ಥಾಯ್ಲೆಂಡ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 6ನೇ ಬಿಮ್‌ಸ್ಟೆಕ್ (ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು. ಶೃಂಗಸಭೆಯ ವಿಷಯ - "ಬಿಮ್‌ಸ್ಟೆಕ್: ಸಮೃದ್ಧ, ಸ್ಥಿತಿಸ್ಥಾಪಕ ಮತ್ತು ಮುಕ್ತ". ಇದು ಬಿಮ್‌ಸ್ಟೆಕ್ ಪ್ರದೇಶದ ನಾಯಕರ ಆದ್ಯತೆಗಳು ಮತ್ತು ಜನರ ಆಕಾಂಕ್ಷೆಗಳನ್ನು ಹಾಗೂ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಹಂಚಿಕೆಯ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಬಿಮ್‌ಸ್ಟೆಕ್ ನ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುವ ಮೂಲಕ ಪ್ರಧಾನಿಯವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಗುಂಪನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಅವರು ಪ್ರಧಾನಿ ಶಿನವಾತ್ರ ಅವರಿಗೆ ಧನ್ಯವಾದ ಅರ್ಪಿಸಿದರು. ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ನಡುವಿನ ಪ್ರಮುಖ ಸೇತುವೆಯಾಗಿ ಬಿಮ್‌ಸ್ಟೆಕ್ ಅನ್ನು ಎತ್ತಿ ತೋರಿಸಿದ ಪ್ರಧಾನಿ, ಪ್ರಾದೇಶಿಕ ಸಹಕಾರ, ಸಮನ್ವಯ ಮತ್ತು ಪ್ರಗತಿಗೆ ಗುಂಪು ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಬಿಮ್‌ಸ್ಟೆಕ್ ನ ಕಾರ್ಯಸೂಚಿ ಮತ್ತು ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಅವರು ಕರೆ ನೀಡಿದರು.

 

ಬಿಮ್‌ಸ್ಟೆಕ್ ನಲ್ಲಿ ಸಂಸ್ಥೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಭಾರತ ನೇತೃತ್ವದ ಹಲವಾರು ಉಪಕ್ರಮಗಳನ್ನು ಪ್ರಧಾನಿ ಘೋಷಿಸಿದರು. ಇವುಗಳಲ್ಲಿ ವಿಪತ್ತು ನಿರ್ವಹಣೆ, ಸುಸ್ಥಿರ ಸಮುದ್ರ ಸಾರಿಗೆ, ಸಾಂಪ್ರದಾಯಿಕ ಔಷಧ ಮತ್ತು ಕೃಷಿಯಲ್ಲಿ ಸಂಶೋಧನೆ ಮತ್ತು ತರಬೇತಿ ಕುರಿತು ಭಾರತದಲ್ಲಿ ಬಿಮ್‌ಸ್ಟೆಕ್ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಸೇರಿವೆ. ಯುವಕರನ್ನು ಕೌಶಲ್ಯಗೊಳಿಸಲು ಬೋಧಿ (ಮಾನವ ಸಂಪನ್ಮೂಲ ಮೂಲಸೌಕರ್ಯದ ಸಂಘಟಿತ ಅಭಿವೃದ್ಧಿಗಾಗಿ ಬಿಮ್‌ಸ್ಟೆಕ್) ಎಂಬ ಹೊಸ ಕಾರ್ಯಕ್ರಮವನ್ನು ಅವರು ಘೋಷಿಸಿದರು. ಇದರ ಅಡಿಯಲ್ಲಿ ವೃತ್ತಿಪರರು, ವಿದ್ಯಾರ್ಥಿಗಳು, ಸಂಶೋಧಕರು, ರಾಜತಾಂತ್ರಿಕರು ಮತ್ತು ಇತರರಿಗೆ ತರಬೇತಿ ಮತ್ತು ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಪ್ರಾದೇಶಿಕ ಅಗತ್ಯಗಳನ್ನು ನಿರ್ಣಯಿಸಲು ಭಾರತದಿಂದ ಪ್ರಾಯೋಗಿಕ ಅಧ್ಯಯನ ಮತ್ತು ಈ ಪ್ರದೇಶದಲ್ಲಿ ಕ್ಯಾನ್ಸರ್ ಆರೈಕೆಗಾಗಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು ಅವರು ಪ್ರಕಟಿಸಿದರು. ಹೆಚ್ಚಿನ ಪ್ರಾದೇಶಿಕ ಆರ್ಥಿಕ ಏಕೀಕರಣಕ್ಕಾಗಿ ಕರೆ ನೀಡಿದ ಪ್ರಧಾನಿ, ಬಿಮ್‌ಸ್ಟೆಕ್ ವಾಣಿಜ್ಯ ಮಂಡಳಿಯನ್ನು ಸ್ಥಾಪಿಸಲು ಮತ್ತು ಪ್ರತಿ ವರ್ಷ ಭಾರತದಲ್ಲಿ ಬಿಮ್‌ಸ್ಟೆಕ್ ವ್ಯಾಪಾರ ಶೃಂಗಸಭೆಯನ್ನು ಆಯೋಜಿಸಲು ಪ್ರಸ್ತಾಪಿಸಿದರು.

 

ಪ್ರದೇಶವನ್ನು ಒಟ್ಟುಗೂಡಿಸುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿಯವರು, ಜನರು-ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಘೋಷಿಸಿದರು. ಭಾರತವು ಈ ವರ್ಷ ಬಿಮ್‌ಸ್ಟೆಕ್ ಅಥ್ಲೆಟಿಕ್ಸ್ ಕೂಟ ಮತ್ತು ಈ ಗುಂಪು ತನ್ನ 30 ನೇ ವಾರ್ಷಿಕೋತ್ಸವವನ್ನು ಆಚರಿಸುವ 2027 ರಲ್ಲಿ ಮೊದಲ ಬಿಮ್‌ಸ್ಟೆಕ್ ಕ್ರೀಡಾಕೂಟವನ್ನು ಆಯೋಜಿಸುತ್ತದೆ, ಬಿಮ್‌ಸ್ಟೆಕ್ ಸಾಂಪ್ರದಾಯಿಕ ಸಂಗೀತ ಉತ್ಸವವನ್ನು ಸಹ ಆಯೋಜಿಸಲಾಗುತ್ತದೆ. ಪ್ರದೇಶದ ಯುವಕರನ್ನು ಪರಸ್ಪರ ಹತ್ತಿರಕ್ಕೆ ತರಲು ಪ್ರಧಾನಮಂತ್ರಿಯವರು ಯುವ ನಾಯಕರ ಶೃಂಗಸಭೆ, ಹ್ಯಾಕಥಾನ್ ಮತ್ತು ಯುವ ವೃತ್ತಿಪರರ ಸಂದರ್ಶಕ ಕಾರ್ಯಕ್ರಮವನ್ನು ಘೋಷಿಸಿದರು. ಪ್ರಧಾನಿಯವರು ಘೋಷಿಸಿದ ಉಪಕ್ರಮಗಳ ಸಂಪೂರ್ಣ ಪಟ್ಟಿಯನ್ನು here. ನೋಡಬಹುದು.

 

ಶೃಂಗಸಭೆಯು ಈ ಕೆಳಗಿನ ವಿಷಯಗಳನ್ನು ಅಂಗೀಕರಿಸಿತು:

i. ಶೃಂಗಸಭೆ ಘೋಷಣೆ

ii. ಪ್ರದೇಶದ ಸಾಮೂಹಿಕ ಸಮೃದ್ಧಿಗೆ ಮಾರ್ಗಸೂಚಿಯನ್ನು ರೂಪಿಸುವ ಬಿಮ್‌ಸ್ಟೆಕ್ ಬ್ಯಾಂಕಾಕ್ ವಿಷನ್ 2030 ದಾಖಲೆ.

iii. ಹಡಗುಗಳು, ಸಿಬ್ಬಂದಿ ಮತ್ತು ಸರಕುಗಳಿಗೆ ನೆರವು; ಪ್ರಮಾಣಪತ್ರಗಳು/ದಾಖಲೆಗಳ ಪರಸ್ಪರ ಗುರುತಿಸುವಿಕೆ; ಜಂಟಿ ಶಿಪ್ಪಿಂಗ್ ಸಮನ್ವಯ ಸಮಿತಿ; ಮತ್ತು ವಿವಾದ ಇತ್ಯರ್ಥ ಕಾರ್ಯವಿಧಾನವನ್ನು ಒದಗಿಸುವ ಬಿಮ್‌ಸ್ಟೆಕ್ ಕಡಲ ಸಾರಿಗೆ ಒಪ್ಪಂದಕ್ಕೆ ಸಹಿ ಹಾಕುವುದು.

ⅳ. ಬಿಮ್‌ಸ್ಟೆಕ್ ನ ಭವಿಷ್ಯದ ನಿರ್ದೇಶನಕ್ಕಾಗಿ ಶಿಫಾರಸುಗಳನ್ನು ಮಾಡಲು ರಚಿಸಲಾದ ಬಿಮ್‌ಸ್ಟೆಕ್ ಎಮಿನೆಂಟ್ ಪರ್ಸನ್ಸ್ ಗ್ರೂಪ್ ವರದಿ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India records highest-ever startup surge with 55,200 recognised in FY26

Media Coverage

India records highest-ever startup surge with 55,200 recognised in FY26
NM on the go

Nm on the go

Always be the first to hear from the PM. Get the App Now!
...
Prime Minister expresses grief over mishap in Coimbatore
April 17, 2026

The Prime Minister, Shri Narendra Modi, has expressed deep anguish over the mishap in Coimbatore, Tamil Nadu.

Shri Modi said that he is distressed to hear about the incident and extended his heartfelt condolences to those who have lost their loved ones. He also prayed for the speedy recovery of those injured in the mishap.

The Prime Minister’s Office posted on X;

“Distressed to hear about the mishap in Coimbatore, Tamil Nadu. I extend my heartfelt condolences to those who have lost their loved ones in the mishap. Prayers for the speedy recovery of those injured: PM @narendramodi”