ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಉತ್ಸುಕವಾಗಿವೆ, ಏಕೆಂದರೆ ಆತ್ಮವಿಶ್ವಾಸದ ಭಾರತವು ನಿಸ್ಸಂದೇಹ ಮತ್ತು ಹತಾಶೆಯನ್ನು ಮೀರಿ ಬೆಳೆಯುತ್ತಿದೆ: ಪ್ರಧಾನಮಂತ್ರಿ
ಕಳೆದ 11 ವರ್ಷಗಳಲ್ಲಿ, ರಾಷ್ಟ್ರದ ಪ್ರಜ್ಞೆಯಲ್ಲಿ ಹೊಸ ಶಕ್ತಿ ಹರಿಯುತ್ತಿದೆ, ಭಾರತವು ತನ್ನ ಸರಿಯಾದ ಶಕ್ತಿಯನ್ನು ಮರಳಿ ಪಡೆಯಲು ನಿರ್ಧರಿಸಿದೆ: ಪ್ರಧಾನಮಂತ್ರಿ
ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಇಂದು ಜಾಗತಿಕ ಚರ್ಚೆಯ ವಿಷಯವಾಗಿದೆ: ಪ್ರಧಾನಮಂತ್ರಿ
ಇಂದು, ಭಾರತದ ಪ್ರತಿಯೊಂದು ನಡೆಯನ್ನು ವಿಶ್ವದಾದ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ವಿಶ್ಲೇಷಿಸಲಾಗುತ್ತಿದೆ, ಕೃತಕ ಬುದ್ಧಿಮತ್ತೆ ಶೃಂಗಸಭೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ: ಪ್ರಧಾನಮಂತ್ರಿ
ರಾಷ್ಟ್ರ ನಿರ್ಮಾಣ ಎಂದಿಗೂ ಅಲ್ಪಾವಧಿಯ ಚಿಂತನೆಯಿಂದ ಸಾಧ್ಯವಿಲ್ಲ; ಇದು ದೀರ್ಘಾವಧಿಯ ದೂರದೃಷ್ಟಿ, ತಾಳ್ಮೆ ಮತ್ತು ಸಮಯೋಚಿತ ನಿರ್ಧಾರಗಳಿಂದ ರೂಪುಗೊಂಡಿದೆ: ಪ್ರಧಾನಮಂತ್ರಿ

ಇಸ್ರೇಲ್ ನ ಗಾಳಿ ಇಲ್ಲಿಗೂ ತಲುಪಿದೆ.

ನೆಟ್ ವರ್ಕ್ 18ನ ಎಲ್ಲಾ ಪತ್ರಕರ್ತರೇ, ಈ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಎಲ್ಲಾ ಸಹೋದ್ಯೋಗಿಗಳೇ, ಉಪಸ್ಥಿತರಿರುವ ಎಲ್ಲಾ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ನೀವೆಲ್ಲರೂ ರೈಸಿಂಗ್ ಭಾರತದ ಬಗ್ಗೆ ಚರ್ಚಿಸುತ್ತಿದ್ದೀರಿ. ಮತ್ತು ಇದರಲ್ಲಿ, ನಿಮ್ಮ ಒತ್ತು ಒಳಗಿನ ಶಕ್ತಿಯ ಮೇಲೆ - ಸರಳವಾಗಿ ಹೇಳುವುದಾದರೆ, ನಿಮ್ಮ ಗಮನ ದೇಶದ ಸ್ವಂತ ಶಕ್ತಿಯ ಮೇಲೆ. ಮತ್ತು ನಮ್ಮ ಧರ್ಮಗ್ರಂಥಗಳಲ್ಲಿ, ಇದನ್ನು ಹೇಳಲಾಗಿದೆ - ತತ್ ತ್ವಮ್ ಅಸಿ! ಅಂದರೆ, ನಾವು ಹುಡುಕುತ್ತಿರುವ ಬ್ರಹ್ಮ ನಾವೇ; ಅದು ನಮ್ಮೊಳಗಿದೆ. ನಮ್ಮೊಳಗಿನ ಶಕ್ತಿಯನ್ನು ನಾವು ಗುರುತಿಸಬೇಕು. ಕಳೆದ 11 ವರ್ಷಗಳಲ್ಲಿ, ಭಾರತವು ಈ ಶಕ್ತಿಯನ್ನು ಗುರುತಿಸಿದೆ, ಮತ್ತು ಇಂದು ದೇಶವು ಈ ಶಕ್ತಿಯನ್ನು ಬಲಪಡಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.

ಸ್ನೇಹಿತರೇ,

ಒಂದು ದೇಶದಲ್ಲಿ ಶಕ್ತಿ ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುವುದಿಲ್ಲ; ಅದು ತಲೆಮಾರುಗಳಿಂದ ನಿರ್ಮಾಣವಾಗುತ್ತದೆ. ಅದು ಜ್ಞಾನ, ಸಂಪ್ರದಾಯ, ಕಠಿಣ ಪರಿಶ್ರಮ ಮತ್ತು ಅನುಭವದ ಮೂಲಕ ಪರಿಷ್ಕರಿಸಲ್ಪಟ್ಟಿರುತ್ತದೆ. ಆದರೆ, ದೀರ್ಘ ಇತಿಹಾಸದ ಅವಧಿಯಲ್ಲಿ, ಶತಮಾನಗಳ ಗುಲಾಮಗಿರಿಯ ಸಮಯದಲ್ಲಿ, ನಮ್ಮ ಶಕ್ತಿಯ ಪ್ರಜ್ಞೆಯನ್ನು ಕೀಳರಿಮೆಯಿಂದ ಇತ್ತು ತುಂಬಿಸಲಾಗಿತ್ತು. ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಸಿದ್ಧಾಂತಗಳು ನಮ್ಮ ಸಮಾಜದಲ್ಲಿ ನಾವು ಅಶಿಕ್ಷಿತರು ಮತ್ತು ಕೇವಲ ಅನುಯಾಯಿಗಳು ಎಂಬ ಕಲ್ಪನೆಯನ್ನು ಆಳವಾಗಿ ಬೇರೂರಿಸಿದೆ. ನಮ್ಮ  ಧರ್ಮಗ್ರಂಥಗಳು ಹೇಳುತ್ತವೆ:: "ಯಾದೃಶಿ ಭಾವನಾ ಯಸ್ಯ, ಸಿದ್ಧಿರ್ಭವತಿ ತದೃಶಿ." ಇದರರ್ಥ "ಒಬ್ಬರ ನಂಬಿಕೆಯು ಹೇಗಿರುವುದೋ,  ಹಾಗೆಯೇ ಸಾಧನೆಯೂ ಅಂತಹುದೇ ಆಗಿರುತ್ತದೆ. ನಂಬಿಕೆಯೇ  ಕೀಳಾಗಿದ್ದಾಗ, ಅದಕ್ಕೆ ಅನುಗುಣವಾಗಿ ಸಾಧನೆಯೂ ಕೀಳಾಗಿತ್ತು. ನಾವು ವಿದೇಶಿ ತಂತ್ರಜ್ಞಾನವನ್ನು ನಕಲು ಮಾಡಿದೆವು   ಮತ್ತು ವಿದೇಶಿ ಅನುಮೋದನೆಯ ಮುದ್ರೆಗಾಗಿ ಕಾಯುತ್ತಿದ್ದೆವು. ಈ ಗುಲಾಮಗಿರಿಯು ಕೇವಲ ರಾಜಕೀಯ ಮತ್ತು ಭೌಗೋಳಿಕವಾಗಿರದೆ ಅದು ಹೆಚ್ಚು ಮಾನಸಿಕ ಗುಲಮಾಗಿರಿಯಾಗಿತ್ತು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರವೂ, ಭಾರತವು ಈ ಗುಲಾಮ ಮನಸ್ಥಿತಿಯಿಂದ ಮುಕ್ತವಾಗಲು ಸಾಧ್ಯವಾಗಲಿಲ್ಲ ಮತ್ತು ನಾವು ಅದರ ಪರಿಣಾಮಗಳನ್ನು ಅನುಭವಿಸುತ್ತಲೇ ಇದ್ದೇವೆ. ವ್ಯಾಪಾರ ಒಪ್ಪಂದಗಳ ಸುತ್ತಲಿನ ಚರ್ಚೆಗಳಲ್ಲಿ ಇದರ ಇತ್ತೀಚಿನ ಉದಾಹರಣೆಯನ್ನು ನಾವು ನೋಡುತ್ತೇವೆ. ಕೆಲವರು ಆಘಾತಕ್ಕೊಳಗಾಗುತ್ತಾರೆ, ಏನಾಯಿತು, ಇದು ಹೇಗೆ ಸಂಭವಿಸಿತು, ಅಭಿವೃದ್ಧಿ ಹೊಂದಿದ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಏಕೆ ಉತ್ಸುಕವಾಗಿವೆ? ಎಂದು ಆಶ್ಚರ್ಯ ಪಡುತ್ತಾರೆ. ಉತ್ತರವೆಂದರೆ ಹತಾಶೆಯಿಂದ ಹೊರಬಂದ ಆತ್ಮವಿಶ್ವಾಸದ ಭಾರತದಲ್ಲಿದೆ. 2014 ರ ಹಿಂದಿನಂತೆಯೇ ದೇಶ ಇನ್ನೂ ಸಿಲುಕಿಕೊಂಡಿದ್ದರೆ, "ದುರ್ಬಲ ಐದು" ಗಳಲ್ಲಿ ಒಂದಾಗಿದ್ದರೆ, ಅಸಮರ್ಪಕ ನೀತಿಯಲ್ಲಿಯೇ ಸಿಲುಕಿದ್ದರೆ - ನಮ್ಮೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವವರು ಯಾರು? ನಮ್ಮನ್ನು ನೋಡುತ್ತಿದ್ದರು?

 

ಆದರೆ ಸ್ನೇಹಿತರೇ,

ಕಳೆದ 11 ವರ್ಷಗಳಲ್ಲಿ, ದೇಶದ ಪ್ರಜ್ಞೆಯಲ್ಲಿ ಹೊಸ ಶಕ್ತಿ ಹರಿಯುತ್ತಿದೆ. ಭಾರತವು ಈಗ ತನ್ನ ಕಳೆದುಹೋದ ಸಾಮರ್ಥ್ಯವನ್ನು ಮರಳಿ ಪಡೆಯಲು ಶ್ರಮಿಸುತ್ತಿದೆ. ಒಂದಾನೊಂದು ಕಾಲದಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಭಾರತವು ಹೆಚ್ಚಿನ ಪ್ರಾಬಲ್ಯ ಹೊಂದಿದ್ದಾಗ, ನಮ್ಮ ಸಾಮರ್ಥ್ಯಗಳು ಏನಾಗಿತ್ತು? ಭಾರತದ ಉತ್ಪಾದನೆ, ಭಾರತದ ಉತ್ಪನ್ನಗಳ ಗುಣಮಟ್ಟ, ಭಾರತದ ಆರ್ಥಿಕ ನೀತಿ - ಈಗ ಇಂದಿನ ಭಾರತವು ಮತ್ತೆ ಈ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಿದೆ. ಅದಕ್ಕಾಗಿಯೇ ನಾವು ಉತ್ಪಾದನೆಯ ಮೇಲೆ ಕೆಲಸ ಮಾಡಿದ್ದೇವೆ, ನಾವು ಮೇಕ್ ಇನ್ ಇಂಡಿಯಾವನ್ನು ಒತ್ತಿಹೇಳಿದ್ದೇವೆ, ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ, ನಾವು ಎರಡಂಕಿಯಲ್ಲಿದ್ದ ಹಣದುಬ್ಬರವನ್ನು ನಿಯಂತ್ರಿಸಿದ್ದೇವೆ ಮತ್ತು ಭಾರತವನ್ನು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿ ಮಾಡಿದ್ದೇವೆ. ಭಾರತದ ಈ ಬಲದಿಂದಲೇ ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದೆ ಬರುತ್ತಿವೆ.

ಸ್ನೇಹಿತರೇ,

ಒಂದು ದೇಶದ ಗುಪ್ತ ಶಕ್ತಿ ಜಾಗೃತಗೊಂಡಾಗ, ಅದು ಹೊಸ ಸಾಧನೆಗಳನ್ನು ಸಾಧಿಸುತ್ತದೆ. ನಾನು ನಿಮಗೆ ಇನ್ನೂ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಉದಾಹರಣೆಗೆ, ನಾನು ಇತರ ದೇಶಗಳ ಸರ್ಕಾರದ ಮುಖ್ಯಸ್ಥರನ್ನು ಭೇಟಿಯಾದಾಗಲೆಲ್ಲಾ, ಅವರು ಜನ ಧನ್, ಆಧಾರ್ ಮತ್ತು ಮೊಬೈಲ್ ಫೋನ್ಗಳ ಅಗಾಧ ಶಕ್ತಿಯ ಬಗ್ಗೆ ಕೇಳಲು ಉತ್ಸುಕರಾಗಿರುತ್ತಾರೆ. ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಬಹಳ ತಡವಾಗಿ ಎಟಿಎಂಗಳನ್ನು  ಹೊಂದಿದ ಭಾರತವು ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ ಜಾಗತಿಕ ನಾಯಕತ್ವವನ್ನು ಹೇಗೆ ಸಾಧಿಸಿತು? ಒಂದು ಕಾಲದಲ್ಲಿ ಸರ್ಕಾರಿ ನೆರವಿನ ಸೋರಿಕೆಯನ್ನು ಕಹಿ ಸತ್ಯವೆಂದು ಒಪ್ಪಿಕೊಳ್ಳಲಾಗಿದ್ದ ಭಾರತ, ಡಿ ಬಿ ಟಿ ಮೂಲಕ ಫಲಾನುಭವಿಗಳಿಗೆ 24 ಲಕ್ಷ ಕೋಟಿ ರೂಪಾಯಿಗಳನ್ನು ಅಥವಾ 24 ಟ್ರಿಲಿಯನ್ ರೂಪಾಯಿಗಳನ್ನು ಕಳುಹಿಸುವಲ್ಲಿ ಹೇಗೆ ಯಶಸ್ವಿಯಾಯಿತು? ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಇಡೀ ಜಗತ್ತಿಗೆ ಚರ್ಚೆಯ ವಿಷಯವಾಗಿದೆ.

ಸ್ನೇಹಿತರೇ,

2014 ರವರೆಗೆ ಸರಿಸುಮಾರು 30 ದಶಲಕ್ಷ ಕುಟುಂಬಗಳು ಕತ್ತಲೆಯಲ್ಲಿ ವಾಸಿಸುತ್ತಿದ್ದ ಭಾರತವು ಈಗ ಸೌರಶಕ್ತಿ ಸಾಮರ್ಥ್ಯದಲ್ಲಿ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದನ್ನು ತಿಳಿದು ಜಗತ್ತು ಆಶ್ಚರ್ಯಚಕಿತವಾಗಿದೆ? ತನ್ನ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವ ಯಾವುದೇ ಭರವಸೆ ಇಲ್ಲದ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ದೇಶವಾಗಿ ಹೇಗೆ ಮಾರ್ಪಟ್ಟಿತು? ರೈಲ್ವೆಗಳು ವಿಳಂಬ ಮತ್ತು ನಿಧಾನಗತಿಗೆ ಮಾತ್ರ ಹೆಸರುವಾಸಿಯಾಗಿದ್ದ ಭಾರತ ವಂದೇ ಭಾರತ್, ನಮೋ ಭಾರತ್ ಮತ್ತು ಸೆಮಿ-ಹೈ-ಸ್ಪೀಡ್ ಸಂಪರ್ಕ ಹೇಗೆ ಸಾಧಿಸಿತು?

 

ಸ್ನೇಹಿತರೇ,

ಭಾರತವು ಕೇವಲ ಹೊಸ ತಂತ್ರಜ್ಞಾನದ ಗ್ರಾಹಕನಾಗಿದ್ದ ಒಂದು ಕಾಲವಿತ್ತು. ಇಂದು, ಭಾರತವು ಹೊಸ ತಂತ್ರಜ್ಞಾನದ ಉತ್ಪಾದಕ ಮತ್ತು ಹೊಸ ಮಾನದಂಡಗಳನ್ನು ನಿರ್ಮಿಸುತ್ತಿದೆ. ಮತ್ತು ನಾವು ನಮ್ಮ ಸಾಮರ್ಥ್ಯವನ್ನು ಗುರುತಿಸಿರುವುದರಿಂದ ಇದು ಸಂಭವಿಸಿದೆ; ನೀವು ಚರ್ಚಿಸುತ್ತಿರುವ ಒಳಗಿನ ಶಕ್ತಿ ಅದಕ್ಕೆ ಒಂದು ಉದಾಹರಣೆಯಾಗಿದೆ.

ಸ್ನೇಹಿತರೇ,

ನಾವು ಹೆಮ್ಮೆಯಿಂದ ಮುಂದುವರಿಯುತ್ತಿದ್ದಂತೆ, ಜಗತ್ತು ನಮ್ಮನ್ನು ನೋಡುವ ರೀತಿಯೂ ಬದಲಾಗಿದೆ ಎಂಬುದನ್ನು ನೆನಪಿಡಿ. ಕೆಲವು ವರ್ಷಗಳ ಹಿಂದಿನವರೆಗೂ, ಜಾಗತಿಕ ಮಾಧ್ಯಮಗಳಲ್ಲಿ, ವಿಶ್ವದ ಯಾವುದೇ ಭಾರತೀಯ ಕಾರ್ಯಕ್ರಮದ ಬಗ್ಗೆ ಕಡಿಮೆ ಚರ್ಚೆ ನಡೆಯುತ್ತಿತ್ತು. ಭಾರತದಲ್ಲಿ ನಡೆಯುವ ಘಟನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿರಲಿಲ್ಲ. ಅದೇ ಇಂದು, ಭಾರತ ಏನೇ ಮಾಡಿದರೂ, ಇಲ್ಲಿ ಯಾವುದೇ ಕ್ರಮಗಳು ನಡೆದರೂ, ಜಾಗತಿಕವಾಗಿ ವಿಶ್ಲೇಷಿಸಲಾಗುತ್ತದೆ ಎಂಬುದನ್ನು ನೋಡಿ.  ಎಐ ಶೃಂಗಸಭೆಯು ಒಂದು ಉದಾಹರಣೆಯಾಗಿದೆ - ಇದನ್ನು ಇಲ್ಲಿಯೇ ನಡೆಸಲಾಯಿತು. 100 ಕ್ಕೂ ಹೆಚ್ಚು ದೇಶಗಳು ಎಐ ಶೃಂಗಸಭೆಯಲ್ಲಿ ಭಾಗವಹಿಸಿದ್ದವು ಜಾಗತಿಕ ಉತ್ತರವಾಗಲಿ ಜಾಗತಿಕ ದಕ್ಷಿಣವಾಗಲಿ, ಎಲ್ಲವೂ ಒಟ್ಟಿಗೆ, ಒಂದೇ ಸ್ಥಳದಲ್ಲಿ, ಒಂದೇ ಮೇಜಿನ ಬಳಿ  ಕುಳಿತಿದ್ದವು. ವಿಶ್ವದ ಅತಿದೊಡ್ಡ ನಿಗಮಗಳಿಂದ ಹಿಡಿದು   ಸಣ್ಣ ನವೋದ್ಯಮಗಳವರೆಗೆ, ಅವರೆಲ್ಲರೂ ಒಟ್ಟಿಗೆ ಸೇರಿದ್ದರು.
 
ಸ್ನೇಹಿತರೇ,

ಇಲ್ಲಿಯವರೆಗೆ ನಡೆದ ಎಲ್ಲಾ ಕೈಗಾರಿಕಾ ಕ್ರಾಂತಿಗಳಲ್ಲಿ, ಭಾರತ ಮತ್ತು ಇಡೀ ಜಾಗತಿಕ ದಕ್ಷಿಣವು ಕೇವಲ ಅನುಯಾಯಿಗಳಾಗಿದ್ದವು. ಆದರೆ ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ, ಭಾರತವು ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗವಹಿಸುತ್ತಿದೆ ಮತ್ತು ರೂಪಿಸುತ್ತಿದೆ. ಇಂದು, ನಾವು ನಮ್ಮದೇ ಆದ ಎಐ  ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ, ದತ್ತಾಂಶ ಕೇಂದ್ರಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಮತ್ತು ನಾವು ಎಐ ದತ್ತಾಂಶವನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಅತ್ಯಂತ ಅಗತ್ಯವಿರುವ ಇಂಧನದ ಮೇಲೆ ನಾವು ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಪರಮಾಣು ವಿದ್ಯುತ್ ವಲಯದಲ್ಲಿ ನಾವು ಮಾಡಿರುವ ಸುಧಾರಣೆಗಳು ಭಾರತದ ಎಐ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಎಐ ಶೃಂಗಸಭೆಯು ಇಡೀ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಆದರೆ ದುರದೃಷ್ಟವಶಾತ್, ದೇಶದ ಅತ್ಯಂತ ಹಳೆಯ ಪಕ್ಷವು ಈ ರಾಷ್ಟ್ರೀಯ ಆಚರಣೆಯನ್ನು ಕಳಂಕಗೊಳಿಸಲು ಪ್ರಯತ್ನಿಸಿತು. ಕಾಂಗ್ರೆಸ್ ವಿದೇಶಿ ಅತಿಥಿಗಳ ಮುಂದೆ ಬೆತ್ತಲೆಯಾಗುವುದಲ್ಲದೆ, ಅದರ ಸೈದ್ಧಾಂತಿಕ ದಿವಾಳಿತನವನ್ನು ಬಹಿರಂಗಪಡಿಸಿತು. ವೈಫಲ್ಯದ ನಿರಾಶೆ ಮತ್ತು ಹತಾಶೆ ಇದ್ದಾಗ ಮತ್ತು ದುರಹಂಕಾರವು ಮೇಲುಗೈ ಸಾಧಿಸಿದಾಗ, ದೇಶವನ್ನು ದೂಷಿಸುವ ಆಲೋಚನೆಗಳು ಹೊರಹೊಮ್ಮುತ್ತವೆ. ಸ್ಪಷ್ಟವಾಗಿ, ಕಾಂಗ್ರೆಸ್ ನ ಈ ಕೃತ್ಯವು ದೇಶವನ್ನು ಕೆರಳಿಸಿದೆ. ಆದ್ದರಿಂದ, ಅವರು ತಮ್ಮ ಪಾಪಗಳನ್ನು ಸಮರ್ಥಿಸಿಕೊಳ್ಳಲು ಮಹಾತ್ಮ ಗಾಂಧಿಯವರ ಹೆಸರನ್ನು  ಮುಂದೆ ತಂದರು . ಕಾಂಗ್ರೆಸ್ ಪ್ರತಿ ಬಾರಿಯೂ ಇದನ್ನು ಮಾಡುತ್ತದೆ. ತನ್ನ ಪಾಪಗಳನ್ನು ಮರೆಮಾಚಬೇಕಾದಾಗ, ಅದು ಬಾಪುವನ್ನು ಮುಂದೆ ತಂದು ಇಡುತ್ತದೆ  ಮತ್ತು ಅದು ತನ್ನನ್ನು ತಾನು ವೈಭವೀಕರಿಸಿಕೊಳ್ಳಬೇಕಾದಾಗ, ಅದು ಒಂದೇ ಕುಟುಂಬಕ್ಕೆ ಎಲ್ಲಾ ಶ್ರೇಯಸ್ಸನ್ನು ನೀಡುತ್ತದೆ.

ಸ್ನೇಹಿತರೇ,

ಕಾಂಗ್ರೆಸ್ ಈಗ ಸಿದ್ಧಾಂತದ ಹೆಸರಿನಲ್ಲಿ ವಿರೋಧದ ಟೂಲ್ ಕಿಟ್ ಆಗಿ ಮಾರ್ಪಟ್ಟಿದೆ. ಮತ್ತು ಈ ಕುರುಡು ವಿರೋಧದ ಮನಸ್ಥಿತಿ ಎಷ್ಟು ಬೆಳೆದಿದೆ ಎಂದರೆ ಅವರು ದೇಶವನ್ನು ಪ್ರತಿ ವೇದಿಕೆಯಲ್ಲೂ ಅವಮಾನಿಸಲು ಎಂದಿಗೂ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ದೇಶ ಏನೇ ಒಳ್ಳೆಯದು ಮಾಡಿದರೂ, ದೇಶಕ್ಕೆ ಏನೇ ಒಳ್ಳೆಯದು ನಡೆದರೂ, ಕಾಂಗ್ರೆಸ್ ಅದನ್ನು ವಿರೋಧಿಸಲೇಬೇಕು ಎಂದು ಮಾತ್ರ ತಿಳಿದಿದೆ. 

 

ಸ್ನೇಹಿತರೇ,

ನನ್ನ ಬಳಿ ಒಂದು ದೊಡ್ಡ ಪಟ್ಟಿ ಇದೆ : ಹೊಸ ಸಂಸತ್ತು ಕಟ್ಟಡವನ್ನು ನಿರ್ಮಿಸಲಾಯಿತು, ಅವರು ಅದನ್ನು ವಿರೋಧಿಸಿದರು. ಸಂಸತ್ತಿನ ಮೇಲಿರುವ ಅಶೋಕ ಸ್ತಂಭದ ಸಿಂಹಗಳು - ಅವರು ಅದನ್ನು ವಿರೋಧಿಸಿದರು. ಸಾಮಾನ್ಯ ನಾಗರಿಕರ ಬೂಟುಗಳನ್ನು ತಿಂದು ಓಡಿಹೋದ ಸಿಂಹಗಳು ಸಂಸತ್ತಿನ ಸಿಂಹಗಳ ಹಲ್ಲುಗಳನ್ನು ನೋಡಿ ಭಯಭೀತರಾದವು. ಕರ್ತವ್ಯ ಮಾರ್ಗವನ್ನು ನಿರ್ಮಿಸಲಾಯಿತು, ಅವರು ಅದನ್ನು ವಿರೋಧಿಸಿದರು. ಸಶಸ್ತ್ರ ಪಡೆಗಳು ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸಿದವು, ಅವರು ಅದನ್ನು ವಿರೋಧಿಸಿದರು. ಬಾಲಕೋಟ್ ವಾಯುದಾಳಿ ನಡೆಯಿತು, ಅವರು ಅದನ್ನು ವಿರೋಧಿಸಿದರು. ಆಪರೇಷನ್ ಸಿಂದೂರ್ ನಡೆಸಲಾಯಿತು, ಅವರು ಅದನ್ನು ವಿರೋಧಿಸಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಷ್ಟ್ರದ ಪ್ರತಿಯೊಂದು ಸಾಧನೆಗೂ, ಕಾಂಗ್ರೆಸ್ ನ ಟೂಲ್ ಕಿಟ್ ನಿಂದ ಒಂದೇ ಒಂದು ವಿಷಯವನ್ನು ಉತ್ಪಾದಿಸುತ್ತದೆ - ವಿರೋಧ.

ಸ್ನೇಹಿತರೇ,

ದೇಶವು 370 ನೇ ವಿಧಿಯ ಗೋಡೆಯನ್ನು ಕೆಡವಿತು, ಅದಕ್ಕಾಗಿ ದೇಶವು ಸಂತೋಷಪಟ್ಟಿತು. ಆದರೆ ಕಾಂಗ್ರೆಸ್ ಅದನ್ನು ವಿರೋಧಿಸಿತು. ನಾವು ಸಿಎಎ  ಕಾನೂನು ಜಾರಿಗೆ ತಂದೆವು, ಮತ್ತು ಅದನ್ನು ವಿರೋಧಿಸಿದರು. ನಾವು ಮಹಿಳಾ ಮೀಸಲಾತಿ ಕಾಯ್ದೆಯನ್ನು ಪರಿಚಯಿಸಿದೆವು, ಮತ್ತು ಅದನ್ನು ವಿರೋಧಿಸಿದರು. ನಾವು ತ್ರಿವಳಿ ತಲಾಖ್ ವಿರುದ್ಧ ಕಾನೂನನ್ನು ತಂದೆವು, ಮತ್ತು ಅದನ್ನು ವಿರೋಧಿಸಿದರು . ನಾವು ಯುಪಿಐ ಅನ್ನು ಪರಿಚಯಿಸಿದೆವು, ಅವರು ಅದನ್ನು ವಿರೋಧಿಸಿದರು. ನಾವು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದೆವು  ಅವರು ಅದನ್ನು ವಿರೋಧಿಸಿದರು. ದೇಶವು ತನ್ನದೇ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಿತು, ಅವರು ಅದನ್ನೂ ವಿರೋಧಿಸಿದರು. 

ಸ್ನೇಹಿತರೇ,

ಪ್ರಜಾಪ್ರಭುತ್ವದಲ್ಲಿ, ವಿರೋಧ ಎಂದರೆ ಕುರುಡು ಪ್ರತಿರೋಧವಲ್ಲ. ಪ್ರಜಾಪ್ರಭುತ್ವದಲ್ಲಿ, ವಿರೋಧ ಎಂದರೆ ಪರ್ಯಾಯ ದೃಷ್ಟಿಕೋನವನ್ನು ಪ್ರಸ್ತುತಪಡಿಸುವುದು. ಅದಕ್ಕಾಗಿಯೇ ದೇಶದ ಪ್ರಬುದ್ಧ ನಾಗರಿಕರು ಕಾಂಗ್ರೆಸ್ಗೆ ಪಾಠ ಕಲಿಸುತ್ತಿದ್ದಾರೆ - ಇಂದು ಮಾತ್ರವಲ್ಲ, ನಿರಂತರವಾಗಿ ಕಳೆದ ನಾಲ್ಕು ದಶಕಗಳಿಂದ. ನಾನು ಹೇಳಲು ಹೊರಟಿರುವುದನ್ನು ನನ್ನ ಮಾಧ್ಯಮ ಸಹೋದ್ಯೋಗಿಗಳು ಸಹ ವಿಶ್ಲೇಷಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಕಾಂಗ್ರೆಸ್ನ ಮತಗಳು ಕದಿಯಲ್ಪಡುತ್ತಿಲ್ಲ ಎಂದು ನೀವು ನೋಡುತ್ತೀರಿ; ಬದಲಿಗೆ, ದೇಶದ ಜನರು ಇನ್ನು ಮುಂದೆ ಕಾಂಗ್ರೆಸ್ ಅನ್ನು ತಮ್ಮ ಮತಕ್ಕೆ ಅರ್ಹರಲ್ಲ ಎಂದು ಪರಿಗಣಿಸುತ್ತಾರೆ. ಮತ್ತು ಈ ಕುಸಿತವು 1984 ರ ನಂತರ ಪ್ರಾರಂಭವಾಯಿತು. 1984 ರಲ್ಲಿ, ಕಾಂಗ್ರೆಸ್ ಶೇಕಡಾ 39 ರಷ್ಟು ಮತಗಳನ್ನು ಮತ್ತು 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಿತು. ನಂತರದ ಚುನಾವಣೆಗಳಲ್ಲಿ, ಕಾಂಗ್ರೆಸ್ನ ಮತ ಪಾಲು ಕುಸಿಯುತ್ತಲೇ ಇತ್ತು. ಮತ್ತು ಇಂದು, ಕಾಂಗ್ರೆಸ್ನ ಸ್ಥಿತಿ ಹೇಗಿದೆಯೆಂದರೆ, ಕಾಂಗ್ರೆಸ್ 50 ಕ್ಕೂ ಹೆಚ್ಚು ಶಾಸಕರನ್ನು ಹೊಂದಿರುವ ನಾಲ್ಕು ರಾಜ್ಯಗಳು ಮಾತ್ರ ಉಳಿದಿವೆ. ಕಳೆದ 40 ವರ್ಷಗಳಲ್ಲಿ, ಯುವ ಮತದಾರರ ಸಂಖ್ಯೆ ಹೆಚ್ಚಾಗಿದೆ ಮತ್ತು ಕಾಂಗ್ರೆಸ್ ಸ್ಥಿರವಾಗಿ ಕಣ್ಮರೆಯಾಗಿದೆ. ಕಾಂಗ್ರೆಸ್ ಒಂದು ಕುಟುಂಬಕ್ಕೆ ಗುಲಾಮರಾಗಿರುವ ಜನರ ಕ್ಲಬ್ ಆಗಿ ಮಾರ್ಪಟ್ಟಿದೆ. ಅದಕ್ಕಾಗಿಯೇ ಮೊದಲು ಮಿಲೇನಿಯಲ್ಸ್ ಕಾಂಗ್ರೆಸ್ಗೆ ಪಾಠ ಕಲಿಸಿತು, ಮತ್ತು ಈಗ ಜೆನ್ ಝೀ ಕೂಡ ಸಿದ್ಧವಾಗಿದೆ.

 

ಸ್ನೇಹಿತರೇ,

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಎಷ್ಟು ಸಂಕುಚಿತ ಮನಸ್ಸಿನವರೆಂದರೆ, ಅವರು ದೂರದೃಷ್ಟಿಯೊಂದಿಗೆ ಕೆಲಸ ಮಾಡುವುದನ್ನು ಸಹ ಅಪರಾಧವೆಂದು ಪರಿಗಣಿಸಿದ್ದಾರೆ. ಇಂದು, ನಾವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುವಾಗ, ಕೆಲವರು, "ನೀವು ಏಕೆ ಅಂತಹ ದೂರದ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೀರಿ?" ಎಂದು ಕೇಳುತ್ತಾರೆ. ಕೆಲವರು "ಮೋದಿ ಅಲ್ಲಿಯವರೆಗೆ ಜೀವಂತವಾಗಿರುವುದಿಲ್ಲ" ಎಂದು ಹೇಳುತ್ತಾರೆ.  ಸತ್ಯವೆಂದರೆ ದೇಶ ನಿರ್ಮಾಣವನ್ನು ಅಲ್ಪಾವಧಿಯ ಚಿಂತನೆಯ ಮೂಲಕ ಎಂದಿಗೂ ಸಾಧಿಸಲಾಗುವುದಿಲ್ಲ. ವಿಶಾಲ ದೃಷ್ಟಿಕೋನ, ತಾಳ್ಮೆ ಮತ್ತು ಸಮಯೋಚಿತ ನಿರ್ಧಾರಗಳ ಮೂಲಕ ಸಾಧಿಸಲಾಗುತ್ತದೆ. ನಾನು ನೆಟ್ವರ್ಕ್ 18 ವೀಕ್ಷಕರೊಂದಿಗೆ ಇನ್ನೂ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಭಾರತವು ವಿದೇಶಿ ಹಡಗುಗಳಲ್ಲಿ ಸರಕುಗಳನ್ನು ಬಾಡಿಗೆಗೆ ಪಡೆಯಲು ಪ್ರತಿ ವರ್ಷ 6 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುತ್ತದೆ. ರಸಗೊಬ್ಬರ ಆಮದಿಗೆ ಪ್ರತಿ ವರ್ಷ 2.25 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಪೆಟ್ರೋಲಿಯಂ ಆಮದಿಗೆ ಪ್ರತಿ ವರ್ಷ 11 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಇದರರ್ಥ ಪ್ರತಿ ವರ್ಷ ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲಾಗುತ್ತಿದೆ. 20-25 ವರ್ಷಗಳ ಹಿಂದೆ ಸ್ವಾವಲಂಬನೆಗಾಗಿ ಈ ಹೂಡಿಕೆ ಮಾಡಿದ್ದರೆ, ಈ ಬಂಡವಾಳವು ಭಾರತದ ಮೂಲಸೌಕರ್ಯ, ಸಂಶೋಧನೆ, ಕೈಗಾರಿಕೆ, ರೈತರು ಮತ್ತು ಯುವಕರ ಸಾಮರ್ಥ್ಯಗಳನ್ನು ಬಲಪಡಿಸುತ್ತಿತ್ತು. ಇಂದು, ನಮ್ಮ ಸರ್ಕಾರ ಈ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಿದೇಶಿ ಹಡಗುಗಳಿಗೆ ₹6 ಲಕ್ಷ ಕೋಟಿ ಪಾವತಿಸುವುದನ್ನು ತಪ್ಪಿಸಲು, ಭಾರತೀಯ ಹಡಗು ಮತ್ತು ಬಂದರು ಮೂಲಸೌಕರ್ಯವನ್ನು ಬಲಪಡಿಸಲಾಗುತ್ತಿದೆ. ಸ್ವದೇಶೀ  ರಸಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸಲು ಹೊಸ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ನ್ಯಾನೊ-ಯೂರಿಯಾವನ್ನು ಉತ್ತೇಜಿಸಲಾಗುತ್ತಿದೆ. ಪೆಟ್ರೋಲಿಯಂ, ಎಥೆನಾಲ್ ಮಿಶ್ರಣದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಹಸಿರು ಹೈಡ್ರೋಜನ್ ಮಿಷನ್, ಸೌರ ಮತ್ತು ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಮತ್ತು ಸ್ನೇಹಿತರೇ,

ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಇಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿಯೇ ಭಾರತವು ಸೆಮಿಕಂಡಕ್ಟರ್ (ಅರೆವಾಹಕ) ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪಾದನೆ, ಮೊಬೈಲ್ ಉತ್ಪಾದನೆ, ಡ್ರೋನ್ ತಂತ್ರಜ್ಞಾನ, ಪ್ರಮುಖ ಖನಿಜ ವಲಯ ಮತ್ತು ಅದರಲ್ಲಿ ಹೂಡಿಕೆಗಳಲ್ಲಿ - ಮುಂಬರುವ ದಶಕಗಳಲ್ಲಿ ಆರ್ಥಿಕ ಭದ್ರತೆಗೆ ನಾವು ಬುನಾದಿ ಹಾಕುತ್ತಿದ್ದೇವೆ. 2047ರ ಗುರಿ ರಾಜಕೀಯ ಘೋಷಣೆಯಲ್ಲ. ಇದು, ಕಾಂಗ್ರೆಸ್ ಸರ್ಕಾರಗಳು ಸಮಯಕ್ಕೆ ತಕ್ಕಂತೆ ಹೂಡಿಕೆ ಮಾಡಲು ವಿಫಲವಾದ ಐತಿಹಾಸಿಕ ತಪ್ಪುಗಳನ್ನು ಸರಿ ಮಾಡುವ ಸಂಕಲ್ಪವೂ ಆಗಿದೆ. ಇಂದು, ನಾವು ಸ್ಥಳೀಯ ಹಡಗುಗಳನ್ನು ನಿರ್ಮಿಸಿದರೆ, ನಮ್ಮ ಸ್ವಂತ ಇಂಧನವನ್ನು ಉತ್ಪಾದಿಸಿದರೆ ಮತ್ತು ಹೊಸ ತಂತ್ರಜ್ಞಾನಗಳನ್ನು ನಾವೇ ಅಭಿವೃದ್ಧಿಪಡಿಸಿದರೆ, ಭವಿಷ್ಯದ ಪೀಳಿಗೆಗಳು ಆಮದುಗಳ ಹೊರೆಯ ಬಗ್ಗೆ ಚರ್ಚಿಸುವುದಿಲ್ಲ, ರಫ್ತು ಸಾಮರ್ಥ್ಯದ ಬಗ್ಗೆ ಚರ್ಚಿಸುತ್ತವೆ. ಒಂದು ರಾಷ್ಟ್ರದ ಪ್ರಗತಿಯನ್ನು "ಇಂದಿನ ಅನುಕೂಲತೆ" ಯಿಂದ ನಿರ್ಧರಿಸಲಾಗುವುದಿಲ್ಲ, ಆದರೆ "ನಾಳಿನ ಸಿದ್ಧತೆ" ಯಿಂದ ನಿರ್ಧರಿಸಲಾಗುತ್ತದೆ. ಮತ್ತು ದೂರದೃಷ್ಟಿಯಿಂದ ಮಾಡಿದ ಕಠಿಣ ಪರಿಶ್ರಮವು 2047ರಲ್ಲಿ ಸ್ವಾವಲಂಬಿ, ಬಲಿಷ್ಠ ಮತ್ತು ಸಮೃದ್ಧ ಭಾರತದ ಅಡಿಪಾಯವಾಗಿದೆ. ಮತ್ತು ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಷ್ಟೇ ಬಟ್ಟೆ ಹರಿದುಕೊಂಡರೂ, ನಾವು ದಣಿವರಿಯಿಲ್ಲದೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.

 

ಸ್ನೇಹಿತರೇ,

ದೇಶ ನಿರ್ಮಾಣದ ಒಂದು ಪ್ರಮುಖ ಷರತ್ತು ಪ್ರಾಮಾಣಿಕ ಉದ್ದೇಶ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇಲ್ಲಿಯೂ ವಿಫಲವಾಗಿವೆ. ಅವರು ಎಂದಿಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿಲ್ಲ. ಬಡವರ ನೋವಿನ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಉದಾಹರಣೆಗೆ, ಬಂಗಾಳದಲ್ಲಿ, ಆಯುಷ್ಮಾನ್ ಭಾರತ್ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಪ್ರಾಮಾಣಿಕತೆ ಇದ್ದಿದ್ದರೆ, ಬಡವರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಅವರು ನಿರ್ಬಂಧಿಸುತ್ತಿದ್ದರೇ? ಇಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಬಡವರಿಗೆ ಶಾಶ್ವತ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ನಿಮಗೆ ತಿಳಿದಿದೆ. ನೆಟ್ವರ್ಕ್ 18 ನ ವೀಕ್ಷಕರಿಗೆ ನಾನು ಇನ್ನೊಂದು ಅಂಕಿ ಅಂಶವನ್ನು ನೀಡುತ್ತೇನೆ. ತಮಿಳುನಾಡಿನಲ್ಲಿ, ಬಡ ಕುಟುಂಬಗಳಿಗೆ ಸುಮಾರು 9.5 ಲಕ್ಷ ಶಾಶ್ವತ ಮನೆಗಳನ್ನು ಹಂಚಿಕೆ ಮಾಡಲಾಗಿದೆ - 9.5 ಲಕ್ಷ. ಆದರೆ ಈ ಮನೆಗಳಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಸ್ಥಗಿತಗೊಂಡಿದೆ. ಏಕೆ? ಏಕೆಂದರೆ ಡಿಎಂಕೆ ಸರ್ಕಾರ ಬಡವರಿಗೆ ಈ ಮನೆಗಳನ್ನು ನಿರ್ಮಿಸಲು ಆಸಕ್ತಿ ತೋರಿಸುತ್ತಿಲ್ಲ. ಮತ್ತು ಕಾರಣ ಸ್ಪಷ್ಟವಾಗಿದೆ - ಅವರ ಉದ್ದೇಶ ಪ್ರಾಮಾಣಿಕವಾಗಿಲ್ಲ.

ಸ್ನೇಹಿತರೇ,

ಕೃಷಿ ಕ್ಷೇತ್ರದ ಉದಾಹರಣೆಯನ್ನೂ ನಾನು ನಿಮಗೆ ನೀಡುತ್ತೇನೆ. ಕಾಂಗ್ರೆಸ್ ಆಳ್ವಿಕೆಯಲ್ಲಿ, ಕೃಷಿಯನ್ನು ಸ್ವತಃ ತಾವೇ ನೋಡಿಕೊಳ್ಳಬೇಕಾಗಿತ್ತು. ಸಣ್ಣ ರೈತರ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ, ಬೆಳೆ ವಿಮೆ ಕೆಟ್ಟ ಸ್ಥಿತಿಯಲ್ಲಿತ್ತು, ಎಂ ಎಸ್ ಪಿ ಕುರಿತ ಸ್ವಾಮಿನಾಥನ್ ಸಮಿತಿ ವರದಿಯನ್ನು ಕಡತಗಳಲ್ಲಿಯೇ ಹೂತುಹಾಕಲಾಯಿತು. ಕಾಂಗ್ರೆಸ್ ಬಜೆಟ್ ನಲ್ಲಿ ಘೋಷಣೆಗಳನ್ನು ಮಾಡಿತು, ಆದರೆ ಉದ್ದೇಶವಿಲ್ಲದ ಕಾರಣ ತಳಮಟ್ಟದಲ್ಲಿ  ಯಾವುದೂ ಆಗಲಿಲ್ಲ. ನಾವು ದೇಶದ ರೈತರಿಗಾಗಿ ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಲು ಪ್ರಾರಂಭಿಸಿದೆವು ಮತ್ತು ಇಂದು ಜಗತ್ತು ಫಲಿತಾಂಶಗಳನ್ನು ನೋಡುತ್ತಿದೆ. ಇಂದು, ಭಾರತವು ವಿಶ್ವದ ಅತಿದೊಡ್ಡ ಕೃಷಿ ರಫ್ತುದಾರರಲ್ಲಿ ಒಂದಾಗುತ್ತಿದೆ. ನಾವು ಪ್ರತಿ ಹಂತದಲ್ಲೂ ರೈತರಿಗೆ ಸುರಕ್ಷತಾ ಜಾಲವನ್ನು ರಚಿಸಿದ್ದೇವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಜಮಾ ಮಾಡಲಾಗಿದೆ. ನಾವು ಎಂ ಎಸ್ ಪಿ ಅನ್ನು ವೆಚ್ಚದ ಒಂದೂವರೆ ಪಟ್ಟು ನಿಗದಿಪಡಿಸಿದ್ದೇವೆ ಮತ್ತು ದಾಖಲೆ ಮಟ್ಟದ ಖರೀದಿಗಳನ್ನು ಸಹ ಮಾಡಿದ್ದೇವೆ. ನಾನು ನಿಮಗೆ ಬೇಳೆಕಾಳುಗಳ ಅಂಕಿಅಂಶಗಳನ್ನು ನೀಡುತ್ತೇನೆ. 10 ವರ್ಷಗಳಲ್ಲಿ, ಯುಪಿಎ ಸರ್ಕಾರವು ರೈತರಿಂದ ಕೇವಲ 6 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳ ಧಾನ್ಯಗಳನ್ನು ಎಂ ಎಸ್ ಪಿ ಯಲ್ಲಿ ಖರೀದಿಸಿತು - 6 ಲಕ್ಷ ಮೆಟ್ರಿಕ್ ಟನ್. ಮತ್ತು ನಮ್ಮ ಸರ್ಕಾರ ಇಲ್ಲಿಯವರೆಗೆ ಸುಮಾರು 17 ದಶಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ಖರೀದಿಸಿದೆ, ಅಂದರೆ  ಎಂ ಎಸ್ ಪಿ ಗಿಂತ ಸುಮಾರು 30 ಪಟ್ಟು ಹೆಚ್ಚು. ಈಗ ನೀವು ರೈತರಿಗಾಗಿ ಯಾರು ಕೆಲಸ ಮಾಡುತ್ತಾರೆ ಎಂಬುದನ್ನು ನಿರ್ಧರಿಸಿ.

ಸ್ನೇಹಿತರೇ,

ಯುಪಿಎ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೂಲಕ ರೈತರಿಗೆ ನೆರವು ನೀಡುವಲ್ಲಿಯೂ ಸಹ ಜಿಪುಣತನ ತೋರಿತು. ತನ್ನ 10 ವರ್ಷಗಳಲ್ಲಿ, ಯುಪಿಎ ಸರ್ಕಾರ ₹7 ಲಕ್ಷ ಕೋಟಿ ಮೌಲ್ಯದ ಕೃಷಿ ಸಾಲಗಳನ್ನು ನೀಡಿತು. ನಮ್ಮ ಸರ್ಕಾರ ನಾಲ್ಕು ಪಟ್ಟು ಹೆಚ್ಚು, ₹28 ಲಕ್ಷ ಕೋಟಿಗಳನ್ನು ನೀಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ, ಕೇವಲ 50 ದಶಲಕ್ಷ ರೈತರು ಈ ಯೋಜನೆಯ ಪ್ರಯೋಜನ ಪಡೆದರು. ಇಂದು, ಈ ಸಂಖ್ಯೆ ದ್ವಿಗುಣಗೊಂಡಿದೆ, ಸುಮಾರು 120 ದಶಲಕ್ಷ ರೈತರನ್ನು ತಲುಪಿದೆ. ಇದರರ್ಥ ದೇಶದ ಸಣ್ಣ ರೈತರು ಸಹ ಮೊದಲ ಬಾರಿಗೆ ಸಹಾಯವನ್ನು ಪಡೆದಿದ್ದಾರೆ. ನಮ್ಮ ಸರ್ಕಾರವು ರೈತರಿಗೆ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯ ಭದ್ರತಾ ರಕ್ಷಣೆಯನ್ನು ಸಹ ಒದಗಿಸಿದೆ. ಈ ಯೋಜನೆಯಡಿಯಲ್ಲಿ, ರೈತರು ಬಿಕ್ಕಟ್ಟಿನ ಸಮಯದಲ್ಲಿ ಸುಮಾರು ₹2 ಲಕ್ಷ ಕೋಟಿಗಳನ್ನು ಪಡೆದಿದ್ದಾರೆ. ನಾವು ಒಳ್ಳೆಯ ಉದ್ದೇಶಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ, ಅದಕ್ಕಾಗಿಯೇ ಭಾರತೀಯ ರೈತರ ವಿಶ್ವಾಸ ಬೆಳೆಯುತ್ತಿದೆ, ಅವರ ಉತ್ಪಾದಕತೆ ಹೆಚ್ಚುತ್ತಿದೆ ಮತ್ತು ಅವರ ಆದಾಯವೂ ಹೆಚ್ಚುತ್ತಿದೆ.

ಸ್ನೇಹಿತರೇ,

21ನೇ ಶತಮಾನದ ಕಾಲು ಭಾಗ ಈಗಾಗಲೇ ಕಳೆದಿದೆ. ಈಗ ಮುಂದಿನ ಹಂತವು ಭಾರತದ ಅಭಿವೃದ್ಧಿಗೆ ನಿರ್ಣಾಯಕವಾಗಿದೆ. ಇಂದು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತವೆ. ನಾವು ನಮ್ಮ ಸಾಮರ್ಥ್ಯವನ್ನು ಗುರುತಿಸಿ ಮತ್ತು ಹೆಚ್ಚಿಸಿಕೊಂಡು ಮುಂದುವರಿಯಬೇಕು. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು, ಪ್ರತಿಯೊಂದು ಸಂಸ್ಥೆಯು ಶ್ರೇಷ್ಠತೆಯನ್ನು ತನ್ನ ಸಂಸ್ಕೃತಿಯನ್ನಾಗಿ ಮಾಡಿಕೊಳ್ಳಬೇಕು. ನಾವು ಕೇವಲ ಉತ್ಪನ್ನಗಳನ್ನು ತಯಾರಿಸಬಾರದು, ನಾವು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬೇಕು. ನಾವು ಕೇವಲ ದಿನನಿತ್ಯದ ಕೆಲಸವನ್ನು ಮಾಡಬಾರದು, ನಾವು ವಿಶ್ವ ದರ್ಜೆಯ ಕೆಲಸವನ್ನು ಮಾಡಬೇಕು. ನಾವು ಸಾಮರ್ಥ್ಯವನ್ನು ಕಾರ್ಯಕ್ಷಮತೆಯಾಗಿ ಪರಿವರ್ತಿಸಬೇಕು. ನಾನು ಕೆಂಪು ಕೋಟೆಯಿಂದ ಹೇಳಿದಂತೆ - ಇದು ಸಮಯ, ಸರಿಯಾದ ಸಮಯ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಮಯ ಇದು. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಬಹಳ  ಧನ್ಯವಾದಗಳು. ನಮಸ್ಕಾರ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
One of the world’s first canal-top solar projects placed a 750-meter solar array above an Indian irrigation canal, generating clean power while saving an estimated 9 million liters of water each year

Media Coverage

One of the world’s first canal-top solar projects placed a 750-meter solar array above an Indian irrigation canal, generating clean power while saving an estimated 9 million liters of water each year
NM on the go

Nm on the go

Always be the first to hear from the PM. Get the App Now!
...
PM addresses an energy-packed public rally in Jalandhar, Punjab
July 17, 2026
The party ruling Punjab neither has honest intent nor clean governance: PM Modi's sharp criticism
Punjab’s farmers, youth and entrepreneurs can make the state one of India's strongest growth engines. For that, Punjab needs a double-engine BJP government: PM’s promise
Punjab's youth have extraordinary talent. From the sports goods capital of Jalandhar, I want to tell every young person that this is the time to seize new opportunities: PM
BJP-governed states are delivering faster development, better welfare and stronger support for farmers and employees: PM notes in Punjab

PM Modi addressed a massive public rally in Jalandhar, Punjab, where he highlighted the transformation of India's railway infrastructure, outlined the BJP's vision for a Viksit Punjab and called for a double-engine government to unlock the state's full potential. He also spoke about the growing opportunities for Punjab's youth through India's emerging sports economy.

The PM said Indian Railways, which serves millions of poor and middle-class families every day, had long suffered neglect under previous governments. He noted that while earlier governments limited themselves to announcing new trains, the BJP government has focused on modernising railway infrastructure across the country. He said the newly inaugurated Jalandhar Cantt station, alongside other stations, reflects the vision of a Viksit Bharat while also celebrating Punjab's cultural heritage. He added that these stations are becoming centres of commerce by creating opportunities for local artisans, Vishwakarma beneficiaries and women SHGs. He also recalled that the BJP government renamed Adampur Airport after Shri Guru Ravidass Maharaj Ji and Chandigarh International Airport after Shaheed Bhagat Singh, honouring India's great icons.

PM Modi strongly criticised the Punjab government over law and order, corruption and misgovernance. He said rising gang wars, extortion, attacks on police stations and the growing drug menace have put Punjab's future at risk. He alleged that corruption and criminal cases involving leaders of the ruling party have eroded public trust, while funds provided by the Centre for roads, irrigation, markets and welfare have not been utilised effectively. He further stated that central schemes were being rebranded instead of being implemented honestly, adding that even the Ayushman Bharat scheme had been subjected to political branding.

Calling for a double-engine government in Punjab, the PM said the state has immense potential through its farmers, youth and entrepreneurs. Drawing comparisons with BJP-governed states, he said double-engine governments have accelerated development, strengthened welfare delivery and ensured better support for farmers and employees. He alleged that promises made to women in Punjab remain unfulfilled, while Congress and other regional parties remain occupied with internal politics instead of serving the people. He said only the BJP can bring lasting development, attract fresh investment, generate employment and make Punjab a stronger and more self-reliant state.

Addressing the youth, he noted Jalandhar's globally recognised sports manufacturing ecosystem and said it is at the heart of India's emerging sports economy. He said initiatives such as ‘Khelo India’ are creating new opportunities across sports manufacturing, coaching, sports science, sports medicine, universities, centres of excellence and sports startups. Referring to his recent visits to Australia and New Zealand, he said several agreements had been signed to strengthen India's sports ecosystem and encouraged Punjab's youth to seize these opportunities and make the country proud on the global stage.