PM inaugurates Omkareshwar floating solar project
PM lays foundation stone of 1153 Atal Gram Sushasan buildings
PM releases a commemorative stamp and coin marking the 100th birth anniversary of former Prime Minister Shri Atal Bihari Vajpayee
Today is a very inspiring day for all of us, today is the birth anniversary of respected Atal ji: PM
Ken-Betwa Link Project will open new doors of prosperity and happiness in Bundelkhand region: PM
The past decade will be remembered in the history of India as an unprecedented decade of water security and water conservation: PM
The Central Government is also constantly trying to increase facilities for all tourists from the country and abroad: PM

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ವೀರರ ನಾಡಾದ ಬುಂದೇಲ್ ಖಂಡದ ಎಲ್ಲ ಜನರಿಗೆ ನಾನು ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಮಧ್ಯಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್ ಅವರಿಗೂ ನಾನು ಶುಭ ಕೋರುತ್ತೇನೆ. ಈ ಪ್ರದೇಶದ ಶ್ರದ್ಧಾಳು ಮುಖ್ಯಮಂತ್ರಿ ಭಾಯಿ ಮೋಹನ್ ಯಾದವ್ ಜೀ; ಕೇಂದ್ರ ಸಚಿವರಾದ ಭಾಯಿ ಶಿವರಾಜ್ ಸಿಂಗ್ ಜೀ, ವೀರೇಂದ್ರ ಕುಮಾರ್ ಜೀ ಮತ್ತು ಸಿಆರ್ ಪಾಟಿಲ್ ಜೀ; ಉಪ ಮುಖ್ಯಮಂತ್ರಿ ಜಗದೀಶ್ ದೇವ್ಡಾ ಜೀ; ರಾಜೇಂದ್ರ ಶುಕ್ಲಾ ಜೀ; ಇತರ ಸಚಿವರು, ಸಂಸದರು, ಶಾಸಕರು, ಹಾಗು ಇತರ ಗಣ್ಯರೇ, ಪೂಜ್ಯ ಸಾಧುಗಳು ಮತ್ತು ಮಧ್ಯಪ್ರದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ.

ಇಂದು, ಇಡೀ ಜಗತ್ತು ಕ್ರಿಸ್ಮಸ್ ಆಚರಿಸುತ್ತಿದೆ. ನಾನು ರಾಷ್ಟ್ರ ಮತ್ತು ಪ್ರಪಂಚದಾದ್ಯಂತದ ಕ್ರಿಶ್ಚಿಯನ್ ಸಮುದಾಯಕ್ಕೆ ನನ್ನ ಕ್ರಿಸ್ಮಸ್ ಶುಭಾಶಯಗಳನ್ನು ಹೃತ್ಪೂರ್ವಕವಾಗಿ ತಿಳಿಸುತ್ತೇನೆ. ಇದಲ್ಲದೆ, ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರವು ಯಶಸ್ವಿಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸಿದೆ. ನಾನು ಮಧ್ಯಪ್ರದೇಶದ ಜನರಿಗೆ ಮತ್ತು ಸಮರ್ಪಣಾ ಭಾವದ  ಬಿಜೆಪಿ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಳೆದ ಒಂದು ವರ್ಷದಿಂದ ಮಧ್ಯಪ್ರದೇಶವು ಅಭಿವೃದ್ಧಿಯ ಹೊಸ ಅಲೆಗೆ ಸಾಕ್ಷಿಯಾಗಿದೆ. ಇಂದು  ಕೂಡಾ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ವಿಶೇಷವೆಂದರೆ, ಕೆನ್-ಬೆಟ್ವಾ ಲಿಂಕ್ ಯೋಜನೆಯ ಐತಿಹಾಸಿಕ ದೌಧನ್ ಅಣೆಕಟ್ಟಿಗೆ ಅಡಿಪಾಯ ಹಾಕಲಾಗಿದೆ ಮತ್ತು ಓಂಕಾರೇಶ್ವರ ತೇಲುವ ಸೌರ ಸ್ಥಾವರವನ್ನು ಉದ್ಘಾಟಿಸಲಾಗಿದೆ. ಇದು ಮಧ್ಯಪ್ರದೇಶದಲ್ಲಿ ಜಾರಿಗೆ ಬಂದಿರುವ ಮೊದಲ ಯೋಜನೆ. ಈ ಮಹತ್ವದ ಸಾಧನೆಗಳಿಗಾಗಿ ಮಧ್ಯಪ್ರದೇಶದ ಜನತೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

 

ಸ್ನೇಹಿತರೇ,

ಇಂದು ನಮ್ಮೆಲ್ಲರಿಗೂ ಬಹಳ  ಸ್ಪೂರ್ತಿದಾಯಕ ದಿನ. ಇಂದು ನಮ್ಮ ಪೂಜ್ಯ ಅಟಲ್ ಜೀ ಅವರ ಜನ್ಮದಿನ. ಈ ದಿನವು ಭಾರತ ರತ್ನ ಅಟಲ್ ಜೀ ಅವರ ಜನ್ಮ ಶತಮಾನೋತ್ಸವವನ್ನು ಸೂಚಿಸುತ್ತದೆ. ಅಟಲ್ ಜೀ ಅವರ ಜನ್ಮ ದಿನಾಚರಣೆಯು ಉತ್ತಮ ಆಡಳಿತ ಮತ್ತು ಸಮರ್ಪಿತ ಸೇವೆಗೆ ಸ್ಫೂರ್ತಿಯನ್ನು ನೀಡುವ ಉತ್ಸವವಾಗಿದೆ.  ಇಂದು, ನಾನು ಅವರ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವಾಗ, ನಾನು ಅಮೂಲ್ಯವಾದ ನೆನಪುಗಳ ಪ್ರವಾಹದಲ್ಲಿ  ಮುಳುಗಿದ್ದೆ. ಹಲವು ವರ್ಷಗಳ ಕಾಲ ಅಟಲ್ ಜೀ ಅವರು ನನ್ನಂತಹ ಅನೇಕ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡಿದರು ಮತ್ತು ಪೋಷಿಸಿದರು. ರಾಷ್ಟ್ರದ ಅಭಿವೃದ್ಧಿಗೆ ಅವರು ನೀಡಿದ ಅಮೂಲ್ಯ ಕೊಡುಗೆಗಳು ನಮ್ಮ ನೆನಪುಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತವೆ.

ಇದಲ್ಲದೆ, ಮಧ್ಯಪ್ರದೇಶದಲ್ಲಿ 1,100 ಕ್ಕೂ ಹೆಚ್ಚು ಅಟಲ್ ಗ್ರಾಮ ಸೇವಾ ಸದನಗಳ ನಿರ್ಮಾಣ ಇಂದು ಪ್ರಾರಂಭವಾಗುತ್ತಿದೆ ಮತ್ತು ಇವುಗಳಿಗೆ ಮೊದಲ ಕಂತನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಅಟಲ್ ಗ್ರಾಮ ಸೇವಾ ಸದನಗಳು ನಮ್ಮ ಗ್ರಾಮಗಳ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸ್ನೇಹಿತರೇ,

ನಮಗೆ, ಉತ್ತಮ ಆಡಳಿತ ದಿನವು ಕೇವಲ ಒಂದು ದಿನದ ಆಚರಣೆಯಲ್ಲ; ಇದು ಜೀವನ ವಿಧಾನ ಮತ್ತು ಬಿಜೆಪಿ ಸರ್ಕಾರಗಳ ಹೆಗ್ಗುರುತು. ಈ ದೇಶದ ಜನರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಸತತ ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ನೀವು ನಿರಂತರವಾಗಿ ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದೀರಿ. ಉತ್ತಮ ಆಡಳಿತದಲ್ಲಿ ಈ ನಿರಂತರ ನಂಬಿಕೆ ನಮ್ಮ ಯಶಸ್ಸಿನ ಮೂಲಾಧಾರವಾಗಿದೆ.

ಲಿಖಿತ ದಾಖಲೆಗಳ ಮೂಲಕ ಆಡಳಿತವನ್ನು ಮೌಲ್ಯಮಾಪನ ಮಾಡುವಲ್ಲಿ ನಿಪುಣರಾಗಿರುವ ಈ ದೇಶದ ಬುದ್ಧಿಜೀವಿಗಳು ಮತ್ತು ವಿಶ್ಲೇಷಕರು ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅದರ ಪರಿಶೀಲನೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ. ಅಭಿವೃದ್ಧಿ, ಸಾರ್ವಜನಿಕ ಕಲ್ಯಾಣ ಮತ್ತು ಉತ್ತಮ ಆಡಳಿತಕ್ಕೆ ಸಂಬಂಧಿಸಿದ 100-200 ನಿಯತಾಂಕಗಳನ್ನು ಗುರುತಿಸೋಣ. ನಂತರ, ಕಾಂಗ್ರೆಸ್ ಆಳ್ವಿಕೆ ನಡೆಸಿದ ಪ್ರದೇಶಗಳಲ್ಲಿ, ಎಡ ಅಥವಾ ಕಮ್ಯುನಿಸ್ಟ್ ಪಕ್ಷಗಳು ಅಧಿಕಾರದಲ್ಲಿದ್ದ ಪ್ರದೇಶಗಳಲ್ಲಿ, ಕುಟುಂಬ-ಚಾಲಿತ ರಾಜಕೀಯ ಪಕ್ಷಗಳು ಆಡಳಿತ ನಡೆಸಿದ ಪ್ರದೇಶಗಳಲ್ಲಿ ಮತ್ತು ಸಮ್ಮಿಶ್ರ ಸರ್ಕಾರಗಳು ಅಧಿಕಾರದಲ್ಲಿದ್ದ ಪ್ರದೇಶಗಳಲ್ಲಿ ಏನು ಸಾಧಿಸಲಾಗಿದೆ ಎಂಬುದನ್ನು ನಿರ್ಣಯಿಸೋಣ. ಎಲ್ಲಕ್ಕಿಂತ ಮುಖ್ಯವಾಗಿ, ಬಿಜೆಪಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರದೇಶಗಳನ್ನು ಮೌಲ್ಯಮಾಪನ ಮಾಡೋಣ.

ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಸಾರ್ವಜನಿಕ ಕಲ್ಯಾಣ, ಅಭಿವೃದ್ಧಿ ಉಪಕ್ರಮಗಳು ಮತ್ತು ರಾಷ್ಟ್ರದ ಸೇವೆಯಲ್ಲಿ ನಾವು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿದ್ದೇವೆ ಎಂದು ನಾನು ವಿಶ್ವಾಸದಿಂದ ಪ್ರತಿಪಾದಿಸಬಲ್ಲೆ. ಈ ನಿಯತಾಂಕಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಿದರೆ, ಸಾಮಾನ್ಯ ಜನರಿಗೆ ಸಂಬಂಧಿಸಿ ಬಿಜೆಪಿ ಸರ್ಕಾರಗಳ ಅಚಲ ಸಮರ್ಪಣೆಯನ್ನು ರಾಷ್ಟ್ರವು ನೋಡುವಂತಾಗುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಈಡೇರಿಸಲು ನಾವು ದಣಿವರಿಯದೆ ಕೆಲಸ ಮಾಡುತ್ತೇವೆ. ಈ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದವರು ತಮ್ಮ ಕನಸುಗಳು  ಸಾಕಾರಗೊಳ್ಳಬೇಕು ಎನ್ನುವುದಕ್ಕೆ  ಅರ್ಹರು. ನಮ್ಮ ಅವಿರತ ಪ್ರಯತ್ನಗಳಿಂದ ಆ ಕನಸುಗಳನ್ನು ಪೋಷಿಸಲು ನಾವು ಬದ್ಧರಾಗಿದ್ದೇವೆ.

 

ಉತ್ತಮ ಆಡಳಿತವೆಂದರೆ ಕೇವಲ ಅತ್ಯುತ್ತಮ ಯೋಜನೆಗಳನ್ನು ರೂಪಿಸುವುದಷ್ಟೇ ಅಲ್ಲ; ಅದು ಅವುಗಳ ಪರಿಣಾಮಕಾರಿ ಮತ್ತು ಪಾರದರ್ಶಕ ಅನುಷ್ಠಾನವನ್ನೂ ಒಳಗೊಂಡಿರುತ್ತದೆ. ಆಡಳಿತದ ನಿಜವಾದ ಮೌಲ್ಯಮಾಪನವು ಜನರಿಗೆ ಪ್ರಯೋಜನಗಳು  ಎಷ್ಟರ ಮಟ್ಟಿಗೆ ತಲುಪುತ್ತವೆ ಎಂಬುದರಲ್ಲಿ ಅಡಗಿದೆ. ಈ ಹಿಂದೆ, ಕಾಂಗ್ರೆಸ್ ಸರ್ಕಾರಗಳು ಘೋಷಣೆಗಳು ಮತ್ತು ದೃಗ್ವಿಜ್ಞಾನಕ್ಕೆ ಹೆಸರುವಾಸಿಯಾಗಿದ್ದವು- ಅದೆಂದರೆ ಅಡಿಪಾಯ ಹಾಕುವುದು, ರಿಬ್ಬನ್ ಗಳನ್ನು ಕತ್ತರಿಸುವುದು, ಸಾಂಪ್ರದಾಯಿಕ ದೀಪಗಳನ್ನು ಬೆಳಗಿಸುವುದು ಮತ್ತು ಅವರ ಛಾಯಾಚಿತ್ರಗಳನ್ನು ಪ್ರಕಟಿಸುವುದು. ಅವರ ಜವಾಬ್ದಾರಿಯು ಅಲ್ಲಿಗೆ ಕೊನೆಗೊಂಡಿತು, ಜನರಿಗೆ ನೀಡಿದ ಭರವಸೆಗಳು ಅನುಷ್ಠಾನಕ್ಕೆ ಬರದೆ  ಪ್ರಯೋಜನಗಳು ಲಭಿಸದೆ ಹೋದವು.

ನಾನು ಪ್ರಧಾನಿಯಾದ ನಂತರ “ಪ್ರಗತಿ” ಕಾರ್ಯಕ್ರಮದ ಮೂಲಕ ಹಳೆಯ ಯೋಜನೆಗಳನ್ನು ಪರಿಶೀಲಿಸಿದೆ. 35-40 ವರ್ಷಗಳ ಹಿಂದೆ ಪ್ರಾರಂಭಿಸಲಾದ ಯೋಜನೆಗಳ ಕೆಲಸವು ಒಂದು ಇಂಚು ಸಹ ಪ್ರಗತಿ ಸಾಧಿಸಿಲ್ಲ ಎಂಬುದನ್ನು ಕಂಡು ನನಗೆ ಆಘಾತವಾಯಿತು. ಇದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಉದ್ದೇಶ ಮತ್ತು ಗಂಭೀರತೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ.

ಇಂದು, ಪಿಎಂ ಕಿಸಾನ್ ಸಮ್ಮಾನ್ ನಿಧಿಯಂತಹ ಯೋಜನೆಗಳ ಸ್ಪಷ್ಟ ಪ್ರಯೋಜನಗಳನ್ನು ನಾವು ನೋಡುತ್ತಿದ್ದೇವೆ. ಮಧ್ಯಪ್ರದೇಶದ ರೈತರು ಈಗ ಈ ಯೋಜನೆಯಡಿ ವಾರ್ಷಿಕವಾಗಿ 12,000 ರೂ.ಗಳನ್ನು ಪಡೆಯುತ್ತಿದ್ದಾರೆ, ಇದು ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರಿಂದ ಮಾತ್ರ ಸಾಧ್ಯವಾಗಿದೆ. ಮಧ್ಯಪ್ರದೇಶದಲ್ಲಿ, ಲಾಡ್ಲಿ ಬೆಹ್ನಾ ಯೋಜನೆ ಜೀವನವನ್ನು ಪರಿವರ್ತಿಸುತ್ತಿದೆ. ಮಹಿಳೆಯರಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯದಿದ್ದರೆ ಮತ್ತು ಅವರನ್ನು ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳೊಂದಿಗೆ ಜೋಡಿಸಿರದಿದ್ದರೆ ಅಂತಹ ಯೋಜನೆಗಳನ್ನು ಜಾರಿಗೆ ತರುವುದು ಅಸಾಧ್ಯವಾಗಿತ್ತು.

ಹಿಂದೆ, ಸಬ್ಸಿಡಿ ಪಡಿತರದಂತಹ ಯೋಜನೆಗಳು ಅಸ್ತಿತ್ವದಲ್ಲಿದ್ದವು, ಆದರೆ ಬಡವರು ತಮ್ಮ ಹಕ್ಕುಗಳನ್ನು ಪಡೆಯಲು ಹೆಣಗಾಡುತ್ತಿದ್ದರು. ಇಂದು, ತಂತ್ರಜ್ಞಾನದ ಪರಿಚಯದೊಂದಿಗೆ, ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ನಾವು ನೋಡುತ್ತೇವೆ. ಬಡವರು ಈಗ ಯಾವುದೇ ತೊಂದರೆಯಿಲ್ಲದೆ ಉಚಿತ ಪಡಿತರವನ್ನು ಪಡೆಯುತ್ತಾರೆ. ವಂಚನೆಯನ್ನು ತೊಡೆದುಹಾಕಿದ ಮತ್ತು ಅಗತ್ಯ ಸೇವೆಗಳಿಗೆ ರಾಷ್ಟ್ರವ್ಯಾಪಿ ಪ್ರವೇಶವನ್ನು ಖಚಿತಪಡಿಸಿದ "ಒಂದು ರಾಷ್ಟ್ರ, ಒಂದು ಪಡಿತರ ಚೀಟಿ" ಯಂತಹ ಉಪಕ್ರಮಗಳಿಂದಾಗಿ ಮಾತ್ರ ಈ ಪರಿವರ್ತನೆ ಸಾಧ್ಯವಾಯಿತು.

 

ಸ್ನೇಹಿತರೇ,

ಉತ್ತಮ ಆಡಳಿತ ಎಂದರೆ ಒಬ್ಬ ನಾಗರಿಕನು ತನ್ನ ಹಕ್ಕುಗಳಿಗಾಗಿ ಸರ್ಕಾರವನ್ನು ಬೇಡಬೇಕಾಗಿಲ್ಲ ಅಥವಾ ಒಂದು ಸರ್ಕಾರಿ ಕಚೇರಿಯಿಂದ ಇನ್ನೊಂದಕ್ಕೆ ಓಡಬೇಕಾಗಿಲ್ಲ. ನಮ್ಮ "ಸ್ಯಾಚುರೇಶನ್" ನೀತಿಯು 100% ಫಲಾನುಭವಿಗಳು 100% ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಉತ್ತಮ ಆಡಳಿತದ ಈ ಮಂತ್ರವೇ ಬಿಜೆಪಿ ಸರ್ಕಾರಗಳನ್ನು ಇತರರಿಂದ ಪ್ರತ್ಯೇಕಿಸುತ್ತದೆ. ಇಂದು, ಇಡೀ ದೇಶವು ಇದನ್ನು ಗುರುತಿಸಿದೆ, ಅದಕ್ಕಾಗಿಯೇ ಬಿಜೆಪಿಯನ್ನು ಮುನ್ನಡೆಸಲು ಪದೇ ಪದೇ ಆಯ್ಕೆ ಮಾಡಲಾಗುತ್ತಿದೆ.

ಸ್ನೇಹಿತರೇ,

ಎಲ್ಲಿ ಉತ್ತಮ ಆಡಳಿತವಿದೆಯೋ, ಅಲ್ಲಿ ಪ್ರಸ್ತುತ ಸವಾಲುಗಳನ್ನು ಪರಿಹರಿಸುವುದು ಮಾತ್ರವಲ್ಲ, ಭವಿಷ್ಯದ ಸವಾಲುಗಳನ್ನು ಸಹ ನಿರೀಕ್ಷಿಸಲಾಗುತ್ತದೆ ಮತ್ತು ಯೋಜಿಸಲಾಗುತ್ತದೆ. ದುರದೃಷ್ಟವಶಾತ್, ಕಾಂಗ್ರೆಸ್ ದಶಕಗಳ ಕಾಲ ದೇಶವನ್ನು ಆಳಿತು ಆದರೆ ಆಡಳಿತವನ್ನು ನೀಡಲು ವಿಫಲವಾಯಿತು. ಕಾಂಗ್ರೆಸ್ ಯಾವಾಗಲೂ ಸರ್ಕಾರದಲ್ಲಿ ಇರುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸಿದೆ, ಆದರೆ ಆಡಳಿತವು ಅವರಿಗೆ ದೂರದ ಪರಿಕಲ್ಪನೆಯಾಗಿ ಉಳಿದಿದೆ. ಆಡಳಿತ ಮತ್ತು ಕಾಂಗ್ರೆಸ್ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಬುಂದೇಲ್ಖಂಡದ ಜನರು ತಲೆಮಾರುಗಳಿಂದ ಈ ನಿರ್ಲಕ್ಷ್ಯದ ಪರಿಣಾಮಗಳನ್ನು ಅನುಭವಿಸಿದ್ದಾರೆ. ಇಲ್ಲಿನ ರೈತರು, ತಾಯಂದಿರು ಮತ್ತು ಸಹೋದರಿಯರು ಪ್ರತಿ ಹನಿ ನೀರಿಗಾಗಿ ಹೆಣಗಾಡುತ್ತಿದ್ದಾರೆ. ಅಂತಹ ಪರಿಸ್ಥಿತಿ ಏಕೆ ಉದ್ಭವಿಸಿತು? ಏಕೆಂದರೆ ನೀರಿನ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಕಾಂಗ್ರೆಸ್ ಎಂದಿಗೂ ಯೋಚಿಸಲಿಲ್ಲ.

ಸ್ನೇಹಿತರೇ,

ಭಾರತದ ಅಭಿವೃದ್ಧಿಗೆ ನದಿ ನೀರಿನ ಮಹತ್ವವನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ.  ನಾನು ಹೀಗೆ ಕೇಳುವಾಗ ನಿಮಗೆ ಆಶ್ಚರ್ಯವಾಗಬಹುದು: ಸ್ವಾತಂತ್ರ್ಯದ ನಂತರ, ನೀರಿನ ಶಕ್ತಿಯಾದ "ಜಲ ಶಕ್ತಿ" ಬಗ್ಗೆ ಮೊದಲು ಯೋಚಿಸಿದವರು ಯಾರು? ಭಾರತದ ಜಲ ಸಂಪನ್ಮೂಲಗಳಿಗಾಗಿ ದೂರದೃಷ್ಟಿಯ ಯೋಜನೆಗಳನ್ನು ಮಾಡಿದವರು ಯಾರು? ಈ ವಿಷಯಗಳ ಬಗ್ಗೆ ಯಾರು ಕೆಲಸ ಮಾಡಿದರು? ನನ್ನ ಪತ್ರಕರ್ತ ಸ್ನೇಹಿತರು ಸಹ ಈ ಪ್ರಶ್ನೆಗೆ ಉತ್ತರಿಸಲು ಹೆಣಗಾಡುತ್ತಾರೆ ಏಕೆಂದರೆ ಸತ್ಯವನ್ನು ಉದ್ದೇಶಪೂರ್ವಕವಾಗಿ ಅಡಗಿಸಲಾಗಿದೆ. ಒಬ್ಬ ವ್ಯಕ್ತಿಗೆ ಮನ್ನಣೆ ನೀಡುವ ಅವರ ಗೀಳಿನಲ್ಲಿ, ನಿಜವಾದ ದಾರ್ಶನಿಕನನ್ನು ಮರೆತುಬಿಡಲಾಯಿತು. ಇಂದು, ಸ್ವಾತಂತ್ರ್ಯದ ನಂತರ, ಭಾರತದ ಜಲ ಸಂಪನ್ಮೂಲಗಳ ದೃಷ್ಟಿಕೋನ, ಅಣೆಕಟ್ಟುಗಳನ್ನು ನಿರ್ಮಿಸುವ ಕಲ್ಪನೆ ಮತ್ತು ಜಲಶಕ್ತಿಯ ಪರಿಕಲ್ಪನೆಯನ್ನು ಮಾಡಿದವರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರವರ್ತಕರು ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ.

ಭಾರತದಲ್ಲಿ ದೊಡ್ಡ ನದಿ ಕಣಿವೆ ಯೋಜನೆಗಳು ಡಾ. ಅಂಬೇಡ್ಕರ್ ಅವರ ಚಿಂತನೆ/ದೃಷ್ಟಿಕೋನದಿಂದ ಹುಟ್ಟಿಕೊಂಡವು. ಇಂದು ಅಸ್ತಿತ್ವದಲ್ಲಿರುವ ಕೇಂದ್ರ ಜಲ ಆಯೋಗವೂ ಅವರ ಪ್ರಯತ್ನದ ಫಲವಾಗಿದೆ. ಆದರೂ ಜಲ ಸಂರಕ್ಷಣೆ ಮತ್ತು ಪ್ರಮುಖ ಅಣೆಕಟ್ಟುಗಳ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳನ್ನು ಕಾಂಗ್ರೆಸ್ ಎಂದಿಗೂ ಅಂಗೀಕರಿಸಲಿಲ್ಲ. ಅವರ ಕೊಡುಗೆಗಳನ್ನು ಸಾರ್ವಜನಿಕ ಜ್ಞಾನದಿಂದ ಮರೆಮಾಡಲಾಗಿತ್ತು. ಬಾಬಾ ಸಾಹೇಬ್ ಅವರಿಗೆ ಅರ್ಹವಾದ ಮನ್ನಣೆಯನ್ನು ಕಾಂಗ್ರೆಸ್ ಎಂದಿಗೂ ನೀಡಲಿಲ್ಲ.

 

ಇಂದಿಗೂ, ಏಳು ದಶಕಗಳ ನಂತರ, ದೇಶದ ಅನೇಕ ರಾಜ್ಯಗಳ ನಡುವೆ ನೀರಿನ ವಿವಾದಗಳು ಮುಂದುವರೆದಿವೆ. ಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಈ ವಿವಾದಗಳನ್ನು ಪರಿಹರಿಸಬಹುದಿತ್ತು. ಆದರೆ ಕಾಂಗ್ರೆಸ್ಸಿನ ಉದ್ದೇಶಗಳು ದೋಷಪೂರಿತವಾಗಿದ್ದವು, ಮತ್ತು ಈ ಸಮಸ್ಯೆಗಳನ್ನು ಪರಿಹರಿಸಲು ಅದು ಎಂದಿಗೂ ಗಂಭೀರ ಅಥವಾ ದೃಢವಾದ ಪ್ರಯತ್ನಗಳನ್ನು ಮಾಡಲಿಲ್ಲ.

ಸ್ನೇಹಿತರೇ,

ಅಟಲ್ ಜೀ ಅವರ ಸರ್ಕಾರ ರಚನೆಯಾದಾಗ, ಅವರು ದೇಶದ ಜಲ ಸಂಬಂಧಿತ ಸವಾಲುಗಳನ್ನು ಬಹಳ ಗಂಭೀರವಾಗಿ ಎದುರಿಸಲು ಪ್ರಾರಂಭಿಸಿದರು. ಆದಾಗ್ಯೂ, 2004 ರ ನಂತರ, ಅಟಲ್ ಜೀ ಅವರ ಸರ್ಕಾರವನ್ನು ಸ್ಥಳಾಂತರಿಸಿದಾಗ, ಕಾಂಗ್ರೆಸ್ ಆ ಎಲ್ಲಾ ಯೋಜನೆಗಳು, ಕನಸುಗಳು ಮತ್ತು ಪ್ರಯತ್ನಗಳನ್ನು ಬದಿಗಿಟ್ಟಿತು. ಇಂದು, ನಮ್ಮ ಸರ್ಕಾರವು ನದಿಗಳನ್ನು ಜೋಡಿಸುವ ರಾಷ್ಟ್ರೀಯ ಅಭಿಯಾನವನ್ನು ವೇಗಗೊಳಿಸುತ್ತಿದೆ. ಕೆನ್-ಬೆಟ್ವಾ ಲಿಂಕ್ ಯೋಜನೆಯ ಕನಸು ಈಗ ನನಸಾಗುವ ಅಂಚಿನಲ್ಲಿದೆ. ಈ ಯೋಜನೆಯು ಬುಂದೇಲ್ಖಂಡ್ ಪ್ರದೇಶದಲ್ಲಿ ಸಮೃದ್ಧಿ ಮತ್ತು ಸಂತೋಷದ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಛತ್ತರ್ಪುರ, ಟಿಕಮ್ಗರ್, ನಿವಾರಿ, ಪನ್ನಾ, ದಾಮೋಹ್ ಮತ್ತು ಸಾಗರ್ ಸೇರಿದಂತೆ ಮಧ್ಯಪ್ರದೇಶದ ಹತ್ತು ಜಿಲ್ಲೆಗಳು ಸುಧಾರಿತ ನೀರಾವರಿ ಸೌಲಭ್ಯಗಳಿಂದ ಪ್ರಯೋಜನ ಪಡೆಯಲಿವೆ.

ನಾನು ವೇದಿಕೆಯ ಮೇಲೆ ಕಾಲಿಡುವಾಗ, ವಿವಿಧ ಜಿಲ್ಲೆಗಳ ರೈತರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರಲ್ಲಿ ಸಂತೋಷ ಮತ್ತು ಅವರ ಮುಖದಲ್ಲಿ ಖುಶಿ ಸ್ಪಷ್ಟವಾಗಿತ್ತು. ಈ ಯೋಜನೆಯು ತಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಭದ್ರಪಡಿಸಿದೆ ಎಂದು ಅವರು ತಮ್ಮ ಭಾವನೆ ವ್ಯಕ್ತಪಡಿಸಿದರು.

ಸ್ನೇಹಿತರೇ,

ಉತ್ತರ ಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಬಾಂಡಾ, ಮಹೋಬಾ, ಲಲಿತ್ಪುರ್ ಮತ್ತು ಝಾನ್ಸಿಯಂತಹ ಜಿಲ್ಲೆಗಳು ಸಹ ಈ ಉಪಕ್ರಮದಿಂದ ಪ್ರಯೋಜನ ಪಡೆಯಲಿವೆ.

ಸ್ನೇಹಿತರೇ,

ನದಿಗಳನ್ನು ಜೋಡಿಸುವ ಬೃಹತ್ ಅಭಿಯಾನದ ಅಡಿಯಲ್ಲಿ ಎರಡು ಯೋಜನೆಗಳನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಮಧ್ಯಪ್ರದೇಶವಾಗಿದೆ. ನಾನು ಕೆಲವು ದಿನಗಳ ಹಿಂದೆ ರಾಜಸ್ಥಾನದಲ್ಲಿದ್ದೆ, ಅಲ್ಲಿ ಮೋಹನ್ ಜೀ ಈ ಬಗ್ಗೆ ವಿವರಿಸಿದರು. ಪಾರ್ವತಿ-ಕಾಳಿಸಿಂಧ್-ಚಂಬಲ್ ಮತ್ತು ಕೆನ್-ಬೆಟ್ವಾ ಲಿಂಕ್ ಯೋಜನೆಗಳ ಮೂಲಕ ಅನೇಕ ನದಿಗಳನ್ನು ಸಂಪರ್ಕಿಸುವ ಯೋಜನೆಗಳು ಜಾರಿಯಲ್ಲಿವೆ. ಈ ಒಪ್ಪಂದದಿಂದ ಮಧ್ಯಪ್ರದೇಶವು ಗಮನಾರ್ಹ ಲಾಭವನ್ನು ಪಡೆಯಲು ಸಜ್ಜಾಗಿದೆ.

 

ಸ್ನೇಹಿತರೇ,

ನೀರಿನ ಸುರಕ್ಷತೆಯು 21ನೇ ಶತಮಾನದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಈ ಶತಮಾನದಲ್ಲಿ, ಸಾಕಷ್ಟು ನೀರು ಮತ್ತು ಪರಿಣಾಮಕಾರಿ ನೀರಿನ ನಿರ್ವಹಣೆಯನ್ನು ಹೊಂದಿರುವ ದೇಶಗಳು ಮತ್ತು ಪ್ರದೇಶಗಳು ಮಾತ್ರ ಅಭಿವೃದ್ಧಿ ಹೊಂದುತ್ತವೆ. ನೀರಿದ್ದರೆ  ಕೃಷಿ ಅಭಿವೃದ್ಧಿ ಹೊಂದುತ್ತದೆ ಮತ್ತು ಜಾನುವಾರುಗಳು ಸಮೃದ್ಧವಾಗುತ್ತವೆ; ಕೈಗಾರಿಕೆಗಳು ಹಾಗು  ವ್ಯವಹಾರಗಳು ಬೆಳವಣಿಗೆ  ಹೊಂದುತ್ತವೆ.

ನಾನು ಗುಜರಾತಿನಿಂದ ಬಂದಿದ್ದೇನೆ, ವರ್ಷದ ಬಹುಪಾಲು ಕಾಲ ಬರಗಾಲವು ಸಾಮಾನ್ಯ ಘಟನೆಯಾಗಿದ್ದ ರಾಜ್ಯವದು. ಆದಾಗ್ಯೂ, ಮಧ್ಯಪ್ರದೇಶದಲ್ಲಿ ಹುಟ್ಟುವ ನರ್ಮದಾ ಮಾತೆಯ ಆಶೀರ್ವಾದವು ಗುಜರಾತಿನ ಹಣೆಬರಹವನ್ನು ಬದಲಾಯಿಸಿತು. ಮಧ್ಯಪ್ರದೇಶದ ಬರಪೀಡಿತ ಪ್ರದೇಶಗಳನ್ನು ನೀರಿನ ಬಿಕ್ಕಟ್ಟಿನಿಂದ ಮುಕ್ತಗೊಳಿಸುವುದು ನನ್ನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಬುಂದೇಲ್ಖಂಡದ ಸಹೋದರಿಯರಿಗೆ ಮತ್ತು ಇಲ್ಲಿನ ರೈತರಿಗೆ ನಿಮ್ಮ ಹೋರಾಟಗಳನ್ನು ನಿವಾರಿಸಲು ದಣಿವರಿಯದೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೆ.

ಈ ದೃಷ್ಟಿಕೋನದ ಅಡಿಯಲ್ಲಿ, ಬುಂದೇಲ್ಖಂಡ್ನ ನೀರಿನ ಸಮಸ್ಯೆಗಳನ್ನು ಪರಿಹರಿಸಲು ನಾವು ಸುಮಾರು 45,000 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿದ್ದೇವೆ. ಈ ದೃಷ್ಟಿಕೋನದ ಮೇಲೆ ಕಾರ್ಯನಿರ್ವಹಿಸಲು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರಗಳನ್ನು ನಾವು ನಿರಂತರವಾಗಿ ಪ್ರೋತ್ಸಾಹಿಸಿದ್ದೇವೆ. ಇಂದು, ಕೆನ್-ಬೆಟ್ವಾ ಲಿಂಕ್ ಯೋಜನೆಯ ಭಾಗವಾಗಿ, ದೌಧನ್ ಅಣೆಕಟ್ಟಿಗೆ ಅಡಿಪಾಯ ಹಾಕಲಾಗಿದೆ. ಈ ಅಣೆಕಟ್ಟು ನೂರಾರು ಕಿಲೋಮೀಟರ್ ಕಾಲುವೆಗಳು ರೂಪುಗೊಳ್ಳಲು ಕಾರಣವಾಗುತ್ತದೆ ಮತ್ತು ಅದರ ನೀರು ಸುಮಾರು 11 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ.

ಸ್ನೇಹಿತರೇ,

ಕಳೆದ ದಶಕವು ಭಾರತದ ಇತಿಹಾಸದಲ್ಲಿ ಜಲ ಭದ್ರತೆ ಮತ್ತು ಸಂರಕ್ಷಣೆಯ ಅಸಾಧಾರಣ ಪ್ರಗತಿಯ ಅವಧಿಯಾಗಿ ನೆನಪಿನಲ್ಲಿ ಉಳಿಯುತ್ತದೆ. ಹಿಂದಿನ ಸರ್ಕಾರಗಳಲ್ಲಿ, ನೀರಿಗೆ ಸಂಬಂಧಿಸಿದ ಜವಾಬ್ದಾರಿಗಳು ವಿವಿಧ ಇಲಾಖೆಗಳಲ್ಲಿ ಹರಡಿಕೊಂಡಿದ್ದವು. ಇದನ್ನು ಪರಿಹರಿಸಲು, ನಾವು ಜಲ ಶಕ್ತಿ ಸಚಿವಾಲಯವನ್ನು ಸ್ಥಾಪಿಸಿದ್ದೇವೆ. ಮೊದಲ ಬಾರಿಗೆ, ಪ್ರತಿ ಮನೆಗೆ ನಲ್ಲಿ ನೀರನ್ನು ಒದಗಿಸಲು ರಾಷ್ಟ್ರೀಯ ಮಿಷನ್ ಪ್ರಾರಂಭಿಸಲಾಯಿತು. ಸ್ವಾತಂತ್ರ್ಯದ ನಂತರದ ಏಳು ದಶಕಗಳಲ್ಲಿ, ಕೇವಲ ಮೂರು ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ನೀರಿನ ಲಭ್ಯತೆಯನ್ನು ಹೊಂದಿದ್ದವು. ಕಳೆದ ಐದು ವರ್ಷಗಳಲ್ಲಿ, ನಾವು 12 ಕೋಟಿ ಹೆಚ್ಚುವರಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದ್ದೇವೆ. ಇಲ್ಲಿಯವರೆಗೆ, ಈ ಯೋಜನೆಯಲ್ಲಿ 3.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಲಾಗಿದೆ.

ಆಗಾಗ್ಗೆ ಚರ್ಚಿಸಲ್ಪಡದ ಜಲ ಜೀವನ್ ಮಿಷನ್ ನ ಮತ್ತೊಂದು ನಿರ್ಣಾಯಕ ಅಂಶವೆಂದರೆ ನೀರಿನ ಗುಣಮಟ್ಟ ಪರೀಕ್ಷೆಯ ಮೇಲೆ ಗಮನ ಹರಿಸುವುದು. ದೇಶಾದ್ಯಂತ 2,100 ನೀರಿನ ಗುಣಮಟ್ಟ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಹಳ್ಳಿಗಳಲ್ಲಿ 25 ಲಕ್ಷ ಮಹಿಳೆಯರಿಗೆ ಕುಡಿಯುವ ನೀರಿನ ಪರೀಕ್ಷೆ ತರಬೇತಿ ನೀಡಲಾಗಿದೆ. ಇದರ ಪರಿಣಾಮವಾಗಿ, ಸಾವಿರಾರು ಗ್ರಾಮಗಳು ಈಗ ಕಲುಷಿತ ನೀರನ್ನು ಸೇವಿಸುವ ಅನಿವಾರ್ಯತೆಯಿಂದ  ಮುಕ್ತವಾಗಿವೆ. ನೀರಿನಿಂದ ಹರಡುವ ರೋಗಗಳಿಂದ ಮಕ್ಕಳು ಮತ್ತು ಸಮುದಾಯಗಳನ್ನು ರಕ್ಷಿಸುವಲ್ಲಿ ಈ ಪ್ರಯತ್ನದ ಮಹತ್ವವನ್ನು ಕಲ್ಪಿಸಿಕೊಳ್ಳಿ.

 

ಸ್ನೇಹಿತರೇ,

2014ಕ್ಕೂ ಮೊದಲು ದೇಶದಲ್ಲಿ ಸುಮಾರು 100 ಬೃಹತ್ ನೀರಾವರಿ ಯೋಜನೆಗಳು ದಶಕಗಳಿಂದ ಅಪೂರ್ಣವಾಗಿ ಉಳಿದಿದ್ದವು. ದೀರ್ಘಕಾಲದಿಂದ ಬಾಕಿ ಇರುವ ಈ ಯೋಜನೆಗಳನ್ನು ಪೂರ್ಣಗೊಳಿಸಲು ನಾವು ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ, ನಾವು ಆಧುನಿಕ ನೀರಾವರಿ ವಿಧಾನಗಳನ್ನು ಉತ್ತೇಜಿಸುತ್ತಿದ್ದೇವೆ. ಕಳೆದ ದಶಕದಲ್ಲಿ, ಸುಮಾರು ಒಂದು ಕೋಟಿ ಹೆಕ್ಟೇರ್ ಭೂಮಿಯನ್ನು ಸೂಕ್ಷ್ಮ ನೀರಾವರಿ ಸೌಲಭ್ಯಗಳ ಅಡಿಯಲ್ಲಿ ತರಲಾಗಿದೆ. ಮಧ್ಯಪ್ರದೇಶ ಒಂದರಲ್ಲೇ ಇದೇ ಅವಧಿಯಲ್ಲಿ ಸುಮಾರು ಐದು ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಹನಿ ನೀರನ್ನು ಸೂಕ್ತವಾಗಿ ಬಳಸಿಕೊಳ್ಳುವ ಪ್ರಯತ್ನಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತವೆ.

ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ನಾವು ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಈವರೆಗೆ ದೇಶಾದ್ಯಂತ 60,000 ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ನಾವು ಜಲಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್ (ಮಳೆಯನ್ನು ಹಿಡಿಯಿರಿ) ಉಪಕ್ರಮವನ್ನು ರಾಷ್ಟ್ರವ್ಯಾಪಿ ರೂಪಿಸಿದ್ದೇವೆ. ಮೂರು ಲಕ್ಷಕ್ಕೂ ಹೆಚ್ಚು ರೀಚಾರ್ಜ್ ಬಾವಿಗಳು ನಿರ್ಮಾಣ ಹಂತದಲ್ಲಿವೆ. ಈ ಉಪಕ್ರಮಗಳ ಅತ್ಯಂತ ಗಮನಾರ್ಹ ಅಂಶವೆಂದರೆ ನಗರ ಮತ್ತು ಗ್ರಾಮೀಣ ಸೇರಿದಂತೆ ಎಲ್ಲಾ ವರ್ಗದ ಜನರ ಸಕ್ರಿಯ ಭಾಗವಹಿಸುವಿಕೆ, ಅವರು ಈ ಅಭಿಯಾನಗಳನ್ನು ಅಪಾರ ಉತ್ಸಾಹದಿಂದ ನಡೆಸುತ್ತಿದ್ದಾರೆ.

ಮಧ್ಯಪ್ರದೇಶ ಸೇರಿದಂತೆ ಅಂತರ್ಜಲ ಮಟ್ಟವು ತೀವ್ರವಾಗಿ ಕಡಿಮೆ ಇರುವ ಪ್ರದೇಶಗಳಲ್ಲಿ, ಈ ಸವಾಲುಗಳನ್ನು ಎದುರಿಸಲು ನಾವು ಅಟಲ್ ಭೂಜಲ್ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ.

ಸ್ನೇಹಿತರೇ,

ಮಧ್ಯಪ್ರದೇಶವು ಸದಾ ಪ್ರವಾಸೋದ್ಯಮದಲ್ಲಿ ಪ್ರಮುಖ ರಾಜ್ಯವಾಗಿದೆ. ಮತ್ತು ಪ್ರವಾಸೋದ್ಯಮವನ್ನು ಉಲ್ಲೇಖಿಸದೆ ನಾನು ಖಜುರಾಹೊಗೆ ಹೇಗೆ ಬರಲು ಸಾಧ್ಯ? ಪ್ರವಾಸೋದ್ಯಮವು ಯುವಜನರಿಗೆ ಉದ್ಯೋಗವನ್ನು ಸೃಷ್ಟಿಸುವುದಲ್ಲದೆ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವ ಕ್ಷೇತ್ರವಾಗಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಸಜ್ಜಾಗುತ್ತಿದ್ದಂತೆ, ಭಾರತದ ಬಗ್ಗೆ ಜಾಗತಿಕ ಕುತೂಹಲ ಹೆಚ್ಚುತ್ತಿದೆ. ಪ್ರಪಂಚದಾದ್ಯಂತದ ಜನರು ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ, ಮತ್ತು ಮಧ್ಯಪ್ರದೇಶವು ಈ ಆಸಕ್ತಿಯಿಂದ ಗಮನಾರ್ಹವಾಗಿ ಪ್ರಯೋಜನ ಪಡೆಯುತ್ತದೆ.

ಇತ್ತೀಚೆಗೆ, ಅಮೆರಿಕದ ಪತ್ರಿಕೆಯೊಂದರ ವರದಿಯು ಮಧ್ಯಪ್ರದೇಶವನ್ನು ವಿಶ್ವದ ಹತ್ತು ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದು ಎತ್ತಿ ತೋರಿಸಿದೆ. ಈ ಮಾನ್ಯತೆ ಮಧ್ಯಪ್ರದೇಶದ ಪತ್ರಿಕೆಗಳಲ್ಲಿಯೂ ವ್ಯಾಪಕವಾಗಿ ವರದಿಯಾಗಿದೆ. ಮಧ್ಯಪ್ರದೇಶದ ಪ್ರತಿಯೊಬ್ಬ ನಿವಾಸಿಯ ಹೆಮ್ಮೆ ಮತ್ತು ಸಂತೋಷವನ್ನು ಕಲ್ಪಿಸಿಕೊಳ್ಳಿ! ಇದು ನಿಮ್ಮ ಗುರುತು ಮತ್ತು ಗೌರವದ ಪ್ರಜ್ಞೆಯನ್ನು ಹೆಚ್ಚಿಸುವುದಿಲ್ಲವೇ? ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವುದಿಲ್ಲವೇ? ಇದು ಬಡ ನಾಗರಿಕರಿಗೂ ಉದ್ಯೋಗವನ್ನು ಒದಗಿಸುವುದಿಲ್ಲವೇ?

 

ಸ್ನೇಹಿತರೇ,

ಭಾರತ ಮತ್ತು ವಿದೇಶಗಳ ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ, ಪ್ರಯಾಣದ ತಾಣಗಳಿಗೆ ಸುಲಭ ಪ್ರವೇಶವನ್ನು ಖಚಿತಪಡಿಸುತ್ತದೆ. ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಪ್ರಯಾಣವನ್ನು ಸರಳೀಕರಿಸಲು ನಾವು ಇ-ವೀಸಾದಂತಹ ಉಪಕ್ರಮಗಳನ್ನು ಪರಿಚಯಿಸಿದ್ದೇವೆ. ಭಾರತದಲ್ಲಿ ಪರಂಪರೆ ಮತ್ತು ವನ್ಯಜೀವಿ ಪ್ರವಾಸೋದ್ಯಮವನ್ನು ವಿಸ್ತರಿಸಲಾಗುತ್ತಿದೆ ಮತ್ತು ಮಧ್ಯಪ್ರದೇಶವು ಈ ನಿಟ್ಟಿನಲ್ಲಿ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ, ಖಜುರಾಹೊ ಪ್ರದೇಶವನ್ನು ತೆಗೆದುಕೊಳ್ಳಿ- ಇದು ಇತಿಹಾಸ ಮತ್ತು ಭಕ್ತಿಯ ಅಮೂಲ್ಯ ಸಂಪತ್ತನ್ನು ಹೊಂದಿದೆ. ಕಂದರಿಯಾ ಮಹಾದೇವ್, ಲಕ್ಷ್ಮಣ ದೇವಾಲಯ ಮತ್ತು ಚೌಸತ್ ಯೋಗಿನಿ ದೇವಾಲಯಗಳಂತಹ ಸ್ಥಳಗಳು ಪ್ರಮುಖ ಯಾತ್ರಾ ಸ್ಥಳಗಳಾಗಿವೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು, ನಾವು ಖಜುರಾಹೊ ಸೇರಿದಂತೆ ಭಾರತದಾದ್ಯಂತ ಜಿ -20 ಸಭೆಗಳನ್ನು ಆಯೋಜಿಸಿದ್ದೆವು. ಈ ಉದ್ದೇಶಕ್ಕಾಗಿ, ಖಜುರಾಹೊದಲ್ಲಿ ಅತ್ಯಾಧುನಿಕ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರವನ್ನು ನಿರ್ಮಿಸಲಾಯಿತು.

ಸ್ನೇಹಿತರೇ,

ಕೇಂದ್ರ ಸರ್ಕಾರದ ಸ್ವದೇಶ ದರ್ಶನ ಯೋಜನೆಯಡಿ, ಪರಿಸರ ಪ್ರವಾಸೋದ್ಯಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರವಾಸಿಗರಿಗೆ ಹೊಸ ಆಕರ್ಷಣೆಗಳನ್ನು ಪರಿಚಯಿಸಲು ಮಧ್ಯಪ್ರದೇಶಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇಂದು, ಸಾಂಚಿ ಮತ್ತು ಇತರ ಬೌದ್ಧ ಸ್ಥಳಗಳಂತಹ ತಾಣಗಳನ್ನು ಬೌದ್ಧ ಸರ್ಕ್ಯೂಟ್ ಮೂಲಕ ಸಂಪರ್ಕಿಸಲಾಗುತ್ತಿದೆ. ಗಾಂಧಿಸಾಗರ್, ಓಂಕಾರೇಶ್ವರ ಅಣೆಕಟ್ಟು, ಇಂದಿರಾ ಸಾಗರ್ ಅಣೆಕಟ್ಟು, ಭೇಡಾ ಘಾಟ್ ಮತ್ತು ಬನ್ಸಾಗರ್ ಅಣೆಕಟ್ಟುಗಳು ಈಗ ಪರಿಸರ ಸರ್ಕ್ಯೂಟ್ಗಳಲ್ಲಿ ಸೇರಿವೆ. ಅಂತೆಯೇ, ಪಾರಂಪರಿಕ ಸರ್ಕ್ಯೂಟ್ಗಳು ಖಜುರಾಹೊ, ಗ್ವಾಲಿಯರ್, ಒರ್ಚಾ, ಚಂದೇರಿ ಮತ್ತು ಮಾಂಡುಗಳಂತಹ ಸ್ಥಳಗಳನ್ನು ಸಂಪರ್ಕಿಸುತ್ತಿದ್ದರೆ, ಪನ್ನಾ ರಾಷ್ಟ್ರೀಯ ಉದ್ಯಾನವನ್ನು ವನ್ಯಜೀವಿ ಸರ್ಕ್ಯೂಟ್ನಲ್ಲಿ ಸಂಯೋಜಿಸಲಾಗಿದೆ.

ಕಳೆದ ವರ್ಷವೊಂದರಲ್ಲಿಯೇ ಸುಮಾರು 2.5 ಲಕ್ಷ ಪ್ರವಾಸಿಗರು ಪನ್ನಾ ಹುಲಿ ಮೀಸಲು ಪ್ರದೇಶಕ್ಕೆ ಭೇಟಿ ನೀಡಿದ್ದರು. ಇಲ್ಲಿ ನಿರ್ಮಿಸಲಾಗುತ್ತಿರುವ ಲಿಂಕ್ ಕಾಲುವೆಯು ಪನ್ನಾ ಹುಲಿ ಮೀಸಲು ಪ್ರದೇಶದ ವನ್ಯಜೀವಿಗಳ ಬಗ್ಗೆಯೂ  ಕಾಳಜಿ ವಹಿಸುತ್ತದೆ ಎಂಬುದನ್ನುಹಂಚಿಕೊಳ್ಳಲು ನನಗೆ ಸಂತೋಷವಾಗಿದೆ.

ಸ್ನೇಹಿತರೇ,

ಪ್ರವಾಸೋದ್ಯಮವನ್ನು ವರ್ಧಿಸುವ ಈ ಪ್ರಯತ್ನಗಳು ಸ್ಥಳೀಯ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಪ್ರವಾಸಿಗರು ಸ್ಥಳೀಯ ಸರಕುಗಳನ್ನು ಖರೀದಿಸುವ ಮೂಲಕ ಕೊಡುಗೆ ನೀಡುತ್ತಾರೆ, ಮತ್ತು ಆಟೋ ಹಾಗು ಟ್ಯಾಕ್ಸಿ ಸೇವೆಗಳಿಂದ ಹಿಡಿದು ಹೋಟೆಲ್ ಗಳು, ಧಾಬಾಗಳು, ಹೋಮ್ ಸ್ಟೇಗಳು ಮತ್ತು ಅತಿಥಿ ಗೃಹಗಳವರೆಗಿನ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಹಾಲು, ಮೊಸರು, ಹಣ್ಣುಗಳು ಮತ್ತು ತರಕಾರಿಗಳಂತಹ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಪಡೆಯುವುದರಿಂದ ರೈತರು ಸಹ ಪ್ರಯೋಜನ ಪಡೆಯುತ್ತಾರೆ.

ಸ್ನೇಹಿತರೇ,

ಕಳೆದ ಎರಡು ದಶಕಗಳಲ್ಲಿ ಮಧ್ಯಪ್ರದೇಶವು ಅನೇಕ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಮುಂಬರುವ ವರ್ಷಗಳಲ್ಲಿ, ರಾಜ್ಯವು ದೇಶದ ಅಗ್ರ ಆರ್ಥಿಕತೆಗಳಲ್ಲಿ ಒಂದಾಗಲು ಸಜ್ಜಾಗಿದೆ. ಬುಂದೇಲ್ಖಂಡ್ ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಧ್ಯಪ್ರದೇಶವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಗಮನಾರ್ಹ ಕೊಡುಗೆ ನೀಡುತ್ತದೆ.

ಈ ದೃಷ್ಟಿಕೋನವನ್ನು ಸಾಧಿಸಲು ಡಬಲ್ ಎಂಜಿನ್ ಸರ್ಕಾರವು ತನ್ನ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು.

ಇಂದಿನ ಕಾರ್ಯಕ್ರಮವು ನಿಜವಾಗಿಯೂ ಸ್ಮರಣೀಯವಾಗಿದೆ, ಐತಿಹಾಸಿಕವಾಗಿದೆ ಮತ್ತು ಅದರ ಮಹತ್ವವನ್ನು ನಾನು ಆಳವಾಗಿ ಅರ್ಥಮಾಡಿಕೊಂಡಿದ್ದೇನೆ. ಇಷ್ಟು ದೊಡ್ಡ ಜನಸಮೂಹದ ಉಪಸ್ಥಿತಿ, ವಿಶೇಷವಾಗಿ ತಾಯಂದಿರು ಮತ್ತು ಸಹೋದರಿಯರ ಹಾಜರಾತಿ, ನೀರಿನ ಮಹತ್ವವನ್ನು ಒತ್ತಿಹೇಳುತ್ತದೆ. ನೀರು ಎಂದರೆ  ಜೀವನ, ಮತ್ತು ಈ ಕ್ಷೇತ್ರದಲ್ಲಿ ನಮ್ಮ ಕೆಲಸಕ್ಕಾಗಿ ನಿಮ್ಮ ಆಶೀರ್ವಾದವು ನಮಗೆ ಮುಂದುವರಿಯಲು ಸ್ಫೂರ್ತಿ ನೀಡುತ್ತದೆ. ಒಟ್ಟಾಗಿ, ನಾವು ಮುಂದೆ ಸಾಗಲು ಪ್ರತಿಜ್ಞೆ ಮಾಡೋಣ. ಈಗ,   ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Have to isolate dimaagi Naxals’: PM Modi in Independence Day speech from Red Fort

Media Coverage

‘Have to isolate dimaagi Naxals’: PM Modi in Independence Day speech from Red Fort
NM on the go

Nm on the go

Always be the first to hear from the PM. Get the App Now!
...
PM announces AI skilling of 1 crore youth in one year
August 15, 2026
Free online coaching network for competitive examinations
Nationwide sports talent hunt for children aged 5-15 years
Vibrant Civil Defence network to be created to meet modern challenges
India targets 100 GW nuclear power capacity by 2047
Five new nuclear reactors planned within this decade
New target of 6 crore Lakhpati Didis
More semiconductor plants to strengthen India’s march towards self-reliance

Addressing the nation from the ramparts of the Red Fort on the 80th Independence Day, Prime Minister Shri Narendra Modi announced a series of initiatives and targets covering Artificial Intelligence, education, sports, Civil Defence, semiconductor manufacturing, nuclear energy and women-led development.

Key announcements from the Prime Minister’s address include:

1. AI Skilling for One Crore Youth: The Prime Minister announced that one crore youth would be trained in AI skills over the next one year. Referring to the rapid expansion of Artificial Intelligence, he said the initiative would help equip India’s youth with the capability to lead in the world of AI.

2. Free Online Coaching for Various Examinations: The Prime Minister announced free online coaching for youth preparing for various examinations. Referring to the financial burden of coaching classes on poor and middle-class families, he said Digital Public Infrastructure, available talent and teachers would be brought together to create a complete network for providing free coaching to the country’s youth.

3. Nationwide Sports Talent Hunt for Children Aged 5-15 Years: The Prime Minister announced a talent hunt campaign across villages, cities and schools to identify sporting talent among children between five and 15 years of age. The identified children would be provided specialised training to develop them into players capable of representing the country. Referring to Olympic disciplines in which India currently does not participate or qualify, the Prime Minister said greater emphasis would be placed on building capabilities in such sports.

4. Vibrant Civil Defence Network for Modern Challenges: Highlighting the changing nature of warfare, the Prime Minister announced that a vibrant Civil Defence network would be created in the country. He said that warfare was no longer necessarily confined to borders and could also affect refineries, the banking sector, data centres, factories and other infrastructure. The Prime Minister said that Civil Defence arrangements developed in accordance with the wars of the previous century had become outdated. Citizens would therefore be familiarised with modern systems, and a large voluntary Civil Defence force capable of dealing with modern challenges would be developed.

5. More Semiconductor Plants to Strengthen Self-Reliance: The Prime Minister highlighted the critical role of semiconductor chips in the digital and technological world and said India was moving towards self-reliance in this sector. He said three semiconductor plants had already started and production from these facilities had begun to be exported. The Prime Minister further said that another five-seven or eight semiconductor plants would come up in the coming seven-eight years, and described self-reliance in semiconductors as a pathway towards Viksit Bharat.

6. 100 GW Nuclear Power Capacity by 2047: Highlighting the growing energy requirements of chips, AI and data centres, the Prime Minister underlined the importance of energy security and nuclear power. He said India was moving ahead with a target of 100 GW of nuclear power capacity by 2047 and aimed to start five new nuclear reactors within this decade. The Prime Minister also said that India had achieved an important milestone this year in fast breeder nuclear technology, marking a significant step towards self-reliance in nuclear fuel.

7. Target of Six Crore Lakhpati Didis: Highlighting the contribution of women to nation-building, the Prime Minister said that the earlier target of creating three crore Lakhpati Didis had been surpassed. He said India would now move ahead with the target of six crore Lakhpati Didis. The creation of another three crore Lakhpati Didis, he said, would bring about a major transformation in the rural economy through the strength of women.