ಕಳೆದ ದಶಕದಲ್ಲಿ, ಭಾರತದ ವಾಯುಯಾನ ವಲಯವು ಐತಿಹಾಸಿಕ ಪರಿವರ್ತನೆಗೆ ಒಳಗಾಗಿದೆ, ಒಂದು ಕೆಲವರಿಗಷ್ಟೇ ಸೀಮಿತವಾಗಿದ್ದ ಕ್ಲಬ್‌ನಿಂದ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿ ವಿಕಸನಗೊಂಡಿದೆ: ಪ್ರಧಾನಮಂತ್ರಿ
ಭಾರತದ ವಾಯುಯಾನ ವಲಯದ ಬೆಳವಣಿಗೆಯು ಸರ್ಕಾರದ ದೀರ್ಘಕಾಲೀನ ದೃಷ್ಟಿಕೋನದ ಪರಿಣಾಮವಾಗಿದೆ, ಇದು ಪ್ರತಿಯೊಬ್ಬ ನಾಗರಿಕನು ವಿಮಾನದ ಮೂಲಕ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಧ್ಯೇಯದಲ್ಲಿ ವಿಮಾನ ಪ್ರಯಾಣವನ್ನು ಒಳಗೊಳ್ಳುವಂತೆ ಮಾಡಿದೆ: ಪ್ರಧಾನಮಂತ್ರಿ
ಉಡಾನ್ ಯೋಜನೆಯ ಮುಂದಿನ ಹಂತದಲ್ಲಿ ದೇಶಾದ್ಯಂತ ಪ್ರಾದೇಶಿಕ ಮತ್ತು ಕೈಗೆಟುಕುವ ವಾಯು ಸಂಪರ್ಕ ಮತ್ತು ಸಮುದ್ರ ವಿಮಾನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಸರ್ಕಾರ ಕೆಲಸ ಮಾಡುತ್ತಿದೆ: ಪ್ರಧಾನಮಂತ್ರಿ
ಭಾರತವು ದೇಶೀಯವಾಗಿ ಮಿಲಿಟರಿ ಮತ್ತು ಸಾರಿಗೆ ವಿಮಾನಗಳನ್ನು ಉತ್ಪಾದಿಸಲು ಪ್ರಾರಂಭಿಸಿದೆ ಮತ್ತು ನಾಗರಿಕ ವಿಮಾನ ತಯಾರಿಕೆಯಲ್ಲೂ ಮುಂದುವರಿಯುತ್ತಿದೆ: ಪ್ರಧಾನಮಂತ್ರಿ
ಜಾಗತಿಕ ದಕ್ಷಿಣ ಮತ್ತು ಪ್ರಪಂಚದ ನಡುವಿನ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿ ಭಾರತ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ರಾಮ್ ಮೋಹನ್ ನಾಯ್ಡು ಜಿ, ಮುರಳೀಧರ್ ಮೊಹೋಲ್ ಜಿ, ವಿಶ್ವಾದ್ಯಂತದಿಂದ ಆಗಮಿಸಿರುವ ಗೌರವಾನ್ವಿತ ಸಚಿವರೆ, ಜಾಗತಿಕ ವಾಯುಯಾನ ಉದ್ಯಮದ ದಿಗ್ಗಜರೆ, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೆ, ಗೌರವಾನ್ವಿತ ಪ್ರತಿನಿಧಿಗಳೆ, ಮಹಿಳೆಯರೆ ಮತ್ತು ಮಹನೀಯರೆ!

ಎಲ್ಲರಿಗೂ ಶುಭಾಶಯಗಳು!

ವಿಂಗ್ಸ್ ಇಂಡಿಯಾದ ಈ ವೇದಿಕೆಯಲ್ಲಿ ನಾನು ಎಲ್ಲಾ ಉದ್ಯಮ ನಾಯಕರು, ತಜ್ಞರು ಮತ್ತು ಹೂಡಿಕೆದಾರರನ್ನು ಸ್ವಾಗತಿಸುತ್ತೇನೆ. ನಿಮಗೆಲ್ಲರಿಗೂ ತಿಳಿದಿರುವಂತೆ, ವಾಯುಯಾನ ಉದ್ಯಮದ ಮುಂದಿನ ಯುಗವು ಅನೇಕ ಆಕಾಂಕ್ಷೆಗಳಿಂದ ತುಂಬಿದೆ. ಭಾರತವು ಇದರಲ್ಲಿ ಪ್ರಮುಖ ಪಾಲುದಾರನಾಗುತ್ತಿದೆ. ವಿಮಾನ ತಯಾರಿಕೆ, ಪೈಲಟ್ ತರಬೇತಿ, ಸುಧಾರಿತ ವಾಯು ಚಲನಶೀಲತೆ, ವಿಮಾನ ಗುತ್ತಿಗೆ - ಇವುಗಳಿಂದ ಭಾರತವು ಹಲವಾರು ಸಾಧ್ಯತೆಗಳೊಂದಿಗೆ ನಿಮ್ಮ ಮುಂದೆ ನಿಂತಿರುವ ಕ್ಷೇತ್ರಗಳಾಗಿವೆ. ಆದ್ದರಿಂದ, ವಿಂಗ್ಸ್ ಇಂಡಿಯಾದ ಈ ಶೃಂಗಸಭೆಯು ನಮಗೆಲ್ಲರಿಗೂ ಬಹಳ ಮಹತ್ವದ್ದಾಗಿದೆ.

ಸ್ನೇಹಿತರೆ,

ಕಳೆದ ದಶಕದಲ್ಲಿ ಭಾರತದ ಇಡೀ ವಾಯುಯಾನ ವಲಯದಲ್ಲಿ ಐತಿಹಾಸಿಕ ಪರಿವರ್ತನೆ ಸಂಭವಿಸಿದೆ. ವಿಮಾನ ಪ್ರಯಾಣವು ವಿಶೇಷ ಕ್ಲಬ್ ‌ಗೆ ಸೀಮಿತವಾಗಿದ್ದ ದೇಶಗಳಲ್ಲಿ ಭಾರತವೂ ಒಂದು ಕಾಲವಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿದೆ. ನಮ್ಮ ಪ್ರಯಾಣಿಕರ ದಟ್ಟಣೆ ಬಹಳ ವೇಗವಾಗಿ ಹೆಚ್ಚಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳ ಫ್ಲೀಟ್ ಕೂಡ ವೇಗವಾಗಿ ವಿಸ್ತರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದ ವಿಮಾನಯಾನ ಸಂಸ್ಥೆಗಳು 1,500ಕ್ಕೂ ಹೆಚ್ಚು ವಿಮಾನಗಳಿಗೆ ಆರ್ಡರ್ ‌ಗಳನ್ನು ನೀಡಿವೆ.

ಸ್ನೇಹಿತರೆ,

ನಮ್ಮ ಸರ್ಕಾರವು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಕೆಲಸ ಮಾಡುತ್ತಿರುವುದರಿಂದ ಭಾರತದ ವಾಯುಯಾನ ವಲಯದಲ್ಲಿ ಈ ಆವೇಗ ಬಂದಿದೆ. ಭಾರತದಲ್ಲಿ ವಿಮಾನ ಪ್ರಯಾಣವು ಈಗ ಪ್ರತ್ಯೇಕವಾಗಿ ಅಲ್ಲ, ಎಲ್ಲರನ್ನೂ ಒಳಗೊಳ್ಳುತ್ತಿದೆ. ಭಾರತದ ನಾಗರಿಕರು ವಿಮಾನದ ಮೂಲಕ ಸುಲಭವಾಗಿ ಪ್ರಯಾಣಿಸಬೇಕು ಎಂಬುದು ನಮ್ಮ ಧ್ಯೇಯವಾಗಿದೆ. ಆದ್ದರಿಂದ ನಾವು 2 ಮತ್ತು 3ನೇ ಶ್ರೇಣಿಯ ನಗರಗಳನ್ನು ವಿಮಾನ ನಿಲ್ದಾಣಗಳೊಂದಿಗೆ ಸಂಪರ್ಕಿಸಿದ್ದೇವೆ. 2014ರಲ್ಲಿ, ಭಾರತದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಆದರೆ ಇಂದು ಭಾರತದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 160ಕ್ಕಿಂತ ಹೆಚ್ಚಾಗಿದೆ. ಅಂದರೆ ಕೇವಲ 1 ದಶಕದಲ್ಲಿ ಭಾರತದಲ್ಲಿ 2 ಪಟ್ಟು ಹೆಚ್ಚು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ನಾವು ದೇಶದಲ್ಲಿ 100ಕ್ಕೂ ಹೆಚ್ಚು ವಾಯು ಗುಮ್ಮಟಗಳನ್ನು ಸಕ್ರಿಯಗೊಳಿಸಿದ್ದೇವೆ. ಇದರೊಂದಿಗೆ, ನಮ್ಮ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ವಿಮಾನ ಯಾನ ಲಭ್ಯವಾಗುವ ಉಡಾನ್ ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ. ಉಡಾನ್ ಯೋಜನೆಯ ಕಾರಣದಿಂದಾಗಿ, 15 ದಶಲಕ್ಷ ಪ್ರಯಾಣಿಕರು ಅಂದರೆ, ಸುಮಾರು ಒಂದೂವರೆ ಕೋಟಿ ಪ್ರಯಾಣಿಕರು ಆ ಮಾರ್ಗಗಳಲ್ಲಿ ಪ್ರಯಾಣಿಸಿದ್ದಾರೆ, ಅವುಗಳಲ್ಲಿ ಹಲವು ಮೊದಲು ಅಸ್ತಿತ್ವದಲ್ಲೇ ಇರಲಿಲ್ಲ.

ಸ್ನೇಹಿತರೆ,

ಇಂದು, ಭಾರತವು ಅಭಿವೃದ್ಧಿ ಹೊಂದುವ ಗುರಿಯೊಂದಿಗೆ ಮುಂದುವರಿಯುತ್ತಿರುವಾಗ, ನಮ್ಮ ವಾಯುಯಾನ ಚಟುವಟಿಕೆ ಹಲವು ಪಟ್ಟು ವಿಸ್ತರಿಸುವುದು ಖಚಿತ. 2047ರ ವೇಳೆಗೆ, ಭಾರತದಲ್ಲಿ 400ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಇರುತ್ತವೆ ಎಂದು ಅಂದಾಜಿಸಲಾಗಿದೆ, ಇದು ಬೃಹತ್ ಜಾಲವಾಗಿರುತ್ತದೆ. ಇದು ಮಾತ್ರವಲ್ಲದೆ, ನಮ್ಮ ಸರ್ಕಾರವು ಉಡಾನ್ ಯೋಜನೆಯ ಮುಂದಿನ ಹಂತದಲ್ಲೂ ಕೆಲಸ ಮಾಡುತ್ತಿದೆ. ಈ ನೀತಿಯೊಂದಿಗೆ, ಪ್ರಾದೇಶಿಕ ಮತ್ತು ಕೈಗೆಟುಕುವ ವಾಯು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುವುದು. ಇದೆಲ್ಲದರ ಜತೆಗೆ, ಸಮುದ್ರ ವಿಮಾನ ಕಾರ್ಯಾಚರಣೆಗಳನ್ನು ಸಹ ವಿಸ್ತರಿಸಲಾಗುತ್ತಿದೆ. ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ ವಾಯು ಸಂಪರ್ಕವು ಮತ್ತಷ್ಟು ಸುಧಾರಿಸುವುದು ನಮ್ಮ ಪ್ರಯತ್ನವಾಗಿದೆ.

ಸ್ನೇಹಿತರೆ,

ಇಂದು ಭಾರತ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ದೇಶಾದ್ಯಂತ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸ್ಥಳಗಳಿಗೆ ಹೋಗಲು, ಹೆಚ್ಚಿನ ಸಂಖ್ಯೆಯ ಜನರಿಗೆ ವಾಯುಯಾನವು ಮೊದಲ ಆಯ್ಕೆಯಾಗಿದೆ. ಮುಂಬರುವ ಸಮಯದಲ್ಲಿ, ವಾಯುಯಾನದ ಬೇಡಿಕೆಯಲ್ಲಿ ಅಭೂತಪೂರ್ವ ವಿಸ್ತರಣೆಯಾಗಲಿದೆ. ಅಂದರೆ, ನಿಮ್ಮೆಲ್ಲರಿಗೂ ಹೆಚ್ಚಿನ ಹೂಡಿಕೆ ಅವಕಾಶಗಳನ್ನು ಸೃಷ್ಟಿಸಲಾಗುವುದು.

ಸ್ನೇಹಿತರೆ,

ಇಂದು ಭಾರತವು ಪ್ರಮುಖ ಜಾಗತಿಕ ವಾಯುಯಾನ ಕೇಂದ್ರವಾಗುತ್ತಿರುವಾಗ, ವಾಯುಯಾನ ಸಂಬಂಧಿತ ಅಗತ್ಯಗಳಿಗಾಗಿ ನಾವು ಇತರರ ಮೇಲೆ ಅವಲಂಬಿತರಾಗಬಾರದು. ನಾವು ಸ್ವಾವಲಂಬನೆಯ ಹಾದಿಯನ್ನು ಬಲಪಡಿಸಬೇಕು. ಇದು ಭಾರತದಲ್ಲಿ ಹೂಡಿಕೆ ಮಾಡಲು ಬರುವ ಕಂಪನಿಗಳಿಗೆ ಸಹ ಸಹಾಯಕವಾಗುತ್ತದೆ. ಈ ಚಿಂತನೆಯೊಂದಿಗೆ, ಭಾರತವು ವಿಮಾನ ವಿನ್ಯಾಸ, ವಿಮಾನ ತಯಾರಿಕೆ ಮತ್ತು ವಿಮಾನ ಎಂಆರ್ ಒ ಪರಿಸರ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ. ಇಂದಿಗೂ ಭಾರತವು ವಿಮಾನ ಭಾಗಗಳ ಪ್ರಮುಖ ತಯಾರಕ ಮತ್ತು ಪೂರೈಕೆದಾರನಾಗಿದೆ. ನಾವು ದೇಶದಲ್ಲಿ ಮಿಲಿಟರಿ ಮತ್ತು ಸಾರಿಗೆ ವಿಮಾನಗಳನ್ನು ತಯಾರಿಸಲು ಪ್ರಾರಂಭಿಸುತ್ತಿದ್ದೇವೆ. ಭಾರತವು ನಾಗರಿಕ ವಿಮಾನ ತಯಾರಿಕೆಯ ದಿಕ್ಕಿನಲ್ಲೂ ಸಾಗುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಭಾರತವು ಅನೇಕ ಪ್ರಯೋಜನಗಳನ್ನು ಹೊಂದಿದೆ. ಜಾಗತಿಕ ವಾಯು ಕಾರಿಡಾರ್ ‌ಗಳಲ್ಲಿ ಭಾರತದ ಭೌಗೋಳಿಕ ಸ್ಥಾನ, ನಮ್ಮ ಸರಿಸಾಟಿಯಿಲ್ಲದ ದೇಶೀಯ ಫೀಡರ್ ನೆಟ್ ‌ವರ್ಕ್ ಮತ್ತು ಭವಿಷ್ಯದಲ್ಲಿ ದೀರ್ಘ-ಪ್ರಯಾಣದ ಫ್ಲೀಟ್ ‌ಗಳ ವಿಸ್ತರಣೆ - ಇವೆಲ್ಲವೂ ನಮ್ಮ ದೊಡ್ಡ ಶಕ್ತಿಯಾಗಿವೆ.

ಸ್ನೇಹಿತರೆ,

ಭಾರತದಲ್ಲಿ ವಿನ್ಯಾಸಗೊಳಿಸಲಾದ ಮತ್ತು ತಯಾರಿಸಲಾದ ವಿದ್ಯುತ್ ಲಂಬ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವಿಮಾನಗಳು ಇಡೀ ವಾಯುಯಾನ ವಲಯಕ್ಕೆ ಹೊಸ ದಿಕ್ಕು ನೀಡುವ ದಿನ ದೂರವಿಲ್ಲ. ಈ ತಂತ್ರಜ್ಞಾನವು ನಮ್ಮ ಪ್ರಯಾಣದ ಸಮಯವನ್ನು ಬಹಳ ಕಡಿಮೆ ಮಾಡುತ್ತದೆ. ಇದರ ಜತೆಗೆ, ನಾವು ಸುಸ್ಥಿರ ವಾಯುಯಾನ ಇಂಧನದ ಮೇಲೂ ಉತ್ತಮ ಕೆಲಸ ಮಾಡುತ್ತಿದ್ದೇವೆ. ಮುಂದಿನ ಕೆಲವು ವರ್ಷಗಳಲ್ಲಿ, ಭಾರತವು ಹಸಿರು ವಿಮಾನ ಇಂಧನದ ಪ್ರಮುಖ ಉತ್ಪಾದಕ ಮತ್ತು ರಫ್ತುದಾರನಾಗುವತ್ತ ಸಾಗುತ್ತಿದೆ.

ಸ್ನೇಹಿತರೆ,

ದೇಶದ ವಾಯುಯಾನ ವಲಯದಲ್ಲಿಯೂ ನಾವು ಅನೇಕ ಸುಧಾರಣೆಗಳನ್ನು ತರುತ್ತಿದ್ದೇವೆ. ಅಂತಹ ಪ್ರತಿಯೊಂದು ಪ್ರಯತ್ನದಿಂದಾಗಿ, ಭಾರತವು ಜಾಗತಿಕ ದಕ್ಷಿಣ ಮತ್ತು ಪ್ರಪಂಚದ ನಡುವಿನ ಪ್ರಮುಖ ವಾಯುಯಾನ ದ್ವಾರವಾಗುತ್ತಿದೆ. ವಾಯುಯಾನ ವಲಯಕ್ಕೆ ಸಂಬಂಧಿಸಿದ ಹೂಡಿಕೆದಾರರು ಮತ್ತು ತಯಾರಕರಿಗೆ ಇದು ಬಹಳ ದೊಡ್ಡ ಅವಕಾಶವಾಗಿದೆ.

ಸ್ನೇಹಿತರೆ,

ಇಂದು ಭಾರತವು ದೇಶದ ವಿವಿಧ ಪ್ರದೇಶಗಳನ್ನು ಹಾಗೂ ಅಲ್ಲಿನ ಮಾರುಕಟ್ಟೆಗಳನ್ನು ಪರಸ್ಪರ ಸಂಪರ್ಕಿಸುತ್ತಿದೆ. ನಮ್ಮ ನಗರಗಳನ್ನು ವಿವಿಧ ಸಾರಿಗೆ ವಿಧಾನಗಳ ಮೂಲಕ ಬಂದರುಗಳಿಗೆ ಸಂಪರ್ಕಿಸಲಾಗುತ್ತಿದೆ. ಭಾರತದ ವಾಯುಯಾನ ದೃಷ್ಟಿಕೋನವು ವಾಯು ಸರಕು ಸಾಗಣೆಯ ಮೇಲೆ ಸಮಾನವಾಗಿ ಗಮನ ಕೇಂದ್ರೀಕೃತವಾಗಿದೆ. ಸರಕು ಸಾಗಣೆಯನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಸರ್ಕಾರವು ಅಗತ್ಯವಿರುವ ಎಲ್ಲಾ ನಿಯಂತ್ರಕ ಸುಧಾರಣೆಗಳ ಮೇಲೆ ಕೆಲಸ ಮಾಡುತ್ತಿದೆ. ಇದರೊಂದಿಗೆ, ನಮ್ಮ ಡಿಜಿಟಲ್ ಸರಕು ವೇದಿಕೆಗಳು ಸಂಪೂರ್ಣ ಪ್ರಕ್ರಿಯೆಯನ್ನು ಸರಳ ಮತ್ತು ಪಾರದರ್ಶಕವಾಗಿಸುತ್ತಿವೆ. ವಿಮಾನ ನಿಲ್ದಾಣದ ಹೊರಗೆ ಸಂಸ್ಕರಣೆಯ ವ್ಯವಸ್ಥೆಯಿಂದಾಗಿ, ನಮ್ಮ ವಿಮಾನ ನಿಲ್ದಾಣಗಳ ಮೇಲಿನ ಹೊರೆಯೂ ಕಡಿಮೆಯಾಗುತ್ತಿದೆ. ಸರಕು ನಿರ್ವಹಣೆಯ ಕೆಲಸ ಇನ್ನಷ್ಟು ವೇಗವಾಗಿ ಮತ್ತು ಉತ್ತಮವಾಗಿ ನಡೆಯುವಂತೆ ಮಾಡಲು ನಾವು ಅಂತಹ ಆಧುನಿಕ ಗೋದಾಮುಗಳನ್ನು ಸಹ ನಿರ್ಮಿಸುತ್ತಿದ್ದೇವೆ. ಭವಿಷ್ಯದಲ್ಲಿ, ಇದು ಸರಕು ಸಾಗಣೆಯ ವಿತರಣಾ ಸಮಯ ಮತ್ತು ಸರಕು ಸಾಗಣೆ ವೆಚ್ಚ ಎರಡನ್ನೂ ಕಡಿಮೆ ಮಾಡುತ್ತದೆ. ಭವಿಷ್ಯದಲ್ಲಿ, ಭಾರತವು ಬಹುದೊಡ್ಡ ಮತ್ತು ಸ್ಪರ್ಧಾತ್ಮಕ ಸಾಗಣೆ ಕೇಂದ್ರವಾಗಿ ಹೊರಹೊಮ್ಮಲಿದೆ.

ಸ್ನೇಹಿತರೆ,

ನಾನು ಎಲ್ಲಾ ಹೂಡಿಕೆದಾರರಿಗೆ ಹೇಳುವುದೇನೆಂದರೆ, ಭಾರತದ ಗೋದಾಮು ವಲಯ, ಸರಕು ಸಾಗಣೆ, ಎಕ್ಸ್ ‌ಪ್ರೆಸ್ ಸರಕು ಸಾಗಣೆ ಮತ್ತು ಇ-ಕಾಮರ್ಸ್ ಈ ಎಲ್ಲಾ ವಲಯಗಳಲ್ಲಿನ ಅವಕಾಶಗಳನ್ನು ನೀವು ಅನ್ವೇಷಿಸಬೇಕು.

ಸ್ನೇಹಿತರೆ,

ಇಂದು ಜಗತ್ತಿನ ಕೆಲವೇ ದೇಶಗಳಲ್ಲಿ ವಾಯುಯಾನ ಉದ್ಯಮಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ, ಅಂತಹ ನೀತಿ ಸ್ಥಿರತೆ ಮತ್ತು ಅಂತಹ ತಾಂತ್ರಿಕ ಮಹತ್ವಾಕಾಂಕ್ಷೆ ಇದೆ. ನಾನು ಪ್ರಪಂಚದ ಪ್ರತಿಯೊಂದು ದೇಶಕ್ಕೂ, ಪ್ರತಿಯೊಬ್ಬ ಉದ್ಯಮ ನಾಯಕರಿಗೂ, ಪ್ರತಿಯೊಬ್ಬ ನಾವೀನ್ಯಕಾರರಿಗೂ ಹೇಳುವುದೇನೆಂದರೆ, ಅವರು ಈ ಸುವರ್ಣ ಅವಕಾಶದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ನಮ್ಮ ಈ ಅಭಿವೃದ್ಧಿ ಪ್ರಯಾಣದಲ್ಲಿ ದೀರ್ಘಾವಧಿಯ ಪಾಲುದಾರರಾಗಿ ಮತ್ತು ವಿಶ್ವದ ವಾಯುಯಾನ ಕ್ಷೇತ್ರದ ಬೆಳವಣಿಗೆಗೆ ಕೆಲಸ ಮಾಡಬೇಕು. ಭಾರತ ಹಾರಾಟದ ಸಹ-ಪೈಲಟ್ ‌ಗಳಾಗಿ ನಮ್ಮೊಂದಿಗೆ ಬರಲು ನಾನು ಪ್ರಪಂಚದಾದ್ಯಂತದ ಹೂಡಿಕೆದಾರರನ್ನು ಆಹ್ವಾನಿಸುತ್ತೇನೆ. ಮತ್ತೊಮ್ಮೆ, ವಿಂಗ್ಸ್ ಇಂಡಿಯಾದ ಯಶಸ್ವಿ ಸಂಘಟನೆಗಾಗಿ ನಿಮ್ಮೆಲ್ಲರಿಗೂ ನನ್ನ ಅನೇಕ ಶುಭಾಶಯಗಳನ್ನು ತಿಳಿಸುತ್ತೇನೆ.

ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Stranded in Tehran, 50 Iranian Sikhs return safely to India

Media Coverage

Stranded in Tehran, 50 Iranian Sikhs return safely to India
NM on the go

Nm on the go

Always be the first to hear from the PM. Get the App Now!
...
Prime Minister Narendra Modi pays tributes to Freedom Fighter, Shri Pingali Venkayya on his 150th birth anniversary
August 02, 2026

The Prime Minister, Shri Narendra Modi, paid tributes to freedom fighter, Shri Pingali Venkayya on his 150th birth anniversary.

The Prime Minister remembered Pingali Venkayya for his invaluable role in giving the nation the Tricolour and said that his efforts continue to inspire people to serve the country with dedication and patriotic fervour.

Shri Modi said that the Tiranga fills every Indian heart with immense pride and inspires the nation to work towards nation-building.

The Prime Minister wrote on X;

“Tributes to Pingali Venkayya Ji on his 150th birth anniversary. He is remembered for his invaluable role in giving our nation the Tricolour. May his efforts always inspire people to serve our country with dedication and patriotic fervour.

The Tiranga fills every Indian heart with immense pride and inspires us to work towards nation building.”