It is only partnerships that will get us to our goals: PM Modi
The health of mothers will determine the health of the children and the health of children will determine the health of our tomorrow: PM Modi
The India story is one of hope: PM Narendra Modi at Partners' Forum
We are committed to increasing India’s health spending to 2.5 percent of GDP by 2025: Prime Minister

ವೇದಿಕೆ ಮೇಲಿರುವ ಎಲ್ಲ ಆದರಣೀಯ ಗಣ್ಯರೇ,

 

ದೇಶ ವಿದೇಶಗಳ ಪ್ರತಿನಿಧಿಗಳೇ,

 

ಮಹಿನಿಯರೇ ಮತ್ತು ಮಹಿಳೆಯರೇ,

 

ನಮಸ್ತೇ                  

 

      ಜಗತ್ತಿನ ನಾನಾ ಮೂಲೆಗಳಿಂದ ಈ ಪಾಲುದಾರರ ಶೃಂಗಸಭೆ-2018ಕ್ಕೆ ಆಗಮಿಸಿರುವ ಎಲ್ಲ ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ.  ಪಾಲುದಾರಿಕೆ ಅಥವಾ ಸಹಭಾಗಿತ್ವದಿಂದಾಗಿ ಮಾತ್ರ ನಾವು ನಮ್ಮ ಗುರಿಗಳನ್ನು ಸಾಧಿಸಬಹುದಾಗಿದೆ. ದೇಶಗಳ ನಡುವೆ, ಸಮುದಾಯಗಳ ನಡುವೆ ಮತ್ತು ಜನರ ನಡುವೆ ಸಹಭಾಗಿತ್ವ ಅತ್ಯಗತ್ಯ. ಸುಸ್ಥಿರ ಅಭವೃದ್ಧಿಯ ತತ್ವದ ಪ್ರತಿಬಿಂಬವೇ ಇದಾಗಿದೆ.

      ದೇಶಗಳು ತಮ್ಮ ಸ್ವಯಂ ಪ್ರಯತ್ನಗಳಿಂದಾಗಿ ಸಾಕಷ್ಟು ಮುಂದುವರಿದಿವೆ. ಅವುಗಳು ಸಮುದಾಯಗಳ ಸಬಲೀಕರಣ, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಬೆಳವಣಿಗೆಗೆ ಭಾರೀ ಉತ್ತೇಜನ ನೀಡುವುದಕ್ಕೆ ಬದ್ಧವಾಗಿವೆ ಮತ್ತು ಅಂತಿಮವಾಗಿ ಯಾವ ರಾಷ್ಟ್ರವು ಹಿಂದೆ ಬೀಳದಂತೆ ಮುನ್ನುಗ್ಗುತ್ತಿವೆ. ತಾಯಂದಿರ ಆರೋಗ್ಯ ಮಕ್ಕಳ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗೆಯೇ ಮಕ್ಕಳ ಆರೋಗ್ಯ ನಾಳಿನ ನಮ್ಮ ದೇಶದ ಆರೋಗ್ಯವನ್ನು ನಿರ್ಧರಿಸುತ್ತದೆ.

 

      ಆರೋಗ್ಯ ಸುಧಾರಣೆ ಮತ್ತು ಮಕ್ಕಳು ಹಾಗೂ ತಾಯಂದಿರ ಸೌಖ್ಯ ಕಾಪಾಡುವ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆ ಮತ್ತು ಚರ್ಚೆಗಳನ್ನು ನಡೆಸಲು ನಾವಿಲ್ಲಿ ಸೇರಿದ್ದೇವೆ. ಇಂದಿನ ಚರ್ಚೆಗಳ ಫಲಿತಾಂಶ ನಾಳಿನ  ಭವಿಷ್ಯದ ಮೇಲೆ ಭಾರೀ ಪರಿಣಾಮ ಬೀರಲಿದೆ.

 

      ಈ ಪಾಲುದಾರ ವೇದಿಕೆಯ ಮುನ್ನೋಟ ನಮ್ಮ ಭಾರತದ ಪುರಾತನ ಜ್ಞಾನದಲ್ಲಿರುವಂತೆ ‘ವಸುದೈವ ಕುಟುಂಬಕಂ’ ಅಂದರೆ ‘ಇಡೀ ವಿಶ್ವವೇ ಒಂದು ಕುಟುಂಬ’ ಎಂಬ ತತ್ವಕ್ಕೆ ಅನುಗುಣವಾಗಿದೆ. ಈ ಮಾರ್ಗ ನಮ್ಮ ಸರ್ಕಾರದ ಸಿದ್ಧಾಂತ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಅಂದರೆ ಸಮಗ್ರ ಪ್ರಯತ್ನಗಳು ಮತ್ತು ಪಾಲುದಾರಿಕೆಯ ಮೂಲಕ ಎಲ್ಲರನ್ನೂ ಒಳಗೊಂಡಂತೆ ಪ್ರಗತಿ ಸಾಧಿಸುವುದಾಗಿದೆ.

 

      ತಾಯಂದಿರು, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಚನೆಯಾಗಿರುವ ಈ ಪಾಲುದಾರಿಕೆ ವೇದಿಕೆ ಅತ್ಯಂತ ವಿಭಿನ್ನ ಮತ್ತು ಪಾರಿಣಾಮಕಾರಿಯಾದುದು. ನಾವು ಉತ್ತಮ ಆರೋಗ್ಯಕ್ಕಷ್ಟೇ ಪ್ರಯತ್ನಿಸುತ್ತಿಲ್ಲ, ತ್ವರಿತ ಪ್ರಗತಿಗೂ ವಾದ ಮಂಡಿಸುತ್ತಿದ್ದೇವೆ.

 

      ಕ್ಷಿಪ್ರ ಪ್ರಗತಿಗೆ ಜಗತ್ತು ಹಲವು ಮಾರ್ಗಗಳನ್ನು ಹುಡುಕುತ್ತಿರುವಂತೆಯೇ ಮಹಿಳೆಯರ ಉತ್ತಮ ಆರೋಗ್ಯ ಕಾಪಾಡುವುದು ಕೂಡ ಒಂದು ಅತ್ಯುತ್ತಮ ವಿಧಾನವಾಗಿದೆ. ಈ ನಿಟ್ಟಿನಲ್ಲಿ ನಾವು ಕಳೆದ ಕೆಲವು ವರ್ಷಗಳಿಂದೀಚೆಗೆ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಇನ್ನೂ ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಹೆಚ್ಚಿನ ಬಜೆಟ್ ತೆಗೆದಿರಿಸುವ ಮೂಲಕ ಹೆಚ್ಚಿನ ಫಲಿತಾಂಶಗಳನ್ನು ಕಾಣಬಹುದು. ಅಲ್ಲದೆ, ನಿಗಾ ವ್ಯವಸ್ಥೆ, ಮನೋಭಾವ ಬದಲಾವಣೆಯೂ ಸೇರಿದಂತೆ ಹಲವು ಕೆಲಸಗಳನ್ನು ಮಾಡಬೇಕಿದೆ.

 

      ಭಾರತದ ಕತೆ ಒಂದು ಭರವಸೆ ಮೂಡಿಸಿದೆ. ಈ ಭರವಸೆ ಅಡೆತಡೆಗಳನ್ನು ಮೀರಿ ಹೊರಬರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಅದರಿಂದಾಗಿ ನಡವಳಿಕೆಯಲ್ಲೂ ಬದಲಾವಣೆ ತರಬಹುದು ಎಂಬುದು ಖಾತ್ರಿಯಾಗಿದೆ. ಆ ಭರವಸೆಯಿಂದ ಕ್ಷಿಪ್ರ ಪ್ರಗತಿ ಸಾಧಿಸಬಹುದು ಎಂಬುದು ಮನವರಿಕೆಯಾಗಿದೆ.

 

      ಮಿಲೇನಿಯಂ ಅಭಿವೃದ್ಧಿ ಗುರಿಗಳನ್ನು ಒಪ್ಪಿಕೊಂಡಾಗ ಭಾರತದಲ್ಲಿ ವಿಶ್ವದಲ್ಲೇ ಅತ್ಯಧಿಕ ಮಹಿಳೆಯರು ಮತ್ತು ಮಕ್ಕಳ ಮರಣ ಪ್ರಮಾಣವಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದೀಚೆಗೆ ಕೈಗೊಂಡ ಸುಸ್ಥಿರ ಕ್ರಮಗಳಿಂದಾಗಿ ಆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮಕ್ಕಳ ಮತ್ತು ತಾಯಂದಿರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎಸ್ ಡಿ ಜಿ ಗುರಿಗಳನ್ನು 2030ರ ವೇಳೆಗೆ ಸಾಧಿಸಲು ಒಪ್ಪಿಕೊಳ್ಳಲಾಗಿದೆ. ಆದರೆ ಅದಕ್ಕೂ ಮುನ್ನವೇ ಗುರಿ ಸಾಧಿಸುವ ವಿಶ್ವಾಸವಿದೆ. ಹದಿಹರೆಯದವರ ಬಗ್ಗೆ ಹೆಚ್ಚಿನ ಗಮನಹರಿಸಿದ ರಾಷ್ಟ್ರಗಳಲ್ಲಿ ಭಾರತ ಮೊದಲನೆಯದು ಮತ್ತು ಹದಿಹರೆಯದವರ ಆರೋಗ್ಯ ಉತ್ತೇಜನ ಮತ್ತು ಮುನ್ನೆಚ್ಚರಿಕೆ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಜಾರಿಗೊಳಿಸಲಾಯಿತು. ನಮ್ಮ ಪ್ರಯತ್ನಗಳ ಪರಿಣಾಮ ಭಾರತ ಮಹಿಳೆಯರು, ಮಕ್ಕಳು ಮತ್ತು ವಯಸ್ಕರ ಆರೋಗ್ಯ ಕುರಿತಂತೆ ಅಳವಡಿಸಿಕೊಳ್ಳಲಾದ 2015ರ ಜಾಗತಿಕ ಕಾರ್ಯತಂತ್ರದಲ್ಲಿ ಗುರುತಿಸಲ್ಪಟ್ಟಿತು.

      ಈ ವೇದಿಕೆಯ ಮೂಲಕ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರಾಂತ್ಯ ಹಾಗೂ ಭಾರತ ತಮ್ಮ ಜಾಗತಿಕ ಕಾರ್ಯತಂತ್ರಗಳ ಹಾದಿಯನ್ನು ಹಂಚಿಕೊಳ್ಳಲಿವೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ಇದರಿಂದಾಗಿ ಅಂತಹ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲು ಇತರ ದೇಶಗಳು ಮತ್ತು ಪ್ರಾಂತ್ಯಗಳಿಗೆ ಸ್ಫೂರ್ತಿ ದೊರಕುತ್ತದೆ ಮತ್ತು ಅಂತಹುದೇ ಕಾರ್ಯತಂತ್ರಗಳ ಅಭಿವೃದ್ಧಿಗೂ ನೆರವಾಗಲಿದೆ ಎಂಬ ಭರವಸೆ ನನಗಿದೆ.

 

ಗೆಳೆಯರೇ,

 

ನಮ್ಮ ಧರ್ಮಗ್ರಂಥಗಳಲ್ಲಿ ಹೇಳಿರುವಂತೆ ‘ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ’ ಅಂದರೆ ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೋ ಅಲ್ಲಿ ದೈವತ್ವವೇ ಅರಳುತ್ತದಂತೆ. ರಾಷ್ಟ್ರದ ಜನ ಅಭಿವೃದ್ಧಿಯಾದರೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಶಿಕ್ಷಿತರಾದರೆ ಅವರು ಸ್ವತಂತ್ರವಾಗಿ, ಸಬಲೀಕರಣಗೊಂಡು ಉತ್ತಮ ಆರೋಗ್ಯಕರ ಜೀವನ ನಡೆಸುತ್ತಾರೆಂಬ ಖಚಿತ ನಂಬಿಕೆ ನನಗಿದೆ.

 

      ಭಾರತದ ಲಸಿಕೆ ಕಾರ್ಯಕ್ರಮದ ಬಗ್ಗೆ ತಿಳಿಸಲು ನನಗೆ ಹರ್ಷವಾಗುತ್ತಿದೆ. ಏಕೆಂದರೆ ಅದು ನನ್ನ ಹೃದಯಕ್ಕೆ ಹತ್ತಿರವಾದ ವಿಷಯ ಮತ್ತು ಅದನ್ನು ಈ ವೇದಿಕೆಯ ಅತ್ಯಂತ ಯಶಸ್ವಿಗಾಥೆಯನ್ನಾಗಿ ಬಿಂಬಿಸಲಾಗುತ್ತಿದೆ. ಮಿಷನ್ ಇಂದ್ರಧನುಷ್ ಯೋಜನೆಯಡಿ ನಾವು ಕಳೆದ ಮೂರು ವರ್ಷಗಳಲ್ಲಿ 32.8 ಮಿಲಿಯನ್ ಮಕ್ಕಳು ಮತ್ತು 8.4 ಮಿಲಿಯನ್ ಗರ್ಭಿಣಿಯರನ್ನು ತಲುಪಿದ್ದೇವೆ. ಸಾಮೂಹಿಕ ಲಸಿಕಾ ಕಾರ್ಯಕ್ರಮದಡಿ ನೀಡುತ್ತಿದ್ದ ಲಸಿಕೆಗಳ ಸಂಖ್ಯೆಗಳನ್ನು 7 ರಿಂದ 12ಕ್ಕೆ ಹೆಚ್ಚಳ ಮಾಡಿದ್ದೇವೆ. ನಮ್ಮ ಲಸಿಕೆಗಳು ಇದೀಗ ನ್ಯುಮೋನಿಯಾ, ಅತಿಸಾರ ಬೇಧಿ, ಸೇರಿದಂತೆ ಹಲವು ಪ್ರಾಣಪಾಯ ತಂದೊಡ್ಡುವಂತಹ ಖಾಯಿಲೆಗಳಿಗೂ ಲಸಿಕೆ ಹಾಕಲಾಗುತ್ತಿದೆ.

 

      ಗೆಳೆಯರೇ,

 

      ನಮ್ಮ ಸರ್ಕಾರ 2014ರಲ್ಲಿ ಅಧಿಕಾರ ವಹಿಸಿಕೊಂಡಾಗ ವಾರ್ಷಿಕ ಮಕ್ಕಳ ಜನನ ಸಂದರ್ಭದಲ್ಲಿ 44 ಸಾವಿರಕ್ಕೂ ಅಧಿಕ ತಾಯಂದಿರು ಸಾವನ್ನಪ್ಪುತ್ತಿದ್ದರು. ಗರ್ಭಧರಿಸಿರುವ ವೇಳೆ ಮಹಿಳೆಯರಿಗೆ ಎಲ್ಲ ಬಗೆಯ ಆರೈಕೆ ನೀಡಲು ನಾವು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಆರಂಭಿಸಿದೆವು. ಈ ಅಭಿಯಾನಕ್ಕೆ ತಿಂಗಳಿಗೆ ಒಂದು ದಿನ ಸೇವೆ ಸಲ್ಲಿಸುವಂತೆ ವೈದ್ಯರು ಪಣತೊಡುವಂತೆ ಮಾಡಿದೆವು.  ಈ ಯೋಜನೆಯಡಿ 16 ಮಿಲಿಯನ್ ತಪಾಸಣಾ ಶಿಬಿರಗಳನ್ನು ನಡೆಲಾಯಿತು. ದೇಶದಲ್ಲಿ 25 ಮಿಲಿಯನ್ ನವಜಾತ ಶಿಶುಗಳಿವೆ. ನಾವು ನವಜಾತ ಶಿಶುಗಳ ಆರೈಕೆ ವ್ಯವಸ್ಥೆಯನ್ನು ಸಾಕಷ್ಟು ಸುಧಾರಿಸಿದ್ದೇವೆ. ಆ ಮೂಲಕ 797 ವಿಶೇಷ ನವಜಾತ ಶಿಶುಗಳ ಆರೋಗ್ಯ ಘಟಕಗಳನ್ನು ತೆರೆದು, ಅವುಗಳಲ್ಲಿ ಒಂದು ಮಿಲಿಯನ್ ಗೂ ಅಧಿಕ ನವಜಾತ ಶಿಶುಗಳಿಗೆ ಉತ್ತಮ ಆರೈಕೆ ನೀಡಲಾಗುತ್ತಿದೆ. ಇದು ಅತ್ಯಂತ ಯಶಸ್ವಿ ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೀತಿಯಲ್ಲಿ ಮಧ್ಯಪ್ರವೇಶಿಸಿದ ಪರಿಣಾಮ ನಾಲ್ಕು ವರ್ಷಗಳ ಹಿಂದಿನ ಭಾರತದ ಸ್ಥಿತಿಗೆ ಹೋಲಿಸಿದರೆ, 5 ವರ್ಷದೊಳಗಿನ ಸುಮಾರು 840 ನವಜಾತ ಶಿಶುಗಳ ಜೀವವನ್ನು ದೇಶದಲ್ಲಿ ಪ್ರತಿದಿನ ಉಳಿಸಲಾಗುತ್ತಿದೆ.

 

      ಪೋಷಣ್ ಅಭಿಯಾನದ ಮೂಲಕ ಮಕ್ಕಳ ಪೌಷ್ಠಿಕಾಂಶ ಕೊರತೆ ಸಮಸ್ಯೆಯನ್ನು ನಿವಾರಿಸಲಾಗುತ್ತಿದೆ. ಭಾರತವನ್ನು ಪೌಷ್ಠಿಕಾಂಶ ಕೊರತೆ ಮುಕ್ತಗೊಳಿಸುವ ಸಾಮಾನ್ಯ ಗುರಿ ಸಾಧಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಒಂದುಗೂಡಿಸಲಾಗಿದೆ. ಮಕ್ಕಳ ಆರೋಗ್ಯ ಗುಣಮಟ್ಟ ಸುಧಾರಣೆಗೆ ನಾವು ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದರಡಿ ಕಳೆದ ನಾಲ್ಕು ವರ್ಷಗಳಲ್ಲಿ 800 ಮಿಲಿಯನ್ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದ್ದು, 20 ಮಿಲಿಯನ್ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.

 

      ಸತತವಾಗಿ ಯೋಚನೆಗೀಡುಮಾಡುತ್ತಿರುವ ಒಂದು ಅಂಶವೆಂದರೆ, ವೈದ್ಯಕೀಯ ರಕ್ಷಣೆಗಾಗಿ ಕುಟುಂಬಗಳು ತಮ್ಮ ಜೇಬಿನಿಂದ ಅಥವಾ ದುಡಿಮೆಯಿಂದ ಹೆಚ್ಚಿನ ಹಣ ಖರ್ಚು ಮಾಡುತ್ತಿರುವುದು. ಅದಕ್ಕಾಗಿ ನಾವು ಆಯುಷ್ಮಾನ್ ಭಾರತ ಎಂಬ ಯೋಜನೆಯನ್ನು ಆರಂಭಿಸಿದ್ದೇವೆ. ಈ ಆಯುಷ್ಮಾನ ಭಾರತ ಯೋಜನೆ ಎರಡು ಬಗೆಯ ಕಾರ್ಯತಂತ್ರಗಳನ್ನು ಒಳಗೊಂಡಿದೆ. ಮೊದಲ ಅಂಶವೆಂದರೆ ಸಮುದಾಯಕ್ಕೆ ಅದರ ಹತ್ತಿರದಲ್ಲೇ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು. ಇದರಲ್ಲಿ ಆರೋಗ್ಯಕರ ಜೀವನ ಮತ್ತು ಯೋಗಕ್ಕೆ ಮಾರ್ಗದರ್ಶನ ನೀಡುವ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಆರೋಗ್ಯ ಮತ್ತು ಸೌಖ್ಯಕ್ಕೆ ನಮ್ಮ ಪ್ರಮುಖ ಕಾರ್ಯತಂತ್ರದ ಭಾಗವೆಂದರೆ ‘ಫಿಟ್ ಇಂಡಿಯಾ’ ಮತ್ತು ‘ಈಟ್ ರೈಟ್’ ಚಳವಳಿಗಳು. ಮಧುಮೇಹ, ರಕ್ತದೊತ್ತಡ ಮತ್ತು ಮೂರು ಬಗೆಯ ಸಾಮಾನ್ಯ ಕ್ಯಾನ್ಸರ್ ಗಳಾದ ಸ್ತನ, ಕುತ್ತಿಗೆ ಮತ್ತು ಬಾಯಿ ಕ್ಯಾನ್ಸರ್ ಸೇರಿದಂತೆ ಸಾಮಾನ್ಯ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡುವುದೂ ಸಹ ಇದರಲ್ಲಿ ಸೇರಿದೆ. ಇಂತಹ ರೋಗಿಗಳು ತಮ್ಮ ಮನೆಗಳ ಸನಿಹದಲ್ಲೇ ಉಚಿತ ಔಷಧ ಮತ್ತು ತಪಾಸಣಾ ನೆರವನ್ನು ಪಡೆದುಕೊಳ್ಳಲಿದ್ದಾರೆ. 2022ರ ವೇಳೆಗೆ ನಾವು ಅಂತಹ ಒಂದೂವರೆ ಲಕ್ಷ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದೇವೆ.

 

      ಆಯುಷ್ಮಾನ್ ಭಾರತ ಯೋಜನೆಯ ಮತ್ತೊಂದು ಭಾಗವೆಂದರೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ. ಇದರಡಿ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ 5 ಲಕ್ಷ ರೂಪಾಯಿಗಳ ವರೆಗೆ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಸಲಾಗುವುದು. ಬಡತನ ಮತ್ತು ಸಮಾಜದ ದುರ್ಬಲ ಕುಟುಂಬಗಳೂ ಸೇರಿದಂತೆ 500 ಮಿಲಿಯನ್ ನಾಗರಿಕರು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಈ ಸಂಖ್ಯೆ ಕೆನಡ, ಮೆಕ್ಸಿಕೋ ಮತ್ತು ಅಮೆರಿಕ ಮೂರು ದೇಶಗಳನ್ನು ಒಟ್ಟುಗೂಡಿಸಿದರೆ ಆಗುವಂತಹುದು. ಈ ಯೋಜನೆ ಆರಂಭವಾದ ಹತ್ತು ವಾರಗಳಲ್ಲಿಯೇ ಸುಮಾರು 5 ಲಕ್ಷ ಕುಟುಂಬಗಳಿಗೆ 700 ಕೋಟಿ ರೂಪಾಯಿ ಮೌಲ್ಯದ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ.

      ಇಂದು ಜಾಗತಿಕ ಸಾಮೂಹಿಕ ಆರೋಗ್ಯ ರಕ್ಷಣಾ ದಿನ. ಇದೀಗ ಎಲ್ಲರಿಗೂ ಆರೋಗ್ಯ ರಕ್ಷಣಾ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಹೇಳಬಯಸುತ್ತೇನೆ. ಒಂದು ಮಿಲಿಯನ್ ನೋಂದಾಯಿತ ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಅಥವಾ ಆಶಾ ಕಾರ್ಯಕರ್ತೆಯರು ಮತ್ತು 2.32 ಲಕ್ಷ ಅಂಗನವಾಡಿ ನರ್ಸ್, ಮಿಡ್ ವೈಫ್ ಗಳ ಮೂಲಕ ಸಮರ್ಥ ಮಹಿಳಾ ಆರೋಗ್ಯ ರಕ್ಷಣಾ ಪಡೆ ನಮ್ಮಲ್ಲಿದೆ. ಅವರು ನಮ್ಮ ಕಾರ್ಯಕ್ರಮಗಳ  ಬಲ ಹೆಚ್ಚಿಸಿದ್ದಾರೆ. ಭಾರತ ಬೃಹತ್ ರಾಷ್ಟ್ರವಾಗಿದ್ದು, ಕೆಲವು ರಾಜ್ಯಗಳು ಮತ್ತು ಜಿಲ್ಲೆಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸರಿಸಮಾನವಾದ ಸಾಧನೆ ಮಾಡುತ್ತಿವೆ. ಇನ್ನು ಕೆಲವು ಜಿಲ್ಲೆಗಳು ಮತ್ತು ರಾಜ್ಯಗಳು ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿವೆ. ನಾನು ನನ್ನ ಅಧಿಕಾರಿಗಳಿಗೆ 117 ಆಶೋತ್ತರ ಜಿಲ್ಲೆಗಳನ್ನು ಗುರುತಿಸುವಂತೆ ಸೂಚಿಸಿದ್ದೆ. ಪ್ರತಿಯೊಂದು ಜಿಲ್ಲೆಯಲ್ಲೂ ಶಿಕ್ಷಣ, ನೀರು ಮತ್ತು ಒಳಚರಂಡಿ ವ್ಯವಸ್ಥೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿಶೇಷವಾಗಿ ಆರೋಗ್ಯ ಮತ್ತು ಪೌಷ್ಠಿಕಾಂಶಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವ ತಂಡಗಳನ್ನು ನಿಯೋಜಿಸಲಾಗಿದೆ. ನಾವು ಇತರೆ ಇಲಾಖೆಗಳ ಜೊತೆಗೂಡಿ ಮಹಿಳಾ ಕೇಂದ್ರಿತ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲೂ ಕಾರ್ಯೋನ್ಮುಖವಾಗಿದ್ದೇವೆ. 2015ರ ವರೆಗೆ ದೇಶದಲ್ಲಿ ಅರ್ಧಕ್ಕೂ ಹೆಚ್ಚು ಮಹಿಳೆಯರಿಗೆ ಅಡುಗೆ ಮಾಡಲು ಶುದ್ಧ ಇಂಧನ ಲಭ್ಯವಿರಲಿಲ್ಲ. ಉಜ್ವಲ ಯೋಜನೆಯ ಮೂಲಕ ನಾವು ಇದನ್ನು ಬದಲಾಯಿಸಿದ್ದು, 58 ಮಿಲಿಯನ್ ಮಹಿಳೆಯರಿಗೆ ಶುದ್ಧ ಇಂಧನ- ಉಚಿತ ಅಡುಗೆ ಅನಿಲ ಎಲ್ ಪಿ ಜಿ ಒದಗಿಸಲಾಗಿದೆ.

 

      ನಾವು ‘ಸ್ವಚ್ಛ ಭಾರತ ಯೋಜನೆ’ ಕೈಗೆತ್ತಿಕೊಂಡು, 2019ರ ವೇಳೆಗೆ ಭಾರತವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯಾಪ್ತಿ ಶೇಕಡ 39ರಿಂದ 95ಕ್ಕೆ ಹೆಚ್ಚಾಗಿದೆ.

 

      ವ್ಯಕ್ತಿಯೊಬ್ಬ ಕಲಿತರೆ, ಆತನಿಗೆ ಮಾತ್ರ ಶಿಕ್ಷಣ ನೀಡಿದಂತೆ. ಆದರೆ ಮಹಿಳೆಯೊಬ್ಬರು ಶಿಕ್ಷಿತಳಾದರೆ ಇಡೀ ಕುಟುಂಬವೇ ಶಿಕ್ಷಣ ಪಡೆದಂತೆಯೇ ಎಂಬ ಮಾತು ನಮಗೆಲ್ಲಾ ಗೊತ್ತು ನಾವು ಅದನ್ನು ‘ಬೇಟಿ ಬಚಾವೊ ಬೇಟಿ ಪಡಾವೊ’ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮತ್ತು ಅವರ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಂಡಿದ್ದೇವೆ. ಇದರ ಜೊತೆಗೆ ಹೆಣ್ಣು ಮಕ್ಕಳಿಗಾಗಿಯೇ ಸಣ್ಣ ಠೇವಣಿ ಉಳಿತಾಯ ಯೋಜನೆ ‘ಸುಕನ್ಯಾ ಸಮೃದ್ಧಿ ಯೋಜನೆ’ ಆರಂಭಿಸಿದ್ದೇವೆ. ಸುಮಾರು 12.6 ಮಿಲಿಯನ್ ಖಾತೆಗಳನ್ನು ತೆರೆಯಲಾಗಿದ್ದು, ಈ ಯೋಜನೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಧಾರವಾಗಲಿದೆ.

 

      ನಾವು ಆರಂಭಿಸಿರುವ ಪ್ರಧಾನಮಂತ್ರಿ ‘ಮಾತೃ ವಂದನಾ ಯೋಜನೆಯಿಂದಾಗಿ ಸುಮಾರು 50 ಮಿಲಿಯನ್ ಗೂ ಅಧಿಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪ್ರಯೋಜನವಾಗಲಿದೆ. ಈ ಯೋಜನೆಯಡಿ ಮಹಿಳೆಯರಿಗೆ ವೇತನದಲ್ಲಾಗುವ ನಷ್ಟವನ್ನು ತುಂಬಿಕೊಡಲು ಅವರ ಬ್ಯಾಂಕ್ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುವುದು ಹಾಗೂ ಹೆರಿಗೆಗೂ ಮುನ್ನ ಮತ್ತು ಆನಂತರ ಸೂಕ್ತ ಆರೈಕೆ ಮತ್ತು ಪೌಷ್ಠಿಕ ಆಹಾರ ಸೇವನೆಗೆ ಅನುಕೂಲ ಕಲ್ಪಿಸಲಾಗುವುದು.

 

      ಮೊದಲು ಹೆರಿಗೆ ರಜೆ 12 ವಾರವಿತ್ತು. ನಾವು ಅದನ್ನು 26 ವಾರಗಳಿಗೆ ಹೆಚ್ಚಿಸಿದ್ದೇವೆ. 2025ರ ವೇಳೆಗೆ ಜಿಡಿಪಿಯ ಶೇಕಡ 2.5ರಷ್ಟು ಆರೋಗ್ಯಕ್ಕೆ ವ್ಯಯಮಾಡಲು ಭಾರತ ಬದ್ಧವಾಗಿದೆ. ಈ ಪ್ರಮಾಣ ನೂರು ಬಿಲಿಯನ್ ಅಮೆರಿಕನ್ ಡಾಲರ್ ಗೂ ಅಧಿಕವಾಗಲಿದೆ. ವಾಸ್ತವವಾಗಿ ಹೇಳುವುದಾದರೆ, ಕೇವಲ 8 ವರ್ಷಗಳಲ್ಲಿ ಇದೀಗ ನಾವು ಆರೋಗ್ಯಕ್ಕೆ ವ್ಯಯ ಮಾಡುತ್ತಿರುವ ವೆಚ್ಚ ಶೇಕಡ 345ರಷ್ಟು ಹೆಚ್ಚಾಗಲಿದೆ. ನಾವು ಜನರ ಆರೋಗ್ಯ ರಕ್ಷಣೆಗೆ ದುಡಿಯುವ ಪ್ರಯತ್ನವನ್ನು ಮುಂದುವರಿಸಲಿದ್ದೇವೆ. ಪ್ರತಿಯೊಂದು ನೀತಿ ನಿರೂಪಣೆ ಮತ್ತು ಕಾರ್ಯಕ್ರಮ ಹಾಗೂ ಉಪಕ್ರಮಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ಯುವಜನರಿಗೆ ವಿಶೇಷ ಆದ್ಯತೆ ಇರಲಿದೆ. ಯಶಸ್ಸು ಗಳಿಸಲು ಬಹುಹಂತದ ಎಲ್ಲ ಪಾಲುದಾರರು ಒಗ್ಗೂಡಿ ದುಡಿಯುವ ಅಗತ್ಯವಿದೆ ಎಂದು ನಾನು ಈ ಮೂಲಕ ಪ್ರತಿಪಾದಿಸುತ್ತಿದ್ದೇನೆ. ನಮ್ಮೆಲ್ಲಾ ಕ್ರಮಗಳು ಪರಿಣಾಮಕಾರಿ, ಆರೋಗ್ಯ ರಕ್ಷಣಾ ಸೇವೆಗಳನ್ನು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಒದಗಿಸುವುದು ನಮ್ಮ ಧ್ಯೇಯವಾಗಿದ್ದು, ಉತ್ತಮ ಕ್ರಿಯೆಯ ಮೂಲಕ ಅವುಗಳನ್ನು ಸಾಧಿಸಲಾಗುತ್ತಿದೆ.

ಗೆಳೆಯರೇ,

 

ಮುಂದಿನ ಎರಡು ದಿನಗಳ ಕಾಲ ಈ ವೇದಿಕೆಯಲ್ಲಿ ಜಗತ್ತಿನ ನಾನಾ ಭಾಗಗಳ 12 ಯಶೋಗಾಥೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂಬುದನ್ನು ನಾನು ಕೇಳಲ್ಪಟ್ಟಿದ್ದೇನೆ. ಇದು ರಾಷ್ಟ್ರಗಳ ನಡುವೆ ವಿಚಾರ ವಿನಿಮಯಕ್ಕೆ ಒಂದು ಅವಕಾಶವಾಗಿದೆ. ಪ್ರತಿಯೊಬ್ಬರೂ ಪರಸ್ಪರ ಕಲಿಯಲು ವೇದಿಕೆಯಾಗಿದೆ. ಭಾರತ ಎಲ್ಲ ರಾಷ್ಟ್ರಗಳಿಗೆ ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಕೌಶಲ್ಯ ಮತ್ತು ತರಬೇತಿ ಕಾರ್ಯಕ್ರಮಗಳು, ಕೈಗೆಟಕುವ ದರದಲ್ಲಿ ಔಷಧ ಮತ್ತು ಲಸಿಕೆಗಳನ್ನು ಒದಗಿಸುವುದು, ಜ್ಞಾನ ವರ್ಗಾವಣೆ ಮತ್ತು ವಿನಿಮಯ ಕಾರ್ಯಕ್ರಮಗಳ ಮೂಲಕ ಸಂಪೂರ್ಣ ಬೆಂಬಲ ನೀಡಲಿದೆ. ಈ ಚರ್ಚೆಗಳಿಗೆ ನೆರವಾಗಲು ಕೆಲವು ಸಚಿವರ ಮಟ್ಟದ ಸಮಾಲೋಚನಾ ಸಭೆಗಳನ್ನು ಆಯೋಜಿಸಲಾಗಿದೆ. ಅದರಿಂದ ಹೊರಬರಲಿರುವ ಅಂಶಗಳನ್ನು ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಇದೊಂದು ಪರಿಣಾಮಕಾರಿ ವೇದಿಕೆ, ಸೂಕ್ತ ಸಂದರ್ಭವಾಗಿದ್ದು, ನಾವು ‘ಉಳಿಯಲು,  ಬೆಳವಣಿಗೆ ಹೊಂದಲು ಮತ್ತು ಪರಿವರ್ತನೆ’ ಬದ್ಧತೆಯನ್ನು ಪುನರುಚ್ಚರಿಸಬೇಕಾಗಿದೆ.

 

‘ಸರ್ವರಿಗೂ ಆರೋಗ್ಯ’ ಒದಗಿಸುವ ಬದ್ಧತೆ ಹಾಗೂ ಧ್ಯೇಯದೊಂದಿಗೆ ನಾವು ನಿರಂತರವಾಗಿ ಕೆಲಸ ಮಾಡುತ್ತಾ ಪ್ರಯತ್ನಗಳನ್ನು ಮುಂದುವರಿಸಬೇಕಿದೆ. ಭಾರತ ಸದಾ ತನ್ನೆಲ್ಲಾ ಪಾಲುದಾರ ರಾಷ್ಟ್ರಗಳ ದೃಢತೆಯೊಂದಿಗೆ ಜೊತೆಗೆ ನಿಲ್ಲಲು ಬದ್ಧವಾಗಿದೆ.

ಇಲ್ಲಿ ನೆರೆದಿರುವ ಎಲ್ಲರನ್ನೂ ನಾನು ಹೇಳ ಬಯಸುವುದೆಂದರೆ ನಾವು ನಿಜವಾದ ಸ್ಫೂರ್ತಿಯೊಂದಿಗೆ ಸಜ್ಜಾಗಬೇಕು. ಆ ಮೂಲಕ ಇಡೀ ಮನುಕುಲಕ್ಕೆ ನಾವು ನಮ್ಮ ಬೆಂಬಲ ಅಥವಾ ನೆರವನ್ನು ವಿಸ್ತರಿಸಬೇಕಿದೆ.

 

ಇಂತಹ ಶ್ರೇಷ್ಠ ಕಾರಣಕ್ಕಾಗಿ ನಾವು ನಮ್ಮ ಬದ್ಧತೆಯೊಂದಿಗೆ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ ಬನ್ನಿ.

 

ಧನ್ಯವಾದಗಳು

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Startup India recognises 2.07 lakh ventures, 21.9 lakh jobs created

Media Coverage

Startup India recognises 2.07 lakh ventures, 21.9 lakh jobs created
NM on the go

Nm on the go

Always be the first to hear from the PM. Get the App Now!
...
Prime Minister remembers the brave heroes of Pulwama
February 14, 2026

The Prime Minister, Shri Narendra Modi remembered the brave heroes who laid down their lives in Pulwama on this day in 2019. Shri Modi stated that their devotion, resolve and service to the nation remain forever etched in our collective consciousness, and every Indian draws strength from their enduring courage.

Shri Modi posted on X:

"Remembering the brave heroes who laid down their lives in Pulwama on this day in 2019. Their devotion, resolve and service to the nation remain forever etched in our collective consciousness. Every Indian draws strength from their enduring courage."