ನೀತಿಯು ವೇಗವರ್ಧಿತ ಮತ್ತು ಅಂತರ್ಗತ ಬೆಳವಣಿಗೆಗಾಗಿ ತಾಂತ್ರಿಕವಾಗಿ ಸಶಕ್ತವಾದ, ಸಂಯೋಜಿತ, ವೆಚ್ಚದಾಯಕ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ
ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಜಾಗತಿಕ ಮಾನದಂಡಗಳನ್ನು ಸಾಧಿಸುವುದು, ಲಾಜಿಸ್ಟಿಕ್ಸ್ ವಲಯದಲ್ಲಿ ಭಾರತದ ಜಾಗತಿಕ ಶ್ರೇಯಾಂಕವನ್ನು ಸುಧಾರಿಸುವುದು, ಜಾಗತಿಕ ವ್ಯಾಪಾರದಲ್ಲಿ ಹೆಚ್ಚಿನ ಪಾಲನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ
​​​​​​​ಸುಧಾರಿತ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆಯಿಂದಾಗಿ ಎಂಎಸ್‌ಎಂಇಗಳು, ರೈತರು ಪ್ರಯೋಜನ ಪಡೆಯುತ್ತಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಗೆ ಅನುಮೋದನೆ ನೀಡಿದೆ. ಈ ನೀತಿಯು ಲಾಜಿಸ್ಟಿಕ್ಸ್ ವಲಯಕ್ಕೆ ಅಂತರ್ಶಿಸ್ತೀಯ, ಬಹು ವಲಯ, ಬಹು-ವ್ಯಾಪ್ತಿ ಮತ್ತು ಸಮಗ್ರ ನೀತಿಯ ಚೌಕಟ್ಟನ್ನು ರೂಪಿಸುತ್ತದೆ. ಈ ನೀತಿಯು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ಗೆ ಪೂರಕವಾಗಿದೆ. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಯ ಗುರಿಯನ್ನು ಹೊಂದಿದೆ, ಹಾಗೆಯೇ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಲಾಜಿಸ್ಟಿಕ್ಸ್ ಸೇವೆಗಳು ಮತ್ತು ಮಾನವ ಸಂಪನ್ಮೂಲಗಳನ್ನು ಸುವ್ಯವಸ್ಥಿತ ಪ್ರಕ್ರಿಯೆಗಳು, ನಿಯಂತ್ರಣ ಚೌಕಟ್ಟು, ಕೌಶಲ್ಯ ಅಭಿವೃದ್ಧಿ, ಉನ್ನತ ಶಿಕ್ಷಣದಲ್ಲಿ ಮುಖ್ಯವಾಹಿನಿಯ ಲಾಜಿಸ್ಟಿಕ್ಸ್ ಮತ್ತು ಸೂಕ್ತ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ದಕ್ಷತೆಯನ್ನು ತರಲು ಯೋಜಿಸಲಾಗಿದೆ.

ವೇಗವರ್ಧಿತ ಮತ್ತು ಅಂತರ್ಗತ ಬೆಳವಣಿಗೆಗಾಗಿ ತಾಂತ್ರಿಕವಾಗಿ ಸಶಕ್ತವಾದ, ಸಂಯೋಜಿತ, ವೆಚ್ಚದಾಯಕ, ಸ್ಥಿತಿಸ್ಥಾಪಕ, ಸುಸ್ಥಿರ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಈ ನೀತಿಯ ದೃಷ್ಟಿಕೋನವಾಗಿದೆ.

ಈ ನೀತಿಯು ಗುರಿಗಳನ್ನು ನಿಗದಿಪಡಿಸುತ್ತದೆ ಮತ್ತು ಅವುಗಳನ್ನು ಸಾಧಿಸಲು ವಿವರವಾದ ಕ್ರಿಯಾ ಯೋಜನೆಯನ್ನು ಒಳಗೊಂಡಿರುತ್ತದೆ. ಆ ಗುರಿಗಳೆಂದರೆ:

i.    2030 ರ ವೇಳೆಗೆ ಭಾರತದಲ್ಲಿ ಜಾಗತಿಕ ಮಾನದಂಡಗಳಿಗೆ ಸಮನಾಗಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು 
ii.    ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಶ್ರೇಯಾಂಕವನ್ನು ಸುಧಾರಿಸಿ, 2030 ರ ವೇಳೆಗೆ ಅಗ್ರ 25 ದೇಶಗಳಲ್ಲಿ ಒಂದಾಗುವುದು 
iii.    ಸಮರ್ಥ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಗಾಗಿ ಡೇಟಾ ಚಾಲಿತ ನಿರ್ಧಾರ ಕೈಗೊಳ್ಳುವ ಬೆಂಬಲ ಕಾರ್ಯವಿಧಾನವನ್ನು ರಚಿಸುವುದು

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಸಮಾಲೋಚನಾ ಪ್ರಕ್ರಿಯೆಯ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳು, ಉದ್ಯಮದ ಪಾಲುದಾರರು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಹಲವಾರು ಸುತ್ತಿನ ಸಮಾಲೋಚನೆಗಳನ್ನು ನಡೆಸಲಾಗಿದೆ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳನ್ನು ಪರಿಗಣಿಸಲಾಗಿದೆ.

ನೀತಿಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಭಾಗೀದಾರರಾದ್ಯಂತ ಪ್ರಯತ್ನಗಳನ್ನು ಸಂಯೋಜಿಸಲು, ನೀತಿಯು ಅಸ್ತಿತ್ವದಲ್ಲಿರುವ ಸಾಂಸ್ಥಿಕ ಚೌಕಟ್ಟನ್ನು ಅಂದರೆ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ಅಡಿಯಲ್ಲಿ ರಚಿಸಲಾದ ಕಾರ್ಯದರ್ಶಿಗಳ ಸಶಕ್ತ ಗುಂಪನ್ನು (ಇಜಿಒಎಸ್‌) ಬಳಸಿಕೊಳ್ಳುತ್ತದೆ. ಎನ್‌ಪಿಜಿಯ ಟಿಒಆರ್‌ ಅಡಿಯಲ್ಲಿ ಒಳಗೊಂಡಿರದ ಲಾಜಿಸ್ಟಿಕ್ಸ್ ವಲಯದಲ್ಲಿನ ಪ್ರಕ್ರಿಯೆಗಳು, ನಿಯಂತ್ರಣ ಮತ್ತು ಡಿಜಿಟಲ್ ಸುಧಾರಣೆಗಳಿಗೆ ಸಂಬಂಧಿಸಿದ ಮಾನದಂಡಗಳ ಮೇಲ್ವಿಚಾರಣೆಗಾಗಿ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ (ಎನ್‌ಪಿಜಿ) ಮಾದರಿಯಲ್ಲಿ "ಸೇವೆಗಳ ಸುಧಾರಣಾ ಗುಂಪು" (ಎಸ್‌ಐಜಿ) ಅನ್ನು ಸಹ ಇಜಿಒಎಸ್‌ ಸ್ಥಾಪಿಸುತ್ತದೆ. 

ಈ ನೀತಿಯು ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಸೂಕ್ತವಾದ ಪ್ರಾದೇಶಿಕ ಯೋಜನೆ, ಮಾನದಂಡಗಳ ಪ್ರಚಾರ, ಲಾಜಿಸ್ಟಿಕ್ಸ್ ಮೌಲ್ಯ ಸರಪಳಿಯಲ್ಲಿ ಡಿಜಿಟಲೀಕರಣ ಮತ್ತು ಯಾಂತ್ರೀಕೃತಗೊಂಡ ಉತ್ತಮ ಟ್ರ್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನಗಳೊಂದಿಗೆ ಗೋದಾಮುಗಳ ಸಮರ್ಪಕ ಅಭಿವೃದ್ಧಿಯ ಬಗ್ಗೆ ಗಮನಹರಿಸಲಾಗುತ್ತದೆ.
ವಿವಿಧ ಭಾಗೀದಾರರ ನಡುವೆ ತಡೆರಹಿತ ಸಮನ್ವಯವನ್ನು ಸುಲಭಗೊಳಿಸಲು ಮತ್ತು ಸಮಸ್ಯೆಗಳ ತ್ವರಿತ ಪರಿಹಾರ, ಸುವ್ಯವಸ್ಥಿತ ಎಕ್ಸಿಮ್‌ ಪ್ರಕ್ರಿಯೆಗಳು, ಕೌಶಲ್ಯಪೂರ್ಣ ಮಾನವಶಕ್ತಿಯ ಉದ್ಯೋಗಾರ್ಹ ಪಡೆಯನ್ನು ರಚಿಸಲು ಮಾನವ ಸಂಪನ್ಮೂಲ ಅಭಿವೃದ್ಧಿಗಳ ಬಗ್ಗೆಯೂ ನೀತಿಯು ಒತ್ತು ನೀಡುತ್ತದೆ. 

ವಿವಿಧ ಉಪಕ್ರಮಗಳ ಅನುಷ್ಠಾನಕ್ಕೆ ತಕ್ಷಣದ ಕಾರ್ಯಸೂಚಿಯನ್ನು ನೀತಿಯು ಸ್ಪಷ್ಟವಾಗಿ ರೂಪಿಸುತ್ತದೆ. ವಾಸ್ತವವಾಗಿ, ಈ ನೀತಿಯ ಪ್ರಯೋಜನಗಳು ಗರಿಷ್ಠ ಸಂಭವನೀಯ ಪರಿಣಾಮವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು, ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ಯುಲಿಪ್‌), ಲಾಜಿಸ್ಟಿಕ್ಸ್ ಸೇವೆಗಳ ಸುಲಭ ವೇದಿಕೆ, ಇ-ಹ್ಯಾಂಡ್‌ಬುಕ್ ಆನ್ ವೇರ್‌ಹೌಸಿಂಗ್, ಪಿಎಂ ಗತಿ ಶಕ್ತಿ ಕುರಿತ ತರಬೇತಿ ಕೋರ್ಸ್‌ಗಳು ಸೇರಿದಂತೆ ನೀತಿಯ ಅಡಿಯಲ್ಲಿ ಪ್ರಮುಖ ಉಪಕ್ರಮಗಳು ಮತ್ತು ಐ-ಗಾಟ್ ಪ್ಲಾಟ್‌ಫಾರ್ಮ್‌ನಲ್ಲಿ ಲಾಜಿಸ್ಟಿಕ್ಸ್ ಗಳನ್ನು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಬಿಡುಗಡೆಯ ಜೊತೆಯಲ್ಲಿಯೇ ಪ್ರಾರಂಭಿಸಲಾಗಿದೆ.  ತನ್ಮೂಲಕ ಅನುಷ್ಠಾನಕ್ಕೆ ಬೇಕಾದ ತಕ್ಷಣದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಅಲ್ಲದೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂಪೂರ್ಣವಾಗಿ ಇದರಲ್ಲಿ ಸೇರಿಸಲಾಗಿದೆ. ಹದಿನಾಲ್ಕು ರಾಜ್ಯಗಳು ಈಗಾಗಲೇ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ರೀತಿಯಲ್ಲಿ ತಮ್ಮ ರಾಜ್ಯ ಲಾಜಿಸ್ಟಿಕ್ಸ್ ನೀತಿಗಳನ್ನು ಅಭಿವೃದ್ಧಿಪಡಿಸಿವೆ ಮತ್ತು 13 ರಾಜ್ಯಗಳಲ್ಲಿ ಇದು ಕರಡು ಹಂತದಲ್ಲಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಧಾನ ಮಂತ್ರಿ ಗತಿಶಕ್ತಿ ಅಡಿಯಲ್ಲಿನ ಸಾಂಸ್ಥಿಕ ಚೌಕಟ್ಟುಗಳು ನೀತಿಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತವೆ. ಇದು ಎಲ್ಲಾ ಭಾಗೀದಾರರಿಂದ ನೀತಿಯ ವೇಗದ ಮತ್ತು ಪರಿಣಾಮಕಾರಿ ಅಳವಡಿಕೆಯನ್ನು ಖಚಿತಪಡಿಸುತ್ತದೆ.

ಈ ನೀತಿಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕೃಷಿ ಹಾಗೂ ಸಂಬಂಧಿತ ವಲಯಗಳು, ಹೆಚ್ಚು ಚಾಲ್ತಿಯಲ್ಲಿರುವ ಗ್ರಾಹಕ ಸರಕುಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳಂತಹ ಇತರ ವಲಯಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಮಟ್ಟದ ನಿರೀಕ್ಷಣೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಪೂರೈಕೆ ಸರಪಳಿಯಲ್ಲಿನ ನಷ್ಟಗಳು ಮತ್ತು ಬೃಹತ್ ದಾಸ್ತಾನುಗಳ ಅಗತ್ಯವು ಕಡಿಮೆಯಾಗುತ್ತದೆ.

ಜಾಗತಿಕ ಮೌಲ್ಯ ಸರಪಳಿಗಳ ಹೆಚ್ಚಿನ ಸಂಯೋಜನೆ ಮತ್ತು ಜಾಗತಿಕ ವ್ಯಾಪಾರದಲ್ಲಿ ದೇಶದಲ್ಲಿ ವೇಗವರ್ಧಿತ ಆರ್ಥಿಕ ಬೆಳವಣಿಗೆಯನ್ನು ಸುಗಮಗೊಳಿಸುವುದು ಮತ್ತೊಂದು ಉದ್ದೇಶವಾಗಿದೆ.

ಇದು ಜಾಗತಿಕ ಮಾನದಂಡಗಳನ್ನು ಸಾಧಿಸಲು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ದೇಶದ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಶ್ರೇಯಾಂಕ ಮತ್ತು ಅದರ ಜಾಗತಿಕ ಸ್ಥಾನವನ್ನು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ನೀತಿಯು ಭಾರತದ ಲಾಜಿಸ್ಟಿಕ್ಸ್ ವಲಯವನ್ನು ಪರಿವರ್ತಿಸಲು, ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸಲು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಜಾಗತಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸ್ಪಷ್ಟ ಮಾರ್ಗಸೂಚಿಯನ್ನು ಒದಗಿಸುತ್ತದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jobs, Strong Supply Chains And More: PM Modi's Post Explains Why India-EU Trade Deal Is A Milestone

Media Coverage

Jobs, Strong Supply Chains And More: PM Modi's Post Explains Why India-EU Trade Deal Is A Milestone
NM on the go

Nm on the go

Always be the first to hear from the PM. Get the App Now!
...
PM Modi shares a Sanskrit verse emphasising discipline, service and wisdom
January 28, 2026

The Prime Minister, Shri Narendra Modi, shared a Sanskrit Subhashitam emphasising universal principles of discipline, service, and wisdom as the foundation of Earth’s future:

"सेवाभाव और सत्यनिष्ठा से किए गए कार्य कभी व्यर्थ नहीं जाते। संकल्प, समर्पण और सकारात्मकता से हम अपने साथ-साथ पूरी मानवता का भी भला कर सकते हैं।

सत्यं बृहदृतमुग्रं दीक्षा तपो ब्रह्म यज्ञः पृथिवीं धारयन्ति ।

सा नो भूतस्य भव्यस्य पत्न्युरुं लोकं पृथिवी नः कृणोतु॥"

The Subhashitam conveys that, universal truth, strict discipline, vows of service to all, a life of austerity, and continuous action guided by profound wisdom – these sustain the entire earth. May this earth, which shapes our past and future, grant us vast territories.

The Prime Minister wrote on X;

“सेवाभाव और सत्यनिष्ठा से किए गए कार्य कभी व्यर्थ नहीं जाते। संकल्प, समर्पण और सकारात्मकता से हम अपने साथ-साथ पूरी मानवता का भी भला कर सकते हैं।

सत्यं बृहदृतमुग्रं दीक्षा तपो ब्रह्म यज्ञः पृथिवीं धारयन्ति ।

सा नो भूतस्य भव्यस्य पत्न्युरुं लोकं पृथिवी नः कृणोतु॥"