ಭಾರತದ ನಾರಿ ಶಕ್ತಿಯ ಕೊಡುಗೆಗಳು ಅಪಾರ: ಪ್ರಧಾನಮಂತ್ರಿ
ಮಹಿಳಾ ನಾಯಕತ್ವಕ್ಕೆ ನಮ್ಮ ದೇಶದ ಪಂಚಾಯತ್ ರಾಜ್ ಸಂಸ್ಥೆಗಳೇ ಗಮನಾರ್ಹ ಉದಾಹರಣೆ: ಪ್ರಧಾನಮಂತ್ರಿ
ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರಿಗೆ ಸರ್ಕಾರದ ಬೆಂಬಲ: ಪ್ರಧಾನಮಂತ್ರಿ
ಪುರುಷ ಪ್ರಾಬಲ್ಯವೆಂದು ಪರಿಗಣಿಸಲಾದ ಕ್ಷೇತ್ರಗಳಲ್ಲಿಯೂ ಮಹಿಳೆಯರಿಂದ ಇಂದು ಶ್ರೇಷ್ಠ ಸಾಧನೆ: ಪ್ರಧಾನಮಂತ್ರಿ
ತಮ್ಮ ಕಠಿಣ ಪರಿಶ್ರಮ, ಧೈರ್ಯ ಮತ್ತು ಆತ್ಮವಿಶ್ವಾಸದ ಮೂಲಕ ಹೊಸ ಎತ್ತರ ತಲುಪಿದ ಭಾರತದ ನಾರಿ ಶಕ್ತಿ; ಇದೀಗ ಅವಕಾಶಗಳನ್ನು ವಿಸ್ತರಿಸುವ ಮೂಲಕ ಅವರನ್ನು ಮತ್ತಷ್ಟು ಸಬಲೀಕರಣಗೊಳಿಸಲು ನಾವು ಒಗ್ಗೂಡಬೇಕು: ಪ್ರಧಾನಮಂತ್ರಿ

ವೇದಿಕೆಯಲ್ಲಿ ಉಪಸ್ಥಿತರಿರುವ ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಜಿ, ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಜಿ, ಶ್ರೀಮತಿ ಸಾವಿತ್ರಿ ಠಾಕೂರ್ ಜಿ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ವಿಜಯ ರಹತ್ಕರ್ ಜಿ. ನಿಮ್ಮಲ್ಲಿ ಅನೇಕ ಹಿರಿಯರು, ಸಂಸತ್ ಸದಸ್ಯರು, ವಿಧಾನಸಭೆ ಸದಸ್ಯರು ಮತ್ತು ನಮ್ಮ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಜಿ ಕೂಡ ಇದ್ದಾರೆ. ನನ್ನ ಎಲ್ಲಾ ಗೌರವಾನ್ವಿತ ಸಹೋದರಿಯರು ಇಲ್ಲಿದ್ದಾರೆ, ಈ ಸಮಯದಲ್ಲಿ ದೇಶದೆಲ್ಲೆಡೆ ಬೈಸಾಖಿ ಹಬ್ಬದ ಸಂತಸ ಮನೆಮಾಡಿದೆ. ನಾಳೆ, ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ. ಇಂದು ನಾನು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಧೈರ್ಯಶಾಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸುತ್ತೇನೆ.

ಸ್ನೇಹಿತರೆ,

ಭಾರತದ ಅಭಿವೃದ್ಧಿಯ ಪಯಣದ ಪ್ರಮುಖ ಮೈಲಿಗಲ್ಲುಗಳ ಮಧ್ಯೆ, ರಾಷ್ಟ್ರವು 21ನೇ ಶತಮಾನದ ಶ್ರೇಷ್ಠ ನಿರ್ಧಾರಗಳಲ್ಲಿ ಒಂದನ್ನು ತೆಗೆದುಕೊಳ್ಳಲಿದೆ. ನಾನು ಇದನ್ನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತೇನೆ - ಇದು ನಮ್ಮ ಕಾಲದ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದೆ. ಈ ನಿರ್ಧಾರವು ಮಹಿಳಾ ಶಕ್ತಿಗೆ, ಮಹಿಳಾ ಶಕ್ತಿಯನ್ನು ಗೌರವಿಸಲು ಸಮರ್ಪಿತವಾಗಿದೆ. ನಮ್ಮ ಸಂಸತ್ತು ಹೊಸ ಇತಿಹಾಸ ಸೃಷ್ಟಿಸುವ ಸಮೀಪದಲ್ಲಿದೆ - ಹಿಂದಿನ ಆಕಾಂಕ್ಷೆಗಳನ್ನು ಪೂರೈಸುವ ಮತ್ತು ಭವಿಷ್ಯದ ಬದ್ಧತೆಗಳನ್ನು ಸಾಕಾರಗೊಳಿಸುವ ಇತಿಹಾಸ ಅದಾಗಿದೆ. ಇದು ಸಮಾನ ಭಾರತದ ಸಂಕಲ್ಪವಾಗಿದೆ, ಅಲ್ಲಿ ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಲ್ಲ, ಆದರೆ ನಮ್ಮ ಕೆಲಸದ ಸಂಸ್ಕೃತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ನೈಸರ್ಗಿಕ ಭಾಗವಾಗಿದೆ.

ಸ್ನೇಹಿತರೆ,

ರಾಜ್ಯ ವಿಧಾನಸಭೆಗಳಿಂದ ಹಿಡಿದು ಭಾರತದ ಸಂಸತ್ತಿನವರೆಗೆ, ದಶಕಗಳ ಕಾಲದ ಕಾಯುವಿಕೆ ಏಪ್ರಿಲ್ 16, 17 ಮತ್ತು 18ರಂದು ಕೊನೆಗೊಳ್ಳುತ್ತಿದೆ. 2023ರಲ್ಲಿ ಹೊಸ ಸಂಸತ್ ಕಟ್ಟಡ ಉದ್ಘಾಟನೆಯಾದಾಗ, ನಾವು ನಾರಿ ಶಕ್ತಿ ವಂದನ ಅಧಿನಿಯಮದ ರೂಪದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಅದರ ಸಕಾಲಿಕ ಅನುಷ್ಠಾನ ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಲಪಡಿಸಲು, ಏಪ್ರಿಲ್ 16ರಿಂದ ಸಂಸತ್ತಿನ ಬಜೆಟ್ ಅಧಿವೇಶನದ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ. ಅದಕ್ಕೂ ಮೊದಲು, ಇಂದಿನ ನಾರಿ ಶಕ್ತಿ ವಂದನ ಕಾರ್ಯಕ್ರಮವು ದೇಶಾದ್ಯಂತ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ಪಡೆಯುತ್ತಿದೆ. ನಾನು ಇಲ್ಲಿಗೆ ನಿಮಗೆ ಬೋಧನೆ ಮಾಡಲು ಅಥವಾ ಜಾಗೃತಗೊಳಿಸಲು ಬಂದಿಲ್ಲ. ನಾನು ನಿಮ್ಮೆಲ್ಲರ ಆಶೀರ್ವಾದ ಪಡೆಯಲು ಬಂದಿದ್ದೇನೆ. ನೀವು ದೇಶದ ಮೂಲೆ ಮೂಲೆಯಿಂದ ಬಂದಿದ್ದೀರಿ, ನಿಮ್ಮ ಉಪಸ್ಥಿತಿ ಮತ್ತು ಈ ಮಹತ್ವದ ಉದ್ದೇಶಕ್ಕಾಗಿ ನೀವು ಮೀಸಲಿಟ್ಟ ಸಮಯವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಹೊಸ ಯುಗದ ಉದಯದಲ್ಲಿ ಭಾರತದ ಎಲ್ಲಾ ಮಹಿಳೆಯರನ್ನು ನಾನು ಅಭಿನಂದಿಸುತ್ತೇನೆ.

 

ಸ್ನೇಹಿತರೆ,

ನಮ್ಮ ಪ್ರಜಾಪ್ರಭುತ್ವ ರಚನೆಯಲ್ಲಿ, ಮಹಿಳಾ ಮೀಸಲಾತಿಯ ಅಗತ್ಯವನ್ನು ದಶಕಗಳಿಂದಲೂ ಅನುಭವಿಸಲಾಗುತ್ತಿದೆ ಮತ್ತು ಚರ್ಚೆಗಳು ನಡೆದಿವೆ. ಈ ಚರ್ಚೆ ಸುಮಾರು 4 ದಶಕಗಳಿಂದ ಅಂದರೆ 40 ವರ್ಷಗಳ ಕಾಲ ನಡೆಯಿತು. ಎಲ್ಲಾ ಪಕ್ಷಗಳು ಮತ್ತು ತಲೆಮಾರುಗಳ ಪ್ರಯತ್ನಗಳು ಭಾಗಿಯಾಗಿವೆ. ಪ್ರತಿಯೊಂದು ಪಕ್ಷವು ಈ ಕಲ್ಪನೆಯನ್ನು ತನ್ನದೇ ಆದ ರೀತಿಯಲ್ಲಿ ಮುಂದಿಟ್ಟಿದೆ. 2023ರಲ್ಲಿ ನಾರಿ ಶಕ್ತಿ ವಂದನ ಅಧಿನಿಯಮ ಪರಿಚಯಿಸಿದಾಗ, ಎಲ್ಲಾ ಪಕ್ಷಗಳು ಅದನ್ನು ಸರ್ವಾನುಮತದಿಂದ ಅಂಗೀಕರಿಸಿದವು. ಆ ಸಮಯದಲ್ಲಿ, ಇದನ್ನು 2029ರೊಳಗೆ ಜಾರಿಗೆ ತರಬೇಕು ಎಂದು ಸರ್ವಾನುಮತದಿಂದ ಒತ್ತಿ ಹೇಳಲಾಯಿತು. ಅದನ್ನು ಜಾರಿಗೆ ತರದೆ ಕಾನೂನನ್ನು ಅಂಗೀಕರಿಸುವುದು ಸ್ವೀಕಾರಾರ್ಹವಲ್ಲ ಎಂದು ಎಲ್ಲರೂ ಒಪ್ಪಿಕೊಂಡರು. ನಿರ್ದಿಷ್ಟವಾಗಿ ಹೇಳುವುದಾದರೆ, ವಿರೋಧ ಪಕ್ಷದ ನಮ್ಮ ಸಹೋದ್ಯೋಗಿಗಳು ಇದನ್ನು 2029ರೊಳಗೆ ಜಾರಿಗೆ ತರಬೇಕು ಎಂದು ಬಲವಾಗಿ ಒತ್ತಾಯಿಸಿದರು. ಈ ಸಮಯವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ವಿರೋಧ ಪಕ್ಷದ ಕಳವಳಗಳನ್ನು ಗಂಭೀರವಾಗಿ ಪರಿಗಣಿಸಿದೆ. ನಾವು ಚರ್ಚೆಗಳನ್ನು ಮುಂದುವರಿಸಿದ್ದೇವೆ, ಹೊಸ ಮಾರ್ಗಗಳನ್ನು ಅನ್ವೇಷಿಸಿದ್ದೇವೆ, ಸಾಂವಿಧಾನಿಕ ತಜ್ಞರಿಂದ ಸಲಹೆ ಪಡೆದಿದ್ದೇವೆ. ಏಪ್ರಿಲ್ 16ರಿಂದ ಸಂಸತ್ತು ಈ ವಿಷಯದ ಬಗ್ಗೆ ಸಮಗ್ರ ಚರ್ಚೆ ನಡೆಸಲಿದೆ.

ಸ್ನೇಹಿತರೆ,

ಈ ಕಾರ್ಯವನ್ನು ಸಂವಾದ, ಸಹಕಾರ ಮತ್ತು ಭಾಗವಹಿಸುವಿಕೆಯ ಮೂಲಕ ಸಾಧಿಸಬೇಕು ಎಂಬುದು ನಮ್ಮ ಪ್ರಯತ್ನ ಮತ್ತು ಆದ್ಯತೆಯಾಗಿದೆ. ಈ ಕಾಯಿದೆಯ ಅಂಗೀಕಾರವು ಸಂಸತ್ತಿನ ಘನತೆಯನ್ನು ಹೆಚ್ಚಿಸಿದಂತೆ, ಈ ಬಾರಿಯೂ ಸಾಮೂಹಿಕ ಪ್ರಯತ್ನದ ಮೂಲಕ ಸಂಸತ್ತು ಗೌರವದ ಹೊಸ ಎತ್ತರವನ್ನು ತಲುಪುತ್ತದೆ ಎಂಬ  ವಿಶ್ವಾಸ ನನಗಿದೆ. ಎಲ್ಲಾ ಪಕ್ಷಗಳು ರಾಜಕೀಯವನ್ನು ಮೀರಿ ತಮ್ಮ ಹಿತಾಸಕ್ತಿಗಾಗಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ದೇಶದ ಪ್ರತಿಯೊಬ್ಬ ಮಹಿಳೆಯೂ ಹೆಮ್ಮೆ ಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ, ದೇಶಾದ್ಯಂತ ಮಹಿಳೆಯರು ಈ ವಿಷಯದ ಬಗ್ಗೆ ವ್ಯಾಪಕವಾಗಿ ಮಾತನಾಡುವುದನ್ನು ನಾನು ನೋಡಿದ್ದೇನೆ. ವ್ಯಾಪಕ ಚರ್ಚೆ ನಡೆಯುತ್ತಿದೆ, ಇದು ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯೂ ಆಗಿದೆ. ಸಭೆಗಳು ಮತ್ತು ಸಂಸತ್ತನ್ನು ತಲುಪುವ ಅವರ ಕನಸುಗಳು ಹೊಸ ರೆಕ್ಕೆ ಪುಕ್ಕಗಳನ್ನು ಪಡೆಯಲಿವೆ. ರಾಷ್ಟ್ರದಾದ್ಯಂತ ಸಕಾರಾತ್ಮಕ ವಾತಾವರಣ ಹೊರಹೊಮ್ಮುತ್ತಿದೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂವಿಧಾನ ಸಭೆಯ ನಿರ್ಧಾರಗಳವರೆಗೆ, ಮಹಿಳಾ ಶಕ್ತಿಯು ಸ್ವತಂತ್ರ ಭಾರತಕ್ಕೆ ಭದ್ರ ಅಡಿಪಾಯ ಹಾಕಲು ಅಪಾರ ಕೊಡುಗೆಗಳನ್ನು ನೀಡಿದೆ – ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಸ್ವಾತಂತ್ರ್ಯದ ನಂತರವೂ, ಪ್ರಾತಿನಿಧ್ಯಕ್ಕೆ ಅವಕಾಶಗಳನ್ನು ಪಡೆದ ಮಹಿಳೆಯರು ದೇಶಕ್ಕಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ರಾಷ್ಟ್ರಪತಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ, ಮಹಿಳೆಯರು ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದಾರೆಯೋ ಅಲ್ಲೆಲ್ಲಾ ಅವರು ತಮ್ಮದೇ ಆದ ಪರಂಪರೆಯನ್ನು ಸೃಷ್ಟಿಸಿದ್ದಾರೆ. ಇಂದಿಗೂ, ರಾಷ್ಟ್ರಪತಿಯಿಂದ ಹಣಕಾಸು ಸಚಿವರವರೆಗೆ, ಮಹಿಳೆಯರು ನಮ್ಮ ದೇಶದಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ. ಅವರು ರಾಷ್ಟ್ರದ ಘನತೆ ಮತ್ತು ಹೆಮ್ಮೆ ಎರಡನ್ನೂ ಹೆಚ್ಚಿಸಿದ್ದಾರೆ.

 

ಸ್ನೇಹಿತರೆ,

ನಮ್ಮ ಪಂಚಾಯತ್ ರಾಜ್ ಸಂಸ್ಥೆಗಳು ಮಹಿಳಾ ನಾಯಕತ್ವದ ಮತ್ತೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಇಂದು ಭಾರತದಾದ್ಯಂತ ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ 1.4 ದಶಲಕ್ಷಕ್ಕಿಂತಲೂ ಹೆಚ್ಚು ಮಹಿಳೆಯರು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 21 ರಾಜ್ಯಗಳಲ್ಲಿ, ಪಂಚಾಯತ್‌ಗಳಲ್ಲಿ ಅವರ ಭಾಗವಹಿಸುವಿಕೆ ಸುಮಾರು 50 ಪ್ರತಿಶತ ತಲುಪಿದೆ. ನಾನು ಈ ಅಂಕಿಅಂಶವನ್ನು ವಿದೇಶಿ ಅತಿಥಿಗಳೊಂದಿಗೆ ಹಂಚಿಕೊಂಡಾಗಲೆಲ್ಲಾ, ಅವರು ಆಶ್ಚರ್ಯಚಕಿತರಾಗುತ್ತಾರೆ, ಆಶ್ಚರ್ಯದಿಂದ ಬಾಯಿ ತೆರೆದುಕೊಳ್ಳುತ್ತಾರೆ.

ಸ್ನೇಹಿತರೆ,

ಇದು ಸಾಮಾನ್ಯ ವಿಷಯವಲ್ಲ. ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಲಕ್ಷಾಂತರ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯು ವಿಶ್ವದ ಶ್ರೇಷ್ಠ ನಾಯಕರು ಮತ್ತು ರಾಜಕೀಯ ತಜ್ಞರನ್ನು ಸಹ ಬೆರಗುಗೊಳಿಸುತ್ತದೆ. ಇದು ಇಡೀ ಭಾರತದ ಹೆಮ್ಮೆಯನ್ನು ಬಹಳವಾಗಿ ಹೆಚ್ಚಿಸುತ್ತದೆ.

ಸ್ನೇಹಿತರೆ,

ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾದಾಗ, ವ್ಯವಸ್ಥೆಗಳಲ್ಲಿ ಸೂಕ್ಷ್ಮತೆಯೂ ಬರುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇದು ಬಹಳ ದೊಡ್ಡ ಶಕ್ತಿಯಾಗಿದೆ, ಇದರ ಫಲಿತಾಂಶವೆಂದರೆ ನೀರು, ಶಿಕ್ಷಣ, ಆರೋಗ್ಯ, ಪೋಷಣೆಯಂತಹ ಅನೇಕ ವಿಷಯಗಳ ಮೇಲೆ ಹೆಚ್ಚು ಸಮರ್ಪಿತ, ಹೆಚ್ಚು ಸೂಕ್ಷ್ಮ ಮತ್ತು ಪರಿಣಾಮಕಾರಿ ಕೆಲಸ. ಜಲಜೀವನ್ ಮಿಷನ್, ನಾನು ನಂಬುವ ಅತ್ಯುತ್ತಮ ಉದಾಹರಣೆಯಾಗಿದೆ, ಇದರಲ್ಲಿ ಪಂಚಾಯತ್ ಮಟ್ಟದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹಳ ಪ್ರಮುಖ ಪಾತ್ರ ವಹಿಸಿದೆ.

ಸ್ನೇಹಿತರೆ,

ನಮ್ಮ ಸ್ಥಳೀಯ ಸಂಸ್ಥೆಗಳಲ್ಲಿ, ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ, ಮುನ್ನಡೆಸುತ್ತಿರುವ ಲಕ್ಷಾಂತರ ಮಹಿಳೆಯರು, ತಳಮಟ್ಟದಲ್ಲಿ ಬಹಳ ಶ್ರೀಮಂತ ಮತ್ತು ದೀರ್ಘ ಅನುಭವ ಹೊಂದಿದ್ದಾರೆ. ಅವರು ಈಗ ದೊಡ್ಡ ಪಾತ್ರಕ್ಕೆ ಸಿದ್ಧರಾಗಿದ್ದಾರೆ. ನನ್ನ ಸ್ವಂತ ವೈಯಕ್ತಿಕ ಅನುಭವಗಳಲ್ಲಿ ಒಂದನ್ನು ನಾನು ನಿಮಗೆ ಹೇಳುತ್ತೇನೆ. ಈ ಸಾಮರ್ಥ್ಯದ ಅರ್ಥವೇನೆಂದರೆ - ನಾನು 2001ರಲ್ಲಿ ಹೊಸ ಮುಖ್ಯಮಂತ್ರಿಯಾದೆ, ನನಗೆ ಸರ್ಕಾರ ನಡೆಸುವ, ಆಡಳಿತ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಅನುಭವವಿರಲಿಲ್ಲ, ಒಂದು ರೀತಿಯಲ್ಲಿ ನಾನು ಹೊಸ ವ್ಯಕ್ತಿಯಾಗಿದ್ದೆ. ಬಹುಶಃ ಅದು 2002 ಅಥವಾ 2003ರ ಘಟನೆಯಾಗಿರಬಹುದು, ನಮ್ಮ ಶಾಸಕರೊಬ್ಬರು ನನ್ನ ಬಳಿಗೆ ಬಂದರು. ಅವರು ತಮ್ಮ ಪ್ರದೇಶದಲ್ಲಿ ಗ್ರಾಮ ಪಂಚಾಯತ್‌ನ ಕೆಲವು ಸಹೋದರಿಯರು ನನ್ನನ್ನು ಭೇಟಿಯಾಗಲು ಬಯಸಿದ್ದರು ಎಂದು ಹೇಳಿದರು. ಇದು ಖೇಡಾ ಜಿಲ್ಲೆಯ ಆನಂದ್ ನಿಂದ ಬಂದಿದ್ದರು, ಅಲ್ಲಿ ಸರ್ದಾರ್ ಸಾಹಿಬ್ ಜನಿಸಿದರು. ಹಾಗಾಗಿ ನಾನು ಹೇಳಿದೆ, ಅವರಿಗೆ ಏನಾದರೂ ಪಂಚಾಯತ್ ಕೆಲಸವಿದ್ದರೆ, ಅವರು ಪಂಚಾಯತ್ ಸಚಿವರನ್ನು ಭೇಟಿಯಾಗಲಿ. ಅವರು ಹೇಳಿದರು, ಇಲ್ಲ ಸರ್, ಅವರು ನಿಮ್ಮನ್ನು ಭೇಟಿಯಾಗಲು ಬಯಸುತ್ತಾರೆ. ನಾನು ಏಕೆ ಕೇಳಿದೆ? ಅವರು ಹೇಳಿದರು, ಪಂಚಾಯತ್‌ನಲ್ಲಿ ಎಲ್ಲಾ ಸದಸ್ಯರು ಮಹಿಳೆಯರು, ನಮ್ಮ ಪಂಚಾಯತ್‌ನಲ್ಲಿ ಒಬ್ಬ ಪುರುಷ ಸದಸ್ಯನೂ ಇಲ್ಲ. ನಾನು ಹೇಳಿದೆ, ಅದು ಹೇಗೆ ಸಾಧ್ಯ? ಗ್ರಾಮಸ್ಥರು ಈ ಬಾರಿ ಮುಖ್ಯಸ್ಥೆ ಮಹಿಳೆಯಾಗಬೇಕೆಂದು ನಿರ್ಧರಿಸಿದ್ದಾರೆ, ಆದ್ದರಿಂದ ಎಲ್ಲಾ ಸದಸ್ಯರು ಸಹ ಮಹಿಳೆಯರಾಗಿದ್ದಾರೆ, ಆದ್ದರಿಂದ ಯಾವುದೇ ಪುರುಷ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂದು ಅವರು ಹೇಳಿದರು. ಸ್ವಾಭಾವಿಕವಾಗಿ ನನ್ನ ಗಮನ ಅದರ ಕಡೆಗೆ ಹೋಯಿತು, ನಾನು ಖಂಡಿತವಾಗಿಯೂ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದೆ. ಅದು ಒಂದು ಸಣ್ಣ ಹಳ್ಳಿ, ಬಹುಶಃ 13 ಸದಸ್ಯರ ಪಂಚಾಯತ್ ಆಗಿರಬಹುದು, ಆದ್ದರಿಂದ ನಾನು ಅವರಿಗೆ ಸಮಯ ನೀಡಿದ್ದೆ, ಅವರೆಲ್ಲರೂ ನನ್ನನ್ನು ಭೇಟಿ ಮಾಡಲು ಬಂದರು. 13 ಸಹೋದರಿಯರು ಇದ್ದರು, ಗ್ರಾಮದ ಮುಖ್ಯಸ್ಥರಾದವರು 8ನೇ ತರಗತಿಯವರೆಗೆ ಓದಿದ್ದರು. ಉಳಿದ ಸಹೋದರಿಯರು, ಒಬ್ಬರು ಅಥವಾ ಇಬ್ಬರು ತಮ್ಮ ಮುಖಗಳನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರು. ಅನೇಕರು ಬಹುಶಃ ಶಾಲೆಯನ್ನು ನೋಡಿಲ್ಲದಿರಬಹುದು. ಅವರೆಲ್ಲರೂ ಬಂದರು, ಬಹುಶಃ ಕೆಲವು ದೊಡ್ಡ ಜನರು ಅವರನ್ನು ಸದಸ್ಯರನ್ನಾಗಿ ಮಾಡಿರಬಹುದು, ಬಹುಶಃ ಅವರು ಕೆಲವು ಬೇಡಿಕೆಗಳನ್ನು ತಂದಿರಬಹುದು, ನನ್ನ ಗ್ರಾಮದಲ್ಲಿ ಇದನ್ನು ಮಾಡಿ, ನನ್ನ ಗ್ರಾಮದಲ್ಲಿ ಅದನ್ನು ಮಾಡಿ ಎಂದು ನಾನು ಭಾವಿಸಿದೆ. ನನಗೆ ಆಶ್ಚರ್ಯವಾಯಿತು, ಅವರ ಕೈಯಲ್ಲಿ ಯಾವುದೇ ಕಾಗದಗಳಿಲ್ಲ. ಆದ್ದರಿಂದ ಅವರು ಕುಳಿತುಕೊಂಡರು, ನಾನು ನನ್ನನ್ನು ಪರಿಚಯಿಸಿಕೊಂಡೆ. ನಾನು ಕೇಳಿದೆ, ನೀವು ಸಮಯ ಕೇಳಿದ್ದೀರಿ, ಏನು ಕೆಲಸ? ಅವರು ಹೇಳಿದರು, ಕೆಲಸವಿಲ್ಲ, ನಾವು ಆಯ್ಕೆಯಾದ ಕಾರಣ ಬಂದಿದ್ದೇವೆ, ಆದ್ದರಿಂದ ನಾವು ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇವೆ. ನನಗೆ ಇದು ದೊಡ್ಡ ಆಶ್ಚರ್ಯವಾಗಿತ್ತು, ಇಲ್ಲದಿದ್ದರೆ ನಾಯಕರು ಕೇವಲ ಜ್ಞಾಪಕ ಪತ್ರಗಳೊಂದಿಗೆ ಬರುತ್ತಾರೆ. ನಂತರ ನಾನು ಅವರನ್ನು ಕೇಳಿದೆ, ಹೇಳಿ, ನೀವು 5 ವರ್ಷಗಳ ಕಾಲ ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದೀರಿ, ನೀವು ಸಹೋದರಿಯರೆ ಗ್ರಾಮವನ್ನು ನಿರ್ವಹಿಸಲಿದ್ದೀರಿ, ನಿಮ್ಮ ಕನಸು ಏನು, 5 ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ, ನೀವು ಗ್ರಾಮವನ್ನು ಹೇಗೆ ಮಾಡುತ್ತೀರಿ? ಸಾಮಾನ್ಯವಾಗಿ ಯಾವ ಉತ್ತರವನ್ನು ನೀಡಲಾಗುತ್ತಿತ್ತು, ನಾವು ದೊಡ್ಡವರಾಗಿ ಕಾಣುವವರಿಗೆ, ನಾವು ಏನು ಉತ್ತರ ನೀಡುತ್ತಿದ್ದೆವು - ಶಾಲೆಯನ್ನು ನಿರ್ಮಿಸಿ, ಆಸ್ಪತ್ರೆಯನ್ನು ನಿರ್ಮಿಸಿ, ರಸ್ತೆ ನಿರ್ಮಿಸಿ, ಅಂತಹ ಉತ್ತರಗಳು. ಆ ದಿನ 8ನೇ ತರಗತಿಯವರೆಗೆ ಓದಿದ್ದ ಮುಖ್ಯಸ್ಥೆ ಮತ್ತು ಅವರೊಂದಿಗೆ ಬಂದ ಮಹಿಳಾ ಸದಸ್ಯರು ಬಹುಶಃ ವಿಶ್ವದ ಅತಿದೊಡ್ಡ ಅರ್ಥಶಾಸ್ತ್ರಜ್ಞರು ನೀಡಲು ಸಾಧ್ಯವಾಗದ ಉತ್ತರವನ್ನು ನನಗೆ ನೀಡಿದರು. ಆ ಉತ್ತರ ಇನ್ನೂ ನನಗೆ ಪಾಠದಂತಿದೆ. ನಾನು ಮುಖ್ಯಮಂತ್ರಿಯಾದೆ, ನಾನು ಪ್ರಧಾನಿಯಾದೆ, ಆದರೆ ಪಂಚಾಯತ್‌ನ ಆ ಮಹಿಳೆಯರ ಆ ಹೇಳಿಕೆ ಇನ್ನೂ ನನಗೆ ಮಾರ್ಗದರ್ಶಿಯಾಗಿದೆ. ನೀವು ಆಶ್ಚರ್ಯಚಕಿತರಾಗುವಿರಿ, ಅವರು ಏನು ಉತ್ತರ ನೀಡಿದರು. ನಾನು ಅವರನ್ನು ಕೇಳಿದಾಗ, ನೀವು ಏನು ಮಾಡುತ್ತೀರಿ, ನಿಮಗೆ 5 ವರ್ಷಗಳು, ಗ್ರಾಮವು ನಿಮ್ಮನ್ನು ಆಯ್ಕೆ ಮಾಡಿತು, ನಂತರ ಅವರು ನನಗೆ ಉತ್ತರಿಸಿದರು, ಸರ್ ನಮಗೆ ಒಂದೇ ಒಂದು ಆಸೆ ಇದೆ. ನಾನು ಕೇಳಿದೆ, ಏನು? ಮತ್ತು ಆ ಉತ್ತರ ಇನ್ನೂ ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಅವರು ಹೇಳಿದರು, ನಮ್ಮ ಗ್ರಾಮದಲ್ಲಿ ಯಾರೂ ಬಡವರಾಗಿ ಉಳಿಯಬಾರದು ಎಂಬುದು ನಮ್ಮ ಆಸೆ. ಶ್ರೇಷ್ಠ ಅರ್ಥಶಾಸ್ತ್ರಜ್ಞರಿಗೂ ಸಹ, ಇದಕ್ಕಿಂತ ದೊಡ್ಡ ಸಂದೇಶ ಇನ್ನೊಂದಿಲ್ಲ. ಇದು ನನಗೆ ಆಹ್ಲಾದಕರ ಅನುಭವವಾಗಿತ್ತು, ಆ ಮಾತುಗಳು ಇನ್ನೂ ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿವೆ. ಆದ್ದರಿಂದ, ತಳಮಟ್ಟದಿಂದ ಅನುಭವದಿಂದ ಬರುವ ಮಾತು ವೇದದ ಹೇಳಿಕೆಯಂತೆ ಆಗುತ್ತದೆ.

 

ಆದ್ದರಿಂದ ಸ್ನೇಹಿತರೆ,

ಅಂತಹ ಎಲ್ಲಾ ಮಹಿಳೆಯರ ಜೀವನದಲ್ಲಿ ನಾರಿ ಶಕ್ತಿ ವಂದನಾ ಅಧಿನಿಯಮ ಅನುಷ್ಠಾನಗೊಳಿಸುವುದು ಒಂದು ದೊಡ್ಡ ಅವಕಾಶವಾಗಲಿದೆ. ಈಗ ಪಂಚಾಯತ್‌ನಿಂದ ಸಂಸತ್ತಿಗೆ ಅವರ ಪ್ರಯಾಣ ಸುಲಭವಾಗಲಿದೆ.

ಸ್ನೇಹಿತರೆ,

ಇಂದು ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಪ್ರಯಾಣದಲ್ಲಿ ಮಹಿಳೆಯರ ಪಾತ್ರ ಇನ್ನಷ್ಟು ಮಹತ್ವದ್ದಾಗಿದೆ. 2014ರಲ್ಲಿ, ನೀವೆಲ್ಲರೂ ದೇಶವಾಸಿಗಳು ನಮಗೆ ಇಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದೀರಿ ಎಂಬುದರಿಂದ ನನಗೆ ತೃಪ್ತಿ ಇದೆ, ಅಂದಿನಿಂದ ನಮ್ಮ ಸರ್ಕಾರವು ಮಹಿಳೆಯರ ಜೀವನ ಚಕ್ರದ ಪ್ರತಿಯೊಂದು ಹಂತಕ್ಕೂ ಯೋಜನೆಗಳನ್ನು ರೂಪಿಸಿದೆ ಮತ್ತು ಅವುಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇಂದು ಮೊದಲ ಉಸಿರಿನಿಂದ ಕೊನೆಯ ಉಸಿರಿನವರೆಗೆ, ನಮ್ಮ ಸರ್ಕಾರವು ಭಾರತದ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸೇವೆಗಾಗಿ ಯಾವುದಾದರೂ ಒಂದು ಯೋಜನೆಯೊಂದಿಗೆ ಪ್ರಸ್ತುತವಾಗಿದೆ. ಹೆಣ್ಣು ಮಕ್ಕಳು ಗರ್ಭದಲ್ಲೇ ಕೊಲ್ಲಲ್ಪಡದಂತೆ ನೋಡಿಕೊಳ್ಳಲು, ನಾವು 'ಬೇಟಿ ಬಚಾವೋ-ಬೇಟಿ ಪಡಾವೋ' ಅಭಿಯಾನ ಪ್ರಾರಂಭಿಸಿದ್ದೇವೆ. ಗರ್ಭಾವಸ್ಥೆಯಲ್ಲಿ ತಾಯಂದಿರು ಸರಿಯಾದ ಪೋಷಣೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಗರ್ಭಿಣಿ ತಾಯಿಗೆ 'ಮಾತೃ ವಂದನಾ ಯೋಜನೆ' ಅಡಿ 5,000 ರೂಪಾಯಿ ಆರ್ಥಿಕ ಸಹಾಯ ನೀಡಲಾಯಿತು. ಹೆಣ್ಣು ಮಕ್ಕಳು ಹೆರಿಗೆಯ ನಂತರ ಅಧ್ಯಯನದಲ್ಲಿ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ, ನಾವು ಹೆಚ್ಚಿನ ಬಡ್ಡಿದರದ 'ಸುಕನ್ಯಾ ಸಮೃದ್ಧಿ ಯೋಜನೆ' ಪ್ರಾರಂಭಿಸಿದ್ದೇವೆ. ಹೆಣ್ಣು ಮಕ್ಕಳನ್ನು ಗಂಭೀರ ಕಾಯಿಲೆಗಳಿಂದ ರಕ್ಷಿಸಲು, ಬಾಲ್ಯದಲ್ಲಿ ಸಕಾಲಿಕ ಲಸಿಕೆ ಖಚಿತಪಡಿಸಿಕೊಳ್ಳಲು, ನಾವು 'ಮಿಷನ್ ಇಂದ್ರಧನುಷ್' ಪ್ರಾರಂಭಿಸಿದ್ದೇವೆ. ಹೆಣ್ಣು ಮಕ್ಕಳು ಶಾಲೆಗಳಲ್ಲಿ ಶೌಚಾಲಯ ಸಮಸ್ಯೆಗಳನ್ನು ಎದುರಿಸಬಾರದು ಎಂಬ ಉದ್ದೇಶದಿಂದ, 'ಸ್ವಚ್ಛ ಭಾರತ ಅಭಿಯಾನ'ದ ಅಡಿ, ದೇಶದಲ್ಲಿ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹೆಣ್ಣು ಮಕ್ಕಳು ಮುಟ್ಟಿನ ಸಮಸ್ಯೆಗಳನ್ನು ಎದುರಿಸಬಾರದು ಎಂಬ ಉದ್ದೇಶದಿಂದ, ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಬಹುತೇಕ ಉಚಿತವಾಗಿ ನೀಡುವ ಅಭಿಯಾನ ಪ್ರಾರಂಭಿಸಲಾಗಿದೆ. ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಮುನ್ನಡೆಯಲು ಬಯಸಿದರೆ, 'ಖೇಲೋ ಇಂಡಿಯಾ' ಅಭಿಯಾನದಡಿ, ಅವರಿಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿವರೆಗೆ ಸಹಾಯ ನೀಡಲಾಗುತ್ತಿದೆ. ಹೆಣ್ಣು ಮಕ್ಕಳು ದೊಡ್ಡವರಾದಾಗ, ಭವಿಷ್ಯದಲ್ಲಿ ಸೈನ್ಯಕ್ಕೆ ಸೇರಲು ಬಯಸಿದರೆ, ಸರ್ಕಾರವು ಸೈನಿಕ ಶಾಲೆಗಳಲ್ಲಿ ಪ್ರವೇಶಕ್ಕೆ ಬಾಗಿಲು ತೆರೆದಿದೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ದಾರಿ ತೆರೆದಿದೆ. ಜೀವನದ ನಂತರದ ಹಂತಗಳಲ್ಲಿ, ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಹೊಗೆಯಿಂದ ಬಳಲದಂತೆ ನೋಡಿಕೊಳ್ಳಲು, ನಾವು 'ಉಜ್ವಲ ಯೋಜನೆ'  ಪ್ರಾರಂಭಿಸಿದ್ದೇವೆ, ಕೋಟ್ಯಂತರ ಉಚಿತ ಅನಿಲ ಸಂಪರ್ಕಗಳನ್ನು ನೀಡುತ್ತೇವೆ. ಹೆಣ್ಣು ಮಕ್ಕಳು ಮೈಲುಗಟ್ಟಲೆ ತಲೆಯ ಮೇಲೆ ನೀರು ಹೊತ್ತುಕೊಂಡು ಹೋಗಬೇಕಾಗಿಲ್ಲ ಬುದನ್ನು ಖಚಿತಪಡಿಸಲು, ನಾವು 'ಹರ್ ಘರ್ ನಲ್ ಸೆ ಜಲ್' ಅಭಿಯಾನ  ಪ್ರಾರಂಭಿಸಿದ್ದೇವೆ. ಹೆಣ್ಣು ಮಕ್ಕಳು ತಮ್ಮ ಕುಟುಂಬಗಳಿಗೆ ಪಡಿತರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂಬುದನ್ನು ಖಚಿತಪಡಿಸಲು, ಉಚಿತ ಪಡಿತರ ಯೋಜನೆ ಪ್ರಾರಂಭಿಸಲಾಯಿತು. ಕುಟುಂಬ ಜೀವನದಲ್ಲಿ, ಹೆಣ್ಣು ಮಕ್ಕಳು ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂಬುದನ್ನು ಖಚಿತಪಡಿಸಲು, ಅವರಿಗೆ ಆಯುಷ್ಮಾನ್ ಯೋಜನೆಯ ಮೂಲಕ ಬೆಂಬಲ ನೀಡಲಾಯಿತು, ಇದು 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ನೀಡುತ್ತದೆ. 80 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಅಗ್ಗದ ಔಷಧಿಗಳಿಗಾಗಿ, ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಎಲ್ಲಾ ಪ್ರಯೋಜನಗಳು ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಹೆಚ್ಚು ತಲುಪುತ್ತಿವೆ.

ಸ್ನೇಹಿತರೆ,

ಭಾರತದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು, ಅವರ ಆರ್ಥಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಅಗತ್ಯ ಎಂದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಆದ್ದರಿಂದ, ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲಿ, ಪ್ರತಿಯೊಂದು ಯೋಜನೆಯಲ್ಲಿ, ನಾವು ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ. ಹಿಂದೆ, ಕುಟುಂಬದ ಆಸ್ತಿ ಮುಖ್ಯವಾಗಿ ಪುರುಷರ ಹೆಸರಿನಲ್ಲಿತ್ತು. ಮನೆ ಇದ್ದರೆ, ಅದು ಪುರುಷನ ಹೆಸರಿನಲ್ಲಿತ್ತು, ಭೂಮಿ ಇದ್ದರೆ, ಅದು ಪುರುಷನ ಹೆಸರಿನಲ್ಲಿತ್ತು, ಅಂಗಡಿ ಇದ್ದರೆ, ಅದು ಪುರುಷನ ಹೆಸರಿನಲ್ಲಿತ್ತು, ವಾಹನ ಇದ್ದರೆ, ಅದು ಪುರುಷನ ಹೆಸರಿನಲ್ಲಿತ್ತು, ಸ್ಕೂಟರ್ ಕೂಡ ಪುರುಷನ ಹೆಸರಿನಲ್ಲಿತ್ತು, ಇದನ್ನು ಸ್ವಾಭಾವಿಕವೆಂದು ಪರಿಗಣಿಸಲಾಗಿತ್ತು. 'ಪಿಎಂ ಆವಾಸ್ ಯೋಜನೆ'ಯಲ್ಲಿ, ನಾವು ಪ್ರಾಥಮಿಕವಾಗಿ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮನೆಗಳನ್ನು ನೋಂದಾಯಿಸಲು ಪ್ರಾರಂಭಿಸಿದ್ದೇವೆ. ಮಕ್ಕಳು ಶಾಲೆಗೆ ಹೋದಾಗ, ಸ್ವಾಭಾವಿಕವಾಗಿ ತಂದೆಯ ಹೆಸರನ್ನು ಬರೆಯಲಾಗುತ್ತದೆ, ಆದ್ದರಿಂದ ನಾವು ತಾಯಿಯ ಹೆಸರನ್ನು ಸಹ ಬರೆಯಲು ಪ್ರಾರಂಭಿಸಿದ್ದೇವೆ. ಕಳೆದ 11 ವರ್ಷಗಳಲ್ಲಿ, 3 ಕೋಟಿಗೂ ಹೆಚ್ಚು ಮಹಿಳೆಯರು ಈ ನಿರ್ಧಾರದಿಂದ ಪ್ರಯೋಜನ ಪಡೆದಿದ್ದಾರೆ, ತಮ್ಮದೇ ಆದ ಮನೆಗಳ ಮಾಲೀಕರಾಗಿದ್ದಾರೆ. ಇದು ಮನೆಗಳಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಸಾಮಾನ್ಯವಾಗಿ, ತಂದೆ ಮತ್ತು ಮಗ ಏನಾದರೂ ವ್ಯವಹಾರದ ಬಗ್ಗೆ ಮಾತನಾಡುತ್ತಾರೆ, ತಾಯಿ ಚಹಾ ತಂದು ಸ್ವಲ್ಪ ಹೊತ್ತು ನಿಂತರೆ, ಅವರು ಹೇಳುತ್ತಿದ್ದರು ..."ಹೋಗು, ಅಡುಗೆ ಮನೆಗೆ ಹೋಗು, ನಾವು ಮಾತನಾಡುತ್ತಿದ್ದೇವೆ. ನಾನು ಮನೆಯವಳಲ್ಲವೇ, ನನಗೂ ಬಹಳಷ್ಟು ತಿಳಿದಿದೆ. ನಾನೀಗ ಆರ್ಥಿಕವಾಗಿ ಬಲಶಾಲಿಯಾಗಿದ್ದೇನೆ. ಇದನ್ನು ಅರಿತ ಮಗ ಕೂಡ, ದಯವಿಟ್ಟು ಸಂಭಾಷಣೆಯಲ್ಲಿ ಸೇರು ಎಂದು ತಾಯಿಗೆ ಕರೆಯುತ್ತಿದ್ದಾನೆ.

ಸ್ನೇಹಿತರೆ,

2014ರಲ್ಲಿ ನಮ್ಮ ದೇಶದಲ್ಲಿ ಕೋಟ್ಯಂತರ ಮಹಿಳೆಯರು ಬ್ಯಾಂಕಿನ ಬಾಗಿಲನ್ನು ಸಹ ನೋಡಿರಲಿಲ್ಲ. ಮಹಿಳೆಯರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಪರ್ಕ ಹೊಂದಿರಲಿಲ್ಲ, ಹಾಗಾದರೆ ಅವರು ಬ್ಯಾಂಕಿಂಗ್‌ನ ಪ್ರಯೋಜನವನ್ನು ಹೇಗೆ ಪಡೆಯಬಹುದು? ನಾವು ಜನ ಧನ ಯೋಜನೆ ಪ್ರಾರಂಭಿಸಿದಾಗ, ದೇಶದಲ್ಲಿ 32 ಕೋಟಿಗೂ ಹೆಚ್ಚು ಮಹಿಳಾ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ನಾನು ಗುಜರಾತ್‌ನಲ್ಲಿದ್ದಾಗ, ಆರಂಭದಲ್ಲಿ ಒಂದು ನಿರ್ಧಾರ ನನಗೆ ತುಂಬಾ ಕಷ್ಟಕರವಾಗಿತ್ತು. ಗುಜರಾತ್‌ನಲ್ಲಿ ದೊಡ್ಡ ಸಹಕಾರಿ ಡೇರಿ ಸಾಮ್ರಾಜ್ಯವೇ ಇದೆ, ಬಹಳ ದೊಡ್ಡ ಕಾರ್ಯಾಚರಣೆ ಇದೆ ಮತ್ತು ಪಶುಸಂಗೋಪನೆಯ ಹೆಚ್ಚಿನ ಕೆಲಸವನ್ನು ನಮ್ಮ ತಾಯಂದಿರು ಮತ್ತು ಸಹೋದರಿಯರು ಮಾಡುತ್ತಾರೆ. ಅವರು ಹಾಲು ಹಾಕಲು ಹೋಗುತ್ತಾರೆ, ಮತ್ತು ನಂತರ ಒಂದು ವಾರದ ನಂತರ ಅವರಿಗೆ ಹಣ ನೀಡಲಾಗುತ್ತದೆ, ಆದರೆ ಹಣವನ್ನು ಪುರುಷರಿಗೆ ನೀಡಲಾಗುತ್ತಿತ್ತು. ನಾನು ಮುಖ್ಯಮಂತ್ರಿಯಾದಾಗ, ನಾನು ಪುರುಷರಿಗೆ ಹಣ ನೀಡುವುದಿಲ್ಲ ಎಂದು ಹೇಳಿದೆ. ಆ ಸಮಯದಲ್ಲಿ, ಡೇರಿಗಳಲ್ಲಿ ಹಾಲು ಹಾಕಲು  ಬಂದ ಸಹೋದರಿಯರಿಗಾಗಿ ನಾನು ಬ್ಯಾಂಕ್ ಖಾತೆಗಳನ್ನು ತೆರೆದೆ, ನಂತರ ಹಾಲಿನ ಹಣವು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹೋಗಲು ಪ್ರಾರಂಭಿಸಿತು.

 

ಸ್ನೇಹಿತರೆ,

ಇಂದು ನಮ್ಮ ಹೆಣ್ಣು ಮಕ್ಕಳು ಹೊಸ ವ್ಯವಹಾರಗಳಲ್ಲಿ ತಮ್ಮ ಗುರುತನ್ನು ರೂಪಿಸಿಕೊಳ್ಳುತ್ತಿದ್ದಾರೆ. ಮುದ್ರಾ ಯೋಜನೆಯಲ್ಲಿ, ಶೇಕಡ 60ಕ್ಕಿಂತ ಹೆಚ್ಚು ಸಾಲಗಳನ್ನು ಮಹಿಳೆಯರು ತೆಗೆದುಕೊಂಡಿದ್ದಾರೆ. ದೇಶದ ಸ್ಟಾರ್ಟಪ್ ಕ್ರಾಂತಿಯನ್ನು ಮಹಿಳೆಯರು ಸಹ ಮುನ್ನಡೆಸುತ್ತಿದ್ದಾರೆ. ಇಂದು ನೋಂದಾಯಿತ ಸ್ಟಾರ್ಟಪ್‌ಗಳಲ್ಲಿ ಶೇಕಡ 42ಕ್ಕಿಂತ ಹೆಚ್ಚು, ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಇದ್ದಾರೆ. ಮಹಿಳೆಯರ ವೃತ್ತಿಜೀವನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು, ನಾವು ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಿದ್ದೇವೆ. ವಿಶ್ವದ ಶ್ರೀಮಂತ ದೇಶಗಳಲ್ಲಿಯೂ ಸಹ ಇದು ಇಲ್ಲ. ನಾನು ಅವರಿಗೆ ಹೇಳಿದಾಗ, ಅವರ ಕಣ್ಣುಗಳು ಆಶ್ಚರ್ಯದಿಂದ ಅರಳುತ್ತವೆ.

ಸ್ನೇಹಿತರೆ,

ನಿಮಗೆ ನೆನಪಿರಬಹುದು, ಕೆಲವು ವರ್ಷಗಳ ಹಿಂದೆ ದೇಶವು 'ಕೌಶಲ್ಯ ಭಾರತ ಮಿಷನ್' ಪ್ರಾರಂಭಿಸಿತು. ನಾವು ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಇಂದು ಸಾವಿರಾರು ಡ್ರೋನ್ ದೀದಿಗಳ ಮೂಲಕ ಅದರ ಫಲಿತಾಂಶಗಳನ್ನು ಕೃಷಿ ಕ್ರಾಂತಿಯ ರೂಪದಲ್ಲಿ ನಾವು ನೋಡುತ್ತಿದ್ದೇವೆ. ಒಮ್ಮೆ ನಾನು ಈ ಡ್ರೋನ್ ದೀದಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತಿದ್ದೆ. ಅವರು ಹಳ್ಳಿಗಳ ಹೆಣ್ಣು ಮಕ್ಕಳು, ಕೆಲವರು ಸೊಸೆಯಂದಿರು, ಡ್ರೋನ್‌ಗಳನ್ನು ಹಾರಿಸುತ್ತಿದ್ದಾರೆ. ಹಳ್ಳಿಯಲ್ಲಿ ಇಲ್ಲಿಯವರೆಗೆ ಯಾರೂ ನಮ್ಮನ್ನು ಯಾವುದಕ್ಕೂ ಕರೆಯುತ್ತಿರಲಿಲ್ಲ, ಈಗ ಅವರು ನಮ್ಮನ್ನು ಪೈಲಟ್‌ಗಳು ಎಂದು ಕರೆಯುತ್ತಾರೆ ಎಂದು ಅವರು ನನಗೆ ಹೇಳಿದರು. ನಮ್ಮ ಗುರುತನ್ನು ರೂಪಿಸಲಾಗಿದೆ, ನಾವು ಪೈಲಟ್‌ಗಳು. ಅಂದರೆ ಒಂದು ಸಣ್ಣ ನಿರ್ಧಾರದಿಂದ ಗ್ರಹಿಕೆ ಬಹಳ ಬೇಗನೆ ಬದಲಾಗಬಹುದು. ಮಹಿಳೆಯರು ತಂತ್ರಜ್ಞಾನದ ಮೂಲಕ ಆಧುನಿಕ ಕೃಷಿ ಕಲಿಯುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ಸುಮಾರು 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಸೇರಿದ್ದಾರೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಗ್ರಾಮೀಣ ಆರ್ಥಿಕತೆಯನ್ನು ಮುನ್ನಡೆಸುತ್ತಿರುವ 6 ಕೋಟಿ ಸಹೋದರಿಯರನ್ನು ಲಖ್ಪತಿ ದೀದಿಗಳನ್ನಾಗಿ ಮಾಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಇವರಲ್ಲಿ 3 ಕೋಟಿಗೂ ಹೆಚ್ಚು ಗ್ರಾಮೀಣ ಮಹಿಳೆಯರು ಈಗಾಗಲೇ ಲಖ್ಪತಿ ದೀದಿಗಳಾಗಿದ್ದಾರೆ. ಈ ಮಹಿಳಾ ಸ್ವಸಹಾಯ ಗುಂಪುಗಳು ಕೆಲಸಕ್ಕಾಗಿ ಬ್ಯಾಂಕುಗಳಿಂದ ಹಣವನ್ನು ಪಡೆಯುತ್ತವೆ. ನೀವು ಇದನ್ನು ತಿಳಿದರೆ ಸಂತೋಷವಾಗುತ್ತದೆ, ಅವರು ಬುಧವಾರ ಹಣವನ್ನು ಠೇವಣಿ ಮಾಡಬೇಕಾದರೆ, ಅವರು ಮಂಗಳವಾರ ಹೋಗಿ ಅದನ್ನು ಒಂದು ದಿನ ಮುಂಚಿತವಾಗಿ ಠೇವಣಿ ಮಾಡುತ್ತಾರೆ. ಸಹೋದರಿಯರ ನಡವಳಿಕೆಯು ಅನುತ್ಪಾದಕ ಆಸ್ತಿ ಇಲ್ಲ ಎಂಬಂತೆ ಇದೆ, ಬ್ಯಾಂಕಿನಿಂದ ಹೋಗುವ ಎಲ್ಲಾ ಹಣವು ಹಿಂತಿರುಗುತ್ತದೆ. ನಾನು ಆಡಳಿತಕ್ಕೆ ಬಂದ ನಂತರ, ಬ್ಯಾಂಕುಗಳ ವ್ಯವಹಾರದಲ್ಲಿ ಬಡವರ ಶ್ರೀಮಂತಿಕೆ ಮತ್ತು ಶ್ರೀಮಂತರ ಬಡತನವನ್ನು ನಾನು ನೋಡಿದ್ದೇನೆ.

ಇದಷ್ಟೇ ಅಲ್ಲ, ಸ್ನೇಹಿತರೆ,

ನಮ್ಮ ತಾಯಂದಿರು ಮತ್ತು ಸಹೋದರಿಯರು 'ಸ್ಥಳೀಯವಾಗಿ ಉತ್ಪನ್ನಗಳ ತಯಾರಿಕೆ'ಯಲ್ಲಿ ಬ್ರಾಂಡ್ ರಾಯಭಾರಿಗಳಾಗುತ್ತಿದ್ದಾರೆ. ಸಹೋದರಿಯರೆ, ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನದ ದೊಡ್ಡ ಯಶಸ್ಸು ಎಂದರೆ ಅದು ಮಹಿಳೆಯರ ಬಗ್ಗೆ ಹಳೆಯ ಚಿಂತನೆಯನ್ನು ಪ್ರಶ್ನಿಸಿದೆ. ಜಿ-20 ಶೃಂಗಸಭೆಯಲ್ಲಿ ನಾವು ಅಧ್ಯಕ್ಷತೆ ವಹಿಸಿದ್ದಾಗ, ಮಹಿಳಾ ಅಭಿವೃದ್ಧಿ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ನಡುವಿನ ವ್ಯತ್ಯಾಸವೇನು ಎಂದು ನಾನು ಪ್ರಪಂಚದ ದೇಶಗಳಿಗೆ ವಿವರಿಸಬೇಕಾಗಿತ್ತು. ಪ್ರಪಂಚದ ಬಹುಪಾಲು ಭಾಗವು ಮಹಿಳಾ ಅಭಿವೃದ್ಧಿಯನ್ನು ಒಪ್ಪಿಕೊಂಡಿತು, ಆದರೆ ಮಹಿಳಾ ನೇತೃತ್ವದ ಅಭಿವೃದ್ಧಿಗೆ ನಾನು ಪ್ರಯತ್ನ ಮಾಡಬೇಕಾಗಿತ್ತು, ಅದರಲ್ಲಿ ನಾವು ಯಶಸ್ವಿಯಾದೆವು. ಈ ಚಿಂತನೆಯ ಪರಿಣಾಮವಾಗಿ ಇಂದು ಮಹಿಳೆಯರು ಒಂದು ಕಾಲದಲ್ಲಿ ಪುರುಷರ ಏಕಸ್ವಾಮ್ಯವೆಂದು ಪರಿಗಣಿಸಲ್ಪಟ್ಟ ಕ್ಷೇತ್ರಗಳಲ್ಲಿಯೂ ಸಹ ಎತ್ತರ ತಲುಪುತ್ತಿದ್ದಾರೆ. ಇಂದು ನಮ್ಮ ಹೆಣ್ಣು ಮಕ್ಕಳು ಪೈಲಟ್‌ಗಳಾಗುತ್ತಿದ್ದಾರೆ ಮತ್ತು ಆಕಾಶದ ಎತ್ತರ ಮುಟ್ಟುತ್ತಿದ್ದಾರೆ. ಇಂದು ಭಾರತದಲ್ಲಿ ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೆ, ಈ ಅಂಕಿಅಂಶವು ನಿಮ್ಮನ್ನು ಸಂತೋಷಪಡಿಸುತ್ತದೆ, ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೆ, ಭಾರತದಲ್ಲಿ ಮಹಿಳಾ ಪೈಲಟ್‌ಗಳ ಶೇಕಡಾವಾರು ಪ್ರಮಾಣವು ಅತ್ಯಧಿಕವಾಗಿದೆ. ಇಂದು ಪಿಎಚ್‌ಡಿಗೆ ದಾಖಲಾದ ಹೆಣ್ಣು ಮಕ್ಕಳ ಸಂಖ್ಯೆ 2014ಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ. ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ, ಸುಮಾರು ಅರ್ಧದಷ್ಟು ಭಾಗವಹಿಸುವಿಕೆಯು ನಮ್ಮ ಹೆಣ್ಣು ಮಕ್ಕಳದ್ದಾಗಿದೆ. ಗಣಿತ ಮತ್ತು ವಿಜ್ಞಾನ ಅಧ್ಯಯನದಲ್ಲಿ, STEM ಶಿಕ್ಷಣದಲ್ಲಿ, ಹೆಣ್ಣು ಮಕ್ಕಳ ಸಂಖ್ಯೆ ಸುಮಾರು ಶೇಕಡ 43ಕ್ಕೆ ತಲುಪಿದೆ. ನಾನು ಒಮ್ಮೆ ವಿಶ್ವದ ಶ್ರೀಮಂತ ದೇಶಕ್ಕೆ ಹೋದಾಗ, ಅಲ್ಲಿ ಶಿಕ್ಷಣ ಸಚಿವರು ನನ್ನೊಂದಿಗೆ ಲಿಫ್ಟ್‌ನಲ್ಲಿ ಇದ್ದರು, ಅವರು ಭಾರತದಲ್ಲಿ ಮಹಿಳಾ ಶಿಕ್ಷಣ ಹೇಗಿದೆ ಎಂದು ಕೇಳಿದರು? ನಾನು ತುಂಬಾ ಒಳ್ಳೆಯದು, ಹೆಚ್ಚಿನದು, ಕೆಲವು ಸ್ಥಳಗಳಲ್ಲಿ ಪುರುಷರಿಗಿಂತ ಹೆಚ್ಚು ಎಂದು ಹೇಳಿದೆ. ನಂತರ ಅವರು ಬಹಳ ಕುತೂಹಲದಿಂದ ಕೇಳಿದರು, STEM ಶಿಕ್ಷಣದಲ್ಲಿ ಮಹಿಳೆಯರ ಪಾಲು ಏನು? ನಾನು 50 ಪ್ರತಿಶತ ಪಾಲು ಅವರದು ಎಂದು ಹೇಳಿದೆ. ಅವರಿಗೆ ಇದು ಆಶ್ಚರ್ಯಕರವಾಗಿತ್ತು. ನಾನು ವಿಶ್ವದ ಶ್ರೀಮಂತ ದೇಶದ ಶಿಕ್ಷಣ ಸಚಿವರ ಬಗ್ಗೆ ಮಾತನಾಡುತ್ತಿದ್ದೇನೆ.

 

ಸ್ನೇಹಿತರೆ,

ನಮ್ಮ ಸಮಾಜದಲ್ಲಿ, ಮಹಿಳೆಯರ ಸುರಕ್ಷತೆಯ ಬಗ್ಗೆಯೂ ದೊಡ್ಡ ಸವಾಲು ಇದೆ. ಶತಮಾನಗಳಿಂದ, ಮಹಿಳೆಯರು ತಮ್ಮ ಸ್ವಂತ ಸುರಕ್ಷತೆಗಾಗಿ ಮೌನವಾಗಿರಬೇಕಾಯಿತು. ನಮ್ಮ ಸರ್ಕಾರ ಈ ದಿಕ್ಕಿನಲ್ಲಿ ಬಲಿಷ್ಠ ಕ್ರಮಗಳನ್ನು ತೆಗೆದುಕೊಂಡಿದೆ. ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಸೂಕ್ಷ್ಮವಾಗಿಸಲು, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ವೇಗಗೊಳಿಸಲು, ನಾವು ಕಾನೂನು ಬದಲಾವಣೆಗಳನ್ನು ಮಾಡಿದ್ದೇವೆ. ತ್ವರಿತ ಗತಿಯ(ಫಾಸ್ಟ್-ಟ್ರ್ಯಾಕ್) ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ಭಾರತೀಯ ನ್ಯಾಯ ಸಂಹಿತಾದಲ್ಲಿ, ಮಹಿಳಾ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ, ಈಗ ಇ-ಎಫ್‌ಐಆರ್ ಅಥವಾ ಶೂನ್ಯ-ಎಫ್‌ಐಆರ್ ಅನ್ನು ಯಾವುದೇ ಸ್ಥಳದಿಂದ ಸಲ್ಲಿಸಬಹುದು. ಆಡಿಯೋ-ವೀಡಿಯೊ ಮೂಲಕ ಬಲಿಪಶು ಅಥವಾ ಸಂತ್ರಸ್ತರ ಹೇಳಿಕೆಯನ್ನು ದಾಖಲಿಸುವ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಪ್ರಗತಿಪರ ಸಮಾಜದ ಪರಿಕಲ್ಪನೆಯನ್ನು ನಾವು ಅರಿತುಕೊಳ್ಳಲು ಇಂತಹ ಹಲವು ಹಂತಗಳಿವೆ.

ಸ್ನೇಹಿತರೆ,

ಜೀವನದ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಕಾಳಜಿ, ಸಂತೋಷ ಮತ್ತು ದುಃಖ, ಪ್ರತಿಯೊಂದು ಸಂದರ್ಭದಲ್ಲೂ, ಪ್ರತಿಯೊಂದು ಸನ್ನಿವೇಶದಲ್ಲೂ ಗಮನ ಹರಿಸುತ್ತಾ, ನಮ್ಮ ಸರ್ಕಾರವು ಅನೇಕ ಸಣ್ಣ ಮತ್ತು ದೊಡ್ಡ ಹೆಜ್ಜೆಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ಇದರ ಪರಿಣಾಮವಾಗಿ, ದೇಶವು ಈಗ ತನ್ನ ಪ್ರಜಾಪ್ರಭುತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಿದ್ಧವಾಗಿದೆ.

ಸ್ನೇಹಿತರೆ,

ದೇಶದ ಮಹಿಳಾ ಶಕ್ತಿಯು ತಮ್ಮ ಕಠಿಣ ಪರಿಶ್ರಮ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಹೊಸ ಎತ್ತರ ತಲುಪಿದೆ. ಈಗ ನಾವು ಒಟ್ಟಾಗಿ ಈ ಸ್ತ್ರೀಶಕ್ತಿಗೆ ಹೊಸ ಶಕ್ತಿ ನೀಡಬೇಕು, ಅದಕ್ಕಾಗಿ ಅವಕಾಶಗಳನ್ನು ವಿಸ್ತರಿಸಬೇಕು. ಇಂದು ಈ ಹಂತದಿಂದ ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ, ಮಗಳಿಗೆ ರಾಷ್ಟ್ರವು ಅವರ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳುತ್ತಿದೆ, ಅವರ ಕನಸುಗಳನ್ನು ನನಸಾಗಿಸಲು ಅಗತ್ಯವಿರುವ ಎಲ್ಲಾ ಹೆಜ್ಜೆಗಳನ್ನು ಇಡುತ್ತಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ.

ಸ್ನೇಹಿತರೆ,

ಸಂಸತ್ತಿನಲ್ಲಿ ಚರ್ಚೆಯ ಮೊದಲು, ದೇಶದ ಮಹಿಳಾ ಶಕ್ತಿಯು ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ತಮ್ಮ ಸಕ್ರಿಯ ಭಾಗವಹಿಸುವಿಕೆಯನ್ನು ಕಾಯ್ದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ನೀವು ನಿಮ್ಮ ಪ್ರದೇಶಗಳ ನಿಮ್ಮ ಸಂಸದರನ್ನು ಸಹ ಭೇಟಿ ಮಾಡಬೇಕು. ದೇಶದ ಮಹಿಳೆಯರು ತಮ್ಮ ಸಂಸದರಿಗೆ ತಮ್ಮ ನಿಲುವುಗಳನ್ನು ಪ್ರಸ್ತುತಪಡಿಸಬೇಕು, ಅವರ ನಿರೀಕ್ಷೆಗಳನ್ನು ಅವರಿಗೆ ತಿಳಿಸಬೇಕು. ಅವರು ಸದನಕ್ಕೆ ಬರಲು ಹೊರಡುವ ದಿನದಂದು, ಹೂವುಗಳು ಮತ್ತು ಹೂಮಾಲೆಗಳೊಂದಿಗೆ ಅವರಿಗೆ ವಿದಾಯ ಹೇಳಬೇಕು. ಆದ್ದರಿಂದ ಸಂಸದರು ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದದೊಂದಿಗೆ ಹೊರಟಾಗ, ಅವರು ಬೇರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಸಂಸದರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ, ಮಹಿಳೆಯರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಸ್ನೇಹಿತರೆ,

ನಾನು ನಿಮಗೆ ಇನ್ನೂ ಒಂದು ಮನವಿ ಮಾಡುತ್ತೇನೆ. ನಾರಿ ಶಕ್ತಿ ವಂದನ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ದೇಶದ ಹಳ್ಳಿಗಳಿಗೆ ಕೊಂಡೊಯ್ಯಿರಿ. ವೈಯಕ್ತಿಕ ಸಭೆಗಳ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ, ಇತರ ಸಂವಹನ ಸಾಧನಗಳ ಮೂಲಕ, ದೇಶದ ಪ್ರತಿಯೊಬ್ಬ ಮಹಿಳೆಗೆ ನಾವು ಈ ದೊಡ್ಡ ನಿರ್ಧಾರವನ್ನು ಕೊಂಡೊಯ್ಯಬೇಕು. ಈ ದೊಡ್ಡ ನಿರ್ಧಾರದ ಶಕ್ತಿಯನ್ನು ಅವರು ಅರ್ಥ ಮಾಡಿಕೊಳ್ಳುವಂತೆ, ಅವರ ಪಾತ್ರವನ್ನು ಅರ್ಥ ಮಾಡಿಕೊಳ್ಳುವಂತೆ ಮತ್ತು ಮುಂಬರುವ ದಿನಗಳಲ್ಲಿ, ರಾಜ್ಯಗಳಿಂದ ಹಿಡಿದು ದೇಶದ ಸಂಸತ್ತಿನವರೆಗೆ, ಅವರು ತಮ್ಮ ಉಪಸ್ಥಿತಿಯನ್ನು ಗುರುತಿಸಬಹುದು ಎಂದು ಬಹಿರಂಗವಾಗಿ ಕನಸು ಕಾಣುವಂತೆ ನಾವು ಅವರಿಗೆ ಅರಿವು ಮೂಡಿಸಬೇಕು. ಬನ್ನಿ, ನಾವೆಲ್ಲರೂ ಒಟ್ಟಾಗಿ ಈ ಸಂಕಲ್ಪವನ್ನು ತೆಗೆದುಕೊಳ್ಳೋಣ, ಮಹಿಳಾ ಶಕ್ತಿಯು ಅವರ ಹಕ್ಕುಗಳನ್ನು ಹೊಂದಿರುತ್ತದೆ, ಅವರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪೂರ್ಣ ಭಾಗವಹಿಸುವವರಾಗುತ್ತಾರೆ. ಇದು ನಮ್ಮ ಉಜ್ವಲ ಭವಿಷ್ಯದ ದೊಡ್ಡ ಭರವಸೆ. ಏಪ್ರಿಲ್ 16, 17, 18ರಂದು - ಅದು ಸ್ಪೀಕರ್ ಅವರ ಕ್ಷೇತ್ರವಾಗಿದ್ದರೂ - ನಾನು ಹೇಳುತ್ತೇನೆ, ಆ ಸಮಯದಲ್ಲಿ ಸಂದರ್ಶಕರ ಗ್ಯಾಲರಿ ಮಹಿಳೆಯರಿಂದ ಮಾತ್ರ ತುಂಬಿರಬೇಕು. ಇಡೀ ದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಇದು ಈ ಪಕ್ಷ ಅಥವಾ ಆ ಪಕ್ಷದ ವಿಷಯವಾಗಿ ಉಳಿಯುವುದಿಲ್ಲ, ಯಾರು ಗೆದ್ದರು, ಯಾರು ಸೋತರು, ಯಾರು ಇದನ್ನು ಮಾಡಿದರು, ಯಾರಿಗೂ ಅಲ್ಲ, ಎಲ್ಲಾ ಶ್ರೇಯಸ್ಸು ದೇಶದ ತಾಯಂದಿರ ಶಕ್ತಿಗೆ ಸಲ್ಲುತ್ತದೆ, ಎಲ್ಲಾ ಶ್ರೇಯಸ್ಸು ದೇಶದ ಸಂಸತ್ತಿಗೆ ಸಲ್ಲುತ್ತದೆ, ಎಲ್ಲಾ ಶ್ರೇಯಸ್ಸು ಭಾರತದ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಲ್ಲುತ್ತದೆ, ಕಳೆದ 3-4 ದಶಕಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಸಲ್ಲುತ್ತದೆ. ಇದು ಎಲ್ಲರಿಗೂ ಸೇರಿದೆ, ಇದು ಎಲ್ಲರ ಸಹಕಾರದೊಂದಿಗೆ ಮತ್ತು ಇದು ಎಲ್ಲರ ಕಲ್ಯಾಣಕ್ಕಾಗಿ ನಡೆಯುತ್ತದೆ. ಈ ನಂಬಿಕೆಯೊಂದಿಗೆ, ನೀವೆಲ್ಲರೂ ತುಂಬಾ ಸಮಯ ತೆಗೆದುಕೊಂಡಿದ್ದೀರಿ, ತುಂಬಾ ಉತ್ಸಾಹ ಮತ್ತು ಚೈತನ್ಯದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ, ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ, ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India-New Zealand elevate ties to strategic partnership; Scripts 2030 roadmap, $20bn investment & Indo-Pacific security

Media Coverage

India-New Zealand elevate ties to strategic partnership; Scripts 2030 roadmap, $20bn investment & Indo-Pacific security
NM on the go

Nm on the go

Always be the first to hear from the PM. Get the App Now!
...
Prime Minister condoles the passing of Father Amir of State of Qatar HH Sheikh Hamad bin Khalifa Al Thani
July 12, 2026

The Prime Minister, Shri Narendra Modi, has expressed deep grief over the passing of the Father Amir of the State of Qatar, HH Sheikh Hamad bin Khalifa Al Thani.

The Prime Minister described him as a visionary leader who led Qatar to great levels of development and prosperity. Shri Modi also remembered him as a true friend whom he had the honour of meeting during his visit to Qatar in February 2024.

The Prime Minister conveyed his sincere condolences to the Amir of Qatar, HH Sheikh Tamim bin Hamad Al Thani, the entire royal family and the people of Qatar.

The Prime Minister wrote on X;

“We deeply mourn the passing of Father Amir of State of Qatar, HH Sheikh Hamad bin Khalifa Al Thani. A visionary leader who led Qatar to great levels of development and prosperity, we remember him also as a true friend whom I had the honour of meeting during my last visit to Qatar in February 2024. I convey my sincere condolences to the Amir of Qatar, HH Sheikh Tamim bin Hamad Al Thani and the entire royal family and people of Qatar. May the departed soul rest in eternal peace.

@TamimBinHamad”