Releases a commemorative postage stamp celebrating 100 years of Hindustan Times
The power that has shaped India's destiny, shown direction to India, is the wisdom and capability of the common man of India: PM Modi
Progress of the people,Progress by the people,Progress for the people is our Mantra for New and Developed India:PM Modi
Today, India is filled with unprecedented aspirations and we have made these aspirations a cornerstone of our policies:PM Modi
Our government has provided citizens with a unique combination, of Employment through Investment, Dignity through Development:PM Modi
The approach of our government is Spend Big For The People,Save Big For The People:PM Modi
This century will be India's century:PM Modi

ನಿಮ್ಮೆಲ್ಲರಿಗೂ ನಮಸ್ಕಾರ!

100 ವರ್ಷಗಳ ಹಿಂದೆ, ಹಿಂದೂಸ್ತಾನ್ ಟೈಮ್ಸ್ ಅನ್ನು ಪೂಜ್ಯ ಬಾಪು ಉದ್ಘಾಟಿಸಿದರು ... ಅವರು ಗುಜರಾತಿ ಭಾಷಣಕಾರರಾಗಿದ್ದರು, ಮತ್ತು ನೀವು 100 ವರ್ಷಗಳ ನಂತರ ಇನ್ನೊಬ್ಬ ಗುಜರಾತಿಯನ್ನು ಆಹ್ವಾನಿಸಿದ್ದೀರಿ. ನಾನು, ಹಿಂದೂಸ್ತಾನ್ ಟೈಮ್ಸ್ ಮತ್ತು ಕಳೆದ 100 ವರ್ಷಗಳಲ್ಲಿ ಈ ಐತಿಹಾಸಿಕ ಪ್ರಯಾಣದೊಂದಿಗೆ ಸಂಬಂಧ ಹೊಂದಿರುವವರು, ಅದನ್ನು ಪೋಷಿಸಲು ಕೊಡುಗೆ ನೀಡಿದವರು, ಹೋರಾಡಿದ ಮತ್ತು ಸವಾಲುಗಳನ್ನು ಎದುರಿಸಿದ ಆದರೆ ದೃಢವಾಗಿ ನಿಂತ ಎಲ್ಲರನ್ನೂ ಅಭಿನಂದಿಸುತ್ತೇನೆ. ಅವರೆಲ್ಲರೂ ಇಂದು ಅಭಿನಂದನೆಗೆ ಅರ್ಹರು ಮತ್ತು ಗೌರವಕ್ಕೆ ಅರ್ಹರು. 100 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸುವುದು ನಿಜಕ್ಕೂ ಮಹತ್ವದ್ದಾಗಿದೆ. ನೀವೆಲ್ಲರೂ ಈ ಮನ್ನಣೆಗೆ ಅರ್ಹರು, ಮತ್ತು ಭವಿಷ್ಯಕ್ಕಾಗಿ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ನಾನು ಇಲ್ಲಿಗೆ ಬಂದಾಗ, ನಾನು ಕುಟುಂಬದ ಸದಸ್ಯರನ್ನು ಭೇಟಿಯಾದೆ ಮತ್ತು ಹಿಂದೂಸ್ತಾನ್ ಟೈಮ್ಸ್ ನ 100 ವರ್ಷಗಳ ಪ್ರಯಾಣವನ್ನು ಪ್ರದರ್ಶಿಸುವ ಗಮನಾರ್ಹ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಸಿಕ್ಕಿತು. ನಿಮಗೆ ಸಮಯವಿದ್ದರೆ ಹೊರಡುವ ಮೊದಲು ಅಲ್ಲಿಗೆ ಭೇಟಿ ನೀಡಿ ಸ್ವಲ್ಪ ಸಮಯ ಕಳೆಯಲು ನಾನು ನಿಮ್ಮೆಲ್ಲರನ್ನೂ ಪ್ರೋತ್ಸಾಹಿಸುತ್ತೇನೆ. ಇದು ಕೇವಲ ಪ್ರದರ್ಶನವಲ್ಲ, ಆದರೆ ಒಂದು ಅನುಭವ. 100 ವರ್ಷಗಳ ಇತಿಹಾಸ ನನ್ನ ಕಣ್ಣ ಮುಂದೆ ಹಾದುಹೋದಂತೆ ಭಾಸವಾಯಿತು. ದೇಶ ಸ್ವಾತಂತ್ರ್ಯ ಪಡೆದ ದಿನದಿಂದ ಮತ್ತು ಸಂವಿಧಾನವನ್ನು ಜಾರಿಗೆ ತಂದ ದಿನದಿಂದ ನಾನು ಪತ್ರಿಕೆಗಳನ್ನು ನೋಡಿದೆ. ಮಾರ್ಟಿನ್ ಲೂಥರ್ ಕಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ.ಎಂ.ಎಸ್.ಸ್ವಾಮಿನಾಥನ್ ಅವರಂತಹ ಪ್ರಸಿದ್ಧ ಮತ್ತು ಪ್ರಖ್ಯಾತ ವ್ಯಕ್ತಿಗಳು ಹಿಂದೂಸ್ತಾನ್ ಟೈಮ್ಸ್ ಗೆ  ಬರೆಯುತ್ತಿದ್ದರು. ಅವರ ಬರಹಗಳು ಪತ್ರಿಕೆಯನ್ನು ಅಪಾರವಾಗಿ ಶ್ರೀಮಂತಗೊಳಿಸಿದವು. ನಿಜವಾಗಿಯೂ, ನಾವು ಬಹಳ ದೂರ ಸಾಗಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡುವುದರಿಂದ ಹಿಡಿದು ಸ್ವಾತಂತ್ರ್ಯದ ನಂತರ ಮಿತಿಯಿಲ್ಲದ ಭರವಸೆಯ ಅಲೆಗಳ ಮೇಲೆ ಸವಾರಿ ಮಾಡುವವರೆಗೆ, ಈ ಪ್ರಯಾಣವು ಅಸಾಧಾರಣ ಮತ್ತು ನಂಬಲಾಗದಂತಹದ್ದಾಗಿದೆ. ನಿಮ್ಮ ಪತ್ರಿಕೆಯಲ್ಲಿ, 1947 ರ ಅಕ್ಟೋಬರ್ ನಲ್ಲಿ ಕಾಶ್ಮೀರದ ಸೇರ್ಪಡೆಯ ನಂತರ ಇದ್ದ ಉತ್ಸಾಹವನ್ನು ನಾನು ಗ್ರಹಿಸಿದೆ, ಅದನ್ನು ಪ್ರತಿಯೊಬ್ಬ ನಾಗರಿಕರೂ ಅನುಭವಿಸಿದ್ದಾರೆ. ಆ ಕ್ಷಣದಲ್ಲಿ, ನಿರ್ಧಾರ ತೆಗೆದುಕೊಳ್ಳದಿರುವಿಕೆಯು ಕಾಶ್ಮೀರವನ್ನು ಏಳು ದಶಕಗಳ ಕಾಲ ಹಿಂಸಾಚಾರದಲ್ಲಿ ಮುಳುಗಿಸಿತು ಎಂಬುದನ್ನು ನಾನು ಅರಿತುಕೊಂಡೆ. ಇಂದು, ನಿಮ್ಮ ಪತ್ರಿಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆಯ ಮತದಾನದ ಸುದ್ದಿಗಳನ್ನು ವರದಿ ಮಾಡುತ್ತದೆ, ಇದು ಹಿಂದಿನದಕ್ಕೆ ತೀವ್ರವಾಗಿ ವ್ಯತಿರಿಕ್ತವಾಗಿದೆ. ಮತ್ತೊಂದು ಪತ್ರಿಕೆಯ ಪುಟವು ಗಮನ ಸೆಳೆಯುತ್ತದೆ ಮತ್ತು ಓದುಗರನ್ನು ಆಕರ್ಷಿಸುತ್ತದೆ. ಒಂದು ವಿಭಾಗವು ಅಸ್ಸಾಂ ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಲಾಗಿದೆ ಎಂದು ವರದಿ ಮಾಡಿದರೆ, ಇನ್ನೊಂದು ವಿಭಾಗವು ಅಟಲ್ ಜಿ ಬಿಜೆಪಿಗೆ ಅಡಿಪಾಯ ಹಾಕಿದ ಬಗ್ಗೆ ಮಾತನಾಡಿತು. ಇಂದು ಅಸ್ಸಾಂನಲ್ಲಿ ಶಾಶ್ವತ ಶಾಂತಿಯನ್ನು ತರುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸುತ್ತಿರುವುದು ಆಹ್ಲಾದಕರ ಕಾಕತಾಳೀಯವಾದ ಸಂಗತಿಯಾಗಿದೆ.

ನಿನ್ನೆಯಷ್ಟೇ, ನಾನು ಬೋಡೋ ಪ್ರದೇಶದ ಜನರೊಂದಿಗೆ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಮತ್ತು ದಿಲ್ಲಿಯ ಮಾಧ್ಯಮಗಳು ಈ ಮಹತ್ವದ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಐದು ದಶಕಗಳ ನಂತರ, ಯುವ ಬೋಡೋ ಜನರು ಈಗ ಹಿಂಸಾಚಾರ, ಬಾಂಬ್ ಗಳು ಮತ್ತು ಬಂದೂಕುಗಳನ್ನು ಬಿಟ್ಟು ದಿಲ್ಲಿಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಆಚರಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಇದು ಒಂದು ಪ್ರಮುಖ ಐತಿಹಾಸಿಕ ಘಟನೆಯಾಗಿದೆ. ನಾನು ನಿನ್ನೆ ಅಲ್ಲಿದ್ದೆ, ಮತ್ತು ನಾನು ಅದನ್ನು ಆಳವಾಗಿ ಅನುಭವಿಸಿದೆ. ಬೋಡೋ ಶಾಂತಿ ಒಪ್ಪಂದವು ಈ ಜನರ ಜೀವನವನ್ನು ಪರಿವರ್ತಿಸಿದೆ. ಪ್ರದರ್ಶನದ ಸಮಯದಲ್ಲಿ, ನಾನು 26/11 ಮುಂಬೈ ದಾಳಿಯ ವರದಿಗಳನ್ನು ಸಹ ನೋಡಿದೆ. ನೆರೆಯ ರಾಷ್ಟ್ರದ ಭಯೋತ್ಪಾದಕ ಕೃತ್ಯಗಳಿಂದಾಗಿ ನಮ್ಮ ಜನರು ತಮ್ಮ ಸ್ವಂತ ಮನೆಗಳು ಮತ್ತು ನಗರಗಳಲ್ಲಿಯೂ ಅಸುರಕ್ಷಿತ ಎಂದು ಭಾವಿಸಿದ ಸಮಯ ಅದು. ಆದರೆ ಈಗ, ಪರಿಸ್ಥಿತಿ ಬದಲಾಗಿದೆ, ಮತ್ತು ಆ ದೇಶದ ಭಯೋತ್ಪಾದಕರು ಅವರ ಮನೆಯಲ್ಲಿ ಕೂಡಾ ಸುರಕ್ಷಿತವಾಗಿಲ್ಲ.

ಸ್ನೇಹಿತರೇ,

ಹಿಂದೂಸ್ತಾನ್ ಟೈಮ್ಸ್ ತನ್ನ 100 ವರ್ಷಗಳ ಪ್ರಯಾಣದಲ್ಲಿ 25 ವರ್ಷಗಳ ವಸಾಹತುಶಾಹಿ ಆಳ್ವಿಕೆ ಮತ್ತು 75 ವರ್ಷಗಳ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯ ಭಾರತೀಯನ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಈ 100 ವರ್ಷಗಳಲ್ಲಿ ಭಾರತದ ಹಣೆಬರಹವನ್ನು ರೂಪಿಸಿದ ಮತ್ತು ನಿರ್ದೇಶನವನ್ನು ನೀಡಿದ ಶಕ್ತಿ. ಹಲವಾರು ತಜ್ಞರು ಸಾಮಾನ್ಯವಾಗಿ ಸಾಮಾನ್ಯ ಭಾರತೀಯನ ಶಕ್ತಿಯನ್ನು ಕೀಳಂದಾಜು ಮಾಡಿದ್ದಾರೆ. ಬ್ರಿಟಿಷರು ಭಾರತವನ್ನು ತೊರೆದಾಗ, ದೇಶವು ಒಡೆಯುತ್ತದೆ ಮತ್ತು ಭವಿಷ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅದು ಶಾಶ್ವತವಾಗುತ್ತದೆ ಮತ್ತು ಪ್ರಜಾಪ್ರಭುತ್ವವು ಕಳೆದುಹೋಗುತ್ತದೆ ಎಂದು ಕೆಲವರು ನಂಬಿದ್ದರು. ಕೆಲವು ಜನರು ಮತ್ತು ಸಂಸ್ಥೆಗಳು ತುರ್ತು ಪರಿಸ್ಥಿತಿಯನ್ನು ಹೇರಿದವರ ಪರವಾಗಿ ನಿಂತವು. ಆದರೂ, ಭಾರತದ ನಾಗರಿಕರು ಎದ್ದು ನಿಂತರು, ಮತ್ತು ತುರ್ತು ಪರಿಸ್ಥಿತಿಯನ್ನು ಕಿತ್ತೊಗೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಭಾರತವು ಜಾಗತಿಕ ಸಮುದಾಯಕ್ಕೆ ಹೊರೆಯಾಗುತ್ತದೆ ಎಂದು ಜಗತ್ತು ನಿರೀಕ್ಷಿಸಿದ್ದ ಕೊರೋನದ ಸವಾಲಿನ ಸಮಯವನ್ನು ಹಿಂತಿರುಗಿ ಯೋಚಿಸಿ. ಆದರೆ ಭಾರತದ ನಾಗರಿಕರು ಪ್ರತಿಯಾಗಿ ಹೋರಾಡಿದರು ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದರು.

 

ಸ್ನೇಹಿತರೇ,

1990ರ ದಶಕದಲ್ಲಿ ಭಾರತವು 10 ವರ್ಷಗಳಲ್ಲಿ ಐದು ಚುನಾವಣೆಗಳನ್ನು ಎದುರಿಸಿದ್ದು ನಿಮಗೆ ನೆನಪಿರಬಹುದು. ಇಷ್ಟು ದೊಡ್ಡ ದೇಶದಲ್ಲಿ 10 ವರ್ಷಗಳಲ್ಲಿ ಐದು ಚುನಾವಣೆಗಳು! ಅಂತಹ ಅಸ್ಥಿರತೆಯು ಅನೇಕ ತಜ್ಞರು ಮತ್ತು ಪತ್ರಿಕೆ ಅಂಕಣಕಾರರು ಭಾರತವು ಯಾವಾಗಲೂ ಹೀಗೆಯೇ ಇರುತ್ತದೆ ಎಂದು ಊಹಿಸಲು ಕಾರಣವಾಯಿತು. ಆದರೂ, ಭಾರತದ ಜನರು ಆ ತಜ್ಞರು ತಪ್ಪು  ಅಂದಾಜು ಮಾಡಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಇಂದು, ಜಗತ್ತು ಅನಿಶ್ಚಿತತೆ ಮತ್ತು ಅಸ್ಥಿರತೆಯನ್ನು ಎದುರಿಸುತ್ತಿದೆ. ಪ್ರತಿ ಚುನಾವಣೆಯಲ್ಲೂ ಸರ್ಕಾರಗಳು ಬದಲಾಗುತ್ತಿರುವಂತಹ ಅನೇಕ ದೇಶಗಳು ವಿಶ್ವದಲ್ಲಿವೆ, ಆದರೆ, ಭಾರತವು ಸತತ ಮೂರನೇ ಅವಧಿಗೆ ಒಂದೇ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಪ್ರತ್ಯೇಕವಾಗಿ ಎದ್ದು ಕಾಣುತ್ತದೆ.

ಸ್ನೇಹಿತರೇ,

ನಿಮ್ಮಲ್ಲಿ ಅನೇಕರು ಭಾರತದ ರಾಜಕೀಯ ಮತ್ತು ನೀತಿಗಳನ್ನು ಬಹಳ ಸಮಯದಿಂದ ಗಮನಿಸಿದ್ದೀರಿ. "ಉತ್ತಮ ಅರ್ಥಶಾಸ್ತ್ರವು ಕೆಟ್ಟ ರಾಜಕೀಯ" ಎಂಬ ನುಡಿಗಟ್ಟು ಆಗಾಗ್ಗೆ ಕೇಳಿಬರುತ್ತಿತ್ತು. ತಜ್ಞರು ಎಂದು ಕರೆಯಲ್ಪಡುವವರು ಈ ಕಲ್ಪನೆಯನ್ನು ಉತ್ತೇಜಿಸಿದರು, ಹಿಂದಿನ ಸರ್ಕಾರಗಳಿಗೆ ಏನೂ ಮಾಡದೇ ಇರಲು ಈ  ಒಂದು ನೆಪವನ್ನು ನೀಡಿದರು. ಒಂದು ರೀತಿಯಲ್ಲಿ, ಇದು ಅದಕ್ಷತೆ ಮತ್ತು ಕಳಪೆ ಆಡಳಿತವನ್ನು ಮರೆಮಾಚುವ ಮಾರ್ಗವಾಯಿತು. ಈ ಹಿಂದೆ, ಸರ್ಕಾರಗಳು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಮಾತ್ರ ಓಡುತ್ತಿದ್ದವು. ವೋಟ್ ಬ್ಯಾಂಕ್ ಗಳನ್ನು ರಚಿಸಲಾಗುತ್ತಿತ್ತು ಮತ್ತು ಆ ಮತ ಬ್ಯಾಂಕ್ ಗಳನ್ನು ಸಂತೋಷವಾಗಿಡಲು ನೀತಿಗಳನ್ನು ರೂಪಿಸಲಾಗುತ್ತಿತ್ತು. ಈ ರೀತಿಯ ರಾಜಕೀಯದಿಂದ ಉಂಟಾದ ದೊಡ್ಡ ಹಾನಿಯೆಂದರೆ ಅದು ದೇಶದಲ್ಲಿ ಅಸಮಾನತೆ ಮತ್ತು ಅಸಮತೋಲನವನ್ನು ಬಹಳವಾಗಿ ಹೆಚ್ಚಿಸಿತು. ಅಭಿವೃದ್ಧಿಯನ್ನು ಘೋಷಿಸಲಾಯಿತು ಆದರೆ ಅದು ಬಹಳ ವಿರಳವಾಗಿ ಕಾಣತೊಡಗಿತು. ಈ ಮಾದರಿಯು ಸರ್ಕಾರದ ಮೇಲಿನ ನಂಬಿಕೆಯನ್ನು ನಾಶಪಡಿಸಿತು. ವೋಟ್ ಬ್ಯಾಂಕ್ ರಾಜಕೀಯದಿಂದ ಸಾವಿರಾರು ಮೈಲಿ ದೂರದಲ್ಲಿರುವ ಸ್ಪಷ್ಟ ಉದ್ದೇಶದೊಂದಿಗೆ ನಾವು ಈ ನಂಬಿಕೆಯನ್ನು ಪುನಃಸ್ಥಾಪಿಸಿದ್ದೇವೆ. ನಮ್ಮ ಸರ್ಕಾರದ ಉದ್ದೇಶ ಭವ್ಯ ಮತ್ತು ಸಮಗ್ರವಾಗಿದೆ: ನಾವು 'ಜನರ ಪ್ರಗತಿ, ಜನರಿಂದ ಪ್ರಗತಿ ಮತ್ತು ಜನರಿಗಾಗಿ ಪ್ರಗತಿ' ಮಂತ್ರವನ್ನು ಅನುಸರಿಸುತ್ತಿದ್ದೇವೆ. ನಮ್ಮ ಗುರಿ ಹೊಸ ಭಾರತ, ವಿಕ್ಷಿತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸುವುದು. ಮತ್ತು ನಾವು ಈ ಬೃಹತ್ ಗುರಿಯೊಂದಿಗೆ ಹೊರಟಾಗ, ಭಾರತದ ಜನರು ತಮ್ಮ ನಂಬಿಕೆಯ ಬಂಡವಾಳವನ್ನು ನಮಗೆ ವಹಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ತಪ್ಪು ಮಾಹಿತಿ ಮತ್ತು ಸತ್ಯಾಂಶವಿರದ ಮಾಹಿತಿ ಎಷ್ಟೊಂದು ವ್ಯಾಪಕವಾಗಿದೆ ಎಂಬುದನ್ನು  ನೀವು ಊಹಿಸಬಹುದು. ಹಲವಾರು ಪತ್ರಿಕೆಗಳು ಮತ್ತು ಚಾನೆಲ್ ಗಳಿವೆ, ಆದರೂ ಭಾರತದ ನಾಗರಿಕರು ನಮ್ಮನ್ನು ಮತ್ತು ನಮ್ಮ ಸರ್ಕಾರವನ್ನು ನಂಬುತ್ತಾರೆ.

ಸ್ನೇಹಿತರೇ,

ಸಾರ್ವಜನಿಕ ನಂಬಿಕೆ ಮತ್ತು ಆತ್ಮವಿಶ್ವಾಸ ಬೆಳೆದಾಗ, ಅದು ರಾಷ್ಟ್ರದ ಅಭಿವೃದ್ಧಿಯ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತದೆ. ಪ್ರಾಚೀನ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿಂದ ಇಂದಿನ ಅಭಿವೃದ್ಧಿ ಹೊಂದಿದ ದೇಶಗಳವರೆಗೆ, ಅಪಾಯವನ್ನು ಎದುರಿಸುವ ಸಂಸ್ಕೃತಿಯು ಒಂದು ಸಾಮಾನ್ಯ ಲಕ್ಷಣವಾಗಿದೆ ಎಂದು ನಿಮಗೆ ತಿಳಿದಿದೆ. ಒಂದು ಕಾಲದಲ್ಲಿ ನಮ್ಮ ದೇಶವು ವಾಣಿಜ್ಯ ಮತ್ತು ಸಂಸ್ಕೃತಿಯ ಹಾಟ್ ಸ್ಪಾಟ್ ಆಗಿತ್ತು. ಒಂದೆಡೆ, ನಮ್ಮ ವ್ಯಾಪಾರಿಗಳು ಮತ್ತು ಮಾರಾಟಗಾರರು ಆಗ್ನೇಯ ಏಷ್ಯಾದಲ್ಲಿ ಸಕ್ರಿಯರಾಗಿದ್ದರು, ಮತ್ತೊಂದೆಡೆ, ಅವರು ಅರಬ್ ಜಗತ್ತು, ಆಫ್ರಿಕಾ ಮತ್ತು ರೋಮನ್ ಸಾಮ್ರಾಜ್ಯದೊಂದಿಗೆ ಆಳವಾದ ಸಂಬಂಧಗಳನ್ನು ಹೊಂದಿದ್ದರು. ಅವರು ಅಪಾಯಗಳನ್ನು ತೆಗೆದುಕೊಂಡು ಎದುರಿಸಿದ್ದರಿಂದ ಇದು ಸಾಧ್ಯವಾಯಿತು, ಭಾರತದ ಉತ್ಪನ್ನಗಳು ಮತ್ತು ಸೇವೆಗಳು ದೂರದ ತೀರಗಳನ್ನು ತಲುಪಲು ಅನುವು ಮಾಡಿಕೊಟ್ಟಿತು. ಸ್ವಾತಂತ್ರ್ಯದ ನಂತರ, ನಾವು ಈ ಅಪಾಯವನ್ನು ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿತ್ತು, ಆದರೆ ಹಿಂದಿನ ಸರ್ಕಾರಗಳು ನಾಗರಿಕರಲ್ಲಿ ಆ ವಿಶ್ವಾಸವನ್ನು ಮೂಡಿಸಲಿಲ್ಲ. ಇದರ ಪರಿಣಾಮವಾಗಿ, ತಲೆಮಾರುಗಳು ಒಂದು ಹೆಜ್ಜೆ ಮುಂದೆ ಮತ್ತು ಎರಡು ಹೆಜ್ಜೆ ಹಿಂದೆ ಇಡುವುದರಲ್ಲಿಯೇ ಸಮಯವನ್ನು ಕಳೆದವು. ಕಳೆದ ದಶಕದಲ್ಲಿ, ದೇಶದಲ್ಲಿನ ಬದಲಾವಣೆಗಳು ಭಾರತೀಯರಲ್ಲಿ ಈ ಅಪಾಯವನ್ನು ತೆಗೆದುಕೊಳ್ಳುವ ಮನೋಭಾವವನ್ನು ಪುನರುಜ್ಜೀವನಗೊಳಿಸಿವೆ. ಇಂದು, ನಮ್ಮ ಯುವಜನರು ವಿವಿಧ ಕ್ಷೇತ್ರಗಳಲ್ಲಿ ಅಪಾಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಕಂಪನಿಯನ್ನು ಪ್ರಾರಂಭಿಸುವುದು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು, ಮತ್ತು ಹತ್ತು ವರ್ಷಗಳ ಹಿಂದೆಯೂ ಸ್ಟಾರ್ಟ್ ಅಪ್ (ನವೋದ್ಯಮ) ಕಥೆಗಳು ಅಪರೂಪವಾಗಿದ್ದವು. ಈಗ, ದೇಶದಲ್ಲಿ 125,000 ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್ ಅಪ್ ಗಳಿವೆ. ಕ್ರೀಡೆ ಮತ್ತು ಕ್ರೀಡೆಯನ್ನು ವೃತ್ತಿಯಾಗಿ ಅಳವಡಿಸಿಕೊಳ್ಳುವುದು ಅಪಾಯಕಾರಿ ವೃತ್ತಿಜೀವನದ ಆಯ್ಕೆಗಳಾಗಿ ನೋಡುತ್ತಿದ್ದ ಸಮಯವಿತ್ತು, ಆದರೆ ಇಂದು ನಮ್ಮ ಸಣ್ಣ ಪಟ್ಟಣಗಳ ಯುವಜನರು ಸಹ ಈ ಅಪಾಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ಸ್ವಸಹಾಯ ಗುಂಪುಗಳಲ್ಲಿ ತೊಡಗಿರುವ ಮಹಿಳೆಯರು ಮತ್ತೊಂದು ಉದಾಹರಣೆ. ಇಂದು, ಸುಮಾರು ಒಂದು ಕೋಟಿ ಮಹಿಳೆಯರು 'ಲಖ್ಪತಿ ದೀದಿ'ಗಳಾಗಿದ್ದಾರೆ, ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಮತ್ತು ಹಳ್ಳಿಗಳಲ್ಲಿ ಉದ್ಯಮಶೀಲತೆಯನ್ನು ಮುನ್ನಡೆಸುತ್ತಿದ್ದಾರೆ. ನಾನು ಇತ್ತೀಚೆಗೆ ಗ್ರಾಮೀಣ ಮಹಿಳೆಯೊಂದಿಗೆ ಮಾತನಾಡಿದ್ದೇನೆ, ಅವರು ಟ್ರ್ಯಾಕ್ಟರನ್ನು ಹೇಗೆ ಖರೀದಿಸಿದರು ಮತ್ತು ಅವರ ಕುಟುಂಬದ ಆದಾಯವನ್ನು ಹೇಗೆ ಹೆಚ್ಚಿಸಿದರು ಎಂಬುದನ್ನು ಹಂಚಿಕೊಂಡರು. ಒಬ್ಬ ಮಹಿಳೆ ಅಪಾಯವನ್ನು ತೆಗೆದುಕೊಂಡು ತನ್ನ ಕುಟುಂಬದ ಜೀವನವನ್ನು ಪರಿವರ್ತಿಸಿದಳು. ಬಡವರು ಮತ್ತು ಮಧ್ಯಮ ವರ್ಗದವರು ಅಪಾಯಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನಿಜವಾದ ಬದಲಾವಣೆ ಗೋಚರಿಸುತ್ತದೆ. ಇದನ್ನೇ ನಾವು ಇಂದು ಭಾರತದಲ್ಲಿ ನೋಡುತ್ತಿದ್ದೇವೆ.

 

ಸ್ನೇಹಿತರೇ,

ಭಾರತದ ಸಮಾಜವು ಈಗ ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ, ಅದನ್ನು ನಾವು ನಮ್ಮ ನೀತಿಗಳಿಗೆ ಅಡಿಪಾಯವನ್ನಾಗಿ ಮಾಡಿದ್ದೇವೆ. ನಮ್ಮ ಸರ್ಕಾರವು ನಾಗರಿಕರಿಗೆ ಹೂಡಿಕೆಯ ವಿಶಿಷ್ಟ ಸಂಯೋಜನೆಯನ್ನು ಒದಗಿಸಿದೆ, ಅದು ಘನತೆಯನ್ನು ಖಚಿತಪಡಿಸುವ ಉದ್ಯೋಗ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ನಾವು ಹೂಡಿಕೆಯನ್ನು ಸೃಷ್ಟಿಸುವ, ಉದ್ಯೋಗವನ್ನು ಸೃಷ್ಟಿಸುವ ಮತ್ತು ಭಾರತೀಯ ನಾಗರಿಕರ ಘನತೆಯನ್ನು ಹೆಚ್ಚಿಸುವ ಅಭಿವೃದ್ಧಿ ಮಾದರಿಯನ್ನು ಉತ್ತೇಜಿಸುತ್ತಿದ್ದೇವೆ. ಉದಾಹರಣೆಗೆ, ಇದು ದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ. ನಾನು ಸಣ್ಣದಾಗಿ ತೋರುವ ಆದರೆ ಗಮನಾರ್ಹ ಮೌಲ್ಯವನ್ನು ಹೊಂದಿರುವ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಅದನ್ನು ಒಂದು ಉದಾಹರಣೆಯ ಮೂಲಕ ವಿವರಿಸುತ್ತೇನೆ. ಶೌಚಾಲಯಗಳನ್ನು ನಿರ್ಮಿಸುವ ನಮ್ಮ ಧ್ಯೇಯವು ಕೇವಲ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲ, ದೊಡ್ಡ ಜನಸಂಖ್ಯೆಯ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವುದು. ಈ ಯೋಜನೆಯನ್ನು ಪ್ರಸ್ತಾಪಿಸಿದಾಗ, ಜನರು ಹೆಚ್ಚಾಗಿ ನಿರ್ಮಿಸಲಾದ ಕೋಟಿಗಟ್ಟಲೆ ಶೌಚಾಲಯಗಳ ಬಗ್ಗೆ ಮಾತನಾಡುತ್ತಾರೆ. ಸಂಖ್ಯೆಗಳು ಉತ್ತಮವಾಗಿವೆ, ಆದರೆ ನಿರ್ಮಿಸಲಾದ ಪ್ರತಿಯೊಂದು ಶೌಚಾಲಯವು ಇಟ್ಟಿಗೆಗಳು, ಕಬ್ಬಿಣ ಮತ್ತು ಸಿಮೆಂಟ್ ನಂತಹ ವಸ್ತುಗಳನ್ನು ಒಳಗೊಂಡಿತ್ತು, ಇದು ಉದ್ಯೋಗಗಳನ್ನು ಸೃಷ್ಟಿಸಿತು. ಮತ್ತು ಈ ಎಲ್ಲಾ ವಸ್ತುಗಳು ಯಾವುದೋ ಅಂಗಡಿಯಿಂದ ಬಂದಿವೆ, ಕೆಲವು ಉದ್ಯಮದಿಂದ ಉತ್ಪಾದಿಸಲ್ಪಟ್ಟಿವೆ. ಯಾರೋ ಸಾಗಣೆದಾರರು ಅದನ್ನು ಬೇರೊಬ್ಬರ ಮನೆಗೆ ತಲುಪಿಸಿದ್ದಾರೆ. ಇದರರ್ಥ ಆರ್ಥಿಕತೆಗೆ ಉತ್ತೇಜನ ದೊರೆತಿದೆ, ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಸೃಷ್ಟಿಯಾಗಿವೆ. ಪರಿಣಾಮವಾಗಿ, ಜೀವನವು ಸುಲಭವಾಗಿದೆ, ಮತ್ತು ಜನರಲ್ಲಿ ಗೌರವ ಮತ್ತು ಸ್ವಾಭಿಮಾನ ಹೆಚ್ಚಾಗಿದೆ. ಹೆಚ್ಚುವರಿಯಾಗಿ, ಇದು ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿತು. ಇದು ಹೂಡಿಕೆಯು ಉದ್ಯೋಗ, ಅಭಿವೃದ್ಧಿ, ಜೊತೆಗೆ ಘನತೆಯನ್ನು ತರುತ್ತದೆ ಎಂಬ ಮಂತ್ರದ ಯಶಸ್ಸನ್ನು ತೋರಿಸುತ್ತದೆ.

ಸ್ನೇಹಿತರೇ,

ಮತ್ತೊಂದು ಉದಾಹರಣೆ- ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳದ್ದು. ಹಿಂದೆ, ಗ್ಯಾಸ್ ಸಿಲಿಂಡರ್ ಹೊಂದುವುದನ್ನು ಆ ಮನೆಯ ಸ್ಥಾನಮಾನದ ಸಂಕೇತವಾಗಿ ನೋಡಲಾಗುತ್ತಿತ್ತು. ನೆರೆಹೊರೆಯವರು ಅಂತಹ ವ್ಯಕ್ತಿಯನ್ನು ಪ್ರಭಾವಶಾಲಿ, ಉನ್ನತ ಸ್ಥಾನಮಾನದ ವ್ಯಕ್ತಿ ಎಂದು ನೋಡುತ್ತಿದ್ದರು, ಏಕೆಂದರೆ ಅವರು ಗ್ಯಾಸ್ ಒಲೆಯನ್ನು ಹೊಂದಿದ್ದರು ಎಂಬ ಕಾರಣಕ್ಕಾಗಿ. ಗ್ಯಾಸ್ ಸಂಪರ್ಕವಿಲ್ಲದವರು ತಮ್ಮ ಊಟವನ್ನು ಗ್ಯಾಸ್ ಒಲೆಯ ಮೇಲೆ ತಯಾರಿಸುವ ದಿನ ಎಂದು ಬರುವುದೋ ಎಂದು ಕಾಯುತ್ತಿದ್ದರು.  ಪರಿಸ್ಥಿತಿ ಹೇಗಿತ್ತೆಂದರೆ ಜನರು ಅನಿಲ ಸಂಪರ್ಕ ಪಡೆಯಲು ಸಂಸತ್ ಸದಸ್ಯರಿಂದ ಶಿಫಾರಸು ಪತ್ರಗಳನ್ನು ಪಡೆಯಬೇಕಾಗಿತ್ತು. ಮತ್ತು ನಾನು ಮಾತನಾಡುತ್ತಿರುವುದು 21 ನೇ ಶತಮಾನದ ಬಗ್ಗೆ 18 ನೇ ಶತಮಾನದ ಬಗ್ಗೆ ಅಲ್ಲ. 2014 ರ ಮೊದಲು, ವಾರ್ಷಿಕವಾಗಿ ಆರು ಸಿಲಿಂಡರ್ ಗಳನ್ನು ನೀಡಬೇಕೇ ಅಥವಾ ಒಂಬತ್ತು ಸಿಲಿಂಡರ್ ಗಳನ್ನು ನೀಡಬೇಕೇ ಎಂದು ಸರಕಾರಗಳು ಚರ್ಚಿಸುತ್ತಿದ್ದವು. ನಾವು ಸಿಲಿಂಡರ್ ಗಳ ಸಂಖ್ಯೆಯನ್ನು ಚರ್ಚಿಸುವ ಬದಲು ಪ್ರತಿ ಮನೆಯೂ ಅನಿಲ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿದ್ದೇವೆ. ಸ್ವಾತಂತ್ರ್ಯದ ನಂತರದ 70 ವರ್ಷಗಳಲ್ಲಿ ನೀಡಿದ್ದಕ್ಕಿಂತ ಹೆಚ್ಚಿನ ಅನಿಲ ಸಂಪರ್ಕಗಳನ್ನು ನಾವು ಕಳೆದ 10 ವರ್ಷಗಳಲ್ಲಿ ನೀಡಿದ್ದೇವೆ. 2014ರಲ್ಲಿ ದೇಶದಲ್ಲಿ 14 ಕೋಟಿ ಅನಿಲ ಸಂಪರ್ಕಗಳಿದ್ದವು. ಇಂದು, 30 ಕೋಟಿಗೂ ಹೆಚ್ಚು ಅನಿಲ ಸಂಪರ್ಕಗಳಿವೆ. ಗ್ರಾಹಕರಲ್ಲಿ ಈ ಭಾರಿ ಹೆಚ್ಚಳದ ಹೊರತಾಗಿಯೂ, ನೀವು ಎಂದಾದರೂ ಅನಿಲ ಕೊರತೆಯ ಬಗ್ಗೆ ಕೇಳಿದ್ದೀರಾ? ಇಲ್ಲ, ನೀವು ಕೇಳಿಲ್ಲ. ಇದು ಎಂದಾದರೂ ಹಿಂದೂಸ್ತಾನ್ ಟೈಮ್ಸ್ ನಲ್ಲಿ ವರದಿಯಾಗಿದೆಯೇ? ಇಲ್ಲ, ಅದು ಸಂಭವಿಸಿಲ್ಲ, ಏಕೆಂದರೆ ಅಂತಹದು ಸಂಭವಿಸಿಲ್ಲ. ಏಕೆಂದರೆ ನಾವು ಪೂರಕ ಮೂಲಸೌಕರ್ಯವನ್ನು ನಿರ್ಮಿಸಲು ಹೂಡಿಕೆ ಮಾಡಿದ್ದೇವೆ. ನಾವು ದೇಶಾದ್ಯಂತ ಬಾಟ್ಲಿಂಗ್ ಘಟಕಗಳು ಮತ್ತು ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಬಾಟ್ಲಿಂಗ್ ಘಟಕಗಳಿಂದ ಹಿಡಿದು ಸಿಲಿಂಡರ್‍ ಗಳ ವಿತರಣೆಯವರೆಗೆ ಎಲ್ಲೆಡೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಯಿತು.

ಸ್ನೇಹಿತರೇ,

ಅಂತಹ ಅಸಂಖ್ಯಾತ ಉದಾಹರಣೆಗಳನ್ನು ನಾನು ನಿಮಗೆ ನೀಡಬಲ್ಲೆ. ಉದಾಹರಣೆಗೆ ಮೊಬೈಲ್ ಫೋನ್ ಗಳನ್ನು ಅಥವಾ ರುಪೇ ಕಾರ್ಡ್ ತೆಗೆದುಕೊಳ್ಳಿ. ಈ ಹಿಂದೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುವುದು ಕೆಲವು ಜನರಿಗೆ ಹೆಮ್ಮೆಯ ಭಾವನೆಯನ್ನು ನೀಡಿತು, ಅವರು ಅದನ್ನು ಸ್ಥಾನಮಾನದ ಸಂಕೇತವಾಗಿ ತೋರಿಸುತ್ತಿದ್ದರು. ಬಡವರು, ಈ ಕಾರ್ಡ್ ಗಳನ್ನು ನೋಡಿ, ಒಂದು ದಿನ ಒಂದನ್ನು ಹೊಂದಲು ಬಯಸುತ್ತಾರೆ. ಆದರೆ ರುಪೇ ಕಾರ್ಡ್ ಬಂದ ನಂತರ, ನಮ್ಮ ದೇಶದ ಬಡವರು ಸಹ ಈಗ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಈ ಹೊಸ ಪ್ರವೇಶ ಲಭ್ಯತೆಯು ಅವರಿಗೆ ಸಮಾನ ಭಾವನೆಯನ್ನು ನೀಡುತ್ತದೆ ಮತ್ತು ಅವರ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಇಂದು, ಅತ್ಯಂತ ಬಡ ವ್ಯಕ್ತಿ ಕೂಡ ಆನ್ ಲೈನ್ ವಹಿವಾಟುಗಳನ್ನು ಮಾಡುತ್ತಾರೆ. ಮಾಲ್ ನಲ್ಲಿ ಐಷಾರಾಮಿ ಕಾರಿನಿಂದ ಇಳಿಯುವ ವ್ಯಕ್ತಿಯೂ ಬೀದಿ ಬದಿ ವ್ಯಾಪಾರಿ ಬಳಸುವ ಅದೇ ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಸುತ್ತಾರೆ. ಹೂಡಿಕೆಯು ಉದ್ಯೋಗಕ್ಕೆ ಹೇಗೆ ಕಾರಣವಾಗುತ್ತದೆ ಮತ್ತು ಅಭಿವೃದ್ಧಿ ಹೇಗೆ ಘನತೆಯನ್ನು ಬೆಳೆಸುತ್ತದೆ ಎಂಬುದಕ್ಕೆ ಇದು ಅದ್ಭುತ ಉದಾಹರಣೆಯಾಗಿದೆ.

 

ಸ್ನೇಹಿತರೇ,

ಭಾರತದ ಪ್ರಸ್ತುತ ಬೆಳವಣಿಗೆಯ ಪಥವನ್ನು ಅರ್ಥಮಾಡಿಕೊಳ್ಳಲು, ನಮ್ಮ ಸರ್ಕಾರದ ವಿಧಾನವನ್ನು ನೋಡುವುದು ಅತ್ಯಗತ್ಯ. ಒಂದು ವಿಧಾನವೆಂದರೆ 'ಜನರಿಗಾಗಿ ದೊಡ್ಡದಾಗಿ ಖರ್ಚು ಮಾಡುವುದು', ಆದರೆ ನಮಗೆ ಮತ್ತೊಂದು ವಿಧಾನವೂ ಇದೆ: 'ಜನರಿಗಾಗಿ ದೊಡ್ಡದನ್ನು ಉಳಿಸುವುದು'. ನಾವು ಇದನ್ನು ಹೇಗೆ ಮಾಡುತ್ತಿದ್ದೇವೆ ಎಂದು ತಿಳಿಯಲು ನಿಮಗೆ ಆಸಕ್ತಿ ಇರಬಹುದು. 2014 ರಲ್ಲಿ, ನಮ್ಮ ಕೇಂದ್ರ ಬಜೆಟ್ ಸುಮಾರು 16 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇಂದು, ಈ ಬಜೆಟ್ 48 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. 2013-14ರಲ್ಲಿ ನಾವು ಬಂಡವಾಳ ವೆಚ್ಚಕ್ಕಾಗಿ ಅಂದಾಜು 2.25 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಇಂದು, ನಮ್ಮ ಬಂಡವಾಳ ವೆಚ್ಚವು 11 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ಈ 11 ಲಕ್ಷ ಕೋಟಿ ರೂಪಾಯಿಗಳನ್ನು ಹೊಸ ಆಸ್ಪತ್ರೆಗಳು, ಶಾಲೆಗಳು, ರಸ್ತೆಗಳು, ರೈಲ್ವೆ, ಸಂಶೋಧನಾ ಸೌಲಭ್ಯಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಲಾಗುತ್ತಿದೆ. ನಾವು ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವಾಗ, ನಾವು ಸಾರ್ವಜನಿಕರ ಹಣವನ್ನು ಸಹ ಉಳಿಸುತ್ತಿದ್ದೇವೆ. ನಿಮಗೆ ಆಸಕ್ತಿಯಿರುವ ಕೆಲವು ಅಂಕಿಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.

ಉದಾಹರಣೆಗೆ, ನೇರ ಲಾಭ/ನಗದು ವರ್ಗಾವಣೆ (ಡಿಬಿಟಿ)ಯು ಸೋರಿಕೆಯನ್ನು ತಡೆಗಟ್ಟುವ ಮೂಲಕ ದೇಶಕ್ಕೆ 3.5 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯು ಉಚಿತ ವೈದ್ಯಕೀಯ ಚಿಕಿತ್ಸೆಯ ಮೂಲಕ ಬಡವರಿಗೆ 1.1 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದೆ. 80% ರಿಯಾಯಿತಿಯಲ್ಲಿ ಔಷಧಿಗಳನ್ನು ನೀಡುವ ಜನೌಷಧಿ ಕೇಂದ್ರಗಳ ಮೂಲಕ ನಾಗರಿಕರು 30,000 ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ. ಸ್ಟೆಂಟ್ ಗಳು ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಯಲ್ಲಿ  ಅಳವಡಿಸುವ ಉಪಕರಣಗಳ ಮೇಲಿನ ಬೆಲೆ ನಿಯಂತ್ರಣವು ಜನರಿಗೆ ಸಾವಿರಾರು ಕೋಟಿಗಳನ್ನು ಉಳಿಸಿದೆ. ಎಲ್ಇಡಿ ಬಲ್ಬ್ ಗಳನ್ನು ಉತ್ತೇಜಿಸುವ ಮೂಲಕ ಉಜಾಲಾ ಯೋಜನೆಯು ವಿದ್ಯುತ್ ಬಿಲ್ ಗಳನ್ನು 20,000 ಕೋಟಿ ರೂ.ಗಳಷ್ಟು ಕಡಿಮೆ ಮಾಡಿದೆ. ಸ್ವಚ್ಛ ಭಾರತ ಅಭಿಯಾನವು ಅನಾರೋಗ್ಯವನ್ನು ಕಡಿಮೆ ಮಾಡಿದೆ, ಪ್ರತಿ ಗ್ರಾಮೀಣ ಕುಟುಂಬಕ್ಕೆ ಸುಮಾರು 50,000 ರೂಪಾಯಿಗಳನ್ನು ಉಳಿಸಿದೆ. ಸ್ವಂತ ಶೌಚಾಲಯಗಳನ್ನು ಹೊಂದಿರುವ ಕುಟುಂಬಗಳು ತಲಾ 70,000 ರೂಪಾಯಿಗಳನ್ನು ಉಳಿಸುತ್ತವೆ ಎಂದು ಯುನಿಸೆಫ್ ವರದಿ ಮಾಡಿದೆ.

ಸ್ನೇಹಿತರೇ,

ಮೊದಲ ಬಾರಿಗೆ ನಳ್ಳಿ ನೀರನ್ನು ಪಡೆದ 12 ಕೋಟಿ ಕುಟುಂಬಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಕೈಗೊಂಡ ಅಧ್ಯಯನವು ಈ ಕುಟುಂಬಗಳು ಶುದ್ಧ ನೀರಿನ ಲಭ್ಯತೆಯಿಂದಾಗಿ ವಾರ್ಷಿಕವಾಗಿ 80,000 ರೂಪಾಯಿಗಳನ್ನು ಉಳಿಸುತ್ತವೆ ಎಂದು ತೋರಿಸುತ್ತದೆ.

 

ಸ್ನೇಹಿತರೇ,

ಹತ್ತು ವರ್ಷಗಳ ಹಿಂದೆ, ಭಾರತದಲ್ಲಿ ಇಂತಹ ಪರಿವರ್ತನೆಯನ್ನು ಯಾರೂ ಊಹಿಸಿರಲಿಲ್ಲ. ನಮ್ಮ ಯಶಸ್ಸು ದೊಡ್ಡ ಕನಸುಗಳನ್ನು ಕಾಣಲು ಮತ್ತು ಆ ಕನಸುಗಳನ್ನು ಸಾಧಿಸಲು ಹೆಚ್ಚು ಶ್ರಮಿಸಲು ನಮಗೆ ಸ್ಫೂರ್ತಿ ನೀಡಿದೆ. ಇಂದು, ಈ ಶತಮಾನವು ಭಾರತದ ಶತಮಾನವಾಗಲಿದೆ ಎಂಬ ಭರವಸೆ ಮತ್ತು ನಂಬಿಕೆ ಇದೆ. ಆದರೆ ಇದನ್ನು ನಿಜವಾಗಿಸಲು, ನಾವು ಅನೇಕ ಕ್ಷೇತ್ರಗಳಲ್ಲಿ ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ. ನಾವು ಆ ದಿಕ್ಕಿನಲ್ಲಿ ವೇಗವಾಗಿ ಮುಂದುವರಿಯುತ್ತಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಅತ್ಯುತ್ತಮವಾದದ್ದನ್ನು ಮಾಡಲು ನಾವು ಮುನ್ನಡೆಯಬೇಕು. ಉತ್ತಮವಾದುದಕ್ಕಿಂತ ಕಡಿಮೆ ಯಾವುದೂ ನಮಗೆ ಸ್ವೀಕಾರಾರ್ಹವಲ್ಲ ಎಂಬ ಮನಸ್ಥಿತಿಯನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಭಾರತದ ಮಾನದಂಡಗಳನ್ನು ವಿಶ್ವ ದರ್ಜೆಯವು ಎಂದು ಗುರುತಿಸಲು/ಪರಿಗಣಿಸಲು ನಾವು ಪ್ರಕ್ರಿಯೆಗಳನ್ನು ರೂಪಿಸಬೇಕಾಗಿದೆ. ನಾವು ಜಾಗತಿಕವಾಗಿ ಉತ್ಕೃಷ್ಟತೆಗೆ ಹೆಸರುವಾಸಿಯಾದ ಸರಕುಗಳನ್ನು  ಉತ್ಪಾದಿಸಬೇಕು. ನಮ್ಮ ನಿರ್ಮಾಣ ಯೋಜನೆಗಳನ್ನು ವಿಶ್ವದರ್ಜೆಯ ಮೂಲಸೌಕರ್ಯ ಎಂದು ಪರಿಗಣಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ, ನಮ್ಮ ಕೆಲಸವನ್ನು ವಿಶ್ವಾದ್ಯಂತ ಗುರುತಿಸಬೇಕು. ಮನರಂಜನಾ ಉದ್ಯಮದಲ್ಲಿ, ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕೃತಿಗಳನ್ನು ರಚಿಸಬೇಕು. ಈ ವಿಧಾನವನ್ನು ನಿರ್ವಹಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಹಿಂದೂಸ್ತಾನ್ ಟೈಮ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ 100 ವರ್ಷಗಳ ಅನುಭವವು 'ವಿಕ್ಷಿತ್ ಭಾರತ'ದ ಪ್ರಯಾಣದಲ್ಲಿ ಅಮೂಲ್ಯವಾಗಿದೆ.

ಸ್ನೇಹಿತರೇ,

ನಾವು ಅಭಿವೃದ್ಧಿಯ ಈ ವೇಗವನ್ನು ಕಾಯ್ದುಕೊಳ್ಳುತ್ತೇವೆ ಮತ್ತು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂಬ ವಿಶ್ವಾಸ ನನಗಿದೆ. ಭಾರತವು ತನ್ನ ಸ್ವಾತಂತ್ರ್ಯದ 100 ನೇ ವಾರ್ಷಿಕೋತ್ಸವವನ್ನು ಆಚರಿಸುವಾಗ, ಹಿಂದೂಸ್ತಾನ್ ಟೈಮ್ಸ್ ಸಹ ಸುಮಾರು 125 ವರ್ಷಗಳ ಸನಿಹದಲ್ಲಿರುತ್ತದೆ. ಮತ್ತು 'ವಿಕ್ಷಿತ್ ಭಾರತ್' ನ ಪ್ರಮುಖ ಪತ್ರಿಕೆಯಾಗಿ ಗುರುತಿಸಲ್ಪಡುತ್ತದೆ. ಈ ಪ್ರಯಾಣಕ್ಕೆ ನೀವು ಸಾಕ್ಷಿಯಾಗುತ್ತೀರಿ. ಆದಾಗ್ಯೂ, ನಾನು ಇಲ್ಲಿರುವುದರಿಂದ, ನಾನು ನಿಮಗೆ ಒಂದು ಕೆಲಸವನ್ನು ವಹಿಸಬೇಕು, (ಶೋಭನಾ) ಭಾರ್ತಿಯಾ ಜೀ ಮತ್ತು ಇದು ನಿಮ್ಮ ಜವಾಬ್ದಾರಿಯಾಗಿದೆ.

ನಮ್ಮ ಶ್ರೇಷ್ಠ ಸಾಹಿತಿಗಳ ಕೃತಿಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ. ವಿವಿಧ ವಿಷಯಗಳ ಸಂಶೋಧನೆಗಾಗಿ ಪಿಎಚ್.ಡಿ.ಗಳನ್ನು ನೀಡಲಾಗಿದೆ. ಹಿಂದೂಸ್ತಾನ್ ಟೈಮ್ಸ್ ನ 100 ವರ್ಷಗಳ ಪ್ರಯಾಣದ ಬಗ್ಗೆ ಪಿಎಚ್ ಡಿ ನಡೆಸಿದರೆ ಏನಾಗಬಹುದು? ವಸಾಹತುಶಾಹಿ ಮತ್ತು ಸ್ವಾತಂತ್ರ್ಯೋತ್ತರ ಯುಗಗಳು, ಕೊರತೆಯ ದಿನಗಳು ಮತ್ತು ಪ್ರಭಾವದ ದಿನಗಳಿಗೆ ಸಾಕ್ಷಿಯಾದ ಭಾರತೀಯ ಪತ್ರಿಕೋದ್ಯಮದ ಪ್ರಯಾಣವನ್ನು ಎತ್ತಿ ತೋರಿಸುವ ಸಂಶೋಧನೆಯನ್ನು ಹೊರತರುವ ಮೂಲಕ ಇದು ಒಂದು ದೊಡ್ಡ ಸೇವೆಯಾಗಲಿದೆ. ಇದು ಮಹತ್ವದ ಕೊಡುಗೆ ಎಂದು ನಾನು ನಂಬುತ್ತೇನೆ. ಬಿರ್ಲಾ ಕುಟುಂಬವು ಯಾವಾಗಲೂ ತನ್ನ ದತ್ತಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಜಾಗತಿಕ ಸನ್ನಿವೇಶದಲ್ಲಿ ಭಾರತದ ನಿಜವಾದ ಗುರುತನ್ನು ಹೊರತರುವ, ಸಂಶೋಧನೆಗೆ ಮೀಸಲಾಗಿರುವ ಹಿಂದೂಸ್ತಾನ್ ಟೈಮ್ಸ್ ಪೀಠವನ್ನು ಭಾರತದೊಳಗಿನ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಏಕೆ ಸ್ಥಾಪಿಸಬಾರದು? ನಿಮ್ಮ ಪತ್ರಿಕೆ ದೊಡ್ಡ ಸಾಧನೆಗಳನ್ನು ಮಾಡಿದೆ, ಆದರೆ ಕಳೆದ 100 ವರ್ಷಗಳಲ್ಲಿ ನೀವು ಗಳಿಸಿದ ಗೌರವ ಮತ್ತು ವಿಶ್ವಾಸವು ಹಿಂದೂಸ್ತಾನ್ ಟೈಮ್ಸ್ ನ ವ್ಯಾಪ್ತಿಯನ್ನು ಮೀರಿ ತಲೆಮಾರುಗಳಿಗೆ ಸೇವೆ ಸಲ್ಲಿಸಬಹುದು. ಈ ಶತಮಾನೋತ್ಸವ ವಿಚಾರ ಸಂಕಿರಣ ಇಲ್ಲಿಗೆ ಕೊನೆಗೊಳ್ಳುವುದಕ್ಕೆ ಬದಲು ಇನ್ನಷ್ಟು ಉಪಕ್ರಮಗಳಿಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ಎರಡನೆಯದಾಗಿ, ನಾನು ನೋಡಿದ ಪ್ರದರ್ಶನವು ನಿಜವಾಗಿಯೂ ಪ್ರಭಾವಶಾಲಿಯಾಗಿತ್ತು. ಸಮಗ್ರ ವ್ಯಾಖ್ಯಾನದೊಂದಿಗೆ ನೀವು ಡಿಜಿಟಲ್ ಆವೃತ್ತಿಯನ್ನು ರಚಿಸಬಹುದೇ ಮತ್ತು ಅದನ್ನು ದೇಶಾದ್ಯಂತದ ಎಲ್ಲಾ ಶಾಲಾ ಮಕ್ಕಳಿಗೆ ಲಭ್ಯವಾಗುವಂತೆ ಮಾಡಬಹುದೇ? ಇದು ಭಾರತದ ಇತಿಹಾಸ, ಎದುರಿಸಿದ ಸವಾಲುಗಳು ಮತ್ತು ಸಾಧಿಸಿದ ಪ್ರಗತಿಯ ಬಗ್ಗೆ ಅಮೂಲ್ಯವಾದ ಒಳನೋಟವನ್ನು ನೀಡುತ್ತದೆ. ನೀವು ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಿದ್ದೀರಿ  ಎಂದು ನಾನು ನಂಬುತ್ತೇನೆ, ಮತ್ತು ಡಿಜಿಟಲ್ ಆವೃತ್ತಿಯನ್ನು ರಚಿಸುವ ಮೂಲಕ, ನೀವು ಇದನ್ನು ರಾಷ್ಟ್ರದಾದ್ಯಂತದ ಮಕ್ಕಳಿಗೆ ಆಕರ್ಷಣೆ ಮತ್ತು ಕಲಿಕೆಯ ಮೂಲವನ್ನಾಗಿ ಮಾಡಬಹುದು.

 

 

ಸ್ನೇಹಿತರೇ,

100 ವರ್ಷಗಳು ಎಂದರೆ ಅದೊಂದು ಮಹತ್ವದ ಮೈಲಿಗಲ್ಲು. ಈ ದಿನಗಳಲ್ಲಿ, ನಾನು ವಿವಿಧ ಕಾರ್ಯಗಳಲ್ಲಿ ಸಾಕಷ್ಟು ತೊಡಗಿಕೊಂಡಿದ್ದೇನೆ. ಆದರೆ ಇದು ನಾನು ಕಳೆದುಕೊಳ್ಳಲು ಬಯಸದ ಸಂದರ್ಭ; ನಾನು ವೈಯಕ್ತಿಕವಾಗಿ ಇಲ್ಲಿರಲು ಬಯಸುತ್ತೇನೆ. ಏಕೆಂದರೆ 100 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸುವುದು ಅದೇ ಒಂದು ದೊಡ್ಡ ಸಾಧನೆಯಾಗಿದೆ. ಆದ್ದರಿಂದ, ನಾನು ನಿಮಗೆ ಮತ್ತು ನಿಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From strategic partnership upgrade to defence roadmap: Key outcomes of PM Modi–Meloni meeting in Rome

Media Coverage

From strategic partnership upgrade to defence roadmap: Key outcomes of PM Modi–Meloni meeting in Rome
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam highlighting the sacred legacy of our motherland and praying for universal prosperity
May 21, 2026

Prime Minister Shri Narendra Modi today shared a Sanskrit Subhashitam, noting that our motherland has been the sacred land of spiritual practice and worship, as well as courage, strength, and universal welfare. Shri Modi expressed his earnest wish that this holy land of great heritage and ancient culture may always keep everyone replete with happiness and prosperity.

The Prime Minister posted on X:

"हमारी मातृभूमि साधना और उपासना के साथ-साथ साहस, शक्ति और सर्व-कल्याण की पुण्यभूमि रही है। महान विरासत और प्राचीन संस्कृति की यह पावन धरती हर किसी को सदैव सुख-समृद्धि से परिपूर्ण रखे, यही कामना है।

यस्यां पूर्वे पूर्वजना विचक्रिरे यस्यां देवा असुरानभ्यवर्तयन् ।
गवामश्वानां वयसश्च विष्ठा भगं वर्चः पृथिवी नो दधातु ।।"

May the land where our ancestors performed great and benevolent deeds, and where the gods defeated the unjust forces, that motherland, full of livestock and power, grant us vast space and prosperity.