“Bengaluru is a representation of the startup spirit of India, and it is this spirit that makes the country stand out from the rest of the world”
“Vande Bharat Express is a symbol that India has now left the days of stagnation behind”
“Airports are creating a new playing field for the expansion of businesses while also creating new employment opportunities for the youth of the nation”
“World is admiring the strides India has made in digital payments system”
“Karnataka is leading the way in attracting foreign direct investment in the country”
“Be it governance or the growth of physical and digital infrastructure, India is working on a completely different level”
“Earlier speed was treated as a luxury, and scale as a risk”
“Our heritage is cultural as well as spiritual”
“Development of Bengaluru should be done as envisioned by Nadaprabhu Kempegowda”

ಭಾರತ್ ಮಾತಾ ಕೀ- ಜೈ!
ಭಾರತ್ ಮಾತಾ ಕೀ - ಜೈ!

ಕರ್ನಾಟಕದ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳು!

ಪೂಜ್ಯ ಸ್ವಾಮಿ ಜೀ, ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಜೀ, ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳು, ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು, ಇತರ ಎಲ್ಲ ಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ.

ಅತ್ಯಂತ ವಿಶೇಷ ದಿನದಂದು ಬೆಂಗಳೂರಿಗೆ ಬರುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ಇಂದು ಕರ್ನಾಟಕದ ಇಬ್ಬರು ಮಹಾನ್  ಚೇತನಗಳ ಜಯಂತಿ. ಸಂತ ಕನಕ ದಾಸರು ನಮ್ಮ ಸಮಾಜಕ್ಕೆ ಮಾರ್ಗದರ್ಶನ ಮಾಡಿದರೆ, ಒನಕೆ ಓಬವ್ವ ಅವರು ನಮ್ಮ ಹೆಮ್ಮೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಕೊಡುಗೆ ನೀಡಿದರು. ಈ ಎರಡು ವ್ಯಕ್ತಿತ್ವಗಳಿಗೆ ನಾನು ಮತ್ತೊಮ್ಮೆ ತಲೆಬಾಗುತ್ತೇನೆ.

ಸ್ನೇಹಿತರೇ,

ಈ ಮಹಾನ್ ವ್ಯಕ್ತಿಗಳನ್ನು ಗೌರವಿಸುವಾಗ, ನಾವು ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಸಶಕ್ತಗೊಳಿಸುತ್ತಿದ್ದೇವೆ. ಇಂದು ಕರ್ನಾಟಕವು ಮೊದಲ ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲನ್ನು ಪಡೆಯಿತು. ಈ ರೈಲು ಚೆನ್ನೈ, ದೇಶದ ಸ್ಟಾರ್ಟ್ ಅಪ್ ರಾಜಧಾನಿ ಬೆಂಗಳೂರು ಮತ್ತು ಪಾರಂಪರಿಕ ನಗರಿ ಮೈಸೂರನ್ನು ಸಂಪರ್ಕಿಸುತ್ತದೆ. ಕರ್ನಾಟಕದ ಜನರನ್ನು ಅಯೋಧ್ಯೆ, ಪ್ರಯಾಗ್ ರಾಜ್ ಮತ್ತು ಕಾಶಿಗೆ ಕರೆದೊಯ್ಯುವ ಭಾರತ್ ಗೌರವ್ ಕಾಶಿ ದರ್ಶನ್ ರೈಲು ಸಹ ಇಂದು ಪ್ರಾರಂಭವಾಗಿದೆ. ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಸಹ ಉದ್ಘಾಟಿಸಲಾಯಿತು. ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನ ಕೆಲವು ಚಿತ್ರಗಳನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದೆ. ಆದರೆ ನನ್ನ ಭೇಟಿಯ ಸಮಯದಲ್ಲಿ, ಚಿತ್ರಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದ ಹೊಸ ಟರ್ಮಿನಲ್ ಇನ್ನೂ ಹೆಚ್ಚು ಭವ್ಯ ಮತ್ತು ಆಧುನಿಕವಾಗಿದೆ ಎಂದು ನಾನು ಕಂಡುಕೊಂಡೆ. ಇದು ಬೆಂಗಳೂರಿನ ಜನರ ಅತ್ಯಂತ ಹಳೆಯ ಬೇಡಿಕೆಯಾಗಿದ್ದು, ಅದನ್ನು ಈಗ ನಮ್ಮ ಸರ್ಕಾರ ಈಡೇರಿಸಿದೆ.

ಸ್ನೇಹಿತರೇ,

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸುವ ಮತ್ತು ಜಲಾಭಿಷೇಕ ಮಾಡುವ ಅವಕಾಶವೂ ನನಗೆ ಸಿಕ್ಕಿತು. ನಾಡಪ್ರಭು ಕೆಂಪೇಗೌಡರ ಈ ದೈತ್ಯಾಕಾರದ ಪ್ರತಿಮೆಯು ಬೆಂಗಳೂರು ಮತ್ತು ಭಾರತದ ಭವಿಷ್ಯಕ್ಕಾಗಿ ಅವಿರತವಾಗಿ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ.


ಸಹೋದರ ಸಹೋದರಿಯರೇ,

ಪೂಜ್ಯ ಸ್ವಾಮಿಗಳ ಆಶೀರ್ವಾದಕ್ಕಾಗಿ ಮತ್ತು ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ರೀತಿಗಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು ಭಾರತವು ವಿಶ್ವದಾದ್ಯಂತ ನವೋದ್ಯಮಗಳಿಗೆ ಗುರುತಿಸಲ್ಪಟ್ಟಿದೆ ಮತ್ತು ಭಾರತದ ಈ ಅಸ್ಮಿತೆಯನ್ನು ಬಲಪಡಿಸುವಲ್ಲಿ ಬೆಂಗಳೂರು ದೊಡ್ಡ ಪಾತ್ರವನ್ನು ಹೊಂದಿದೆ. ನವೋದ್ಯಮಗಳು ಕೇವಲ ಕಂಪನಿಗಳಲ್ಲ. ಸ್ಟಾರ್ಟ್ ಅಪ್ ಎಂದರೆ ಹೊಸದನ್ನು ಪ್ರಯತ್ನಿಸುವ ಉತ್ಸಾಹ, ಸಾಮಾನ್ಯವಾಗಿರುವುದಕ್ಕಿಂತ ಭಿನ್ನವಾಗಿ ಯೋಚಿಸುವ ಉತ್ಸಾಹ. ನವೋದ್ಯಮವು ಒಂದು
ನಂಬಿಕೆಯಾಗಿದೆ, ದೇಶವು ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಒಂದು ಪರಿಹಾರವಾಗಿದೆ. ಆದ್ದರಿಂದ, ಬೆಂಗಳೂರು ನವೋದ್ಯಮ ಮನೋಭಾವವನ್ನು ಪ್ರತಿನಿಧಿಸುತ್ತದೆ. ಈ ಸ್ಟಾರ್ಟ್ ಅಪ್ ಉತ್ಸಾಹವು ಇಂದು ವಿಶ್ವದಲ್ಲಿ ಭಾರತವನ್ನು ವಿಭಿನ್ನ ಮಟ್ಟದಲ್ಲಿ ಇರಿಸುತ್ತದೆ.

ಸಹೋದರ ಸಹೋದರಿಯರೇ,

ಇಂದಿನ ಕಾರ್ಯಕ್ರಮವು ಬೆಂಗಳೂರಿನ ಈ ಯುವ ಚೈತನ್ಯದ ಪ್ರತಿಬಿಂಬವೂ ಆಗಿದೆ. ಇಂದು ಪ್ರಾರಂಭವಾದ ವಂದೇ ಭಾರತ್ ಎಕ್ಸ್ ಪ್ರೆಸ್ ಕೇವಲ ಹೊಸ ರೈಲು ಮಾತ್ರವಲ್ಲ, ಇದು ನವ ಭಾರತದ ಹೊಸ ಗುರುತಾಗಿದೆ. ಇದು 21 ನೇ ಶತಮಾನದಲ್ಲಿ ಭಾರತದ ರೈಲ್ವೆಗಳು ಹೇಗಿರುತ್ತವೆ ಎಂಬುದರ ಒಂದು ಇಣುಕುನೋಟವಾಗಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ಈಗ ಭಾರತವು ನಿಶ್ಚಲತೆಯ ದಿನಗಳನ್ನು ಹಿಂದೆ ಬಿಟ್ಟಿದೆ ಎಂಬ ಅಂಶದ ಸಂಕೇತವಾಗಿದೆ. ಭಾರತ ಈಗ ವೇಗವಾಗಿ ಓಡಲು ಬಯಸುತ್ತದೆ ಮತ್ತು ಅದಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ.

ಸ್ನೇಹಿತರೇ,

ಮುಂದಿನ 8-10 ವರ್ಷಗಳಲ್ಲಿ ಭಾರತೀಯ ರೈಲ್ವೆಯನ್ನು ಪರಿವರ್ತಿಸುವ ಗುರಿಯನ್ನು ನಾವು ಹೊಂದಿದ್ದೇವೆ. 400 ಕ್ಕೂ ಹೆಚ್ಚು ಹೊಸ ವಂದೇ ಭಾರತ್ ರೈಲುಗಳು ಮತ್ತು ವಿಸ್ಟಾ ಡೋಮ್ ಬೋಗಿಗಳು ಭಾರತೀಯ ರೈಲ್ವೆಯ ಹೊಸ ಗುರುತಾಗಲಿವೆ. ಮೀಸಲಾದ ಸರಕು ಕಾರಿಡಾರ್ ಗಳು ಸಾರಿಗೆಯನ್ನು ವೇಗಗೊಳಿಸುತ್ತವೆ ಮತ್ತು ಸಮಯವನ್ನು ಉಳಿಸುತ್ತವೆ. ಕ್ಷಿಪ್ರ ಬ್ರಾಡ್ ಗೇಜ್ ಪರಿವರ್ತನೆಯು ರೈಲ್ವೆ ನಕ್ಷೆಯಲ್ಲಿ ಹೊಸ ಪ್ರದೇಶಗಳನ್ನು ತರುತ್ತಿದೆ. ಮತ್ತು ಈ ಎಲ್ಲದರ ನಡುವೆ, ಇಂದು ದೇಶವು ತನ್ನ ರೈಲು ನಿಲ್ದಾಣಗಳನ್ನು ಸಹ ಆಧುನೀಕರಿಸುತ್ತಿದೆ. ಇಂದು, ನೀವು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಜಿ ರೈಲ್ವೆ ನಿಲ್ದಾಣಕ್ಕೆ ಹೋದಾಗ, ನೀವು ವಿಭಿನ್ನ ಜಗತ್ತನ್ನು ಅನುಭವಿಸುತ್ತೀರಿ. ದೇಶದ ಪ್ರಮುಖ ರೈಲು ನಿಲ್ದಾಣಗಳನ್ನು ಈ ರೀತಿ ಆಧುನೀಕರಿಸುವುದು ನಮ್ಮ ಗುರಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳನ್ನು ಸಹ ಕರ್ನಾಟಕದಲ್ಲಿ ಪರಿವರ್ತಿಸಲಾಗುತ್ತಿದೆ.
 

ಸ್ನೇಹಿತರೇ,

ನಮ್ಮ ನಗರಗಳ ನಡುವಿನ ಸಂಪರ್ಕವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ದೊಡ್ಡ ಪಾತ್ರ ವಹಿಸಲಿದೆ. ದೇಶದಲ್ಲಿ ವಿಮಾನ ನಿಲ್ದಾಣಗಳ ಗರಿಷ್ಠ ವಿಸ್ತರಣೆ ಮತ್ತು ವಾಯು ಸಂಪರ್ಕ ಇರಬೇಕು ಎಂಬುದು ಇಂದಿನ ಅಗತ್ಯವಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುತ್ತದೆ. ಇಂದು ಭಾರತವು ವಿಶ್ವದಲ್ಲಿ ವಿಮಾನ ಪ್ರಯಾಣಕ್ಕಾಗಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ದೇಶವು ಪ್ರಗತಿ ಹೊಂದುತ್ತಿದ್ದಂತೆ, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ, ನಮ್ಮ ಸರ್ಕಾರವು ದೇಶದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. 2014 ಕ್ಕಿಂತ ಮೊದಲು ದೇಶದಲ್ಲಿ ಸುಮಾರು 70 ವಿಮಾನ ನಿಲ್ದಾಣಗಳಿದ್ದವು. ಈಗ ಈ ಸಂಖ್ಯೆ 140 ಕ್ಕಿಂತ ಹೆಚ್ಚಾಗಿದೆ, ಅಂದರೆ, ದುಪ್ಪಟ್ಟಾಗಿದೆ. ಈ ಹೊಸ ವಿಮಾನ ನಿಲ್ದಾಣಗಳು ನಮ್ಮ ನಗರಗಳ ವ್ಯಾಪಾರ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೇ,

ಇಂದು, ವಿಶ್ವದಾದ್ಯಂತದಿಂದ ಭಾರತದಲ್ಲಿ ಹೂಡಿಕೆಗಾಗಿ ಸೃಷ್ಟಿಸಲಾದ ಅಭೂತಪೂರ್ವ ವಿಶ್ವಾಸದಿಂದ ಕರ್ನಾಟಕವು ಸಹ ಪ್ರಯೋಜನ ಪಡೆಯುತ್ತಿದೆ. ಇಡೀ ವಿಶ್ವವೇ ಕೋವಿಡ್ ವಿರುದ್ಧ ಹೋರಾಡುತ್ತಿದ್ದಾಗ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 4 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ಕಳೆದ ವರ್ಷದಲ್ಲಿ ಎಫ್ ಡಿಐ ಆಕರ್ಷಿಸುವಲ್ಲಿ ಕರ್ನಾಟಕವು ದೇಶವನ್ನು ಮುನ್ನಡೆಸಿದೆ. ಮತ್ತು ಹೂಡಿಕೆಯು ಕೇವಲ ಐಟಿ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಜೈವಿಕ ತಂತ್ರಜ್ಞಾನದಿಂದ ಹಿಡಿದು ರಕ್ಷಣಾ ಉತ್ಪಾದನೆಯವರೆಗೆ ಪ್ರತಿಯೊಂದು ವಲಯವೂ ಇಲ್ಲಿ ವಿಸ್ತರಿಸುತ್ತಿದೆ. ದೇಶದ ವಿಮಾನ ಮತ್ತು ಬಾಹ್ಯಾಕಾಶ ಯಾನ ಉದ್ಯಮದಲ್ಲಿ ಕರ್ನಾಟಕದ ಪಾಲು ಶೇ.25ರಷ್ಟಿದೆ. ದೇಶದ ಸೇನೆಗಾಗಿ ಸುಮಾರು ಶೇ. 70 ರಷ್ಟು ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಕರ್ನಾಟಕವೂ ಮುಂದಿದೆ. ಇಂದು ಫಾರ್ಚೂನ್ 500 ಕಂಪನಿಗಳಲ್ಲಿ 400 ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಪಟ್ಟಿ ನಿರಂತರವಾಗಿ ಬೆಳೆಯುತ್ತಿದೆ. ಇದೆಲ್ಲವೂ ನಡೆಯುತ್ತಿದೆ ಏಕೆಂದರೆ ಇಂದು ಕರ್ನಾಟಕವು ಡಬಲ್ ಎಂಜಿನ್ ಶಕ್ತಿಯಲ್ಲಿ ಚಲಿಸುತ್ತಿದೆ.
 

ಸಹೋದರ ಸಹೋದರಿಯರೇ,

ಇಂದು, ಭಾರತವು ಆಡಳಿತ ಅಥವಾ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವ ಬಗ್ಗೆ ವಿಭಿನ್ನ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇಂದು ಇಡೀ ಜಗತ್ತು ಭಾರತದ ಡಿಜಿಟಲ್ ಪಾವತಿ ಭೀಮ್ ಯುಪಿಐ ಬಗ್ಗೆ ಆಶ್ಚರ್ಯಚಕಿತವಾಗಿದೆ. ಎಂಟು ವರ್ಷಗಳ ಹಿಂದೆ ಇದನ್ನು ಊಹಿಸಲು ಸಹ ಸಾಧ್ಯವಿತ್ತೇ? ಮೇಡ್ ಇನ್ ಇಂಡಿಯಾ 5ಜಿ ತಂತ್ರಜ್ಞಾನದ ಬಗ್ಗೆ ಯೋಚಿಸಬಹುದೇ? ಈ ಎಲ್ಲಾ ಉಪಕ್ರಮಗಳಲ್ಲಿ ಬೆಂಗಳೂರಿನ ಯುವಕರು ಮತ್ತು ವೃತ್ತಿಪರರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ವಿಷಯಗಳು 2014 ಕ್ಕಿಂತ ಮುಂಚಿನ ಭಾರತದಲ್ಲಿ ಊಹೆಗೂ ನಿಲುಕದವು, ಹಿಂದಿನ ಸರ್ಕಾರಗಳ ಹಳೆಯ-ಶೈಲಿಯ ವಿಧಾನವೇ ಇದಕ್ಕೆ ಕಾರಣ.

ಹಿಂದಿನ ಸರ್ಕಾರಗಳು ವೇಗವನ್ನು ಐಷಾರಾಮಿ ಮತ್ತು ಪ್ರಮಾಣವನ್ನು ಅಪಾಯವೆಂದು ಪರಿಗಣಿಸಿದ್ದವು. ನಾವು ಈ ಗ್ರಹಿಕೆಯನ್ನು ಬದಲಾಯಿಸಿದ್ದೇವೆ. ವೇಗವನ್ನು ನಾವು ಭಾರತದ ಆಕಾಂಕ್ಷೆ ಮತ್ತು ಪ್ರಮಾಣವನ್ನು ಭಾರತದ ಶಕ್ತಿ ಎಂದು ಪರಿಗಣಿಸುತ್ತೇವೆ. ಆದ್ದರಿಂದ, ಇಂದು ಭಾರತವು ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ದೇಶದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹಿಂದೆ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಸಮನ್ವಯವು ಹೇಗೆ ದೊಡ್ಡ ಸಮಸ್ಯೆಯಾಗಿತ್ತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಹೆಚ್ಚು ಇಲಾಖೆಗಳು ಮತ್ತು ಏಜೆನ್ಸಿಗಳು, ನಿರ್ಮಾಣದಲ್ಲಿ ವಿಳಂಬ! ಆದ್ದರಿಂದ, ನಾವು ಎಲ್ಲರನ್ನೂ ಒಂದೇ ವೇದಿಕೆಗೆ ತರಲು ನಿರ್ಧರಿಸಿದ್ದೇವೆ. ಇಂದು, ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ 1500 ಕ್ಕೂ ಹೆಚ್ಚು ಪದರಗಳಲ್ಲಿನ ದತ್ತಾಂಶವನ್ನು ವಿವಿಧ ಏಜೆನ್ಸಿಗಳಿಗೆ ನೇರವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇಂದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಜನ್ ಗಟ್ಟಲೆ ಸಚಿವಾಲಯಗಳು ಮತ್ತು ಇಲಾಖೆಗಳು ಈ ವೇದಿಕೆಗೆ ಸೇರಿಕೊಂಡಿವೆ. ಇಂದು, ದೇಶವು ರಾಷ್ಟ್ರೀಯ ಮೂಲಸೌಕರ್ಯ ಕೊಳವೆ ಮಾರ್ಗದಡಿಯಲ್ಲಿ ಇನ್ಫ್ರಾದಲ್ಲಿ ಸುಮಾರು 110 ಲಕ್ಷ ಕೋಟಿ ರೂ.ಗಳ ಹೂಡಿಕೆಯ ಗುರಿಯನ್ನು ಹೊಂದಿದೆ. ದೇಶವು ತನ್ನ ಶಕ್ತಿಯನ್ನು ಬಹು ಮಾದರಿ ಮೂಲಸೌಕರ್ಯಗಳ ಮೇಲೆ ಬಳಸುತ್ತಿದೆ, ಇದರಿಂದ ಸಾರಿಗೆಯ ಪ್ರತಿಯೊಂದು ಸಾಧನವೂ ಸಂಪರ್ಕ ಹೊಂದಿದೆ ಮತ್ತು ದೇಶದಲ್ಲಿ ಪರಸ್ಪರ ಬೆಂಬಲಿಸುತ್ತದೆ. ಕೆಲವು ಸಮಯದ ಹಿಂದೆ, ದೇಶವು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಸಹ ಪ್ರಾರಂಭಿಸಿತು. ಈ ನೀತಿಯು ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ದೇಶದಲ್ಲಿ ಸಾರಿಗೆಯನ್ನು ನವೀನವಾಗಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಭಾರತವನ್ನು ಅಭಿವೃದ್ಧಿಗೊಳಿಸಲು ಭೌತಿಕ ಮೂಲಸೌಕರ್ಯಗಳ ಜೊತೆಗೆ ದೇಶದ ಸಾಮಾಜಿಕ ಮೂಲಸೌಕರ್ಯವನ್ನು ಬಲಪಡಿಸುವುದು ಸಹ ಅಷ್ಟೇ ಅಗತ್ಯವಾಗಿದೆ. ಕರ್ನಾಟಕದ ಡಬಲ್ ಇಂಜಿನ್ ಸರ್ಕಾರವು ಸಾಮಾಜಿಕ ಮೂಲಸೌಕರ್ಯಕ್ಕೆ ಸಮಾನ ಗಮನವನ್ನು ನೀಡುತ್ತಿರುವುದು ನನಗೆ ಸಂತೋಷವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ ಸುಮಾರು 3.5 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲೂ ಬಡವರಿಗೆ ಎಂಟು ಲಕ್ಷಕ್ಕೂ ಹೆಚ್ಚು ಪಕ್ಕಾ ಮನೆಗಳನ್ನು ಮಂಜೂರು ಮಾಡಲಾಗಿದೆ. 'ಜಲ ಜೀವನ್ ಮಿಷನ್' ಅಡಿಯಲ್ಲಿ ಕೇವಲ ಮೂರು ವರ್ಷಗಳಲ್ಲಿ ದೇಶದ ಏಳು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಕೊಳವೆ ನೀರಿನ ಸೌಲಭ್ಯಗಳನ್ನು ಒದಗಿಸಲಾಗಿದೆ. ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ಮೊದಲ ಬಾರಿಗೆ ಕೊಳವೆ ಮೂಲಕ ನೀರು ತಲುಪಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ದೇಶದ ನಾಲ್ಕು ಕೋಟಿ ಬಡ ಜನರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ಬಡ ರೋಗಿಗಳು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈ ಸೌಲಭ್ಯಗಳ ಅತಿದೊಡ್ಡ ಫಲಾನುಭವಿಗಳಾಗಿದ್ದಾರೆ ಎಂದು ನನಗೆ ಸಂತೋಷವಾಗಿದೆ.

ಸಹೋದರ ಸಹೋದರಿಯರೇ,

ಇಂದು, ಕೋಟ್ಯಂತರ ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಮೀನುಗಾರರು ಮತ್ತು ಬೀದಿ ಬದಿ ವ್ಯಾಪಾರಿಗಳು ಮೊದಲ ಬಾರಿಗೆ ದೇಶದ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ. 'ಪಿಎಂ ಕಿಸಾನ್ ಸಮ್ಮಾನ್ ನಿಧಿ'ಯಡಿ ದೇಶದ 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 2.25 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಕರ್ನಾಟಕದ 55 ಲಕ್ಷಕ್ಕೂ ಹೆಚ್ಚು ಸಣ್ಣ ರೈತರು ಸುಮಾರು 11,000 ಕೋಟಿ ರೂ. ಪಿಎಂ ಸ್ವನಿಧಿ ಯೋಜನೆಯಡಿ ದೇಶದ 40 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಆರ್ಥಿಕ ನೆರವು ಪಡೆದಿದ್ದಾರೆ. ಇದು ಕರ್ನಾಟಕದ ಎರಡು ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಪ್ರಯೋಜನವನ್ನು ನೀಡಿದೆ.

ಸ್ನೇಹಿತರೇ,

ಈ ವರ್ಷದ ಆಗಸ್ಟ್15 ರಂದು ಕೆಂಪು ಕೋಟೆಯ ಆವರಣದಿಂದ ನನ್ನ ಭಾಷಣದ ಸಮಯದಲ್ಲಿ ನಾನು ನಮ್ಮ ದೇಶದ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಬಗ್ಗೆ ಮಾತನಾಡಿದೆ . ನಮ್ಮ ಪರಂಪರೆಯು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿದೆ. ಇಂದು ಭಾರತ್ ಗೌರವ್ ರೈಲು ದೇಶದ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಸ್ಥಳಗಳನ್ನು ಸಂಪರ್ಕಿಸುತ್ತಿದೆ ಮತ್ತು ' ಏಕ್ ಭಾರತ್-ಶ್ರೇಷ್ಠ ಭಾರತ್ ' ಎಂಬ ಮನೋಭಾವವನ್ನು ಬಲಪಡಿಸುತ್ತಿದೆ. ಇಲ್ಲಿಯವರೆಗೆ, ಈ ರೈಲು ಈ ವರ್ಷ ದೇಶದ ವಿವಿಧ ಭಾಗಗಳಿಗೆ ಅಂತಹ ಒಂಬತ್ತು ಪ್ರಯಾಣಗಳನ್ನು ಕೈಗೊಂಡಿದೆ. ಇದು ಶಿರಡಿ ದೇವಾಲಯ ಯಾತ್ರೆ, ಶ್ರೀ ರಾಮಾಯಣ ಯಾತ್ರೆ ಅಥವಾ ದಿವ್ಯ ಕಾಶಿ ಯಾತ್ರೆಯೇ ಆಗಿರಲಿ ಪ್ರಯಾಣಿಕರಿಗೆ ಬಹಳ ಆಹ್ಲಾದಕರ ಅನುಭವವಾಗಿದೆ. ಇಂದು ಕರ್ನಾಟಕದಿಂದ ಕಾಶಿ, ಅಯೋಧ್ಯಾ ಮತ್ತು ಪ್ರಯಾಗ್ ರಾಜ್ ಗೆ 'ಯಾತ್ರೆ' ಸಹ ಪ್ರಾರಂಭವಾಗಿದೆ. ಇದು ಕರ್ನಾಟಕದ ಜನರಿಗೆ ಕಾಶಿ ಅಯೋಧ್ಯೆಗೆ ಭೇಟಿ ನೀಡಲು ಸಹಾಯ ಮಾಡುತ್ತದೆ.

ಸಹೋದರ ಸಹೋದರಿಯರೇ,

ಭಗವತ್ ಭಕ್ತಿ ಮತ್ತು ಸಾಮಾಜಿಕ ಶಕ್ತಿಯೊಂದಿಗೆ ಸಮಾಜವನ್ನು ಹೇಗೆ ಸಂಪರ್ಕಿಸಬಹುದು ಎಂಬುದರ ಬಗ್ಗೆ ಸಂತ ಕನಕ ದಾಸರಿಂದ ನಾವು ಸ್ಫೂರ್ತಿ ಪಡೆಯುತ್ತೇವೆ. ಒಂದು ಕಡೆ ಅವರು ' ಕೃಷ್ಣ ಭಕ್ತಿ ' ಯ ಮಾರ್ಗವನ್ನು ಆರಿಸಿಕೊಂಡರೆ, ಮತ್ತೊಂದೆಡೆ ' ಕುಲ ಕುಲವೇಂದು ಹೊಡೆದಾಡದಿರಿ 'ಯನ್ನು ಒತ್ತಿಹೇಳುವ ಮೂಲಕ ಜಾತಿ ತಾರತಮ್ಯವನ್ನು ಕೊನೆಗಾಣಿಸುವ ಸಂದೇಶವನ್ನು ನೀಡಿದರು. ಇಂದು, ಸಿರಿಧಾನ್ಯಗಳ ಅಂದರೆ ಒರಟು ಧಾನ್ಯಗಳ ಪ್ರಾಮುಖ್ಯದ ಬಗ್ಗೆ ಪ್ರಪಂಚದಾದ್ಯಂತ ಚರ್ಚೆ ನಡೆಯುತ್ತಿದೆ. ಸಂತ ಕನಕದಾಸರು ಆ ಕಾಲದಲ್ಲಿಯೇ ಸಿರಿಧಾನ್ಯಗಳ ಮಹತ್ವವನ್ನು ಒತ್ತಿಹೇಳಿದ್ದರು. ಅವರ ರಚನೆಯೆಂದರೆ - ' ರಾಮ ಧಾನ್ಯ ಚರಿತೆ '. ಅವರು ಸಾಮಾಜಿಕ ಸಮಾನತೆಯ ಸಂದೇಶವನ್ನು ನೀಡಿದರು, ಕರ್ನಾಟಕದ ಅತ್ಯಂತ ಆದ್ಯತೆಯ ಸಿರಿಧಾನ್ಯದ ಉದಾಹರಣೆಯನ್ನು ಉಲ್ಲೇಖಿಸಿದರು.

ಸಹೋದರ ಸಹೋದರಿಯರೇ,

ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಇಂದು ನಾವು ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ನಗರವು ಕೆಂಪೇಗೌಡರಿಗೆ ಬಹಳಷ್ಟು ಋಣಿಯಾಗಿದೆ. ಈ ನಗರವನ್ನು ಸ್ಥಾಪಿಸುವಾಗ ಅವರು ಕಾಳಜಿ ವಹಿಸಿದ ವಿವರಗಳು ಅದ್ಭುತವಾಗಿವೆ, ಸಾಟಿಯಿಲ್ಲದವು. ಅವರು ಶತಮಾನಗಳ ಹಿಂದೆಯೇ ಬೆಂಗಳೂರಿನ ಜನರಿಗೆ ವಾಣಿಜ್ಯ, ಸಂಸ್ಕೃತಿ ಮತ್ತು ಅನುಕೂಲಕ್ಕಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಿದ್ದರು. ಅವರ ದೂರದೃಷ್ಟಿಯ ಲಾಭವನ್ನು ಬೆಂಗಳೂರಿನ ಜನರು ಇನ್ನೂ ಪಡೆಯುತ್ತಿದ್ದಾರೆ. ಇಂದು ವ್ಯಾಪಾರ ಮತ್ತು ವ್ಯವಹಾರದ ಸ್ವರೂಪವು ಬದಲಾಗಿರಬಹುದು, ಆದರೆ 'ಪೇಟೆ ' ಇನ್ನೂ ಬೆಂಗಳೂರಿನ ವಾಣಿಜ್ಯ ಜೀವನಾಡಿಯಾಗಿ ಉಳಿದಿದೆ. ಬೆಂಗಳೂರಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ನಾಡಪ್ರಭು ಕೆಂಪೇಗೌಡರ ಕೊಡುಗೆ ಮಹತ್ವದ್ದಾಗಿದೆ. ಅದು ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯವಾಗಲಿ ಅಥವಾ ಬಸವನಗುಡಿಯ ದೇವಾಲಯಗಳಾಗಲಿ, ಕೆಂಪೇಗೌಡರು ಬೆಂಗಳೂರಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಶಾಶ್ವತವಾಗಿ ಜೀವಂತವಾಗಿರಿಸಿದರು. ಈ ನಗರದ ಇಂತಹ ಸಾಟಿಯಿಲ್ಲದ ವಸತಿಗಾಗಿ ಬೆಂಗಳೂರು ನಗರದ ಜನರು ಕೆಂಪೇಗೌಡರಿಗೆ ಯಾವಾಗಲೂ ಕೃತಜ್ಞರಾಗಿರುತ್ತಾರೆ.

ಸ್ನೇಹಿತರೇ,

ಬೆಂಗಳೂರು ಒಂದು ಅಂತಾರಾಷ್ಟ್ರೀಯ ನಗರವಾಗಿದೆ. ನಮ್ಮ ಪರಂಪರೆಯನ್ನು ಸಂರಕ್ಷಿಸುವಾಗ ನಾವು ಅದನ್ನು ಆಧುನಿಕ ಮೂಲಸೌಕರ್ಯಗಳೊಂದಿಗೆ ಶ್ರೀಮಂತಗೊಳಿಸಬೇಕು. ಇದೆಲ್ಲವೂ ' ಸಬ್ ಕಾ ಪ್ರಯಾಸ್ ' (ಸಾಮೂಹಿಕ ಪ್ರಯತ್ನಗಳಿಂದ) ಮಾತ್ರ ಸಾಧ್ಯ. ಮತ್ತೊಮ್ಮೆ, ಹೊಸ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ತುಂಬಾ ಅಭಿನಂದಿಸುತ್ತೇನೆ. ಇಲ್ಲಿಗೆ ಬಂದು ಆಶೀರ್ವದಿಸಿದ ಪೂಜ್ಯ ಸಂತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಕರ್ನಾಟಕದ ಉತ್ಸಾಹಿ ಯುವಕರು, ತಾಯಂದಿರು, ಸಹೋದರಿಯರು ಮತ್ತು ರೈತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How PLI schemes, design in India and manufacturing excellence are transforming the architectural lighting industry

Media Coverage

How PLI schemes, design in India and manufacturing excellence are transforming the architectural lighting industry
NM on the go

Nm on the go

Always be the first to hear from the PM. Get the App Now!
...
Prime Minister Narendra Modi Chairs Second High-Level Meeting with Secretaries of Government of India
July 28, 2026
Sectors discussed: Finance and Economy, Commerce and Industry, and Technology
PM emphasises the need to break both horizontal and vertical silos within the Government
PM emphasises the importance of technological self-reliance and building domestic capabilities in critical sectors
PM encourages greater participation of young innovators and entrepreneurs in cybersecurity ecosystem
PM Stresses Proactive Outreach on Strategic Sectors to Counter Misinformation
PM says Govt must always remain youthful, dynamic and forward-looking, continuously adapting to new challenges and opportunities with agility and innovation
Secretaries share experiences and perspectives on key initiatives, emerging opportunities and implementation challenges

Prime Minister Shri Narendra Modi chaired the second high-level meeting with Secretaries to the Government of India at his residence at 7, Lok Kalyan Marg earlier today. He reviewed the future action agenda of Ministries and Departments dealing with Finance and Economy, Commerce and Industry, and Technology sectors. The meeting focused on accelerating progress towards the goals of Viksit Bharat.

Prime Minister called for a strong focus on team building across Ministries and Departments, urging officers to work with a shared sense of purpose. He emphasised the need to break both horizontal and vertical silos within the Government so that departments function in close coordination and deliver integrated outcomes.

Highlighting the importance of citizen-centric governance, Prime Minister said that the people of India must remain at the centre of governance. He reminded that every decision and policy should be guided by the interests and aspirations of the common citizen.

Prime Minister stressed that while India is making significant investments in infrastructure, equal priority must be given to developing indigenous technologies. He underscored the importance of technological self-reliance and building domestic capabilities in critical sectors.

Prime Minister underlined that energy security is closely linked with national security, economic stability and citizens’ welfare. Prime Minister said India must achieve self-reliance in the energy sector through innovation, diversification and accelerated capacity creation.

Emphasising that reforms are not merely a fashionable term but a continuous necessity for effective governance, Prime Minister stressed the need to reform processes, improve work culture and strengthen institutional efficiency.

Prime Minister said that growing use of technology must be accompanied by a strong focus on cybersecurity to safeguard digital systems and infrastructure. He stressed the need for constant vigilance against emerging cyber threats. He called for encouraging greater participation of young innovators and entrepreneurs in the cybersecurity ecosystem and emphasised that it should evolve into a nationwide movement.

Prime Minister also emphasised the importance of proactive communication on strategic sectors where the country is undertaking major initiatives, to counter misinformation and unfounded fears surrounding such efforts.

Prime Minister says that new academic courses should be planned in partnership with industry to equip the workforce with skills required by emerging and future industries. He also observed that a government must always remain youthful, dynamic and forward-looking, continuously adapting to new challenges and opportunities with agility and innovation.

The meeting featured detailed discussions by Secretaries on the progress, priorities and implementation issues across their respective domains. The meeting was attended by the Cabinet Secretary, Secretaries of key Ministries and Departments, and senior officials from the Prime Minister’s Office.