ಆರ್ಯ ಸಮಾಜದ 150ನೇ ವಾರ್ಷಿಕೋತ್ಸವವು ಕೇವಲ ಒಂದು ನಿರ್ದಿಷ್ಟ ಸಮುದಾಯ ಅಥವಾ ಪಂಗಡಕ್ಕೆ ಮಾತ್ರ ಸೀಮಿತವಾದುದಲ್ಲ - ಇದು ಇಡೀ ರಾಷ್ಟ್ರದ ವೈದಿಕ ಗುರುತಿಗೆ ಆಳವಾಗಿ ಸಂಬಂಧಿಸಿದ ಆಚರಣೆಯಾಗಿದೆ: ಪ್ರಧಾನಮಂತ್ರಿ
ಆರ್ಯ ಸಮಾಜವು ಭಾರತೀಯತೆಯ ಸಾರವನ್ನು ನಿರ್ಭಯವಾಗಿ ಎತ್ತಿಹಿಡಿದಿದೆ ಮತ್ತು ಉತ್ತೇಜಿಸಿದೆ: ಪ್ರಧಾನಮಂತ್ರಿ
ಸ್ವಾಮಿ ದಯಾನಂದ ಜೀ ಒಬ್ಬ ದಾರ್ಶನಿಕ, ಮಹಾನ್ ವ್ಯಕ್ತಿ: ಪ್ರಧಾನಮಂತ್ರಿ
ಇಂದು, ಸುಸ್ಥಿರ ಅಭಿವೃದ್ಧಿಯ ಅನ್ವೇಷಣೆಯಲ್ಲಿ ಭಾರತವು ಪ್ರಮುಖ ಜಾಗತಿಕ ಧ್ವನಿಯಾಗಿ ಹೊರಹೊಮ್ಮಿದೆ: ಪ್ರಧಾನಮಂತ್ರಿ

ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಪಾಲರಾದ ಆಚಾರ್ಯ ದೇವವ್ರತ ಜೀ, ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜೀ, ಜ್ಞಾನಜ್ಯೋತಿ ಮಹೋತ್ಸವ ಆಯೋಜನಾ ಸಮಿತಿಯ ಅಧ್ಯಕ್ಷರಾದ ಸುರೇಂದ್ರ ಕುಮಾರ್ ಜೀ, ಡಿಎವಿ ಕಾಲೇಜು ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷೆ ಪೂನಂ ಸೂರಿ ಜೀ, ಹಿರಿಯ ಆರ್ಯ ಸನ್ಯಾಸಿ ಸ್ವಾಮಿ ದೇವವ್ರತ ಸರಸ್ವತಿ ಜೀ, ವಿವಿಧ ಆರ್ಯ ಪ್ರತಿನಿಧಿ ಸಭೆಗಳ ಅಧ್ಯಕ್ಷರೆ ಮತ್ತು ಉಪಾಧ್ಯಕ್ಷರೆ, ದೇಶಾದ್ಯಂತ ಮತ್ತು ವಿಶ್ವಾದ್ಯಂತದಿಂದ ಬಂದಿರುವ ಆರ್ಯ ಸಮಾಜದ ಎಲ್ಲಾ ಸಮರ್ಪಿತ ಸದಸ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಮೊದಲಿಗೆ, ತಡವಾಗಿ ಬಂದಿದ್ದಕ್ಕಾಗಿ ನಾನುನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಇಂದು ಸರ್ದಾರ್ ಸಾಹೇಬ್ ಅವರ 150ನೇ ಜನ್ಮ ದಿನಾಚರಣೆ. ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಆ ಕಾರ್ಯಕ್ರಮದಿಂದಾಗಿ, ನಾನು ಇಲ್ಲಿಗೆ ತಲುಪಲು ವಿಳಂಬವಾಯಿತು. ಸಮಯಕ್ಕೆ ಸರಿಯಾಗಿ ಆಗಮಿಸಲು ಮತ್ತು ಅದಕ್ಕಾಗಿ ನಿಮ್ಮ ಕ್ಷಮೆ ಕೇಳಲು ಸಾಧ್ಯವಾಗದಿದ್ದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಆರಂಭದಲ್ಲಿ ನಾವು ಕೇಳಿದ ಮಂತ್ರಗಳ ಶಕ್ತಿ ಮತ್ತು ಚೈತನ್ಯವನ್ನು ಇನ್ನೂ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನಿಮ್ಮೊಂದಿಗೆ ಬರಲು ಅವಕಾಶ ಸಿಕ್ಕಾಗಲೆಲ್ಲಾ ಇದು ನನಗೆ ದೈವಿಕ ಮತ್ತು ಅಸಾಧಾರಣ ಅನುಭವವಾಗಿದೆ. ಇದು ಸ್ವಾಮಿ ದಯಾನಂದ ಜಿ ಅವರ ಆಶೀರ್ವಾದ, ಇದು ಅವರ ಆದರ್ಶಗಳಿಗೆ ನಮ್ಮ ಸಾಮೂಹಿಕ ಗೌರವ, ಮತ್ತು ನಿಮ್ಮೆಲ್ಲ ಚಿಂತಕರೊಂದಿಗಿನ ನನ್ನ ದಶಕಗಳ ವೈಯಕ್ತಿಕ ಬಾಂಧವ್ಯದ ಪರಿಣಾಮವಾಗಿ ನಾನು ನಿಮ್ಮೊಂದಿಗೆ ಇರಲು ಅವಕಾಶ ಪಡೆದಿದ್ದೇನೆ. ನಾನು ನಿಮ್ಮನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮಾತನಾಡುವಾಗಲೆಲ್ಲಾ ನಾನು ಒಂದು ಅನನ್ಯ ಶಕ್ತಿ ಮತ್ತು ಸ್ಫೂರ್ತಿಯಿಂದ ತುಂಬಿದ್ದೇನೆ. ಇದೇ ರೀತಿಯ 9 ಸಭಾಂಗಣಗಳನ್ನು ಸ್ಥಾಪಿಸಲಾಗಿದೆ ಎಂಬುದು ನನಗೆ ತಿಳಿದುಬಂದಿದೆ. ಅಲ್ಲಿ ನಮ್ಮ ಎಲ್ಲಾ ಆರ್ಯ ಸಮಾಜದ ಸದಸ್ಯರು ವೀಡಿಯೊ ಲಿಂಕ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ನಾನು ಅವರನ್ನು ನೋಡಲು ಸಾಧ್ಯವಾಗದಿದ್ದರೂ, ನಾನು ಇಲ್ಲಿಂದ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಕಳೆದ ವರ್ಷ ಗುಜರಾತ್‌ನಲ್ಲಿ ದಯಾನಂದ ಸರಸ್ವತಿ ಅವರ ಜನ್ಮಸ್ಥಳದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ನಾನು ಆ ಕಾರ್ಯಕ್ರಮ ಉದ್ದೇಶಿಸಿ ವೀಡಿಯೊ ಲಿಂಕ್ ಮೂಲಕ ಮಾತನಾಡಿದ್ದೆ. ಅದಕ್ಕೂ ಮೊದಲು, ದೆಹಲಿಯಲ್ಲಿಯೇ ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿತು. ಆ ಸಮಯದಲ್ಲಿ ಹವನ ಆಚರಣೆಯ ಪವಿತ್ರ ವಾತಾವರಣವಾದ ವೇದ ಮಂತ್ರಗಳ ಶಕ್ತಿ ನಿನ್ನೆಯಷ್ಟೇ ಸಂಭವಿಸಿದೆ ಎಂದು ತೋರುತ್ತದೆ.

 

ಸ್ನೇಹಿತರೆ,

ಆ ಕಾರ್ಯಕ್ರಮದಲ್ಲಿ ನಾವು ಸಾಮೂಹಿಕವಾಗಿ 200ನೇ ಜನ್ಮ ದಿನಾಚರಣೆಯನ್ನು 2 ವರ್ಷಗಳ ಕಾಲ 'ವಿಚಾರ ಯಜ್ಞ'ವಾಗಿ ಆಚರಿಸಲು ನಿರ್ಧರಿಸಿದ್ದೆವು. ಕಳೆದ 2 ವರ್ಷಗಳಿಂದ ಈ 'ಅಖಂಡ ವಿಚಾರ ಯಜ್ಞ'ವನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲಾಗುತ್ತಿದೆ, ಇದನ್ನು ನೋಡಲು ನನಗೆ ಸಂತೋಷವಾಗಿದೆ. ಕಾಲಕಾಲಕ್ಕೆ, ನಿಮ್ಮ ವಿವಿಧ ಪ್ರಯತ್ನಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ನನಗೆ ತಿಳಿದಿದೆ. ಇಂದು ಮತ್ತೊಮ್ಮೆ, ಆರ್ಯ ಸಮಾಜದ 150ನೇ ವಾರ್ಷಿಕೋತ್ಸವದ ಈ ಆಚರಣೆಯಲ್ಲಿ ನನ್ನ ವಿನಮ್ರ ಆಧ್ಯಾತ್ಮಿಕ ಕೊಡುಗೆ ನೀಡಲು ನನಗೆ ಅವಕಾಶ ನೀಡಲಾಗಿದೆ. ನಾನು ಸ್ವಾಮಿ ದಯಾನಂದ ಸರಸ್ವತಿ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ,ಅವರಿಗೆ ನನ್ನ ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ. ಈ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ, ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವ ಸೌಭಾಗ್ಯ ನಮಗಿದೆ.

ಸ್ನೇಹಿತರೆ,

ಆರ್ಯ ಸಮಾಜದ ಸ್ಥಾಪನೆಯ 150ನೇ ವಾರ್ಷಿಕೋತ್ಸವವು ಕೇವಲ ಒಂದು ನಿರ್ದಿಷ್ಟ ಸಮುದಾಯ ಅಥವಾ ಪಂಥಕ್ಕೆ ಸಂಬಂಧಿಸಿದ ಸಂದರ್ಭವಲ್ಲ. ಇದು ಭಾರತದ ವೈದಿಕ ಗುರುತಿಗೆ ಆಳವಾಗಿ ಸಂಬಂಧಿಸಿರುವ ಸಂದರ್ಭವಾಗಿದೆ. ಇದು ಗಂಗೆಯ ಶಾಶ್ವತ ಹರಿವಿನಂತಿರುವ ಮತ್ತು ಸ್ವಯಂ ಶುದ್ಧೀಕರಣದ ಶಕ್ತಿ ಹೊಂದಿರುವ ಆ ಮಹಾನ್ ಭಾರತೀಯ ಕಲ್ಪನೆಯನ್ನು ಪ್ರತಿಬಿಂಬಿಸುವ ಸಂದರ್ಭವಾಗಿದೆ. ಈ ಆಚರಣೆಯು ಸಾಮಾಜಿಕ ಸುಧಾರಣೆಯ ಮಹಾನ್ ಸಂಪ್ರದಾಯವನ್ನು ನಿರಂತರವಾಗಿ ಮುಂದುವರೆಸಿದ ಮತ್ತು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಬೌದ್ಧಿಕ ಶಕ್ತಿ ಒದಗಿಸಿದ ಆ ಅದ್ಭುತ ಸಂಪ್ರದಾಯದೊಂದಿಗೆ ಸಂಪರ್ಕ ಹೊಂದಿದೆ. ಲಾಲಾ ಲಜಪತ್ ರಾಯ್, ಹುತಾತ್ಮ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇತರೆ ಅನೇಕ ಕ್ರಾಂತಿಕಾರಿ ಮಹಾನ್ ದೇಶಭಕ್ತರು ಆರ್ಯ ಸಮಾಜದಿಂದ ಸ್ಫೂರ್ತಿ ಪಡೆದರು, ಸ್ವಾತಂತ್ರ್ಯದ ಕಾರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ದುರದೃಷ್ಟವಶಾತ್, ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಆರ್ಯ ಸಮಾಜದ ನಿರ್ಣಾಯಕ ಪಾತ್ರವು ರಾಜಕೀಯ ಕಾರಣಗಳಿಂದಾಗಿ ನಿಜವಾಗಿಯೂ ಅರ್ಹ ಮನ್ನಣೆ ಪಡೆಯಲಿಲ್ಲ.

 

ಸ್ನೇಹಿತರೆ,

ಆರಂಭದಿಂದಲೂ, ಆರ್ಯ ಸಮಾಜವು ಉತ್ಸಾಹಭರಿತ ದೇಶಭಕ್ತರ ಸಂಘಟನೆಯಾಗಿದೆ. ಆರ್ಯ ಸಮಾಜವು ಯಾವಾಗಲೂ ಭಾರತೀಯತೆಯ ಸಾರದ ಬಗ್ಗೆ ಧೈರ್ಯದಿಂದ ಮತ್ತು ನಿರ್ಭಯವಾಗಿ ಮಾತನಾಡಿದೆ. ವಿದೇಶಿ ಸಿದ್ಧಾಂತಗಳಿಂದ ಬಂದಿರಲಿ, ವಿಭಜಕ ಮನಸ್ಥಿತಿಗಳಿಂದ ಬಂದಿರಲಿ ಅಥವಾ ಸಾಂಸ್ಕೃತಿಕ ಮಾಲಿನ್ಯವನ್ನು ಹೇರುವ ಪ್ರಯತ್ನಗಳಿಂದ ಬಂದಿರಲಿ, ಭಾರತವನ್ನು ವಿರೋಧಿಸುವ ಪ್ರತಿಯೊಂದು ವಿಚಾರವನ್ನು ಆರ್ಯ ಸಮಾಜವು ನಿರಂತರವಾಗಿ ಪ್ರಶ್ನಿಸಿದೆ. ಇಂದು ಆರ್ಯ ಸಮಾಜವು 150 ವರ್ಷಗಳನ್ನು ಪೂರೈಸುತ್ತಿರುವಾಗ, ರಾಷ್ಟ್ರ ಮತ್ತು ಸಮಾಜವು ಒಟ್ಟಾಗಿ ಸ್ವಾಮಿ ದಯಾನಂದ ಸರಸ್ವತಿ ಅವರ ಮಹಾನ್ ಆದರ್ಶಗಳಿಗೆ ಇಷ್ಟು ಭವ್ಯವಾಗಿ ಗೌರವ ಸಲ್ಲಿಸುತ್ತಿದೆ ಎಂಬುದು ನನಗೆ ತುಂಬಾ ತೃಪ್ತಿ ತಂದಿದೆ.

ಸ್ನೇಹಿತರೆ,

ತಮ್ಮ ಆಧ್ಯಾತ್ಮಿಕ ಜಾಗೃತಿ ಮತ್ತು ಸುಧಾರಣಾ ಚಳುವಳಿಗಳ ಮೂಲಕ ಇತಿಹಾಸದ ಹಾದಿಗೆ ಹೊಸ ನಿರ್ದೇಶನ ನೀಡಿದ ಸ್ವಾಮಿ ಶ್ರದ್ಧಾನಂದರಂತಹ ಆರ್ಯ ಸಮಾಜದ ಅನೇಕ ದಿಕ್ಕುಗಳ ಶಕ್ತಿ ಮತ್ತು ಆಶೀರ್ವಾದಗಳು ಈ ಐತಿಹಾಸಿಕ ಕ್ಷಣದಲ್ಲಿ ನಮ್ಮೊಂದಿಗೆ ಆಧ್ಯಾತ್ಮಿಕವಾಗಿ ಇವೆ. ಅಂತಹ ಎಲ್ಲಾ ಉದಾತ್ತ ಆತ್ಮಗಳಿಗೆ ನಾನು ನಮಸ್ಕರಿಸುತ್ತೇನೆ ಮತ್ತು ಈ ಪವಿತ್ರ ವೇದಿಕೆಯಿಂದ ಅವರ ಸ್ಮರಣೆಗೆ ನನ್ನ ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ನಮ್ಮ ಭಾರತವು ಅಸಂಖ್ಯಾತ ರೀತಿಯಲ್ಲಿ ವಿಶಿಷ್ಟವಾಗಿದೆ. ಈ ಪವಿತ್ರ ಭೂಮಿ, ಅದರ ನಾಗರಿಕತೆ, ಅದರ ವೈದಿಕ ಪರಂಪರೆ ಯುಗ ಯುಗಾಂತರಗಳಲ್ಲಿ ಶಾಶ್ವತವಾಗಿ ಉಳಿದಿದೆ. ಏಕೆಂದರೆ ಹೊಸ ಸವಾಲುಗಳು ಉದ್ಭವಿಸಿದಾಗಲೆಲ್ಲಾ, ಕಾಲವು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದಾಗಲೆಲ್ಲಾ, ನಮ್ಮ ಸಮಾಜವನ್ನು ಸರಿಯಾದ ಹಾದಿಯತ್ತ ಕೊಂಡೊಯ್ಯಲು ಕೆಲವು ಮಹಾನ್ ಆತ್ಮಗಳು, ಕೆಲವು ಋಷಿಗಳು, ಮಹರ್ಷಿಗಳು ಅಥವಾ ದಾರ್ಶನಿಕರು ಜನ್ಮ ತಾಳುತ್ತಾರೆ. ಸ್ವಾಮಿ ದಯಾನಂದ ಸರಸ್ವತಿ ಜಿ ಈ ಭವ್ಯ ಸಂಪ್ರದಾಯದಲ್ಲಿ ಅಂತಹ ಒಬ್ಬ ಮಹಾನ್ ದಾರ್ಶನಿಕರಾಗಿದ್ದರು. ಶತಮಾನಗಳ ಗುಲಾಮಗಿರಿಯಿಂದಾಗಿ ನಮ್ಮ ರಾಷ್ಟ್ರ ಮತ್ತು ಸಮಾಜವನ್ನು ನಿಗ್ರಹಿಸಲಾಗಿದ್ದ ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಅವರು ಜನಿಸಿದರು. ಮೂಢನಂಬಿಕೆಗಳು ಮತ್ತು ಸಾಮಾಜಿಕ ದುಷ್ಕೃತ್ಯಗಳು ಆಳವಾದ ಚಿಂತನೆ ಮತ್ತು ಪ್ರತಿಬಿಂಬವನ್ನು ಬದಲಾಯಿಸಿದವು. ಬ್ರಿಟಿಷರು ನಮ್ಮ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ನಮ್ಮನ್ನು ಕೀಳಾಗಿ ಕಾಣುವ ಮೂಲಕ, ಅವರು ಭಾರತದ ಅಧೀನತೆಯನ್ನು ಸಮರ್ಥಿಸಿಕೊಂಡರು. ಅಂತಹ ಸಂದರ್ಭಗಳಲ್ಲಿ, ಸಮಾಜವು ಹೊಸ ಮತ್ತು ಮೂಲ ಆಲೋಚನೆಗಳನ್ನು ಯೋಚಿಸುವ ಧೈರ್ಯವನ್ನು ಸಹ ಕಳೆದುಕೊಂಡಿತ್ತು. ಅಂತಹ ಕಗ್ಗತ್ತಲ ಮತ್ತು ಕಷ್ಟಕರ ಕಾಲದಲ್ಲಿ, ಒಬ್ಬ ಯುವ ಸನ್ಯಾಸಿ ಹೊರಹೊಮ್ಮಿದರು. ಅವರು ಹಿಮಾಲಯದ ಏಕಾಂಗಿ, ಕಠಿಣ ಭೂಪ್ರದೇಶಗಳಲ್ಲಿ ಧ್ಯಾನ ಮಾಡಿದರು, ಕಠಿಣ ತಪಸ್ಸಿನ ಮೂಲಕ ತಮ್ಮನ್ನು ತಾವು ಪರೀಕ್ಷಿಸಿಕೊಂಡರು ಮತ್ತು ಹದಗೊಳಿಸಿಕೊಂಡರು. ಅವರು ಹಿಂದಿರುಗಿದಾಗ, ಅವರು ಸ್ವಯಂ-ಅನುಮಾನದಲ್ಲಿ ಸಿಲುಕಿದ್ದ ಸಮಾಜವನ್ನು ಜಾಗೃತಗೊಳಿಸಿದರು. ಇಡೀ ವಸಾಹತುಶಾಹಿ ವ್ಯವಸ್ಥೆಯು ಭಾರತದ ಗುರುತನ್ನು ಕೀಳಾಗಿ ಕಾಣಲು ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಪಾಶ್ಚಿಮಾತ್ಯೀಕರಣದ ಮೂಲಕ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಆಧುನೀಕರಣ ಎಂದು ಬಿಂಬಿಸಲಾಗುತ್ತಿದ್ದಾಗ, ಈ ಆತ್ಮವಿಶ್ವಾಸದ ಋಷಿ ತಮ್ಮ ಧ್ವನಿಯನ್ನು ಎತ್ತಿ ತಮ್ಮ ಜನರಿಗೆ ಕರೆ ನೀಡಿದರು: "ವೇದಗಳಿಗೆ ಹಿಂತಿರುಗಿ! ವೇದಗಳಿಗೆ ಹಿಂತಿರುಗಿ!" ಗುಲಾಮಗಿರಿಯ ಆ ಕರಾಳ ಯುಗದಲ್ಲಿ, ಸುಪ್ತ ರಾಷ್ಟ್ರೀಯ ಪ್ರಜ್ಞೆಯನ್ನು ಮತ್ತೆ ಜಾಗೃತಗೊಳಿಸಿದ ಸ್ವಾಮಿ ದಯಾನಂದ ಜಿ ಅವರ ಶ್ರೇಷ್ಠತೆ ಅಂತಹದ್ದಾಗಿತ್ತು.

 

ಸ್ನೇಹಿತರೆ,

ಭಾರತವು ನಿಜವಾಗಿಯೂ ಮುಂದುವರಿಯಲು, ರಾಜಕೀಯ ಗುಲಾಮಗಿರಿಯ ಸರಪಳಿಗಳನ್ನು ಮುರಿಯುವುದು ಸಾಕಾಗುವುದಿಲ್ಲ ಎಂದು ಸ್ವಾಮಿ ದಯಾನಂದ ಸರಸ್ವತಿ ಜಿ ಅರ್ಥ ಮಾಡಿಕೊಂಡರು. ನಮ್ಮ ಸಮಾಜವನ್ನು ಬಂಧಿಸುವ ಮತ್ತು ವಿಭಜಿಸುವ ಸಾಮಾಜಿಕ ಸರಪಳಿಗಳನ್ನು ಸಹ ಮುರಿಯಬೇಕಾಗಿತ್ತು. ಅದಕ್ಕಾಗಿಯೇ ಸ್ವಾಮಿ ದಯಾನಂದ ಸರಸ್ವತಿ ಜಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಉನ್ನತ ಮತ್ತು ಕೆಳ ಸ್ಥಾನಮಾನದ ಕಲ್ಪನೆಗಳನ್ನು ತಿರಸ್ಕರಿಸಿದರು. ಅವರು ಅಸ್ಪೃಶ್ಯತೆಯನ್ನು ಅದರ ಮೂಲದಿಂದಲೇ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು. ಅವರು ಅನಕ್ಷರತೆಯ ವಿರುದ್ಧ ಆಂದೋಲನ ಪ್ರಾರಂಭಿಸಿದರು. ಅವರು ವೇದಗಳು ಮತ್ತು ಧರ್ಮಗ್ರಂಥಗಳನ್ನು ವಿರೂಪಗೊಳಿಸಿದ ಅಥವಾ ತಪ್ಪಾಗಿ ಅರ್ಥೈಸಿದವರಿಗೆ ಸವಾಲು ಹಾಕಿದರು. ವಿದೇಶಿ ನಿರೂಪಣೆಗಳನ್ನು ಸಹ ಎದುರಿಸಿದರು ಮತ್ತು ಪ್ರಾಚೀನ ಭಾರತೀಯ ಸಂಪ್ರದಾಯವಾದ 'ಶಾಸ್ತ್ರಾರ್ಥ'(ಬೌದ್ಧಿಕ ಚರ್ಚೆ) ಮೂಲಕ ಸತ್ಯ ಸಾಬೀತುಪಡಿಸಿದರು.

ಸ್ನೇಹಿತರೆ,

ಸ್ವಾಮಿ ದಯಾನಂದರು ತಮ್ಮ ಯುಗದ ದಾರ್ಶನಿಕರಾಗಿದ್ದರು. ಅದು ವ್ಯಕ್ತಿಯ ನಿರ್ಮಾಣವಾಗಲಿ ಅಥವಾ ಸಮಾಜ ನಿರ್ಮಾಣವಾಗಲಿ, 'ನಾರಿಶಕ್ತಿ'(ಮಹಿಳಾ ಸಬಲೀಕರಣ) ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರಿಗೆ ತಿಳಿದಿತ್ತು. ಆದ್ದರಿಂದ, ಅವರು ಮಹಿಳೆಯರನ್ನು ತಮ್ಮ ಮನೆಯ 4 ಗೋಡೆಗಳೊಳಗೆ ಸೀಮಿತಗೊಳಿಸುವ ಮನಸ್ಥಿತಿಯನ್ನು ಧೈರ್ಯದಿಂದ ಪ್ರಶ್ನಿಸಿದರು. ಆರ್ಯ ಸಮಾಜ ಶಾಲೆಗಳಲ್ಲಿ ಹುಡುಗಿಯರಿಗೆ ಶಿಕ್ಷಣ ನೀಡುವ ಆಂದೋಲನವನ್ನು ಅವರು ಪ್ರಾರಂಭಿಸಿದರು. ಆ ದಿನಗಳಲ್ಲಿ, ಜಲಂಧರ್‌ನಲ್ಲಿ ಬಾಲಕಿಯರ ಶಾಲೆ ಪ್ರಾರಂಭಿಸಲಾಯಿತು, ಅದು ಶೀಘ್ರದಲ್ಲೇ ಕನ್ಯಾ ಮಹಾವಿದ್ಯಾಲಯ(ಮಹಿಳಾ ಕಾಲೇಜು) ಆಗಿ ಬೆಳೆಯಿತು. ಆರ್ಯ ಸಮಾಜದಿಂದ ಸ್ಥಾಪಿಸಲ್ಪಟ್ಟ ಅಂತಹ ಸಂಸ್ಥೆಗಳಿಂದ ಲಕ್ಷಾಂತರ ಹೆಣ್ಣು ಮಕ್ಕಳು ಶಿಕ್ಷಣ ಪಡೆದಿದ್ದಾರೆ ಮತ್ತು ಇಂದು ಅವರು ರಾಷ್ಟ್ರದ ಅಡಿಪಾಯವನ್ನು ಬಲಪಡಿಸುತ್ತಿದ್ದಾರೆ.

ಸ್ನೇಹಿತರೆ,

ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ ಅವರು ಈ ದಿನ ಹಾಜರಿದ್ದಾರೆ. ಕೇವಲ 2 ದಿನಗಳ ಹಿಂದೆ, ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಅವರು ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಅವರೊಂದಿಗೆ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಇಂದು, ನಮ್ಮ ಹೆಣ್ಣುಮಕ್ಕಳು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ, ಅವರು ಡ್ರೋನ್ ದೀದಿಗಳಂತೆ ಆಧುನಿಕ ಕೃಷಿಯನ್ನು ಸಹ ಮುನ್ನಡೆಸುತ್ತಿದ್ದಾರೆ. ಇಂದು ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(STEM) ಮಹಿಳಾ ಪದವೀಧರರನ್ನು ಹೊಂದಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಮಹಿಳೆಯರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸುತ್ತಿದ್ದಾರೆ. ನಮ್ಮ ಉನ್ನತ ವೈಜ್ಞಾನಿಕ ಸಂಸ್ಥೆಗಳಲ್ಲಿ, ಮಹಿಳಾ ವಿಜ್ಞಾನಿಗಳು ಮಂಗಳಯಾನ, ಚಂದ್ರಯಾನ ಮತ್ತು ಗಗನ ಯಾನದಂತಹ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಈ ರೂಪಾಂತರವು ರಾಷ್ಟ್ರವು ಸರಿಯಾದ ಹಾದಿಯಲ್ಲಿ ಸಾಗುತ್ತಿದೆ, ಸ್ವಾಮಿ ದಯಾನಂದ ಜಿ ಅವರ ಕನಸುಗಳನ್ನು ಈಡೇರಿಸುತ್ತಿದೆ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೆ,

ನಾನು ಆಗಾಗ್ಗೆ ಸ್ವಾಮಿ ದಯಾನಂದ ಜಿ ಅವರ ಆಳವಾದ ಆಲೋಚನೆಗಳಲ್ಲಿ ಒಂದನ್ನು ಯೋಚಿಸುತ್ತೇನೆ, ಅದನ್ನು ನಾನು ಅನೇಕ ಜನರೊಂದಿಗೆ ಹಂಚಿಕೊಂಡಿದ್ದೇನೆ. ಸ್ವಾಮಿ ಜಿ ಹೇಳಿದರು: "ಕಡಿಮೆ ಸ್ವೀಕರಿಸುವ ಮತ್ತು ಹೆಚ್ಚಿನ ಕೊಡುಗೆ ನೀಡುವ ವ್ಯಕ್ತಿ ನಿಜವಾಗಿಯೂ ಪ್ರಬುದ್ಧ." ಈ ಕೆಲವು ಪದಗಳಲ್ಲಿ ಒಂದು ಅಸಾಧಾರಣ ಕಲ್ಪನೆ ಇದೆ, ಅದನ್ನು ಸಂಪೂರ್ಣವಾಗಿ ವಿವರಿಸಿದರೆ ಸಂಪುಟಗಳನ್ನು ಬರೆಯಬಹುದು. ಆದರೆ ಒಂದು ಚಿಂತನೆಯ ನಿಜವಾದ ಶಕ್ತಿ ಅದರ ಅರ್ಥದಲ್ಲಿ ಮಾತ್ರವಲ್ಲ, ಅದು ಎಷ್ಟು ಕಾಲ ಉಳಿಯುತ್ತದೆ ಮತ್ತು ಅದು ಎಷ್ಟು ಜೀವಗಳನ್ನು ಪರಿವರ್ತಿಸುತ್ತದೆ ಎಂಬುದರಲ್ಲಿದೆ. ನಾವು ಮಹರ್ಷಿ ದಯಾನಂದರ ವಿಚಾರಗಳನ್ನು ಈ ಪ್ರಮಾಣದಲ್ಲಿ ಪರೀಕ್ಷಿಸಿದಾಗ, ಆರ್ಯ ಸಮಾಜದ ಸಮರ್ಪಿತ ಅನುಯಾಯಿಗಳನ್ನು ನೋಡಿದಾಗ, ಅವರ ವಿಚಾರಗಳು ಕಾಲಾನಂತರದಲ್ಲಿ ಪ್ರಕಾಶಮಾನವಾಗಿ ಮತ್ತು ಹೆಚ್ಚು ಶಕ್ತಿಶಾಲಿಯಾಗಿವೆ ಎಂಬುದು ನಮಗೆ ಅರಿವಾಗುತ್ತದೆ.

 

ಸಹೋದರ ಸಹೋದರಿಯರೆ,

ಸ್ವಾಮಿ ದಯಾನಂದ ಸರಸ್ವತಿ ಅವರು ತಮ್ಮ ಜೀವಿತಾವಧಿಯಲ್ಲಿ ಪರೋಪ್ಕಾರಿಣಿ ಸಭೆಯನ್ನು ಸ್ಥಾಪಿಸಿದರು. ಅವರು ನೆಟ್ಟ ಬೀಜವು ಈಗ ವಿಶಾಲವಾದ ಮರವಾಗಿ ಬೆಳೆದಿದೆ, ಅನೇಕ ಪ್ರವರ್ಧಮಾನಕ್ಕೆ ಬರುವ ಶಾಖೆಗಳನ್ನು ಹೊಂದಿದೆ. ಗುರುಕುಲ ಕಾಂಗ್ರಿ, ಗುರುಕುಲ ಕುರುಕ್ಷೇತ್ರ, ಡಿಎವಿ ಸಂಸ್ಥೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಷೇತ್ರಗಳಲ್ಲಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಲೇ ಇವೆ. ರಾಷ್ಟ್ರವು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ಆರ್ಯ ಸಮಾಜದ ಜನರು ಯಾವಾಗಲೂ ದೇಶವಾಸಿಗಳ ಸೇವೆಗೆ ನಿಸ್ವಾರ್ಥವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಭಾರತದ ವಿಭಜನೆಯ ದುರಂತ ಅವಧಿಯಲ್ಲಿ, ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತರಿಗೆ ಸಹಾಯ ಮಾಡುವ, ಪುನರ್ವಸತಿ ನೀಡುವ ಮತ್ತು ಶಿಕ್ಷಣ ನೀಡುವಲ್ಲಿ ಆರ್ಯ ಸಮಾಜವು ಗಮನಾರ್ಹ ಪಾತ್ರ ವಹಿಸಿದೆ. ಇಂದಿಗೂ ಸಹ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ, ಸಂಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸುವಲ್ಲಿ ಆರ್ಯ ಸಮಾಜ ಮೊದಲು ಇರುತ್ತದೆ.

ಸಹೋದರ ಸಹೋದರಿಯರೆ,

ಆರ್ಯ ಸಮಾಜಕ್ಕೆ ದೇಶವು ಸಲ್ಲಿಸಿದ ಅನೇಕ ಕೊಡುಗೆಗಳಲ್ಲಿ, ಅತ್ಯಂತ ಮುಖ್ಯವಾದದ್ದು ದೇಶದ ಪ್ರಾಚೀನ ಗುರುಕುಲ ಸಂಪ್ರದಾಯವನ್ನು ಸಂರಕ್ಷಿಸುವ ಪ್ರಯತ್ನ. ಗುರುಕುಲ ವ್ಯವಸ್ಥೆಯ ಬಲದ ಮೂಲಕ ಭಾರತವು ಜ್ಞಾನ ಮತ್ತು ವಿಜ್ಞಾನದ ಉತ್ತುಂಗದಲ್ಲಿ ನಿಂತಿದ್ದ ಕಾಲವಿತ್ತು. ವಸಾಹತುಶಾಹಿ ಅವಧಿಯಲ್ಲಿ ಈ ವ್ಯವಸ್ಥೆಯ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಲಾಯಿತು. ಪರಿಣಾಮವಾಗಿ, ನಮ್ಮ ಜ್ಞಾನದ ಮೂಲವು ನಾಶವಾಯಿತು, ನಮ್ಮ ಮೌಲ್ಯಗಳು ದುರ್ಬಲಗೊಂಡವು, ನಮ್ಮ ಯುವ ಪೀಳಿಗೆಗಳು ದಿಕ್ಕು ಕಳೆದುಕೊಂಡವು. ಶಿಥಿಲಗೊಳ್ಳುತ್ತಿರುವ ಗುರುಕುಲ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಮತ್ತು ರಕ್ಷಿಸಲು ಆರ್ಯ ಸಮಾಜವೇ ಮುಂದೆ ಬಂದಿತು. ಅಷ್ಟೇ ಅಲ್ಲ, ಆರ್ಯ ಸಮಾಜದ ಗುರುಕುಲಗಳು ಪ್ರಾಚೀನ ಮೌಲ್ಯಗಳನ್ನು ಸಂರಕ್ಷಿಸುವಾಗ ಸಮಕಾಲೀನ ಶಿಕ್ಷಣವನ್ನು ಸೇರಿಸಿಕೊಂಡು ಕಾಲಕ್ರಮೇಣ ತಮ್ಮನ್ನು ತಾವು ಪರಿಷ್ಕರಿಸಿ ಆಧುನೀಕರಿಸಿಕೊಂಡವು. ಇಂದು ರಾಷ್ಟ್ರವು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಮತ್ತೊಮ್ಮೆ ಶಿಕ್ಷಣವನ್ನು ಮೌಲ್ಯಗಳು ಮತ್ತು ವ್ಯಕ್ತಿತ್ವ ನಿರ್ಮಾಣದೊಂದಿಗೆ ಸಂಯೋಜಿಸುತ್ತಿರುವಾಗ, ಈ ಪವಿತ್ರ ಭಾರತೀಯ ಕಲಿಕಾ ಸಂಪ್ರದಾಯವನ್ನು ರಕ್ಷಿಸಿದ್ದಕ್ಕಾಗಿ ನಾನು ಆರ್ಯ ಸಮಾಜಕ್ಕೆ ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಸ್ನೇಹಿತರೆ,

ನಮ್ಮ ವೇದಗಳು ಘೋಷಿಸುತ್ತವೆ: "ಕೃಣ್ವಂತೋ ವಿಶ್ವಮರ್ಯಂ", ಅಂದರೆ, ನಾವು ಇಡೀ ಜಗತ್ತನ್ನು ಉದಾತ್ತಗೊಳಿಸೋಣ, ಉದಾತ್ತ ಆಲೋಚನೆಗಳು ಮತ್ತು ಕಾರ್ಯಗಳ ಮೂಲಕ ಮಾನವತೆಯನ್ನು ಉನ್ನತೀಕರಿಸೋಣ. ಸ್ವಾಮಿ ದಯಾನಂದರು ಈ ವೈದಿಕ ಸಂದೇಶವನ್ನೇ ಆರ್ಯ ಸಮಾಜದ ಧ್ಯೇಯವಾಕ್ಯವಾಗಿ ಅಳವಡಿಸಿಕೊಂಡರು. ಇಂದು ಇದೇ ವೈದಿಕ ಆದರ್ಶವು ಭಾರತದ ಅಭಿವೃದ್ಧಿ ಪ್ರಯಾಣದ ಮಾರ್ಗದರ್ಶಿ ತತ್ವವಾಗಿದೆ: ಭಾರತದ ಪ್ರಗತಿಯ ಮೂಲಕ ಪ್ರಪಂಚದ ಕಲ್ಯಾಣ, ಭಾರತದ ಸಮೃದ್ಧಿಯ ಮೂಲಕ ಮಾನವತೆಗೆ ಸೇವೆ. ಭಾರತ ಇಂದು ಸುಸ್ಥಿರ ಅಭಿವೃದ್ಧಿಗಾಗಿ ಜಾಗತಿಕ ಧ್ವನಿಯಾಗಿ ಹೊರಹೊಮ್ಮಿದೆ. ಸ್ವಾಮೀಜಿ ಒಮ್ಮೆ ಜನರನ್ನು "ವೇದಗಳಿಗೆ ಹಿಂತಿರುಗಿ" ಎಂದು ಕರೆ ನೀಡಿದಂತೆಯೇ, ಇಂದು ಭಾರತವು ಜಗತ್ತನ್ನು ವೈದಿಕ ಜೀವನ ವಿಧಾನಕ್ಕೆ ಮರಳಲು ಕರೆ ನೀಡುತ್ತಿದೆ. ನಾವು ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಪ್ರಾರಂಭಿಸಿದ್ದೇವೆ, ಇದು ವಿಶ್ವಾದ್ಯಂತ ಬೆಂಬಲ ಪಡೆಯುತ್ತಿದೆ. "ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್" ಎಂಬ ದೃಷ್ಟಿಕೋನದ ಮೂಲಕ, ನಾವು ಸ್ವಚ್ಛ ಇಂದನವನ್ನು ಜಾಗತಿಕ ಚಳುವಳಿಯಾಗಿ ಪರಿವರ್ತಿಸುತ್ತಿದ್ದೇವೆ. ನಮ್ಮ ಯೋಗವು ಸಹ ಈಗ ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ 190ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ. ಯೋಗದ ಈ ಜಾಗತಿಕ ಸಮ್ಮತಿ(ಅಪ್ಪಿಕೊಳ್ಳುವಿಕೆ), ಸಮತೋಲಿತ, ಚಿಂತನಶೀಲ ಜೀವನವನ್ನು ನಡೆಸುವ ಬದ್ಧತೆ ಮತ್ತು ಲೈಫ್‌ನಂತಹ ಪರಿಸರ ಕಾರ್ಯಾಚರಣೆಗಳಿಗಾಗಿ ವಿಶ್ವಾದ್ಯಂತದ ಉತ್ಸಾಹ, ಇವೆಲ್ಲವೂ ಆರ್ಯ ಸಮಾಜದ ಜನರು ತಮ್ಮ ದೈನಂದಿನ ಜೀವನದಲ್ಲಿ ದೀರ್ಘಕಾಲದಿಂದ ಸಾಕಾರಗೊಳಿಸಿರುವ ಮೌಲ್ಯಗಳ ಅಭಿವ್ಯಕ್ತಿಗಳಾಗಿವೆ. ಆರ್ಯ ಸಮಾಜದ ಜನರು ಸರಳ ಜೀವನಶೈಲಿ, ಸೇವಾ ಮನೋಭಾವ, ಭಾರತೀಯ ಉಡುಗೆ ತೊಡುಗೆ ಮತ್ತು ಸಂಸ್ಕೃತಿಗೆ ಆದ್ಯತೆ, ಪರಿಸರದ ಬಗ್ಗೆ ಕಾಳಜಿ ಮತ್ತು ಭಾರತೀಯ ಮೌಲ್ಯಗಳನ್ನು ಉತ್ತೇಜಿಸುವುದನ್ನು ಮುಂದುವರೆಸಿದ್ದಾರೆ.

 

ಅದಕ್ಕಾಗಿಯೇ ಸಹೋದರ ಸಹೋದರಿಯರೆ,

ಭಾರತವು "ಸರ್ವೇ ಭವಂತು ಸುಖಿನಃ"(ಎಲ್ಲಾ ಜೀವಿಗಳು ಸಂತೋಷವಾಗಿರಲಿ) ಎಂಬ ಪ್ರಾಚೀನ ಧ್ಯೇಯವಾಕ್ಯದೊಂದಿಗೆ ಮನುಕುಲದ ಕಲ್ಯಾಣಕ್ಕಾಗಿ ಜಾಗತಿಕ ಪ್ರಯತ್ನಗಳನ್ನು ಮುನ್ನಡೆಸುತ್ತಿರುವಾಗ, ಭಾರತವು 'ವಿಶ್ವ ಬಂಧು'(ಜಗತ್ತಿನ ನಿಜವಾದ ಸ್ನೇಹಿತ) ಆಗಿ ತನ್ನ ಪಾತ್ರವನ್ನು ಬಲಪಡಿಸುತ್ತಿರುವಾಗ, ಆರ್ಯ ಸಮಾಜದ ಪ್ರತಿಯೊಬ್ಬ ಸದಸ್ಯರು ಸ್ವಾಭಾವಿಕವಾಗಿ ಈ ಧ್ಯೇಯವನ್ನು ತನ್ನದೇ ಎಂದು ಭಾವಿಸುತ್ತಾರೆ. ಇದಕ್ಕಾಗಿ, ನಾನು ನಿಮ್ಮೆಲ್ಲರನ್ನು ಗಾಢವಾಗಿ ಶ್ಲಾಘಿಸುತ್ತೇನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ.

ಸ್ನೇಹಿತರೆ,

ಸ್ವಾಮಿ ದಯಾನಂದ ಸರಸ್ವತಿ ಜಿ ಅವರು ಬೆಳಗಿದ ಜ್ಯೋತಿಯು ಕಳೆದ 150 ವರ್ಷಗಳಿಂದ ಆರ್ಯ ಸಮಾಜದ ಕೆಲಸದ ಮೂಲಕ ಸಮಾಜವನ್ನು ಬೆಳಗಿಸುತ್ತಲೇ ಇದೆ. ಸ್ವಾಮಿ ಜೀ ನಮ್ಮೆಲ್ಲರಲ್ಲಿ ಆಳವಾದ ಜವಾಬ್ದಾರಿಯ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ. ಈ ಜವಾಬ್ದಾರಿಯು ಹೊಸ ವಿಚಾರಗಳನ್ನು ಮುಂದಕ್ಕೆ ಕೊಂಡೊಯ್ಯುವುದು, ನಿಂತ ಸಂಪ್ರದಾಯಗಳನ್ನು ಮುರಿಯುವುದು ಮತ್ತು ಅಗತ್ಯವಿರುವಲ್ಲಿ ಸುಧಾರಣೆಯನ್ನು ಪ್ರಾರಂಭಿಸುವುದಾಗಿದೆ. ನೀವು ಯಾವಾಗಲೂ ನಿಮ್ಮ ಪ್ರೀತಿಯನ್ನು ನನ್ನ ಮೇಲೆ ಸುರಿಸಿದ್ದೀರಿ. ಆದ್ದರಿಂದ ಇಂದು ನಾನು ನಿಮ್ಮ ಮುಂದೆ ವಿನಂತಿಯೊಂದಿಗೆ, ವಿನಮ್ರ ಮನವಿಯೊಂದಿಗೆ ಬಂದಿದ್ದೇನೆ. ನಾನು ನಿಮ್ಮಿಂದ ಏನನ್ನಾದರೂ ಕೇಳಬಹುದೇ? ಹೌದು, ನೀವು ಅದನ್ನು ಪೂರ್ಣ ಹೃದಯದಿಂದ ನೀಡುತ್ತೀರಿ ಎಂಬುದು ನನಗೆ ತಿಳಿದಿದೆ! ನೀವು ಈಗಾಗಲೇ ಈ ರಾಷ್ಟ್ರ ನಿರ್ಮಾಣದ ಮಹಾಯಜ್ಞಕ್ಕೆ ಅಪಾರ ಕೊಡುಗೆ ನೀಡುತ್ತಿದ್ದೀರಿ, ಆದರೆ ರಾಷ್ಟ್ರದ ಪ್ರಸ್ತುತ ಆದ್ಯತೆಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಪುನರುಚ್ಚರಿಸಲು ನಾನು ಬಯಸುತ್ತೇನೆ. ಉದಾಹರಣೆಗೆ, ಸ್ವದೇಶಿ ಚಳುವಳಿಯು ಐತಿಹಾಸಿಕವಾಗಿ ಆರ್ಯ ಸಮಾಜದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ಇಂದು, ರಾಷ್ಟ್ರವು ಮತ್ತೊಮ್ಮೆ "ವೋಕಲ್ ಫಾರ್ ಲೋಕಲ್" ಆಗಲು ಸ್ವದೇಶಿ ಎಂಬ ಕರೆಯನ್ನು ಕೈಗೆತ್ತಿಕೊಂಡಂತೆ, ಈ ಪ್ರಯತ್ನದಲ್ಲಿ ನಿಮ್ಮ ಪಾತ್ರವು ಇನ್ನಷ್ಟು ಮಹತ್ವದ್ದಾಗಿದೆ.

ಸ್ನೇಹಿತರೆ,

ಕೆಲವು ಸಮಯದ ಹಿಂದೆ, ದೇಶವು ಜ್ಞಾನ ಭಾರತಂ ಮಿಷನ್ ಪ್ರಾರಂಭಿಸಿತು ಎಂಬುದು ನಿಮಗೆ ನೆನಪಿರಬಹುದು. ಭಾರತದ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಸಂರಕ್ಷಿಸುವುದು ಇದರ ಉದ್ದೇಶವಾಗಿದೆ. ಯುವ ಪೀಳಿಗೆ ಅವರೊಂದಿಗೆ ಸಂಪರ್ಕ ಸಾಧಿಸಿದಾಗ ಮತ್ತು ಅವುಗಳ ಮಹತ್ವವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಅಪರಿಮಿತ ಜ್ಞಾನದ ಈ ಅಮೂಲ್ಯ ಸಂಪತ್ತನ್ನು ನಿಜವಾಗಿಯೂ ರಕ್ಷಿಸಬಹುದು. ಆದ್ದರಿಂದ, ನಾನು ಆರ್ಯ ಸಮಾಜಕ್ಕೆ ಮನವಿ ಮಾಡುತ್ತೇನೆ. ಭಾರತದ ಪವಿತ್ರ ಪ್ರಾಚೀನ ಗ್ರಂಥಗಳನ್ನು ಅನ್ವೇಷಿಸಲು ಮತ್ತು ಸಂರಕ್ಷಿಸಲು ನೀವು 150 ವರ್ಷಗಳಿಂದ ಅವಿಶ್ರಾಂತವಾಗಿ ಕೆಲಸ ಮಾಡಿದ್ದೀರಿ. ತಲೆಮಾರುಗಳಿಂದ, ಆರ್ಯ ಸಮಾಜದ ಅನುಯಾಯಿಗಳು ನಮ್ಮ ಧರ್ಮಗ್ರಂಥಗಳನ್ನು ಅವುಗಳ ಮೂಲ ರೂಪದಲ್ಲಿ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜ್ಞಾನ ಭಾರತಂ ಮಿಷನ್ ಈಗ ಈ ಪ್ರಯತ್ನವನ್ನು ರಾಷ್ಟ್ರೀಯ ಮಟ್ಟದಲ್ಲಿ ಮುಂದಕ್ಕೆ ಕೊಂಡೊಯ್ಯುತ್ತದೆ. ಇದನ್ನು ನಿಮ್ಮ ಸ್ವಂತ ಅಭಿಯಾನವೆಂದು ಪರಿಗಣಿಸಿ, ಇದಕ್ಕೆ ಕೊಡುಗೆ ನೀಡಿ. ನಿಮ್ಮ ಗುರುಕುಲಗಳು ಮತ್ತು ಸಂಸ್ಥೆಗಳ ಮೂಲಕ, ಯುವಕರು ಈ ಹಸ್ತಪ್ರತಿಗಳನ್ನು ಅಧ್ಯಯನ ಮಾಡಲು ಮತ್ತು ಸಂಶೋಧಿಸುವುದನ್ನು ಪ್ರೋತ್ಸಾಹಿಸಿ.

ಮಹರ್ಷಿ ದಯಾನಂದಜಿ ಅವರ 200ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನಾನು 'ಯಜ್ಞ'ಗಳಲ್ಲಿ (ಪವಿತ್ರ ಆಚರಣೆಗಳು) ಬಳಸುವ ಧಾನ್ಯಗಳ ಬಗ್ಗೆ ಮಾತನಾಡಿದ್ದೆ. ಯಜ್ಞದಲ್ಲಿ ಶ್ರೀ ಅನ್ನ(ಸಿರಿಧಾನ್ಯ) ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ಆಚರಣೆಗಳಲ್ಲಿ ಬಳಸುವ ಧಾನ್ಯಗಳನ್ನು ವಿಶೇಷವಾಗಿ ಶುದ್ಧವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ನಾವು ನಮ್ಮ ಪ್ರಾಚೀನ ಸಿರಿಧಾನ್ಯಗಳ ಸಂಪ್ರದಾಯವಾದ ನಮ್ಮ ಶ್ರೀ ಅನ್ನ ಪರಂಪರೆಯನ್ನು ಸಹ ಉತ್ತೇಜಿಸಬೇಕು. ಈ ಧಾನ್ಯಗಳ ಒಂದು ಗಮನಾರ್ಹ ಅಂಶವೆಂದರೆ ಅವುಗಳನ್ನು ನೈಸರ್ಗಿಕವಾಗಿ ಬೆಳೆಯಲಾಗುತ್ತದೆ. ಆಚಾರ್ಯ ಜಿ ಅವರು ಆಳವಾಗಿ ವಿವರಿಸಿದ ನೈಸರ್ಗಿಕ ಕೃಷಿಯು ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯ ಪ್ರಮುಖ ಅಡಿಪಾಯವಾಗಿತ್ತು. ಇಂದು ಜಗತ್ತು ಮತ್ತೊಮ್ಮೆ ಅದರ ಮೌಲ್ಯವನ್ನು ಗುರುತಿಸುತ್ತಿದೆ. ನೈಸರ್ಗಿಕ ಕೃಷಿಯ ಆರ್ಥಿಕ ಮತ್ತು ಆಧ್ಯಾತ್ಮಿಕ ಅಂಶಗಳ ಬಗ್ಗೆ ಜಾಗೃತಿ ಮೂಡಿಸಲು ನಾನು ಆರ್ಯ ಸಮಾಜವನ್ನು ಒತ್ತಾಯಿಸುತ್ತೇನೆ.

ಸ್ನೇಹಿತರೆ,

ಇನ್ನೊಂದು ಪ್ರಮುಖ ವಿಷಯವೆಂದರೆ, ಅದು ನೀರಿನ ಸಂರಕ್ಷಣೆ. ಇಂದು ದೇಶವು ಪ್ರತಿ ಹಳ್ಳಿಗೂ ಸ್ವಚ್ಛ ನೀರು ತರಲು ಜಲಜೀವನ್ ಮಿಷನ್ ಮೂಲಕ ಕೆಲಸ ಮಾಡುತ್ತಿದೆ. ಜಲ ಜೀವನ್ ಮಿಷನ್ ವಿಶ್ವದ ಅತ್ಯಂತ ವಿಶಿಷ್ಟ ಅಭಿಯಾನಗಳಲ್ಲಿ ಒಂದಾಗಿದೆ. ಆದಾಗ್ಯೂ, ಭವಿಷ್ಯದ ಪೀಳಿಗೆಗೆ ಸಾಕಷ್ಟು ನೀರು ಉಳಿದರೆ ಮಾತ್ರ ಈ ವ್ಯವಸ್ಥೆಗಳು ತಮ್ಮ ಉದ್ದೇಶವನ್ನು ಪೂರೈಸುತ್ತವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದನ್ನು ಸಾಧಿಸಲು, ನಾವು ಹನಿ ತ್ತೇಜಿಸುತ್ತಿದ್ದೇವೆ. ದೇಶಾದ್ಯಂತ ಈಗಾಗಲೇ 60,000ಕ್ಕೂ ಹೆಚ್ಚು ಅಮೃತ ಸರೋವರಗಳನ್ನು(ಪವಿತ್ರ ಕೊಳಗಳು) ನಿರ್ಮಿಸಿದ್ದೇವೆ. ಆದರೆ ಸರ್ಕಾರದ ಪ್ರಯತ್ನಗಳ ಜೊತೆಗೆ ಸಮಾಜವೂ ಮುಂದೆ ಬರಬೇಕು. ಸಾಂಪ್ರದಾಯಿಕವಾಗಿ, ಪ್ರತಿಯೊಂದು ಹಳ್ಳಿಯಲ್ಲಿ ಕೊಳಗಳು, ಸರೋವರಗಳು, ಬಾವಿಗಳು ಮತ್ತು ನೀರಿನ ಟ್ಯಾಂಕ್‌ಗಳು ಇದ್ದವು, ಆದರೆ ಬದಲಾಗುತ್ತಿರುವ ಕಾಲದೊಂದಿಗೆ, ಅವುಗಳಲ್ಲಿ ಹಲವು ನಿರ್ಲಕ್ಷಿಸಲ್ಪಟ್ಟವು ಮತ್ತು ಒಣಗಿ ಹೋಗಿದ್ದವು. ಈ ನೈಸರ್ಗಿಕ ನೀರಿನ ಮೂಲಗಳನ್ನು ಮರುಸ್ಥಾಪಿಸುವ ಮತ್ತು ರಕ್ಷಿಸುವ ಅಗತ್ಯತೆಯ ಬಗ್ಗೆ ನಾವು ನಿರಂತರವಾಗಿ ಜನರಿಗೆ ಅರಿವು ಮೂಡಿಸಬೇಕು. "ಮಳೆ ನೀರು ಕೊಯ್ಲು", ಇದು ಸರ್ಕಾರಿ ಅಭಿಯಾನವಾಗಿದೆ, ಪುನರ್ಭರ್ತಿ(ಮರುಪೂರಣ) ಬಾವಿಗಳನ್ನು ನಿರ್ಮಿಸುವುದು ಮತ್ತು ಅಂತರ್ಜಲ ಮರುಪೂರಣಕ್ಕಾಗಿ ಮಳೆನೀರು ಬಳಸುವುದು ಈ ಸಮಯದ ಅಗತ್ಯವಾಗಿದೆ.

ಸ್ನೇಹಿತರೆ,

ಸ್ವಲ್ಪ ಸಮಯದಿಂದ, "ಏಕ್ ಪೆಡ್ ಮಾ ಕೆ ನಾಮ್"(ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನವು ಸಹ ಅಪಾರ ಯಶಸ್ಸು ಕಂಡಿದೆ. ಇದು ಕೆಲವು ದಿನಗಳು ಅಥವಾ ವರ್ಷಗಳ ಅಭಿಯಾನವಲ್ಲ. ಮರ ನೆಡುವುದು ನಿರಂತರ ಧ್ಯೇಯವಾಗಿರಬೇಕು. ಆರ್ಯ ಸಮಾಜವು ಈ ಉದಾತ್ತ ಉದ್ದೇಶದೊಂದಿಗೆ ಹೆಚ್ಚು ಹೆಚ್ಚು ಜನರನ್ನು ಸಂಪರ್ಕಿಸಬಹುದು.

ಸ್ನೇಹಿತರೆ,

ನಮ್ಮ ವೇದಗಳು ನಮಗೆ ಕಲಿಸುತ್ತವೆ: “ಸಂಚ್ಛಧ್ವಂ ಸಂವಧ್ವಂ ಸನ್ ವೋ ಮನಾಂಸಿ ಜ್ಞಾತಮ್” ಅಂದರೆ “ನಾವು ಒಟ್ಟಿಗೆ ನಡೆಯೋಣ, ಒಟ್ಟಿಗೆ ಮಾತನಾಡೋಣ ಮತ್ತು ಪರಸ್ಪರರ ಮನಸ್ಸನ್ನು ಅರ್ಥ ಮಾಡಿಕೊಳ್ಳೋಣ.” ಮೂಲಭೂತವಾಗಿ, ಇದು ಪರಸ್ಪರ ಗೌರವ ಮತ್ತು ಚಿಂತನೆಯ ಸಾಮರಸ್ಯದ ಕರೆಯಾಗಿದೆ. ನಾವು ಈ ವೈದಿಕ ಸಂದೇಶವನ್ನು ರಾಷ್ಟ್ರದ ಕರೆಯಂತೆ ನೋಡಬೇಕ, ರಾಷ್ಟ್ರದ ನಿರ್ಣಯಗಳನ್ನು ನಮ್ಮ ಸ್ವಂತ ವೈಯಕ್ತಿಕ ನಿರ್ಣಯಗಳನ್ನಾಗಿ ಮಾಡಿಕೊಳ್ಳಬೇಕು, ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ಸಾಮೂಹಿಕ ಪ್ರಯತ್ನಗಳನ್ನು ಮುನ್ನಡೆಸಬೇಕು. ಕಳೆದ 150 ವರ್ಷಗಳಲ್ಲಿ, ಆರ್ಯ ಸಮಾಜವು ತನ್ನ ಕೆಲಸದ ಮೂಲಕ ಈ ಚೈತನ್ಯವನ್ನು ಸಾಕಾರಗೊಳಿಸಿದೆ. ಈ ಚೈತನ್ಯವನ್ನೇ ನಾವು ಬಲಪಡಿಸಬೇಕು ಮತ್ತು ಎತ್ತಿಹಿಡಿಯಬೇಕು. ಮಹರ್ಷಿ ದಯಾನಂದ ಸರಸ್ವತಿ ಅವರ ಬೋಧನೆಗಳು ಮಾನವತೆಯನ್ನು ಕಲ್ಯಾಣದ ಹಾದಿಯಲ್ಲಿ ಮಾರ್ಗದರ್ಶನ ಮಾಡುವುದನ್ನು ಮುಂದುವರಿಸುತ್ತವೆ ಎಂಬ ವಿಶ್ವಾಸ ನನಗಿದೆ. ಈ ನಂಬಿಕೆಯೊಂದಿಗೆ, ಆರ್ಯ ಸಮಾಜದ 150ನೇ ವಾರ್ಷಿಕೋತ್ಸವದಂದು ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಲ್ಲರಿಗೂ ತುಂಬು ಧನ್ಯವಾದಗಳು, ನಮಸ್ಕಾರ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
List of Outcomes: Visit of His Highness Sheikh Mohamed bin Zayed Al Nahyan, President of UAE to India
January 19, 2026
S.NoAgreements / MoUs / LoIsObjectives

1

Letter of Intent on Investment Cooperation between the Government of Gujarat, Republic of India and the Ministry of Investment of the United Arab Emirates for Development of Dholera Special Investment region

To pursue investment cooperation for UAE partnership in development of the Special Investment Region in Dholera, Gujarat. The envisioned partnership would include the development of key strategic infrastructure, including an international airport, a pilot training school, a maintenance, repair and overhaul (MRO) facility, a greenfield port, a smart urban township, railway connectivity, and energy infrastructure.

2

Letter of Intent between the Indian National Space Promotion and Authorisation Centre (IN-SPACe) of India and the Space Agency of the United Arab Emirates for a Joint Initiative to Enable Space Industry Development and Commercial Collaboration

To pursue India-UAE partnership in developing joint infrastructure for space and commercialization, including launch complexes, manufacturing and technology zones, incubation centre and accelerator for space start-ups, training institute and exchange programmes.

3

Letter of Intent between the Republic of India and the United Arab Emirates on the Strategic Defence Partnership

Work together to establish Strategic Defence Partnership Framework Agreement and expand defence cooperation across a number of areas, including defence industrial collaboration, defence innovation and advanced technology, training, education and doctrine, special operations and interoperability, cyber space, counter terrorism.

4

Sales & Purchase Agreement (SPA) between Hindustan Petroleum Corporation Limited, (HPCL) and the Abu Dhabi National Oil Company Gas (ADNOC Gas)

The long-term Agreement provides for purchase of 0.5 MMPTA LNG by HPCL from ADNOC Gas over a period of 10 years starting from 2028.

5

MoU on Food Safety and Technical requirements between Agricultural and Processed Food Products Export Development Authority (APEDA), Ministry of Commerce and Industry of India, and the Ministry of Climate Change and Environment of the United Arab Emirates.

The MoU provides for sanitary and quality parameters to facilitate the trade, exchange, promotion of cooperation in the food sector, and to encourage rice, food products and other agricultural products exports from India to UAE. It will benefit the farmers from India and contribute to food security of the UAE.

S.NoAnnouncementsObjective

6

Establishment of a supercomputing cluster in India.

It has been agreed in principle that C-DAC India and G-42 company of the UAE will collaborate to set up a supercomputing cluster in India. The initiative will be part of the AI India Mission and once established the facility be available to private and public sector for research, application development and commercial use.

7

Double bilateral Trade to US$ 200 billion by 2032

The two sides agreed to double bilateral trade to over US$ 200 billion by 2032. The focus will also be on linking MSME industries on both sides and promote new markets through initiatives like Bharat Mart, Virtual Trade Corridor and Bharat-Africa Setu.

8

Promote bilateral Civil Nuclear Cooperation

To capitalise on the new opportunities created by the Sustainable Harnessing and Advancement of Nuclear Energy for Transforming India (SHANTI) Act 2025, it was agreed to develop a partnership in advance nuclear technologies, including development and deployment of large nuclear reactors and Small Modular Reactors (SMRs) and cooperation in advance reactor systems, nuclear power plant operations and maintenance, and Nuclear Safety.

9

Setting up of offices and operations of UAE companies –First Abu Dhabi Bank (FAB) and DP World in the GIFT City in Gujarat

The First Abu Dhabi Bank will have a branch in GIFT that will promote trade and investment ties. DP World will have operations from the GIFT City, including for leasing of ships for its global operations.

10

Explore Establishment of ‘Digital/ Data Embassies’

It has been agreed that both sides would explore the possibility of setting up Digital Embassies under mutually recognised sovereignty arrangements.

11

Establishment of a ‘House of India’ in Abu Dhabi

It has been agreed in Principle that India and UAE will cooperate on a flagship project to establish a cultural space consisting of, among others, a museum of Indian art, heritage and archaeology in Abu Dhabi.

12

Promotion of Youth Exchanges

It has been agreed in principle to work towards arranging visits of a group of youth delegates from either country to foster deeper understanding, academic and research collaboration, and cultural bonds between the future generations.