ಜಗತ್ತು ಆತಂಕದಲ್ಲಿರುವಾಗ, ಭಾರತವು ಭರವಸೆಯನ್ನು ಮೂಡಿಸುತ್ತಿದೆ: ಪ್ರಧಾನಮಂತ್ರಿ
ಇಂದು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ವಲಯದಲ್ಲೂ ಅಭೂತಪೂರ್ವ ವೇಗದಲ್ಲಿ ಕೆಲಸ ಮಾಡುತ್ತಿದೆ: ಪ್ರಧಾನಮಂತ್ರಿ
ಭಾರತ ಇಂದು ಅಭಿವೃದ್ಧಿಶೀಲ ರಾಷ್ಟ್ರ ಮತ್ತು ಉದಯೋನ್ಮುಖ ಶಕ್ತಿಯಾಗಿದೆ: ಪ್ರಧಾನಮಂತ್ರಿ
ಭಾರತವು ವಿಶ್ವದ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿದೆ, ಹೆಚ್ಚಿನ ಎತ್ತರವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ: ಪ್ರಧಾನಮಂತ್ರಿ
ಭಾರತ ಈಗ ದೂರದೃಷ್ಟಿಯ ಚಿಂತನೆಯೊಂದಿಗೆ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
ಭಾರತದ 140 ಕೋಟಿ ಜನರು ವಿಕಸಿತ ಭಾರತದ ಸಂಕಲ್ಪದೊಂದಿಗೆ ಸೇರಿದ್ದಾರೆ, ಅವರೇ ಅದನ್ನು ಮುನ್ನಡೆಸುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತವು ಡಬಲ್ ಎಐ ಶಕ್ತಿ, ಮೊದಲ ಎಐ, ಕೃತಕ ಬುದ್ಧಿಮತ್ತೆ, ಎರಡನೇ ಎಐ, ಮಹತ್ವಾಕಾಂಕ್ಷಿ ಭಾರತದ ಪ್ರಯೋಜನವನ್ನು ಹೊಂದಿದೆ: ಪ್ರಧಾನಮಂತ್ರಿ
ಭಾರತಕ್ಕೆ ಲಘುವಾದ ಸಂಬಂಧಗಳಲ್ಲಿ ನಂಬಿಕೆಯಿಲ್ಲ, ನಮ್ಮ ಸಂಬಂಧಗಳ ಅಡಿಪಾಯವು ನಂಬಿಕೆ ಮತ್ತು ವಿಶ್ವಾಸಾರ್ಹತೆಯಾಗಿದೆ: ಪ್ರಧಾನಮಂತ್ರಿ
ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವ ಮೂಲಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಭಾರತವು ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಿದೆ: ಪ್ರಧಾನಮಂತ್ರಿ
ಡಿಜಿಟಲ್ ನಾವೀನ್ಯತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಜೊತೆಯಾಗಿರಬಹುದು ಎಂಬುದನ್ನು ಭಾರತ ತೋರಿಸಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಎನ್‌ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಶೃಂಗಸಭೆಯಲ್ಲಿ ಹಲವು ವಿಷಯಗಳನ್ನು ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವಿವಿಧ ವಲಯಗಳ ಜಾಗತಿಕ ನಾಯಕರ ಉಪಸ್ಥಿತಿಯನ್ನು ಅವರು ಶ್ಲಾಘಿಸಿದರು.

ಕಳೆದ 4-5 ವರ್ಷಗಳ ಸ್ಥಿತಿಗತಿಗಳನ್ನು ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭವಿಷ್ಯದ ಕಾಳಜಿಗಳು ಚರ್ಚೆಯಲ್ಲಿ ಸಾಮಾನ್ಯ ವಿಷಯವಾಗಿದೆ ಎಂದು ತಿಳಿಸಿದರು. ಕೋವಿಡ್ ಸಾಂಕ್ರಾಮಿಕ, ಕೋವಿಡ್ ನಂತರದ ಆರ್ಥಿಕ ಒತ್ತಡ, ಹಣದುಬ್ಬರ ಮತ್ತು ನಿರುದ್ಯೋಗ, ಹವಾಮಾನ ಬದಲಾವಣೆ, ನಡೆಯುತ್ತಿರುವ ಯುದ್ಧಗಳು, ಪೂರೈಕೆ ಸರಪಳಿಗಳ ಅಡ್ಡಿ, ಅಮಾಯಕರ ಸಾವು, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಸಂಘರ್ಷಗಳಂತಹ ಇತ್ತೀಚಿನ ಸವಾಲುಗಳು ಎಲ್ಲಾ ಜಾಗತಿಕ ಶೃಂಗಸಭೆಗಳಲ್ಲಿ ಚರ್ಚೆಯ ವಿಷಯವಾಗಿವೆ ಎಂದು ಅವರು ಹೇಳಿದರು. ಆ ಸಮಯದಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಸಮಾನಾಂತರ ಚರ್ಚೆಗಳನ್ನು ವಿವರಿಸಿದ ಪ್ರಧಾನಿ, ಭಾರತವು ತನ್ನ ಶತಮಾನದ ಬಗ್ಗೆ ಚರ್ಚಿಸುತ್ತಿದೆ ಎಂದು ಒತ್ತಿ ಹೇಳಿದರು. “ಜಾಗತಿಕ ಪ್ರಕ್ಷುಬ್ಧತೆಯ ಈ ಯುಗದಲ್ಲಿ ಭಾರತವು ಭರವಸೆಯ ಕಿರಣವಾಗಿದೆ. ಜಗತ್ತು ಚಿಂತಾಕ್ರಾಂತವಾಗಿರುವಾಗ ಭಾರತವು ಭರವಸೆಯನ್ನು ಮೂಡಿಸುತ್ತಿದೆ”ಎಂದು ಪ್ರಧಾನಿ ಹೇಳಿದರು. ಜಾಗತಿಕ ಪರಿಸ್ಥಿತಿ ಮತ್ತು ಅದರ ಮುಂದಿರುವ ಸವಾಲುಗಳಿಂದ ಭಾರತವು ಪ್ರಭಾವಿತವಾಗಿದ್ದರೂ ಸಹ, ಇಲ್ಲಿ ಸಕಾರಾತ್ಮಕತೆಯ ಭಾವನೆ ಇದೆ ಎಂದು ಅವರು ಒತ್ತಿ ಹೇಳಿದರು.

 

"ಇಂದು ಭಾರತವು ಪ್ರತಿಯೊಂದು ಕ್ಷೇತ್ರ ಮತ್ತು ಪ್ರತಿಯೊಂದು ವಲಯದದಲ್ಲೂ ಅಭೂತಪೂರ್ವ ವೇಗದಲ್ಲಿ ಕೆಲಸ ಮಾಡುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಮೂರನೇ ಅವಧಿಯ 125 ದಿನಗಳನ್ನು ಪೂರ್ಣಗೊಳಿಸಿರುವ ಸರ್ಕಾರವು ದೇಶದಲ್ಲಿ ಮಾಡಿದ ಕೆಲಸಗಳನ್ನು ಎತ್ತಿ ಅವರು ತೋರಿಸಿದರು. ಬಡವರಿಗಾಗಿ 3 ಕೋಟಿ ಹೊಸ ಪಕ್ಕಾ ಮನೆಗಳಿಗೆ ಅನುಮೋದನೆ, 9 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ, 15 ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ, 8 ಹೊಸ ವಿಮಾನ ನಿಲ್ದಾಣಗಳ ಶಂಕುಸ್ಥಾಪನೆ, ಯುವಜನರಿಗೆ 2 ಲಕ್ಷ ಕೋಟಿ ರೂ. ಪ್ಯಾಕೇಜ್‌, ರೈತರ ಬ್ಯಾಂಕ್ ಖಾತೆಗಳಿಗೆ 21,000 ಕೋಟಿ ಹಣ ವರ್ಗಾವಣೆ, 70 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತ ಚಿಕಿತ್ಸಾ ಯೋಜನೆ, ಸುಮಾರು 5 ಲಕ್ಷ ಮನೆಗಳಲ್ಲಿ ಮೇಲ್ಛಾವಣಿ ಸೋಲಾರ್ ಘಟಕ ಅಳವಡಿಕೆ, ಏಕ್ ಪೇಡ್‌ ಮಾ ಕೆ ನಾಮ್ ಅಭಿಯಾನದಡಿ 90 ಕೋಟಿ ಸಸಿ ನೆಡುವುದು, 12 ಹೊಸ ಕೈಗಾರಿಕಾ ನೋಡ್‌ ಗಳಿಗೆ ಅನುಮೋದನೆ, ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಸುಮಾರು 5-7 ಪ್ರತಿಶತದಷ್ಟು ಹೆಚ್ಚಳ ಮತ್ತು ಭಾರತದ ವಿದೇಶಿ ವಿನಿಮಯವು $ 700 ಶತಕೋಟಿಗೆ ಹೆಚ್ಚಳದಂತಹ ಹಲವು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು. ಕಳೆದ 125 ದಿನಗಳಲ್ಲಿ ಭಾರತದಲ್ಲಿ ಸಂಭವಿಸಿದ ಜಾಗತಿಕ ಘಟನೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಅಂತಾರಾಷ್ಟ್ರೀಯ ಎಸ್‌ ಎಂ ಯು, ಗ್ಲೋಬಲ್ ಫಿನ್‌ಟೆಕ್ ಉತ್ಸವ, ಜಾಗತಿಕ ಸೆಮಿಕಂಡಕ್ಟರ್ ಪೂರಕ ವ್ಯವಸ್ತೆ ಕುರಿತು ಚರ್ಚೆ, ನವೀಕರಿಸಬಹುದಾದ ಇಂಧನ ಮತ್ತು ನಾಗರಿಕ ವಿಮಾನಯಾನ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಅವರು ಉಲ್ಲೇಖಿಸಿದರು. ಇದು ಕೇವಲ ಘಟನೆಗಳ ಪಟ್ಟಿಯಲ್ಲ, ದೇಶದ ದಿಕ್ಕು ಮತ್ತು ವಿಶ್ವದ ನಿರೀಕ್ಷೆಗಳನ್ನು ಪ್ರತಿಬಿಂಬಿಸುವ ಭಾರತಕ್ಕೆ ಸಂಬಂಧಿಸಿದ ನಿರೀಕ್ಷೆಗಳ ಪಟ್ಟಿಯಾಗಿದೆ ಎಂದು ಪ್ರಧಾನಿ ಹೇಳಿದರು. ಇವು ಪ್ರಪಂಚದ ಭವಿಷ್ಯವನ್ನು ರೂಪಿಸುವ ವಿಷಯಗಳಾಗಿದ್ದು, ಇವುಗಳನ್ನು ಭಾರತದಲ್ಲಿ ಚರ್ಚಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಸರ್ಕಾರದ ಮೂರನೇ ಅವಧಿಯಲ್ಲಿ, ಭಾರತದ ಬೆಳವಣಿಗೆಯು ಎಷ್ಟರಮಟ್ಟಿಗೆ ವೇಗಗೊಂಡಿದೆಯೆಂದರೆ, ಅನೇಕ ರೇಟಿಂಗ್ ಏಜೆನ್ಸಿಗಳು ತಮ್ಮ ಬೆಳವಣಿಗೆಯ ಮುನ್ಸೂಚನೆಗಳನ್ನು ಹೆಚ್ಚಿಸಿವೆ ಎಂದು ಪ್ರಧಾನಿ ಹೇಳಿದರು. ಜಾಗತಿಕ ನಿಧಿಗಳು ತಮ್ಮ ನಿಧಿಯ ಕನಿಷ್ಠ ಶೇ.50 ರಷ್ಟನ್ನು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿರುವ ಮಾರ್ಕ್ ಮೊಬಿಯಸ್ ಅವರಂತಹ ತಜ್ಞರ ಉತ್ಸಾಹದ ಬಗ್ಗೆ ಅವರು ಗಮನಸೆಳೆದರು. "ಅಂತಹ ಅನುಭವಿ ತಜ್ಞರು ಭಾರತದಲ್ಲಿ ಪ್ರಮುಖ ಹೂಡಿಕೆಗಳನ್ನು ಪ್ರತಿಪಾದಿಸಿದಾಗ, ಅದು ನಮ್ಮ ಸಾಮರ್ಥ್ಯದ ಬಗ್ಗೆ ಬಲವಾದ ಸಂದೇಶವನ್ನು ನೀಡುತ್ತದೆ" ಎಂದು ಪ್ರಧಾನಿ ಹೇಳಿದರು.

"ಇಂದಿನ ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಮತ್ತು ಉದಯೋನ್ಮುಖ ಶಕ್ತಿಯಾಗಿದೆ" ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತವು ಬಡತನದ ಸವಾಲುಗಳನ್ನು ಅರ್ಥಮಾಡಿಕೊಂಡಿದೆ ಮತ್ತು ಪ್ರಗತಿಯ ಹಾದಿಯನ್ನು ಹೇಗೆ ಸುಗಮಗೊಳಿಸಬೇಕೆಂದು ತಿಳಿದುಕೊಂಡಿದೆ ಎಂದು ಅವರು ಹೇಳಿದರು. ಅವರು ಸರ್ಕಾರದ ತ್ವರಿತ ಗತಿಯ ನೀತಿ-ನಿರ್ಮಾಣ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳು ಮತ್ತು ಹೊಸ ಸುಧಾರಣೆಗಳನ್ನು ಎತ್ತಿ ತೋರಿಸಿದರು. ಸಂತೃಪ್ತಿಯ ಬಗ್ಗೆ  ಮಾತನಾಡಿದ ಪ್ರಧಾನಿಯವರು ಈ ಮನಸ್ಥಿತಿಯು ದೇಶವನ್ನು ಮುಂದೆ ಕೊಂಡೊಯ್ಯುವುದಿಲ್ಲ ಎಂದರು. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಮತ್ತು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು 16 ಕೋಟಿ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ, ಆದರೆ ಇದು ಸಾಕಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

 

ಕಳೆದ 10 ವರ್ಷಗಳಲ್ಲಿ ಭಾರತವು 350 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಮತ್ತು 15 ಕ್ಕೂ ಹೆಚ್ಚು ಎ ಐ ಐ ಎಂ ಎಸ್‌ ಗಳನ್ನು ನಿರ್ಮಿಸಿದೆ, 1.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್‌ ಗಳನ್ನು ಸ್ಥಾಪಿಸಿದೆ ಮತ್ತು 8 ಕೋಟಿ ಯುವಜನರಿಗೆ ಮುದ್ರಾ ಸಾಲವನ್ನು ನೀಡಿದೆ ಎಂದು ಪ್ರಧಾನಿ ತಿಳಿಸಿದರು. "ಇದು ಸಾಕಾಗುವುದಿಲ್ಲ" ಎಂದ ಅವರು, ಭಾರತದ ಯುವಕರ ನಿರಂತರ ಪ್ರಗತಿಯ ಅಗತ್ಯವನ್ನು ಒತ್ತಿ ಹೇಳಿದರು. ವಿಶ್ವದ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದ ಸಾಮರ್ಥ್ಯವು ನಮ್ಮನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ನಾವು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಾಧಿಸಲು ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಅವರು ಒತ್ತಿ ಹೇಳಿದರು.

ರಾಷ್ಟ್ರದ ಮನಸ್ಥಿತಿಯಲ್ಲಿನ ಬದಲಾವಣೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಸರ್ಕಾರಗಳು ತಮ್ಮ ಸಾಧನೆಗಳನ್ನು ಹಿಂದಿನ ಆಡಳಿತಗಳೊಂದಿಗೆ ಹೋಲಿಸಿ, 10-15 ವರ್ಷಗಳ ಹಿಂದಿನವುಗಳನ್ನು ಮೀರಿ ಹೋಗುವುದನ್ನು ಯಶಸ್ಸು ಎಂದು ಪರಿಗಣಿಸುತ್ತವೆ. ಭಾರತವು ಈ ವಿಧಾನವನ್ನು ಬದಲಾಯಿಸುತ್ತಿದೆ ಮತ್ತು ಯಶಸ್ಸನ್ನು ಇನ್ನು ಮುಂದೆ ಸಾಧನೆಗಳಿಂದ ಅಳೆಯಲಾಗುವುದಿಲ್ಲ, ಬದಲಿಗೆ ಭವಿಷ್ಯದೆಡೆಗಿನ ದಿಕ್ಕಿನ ಮೂಲಕ ಅಳೆಯಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿಯವರು ಭಾರತದ ದೂರದೃಷ್ಟಿಯ ಬಗ್ಗೆ ಪ್ರಸ್ತಾಪಿಸಿದರು ಮತ್ತು ಭಾರತವು ಈಗ ಭವಿಷ್ಯ-ಕೇಂದ್ರಿತ ವಿಧಾನದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು. 2047 ರ ವೇಳೆಗೆ ವಿಕಸಿತ ಭಾರತ ನಮ್ಮ ಗುರಿಯಾಗಿದೆ, ಇದು ಕೇವಲ ಸರ್ಕಾರದ ದೃಷ್ಟಿಯಲ್ಲ, 140 ಕೋಟಿ ಭಾರತೀಯರ ಆಕಾಂಕ್ಷೆಯಾಗಿದೆ. ಇದು ಇನ್ನು ಮುಂದೆ ಸಾರ್ವಜನಿಕ ಸಹಭಾಗಿತ್ವದ ಅಭಿಯಾನವಲ್ಲ, ರಾಷ್ಟ್ರೀಯ ವಿಶ್ವಾಸದ ಆಂದೋಲನವಾಗಿದೆ ”ಎಂದು ಶ್ರೀ ಮೋದಿ ಹೇಳಿದರು. ಸರ್ಕಾರವು ವಿಕಸಿತ ಭಾರತಕ್ಕಾಗಿ ವಿಷನ್ ಡಾಕ್ಯುಮೆಂಟ್‌ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಲಕ್ಷಾಂತರ ನಾಗರಿಕರು ತಮ್ಮ ಸಲಹೆಗಳನ್ನು ನೀಡಿದರು ಎಂದು ಅವರು ಹೇಳಿದರು. ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಚರ್ಚೆಗಳು ಮತ್ತು ಸಂವಾದಗಳನ್ನು ನಡೆಸಲಾಯಿತು ಮತ್ತು ಈ ಚರ್ಚೆಗಳ ಫಲಿತಾಂಶದ ಆಧಾರದ ಮೇಲೆ ಸರ್ಕಾರವು ಮುಂದಿನ 25 ವರ್ಷಗಳ ಗುರಿಗಳನ್ನು ನಿಗದಿಪಡಿಸಿದೆ ಎಂದು ಅವರು ತಿಳಿಸಿದರು. "ಇಂದು, ವಿಕಸಿತ ಭಾರತ ಕುರಿತು ಚರ್ಚೆಗಳು ನಮ್ಮ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿವೆ ಮತ್ತು ಸಾರ್ವಜನಿಕ ಶಕ್ತಿಯನ್ನು ರಾಷ್ಟ್ರೀಯ ಶಕ್ತಿಯಾಗಿ ಪರಿವರ್ತಿಸುವ ನಿಜವಾದ ಉದಾಹರಣೆಯಾಗಿದೆ" ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆ (ಎಐ) ಕುರಿತು ಮಾತನಾಡಿದ ಪ್ರಧಾನಿ, ಇದು ಕೃತಕ ಬುದ್ಧಿಮತ್ತೆ ಯುಗವಾಗಿದೆ ಮತ್ತು ಪ್ರಪಂಚದ ವರ್ತಮಾನ ಮತ್ತು ಭವಿಷ್ಯವು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದೆ ಎಂದು ಹೇಳಿದರು. ಭಾರತವು ಡಬಲ್ ಎಐ ಶಕ್ತಿ, ಮೊದಲ ಎಐ, ಕೃತಕ ಬುದ್ಧಿಮತ್ತೆ ಮತ್ತು ಎರಡನೇ ಎಐ, ಮಹತ್ವಾಕಾಂಕ್ಷಿ ಭಾರತದ ಪ್ರಯೋಜನವನ್ನು ಹೊಂದಿದೆ ಎಂದು ಹೇಳಿದರು. ಮಹತ್ವಾಕಾಂಕ್ಷೆಯ ಭಾರತ ಮತ್ತು ಕೃತಕ ಬುದ್ಧಿಮತ್ತೆಯ ಶಕ್ತಿಯು ಒಂದುಗೂಡಿದಾಗ ಅಭಿವೃದ್ಧಿಯು ವೇಗವಾಗುವುದು ಸಹಜ ಎಂದು ಶ್ರೀ ಮೋದಿ ಹೇಳಿದರು. ಕೃತಕ ಬುದ್ಧಿಮತ್ತೆಯು ಭಾರತಕ್ಕೆ ಕೇವಲ ತಂತ್ರಜ್ಞಾನವಲ್ಲ, ಭಾರತದ ಯುವಕರಿಗೆ ಹೊಸ ಅವಕಾಶಗಳ ಹೆಬ್ಬಾಗಿಲು ಎಂದು ಅವರು ಒತ್ತಿ ಹೇಳಿದರು. ಈ ವರ್ಷ ಭಾರತವು ಎಐ ಮಿಷನ್‌ ಪ್ರಾರಂಭಿಸಿರುವುದನ್ನು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸ್ಟಾರ್ಟ್‌ಅಪ್‌ ಗಳಂತಹ ಕ್ಷೇತ್ರಗಳಲ್ಲಿ ಎಐ ಬಳಕೆಯನ್ನು ಹೆಚ್ಚಿಸಲು ಒತ್ತು ನೀಡಿರುವುದನ್ನು ಪ್ರಸ್ತಾಪಿಸಿದರು. "ಭಾರತವು ವಿಶ್ವ ದರ್ಜೆಯ ಎಐ ಪರಿಹಾರಗಳನ್ನು ತಲುಪಿಸಲು ಬದ್ಧವಾಗಿದೆ ಮತ್ತು ಕ್ವಾಡ್‌ ನಂತಹ ಪ್ಲಾಟ್‌ಫಾರ್ಮ್‌ ಗಳ ಮೂಲಕ ಇದನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಮಹತ್ವದ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಅವರು ಹೇಳಿದರು. ಮಹತ್ವಾಕಾಂಕ್ಷಿ ಭಾರತದ ಮೇಲೆ ಕೇಂದ್ರೀಕರಿಸಿದ ಪ್ರಧಾನಮಂತ್ರಿಯವರು, ಮಧ್ಯಮ ವರ್ಗ, ಸಾಮಾನ್ಯ ನಾಗರಿಕರು, ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು, ಸಣ್ಣ ಉದ್ಯಮಗಳು, ಎಂ ಎಸ್‌ ಎಂ ಇ ಗಳು, ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವುದು ಸರ್ಕಾರದ ನೀತಿ ರಚನೆ ಪ್ರಕ್ರಿಯೆಯ ಕೇಂದ್ರವಾಗಿದೆ ಎಂದು ಹೇಳಿದರು. ಸಂಪರ್ಕದಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ರಾಷ್ಟ್ರೀಯ ಆಕಾಂಕ್ಷೆಗಳನ್ನು ಪೂರೈಸುವ ಪ್ರಮುಖ ಉದಾಹರಣೆಯಾಗಿ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು ಮತ್ತು ಅಭಿವೃದ್ಧಿಶೀಲ ಸಮಾಜಕ್ಕೆ, ವಿಶೇಷವಾಗಿ ಭಾರತದಂತಹ ವಿಶಾಲವಾದ ಮತ್ತು ವೈವಿಧ್ಯಮಯ ದೇಶದಲ್ಲಿ ಅಗತ್ಯವಾದ ವೇಗದ, ಭೌತಿಕ ಸಂಪರ್ಕದ ಮೇಲೆ ಸರ್ಕಾರ ಗಮನಹರಿಸಿದೆ ಎಂದು ಹೇಳಿದರು. ಇದರಿಂದಾಗಿ ವಿಮಾನ ಪ್ರಯಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ಕೈಗೆಟಕುವ ದರದ ವಿಮಾನ ಪ್ರಯಾಣದ ತಮ್ಮ ದೂರದೃಷ್ಟಿಯನ್ನು ನೆನಪಿಸಿಕೊಂಡ ಅವರು, 'ಹವಾಯಿ ಚಪ್ಪಲಿ' ಧರಿಸಿದವರು ವಿಮಾನ ಪ್ರಯಾಣವನ್ನು ಪಡೆಯಲು ಶಕ್ತರಾಗಿರಬೇಕು ಎಂದರು.  8 ವರ್ಷಗಳನ್ನು ಪೂರೈಸಿರುವ ಉಡಾನ್ ಯೋಜನೆಯನ್ನು ಅವರು ಪ್ರಸ್ತಾಪಿಸಿದರು. 2 ಮತ್ತು 3ನೇ ಶ್ರೇಣಿ ನಗರಗಳಲ್ಲಿ ಹೊಸ ವಿಮಾನ ನಿಲ್ದಾಣ ಜಾಲಗಳು ಜನಸಾಮಾನ್ಯರಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡಿವೆ ಎಂದು ಅವರು ಹೇಳಿದರು. ಉಡಾನ್ ಯೋಜನೆಯ ಯಶಸ್ಸನ್ನು ಎತ್ತಿ ತೋರಿಸುತ್ತಾ, ಉಡಾನ್ ಅಡಿಯಲ್ಲಿ ಸುಮಾರು 3 ಲಕ್ಷ ವಿಮಾನ ಸಂಚಾರಗಳು ಕಾರ್ಯನಿರ್ವಹಿಸಿದ್ದು, ಇದುವರೆಗೆ 1.5 ಕೋಟಿ ಸಾಮಾನ್ಯ ನಾಗರಿಕರು ಸಂಚರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಣ್ಣ ಪಟ್ಟಣಗಳನ್ನು ಸಂಪರ್ಕಿಸುವ ಈ ಉಪಕ್ರಮದ ಅಡಿಯಲ್ಲಿ 600 ಕ್ಕೂ ಹೆಚ್ಚು ಮಾರ್ಗಗಳಿವೆ ಎಂದು ಅವರು ಹೇಳಿದರು. 2014 ರಲ್ಲಿದ್ದ ಸುಮಾರು 70 ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಭಾರತದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ 150 ಕ್ಕಿಂತ ಹೆಚ್ಚಿದೆ ಎಂದು ಅವರು ಹೇಳಿದರು.

 

ಜಾಗತಿಕ ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಲು ಭಾರತದ ಯುವಜನರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸಂಶೋಧನೆ ಮತ್ತು ಉದ್ಯೋಗದ ಮೇಲೆ ಸರ್ಕಾರ ನೀಡುತ್ತಿರುವ ಗಮನವನ್ನು ಎತ್ತಿ ತೋರಿಸಿದರು. ಕಳೆದ 10 ವರ್ಷಗಳಲ್ಲಿನ ಪ್ರಯತ್ನಗಳ ಫಲಿತಾಂಶವು ಈಗ ಗೋಚರಿಸುತ್ತಿದೆ ಎಂದು ಅವರು ಹೇಳಿದರು. ಇತ್ತೀಚಿನ ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕದಲ್ಲಿ ಪ್ರತಿಬಿಂಬಿಸಿದಂತೆ ಸಂಶೋಧನಾ ಗುಣಮಟ್ಟದಲ್ಲಿ ಜಾಗತಿಕವಾಗಿ ಭಾರತದ ಅತ್ಯುನ್ನತ ಸುಧಾರಣೆಯನ್ನು ಉಲ್ಲೇಖಿಸಿದರು. ಕಳೆದ 8-9 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಭಾಗವಹಿಸುವಿಕೆ 30 ರಿಂದ 100 ಕ್ಕೆ ಹೆಚ್ಚಿದೆ ಎಂದು ಅವರು ಹೇಳಿದರು. ಕ್ಯುಎಸ್‌ ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಭಾರತದ ಉಪಸ್ಥಿತಿಯು ಕಳೆದ ಹತ್ತು ವರ್ಷಗಳಲ್ಲಿ ಶೇ.300 ರಷ್ಟು ಹೆಚ್ಚಾಗಿದೆ, ಅಲ್ಲದೇ ಭಾರತದಲ್ಲಿ ಸಲ್ಲಿಸಲಾದ ಪೇಟೆಂಟ್‌ ಗಳು ಮತ್ತು ಟ್ರೇಡ್‌ಮಾರ್ಕ್‌ಗಳ ಸಂಖ್ಯೆಯು ಸಾರ್ವಕಾಲಿಕ ಎತ್ತರದಲ್ಲಿದೆ ಎಂದು ಪ್ರಧಾನ ಮಂತ್ರಿ ಒತ್ತಿಹೇಳಿದರು. ವಿಶ್ವಾದ್ಯಂತ 2,500 ಕ್ಕೂ ಹೆಚ್ಚು ಕಂಪನಿಗಳು ಈಗ ಭಾರತದಲ್ಲಿ ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು, ದೇಶದ ಸ್ಟಾರ್ಟಪ್ ಪೂರಕ ವ್ಯವಸ್ಥೆಯು ಅಭೂತಪೂರ್ವ ಬೆಳವಣಿಗೆಯಲ್ಲಿದೆ, ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ವಿಶ್ವಸಾರ್ಹ ಸ್ನೇಹಿತನಾಗಿ ಭಾರತದ ಜಾಗತಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಹಲವಾರು ಕ್ಷೇತ್ರಗಳಲ್ಲಿ ಜಾಗತಿಕ ಭವಿಷ್ಯವನ್ನು ರೂಪಿಸುವಲ್ಲಿ ಭಾರತವು ಮುಂದಾಳತ್ವ ವಹಿಸುತ್ತಿದೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಭಾರತವು ತನ್ನ ಅಗತ್ಯ ಔಷಧಿಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯದಿಂದ ಲಕ್ಷಾಂತರ ಡಾಲರ್‌ ಗಳನ್ನು ಗಳಿಸಬಹುದಿತ್ತು ಎಂದು ಹೇಳಿದರು. "ಭಾರತವು ಅದರಿಂದ ಪ್ರಯೋಜನ ಪಡೆಯುತ್ತಿತ್ತು, ಆದರೆ ಮಾನವೀಯತೆ ಕಳೆದುಕೊಳ್ಳುತ್ತಿತ್ತು. ಇವು ನಮ್ಮ ಮೌಲ್ಯಗಳಲ್ಲ. ಈ ಸವಾಲಿನ ಸಮಯದಲ್ಲಿ ನಾವು ನೂರಾರು ದೇಶಗಳಿಗೆ ಔಷಧಗಳು ಮತ್ತು ಜೀವರಕ್ಷಕ ಲಸಿಕೆಗಳನ್ನು ಪೂರೈಸಿದ್ದೇವೆ" ಎಂದು ಅವರು ಹೇಳಿದರು. ಭಾರತವು ಕಷ್ಟಕರ ಸಮಯದಲ್ಲಿ ಜಗತ್ತಿಗೆ ಸಹಾಯ ಮಾಡಲು ಸಾಧ್ಯವಾಯಿತು ಎಂದು ನನಗೆ ತೃಪ್ತಿ ಇದೆ ಎಂದರು. ಬಲವಾದ ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಭಾರತದ ಸಂಬಂಧಗಳ ಅಡಿಪಾಯವು ನಂಬಿಕೆ ಮತ್ತು ವಿಶ್ವಾಸಾರ್ಹತೆಯಾಗಿದೆ, ಅದು ಸಂಬಂಧಗಳನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ನಂಬುವುದಿಲ್ಲ ಮತ್ತು ಜಗತ್ತು ಸಹ ಇದನ್ನು ಅರ್ಥಮಾಡಿಕೊಳ್ಳುತ್ತಿದೆ ಎಂದು ಹೇಳಿದರು. ಪ್ರಪಂಚದ ಇತರ ಭಾಗಗಳೊಂದಿಗೆ ಭಾರತದ ಸಾಮರಸ್ಯದ ಬಾಂಧವ್ಯವನ್ನು ಉಲ್ಲೇಖಿಸಿದ ಶ್ರೀ ಮೋದಿ, ಭಾರತವು ಇತರರಿಗೆ ಅಸೂಯೆ ಅಥವಾ ಮತ್ಸರವನ್ನು ಉಂಟುಮಾಡದ ಪ್ರಗತಿಯ ದೇಶವಾಗಿದೆ ಎಂದರು. ಜಗತ್ತು ನಮ್ಮ ಪ್ರಗತಿಯಿಂದ ಸಂತೋಷಪಡುತ್ತದೆ, ಏಕೆಂದರೆ ಇಡೀ ಪ್ರಪಂಚವು ಅದರಿಂದ ಪ್ರಯೋಜನ ಪಡೆಯುತ್ತದೆ ಎಂದು ಹೇಳಿದರು. ಜಗತ್ತಿಗೆ ಭಾರತದ ಶ್ರೀಮಂತ ಕೊಡುಗೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಈ ಹಿಂದೆ ಭಾರತವು ಜಾಗತಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಿದೆ ಎಂದು ಹೇಳಿದರು, ಅದರ ಆಲೋಚನೆಗಳು, ಆವಿಷ್ಕಾರಗಳು ಮತ್ತು ಉತ್ಪನ್ನಗಳು ಶತಮಾನಗಳಿಂದ ವಿಶ್ವದ ಮೇಲೆ ಅಳಿಸಲಾಗದ ಛಾಪು ಮೂಡಿಸಿವೆ. ವಸಾಹತುಶಾಹಿಯಿಂದಾಗಿ ಭಾರತವು ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಹೇಳಿದರು. "ಇದು ಕೈಗಾರಿಕೆ 4.0 ಯುಗ. ಭಾರತ ಇನ್ನು ಗುಲಾಮ ದೇಶವಲ್ಲ. ನಾವು ಸ್ವಾತಂತ್ರ್ಯವನ್ನು ಗಳಿಸಿ 75 ವರ್ಷಗಳು ಕಳೆದಿವೆ, ಆದ್ದರಿಂದ ಈಗ ನಾವು ಸಜ್ಜಾಗಿದ್ದೇವೆ ಮತ್ತು ಸಿದ್ಧರಾಗಿದ್ದೇವೆ ಎಂದು ಶ್ರೀ ಮೋದಿ ಹೇಳಿದರು.

 

ಕೈಗಾರಿಕೆ 4.0 ಕ್ಕೆ ಅಗತ್ಯವಿರುವ ಕೌಶಲ್ಯಗಳು ಮತ್ತು ಮೂಲಸೌಕರ್ಯಗಳ ಮೇಲೆ ಭಾರತವು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕಳೆದ ದಶಕದಲ್ಲಿ, ಜಿ-20 ಮತ್ತು ಜಿ-7 ಶೃಂಗಸಭೆಗಳು ಸೇರಿದಂತೆ ವಿವಿಧ ಜಾಗತಿಕ ವೇದಿಕೆಗಳಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಕುರಿತು ಮಹತ್ವದ ಚರ್ಚೆಗಳು ನಡೆದಿವೆ, ಇಂದು, ಇಡೀ ಜಗತ್ತು ಭಾರತದ ಡಿಪಿಐ ಅನ್ನು ನೋಡುತ್ತಿದೆ ಎಂದು ಅವರು ಹೇಳಿದರು.  ಆಧಾರ್ ಮತ್ತು ಡಿಜಿಲಾಕರ್‌ ನಂತಹ ಭಾರತದ ಆವಿಷ್ಕಾರಗಳನ್ನು ಶ್ಲಾಘಿಸಿದ ಪಾಲ್ ರೋಮರ್ ಅವರೊಂದಿಗಿನ ಚರ್ಚೆಗಳನ್ನು ಪ್ರಧಾನಿ ಉಲ್ಲೇಖಿಸಿದರು. "ಅಂತರ್ಜಾಲದ ಯುಗದಲ್ಲಿ ಭಾರತವು ಫಸ್ಟ್-ಮೂವರ್ ಆಗುವ ಪ್ರಯೋಜನವನ್ನು ಹೊಂದಿರಲಿಲ್ಲ ಎಂದು ಶ್ರೀ ಮೋದಿ ಅವರು ಹೇಳಿದರು, ಖಾಸಗಿ ವೇದಿಕೆಗಳು ಅನುಕೂಲವಿರುವ ದೇಶಗಳಲ್ಲಿ ಡಿಜಿಟಲ್ ಕ್ಷೇತ್ರವನ್ನು ಮುನ್ನಡೆಸಿದವು. ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವ ಮೂಲಕ ಭಾರತವು ಜಗತ್ತಿಗೆ ಹೊಸ ಮಾದರಿಯನ್ನು ಒದಗಿಸಿದೆ ಮತ್ತು ವೇಗವಾದ ಮತ್ತು ಸೋರಿಕೆ-ಮುಕ್ತ ಸೇವೆ ವಿತರಣೆಗೆ ದೃಢವಾದ ವ್ಯವಸ್ಥೆಯನ್ನು ಒದಗಿಸುವ ಜನ್ ಧನ್, ಆಧಾರ್ ಮತ್ತು ಮೊಬೈಲ್ ತ್ರಿಜ್ಯ ಇದಕ್ಕೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. 500 ಮಿಲಿಯನ್‌ ಗಿಂತಲೂ ಹೆಚ್ಚು ದೈನಂದಿನ ಡಿಜಿಟಲ್ ವಹಿವಾಟುಗಳನ್ನು ಸುಗಮಗೊಳಿಸುವ ಯುಪಿಐ ಕುರಿತು ಮಾತನಾಡಿದ ಅವರು ಇದರ ಹಿಂದಿನ ಪ್ರೇರಕ ಶಕ್ತಿ ಕಾರ್ಪೊರೇಟ್‌ ಸಂಸ್ಥೆಗಳಲ್ಲ, ಆದರೆ ನಮ್ಮ ಸಣ್ಣ ಅಂಗಡಿಯವರು ಮತ್ತು ಬೀದಿಬದಿ ವ್ಯಾಪಾರಿಗಳು ಎಂದು ಹೇಳಿದರು. ಮೂಲಸೌಕರ್ಯ ಯೋಜನೆಯ ನಿರ್ಮಾಣದಲ್ಲಿನ ಅಡೆತಡೆಗಳನ್ನು ತೊಡೆದುಹಾಕಲು ರಚಿಸಲಾದ ಪ್ರಧಾನಮಂತ್ರಿಗತಿ ಶಕ್ತಿ ವೇದಿಕೆಯನ್ನು ಅವರು ಉಲ್ಲೇಖಿಸಿದರು. ಇದು ಈಗ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ಸಹಾಯ ಮಾಡುತ್ತಿದೆ. ಅಂತೆಯೇ, ಒ ಎನ್‌ ಡಿ ಸಿ ಪ್ಲಾಟ್‌ಫಾರ್ಮ್ ಆನ್‌ಲೈನ್ ಚಿಲ್ಲರೆ ವ್ಯಾಪಾರದಲ್ಲಿ ಪ್ರಜಾಪ್ರಭುತ್ವೀಕರಣ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ನಾವೀನ್ಯತೆ ಎಂದು ಸಾಬೀತುಪಡಿಸುತ್ತಿದೆ. ಡಿಜಿಟಲ್ ನಾವೀನ್ಯತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಜೊತೆಯಾಗಿರಬಲ್ಲವು ಎಂಬುದನ್ನು ಭಾರತವು ಪ್ರದರ್ಶಿಸಿದೆ ಮತ್ತು ತಂತ್ರಜ್ಞಾನವು ನಿಯಂತ್ರಣ ಮತ್ತು ವಿಭಜನೆಗಿಂತ ಸೇರ್ಪಡೆ, ಪಾರದರ್ಶಕತೆ ಮತ್ತು ಸಬಲೀಕರಣದ ಸಾಧನವಾಗಿದೆ ಎಂಬ ಕಲ್ಪನೆಯನ್ನು ಬಲಪಡಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಇಂದಿನ ಯುಗದ ತುರ್ತು ಅಗತ್ಯಗಳಾದ ಸ್ಥಿರತೆ, ಸುಸ್ಥಿರತೆ ಮತ್ತು ಪರಿಹಾರಗಳಿಗೆ ಒತ್ತು ನೀಡುವ ಮೂಲಕ 21ನೇ ಶತಮಾನವು ಮಾನವ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಅವಧಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಮನುಕುಲದ ಉತ್ತಮ ಭವಿಷ್ಯಕ್ಕಾಗಿ ಈ ಅಂಶಗಳು ಅತ್ಯಗತ್ಯ ಮತ್ತು ಭಾರತವು ಅವುಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಜನರು ಸತತ ಮೂರನೇ ಬಾರಿಗೆ ಸರ್ಕಾರಕ್ಕೆ ತಮ್ಮ ಆದೇಶವನ್ನು ನೀಡಿದ್ದಾರೆ, ಆರು ದಶಕಗಳಲ್ಲಿ ಮೊದಲ ಬಾರಿಗೆ ಸ್ಥಿರತೆಯ ಬಲವಾದ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು. ಹರಿಯಾಣದಲ್ಲಿ ಇತ್ತೀಚಿನ ಚುನಾವಣೆಗಳನ್ನು ಅವರು ಪ್ರಸ್ತಾಪಿಸಿದ ಅವರು, ಅಲ್ಲಿ ಸಾರ್ವಜನಿಕರು ಈ ಭಾವನೆಯನ್ನು ಬಲಪಡಿಸಿದ್ದಾರೆ ಎಂದರು.

ಹವಾಮಾನ ಬದಲಾವಣೆಯ ಜಾಗತಿಕ ಬಿಕ್ಕಟ್ಟನ್ನು ಪ್ರಸ್ತಾಪಿಸಿದ ಪ್ರಧಾನಿ, ಇದು ಇಡೀ ಮಾನವಕುಲ ಎದುರಿಸುತ್ತಿರುವ ಬಿಕ್ಕಟ್ಟು ಎಂದು ಹೇಳಿದರು. ಜಾಗತಿಕ ಹವಾಮಾನ ಸವಾಲಿಗೆ ಭಾರತ ನೀಡಿದ ಕೊಡುಗೆಯ ಹೊರತಾಗಿಯೂ, ಅದನ್ನು ಎದುರಿಸುವಲ್ಲಿ ದೇಶವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು. ಹಸಿರು ಸ್ಥಿತ್ಯಂತರವನ್ನು ಸರ್ಕಾರವು ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಯನ್ನಾಗಿ ಮಾಡಿದೆ ಮತ್ತು ಸುಸ್ಥಿರತೆಯು ಭಾರತದ ಅಭಿವೃದ್ಧಿ ಯೋಜನೆಯ ತಿರುಳಾಗಿದೆ ಎಂದು ಶ್ರೀ ಮೋದಿ ಹೇಳಿದರು. ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಮತ್ತು ಕೃಷಿಗಾಗಿ ಸೌರ ಪಂಪ್ ಯೋಜನೆಗಳು, ಇವಿ ಕ್ರಾಂತಿ, ಎಥೆನಾಲ್ ಮಿಶ್ರಣ ಕಾರ್ಯಕ್ರಮ, ಬೃಹತ್‌ ಪವನ ವಿದ್ಯುತ್ ಘಟಕಗಳು, ಎಲ್ ಇ ಡಿ, ಸೌರ ಚಾಲಿತ ವಿಮಾನ ನಿಲ್ದಾಣಗಳು ಮತ್ತು ಜೈವಿಕ ಅನಿಲ ಸ್ಥಾವರಗಳನ್ನು ಅವರು ಈ ಬದ್ಧತೆಯ ಉದಾಹರಣೆಗಳಾಗಿ ಪ್ರಸ್ತಾಪಿಸಿದರು. ಪ್ರತಿಯೊಂದು ಕಾರ್ಯಕ್ರಮವು ಹಸಿರು ಭವಿಷ್ಯ ಮತ್ತು ಹಸಿರು ಉದ್ಯೋಗಗಳ ಕಡೆಗೆ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

 

ಸ್ಥಿರತೆ ಮತ್ತು ಸುಸ್ಥಿರತೆಯ ಜೊತೆಗೆ ಭಾರತವು ಜಾಗತಿಕ ಸವಾಲುಗಳನ್ನು ಎದುರಿಸಲು ಪರಿಹಾರಗಳನ್ನು ಒದಗಿಸುವತ್ತ ಗಮನಹರಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಳೆದ ದಶಕದಲ್ಲಿ ಭಾರತವು ಈ ಸವಾಲುಗಳನ್ನು ಎದುರಿಸಲು ಅಗತ್ಯವಾದ ಹಲವಾರು ಉಪಕ್ರಮಗಳಲ್ಲಿ ಕೆಲಸ ಮಾಡಿದೆ, ಇದರಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟ, ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್, ಜಾಗತಿಕ ಜೈವಿಕ ಇಂಧನ ಒಕ್ಕೂಟ ಮತ್ತು ಯೋಗ, ಆಯುರ್ವೇದ, ಮಿಷನ್ ಲೈಫ್ ಮತ್ತು ಮಿಷನ್ ಸಿರಿಧಾನ್ಯ ಪ್ರಯತ್ನಗಳು ಸೇರಿವೆ ಎಂದು ಅವರು ಹೇಳಿದರು.  "ಈ ಎಲ್ಲಾ ಉಪಕ್ರಮಗಳು ವಿಶ್ವದ ಜ್ವಲಂತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ" ಎಂದು ಅವರು ಹೇಳಿದರು.

ಭಾರತದ ಪ್ರಗತಿಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, "ಭಾರತವು ಪ್ರಗತಿಯಾದಂತೆ ಜಗತ್ತು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತದೆ" ಎಂದು ಹೇಳಿದರು. ಭಾರತದ ಶತಮಾನವು ಇಡೀ ಮನುಕುಲದ ವಿಜಯವಾಗಿ ಪರಿಣಮಿಸುತ್ತದೆ. ಭಾರತದ ಶತಮಾನವು ಪ್ರತಿಯೊಬ್ಬರ ಪ್ರತಿಭೆಯ ಮೇಲೆ ನಿಂತಿದೆ ಮತ್ತು ಹೊಸತನಗಳಿಂದ ಸಮೃದ್ಧವಾಗಿದೆ ಎಂದು ಹೇಳಿದರು. ಜಾಗತಿಕ ಸ್ಥಿರತೆ ಮತ್ತು ಶಾಂತಿಯನ್ನು ಉತ್ತೇಜಿಸುವಲ್ಲಿ ಭಾರತದ ಪ್ರಯತ್ನಗಳ ಮಹತ್ವವನ್ನು ಶ್ರೀ ಮೋದಿ ಒತ್ತಿ ಹೇಳಿದರು. "ಇದು ಭಾರತದ ಉಪಕ್ರಮಗಳು ಹೆಚ್ಚು ಸ್ಥಿರವಾದ ಜಗತ್ತಿಗೆ ಕೊಡುಗೆ ನೀಡುವ ಮತ್ತು ಜಾಗತಿಕ ಶಾಂತಿಯನ್ನು ಹೆಚ್ಚಿಸುವ ಶತಮಾನವಾಗಿದೆ" ಎಂದು ಶ್ರೀ ಮೋದಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indonesia To Dubai, IITs And IIMs Are Going Global: The Strategy Behind India's Overseas Campuses

Media Coverage

Indonesia To Dubai, IITs And IIMs Are Going Global: The Strategy Behind India's Overseas Campuses
NM on the go

Nm on the go

Always be the first to hear from the PM. Get the App Now!
...
List of Outcomes: Visit of Prime Minister Shri Narendra Modi to Australia
July 09, 2026
S. No.TitleBrief description

 

1

 

Joint Declaration on Defense and Security Cooperation (JDDSC)

Renews the existing Joint Declaration on Security (2009). It identifies interoperability of forces, capacity building, maritime domain, defense industrial collaboration, cyber security and technology, counter terrorism, HADR, and unified approach in UNCLOS, ASEAN, PIF, IORA, as areas of cooperation.

2

Maritime Security Collaboration Roadmap (MSCR)

Enhances maritime security cooperation by promoting information sharing, and capability development, and operational coordination.

3

India-Australia Joint Statement on Energy Security

Reaffirms the commitment of both countries to energy security in the face of geopolitical tensions.

4

Finalisation of Administrative Arrangement of the India-Australia Civil Nuclear Agreement

Operationalises the India-Australia Civil Nuclear Agreement signed in 2014, and enables supply of uranium from Australia to India.

5

Australia-India Partnership for Cyber, Critical Technologies, Supply Chains (PACTS)

Builds on the 2020 Framework Arrangement on Cyber and Cyber Enabled Critical Technology Cooperation. Aims to support national and regional security, promote collaboration to make critical supply chains more resilient, and strengthen collaboration in critical technologies, cyber security, and digital resilience.

6

MoU between Indian Coast Guard (ICG) and Maritime Border Command (MBC) of Australia

Establishes cooperation in the field of Maritime Law Enforcement, domain awareness, and maritime border protection between ICG and MBC

7

Australian invite for an Indian military instructor in Australian Defense College for 2028-29

Announces the deployment of an Indian military instructor in Australian Defense College in 2028-29

8

MoU between Ministry of Skill Development and Entrepreneurship (MSDE),and Technical and Further Education (TAFE), Government of Western Australia to set up a Centre of Excellence in Mining and Mining Equipment, Technology and Services (METS

Sets up a Centre of Excellence in Mining Equipment, Technology and Services at National Skill Training Institute (NSTI), Bhubaneswar to develop a Centre of academic excellence in sub-domains of mining operations, mine safety, mineral processing, mine machinery, etc. It will enable exchange of students/trainees between National Centre for Excellence and TAFE, Western Australia.

9

Handing over Letter of Intent (LoI) to Flinders’ University for setting up its campus in India (Bengaluru)

Enables setting up of the campus of Flinders University in Bengaluru.

10

Signing of Letter of Intent (LoI) between National Council for Vocational Education and Training (NCVET) and Australian Skills Quality Authority (ASQA)

Acknowledges the importance of quality assurance in Technical and Vocational Education and Training (TVET). It will strengthen regulatory frameworks in vocational training systems, co-development and alignment of occupational standards in priority sectors, and enable capacity building of officials, staff exchanges, joint workshops/research activities.

11

Repatriation of Indian artifacts

Brings back 3 Indian antiquities:

a. The sacred bull Nandi, vehicle of Shiva [Description: Tamil Nadu, India, 11th to 12th century Granite]
b. Trident with Auspicious Kali [Bhadrakali][Description: Tamil Nadu, India, 11th century bronze]
c. The six-headed Skanda (Karttikeya) [Description: Tamil Nadu, India, 12th century basalt]

12

Operationalisation the Rooftop Solar Training Academy

Established and operationalised in the Pandit Deendayal Energy University, Gandhinagar in collaboration by Department of Climate Change, Environment and Water (DCEEW), India’s Sector Skills Council for Green Jobs (SSCGJ), ReNEW. Aims to train 2000 women and youth as solar technicians/installers/helpers. Supports the PM Surya Ghar Yojana launched by Hon PM in January 2024, and India’s green energy journey

13

MoU under Australia-Canada-India Technology and Innovation (ACITI) Partnership

Aims to advance trilateral cooperation in emerging technologies and innovation, under the Australia–Canada–India Technology and Innovation (ACITI) Partnership

14

MoU between GeoScience Australia (GA) and Geological Survey of India (GSI)

Builds on the MoU on Scientific and Technical Cooperation signed in 2015. Aimed at adoption of advanced exploration methodologies, capacity building and skill development, and enable technological upgradation and modernization of GSI infrastructure.

15

Traditional Knowledge Digital Library access agreement between Council of Scientific & Industrial Research (CSIR) and IP Australia

Provides access of the Traditional Knowledge Digital Library (TKDL) database to IP Australia.

16

MoU between Council of Scientific and Industrial Research (CSIR) and University of Melbourne

Establishes linkages between both institutions for future collaboration including collaborative research programs towards drug target identification, trainee programs, and faculty exchange Programs

17

MoU between Satyajit Ray Film and Television Institute (SRFTI), Kolkata with Griffith Film School, South Brisbane, Australia.

Establish flexible and open-ended framework for collaboration including joint academic activities and workshops, development of joint projects in cinema and allied fields, and collaboration on short-term workshops, or summer schools.

18

Handing over of Letter of Approval to Victoria University

Permits the Victoria University to set up and operate its campus in Gurugram.