ಭಾರತ ಜ್ಞಾನ ಮತ್ತು ಕೌಶಲ್ಯದ ದೇಶ, ಈ ಬೌದ್ಧಿಕ ಶಕ್ತಿಯೇ ನಮ್ಮ ದೊಡ್ಡ ಬಲ: ಪ್ರಧಾನಮಂತ್ರಿ
ಐ.ಟಿ.ಐಗಳು ಕೇವಲ ಕೈಗಾರಿಕಾ ಶಿಕ್ಷಣದ ಪ್ರಮುಖ ಸಂಸ್ಥೆಗಳಲ್ಲ, ಅವು 'ಆತ್ಮನಿರ್ಭರ ಭಾರತ' ನಿರ್ಮಾಣದ ಕಾರ್ಯಾಗಾರಗಳೂ ಆಗಿವೆ: ಪ್ರಧಾನಮಂತ್ರಿ
'ಪಿ.ಎಂ.-ಸೇತು' ಯೋಜನೆಯು ಭಾರತದ ಯುವಕರನ್ನು ವಿಶ್ವದ ಕೌಶಲ್ಯ ಬೇಡಿಕೆಗಳೊಂದಿಗೆ ಸಂಪರ್ಕಿಸುತ್ತದೆ: ಪ್ರಧಾನಮಂತ್ರಿ
ಭಾರತ ರತ್ನ ಕರ್ಪೂರಿ ಠಾಕೂರ್ ಅವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆ ಮತ್ತು ಶಿಕ್ಷಣದ ಪ್ರಗತಿಗೆ ಮುಡಿಪಾಗಿಟ್ಟಿದ್ದರು, ಅವರ ಹೆಸರಿನಲ್ಲಿ ಸ್ಥಾಪನೆಯಾಗುತ್ತಿರುವ ಕೌಶಲ್ಯ ವಿಶ್ವವಿದ್ಯಾಲಯವು ಆ ದೃಷ್ಟಿಕೋನವನ್ನು ಮುನ್ನಡೆಸಲು ಪ್ರಬಲ ಮಾಧ್ಯಮವಾಗಲಿದೆ: ಪ್ರಧಾನಮಂತ್ರಿ
ಯುವಕರ ಶಕ್ತಿ ಹೆಚ್ಚಾದಾಗ, ರಾಷ್ಟ್ರದ ಶಕ್ತಿ ಹೆಚ್ಚಾಗುತ್ತದೆ: ಪ್ರಧಾನಮಂತ್ರಿ

ನನ್ನ ಸಂಪುಟ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಜಿ, ರಾಜ್ಯ ಸಚಿವ ಚಂದ್ರ ಶೇಖರ್ ಪೆಮ್ಮಸಾನಿ ಜಿ, ಇಲ್ಲಿರುವ ವಿವಿಧ ರಾಜ್ಯಗಳ ಪ್ರತಿನಿಧಿಗಳೆ, ವಿದೇಶಗಳಿಂದ ಬಂದಿರುವ ನಮ್ಮ ಅತಿಥಿಗಳೆ, ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದ ಎಲ್ಲಾ ಗಣ್ಯರೆ, ಇಲ್ಲಿ ಉಪಸ್ಥಿತರಿರುವ ವಿವಿಧ ಕಾಲೇಜುಗಳ ನನ್ನ ಯುವ ಸ್ನೇಹಿತರೆ, ಮಹಿಳೆಯರೆ ಮತ್ತು ಮಹನೀಯರೆ!

ಇಂಡಿಯಾ ಮೊಬೈಲ್ ಸಮ್ಮೇಳನ(ಕಾಂಗ್ರೆಸ್‌)ದ ಈ ವಿಶೇಷ ಆವೃತ್ತಿಗೆ ಇಲ್ಲಿರುವ ಎಲ್ಲಾ ಅತಿಥಿಗಳನ್ನು ನಾನು ಸ್ವಾಗತಿಸುತ್ತೇನೆ. ಇದೀಗ, ನಮ್ಮ ಅನೇಕ ಸ್ಟಾರ್ಟಪ್‌ಗಳು ಅನೇಕ ಪ್ರಮುಖ ವಿಷಯಗಳ ಕುರಿತು ತಮ್ಮ ಪ್ರಸ್ತುತಿಗಳನ್ನು ನೀಡಿವೆ. ಹಣಕಾಸು ವಂಚನೆ ತಡೆಗಟ್ಟುವಿಕೆ, ಕ್ವಾಂಟಮ್ ಸಂವಹನ, 6ಜಿ, ಆಪ್ಟಿಕಲ್ ಸಂವಹನ, ಸೆಮಿಕಂಡಕ್ಟರ್‌ಗಳು ಮತ್ತು ಇನ್ನೂ ಹೆಚ್ಚಿನ ಪ್ರಮುಖ ವಿಷಯಗಳನ್ನು ಕುರಿತ ಪ್ರಸ್ತುತಿಗಳನ್ನು ನೋಡಿದಾಗ, ಭಾರತದ ತಾಂತ್ರಿಕ ಭವಿಷ್ಯವು ಸಮರ್ಥರ ಕೈಯಲ್ಲಿದೆ ಎಂಬ ವಿಶ್ವಾಸ ನನಗೆ ಮೂಡುತ್ತಿದೆ. ಈ ಕಾರ್ಯಕ್ರಮಕ್ಕೆ ಮತ್ತು ನಿಮ್ಮ ಎಲ್ಲಾ ಹೊಸ ಉಪಕ್ರಮಗಳಿಗೆ ನಾನು ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ.

 

ಸ್ನೇಹಿತರೆ,

ಐಎಂಸಿಯ ಈ ಕಾರ್ಯಕ್ರಮವು ಕೇವಲ ಮೊಬೈಲ್ ಅಥವಾ ಟೆಲಿಕಾಂಗೆ ಸೀಮಿತವಾಗಿಲ್ಲ. ಕೆಲವೇ ವರ್ಷಗಳ ಅವಧಿಯಲ್ಲಿ, ಈ ಐಎಂಸಿ ಕಾರ್ಯಕ್ರಮವು ಏಷ್ಯಾದ ಅತಿದೊಡ್ಡ ಡಿಜಿಟಲ್ ತಂತ್ರಜ್ಞಾನ ವೇದಿಕೆಯಾಗಿದೆ.

ಸ್ನೇಹಿತರೆ,

ಐಎಂಸಿಯ ಈ ಯಶೋಗಾಥೆಯನ್ನು ಹೇಗೆ ಬರೆಯಲಾಯಿತು? ಅದನ್ನು ಮುನ್ನಡೆಸಿದವರು ಯಾರು?

ಸ್ನೇಹಿತರೆ,

ಈ ಯಶೋಗಾಥೆಯನ್ನು ಭಾರತದ ತಂತ್ರಜ್ಞಾನ ಒಲವಿಮ ಮನಸ್ಥಿತಿ ಬರೆದಿದೆ, ಇದನ್ನು ನಮ್ಮ ಯುವಕರು, ಭಾರತದ ಪ್ರತಿಭೆ ಮುನ್ನಡೆಸಿದ್ದಾರೆ, ನಮ್ಮ ನಾವೀನ್ಯಕಾರರು, ನಮ್ಮ ಸ್ಟಾರ್ಟಪ್‌ಗಳು ಇದಕ್ಕೆ ವೇಗ ನೀಡಿವೆ. ಸರ್ಕಾರವು ದೇಶದ ಪ್ರತಿಭೆ ಮತ್ತು ಸಾಮರ್ಥ್ಯಗಳ ಹಿಂದೆ ಸದೃಢವಾಗಿ ನಿಂತಿರುವುದರಿಂದ ಇದು ಸಾಧ್ಯವಾಗಿದೆ. ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ ನಿಧಿ ಮತ್ತು ಡಿಜಿಟಲ್ ಸಂವಹನ ಇನ್ನೋವೇಶನ್ಸ್ ಸ್ಕ್ವೇರ್‌ನಂತಹ ಯೋಜನೆಗಳ ಮೂಲಕ, ನಾವು ನಮ್ಮ ಸ್ಟಾರ್ಟಪ್‌ಗಳಿಗೆ ಹಣ ಒದಗಿಸುತ್ತಿದ್ದೇವೆ. ನಮ್ಮ ಸ್ಟಾರ್ಟಪ್‌ಗಳು ತಮ್ಮ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗುವಂತೆ ಸರ್ಕಾರವು 5ಜಿ, 6ಜಿ, ಅಡ್ವಾನ್ಸ್ಡ್ ಆಪ್ಟಿಕಲ್ ಕಮ್ಯುನಿಕೇಷನ್ಸ್ ಮತ್ತು ಟೆರಾ-ಹರ್ಟ್ಜ್‌ನಂತಹ ತಂತ್ರಜ್ಞಾನ ಪರೀಕ್ಷಾ ನೆಲೆಗಳಿಗೆ ಹಣಕಾಸು ಒದಗಿಸುತ್ತಿದೆ. ದೇಶದಲ್ಲಿ ಸ್ಟಾರ್ಟಪ್‌ಗಳು ಮತ್ತು ಪ್ರಮುಖ ಸಂಶೋಧನಾ ಸಂಸ್ಥೆಗಳ ನಡುವೆ ಪಾಲುದಾರಿಕೆಯನ್ನು ನಾವು ಸುಗಮಗೊಳಿಸುತ್ತಿದ್ದೇವೆ. ಇಂದು ಸರ್ಕಾರದ ಬೆಂಬಲದೊಂದಿಗೆ ಭಾರತೀಯ ಉದ್ಯಮ, ಸ್ಟಾರ್ಟಪ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಅನೇಕ ಕ್ಷೇತ್ರಗಳಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಸ್ಥಳೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅಳೆಯುವುದು, ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಬೌದ್ಧಿಕ ಆಸ್ತಿಯನ್ನು ರೂಪಿಸುವುದು ಅಥವಾ ಜಾಗತಿಕ ಮಾನದಂಡಗಳ ಅಭಿವೃದ್ಧಿಗೆ ಕೊಡುಗೆ ನೀಡುವುದು ಸೇರಿದಂತೆ ಭಾರತವು ಪ್ರತಿಯೊಂದು ಆಯಾಮದಲ್ಲೂ ಪ್ರಗತಿ ಸಾಧಿಸುತ್ತಿದೆ. ಈ ಪ್ರಯತ್ನಗಳ ಫಲವಾಗಿಯೇ ಇಂದು ಭಾರತ ಪರಿಣಾಮಕಾರಿ ವೇದಿಕೆಯಾಗಿ ಹೊರಹೊಮ್ಮಿದೆ.

 

ಸ್ನೇಹಿತರೆ,

ಭಾರತ ಮೊಬೈಲ್ ಸಮ್ಮೇಳನ ಮತ್ತು ಟೆಲಿಕಾಂ ವಲಯದಲ್ಲಿ ಭಾರತದ ಯಶಸ್ಸು ಆತ್ಮನಿರ್ಭರ್ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ನಾನು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುವಾಗ, ಕೆಲವರು ಅದನ್ನು ಹೇಗೆ ಗೇಲಿ ಮಾಡುತ್ತಿದ್ದರು ಎಂಬುದು ನಿಮಗೆ ನೆನಪಿದೆಯೇ? ಭಾರತ ತಾಂತ್ರಿಕವಾಗಿ ಮುಂದುವರಿದ ವಿಷಯಗಳನ್ನು ಹೇಗೆ ಮಾಡುತ್ತದೆ ಎಂಬ ಸಂದೇಹದಲ್ಲಿ ಬದುಕುವ ಜನರು ಏನು ಹೇಳುತ್ತಿದ್ದರು? ಏಕೆಂದರೆ, ಅವರ ಕಾಲದಲ್ಲಿ, ಹೊಸ ತಂತ್ರಜ್ಞಾನ ಭಾರತವನ್ನು ತಲುಪಲು ಹಲವಾರು ದಶಕಗಳೇ ಬೇಕಾಯಿತು. ದೇಶವು ಸೂಕ್ತವಾದ ಉತ್ತರ ನೀಡಿತು. ಒಂದು ಕಾಲದಲ್ಲಿ 2ಜಿ ತಂತ್ರಜ್ಞಾನದೊಂದಿಗೆ ಹೋರಾಡುತ್ತಿದ್ದ ದೇಶ, ಇಂದು 5ಜಿ ಬಹುತೇಕ ಎಲ್ಲಾ ಜಿಲ್ಲೆಗಳನ್ನು ತಲುಪಿದೆ. 2014ಕ್ಕೆ ಹೋಲಿಸಿದರೆ ನಮ್ಮ ಎಲೆಕ್ಟ್ರಾನಿಕ್ಸ್ ಉತ್ಪಾದನೆ 6 ಪಟ್ಟು ಹೆಚ್ಚಾಗಿದೆ. ಮೊಬೈಲ್ ಫೋನ್ ಉತ್ಪಾದನೆ 28 ಪಟ್ಟು ಮತ್ತು ರಫ್ತು 127 ಪಟ್ಟು ಹೆಚ್ಚಾಗಿದೆ. ಕಳೆದ ದಶಕದಲ್ಲಿ, ಮೊಬೈಲ್ ಫೋನ್ ಉತ್ಪಾದನಾ ವಲಯವು ಲಕ್ಷಾಂತರ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ, ದೊಡ್ಡ ಸ್ಮಾರ್ಟ್‌ಫೋನ್ ಕಂಪನಿಯ ಡೇಟಾ ಹೊರಬಂದಿದೆ. ಇಂದು, 45 ಭಾರತೀಯ ಕಂಪನಿಗಳು ಆ ಒಂದು ದೊಡ್ಡ ಕಂಪನಿಯ ಪೂರೈಕೆ ಸರಪಳಿಯೊಂದಿಗೆ ಸಂಪರ್ಕ ಹೊಂದಿವೆ. ಇದರಿಂದಾಗಿ, ದೇಶದಲ್ಲಿ ಸುಮಾರು ಮೂರೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಇದು ಕೇವಲ ಒಂದು ಕಂಪನಿಯ ಅಂಕಿಅಂಶವಲ್ಲ. ಇಂದು ದೇಶದ ಅನೇಕ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿವೆ. ಇದಕ್ಕೆ ನಾವು ಪರೋಕ್ಷ ಉದ್ಯೋಗ ಅವಕಾಶಗಳನ್ನು ಸೇರಿಸಿದರೆ, ಈ ಸಂಖ್ಯೆಯ ಉದ್ಯೋಗಗಳು ಎಷ್ಟು ದೊಡ್ಡದಾಗುತ್ತವೆ ಎಂಬುದನ್ನು ನಾವು ಊಹಿಸಬಹುದು.

ಸ್ನೇಹಿತರೆ,

ಕೆಲವೇ ದಿನಗಳ ಹಿಂದೆ, ಭಾರತವು ತನ್ನ ಮೇಡ್ ಇನ್ ಇಂಡಿಯಾ 4ಜಿ ತಂತ್ರಜ್ಞಾನ ಸಂಗ್ರಹ(ಸ್ಟ್ಯಾಕ್) ಅನ್ನು ಪ್ರಾರಂಭಿಸಿತು. ಇದು ದೇಶಕ್ಕೆ ಒಂದು ಪ್ರಮುಖ ಸ್ವದೇಶಿ ಸಾಧನೆಯಾಗಿದೆ. ಈಗ ಭಾರತವು ಈ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ 5 ದೇಶಗಳ ಪಟ್ಟಿಗೆ ಸೇರಿದೆ. ಇದು ಡಿಜಿಟಲ್ ಸ್ವಾವಲಂಬನೆ, ತಾಂತ್ರಿಕ ಸ್ವಾತಂತ್ರ್ಯದ ಕಡೆಗೆ ದೇಶದ ಒಂದು ದೊಡ್ಡ ಹೆಜ್ಜೆಯಾಗಿದೆ. ಸ್ಥಳೀಯ 4ಜಿ ಮತ್ತು 5ಜಿ ತಂತ್ರಜ್ಞಾನದ ಮೂಲಕ, ನಾವು ತಡೆರಹಿತ ಸಂಪರ್ಕ ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ, ದೇಶವಾಸಿಗಳಿಗೆ ವೇಗದ ಇಂಟರ್ನೆಟ್ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ಉದ್ದೇಶಕ್ಕಾಗಿಯೇ, ನಾವು ನಮ್ಮ ಮೇಡ್ ಇನ್ ಇಂಡಿಯಾ 4ಜಿ ಸ್ಟ್ಯಾಕ್ ಪ್ರಾರಂಭಿಸಿದ ದಿನದಂದು, ದೇಶಾದ್ಯಂತ ಸುಮಾರು 1 ಲಕ್ಷ 4ಜಿ ಟವರ್‌ಗಳನ್ನು ಏಕಕಾಲದಲ್ಲಿ ಸಕ್ರಿಯಗೊಳಿಸಿದ್ದೇವೆ. ನಾವು 1 ಲಕ್ಷ ಟವರ್‌ಗಳ ಬಗ್ಗೆ ಮಾತನಾಡುವಾಗ ವಿಶ್ವದ ಕೆಲವು ದೇಶಗಳು ಅದನ್ನು ಆಶ್ಚರ್ಯಕರವೆಂದು ನೋಡುತ್ತಿವೆ. ಈ ಅಂಕಿಅಂಶಗಳು ಜನರಿಗೆ ದೊಡ್ಡದಾಗಿ ಕಾಣುತ್ತವೆ. ಇದರಿಂದಾಗಿ, 2 ಕೋಟಿಗೂ ಹೆಚ್ಚು ಜನರು ಏಕಕಾಲದಲ್ಲಿ ದೇಶದ ಡಿಜಿಟಲ್ ಚಳುವಳಿಯ ಭಾಗವಾಗಿದ್ದಾರೆ. ಡಿಜಿಟಲ್ ಸಂಪರ್ಕದಲ್ಲಿ ಹಿಂದುಳಿದ ಅನೇಕ ದೂರದ ಪ್ರದೇಶಗಳು ಇದ್ದವು. ಈಗ ಇಂಟರ್ನೆಟ್ ಸಂಪರ್ಕವು ಅಂತಹ ಎಲ್ಲಾ ಪ್ರದೇಶಗಳನ್ನು ತಲುಪಿದೆ.

ಸ್ನೇಹಿತರೆ,

ಭಾರತದ ಮೇಡ್ ಇನ್ ಇಂಡಿಯಾ 4ಜಿ ಸ್ಟ್ಯಾಕ್ ಮತ್ತೊಂದು ವಿಶಿಷ್ಟ ವೈಶಿಷ್ಟ್ಯ ಹೊಂದಿದೆ. ನಮ್ಮ 4ಜಿ ತಂತ್ರಜ್ಞಾನ ರಾಶಿ(ಸ್ಟ್ಯಾಕ್) ಕೂಡ ರಫ್ತಿಗೆ ಸಿದ್ಧವಾಗಿದೆ. ಇದರರ್ಥ ಇದು ಭಾರತದ ವ್ಯವಹಾರ ಸಂಪರ್ಕಕ್ಕೆ ಒಂದು ಮಾಧ್ಯಮವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಇದು ಭಾರತ 2030, ಅಂದರೆ 'ಇಂಡಿಯಾ 6ಜಿ ವಿಷನ್' ಅನ್ನು ಸಾಧಿಸಲು ಸಹಾಯ ಮಾಡುತ್ತದೆ.

 

ಸ್ನೇಹಿತರೆ,

ಕಳೆದ 10 ವರ್ಷಗಳಲ್ಲಿ ಭಾರತದ ತಂತ್ರಜ್ಞಾನ ಕ್ರಾಂತಿ ವೇಗವಾಗಿ ಮುಂದುವರೆದಿದೆ. ಈ ವೇಗ ಮತ್ತು ಪ್ರಮಾಣವನ್ನು ಹೊಂದಿಸಲು, ಬಲವಾದ ಕಾನೂನು ಮತ್ತು ಆಧುನಿಕ ನೀತಿ ಅಡಿಪಾಯದ ಅಗತ್ಯವನ್ನು ಬಹಳ ಹಿಂದಿನಿಂದಲೂ ಅನುಭವಿಸಲಾಗಿದೆ. ಇದನ್ನು ಸಾಧಿಸಲು ನಾವು ದೂರಸಂಪರ್ಕ ಕಾಯ್ದೆ ಜಾರಿಗೆ ತಂದಿದ್ದೇವೆ. ಈ ಒಂದೇ ಕಾನೂನು ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು ಭಾರತೀಯ ವೈರ್‌ಲೆಸ್ ಟೆಲಿಗ್ರಾಫ್ ಕಾಯ್ದೆ ಎರಡನ್ನೂ ಬದಲಾಯಿಸಿತು. ನೀವು ಮತ್ತು ನಾನು ಇಲ್ಲಿ ಕುಳಿತಿರುವ ಜನರು ಇನ್ನೂ ಹುಟ್ಟಿಲ್ಲದ ಸಮಯದಲ್ಲಿ ಈ ಕಾನೂನುಗಳನ್ನು ರೂಪಿಸಲಾಗಿದೆ. ಆದ್ದರಿಂದ, ನೀತಿ ಮಟ್ಟದಲ್ಲಿ, 21ನೇ ಶತಮಾನದ ವಿಧಾನಕ್ಕೆ ಅನುಗುಣವಾಗಿ ಹೊಸ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿತ್ತು, ನಾವು ನಿಖರವಾಗಿ ಮಾಡಿದ್ದು ಅದನ್ನೇ. ಈ ಹೊಸ ಕಾನೂನು ನಿಯಂತ್ರಕವಾಗಿ ಅಲ್ಲ, ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತದೆ. ಅನುಮೋದನೆಗಳು ಸುಲಭವಾಗಿವೆ ಮತ್ತು ಸರಿಯಾದ ಮಾರ್ಗದ ಅನುಮತಿಗಳನ್ನು ಹೆಚ್ಚು ವೇಗವಾಗಿ ನೀಡಲಾಗುತ್ತಿದೆ. ಇದರ ಫಲಿತಾಂಶಗಳು ಸಹ ಗೋಚರಿಸುತ್ತಿವೆ. ಫೈಬರ್ ಮತ್ತು ಟವರ್ ನೆಟ್‌ವರ್ಕ್‌ಗಳು ವೇಗವಾಗಿ ವಿಸ್ತರಿಸುತ್ತಿವೆ. ಇದು ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸಿದೆ, ಹೂಡಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಮತ್ತು ದೀರ್ಘಾವಧಿಯ ಯೋಜನೆಯಲ್ಲಿ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲಾಗಿದೆ.

ಸ್ನೇಹಿತರೆ,

ಇಂದು ನಾವು ದೇಶದಲ್ಲಿ ಸೈಬರ್ ಭದ್ರತೆಗೆ ಸಮಾನ ಆದ್ಯತೆ ನೀಡುತ್ತಿದ್ದೇವೆ. ಸೈಬರ್ ವಂಚನೆಗಳ ವಿರುದ್ಧ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ, ಹೊಣೆಗಾರಿಕೆಯನ್ನು ಸಹ ಹೆಚ್ಚಿಸಲಾಗಿದೆ. ಕುಂದುಕೊರತೆ ಪರಿಹಾರದ ಕಾರ್ಯವಿಧಾನವನ್ನು ಸುಧಾರಿಸಲಾಗಿದೆ. ಉದ್ಯಮ ಮತ್ತು ಗ್ರಾಹಕರು ಇಬ್ಬರೂ ಇದರಿಂದ ಭಾರಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಿತರೆ,

ಇಂದು, ಇಡೀ ಜಗತ್ತು ಭಾರತದ ಸಾಮರ್ಥ್ಯವನ್ನು ಗುರುತಿಸುತ್ತಿದೆ. ನಾವು ವಿಶ್ವದ 2ನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆ ಹೊಂದಿದ್ದೇವೆ. 2ನೇ ಅತಿದೊಡ್ಡ 5ಜಿ ಮಾರುಕಟ್ಟೆ ಇಲ್ಲಿದೆ. ಮಾರುಕಟ್ಟೆಯ ಜೊತೆಗೆ, ನಮ್ಮಲ್ಲಿ ಮಾನವಶಕ್ತಿ, ಚಲನಶೀಲತೆ ಮತ್ತು ಮನಸ್ಥಿತಿಯೂ ಇದೆ. ಮಾನವಶಕ್ತಿಯ ವಿಷಯಕ್ಕೆ ಬಂದಾಗ, ಭಾರತವು ಪ್ರಮಾಣ ಮತ್ತು ಕೌಶಲ್ಯ ಎರಡನ್ನೂ ಒಟ್ಟಿಗೆ ಹೊಂದಿದೆ. ಇಂದು ಭಾರತವು ವಿಶ್ವದಲ್ಲೇ ಅತಿ ದೊಡ್ಡ ಯುವ ಸಮುದಾಯದ ಜನಸಂಖ್ಯೆ ಹೊಂದಿದೆ, ಈ ಪೀಳಿಗೆಯು ಬಹುದೊಡ್ಡ ಪ್ರಮಾಣದಲ್ಲಿ ಕೌಶಲ್ಯಪೂರ್ಣವಾಗುತ್ತಿದೆ. ಇಂದು ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಡೆವಲಪರ್ ಜನಸಂಖ್ಯೆ ಹೊಂದಿರುವ ದೇಶವಾಗಿದೆ.

 

ಸ್ನೇಹಿತರೆ,

ಇಂದು ಭಾರತದಲ್ಲಿ 1 ಜಿಬಿ ವೈರ್‌ಲೆಸ್ ಡೇಟಾದ ಬೆಲೆ ಒಂದು ಕಪ್ ಚಹಾದ ಬೆಲೆಗಿಂತ ಕಡಿಮೆಯಾಗಿದೆ, ನಾನು ಚಹಾದ ಉದಾಹರಣೆ ನೀಡುವ ಅಭ್ಯಾಸ ಹೊಂದಿದ್ದೇನೆ. ಪ್ರತಿ ಬಳಕೆದಾರ ಡೇಟಾ ಬಳಕೆಯಲ್ಲಿ, ನಾವು ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿದ್ದೇವೆ. ಇದರರ್ಥ ಭಾರತದಲ್ಲಿ ಡಿಜಿಟಲ್ ಸಂಪರ್ಕ ಇನ್ನು ಮುಂದೆ ಒಂದು ಸವಲತ್ತು ಅಥವಾ ಐಷಾರಾಮಿಯಾಗಿ ಉಳಿದಿಲ್ಲ. ಇದು ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿದೆ.

ಸ್ನೇಹಿತರೆ,

ಭಾರತವು ಕೈಗಾರಿಕೆ ಮತ್ತು ಹೂಡಿಕೆ ಬೆಳೆಸುವ ಮನಸ್ಥಿತಿಯಲ್ಲಿ ಮುಂಚೂಣಿಯಲ್ಲಿ ಇರುವಂತೆ ಕಾಣುತ್ತಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಸರ್ಕಾರದ ಸ್ವಾಗತಾರ್ಹ ಕಾರ್ಯವಿಧಾನ ಮತ್ತು ವ್ಯಾಪಾರ ಮಾಡುವ ಸುಲಭ ನೀತಿಗಳು ಭಾರತವನ್ನು ಹೂಡಿಕೆದಾರ ಸ್ನೇಹಿ ತಾಣವೆಂದು ಹೆಸರಿಸಿವೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿನ ನಮ್ಮ ಯಶಸ್ಸು ಸರ್ಕಾರವು ಡಿಜಿಟಲ್-ಮೊದಲ ಮನಸ್ಥಿತಿಗೆ ಹೇಗೆ ಬದ್ಧವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ ನಾನು ಪೂರ್ಣ ವಿಶ್ವಾಸದಿಂದ ಹೇಳುತ್ತೇನೆ - ಭಾರತದಲ್ಲಿ ಹೂಡಿಕೆ ಮಾಡಲು, ನಾವೀನ್ಯತೆ ನೀಡಲು ಮತ್ತು ತಯಾರಿಸಲು ಇದು ಅತ್ಯುತ್ತಮ ಸಮಯ! ಉತ್ಪಾದನೆಯಿಂದ ಸೆಮಿಕಂಡಕ್ಟರ್ ಗಲು, ಮೊಬೈಲ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸ್ಟಾರ್ಟಪ್‌ಗಳವರೆಗೆ, ಪ್ರತಿಯೊಂದು ಕ್ಷೇತ್ರದಲ್ಲೂ, ಭಾರತವು ಸಾಕಷ್ಟು ಸಾಮರ್ಥ್ಯ ಮತ್ತು ಸಾಕಷ್ಟು ಶಕ್ತಿಯನ್ನು ಹೊಂದಿದೆ.

ಸ್ನೇಹಿತರೆ,

ಕೆಲವೇ ವಾರಗಳ ಹಿಂದೆ ಆಗಸ್ಟ್ 15 ರಂದು ನಾನು ಕೆಂಪುಕೋಟೆಯಿಂದ ಈ ವರ್ಷ ದೊಡ್ಡ ಬದಲಾವಣೆಗಳ, ದೊಡ್ಡ ಸುಧಾರಣೆಗಳ ವರ್ಷ ಎಂದು ಘೋಷಿಸಿದೆ. ನಾವು ಸುಧಾರಣೆಗಳ ವೇಗವನ್ನು ಹೆಚ್ಚಿಸುತ್ತಿದ್ದೇವೆ. ಆದ್ದರಿಂದ, ನಮ್ಮ ಉದ್ಯಮ ಮತ್ತು ನಮ್ಮ ನಾವೀನ್ಯಕಾರರ ಜವಾಬ್ದಾರಿಯೂ ಹೆಚ್ಚುತ್ತಿದೆ. ಮತ್ತು ನಮ್ಮ ಸ್ಟಾರ್ಟಪ್‌ಗಳು ಮತ್ತು ನಮ್ಮ ಯುವ ನಾವೀನ್ಯಕಾರರು ಇದರಲ್ಲಿ ದೊಡ್ಡ ಪಾತ್ರ ವಹಿಸಬೇಕಾಗಿದೆ. ಅವರು ವೇಗ ಮತ್ತು ಅಪಾಯವನ್ನು ಸ್ವೀಕರಿಸುವ ಸಾಮರ್ಥ್ಯದೊಂದಿಗೆ, ಸ್ಟಾರ್ಟಪ್‌ಗಳು ಹೊಸ ಮಾರ್ಗಗಳು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಅದಕ್ಕಾಗಿಯೇ ಐಎಂಸಿ ಈ ವರ್ಷ 500ಕ್ಕೂ ಹೆಚ್ಚು ಸ್ಟಾರ್ಟಪ್‌ಗಳನ್ನು ಆಹ್ವಾನಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ, ಇದು ಹೂಡಿಕೆದಾರರು ಮತ್ತು ಜಾಗತಿಕ ಮಾರ್ಗದರ್ಶಕರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಅವಕಾಶ ನೀಡುತ್ತದೆ.

 

ಸ್ನೇಹಿತರೆ,

ಈ ವಲಯದ ಬೆಳವಣಿಗೆಯಲ್ಲಿ ನಮ್ಮ ಸ್ಥಾಪಿತ ಪಾಲುದಾರರ ಪಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಈ ಪಾಲುದಾರರು ದೇಶದ ಆರ್ಥಿಕತೆಯನ್ನು ಮುಂದಕ್ಕೆ ಕೊಂಡೊಯ್ಯಲು ಸ್ಥಿರತೆ, ಪ್ರಮಾಣ ಮತ್ತು ನಿರ್ದೇಶನವನ್ನು ಒದಗಿಸುತ್ತಾರೆ. ಅವರು ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಅದಕ್ಕಾಗಿಯೇ, ನಾವು ಸ್ಟಾರ್ಟಪ್‌ಗಳ ವೇಗ ಮತ್ತು ಸ್ಥಾಪಿತ ಪಾಲುದಾರರ ಪ್ರಮಾಣ ಎರಡರಿಂದಲೂ ಶಕ್ತಿ ಪಡೆಯುತ್ತಿದ್ದೇವೆ.

ಸ್ನೇಹಿತರೆ,

ಯುವ ಸ್ಟಾರ್ಟಪ್‌ಗಳು, ನಮ್ಮ ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಸಂಶೋಧನಾ ಸಮುದಾಯ ಮತ್ತು ನೀತಿ ನಿರೂಪಕರ ನಡುವಿನ ಸಹಯೋಗದ ಅಗತ್ಯವಿರುವ ನಮ್ಮ ಉದ್ಯಮಕ್ಕೆ ಸಂಬಂಧಿಸಿದ ಹಲವು ವಿಷಯಗಳಿವೆ. ಅಂತಹ ಸಂವಾದವನ್ನು ಪ್ರಾರಂಭಿಸುವಲ್ಲಿ ಐಎಂಸಿಯಂತಹ ವೇದಿಕೆ ಉಪಯುಕ್ತವಾಗಿದ್ದರೆ, ಬಹುಶಃ ನಮ್ಮ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗಬಹುದು.

ಸ್ನೇಹಿತರೆ,

ಜಾಗತಿಕ ಪೂರೈಕೆ ಸರಪಳಿಯಲ್ಲಿ ಎಲ್ಲಿ ಅಡಚಣೆಗಳು ಸಂಭವಿಸುತ್ತಿವೆ ಎಂಬುದನ್ನು ನಾವು ನೋಡಬೇಕು. ಮೊಬೈಲ್, ಟೆಲಿಕಾಂ, ಎಲೆಕ್ಟ್ರಾನಿಕ್ಸ್ ಮತ್ತು ಸಂಪೂರ್ಣ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕ ಅಡಚಣೆಗಳಿರುವಲ್ಲಿ, ಭಾರತವು ಜಗತ್ತಿಗೆ ಪರಿಹಾರಗಳನ್ನು ಒದಗಿಸುವ ಅವಕಾಶ ಹೊಂದಿದೆ. ಉದಾಹರಣೆಗೆ, ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯವು ಕೆಲವು ದೇಶಗಳಿಗೆ ಸೀಮಿತವಾಗಿದೆ ಎಂದು ನಾವು ಗುರುತಿಸಿದ್ದೇವೆ. ಆದರೆ ಈಗ ಇಡೀ ಜಗತ್ತು ವೈವಿಧ್ಯತೆಯನ್ನು ಬಯಸುತ್ತಿದೆ. ಇಂದು ಭಾರತ ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಭಾರತದಲ್ಲಿ 10 ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಕೆಲಸ ನಡೆಯುತ್ತಿದೆ.

 

ಸ್ನೇಹಿತರೆ,

ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಜಾಗತಿಕ ಕಂಪನಿಗಳು ಪ್ರಮಾಣ ಮತ್ತು ವಿಶ್ವಾಸಾರ್ಹತೆ ಎರಡನ್ನೂ ನೀಡುವ ವಿಶ್ವಾಸಾರ್ಹ ಪಾಲುದಾರರನ್ನು ಹುಡುಕುತ್ತಿವೆ. ಟೆಲಿಕಾಂ ನೆಟ್‌ವರ್ಕ್ ಉಪಕರಣಗಳ ವಿನ್ಯಾಸ ಮತ್ತು ತಯಾರಿಕೆಗೆ ಜಗತ್ತು ವಿಶ್ವಾಸಾರ್ಹ ಪಾಲುದಾರರನ್ನು ಬಯಸುತ್ತಿದೆ. ಹಾಗಾಗಿ, ಭಾರತೀಯ ಕಂಪನಿಗಳು ವಿಶ್ವಾಸಾರ್ಹ ಜಾಗತಿಕ ಪೂರೈಕೆದಾರರು ಮತ್ತು ವಿನ್ಯಾಸ ಪಾಲುದಾರರಾಗಲು ಸಾಧ್ಯವಿಲ್ಲವೇ?

 

ಸ್ನೇಹಿತರೆ,

ಚಿಪ್‌ಸೆಟ್‌ಗಳು ಮತ್ತು ಬ್ಯಾಟರಿಗಳಿಂದ ಹಿಡಿದು ಡಿಸ್ ಪ್ಲೇಗಳು ಮತ್ತು ಸಂವೇದಕಗಳವರೆಗೆ ಮೊಬೈಲ್ ಉತ್ಪಾದನೆ  ದೇಶದೊಳಗೆ ಹೆಚ್ಚಿಗೆ ನಡೆಯಬೇಕಾಗಿದೆ. ಜಗತ್ತು ಹಿಂದೆಂದಿಗಿಂತಲೂ ಹೆಚ್ಚಿನ ದತ್ತಾಂಶ(ಡೇಟಾ) ಉತ್ಪಾದಿಸುತ್ತಿದೆ. ಆದ್ದರಿಂದ, ಸಂಗ್ರಹಣೆ, ಭದ್ರತೆ ಮತ್ತು ಸಾರ್ವಭೌಮತ್ವದಂತಹ ಸಮಸ್ಯೆಗಳು ಹೆಚ್ಚು ಮುಖ್ಯವಾಗುತ್ತವೆ. ಡೇಟಾ ಕೇಂದ್ರಗಳು ಮತ್ತು ಕ್ಲೌಡ್ ಮೂಲಸೌಕರ್ಯದಲ್ಲಿ ಕೆಲಸ ಮಾಡುವ ಮೂಲಕ, ಭಾರತವು ಜಾಗತಿಕ ಡೇಟಾ ಕೇಂದ್ರವಾಗಬಹುದು.

ಸ್ನೇಹಿತರೆ,

ಮುಂಬರುವ ಕಲಾಪಗಳಲ್ಲಿ, ನಾವು ಈ ವಿಧಾನ ಮತ್ತು ಈ ಗುರಿಯೊಂದಿಗೆ ಮುಂದುವರಿಯುತ್ತೇವೆ ಎಂದು ನಾನು ಭಾವಿಸುತ್ತೇನೆ. ಮತ್ತೊಮ್ಮೆ, ಈ ಸಂಪೂರ್ಣ ಐಎಂಸಿ ಕಾರ್ಯಕ್ರಮಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು.

ಮತ್ತೊಮ್ಮೆ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Sanand 2.0's swift semicon wave accelerates India's chip ambitions

Media Coverage

Sanand 2.0's swift semicon wave accelerates India's chip ambitions
NM on the go

Nm on the go

Always be the first to hear from the PM. Get the App Now!
...
Prime Minister congratulates successful candidates of Civil Services Examination, 2025
March 06, 2026

The Prime Minister, Shri Narendra Modi has congratulated all those who have successfully cleared the Civil Services Examination, 2025. He said that their dedication, perseverance and hard work have enabled them to achieve this significant milestone.

The Prime Minister noted that clearing the Civil Services Examination marks the beginning of an important journey of public service. He wished the successful candidates the very best as they embark on the path of serving the nation and fulfilling the aspirations of the people.

The Prime Minister also conveyed his message to those who may not have secured the desired outcome in the examination. He acknowledged that such moments can be difficult, but emphasised that this is only one step in a larger journey.

Highlighting that many opportunities lie ahead, both in future examinations and in the many avenues through in which individuals can contribute to the nation, the Prime Minister extended his best wishes to them for the road ahead.

The Prime Minister wrote on X;

“Congratulations to all those who have successfully cleared the Civil Services Examination, 2025. Their dedication, perseverance and hard work have led to this significant milestone.

Wishing them the very best as they embark on a journey of serving the nation and fulfilling the aspirations of the people.”

“To those who may not have secured the desired outcome in the Civil Services Examination, I understand that such moments can be difficult. However, this is only one step in a larger journey. Many opportunities lie ahead, both in future examinations and in the many avenues through which you can contribute to our nation. My best wishes for the road ahead.”