ಕೃತಕ ಬುದ್ಧಿಮತ್ತೆ ಪರಿಣಾಮ ಶೃಂಗಸಭೆ ಮಾನವ ಕೇಂದ್ರಿತ, ಸೂಕ್ಷ್ಮ ಜಾಗತಿಕ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತದೆ: ಪ್ರಧಾನಮಂತ್ರಿ
ಆಡಳಿತದ ಕೇಂದ್ರದಲ್ಲಿ ಗ್ಲೋಬಲ್‌ ಸೌತ್‌ ಆದ್ಯತೆಗಳೊಂದಿಗೆ ಕೃತಕ ಬುದ್ಧಿಮತ್ತೆ ಎಲ್ಲರಿಗೂ ಲಭ್ಯವಾಗಬೇಕು: ಪ್ರಧಾನಮಂತ್ರಿ
ಎಐನಲ್ಲಿ ನೈತಿಕತೆ ಅನಿಯಮಿತವಾಗಿರಬೇಕು; ಲಾಭವು ಉದ್ದೇಶಕ್ಕೆ ಹೊಂದಿಕೆಯಾಗಬೇಕು: ಪ್ರಧಾನಮಂತ್ರಿ
ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಗಾಗಿ ಮೂರು ಪ್ರಮುಖ ಸಲಹೆಗಳನ್ನು ನೀಡಿದ ಪ್ರಧಾನಿ: ವಿಶ್ವಾಸಾರ್ಹ ಜಾಗತಿಕ ದತ್ತಾಂಶ ಚೌಕಟ್ಟು, ಪಾರದರ್ಶಕ ‘ಗ್ಲಾಸ್‌ ಬಾಕ್ಸ್‌’ ಸುರಕ್ಷ ತಾ ನಿಯಮಗಳು ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸುವುದು
ಕೃತಕ ಬುದ್ಧಿಮತ್ತೆಯು ಮನುಕುಲದ ಕಲ್ಯಾಣಕ್ಕಾಗಿ ಹಂಚಿಕೆಯ ಸಂಪನ್ಮೂಲವಾಗಿದೆ: ಪ್ರಧಾನಮಂತ್ರಿ

ಭಾರತದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್(ಪ್ರಭಾವ) ಶೃಂಗಸಭೆಗೆ ನಿಮ್ಮೆಲ್ಲರನ್ನೂ ಮತ್ತೊಮ್ಮೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಈ ಶೃಂಗಸಭೆಯು ಮಾನವ ಕೇಂದ್ರಿತ, ಸೂಕ್ಷ್ಮ ಜಾಗತಿಕ ಎಐ ಪರಿಸರ ವ್ಯವಸ್ಥೆ ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ನಾವು ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಮಾನವತೆಯು ಯಾವಾಗಲೂ ಪ್ರತಿಯೊಂದು ಅಡಚಣೆಯನ್ನು ಹೊಸ ಅವಕಾಶವನ್ನಾಗಿ ಪರಿವರ್ತಿಸಿದೆ ಎಂಬುದನ್ನು ನಾವು ನೋಡುತ್ತೇವೆ. ಇಂದು ನಾವು ಅಂತಹ ಮತ್ತೊಂದು ಕ್ಷಣವನ್ನು ಎದುರಿಸುತ್ತಿದ್ದೇವೆ. ಒಟ್ಟಾಗಿ, ನಾವು ಈ ಅಡಚಣೆಯನ್ನು ಮಾನವತೆಗೆ ಶ್ರೇಷ್ಠ ಅವಕಾಶವಾಗಿ ಪರಿವರ್ತಿಸಬೇಕು.

 

ಸ್ನೇಹಿತರೆ,

ಭಾರತ ಬುದ್ಧನ ಭೂಮಿ, ಭಗವಾನ್ ಬುದ್ಧ ಹೇಳಿದರು: ಸರಿಯಾದ ಕ್ರಮವು ಸರಿಯಾದ ತಿಳಿವಳಿಕೆಯಿಂದ ಬರುತ್ತದೆ. ಆದ್ದರಿಂದ, ಎಐ ಸರಿಯಾದ ಪರಿಣಾಮ ಬೀರುವಂತೆ ನಾವು ಒಟ್ಟಾಗಿ ಒಂದು ಮಾರ್ಗಸೂಚಿ ರೂಪಿಸುವುದು ಅತ್ಯಗತ್ಯ. ಸರಿಯಾದ ಪರಿಣಾಮವು ನಾವು ಸರಿಯಾದ ನಿರ್ಧಾರಗಳನ್ನು, ಸರಿಯಾದ ಸಮಯದಲ್ಲಿ, ಸರಿಯಾದ ಉದ್ದೇಶದಿಂದ ತೆಗೆದುಕೊಂಡಾಗ ಮಾತ್ರ ಬರುತ್ತದೆ.

ಸ್ನೇಹಿತರೆ,

ಜಾಗತಿಕ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ಒಟ್ಟಾಗಿ ನಿಂತಾಗ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ ಎಂಬುದನ್ನು ಜಗತ್ತು ಕಂಡಿತು. ಲಸಿಕೆ ಅಭಿವೃದ್ಧಿಯಿಂದ ಪೂರೈಕೆ ಸರಪಳಿವರೆಗೆ, ದತ್ತಾಂಶ ಹಂಚಿಕೆಯಿಂದ ಜೀವಗಳನ್ನು ಉಳಿಸುವವರೆಗೆ – ಸಹಭಾಗಿತ್ವವು ಪರಿಹಾರಗಳನ್ನು ಒದಗಿಸಿತು. ಸಾಂಕ್ರಾಮಿಕ ಸಮಯದಲ್ಲಿ ತಂತ್ರಜ್ಞಾನವು ಮಾನವತೆಗೆ ಹೇಗೆ ಸೇವೆ ಸಲ್ಲಿಸುತ್ತದೆ ಎಂಬುದನ್ನು ನಾವು ಭಾರತದಲ್ಲಿ ನೋಡಿದ್ದೇವೆ. ನಮ್ಮ ಡಿಜಿಟಲ್ ಲಸಿಕಾ ವೇದಿಕೆಯು ಲಕ್ಷಾಂತರ ಜನರಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಲು ಸಹಾಯ ಮಾಡಿತು. ಆ ಕಷ್ಟದ ಸಮಯದಲ್ಲೂ ಜನರು ಆನ್‌ಲೈನ್ ವಹಿವಾಟುಗಳನ್ನು ಮುಂದುವರಿಸಬಹುದು ಎಂಬುದನ್ನು ನಮ್ಮ ಯುಪಿಐ ಖಚಿತಪಡಿಸಿತು. ಭಾರತದಲ್ಲಿ ಡಿಜಿಟಲ್ ಕಂದಕ ನಿವಾರಿಸುವಲ್ಲಿ ಯುಪಿಐ ಪ್ರಮುಖ ಪಾತ್ರ ವಹಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ಒಂದು ರೋಮಾಂಚಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸಿದೆ, ಅದನ್ನು ನಾವು ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಮಗೆ ತಂತ್ರಜ್ಞಾನವು ಶಕ್ತಿಯ ಸಾಧನವಲ್ಲ, ಆದರೆ ಸೇವೆಯ ಮಾಧ್ಯಮವಾಗಿದೆ - ಮೀರಿಸಲು ಅಲ್ಲ, ಆದರೆ ಸಬಲೀಕರಣಗೊಳಿಸಲು. ಎಐ ಕೂಡ ಈ ಮಾರ್ಗವನ್ನು ಅನುಸರಿಸಬೇಕು, ಅದು ಎಲ್ಲಾ ಮಾನವತೆಯ ಕಲ್ಯಾಣವನ್ನು ಪೂರೈಸಬೇಕು.

ಸ್ನೇಹಿತರೆ,

ಹಿಂದೆ ತಂತ್ರಜ್ಞಾನವು ವಿಭಾಗಗಳನ್ನು ಸೃಷ್ಟಿಸುತ್ತಿತ್ತು, ಆದರೆ ಇಂದು ನಮ್ಮ ಗುರಿ ಎಐ ಅನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದಾಗಿದೆ. ಆದ್ದರಿಂದ ನಾವು ಎಐ ಭವಿಷ್ಯದ ಬಗ್ಗೆ ಚರ್ಚಿಸುವಾಗ, ಜಾಗತಿಕ ದಕ್ಷಿಣದ ಆಕಾಂಕ್ಷೆಗಳು ಮತ್ತು ಆದ್ಯತೆಗಳನ್ನು ಎಐ ಆಡಳಿತದ ಕೇಂದ್ರದಲ್ಲಿ ಇಡಬೇಕು.

 

ಗೌರವಾನ್ವಿತರೆ,

ಯುಗ ಏನೇ ಇರಲಿ, ನೀತಿಶಾಸ್ತ್ರವು ಯಾವಾಗಲೂ ಚರ್ಚೆಯ ಕೇಂದ್ರಬಿಂದುವಾಗಿದೆ. ವ್ಯತ್ಯಾಸವೆಂದರೆ, ಮೊದಲು ಅನೈತಿಕ ನಡವಳಿಕೆಯ ವ್ಯಾಪ್ತಿ ಸೀಮಿತವಾಗಿತ್ತು, ಆದರೆ ಎಐನಲ್ಲಿ ಅದರ ವ್ಯಾಪ್ತಿಯು ಅನಂತವಾಗಿದೆ - ಅಪರಿಮಿತವಾಗಿದೆ. ಆದ್ದರಿಂದ, ಎಐಗಾಗಿ, ನಾವು ನೈತಿಕ ನಡವಳಿಕೆ ಮತ್ತು ರೂಢಿಗಳ ವ್ಯಾಪ್ತಿಯನ್ನು ಅನಂತಕ್ಕೆ ವಿಸ್ತರಿಸಬೇಕು. ಎಐ ಕಂಪನಿಗಳು ದೊಡ್ಡ ಜವಾಬ್ದಾರಿ ಹೊಂದಿವೆ. ಲಾಭದ ಜತೆಗೆ, ಅವು ಉದ್ದೇಶದ ಮೇಲೆಯೂ ಗಮನ ಹರಿಸಬೇಕು. ಅಂತಹ ನೈತಿಕ ಬದ್ಧತೆಗಳು ತುರ್ತಾಗಿ ಅಗತ್ಯವಿದೆ. ವೈಯಕ್ತಿಕ ಮಟ್ಟದಲ್ಲಿ ಎಐ ನಮ್ಮ ಕಲಿಕೆ, ಬುದ್ಧಿವಂತಿಕೆ ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರುತ್ತಿದೆ.

ಸನ್ಮಾನ್ಯರೆ,

ಎಐನ ನೈತಿಕ ಬಳಕೆಗೆ ನನ್ನಲ್ಲಿ 3 ಸಲಹೆಗಳಿವೆ. ಮೊದಲನೆಯದಾಗಿ, ದತ್ತಾಂಶ  ಸಾರ್ವಭೌಮತ್ವ ಗೌರವಿಸುವಾಗ, ನಾವು ಎಐ ತರಬೇತಿಗಾಗಿ ದತ್ತಾಂಶ ಮಾರ್ಗಸೂಚಿ ರಚಿಸಬೇಕು. ದತ್ತಾಂಶ ಸುರಕ್ಷಿತ, ಸಮತೋಲಿತ ಮತ್ತು ವಿಶ್ವಾಸಾರ್ಹವಲ್ಲದಿದ್ದರೆ, ಅದರ ಹೊರಹರಿವು ನಂಬಲು ಸಾಧ್ಯವಿಲ್ಲ. ಆದ್ದರಿಂದ, ಜಾಗತಿಕ ವಿಶ್ವಾಸಾರ್ಹ ದತ್ತಾಂಶ ಮಾರ್ಗಸೂಚಿ ಅತ್ಯಗತ್ಯ. ಎರಡನೆಯದಾಗಿ, ಎಐ ಪ್ಲಾಟ್‌ಫಾರ್ಮ್‌ಗಳು ತಮ್ಮ ಸುರಕ್ಷತಾ ನಿಯಮಗಳನ್ನು ಸ್ಪಷ್ಟವಾಗಿ ಮತ್ತು ಪಾರದರ್ಶಕವಾಗಿ ಇಟ್ಟುಕೊಳ್ಳಬೇಕು. ಸುರಕ್ಷತಾ ನಿಯಮಗಳನ್ನು ನೋಡಬಹುದು ಮತ್ತು ಪರಿಶೀಲಿಸಬಹುದು ಎಂಬ ಕಪ್ಪುಪೆಟ್ಟಿಗೆ ವಿಧಾನದ ಬದಲಿಗೆ ನಮಗೆ ಗಾಜಿನ ಪೆಟ್ಟಿಗೆ ವಿಧಾನದ ಅಗತ್ಯವಿದೆ. ಇದು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ, ವ್ಯವಹಾರದಲ್ಲಿ ನೈತಿಕ ನಡವಳಿಕೆಯನ್ನು ಹೆಚ್ಚಿಸುತ್ತದೆ. ಮೂರನೆಯದಾಗಿ, ಎಐ ಸಂಶೋಧನೆಯಲ್ಲಿ, ಪೇಪರ್‌ಕ್ಲಿಪ್ ಸಮಸ್ಯೆಯನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ. ಒಂದು ಯಂತ್ರಕ್ಕೆ ಪೇಪರ್‌ಕ್ಲಿಪ್‌ಗಳನ್ನು ತಯಾರಿಸುವ ಏಕೈಕ ಗುರಿ ನೀಡಿದರೆ, ಅದನ್ನು ಸಾಧಿಸಲು ಅದು ಪ್ರಪಂಚದ ಎಲ್ಲಾ ಸಂಪನ್ಮೂಲಗಳನ್ನು ತ್ಯಾಗ ಮಾಡಬಹುದು. ಆದ್ದರಿಂದ, ಎಐಗೆ ಸ್ಪಷ್ಟ ಮಾನವ ಮೌಲ್ಯಗಳು ಮತ್ತು ಮಾರ್ಗದರ್ಶನದ ಅಗತ್ಯವಿದೆ. ತಂತ್ರಜ್ಞಾನವು ಶಕ್ತಿಯುತವಾಗಿದೆ, ಆದರೆ ನಿರ್ದೇಶನವನ್ನು ಯಾವಾಗಲೂ ಮಾನವರು ಹೊಂದಿಸಬೇಕು.

 

ಸ್ನೇಹಿತರೆ,

ಕೃತಕ ಬುದ್ಧಿಮತ್ತೆಯ ಜಾಗತಿಕ ಪ್ರಯಾಣದಲ್ಲಿ ಮಹತ್ವಾಕಾಂಕ್ಷೆಯ ಭಾರತವು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಈ ಜವಾಬ್ದಾರಿಯನ್ನು ಗುರುತಿಸಿ, ಭಾರತ ಇಂದು ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ನಮ್ಮ ಎಐ ಮಿಷನ್ ಮೂಲಕ ಭಾರತವು ಪ್ರಸ್ತುತ 38,000 ಜಿಪಿಯು(ಗ್ರಾಫಿಕ್ಸ್ ಸಂಸ್ಕರಣಾ ಘಟಕ)ಗಳನ್ನು ಹೊಂದಿದೆ, ಮುಂದಿನ 6 ತಿಂಗಳಲ್ಲಿ ನಾವು 24,000ಕ್ಕಿಂತ ಹೆಚ್ಚಿನ ಜಿಪಿಯುಗಳನ್ನು ಸೇರಿಸುತ್ತೇವೆ. ನಾವು ನಮ್ಮ ಸ್ಟಾರ್ಟಪ್‌ಗಳಿಗೆ ಅತ್ಯಂತ ಕೈಗೆಟುಕುವ ದರದಲ್ಲಿ ವಿಶ್ವ ದರ್ಜೆಯ ಕಂಪ್ಯೂಟಿಂಗ್ ಶಕ್ತಿಯನ್ನು ಒದಗಿಸುತ್ತಿದ್ದೇವೆ. ನಾವು ಎಐ ಸಿಒಎಸ್ ಟಿಇ(ಎಐ ಸಂಕೀರ್ಣತೆ-ಆಧಾರಿತ ಓವರ್‌ಸ್ಯಾಂಪ್ಲಿಂಗ್ ಟೆಕ್ನಿಕ್) ಅನ್ನು ಸಹ ರಚಿಸಿದ್ದೇವೆ, ಅದರ ಮೂಲಕ 7,500ಕ್ಕೂ ಹೆಚ್ಚು ಡೇಟಾಸೆಟ್‌ಗಳು ಮತ್ತು 270 ಎಐ ಮಾದರಿಗಳನ್ನು ರಾಷ್ಟ್ರೀಯ ಸಂಪನ್ಮೂಲಗಳಾಗಿ ಹಂಚಿಕೊಳ್ಳಲಾಗಿದೆ.

ಸ್ನೇಹಿತರೆ,

ಎಐ ಕುರಿತು ಭಾರತದ ನಿರ್ದೇಶನ ಸ್ಪಷ್ಟವಾಗಿದೆ, ಭಾರತದ ದೃಷ್ಟಿಕೋನ ಸ್ಪಷ್ಟವಾಗಿದೆ. ಎಐ ಎಲ್ಲಾ ಮಾನವತೆಯ ಕಲ್ಯಾಣಕ್ಕಾಗಿ ಹಂಚಿಕೆಯ ಸಂಪನ್ಮೂಲವಾಗಿದೆ. ಒಟ್ಟಾಗಿ, ನಾವು ನಾವೀನ್ಯತೆಯನ್ನು ಮುನ್ನಡೆಸುವ, ಸೇರ್ಪಡೆಯನ್ನು ಬಲಪಡಿಸುವ ಮತ್ತು ಮಾನವ ಮೌಲ್ಯಗಳನ್ನು ಸಂಯೋಜಿಸುವ ಎಐ ಭವಿಷ್ಯ ನಿರ್ಮಿಸಬೇಕು. ತಂತ್ರಜ್ಞಾನ ಮತ್ತು ಮಾನವ ನಂಬಿಕೆ ಕೈಜೋಡಿಸಿ ಮುನ್ನಡೆದಾಗ, ಎಐನ ನಿಜವಾದ ಪ್ರಭಾವವು ವಿಶ್ವಾದ್ಯಂತ ಕಂಡುಬರುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s pharma exports cross $28 bn till February, likely to end up with growth in rupee terms in FY26

Media Coverage

India’s pharma exports cross $28 bn till February, likely to end up with growth in rupee terms in FY26
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಎಪ್ರಿಲ್ 2026
April 05, 2026

From Aatmanirbhar to Viksit Bharat: PM Modi’s Leadership Powers India’s Multi-Sector Triumph