PM Modi lays foundation of the New Green Field International Airport & Electronic City in Goa
PM Modi appreciates the State of Goa, for its progress
PM lauds Manohar Parrikar for taking Goa to new heights of progress: PM
With the new airport the impetus to tourism will be immense: PM
A digitally trained, modern and youth driven Goa is being shaped today. This has the power to transform India: PM
We took a key step to help the honest citizen of India defeat the menace of black money: PM
I was not born to sit on a chair of high office. Whatever I had, my family, my home...I left it for the nation: PM
Yes I also feel the pain. These steps taken were not a display of arrogance. I have seen poverty & understand people's problems: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಗೋವಾದ ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಪಾ ವಿಮಾನ ನಿಲ್ದಾಣ ಮತ್ತು ಟುಯಂನಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಶಿಲಾನ್ಯಾಸ ನೆರವೇರಿಸಲು ಫಲಕಗಳ ಅನಾವರಣ ಮಾಡಿದರು.

ಪ್ರಧಾನಮಂತ್ರಿಯವರು ಮೈನ್ ಕೌಂಟರ್ ಮೆಷರ್ ಹಡಗುಗಳ ನಿರ್ಮಾಣ ಮೂಲಸೌಕರ್ಯ ಉದ್ಘಾಟನೆ ಸಲುವಾಗಿಯೂ ಫಲಕ ಅನಾವರಣ ಮಾಡಿದರು;ಮತ್ತು ಐದು ಕರಾವಳಿ ಕಾವಲು ಪಡೆಯ ನಿಗಾ ಹಡಗುಗಳ ಆರಂಭದ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕೆಲವೇ ವಾರಗಳ ಹಿಂದೆ ಗೋವಾದಲ್ಲಿ ಬ್ರಿಕ್ಸ್ ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿದ ತಂಡಕ್ಕೆ ಅಭಿನಂದನೆ ಸಲ್ಲಿಸುವುದರೊಂದಿಗೆ ಆರಂಭಿಸಿದರು. ಗೋವಾ ರಾಜ್ಯದ ಪ್ರಗತಿಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿಜಿ ಅವರು ನೀಡಿದ್ದ ಭರವಸೆ ಈಡೇರುತ್ತಿದೆ ಎಂಬುದು ತಮಗೆ ಸಂತಸ ತಂದಿದೆ ಎಂದರು. ಇದು ಗೋವಾಕ್ಕೆ ನೆರವಾಗಲಿದ್ದು, ಪ್ರವಾಸೋದ್ಯಮಕ್ಕೆ ಚೈತನ್ಯ ನೀಡಲಿದೆ ಎಂದರು.

ಎಲೆಕ್ಟ್ರಾನಿಕ್ ಸಿಟಿ ಯೋಜನೆಯ ಪ್ರಸ್ತಾಪ ಮಾಡಿದ ಅವರು, ಡಿಜಿಟಲ್ ತರಬೇತಿ ಪಡೆದ, ಆಧುನಿಕ ಮತ್ತು ಯುವ ಚಾಲಿತ ಗೋವಾ ಇಂದು ಸ್ವರೂಪ ಪಡೆದಿದೆ, ಇದು ಭಾರತದ ಪರಿವರ್ತನೆಯ ಶಕ್ತಿ ಹೊಂದಿದೆ ಎಂದರು.

ಐನೂರು ಮತ್ತು ಸಾವಿರ ರೂಪಾಯಿ ನೋಟುಗಳ ಚಲಾವಣೆ ರದ್ದು ಮಾಡುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ನವೆಂಬರ್ 8ರಂದು ದೇಶದ ಹಲವು ಜನರು ನೆಮ್ಮದಿಯಿಂದ ನಿದ್ದೆ ಮಾಡಿದರು, ಆದರೆ ಇನ್ನೂ ಕೆಲವರು ಈಗಲೂ ನಿದ್ದೆಗೆಟ್ಟಿದ್ದಾರೆ ಎಂದರು. ಕೇಂದ್ರ ಸರ್ಕಾರ ಕಪ್ಪುಹಣದ ಪಿಡುಗು ನಿವಾರಿಸಿ ಭಾರತದ ಪ್ರಾಮಾಣಿಕ ಜನರಿಗೆ ನೆರವಾಗಲು ಪ್ರಮುಖ ನಿರ್ಧಾರ ಕೈಗೊಂಡಿದೆ ಎಂದ ಪ್ರಧಾನಿ, ಈ ನೋಟುಗಳ ಚಲಾವಣೆ ರದ್ದತಿ ಕಸರತ್ತಿನ ಯಶಸ್ಸಿಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಈ ನಿರ್ಧಾರ ಸೊಕ್ಕಿನ ಪ್ರದರ್ಶನ ಅಲ್ಲ ಎಂದ ಅವರು ನೋವಿನ ಅನುಭವ ತಮಗೂ ಆಗುತ್ತಿದೆ ಎಂದರು. ತಾವು ಬಡತನ ನೋಡಿದ್ದು, ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದರು.

2014ರಲ್ಲಿ ಜನತೆ, ತಮಗೆ ಭ್ರಷ್ಟಾಚಾರ ಮುಕ್ತ ದೇಶಕ್ಕಾಗಿ ಮತ ನೀಡಿದ್ದಾರೆ ಎಂಬುದನ್ನು ಸ್ಮರಿಸಿದರು. ಕಪ್ಪು ಹಣ ತಡೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಅವರು ವಿವರಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s healthcare sector seeing a fundamental digital transformation: Report

Media Coverage

India’s healthcare sector seeing a fundamental digital transformation: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11ಫೆಬ್ರವರಿ 2026
February 11, 2026

Empowering India: PM Modi's Policies Fueling Innovation, Jobs, and Sustainability