ಇಂದು ನಾವು ನಮ್ಮ ರಾಷ್ಟ್ರದ ಹೆಮ್ಮೆಯಾಗಿರುವ ಮತ್ತು ಭಾರತದ ಅಪ್ರತಿಮ ಧೈರ್ಯ ಹಾಗೂ ಶೌರ್ಯದ ಉನ್ನತ ಆದರ್ಶಗಳನ್ನು ಪ್ರತಿಬಿಂಬಿಸುವ ಸಾಹಸಿ ಸಾಹಿಬ್‌ಜಾದೆಯರನ್ನು ಸ್ಮರಿಸುತ್ತೇವೆ: ಪ್ರಧಾನಮಂತ್ರಿ
ಮಾತಾ ಗುಜ್ರಿ ಜಿ, ಶ್ರೀ ಗುರು ಗೋಬಿಂದ್ ಸಿಂಗ್ ಜಿ ಮತ್ತು ನಾಲ್ವರು ಸಾಹಿಬ್‌ಜಾದೆಯರ ಧೈರ್ಯ ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿಯನ್ನು ನೀಡುತ್ತಲೇ ಇವೆ: ಪ್ರಧಾನಮಂತ್ರಿ
ವಸಾಹತುಶಾಹಿ ಮನಸ್ಥಿತಿಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ಭಾರತ ಸಂಕಲ್ಪ ಮಾಡಿದೆ: ಪ್ರಧಾನಮಂತ್ರಿ
ಭಾರತವು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗುತ್ತಿದ್ದಂತೆ, ಅದರ ಭಾಷಾ ವೈವಿಧ್ಯತೆಯು ಶಕ್ತಿಯ ಮೂಲವಾಗಿ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ
ಜೆನ್ ಝಿ (Gen Z) ಮತ್ತು ಜೆನ್ ಆಲ್ಫಾ (Gen Alpha) ತಲೆಮಾರುಗಳು ಭಾರತವನ್ನು 'ವಿಕಸಿತ ಭಾರತ'ದ ಗುರಿಯತ್ತ ಮುನ್ನಡೆಸಲಿವೆ: ಪ್ರಧಾನಮಂತ್ರಿ

ಕೇಂದ್ರ ಸಚಿವ ಸಂಪುಟದ ಗೌರವಾನ್ವಿತ ಸಹೋದ್ಯೋಗಿಗಳಾದ ಅನ್ನಪೂರ್ಣ ದೇವಿ ಜಿ, ಸಾವಿತ್ರಿ ಠಾಕೂರ್ ಜಿ, ರವನೀತ್ ಸಿಂಗ್ ಜಿ, ದೆಹಲಿ ಸರ್ಕಾರದ ಗೌರವಾನ್ವಿತ ಸಚಿವ ಹರ್ಷ ಮಲ್ಹೋತ್ರಾ, ಇತರೆ ಗಣ್ಯರೆ, ದೇಶದ ಮೂಲೆ ಮೂಲೆಯಿಂದ ಬಂದಿರುವ ಅತಿಥಿಗಳೆ ಮತ್ತು ನನ್ನ ಪ್ರೀತಿಯ ಮಕ್ಕಳೆ!

ಇಂದು ದೇಶವು ವೀರ್ ಬಾಲ್ ದಿವಸ್ ಆಚರಿಸುತ್ತಿದೆ. ಇದೀಗ ವಂದೇ ಮಾತರಂನ ಸುಂದರವಾದ ಗಾಯನವನ್ನು ನಾವು ಆಲಿಸಿದ್ದೇವೆ, ನಿಮ್ಮ ಕಠಿಣ ಪರಿಶ್ರಮ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸ್ನೇಹಿತರೆ,

ಇಂದು ನಾವು ಭಾರತದ ಹೆಮ್ಮೆಯ ಆ ಧೈರ್ಯಶಾಲಿ ಸಾಹಿಬ್‌ಜಾದಾಸರನ್ನು ಸ್ಮರಿಸುತ್ತೇವೆ. ಅವರು ಭಾರತದ ಅದಮ್ಯ ಧೈರ್ಯ, ಶೌರ್ಯ ಮತ್ತು ಕೆಚ್ಚೆದೆಯ ಪರಾಕಾಷ್ಠೆಯನ್ನು ಸಾಕಾರಗೊಳಿಸುತ್ತಾರೆ. ಈ ಸಾಹಿಬ್‌ಜಾದಾಸರು ವಯಸ್ಸು ಮತ್ತು ಸನ್ನಿವೇಶದ ಗಡಿಗಳನ್ನು ದಾಟಿ, ಕ್ರೂರ ಮೊಘಲ್ ಸಾಮ್ರಾಜ್ಯದ ವಿರುದ್ಧ ಬಂಡೆಯಂತೆ ನಿಂತು, ಧಾರ್ಮಿಕ ಮತಾಂಧತೆ ಮತ್ತು ಭಯೋತ್ಪಾದನೆಯ ಅಸ್ತಿತ್ವವನ್ನೇ ಅಲುಗಾಡಿಸಿದರು. ಅಂತಹ ಅದ್ಭುತ ಭೂತಕಾಲವನ್ನು ಹೊಂದಿರುವ, ಯುವಕರು ಅಂತಹ ಸ್ಫೂರ್ತಿಯನ್ನು ಪಡೆದ ರಾಷ್ಟ್ರವು ಏನನ್ನಾದರೂ ಸಾಧಿಸಲು ಸಮರ್ಥವಾಗಿದೆ.

ಸ್ನೇಹಿತರೆ,

ಡಿಸೆಂಬರ್ 26ರ ಈ ದಿನ ಬಂದಾಗಲೆಲ್ಲಾ, ನಮ್ಮ ಸರ್ಕಾರವು ಸಾಹಿಬ್‌ಜಾದಾಸರ ಧೈರ್ಯದಿಂದ ಪ್ರೇರಿತರಾಗಿ ವೀರ್ ಬಾಲ್ ದಿವಸ್ ಆಚರಿಸಲು ಪ್ರಾರಂಭಿಸಿದೆ ಎಂಬುದು ನನಗೆ ಆಳವಾದ ತೃಪ್ತಿ ತರುತ್ತದೆ. ಕಳೆದ 4 ವರ್ಷಗಳಲ್ಲಿ, ಈ ಹೊಸ ಸಂಪ್ರದಾಯವು ಸಾಹಿಬ್‌ಜಾದಾಸರ ಸ್ಫೂರ್ತಿಯನ್ನು ಯುವ ಪೀಳಿಗೆಗೆ ಕೊಂಡೊಯ್ದಿದೆ. ವೀರ್ ಬಾಲ್ ದಿವಸ್ ಧೈರ್ಯಶಾಲಿ ಮತ್ತು ಪ್ರತಿಭಾನ್ವಿತ ಯುವಕರನ್ನು ಪೋಷಿಸಲು ಒಂದು ವೇದಿಕೆಯನ್ನು ಸಹ ಸೃಷ್ಟಿಸಿದೆ. ಪ್ರತಿ ವರ್ಷ, ದೇಶಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹವಾದದ್ದನ್ನು ಸಾಧಿಸುವ ಮಕ್ಕಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಬಾಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷವೂ ದೇಶದ ವಿವಿಧ ಭಾಗಗಳಿಂದ 20 ಮಕ್ಕಳು ಈ ಪ್ರಶಸ್ತಿ ಪಡೆದಿದ್ದಾರೆ. ಅವರೆಲ್ಲರೂ ನಮ್ಮ ನಡುವೆಯೇ ಇದ್ದಾರೆ,  ಅವರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು. ಕೆಲವರು ಅಸಾಧಾರಣ ಧೈರ್ಯ ಪ್ರದರ್ಶಿಸಿದ್ದಾರೆ, ಕೆಲವರು ಸಾಮಾಜಿಕ ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಕೆಲವರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸತನ ತೋರಿಸಿದ್ದಾರೆ, ಆದರೆ ಅನೇಕ ಯುವ ಸ್ನೇಹಿತರು ಕ್ರೀಡೆ, ಕಲೆ ಮತ್ತು ಸಂಸ್ಕೃತಿಯಲ್ಲೂ ಕೊಡುಗೆ ನೀಡುತ್ತಿದ್ದಾರೆ. ಈ ಪ್ರಶಸ್ತಿ ವಿಜೇತರಿಗೆ ನಾನು ಹೇಳಲು ಬಯಸುತ್ತೇನೆ - ಈ ಗೌರವವು ನಿಮಗೆ ಮಾತ್ರವಲ್ಲ, ನಿಮ್ಮ ಪೋಷಕರು, ನಿಮ್ಮ ಶಿಕ್ಷಕರು ಮತ್ತು ಮಾರ್ಗದರ್ಶಕರಿಗೂ ಸಹ ಸಲ್ಲುತ್ತದೆ. ಇದು ಅವರ ಕಠಿಣ ಪರಿಶ್ರಮದ ಗುರುತಿಸುವಿಕೆಯಾಗಿದೆ. ಎಲ್ಲಾ ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳನ್ನು ಕೋರುತ್ತೇನೆ.

 

ಸ್ನೇಹಿತರೆ,

ಈ ವೀರ್ ಬಾಲ್ ದಿನವು ಭಾವನೆ ಮತ್ತು ಭಕ್ತಿಯಿಂದ ತುಂಬಿದೆ. ಸಾಹಿಬ್‌ಜಾದಾ ಅಜಿತ್ ಸಿಂಗ್ ಜಿ, ಸಾಹಿಬ್‌ಜಾದಾ ಜುಝಾರ್ ಸಿಂಗ್ ಜಿ, ಸಾಹಿಬ್‌ಜಾದಾ ಜೊರಾವರ್ ಸಿಂಗ್ ಜಿ ಮತ್ತು ಸಾಹಿಬ್‌ಜಾದಾ ಫತೇಹ್ ಸಿಂಗ್ ಜಿ ಅವರು ಅಷ್ಟು ಚಿಕ್ಕ ವಯಸ್ಸಿನಲ್ಲೇ ಆ ಕಾಲದ ಅತ್ಯಂತ ಬಲಿಷ್ಠ ಶಕ್ತಿಯನ್ನು ಎದುರಿಸಬೇಕಾಯಿತು. ಆ ಯುದ್ಧವು ಭಾರತದ ಮೂಲಭೂತ ಮೌಲ್ಯಗಳು ಮತ್ತು ಧಾರ್ಮಿಕ ಮತಾಂಧತೆಯ ನಡುವೆ ಇತ್ತು, ಅದು ಸತ್ಯ ಮತ್ತು ಸುಳ್ಳಿನ ಯುದ್ಧವಾಗಿತ್ತು. ಒಂದು ಕಡೆ 10ನೇ ಗುರು ಶ್ರೀ ಗುರು ಗೋಬಿಂದ್ ಸಿಂಗ್ ಜಿ ಇದ್ದರು, ಇನ್ನೊಂದು ಕಡೆ ಔರಂಗಜೇಬನ ಕ್ರೂರ ಆಡಳಿತವಿತ್ತು. ಆ ಸಮಯದಲ್ಲಿ ನಮ್ಮ ಸಾಹಿಬ್‌ಜಾದಾಸರು ತುಂಬಾ ಚಿಕ್ಕವರಾಗಿದ್ದರು. ಆದರೆ ಔರಂಗಜೇಬನು ತನ್ನ ಕ್ರೌರ್ಯದಲ್ಲಿ ಅವರ ವಯಸ್ಸಿನ ಬಗ್ಗೆ ಕಾಳಜಿ ವಹಿಸಲಿಲ್ಲ. ಭಾರತೀಯರನ್ನು ಮತಾಂತರಕ್ಕೆ ಹೆದರಿಸಬೇಕಾದರೆ, ಮೊದಲು ಅವರ ನೈತಿಕತೆಯನ್ನು ಮುರಿಯಬೇಕು ಎಂದು ಅವನಿಗೆ ತಿಳಿದಿತ್ತು. ಅದಕ್ಕಾಗಿಯೇ ಅವನು ಸಾಹಿಬ್‌ಜಾದಾಸರನ್ನು ಗುರಿಯಾಗಿಸಿಕೊಂಡನು.

ಆದರೆ ಸ್ನೇಹಿತರೆ,

ಔರಂಗಜೇಬ್ ಮತ್ತು ಅವನ ಸೇನಾಧಿಪತಿಗಳು ನಮ್ಮ ಗುರುಗಳು ಸಾಮಾನ್ಯ ವ್ಯಕ್ತಿಯಲ್ಲ ಎಂಬುದನ್ನು ಮರೆತಿದ್ದರು,  ಅವರು ತಪಸ್ಸು ಮತ್ತು ತ್ಯಾಗದ ಸಾಕಾರರೂಪವಾಗಿದ್ದರು. ಧೈರ್ಯಶಾಲಿ ಸಾಹಿಬ್ಜಾದಾಸರು ಈ ಪರಂಪರೆಯನ್ನು ಅವರಿಂದ ಪಡೆದರು. ಅದಕ್ಕಾಗಿಯೇ, ಇಡೀ ಮೊಘಲ್ ಸಾಮ್ರಾಜ್ಯವು ಅವರನ್ನು ಹಿಂಬಾಲಿಸಿದರೂ, 4 ಸಾಹಿಬ್ಜಾದಾಸರಲ್ಲಿ ಒಬ್ಬರು ಕೂಡ ಹಿಂಜರಿಯಲಿಲ್ಲ. ಸಾಹಿಬ್ಜಾದಾಸ ಅಜಿತ್ ಸಿಂಗ್ ಜಿ ಅವರ ಮಾತುಗಳು ಇನ್ನೂ ಅವರ ಧೈರ್ಯದ ಕಥೆಯನ್ನು ಪ್ರತಿಧ್ವನಿಸುತ್ತವೆ. "ನಾನು ಹೆಸರಿನಿಂದ ಅಜಿತ್, ನನ್ನನ್ನು ಎಂದಿಗೂ ಸೋಲಿಸಲಾಗುವುದಿಲ್ಲ. ನಾನು ಸೋತರೂ, ನಾನು ಎಂದಿಗೂ ಶರಣಾಗುವುದಿಲ್ಲ!"

ಸ್ನೇಹಿತರೆ,

ಕೆಲವೇ ದಿನಗಳ ಹಿಂದೆ, ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರನ್ನು ಅವರ ಸರ್ವೋಚ್ಚ ತ್ಯಾಗದ 350ನೇ ವಾರ್ಷಿಕೋತ್ಸವದಂದು ನಾವು ನೆನಪಿಸಿಕೊಂಡೆವು. ಆ ದಿನದಂದು ಕುರುಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮವನ್ನು ಸಹ ನಡೆಸಲಾಯಿತು. ಗುರು ತೇಗ್ ಬಹದ್ದೂರ್ ಜಿ ಅವರ ತ್ಯಾಗದಿಂದ ಸ್ಫೂರ್ತಿ ಪಡೆದ ಸಾಹಿಬ್ಜಾದಾಸರು ಮೊಘಲ್ ದೌರ್ಜನ್ಯಗಳಿಗೆ ಎಂದಿಗೂ ಹೆದರಲೇ ಇಲ್ಲ.

 

ಸ್ನೇಹಿತರೆ,

ಮಾತಾ ಗುಜ್ರಿ, ಶ್ರೀ ಗುರು ಗೋಬಿಂದ್ ಸಿಂಗ್ ಜಿ ಮತ್ತು ನಾಲ್ವರು ಸಾಹಿಬ್ಜಾದಾಸರ ಶೌರ್ಯ ಮತ್ತು ಆದರ್ಶಗಳು ಇಂದಿಗೂ ಪ್ರತಿಯೊಬ್ಬ ಭಾರತೀಯರಿಗೂ ಶಕ್ತಿ ನೀಡುತ್ತಿವೆ, ಅವು ನಮಗೆ ಸ್ಫೂರ್ತಿಯಾಗಿ ಉಳಿದಿವೆ. ಸಾಹಿಬ್‌ಜಾದಾಸ್ ಅವರ ತ್ಯಾಗದ ಕಥೆಯು ದೇಶದ ಪ್ರತಿಯೊಬ್ಬ ನಾಗರಿಕನ ತುಟಿಗಳ ಮೇಲೆ ಇರಬೇಕಿತ್ತು. ಆದರೆ ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರವೂ, ಗುಲಾಮಗಿರಿಯ ಮನಸ್ಥಿತಿಯು ಮೇಲುಗೈ ಸಾಧಿಸುತ್ತಲೇ ಇತ್ತು. ಈ ಮನಸ್ಥಿತಿಯ ಬೀಜವನ್ನು 1835ರಲ್ಲಿ ಬ್ರಿಟಿಷ್ ರಾಜಕಾರಣಿ ಮೆಕಾಲೆ ಬಿತ್ತಿದರು, ಸ್ವಾತಂತ್ರ್ಯದ ನಂತರವೂ, ರಾಷ್ಟ್ರವು ಅದರಿಂದ ತನ್ನನ್ನು ಮುಕ್ತಗೊಳಿಸಲು ಅವಕಾಶ ನೀಡಲಿಲ್ಲ. ಅದಕ್ಕಾಗಿಯೇ, ಸ್ವಾತಂತ್ರ್ಯದ ನಂತರ ದಶಕಗಳವರೆಗೆ, ಅಂತಹ ಸತ್ಯಗಳನ್ನು ನಿಗ್ರಹಿಸಲು ಪ್ರಯತ್ನಗಳು ನಡೆದವು.

ಆದರೆ ಸ್ನೇಹಿತರೆ,

ಈಗ ಭಾರತವು ಈ ಗುಲಾಮಗಿರಿಯ ಮನಸ್ಥಿತಿಯಿಂದ ತನ್ನನ್ನು ಮುಕ್ತಗೊಳಿಸಲು ನಿರ್ಧರಿಸಿದೆ. ನಮ್ಮ ತ್ಯಾಗ ಮತ್ತು ಶೌರ್ಯದ ನೆನಪುಗಳನ್ನು ಇನ್ನು ಮುಂದೆ ಸಮಾಧಿ ಮಾಡಲಾಗುವುದಿಲ್ಲ. ನಮ್ಮ ರಾಷ್ಟ್ರದ ನಾಯಕರು ಮತ್ತು ನಾಯಕಿಯರನ್ನು ಇನ್ನು ಮುಂದೆ ಅಂಚಿಗೆ ತಳ್ಳುವುದಿಲ್ಲ. ಅದಕ್ಕಾಗಿಯೇ ನಾವು ಪೂರ್ಣ ಭಕ್ತಿಯಿಂದ ವೀರ್ ಬಾಲ್ ದಿವಸ್ ಆಚರಿಸುತ್ತಿದ್ದೇವೆ. ನಾವು ಇಲ್ಲಿಗೇ ನಿಂತಿಲ್ಲ. ಮೆಕಾಲೆ ರೂಪಿಸಿದ ಪಿತೂರಿ 2035ರಲ್ಲಿ 200 ವರ್ಷಗಳನ್ನು ಪೂರೈಸುತ್ತದೆ. ಈಗಿನಿಂದ ಕೇವಲ 10 ವರ್ಷಗಳ ನಂತರ, ಈ 10 ವರ್ಷಗಳಲ್ಲಿ ರಾಷ್ಟ್ರವು ಗುಲಾಮಗಿರಿಯ ಮನಸ್ಥಿತಿಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಇದು 1.4 ಶತಕೋಟಿ ಭಾರತೀಯರ ಸಂಕಲ್ಪವಾಗಬೇಕು. ಏಕೆಂದರೆ ರಾಷ್ಟ್ರವು ಈ ಮನಸ್ಥಿತಿಯಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಂಡಾಗ, ಅದು ತನ್ನ ಸ್ಥಳೀಯ ಗುರುತಿನ ಬಗ್ಗೆ ಹೆಮ್ಮೆ ಪಡುತ್ತದೆ, ಸ್ವಾವಲಂಬನೆಯ ಹಾದಿಯಲ್ಲಿ ಮತ್ತಷ್ಟು ಮುನ್ನಡೆಯುತ್ತದೆ.

 

ಸ್ನೇಹಿತರೆ,

ಗುಲಾಮಗಿರಿಯ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸುವ ಈ ಅಭಿಯಾನದ ಒಂದು ಸಣ್ಣ ನೋಟವನ್ನು ಇತ್ತೀಚೆಗೆ ನಮ್ಮ ಸಂಸತ್ತಿನಲ್ಲಿ ನೋಡಲಾಯಿತು. ಚಳಿಗಾಲ ಅಧಿವೇಶನದಲ್ಲಿ ಸಂಸತ್ ಸದಸ್ಯರು ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ ಭಾರತೀಯ ಭಾಷೆಗಳಲ್ಲಿ ಸುಮಾರು 160 ಭಾಷಣಗಳನ್ನು ಮಾಡಿದರು. ಸುಮಾರು 50 ಭಾಷಣಗಳು ತಮಿಳಿನಲ್ಲಿ, 40ಕ್ಕೂ ಹೆಚ್ಚು ಮರಾಠಿಯಲ್ಲಿ ಮತ್ತು ಸುಮಾರು 25 ಬಾಂಗ್ಲಾದಲ್ಲಿ ಇದ್ದವು. ಇಂತಹ ದೃಶ್ಯ ಜಗತ್ತಿನ ಯಾವುದೇ ಸಂಸತ್ತಿನಲ್ಲಿ ಅಪರೂಪ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಮೆಕಾಲೆ ಭಾರತದ ಭಾಷಾ ವೈವಿಧ್ಯತೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರು, ಆದರೆ ಈಗ, ನಮ್ಮ ರಾಷ್ಟ್ರವು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತವಾಗುತ್ತಿದ್ದಂತೆ, ಭಾಷಾ ವೈವಿಧ್ಯತೆಯು ನಮ್ಮ ಶಕ್ತಿಯಾಗುತ್ತಿದೆ.

ಇಲ್ಲಿ ನಾನು ಯುವ ಭಾರತ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಅನೇಕ ಯುವಕರನ್ನು ನೋಡುತ್ತೇನೆ. ಒಂದು ರೀತಿಯಲ್ಲಿ, ನೀವು ಜೆನ್ ಝಡ್(1997-2012ರ ಅವಧಿಯಲ್ಲಿ ಜನಿಸಿದವರು ಮತ್ತು ಜೆನ್ ಆಲ್ಫಾ(2010-2025ರ ನಡುವೆ ಜನಿಸಿದ ಪೀಳಿಗೆ) ಆಗಿದ್ದೀರಿ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಕೊಂಡೊಯ್ಯುವುದು ನಿಮ್ಮ ಪೀಳಿಗೆಯೇ ಆಗಿದೆ. ಜೆನ್ ಝಡ್ ಪೀಳಿಗೆಯ ಸಾಮರ್ಥ್ಯ ಮತ್ತು ವಿಶ್ವಾಸವನ್ನು ನಾನು ನೋಡುತ್ತಿದ್ದೇನೆ ಮತ್ತು ಅರ್ಥ ಮಾಡಿಕೊಳ್ಳುತ್ತಿದ್ದೇನೆ, ಅದಕ್ಕಾಗಿಯೇ ನಾನು ನಿಮ್ಮ ಮೇಲೆ ಹೆಚ್ಚಿನ ನಂಬಿಕೆ ಇಡುತ್ತೇನೆ. ನಮ್ಮ ಸಂಪ್ರದಾಯವು ಹೀಗೆ ಹೇಳುತ್ತದೆ: ಬಾಲಾದಪಿ ಗ್ರೀತವ್ಯಂ ಖುಕ್ತುಕ್ತಮುಕ್ತಂ ಮನೀಶಿಭಿಃ ಅಂದರೆ, ಚಿಕ್ಕ ಮಗು ಬುದ್ಧಿವಂತಿಕೆಯಿಂದ ಮಾತನಾಡಿದರೂ ಅದನ್ನು ಸ್ವೀಕರಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾರೂ ವಯಸ್ಸಿನಲ್ಲಿ ಸಣ್ಣವರಲ್ಲ ಅಥವಾ ದೊಡ್ಡವರಲ್ಲ. ಒಬ್ಬರು ಕಾರ್ಯಗಳು ಮತ್ತು ಸಾಧನೆಗಳ ಮೂಲಕ ಶ್ರೇಷ್ಠರಾಗುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೂ ಸಹ, ನೀವು ಇತರರಿಗೆ ಸ್ಫೂರ್ತಿ ನೀಡುವ ವಿಷಯಗಳನ್ನು ಸಾಧಿಸಬಹುದು. ನೀವು ಈಗಾಗಲೇ ಇದನ್ನು ತೋರಿಸಿದ್ದೀರಿ. ಆದರೆ ಈ ಸಾಧನೆಗಳನ್ನು ಕೇವಲ ಆರಂಭವಾಗಿ ನೋಡಬೇಕು. ನೀವು ಇನ್ನೂ ಹೆಚ್ಚು ದೂರ ಸಾಗಬೇಕು. ನೀವು ನಿಮ್ಮ ಕನಸುಗಳನ್ನು ಆಕಾಶಕ್ಕೆ ಕೊಂಡೊಯ್ಯಬೇಕು. ರಾಷ್ಟ್ರವು ನಿಮ್ಮ ಪ್ರತಿಭೆಯೊಂದಿಗೆ ದೃಢವಾಗಿ ನಿಂತಿರುವ ಪೀಳಿಗೆಯಲ್ಲಿ ಜನಿಸಿರುವ ನೀವೇ ಅದೃಷ್ಟಶಾಲಿಗಳು.

ಹಿಂದೆ ಯುವಕರು ಕನಸು ಕಾಣಲು ಸಹ ಹೆದರುತ್ತಿದ್ದರು, ಏಕೆಂದರೆ ಹಳೆಯ ವ್ಯವಸ್ಥೆಗಳು ಒಳ್ಳೆಯದು ಏನೂ ಸಾಧ್ಯವಿಲ್ಲ ಎಂದು ತೋರುವ ವಾತಾವರಣವನ್ನು ಸೃಷ್ಟಿಸಿದ್ದವು. ಎಲ್ಲೆಡೆ ಹತಾಶೆ ಇತ್ತು, ಜನರು ಸಹ ಭಾವಿಸಲು ಪ್ರಾರಂಭಿಸಿದರು... ಕಷ್ಟಪಟ್ಟು ಕೆಲಸ ಮಾಡುವುದರಿಂದ ಏನು ಪ್ರಯೋಜನ? ಎಂದು. ಆದರೆ ಇಂದು ರಾಷ್ಟ್ರವು ಪ್ರತಿಭೆಯನ್ನು ಹುಡುಕುತ್ತದೆ, ಅದಕ್ಕೆ ವೇದಿಕೆ ನೀಡುತ್ತದೆ ಮತ್ತು 140 ಕೋಟಿ ನಾಗರಿಕರ ಶಕ್ತಿಯನ್ನು ಅವರ ಕನಸುಗಳ ಹಿಂದೆ ಇರಿಸುತ್ತದೆ.

ಡಿಜಿಟಲ್ ಇಂಡಿಯಾದ ಯಶಸ್ಸಿನೊಂದಿಗೆ, ನಿಮಗೆ ಇಂಟರ್ನೆಟ್‌ ಶಕ್ತಿ ಇದೆ, ನಿಮಗೆ ಕಲಿಕೆಗೆ ಸಂಪನ್ಮೂಲಗಳಿವೆ. ವಿಜ್ಞಾನ, ತಂತ್ರಜ್ಞಾನ ಮತ್ತು ಸ್ಟಾರ್ಟಪ್ ಜಗತ್ತನ್ನು ಪ್ರವೇಶಿಸಲು ಬಯಸುವವರಿಗೆ ಸ್ಟಾರ್ಟಪ್ ಇಂಡಿಯಾದಂತಹ ಕಾರ್ಯಕ್ರಮಗಳಿವೆ. ಕ್ರೀಡೆಯಲ್ಲಿ ಮುಂದುವರಿಯುತ್ತಿರುವವರಿಗೆ ಖೇಲೋ ಇಂಡಿಯಾ ಕಾರ್ಯಕ್ರಮಗಳಿವೆ. ಕೇವಲ 2 ದಿನಗಳ ಹಿಂದೆ ನಾನು ಸಂಸದ್ ಖೇಲ್ ಮಹೋತ್ಸವದಲ್ಲಿಯೂ ಭಾಗವಹಿಸಿದ್ದೆ. ನೀವು ಮುಂದುವರಿಯಲು ಸಹಾಯ ಮಾಡಲು ಲೆಕ್ಕವಿಲ್ಲದಷ್ಟು ವೇದಿಕೆಗಳಿವೆ. ನೀವು ಗಮನ ಹರಿಸಬೇಕು. ಇದಕ್ಕಾಗಿ, ನೀವು ಅಲ್ಪಾವಧಿಯ ಜನಪ್ರಿಯತೆಯ ಹೊಳಪಿನಲ್ಲಿ ಸಿಲುಕಿಕೊಳ್ಳದಿರುವುದು ಅತ್ಯಗತ್ಯ. ನಿಮ್ಮ ಆಲೋಚನೆ ಸ್ಪಷ್ಟವಾದಾಗ, ನಿಮ್ಮ ತತ್ವಗಳು ಸ್ಪಷ್ಟವಾದಾಗ ಇದು ಸಂಭವಿಸುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಆದರ್ಶಗಳಿಂದ, ನಮ್ಮ ರಾಷ್ಟ್ರದ ಮಹಾನ್ ವ್ಯಕ್ತಿಗಳಿಂದ ಕಲಿಯಬೇಕು. ನಿಮ್ಮ ಯಶಸ್ಸನ್ನು ನಿಮಗೆ ಸೀಮಿತವಾಗಿ ನೋಡಬಾರದು. ನಿಮ್ಮ ಯಶಸ್ಸು ರಾಷ್ಟ್ರದ ಯಶಸ್ಸಾಗುವುದು ನಿಮ್ಮ ಗುರಿಯಾಗಿರಬೇಕು.

 

ಸ್ನೇಹಿತರೆ,

ಇಂದು ಯುವ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿ ಹೊಸ ನೀತಿಗಳನ್ನು ರೂಪಿಸಲಾಗುತ್ತಿದೆ. ಯುವಕರನ್ನು ರಾಷ್ಟ್ರ ನಿರ್ಮಾಣದ ಕೇಂದ್ರದಲ್ಲಿ ಇರಿಸಲಾಗಿದೆ. ಮೇರಾ ಯುವ ಭಾರತ್‌ನಂತಹ ವೇದಿಕೆಗಳ ಮೂಲಕ, ಯುವ ಜನರನ್ನು ಸಂಪರ್ಕಿಸಲು, ಅವರಿಗೆ ಅವಕಾಶಗಳನ್ನು ಒದಗಿಸಲು ಮತ್ತು ಅವರಲ್ಲಿ ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬಾಹ್ಯಾಕಾಶ ಆರ್ಥಿಕತೆಯನ್ನು ಮುನ್ನಡೆಸುತ್ತಿರಲಿ, ಕ್ರೀಡೆಗಳನ್ನು ಉತ್ತೇಜಿಸುತ್ತಿರಲಿ, ಹಣಕಾಸು ತಂತ್ರಜ್ಞಾನ ಮತ್ತು ಉತ್ಪಾದನಾ ವಲಯಗಳನ್ನು ವಿಸ್ತರಿಸುತ್ತಿರಲಿ, ಕೌಶಲ್ಯ ಅಭಿವೃದ್ಧಿ ಮತ್ತು ಇಂಟರ್ನ್‌ಶಿಪ್‌ಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿರಲಿ, ಅಂತಹ ಪ್ರತಿಯೊಂದು ಪ್ರಯತ್ನದ ಹೃದಯ ಭಾಗದಲ್ಲಿ ನನ್ನ ಯುವ ಸಮುದಾಯ ಇದ್ದಾರೆ. ಪ್ರತಿಯೊಂದು ವಲಯದಲ್ಲೂ, ಯುವಕರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ.

ಸ್ನೇಹಿತರೆ,

ಭಾರತ ಇಂದು ಅಭೂತಪೂರ್ವ ಸಂದರ್ಭಗಳನ್ನು ಎದುರಿಸುತ್ತಿದೆ. ಭಾರತವು ವಿಶ್ವದ ಅತ್ಯಂತ ಚಿರಯೌವ್ವನದ ಪೀಳಿಗೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಮುಂಬರುವ 25 ವರ್ಷಗಳು ನಮ್ಮ ದೇಶದ ದಿಕ್ಕನ್ನು ನಿರ್ಧರಿಸುತ್ತವೆ. ಬಹುಶಃ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಭಾರತದ ಸಾಮರ್ಥ್ಯಗಳು, ಭಾರತದ ಆಕಾಂಕ್ಷೆಗಳು ಮತ್ತು ಭಾರತದಿಂದ ವಿಶ್ವದ ನಿರೀಕ್ಷೆಗಳು ಎಲ್ಲವೂ ಒಟ್ಟಿಗೆ ಸೇರುತ್ತಿವೆ. ಅವಕಾಶಗಳು ಹಿಂದೆಂದಿಗಿಂತಲೂ ಹೆಚ್ಚಿರುವ ಸಮಯದಲ್ಲಿ ಇಂದಿನ ಯುವಕರು ಬೆಳೆಯುತ್ತಿದ್ದಾರೆ. ಭಾರತದ ಯುವಕರ ಪ್ರತಿಭೆ, ವಿಶ್ವಾಸ ಮತ್ತು ನಾಯಕತ್ವ ಸಾಮರ್ಥ್ಯಗಳಿಗೆ ಉತ್ತಮ ಮಾರ್ಗಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.

 

ನನ್ನ ಯುವ ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಭಾರತಕ್ಕೆ ಬಲವಾದ ಅಡಿಪಾಯ ಹಾಕಲು, ನಮ್ಮ ಶಿಕ್ಷಣ ನೀತಿಯಲ್ಲಿಯೂ ಗಮನಾರ್ಹ ಸುಧಾರಣೆಗಳನ್ನು ತರಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನಕ್ಕೆ ಹೊಸ ಕಲಿಕೆಯ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇಂದು ಪ್ರಾಯೋಗಿಕ ಕಲಿಕೆಯ ಮೇಲೆ ಒತ್ತು ನೀಡಲಾಗಿದೆ. ಕಂಠಪಾಠ ಮಾಡುವ ಬದಲು ಯೋಚಿಸುವ ಅಭ್ಯಾಸವನ್ನು ಅಭಿವೃದ್ಧಿಪಡಿಸುವುದು, ಮಕ್ಕಳು ಪ್ರಶ್ನೆಗಳನ್ನು ಕೇಳಲು ಮತ್ತು ಪರಿಹಾರಗಳನ್ನು ಹುಡುಕಲು ಪ್ರೋತ್ಸಾಹಿಸುವುದು. ಮೊದಲ ಬಾರಿಗೆ, ಈ ದಿಕ್ಕಿನಲ್ಲಿ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬಹುಶಿಸ್ತೀಯ ಅಧ್ಯಯನಗಳು, ಕೌಶಲ್ಯ ಆಧಾರಿತ ಕಲಿಕೆ, ಕ್ರೀಡೆಗಳ ಉತ್ತೇಜನ ಮತ್ತು ತಂತ್ರಜ್ಞಾನದ ಬಳಕೆ ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯ ಮಾಡುತ್ತಿದೆ. ದೇಶಾದ್ಯಂತ, ಲಕ್ಷಾಂತರ ಮಕ್ಕಳು ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆಗಳಲ್ಲೂ ಸಹ, ಮಕ್ಕಳನ್ನು ರೊಬೊಟಿಕ್ಸ್, ಎಐ, ಸುಸ್ಥಿರತೆ ಮತ್ತು ವಿನ್ಯಾಸ ಚಿಂತನೆಗೆ ಪರಿಚಯಿಸಲಾಗುತ್ತಿದೆ. ಈ ಪ್ರಯತ್ನಗಳ ಜೊತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯು ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಆಯ್ಕೆಯನ್ನು ಸಹ ಒದಗಿಸಿದೆ. ಇದು ಮಕ್ಕಳಿಗೆ ಕಲಿಕೆಯನ್ನು ಸುಲಭಗೊಳಿಸುತ್ತಿದೆ, ಅವರು ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ.

ಸ್ನೇಹಿತರೆ,

ಧೈರ್ಯಶಾಲಿ ಸಾಹಿಬ್‌ಜಾದಾಸ್ ಅವರು ಮುಂದಿನ ಹಾದಿ ಎಷ್ಟು ಕಷ್ಟಕರವಾಗಿದೆ ಎಂದು ನೋಡಲಿಲ್ಲ, ಅವರು ಹಾದಿ ಸರಿಯಾಗಿದೆಯೇ ಎಂದು ಮಾತ್ರ ನೋಡಿದರು. ಇಂದು ಸಹ ಅದೇ ಮನೋಭಾವದ ಅಗತ್ಯವಿದೆ. ಭಾರತದ ಯುವಕರು ದೊಡ್ಡ ಕನಸು ಕಾಣಬೇಕು, ಕಷ್ಟಪಟ್ಟು ಕೆಲಸ ಮಾಡಬೇಕು, ತಮ್ಮ ಆತ್ಮವಿಶ್ವಾಸವನ್ನು ಎಂದಿಗೂ ದುರ್ಬಲಗೊಳಿಸಲು ಬಿಡಬಾರದು ಎಂದು ನಾನು ಬಯಸುತ್ತೇನೆ. ಭಾರತದ ಭವಿಷ್ಯವು ಮಕ್ಕಳು ಮತ್ತು ಯುವಕರ ಭವಿಷ್ಯದ ಮೂಲಕ ಮಾತ್ರ ಬೆಳಗುತ್ತದೆ. ಅವರ ಧೈರ್ಯ, ಅವರ ಪ್ರತಿಭೆ ಮತ್ತು ಅವರ ಸಮರ್ಪಣೆ ರಾಷ್ಟ್ರದ ಪ್ರಗತಿಗೆ ಮಾರ್ಗದರ್ಶನ ನೀಡುತ್ತದೆ. ಈ ನಂಬಿಕೆಯೊಂದಿಗೆ, ಈ ಜವಾಬ್ದಾರಿಯೊಂದಿಗೆ ಮತ್ತು ಈ ನಿರಂತರ ಆವೇಗದೊಂದಿಗೆ, ಭಾರತವು ತನ್ನ ಭವಿಷ್ಯದತ್ತ ಮುಂದುವರಿಯುತ್ತದೆ. ಮತ್ತೊಮ್ಮೆ, ನಾನು ಸಾಹಿಬ್‌ಜಾದಾಸ್‌ ಅವರಿಗೆ ಗೌರವದಿಂದ ನಮಸ್ಕರಿಸುತ್ತೇನೆ. ಎಲ್ಲಾ ಪ್ರಶಸ್ತಿ ವಿಜೇತರಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India Semiconductor Mission 2.0 to boost domestic chip manufacturing

Media Coverage

India Semiconductor Mission 2.0 to boost domestic chip manufacturing
NM on the go

Nm on the go

Always be the first to hear from the PM. Get the App Now!
...
PM Modi receives a telephone call from the Prime Minister of Mauritius
February 09, 2026
The two leaders review progress in bilateral cooperation since their last meeting in Varanasi in September 2025.
They reaffirm their shared commitment to further advancing the India-Mauritius Enhanced Strategic Partnership.
PM Modi reiterates India’s continued support for Mauritius’ development priorities.
Both leaders agree to work closely towards peace and stability in the Indian Ocean Region.
PM Modi conveys that he looks forward to welcoming him in Delhi for the AI Impact Summit next week.

Prime Minister Shri Narendra Modi received a telephone call today from the Prime Minister of the Republic of Mauritius, H.E. Dr. Navinchandra Ramgoolam..

The two leaders reviewed progress in the wide-ranging bilateral cooperation since their last meeting in Varanasi in September 2025 with an emphasis on development partnership, capacity building and people-to-people exchanges.

They reaffirmed their shared commitment to further advancing the Enhanced Strategic Partnership between India and Mauritius for the benefit of the two peoples.

Prime Minister Modi reiterated India’s continued support for Mauritius’ development priorities in line with Vision MAHASAGAR, India’s Neighbourhood First policy and shared commitment to the Global South.

Both leaders agreed to continue working closely to achieve the shared objectives of peace and stability in the Indian Ocean Region.

Prime Minister Modi conveyed that he looked forward to welcoming him in Delhi for the AI Impact Summit next week.