ಭಾರತದ ಯುವಜನತೆ ನೈಜ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿದ್ದಾರೆ: ಪ್ರಧಾನಮಂತ್ರಿ
ಕೇವಲ 10 ವರ್ಷಗಳಲ್ಲಿ, ಸ್ಟಾರ್ಟ್‌ಅಪ್ ಇಂಡಿಯಾ ಮಿಷನ್ ಒಂದು ಕ್ರಾಂತಿಯಾಗಿ ಮಾರ್ಪಟ್ಟಿದೆ; ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ: ಪ್ರಧಾನಮಂತ್ರಿ
ಇಂದು, ಅಪಾಯ ಎದುರಿಸುವ ಅಥವಾ ಸಾಹಸಿ ಪ್ರವೃತ್ತಿಯು ಸಾಮಾನ್ಯ ಸಂಗತಿಯಾಗಿದೆ: ಪ್ರಧಾನಮಂತ್ರಿ
ಸ್ಟಾರ್ಟ್‌ಅಪ್ ಇಂಡಿಯಾ ಕೇವಲ ಒಂದು ಯೋಜನೆಯಲ್ಲ, ಇದು ವಿವಿಧ ಕ್ಷೇತ್ರಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ಒಂದು 'ಬಹುವ್ಯಾಪಿ ದೃಷ್ಟಿಕೋನʼವಾಗಿದೆ: ಪ್ರಧಾನಮಂತ್ರಿ
ಈಗ ನಮ್ಮ ನವೋದ್ಯಮಗಳು ಉತ್ಪಾದನಾ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸುವ ಸಮಯ ಬಂದಿದೆ: ಪ್ರಧಾನಮಂತ್ರಿ
ನವೋದ್ಯಮಗಳ ಧೈರ್ಯ, ಆತ್ಮವಿಶ್ವಾಸ ಮತ್ತು ನಾವೀನ್ಯತೆಗಳು ಭಾರತದ ಭವಿಷ್ಯವನ್ನು ರೂಪಿಸುತ್ತಿವೆ: ಪ್ರಧಾನಮಂತ್ರಿ

ನನ್ನ ಸಂಪುಟ ಸಹೋದ್ಯೋಗಿ ಶ್ರೀ ಪಿಯೂಷ್ ಗೋಯಲ್ ಅವರು, ದೇಶಾದ್ಯಂತದಿಂದ ಬಂದಿರುವ ಸ್ಟಾರ್ಟಪ್(ನವೋದ್ಯಮ) ಪರಿಸರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸ್ನೇಹಿತರೆ, ಇತರೆ ಗೌರವಾನ್ವಿತ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!

ಇಂದು ನಾವೆಲ್ಲರೂ ಇಲ್ಲಿ ಒಂದು ವಿಶೇಷ ಸಂದರ್ಭಕ್ಕಾಗಿ ಒಟ್ಟುಗೂಡಿದ್ದೇವೆ. ರಾಷ್ಟ್ರೀಯ ಸ್ಟಾರ್ಟಪ್ ದಿನದ ಈ ಸಂದರ್ಭದಲ್ಲಿ, ಸ್ಟಾರ್ಟಪ್ ಸಂಸ್ಥಾಪಕರು ಮತ್ತು ನಾವೀನ್ಯಕಾರರ ಈ ಸಭೆಯಲ್ಲಿ, ನಾನು ಹೊಸ ಮತ್ತು ವಿಕಸಿತವಾಗುತ್ತಿರುವ ಭಾರತದ ಭವಿಷ್ಯವನ್ನು ನನ್ನ ಮುಂದೆ ನೋಡುತ್ತಿದ್ದೇನೆ.

ಇದೀಗ ಸ್ಟಾರ್ಟಪ್‌ ಜಗತ್ತಿನ ಕೆಲವು ಜನರನ್ನು ಭೇಟಿ ಮಾಡಲು, ಅವರ ಸಾಧನೆಗಳು ಮತ್ತು ಪ್ರಯೋಗಗಳನ್ನು ನೋಡಲು ಮತ್ತು ಅವರಲ್ಲಿ ಕೆಲವರೊಂದಿಗೆ ಚರ್ಚೆ ನಡೆಸಲು ನನಗೆ ಅವಕಾಶ ಸಿಕ್ಕಿದೆ. ಕೃಷಿ, ಹಣಕಾಸು ತಂತ್ರಜ್ಞಾನ, ಚಲನಶೀಲತೆ, ಆರೋಗ್ಯ ಮತ್ತು ಸುಸ್ಥಿರತೆಯಲ್ಲಿ ಕೆಲಸ ಮಾಡುತ್ತಿರುವ ಸ್ಟಾರ್ಟಪ್‌ಗಳು - ಅವರ ಆಲೋಚನೆಗಳು ನನಗೆ ಮಾತ್ರವಲ್ಲದೆ ಎಲ್ಲರಿಗೂ ಪ್ರಭಾವಶಾಲಿಯಾಗಿವೆ. ಆದರೂ, ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿದ್ದು ನಿಮ್ಮ ಆತ್ಮವಿಶ್ವಾಸ ಮತ್ತು ನಿಮ್ಮ ಮಹತ್ವಾಕಾಂಕ್ಷೆಗಳೇ ಕಾರಣವಾಗಿವೆ.

 

10 ವರ್ಷಗಳ ಹಿಂದೆ, ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮವು 500–700 ಯುವಕರೊಂದಿಗೆ ಆರಂಭವಾಯಿತು. ರಿತೇಶ್ ಇಂದು ಇಲ್ಲೇ ಕುಳಿತಿದ್ದಾರೆ - ಅವರ ಪ್ರಯಾಣ ಆಗ ಆರಂಭವಾಯಿತು. ಆ ಸಮಯದಲ್ಲಿ, ಸ್ಟಾರ್ಟಪ್ ಜಗತ್ತಿಗೆ ಪ್ರವೇಶಿಸುತ್ತಿದ್ದವರ ಅನುಭವಗಳನ್ನು ನಾನು ಕೇಳುತ್ತಿದ್ದೆ. ಸ್ಟಾರ್ಟಪ್‌ ಜಗತ್ತಿನತ್ತ ಸಾಗಲು ತನ್ನ ಕಾರ್ಪೊರೇಟ್ ಕೆಲಸವನ್ನು ತೊರೆದ ಯುವತಿಯೊಬ್ಬಳು ನನಗೆ ನೆನಪಿದೆ. ಅವಳು ತನ್ನ ತಾಯಿಯನ್ನು ಭೇಟಿ ಮಾಡಲು ಕೋಲ್ಕತಾಗೆ ಹೋಗಿ, "ನಾನು ನನ್ನ ಕೆಲಸ ಬಿಟ್ಟಿದ್ದೇನೆ" ಎಂದು ಹೇಳಿದ್ದಳು. ಅವಳ ತಾಯಿ, "ಏಕೆ?" ಎಂದು ಕೇಳಿದರು. ಆ ದಿನ ವಿಜ್ಞಾನ ಭವನದಲ್ಲಿ ಅವಳು ಇದನ್ನು ವಿವರಿಸಿದಳು. "ನಾನು ಈಗ ಒಂದು ಸ್ಟಾರ್ಟಪ್ ಆರಂಭಿಸಲು ಬಯಸುತ್ತೇನೆ" ಎಂದು ಅವಳು ಹೇಳಿದಳು. ಆಗ ಅವಳ ತಾಯಿ, "ಇದು ನಾಶವಾಗುವ ಕೆಲಸ - ನೀನು ಏಕೆ ವಿನಾಶದ ಹಾದಿಯಲ್ಲಿ ಹೋಗುತ್ತಿದ್ದೀಯಾ?" ಎಂದಿದ್ದರು.

ನಮ್ಮ ದೇಶದಲ್ಲಿ ಆಗ ಸ್ಟಾರ್ಟಪ್‌ಗಳ ಬಗ್ಗೆ ಇದ್ದ ಮನಸ್ಥಿತಿ ಹೀಗಿತ್ತು. ಇಂದು ನಾವು ವಿಜ್ಞಾನ ಭವನದಿಂದ ಭಾರತ್ ಮಂಟಪದವರೆಗೆ ಎಷ್ಟು ದೂರ ಬಂದಿದ್ದೇವೆ ನೋಡಿ, ಅಲ್ಲಿ ಜಾಗವೇ ಉಳಿದಿಲ್ಲ! ಕೇವಲ 1 ವಾರದೊಳಗೆ, ದೇಶದ ಯುವಕರನ್ನು 2 ಬಾರಿ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ. ಜನವರಿ 12ರ ರಾಷ್ಟ್ರೀಯ ಯುವ ದಿನದಂದು, ದೇಶಾದ್ಯಂತದ ಸುಮಾರು 3,000 ಯುವಕರ ಮಾತುಗಳನ್ನು ಆಲಿಸಿ ಅವರೊಂದಿಗೆ ಕುಳಿತುಕೊಂಡೆ. ಇಂದು, ನಿಮ್ಮೆಲ್ಲರ ಮಾತುಗಳನ್ನು ಕೇಳುವ ಮತ್ತು ನನ್ನ ದೇಶದ ಯುವಕರ ಶಕ್ತಿಯನ್ನು ವೀಕ್ಷಿಸುವ ಭಾಗ್ಯ ನನ್ನದಾಗಿದೆ.

ಸ್ನೇಹಿತರೆ,

ಮುಖ್ಯವಾದ ವಿಷಯವೆಂದರೆ ಭಾರತದ ಯುವಕರ ಗಮನವು ನಿಜವಾದ ಸಮಸ್ಯೆಗಳನ್ನು ಪರಿಹರಿಸುವತ್ತ ಇದೆ. ಹೊಸ ಕನಸುಗಳನ್ನು ಕಾಣಲು ಧೈರ್ಯ ಮಾಡಿದ ನಮ್ಮ ಯುವ ನಾವೀನ್ಯಕಾರರು - ನಾನು ಅವರಲ್ಲಿ ಪ್ರತಿಯೊಬ್ಬರನ್ನೂ ಆಳವಾಗಿ ಪ್ರಶಂಸಿಸುತ್ತೇನೆ.

ಸ್ನೇಹಿತರೆ,

ಇಂದು ನಾವು ಸ್ಟಾರ್ಟಪ್ ಇಂಡಿಯಾದ 10 ವರ್ಷಗಳ ಮೈಲಿಗಲ್ಲು ಆಚರಿಸುತ್ತಿದ್ದೇವೆ. ಈ 10 ವರ್ಷಗಳ ಪ್ರಯಾಣವು ಕೇವಲ ಸರ್ಕಾರಿ ಯೋಜನೆಯ ಯಶೋಗಾಥೆಯಲ್ಲ. ಇದು ನಿಮ್ಮಂತಹ ಸಾವಿರಾರು ಮತ್ತು ಲಕ್ಷಾಂತರ ಕನಸುಗಳ ಪ್ರಯಾಣ. ಇದು ಲೆಕ್ಕವಿಲ್ಲದಷ್ಟು ಕಲ್ಪನೆಗಳು ವಾಸ್ತವವಾಗುವ ಕಥೆಯಾಗಿದೆ. 10 ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ವೈಯಕ್ತಿಕ ಪ್ರಯತ್ನಗಳು ಮತ್ತು ನಾವೀನ್ಯತೆಗೆ ಯಾವುದೇ ಅವಕಾಶವಿರಲಿಲ್ಲ. ನಾವು ಆ ಸಂದರ್ಭಗಳನ್ನು ಪ್ರಶ್ನಿಸಿ, ನಾವು ಸ್ಟಾರ್ಟಪ್ ಇಂಡಿಯಾ ಕಾರ್ಯಕ್ರಮ ಆರಂಭಿಸಿದೆವು. ನಾವು ನಮ್ಮ ಯುವಕರಿಗೆ ಮುಕ್ತ ಆಕಾಶ ನೀಡಿದ್ದೇವೆ, ಇಂದು ಫಲಿತಾಂಶಗಳು ನಮ್ಮ ಮುಂದಿವೆ. ಕೇವಲ 10 ವರ್ಷಗಳಲ್ಲಿ, ಸ್ಟಾರ್ಟಪ್ ಇಂಡಿಯಾ ಮಿಷನ್ ಒಂದು ಕ್ರಾಂತಿಯಾಗಿದೆ. ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿದೆ. 10 ವರ್ಷಗಳ ಹಿಂದೆ ದೇಶದಲ್ಲಿ 500ಕ್ಕಿಂತ ಕಡಿಮೆ ಸ್ಟಾರ್ಟಪ್‌ಗಳು ಇದ್ದವು, ಇಂದು ಈ ಸಂಖ್ಯೆ 200,000ಕ್ಕಿಂತ ಹೆಚ್ಚಾಗಿದೆ. 2014ರಲ್ಲಿ ಭಾರತದಲ್ಲಿ ಕೇವಲ 4 ಯೂನಿಕಾರ್ನ್‌ಗಳು ಇದ್ದವು, ಇಂದು ಭಾರತದಲ್ಲಿ ಸುಮಾರು 125 ಸಕ್ರಿಯ ಯೂನಿಕಾರ್ನ್‌ಗಳಿವೆ. ಜಗತ್ತು ಈ ಯಶೋಗಾಥೆಯನ್ನು ಆಶ್ಚರ್ಯದಿಂದ ನೋಡುತ್ತಿದೆ. ಮುಂಬರುವ ದಿನಗಳಲ್ಲಿ, ಭಾರತದ ಸ್ಟಾರ್ಟಪ್‌ಗಳ ಪ್ರಯಾಣವನ್ನು ಚರ್ಚಿಸಿದಾಗ, ಈ ಸಭಾಂಗಣದಲ್ಲಿ ಕುಳಿತಿರುವ ಅನೇಕ ಯುವಕರು ಸ್ವತಃ ಹೊಳೆಯುವ ಕೇಸ್ ಸ್ಟಡಿಗಳಾಗುತ್ತಾರೆ.

 

 

ಸ್ನೇಹಿತರೆ,

ಸ್ಟಾರ್ಟಪ್ ಇಂಡಿಯಾದ ಆವೇಗ ನಿರಂತರವಾಗಿ ವೇಗಗೊಳ್ಳುತ್ತಿರುವುದನ್ನು ನೋಡಿ ನನಗೆ ಇನ್ನಷ್ಟು ಸಂತೋಷವಾಗಿದೆ. ಇಂದಿನ ಸ್ಟಾರ್ಪ್‌ಗಳು ಯುನಿಕಾರ್ನ್‌ಗಳಾಗುತ್ತಿವೆ, ಯುನಿಕಾರ್ನ್‌ಗಳು ತಮ್ಮ ಐಪಿಒಗಳನ್ನು ಪ್ರಾರಂಭಿಸುತ್ತಿವೆ,  ಇದರಿಂದ ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಕಳೆದ ವರ್ಷವಷ್ಟೇ 2025ರಲ್ಲಿ ಸುಮಾರು 44,000 ಹೊಸ ಸ್ಟಾರ್ಟಪ್‌ಗಳು ನೋಂದಾಯಿಸಲ್ಪಟ್ಟವು. ಸ್ಟಾರ್ಟಪ್ ಇಂಡಿಯಾ ಆರಂಭವಾದ ನಂತರದ ಯಾವುದೇ ಒಂದು ವರ್ಷದಲ್ಲಿ ಆಗಿರುವ ಅತಿದೊಡ್ಡ ಜಿಗಿತವಾಗಿದೆ. ಈ ಅಂಕಿಅಂಶಗಳು ನಮ್ಮ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಹೇಗೆ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಸ್ಟಾರ್ಟಪ್ ಇಂಡಿಯಾ ದೇಶದಲ್ಲಿ ಹೊಸ ಸಂಸ್ಕೃತಿಗೆ ಜನ್ಮ ನೀಡಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಹಿಂದೆ  ದೊಡ್ಡ ಕೈಗಾರಿಕೆಗಳನ್ನು ಹೊಂದಿರುವ ಕುಟುಂಬಗಳ ಮಕ್ಕಳು ಹೊಸ ವ್ಯವಹಾರಗಳು ಮತ್ತು ಉದ್ಯಮಗಳನ್ನು ಆರಂಭಿಸುತ್ತಿದ್ದರು, ಏಕೆಂದರೆ ಅವರಿಗೆ ಮಾತ್ರ ಹಣಕಾಸು ಮತ್ತು ಬೆಂಬಲ ಸುಲಭವಾಗಿ ಸಿಗುತ್ತಿತ್ತು. ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಹೆಚ್ಚಿನ ಮಕ್ಕಳು ಉದ್ಯೋಗಗಳ ಕನಸು ಮಾತ್ರ ಕಾಣುತ್ತಿದ್ದರು. ಆದರೆ ಸ್ಟಾರ್ಟಪ್ ಇಂಡಿಯಾ ಕಾರ್ಯಕ್ರಮವು ಈ ಮನಸ್ಥಿತಿಯನ್ನು ಬದಲಾಯಿಸಿದೆ. ಈಗ, 2ನೇ ಮತ್ತು 3ನೇ ಶ್ರೇಣಿಯ ನಗರಗಳ ಯುವಕರು, ಹಳ್ಳಿಗಳಿಂದಲೂ ತಮ್ಮದೇ ಆದ ಸ್ಟಾರ್ಟಪ್‌ಗಳನ್ನು ಆರಂಭಿಸುತ್ತಿದ್ದಾರೆ. ಈ ಯುವಕರು ಅತ್ಯಂತ ತಳಮಟ್ಟದ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿದ್ದಾರೆ. ಸಮಾಜ ಮತ್ತು ರಾಷ್ಟ್ರಕ್ಕಾಗಿ ಏನನ್ನಾದರೂ ಮಾಡುವ ಈ ಮನೋಭಾವ ನನಗೆ ಬಹಳ ಮಹತ್ವದ್ದಾಗಿದೆ.

ಸ್ನೇಹಿತರೆ,

ಈ ರೂಪಾಂತರ ಅಥವಾ ಪರಿವರ್ತನೆಯಲ್ಲಿ, ದೇಶದ ಹೆಣ್ಣು ಮಕ್ಕಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಮಾನ್ಯತೆ ಪಡೆದ ಶೇಕಡ 45ಕ್ಕಿಂತ ಹೆಚ್ಚು ಸ್ಟಾರ್ಟಪ್‌ಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಅಥವಾ ಪಾಲುದಾರರಿದ್ದಾರೆ. ಮಹಿಳಾ ನೇತೃತ್ವದ ಸ್ಟಾರ್ಟಪ್ ನಿಧಿಯ ವಿಷಯದಲ್ಲಿ ಭಾರತವು ವಿಶ್ವದ 2ನೇ ಅತಿದೊಡ್ಡ ಪರಿಸರ ವ್ಯವಸ್ಥೆ ಹೊಂದಿದೆ.  ಸ್ಟಾರ್ಟಪ್‌ಗಳ ಈ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಆವೇಗವು ಭಾರತದ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುತ್ತಿದೆ.

ಸ್ನೇಹಿತರೆ,

ಇಂದು ರಾಷ್ಟ್ರವು ಸ್ಟಾರ್ಟಪ್ ಕ್ರಾಂತಿಯಲ್ಲಿ ತನ್ನ ಭವಿಷ್ಯವನ್ನು ನೋಡುತ್ತಿದೆ. ಸ್ಟಾರ್ಟಪ್‌ಗಳು ಏಕೆ ಇಷ್ಟೊಂದು ಮುಖ್ಯ ಎಂದು ನಾನು ನಿಮ್ಮನ್ನು ಕೇಳಿದರೆ, ನಿಮ್ಮೆಲ್ಲರಲ್ಲಿ ವಿಭಿನ್ನ ಉತ್ತರಗಳಿರಬಹುದು. ಕೆಲವರು ಭಾರತ ವಿಶ್ವದ ಅತ್ಯಂತ ಹೆಚ್ಚಿನ ಯುವ ಸಮುದಾಯ ಹೊಂದಿರುವ ದೇಶ ಎಂದು ಹೇಳುತ್ತಾರೆ, ಆದ್ದರಿಂದ ಸ್ಟಾರ್ಟಪ್‌ಗಳಿಗೆ ವಿಫುಲ ಅವಕಾಶಗಳಿವೆ. ಇನ್ನು ಕೆಲವರು ಭಾರತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ, ಆದ್ದರಿಂದ ಸ್ಟಾರ್ಟಪ್‌ಗಳಿಗೆ ಹೊಸ ಅವಕಾಶಗಳಿವೆ ಎಂದು ಹೇಳುತ್ತಾರೆ. ಕೆಲವರು ಭಾರತ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ, ಹೊಸ ವಲಯಗಳು ಹೊರಹೊಮ್ಮುತ್ತಿವೆ. ಆದ್ದರಿಂದ ಸ್ಟಾರ್ಟಪ್ ವ್ಯವಸ್ಥೆಯು ಮುಂದುವರಿಯುತ್ತಿದೆ ಎಂದು ಹೇಳುತ್ತಾರೆ. ಈ ಎಲ್ಲಾ ಉತ್ತರಗಳು, ಈ ಎಲ್ಲಾ ಸಂಗತಿಗಳು ಸರಿಯಾಗಿವೆ. ಆದರೆ ನನ್ನ ಹೃದಯವನ್ನು ಮುಟ್ಟುವುದು ಸ್ಟಾರ್ಟಪ್ ಮನೋಭಾವ. ಇಂದಿನ ನನ್ನ ದೇಶದ ಯುವಕರು ತಮ್ಮ ಜೀವನವನ್ನು ಆರಾಮ ವಲಯದಲ್ಲಿ ಕಳೆಯಲು ಸಿದ್ಧರಿಲ್ಲ. ಅವರು ಕಡು ಹಾದಿಯಲ್ಲಿ ನಡೆಯುವುದನ್ನು ಒಪ್ಪುವುದಿಲ್ಲ. ಅವರು ತಮಗಾಗಿ ಹೊಸ ರಸ್ತೆಗಳನ್ನು ಕೆತ್ತಲು ಬಯಸುತ್ತಾರೆ, ಏಕೆಂದರೆ ಅವರು ಹೊಸ ತಾಣಗಳನ್ನು, ಹೊಸ ಮೈಲಿಗಲ್ಲುಗಳನ್ನು ಹುಡುಕುತ್ತಾರೆ.

 

ಸ್ನೇಹಿತರೆ,

ಹೊಸ ತಾಣಗಳನ್ನು ಹೇಗೆ ಸಾಧಿಸಲಾಗುತ್ತದೆ? ಅದಕ್ಕಾಗಿ, ನಾವು ಕಠಿಣ ಪರಿಶ್ರಮದ ಪರಾಕಾಷ್ಠೆ ಪ್ರದರ್ಶಿಸಬೇಕು. ಅದಕ್ಕಾಗಿಯೇ ಹೀಗೆ ಹೇಳಲಾಗುತ್ತದೆ: ಉದ್ಯಮೇನ್ ಹಿ ಸಿದ್ಧ್ಯನ್ತಿ, ಕಾರ್ಯಾಣಿ ನ ಮನೋರಥೈಃ । ಕೆಲಸವನ್ನು ಕೇವಲ ಆಶಯದಿಂದಲ್ಲ, ಉದ್ಯಮಶೀಲತೆಯ ಮೂಲಕ ಸಾಧಿಸಲಾಗುತ್ತದೆ. ಉದ್ಯಮಶೀಲತೆಗೆ ಮೊದಲ ಷರತ್ತು ಧೈರ್ಯ. ನೀವು ಇಂದು ಇರುವ ಸ್ಥಾನಕ್ಕೆ ತಲುಪಲು, ನೀವು ಅಪಾರ ಧೈರ್ಯ ತೋರಿಸಿರಬೇಕು, ನೀವು ಬಹಳಷ್ಟು ಪಣ ತೊಟ್ಟಿರಬೇಕು. ಮೊದಲು ದೇಶದಲ್ಲಿ ಅಪಾಯ ಸ್ವೀಕರಿಸುವುದನ್ನೇ ನಿರುತ್ಸಾಹಗೊಳಿಸಲಾಗಿತ್ತು, ಆದರೆ ಇಂದು ಅಪಾಯ ಸ್ವೀಕಾರವೇ ಮುಖ್ಯವಾಹಿನಿಯಾಗಿದೆ. ಮಾಸಿಕ ಸಂಬಳ ಮೀರಿ ಯೋಚಿಸುವವರನ್ನು ಸ್ವೀಕರಿಸಲಾಗುತ್ತದೆ ಮಾತ್ರವಲ್ಲದೆ, ಗೌರವಿಸಲಾಗುತ್ತದೆ. ಒಂದು ಕಾಲದಲ್ಲಿ ಅವಿಭಾಜ್ಯವೆಂದು ಪರಿಗಣಿಸಲಾಗಿದ್ದ ವಿಚಾರಗಳು ಈಗ ಫ್ಯಾಷನ್ ಆಗುತ್ತಿವೆ.

ಸ್ನೇಹಿತರೆ,

ನಾನು ಯಾವಾಗಲೂ ಅಪಾಯ ಸ್ವೀಕಾರದ  ಮೇಲೆ ವಿಶೇಷ ಒತ್ತು ನೀಡಿದ್ದೇನೆ, ಏಕೆಂದರೆ ಅದು ಬಹಳ ಹಿಂದಿನಿಂದಲೂ ನನ್ನ ಸ್ವಂತ ಅಭ್ಯಾಸವಾಗಿದೆ. ಯಾರೂ ತೆಗೆದುಕೊಳ್ಳಲು ಸಿದ್ಧರಿಲ್ಲದ ಕೆಲಸಗಳು, ಸರ್ಕಾರಗಳು ದಶಕಗಳಿಂದ ಚುನಾವಣೆಗಳಲ್ಲಿ ಅಥವಾ ಅಧಿಕಾರದಲ್ಲಿ ಸೋಲುವ ಭಯದಿಂದ ತಪ್ಪಿಸುತ್ತಿದ್ದ ಕೆಲಸಗಳು - ಜನರು "ತುಂಬಾ ರಾಜಕೀಯ ಅಪಾಯ" ಎಂದು ಕರೆಯುವ ಆ ಕೆಲಸಗಳನ್ನು ನಾನು ಯಾವಾಗಲೂ ಕೈಗೊಳ್ಳುವುದು ನನ್ನ ಜವಾಬ್ದಾರಿ ಎಂದು ಪರಿಗಣಿಸಿದ್ದೇನೆ. ನಿಮ್ಮಂತೆಯೇ, ರಾಷ್ಟ್ರಕ್ಕೆ ಅಗತ್ಯವಾದ ಕೆಲಸವನ್ನು ಯಾರಾದರೂ ಮಾಡಬೇಕು ಮತ್ತು ಯಾರಾದರೂ ಅಪಾಯವನ್ನು ಸ್ವೀಕರಿಸಬೇಕು ಎಂದು ನಾನು ನಂಬುತ್ತೇನೆ. ನಷ್ಟವಿದ್ದರೆ ಅದು ನನ್ನದು,  ಆದರೆ ಲಾಭವಿದ್ದರೆ, ನನ್ನ ದೇಶದ ಲಕ್ಷಾಂತರ ಕುಟುಂಬಗಳು ಪ್ರಯೋಜನ ಪಡೆಯುತ್ತವೆ.

ಸ್ನೇಹಿತರೆ,

ಕಳೆದ 10 ವರ್ಷಗಳಲ್ಲಿ ದೇಶವು ನಾವೀನ್ಯತೆ ಉತ್ತೇಜಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ಮಕ್ಕಳು ನಾವೀನ್ಯತೆಯ ಮನೋಭಾವ ಬೆಳೆಸಿಕೊಳ್ಳಲು ನಾವು ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಿದ್ದೇವೆ. ನಮ್ಮ ಯುವಕರು ದೇಶದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ನಾವು ಹ್ಯಾಕಥಾನ್‌ಗಳನ್ನು ಪ್ರಾರಂಭಿಸಿದ್ದೇವೆ. ಸಂಪನ್ಮೂಲಗಳ ಕೊರತೆಯಿಂದಾಗಿ ಆಲೋಚನೆಗಳು ಸಾಯದಂತೆ ನಾವು ಇನ್‌ಕ್ಯುಬೇಶನ್ ಕೇಂದ್ರಗಳನ್ನು ರಚಿಸಿದ್ದೇವೆ.

ಸ್ನೇಹಿತರೆ,

ಒಂದು ಕಾಲದಲ್ಲಿ ಸಂಕೀರ್ಣ ಅನುಸರಣೆಗಳು, ದೀರ್ಘ ಅನುಮೋದನೆ ಪ್ರಕ್ರಿಯೆಗಳು ಮತ್ತು ಇನ್ಸ್‌ಪೆಕ್ಟರ್ ರಾಜ್‌ನ ಭಯವು ನಾವೀನ್ಯತೆಗೆ ದೊಡ್ಡ ಅಡೆತಡೆಗಳಾಗಿದ್ದವು. ಅದಕ್ಕಾಗಿಯೇ ನಾವು ನಂಬಿಕೆ ಮತ್ತು ಪಾರದರ್ಶಕತೆಯ ವಾತಾವರಣ ಸೃಷ್ಟಿಸಿದ್ದೇವೆ. ಜನ್ ವಿಶ್ವಾಸ್ ಕಾಯ್ದೆಯಡಿ 180ಕ್ಕೂ ಹೆಚ್ಚು ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ. ನೀವು ನಾವೀನ್ಯತೆಯ ಮೇಲೆ ಗಮನ ಹರಿಸಲು ಮತ್ತು ಮೊಕದ್ದಮೆಗಳಲ್ಲೇ ಅದನ್ನು ವ್ಯರ್ಥ ಮಾಡದಂತೆ ನಾವು ನಿಮ್ಮ ಸಮಯವನ್ನು ಉಳಿಸಿದ್ದೇವೆ. ವಿಶೇಷವಾಗಿ ಸ್ಟಾರ್ಟಪ್‌ಗಳಿಗಾಗಿ, ನಾವು ಅನೇಕ ಕಾನೂನುಗಳಲ್ಲಿ ಸ್ವಯಂ ಪ್ರಮಾಣೀಕರಣ ಪರಿಚಯಿಸಿದ್ದೇವೆ. ನಾವು ವಿಲೀನಗಳು ಮತ್ತು ನಿರ್ಗಮನಗಳನ್ನು ಸುಲಭಗೊಳಿಸಿದ್ದೇವೆ.

 

ಸ್ನೇಹಿತರೆ,

ಸ್ಟಾರ್ಟಪ್ ಇಂಡಿಯಾ ಕೇವಲ ಒಂದು ಯೋಜನೆಯಲ್ಲ, ಆದರೆ "ಮಳೆ(ಕಾಮನ)ಬಿಲ್ಲಿನ ದೃಷ್ಟಿಯಾಗಿದೆ". ಇದು ವಿಭಿನ್ನ ವಲಯಗಳನ್ನು ಹೊಸ ಅವಕಾಶಗಳೊಂದಿಗೆ ಸಂಪರ್ಕಿಸುವ ಒಂದು ಸಾಧನವಾಗಿದೆ. ರಕ್ಷಣಾ ಉತ್ಪಾದನೆಯನ್ನು ನೋಡಿ - ಮೊದಲು, ಸ್ಟಾರ್ಟಪ್‌ಗಳು ಸ್ಥಾಪಿತ ಪಾಲುದಾರರೊಂದಿಗೆ ಸ್ಪರ್ಧಿಸುವುದನ್ನು ಊಹಿಸಬಹುದೇ? ಐಡೆಕ್ಸ್ ಮೂಲಕ, ಕಾರ್ಯತಂತ್ರ ವಲಯಗಳ ಸ್ಟಾರ್ಟಪ್‌ಗಳಿಗೆ ಹೊಸ ಖರೀದಿ ಮಾರ್ಗಗಳನ್ನು ನಾವು ತೆರೆದಿದ್ದೇವೆ. ಈ ಹಿಂದೆ ಖಾಸಗಿ ಭಾಗವಹಿಸುವಿಕೆಗೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದ ಬಾಹ್ಯಾಕಾಶ ವಲಯವನ್ನು ಈಗ ತೆರೆಯಲಾಗಿದೆ. ಇಂದು ಸುಮಾರು 200 ಸ್ಟಾರ್ಟಪ್‌ಗಳು ಬಾಹ್ಯಾಕಾಶ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಅವು ಜಾಗತಿಕ ಮನ್ನಣೆ ಗಳಿಸುತ್ತಿವೆ. ಅದೇ ರೀತಿ, ಡ್ರೋನ್ ವಲಯವನ್ನು ನೋಡಿ - ಸಕ್ರಿಯಗೊಳಿಸುವ ಮಾರ್ಗಸೂಚಿ ಅನುಪಸ್ಥಿತಿಯಿಂದಾಗಿ ಭಾರತವು ವರ್ಷಗಳ ಕಾಲ ಹಿಂದುಳಿದಿತ್ತು. ನಾವು ಹಳೆಯ ನಿಯಮಗಳನ್ನು ತೆಗೆದುಹಾಕಿ, ನಾವೀನ್ಯಕಾರರ ಮೇಲೆ ನಂಬಿಕೆ ಇಟ್ಟಿದ್ದೇವೆ.

ಸ್ನೇಹಿತರೆ,

ಸಾರ್ವಜನಿಕ ಖರೀದಿಯಲ್ಲಿ ನಾವು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್, ಜಿಇಎಂ ಮೂಲಕ ಮಾರುಕಟ್ಟೆ ಪ್ರವೇಶ ವಿಸ್ತರಿಸಿದ್ದೇವೆ. ಇಂದು ಸುಮಾರು 35,000 ಸ್ಟಾರ್ಟಪ್‌ಗಳು ಮತ್ತು ಸಣ್ಣ ವ್ಯವಹಾರಗಳು ಜಿಇಎಂನಲ್ಲಿ ನಿಯೋಜನೆಯಾಗಿವೆ. ಅವರು ಸುಮಾರು 50,000 ಕೋಟಿ ರೂ. ಮೌಲ್ಯದ ಸುಮಾರು 500,000 ಆರ್ಡರ್‌ಗಳನ್ನು ಪಡೆದಿದ್ದಾರೆ. ಒಂದು ರೀತಿಯಲ್ಲಿ, ಸ್ಟಾರ್ಟಪ್‌ಗಳು ತಮ್ಮ ಯಶಸ್ಸಿನ ಮೂಲಕ, ಪ್ರತಿಯೊಂದು ವಲಯಕ್ಕೂ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯುತ್ತಿವೆ.

ಸ್ನೇಹಿತರೆ,

ಬಂಡವಾಳವಿಲ್ಲದೆ, ಉತ್ತಮ ಆಲೋಚನೆಗಳೇ ಮಾರುಕಟ್ಟೆಯನ್ನು ತಲುಪಲು ಸಾಧ್ಯವಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ನಾವು ನಾವೀನ್ಯಕಾರರಿಗೆ ಹಣಕಾಸಿನ ಪ್ರವೇಶ ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿದ್ದೇವೆ. ನವೋದ್ಯಮಗಳಿಗೆ ನಿಧಿ ನಿಧಿಯ ಮೂಲಕ 25,000 ಕೋಟಿ ರೂ.ಗೂ ಹೆಚ್ಚಿನ ಹೂಡಿಕೆ ಮಾಡಲಾಗಿದೆ. ನವೋದ್ಯಮಗಳಿಗೆ ನವೋದ್ಯಮ ಭಾರತ ಮೂಲ ನಿಧಿ, IN-SPACE ಮೂಲನಿಧಿ ಮತ್ತು ನಿಧಿ ಮೂಲ ಬೆಂಬಲ ಕಾರ್ಯಕ್ರಮದಂತಹ ಯೋಜನೆಗಳು ನವೋದ್ಯಮಗಳಿಗೆ ಮೂಲ ನಿಧಿಯನ್ನು ಒದಗಿಸುತ್ತಿವೆ. ಸಾಲದ ಪ್ರವೇಶ ಸುಧಾರಿಸಲು, ನಾವು ಸಾಲ ಖಾತರಿ ಯೋಜನೆಯನ್ನು ಸಹ ಪ್ರಾರಂಭಿಸಿದ್ದೇವೆ, ಇದರಿಂದಾಗಿ ಸೃಜನಶೀಲತೆಯ ಹಾದಿಯಲ್ಲಿ ಮೇಲಾಧಾರದ ಕೊರತೆ ಅಡ್ಡಿಯಾಗುವುದಿಲ್ಲ.

 

ಸ್ನೇಹಿತರೆ,

ಇಂದಿನ ಸಂಶೋಧನೆಯು ನಾಳಿನ ಬೌದ್ಧಿಕ ಆಸ್ತಿಯಾಗುತ್ತದೆ. ಇದನ್ನು ಉತ್ತೇಜಿಸಲು, ನಾವು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಉದಯೋನ್ಮುಖ ವಲಯಗಳಲ್ಲಿ ದೀರ್ಘಕಾಲೀನ ಹೂಡಿಕೆ ಬೆಂಬಲಿಸಲು, ನಾವು ನಿಧಿಗಳ ಆಳವಾದ ತಂತ್ರಜ್ಞಾನ ನಿಧಿಯನ್ನು ಸಹ ರಚಿಸಿದ್ದೇವೆ.

ಸ್ನೇಹಿತರೆ,

ಈಗ ನಾವು ಭವಿಷ್ಯಕ್ಕಾಗಿ ಸಿದ್ಧರಾಗಬೇಕು, ನಾವು ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡಬೇಕಾಗಿದೆ. ನಾಳೆ ದೇಶದ ಆರ್ಥಿಕ ಭದ್ರತೆ ಮತ್ತು ಕಾರ್ಯತಂತ್ರ ಸ್ವಾಯತ್ತತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅನೇಕ ಕ್ಷೇತ್ರಗಳು ಇಂದು ಹೊರಹೊಮ್ಮುತ್ತಿವೆ. ಎಐ ನಮ್ಮ ಮುಂದೆ ಸ್ಪಷ್ಟ ಉದಾಹರಣೆಯಾಗಿದೆ. ಎಐ ತಂತ್ರಜ್ಞಾನ ಕ್ರಾಂತಿಯಲ್ಲಿ ಹೆಚ್ಚು ಮುನ್ನಡೆಯುವ ರಾಷ್ಟ್ರವು ಹೆಚ್ಚಿನ ಪ್ರಯೋಜನ ಹೊಂದಿರುತ್ತದೆ. ಭಾರತಕ್ಕೆ ಈ ಕಾರ್ಯವನ್ನು ನಮ್ಮ ಸ್ಟಾರ್ಟಪ್‌ಗಳು ಮುಂದುವರಿಸಬೇಕು. ನಿಮಗೆಲ್ಲರಿಗೂ ತಿಳಿದಿದೆ, ಫೆಬ್ರವರಿಯಲ್ಲಿ, ಜಾಗತಿಕ ಎಐ ಸಮ್ಮೇಳನ – ಎಐ ಪರಿಣಾಮ ಶೃಂಗಸಭೆಯನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಇದು ನಿಮ್ಮೆಲ್ಲರಿಗೂ ಉತ್ತಮ ಅವಕಾಶವಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಕಂಪ್ಯೂಟಿಂಗ್ ವೆಚ್ಚಗಳಂತಹ ಸವಾಲುಗಳ ಬಗ್ಗೆ ನನಗೆ ತಿಳಿದಿದೆ. ಭಾರತ ಎಐ ಮಿಷನ್ ಮೂಲಕ ನಾವು ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ನಾವು 38,000ಕ್ಕೂ ಹೆಚ್ಚು ಜಿಪಿಯುಗಳನ್ನು ಸೇರಿಸಿಕೊಂಡಿದ್ದೇವೆ. ಸಣ್ಣ ಸ್ಟಾರ್ಟಪ್‌ಗಳಿಗೂ ದೊಡ್ಡ ತಂತ್ರಜ್ಞಾನವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಸ್ಥಳೀಯ ಕೃತಕ ಬುದ್ಧಿಮತ್ತೆಯನ್ನು ಭಾರತೀಯ ಪ್ರತಿಭೆಗಳು, ಭಾರತೀಯ ಸರ್ವರ್‌ಗಳಲ್ಲಿ ಅಭಿವೃದ್ಧಿಪಡಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸೆಮಿಕಂಡಕ್ಟರ್ ಗಳು, ಡೇಟಾ ಸೆಂಟರ್‌ಗಳು, ಹಸಿರು ಹೈಡ್ರೋಜನ್ ಮತ್ತು ಇತರೆ ಹಲವು ವಲಯಗಳಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ನಾವು ಮುಂದುವರಿಯುತ್ತಿದ್ದಂತೆ, ನಮ್ಮ ಮಹತ್ವಾಕಾಂಕ್ಷೆಯು ಕೇವಲ ಪಾಲುದಾರಿಕೆಗೆ ಸೀಮಿತವಾಗಿರಬಾರದು. ನಾವು ಜಾಗತಿಕ ನಾಯಕತ್ವವನ್ನು ಗುರಿಯಾಗಿಸಿಕೊಳ್ಳಬೇಕು. ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡಿ, ಸಮಸ್ಯೆಗಳನ್ನು ಪರಿಹರಿಸಬೇಕು. ಕಳೆದ ದಶಕಗಳಲ್ಲಿ, ನಾವು ಡಿಜಿಟಲ್ ಸ್ಟಾರ್ಟಪ್‌ಗಳು ಮತ್ತು ಸೇವಾ ವಲಯದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದೇವೆ. ಈಗ ನಮ್ಮ ಸ್ಟಾರ್ಟಪ್‌ಗಳು ಉತ್ಪಾದನೆಯ ಮೇಲೆ ಹೆಚ್ಚು ಗಮನ ಹರಿಸುವ ಸಮಯ ಬಂದಿದೆ. ನಾವು ಹೊಸ ಉತ್ಪನ್ನಗಳನ್ನು ತಯಾರಿಸಬೇಕು. ನಾವು ವಿಶ್ವದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಬೇಕು. ಅನನ್ಯ ವಿಚಾರಗಳ ಮೇಲೆ ಕೆಲಸ ಮಾಡುವ ಮೂಲಕ ನಾವು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಬೇಕು, ಭವಿಷ್ಯವು ಇದಕ್ಕೆ ಸೇರಿದೆ. ನಾನು ನಿಮಗೆ ಭರವಸೆ ನೀಡುತ್ತೇನೆ, ಸರ್ಕಾರವು ಪ್ರತಿಯೊಂದು ಪ್ರಯತ್ನದಲ್ಲೂ ನಿಮ್ಮೊಂದಿಗೆ ನಿಂತಿದೆ. ನಿಮ್ಮ ಸಾಮರ್ಥ್ಯದಲ್ಲಿ ನನಗೆ ಆಳವಾದ ನಂಬಿಕೆ ಇದೆ. ಭಾರತದ ಭವಿಷ್ಯವು ನಿಮ್ಮ ಧೈರ್ಯ, ವಿಶ್ವಾಸ ಮತ್ತು ನಾವೀನ್ಯತೆಯಿಂದ ರೂಪುಗೊಳ್ಳುತ್ತಿದೆ. ಕಳೆದ 10 ವರ್ಷಗಳು ರಾಷ್ಟ್ರದ ಸಾಮರ್ಥ್ಯಗಳನ್ನು ಸಾಬೀತುಪಡಿಸಿವೆ. ಮುಂಬರುವ 10 ವರ್ಷಗಳಲ್ಲಿ, ಭಾರತವು ಹೊಸ ಸ್ಟಾರ್ಟಪ್ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳಲ್ಲಿ ಜಗತ್ತನ್ನು ಮುನ್ನಡೆಸುತ್ತದೆ ಎಂಬುದು ನಮ್ಮ ಗುರಿಯಾಗಿರಬೇಕು.

ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi urges people to take 9 pledges on health, saving water, others

Media Coverage

PM Modi urges people to take 9 pledges on health, saving water, others
NM on the go

Nm on the go

Always be the first to hear from the PM. Get the App Now!
...
Prime Minister receives phone call from President Emmanuel Macron, discusses situation in West Asia and maritime security
April 16, 2026

The Prime Minister, Shri Narendra Modi, received a phone call from the President of France, Emmanuel Macron.

During the conversation, the two leaders discussed the prevailing situation in West Asia. They agreed on the urgent need to restore safety and ensure freedom of navigation in the Strait of Hormuz.

Both leaders reiterated their commitment to continue close cooperation in advancing peace and stability in the region and beyond.

The Prime Minister wrote on X;

“Received a phone call from my dear friend President Emmanuel Macron. We discussed the situation in West Asia and agreed on the need to urgently restore safety and freedom of navigation in the Strait of Hormuz.

We will continue our close cooperation to advance peace and stability in the region and beyond.

@EmmanuelMacron”