ಜಗತ್ತಿನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ಭಾರತ ಸ್ವಾವಲಂಬಿಯಾಗಬೇಕು: ಪ್ರಧಾನಮಂತ್ರಿ
ಚಿಪ್‌ಗಳು ಅಥವಾ ಹಡಗುಗಳು, ನಾವು ಅವುಗಳನ್ನು ಭಾರತದಲ್ಲಿಯೇ ತಯಾರಿಸಬೇಕು: ಪ್ರಧಾನಮಂತ್ರಿ
ಭಾರತದ ಕಡಲ ವಲಯವನ್ನು ಬಲಪಡಿಸಲು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ, ಸರ್ಕಾರವು ಈಗ ದೊಡ್ಡ ಹಡಗುಗಳನ್ನು ಮೂಲಸೌಕರ್ಯವೆಂದು ಗುರುತಿಸುತ್ತದೆ: ಪ್ರಧಾನಮಂತ್ರಿ

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸರ್ಬಾನಂದ ಸೋನೋವಾಲ್ ಜಿ, ಸಿ.ಆರ್. ಪಾಟೀಲ್, ಮನ್ಸುಖ್‌ಭಾಯಿ ಮಾಂಡವಿಯಾ, ಶಾಂತನು ಠಾಕೂರ್, ನಿಮುಬೆನ್ ಬಂಭಾನಿಯಾ, ದೇಶಾದ್ಯಂತ 40ಕ್ಕೂ ಹೆಚ್ಚು ಸ್ಥಳಗಳಿಂದ ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿರುವ ಗಣ್ಯರೆ, ಎಲ್ಲಾ ಪ್ರಮುಖ ಬಂದರುಗಳೊಂದಿಗೆ ಸಂಪರ್ಕ ಹೊಂದಿರುವ ವಿವಿಧ ರಾಜ್ಯಗಳ ಸಚಿವರೆ, ಹಿರಿಯ ಅಧಿಕಾರಿಗಳೆ, ಇತರೆ ಗಣ್ಯ ಅತಿಥಿಗಳೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಾನು ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ!

ಭಾವನಗರವು ರೋಮಾಂಚನಕಾರಿ ವಾತಾವರಣ ಸೃಷ್ಟಿಸಿದೆ. ಪೆಂಡಲ್‌ನ ಹೊರಗೆ ಜನಸಮೂಹವೇ ನೆರೆದಿರುವುದನ್ನು ನಾನು ನೋಡುತ್ತಿದ್ದೇನೆ. ಆಶೀರ್ವಾದ ಮಾಡಲು ಇಷ್ಟು ದೊಡ್ಡ ಸಭೆಯಲ್ಲಿ ಜನರು ಸೇರಿದ್ದಾರೆ, ನಿಮ್ಮೆಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ.

ಸ್ನೇಹಿತರೆ,

ಈ ಕಾರ್ಯಕ್ರಮವನ್ನು ಭಾವನಗರದಲ್ಲಿ ನಡೆಸಲಾಗುತ್ತಿದ್ದರೂ, ಇದು ಇಡೀ ರಾಷ್ಟ್ರಕ್ಕೆ ಸೇರಿದ ಒಂದು ಕಾರ್ಯಕ್ರಮವಾಗಿದೆ. ಇಂದು ಭಾವನಗರವು ಮಾಧ್ಯಮವಾಗಿದೆ ಮತ್ತು ಭಾರತವು 'ಸಮುದ್ರದಿಂದ ಸಮೃದ್ಧಿ'ಯ ದಿಕ್ಕಿನಲ್ಲಿ ಹೇಗೆ ಚಲಿಸುತ್ತದೆ ಎಂಬುದನ್ನು ಗುರುತಿಸಲು, ಭಾವನಗರವನ್ನು ಈ ಮಹತ್ವದ ಕಾರ್ಯಕ್ರಮದ ಕೇಂದ್ರಬಿಂದುವಾಗಿ ಆಯ್ಕೆ ಮಾಡಲಾಗಿದೆ. ಅದಕ್ಕಾಗಿ, ಗುಜರಾತ್ ಜನತೆಗೆ ಮತ್ತು ಭಾವನಗರದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳು.

ಸ್ನೇಹಿತರೆ,

ಸೆಪ್ಟೆಂಬರ್ 17ರಂದು ನೀವೆಲ್ಲರೂ ನಿಮ್ಮ ನರೇಂದ್ರ ಭಾಯಿ ಅವರಿಗೆ ಕಳುಹಿಸಿದ ಶುಭಾಶಯಗಳು, ದೇಶ ಮತ್ತು ವಿಶ್ವಾದ್ಯಂತ ನನಗೆ ಬಂದ ಶುಭಾಶಯಗಳು - ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವುದು ಅಸಾಧ್ಯ. ಆದರೂ, ಭಾರತದ ಪ್ರತಿಯೊಂದು ಮೂಲೆಯಿಂದ ಮತ್ತು ವಿಶ್ವಾದ್ಯಂತ ನಾನು ಪಡೆದ ಪ್ರೀತಿ ಮತ್ತು ಆಶೀರ್ವಾದಗಳೇ ನನ್ನ ದೊಡ್ಡ ಸಂಪತ್ತು ಮತ್ತು ಶಕ್ತಿ. ಆದ್ದರಿಂದ, ಸಾರ್ವಜನಿಕವಾಗಿ ನನ್ನ ದೇಶ ಮತ್ತು ವಿಶ್ವದ ಎಲ್ಲಾ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಇಲ್ಲಿ, ಒಬ್ಬ ಮಗಳು ಒಂದು ಚಿತ್ರ ತಂದಿದ್ದಾಳೆ, ಅಲ್ಲಿ ಒಬ್ಬ ಮಗ ಕೂಡ ಒಂದನ್ನು ತಂದಿದ್ದಾನೆ. ದಯವಿಟ್ಟು ಅವುಗಳನ್ನು ಸಂಗ್ರಹಿಸಿ, ನನ್ನ ಸ್ನೇಹಿತರೆ. ಈ ಮಕ್ಕಳಿಗೆ ನನ್ನ ಆಶೀರ್ವಾದಗಳು. ಅವುಗಳನ್ನು ತಂದವರಿಗೆ ಧನ್ಯವಾದಗಳು. ನಿಮ್ಮ ವಾತ್ಸಲ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ. ನೀವು ಅಂತಹ ಪ್ರಯತ್ನವನ್ನು ಮಾಡಿದ್ದೀರಿ - ಧನ್ಯವಾದಗಳು, ನನ್ನ ಮಗು, ಧನ್ಯವಾದಗಳು ನನ್ನ ಸ್ನೇಹಿತ.

 

ಸ್ನೇಹಿತರೆ,

ವಿಶ್ವಕರ್ಮ ಜಯಂತಿಯಿಂದ ಗಾಂಧಿ ಜಯಂತಿಯವರೆಗೆ - ಅಂದರೆ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ವರೆಗೆ - ದೇಶಾದ್ಯಂತ ಲಕ್ಷಾಂತರ ಜನರು ಸೇವಾ ಪಖ್ವಾಡ(ಸೇವೆಯ 15 ವಾರ) ಆಚರಿಸುತ್ತಿದ್ದಾರೆ. ಗುಜರಾತ್‌ನಲ್ಲೂ ಸಹ, ಇದು 15 ದಿನಗಳ ಸೇವಾ ಪಖ್ವಾಡವಾಗಿದ್ದರೂ, ಕಳೆದ 2 ಅಥವಾ 3 ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂಬುದು ನನಗೆ ತಿಳಿದಿದೆ. ನೂರಾರು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ, ಈಗಾಗಲೇ 1 ಲಕ್ಷ ಜನರು ರಕ್ತದಾನ ಮಾಡಿದ್ದಾರೆ. ಇದು ಗುಜರಾತ್ ಬಗ್ಗೆ ನನಗೆ ಬಂದಿರುವ ಮಾಹಿತಿ ಮಾತ್ರ. ಹಲವಾರು ನಗರಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಲಾಗಿದೆ, ಲಕ್ಷಾಂತರ ಜನರು ಈ ಪ್ರಯತ್ನಗಳಲ್ಲಿ ಸೇರಿದ್ದಾರೆ. ರಾಜ್ಯಾದ್ಯಂತ 30,000ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ, ಇದು ಗಮನಾರ್ಹವಾದ ಸಂಖ್ಯೆ, ಅಲ್ಲಿ ಜನರಿಗೆ ರೋಗ ಪತ್ತೆ ಮತ್ತು ಚಿಕಿತ್ಸೆ ಒದಗಿಸಲಾಗುತ್ತಿದೆ, ವಿಶೇಷವಾಗಿ ಮಹಿಳೆಯರ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದೆ. ದೇಶಾದ್ಯಂತ ಈ ಚಟುವಟಿಕೆಗಳಲ್ಲಿ ತೊಡಗಿರುವ ಪ್ರತಿಯೊಬ್ಬರನ್ನೂ ನಾನು ಶ್ಲಾಘಿಸುತ್ತೇನೆ ಮತ್ತು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಈ ಸಭೆಯ ಆರಂಭದಲ್ಲಿ, ನಾನು ಗೌರವದಿಂದ ಶ್ರೀ ಕೃಷ್ಣ ಕುಮಾರ್ ಸಿಂಗ್ ಜಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಸರ್ದಾರ್ ಪಟೇಲ್ ಅವರ ತತ್ವ ಪಾಲಿಸುತ್ತಾ, ಅವರು ಭಾರತದ ಏಕತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹ ದೇಶಭಕ್ತರಿಂದ ಪ್ರೇರಿತರಾಗಿ, ಇಂದು ನಾವು ಭಾರತದ ಏಕತೆಯನ್ನು ಬಲಪಡಿಸುತ್ತಿದ್ದೇವೆ, "ಏಕ್ ಭಾರತ್, ಶ್ರೇಷ್ಠ ಭಾರತ್" ಎಂಬ ಮನೋಭಾವ ಬಲಪಡಿಸುತ್ತಿದ್ದೇವೆ.

ಸ್ನೇಹಿತರೆ,

ನವರಾತ್ರಿಯ ಪವಿತ್ರ ಹಬ್ಬ ಪ್ರಾರಂಭವಾಗಲಿರುವ ಸಮಯದಲ್ಲಿ ನಾನು ಭಾವನಗರಕ್ಕೆ ಬಂದಿದ್ದೇನೆ. ಈ ಬಾರಿ, ಜಿ.ಎಸ್.ಟಿ ಕಡಿತದಿಂದಾಗಿ, ಮಾರುಕಟ್ಟೆಗಳು ಹೆಚ್ಚು ರೋಮಾಂಚಕವಾಗಿರುತ್ತವೆ. ಈ ಹಬ್ಬದ ಉತ್ಸಾಹದಲ್ಲಿ, ಇಂದು ನಾವು 'ಸಮುದ್ರ ಸೇ ಸಮೃದ್ಧಿ' ಎಂಬ ಭವ್ಯ ಹಬ್ಬವನ್ನು ಆಚರಿಸುತ್ತಿದ್ದೇವೆ. ಭಾವನಗರದ ಸಹೋದರರೆ, ನನ್ನನ್ನು ಕ್ಷಮಿಸಿ, ದೇಶಾದ್ಯಂತದ ಜನರು ಈ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿರುವುದರಿಂದ ನಾನು ಇಂದು ಹಿಂದಿಯಲ್ಲಿ ಮಾತನಾಡಬೇಕು. ದೇಶಾದ್ಯಂತ ಲಕ್ಷಾಂತರ ಜನರು ಒಂದು ಕಾರ್ಯಕ್ರಮದ ಭಾಗವಾಗಿರುವಾಗ, ನಾನು ನಿಮ್ಮ ಕ್ಷಮೆ ಯಾಚಿಸಿ ಹಿಂದಿಯಲ್ಲಿ ಮಾತನಾಡುತ್ತೇನೆ.

ಸ್ನೇಹಿತರೆ,

21ನೇ ಶತಮಾನದ ಭಾರತವು ಸಮುದ್ರವನ್ನು ಒಂದು ಉತ್ತಮ ಅವಕಾಶವೆಂದು ನೋಡುತ್ತಿದೆ. ಸ್ವಲ್ಪ ಸಮಯದ ಹಿಂದೆ, ಬಂದರು ಆಧಾರಿತ ಅಭಿವೃದ್ಧಿಯನ್ನು ವೇಗಗೊಳಿಸಲು, ಸಾವಿರಾರು ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ದೇಶದಲ್ಲಿ ಬಂದರು  ಪ್ರವಾಸೋದ್ಯಮ ಉತ್ತೇಜಿಸಲು, ಇಂದು ಮುಂಬೈನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟಿಸಲಾಗಿದೆ. ಭಾವನಗರ ಮತ್ತು ಗುಜರಾತ್‌ನ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ. ದೇಶದ ಎಲ್ಲಾ ನಾಗರಿಕರು ಮತ್ತು ಗುಜರಾತ್ ಜನರಿಗೆ ನನ್ನ ಶುಭಾಶಯಗಳು.

 

ಸ್ನೇಹಿತರೆ,

ಭಾರತವು ಇಂದು "ವಸುಧೈವ ಕುಟುಂಬಕಂ" ಎಂಬ ಮನೋಭಾವದೊಂದಿಗೆ ಮುಂದುವರಿಯುತ್ತಿದೆ - ಜಗತ್ತು ಒಂದೇ ಕುಟುಂಬ. ನಮಗೆ ಜಗತ್ತಿನಲ್ಲಿ ಯಾವುದೇ ದೊಡ್ಡ ಶತ್ರುವಿಲ್ಲ. ಸತ್ಯ ಹೇಳುವುದಾದರೆ, ನಮ್ಮ ಏಕೈಕ ಶತ್ರುವೆಂದರೆ - ಇತರ ದೇಶಗಳ ಮೇಲಿನ ನಮ್ಮ ಅವಲಂಬನೆ. ಅದೇ ನಮ್ಮ ದೊಡ್ಡ ಎದುರಾಳಿ. ಒಟ್ಟಾಗಿ, ನಾವು ಈ ಅವಲಂಬನೆಯ ಶತ್ರುವನ್ನು ಜಯಿಸಬೇಕು. ನಾವು ಯಾವಾಗಲೂ ನಮ್ಮನ್ನು ನೆನಪಿಸಿಕೊಳ್ಳಬೇಕು - ಹೆಚ್ಚಿನ ವಿದೇಶಿ ಅವಲಂಬನೆ ಎಂದರೆ ಹೆಚ್ಚಿನ ರಾಷ್ಟ್ರೀಯ ವೈಫಲ್ಯ. ಜಗತ್ತಿನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಸ್ವಾವಲಂಬಿಯಾಗಬೇಕು. ನಾವು ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಘಾಸಿಯಾಗುತ್ತದೆ. 140 ಕೋಟಿ ಭಾರತೀಯರ ಭವಿಷ್ಯವನ್ನು ನಾವು ಬೇರೆಯವರ ಕರುಣೆಗೆ ಬಿಡಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿ ಗುರಿಗಳು ಇತರರ ಮೇಲಿನ ಅವಲಂಬನೆಗೆ ಬಿಡಬಾರದು. ನಮ್ಮ ಮುಂಬರುವ ಪೀಳಿಗೆಯ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವೇ ಇಲ್ಲ.

ಆದ್ದರಿಂದ, ಸಹೋದರ ಸಹೋದರಿಯರೆ,

ಗುಜರಾತಿಯಲ್ಲಿ ನಾವು ಹೇಳುತ್ತೇವೆ - 100 ಕಾಯಿಲೆಗಳಿಗೆ ಒಂದೇ ಚಿಕಿತ್ಸೆ ಇದೆ. ಆ ಚಿಕಿತ್ಸೆ ಎಂದರೆ ಸ್ವಾವಲಂಬಿ ಭಾರತ. ಆದರೆ ಇದಕ್ಕಾಗಿ, ನಾವು ಸವಾಲುಗಳನ್ನು ನೇರವಾಗಿ ಎದುರಿಸಬೇಕು, ಇತರ ದೇಶಗಳ ಮೇಲಿನ ನಮ್ಮ ಅವಲಂಬನೆಯನ್ನು ನಿರಂತರವಾಗಿ ಕಡಿಮೆ ಮಾಡಬೇಕು. ಭಾರತವು ಸ್ವಾವಲಂಬಿ ರಾಷ್ಟ್ರವಾಗಿ ಇಡೀ ವಿಶ್ವದ ಮುಂದೆ ಬಲವಾಗಿ ನಿಲ್ಲಬೇಕು.

ಸಹೋದರ ಸಹೋದರಿಯರೆ,

ಭಾರತದಲ್ಲಿ ಸಾಮರ್ಥ್ಯದ ಕೊರತೆಯಿಲ್ಲ. ಆದರೆ ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಭಾರತದ ಎಲ್ಲಾ ಸಾಮರ್ಥ್ಯವನ್ನು ನಿರ್ಲಕ್ಷಿಸಿತು. ಆದ್ದರಿಂದ, ಸ್ವಾತಂತ್ರ್ಯ ನಂತರದ 6 ಅಥವಾ 7 ದಶಕಗಳಾದರೂ, ಭಾರತವು ನಿಜವಾಗಿಯೂ ಅರ್ಹವಾದ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇದಕ್ಕೆ 2 ಪ್ರಮುಖ ಕಾರಣಗಳಿದ್ದವು. ದೀರ್ಘಕಾಲದವರೆಗೆ, ಕಾಂಗ್ರೆಸ್ ಸರ್ಕಾರಗಳು ರಾಷ್ಟ್ರವನ್ನು ಪರವಾನಗಿ-ಕೋಟ್ ರಾಜ್‌ನಲ್ಲಿ ಸಿಲುಕಿಸಿ, ವಿಶ್ವದ ಮಾರುಕಟ್ಟೆಗಳಿಂದ ನಮ್ಮನ್ನು ಪ್ರತ್ಯೇಕಿಸಿದವು. ಜಾಗತೀಕರಣದೊಂದಿಗೆ, ಅವರು ಕೇವಲ ಆಮದುಗಳಿಗೆ ಬಾಗಿಲು ತೆರೆದರು. ಇದರ ಮೇಲೆ, ಸಾವಿರಾರು ಕೋಟಿ ರೂ. ಮೌಲ್ಯದ ಹಗರಣಗಳನ್ನು ಮಾಡಲಾಯಿತು. ಈ ನೀತಿಗಳು ದೇಶದ ಯುವಕರಿಗೆ ಅಪಾರ ನಷ್ಟ ಉಂಟಮಾಡಿದವು, ಇದು ಭಾರತದ ನಿಜವಾದ ಶಕ್ತಿ ಹೊರಹೊಮ್ಮುವುದನ್ನು ತಡೆಯಿತು.

 

ಸ್ನೇಹಿತರೆ,

ರಾಷ್ಟ್ರವು ಅನುಭವಿಸಿದ ನಷ್ಟದ ಪ್ರಮಾಣವನ್ನು ನಮ್ಮ ಹಡಗು ವಲಯದಲ್ಲಿ ಸ್ಪಷ್ಟವಾಗಿ ಕಾಣಬಹುದು. ಶತಮಾನಗಳಿಂದ ಭಾರತವು ಒಂದು ದೊಡ್ಡ ಸಮುದ್ರ ಶಕ್ತಿಯಾಗಿದೆ ಎಂಬುದು ನಿಮಗೂ ಚೆನ್ನಾಗಿ ತಿಳಿದಿದೆ. ನಾವು ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಹಡಗು ನಿರ್ಮಾಣ ಕೇಂದ್ರಗಳಲ್ಲಿ ಒಂದಾಗಿದ್ದೆವು. ಭಾರತದ ಕರಾವಳಿ ರಾಜ್ಯಗಳಲ್ಲಿ ನಿರ್ಮಿಸಲಾದ ಹಡಗುಗಳು ದೇಶದೊಳಗೆ ಮತ್ತು ಪ್ರಪಂಚದೊಂದಿಗೆ ವ್ಯಾಪಾರ ಮತ್ತು ವಾಣಿಜ್ಯ ನಡೆಸುತ್ತಿದ್ದವು. 50 ವರ್ಷಗಳ ಹಿಂದೆಯೂ ಸಹ, ನಾವು ಭಾರತದಲ್ಲಿ ತಯಾರಿಸಿದ ಹಡಗುಗಳನ್ನು ಬಳಸುತ್ತಿದ್ದೆವು. ಆ ಸಮಯದಲ್ಲಿ, ಭಾರತದ ಆಮದು ಮತ್ತು ರಫ್ತುಗಳಲ್ಲಿ 40%ಗಿಂತ ಹೆಚ್ಚು ಭಾರತ ನಿರ್ಮಿತ ಹಡಗುಗಳಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಹಡಗು ವಲಯವು ಕಾಂಗ್ರೆಸ್‌ನ ದೋಷಪೂರಿತ ನೀತಿಗಳಿಗೆ ಬಲಿಯಾಯಿತು. ಭಾರತದಲ್ಲಿ ಹಡಗು ನಿರ್ಮಾಣವನ್ನು ಬಲಪಡಿಸುವ ಬದಲು, ಕಾಂಗ್ರೆಸ್ ವಿದೇಶಿ ಹಡಗುಗಳಿಗೆ ಬಾಡಿಗೆ ಶುಲ್ಕ ಪಾವತಿಸಲು ಆದ್ಯತೆ ನೀಡಿತು. ಪರಿಣಾಮವಾಗಿ, ಭಾರತದ ಹಡಗು ನಿರ್ಮಾಣ ಪರಿಸರ ವ್ಯವಸ್ಥೆ ಕುಸಿಯಿತು, ವಿದೇಶಿ ಹಡಗುಗಳ ಮೇಲಿನ ಅವಲಂಬನೆಯೇ ನಮಗೆ ಕಡ್ಡಾಯವಾಯಿತು. ಒಂದು ಕಾಲದಲ್ಲಿ ನಮ್ಮ ವ್ಯಾಪಾರದ 40% ಭಾರತೀಯ ಹಡಗುಗಳ ಮೇಲೆ ನಡೆಸಲ್ಪಡುತ್ತಿತ್ತು, ಇಂದು ಆ ಪಾಲು ಕೇವಲ 5%ಗೆ ಇಳಿದಿದೆ. ಅಂದರೆ ನಮ್ಮ ವ್ಯಾಪಾರದ 95%ಗೆ ನಾವು ವಿದೇಶಿ ಹಡಗುಗಳ ಮೇಲೆ ಅವಲಂಬಿತರಾಗಿದ್ದೇವೆ - ಇದು ನಮಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ.

ಸ್ನೇಹಿತರೆ,

ನಾನು ದೇಶದ ಮುಂದೆ ಕೆಲವು ಅಂಕಿಅಂಶಗಳನ್ನು ಇಡಲು ಬಯಸುತ್ತೇನೆ. ಪ್ರತಿ ವರ್ಷ ಭಾರತವು ವಿದೇಶಿ ಹಡಗು ಕಂಪನಿಗಳಿಗೆ ತಮ್ಮ ಸೇವೆಗಳಿಗಾಗಿ ಸುಮಾರು 75 ಶತಕೋಟಿ ಡಾಲರ್‌ಗಳನ್ನು ಅಂದರೆ ಸುಮಾರು 6 ಲಕ್ಷ ಕೋಟಿ ರೂಪಾಯಿ ಪಾವತಿಸುತ್ತದೆ ಎಂಬುದನ್ನು ತಿಳಿದು ನಾಗರಿಕರು ಆಘಾತಕ್ಕೊಳಗಾಗುತ್ತಾರೆ. ಇದು ಭಾರತದ ಪ್ರಸ್ತುತ ರಕ್ಷಣಾ ಬಜೆಟ್‌ಗೆ ಬಹುತೇಕ ಸಮಾನವಾಗಿದೆ. 7 ದಶಕಗಳಲ್ಲಿ ನಾವು ಇತರ ದೇಶಗಳಿಗೆ ಎಷ್ಟು ಹಣ ಪಾವತಿಸಿದ್ದೇವೆ ಎಂಬುದನ್ನು ನೀವೇ ಊಹಿಸಿ. ನಮ್ಮ ಹಣದಿಂದ, ವಿದೇಶಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಹಿಂದಿನ ಸರ್ಕಾರಗಳು ನಮ್ಮ ಹಡಗು ಉದ್ಯಮದಲ್ಲಿ ಈ ಹಣದ ಒಂದು ಸಣ್ಣ ಭಾಗವನ್ನು ಹೂಡಿಕೆ ಮಾಡಿದ್ದರೆ, ಇಂದು ಜಗತ್ತು ನಮ್ಮ ಹಡಗುಗಳನ್ನು ಬಳಸುತ್ತಿತ್ತು. ನಾವು ಹಡಗು ಸೇವೆಗಳಲ್ಲಿ ಲಕ್ಷಾಂತರ ಕೋಟಿ ರೂ. ಗಳಿಸುತ್ತಿದ್ದೆವು, ಅದರ ಮೇಲೆ, ನಾವು ಅಗಾಧ ಮೊತ್ತವನ್ನು ಉಳಿಸುತ್ತಿದ್ದೆವು.

ಸ್ನೇಹಿತರೆ,

2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ, ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಅರ್ಥಪೂರ್ಣವಾಗಿ ಆಚರಿಸುವಾಗ, ಸ್ವಾವಲಂಬನೆಯೇ ಏಕೈಕ ಮಾರ್ಗವಾಗಿದೆ. ಯಾವುದೇ ಪರ್ಯಾಯವಿಲ್ಲ. 140 ಕೋಟಿ ಭಾರತೀಯರ ಸಂಕಲ್ಪ ಒಂದಾಗಿರಬೇಕು - ಅದು ಸೆಮಿಕಂಡಕ್ಟರ್ ಚಿಪ್ ಆಗಿರಲಿ ಅಥವಾ ಹಡಗಾಗಿರಲಿ, ನಾವು ಅದನ್ನು ಭಾರತದಲ್ಲೇ ತಯಾರಿಸಬೇಕು. ಈ ದೃಷ್ಟಿಕೋನದೊಂದಿಗೆ, ಭಾರತದ ಕಡಲ ವಲಯವು ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ. ಇಂದಿನಿಂದ, ದೇಶದ ಪ್ರತಿಯೊಂದು ಪ್ರಮುಖ ಬಂದರುಗಳು ಲೆಕ್ಕವಿಲ್ಲದಷ್ಟು ದಾಖಲೆಗಳು ಮತ್ತು ವೈವಿಧ್ಯಮಯ ಪ್ರಕ್ರಿಯೆಗಳಿಂದ ಮುಕ್ತವಾಗುತ್ತವೆ. "ಒಂದು ರಾಷ್ಟ್ರ, ಒಂದು ದಾಖಲೆ" ಮತ್ತು "ಒಂದು ರಾಷ್ಟ್ರ, ಒಂದು ಬಂದರು ಪ್ರಕ್ರಿಯೆ"ಯು ವ್ಯಾಪಾರವನ್ನು ಮತ್ತಷ್ಟು ಸರಳಗೊಳಿಸುತ್ತದೆ. ನಮ್ಮ ಸಚಿವ ಸರ್ಬಾನಂದ ಸೋನೋವಾಲ್ ಜಿ ಹೇಳಿದಂತೆ, ಇತ್ತೀಚಿನ ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ನಾವು ಅನೇಕ ಪ್ರಾಚೀನ ವಸಾಹತುಶಾಹಿ ಕಾನೂನುಗಳನ್ನು ತಿದ್ದುಪಡಿ ಮಾಡಿದ್ದೇವೆ. ನಾವು ಕಡಲ ವಲಯದಲ್ಲಿ ಸುಧಾರಣೆಗಳ ಸರಣಿಯನ್ನು ಪ್ರಾರಂಭಿಸಿದ್ದೇವೆ. ನಮ್ಮ ಸರ್ಕಾರವು 5 ಕಡಲ ಕಾನೂನುಗಳನ್ನು ಹೊಸ ರೂಪದಲ್ಲಿ ಪರಿಚಯಿಸಿದೆ. ಇವು ಹಡಗು ವಲಯ ಮತ್ತು ಬಂದರು ಆಡಳಿತದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತವೆ.

 

ಸ್ನೇಹಿತರೆ,

ಭಾರತವು ಶತಮಾನಗಳಿಂದ ದೊಡ್ಡ ಹಡಗುಗಳನ್ನು ನಿರ್ಮಿಸುವಲ್ಲಿ ಪರಿಣಿತವಾಗಿದೆ. ಮುಂದಿನ ಪೀಳಿಗೆಯ ಸುಧಾರಣೆಗಳು ಈ ಮರೆತುಹೋದ ವೈಭವವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಕಳೆದ ದಶಕದಲ್ಲಿ, ನಾವು 40ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೌಕಾಪಡೆಗೆ ಸೇರಿಸಿದ್ದೇವೆ. ಒಂದು ಅಥವಾ ಎರಡನ್ನು ಹೊರತುಪಡಿಸಿ, ಇವೆಲ್ಲವನ್ನೂ ಭಾರತದಲ್ಲಿ ನಿರ್ಮಿಸಲಾಗಿದೆ. ನೀವು ಐ.ಎನ್.ಎಸ್ ವಿಕ್ರಾಂತ್ ಬಗ್ಗೆ ಕೇಳಿರಬೇಕು - ಈ ಪ್ರಬಲ ನೌಕೆಯನ್ನು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಿಸಲಾಗಿದೆ. ಅದರಲ್ಲಿ ಬಳಸಲಾದ ಉತ್ತಮ ಗುಣಮಟ್ಟದ ಉಕ್ಕನ್ನು ಸಹ ಭಾರತದಲ್ಲಿ ತಯಾರಿಸಲಾಗಿದೆ. ಇದು ನಮ್ಮಲ್ಲಿ ಸಾಮರ್ಥ್ಯವಿದೆ ಮತ್ತು ಕೌಶಲ್ಯದ ಕೊರತೆಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ದೊಡ್ಡ ಹಡಗುಗಳನ್ನು ನಿರ್ಮಿಸಲು ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿ. ನಾನು ನನ್ನ ಸಹ ನಾಗರಿಕರಿಗೆ ಈ ದೃಢಸಂಕಲ್ಪದ ಬಗ್ಗೆ ಭರವಸೆ ನೀಡುತ್ತೇನೆ.

ಸ್ನೇಹಿತರೆ,

ಭಾರತದ ಕಡಲ ವಲಯವನ್ನು ಬಲಪಡಿಸಲು, ನಿನ್ನೆ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಒಂದು ಪ್ರಮುಖ ನೀತಿ ಬದಲಾವಣೆ ಮಾಡಿದ್ದೇವೆ. ಸರ್ಕಾರವು ಈಗ ದೊಡ್ಡ ಹಡಗುಗಳನ್ನು ಮೂಲಸೌಕರ್ಯವೆಂದು ಗುರುತಿಸಿದೆ. ಯಾವುದೇ ವಲಯವನ್ನು ಮೂಲಸೌಕರ್ಯವೆಂದು ಗುರುತಿಸಿದಾಗ, ಅದು ಅಪಾರ ಪ್ರಯೋಜನಗಳನ್ನು ಪಡೆಯುತ್ತದೆ. ಹಡಗು ನಿರ್ಮಾಣ ಕಂಪನಿಗಳು ಈಗ ಬ್ಯಾಂಕ್ ಸಾಲಗಳನ್ನು ಪಡೆಯುವುದು ಸುಲಭವಾಗುತ್ತದೆ, ಅವು ಕಡಿಮೆ ಬಡ್ಡಿ ದರದ ಸಾಲಗಳನ್ನು ಪಡೆಯುತ್ತವೆ, ಮೂಲಸೌಕರ್ಯ ಹಣಕಾಸಿನ ಎಲ್ಲಾ ಪ್ರಯೋಜನಗಳನ್ನು ಅನುಭವಿಸುತ್ತವೆ. ಈ ನಿರ್ಧಾರವು ಭಾರತೀಯ ಹಡಗು ಕಂಪನಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಜಾಗತಿಕವಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಭಾರತವನ್ನು ದೊಡ್ಡ ಕಡಲ ಶಕ್ತಿಯಾಗಿ ಮಾಡಲು, ಸರ್ಕಾರವು 3 ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ. ಈ ಯೋಜನೆಗಳು ಹಡಗು ನಿರ್ಮಾಣ ವಲಯಕ್ಕೆ ಆರ್ಥಿಕ ಬೆಂಬಲವನ್ನು ಸುಲಭಗೊಳಿಸುತ್ತದೆ, ನಮ್ಮ ಹಡಗುಕಟ್ಟೆಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ, ವಿನ್ಯಾಸ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ. ಮುಂಬರುವ ವರ್ಷಗಳಲ್ಲಿ ಇವುಗಳಿಗಾಗಿ 70,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಲಾಗುವುದು.

 

ಸ್ನೇಹಿತರೆ,

2007ರಲ್ಲಿ ನಾನು ಇಲ್ಲಿ ಮುಖ್ಯಮಂತ್ರಿಯಾಗಿ ನಿಮಗೆ ಸೇವೆ ಸಲ್ಲಿಸುತ್ತಿದ್ದಾಗ, ಗುಜರಾತ್ ಹಡಗು ನಿರ್ಮಾಣ ಅವಕಾಶಗಳ ಕುರಿತು ಒಂದು ಪ್ರಮುಖ ವಿಚಾರಸಂಕಿರಣ ಆಯೋಜಿಸಲಾಗಿತ್ತು, ಅದು ನನಗೆ ಇಂದಿಗೂ ನೆನಪಿದೆ. ಆ ಸಮಯದಲ್ಲಿ ನಾವು ಗುಜರಾತ್‌ನಲ್ಲಿ ಹಡಗು ನಿರ್ಮಾಣ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಿದ್ದೇವೆ. ಈಗ, ದೇಶಾದ್ಯಂತ ಹಡಗು ನಿರ್ಮಾಣಕ್ಕಾಗಿ ನಾವು ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಡಗು ನಿರ್ಮಾಣವು ಸಾಮಾನ್ಯ ಉದ್ಯಮವಲ್ಲ ಎಂದು ಇಲ್ಲಿನ ತಜ್ಞರಿಗೆ ತಿಳಿದಿದೆ. ಪ್ರಪಂಚದಾದ್ಯಂತ ಇದನ್ನು "ಎಲ್ಲಾ ಕೈಗಾರಿಕೆಗಳ ತಾಯಿ" ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಹಡಗು ನಿರ್ಮಾಣದ ಬಗ್ಗೆ ಮಾತ್ರವಲ್ಲ - ಹಲವಾರು ಸಂಬಂಧಿತ ಕೈಗಾರಿಕೆಗಳು ಜತೆಗ ಜತೆಗೆ ವಿಸ್ತರಿಸುತ್ತವೆ.ಉಕ್ಕು, ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್, ಜವಳಿ, ಬಣ್ಣಗಳು, ಐಟಿ ವ್ಯವಸ್ಥೆಗಳು ಮತ್ತು ಇನ್ನೂ ಅನೇಕ. ಹಡಗು ಉದ್ಯಮವು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಎಂ.ಎಸ್.ಎಂ.ಇಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ವಲಯಗಳನ್ನು ಬೆಂಬಲಿಸುತ್ತದೆ. ಹಡಗು ನಿರ್ಮಾಣದಲ್ಲಿ ಹೂಡಿಕೆ ಮಾಡುವ ಪ್ರತಿ ರೂಪಾಯಿ ಆರ್ಥಿಕತೆಯಲ್ಲಿ ಸುಮಾರು 2 ಪಟ್ಟು ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತೋರಿಸುತ್ತಿವೆ. ಹಡಗು ನಿರ್ಮಾಣದಲ್ಲಿ ರೂಪಿಸಲಾದ ಪ್ರತಿಯೊಂದು ಉದ್ಯೋಗವು ಪೂರೈಕೆ ಸರಪಳಿಯಲ್ಲಿ 6ರಿಂದ 7 ಹೊಸ ಉದ್ಯೋಗಗಳಿಗೆ ಕಾರಣವಾಗುತ್ತದೆ. ಅಂದರೆ ಹಡಗು ನಿರ್ಮಾಣದಲ್ಲಿ 100 ಉದ್ಯೋಗಗಳು ಸೃಷ್ಟಿಯಾದರೆ, ಸಂಬಂಧಿತ ವಲಯಗಳಲ್ಲಿ 600ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹಡಗು ನಿರ್ಮಾಣದ ಗುಣಕ ಪರಿಣಾಮವೂ ಇದೇ ಆಗಿದೆ.

ಸ್ನೇಹಿತರೆ,

ನಾವು ಹಡಗು ನಿರ್ಮಾಣಕ್ಕೆ ಅಗತ್ಯವಾದ ಕೌಶಲ್ಯ ವ್ಯವಸ್ಥೆಗಳ ಮೇಲೆಯೂ ಗಮನ ಹರಿಸುತ್ತಿದ್ದೇವೆ. ನಮ್ಮ ಐಟಿ.ಐ.ಗಳು ಪಾತ್ರ ವಹಿಸುತ್ತವೆ ಮತ್ತು ನಮ್ಮ ಕಡಲ ವಿಶ್ವವಿದ್ಯಾಲಯದ ಪಾತ್ರವೂ ವಿಸ್ತರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಾವು ನೌಕಾಪಡೆ ಮತ್ತು ಎನ್‌.ಸಿ.ಸಿ ನಡುವಿನ ಸಮನ್ವಯದ ಮೂಲಕ ಕರಾವಳಿ ಪ್ರದೇಶಗಳಲ್ಲಿ ಹೊಸ ವ್ಯವಸ್ಥೆಗಳನ್ನು ಸ್ಥಾಪಿಸಿದ್ದೇವೆ. ಈ ಎನ್‌.ಸಿ.ಸಿ ಕೆಡೆಟ್‌ಗಳನ್ನು ನೌಕಾಪಡೆಗೆ ಮಾತ್ರವಲ್ಲದೆ, ವಾಣಿಜ್ಯ ವಲಯದಲ್ಲಿನ ಪಾತ್ರಗಳಿಗೂ ಸಿದ್ಧಪಡಿಸಲಾಗುವುದು.

ಸ್ನೇಹಿತರೆ,

ಇಂದಿನ ಭಾರತವು ಹೊಸ ಚೈತನ್ಯದೊಂದಿಗೆ ಮುನ್ನಡೆಯುತ್ತಿದೆ. ನಾವು ನಿಗದಿಪಡಿಸಿದ ಗುರಿಗಳನ್ನು, ನಾವು ಈಗ ಸಮಯಕ್ಕಿಂತ ಮುಂಚಿತವಾಗಿ ಸಾಧಿಸುತ್ತಿದ್ದೇವೆ. ಸೌರ ಭಾರತವು 4ರಿಂದ 5 ವರ್ಷಗಳ ಮುಂಚಿತವಾಗಿ ತನ್ನ ಗುರಿಗಳನ್ನು ತಲುಪುತ್ತಿದೆ. ಅದೇ ರೀತಿ, ಬಂದರು ನೇತೃತ್ವದ ಅಭಿವೃದ್ಧಿಯಲ್ಲಿ, ನಾವು 11 ವರ್ಷಗಳ ಹಿಂದೆ ನಿಗದಿಪಡಿಸಿದ ಗುರಿಗಳನ್ನು ಉತ್ತಮ ಯಶಸ್ಸಿನೊಂದಿಗೆ ಸಾಧಿಸಲಾಗುತ್ತಿದೆ. ನಾವು ದೊಡ್ಡ ಹಡಗುಗಳಿಗಾಗಿ ಪ್ರಮುಖ ಬಂದರುಗಳನ್ನು ನಿರ್ಮಿಸುತ್ತಿದ್ದೇವೆ, ಸಾಗರಮಾಲಾದಂತಹ ಯೋಜನೆಗಳ ಮೂಲಕ ಬಂದರು ಸಂಪರ್ಕವನ್ನು ಹೆಚ್ಚಿಸುತ್ತಿದ್ದೇವೆ.

 

ಸ್ನೇಹಿತರೆ,

ಕಳೆದ 11 ವರ್ಷಗಳಲ್ಲಿ ಭಾರತವು ತನ್ನ ಬಂದರು ಸಾಮರ್ಥ್ಯವನ್ನು 2 ಪಟ್ಟು ಹೆಚ್ಚಿಸಿದೆ. 2014ಕ್ಕಿಂತ ಮೊದಲು, ಭಾರತದಲ್ಲಿ ಸರಾಸರಿ ಹಡಗು ಸಂಚಾರ ಸಮಯ 2 ದಿನ ಹಿಡಿಯುತ್ತಿತ್ತು, ಆದರೀಗ ಅದು 1 ದಿನಕ್ಕಿಂತ ಕಡಿಮೆಯಾಗಿದೆ. ನಾವು ಹೊಸ, ದೊಡ್ಡ ಬಂದರುಗಳನ್ನು ನಿರ್ಮಿಸುತ್ತಿದ್ದೇವೆ. ಇತ್ತೀಚೆಗೆ, ಭಾರತದ ಮೊದಲ ಆಳವಾದ ನೀರಿನ ಕಂಟೇನರ್ ಟ್ರಾನ್ಸ್‌-ಶಿಪ್‌ಮೆಂಟ್ ಬಂದರನ್ನು ಕೇರಳದಲ್ಲಿ ಉದ್ಘಾಟಿಸಲಾಯಿತು. ಮಹಾರಾಷ್ಟ್ರದಲ್ಲಿ, ವಾಧವನ್ ಬಂದರನ್ನು 75,000 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ವಿಶ್ವದ ಅಗ್ರ 10 ಬಂದರುಗಳಲ್ಲಿ ಒಂದಾಗಲಿದೆ.

ಸ್ನೇಹಿತರೆ,

ಪ್ರಸ್ತುತ, ಜಾಗತಿಕ ಕಡಲ ವ್ಯಾಪಾರದಲ್ಲಿ ಭಾರತದ ಪಾಲು ಕೇವಲ 10 ಪ್ರತಿಶತದಷ್ಟಿದೆ. ನಾವು ಇದನ್ನು ಹೆಚ್ಚಿಸಬೇಕು. 2047ರ ಹೊತ್ತಿಗೆ, ಜಾಗತಿಕ ಕಡಲ ವ್ಯಾಪಾರದಲ್ಲಿ ನಮ್ಮ ಪಾಲನ್ನು 3 ಪಟ್ಟು ಹೆಚ್ಚಿಸುವ ಗುರಿ ಹೊಂದಿದ್ದೇವೆ, ನಾವು ಇದನ್ನು ಸಾಧಿಸುತ್ತೇವೆ.

ಸ್ನೇಹಿತರೆ,

ನಮ್ಮ ಕಡಲ ವ್ಯಾಪಾರ ಬೆಳೆದಂತೆ, ನಮ್ಮ ನಾವಿಕರ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ಶ್ರಮಶೀಲ ವೃತ್ತಿಪರರು ಸಮುದ್ರದಲ್ಲಿ ಹಡಗುಗಳನ್ನು ನಿರ್ವಹಿಸುತ್ತಾರೆ, ಎಂಜಿನ್‌ಗಳು ಮತ್ತು ಯಂತ್ರೋಪಕರಣಗಳನ್ನು ನಿರ್ವಹಿಸುತ್ತಾರೆ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಅನ್ನು ನೋಡಿಕೊಳ್ಳುತ್ತಾರೆ. ಒಂದು ದಶಕದ ಹಿಂದೆ, ಭಾರತವು 1.25 ಲಕ್ಷಕ್ಕಿಂತ ಕಡಿಮೆ ನಾವಿಕರನ್ನು ಹೊಂದಿತ್ತು. ಇಂದು ಅವರ ಸಂಖ್ಯೆ 3 ಲಕ್ಷ ದಾಟಿದೆ. ಭಾರತವು ಈಗ ಜಗತ್ತಿಗೆ ನಾವಿಕರನ್ನು ಪೂರೈಸುವ ಅಗ್ರ 3 ದೇಶಗಳಲ್ಲಿ ಸ್ಥಾನ ಪಡೆದಿದೆ. ಇದು ನಮ್ಮ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಹೀಗಾಗಿ, ಭಾರತದ ಬೆಳೆಯುತ್ತಿರುವ ಹಡಗು ಉದ್ಯಮವು ಇಡೀ ಜಗತ್ತನ್ನು ಬಲಪಡಿಸುತ್ತಿದೆ.

ಸ್ನೇಹಿತರೆ,

ಭಾರತವು ಶ್ರೀಮಂತ ಕಡಲ ಪರಂಪರೆ ಹೊಂದಿದೆ. ನಮ್ಮ ಮೀನುಗಾರರು, ನಮ್ಮ ಪ್ರಾಚೀನ ಬಂದರು ನಗರಗಳು ಅದರ ಸಂಕೇತಗಳಾಗಿವೆ. ಈ ಭಾವನಗರ, ಈ ಸೌರಾಷ್ಟ್ರ, ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ನಾವು ಈ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ರವಾನಿಸಬೇಕು, ನಮ್ಮ ಶಕ್ತಿಯನ್ನು ಇಡೀ ಜಗತ್ತಿಗೆ ಪ್ರದರ್ಶಿಸಬೇಕು. ಅದಕ್ಕಾಗಿಯೇ ನಾವು ಲೋಥಾಲ್‌ನಲ್ಲಿ ಭವ್ಯವಾದ ಕಡಲ ವಸ್ತುಸಂಗ್ರಹಾಲಯ ನಿರ್ಮಿಸುತ್ತಿದ್ದೇವೆ. ಇದು ಕೂಡ ವಿಶ್ವದ ಅತಿದೊಡ್ಡ ಕಡಲ ವಸ್ತುಸಂಗ್ರಹಾಲಯವಾಗಲಿದೆ. ಏಕತೆಯ ಪ್ರತಿಮೆಯಂತೆಯೇ, ಇದು ಭಾರತದ ಹೊಸ ಗುರುತಾಗುತ್ತದೆ. ಶೀಘ್ರದಲ್ಲೇ, ನಾನು ಅಲ್ಲಿಗೆ ಹೋಗುತ್ತೇನೆ.

 

ಸ್ನೇಹಿತರೆ,

ಭಾರತದ ಕರಾವಳಿಗಳು ಸಮೃದ್ಧಿಯ ದ್ವಾರಗಳಾಗುತ್ತವೆ. ಭಾರತದ ಸಮುದ್ರ ತೀರಗಳು ನಮ್ಮ ಸಂಪತ್ತಿನ ಪ್ರವೇಶ ದ್ವಾರಗಳಾಗಲಿವೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ, ಮತ್ತು ಅದನ್ನು ನಾನು ಎದುರು ನೋಡಬಲ್ಲೆ. ಭಾರತದ ಕರಾವಳಿಗಳು ನಮ್ಮ ಸಂಪತ್ತಿನ ಪ್ರವೇಶ ದ್ವಾರಗಳಾಗಲಿವೆ. ಗುಜರಾತ್‌ನ ಕರಾವಳಿಯು ಮತ್ತೊಮ್ಮೆ ಈ ಪ್ರದೇಶಕ್ಕೆ ಆಶೀರ್ವಾದ ನೀಡಲಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಈ ಇಡೀ ಪ್ರದೇಶವು ರಾಷ್ಟ್ರಕ್ಕೆ ಬಂದರು ನೇತೃತ್ವದ ಅಭಿವೃದ್ಧಿಯ ಹೊಸ ಮಾರ್ಗವನ್ನು ತೋರಿಸುತ್ತಿದೆ. ಇಂದು ಭಾರತೀಯ ಬಂದರುಗಳು ನಿರ್ವಹಿಸುವ ಸರಕುಗಳಲ್ಲಿ 40% ಗುಜರಾತ್‌ನ ಬಂದರುಗಳ ಮೂಲಕ ಬರುತ್ತದೆ. ಶೀಘ್ರದಲ್ಲೇ, ಈ ಬಂದರುಗಳು ಸಹ ಸಮರ್ಪಿತ ಸರಕು ಕಾರಿಡಾರ್‌ನಿಂದ ಪ್ರಯೋಜನ ಪಡೆಯುತ್ತವೆ. ಇದು ದೇಶಾದ್ಯಂತ ಸರಕುಗಳನ್ನು ವೇಗವಾಗಿ ಸಾಗಿಸಲು ಮತ್ತು ನಮ್ಮ ಬಂದರುಗಳ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಸ್ನೇಹಿತರೆ,

ಇಲ್ಲಿಯೂ ಸಹ, ಪ್ರಮುಖ ಹಡಗು ಒಡೆಯುವ ಪರಿಸರ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಅಲಂಗ್‌ನ ಹಡಗು ಒಡೆಯುವ ಅಂಗಣವು ಇದಕ್ಕೆ ಗಮನಾರ್ಹ ಉದಾಹರಣೆಯಾಗಿದ್ದು, ನಮ್ಮ ಯುವಕರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೆ,

ವಿಕಸಿತ ಭಾರತ ನಿರ್ಮಿಸಲು ನಾವು ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ವಲಯದಲ್ಲೂ ವೇಗವಾಗಿ ಕೆಲಸ ಮಾಡಬೇಕು. ಮತ್ತು ವಿಕಸಿತ ಭಾರತಕ್ಕೆ ಹೋಗುವ ಹಾದಿಯು ಆತ್ಮನಿರ್ಭರ್ ಭಾರತ(ಸ್ವಾವಲಂಬಿ ಭಾರತ) ಮೂಲಕ ಸಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು: ನಾವು ಏನೇ ಖರೀದಿಸಿದರೂ ಸ್ಥಳೀಯವಾಗಿರಬೇಕು, ನಾವು ಏನೇ ಮಾರಾಟ ಮಾಡಿದರೂ ಸ್ಥಳೀಯವಾಗಿರಬೇಕು. ಎಲ್ಲಾ ವರ್ತಕರು ತಮ್ಮ ಅಂಗಡಿಗಳಲ್ಲಿ "ಹೆಮ್ಮೆಯಿಂದ ಹೇಳು: ಇದು ಸ್ವದೇಶಿ" ಎಂದು ಬರೆಯುವ ಪೋಸ್ಟರ್ ಪ್ರದರ್ಶಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಈ ಪ್ರಯತ್ನವು ಪ್ರತಿ ಹಬ್ಬವನ್ನು ಭಾರತದ ಸಮೃದ್ಧಿಯ ಹಬ್ಬವನ್ನಾಗಿ ಮಾಡುತ್ತದೆ. ಈ ಮನೋಭಾವದಿಂದ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನವರಾತ್ರಿಯ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಒಂದು ಚಿಕ್ಕ ಮಗು ಬಹಳ ಸಮಯದಿಂದ ಇಲ್ಲಿ ಚಿತ್ರ ಹಿಡಿದು ನಿಂತಿದೆ, ಅವನ ಕೈಗಳು ನೋಯುತ್ತಿರಬೇಕು. ದಯವಿಟ್ಟು ಅದನ್ನು ಅವನಿಂದ ಸಂಗ್ರಹಿಸಿ. ಚೆನ್ನಾಗಿದೆ, ಮಗುವೇ ಬಾ, ನಿನ್ನ ಚಿತ್ರ ಬಂದಿದೆ. ಅಳುವ ಅಗತ್ಯವಿಲ್ಲ, ನನ್ನ ಮಗು, ನಿನ್ನ ಚಿತ್ರ ಬಂದಿದೆ. ನಿಮ್ಮ ವಿಳಾಸ ಅದರ ಮೇಲೆ ಬರೆದಿದ್ದರೆ, ನಾನು ಖಂಡಿತವಾಗಿಯೂ ನಿನಗೆ ಪತ್ರ ಬರೆಯುತ್ತೇನೆ.

ಸ್ನೇಹಿತರೆ,

ಇಂತಹ ಪುಟ್ಟ ಮಕ್ಕಳ ಪ್ರೀತಿಗಿಂತ ಜೀವನದಲ್ಲಿ ದೊಡ್ಡ ನಿಧಿ ಇದೆಯಾ? ಮತ್ತೊಮ್ಮೆ, ನನಗೆ ನೀಡಿದ ಭವ್ಯ ಸ್ವಾಗತ, ಆತಿಥ್ಯ ಮತ್ತು ಗೌರವಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಆಪರೇಷನ್ ಸಿಂದೂರ್ ನಡೆಸಿದಾಗ, ಇಡೀ ಭಾವನಗರವು ಮೈದಾನದಲ್ಲಿತ್ತು ಎಂದು ನನಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಮನೋಭಾವದ ಬಗ್ಗೆ ನನಗೆ ತಿಳಿದಿದೆ, ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಭಾವನಗರದ ಸಹೋದರ ಸಹೋದರಿಯರೆ, ನವರಾತ್ರಿಯ ಮಾಂಡವಿ(ಮಂಟಪ)ಯಿಂದ ನಿಮ್ಮ ಧ್ವನಿಯನ್ನು ಎತ್ತರಿಸಿ, ಇದರಿಂದ ಆತ್ಮನಿರ್ಭರ ಭಾರತದ ಸಂದೇಶವು ರಾಷ್ಟ್ರದಾದ್ಯಂತ ಪ್ರತಿಧ್ವನಿಸುತ್ತದೆ.

ತುಂಬು ಧನ್ಯವಾದಗಳು ನನ್ನ ಸಹೋದರರೆ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
38 Per Cent Women In Rural And Semi-Urban Use UPI Weekly For Daily Essentials: Survey

Media Coverage

38 Per Cent Women In Rural And Semi-Urban Use UPI Weekly For Daily Essentials: Survey
NM on the go

Nm on the go

Always be the first to hear from the PM. Get the App Now!
...
The government places great emphasis on bringing a 'technology culture' to agriculture: PM Modi
March 06, 2026
This year’s Union Budget gives a strong push to agriculture and rural transformation : PM
Government has continuously strengthened the agriculture sector ,major efforts have reduced the risks for farmers and provided them with basic economic security: PM
If we scale high-value agriculture together, it will transform agriculture into a globally competitive sector: PM
As export-oriented production increases, employment will be created in rural areas through processing and value addition: PM
Fisheries can become a major platform for export growth, a high-value, high-impact sector of rural prosperity: PM
The government is developing digital public infrastructure for agriculture through AgriStack: PM
Technology delivers results when systems adopt it, institutions integrate it, and entrepreneurs build innovations on it: PM

नमस्कार !

बजट वेबिनार सीरीज के तीसरे वेबिनार में, मैं आप सभी का अभिनंदन करता हूं। इससे पहले, टेक्नोलॉजी, रिफॉर्म्स और इकोनॉमिक ग्रोथ जैसे अहम विषयों पर दो वेबिनार हो चुके हैं। आज, Rural Economy और Agriculture जैसे अहम सेक्टर पर चर्चा हो रही है। आप सभी ने बजट निर्माण में अपने मूल्यवान सुझावों से बहुत सहयोग दिया, और आपने देखा होगा बजट में आप सबके सुझाव रिफ्लेक्ट हो रहे हैं, बहुत काम आए हैं। लेकिन अब बजट आ चुका है, अब बजट के बाद उसके full potential का लाभ देश को मिले, इस दिशा में भी आपका अनुभव, आपके सुझाव और सरल तरीके से बजट का सर्वाधिक लोगों को लाभ हो। बजट का पाई-पाई पैसा जिस हेतु से दिया गया है, उसको परिपूर्ण कैसे करें? जल्द से जल्द कैसे करें? आपके सुझाव ये वेबिनार के लिए बहुत अहम है।

साथियों,

आप सभी जानते हैं, कृषि, एग्रीकल्चर, विश्वकर्मा, ये सब हमारी अर्थव्यवस्था का मुख्य आधार है। एग्रीकल्चर, भारत की लॉन्ग टर्म डेवलपमेंट जर्नी का Strategic Pillar भी है, और इसी सोच के साथ हमारी सरकार ने कृषि सेक्टर को लगातार मजबूत किया है। करीब 10 करोड़ किसानों को 4 लाख करोड़ रुपए से अधिक की पीएम किसान सम्मान निधि मिली है। MSP में हुए Reforms से अब किसानों को डेढ़ गुना तक रिटर्न मिल रहा है। इंस्टिट्यूशनल क्रेडिट कवरेज 75 प्रतिशत से अधिक हो चुका है। पीएम फसल बीमा योजना के तहत लगभग 2 लाख करोड़ रुपए के क्लेम सेटल किए गए हैं। ऐसे अनेक प्रयासों से किसानों का रिस्क बहुत कम हुआ है, और उन्हें एक बेसिक इकोनॉमिक सिक्योरिटी मिली है। इससे कृषि क्षेत्र का आत्मविश्वास भी बढ़ा है। आज खाद्यान्न और दालों से लेकर तिलहन तक देश रिकॉर्ड उत्पादन कर रहा है। लेकिन अब, जब 21वीं सदी का दूसरा क्वार्टर शुरू हो चुका है, 25 साल बीत चुके हैं, तब कृषि क्षेत्र को नई ऊर्जा से भरना भी उतना ही आवश्यक है। इस साल के बजट में इस दिशा में नए प्रयास हुए हैं। मुझे विश्वास है, इस वेबिनार में आप सभी के बीच हुई चर्चा, इससे निकले सुझाव, बजट प्रावधानों को जल्द से जल्द जमीन पर उतारने में मदद करेंगे।

साथियों,

आज दुनिया के बाजार खुल रहे हैं, ग्लोबल डिमांड बदल रही है। इस वेबिनार में अपनी खेती को एक्सपोर्ट ओरिएंटेड बनाने पर भी ज्यादा से ज्यादा चर्चा आवश्य़क है। हमारे पास Diverse Climate है, हमें इसका पूरा फायदा उठाना है। एग्रो क्लाइमेटिक जोन, उस विषय में हम बहुत समृद्ध है। इस साल का बजट इन सब बातों के लिए अनगिनत नए अवसर देने वाला बजट है। प्रोडक्टिविटी बढ़ाने की दिशा तय करता है, और एक्सपोर्ट स्ट्रेंथ को बढ़ावा देता है। बजट में हमने high value agriculture पर फोकस किया है। नारियल, काजू, कोको, चंदन, ऐसे उत्पादों के regional-specific promotion की बात कही है, और आपको मालूम है, दक्षिण के हमारे जो राज्य हैं खासकर केरल है, तमिलनाडु है, नारियल की पैदावार बहुत करते हैं। लेकिन अब वो क्रॉप, वो सारे पेड़ इतने पुराने हो चुके हैं कि उसकी वो क्षमता नहीं रही है। केरल के किसानों को अतिरिक्त लाभ हो, तमिलनाडु के किसानों को अतिरिक्त लाभ हो। इसलिए इस बार कोकोनट पर एक विशेष बल दिया गया है, जिसका फायदा आने वाले दिनों में हमारे इन किसानों को मिलेगा।

साथियों,

नॉर्थ ईस्ट की तरफ देखें, अगरवुड बहुत कम लोगों को मालूम है, जो ये अगरबत्ती शब्द है ना, वो अगरवुड से आया हुआ है। अब हिमालयन राज्यों में टेम्परेट नट क्रॉप्स, और इन्हें बढ़ावा देने का प्रस्ताव बजट में रखा गया है। जब एक्सपोर्ट ओरिएंटेड प्रोडक्शन बढ़ेगा, तो ग्रामीण क्षेत्रों में प्रोसेसिंग और वैल्यू एडिशन के जरिए रोजगार सृजन होगा। इस दिशा में एक coordinated action कैसे हो, आप सभी स्टेकहोल्डर्स मिलकर जरूर मंथन करें। अगर हम मिलकर High Value Agriculture को स्केल करते हैं, तो ये एग्रीकल्चर को ग्लोबली कंपेटिटिव सेक्टर में बदल सकता है। एग्री experts, इंडस्ट्री और किसान एक साथ कैसे आएं, किसानों को ग्लोबल मार्केट से जोड़ने के लिए किस तरह से गोल्स सेट किए जाएं, क्वालिटी, ब्रांडिंग और स्टैंडर्ड्स, ऐसे हर पहलू, इन सबको कैसे प्रमोट किया जाए, इन सारे विषयों पर चर्चा, इस वेबिनार को, इसके महत्व को बढ़ाएंगे। मैं एक और बात आपसे कहना चाहूंगा। आज दुनिया हेल्थ के संबंध में ज्यादा कॉनशियस है। होलिस्टिक हेल्थ केयर और उसमें ऑर्गेनिक डाइट, ऑर्गेनिक फूड, इस पर बहुत रुचि है। भारत में हमें केमिकल फ्री खेती पर बल देना ही होगा, हमें नेचुरल फार्मिंग पर बल देना होगा। नेचुरल फार्मिंग से, केमिकल फ्री प्रोडक्ट से दुनिया के बाजार तक पहुंचने में हमारे लिए एक राजमार्ग बन जाता है। उसके लिए सर्टिफिकेशन, लेबोरेटरी ये सारी व्यवस्थाएं सरकार सोच रही है। लेकिन आप लोग इसमें भी जरूर अपने विचार रखिए।

साथियों,

एक्सपोर्ट बढ़ाने में एक बहुत बड़ा फैक्टर फिशरीज सेक्टर का पोटेंशियल भी है। भारत दुनिया का दूसरा सबसे बड़ा मछली उत्पादक देश भी है। आज हमारे अलग-अलग तरह के जलाशय, तालाब, ये सब मिलाकर लगभग 4 लाख टन मछली उत्पादन होता है। जबकि इसमें 20 लाख टन अतिरिक्त उत्पादन की संभावना मौजूद है। अब विचार कीजिए आप, 4 लाख टन से हम अतिरिक्त 20 लाख टन जोड़ दें, तो हमारे गरीब मछुआरे भाई-बहन हैं, उनकी जिंदगी कैसी बदल जाएगी। हमारे पास Rural Income को डायवर्सिफाई करने का अवसर है। फिशरीज एक्सपोर्ट ग्रोथ का बड़ा प्लेटफॉर्म बन सकता है, दुनिया में इसकी मांग है। इस वेबिनार से अगर बहुत ही प्रैक्टिकल सुझाव निकलते हैं, तो कैसे रिज़रवॉयर, उसकी पोटेंशियल की सटीक मैपिंग की जाए, कैसे क्लस्टर प्लानिंग की जाए, कैसे फिशरीज डिपार्टमेंट और लोकल कम्युनिटी के बीच मजबूत कोऑर्डिनेशन हो, तो बहुत ही उत्तम होगा। हैचरी, फीड, प्रोसेसिंग, ब्रांडिंग, एक्सपोर्ट, उसके लिए आवश्यक लॉजिस्टिक्स, हर स्तर पर हमें नए बिजनेस मॉडल विकसित करने ही होंगे। ये Rural Prosperity, ग्रामीण समृद्धि के लिए, वहां की हाई वैल्यू, हाई इम्पैक्ट सेक्टर के रूप में परिवर्तित करने का एक अवसर है हमारे लिए, और इस दिशा में भी हम सबको मिलकर काम करना है, और आप आज जो मंथन करेंगे, उसके लिए, उस कार्य के लिए रास्ता बनेगा।

साथियों,

पशुपालन सेक्टर, ग्रामीण इकोनॉमी का हाई ग्रोथ पिलर है। भारत आज दुनिया का सबसे बड़ा मिल्क प्रोड्यूसर है, Egg प्रोडक्शन में हम दूसरे स्थान पर है। हमें इसे और आगे ले जाने के लिए ब्रीडिंग क्वालिटी, डिजीज प्रिवेंशन और साइंटिफिक मैनेजमेंट पर फोकस करना होगा। एक और अहम विषय पशुधन के स्वास्थ्य का भी है। मैं जब One Earth One Health की बात करता हूं, तो उसमें पौधा हो या पशु, सबके स्वास्थ्य की बात शामिल है। भारत अब वैक्सीन उत्पादन में आत्मनिर्भर है। फुट एंड माउथ डिजीज, उससे पशुओं को बचाने के लिए सवा सौ करोड़ से अधिक डोज पशुओं को लगाई जा चुकी है। राष्ट्रीय गोकुल मिशन के तहत टेक्नोलॉजी का विस्तार किया जा रहा है। हमारी सरकार में अब पशुपालन क्षेत्र के किसानों को किसान क्रेडिट कार्ड का भी लाभ मिल रहा है। निजी निवेश को प्रोत्साहित करने के लिए एनिमल हसबेंड्री इंफ्रास्ट्रक्चर डेवलपमेंट फंड की शुरुआत भी की गई है, और आपको ये पता है हम लोगों ने गोबरधन योजना लागू की है। गांव के पशुओं के निकलने वाला मलमूत्र है, गांव का जो वेस्ट है, कूड़ा-कचरा है। हम गोबरधन योजना में इसका उपयोग करके गांव भी स्वच्छ रख सकते हैं, दूध से आय होती है, तो गोबर से भी आय हो सकती है, और एनर्जी सिक्योरिटी की दिशा में गैस सप्लाई में भी ये गोबरधन बहुत बड़ा योगदान दे सकता है। ये मल्टीपर्पज बेनिफिट वाला काम है, और गांव के लिए बहुत उपयोगी है। मैं चाहूंगा कि सभी राज्य सरकारें इसको प्राथमिकता दें, इसको आगे बढ़ाएं।

साथियों,

हमने पिछले अनुभवों से समझा है कि केवल एक ही फसल पर टिके रहना किसान के लिए जोखिम भरा है। इससे आय के विकल्प भी सीमित हो जाते हैं। इसलिए, हम crop diversification पर फोकस कर रहे हैं। इसके अलावा, National Mission on Edible Oils And Pulses, National Mission on Natural Farming, ये सभी एग्रीकल्चर सेक्टर की ताकत बढ़ा रहे हैं।

साथियों,

आप भी जानते हैं एग्रीकल्चर स्टेट सब्जेक्ट है, राज्यों का भी एक बड़ा एग्रीकल्चर बजट होता है, हमें राज्यों को भी निरंतर प्रेरित करना है कि वो अपना दायित्व निभाने में, हम उनको कैसे मदद दें, हमारे सुझाव उनको कैसे काम आएं। राज्य का भी एक-एक पैसा जो गांव के लिए, किसान के लिए तय हुआ है, वो सही उपयोग हो। हमें बजट प्रावधानों को जिला स्तर तक मजबूत करना होगा। तभी नई पॉलिसीज का ज्यादा से ज्यादा फायदा उठाया जा सकता है।

साथियों,

ये टेक्नोलॉजी की सदी है और सरकार का बहुत जोर एग्रीकल्चर में टेक्नोलॉजी कल्चर लाने पर भी है। आज e-NAM के माध्यम से मार्केट एक्सेस का डेमोक्रेटाइजेशन हुआ है। सरकार एग्रीस्टैक के जरिए, एग्रीकल्चर के लिए डिजिटल पब्लिक इंफ्रास्ट्रक्चर विकसित कर रही है। इसके तहत डिजिटल पहचान, यानी किसान आईडी बनाई जा रही है। अब तक लगभग 9 करोड़ किसानों की किसान आईडी बन चुकी है, और लगभग 30 करोड़ भूमि पार्सलों का डिजिटल सर्वे किया गया है। भारत-विस्तार जैसे AI आधारित प्लेटफॉर्म, रिसर्च इंस्टीट्यूशंस और किसानों के बीच की दूरी कम कर रहे हैं।

लेकिन साथियों,

टेक्नोलॉजी तभी परिणाम देती है, जब सिस्टम उसे अपनाएं, संस्थाएं उसे इंटीग्रेट करें और एंटरप्रेन्योर्स उस पर इनोवेशन खड़ा करें। इस वेबिनार में आपको इससे जुड़े सुझावों को मजबूती से सामने लाना होगा। हम टेक्नोलॉजी को कैसे सही तरीके से इंटीग्रेट करें, इस दिशा में इस वेबिनार से निकले सुझावों की बहुत बड़ी भूमिका होगी।

साथियों,

हमारी सरकार ग्रामीण समृद्धि के निर्माण के लिए प्रतिबद्ध है। प्रधानमंत्री आवास योजना, स्वामित्व योजना, पीएम ग्रामीण सड़क योजना, स्वयं सहायता समूहों को आर्थिक मदद, इसने रूरल इकोनॉमी को निरंतर मजबूत किया है। लखपति दीदी अभियान की सफलता को भी हमें नई ऊंचाई देनी है। अभी तक गांव की 3 करोड़ महिलाओं को लखपति दीदी बनाने में हम सफल हो चुके हैं। अब 2029 तक, 2029 तक 3 करोड़ में और 3 करोड़ जोड़ना है, और 3 करोड़ और लखपति दीदियां बनाने का लक्ष्य तय किया गया है। ये लक्ष्य और तेजी से कैसे प्राप्त किया जाए, इसे लेकर भी आपके सुझाव महत्वपूर्ण होंगे।

साथियों,

देश में स्टोरेज का बहुत बड़ा अभियान चल रहा है। लाखों गोदाम बनाए जा रहे हैं। स्टोरेज के अलावा एग्री एंटरप्रेन्योर्स प्रोसेसिंग, सप्लाई चैन, एग्री-टेक, एग्री-फिनटेक, एक्सपोर्ट, इन सब में इनोवेशन और निवेश बढ़ाना आज समय की मांग है। मुझे विश्वास है आज जो आप मंथन करेंगे, उससे निकले अमृत से ग्रामीण अर्थव्यवस्था को नई ऊर्जा मिलेगी। आप सबको इस वेबिनार के लिए मेरी बहुत-बहुत शुभकामनाएं हैं, और मुझे पूरा विश्वास है कि जमीन से जुड़े हुए विचार, जड़ों से जुड़े हुए विचार, इस बजट को सफल बनाने के लिए, गांव-गांव तक पहुंचाने के लिए बहुत काम आएंगे। आपको बहुत-बहुत शुभकामनाएं।

बहुत-बहुत धन्यवाद। नमस्कार।