ರಾಷ್ಟ್ರ ರಕ್ಷಣೆಯಲ್ಲಿ ನಮ್ಮ ವಾಯುಪಡೆ ಯೋಧರು ಮತ್ತು ಸೈನಿಕರು ತೋರಿದ ಧೈರ್ಯ ಮತ್ತು ವೃತ್ತಿಪರತೆ ಶ್ಲಾಘನೀಯ: ಪ್ರಧಾನಮಂತ್ರಿ
‘ಭಾರತ್ ಮಾತಾ ಕಿ ಜೈ’ ಕೇವಲ ಘೋಷಣೆಯಲ್ಲ, ಇದು ದೇಶದ ಗೌರವ ಮತ್ತು ಘನತೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ಪ್ರತಿಯೊಬ್ಬ ಸೈನಿಕನ ಪ್ರಮಾಣವಚನವಾಗಿದೆ: ಪ್ರಧಾನಮಂತ್ರಿ
ಆಪರೇಷನ್ ಸಿಂದೂರ್ ಎಂಬುದು ಭಾರತದ ನೀತಿ, ಉದ್ದೇಶ ಮತ್ತು ನಿರ್ಣಾಯಕ ಸಾಮರ್ಥ್ಯದ ತ್ರಿಮೂರ್ತಿಯಾಗಿದೆ: ಪ್ರಧಾನಮಂತ್ರಿ
ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸಿಂದೂರ ಅಳಿಸಿದಾಗ, ನಾವು ಭಯೋತ್ಪಾದಕರನ್ನು ಅವರ ಅಡಗುತಾಣಗಳಲ್ಲೇ ನಾಶ ಮಾಡಿದೆವು: ಪ್ರಧಾನಮಂತ್ರಿ
ಭಾರತದ ಮೇಲೆ ಕಣ್ಣಿಟ್ಟರೆ ವಿನಾಶವೇ ಗತಿ ಎಂಬುದನ್ನು ಭಯೋತ್ಪಾದನೆಯ ಸೂತ್ರಧಾರಿಗಳು ಈಗ ತಿಳಿದಿದ್ದಾರೆ: ಪ್ರಧಾನಮಂತ್ರಿ
ಪಾಕಿಸ್ತಾನದಲ್ಲಿ ಭಯೋತ್ಪಾದಕ ನೆಲೆಗಳು ಮತ್ತು ವಾಯುನೆಲೆಗಳನ್ನು ನಾಶ ಪಡಿಸುವ ಜತೆಗೆ, ಅವರ ದುರುದ್ದೇಶಪೂರಿತ ಉದ್ದೇಶಗಳು ಮತ್ತು ಧೈರ್ಯವನ್ನು ಸಹ ಹಿಮ್ಮೆಟ್ಟಲಾಗಿದೆ: ಪ್ರಧಾನಮಂತ್ರಿ
ಭಯೋತ್ಪಾದನೆಯ ವಿರುದ್ಧದ ಭಾರತದ ಲಕ್ಷ್ಮಣ ರೇಖೆ ಈಗ ಸ್ಪಷ್ಟ, ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ, ಭಾರತ ಪ್ರತಿಕ್ರಿಯಿಸುತ್ತದೆ ಮತ್ತು ಅದು ನಿರ್ಣಾಯಕ ಮತ್ತು ಬಲಿಷ್ಠ ಪ್ರತಿಕ್ರಿಯೆ ಆಗಿರುತ್ತದೆ: ಪ್ರಧಾನಮಂತ್ರಿ
ಆಪರೇಷನ್ ಸಿಂದೂರ್‌ನ ಪ್ರತಿ ಕ್ಷಣವೂ ಭಾರತದ ಸಶಸ್ತ್ರ ಪಡೆಗಳ ಬಲಕ್ಕೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ
ಪಾಕಿಸ್ತಾನವು ಯಾವುದೇ ಭಯೋತ್ಪಾದಕ ಚಟುವಟಿಕೆ ಅಥವಾ ಸೇನಾ ಆಕ್ರಮಣ ತೋರಿದರೆ, ನಾವು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ, ಈ ಪ್ರತಿಕ್ರಿಯೆ ನಮ್ಮ ರೀತಿಯಲ್ಲಿ, ನಮ್ಮ ನಿಯಮಗಳ ಮೇಲೆಯೇ ಇರುತ್ತದೆ: ಪ್ರಧಾನಮಂತ್ರಿ
ಇದು ಹೊಸ ಭಾರತ! ಈ ಭಾರತ ಶಾಂತಿ ಬಯಸುತ್ತದೆ, ಆದರೆ ಮಾನವತೆಯ ಮೇಲೆ ದಾಳಿ ನಡೆದರೆ, ಯುದ್ಧಭೂಮಿಯಲ್ಲಿ ಶತ್ರುವನ್ನು ಹೇಗೆ ಹತ್ತಿಕ್ಕಬೇಕೆಂದು ಭಾರತಕ್ಕೆ ತಿಳಿದಿದೆ: ಪ್ರಧಾನಮಂತ್ರಿ

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗವಷ್ಟೇ ನೋಡಿದೆ. ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣೆಯಲ್ಲ, ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ದೇಶದ ಪ್ರತಿಯೊಬ್ಬ ಸೈನಿಕನ ಪ್ರಮಾಣವಚನ ಇದಾಗಿದೆ. ದೇಶಕ್ಕಾಗಿ ಬದುಕಲು ಬಯಸುವ, ಏನನ್ನಾದರೂ ಸಾಧಿಸಲು ಬಯಸುವ ದೇಶದ ಪ್ರತಿಯೊಬ್ಬ ನಾಗರಿಕನ ಧ್ವನಿ ಇದಾಗಿದೆ. ಭಾರತ್ ಮಾತಾ ಕಿ ಜೈ ಎಂಬುದು ಯುದ್ಧಭೂಮಿಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಪ್ರತಿಧ್ವನಿಸುತ್ತದೆ. ಭಾರತದ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸಿದಾಗ, ಶತ್ರುಗಳ ಹೃದಯ ನಡುಗುತ್ತದೆ. ನಮ್ಮ ಡ್ರೋನ್‌ಗಳು ಶತ್ರುಗಳ ಕೋಟೆಯ ಗೋಡೆಗಳನ್ನು ಉರುಳಿಸಿದಾಗ, ನಮ್ಮ ಕ್ಷಿಪಣಿಗಳು ಭಾರಿ ಶಬ್ದದೊಂದಿಗೆ ಗುರಿ ತಲುಪಿದಾಗ, ಶತ್ರು ಕೇಳುತ್ತಾನೆ - ಭಾರತ್ ಮಾತಾ ಕಿ ಜೈ! ಘೋಷಣೆಯನ್ನ. ರಾತ್ರಿಯ ಕಗ್ಗತ್ತಲೆಯಲ್ಲೂ ನಾವು ಸೂರ್ಯನನ್ನು ಬೆಳಗಿದಾಗ, ಶತ್ರು ನೋಡುತ್ತಾನೆ - ಭಾರತ್ ಮಾತಾ ಕಿ ಜೈ! ನಮ್ಮ ಪಡೆಗಳು ಪರಮಾಣು ಬೆದರಿಕೆಯನ್ನು ಹುಸಿಗೊಳಿಸಿದಾಗ, ಆಕಾಶದಿಂದ ಭೂಗತ ಲೋಕಕ್ಕೆ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ, ಅದೇ - ಭಾರತ್ ಮಾತಾ ಕಿ ಜೈ!

ಸ್ನೇಹಿತರೆ,

ವಾಸ್ತವವಾಗಿಯೂ, ನೀವೆಲ್ಲರೂ ಕೋಟ್ಯಂತರ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ, ಪ್ರತಿಯೊಬ್ಬ ಭಾರತೀಯನನ್ನು ಬೀಗುವಂತೆ ಮಾಡಿದ್ದೀರಿ. ನೀವು ಇತಿಹಾಸವನ್ನು ಸೃಷ್ಟಿಸಿದ್ದೀರಿ. ನಿಮ್ಮನ್ನು ಕಾಣಲು ನಾನು ಬೆಳಗ್ಗೆ ಬೇಗನೆ ನಿಮ್ಮಲ್ಲಿಗೆ ಬಂದಿದ್ದೇನೆ. ಅಪ್ರತಿಮೆ ಧೈರ್ಯಶಾಲಿಗಳ ಪಾದಗಳು ಭೂಮಿಯ ಮೇಲೆ ಬಿದ್ದಾಗ, ಭೂಮಿ ತಾಯಿ ಆಶೀರ್ವದಿಸುತ್ತಾಳೆ. ಧೈರ್ಯಶಾಲಿಗಳನ್ನು ನೋಡುವ ಅವಕಾಶ ಸಿಕ್ಕಾಗ, ಜೀವನವೂ ಆಶೀರ್ವದಿಸಲ್ಪಡುತ್ತದೆ. ಅದಕ್ಕಾಗಿಯೇ ನಾನು ನಿಮ್ಮನ್ನು ನೋಡಲು ಬೆಳಗ್ಗೆಯೇ ಬೇಗನೆ ಇಲ್ಲಿಗೆ ಬಂದಿದ್ದೇನೆ. ಇಂದಿನಿಂದ ಹಲವು ದಶಕಗಳ ನಂತರವೂ, ಭಾರತದ ಈ ಶೌರ್ಯದ ಬಗ್ಗೆ ಚರ್ಚಿಸುವಾಗ, ಅದರ ಪ್ರಮುಖ ಅಧ್ಯಾಯವು ನೀವು ಮತ್ತು ನಿಮ್ಮ ಸಹೋದ್ಯೋಗಿಗಳೇ ಆಗಿದ್ದೀರಿ. ನೀವೆಲ್ಲರೂ ದೇಶದ ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೆ ಹೊಸ ಸ್ಫೂರ್ತಿಯಾಗಿದ್ದೀರಿ. ಈ ವೀರರ ಪುಣ್ಯ ಭೂಮಿಯಿಂದ, ಇಂದು ನಾನು ವಾಯುಪಡೆ, ನೌಕಾಪಡೆ ಮತ್ತು ಸೇನೆಯ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ, ಬಿಎಸ್‌ಎಫ್‌ನ ನಮ್ಮ ಧೈರ್ಯಶಾಲಿ ಸೈನಿಕರಿಗೆ ವಂದಿಸುತ್ತೇನೆ. ನಿಮ್ಮ ಶೌರ್ಯದಿಂದಾಗಿ, ಆಪರೇಷನ್ ಸಿಂದೂರ್‌ನ ಪ್ರತಿಧ್ವನಿ ಪ್ರತಿಯೊಂದು ಮೂಲೆಯಲ್ಲೂ ಕೇಳಿಬರುತ್ತಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಸಮಯದಲ್ಲಿ, ಪ್ರತಿಯೊಬ್ಬ ಭಾರತೀಯನು ನಿಮ್ಮೊಂದಿಗೆ ನಿಂತಿದ್ದ, ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆ ನಿಮಗಾಗಿ ಇತ್ತು. ಇಂದು ದೇಶದ ಪ್ರತಿಯೊಬ್ಬ ನಾಗರಿಕನು ತನ್ನ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಕೃತಜ್ಞನಾಗಿದ್ದಾನೆ ಮತ್ತು ನಿಮ್ಮೆಲ್ಲರಿಗೆ ಋಣಿಯಾಗಿದ್ದಾನೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್ ಸಾಮಾನ್ಯ ಸೇನಾ ಕಾರ್ಯಾಚರಣೆಯಲ್ಲ, ಇದು ಭಾರತದ ನೀತಿ, ಉದ್ದೇಶಗಳು ಮತ್ತು ನಿರ್ಣಾಯಕತೆಯ ಸಂಗಮವಾಗಿದೆ. ಭಾರತವು ಬುದ್ಧನ ಭೂಮಿ ಹಾಗೂ ಗುರು ಗೋವಿಂದ ಸಿಂಗ್ ಜಿ ಅವರ ಪುಣ್ಯ ಭೂಮಿ. ಗುರು ಗೋವಿಂದ ಸಿಂಗ್ ಜಿ ಹೇಳಿದ್ದರು. -सवा लाख सेएक लड़ाऊं , चि ड़ि यन तेमबाज़ तड़ुाऊं , तबैगु गोबि दं सि हं नाम कहाऊं ।”.  ದುಷ್ಟತನ ನಾಶ ಮಾಡಲು ಮತ್ತು ಧರ್ಮವನ್ನು ಸ್ಥಾಪಿಸಲು ಶಸ್ತ್ರಾಸ್ತ್ರಗಳನ್ನು ಹಿಡಿಯುವುದು ನಮ್ಮ ಸಂಪ್ರದಾಯ. ಅದಕ್ಕಾಗಿಯೇ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸಿಂದೂರ ಅಳಿಸಿದಾಗ, ನಾವು ಭಯೋತ್ಪಾದಕರ ಮನೆಗಳಿಗೆ ನುಗ್ಗಿ ಅವರ ಕೋರೆ ಹಲ್ಲುಗಳನ್ನು ಪುಡಿ ಮಾಡಿದೆವು. ಅವರು ಹೇಡಿಗಳಂತೆ ಅಡಗಿಕೊಂಡು ಬಂದಿದ್ದರು, ಆದರೆ ಅವರು ಸವಾಲು ಹಾಕಿದ್ದು ಭಾರತೀಯ ಬಲಿಷ್ಠ ಸೈನ್ಯ ಎಂಬುದನ್ನು ಅವರು ಮರೆತರು. ನೀವು ಅವರ ಮೇಲೆ ಎದುರಿನಿಂದ ದಾಳಿ ಮಾಡಿ ಕೊಂದಿದ್ದೀರಿ, ನೀವು ಭಯೋತ್ಪಾದನೆಯ ಎಲ್ಲಾ ಬೃಹತ್ ಅಡಗುತಾಣಗಳನ್ನು ನಾಶಪಡಿಸಿದ್ದೀರಿ, 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದೀರಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿದ್ದೀರಿ. ಭಯೋತ್ಪಾದನೆಯ ಸೂತ್ರದಾರರು ಈಗ ಭಾರತದ ಕಡೆಗೆ ಚಿತ್ತ ನೆಟ್ಟಿರುವುದರಿಂದ ಒಂದೇ ಒಂದು ಫಲಿತಾಂಶ ಹೊರಬೀಳುತ್ತದೆ ಎಂದು ಅರ್ಥ ಮಾಡಿಕೊಂಡಿದ್ದಾರೆ - ವಿನಾಶ! ಭಾರತದಲ್ಲಿ ಮುಗ್ಧ ಜನರ ರಕ್ತವನ್ನು ಚೆಲ್ಲುವುದರಿಂದ ಒಂದೇ ಒಂದು ಫಲಿತಾಂಶ ಇರುತ್ತದೆ - ವಿನಾಶ ಮತ್ತು ದೊಡ್ಡ ವಿನಾಶ! ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಈ ಭಯೋತ್ಪಾದಕರು ಅವಲಂಬಿಸಿರುವ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಕುಳಿತು ಶಾಂತಿಯಿಂದ ಉಸಿರಾಡಲು ಅಂತಹ ಸ್ಥಳವಿಲ್ಲ ಎಂದು ನೀವು ಪಾಕಿಸ್ತಾನಿ ಸೈನ್ಯಕ್ಕೆ ಹೇಳಿದ್ದೀರಿ. ನಾವು ಅವರ ನೆಲೆಗಳಿಗೆ ಪ್ರವೇಶಿಸಿ ಅವರನ್ನು ಕೊಲ್ಲುತ್ತೇವೆ ಮತ್ತು ಅವರಿಗೆ ತಪ್ಪಿಸಿಕೊಳ್ಳಲು ಒಂದು ಅವಕಾಶವನ್ನೂ ನೀಡುವುದಿಲ್ಲ. ನಮ್ಮ ಡ್ರೋನ್‌ಗಳು, ನಮ್ಮ ಕ್ಷಿಪಣಿಗಳು, ಪಾಕಿಸ್ತಾನವು ಅವರ ಬಗ್ಗೆ ಯೋಚಿಸುತ್ತಾ ಹಲವು ದಿನಗಳವರೆಗೆ ನಿದ್ರೆ ಮಾಡುವುದಿಲ್ಲ. कौशल दि खलाया चाल म, उड़ गया भयानक भाल म। नि र्भी क गया वह ढाल म, सरपट दौड़ा करवाल म।. ಈ ಸಾಲುಗಳನ್ನು ಮಹಾರಾಣಾ ಪ್ರತಾಪ್‌ನ ಪ್ರಸಿದ್ಧ ಕುದುರೆ ಚೇತಕ್ ಮೇಲೆ ಬರೆಯಲಾಗಿದೆ, ಆದರೆ ಈ ಸಾಲುಗಳು ಇಂದಿನ ಆಧುನಿಕ ಭಾರತೀಯ ಶಸ್ತ್ರಾಸ್ತ್ರಗಳಿಗೂ ಹೊಂದಿಕೆಯಾಗುತ್ತವೆ.

ನನ್ನ ಧೈರ್ಯಶಾಲಿ ಸ್ನೇಹಿತರೆ,

ಆಪರೇಷನ್ ಸಿಂದೂರ್ ಮೂಲಕ, ನೀವು ದೇಶದ ಆತ್ಮವಿಶ್ವಾಸ ಹೆಚ್ಚಿಸಿದ್ದೀರಿ, ದೇಶವನ್ನು ಏಕತೆಯ ದಾರದಲ್ಲಿ ಕಟ್ಟಿಹಾಕಿದ್ದೀರಿ ಮತ್ತು ಭಾರತದ ಗಡಿಗಳನ್ನು ರಕ್ಷಿಸಿದ್ದೀರಿ, ಭಾರತದ ಸ್ವಾಭಿಮಾನಕ್ಕೆ ಹೊಸ ಎತ್ತರ ನೀಡಿದ್ದೀರಿ.

ಸ್ನೇಹಿತರೆ,

ನೀವು ಹಿಂದೆಂದೂ ಕಾಣದ, ಊಹಿಸಲಾಗದ, ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ. ನಮ್ಮ ವಾಯುಪಡೆಯು ಪಾಕಿಸ್ತಾನದ ಆಳದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿತು, ಆಧುನಿಕ ತಂತ್ರಜ್ಞಾನ ಹೊಂದಿದ ವೃತ್ತಿಪರ ಪಡೆ ಮಾತ್ರ ಇದನ್ನು ಮಾಡಬಹುದು, ಗಡಿಯುದ್ದಕ್ಕೂ ಗುರಿಗಳನ್ನು ಭೇದಿಸಿ, ಕೇವಲ 20-25 ನಿಮಿಷಗಳಲ್ಲಿ ನಿಖರವಾದ ಗುರಿಗಳನ್ನು ಹೊಡೆದಿದ್ದೀರಿ. ನಿಮ್ಮ ವೇಗ ಮತ್ತು ನಿಖರತೆಯು ಎಷ್ಟರ ಮಟ್ಟಿಗೆ ಇತ್ತು ಎಂದರೆ ಶತ್ರುಗಳು ದಿಗ್ಭ್ರಮೆಗೊಂಡರು. ಅವರ ಹೃದಯ ಯಾವಾಗ ಛಿದ್ರವಾಯಿತು ಎಂಬುದು ಅವರಿಗೇ ತಿಳಿದಿರಲಿಲ್ಲ.

ಸ್ನೇಹಿತರೆ,

ನಮ್ಮ ಗುರಿ ಪಾಕಿಸ್ತಾನದೊಳಗಿನ ಭಯೋತ್ಪಾದಕ ಪ್ರಧಾನ ಕಚೇರಿಯನ್ನು ಹೊಡೆಯುವುದು, ಭಯೋತ್ಪಾದಕರನ್ನು ಹೊಡೆಯುವುದು. ಆದರೆ ಪಾಕಿಸ್ತಾನವು ತನ್ನ ಪ್ರಯಾಣಿಕ ವಿಮಾನಗಳನ್ನು ಬಳಸಿಕೊಂಡು ರೂಪಿಸಿದ ಪಿತೂರಿ, ನಾಗರಿಕ ವಿಮಾನಗಳು ಗೋಚರಿಸುವ ಆ ಕ್ಷಣ ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನಾನು ಊಹಿಸಬಲ್ಲೆ. ಆದರೆ ನೀವು ಬಹಳ ಎಚ್ಚರಿಕೆಯಿಂದ, ನಾಗರಿಕ ವಿಮಾನಗಳಿಗೆ ಹಾನಿಯಾಗದಂತೆ ಗುರಿಗಳನ್ನು ನಾಶಪಡಿಸಿದ್ದೀರಿ ಎಂಬ ಹೆಮ್ಮೆ ನನಗಿದೆ. ನೀವು ಅದಕ್ಕೆ ಸೂಕ್ತ ಉತ್ತರವನ್ನು ಸಹ ನೀಡಿದ್ದೀರಿ. ನೀವೆಲ್ಲರೂ ನಿಮ್ಮ ಗುರಿಗಳನ್ನು ಸಾಧಿಸಿದ್ದೀರಿ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವರ ವಾಯುನೆಲೆಗಳು ನಾಶವಾದವು ಮಾತ್ರವಲ್ಲ, ಅವರ ದುಷ್ಟ ಉದ್ದೇಶಗಳು ಮತ್ತು ಅವರ ಧೈರ್ಯ ಎರಡನ್ನೂ ಸೋಲಿಸಲಾಗಿದೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್ ನಿಂದ ನಿರಾಶೆಗೊಂಡ ಶತ್ರುಗಳು, ಈ ವಾಯುನೆಲೆಯ ಮೇಲೆ ಮತ್ತು ನಮ್ಮ ಅನೇಕ ವಾಯುನೆಲೆಗಳ ಮೇಲೆ ದಾಳಿ ಮಾಡಲು ಹಲವಾರು ಬಾರಿ ಪ್ರಯತ್ನಿಸಿದರು. ಅದು ನಮ್ಮನ್ನು ಮತ್ತೆ ಮತ್ತೆ ಗುರಿಯಾಗಿಸಿತು, ಆದರೆ ಪಾಕಿಸ್ತಾನದ ದುಷ್ಟ ಉದ್ದೇಶಗಳು ಪ್ರತಿ ಬಾರಿಯೂ ವಿಫಲವಾದವು. ಪಾಕಿಸ್ತಾನದ ಡ್ರೋನ್‌ಗಳು, ಅದರ ಯುಎವಿಗಳು, ಪಾಕಿಸ್ತಾನದ ವಿಮಾನಗಳು ಮತ್ತು ಅದರ ಕ್ಷಿಪಣಿಗಳು, ಎಲ್ಲವೂ ನಮ್ಮ ಬಲವಾದ ವಾಯು ರಕ್ಷಣೆಯ ಮುಂದೆ ನಾಶವಾದವು. ದೇಶದ ಎಲ್ಲಾ ವಾಯುನೆಲೆಗಳೊಂದಿಗೆ ಸಂಬಂಧಿಸಿದ ನಾಯಕತ್ವವನ್ನು, ಭಾರತೀಯ ವಾಯುಪಡೆಯ ಪ್ರತಿಯೊಬ್ಬ ವಾಯುಪಡೆ ಯೋಧರನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ, ನೀವು ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದೀರಿ.

ಸ್ನೇಹಿತರೆ,

ಭಯೋತ್ಪಾದನೆಯ ವಿರುದ್ಧ ಭಾರತದ ಲಕ್ಷ್ಮಣ ರೇಖೆ ಈಗ ತುಂಬಾ ಸ್ಪಷ್ಟವಾಗಿದೆ. ಈಗ ಮತ್ತೆ ಯಾವುದೇ ಭಯೋತ್ಪಾದಕ ದಾಳಿ ನಡೆದರೆ, ಭಾರತವು ತಕ್ಕ ಉತ್ತರ ನೀಡುತ್ತದೆ. ಸರ್ಜಿಕಲ್ ದಾಳಿ ಸಮಯದಲ್ಲಿ, ವಾಯುದಾಳಿಯ ಸಮಯದಲ್ಲಿ ನಾವು ಇದನ್ನು ನೋಡಿದ್ದೇವೆ, ಈಗ ಆಪರೇಷನ್ ಸಿಂದೂರ್ ಭಾರತದ ಹೊಸ ಸಾಮಾನ್ಯ ವಿಷಯವಾಗಿದೆ. ನಾನು ನಿನ್ನೆ ಹೇಳಿದಂತೆ, ಭಾರತವು ಈಗ 3 ತತ್ವಗಳನ್ನು ಅಳವಡಿಸಿಕೊಂಡಿದೆ, ಮೊದಲನೆಯದಾಗಿ - ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ನಾವು ನಮ್ಮದೇ ಆದ ರೀತಿಯಲ್ಲಿ, ನಮ್ಮದೇ ಆದ ನಿಯಮಗಳ ಮೇಲೆ, ನಮ್ಮದೇ ಸಮಯದಲ್ಲಿ ಉತ್ತರಿಸುತ್ತೇವೆ. ಎರಡನೆಯದಾಗಿ, ಭಾರತ ಯಾವುದೇ ಪರಮಾಣು ಬ್ಲ್ಯಾಕ್‌ಮೇಲ್ ಸಹಿಸುವುದಿಲ್ಲ. ಮೂರನೆಯದಾಗಿ, ಭಯೋತ್ಪಾದನೆ ಪೋಷಿಸುವ ಸರ್ಕಾರ ಮತ್ತು ಭಯೋತ್ಪಾದನೆಯ ಸೂತ್ರದಾರರನ್ನು ನಾವು ಪ್ರತ್ಯೇಕವಾಗಿ ನೋಡುವುದಿಲ್ಲ. ಭಾರತದ ಈ ಹೊಸ ರೂಪ, ಈ ಹೊಸ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಜಗತ್ತು ಸಹ ಮುಂದುವರಿಯುತ್ತಿದೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್‌ನ ಪ್ರತಿಯೊಂದು ಕ್ಷಣವೂ ಭಾರತೀಯ ಸಶಸ್ತ್ರಪಡೆಗಳ ಬಲಕ್ಕೆ ಸಾಕ್ಷಿಯಾಗಿದೆ. ಈ ಸಮಯದಲ್ಲಿ, ನಮ್ಮ ಪಡೆಗಳ ಸಮನ್ವಯವು ಅತ್ಯುತ್ತಮವಾಗಿತ್ತು ಎಂದು ನಾನು ನಿಜವಾಗಿಯೂ ಹೇಳುತ್ತೇನೆ. ಅದು ಭೂಸೇನೆ, ನೌಕಾಪಡೆ ಅಥವಾ ವಾಯುಪಡೆಯಾಗಿರಲಿ, ಎಲ್ಲರ ಸಮನ್ವಯವು ಅಗಾಧವಾಗಿತ್ತು. ನೌಕಾಪಡೆಯು ಸಮುದ್ರದ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. ಭೂಸೇನೆಯು ಗಡಿಯನ್ನು ಬಲಪಡಿಸಿತು. ಮತ್ತು ಭಾರತೀಯ ವಾಯುಪಡೆಯು ದಾಳಿ ಮಾಡಿ, ರಕ್ಷಿಸಿತು. ಬಿಎಸ್‌ಎಫ್ ಮತ್ತು ಇತರೆ ಪಡೆಗಳು ಸಹ ಅದ್ಭುತ ಸಾಮರ್ಥ್ಯಗಳನ್ನು ಪ್ರದರ್ಶಿಸಿವೆ. ಸಂಯೋಜಿತ ವಾಯು ಮತ್ತು ಭೂ ಯುದ್ಧ ವ್ಯವಸ್ಥೆಗಳು ಉತ್ತಮ ಕೆಲಸ ಮಾಡಿವೆ. ಏಕತೆ ಎಂದರೆ ಇದೇ, ಅದು ಈಗ ಭಾರತೀಯ ಪಡೆಗಳ ಬಲದ ಬಲವಾದ ಗುರುತಾಗಿದೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್‌ನಲ್ಲಿ, ಮಾನವಶಕ್ತಿಯ ಜತೆಗೆ, ಯಂತ್ರೋಪರಣಗಳ  ಸಮನ್ವಯವೂ ಅದ್ಭುತವಾಗಿತ್ತು. ಅನೇಕ ಯುದ್ಧಗಳನ್ನು ಕಂಡಿರುವ ಭಾರತದ ಸಾಂಪ್ರದಾಯಿಕ ವಾಯು ರಕ್ಷಣಾ ವ್ಯವಸ್ಥೆಗಳಾಗಲಿ ಅಥವಾ ಆಕಾಶ್‌ನಂತಹ ನಮ್ಮ ಮೇಡ್ ಇನ್ ಇಂಡಿಯಾ ವೇದಿಕೆಗಳಾಗಲಿ, ಎಸ್-400ನಂತಹ ಆಧುನಿಕ ಮತ್ತು ಬಲವಾದ ರಕ್ಷಣಾ ವ್ಯವಸ್ಥೆಗಳು ಅವುಗಳಿಗೆ ಅಭೂತಪೂರ್ವ ಶಕ್ತಿ ನೀಡಿವೆ. ಬಲವಾದ ಭದ್ರತಾ ಗುರಾಣಿ ಭಾರತದ ಗುರುತಾಗಿದೆ. ಪಾಕಿಸ್ತಾನದ ಅನೇಕ ಪ್ರಯತ್ನಗಳ ಹೊರತಾಗಿಯೂ, ನಮ್ಮ ವಾಯುನೆಲೆಗಳು ಅಥವಾ ನಮ್ಮ ಇತರೆ ರಕ್ಷಣಾ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ. ಇದರ ಸಂಪೂರ್ಣ ಶ್ರೇಯಸ್ಸು ನಿಮ್ಮೆಲ್ಲರಿಗೂ ಸಲ್ಲುತ್ತದೆ, ನಾನು ನಿಮ್ಮೆಲ್ಲರ ಬಗ್ಗೆ ಹೆಮ್ಮೆಪಡುತ್ತೇನೆ, ಗಡಿಯಲ್ಲಿ ನಿಯೋಜಿಸಲಾದ ಪ್ರತಿಯೊಬ್ಬ ಸೈನಿಕ, ಈ ಕಾರ್ಯಾಚರಣೆಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಇದರ ಶ್ರೇಯಸ್ಸಿಗೆ ಅರ್ಹರಾಗಿದ್ದಾರೆ.

ಸ್ನೇಹಿತರೆ,

ಇಂದು ಪಾಕಿಸ್ತಾನವು ಸ್ಪರ್ಧಿಸಲು ಸಾಧ್ಯವಾಗದ ಹೊಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಕಳೆದ ದಶಕದಲ್ಲಿ, ವಾಯುಪಡೆ ಸೇರಿದಂತೆ ನಮ್ಮ ಎಲ್ಲಾ ಪಡೆಗಳು ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ಪಡೆದಿವೆ. ಆದರೆ ಹೊಸ ತಂತ್ರಜ್ಞಾನದೊಂದಿಗೆ, ಸವಾಲುಗಳು ಅಷ್ಟೇ ದೊಡ್ಡದಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸಂಕೀರ್ಣ ಮತ್ತು ಅತ್ಯಾಧುನಿಕ ವ್ಯವಸ್ಥೆಗಳನ್ನು ನಿರ್ವಹಿಸುವುದು, ಅವುಗಳನ್ನು ದಕ್ಷತೆಯಿಂದ ನಿರ್ವಹಿಸುವುದು ಉತ್ತಮ ಕೌಶಲ್ಯ. ತಂತ್ರಜ್ಞಾನವನ್ನು ಕಾರ್ಯತಂತ್ರಗಳೊಂದಿಗೆ ಸಂಪರ್ಕಿಸುವ ಮೂಲಕ ನೀವು ತೋರಿಸಿದ್ದೀರಿ. ನೀವು ಈ ಹೋರಾಟದಲ್ಲಿ, ವಿಶ್ವದಲ್ಲೇ ಅತ್ಯುತ್ತಮರು ಎಂದು ಸಾಬೀತುಪಡಿಸಿದ್ದೀರಿ. ಭಾರತೀಯ ವಾಯುಪಡೆಯು ಈಗ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ, ದತ್ತಾಂಶ ಮತ್ತು ಡ್ರೋನ್‌ಗಳಿಂದಲೂ ಶತ್ರುಗಳನ್ನು ಸೋಲಿಸುವಲ್ಲಿ ಪರಿಣಿತರಾಗಿದ್ದೀರಿ.

ಸ್ನೇಹಿತರೆ,

ಪಾಕಿಸ್ತಾನದ ಕೋರಿಕೆಯ ಮೇರೆಗೆ ಭಾರತ ತನ್ನ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಪಾಕಿಸ್ತಾನ ಮತ್ತೆ ಭಯೋತ್ಪಾದಕ ಚಟುವಟಿಕೆ ಅಥವಾ ಮಿಲಿಟರಿ ತಾಕತ್ತು ತೋರಿಸಿದರೆ, ನಾವು ಅದಕ್ಕೆ ತಕ್ಕ ಉತ್ತರ  ನೀಡುತ್ತೇವೆ. ನಾವು ನಮ್ಮದೇ ಆದ ರೀತಿಯಲ್ಲಿ, ಈ ಉತ್ತರ ನೀಡುತ್ತೇವೆ. ಈ ನಿರ್ಧಾರದ ಹಿಂದಿನ ಅಡಿಪಾಯ, ಅದರ ಹಿಂದೆ ಅಡಗಿರುವ ನಂಬಿಕೆ, ನಿಮ್ಮೆಲ್ಲರ ತಾಳ್ಮೆ, ಶೌರ್ಯ, ಧೈರ್ಯ ಮತ್ತು ಜಾಗರೂಕತೆಯಾಗಿದೆ. ನೀವು ಈ ಧೈರ್ಯ, ಈ ಉತ್ಸಾಹ, ಈ ಮನೋಭಾವವನ್ನು ಕಾಪಾಡಿಕೊಳ್ಳಬೇಕು. ನಾವು ನಿರಂತರವಾಗಿ ಎಚ್ಚರವಾಗಿರಬೇಕು, ನಾವು ಸಿದ್ಧರಾಗಿರಬೇಕು. ಇದು ಹೊಸ ಭಾರತ ಎಂದು ನಾವು ಶತ್ರುಗಳಿಗೆ ನೆನಪಿಸುತ್ತಲೇ ಇರಬೇಕು. ಈ ನವ ಭಾರತವು ಶಾಂತಿಯನ್ನು ಬಯಸುತ್ತದೆ, ಆದರೆ, ಮಾನವತೆಯ ಮೇಲೆ ದಾಳಿಯಾದರೆ, ಯುದ್ಧರಂಗದಲ್ಲಿ ಶತ್ರುವನ್ನು ಹೇಗೆ ನಾಶ ಮಾಡಬೇಕೆಂದು ಈ ಭಾರತಕ್ಕೆ ಚೆನ್ನಾಗಿ ತಿಳಿದಿದೆ. ಈ ದೃಢಸಂಕಲ್ಪದೊಂದಿಗೆ, ಮತ್ತೊಮ್ಮೆ ಹೇಳೋಣ

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ವಂದೇ ಮಾತರಂ. ವಂದೇ ಮಾತರಂ.

ವಂದೇ ಮಾತರಂ. ವಂದೇ ಮಾತರಂ.

ವಂದೇ ಮಾತರಂ. ವಂದೇ ಮಾತರಂ.

ವಂದೇ ಮಾತರಂ.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
World Exclusive | Almost like a miracle: Putin praises India's economic rise since independence

Media Coverage

World Exclusive | Almost like a miracle: Putin praises India's economic rise since independence
NM on the go

Nm on the go

Always be the first to hear from the PM. Get the App Now!
...
India–Russia friendship has remained steadfast like the Pole Star: PM Modi during the joint press meet with Russian President Putin
December 05, 2025

Your Excellency, My Friend, राष्ट्रपति पुतिन,
दोनों देशों के delegates,
मीडिया के साथियों,
नमस्कार!
"दोबरी देन"!

आज भारत और रूस के तेईसवें शिखर सम्मेलन में राष्ट्रपति पुतिन का स्वागत करते हुए मुझे बहुत खुशी हो रही है। उनकी यात्रा ऐसे समय हो रही है जब हमारे द्विपक्षीय संबंध कई ऐतिहासिक milestones के दौर से गुजर रहे हैं। ठीक 25 वर्ष पहले राष्ट्रपति पुतिन ने हमारी Strategic Partnership की नींव रखी थी। 15 वर्ष पहले 2010 में हमारी साझेदारी को "Special and Privileged Strategic Partnership” का दर्जा मिला।

पिछले ढाई दशक से उन्होंने अपने नेतृत्व और दूरदृष्टि से इन संबंधों को निरंतर सींचा है। हर परिस्थिति में उनके नेतृत्व ने आपसी संबंधों को नई ऊंचाई दी है। भारत के प्रति इस गहरी मित्रता और अटूट प्रतिबद्धता के लिए मैं राष्ट्रपति पुतिन का, मेरे मित्र का, हृदय से आभार व्यक्त करता हूँ।

Friends,

पिछले आठ दशकों में विश्व में अनेक उतार चढ़ाव आए हैं। मानवता को अनेक चुनौतियों और संकटों से गुज़रना पड़ा है। और इन सबके बीच भी भारत–रूस मित्रता एक ध्रुव तारे की तरह बनी रही है।परस्पर सम्मान और गहरे विश्वास पर टिके ये संबंध समय की हर कसौटी पर हमेशा खरे उतरे हैं। आज हमने इस नींव को और मजबूत करने के लिए सहयोग के सभी पहलुओं पर चर्चा की। आर्थिक सहयोग को नई ऊँचाइयों पर ले जाना हमारी साझा प्राथमिकता है। इसे साकार करने के लिए आज हमने 2030 तक के लिए एक Economic Cooperation प्रोग्राम पर सहमति बनाई है। इससे हमारा व्यापार और निवेश diversified, balanced, और sustainable बनेगा, और सहयोग के क्षेत्रों में नए आयाम भी जुड़ेंगे।

आज राष्ट्रपति पुतिन और मुझे India–Russia Business Forum में शामिल होने का अवसर मिलेगा। मुझे पूरा विश्वास है कि ये मंच हमारे business संबंधों को नई ताकत देगा। इससे export, co-production और co-innovation के नए दरवाजे भी खुलेंगे।

दोनों पक्ष यूरेशियन इकॉनॉमिक यूनियन के साथ FTA के शीघ्र समापन के लिए प्रयास कर रहे हैं। कृषि और Fertilisers के क्षेत्र में हमारा करीबी सहयोग,food सिक्युरिटी और किसान कल्याण के लिए महत्वपूर्ण है। मुझे खुशी है कि इसे आगे बढ़ाते हुए अब दोनों पक्ष साथ मिलकर यूरिया उत्पादन के प्रयास कर रहे हैं।

Friends,

दोनों देशों के बीच connectivity बढ़ाना हमारी मुख्य प्राथमिकता है। हम INSTC, Northern Sea Route, चेन्नई - व्लादिवोस्टोक Corridors पर नई ऊर्जा के साथ आगे बढ़ेंगे। मुजे खुशी है कि अब हम भारत के seafarersकी polar waters में ट्रेनिंग के लिए सहयोग करेंगे। यह आर्कटिक में हमारे सहयोग को नई ताकत तो देगा ही, साथ ही इससे भारत के युवाओं के लिए रोजगार के नए अवसर बनेंगे।

उसी प्रकार से Shipbuilding में हमारा गहरा सहयोग Make in India को सशक्त बनाने का सामर्थ्य रखता है। यह हमारेwin-win सहयोग का एक और उत्तम उदाहरण है, जिससे jobs, skills और regional connectivity – सभी को बल मिलेगा।

ऊर्जा सुरक्षा भारत–रूस साझेदारी का मजबूत और महत्वपूर्ण स्तंभ रहा है। Civil Nuclear Energy के क्षेत्र में हमारा दशकों पुराना सहयोग, Clean Energy की हमारी साझा प्राथमिकताओं को सार्थक बनाने में महत्वपूर्ण रहा है। हम इस win-win सहयोग को जारी रखेंगे।

Critical Minerals में हमारा सहयोग पूरे विश्व में secure और diversified supply chains सुनिश्चित करने के लिए महत्वपूर्ण है। इससे clean energy, high-tech manufacturing और new age industries में हमारी साझेदारी को ठोस समर्थन मिलेगा।

Friends,

भारत और रूस के संबंधों में हमारे सांस्कृतिक सहयोग और people-to-people ties का विशेष महत्व रहा है। दशकों से दोनों देशों के लोगों में एक-दूसरे के प्रति स्नेह, सम्मान, और आत्मीयताका भाव रहा है। इन संबंधों को और मजबूत करने के लिए हमने कई नए कदम उठाए हैं।

हाल ही में रूस में भारत के दो नए Consulates खोले गए हैं। इससे दोनों देशों के नागरिकों के बीच संपर्क और सुगम होगा, और आपसी नज़दीकियाँ बढ़ेंगी। इस वर्ष अक्टूबर में लाखों श्रद्धालुओं को "काल्मिकिया” में International Buddhist Forum मे भगवान बुद्ध के पवित्र अवशेषों का आशीर्वाद मिला।

मुझे खुशी है कि शीघ्र ही हम रूसी नागरिकों के लिए निशुल्क 30 day e-tourist visa और 30-day Group Tourist Visa की शुरुआत करने जा रहे हैं।

Manpower Mobility हमारे लोगों को जोड़ने के साथ-साथ दोनों देशों के लिए नई ताकत और नए अवसर create करेगी। मुझे खुशी है इसे बढ़ावा देने के लिए आज दो समझौतेकिए गए हैं। हम मिलकर vocational education, skilling और training पर भी काम करेंगे। हम दोनों देशों के students, scholars और खिलाड़ियों का आदान-प्रदान भी बढ़ाएंगे।

Friends,

आज हमने क्षेत्रीय और वैश्विक मुद्दों पर भी चर्चा की। यूक्रेन के संबंध में भारत ने शुरुआत से शांति का पक्ष रखा है। हम इस विषय के शांतिपूर्ण और स्थाई समाधान के लिए किए जा रहे सभी प्रयासों का स्वागत करते हैं। भारत सदैव अपना योगदान देने के लिए तैयार रहा है और आगे भी रहेगा।

आतंकवाद के विरुद्ध लड़ाई में भारत और रूस ने लंबे समय से कंधे से कंधा मिलाकर सहयोग किया है। पहलगाम में हुआ आतंकी हमला हो या क्रोकस City Hall पर किया गया कायरतापूर्ण आघात — इन सभी घटनाओं की जड़ एक ही है। भारत का अटल विश्वास है कि आतंकवाद मानवता के मूल्यों पर सीधा प्रहार है और इसके विरुद्ध वैश्विक एकता ही हमारी सबसे बड़ी ताक़त है।

भारत और रूस के बीच UN, G20, BRICS, SCO तथा अन्य मंचों पर करीबी सहयोग रहा है। करीबी तालमेल के साथ आगे बढ़ते हुए, हम इन सभी मंचों पर अपना संवाद और सहयोग जारी रखेंगे।

Excellency,

मुझे पूरा विश्वास है कि आने वाले समय में हमारी मित्रता हमें global challenges का सामना करने की शक्ति देगी — और यही भरोसा हमारे साझा भविष्य को और समृद्ध करेगा।

मैं एक बार फिर आपको और आपके पूरे delegation को भारत यात्रा के लिए बहुत बहुत धन्यवाद देता हूँ।