"ಕಳೆದ 7 ವರ್ಷಗಳಲ್ಲಿ, ದೆಹಲಿಯ ಮುಚ್ಚಿದ ಕೋಣೆಗಳಿಂದ ದೇಶದ ಮೂಲೆ ಮೂಲೆಗೆ ಸರ್ಕಾರ ಹೇಗೆ ಬಂದಿದೆ ಎಂಬುದನ್ನು ಮಹೋಬಾ ಕಣ್ಣಾರೆ ಕಂಡಿದೆ" ಎಂದು ಹೇಳಿಕೆ.
"ರೈತರನ್ನು ಸಮಸ್ಯೆಗಳಲ್ಲಿ ಸಿಲುಕಿಸುವುದು ಕೆಲವು ರಾಜಕೀಯ ಪಕ್ಷಗಳಿಗೆ ಸದಾ ಆಧಾರವಾಗಿದೆ. ಅವರು ಸಮಸ್ಯೆಗಳ ರಾಜಕೀಯವನ್ನು ಮಾಡುತ್ತಾರೆ, ಆದರೆ ನಾವು ಪರಿಹಾರಗಳ ರಾಷ್ಟ್ರೀಯ ನೀತಿಯನ್ನು ಅನುಸರಿಸುತ್ತೇವೆ"
"ಮೊದಲ ಬಾರಿಗೆ, ಬುಂದೇಲ್ ಖಂಡ್ ನ ಜನರು ಸರ್ಕಾರ ತನ್ನ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ನೋಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಉತ್ತರ ಪ್ರದೇಶವನ್ನು ಲೂಟಿ ಮಾಡಿಯೂ ಸುಸ್ತಾಗಲಿಲ್ಲ, ನಾವು ಕೆಲಸ ಮಾಡುವುದರಿಂದ ಸುಸ್ತಾಗಿಲ್ಲ"
ವಂಶಪಾರಂಪರ್ಯ ಸರ್ಕಾರಗಳು ರೈತರನ್ನು ಅಭಾವದಲ್ಲಿ ಇಟ್ಟಿದ್ದವು. ಅವರು ರೈತರ ಹೆಸರಿನಲ್ಲಿ ಘೋಷಣೆಗಳನ್ನು ಮಾಡುತ್ತಿದ್ದರು, ಆದರೆ ಒಂದೇ ಒಂದು ಪೈಸೆ ಸಹ ರೈತನನ್ನು ತಲುಪುತ್ತಿರಲಿಲ್ಲ"
"ಕರಮ್ ಯೋಗಿಗಳ ಡಬಲ್ ಎಂಜಿನ್ ಸರ್ಕಾರವು ಬುಂದೇಲ್ ಖಂಡ್ ನ ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ"

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಮಹೋಬಾದ ಜನತೆಗೆ ನನ್ನ ನಮಸ್ಕಾರಗಳು, ಅಲಾಹ ಮತ್ತು ಉದಲ್ ಹಾಗು ಚಂದೇಲರ ಶೌರ್ಯ ಪ್ರತೀ ಕಣದಲ್ಲಿಯೂ ತುಂಬಿಕೊಂಡಿರುವ ಭೂಮಿ ಇದು.

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಜನಪ್ರಿಯ ಕರ್ಮಯೋಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಜೀ, ಉತ್ತರ ಪ್ರದೇಶ ಸರಕಾರದ ಸಚಿವರಾದ ಡಾ. ಮಹೇಂದ್ರ ಸಿಂಗ್ ಜೀ, ಮತ್ತು ಜಿ.ಎಸ್. ದೇಶಮುಖ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಆರ್.ಕೆ.ಸಿಂಗ್ ಪಟೇಲ್ ಜೀ, ಮತ್ತು ಶ್ರೀ ಪುಷ್ಪೇಂದ್ರ ಸಿಂಗ್ ಜೀ, ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಮತ್ತು ವಿಧಾನ ಸಭೆಯ ಸಹೋದ್ಯೋಗಿಗಳಾದ ಶ್ರೀ ಸ್ವತಂತ್ರ ದೇವ್ ಸಿಂಗ್ ಜೀ, ಮತ್ತು ಶ್ರೀ ರಾಕೇಶ್ ಗೋಸ್ವಾಮೀ ಜೀ, ಇತರ ಜನಪ್ರತಿನಿಧಿಗಳೇ ಮತ್ತು ಇಲ್ಲಿ ಹಾಜರಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ!

ಚಾರಿತ್ರಿಕ ಸ್ಥಳವಾದ ಮಹೋಬಾಕ್ಕೆ ಭೇಟಿ ನೀಡುವುದು ಒಟ್ಟಾರೆ ಒಂದು ವಿಭಿನ್ನ ಅನುಭವ. ದೇಶದ ಸ್ವಾತಂತ್ರ್ಯದಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಬುಡಕಟ್ಟು ಜನರ ಕೊಡುಗೆಯನ್ನು ಸ್ಮರಿಸಲು ವಾರ ಕಾಲಾವಧಿಯ ಜನಜಾತೀಯ ಗೌರವ ದಿವಸವನ್ನು ದೇಶವು ಆಚರಿಸುತ್ತಿದೆ. ಇಂದು ವೀರ ಅಲ್ಹಾ ಮತ್ತು ಉದಲ್ ಅವರ ಈ ಪವಿತ್ರ ಭೂಮಿಯಲ್ಲಿ  ಕಾರ್ಯಕ್ರಮಕ್ಕೆ ಆಗಮಿಸುವಂತಾಗಿರುವುದು  ನನಗೆ ಸಿಕ್ಕಿದ ಅಪೂರ್ವ ಅವಕಾಶ. ಗುಲಾಮಗಿರಿಯ ಸಂದರ್ಭದಲ್ಲಿ ಭಾರತದಲ್ಲಿ ಹೊಸ ಪ್ರಜ್ಞೆಯನ್ನು ಮೂಡಿಸಿದ ಗುರು ನಾನಕ್ ದೇವ್ ಜೀ ಅವರ ಪ್ರಕಾಶ ಪುರಬ್ ಕೂಡಾ ಇಂದು. ಗುರು ಪುರಬ್ ಅಂಗವಾಗಿ ಜಗತ್ತಿನ ಮತ್ತು ದೇಶದ ಜನತೆಗೆ ನಾನು ಶುಭಾಶಯಗಳನು ಕೋರುತ್ತೇನೆ. ಇಂದಿನ ದಿನ ಭಾರತದ ವೀರ ಪುತ್ರಿ, ಬುಂದೇಲ್‌ಖಂಡದ ಹೆಮ್ಮೆ, ವೀರ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನ ಕೂಡಾ. ಈ ಕಾರ್ಯಕ್ರಮದ ಬಳಿಕ ನಾನು ಝಾನ್ಸಿಗೆ ಭೇಟಿ ಕೊಡಲಿದ್ದೇನೆ, ಅಲ್ಲಿ ರಕ್ಷಣೆಗೆ ಸಂಬಂಧಿಸಿದ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ಏಳು ವರ್ಷಗಳಲ್ಲಿ ನಾವು ಹೇಗೆ ಸರಕಾರವನ್ನು ದಿಲ್ಲಿಯ ಮುಚ್ಚಿದ ಕೊಠಡಿಗಳಿಂದ ಹೊರಗೆ ತಂದೆವು ಮತ್ತು ಅದನ್ನು ದೇಶದ ಮೂಲೆ ಮೂಲೆಗೂ ತಲುಪುವಂತೆ ಮಾಡಿದೆವು ಎಂಬುದಕ್ಕೆ ಮಹೋಬಾ ಸಾಕ್ಷಿ. ದೇಶದ ಬಡ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಬದುಕಿನಲ್ಲಿ ಸಾಕಷ್ಟು ಮತ್ತು ಅರ್ಥಪೂರ್ಣ ಬದಲಾವಣೆಗಳನ್ನು ತಂದ ಯೋಜನೆಗಳು ಹಾಗು ನಿರ್ಧಾರಗಳಿಗೆ ಈ ಭೂಮಿ ಸಾಕ್ಷಿಯಾಗಿದೆ. ಕೆಲವು ತಿಂಗಳುಗಳ ಹಿಂದೆ ಇಡೀ ದೇಶಕ್ಕೆ ಉಜ್ವಲಾ ಯೋಜನೆಯ ಎರಡನೆಯ ಹಂತವನ್ನು ಇಲ್ಲಿಂದಲೇ ಕಾರ್ಯಾರಂಭ ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ದೇಶದ ಕೋಟ್ಯಾಂತರ ಮುಸ್ಲಿಂ ಸಹೋದರಿಯರಿಗೆ ನಾನು ತ್ರಿವಳಿ ತಲಾಖ್ ನಿಂದ ವಿಮೋಚನೆ ಮಾಡುವುದಾಗಿ ಮಹೋಬಾದಿಂದಲೇ ಘೋಷಣೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಮಹೋಬಾದಲ್ಲಿ ನೀಡಲಾದ ಭರವಸೆಯನ್ನು ಈಡೇರಿಸಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ನಾನು ಬುಂದೇಲ್‌ಖಂಡದ ನನ್ನ ಪ್ರೀತಿಯ ರೈತ ಸಹೋದರರಿಗೆ ಮತ್ತು ಸಹೋದರಿಯರಿಗೆ ದೊಡ್ಡ ಉಡುಗೊರೆಯೊಂದನ್ನು ಹಸ್ತಾಂತರಿಸಲು ಇಲ್ಲಿಗೆ ಬಂದಿದ್ದೇನೆ. ಇಂದು ನನಗೆ ಅರ್ಜುನ್ ಸಹಾಯಕ್ ಯೋಜನಾ, ರಟೌಲಿ ಅಣೆಕಟ್ಟು ಯೋಜನೆ, ಭಾವೋನಿ ಅಣೆಕಟ್ಟು ಯೋಜನೆ ಮತ್ತು ಮಜ್ಗಾಂವ್-ಚಿಲ್ಲಿ ತುಂತುರು ನೀರಾವರಿ ಯೋಜನಾಗಳನ್ನು ಉದ್ಘಾಟಿಸುವ ಅವಕಾಶ ದೊರೆತಿದೆ. ಈ ಯೋಜನೆಗಳನ್ನು 3,000 ಕೋ.ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅನುಷ್ಟಾನಕ್ಕೆ ತರಲಾಗಿದೆ ಮತ್ತು ಅವುಗಳಿಂದ ಮಹೋಬಾದ ಜನತೆಗೆ ಮಾತ್ರವಲ್ಲ ಹಮೀರ್ಪುರ, ಬಂಡಾ ಮತ್ತು ಲಲಿತ್ಪುರ ಜಿಲ್ಲೆಗಳಿಗೆ, ಹಾಗು ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರಯೋಜನವಾಗಲಿವೆ. ನಾಲ್ಕು ಲಕ್ಷಕ್ಕೂ ಅಧಿಕ ಜನರಿಗೆ ಇದರಿಂದ ಕುಡಿಯುವ ನೀರು ಒದಗಲಿದೆ. ತಲೆಮಾರುಗಳಿಂದ ನೀರಿಗಾಗಿ ನಿರೀಕ್ಷೆ ಮಾಡುತ್ತಿದ್ದ ಕಾಯುವಿಕೆ ಇಂದು ಕೊನೆಗೊಳ್ಳಲಿದೆ.

ಸ್ನೇಹಿತರೇ,

ನಿಮ್ಮ ಉತ್ಸಾಹವನ್ನು ನಾನು ಸ್ವಾಗತಿಸುತ್ತೇನೆ. ನಿಮ್ಮ ಪ್ರೀತಿ ನನಗೆ ಬಹಳ ದೊಡ್ಡದು. ಆದರೆ ನಾನು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ, ದಯವಿಟ್ಟು ಮುಂದೆ ಬರಬೇಡಿ, ಅಲ್ಲಿ ಸ್ಥಳಾವಕಾಶ ಇಲ್ಲ್ಲ. ಮತ್ತು ದಯವಿಟ್ಟು ಸಮಾಧಾನ ಮತ್ತು ಶಾಂತ ಸ್ಥಿತಿಯನ್ನು ಕಾಯ್ದುಕೊಳ್ಳಿ.

ಸ್ನೇಹಿತರೇ,

ಗುರು ನಾನಕ್ ದೇವ್ ಜೀ ಹೇಳಿದ್ದಾರೆ:

पहलां पानी जीओ है, जित हरिया सभ कोय!!

ಅಂದರೆ ನೀರು ಇಡೀ ವಿಶ್ವಕ್ಕೆ ಜೀವನವನ್ನು ಕೊಡುತ್ತದೆ, ಆದುದರಿಂದ ನೀರಿಗೆ ಸದಾ ಗರಿಷ್ಟ ಆದ್ಯತೆ ಕೊಡಬೇಕು.ಮಹೋಬಾ ಮತ್ತು ಈ ಇಡೀ ವಲಯವನ್ನು ಜಲ ಸಂರಕ್ಷಣೆ ಮತ್ತು ಜಲ ನಿರ್ವಹಣೆಗೆ ಸಂಬಂಧಿಸಿ ನೂರಾರು ವರ್ಷಗಳ ಹಿಂದೆಯೇ ಅತ್ಯುತ್ತಮ ಮಾದರಿಯನ್ನಾಗಿಸಲಾಗಿತ್ತು. ಬುಂದೇಲರು, ಪರಿಹಾರರು, ಮತ್ತು ಚಂದೇಲ ರಾಜರು ಅವರ ಆಡಳಿತದಲ್ಲಿ ನಿರ್ಮಾಣ ಮಾಡಿದ ಕೆರೆಗಳು ಜಲ ಸಂರಕ್ಷಣೆಗೆ ಈಗಲೂ ಬಹಳ ದೊಡ್ಡ ಉದಾಹರಣೆಗಳಾಗಿವೆ. ಸಿಮ್ಢ್, ಬೆಟ್ವಾ, ಧಾಸನ್, ಕೆನ್ ಮತ್ತು ನರ್ಮದಾ ನದಿಗಳು ಬುಂದೇಲ್‌ಖಂಡಕ್ಕೆ ಸಮೃದ್ಧಿ ಮತ್ತು ಪ್ರಖ್ಯಾತಿಯನ್ನು ನೀಡಿವೆ. ಭಗವಾನ್ ರಾಮನಿಗೆ ವನವಾಸದಲ್ಲಿ ಸಾಂತ್ವನ ನೀಡಿದಂತಹವು ಮತ್ತು ಅರಣ್ಯ ಸಂಪತ್ತನ್ನು ನೀಡಿ ಆಶೀರ್ವಾದ ಮಾಡಿದಂತಹವು  ಇದೇ ಚಿತ್ರಕೂಟ ಮತ್ತು ಬುಂದೇಲ್‌ಖಂಡಗಳು.

ಆದರೆ ಸ್ನೇಹಿತರೇ,

ಈ ಪ್ರದೇಶ ಹೇಗೆ ಕಾಲಾನುಕ್ರಮದಲ್ಲಿ ನೀರಿಗೆ ಸಂಬಂಧಿಸಿದ ಸವಾಲುಗಳ ಮತ್ತು ವಲಸೆಯ ಸಮಸ್ಯಾಕೇಂದ್ರ ಆಯಿತು ಎಂಬುದು ಪ್ರಶ್ನೆ. ಇಲ್ಲಿಯ ಹೆಣ್ಣು ಮಕ್ಕಳು ನೀರು ತುಂಬಾ ಇರುವ ಪ್ರದೇಶಗಳಿಗೆ ಮದುವೆಯಾಗಿ ಹೋಗಲು ಆಶಿಸಿದರು ಮತ್ತು ಈ ಪ್ರದೇಶದ ಜನರು ಈ ವಲಯದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಹಿಂದೇಟು ಹಾಕಿದರು. ಮಹೋಬಾ ಮತ್ತು ಬುಂದೇಲ್‌ಖಂಡದ ಜನತೆ ಈ ಪ್ರಶ್ನೆಗಳಿಗೆ ಬಹಳ ಚೆನ್ನಾಗಿ ಉತ್ತರವನ್ನು ತಿಳಿದಿದ್ದಾರೆ.

ದಿಲ್ಲಿಯಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಆಡಳಿತ ಮಾಡುತ್ತಿದ್ದವರು ಈ ವಲಯವನ್ನು ಹಾಳು ಮಾಡಲು ಯಾವುದನ್ನೂ ಉಳಿಸಿಲ್ಲ. ಇದು ಯಾರಿಗೂ ಗೊತ್ತಿಲ್ಲದ ಸಂಗತಿ ಅಲ್ಲ. ಇಲ್ಲಿಯ ಅರಣ್ಯಗಳು ಮತ್ತು ಸಂಪನ್ಮೂಲಗಳನ್ನು ಮಾಫಿಯಾಗಳಿಗೆ ಹೇಗೆ ಹಸ್ತಾಂತರಿಸಲಾಯಿತು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಉತ್ತರ ಪ್ರದೇಶದಲ್ಲಿ ಮಾಫಿಯಾವನ್ನು ಮಟ್ಟ ಹಾಕುವಾಗ ಕೆಲವು ಜನರು ಗದ್ದಲ ಎಬ್ಬಿಸುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ. ಈ ಜನರು ಎಷ್ಟೇ ಸಮಸ್ಯೆಗಳನ್ನು ತಂದೊಡ್ಡುತ್ತಿರಲಿ ತೊಂದರೆ ಇಲ್ಲ, ಬುಂದೇಲ್‌ಖಂಡದ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳುವುದಿಲ್ಲ.

ಸ್ನೇಹಿತರೇ,

ಈ ಜನರು ಬುಂದೇಲ್‌ಖಂಡವನ್ನು ಹೇಗೆ ಪರಿಗಣಿಸಿದ್ದರು ಎಂಬುದನ್ನು ಇಲ್ಲಿಯ ಜನತೆ ಎಂದಿಗೂ ಮರೆಯಲಾರರು. ಕೊಳವೆ ಬಾವಿಗಳನ್ನು ಕೊರೆದು, ಕೈಪಂಪುಗಳನ್ನು ಸ್ಥಾಪಿಸುವ ಬಗ್ಗೆ ಬಹಳಷ್ಟು ಮಾತುಗಳನ್ನು ಅವರು ಆಡಿದ್ದರು, ಆದರೆ ಈ ಮೊದಲಿನ ಸರಕಾರಗಳು ಅಂತರ್ಜಲದ ಗೈರುಹಾಜರಿಯಲ್ಲಿ ನೀರು ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಸ್ಪಷ್ಟಪಡಿಸಿರಲಿಲ್ಲ. ಬಹಳ ಅದ್ದೂರಿಯಿಂದ ಶಿಲಾನ್ಯಾಸ ಮಾಡಲಾದ ಕೆರೆ ಕಟ್ಟೆಗಳಿಗೆ ಏನಾಯಿತು ಎಂಬುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ಈ ಮೊದಲು ಸರಕಾರಗಳನ್ನು ರಚಿಸಿದವರು ಅಣೆಕಟ್ಟು ಮತ್ತು ಕೆರೆ ಕಟ್ಟೆಗಳಿಗೆ  ಸಂಬಂಧಿಸಿದ ಯೋಜನೆಗಳಲ್ಲಿ ಕಮಿಷನ್ ಹೊಡೆದುಕೊಂಡು ಬುಂದೇಲ್‌ಖಂಡವನ್ನು ಲೂಟಿ ಮಾಡಿದರು. ಬರ ಪರಿಹಾರ ಕಾಮಗಾರಿಗಳಲ್ಲೂ ಹಗರಣಗಳಾದವು ಮತ್ತು ಅವರ ಕುಟುಂಬಗಳಿಗೆ ಲಾಭ ಮಾಡಿಕೊಂಡರು. ಪ್ರತೀ ಹನಿಗೂ ನೀವು ಕಾತರಿಸುತ್ತಿರುವಾಗ ಅವರು ಅದರ ಬಗ್ಗೆ ಕನಿಷ್ಟ ಕಾಳಜಿ ವಹಿಸಿದರು.

ಸಹೋದರರೇ ಮತ್ತು ಸಹೋದರಿಯರೇ,

ಅವರ ಸಾಧನೆಗೆ ಅರ್ಜುನ್ ಸಹಾಯಕ್ ಯೋಜನೆ ಒಂದು ಉದಾಹರಣೆ. ಯೋಜನೆ ವರ್ಷಗಳಿಂದ ಬಾಕಿಯಾಗಿತ್ತು ಮತ್ತು ಪೂರ್ಣಗೊಂಡಿರಲಿಲ್ಲ. 2014 ರಲ್ಲಿ ನಾನು ಇಂತಹ ಬಾಕಿ ಉಳಿದಿರುವ ಯೋಜನೆಗಳ ಸ್ಥಿತಿ ಗತಿಯ ಬಗ್ಗೆ ಮತ್ತು ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಕೇಳಲು ಆರಂಭಿಸಿದೆ. ಅರ್ಜುನ್ ಸಹಾಯಕ್ ಯೋಜನೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸುವ ಬಗ್ಗೆ ಆಗ ಅಧಿಕಾರದಲ್ಲಿದ್ದ ಉತ್ತರ ಪ್ರದೇಶ ಸರಕಾರದ ಹಲವು ಮಟ್ಟಗಳಲ್ಲಿ ಹಲವಾರು ಬಾರಿ ಚರ್ಚೆ ಮಾಡಿದೆ. ಆದರೆ ಬುಂದೇಲ್‌ಖಂಡದ ಈ ದುಷ್ಕರ್ಮಿಗಳು  ಇಲ್ಲಿಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಆಸಕ್ತಿ ತೋರಿಸಲಿಲ್ಲ.

ಅಂತಿಮವಾಗಿ, ಈ ಯೋಜನೆಯ ಕೆಲಸಕ್ಕೆ 2017 ರಲ್ಲಿ ಯೋಗೀ ಜೀ ಅವರ ಸರಕಾರ ರಚನೆಯಾದ ಬಳಿಕ ವೇಗ ದೊರಲಿತು. ಮತ್ತು ಇಂದು ಈ ಯೋಜನೆ ಬುಂದೇಲ್‌ಖಂಡದ ಜನತೆಗೆ ಸಮರ್ಪಣೆಯಾಗಿದೆ. ದಶಕಗಳಿಂದ ಬುಂದೇಲ್‌ಖಂಡದ ಜನತೆ ಭ್ರಷ್ಟ ಸರಕಾರಗಳನ್ನು ನೋಡಿದ್ದಾರೆ. ಇದೇ ಮೊದಲ ಬಾರಿಗೆ ಬುಂದೇಲ್‌ಖಂಡದ ಜನತೆ ಅವರ ಏಳಿಗೆಗೆ ಕಾರ್ಯ ನಿರ್ವಹಿಸುವಂತಹ ಸರಕಾರವನ್ನು ನೋಡುತ್ತಿದ್ದಾರೆ. ಬುಂದೇಲ್‌ಖಂಡದ ನನ್ನ ಸಹೋದರರೇ ಮತ್ತು ಸಹೋದರಿಯರೇ ಅವರು ಉತ್ತರ ಪ್ರದೇಶವನ್ನು ಲೂಟಿ ಮಾಡುವಾಗ ಅವರಿಗೆ ಆಯಾಸ ಎಂಬುದು ಆಗಲೇ ಇಲ್ಲ ಆದರೆ ನಮಗೆ ಕೆಲಸ ಮಾಡಲು ಆಯಾಸ ಆಗುವುದೇ ಇಲ್ಲ, ಈ ಕಹಿ ಸತ್ಯವನ್ನು ಯಾರೂ ಮರೆಯಲಾರರು.

ಸ್ನೇಹಿತರೇ,

ರೈತರನ್ನು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಸಿ ಹಾಕುವುದು ಕೆಲವು ರಾಜಕೀಯ ಪಕ್ಷಗಳ ಹಾಲ್ ಮಾರ್ಕ್ ಅಂದರೆ ಅವುಗಳ  ಹೆಗ್ಗುರುತು. ಅವರು ಸಮಸ್ಯೆಗಳಲ್ಲಿ ರಾಜಕೀಯ ಮಾಡುತ್ತಾರೆ, ನಾವು ಪರಿಹಾರಗಳ ರಾಜಕೀಯ ಮಾಡುತ್ತೇವೆ. ನಮ್ಮ ಸರಕಾರ ಎಲ್ಲಾ ಭಾಗೀದಾರರ ಜೊತೆ ಸಮಾಲೋಚಿಸಿದ ಬಳಿಕ ಕೆನ್ ಬೆಟ್ವಾಕ್ಕೆ ಪರಿಹಾರ ಹುಡುಕಿತು. ಕೆನ್ –ಬೆಟ್ವಾ ಲಿಂಕ್ ಇಲ್ಲಿಯ ಲಕ್ಷಾಂತರ ರೈತರಿಗೆ ಭವಿಷ್ಯದಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯೋಗೀ ಜೀ ಸರಕಾರ ಬುಂದೇಲ್‌ಖಂಡದಲ್ಲಿ ನೀರಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಆರಂಭ ಮಾಡಿದೆ. ಇಂದು ಆರಂಭ ಮಾಡಲಾದ ಮಾಶ್ಗಾಂ-ಚಿಲ್ಲಿ ತುಂತುರು (ಸ್ಪ್ರಿಂಕ್ಲರ್)  ಯೋಜನೆ ನೀರಾವರಿಯ ಆಧುನೀಕರಣವನ್ನು ಪ್ರತಿನಿಧಿಸುತ್ತದೆ.

ಸ್ನೇಹಿತರೇ,

ನಾನು ಗುಜರಾತಿನಿಂದ ಬಂದಿದ್ದೇನೆ. ಮತ್ತು ಆಗ ಗುಜರಾತಿನ ವಸ್ತುಸ್ಥಿತಿ ಬುಂದೇಲ್‌ಖಂಡದಕ್ಕಿಂತ ಭಿನ್ನವಾಗಿರಲಿಲ್ಲ. ಆದುದರಿಂದ ನಾನು ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ನರ್ಮದಾ ಮಾತೆಯ ಆಶೀರ್ವಾದದಿಂದಾಗಿ ಸರ್ದಾರ್ ಸರೋವರ್ ಡ್ಯಾಂ ನ ನೀರು ಗುಜರಾತಿನ ಕಚ್ ಮರುಭೂಮಿಗೂ ತಲುಪುತ್ತಿದೆ. ನಾವು ಗುಜರಾತಿನಲ್ಲಿ ಪಡೆದಂತಹ ಯಶಸ್ಸನ್ನು ಬುಂದೇಲ್‌ಖಂಡದಲ್ಲಿಯೂ ಗಳಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದೇವೆ. ಸಹೋದರರೇ ಮತ್ತು ಸಹೋದರಿಯರೇ, ಗುಜರಾತಿನ ಕಚ್ ಕೂಡಾ ಬುಂದೇಲ್‌ಖಂಡದಲ್ಲಿಯಂತಹ ವಲಸೆಯನ್ನು ಸಾಕ್ಷೀಕರಿಸಿತ್ತು. ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೆ ಕಚ್ ನಲ್ಲಿ ಜನರು ವಲಸೆ ಹೋಗುತ್ತಿದ್ದುದರಿಂದ ಅಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿತ್ತು. ಆದರೆ ನನಗೆ ಸೇವೆ ಸಲ್ಲಿಸುವ ಅವಕಾಶ ದೊರಕಿದ ಬಳಿಕ ಕಚ್ ಈಗ ತ್ವರಿತಗತಿಯಿಂದ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ.

ಉತ್ತರ ಪ್ರದೇಶದ ಹಲವು ಭಾಗಗಳಿಂದ ನನ್ನ ಸಹೋದರರು  ಮತ್ತು ಸಹೋದರಿಯರು ಕಚ್ ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಮತ್ತು ಕಚ್ ನಲ್ಲಿಯ ನನ್ನ ಅನುಭವದ ಆಧಾರದಲ್ಲಿ ನಾನು ಹೇಳುತ್ತೇನೆ ನಾವು ಮತ್ತೊಮ್ಮೆ ಬುಂದೇಲ್‌ಖಂಡಕ್ಕೆ ಹೊಸ ಬದುಕು ಮತ್ತು ಶಕ್ತಿಯನ್ನು ಕೊಡಬಹುದು. ಬುಂದೇಲ್‌ಖಂಡದಲ್ಲಿ ಜಲ್ ಜೀವನ್ ಆಂದೋಲನದಡಿ ಕಾಮಗಾರಿಗಳನ್ನು ಬಹಳ ವೇಗದಿಂದ ಕೈಗೊಳ್ಳಲಾಗಿದೆ. ಇಲ್ಲಿಯ ಮಾತೆಯರ ಮತ್ತು ಹೆಣ್ಣು ಮಕ್ಕಳ ಬಹಳ ದೊಡ್ಡ ಕಷ್ಟವನ್ನು ನಿವಾರಣೆ ಮಾಡುವುದಕ್ಕಾಗಿ ಈ ಕಾರ್ಯವನ್ನು ನಡೆಸಲಾಗುತ್ತಿದೆ. ಬುಂದೇಲ್‌ಖಂಡ ಮತ್ತು ವಿಂಧ್ಯಾಚಲದ ಪ್ರತೀ ಮನೆಗೂ ಕೊಳವೆ ಮೂಲಕ ನೀರು ತಲುಪುವುದನ್ನು ಖಾತ್ರಿಪಡಿಸಲು ವಿಶೇಷ ಆಂದೋಲನವನ್ನು ನಡೆಸಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಹಲವು ದಶಕಗಳಿಂದ ರಾಜಕುಟುಂಬದ ಸರಕಾರಗಳು ಉತ್ತರ ಪ್ರದೇಶದ ಬಹುತೇಕ ಗ್ರಾಮಗಳನು, ಹಳ್ಳಿಗಳನ್ನು ಬರಗಾಲದಲ್ಲಿಟ್ಟಿದ್ದವು. ಕರ್ಮಯೋಗಿ ಸರಕಾರ ಬರೇ ಎರಡು ವರ್ಷಗಳಲ್ಲಿ  ಉತ್ತರ ಪ್ರದೇಶದಲ್ಲಿ 30 ಲಕ್ಷ ಕುಟುಂಬಗಳಿಗೆ ಕೊಳವೆ ಮೂಲಕ ನೀರನ್ನು ಒದಗಿಸಿದೆ.ರಾಜಕುಟುಂಬದ ಸರಕಾರಗಳು ಶಾಲೆಗಳಲ್ಲಿ ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರಾಕರಿಸಿದ್ದರೆ, ಕುಡಿಯುವ ನೀರಿನ ಸೌಲಭ್ಯಗಳನ್ನು ನಿರಾಕರಿಸಿದ್ದರೆ, ಕರ್ಮಯೋಗೀ ಜೀ ಅವರ ಎರಡು ಇಂಜಿನ್ ಗಳ ಸರಕಾರ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಿತಲ್ಲದೆ ಒಂದು ಲಕ್ಷಕ್ಕೂ ಅಧಿಕ ಶಾಲೆಗಳಿಗೆ ಕೊಳವೆ ಮೂಲಕ ನೀರನ್ನು ಪೂರೈಸಿದೆ ಹಾಗು ಉತ್ತರ ಪ್ರದೇಶದ ಸಾವಿರಾರು ಅಂಗನವಾಡಿ ಕೇಂದ್ರಗಳಿಗೆ ಈ ಸೌಲಭ್ಯವನ್ನು ಒದಗಿಸಿದೆ. ಬಡವರ ಕಲ್ಯಾಣವೇ ಗರಿಷ್ಟ ಆದ್ಯತೆಯಾಗಿದ್ದಾಗ ಕೆಲಸ ಕೂಡಾ ತ್ವರಿತಗತಿಯಿಂದ ಸಾಗುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಸರಕಾರ ರೈತರ ಹಿತಾಸಕ್ತಿಗಳನ್ನು ಕಾಪಾಡಲು ಬೀಜಗಳನ್ನು ಒದಗಿಸುವುದರಿಂದ ಹಿಡಿದು ಮಾರುಕಟ್ಟೆಗಳನ್ನು ಖಾತ್ರಿಪಡಿಸುವವರೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಳೆದ ಏಳು ವರ್ಷಗಳಲ್ಲಿ 1650 ಕ್ಕೂ ಅಧಿಕ,  ಉತ್ತಮ ಗುಣಮಟ್ಟದ ಬೀಜಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇವುಗಳಲ್ಲಿ ಅನೇಕ ಬೀಜಗಳು ಕಡಿಮೆ ನೀರು ಬಳಸಿ ಹೆಚ್ಚು ಇಳುವರಿ ನೀಡುತ್ತವೆ. ಸರಕಾರವು ಬುಂದೇಲ್‌ಖಂಡದ ಮಣ್ಣಿಗೆ ಹೊಂದುವ ಸಿರಿಧಾನ್ಯಗಳು, ಬೇಳೆ ಕಾಳುಗಳು, ಮತ್ತು ತೈಲ ಬೀಜಗಳಿಗೆ ಆದ್ಯತೆಯನ್ನು ಕೊಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಬೇಳೆ ಕಾಳುಗಳನ್ನು ಮತ್ತು ತೈಲ ಬೀಜಗಳನ್ನು ಖರೀದಿ ಮಾಡಲಾಗಿದೆ. ಇತ್ತೀಚೆಗೆ ಸಾಸಿವೆ ಮತ್ತು ಉದ್ದಿನ ಬೇಳೆಯಂತಹ  ಹಲವು ಬೇಳೆ ಕಾಳುಗಳಿಗೆ ಎಂ.ಎಸ್.ಪಿ.ಯನ್ನು ಕ್ವಿಂಟಾಲಿಗೆ 400 ರೂ. ವರೆಗೆ ಹೆಚ್ಚಿಸಲಾಗಿದೆ. ಖಾದ್ಯ ತೈಲಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಲು ರಾಷ್ಟ್ರೀಯ ಮಿಷನ್ ಆರಂಭಿಸಲಾಗಿದೆ. ವಾರ್ಷಿಕವಾಗಿ ಖಾದ್ಯ ತೈಲಗಳ ಆಮದಿನ ಮೇಲೆ ವ್ಯಯ ಮಾಡಲಾಗುತ್ತಿರುವ 80,000 ಕೋ.ರೂ.ಗಳು ದೇಶದ ರೈತರಿಗೆ  ಹೋಗುವಂತಾಗಬೇಕು. ಇದರಿಂದ ಬುಂದೇಲ್‌ಖಂಡದ ರೈತರಿಗೆ ಬಹಳ ಸಹಾಯವಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ವಂಶಪಾರಂಪರ್ಯ ಸರಕಾರಗಳು ರೈತರನ್ನು ಅಭಾವದಲ್ಲಿಯೇ ಇಡಲು ಇಚ್ಛಿಸಿದ್ದವು. ಅವರು ರೈತರ ಹೆಸರಿನಲ್ಲಿ ಘೋಷಣೆಗಳನ್ನು ಮಾಡುತ್ತಿದ್ದರು, ಆದರೆ ಒಂದು ಪೈ ಕೂಡಾ ರೈತರಿಗೆ ತಲುಪುತ್ತಿರಲಿಲ್ಲ. ಆದರೆ ನಾವು 1.62 ಲಕ್ಷ ಕೋ.ರೂ.ಗಳನ್ನು ಇದುವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇವೆ. ಈ ಇಡೀ ಮೊತ್ತ ಪ್ರತೀ ರೈತ ಕುಟುಂಬಗಳಿಗೆ ತಲುಪಿದೆ. ರಾಜವಂಶ ಸರಕಾರಗಳು ಸಣ್ಣ ರೈತರಿಗೆ, ಪಶುಪಾಲಕರಿಗೆ  ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನೂ ನಿರಾಕರಿಸಿದ್ದವು. ನಮ್ಮ ಸರಕಾರವು ಸಣ್ಣ ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯದೊಂದಿಗೆ ಬೆಸೆಯಿತು.

ಸಹೋದರರೇ ಮತ್ತು ಸಹೋದರಿಯರೇ,

ಉದ್ಯೋಗಾವಕಾಶಗಳಲ್ಲಿ ಈ ವಲಯವನ್ನು ಸ್ವಾವಲಂಬಿಯಾಗಿಸಿ ಬುಂದೇಲ್‌ಖಂಡದಿಂದ ವಲಸೆಯನ್ನು ತಡೆಯಲು ಸರಕಾರ ಬದ್ಧವಾಗಿದೆ. ಬುಂದೇಲ್‌ಖಂಡ ಎಕ್ಸ್‌ಪ್ರೆಸ್ ವೇ ಮತ್ತು ಉತ್ತರ ಪ್ರದೇಶ ರಕ್ಷಣಾ ಕಾರಿಡಾರ್ ಇದಕ್ಕೆ ಬಹಳ ದೊಡ್ಡ ಸಾಕ್ಷಿ. ಸದ್ಯೋಭವಿಷ್ಯದಲ್ಲಿ ಇಲ್ಲಿ ನೂರಾರು ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಮತ್ತು ಇಲ್ಲಿಯ ಯುವಕರಿಗೆ ಉದ್ಯೋಗಾವಕಾಶ ಲಭಿಸಲಿದೆ. ಈಗ ಇಲ್ಲಿಯ ಪ್ರದೇಶಗಳ ಅಸ್ತಿತ್ವ ಅಥವಾ ಅದೃಷ್ಟ ಒಂದು ಹಬ್ಬಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಬದಲು ಈ ವಲಯದ ಚಾರಿತ್ರಿಕ ಸಂಪತ್ತು, ನಂಬಿಕೆ, ಸಂಸ್ಕೃತಿ ಮತ್ತು ಪ್ರಕೃತಿ ಕೂಡಾ ಉದ್ಯೋಗಾವಕಾಶಗಳ ಮಾಧ್ಯಮವಾಗಲಿದೆ. ಇದು ಯಾತ್ರೆಗಳ  ವಲಯ. ಗುರು ಗೋರಕನಾಥ ಜೀ ಅವರ ಆಶೀರ್ವಾದ ಇರುವ ವಲಯ ಇದು. ರಾಹಿಲ ಸಾಗರ್ ಸೂರ್ಯ ದೇವಾಲಯ ಇರಲಿ, ಮಾ ಪೀತಾಂಬರ ಶಕ್ತಿ ಪೀಠ ಇರಲಿ, ಚಿತ್ರಕೂಟ ದೇವಾಲಯ ಅಥವಾ ಸೋನಗಿರಿ ಯಾತ್ರೆ ಇರಲಿ, ಯಾವುದಿಲ್ಲ ಇಲ್ಲಿ? ಬುಂದೇಲಿ ಭಾಷೆಗೆ, ಕಾವ್ಯಕ್ಕೆ, ಸಾಹಿತ್ಯಕ್ಕೆ, ಸಂಗೀತಕ್ಕೆ ಮತ್ತು ಮಹೋಬಾದ ಹೆಮ್ಮೆ “ದೇಶಾವರಿ ಪಾನ್” ಗೆ ಆಕರ್ಷಿತವಾಗದವರು  ಯಾರು? ರಾಮಾಯಣ ಸರ್ಕ್ಯೂಟ್ ಯೋಜನೆ ಅಡಿಯಲ್ಲಿ ಹಲವಾರು ಯಾತ್ರಾ ಕೇಂದ್ರಗಳನ್ನು ಇಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ಎರಡು ಇಂಜಿನ್ ಗಳ ಸರಕಾರ ಈ ದಶಕವನ್ನು ಉತ್ತರ ಪ್ರದೇಶ, ಬುಂದೇಲ್‌ಖಂಡದ ದಶಕವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಈ ಎರಡು ಇಂಜಿನ್‌ಗಳ ಸರಕಾರ ನಿಮ್ಮ ಆಶೀರ್ವಾದಗಳ ಶಕ್ತಿಯನ್ನು  ನಿರಂತರವಾಗಿ  ಪಡೆಯಲಿ. ಈ ನಂಬಿಕೆಯೊಂದಿಗೆ ನಾನು ನಿಮ್ಮ ಅನುಮತಿ ಪಡೆದು ಝಾನ್ಸಿಯಲ್ಲಿಯ ಕಾರ್ಯಕ್ರಮಕ್ಕೆ  ತೆರಳಲು ಹೊರಡುತ್ತೇನೆ.ಇಂತಹ ದೊಡ್ಡ ಸಂಖ್ಯೆಯಲ್ಲಿ ಬಂದು ನಮ್ಮನ್ನು ಆಶೀರ್ವದಿಸಿದುದಕ್ಕಾಗಿ ನನ್ನ ಹೃದಯಾಂತರಾಳದಿಂದ ನಾನು ನಿಮಗೆ ತುಂಬಾ ಋಣಿ. ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಬಹಳ ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Chronic therapies power 11% growth in Indian pharma market in May

Media Coverage

Chronic therapies power 11% growth in Indian pharma market in May
NM on the go

Nm on the go

Always be the first to hear from the PM. Get the App Now!
...
World Leaders Congratulate Prime Minister Shri Narendra Modi on Becoming India’s Longest-Serving Elected Prime Minister
June 09, 2026

Prime Minister Shri Narendra Modi received warm congratulations from world leaders on the eve of his becoming the longest-serving elected Prime Minister of India. World leaders from across the globe paid tribute to Prime Minister’s transformative governance, his advocacy for the Global South, and his vision of an inclusive and economically dynamic India.

H.E. Anura Kumara Disanayaka, the President of Sri Lanka, in a letter dated 8 June 2026 addressed to the Prime Minister, conveyed the warm congratulations of the Government and people of Sri Lanka to him, stating: “This milestone is a testament not only to your years in office, but also to the trust and confidence that the people of the world’s largest democracy have repeatedly placed in your leadership.” The President also highlighted India’s remarkable economic and social transformation and noted that Prime Minister Modi’s vision has inspired many beyond India’s borders, including Sri Lanka. Prime Minister Modi visited Sri Lanka from 4–6 April 2025, his fourth visit to the island nation, during which he was conferred the Mitra Vibhushana, Sri Lanka’s highest civilian honour accorded to a foreign dignitary. The visit reaffirmed India’s Neighbourhood First policy, with Sri Lanka among the closest beneficiaries of India’s steadfast partnership, including India’s pivotal support during Sri Lanka’s economic difficulties in 2022.

H.E. James Marape, the Prime Minister of Papua New Guinea, in a personal video message, described Prime Minister Modi as “a role model and an example of leadership”. He also stated - “Lifting over 200 million people out of poverty to good life today is an amazing feat.” Prime Minister Marape expressed Papua New Guinea’s warm friendship and its desire to further consolidate bilateral ties. Prime Minister Modi’s historic visit to Papua New Guinea in May 2023, the first-ever by an Indian Prime Minister, for the Third Forum for India–Pacific Islands Cooperation (FIPIC-III) Summit was a landmark moment in India’s engagement with the Pacific Island nations. The visit underscored India’s role as a committed partner of the Global South.

H.E. Kamla Persad-Bissessar, the Prime Minister of Trinidad and Tobago, congratulated Prime Minister Modi on this occassion, noting that “under the leadership of Prime Minister Modi, India has evolved as a leading voice on global matters.” She highlighted Prime Minister Modi’s journey from humble beginnings to leading a nation of 1.4 billion people across three terms, and underscored India’s significant achievements in foreign policy, economic growth, infrastructure, and socio-economic development. Prime Minister Modi paid a landmark visit to Trinidad and Tobago from 3–4 July 2025, the first bilateral visit by an Indian Prime Minister in 26 years, coinciding with the 180th anniversary of the arrival of Indian immigrants to Trinidad and Tobago.