"ರೋಟೇರಿಯನ್‌ಗಳು ಯಶಸ್ಸು ಮತ್ತು ಸೇವೆಯ ನಿಜವಾದ ಮಿಶ್ರಣವಾಗಿರುವರು"
"ನಮ್ಮದು ಬುದ್ಧ ಮತ್ತು ಮಹಾತ್ಮ ಗಾಂಧಿಯವರ ನಾಡು, ಅವರು ಇತರರಿಗಾಗಿ ಬದುಕುವುದು ಏನು ಎಂಬುದನ್ನು ಕಾರ್ಯದಲ್ಲಿ ತೋರಿಸಿಕೊಟ್ಟವರು"
"ನಿಸರ್ಗದೊಂದಿಗೆ ಸಾಮರಸ್ಯದಿಂದ ಉಳಿಯುವ ನಮ್ಮ ಶತಮಾನಗಳ ಹಳೆಯ ನೀತಿಯಿಂದ ಸ್ಫೂರ್ತಿ ಪಡೆದ 1.4 ಶತಕೋಟಿ ಭಾರತೀಯರು ನಮ್ಮ ಭೂಮಿಯನ್ನು ಸ್ವಚ್ಛ ಮತ್ತು ಹಸಿರು ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂದೇಶದ ಮೂಲಕ ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ರೋಟರಿಯನ್ನರನ್ನು ‘ಯಶಸ್ಸು ಮತ್ತು ಸೇವೆಯ ನಿಜವಾದ ಮಿಶ್ರಣ’ ಎಂದು ಕರೆದ ಪ್ರಧಾನಮಂತ್ರಿಯವರು ”ಈ ದೊಡ್ಡ ಪ್ರಮಾಣದಲ್ಲಿ ರೋಟರಿಯೊಂದಿಗೆ ಸಂಬಂಧಿಸಿದ ಜನರ ಸಭೆಯು ಅರೆ-ಜಾಗತಿಕ ಕೂಟದಂತಿದೆ. ವೈವಿಧ್ಯತೆ ಮತ್ತು ಚೈತನ್ಯವಿದೆ. " ಎಂದು ಹೇಳಿದರು.

ರೋಟರಿಯ ಎರಡು ಧ್ಯೇಯೋದ್ದೇಶಗಳನ್ನು ‘ತಮಗಿಂತ ಇತರರಿಗೆ ಸಹಾಯ ಮಾಡುವುದು’ ಮತ್ತು ‘ಯಾರು ಅತ್ಯುತ್ತಮವಾಗಿ ಸೇವೆ ಸಲ್ಲಿಸುವರೋ  ಅವರು ಹೆಚ್ಚು ಲಾಭ ಗಳಿಸುವರು’ ಎಂಬುದನ್ನು ಗಮನಿಸಿದ ಪ್ರಧಾನಮಂತ್ರಿಯವರು, ಇವುಗಳು ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಪ್ರಮುಖ ತತ್ವಗಳಾಗಿವೆ ಮತ್ತು ನಮ್ಮ ಸಂತರು ಮತ್ತು ಋಷಿಗಳ ಬೋಧನೆಗಳೊಂದಿಗೆ ಅನುರಣಿಸುತ್ತದೆ ಎಂದು ಹೇಳಿದರು. "ನಮ್ಮದು ಬುದ್ಧ ಮತ್ತು ಮಹಾತ್ಮ ಗಾಂಧಿಯವರ ನಾಡು, ಅವರು ಇತರರಿಗಾಗಿ ಬದುಕುವುದು ಏನು ಎಂಬುದನ್ನು ಕಾರ್ಯದಲ್ಲಿ ತೋರಿಸಿಕೊಟ್ಟರು" ಎಂದು ಅವರು ಹೇಳಿದರು.

ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು “ನಾವೆಲ್ಲರೂ ಪರಸ್ಪರ ಅವಲಂಬಿತ, ಪರಸ್ಪರ ಸಂಬಂಧ ಹೊಂದಿದೆ ಮತ್ತು ಪರಸ್ಪರ ಸಂಪರ್ಕ ಹೊಂದಿರುವ  ಜಗತ್ತಿನಲ್ಲಿ ವಾಸಿಸುತ್ತೇವೆ. ಅದಕ್ಕಾಗಿಯೇ, ನಮ್ಮ ಭೂಮಿಯನ್ನು ಹೆಚ್ಚು ಸಮೃದ್ಧ ಮತ್ತು ಸಮರ್ಥನೀಯವಾಗಿಸಲು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ. ಭೂಮಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಹಲವಾರು ಉದ್ದೇಶಗಳಿಗಾಗಿ ರೋಟರಿ ಇಂಟರ್‌ನ್ಯಾಷನಲ್ ಶ್ರಮಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

ಭಾರತವು ಪರಿಸರ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ ಎಂದರು. “ಸುಸ್ಥಿರ ಅಭಿವೃದ್ಧಿಯು ಈ ಸಮಯದ ಅಗತ್ಯವಾಗಿದೆ. ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಉಳಿಯುವ ನಮ್ಮ ಶತಮಾನಗಳ ಹಳೆಯ ನೀತಿಯಿಂದ ಸ್ಫೂರ್ತಿ ಪಡೆದ 1.4 ಶತಕೋಟಿ ಭಾರತೀಯರು ನಮ್ಮ ಭೂಮಿಯನ್ನು ಸ್ವಚ್ಛ ಮತ್ತು ಹಸಿರು ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ” ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಅಂತರರಾಷ್ಟ್ರೀಯ ಸೌರ ಒಕ್ಕೂಟ, 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ಮತ್ತು ಲೈಫ್‌   - ಪರಿಸರಕ್ಕಾಗಿ ಜೀವನಶೈಲಿಯಂತಹ ಭಾರತದ ಉಪಕ್ರಮಗಳನ್ನು ಪಟ್ಟಿ ಮಾಡಿದರು.  2070ರ ವೇಳೆಗೆ ನಿವ್ವಳ ಶೂನ್ಯದ ಗುರಿ ಇರುವ ಭಾರತದ ಬದ್ಧತೆಯನ್ನು ವಿಶ್ವ ಸಮುದಾಯವೂ ಶ್ಲಾಘಿಸಿದೆ ಎಂದು ಅವರು ಮಾಹಿತಿ ನೀಡಿದರು.

ಶುದ್ಧ ಕುಡಿಯುವ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಒದಗಿಸುವಲ್ಲಿ ರೋಟರಿ ಇಂಟರ್‌ನ್ಯಾಶನಲ್‌ನ ಕೆಲಸವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಐದು ವರ್ಷಗಳಲ್ಲಿ ಒಟ್ಟು ನೈರ್ಮಲ್ಯದ ವ್ಯಾಪ್ತಿಯಂತಹ ಸ್ವಚ್ಛ ಭಾರತ್ ಮಿಷನ್‌ನ ಲಾಭಗಳ ಬಗ್ಗೆ ಮಾತನಾಡಿದರು. ಹೊಸ ಅರಿವು ಮತ್ತು ವಾಸ್ತವಗಳಿಂದಾಗಿ ರೂಪುಗೊಂಡ ಜಲ ಸಂರಕ್ಷಣೆ ಮತ್ತು ಆತ್ಮನಿರ್ಭರ ಭಾರತ ದಂತಹ ಆಂದೋಲನಗಳ ಬಗ್ಗೆಯೂ ಅವರು ಮಾತನಾಡಿದರು. ಅವರು ಭಾರತದಲ್ಲಿ ಚೈತನ್ಯದಾಯಕ ನವೋದ್ಯಮದ ವಲಯದ ಬಗ್ಗೆ ಮಾತನಾಡಿದರು.

ಭಾರತವು ವಿಶ್ವದ ಜನಸಂಖ್ಯೆಯ ಏಳನೇ ಒಂದು ಭಾಗದಷ್ಟು ಜನರಿಗೆ ನೆಲೆಯಾಗಿದೆ. ಎಂದು ಅವರು ಹೇಳಿದರು, ಅಂತಹ ಪ್ರಮಾಣದಲ್ಲಿ, ಭಾರತದ ಯಾವುದೇ ಸಾಧನೆಯು ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅವರು ಕೋವಿಡ್-19 ಲಸಿಕೆ ಬಗ್ಗೆ ಮತ್ತು 2030 ರ ಜಾಗತಿಕ ಗುರಿಗಿಂತ 5 ವರ್ಷಗಳ ಮೊದಲೇ ಅಂದರೆ 2025ರ ವೇಳೆಗೆ ಟಿಬಿ ನಿರ್ಮೂಲನೆಯನ್ನು ಸಾಧಿಸುವ ಪ್ರಯತ್ನಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.

ತಳಮಟ್ಟದಲ್ಲಿ ಈ ಪ್ರಯತ್ನಗಳನ್ನು ಬೆಂಬಲಿಸುವಂತೆ ಶ್ರೀ ಮೋದಿಯವರು ರೋಟರಿ ಕುಟುಂಬವನ್ನು ಆಹ್ವಾನಿಸಿದರು. ಮತ್ತು ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ದಿನವನ್ನು ಆಚರಿಸಲು ಅವರನ್ನು ಕೇಳಿಕೊಂಡರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Every Child Is Unique...And Learns At Her Own Pace’

Media Coverage

Every Child Is Unique...And Learns At Her Own Pace’
NM on the go

Nm on the go

Always be the first to hear from the PM. Get the App Now!
...
Prime Minister Congratulates Newly Sworn-in Chief Minister and Ministers of Manipur
February 04, 2026

The Prime Minister, Shri Narendra Modi, today extended congratulations to Shri Yumnam Khemchand Singh Ji on taking oath as the Chief Minister of Manipur.

The Prime Minister also conveyed his best wishes to Smt. Nemcha Kipgen Ji and Shri Losii Dikho Ji on assuming office as the Deputy Chief Ministers of the state. He further congratulated Shri Konthoujam Govindas Singh Ji and Shri Khuraijam Loken Singh Ji on being sworn in as Ministers in the Manipur Government.

Expressing confidence in the new leadership, Shri Narendra Modi stated that they will work diligently towards furthering development and prosperity for the sisters and brothers of Manipur.

In a post on X, Shri Modi said:

“Congratulations to Shri Yumnam Khemchand Singh Ji on taking oath as the Chief Minister of Manipur.

I would like to congratulate Smt. Nemcha Kipgen Ji and Shri Losii Dikho Ji on taking oath as the Deputy Chief Ministers of the state and Shri Konthoujam Govindas Singh Ji as well as Shri Khuraijam Loken Singh Ji on being sworn in as Ministers in the Manipur Government.

I’m confident they will work diligently towards furthering development and prosperity for my sisters and brothers of Manipur.”