PM Modi campaigns in Bijnor, Uttar Pradesh, urges people to vote for BJP
Shri Modi questions Samajwadi party for attacking & getting BJP workers arrested without reason
Farmer welfare is most vital for us. Our Government has brought the Pradhan Mantri Fasal Bima Yojana: PM
Chaudhary Charan Singh Kisan Kalyan Kosh would be created for farmers’ welfare, says Shri Modi
People in UP must question the SP government that what development works have been done in the state in last five years: Shri Modi

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ಬಿಜ್ನೋರ್ ನಲ್ಲಿ ಚುನಾವಣಾ ಪ್ರಚಾರ ಮಾಡಿದರು . ಉತ್ತರ ಪ್ರದೇಶದ ಜನರ ಉತ್ಸಾಹ ನೋಡಿ ರಾಜ್ಯಕ್ಕೆ ಬದಲಾವಣೆ ಬೇಕಿದೆ ಇದು ಸ್ಪಷ್ಟವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು . ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲು ಜನರಲ್ಲಿ ಕೋರಿದರು .

" ಪ್ರತಿ ಅಸೆಂಬ್ಲಿ ವಿಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಯಾವುದೇ ತಪ್ಪು ಮಾಡದೆ ಅವರನ್ನು ಬಂಧಿಸಲಾಗುತ್ತಿದೆ . ಸರ್ಕಾರ ಹೀಗೆ ನಡೆಯಬೇಕೇ ? ರಾಜಕೀಯ ಎದುರಾಳಿಗಳ ವಿರುದ್ಧ ಕಾನೂನಿನ ದುರ್ಬಳಕೆ ಮಾಡಬೇಕೇ ? " ಎಂದು ಸಮಾಜವಾದಿ ಪಕ್ಷವನ್ನು ಟೀಕಿಸುತ್ತಾ ,ಶ್ರೀ ಮೋದಿ ಹೇಳಿದರು .”

ರಾಜ್ಯದ ಸಮಾಜವಾದಿ ಸರ್ಕಾರ ಬಡವರ ಮತ್ತು ಪ್ರಾಮಾಣಿಕ ನಾಗರಿಕರ ಹಿತಾಸಕ್ತಿಯನ್ನು ರಕ್ಷಿಸಲು ಅಸಮರ್ಥ ಎಂದು ಅವರು ಆರೋಪಿಸಿದರು . ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ , " ರಾಜ್ಯದಲ್ಲಿ ಅತ್ಯಾಚಾರ ದುರದೃಷ್ಟಕರ ಸಂದರ್ಭಗಳಲ್ಲಿ ನಂತರ ಸಮಾಜವಾದಿ ಪಕ್ಷದ ಮುಖಂಡರು ಏನು ಹೇಳಿದರು ? ಇಂತಹ ಅವಹೇಳನಕಾರಿ ಟೀಕೆಗಳನ್ನು ಸ್ವೀಕಾರಾರ್ಹವಲ್ಲ" ಎಂದು ಶ್ರೀ ಮೋದಿ ಹೇಳಿದರು.

" ಕಾಂಗ್ರೆಸ್ ತನ್ನ ಉಳಿವಿಗಾಗಿ ಏನನ್ನೂ ಮಾಡಬಹುದು , " ನಲವತ್ತು ವರ್ಷ ಸಮಾಜವಾದಿ ಪಕ್ಷದ ವಿರುದ್ಧ ಸ್ಪರ್ದಿಸಿದವರೊಂದಿಗೆ ಮೈತ್ರಿ ಕೂಡ " ಎಂದು ಶ್ರೀ ಮೋದಿ ಹೇಳಿದರು. ”

ಕಬ್ಬು ಬೆಳೆಸುವ ರೈತರ ಕಲ್ಯಾಣ ಬಿಜೆಪಿ ಸರ್ಕಾರಕ್ಕೆ ಅತ್ಯಂತ ಪ್ರಮುಖವಾದುದು ಎಂದು ಪ್ರಧಾನ ಮಂತ್ರಿ ಹೇಳಿದರು . " ಏಕೆ ಉತ್ತರ ಪ್ರದೇಶದ ಕಬ್ಬು ಬೆಳೆಸುವ ರೈತರಿಗೆ ರಾಜ್ಯ ಸರ್ಕಾರದಿಂದ ಅವರ ಬಾಕಿ ದೊರಕುತ್ತಿಲ್ಲ ? ಯಾಕೆ ರೈತರಿಗೆ ನ್ಯಾಯ ದೊರಕುತ್ತಿಲ್ಲ ?ಅವರ ಎಲ್ಲ ಬಾಕಿಯನ್ನು ಇತ್ಯರ್ಥ ಮಾಡುವಂತೆ ನಾವು ಖಾತ್ರಿಪಡಿಸುತ್ತೇವೆ " ಎಂದೂ ಅವರು ಹೇಳಿದರು .”

ಕೇಂದ್ರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಪ್ರಧಾನ ಮಂತ್ರಿ ಮಾತನಾಡಿದರು . " ರೈತರ ಕಲ್ಯಾಣ ಅತ್ಯಂತ ಮುಖ್ಯ . ನಮ್ಮ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪ್ರಾರಂಭಿಸಿದೆ . ಇದು ಕನಿಷ್ಠ ಪ್ರೀಮಿಯಂ ಮತ್ತು ನಮ್ಮ ರೈತರಿಗೆ ಗರಿಷ್ಠ ವಿಮೆಯನ್ನು ಖಾತ್ರಿಗೊಳಿಸುತ್ತದೆ. "

ಉತ್ತರ ಪ್ರದೇಶದಲ್ಲಿ ಪ್ರತಿ ಜಿಲ್ಲೆಯಲ್ಲಿ ರೈತರ ಕಲ್ಯಾಣಕ್ಕಾಗಿ , ಚೌಧರಿ ಚರಣ್ ಸಿಂಗ್ ಕಲ್ಯಾಣ ಕೋಶವನ್ನು ನಿರ್ಮಿಸಲಾಗುತ್ತದೆ ಎಂದೂ ಶ್ರೀ ಮೋದಿ ಹೇಳಿದರು ..

ಉತ್ತರ ಪ್ರದೇಶದ ಯೋಗಕ್ಷೇಮಕ್ಕೆ ಕೆಲಸ ಮಾಡದ ರಾಜ್ಯ ಸರ್ಕಾರ ಅಲ್ಲಿನ ಅಲ್ಲಿನ ಜನರಿಗೆ ಅರ್ಹವಲ್ಲ . "ಕೇಂದ್ರದಿಂದ ಸಂಪನ್ಮೂಲಗಳನ್ನು ಮಂಜೂರು ಮಾಡಿದ ನಂತರವೂ , ರಾಜ್ಯ ಸರ್ಕಾರವು ಅದನ್ನು ರಾಜ್ಯದ ಜನ ಕಲ್ಯಾಣಕ್ಕಾಗಿ ಬಳಸಿಕೊಂಡಿಲ್ಲ . ಕಳೆದ ಐದು ವರ್ಷಗಳಲ್ಲಿ ಸಮಾಜವಾದಿ ಸರ್ಕಾರ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದು ಉತ್ತರ ಪ್ರದೇಶದ ಜನರು ಪ್ರಶ್ನಿಸಬೇಕು ? . " ಅವರು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಿದ ಒಬ್ಬ ನಾಯಕ ತಮ್ಮ ಚುನಾವಣಾ ಪ್ರಚಾರದ ವೇದಿಕೆಯನ್ನು ನೀಡಲು ಆರಂಭಿ ಸಿದ್ದಾರೆ " ಎಂದು ಶ್ರೀ ಮೋದಿ ಹೇಳಿದರು .”

ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jan Dhan accounts hold Rs 2.75 lakh crore in banks: Official

Media Coverage

Jan Dhan accounts hold Rs 2.75 lakh crore in banks: Official
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಡಿಸೆಂಬರ್ 2025
December 07, 2025

National Resolve in Action: PM Modi's Policies Driving Economic Dynamism and Inclusivity