ಭಾರತದ ಯಶಸ್ಸಿನ ಹಾದಿ ಆತ್ಮನಿರ್ಭರ ಭಾರತದ ಜೊತೆ ಬಾಹ್ಯಾಕಾಶ ಗುರಿಗಳನ್ನು ಅನುಸರಿಸುವುದರಲ್ಲಿದೆ: ಪ್ರಧಾನಮಂತ್ರಿ
ಭವಿಷ್ಯದ ಕಾರ್ಯಾಚರಣೆಗಳನ್ನು ಮುನ್ನಡೆಸಲು ಭಾರತವು 40–50 ಸಿದ್ಧ ಗಗನಯಾತ್ರಿಗಳ ತಂಡವನ್ನು ರೂಪಿಸುವ ಅಗತ್ಯವಿದೆ: ಪ್ರಧಾನಮಂತ್ರಿ
ಭಾರತವು ಈಗ ಎರಡು ಕಾರ್ಯತಂತ್ರದ ಮಿಷನ್ ಗಳನ್ನು ಹೊಂದಿದೆ - ಅವೆಂದರೆ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನಯಾನ: ಪ್ರಧಾನಮಂತ್ರಿ
ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಲ್ಲಿ ಗಗನಯಾತ್ರಿ ಶುಕ್ಲಾ ಪಯಣವು ಕೇವಲ ಮೊದಲ ಹೆಜ್ಜೆಯಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ - ನೀವೆಲ್ಲರೂ ಅಸಾಧಾರಣವಾದ ಪ್ರಯಾಣ ಮಾಡಿ ಹಿಂತಿರುಗಿದ್ದೀರಿ...

ಶುಭಾಂಶು ಶುಕ್ಲಾ - ಹೌದು ಸರ್.

ಪ್ರಧಾನಮಂತ್ರಿ - ನೀವು ವಿಭಿನ್ನವಾದದ್ದನ್ನು ಅನುಭವಿಸಿರಬೇಕು. ನಾನು ಹೇಳಬೇಕು ಅಂದರೆ, ನಿಮಗೆ ಏನನಿಸಿತು?

ಶುಭಾಂಶು ಶುಕ್ಲಾ – ಸರ್, ನಾವು ಅಲ್ಲಿಗೆ ಹೋದಾಗ ವಾತಾವರಣ, ಪರಿಸರ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಗುರುತ್ವಾಕರ್ಷಣೆ ಇಲ್ಲ.

ಪ್ರಧಾನಮಂತ್ರಿ – ಹಾಗಾದರೆ, ಆಸನ ವ್ಯವಸ್ಥೆಗೆ ಸಂಬಂಧಿಸಿದಂತೆ, ಅದು ಹಾಗೆಯೇ ಉಳಿದಿದೆಯೇ?

ಶುಭಾಂಶು ಶುಕ್ಲಾ - ಹೌದು, ಸರ್, ಅದು ಹಾಗೆಯೇ ಉಳಿದಿದೆ.

ಪ್ರಧಾನಮಂತ್ರಿ - ನೀವು ಆ ಸ್ಥಳದಲ್ಲೇ 23-24 ಗಂಟೆಗಳ ಕಾಲ ಕಳೆಯಬೇಕೇ?

ಶುಭಾಂಶು ಶುಕ್ಲಾ - ಹೌದು, ಸರ್. ಆದರೆ ನೀವು ಬಾಹ್ಯಾಕಾಶ ತಲುಪಿದ ನಂತರ, ನೀವು ನಿಮ್ಮ ಆಸನ ಬಿಚ್ಚಬಹುದು, ನಿಮ್ಮ ಸರಂಜಾಮುಗಳನ್ನು ಬಿಚ್ಚಬಹುದು, ನಂತರ ನೀವು ಕ್ಯಾಪ್ಸುಲ್ ಒಳಗೆ ತೇಲಬಹುದು, ಚಲಿಸಬಹುದು ಮತ್ತು ಕೆಲಸಗಳನ್ನು ಮಾಡಬಹುದು.

 

ಪ್ರಧಾನಮಂತ್ರಿ - ಒಳಗೆ ತುಂಬಾ ಸ್ಥಳವಿದೆಯೇ?

ಶುಭಾಂಶು ಶುಕ್ಲಾ - ಹೆಚ್ಚು ಅಲ್ಲ, ಸರ್, ಆದರೆ ಸ್ವಲ್ಪ ಇದೆ.

ಪ್ರಧಾನಮಂತ್ರಿ - ಅಂದರೆ ಅದು ನಿಮ್ಮ ಫೈಟರ್ ಜೆಟ್‌ನ ಕಾಕ್‌ಪಿಟ್‌ಗಿಂತ ಉತ್ತಮವಾಗಿದೆಯೇ?

ಶುಭಾಂಶು ಶುಕ್ಲಾ – ಹಾ ಅದಕ್ಕಿಂತ ಉತ್ತಮ, ಸರ್. ಆದರೆ ನಾವು ಅಲ್ಲಿಗೆ ತಲುಪಿದ ನಂತರ, ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಉದಾಹರಣೆಗೆ, ಹೃದಯ ಬಡಿತ ನಿಧಾನವಾಗುತ್ತದೆ. ಈ ರೀತಿಯ ಬದಲಾವಣೆಗಳು ಸಂಭವಿಸುತ್ತವೆ, ಆದರೆ 4-5 ದಿನಗಳಲ್ಲಿ ದೇಹವು ಅದಕ್ಕೆ ಒಗ್ಗಿಕೊಳ್ಳುತ್ತದೆ, ಆಗ ನೀವು ಅಲ್ಲಿ ಸಾಮಾನ್ಯರಾಗುತ್ತೀರಿ. ನೀವು ಹಿಂತಿರುಗಿದಾಗಲೂ, ಮತ್ತೆ ಅದೇ ಬದಲಾವಣೆಗಳು ಸಂಭವಿಸುತ್ತವೆ. ನೀವು ಎಷ್ಟೇ ಆರೋಗ್ಯವಾಗಿದ್ದರೂ, ಹಿಂತಿರುಗಿದ ತಕ್ಷಣ ನೀವು ನಡೆಯಲು ಸಾಧ್ಯವಿಲ್ಲ. ವೈಯಕ್ತಿಕವಾಗಿ, ನನಗೆ ಅನಾರೋಗ್ಯ ಅನಿಸಲಿಲ್ಲ, ನಾನು ಚೆನ್ನಾಗಿದ್ದೆ, ಆದರೆ, ನಾನು ನನ್ನ ಮೊದಲ ಹೆಜ್ಜೆ ಇಟ್ಟಾಗ, ನಾನು ಬೀಳುವ ಹಂತದಲ್ಲಿದ್ದೆ, ಜನರು ನನ್ನನ್ನು ಹಿಡಿದಿಟ್ಟುಕೊಂಡರು. ನಂತರ 2ನೇ ಮತ್ತು 3ನೇ ಹೆಜ್ಜೆ ಇಟ್ಟಾಗ,  ನಡೆಯಬೇಕೆಂದು ಮನಸ್ಸಿಗೆ ಬಂದರೂ, ಇದು ಈಗ ಹೊಸ ಪರಿಸರ ಎಂದು ಅರ್ಥ ಮಾಡಿಕೊಳ್ಳಲು ಮೆದುಳು ಸಮಯ ತೆಗೆದುಕೊಳ್ಳುತ್ತದೆ.

ಪ್ರಧಾನಮಂತ್ರಿ – ಹಾಗಾದರೆ ಇದು ಕೇವಲ ದೇಹದ ತರಬೇತಿಯಲ್ಲ, ಬದಲಾಗಿ ಮನಸ್ಸಿನ ತರಬೇತಿಯೇ ಹೆಚ್ಚು?

ಶುಭಾಂಶು ಶುಕ್ಲಾ – ಹೌದು ಸರ್, ಇದು ಮನಸ್ಸಿನ ತರಬೇತಿ. ದೇಹಕ್ಕೆ ಶಕ್ತಿ ಇದೆ, ಸ್ನಾಯುಗಳಿಗೆ ಶಕ್ತಿ ಇದೆ, ಆದರೆ ಮೆದುಳನ್ನು ಪುನರ್ನಿರ್ಮಿಸಬೇಕು, ಇದು ಹೊಸ ಪರಿಸರ ಎಂದು ಅದು ಮತ್ತೆ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ನಡೆಯಲು, ಇಷ್ಟೊಂದು ಪ್ರಯತ್ನ ಅಥವಾ ಶಕ್ತಿ ಬೇಕಾಗುತ್ತದೆ. ಅದನ್ನು ಮತ್ತೆ ಕಲಿಯಬೇಕು ಸರ್.

ಪ್ರಧಾನಮಂತ್ರಿ – ಯಾರು ಅಲ್ಲಿ ಹೆಚ್ಚು ಕಾಲ ಇದ್ದರು, ಎಷ್ಟು ಕಾಲ?

 

ಶುಭಾಂಶು ಶುಕ್ಲಾ – ಸರ್, ಪ್ರಸ್ತುತ ಕೆಲವು ಜನರು ಸುಮಾರು 8 ತಿಂಗಳ ಕಾಲ ಸತತವಾಗಿ ಉಳಿದಿದ್ದಾರೆ. ಈ ಕಾರ್ಯಾಚರಣೆಯೊಂದಿಗೆ ಅಂತಹ 8 ತಿಂಗಳ ಅವಧಿ ಪ್ರಾರಂಭವಾಗಿದೆ.

ಪ್ರಧಾನಮಂತ್ರಿ –ನೀವು ಅಲ್ಲಿ ಭೇಟಿಯಾದವರು…

ಶುಭಾಂಶು ಶುಕ್ಲಾ – ಹೌದು, ಅವರಲ್ಲಿ ಕೆಲವರು ಡಿಸೆಂಬರ್‌ನಲ್ಲಿ ಹಿಂತಿರುಗಲಿದ್ದಾರೆ.

ಪ್ರಧಾನಮಂತ್ರಿ – ಹೆಸರುಕಾಳು ಮತ್ತು ಮೆಂತ್ಯದ ಮಹತ್ವವೇನು?

ಶುಭಾಂಶು ಶುಕ್ಲಾ - ಬಹಳ ಮಹತ್ವದ್ದು ಸರ್. ಜನರಿಗೆ ಈ ವಿಷಯಗಳ ಬಗ್ಗೆ ತಿಳಿದಿಲ್ಲದಿರುವುದು ನನಗೆ ತುಂಬಾ ಆಶ್ಚರ್ಯ ಮೂಡಿಸಿತು. ಬಾಹ್ಯಾಕಾಶ ನಿಲ್ದಾಣದಲ್ಲಿ ಆಹಾರವೇ ಬಹಳ ದೊಡ್ಡ ಸವಾಲಾಗಿದೆ. ಸ್ಥಳ ಸೀಮಿತವಾಗಿದೆ, ಸರಕು ದುಬಾರಿಯಾಗಿದೆ. ಗರಿಷ್ಠ ಕ್ಯಾಲೋರಿಗಳು ಮತ್ತು ಪೌಷ್ಟಿಕಾಂಶವನ್ನು ಕನಿಷ್ಠ ಜಾಗದಲ್ಲಿ ಪ್ಯಾಕ್ ಮಾಡಲು ಯಾವಾಗಲೂ ಪ್ರಯತ್ನವಿದೆ. ಎಲ್ಲಾ ರೀತಿಯ ಪ್ರಯೋಗಗಳು ನಡೆಯುತ್ತಿವೆ ಸರ್. ಇವುಗಳನ್ನು ಬೆಳೆಸುವುದು ತುಂಬಾ ಸರಳವಾಗಿದೆ, ಅವುಗಳಿಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚಿನ ಸಂಪನ್ಮೂಲಗಳು ಅಗತ್ಯವಿಲ್ಲ. ಒಂದು ಸಣ್ಣ ತಟ್ಟೆಯಲ್ಲಿ ಸ್ವಲ್ಪ ನೀರು ಇರಿಸಿ, ಅವುಗಳನ್ನು ಬಿಟ್ಟರೆ ಕೇವಲ ಎಂಟೇ ದಿನಗಳಲ್ಲಿ ಮೊಳಕೆ ಚೆನ್ನಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಸರ್. ಅವುಗಳನ್ನು ನಿಲ್ದಾಣದಲ್ಲೇ ಬೆಳೆಯುವುದನ್ನು ನಾನು ನೋಡಿದೆ. ಇವು ನಮ್ಮ ದೇಶದ ರಹಸ್ಯಗಳು, ನಾನು ಹೇಳುತ್ತೇನೆ ಸರ್. ಸೂಕ್ಷ್ಮ ಗುರುತ್ವಾಕರ್ಷಣೆಯ ಸಂಶೋಧನೆ ಮಾಡಲು ನಮಗೆ ಅವಕಾಶ ಸಿಕ್ಕ ತಕ್ಷಣ, ಇವುಗಳು ಅಲ್ಲಿಗೆ ತಲುಪಿದವು. ಯಾರಿಗೆ ಗೊತ್ತು, ಇದು ನಮ್ಮ ಆಹಾರ ಭದ್ರತಾ ಸಮಸ್ಯೆಯನ್ನು ಪರಿಹರಿಸಬಹುದು. ಗಗನಯಾತ್ರಿಗಳಿಗೆ, ಇದು ನಿಲ್ದಾಣದಲ್ಲಿ ಉಪಯುಕ್ತವಾಗಿದೆ, ಅವುಗಳನ್ನು ಅಲ್ಲಿ ಪರಿಹರಿಸಿದರೆ, ಭೂಮಿಯ ಮೇಲಿನ ಆಹಾರ ಭದ್ರತಾ ಸವಾಲುಗಳನ್ನು ಪರಿಹರಿಸುವಲ್ಲಿ ಇದು ನಮಗೆ ಸಹಾಯ ಮಾಡುತ್ತದೆ ಸರ್.

ಪ್ರಧಾನಮಂತ್ರಿ - ಈ ಬಾರಿ ಒಬ್ಬ ಭಾರತೀಯ ಅಲ್ಲಿಗೆ ತಲುಪಿದಾಗ, ಬೇರೆ ಬೇರೆ ದೇಶಗಳಿಂದ ಬಂದಿದ್ದ ಇತರರಿಗೆ ಒಬ್ಬ ಭಾರತೀಯನನ್ನು ನೋಡಿ ಏನನಿಸಿತು? ಅವರು ಏನು ಕೇಳಿದರು ಮತ್ತು ಏನು ಮಾತನಾಡಿದರು?

ಶುಭಾಂಶು ಶುಕ್ಲಾ – ಹೌದು ಸರ್. ಕಳೆದ ವರ್ಷ ನನ್ನ ವೈಯಕ್ತಿಕ ಅನುಭವವೆಂದರೆ, ನಾನು ಎಲ್ಲಿಗೆ ಹೋದರೂ ಮತ್ತು ನಾನು ಯಾರನ್ನು ಭೇಟಿಯಾದರೂ, ಅವರು ನನ್ನನ್ನು ಭೇಟಿಯಾಗಲು, ಮಾತನಾಡಲು ತುಂಬಾ ಸಂತೋಷಪಟ್ಟರು. ನಾವು ಏನು ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಹೇಗೆ ಮಾಡುತ್ತಿದ್ದೇವೆ ಎಂಬುದನ್ನು ಕೇಳಲು ತುಂಬಾ ಉತ್ಸುಕರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಗತಿಯ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಗಗನಯಾನದ ಬಗ್ಗೆ ನನಗಿಂತಲೂ ಹೆಚ್ಚಾಗಿ ಅನೇಕ ಜನರು ಉತ್ಸುಕರಾಗಿದ್ದಾರೆ. ಸರ್. ನಮ್ಮ ಮಿಷನ್ ಯಾವಾಗ ಪ್ರಾರಂಭವಾಗುತ್ತದೆ ಎಂದು ಅವರು ನನ್ನನ್ನು ಕೇಳುತ್ತಿದರು. ವಾಸ್ತವವಾಗಿ, ನನ್ನ ಸಿಬ್ಬಂದಿ “ನಮ್ಮ ವಾಹನದಲ್ಲಿ ಕುಳಿತುಕೊಳ್ಳಲು ಬಯಸುವ ತಕ್ಷಣ” ಎಂಬ ಟಿಪ್ಪಣಿ ಇರುವ ಪುಸ್ತಕಕ್ಕೆ ನನ್ನ ಸಹಿ ತೆಗೆದುಕೊಂಡರು. ಗಗನಯಾನ ಉಡಾವಣೆಯಾದಾಗಲೆಲ್ಲಾ ನಾನು ಅವರನ್ನು ಖಂಡಿತ ಆಹ್ವಾನಿಸಬೇಕು. ಸರ್ ನನಗೆ ಅನಿಸುತ್ತಿದೆ, ಅವರಲ್ಲಿ ಅಪಾರ ಉತ್ಸಾಹವಿದೆ.

 

ಪ್ರಧಾನಮಂತ್ರಿ - ಅವರು ನಿಮ್ಮನ್ನು ಟೆಕ್ ಜೀನಿಯಸ್(ತಂತ್ರಜ್ಞಾನ ಪ್ರತಿಭೆ) ಎಂದು ಕರೆಯುತ್ತಿದ್ದರು. ಕಾರಣವೇನು?

ಶುಭಾಂಶು ಶುಕ್ಲಾ - ಇಲ್ಲ ಸರ್. ಅವರು ಹಾಗೆ ಹೇಳುವುದರಲ್ಲಿ ತುಂಬಾ ಸೌಜನ್ಯ ತೋರಿದರು ಎಂದು ನಾನು ಭಾವಿಸುತ್ತೇನೆ. ಆದರೆ ಸರ್, ವಾಯುಪಡೆಯಲ್ಲಿ ನನ್ನ ತರಬೇತಿ ಮತ್ತು ನಂತರ ಪರೀಕ್ಷಾ ಪೈಲಟ್ ತರಬೇತಿ ತುಂಬಾ ಕಠಿಣವಾಗಿತ್ತು. ನಾನು ವಾಯುಪಡೆಗೆ ಸೇರಿದಾಗ, ನಾನು ಹೆಚ್ಚು ಅಧ್ಯಯನ ಮಾಡಬೇಕಾಗಿಲ್ಲ ಎಂದುಕೊಂಡಿದ್ದೆ. ಆದರೆ ನಂತರ ನಾನು ಹೆಚ್ಚು ಅಧ್ಯಯನ ಮಾಡಬೇಕಾಯಿತು.  ಪರೀಕ್ಷಾ ಪೈಲಟ್ ಆದ ನಂತರ, ಅದು ಪ್ರಾಯೋಗಿಕವಾಗಿ ಎಂಜಿನಿಯರಿಂಗ್ ವಿಭಾಗದಂತಿತ್ತು. ನಮಗೆ ಮತ್ತಷ್ಟು ತರಬೇತಿ ನೀಡಲಾಯಿತು, ನಮ್ಮ ವಿಜ್ಞಾನಿಗಳು 2-3-4 ವರ್ಷಗಳ ಕಾಲ ನಮಗೆ ಕಲಿಸಿದರು. ಆದ್ದರಿಂದ ಸರ್, ನಾವು ಈ ಕಾರ್ಯಾಚರಣೆಗೆ ಹೋದಾಗ ನಾವು ತುಂಬಾ ಚೆನ್ನಾಗಿ ಸಿದ್ಧರಾಗಿದ್ದೆವು ಎಂದು ನಾನು ಭಾವಿಸುತ್ತೇನೆ.

ಪ್ರಧಾನಮಂತ್ರಿ - ನಾನು ನಿಮಗೆ ನೀಡಿದ ಹೋಮ್ ವರ್ಕ್ - ನೀವು ಅದರಲ್ಲಿ ಎಷ್ಟು ಪ್ರಗತಿ ಸಾಧಿಸಿದ್ದೀರಿ?

ಶುಭಾಂಶು ಶುಕ್ಲಾ - ಉತ್ತಮ ಪ್ರಗತಿ ಕಂಡುಬಂದಿದೆ ಸರ್. ನಂತರ ಜನರು ನನ್ನೊಂದಿಗೆ ತುಂಬಾ ನಕ್ಕರು. ಆ ಸಭೆಯ ನಂತರ, ಅವರು ನನ್ನನ್ನು ಕೀಟಲೆ ಮಾಡಿ, "ನಿಮ್ಮ ಪ್ರಧಾನಮಂತ್ರಿ ನಿಮಗೆ ಹೋಂ ವರ್ಕ್ ನೀಡಿದ್ದಾರೆ" ಎಂದು ಹೇಳಿದರು. ನಾನು ಹೌದು ಎಂದು ಹೇಳಿದೆ. ನಾವು ಇದನ್ನು ಅರಿತುಕೊಳ್ಳುವುದು ಬಹಳ ಅಗತ್ಯವಾಗಿತ್ತು - ಅದಕ್ಕಾಗಿಯೇ ನಾನು ಹೋದೆ. ಮಿಷನ್ ಯಶಸ್ವಿಯಾಯಿತು ಸರ್, ನಾವು ಹಿಂತಿರುಗಿದ್ದೇವೆ. ಆದರೆ ಈ ಮಿಷನ್ ಅಂತ್ಯವಲ್ಲ, ಇದು ಆರಂಭ.

ಪ್ರಧಾನಮಂತ್ರಿ - ನಾನು ಆ ದಿನವೂ ಅದನ್ನೇ ಹೇಳಿದ್ದೆ.

ಶುಭಾಂಶು ಶುಕ್ಲಾ – ಹೌದು ಸರ್, ನೀವು ಆ ದಿನ ಹೇಳಿದ್ದಿರಿ...

ಪ್ರಧಾನಮಂತ್ರಿ - ಇದು ನಮ್ಮ ಮೊದಲ ಹೆಜ್ಜೆ.

ಶುಭಾಂಶು ಶುಕ್ಲಾ – ನಿಜಕ್ಕೂ ಸರ್, ಮೊದಲ ಹೆಜ್ಜೆ. ಈ ಮೊದಲ ಹೆಜ್ಜೆಯ ಮುಖ್ಯ ಉದ್ದೇಶವೆಂದರೆ, ನಾವು ಅದರಿಂದ ಎಷ್ಟು ಕಲಿಯಬಹುದು ಮತ್ತು ನಮ್ಮೊಂದಿಗೆ ಹಿಂತಿರುಗಿ ತರಬಹುದು ಎಂಬುದು.

 

ಪ್ರಧಾನಮಂತ್ರಿ – ನೋಡಿ, ನಮ್ಮ ಮುಂದಿರುವ ಪ್ರಮುಖ ಕಾರ್ಯವೆಂದರೆ ಗಗನಯಾತ್ರಿಗಳ ದೊಡ್ಡ ಗುಂಪು ಹೊಂದುವುದು. ನಮ್ಮಲ್ಲಿ 40-50 ಜನರು ಸಿದ್ಧರಾಗಿರಬೇಕು. ಇಲ್ಲಿಯವರೆಗೆ, ಬಹುಶಃ ಕೆಲವೇ ಮಕ್ಕಳು ಇದನ್ನು ಆಶಿಸಲು ಯೋಗ್ಯವಾದ ವಿಷಯ ಎಂದು ಭಾವಿಸಿದ್ದರು. ಆದರೆ ನಿಮ್ಮ ಪ್ರಯಾಣದ ನಂತರ, ಬಹುಶಃ ನಂಬಿಕೆ ಬಲಗೊಳ್ಳುತ್ತದೆ ಮತ್ತು ಅದರ ಕಡೆಗೆ ಆಕರ್ಷಣೆಯ ಪ್ರಜ್ಞೆಯೂ ಹೆಚ್ಚಾಗುತ್ತದೆ.

ಶುಭಾಂಶು ಶುಕ್ಲಾ – ಸರ್ ನಾನು ಮಗುವಾಗಿದ್ದಾಗ,  ರಾಕೇಶ್ ಶರ್ಮಾ ಸರ್ 1984ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ ಗಗನಯಾತ್ರಿಯಾಗುವ ಆಲೋಚನೆ ನನ್ನ ಮನಸ್ಸಿಗೆ ಎಂದಿಗೂ ಬರಲಿಲ್ಲ. ಏಕೆಂದರೆ ನಮಗೆ ಯಾವುದೇ ಕಾರ್ಯಕ್ರಮವಿರಲಿಲ್ಲ, ಏನೂ ಇರಲಿಲ್ಲ ಸರ್. ಆದರೆ ಈ ಬಾರಿ, ನಾನು ನಿಲ್ದಾಣದಲ್ಲಿದ್ದಾಗ, ಮಕ್ಕಳೊಂದಿಗೆ 3 ಬಾರಿ ಸಂವಹನ ನಡೆಸಿದೆ - ಒಮ್ಮೆ ನೇರ ಕಾರ್ಯಕ್ರಮದಲ್ಲಿ ಮತ್ತು 2 ಬಾರಿ ರೇಡಿಯೊ ಮೂಲಕ. 3 ಕಾರ್ಯಕ್ರಮಗಳಲ್ಲಿ ಸರ್, "ನಾನು ಹೇಗೆ ಗಗನಯಾತ್ರಿಯಾಗಬಹುದು?" ಎಂದು ಕೇಳುವ ಕನಿಷ್ಠ ಒಂದು ಮಗು ಯಾವಾಗಲೂ ಇರುತ್ತಿತ್ತು. ಇದು ನಮ್ಮ ದೇಶಕ್ಕೆ ಒಂದು ದೊಡ್ಡ ಯಶಸ್ಸು ಎಂದು ನಾನು ಭಾವಿಸುತ್ತೇನೆ ಸರ್ - ಇಂದಿನ ಭಾರತದಲ್ಲಿ, ಮಗು ಕೇವಲ ಕನಸು ಕಾಣುವುದಿಲ್ಲ, ಅದು ಸಾಧ್ಯ ಎಂದು ಅವನಿಗೆ ತಿಳಿದಿದೆ, ಒಂದು ಆಯ್ಕೆ ಇದೆ ಎಂದು ಅವನಿಗೆ ತಿಳಿದಿದೆ, ಹಾಗಾಗಿ, ಅವನು ನಿಜವಾಗಿಯೂ ಗಗನಯಾತ್ರಿಯಾಗಬಹುದು. ನೀವು ಹೇಳಿದಂತೆ ಸರ್, ಈಗ ಅದು ನನ್ನ ಜವಾಬ್ದಾರಿಯಾಗಿದೆ. ನನ್ನ ದೇಶವನ್ನು ಪ್ರತಿನಿಧಿಸಲು ನನಗೆ ತುಂಬಾ ಸವಲತ್ತು ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ. ಈಗ ಈ ಹಂತವನ್ನು ತಲುಪಲು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ.

ಪ್ರಧಾನಮಂತ್ರಿ - ಈಗ, ಬಾಹ್ಯಾಕಾಶ ನಿಲ್ದಾಣ ಮತ್ತು ಗಗನಯಾನ...

ಶುಭಾಂಶು ಶುಕ್ಲಾ - ಸರ್!

ಪ್ರಧಾನಮಂತ್ರಿ - ಇವು ನಮ್ಮ 2 ಪ್ರಮುಖ ಧ್ಯೇಯಗಳು...

ಶುಭಾಂಶು ಶುಕ್ಲಾ - ಸರ್!

ಪ್ರಧಾನಮಂತ್ರಿ - ನಿಮ್ಮ ಅನುಭವವು ಅದೇ ವಿಷಯದಲ್ಲಿ ಬಹಳ ಮೌಲ್ಯಯುತವಾಗಿರುತ್ತದೆ.

ಶುಭಾಂಶು ಶುಕ್ಲಾ - ನನಗೂ ಹಾಗೆಯೇ ನಂಬಿಕೆ ಇದೆ ಸರ್. ವಿಶೇಷವಾಗಿ ನಿಮ್ಮ ನಾಯಕತ್ವದಲ್ಲಿ ನಮ್ಮ ಸರ್ಕಾರವು ಬಾಹ್ಯಾಕಾಶ ಕಾರ್ಯಕ್ರಮಕ್ಕೆ ತೋರಿಸಿರುವ ರೀತಿಯ ಬದ್ಧತೆಯಿಂದಾಗಿ, ವೈಫಲ್ಯಗಳ ಹೊರತಾಗಿಯೂ ಪ್ರತಿ ವರ್ಷ ನಿರಂತರ ಬಜೆಟ್ ಒದಗಿಸುವುದು. ಉದಾಹರಣೆಗೆ ಸರ್, ಚಂದ್ರಯಾನ-2 ಯಶಸ್ವಿಯಾಗಲಿಲ್ಲ, ಆದರೂ ನಾವು ಮುಂದುವರಿಯುತ್ತೇವೆ ಎಂದು ಹೇಳಿದ್ದೆವು, ಆದರೆ ಚಂದ್ರಯಾನ-3 ಯಶಸ್ವಿಯಾಯಿತು. ವೈಫಲ್ಯಗಳ ನಂತರವೂ, ಅಂತಹ ಬೆಂಬಲ ಬರುತ್ತಿದ್ದರೆ ಮತ್ತು ಇಡೀ ಜಗತ್ತು ನೋಡುತ್ತಿದ್ದರೆ, ಖಂಡಿತವಾಗಿಯೂ ಸರ್, ಈ ಕ್ಷೇತ್ರದಲ್ಲಿ ನಾಯಕತ್ವದ ಪಾತ್ರ ಪಡೆಯುವ ಸಾಮರ್ಥ್ಯ ಮತ್ತು ಸ್ಥಾನ ನಮಗೆ ಇದೆ. ಅದು ಬಹಳ ಶಕ್ತಿಶಾಲಿ ಸಾಧನವಾಗಬಹುದು. ಭಾರತ ನೇತೃತ್ವದ ಬಾಹ್ಯಾಕಾಶ ನಿಲ್ದಾಣವಿದ್ದು, ಇತರೆ ರಾಷ್ಟ್ರಗಳ ಭಾಗವಹಿಸುವಿಕೆಯೂ ಇರಬೇಕು. ಬಾಹ್ಯಾಕಾಶ ಉತ್ಪಾದನೆಯಲ್ಲಿ ಆತ್ಮನಿರ್ಭರತ(ಸ್ವಾವಲಂಬನೆ) ಬಗೆಗಿನ ನಿಮ್ಮ ಮಾತುಗಳನ್ನು ನಾನು ಕೇಳಿದ್ದೇನೆ ಸರ್. ಈ ಎಲ್ಲಾ ವಿಷಯಗಳು ಪರಸ್ಪರ ಸಂಬಂಧ ಹೊಂದಿವೆ. ನೀವು ನಮಗೆ ನೀಡಿರುವ ಗಗನಯಾನ, ಬಿ.ಎ.ಎಸ್ ಮತ್ತು ನಂತರ ಚಂದ್ರನ ಮೇಲೆ ಇಳಿಯುವ ಕನಸು ನಿಜಕ್ಕೂ ಬಹು ದೊಡ್ಡ ಕನಸು ಸರ್.

ಪ್ರಧಾನಮಂತ್ರಿ - ನಾವು ಇದನ್ನು ಸ್ವಾವಲಂಬನೆಯಿಂದ ಸಾಧಿಸಿದರೆ, ಅದು ತುಂಬಾ ಒಳ್ಳೆಯದು.

ಶುಭಾಂಶು ಶುಕ್ಲಾ - ಖಂಡಿತ, ಸರ್.

ಶುಭಾಂಶು ಶುಕ್ಲಾ - ನಾನು ಬಾಹ್ಯಾಕಾಶದಿಂದ ಭಾರತದ ಹಲವಾರು ಛಾಯಾಚಿತ್ರಗಳನ್ನು ತೆಗೆಯಲು ಪ್ರಯತ್ನಿಸಿದೆ ಸರ್. ನೋಡಿ ಇಲ್ಲಿಂದ ಭಾರತ ಪ್ರಾರಂಭವಾಗುತ್ತದೆ, ಈ ತ್ರಿಕೋನ ... ಇದು ಬೆಂಗಳೂರು ಸರ್. ಇದು ಹೈದರಾಬಾದ್ ಮತ್ತು ನೀವು ನೋಡುವ ಈ ಮಿಂಚು... ಸರ್, ಈ ಪ್ರದೇಶವು ಪರ್ವತಗಳಿಂದ ಆವೃತವಾಗಿದೆ. ನಾವು ದಾಟಿದ ಈ ಕತ್ತಲೆಯ ಪ್ರದೇಶವೇ ಹಿಮಾಲಯ. ಸರ್, ಅವೆಲ್ಲವೂ ನಕ್ಷತ್ರಗಳು. ನಾವು ಅವುಗಳನ್ನು ದಾಟುತ್ತಿದ್ದಂತೆ, ಸೂರ್ಯ ಹಿಂದಿನಿಂದ ಉದಯಿಸುತ್ತಿದ್ದ ಸರ್.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From strategic partnership upgrade to defence roadmap: Key outcomes of PM Modi–Meloni meeting in Rome

Media Coverage

From strategic partnership upgrade to defence roadmap: Key outcomes of PM Modi–Meloni meeting in Rome
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಮೇ 2026
May 21, 2026

Appreciation by Citizens on Leadership That Delivers: PM Modi's Journey of Development, Diplomacy & Farmer-First Progress