ಘನತೆವೆತ್ತವರೇ,

ಮಹನೀಯರೇ,

ಮಹಿಳೆಯರೇ ಮತ್ತು ಸಜ್ಜನರೇ,

ನಿಮಗೆಲ್ಲರಿಗೂ ನಮಸ್ಕಾರ!

ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ವಿಶೇಷವಾಗಿ ಎರಡನೇ ಬಾರಿಗೆ ಮುಖ್ಯ ಭಾಷಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ. ಈ ಆಮಂತ್ರಣವನ್ನು ನೀಡಿದ್ದಕ್ಕಾಗಿ ಮತ್ತು ಅಂತಹ ಆತ್ಮೀಯ ಸ್ವಾಗತವನ್ನು ನೀಡಿದ್ದಕ್ಕಾಗಿ ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ರಶೀದ್ ಜಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಗೌರವಾನ್ವಿತ ಸಹೋದರ , ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತ್ತೀಚೆಗೆ ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿದೆ. ಅವರು ದೂರ ದೃಷ್ಟಿಕೋನ ಹೊಂದಿರುವ ನಾಯಕ ಮಾತ್ರವಲ್ಲದೆ ನಿರ್ಣಯ ಮತ್ತು ಬದ್ಧತೆಯ ನಾಯಕರೂ ಕೂಡಾ ಹೌದು.

 

ಸ್ನೇಹಿತರೇ,

ವಿಶ್ವ ಸರ್ಕಾರದ ಶೃಂಗಸಭೆಯು ಜಗತ್ತಿನಾದ್ಯಂತದ ಚಿಂತನೆಯ ನಾಯಕರನ್ನು ಒಟ್ಟುಗೂಡಿಸುವ ಮಹತ್ವದ ವೇದಿಕೆಯಾಗಿ ಹೊರಹೊಮ್ಮಿದೆ. ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರ ದೂರದೃಷ್ಟಿಯ ನಾಯಕತ್ವವು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಾಗತಿಕ ಆರ್ಥಿಕತೆ, ವಾಣಿಜ್ಯ ಮತ್ತು ತಂತ್ರಜ್ಞಾನದ ಕೇಂದ್ರವಾಗಿ ದುಬೈನ ಗಮನಾರ್ಹ ರೂಪಾಂತರವು ನಿಜವಾಗಿಯೂ ಶ್ಲಾಘನೀಯವಾಗಿದೆ. ಇದು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ “ಎಕ್ಸ್ ಪೋ 2020” ವಸ್ತುಪ್ರದರ್ಶನದ ಯಶಸ್ವಿ ಸಂಘಟನೆಯಾಗಿರಲಿ ಅಥವಾ ಸಿಒಪಿ-28 ನ ಇತ್ತೀಚಿನ ಆತಿಥ್ಯ ಆಗಿರಲಿ, ಈ ಘಟನೆಗಳು 'ದುಬೈ ಸ್ಟೋರಿ'ಗೆ ಉದಾಹರಣೆಯಾಗಿದೆ. ಈ ಶೃಂಗಸಭೆಯಲ್ಲಿ ನಾನು ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನಿಮಗೆ ಎಲ್ಲಾ ಯಶಸ್ಸನ್ನು ಬಯಸುತ್ತೇನೆ.

ಸ್ನೇಹಿತರೇ,

ಇಂದು ನಾವು 21ನೇ ಶತಮಾನದಲ್ಲಿ ಕಾಣುತ್ತಿದ್ದೇವೆ. ಜಗತ್ತು ಆಧುನಿಕತೆಯತ್ತ ಮುನ್ನಡೆಯುತ್ತಿರುವಾಗ, ಕಳೆದ ಶತಮಾನದಿಂದಲೂ ಉಳಿದುಕೊಂಡಿರುವ ಸವಾಲುಗಳನ್ನು ಅದು ಎದುರಿಸುತ್ತಿದೆ. ಆಹಾರ ಭದ್ರತೆ, ಆರೋಗ್ಯ ಭದ್ರತೆ, ನೀರಿನ ಭದ್ರತೆ, ಇಂಧನ ಭದ್ರತೆ, ಶಿಕ್ಷಣ ಮತ್ತು ಅಂತರ್ಗತ ಸಮಾಜಗಳನ್ನು ಪೋಷಿಸುವಂತಹ ಸಮಸ್ಯೆಗಳು ಪ್ರತಿ ಸರ್ಕಾರಕ್ಕೂ ಮಹತ್ವದ ಜವಾಬ್ದಾರಿಗಳನ್ನು ಹೊಂದಿವೆ. ತಂತ್ರಜ್ಞಾನವು ಪ್ರಮುಖ ಅಡ್ಡಿಪಡಿಸುವಿಕೆಯಾಗಿ ಹೊರಹೊಮ್ಮುತ್ತದೆ, ಜೀವನದ ಪ್ರತಿಯೊಂದು ಅಂಶವನ್ನು ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಭಯೋತ್ಪಾದನೆಯು ಮಾನವೀಯತೆಗೆ ಹೊಸ ಸವಾಲುಗಳನ್ನು ಒಡ್ಡುತ್ತಲೇ ಇದೆ, ಆದರೆ ಹವಾಮಾನ-ಸಂಬಂಧಿತ ಸಮಸ್ಯೆಗಳು ಮಾನವನ ಜೀವಿತದ ಪ್ರತಿ ಹಾದುಹೋಗುವ ದಿನದಲ್ಲಿ ಮಾಡುವ ಪರಿಣಾಮಗಳು ಬಹಳ ದೊಡ್ಡದಾಗಿವೆ. ಒಂದೆಡೆ, ಸರ್ಕಾರಗಳು ಒತ್ತಡದ ದೇಶೀಯ ಕಾಳಜಿಗಳನ್ನು ಎದುರಿಸುತ್ತಿವೆ, ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ವ್ಯವಸ್ಥೆಯು ವಿಘಟಿತವಾಗಿದೆ. ಈ ಪ್ರಶ್ನೆಗಳು, ಸವಾಲುಗಳು ಮತ್ತು ಸನ್ನಿವೇಶಗಳ ಮಧ್ಯೆ, ವಿಶ್ವ ಸರ್ಕಾರದ ಶೃಂಗಸಭೆಯ ಮಹತ್ವವು ಎಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿದೆ.

ಸ್ನೇಹಿತರೇ,

ಇಂದು, ಪ್ರತಿ ಸರ್ಕಾರವು ಮುಂದುವರಿಯಲು ತನ್ನ ಮಾರ್ಗವನ್ನು ಆಲೋಚಿಸಬೇಕು. ಜಗತ್ತಿಗೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸರ್ಕಾರಗಳ ಅಗತ್ಯವಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಪರಿವರ್ತಕ ಬದಲಾವಣೆಗೆ ಸ್ಮಾರ್ಟ್, ನವೀನ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸರ್ಕಾರಗಳು ನಮಗೆ ಅಗತ್ಯವಿದೆ. ಪಾರದರ್ಶಕತೆ ಮತ್ತು ಸಮಗ್ರತೆಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದ್ಧತೆಯೊಂದಿಗೆ ಆಡಳಿತವನ್ನು ವ್ಯಾಖ್ಯಾನಿಸಬೇಕು. ಇಂದು ಜಗತ್ತಿಗೆ ಹಸಿರು ಮತ್ತು ಪರಿಸರ ಸವಾಲುಗಳನ್ನು ಎದುರಿಸಲು ಗಂಭೀರವಾಗಿ ಪ್ರವರ್ತಿಸುವ ಸರ್ಕಾರಗಳ ಅಗತ್ಯವಿದೆ. ಇಂದು, ಜಗತ್ತಿಗೆ ಸುಲಭವಾದ ಜೀವನ ವ್ಯವಸ್ಥೆ, ನ್ಯಾಯದ, ಚಲನಶೀಲತೆ, ನಾವೀನ್ಯತೆಗಳ ಸುಲಭ ಲಭ್ಯತೆ ಮತ್ತು ವ್ಯವಹಾರವನ್ನು ಮಾಡಲು ಸುವ್ಯವಸ್ಥೆಯ ಆದ್ಯತೆ ನೀಡುವ ಸರ್ಕಾರಗಳ ಅಗತ್ಯವಿದೆ.

 

ಸ್ನೇಹಿತರೇ,

ನಾನು ನಿರಂತರವಾಗಿ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಲು ಆರಂಭಿಸಿ 23 ವರ್ಷಗಳಾಗಿವೆ. ನಾನು ಗುಜರಾತ್ ನ ಜನರ ಸೇವೆಗಾಗಿ 13 ವರ್ಷಗಳನ್ನು ಮೀಸಲಿಟ್ಟಿದ್ದೇನೆ, ಭಾರತದ ಪ್ರಮುಖ ರಾಜ್ಯವನ್ನು ಮುನ್ನಡೆಸಿದ್ದೇನೆ ಮತ್ತು ಈಗ, ನಾನು ಕೇಂದ್ರ ಸರ್ಕಾರದಲ್ಲಿ ರಾಷ್ಟ್ರದ ಸೇವೆಯ 10 ನೇ ವರ್ಷವನ್ನು ಸಮೀಪಿಸುತ್ತಿದ್ದೇನೆ. ಸರ್ಕಾರದ ಕನಿಷ್ಠ ಹಸ್ತಕ್ಷೇಪ ಮತ್ತು ಜನರ ಮೇಲೆ ಸರ್ಕಾರದಿಂದ ಶೂನ್ಯ ಒತ್ತಡ ಇರಬೇಕು ಎಂಬುದು ನನ್ನ ನಂಬಿಕೆ. ಜೊತೆಗೆ, ತನ್ನ ನಾಗರಿಕರ ಜೀವನದಲ್ಲಿ ಕನಿಷ್ಠ ಹಸ್ತಕ್ಷೇಪವನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಕೋವಿಡ್ ಸಾಂಕ್ರಾಮಿಕದ ನಂತರ ವಿಶ್ವಾದ್ಯಂತ ಸರ್ಕಾರಗಳ ಮೇಲಿನ ನಂಬಿಕೆ ಕುಸಿದಿದೆ ಎಂದು ಅನೇಕ ತಜ್ಞರಿಂದ ಮಾತುಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ. ಆದರೆ, ಭಾರತದಲ್ಲಿ ನಾವು ತದ್ವಿರುದ್ಧವಾಗಿ ಅನುಭವಿಸಿದ್ದೇವೆ. ವರ್ಷಗಳಲ್ಲಿ, ಭಾರತ ಸರ್ಕಾರದ ಮೇಲಿನ ಜನರ ನಂಬಿಕೆಯು ಗಮನಾರ್ಹವಾಗಿ ಬಲಗೊಂಡಿದೆ. ನಮ್ಮ ಸರ್ಕಾರದ ಉದ್ದೇಶ ಮತ್ತು ಬದ್ಧತೆಗಳೆರಡರಲ್ಲೂ ಜನರಿಗೆ ಸಂಪೂರ್ಣ ನಂಬಿಕೆ ಇದೆ. ಇದು ಹೇಗಾಯಿತು? ಏಕೆಂದರೆ ನಾವು ಆಡಳಿತದಲ್ಲಿ ಸಾರ್ವಜನಿಕ ಭಾವನೆಗಳಿಗೆ ಆದ್ಯತೆ ನೀಡಿದ್ದೇವೆ. ನಾವು ದೇಶವಾಸಿಗಳ ಅಗತ್ಯಗಳಿಗೆ ಹೊಂದಿಕೊಂಡಿದ್ದೇವೆ ಮತ್ತು ಅವರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವತ್ತ ಗಮನಹರಿಸಿದ್ದೇವೆ.

ಈ 23 ವರ್ಷಗಳ ಸರ್ಕಾರದ ಆಡಳಿತದ ಜೀವಿತದಲ್ಲಿ ನನ್ನ ಮಾರ್ಗದರ್ಶಿ ತತ್ವ "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ." ನಾಗರಿಕರಲ್ಲಿ ಉದ್ಯಮ ಮತ್ತು ಶಕ್ತಿ ಎರಡನ್ನೂ ಬೆಳೆಸುವ ವಾತಾವರಣವನ್ನು ಸೃಷ್ಟಿಸಲು ನಾನು ಸತತವಾಗಿ ಪ್ರತಿಪಾದಿಸಿದ್ದೇನೆ. ಟಾಪ್-ಡೌನ್ ಮತ್ತು ಬಾಟಮ್-ಅಪ್ ವಿಧಾನದ ಜೊತೆಗೆ, ನಾವು ಸಂಪೂರ್ಣ-ಸಮಾಜದ ವಿಧಾನವನ್ನು ಸಹ ಅಳವಡಿಸಿಕೊಂಡಿದ್ದೇವೆ. ನಾವು ಸಮಗ್ರ ವಿಧಾನಕ್ಕೆ ಒತ್ತು ನೀಡಿದ್ದೇವೆ ಮತ್ತು ಜನರ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಾವು ಸರ್ಕಾರದ ಅಭಿಯಾನಗಳನ್ನು ಜನರೇ ನೇತೃತ್ವದ ತಳಮಟ್ಟದ ಚಳುವಳಿಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ. ಸಾರ್ವಜನಿಕ ಸಹಭಾಗಿತ್ವದ ಈ ತತ್ವವನ್ನು ಅನುಸರಿಸಿ, ನಾವು ಭಾರತದಲ್ಲಿ ಗಮನಾರ್ಹ ಪರಿವರ್ತನೆಗಳನ್ನು ಕಂಡಿದ್ದೇವೆ. ಅದು ನಮ್ಮ ನೈರ್ಮಲ್ಯ ಅಭಿಯಾನವಾಗಲಿ, ಹೆಣ್ಣು ಶಿಕ್ಷಣವನ್ನು ಉತ್ತೇಜಿಸುವ ಅಭಿಯಾನವಾಗಲಿ ಅಥವಾ ಡಿಜಿಟಲ್ ಸಾಕ್ಷರತಾ ಉಪಕ್ರಮಗಳಾಗಲಿ, ಜನರ ಸಹಭಾಗಿತ್ವದ ಮೂಲಕ ಅವರ ಯಶಸ್ಸನ್ನು ಖಾತ್ರಿಪಡಿಸಲಾಗಿದೆ.

ಸ್ನೇಹಿತರೇ,

ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆ ನಮ್ಮ ಸರ್ಕಾರದ ಆದ್ಯತೆಗಳ ಮೂಲಾಧಾರವಾಗಿದೆ. ಈ ಹಿಂದೆ ಬ್ಯಾಂಕ್ ಖಾತೆಗಳಿಗೆ ಪ್ರವೇಶದ ಕೊರತೆ ಹೊಂದಿದ್ದ 50 ಕೋಟಿಗೂ ಹೆಚ್ಚು ಜನರಿಗೆ ನಾವು ಬ್ಯಾಂಕಿಂಗ್ ಸೇವೆಗಳನ್ನು ಸಂಪರ್ಕಿಸಿದ್ದೇವೆ. ಜಾಗೃತಿ ಮೂಡಿಸಲು ನಾವು ವ್ಯಾಪಕವಾದ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದರ ಪರಿಣಾಮವಾಗಿ ಭಾರತ್ ಫಿನ್ಟೆಕ್ ಮತ್ತು ಡಿಜಿಟಲ್ ಪಾವತಿಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸುತ್ತಿದೆ. ನಾವು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಬೆಂಬಲಿಸಿದ್ದೇವೆ ಮತ್ತು ಭಾರತೀಯ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣಕ್ಕೆ ಬದ್ಧರಾಗಿದ್ದೇವೆ. ಕೆಲವು ತಿಂಗಳುಗಳ ಹಿಂದೆ ಶಾಸನವನ್ನು ಜಾರಿಗೊಳಿಸುವ ಮೂಲಕ, ನಾವು ಭಾರತೀಯ ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸಿದ್ದೇವೆ. ಇಂದು ನಾವು ಭಾರತೀಯ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ ಮತ್ತು ಅವರ ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದೇವೆ. ಗಮನಾರ್ಹವಾಗಿ ಕಡಿಮೆ ಸಮಯದಲ್ಲಿ, ಭಾರತ ಜಾಗತಿಕವಾಗಿ ಮೂರನೇ-ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿದೆ, ಇದು ನಮ್ಮ ಸ್ಟಾರ್ಟ್ಅಪ್ ವ್ಯವಸ್ಥೆಯ ಚೌಕಟ್ಟಿನಲ್ಲಿ ಮಹತ್ವದ ಏರಿಕೆಯನ್ನು ಗುರುತಿಸಿದೆ.

 

ಸ್ನೇಹಿತರೇ,

"ಸಬ್ಕಾ ಸಾಥ್, ಸಬ್ಕಾ ವಿಕಾಸ್" ಮಂತ್ರಕ್ಕೆ ಬದ್ಧರಾಗಿ, ನಾವು 'ಲಾಸ್ಟ್ ಮೈಲ್ ಡೆಲಿವರಿ ಮತ್ತು ಸ್ಯಾಚುರೇಶನ್' ವಿಧಾನಕ್ಕೆ ಆದ್ಯತೆ ನೀಡುತ್ತೇವೆ. ಸ್ಯಾಚುರೇಶನ್ ವಿಧಾನವು ಯಾವುದೇ ಫಲಾನುಭವಿಯು ಸರ್ಕಾರದ ಯೋಜನೆಗಳಿಂದ ಹೊರಗುಳಿಯದಂತೆ ಖಚಿತಪಡಿಸುತ್ತದೆ, ಸರ್ಕಾರವು ನೇರವಾಗಿ ಅವರನ್ನು ತಲುಪುತ್ತದೆ. ಈ ಆಡಳಿತ ಮಾದರಿಯು ತಾರತಮ್ಯ ಮತ್ತು ಭ್ರಷ್ಟಾಚಾರ ಎರಡನ್ನೂ ನಿವಾರಿಸುತ್ತದೆ. ಒಂದು ಅಧ್ಯಯನದ ಪ್ರಕಾರ, ಕಳೆದ 10 ವರ್ಷಗಳಲ್ಲಿ , ಭಾರತ 250 ಮಿಲಿಯನ್ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ ಮತ್ತು ಈ ಮೈಲಿಗಲ್ಲನ್ನು ಸಾಧಿಸುವಲ್ಲಿ ನಮ್ಮ ಈ ನೂತನ ಆಡಳಿತ ಮಾದರಿಯು ಮಹತ್ವದ ಪಾತ್ರವನ್ನು ವಹಿಸಿದೆ.

ಸ್ನೇಹಿತರೇ,

ಸರ್ಕಾರಗಳು ಪಾರದರ್ಶಕತೆಗೆ ಆದ್ಯತೆ ನೀಡಿದಾಗ, ಸ್ಪಷ್ಟವಾದ ಫಲಿತಾಂಶಗಳು ಬರುತ್ತವೆ ಮತ್ತು ಭಾರತವು ಈ ತತ್ವದ ಒಂದು ಪ್ರಮುಖ ಉದಾಹರಣೆಯಾಗಿದೆ. ಪ್ರಸ್ತುತ, 130 ಕೋಟಿಗೂ ಹೆಚ್ಚು ಭಾರತೀಯ ನಾಗರಿಕರು ಡಿಜಿಟಲ್ ಗುರುತನ್ನು ಹೊಂದಿದ್ದಾರೆ, ಅವರ ಬ್ಯಾಂಕ್ ಖಾತೆಗಳು, ವೈಯ್ಯಕ್ತಿಕ ಗುರುತು ಮತ್ತು ಮೊಬೈಲ್ ಫೋನ್‌ಗಳು ಸುಲಭವಾದ ಲಿಂಕ್ ಅನ್ನು ಹೊಂದಿವೆ. ತಂತ್ರಜ್ಞಾನವನ್ನು ಹತೋಟಿಯಲ್ಲಿಟ್ಟುಕೊಂಡು, ನಾವು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ) ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ, ಕಳೆದ ದಶಕದಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ 400 ಶತಕೋಟಿ ಡಾಲರ್ ಗೂ ಹೆಚ್ಚು ನೇರ ವರ್ಗಾವಣೆಯನ್ನು ಸುಗಮಗೊಳಿಸಿದ್ದೇವೆ. ಈ ಉಪಕ್ರಮವು ಭ್ರಷ್ಟಾಚಾರಕ್ಕೆ ಗಮನಾರ್ಹವಾದ ಮಾರ್ಗವನ್ನು ಪರಿಣಾಮಕಾರಿಯಾಗಿ ಬೇರುಸಹಿತ ಕಿತ್ತುಹಾಕಿದೆ, 33 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಹಣವನ್ನು ತಪ್ಪು ಕೈಗಳಿಗೆ ಹೋಗದಂತೆ ರಕ್ಷಿಸಿದೆ.

ಸ್ನೇಹಿತರೇ,

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ, ಭಾರತ ಒಂದು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದೆ. ನಾವು ಸೌರಶಕ್ತಿ, ಪವನ ಶಕ್ತಿ, ಜಲವಿದ್ಯುತ್, ಜೈವಿಕ ಇಂಧನಗಳು ಮತ್ತು ಹಸಿರು ಜಲಜನಕದಂತಹ ಮಾರ್ಗಗಳನ್ನು ಶ್ರದ್ಧೆಯಿಂದ ಅನ್ವೇಷಿಸುತ್ತಿದ್ದೇವೆ. ನಮ್ಮ ಸಾಂಸ್ಕೃತಿಕ ನೀತಿಯು ಪ್ರಕೃತಿಯಿಂದ ನಾವು ಪಡೆದದ್ದನ್ನು ಪ್ರತ್ಯುತ್ತರ ನೀಡುವಂತೆ ಪ್ರೇರೇಪಿಸುತ್ತದೆ. ಆದ್ದರಿಂದ, ಭಾರತ "ಮಿಷನ್ ಲೈಫ್" ಎಂಬ ವಿನೂತನ ಮಾರ್ಗವನ್ನು ಪ್ರತಿಪಾದಿಸುತ್ತದೆ - ಪರಿಸರಕ್ಕಾಗಿ ಜೀವನಶೈಲಿ, ಪರಿಸರ ಪರವಾದ ಜೀವನಶೈಲಿಯನ್ನು ಪ್ರತಿಪಾದಿಸುತ್ತದೆ. ಹೆಚ್ಚುವರಿಯಾಗಿ, ನಾವು ಕೆಲವು ಸಮಯದಿಂದ ಕಾರ್ಬನ್ ಕ್ರೆಡಿಟ್ ನಂತಹ ಪರಿಕಲ್ಪನೆಗಳ ಕುರಿತು ಚರ್ಚಿಸುತ್ತಿದ್ದೇವೆ, ಆದರೆ ಈಗ, ನಾವು ಗ್ರೀನ್ ಕ್ರೆಡಿಟ್ ಅನ್ನು ಆಲೋಚಿಸಬೇಕು. ದುಬೈನಲ್ಲಿ ಸಿಒಪಿ-28 ಸಮಯದಲ್ಲಿ ಈ ಪ್ರಸ್ತಾಪವನ್ನು ವ್ಯಾಪಕವಾಗಿ ಚರ್ಚಿಸಲಾಯಿತು.

 

ಸ್ನೇಹಿತರೇ,

ಭವಿಷ್ಯದ ಕಡೆಗೆ ನೋಡುವಾಗ, ಸರ್ಕಾರಗಳು ಹಲವಾರು ಸವಾಲುಗಳನ್ನು ಎದುರಿಸುತ್ತವೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರಾಷ್ಟ್ರೀಯ ಪರಸ್ಪರ ಅವಲಂಬನೆಯ ನಡುವೆ ನಾವು ಹೇಗೆ ಸಮತೋಲನವನ್ನು ಸಾಧಿಸುತ್ತೇವೆ? ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸುವಾಗ ನಾವು ಅಂತರರಾಷ್ಟ್ರೀಯ ಕಾನೂನಿನ ನಿಯಮಕ್ಕೆ ನಮ್ಮ ಬದ್ಧತೆಯನ್ನು ಹೇಗೆ ಎತ್ತಿಹಿಡಿಯಬಹುದು? ರಾಷ್ಟ್ರೀಯ ಪ್ರಗತಿಯನ್ನು ಮುನ್ನಡೆಸುವಾಗ ನಾವು ಜಾಗತಿಕ ಒಳಿತಿಗೆ ಹೆಚ್ಚು ಕೊಡುಗೆ ನೀಡುವುದು ಹೇಗೆ? ನಮ್ಮ ಸಾಂಸ್ಕೃತಿಕ ಪರಂಪರೆಯಿಂದ ಬುದ್ಧಿವಂತಿಕೆಯನ್ನು ಸೆಳೆಯುವಾಗ ನಾವು ಸಾರ್ವತ್ರಿಕ ಮೌಲ್ಯಗಳನ್ನು ಹೇಗೆ ಎತ್ತಿಹಿಡಿಯುತ್ತೇವೆ? ಸಮಾಜವನ್ನು ಅದರ ದುಷ್ಪರಿಣಾಮಗಳಿಂದ ರಕ್ಷಿಸುವಾಗ ನಾವು ಡಿಜಿಟಲ್ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು? ಜಾಗತಿಕ ಶಾಂತಿಗಾಗಿ ಶ್ರಮಿಸುತ್ತಿರುವಾಗ ನಾವು ಒಟ್ಟಾಗಿ ಭಯೋತ್ಪಾದನೆಯನ್ನು ಹೇಗೆ ಎದುರಿಸುತ್ತೇವೆ? ನಾವು ರಾಷ್ಟ್ರೀಯ ಪರಿವರ್ತನೆಯನ್ನು ಪ್ರಾರಂಭಿಸುತ್ತಿರುವಾಗ, ಜಾಗತಿಕ ಆಡಳಿತ ಸಂಸ್ಥೆಗಳಲ್ಲಿಯೂ ಸುಧಾರಣೆಯಾಗಬೇಕಲ್ಲವೇ? ನಾವು ನಮ್ಮ ಸರ್ಕಾರಗಳಿಗೆ ಪ್ರಶಿಕ್ಷಣವನ್ನು ತಯಾರು ಮಾಡುವಾಗ ಮತ್ತು ಭವಿಷ್ಯಕ್ಕಾಗಿ ಯೋಜಿಸುವಾಗ ಈ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಅವಶ್ಯಕ.

⮚ ಒಟ್ಟಾಗಿ, ನಾವು ಏಕೀಕೃತ, ಸಹಕಾರಿ ಮತ್ತು ಸಹಯೋಗದ ಜಾಗತಿಕ ಸಮುದಾಯದ ಮೌಲ್ಯಗಳನ್ನು ಚಾಂಪಿಯನ್ ಆಗಬೇಕು.

⮚ ಅಭಿವೃದ್ಧಿಶೀಲ ಜಗತ್ತಿನ ಹಿತಾಸಕ್ತಿಗಳನ್ನು ಸಮರ್ಥಿಸುವುದು ಮತ್ತು ಜಾಗತಿಕ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಜಾಗತಿಕ ದಕ್ಷಿಣದ (ಗ್ಲೋಬಲ್ ಸೌತ್ ) ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಕಡ್ಡಾಯವಾಗಿದೆ.

⮚ ನಾವು ಜಾಗತಿಕ ದಕ್ಷಿಣದ (ಗ್ಲೋಬಲ್ ಸೌತ್ ) ಧ್ವನಿಗಳನ್ನು ಗಮನಿಸಬೇಕು ಮತ್ತು ಅವರ ಕಾಳಜಿಗಳಿಗೆ ಆದ್ಯತೆ ನೀಡಬೇಕು.

⮚ ನಮ್ಮ ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳನ್ನು ಕಡಿಮೆ ಸವಲತ್ತು ಹೊಂದಿರುವ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವುದು ಅತ್ಯಗತ್ಯ.

⮚ ಎಐ- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ರಿಪ್ಟೋಕರೆನ್ಸಿ ಮತ್ತು ಸೈಬರ್ ಕ್ರೈಮ್‌ನಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಜಾಗತಿಕ ಶಿಷ್ಟಾಚಾಋ (ಪ್ರೋಟೋಕಾಲ್)ವನ್ನು ಸ್ಥಾಪಿಸುವುದು ನಿರ್ಣಾಯಕವಾಗಿದೆ.

⮚ ಅಂತರಾಷ್ಟ್ರೀಯ ಕಾನೂನಿನ ತತ್ವಗಳನ್ನು ಗೌರವಿಸುವಾಗ ನಾವು ನಮ್ಮ ರಾಷ್ಟ್ರೀಯ ಸಾರ್ವಭೌಮತ್ವವನ್ನು ಎತ್ತಿಹಿಡಿಯಬೇಕು.

ಈ ತತ್ವಗಳನ್ನು ಅನುಸರಿಸುವ ಮೂಲಕ, ನಾವು ಸರ್ಕಾರಗಳು ಎದುರಿಸುತ್ತಿರುವ ಸವಾಲುಗಳನ್ನು ಮಾತ್ರ ಪರಿಹರಿಸುವುದಿಲ್ಲ ಆದರೆ ಜಾಗತಿಕ ಒಗ್ಗಟ್ಟನ್ನು ಬೆಳೆಸುತ್ತೇವೆ. ಭಾರತ, ವಿಶ್ವ-ಮಿತ್ರ, ಈ ನೀತಿಯನ್ನು ಮುನ್ನಡೆಸಲು ಬದ್ಧವಾಗಿದೆ. ನಮ್ಮ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ನಾವು "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ತತ್ವವನ್ನು ಅಳವಡಿಸಿಕೊಂಡಿದ್ದೇವೆ.

ಸ್ನೇಹಿತರೇ,

ನಾವೆಲ್ಲರೂ ಅನನ್ಯ ಆಡಳಿತದ ಅನುಭವಗಳನ್ನು ಒಂದಡೆಗೆ ಚರ್ಚಿಸಲು ತರುತ್ತೇವೆ. ಒಟ್ಟಿಗೆ ಕೆಲಸ ಮಾಡುವುದು ಮಾತ್ರವಲ್ಲದೆ ಪರಸ್ಪರ ಕಲಿಯುವುದು ಸಹ ಅತ್ಯಗತ್ಯ. ಇದು ಈ ಶೃಂಗಸಭೆಯ ಉದ್ದೇಶವಾಗಿದೆ. ಈ ಶೃಂಗಸಭೆಯು ನಮ್ಮ ಪ್ರಪಂಚದ ಭವಿಷ್ಯವನ್ನು ರೂಪಿಸುವ ಪರಿಹಾರಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ಎಲ್ಲಾ ಭಾಗವಹಿಸಿದವರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ!

ಧನ್ಯವಾದ.

ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
18% tariffs, boosts to exports, agriculture protected: How India benefits from trade deal with US? Explained

Media Coverage

18% tariffs, boosts to exports, agriculture protected: How India benefits from trade deal with US? Explained
NM on the go

Nm on the go

Always be the first to hear from the PM. Get the App Now!
...
List of Outcomes: Official visit of the Prime Minister to Malaysia
February 08, 2026

MoUs / Agreements / Documents

S.No.Document TitleRepresentative from Malaysian side for exchange of the DocumentRepresentative from Indian side for exchange of the Document
1.

Audio-Visual Co-production Agreement between the Government of the Republic of India and Government of Malaysia

Dato’ Seri Utama Haji Mohamad Haji Hasan

Minister of Foreign Affairs, Malaysia

Dr. S. Jaishankar

External Affairs Minister, India

2.

MoU Between the Government of Malaysia and the Government of the Republic of India on the Co-Operation in Disaster Management

Dato’ Seri Utama Haji Mohamad Haji Hasan

Minister of Foreign Affairs, Malaysia

Dr. S. Jaishankar

External Affairs Minister, India

3.

MoU Between the Government of Malaysia and the Government of Republic of India on Cooperation in Combating and Preventing Corruption

Dato’ Seri Utama Haji Mohamad Haji Hasan

Minister of Foreign Affairs, Malaysia

Dr. S. Jaishankar

External Affairs Minister, India

4.

EoL on the Memorandum of Understanding on United Nations Peacekeeping Cooperation between the Government of the Republic of India and the Government of Malaysia

Dato’ Seri Utama Haji Mohamad Haji Hasan

Minister of Foreign Affairs, Malaysia

Dr. S. Jaishankar

External Affairs Minister, India

5.

EoN on Cooperation in the field of Semiconductors between the Government of the Republic of India and the Government of Malaysia

Dato’ Seri Utama Haji Mohamad Haji Hasan

Minister of Foreign Affairs, Malaysia

Dr. S. Jaishankar

External Affairs Minister, India

6.

Framework Agreement on International Big Cats Alliance (IBCA)

Dato’ Seri Utama Haji Mohamad Haji Hasan

Minister of Foreign Affairs, Malaysia

Dr. S. Jaishankar

External Affairs Minister, India

7.

MoC between Employees’ State Insurance Cooperation (ESIC), Republic of India and Social Security Organisation (PERKESO) on Social Security Programs and Activities for Indian Citizens as Insured Persons in Malaysia

Dato’ Sri Amran Mohamed Zin

Secretary-General,
Ministry of Foreign Affairs, Malaysia

Shri P. Kumaran

Secretary (East),
Ministry of External Affairs, India

8.

EoN on Cooperation in Vocational Education and Training (TVET) between the Government of the Republic of India and the Government of Malaysia

Dato’ Sri Amran Mohamed Zin

Secretary-General,
Ministry of Foreign Affairs, Malaysia

Shri P. Kumaran

Secretary (East),
Ministry of External Affairs, India

9.

EoN on Security Cooperation between National Security Council Secretariat, India and National Security Council, Malaysia

Dato’ Sri Amran Mohamed Zin

Secretary-General,
Ministry of Foreign Affairs, Malaysia

Shri P. Kumaran

Secretary (East),
Ministry of External Affairs, India

10.

EoN on Cooperation in the field of Health and Medicine between the Government of the Republic of India and the Government of Malaysia

Dato’ Sri Amran Mohamed Zin

Secretary-General,
Ministry of Foreign Affairs, Malaysia

Shri B.N. Reddy

High Commissioner of India to Malaysia

11.

Presentation of Report of the 10th Malaysia-India CEO Forum

 

Report jointly submitted by Mr Nikhil Meshwani and YBhg. Tan Sri Kunasingam V Sittampalan, co-Chairs of the 10th India-Malaysia CEO Forum, to Shri B. N. Reddy, High Commissioner of India to Malaysia and Dato’ Sri Amran Mohamed Zin, Secretary-General, Ministry of Foreign Affairs, Malaysia

 Announcements

 Title

1

Establishment of an Indian Consulate General in Malaysia

2

Establishment of a dedicated Thiruvalluvar Centre in Universiti Malaya, Kuala Lumpur

3

Institution of Thiruvalluvar Scholarships for Malaysian Nationals

4

Agreement between NIPL and PAYNET SDN BHD on cross-border payments

5

MoU between University of Cyberjaya (UoC) and Institute of Training and Research in Ayurveda (ITRA) on academic collaboration