನ್ನು ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ. ದೇಶ ಮತ್ತು ವಿದೇಶಗಳಲ್ಲಿನ ಈ ವಲಯದ ತಜ್ಞರು ಈ ವಿಷಯದ ಕುರಿತು ಮಾರ್ಗದರ್ಶನ ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ. ನಮ್ಮ ಸರ್ಕಾರಕ್ಕೆ ನಿಮ್ಮ ಪ್ರತಿಯೊಂದು ಸಲಹೆಗಳೂ ಕೂಡ ಅತ್ಯಮೂಲ್ಯವಾಗಿವೆ. ನೀವು ಯಾವುದೇ ಹಿಂಜರಿಕೆ ಇಲ್ಲದೆ ಹೇಗೆ ಮುಂದುವರಿಯಬೇಕು ಎಂಬ ನೀಲನಕ್ಷೆಯನ್ನು ದಯವಿಟ್ಟು ನೀಡಿ ಮತ್ತು ನಾವು ಒಟ್ಟಾಗಿ ಹೇಗೆ ಮುಂದುವರಿಯಬೇಕು ಎಂಬುದನ್ನು ತಿಳಿಸಿರಿ. ಯಾವುದಾದರೂ ತೊಂದರೆಗಳು ಎದುರಾದರೆ ಅವುಗಳಿಂದ ಹೇಗೆ ಹೊರಬರಬೇಕು, ಈ ದೇಶವನ್ನು ಹೊಣೆಗಾರಿಕೆಯೊಂದಿಗೆ ಮುನ್ನಡೆಸಲು ನೀವು ಹೇಗೆ ಪಾಲುದಾರರಾಗುತ್ತೀರಿ ಎಂಬುದನ್ನು ತಿಳಿಸಿ. ಸೂಕ್ತ ನೀಲನಕ್ಷೆ, ಗುರಿ ಮತ್ತು ಇತಿಮಿತಿಯೊಳಗೆ ಗರಿಷ್ಠ ಪ್ರಯೋಜನಗಳನ್ನು ಪಡೆಯುವ ಕುರಿತು ನಾವು ನಿಮ್ಮೊಂದಿಗೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಬಯಸಿದ್ದೇವೆ. ನಿಮ್ಮ ಸಮಯ ಅಮೂಲ್ಯವಾದುದು ಎಂಬುದು ನನಗೆ ಅರಿವಿದೆ. ಆದರೆ ನಿಮ್ಮ ಸಲಹೆಗಳು ಮತ್ತು ಸಂಕಲ್ಪವೂ ಕೂಡ ಇನ್ನೂ ಹೆಚ್ಚು ಮೌಲ್ಯಯುತವಾದವು.

ತುಂಬಾ ತುಂಬಾ ಧನ್ಯವಾದಗಳು.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
New e-comm rules in offing to spotlight ‘Made in India’ goods, aid local firms

Media Coverage

New e-comm rules in offing to spotlight ‘Made in India’ goods, aid local firms
NM on the go

Nm on the go

Always be the first to hear from the PM. Get the App Now!
...
His Majesty The Fourth King of Bhutan has played a pivotal role in strengthening India and Bhutan friendship: PM Modi in Thimphu
November 11, 2025
For centuries, India and Bhutan have shared a very deep spiritual and cultural bond, And so, it was India's commitment and mine to participate in this important occasion: PM
I come to Bhutan with a very heavy heart. The horrific incident that took place in Delhi yesterday evening has disturbed everyone: PM
Our investigating agencies will get to the bottom of the Delhi blast conspiracy. The perpetrators will not be spared, and all those responsible will be brought to justice: PM
India draws inspiration from its ancient ideal ‘Vasudhaiva Kutumbakam’, the whole world is one family, we emphasise on happiness for everyone: PM
The idea proposed by His majesty of Bhutan, "Gross National Happiness," has become an important parameter for defining growth across the world: PM
India and Bhutan are not just connected by borders, they are connected by cultures, Our relationship is one of values, emotions, peace and progress: PM
Today, Bhutan has become the world's first carbon-negative country, This is an extraordinary achievement: PM
Bhutan ranks among the world’s leaders in per-capita renewable energy and generates 100% of its electricity from renewable sources. Today, another major step is being taken to expand this capacity: PM
Connectivity Creates Opportunity, and Opportunity Creates Prosperity, May India and Bhutan continue on the path of Peace, Prosperity and Shared Progress: PM

Your Majesty The King Of Bhutan
Your Majesty The Fourth King
रॉयल फैमिली के सम्मानित सदस्यगण
भूटान के प्रधानमंत्री जी
अन्य महानुभाव
और भूटान के मेरे भाइयों और बहनों !

कुजूजांगपो ला !

आज का दिन भूटान के लिये, भूटान के राज परिवार के लिए और विश्व शांति में विश्वास रखने वाले सभी लोगो के लिये बहुत अहम है।

सदियों से भारत और भूटान का बहुत ही गहन आत्मीय और सांस्कृतिक नाता है। और इसलिए इस महत्वपूर्ण अवसर पर शामिल होना भारत का और मेरा कमिटमेंट था।

लेकिन आज मैं यहां बहुत भारी मन से आया हूं। कल शाम दिल्ली में हुई भयावह घटना ने सभी के मन को व्यथित कर दिया है। मैं पीड़ित परिवारों का दुख समझता हूं। आज पूरा देश उनके साथ खड़ा है।

मैं कल रात भर इस घटना की जांच में जुटी सभी एजेंसियों के साथ, सभी महत्वपूर्ण लोगों के साथ संपर्क में था। विचार विमर्श चलता था। जानकारियों के तार जोड़े जा रहे थे।

हमारी एजेंसियां इस षड्यंत्र की तह तक जायेंगी। इसके पीछे के षड्यंत्रकारियों को बख्शा नहीं जायेगा।

All those responsible will be brought to justice.

साथियों,

आज यहां एक तरफ गुरु पद्मसंभव के आशीर्वाद के साथ Global Peace Prayer Festival का आयोजन हो रहा है, दूसरी ओर भगवान बुद्ध के पिपरहवा अवशेषों के दर्शन हो रहे हैं। और इन सबके साथ हम सब His Majesty The Fourth King के सत्तर-वें जन्मदिन समारोह का साक्षी बन रहे हैं।

ये आयोजन, इतने सारे लोगों की गरिमामयी उपस्थिति, इसमें भारत और भूटान के रिश्तों की मजबूती नजर आती है।

साथियों,

भारत में हमारे पुरखों की प्रेरणा है- वसुधैव कुटुंबकम, यानि पूरा विश्व एक परिवार है।

हम कहते हैं- सर्वे भवंतु सुखिन: यानि इस धरती पर सभी सुखी रहें...

हम कहते हैं-
द्यौः शान्तिः
अन्तरिक्षम् शान्तिः
पृथिवी शान्तिः
आपः शान्तिः
ओषधयः शान्तिः

अर्थात संपूर्ण ब्रह्मांड, आकाश, अंतरिक्ष, पृथ्वी, जल, औषधियां, वनस्पतियां, और सभी जीवित प्राणियों में शांति व्याप्त हो। अपनी इन्हीं भावनाओं के साथ भारत भी आज भूटान के इस Global Peace Prayer Festival में शामिल हुआ है।

आज दुनिया भर से आए संत, एक साथ, विश्व शांति की प्रार्थना कर रहे हैं। और इसमें 140 करोड़ भारतीयों की प्रार्थनाएं भी शामिल हैं।

वैसे यहां बहुत लोगों को पता नहीं होगा, वडनगर, जहां मेरा जन्म हुआ, बौद्ध परंपरा से जुड़ी एक पुण्यभूमि रही है। और वाराणसी, जो मेरी कर्मस्थली है, वो भी बौद्ध श्रद्धा का शिखर स्थल है। इसलिए इस समारोह में आना विशेष है। मेरी प्रार्थना है कि शांति का ये दीप, भूटान के, विश्व के हर घर को आलोकित करे।

साथियों,

भूटान के His Majesty The Fourth King का, उनका जीवन, Wisdom, Simplicity, Courage, और राष्ट्र के प्रति सेल्फलेस सर्विस का संगम है।

उन्होंने 16 वर्ष की बहुत छोटी आयु में ही बड़ी जिम्मेदारी संभाली। अपने देश को एक पिता जैसा स्नेह दिया। और अपने देश को एक विजन के साथ आगे बढ़ाया। 34 वर्षों के अपने शासन काल में, उन्होंने भूटान की विरासत और विकास दोनों को साथ लेकर चले।

भूटान में लोकतांत्रिक व्यवस्थाओं की स्थापना से लेकर, बॉर्डर एरिया में शांति स्थापना कराने तक His Majesty ने एक निर्णायक भूमिका निभाई।

आपने, "Gross National Happiness” का जो विचार दिया है वो आज पूरी दुनिया में Growth को डिफाइन करने का एक अहम पैरामीटर बन चुका है। आपने दिखाया है कि नेशन बिल्डिंग केवल GDP से नहीं, बल्कि मानवता की भलाई से होती है।

साथियों,

भारत और भूटान की Friendship को मज़बूती देने में भी उनका बहुत बड़ा योगदान रहा है। आपने जो नींव रखी है, उस पर हम दोनों देशों की मित्रता निरंतर फल-फूल रही है।

मैं सभी भारतीयों की तरफ से His Majesty को शुभकामनाएं देता हूं, और उनके बेहतर स्वास्थ्य और दीर्घायु होने की कामना करता हूं।

साथियों,

भारत और भूटान, सिर्फ सीमाओं से नहीं, संस्कृतियों से भी जुड़े हैं। हमारा रिश्ता वैल्यूज़ का है, इमोशन्स का है Peace का है, Progress का है।

2014 में प्रधानमंत्री पद की शपथ लेने के बाद, मुझे अपनी पहली विदेश यात्रा में, भूटान आने का अवसर मिला था। मैं आज भी, उस यात्रा को याद करता हूं तो मन भावनाओं से भर जाता है। भारत और भूटान के संबंध इतने सशक्त और समृद्ध हैं। हम मुश्किलों में भी साथ थे, हमने चुनौतियों का सामना भी मिलकर किया, और आज जब हम प्रोग्रेस की, प्रॉस्पैरिटी की तरफ चल पड़े हैं, तब भी हमारा साथ और मज़बूत हो रहा है।

His Majesty, the King भूटान को नई ऊंचाइयों की ओर ले जा रहे हैं। भारत और भूटान के बीच विश्वास और विकास की जो साझेदारी है, वो इस पूरे रीजन के लिए बहुत बड़ा मॉडल है।

साथियों,

आज जब हम दोनों देश तेज़ी से आगे बढ़ रहे हैं, तो इस ग्रोथ को, हमारी एनर्जी पार्टनरशिप और गति दे रही है। भारत-भूटान हाइड्रो-पावर साझेदारी की नीव भी His Majesty the fourth king के नेतृत्व में रखी गई थी।

His Majesty Fourth King, और His Majesty Fifth king दोनों ने ही भूटान में Sustainable Development और Environment First का विजन आगे बढ़ाया है। आपके इसी विजन की नींव पर, आज भूटान विश्व का पहला कार्बन नेगटिव देश बना है। ये एक असाधारण उपलब्धि है। आज Per-capita री-न्यूएबल एनर्जी जनरेशन में भी, भूटान विश्व के सर्वोच्च देशों में से एक है।

साथियों,

भूटान आज अपनी इलेक्ट्रिसिटी सौ प्रतिशत renewable स्रोत से उत्पन्न करता है। इस क्षमता का विस्तार करते हुए, आज एक और बड़ा कदम उठाया जा रहा है। आज भूटान में एक हज़ार मेगावॉट से अधिक का एक नया Hydroelectric Project लॉन्च कर रहें हैं। जिससे भूटान की Hydropower Capacity में फोर्टी परसेंट की बढ़ोतरी हुई है। इतना ही नहीं लंबे समय से रुके हुए एक और Hydroelectric Project पर भी फिर से काम शुरु होने जा रहा है।

और हमारी ये पार्टनरशिप सिर्फ हाइड्रो-इलेक्ट्रिक तक सीमित नहीं है।

अब हम सोलर एनर्जी में भी एक साथ बड़े कदम उठा रहे हैं। आज इससे जुड़े अहम समझौते भी हुए हैं।

साथियों,

आज एनर्जी को-ऑपरेशन के साथ-साथ, भारत और भूटान की कनेक्टिविटी बढ़ाने पर भी हमारा फोकस है।

हम सभी जानते हैं

Connectivity Creates Opportunity

And Opportunity Creates Prosperity.

इसी लक्ष्य के साथ आने वाले समय में गेलेफु और साम्त्से शहरों को भारत के विशाल रेल नेटवर्क से जोड़ने का फैसला लिया गया है। इस प्रोजेक्ट के पूरा होने से यहां की इंडस्ट्री का भूटान के किसानों का भारत के विशाल मार्केट तक एक्सेस और आसान हो जाएगा।

साथियों,

रेल और रोड कनेक्टिविटी के साथ साथ, हम बॉर्डर इंफ्रास्ट्रक्चर पर भी तेजी से आगे बढ़ रहे हैं।

His Majesty ने जिस गेलेफु Mindfulness City के विजन पर काम शुरू किया है, भारत उसके लिए भी, हर संभव सहयोग कर रहा है। मैं आज इस मंच से एक और महत्वपूर्ण घोषणा कर रहा हूं। आने वाले समय में, भारत गेलेफु के पास Immigration Checkpoint भी बनाने जा रहा है, ताकि यहां आने वाले विजिटर्स और इन्वेस्टर्स को इससे और सुविधा मिल सके।

साथियों,

भारत और भूटान की प्रगति और समृद्धि एक दूसरे से जुड़े हुए हैं। और इसी भावना से भारत सरकार ने पिछले वर्ष भूटान के Five Year Plan के लिए, Ten Thousand Crore रुपीज के सहयोग की घोषणा की थी। ये फंड, रोड से लेकर एग्रीकल्चर तक, फाइनेंसिंग से लेकर हेल्थकेयर तक, ऐसे हर सेक्टर में उपयोग हो रहा है, जिससे भूटान के नागरिकों की Ease Of Living बढ़ रही है।

बीते समय में भारत ने ऐसे कई Measures लिए हैं, जिससे भूटान के लोगों को Essential Items की निरंतर सप्लाई मिलती रहे।

और अब तो यहां UPI Payments की सुविधा का भी विस्तार हो रहा है। हम इस दिशा में भी काम कर रहे हैं कि भूटान के नागरिकों को भी भारत आने पर UPI सुविधा मिले।

साथियों,

भारत और भूटान के बीच की इस मजबूत पार्टनरशिप का सबसे ज्यादा फायदा हमारे यूथ को हो रहा है। His Majesty नेशनल सर्विस, वॉलंटरी सर्विस और इनोवेशन को लेकर बेहतरीन काम कर रहे हैं। और His Majesty का यूथ को Empower करने का जो विजन है, उन्हें Tech Enabled बनाने की जो सोच है, उससे भूटान का युवा बहुत बड़े Level पर Inspire हो रहा है।

एजुकेशन, इनोवेशन, स्किल डवलपमेंट, स्पोर्ट्स, स्पेस, कल्चर, ऐसे अनेक सेक्टर्स में भारत-भूटान के युवाओं के बीच सहयोग बढ़ रहा है। आज हमारे युवा, साथ मिलकर, एक सैटलाइट भी बना रहे हैं। भारत और भूटान दोनों के लिए ये बहुत महत्वपूर्ण अचीवमेंट है।

साथियों,

भारत और भूटान के संबंधों की एक बड़ी शक्ति हमारे लोगों के बीच का आत्मिक संबंध है। दो महीने पहले भारत के राजगीर में Royal Bhutanese Temple का उद्घाटन हुआ है। अब इस प्रयास का भारत के अन्य हिस्सों में भी विस्तार हो रहा है।

भूटान के लोगों की इच्छा थी कि वाराणसी में भूटानीज़ टेंपल और गेस्ट हाउस बने। इसके लिए भारत सरकार आवश्यक Land उपलब्ध करा रही है। इन temples के द्वारा हम अपने बहुमूल्य और ऐतिहासिक सांस्कृतिक संबंधों को और सुदृढ़ बना रहें हैं।

साथियों,

मेरी कामना है, भारत और भूटान Peace, Prosperity और Shared Progress के रास्ते पर ऐसे ही चलते रहें। भगवान बुद्ध और गुरु रिनपोछे का आशीर्वाद हम दोनों देशों पर बना रहे।

आप सभी का फिर से बहुत-बहुत आभार।

धन्यवाद !!!