ಶೇರ್
 
Comments
"ಈಶಾನ್ಯದ ಅಭಿವೃದ್ಧಿಗೆ ಅಡ್ಡಿಯಾಗುವ ಎಲ್ಲಾ ಅಡೆತಡೆಗಳಿಗೆ ಸರ್ಕಾರ ರೆಡ್ ಕಾರ್ಡ್ ತೋರಿಸಿದೆ"
"ಭಾರತವು ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುವ ದಿನ ಮತ್ತು ಪ್ರತಿಯೊಬ್ಬ ಭಾರತೀಯ ಕೂಡ ನಮ್ಮ ತಂಡವನ್ನು ಹುರಿದುಂಬಿಸುವ ದಿನ ದೂರವಿಲ್ಲ "
"ಅಭಿವೃದ್ಧಿಯು ಬಜೆಟ್, ಟೆಂಡರ್, ಶಂಕುಸ್ಥಾಪನೆ ಮತ್ತು ಉದ್ಘಾಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ"
"ಇಂದು ನಾವು ನೋಡುತ್ತಿರುವ ಪರಿವರ್ತನೆಯು ನಮ್ಮ ಉದ್ದೇಶಗಳು, ನಿರ್ಣಯಗಳು, ಆದ್ಯತೆಗಳು ಮತ್ತು ನಮ್ಮ ಕೆಲಸದ ಸಂಸ್ಕೃತಿಯಲ್ಲಿನ ಬದಲಾವಣೆಯ ಪರಿಣಾಮವಾಗಿದೆ"
"ಕೇಂದ್ರ ಸರ್ಕಾರವು ಈ ವರ್ಷ 7 ಲಕ್ಷ ಕೋಟಿ ರೂಪಾಯಿಗಳನ್ನು ಮೂಲಸೌಕರ್ಯಕ್ಕಾಗಿಯೇ ಖರ್ಚು ಮಾಡುತ್ತಿದೆ, ಆದರೆ 8 ವರ್ಷಗಳ ಹಿಂದೆ ಈ ವೆಚ್ಚವು 2 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಯಾಗಿತ್ತು"
"ಪಿಎಂ-ಡಿವೈನ್ ಅಡಿಯಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳವರೆಗೆ 6,000 ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ"
"ಬುಡಕಟ್ಟು ಸಮುದಾಯದ ಸಂಪ್ರದಾಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಯ ಮಾಡುವುದು ಸರ್ಕಾರದ ಆದ್ಯತೆಯಾಗಿದೆ"
"ಹಿಂದಿನ ಸರ್ಕಾರವು ಈಶಾನ್ಯಕ್ಕೆ 'ವಿಭಜಿಸುವ' (ಡಿವೈಡ್) ವಿಧಾನವನ್ನು ಹೊಂದಿತ್ತು ಆದರೆ ನಮ್ಮ ಸರ್ಕಾರವು 'ದೈವಿಕ' (ಡಿವೈನ್)

ಮೇಘಾಲಯ ಗವರ್ನರ್ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ, ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ, ನನ್ನ ಕೇಂದ್ರ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಅಮಿತ್ ಭಾಯ್ ಶಾ, ಸರ್ಬಾನಂದ ಸೋನೋವಾಲ್, ಕಿರಣ್ ರಿಜಿಜು, ಜಿ ಕಿಶನ್ ರೆಡ್ಡಿ, ಬಿಎಲ್ ವರ್ಮಾ, ಮಣಿಪುರ, ಮಿಜೋರಾಂ, ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಸಿಕ್ಕಿಂನ ಎಲ್ಲಾ ಮುಖ್ಯಮಂತ್ರಿಗಳೇ  ಮತ್ತು ಮೇಘಾಲಯದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!...

ಖುಬ್ಲೇಇ ಶಿಬೋನ್! (ಖಾಸಿ ಔರ್ ಜಯಂತಿಯಾ ಮೇ  ನಮಸ್ತೆ) ನಾಮೆಂಗ್ ಅಮಾ!  (ಗಾರೋ ಮೇ  ನಮಸ್ತೆ)
ಮೇಘಾಲಯವು ಪ್ರಕೃತಿ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದೆ.  ಈ ಸಮೃದ್ಧಿಯು ನಿಮ್ಮ ಆತಿಥ್ಯದಲ್ಲಿಯೂ ಪ್ರತಿಫಲಿಸುತ್ತದೆ.  ಇಂದು ಮತ್ತೊಮ್ಮೆ ಮೇಘಾಲಯದ ಅಭಿವೃದ್ಧಿ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ.  ಸಂಪರ್ಕ, ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗಕ್ಕಾಗಿ ಹತ್ತಾರು ಯೋಜನೆಗಳಿಗಾಗಿ ಮೇಘಾಲಯದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು.

ಸಹೋದರರೇ ಮತ್ತು ಸಹೋದರಿಯರೇ...

ಇಂದು ಫುಟ್ಬಾಲ್ ವಿಶ್ವಕಪ್ ಅಂತಿಮ ಪಂದ್ಯಾವಳಿ (ಫೈನಲ್) ನಡೆಯುತ್ತಿರುವಂತಹ ಈ ಸಂದರ್ಭದಲ್ಲಿ ಫುಟ್ಬಾಲ್ ಪ್ರೇಮಿಗಳ ನಡುವೆ ನಾನಿಲ್ಲಿ ಫುಟ್ಬಾಲ್ ಮೈದಾನದಲ್ಲಿರುವುದು ಕಾಕತಾಳೀಯ.  ಆ ಕಡೆ ಫುಟ್ಬಾಲ್ ಸ್ಪರ್ಧೆ ನಡೆಯುತ್ತಿದ್ದು, ಫುಟ್ಬಾಲ್ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಪೈಪೋಟಿ ನಡೆಸುತ್ತಿದ್ದೇವೆ.  ಕತಾರ್‌ನಲ್ಲಿ ಪಂದ್ಯ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ. ನಮ್ಮಗಳ ಉತ್ಸಾಹವೇನೂ ಕಡಿಮೆಯಿಲ್ಲ.  ಸ್ನೇಹಿತರೇ.... ಫುಟ್ಬಾಲ್ ಮೈದಾನದಲ್ಲಿರುವಾಗ ಮತ್ತು ಫುಟ್ಬಾಲ್ ಜ್ವರ ಎಲ್ಲೆಡೆ ಇರುವಾಗ, ನಾವು ಫುಟ್ಬಾಲ್ ನ ವ್ಯಾಖ್ಯಾನದ ಬಗ್ಗೆ ಏಕೆ ಮಾತನಾಡಬಾರದು,‌ಅಲ್ಲವೇ? ಹೀಗಾಗಿ  ಫುಟ್ಬಾಲ್‌ನ  ಉದಾಹರಣೆ ನೀಡಿದ್ದೇನೆ. ಫುಟ್‌ಬಾಲ್‌ನಲ್ಲಿ ಯಾರಾದರೂ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸಿದರೆ ಅವರನ್ನು "ರೆಡ್ ಕಾರ್ಡ್ " ತೋರಿಸಿ ಹೊರಹಾಕುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.  ಅದೇ ರೀತಿ, ಕಳೆದ 8 ವರ್ಷಗಳಲ್ಲಿ, ನಾವು ಈಶಾನ್ಯ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಅಡೆತಡೆಗಳಿಗೆ ರೆಡ್ ಕಾರ್ಡ್ ತೋರಿಸಿದ್ದೇವೆ.  ಭ್ರಷ್ಟಾಚಾರ, ತಾರತಮ್ಯ, ಸ್ವಜನಪಕ್ಷಪಾತ, ಹಿಂಸಾಚಾರ, ಯೋಜನೆಗಳನ್ನು ಸ್ಥಗಿತಗೊಳಿಸುವುದು, ವೋಟ್ (ಮತ) ಬ್ಯಾಂಕ್ ರಾಜಕಾರಣವನ್ನು ತೊಡೆದುಹಾಕಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆಯಾದರೂ   ಈ ಕೆಡುಕುಗಳು ಮತ್ತು ರೋಗಗಳ ಬೇರುಗಳು ತುಂಬಾ ಆಳವಾಗಿವೆ ಎಂಬುದು ನಿಮಗೂ ಗೊತ್ತು, ದೇಶಕ್ಕೂ ಗೊತ್ತು. 

ಆದ್ದರಿಂದ ಅವುಗಳನ್ನು ತೊಡೆದುಹಾಕಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು.  ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಮ್ಮ ಪ್ರಯತ್ನದ ಉತ್ತಮ ಫಲಿತಾಂಶಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ.  ಇಷ್ಟೇ ಅಲ್ಲ, ಇಂದು ಕೇಂದ್ರ ಸರ್ಕಾರ ಕ್ರೀಡೆಗೆ ಸಂಬಂಧಿಸಿದಂತೆ ಹೊಸ ವಿಧಾನಕ್ಕೂ  ಮುಂದಾಗಿದೆ.  ಇದು ಈಶಾನ್ಯಕ್ಕೆ, ಈಶಾನ್ಯದ ನನ್ನ ಸೈನಿಕರಿಗೆ, ಇಲ್ಲಿನ ಯುವಜನತೆಗೆ ನಮ್ಮ ಗಂಡುಮಕ್ಕಳು ಹಾಗೂ ಹೆಣ್ಣುಮಕ್ಕಳಿಗೆ ಪ್ರಯೋಜನವನ್ನೂ ನೀಡಿದೆ.  ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ಈಶಾನ್ಯದಲ್ಲಿದೆ.  ಇಂದು, ಈಶಾನ್ಯದಲ್ಲಿ ವಿವಿಧೋದ್ದೇಶ ಸಭಾಂಗಣ, ಫುಟ್ಬಾಲ್ ಮೈದಾನ, ಅಥ್ಲೆಟಿಕ್ಸ್ ಟ್ರ್ಯಾಕ್ ಮುಂತಾದ 90 ಯೋಜನೆಗಳ ಕೆಲಸ ನಡೆಯುತ್ತಿದೆ.  ಇಂದು ಶಿಲ್ಲಾಂಗ್‌ನಿಂದಲೇ  ನಾನು ಹೇಳಬಲ್ಲೆ, ಕತಾರ್‌ನಲ್ಲಿ ನಡೆಯುತ್ತಿರುವ ಆಟದ ಮೇಲೆ ನಮ್ಮೆಲ್ಲರ ಕಣ್ಣುಗಳು ಇವೆ. ಮೈದಾನದಲ್ಲಿ ವಿದೇಶಿ ತಂಡಗಳಿವೆ ಎಂಬುದೂ ನಮಗೆ ಗೊತ್ತು.ಆದರೆ ನನ್ನ ದೇಶದ ಯುವ ಶಕ್ತಿಯ ಮೇಲೆ ನನಗೆ ನಂಬಿಕೆ ಇದೆ.  ಆದ್ದರಿಂದಲೇ ಭಾರತದಲ್ಲಿ ನಾವು ಹೀಗೆ ಸಂಭ್ರಮಿಸುವ ಮತ್ತು ತ್ರಿವರ್ಣ ಧ್ವಜಕ್ಕೆ ಮೆರಗು ನೀಡುವ ದಿನ ದೂರವಿಲ್ಲ ಎಂಬುದನ್ನೂ ನಾನು ಅತಿ ಆತ್ಮವಿಶ್ವಾಸದಿಂದ ಹೇಳಬಲ್ಲೆ..

ಸಹೋದರ ಮತ್ತು ಸಹೋದರಿಯರೇ...

ಬಜೆಟ್, ಟೆಂಡರ್, ಶಂಕುಸ್ಥಾಪನೆ, ಉದ್ಘಾಟನೆ ಮುಂತಾದ ಆಚರಣೆಗಳಿಗೆ ಮಾತ್ರ ಅಭಿವೃದ್ಧಿ ಸೀಮಿತವಾಗಿಲ್ಲ.  ಇಂತಹವು  2014 ರ ಮೊದಲು ಸೀಮಿತವಾಗಿದ್ದವು.  ರಿಬ್ಬನ್‌ ಕಟ್ಟರ್‌ಗಳು ಕೈಗೆ ಬಂದಿದ್ದವು, ಮುಖಂಡರು ಹಾರ ಹಾಕುತ್ತಿದ್ದರು, ಜಿಂದಾಬಾದ್‌ ಎಂಬ ಘೋಷಣೆಗಳೂ ಮೊಳಗಿದವು.  ಹೀಗೆ ಮಾಡಿದ್ದರಿಂದಾದ  ಬದಲಾವಣೆಯಾದರೂ‌ ಏನು?  ಅಭಿವೃದ್ಧಿಯಾದರೂ ಏನು? ಏನೂ ಇಲ್ಲ.ಆದರೆ  ಇಂದು ನಮ್ಮ‌ ಸರ್ಕಾರದಿಂದಾಗಿ   ದೇಶ ಬದಲಾಗಿದೆ. ಇಂದು ಆಗಿರುವ ಬದಲಾವಣೆ ನಮ್ಮ ಉದ್ದೇಶದಲ್ಲಿ ಬಂದಿದೆ.  ಇದು ನಮ್ಮ ನಿರ್ಣಯಗಳಲ್ಲಿ ಬಂದಿದೆ. ಬದಲಾವಣೆ ಅಭಿವೃದ್ಧಿ ನಮ್ಮ ಆದ್ಯತೆಗಳಲ್ಲಿ ಬಂದಿದೆ, ಇದು ನಮ್ಮ ಕೆಲಸದ ಸಂಸ್ಕೃತಿಯಲ್ಲಿ ಬಂದಿದೆ, ಬದಲಾವಣೆ ಪ್ರಕ್ರಿಯೆ ಮತ್ತು ಫಲಿತಾಂಶಗಳಲ್ಲಿಯೂ ಬಂದಿದೆ.  ಆಧುನಿಕ ಮೂಲಸೌಕರ್ಯ, ಆಧುನಿಕ ಸಂಪರ್ಕದೊಂದಿಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನಮ್ಮ‌ ನಿರ್ಣಯವಾಗಿದೆ.  ಭಾರತದ ಅಭಿವೃದ್ಧಿಗಾಗಿ ಪ್ರತಿಯೊಬ್ಬರ ಪ್ರಯತ್ನಗಳೊಂದಿಗೆ ಕ್ಷಿಪ್ರ ಅಭಿವೃದ್ಧಿಯ ಧ್ಯೇಯದೊಂದಿಗೆ ಭಾರತದ ಪ್ರತಿಯೊಂದು ಪ್ರದೇಶವನ್ನು, ಪ್ರತಿಯೊಂದು ವಿಭಾಗವನ್ನು ಸಂಪರ್ಕಿಸುವುದು ಇದರ ಉದ್ದೇಶವಾಗಿದೆ.  ಕೊರತೆ ಅಭಾವವನ್ನು ಹೋಗಲಾಡಿಸುವುದು, ಅಂತರವನ್ನು ಕಡಿಮೆ ಮಾಡುವುದು, ಸಾಮರ್ಥ್ಯ ವರ್ಧನೆ, ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದು ನಮ್ಮ  ಆದ್ಯತೆಯಾಗಿದೆ.  ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆಯ ಅರ್ಥ ಪ್ರತಿ ಯೋಜನೆ, ಪ್ರತಿ ಕಾರ್ಯಕ್ರಮವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂಬುದಾಗಿದೆ.

ಸ್ನೇಹಿತರೇ...

ನಾವು ಕೇಂದ್ರ ಸರ್ಕಾರದ ಆದ್ಯತೆಗಳನ್ನು ಬದಲಾಯಿಸಿದಾಗ, ಅದರ ಸಕಾರಾತ್ಮಕ ಪರಿಣಾಮವು ಇಡೀ ದೇಶದಲ್ಲಿ ಗೋಚರಿಸುತ್ತದೆ.  ಈ ವರ್ಷ ದೇಶದಲ್ಲಿ 7 ಲಕ್ಷ ಕೋಟಿ ರೂಪಾಯಿಗಳ ಅಭಿವೃದ್ಧಿಯನ್ನು ಮೇಘಾಲಯದ ಸಹೋದರ ಸಹೋದರಿಯರು ಈ ಅಂಕಿಅಂಶವನ್ನು ನೆನಪಿಸಿಕೊಳ್ಳುತ್ತಾರೆ, ಈಶಾನ್ಯದ ನನ್ನ ಸಹೋದರ ಸಹೋದರಿಯರು ಇದನ್ನು ನೆನಪಿಸಿಕೊಳ್ಳುತ್ತಾರೆ.  ಕೇಂದ್ರ ಸರಕಾರ ಕೇವಲ ಮೂಲಸೌಕರ್ಯಕ್ಕಾಗಿ 7 ಸಾವಿರ ಕೋಟಿ ರೂ.  ಖರ್ಚು ಮಾಡಿದೆ.ಆದರೆ ಇದು 8 ವರ್ಷಗಳ ಹಿಂದೆ ಈ ವೆಚ್ಚ 2 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇತ್ತು.  ಅದೇನೆಂದರೆ, ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಕೇವಲ 2 ಲಕ್ಷ ಕೋಟಿ ರೂಪಾಯಿಗೆ ಮೂಲಸೌಕರ್ಯ ಅಭಿವೃದ್ಧಿ ತಲುಪಿತ್ತು.ಈ  8 ವರ್ಷಗಳಲ್ಲಿ ನಾವು ಸುಮಾರು 4 ಪಟ್ಟು ಇದರ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ.  ಇಂದು, ಅನೇಕ ರಾಜ್ಯಗಳು ಪರಸ್ಪರ ಮೂಲಸೌಕರ್ಯಕ್ಕಾಗಿ ಪೈಪೋಟಿ ನಡೆಸುತ್ತಿವೆ, ಮತ್ತು ರಾಜ್ಯರಾಜ್ಯಗಳ ನಡುವೆ ಪೈಪೋಟಿಯೂ ಇದೆ. ರಾಜ್ಯಗಳ ನಡುವೆ ಅಭಿವೃದ್ಧಿಗಾಗಿ ಪೈಪೋಟಿ ಇದೆ.  ಇಂದು ದೇಶದಲ್ಲಿ ಆಗಿರುವ ಈ ಬದಲಾವಣೆಯ ದೊಡ್ಡ ಫಲಾನುಭವಿಯೆಂದರೆ, ಈ  ನನ್ನ ಈಶಾನ್ಯ ಭಾಗ.  ಶಿಲ್ಲಾಂಗ್ ಸೇರಿದಂತೆ ಈಶಾನ್ಯದ ಎಲ್ಲಾ ರಾಜಧಾನಿಗಳನ್ನು ರೈಲು ಸೇವೆಯೊಂದಿಗೆ ಸಂಪರ್ಕಿಸುವ ಕೆಲಸ ವೇಗವಾಗಿ ನಡೆಯುತ್ತಿದೆ.  2014 ರ ಮೊದಲು, ಪ್ರತಿ ವಾರ ಕೇವಲ 900 ವಿಮಾನಗಳು ಮಾತ್ರ ಸಾಧ್ಯವಾಗಿತ್ತು.ಆದರೆ ಇಂದು ನಮ್ಮ ಸರ್ಕಾರದಿಂದಾಗಿ  ಅವುಗಳ ಸಂಖ್ಯೆ ಸುಮಾರು ಒಂದು ಸಾವಿರದ ಒಂಬೈನೂರನ್ನು ತಲುಪಿದೆ.  ಮೊದಲು 900 ಇದ್ದದ್ದು ಈಗ 1900 ಆಗಲಿದೆ.  ಇಂದು, ಉಡಾನ್ ಯೋಜನೆಯಡಿಯಲ್ಲಿ ಮೇಘಾಲಯದಲ್ಲಿ 16 ಮಾರ್ಗಗಳಲ್ಲಿ ವಿಮಾನ ಸೇವೆ ನಡೆಯುತ್ತಿದೆ.  ಇದರಿಂದಾಗಿ ಮೇಘಾಲಯದ ಜನರು ಅಗ್ಗದ ವಿಮಾನ ಸೇವೆಯ ಲಾಭ ಪಡೆಯುತ್ತಿದ್ದಾರೆ.  ಮೇಘಾಲಯ ಮತ್ತು ಈಶಾನ್ಯ ಭಾಗದ ರೈತರು ಉತ್ತಮ ವಾಯು ಸಂಪರ್ಕದಿಂದ ಪ್ರಯೋಜನ ಪಡೆಯುತ್ತಿದ್ದಾರೆ.  ಕೇಂದ್ರ ಸರ್ಕಾರದ ಕೃಷಿ ಉಡಾನ್ ಯೋಜನೆಯಿಂದ ಇಲ್ಲಿನ ಹಣ್ಣು ತರಕಾರಿಗಳು ದೇಶ-ವಿದೇಶದ ಮಾರುಕಟ್ಟೆಗಳಿಗೆ ಸುಲಭವಾಗಿ ತಲುಪುವಂತಾಗಿದೆ.

ಸ್ನೇಹಿತರೇ...

ಇಂದು ಶಂಕುಸ್ಥಾಪನೆಯಾದ ಯೋಜನೆಗಳಿಂದ ಮೇಘಾಲಯದ ಸಂಪರ್ಕವು ಮತ್ತಷ್ಟು ಬಲಗೊಳ್ಳಲಿದೆ.  ಕಳೆದ 8 ವರ್ಷಗಳಲ್ಲಿ ಮೇಘಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ.  ಮೇಘಾಲಯದಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಕಳೆದ 8 ವರ್ಷಗಳಲ್ಲಿ ನಿರ್ಮಿಸಲಾದ ಗ್ರಾಮೀಣ ರಸ್ತೆಗಳ ಸಂಖ್ಯೆ ಹಿಂದಿನ 20 ವರ್ಷಗಳಿಗಿಂತ ಏಳು ಪಟ್ಟು ಹೆಚ್ಚಾಗಿದೆ.

ಸಹೋದರರೇ ಮತ್ತು ಸಹೋದರಿಯರೇ..

ಡಿಜಿಟಲ್ ಸಂಪರ್ಕವು ಈಶಾನ್ಯದ ಯುವ ಶಕ್ತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.  ಡಿಜಿಟಲ್ ಸಂಪರ್ಕವು ಸಂಭಾಷಣೆಯಿಂದ ಮಾತ್ರ ಪ್ರಯೋಜನ ಪಡೆಯುತ್ತದೆಯೇ ಹೊರತು ಸಂವಹನದಿಂದಲ್ಲ.  ಇದರಿಂದ  ಪ್ರವಾಸೋದ್ಯಮದಿಂದ ತಂತ್ರಜ್ಞಾನದವರೆಗೆ, ಶಿಕ್ಷಣದಿಂದ ಆರೋಗ್ಯದವರೆಗೆ, ಪ್ರತಿಯೊಂದು ಕ್ಷೇತ್ರದಲ್ಲೂ ಸೌಲಭ್ಯಗಳು ಮತ್ತು ಅವಕಾಶಗಳು ಹೆಚ್ಚಾಗುತ್ತವೆ.  ಇದರೊಂದಿಗೆ, ಜಗತ್ತಿನಲ್ಲಿ ವೇಗವಾಗಿ ಹೊರಹೊಮ್ಮುತ್ತಿರುವ ಡಿಜಿಟಲ್ ಆರ್ಥಿಕತೆಯ ಸಾಮರ್ಥ್ಯವೂ ಹೆಚ್ಚಾಗುತ್ತದೆ.  2014 ಕ್ಕೆ ಹೋಲಿಸಿದರೆ, ಈಶಾನ್ಯದಲ್ಲಿ ಆಪ್ಟಿಕಲ್ ಫೈಬರ್ ಕವರೇಜ್ ಸುಮಾರು 4 ಪಟ್ಟು ಹೆಚ್ಚಾಗಿದೆ.  ಆದರೆ ಮೇಘಾಲಯದಲ್ಲಿ ಇದು 5 ಪಟ್ಟು ಹೆಚ್ಚಾಗಿದೆ. ಈಶಾನ್ಯದ ಪ್ರತಿಯೊಂದು ಮೂಲೆಗೂ ಉತ್ತಮ ಮೊಬೈಲ್ ಸಂಪರ್ಕಕ್ಕಾಗಿ 6,000 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ.  ಇದಕ್ಕಾಗಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ.  ಇಂದು ಮೇಘಾಲಯದಲ್ಲಿ ಹಲವಾರು 4G ಮೊಬೈಲ್ ಟವರ್‌ಗಳ ಉದ್ಘಾಟನೆ ಈ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ.  ಈ ಮೂಲಸೌಕರ್ಯ ಇಲ್ಲಿನ ಯುವಕರಿಗೆ ಹೊಸ ಅವಕಾಶಗಳನ್ನು ನೀಡಲಿದೆ.  ಐಐಎಂ ಉದ್ಘಾಟನೆ ಮತ್ತು ಮೇಘಾಲಯದಲ್ಲಿ ಟೆಕ್ನಾಲಜಿ ಪಾರ್ಕ್‌ನ ಶಂಕುಸ್ಥಾಪನೆಯು ಶಿಕ್ಷಣ ಮತ್ತು ಗಳಿಕೆಯ ಅವಕಾಶಗಳನ್ನು ವಿಸ್ತರಿಸುತ್ತದೆ.  ಇಂದು, ಈಶಾನ್ಯದ ಬುಡಕಟ್ಟು ಪ್ರದೇಶಗಳಲ್ಲಿ 150 ಕ್ಕೂ ಹೆಚ್ಚು ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ, ಅವುಗಳಲ್ಲಿ 39 ಮೇಘಾಲಯದಲ್ಲಿವೆ.  ಮತ್ತೊಂದೆಡೆ, ಯುವಕರು ಐಐಎಂಗಳಂತಹ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ಶಿಕ್ಷಣದ ಪ್ರಯೋಜನವನ್ನು ಪಡೆಯಲಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ...,

ಬಿಜೆಪಿ, ಎನ್ ಡಿಎ ಸರ್ಕಾರ ಈಶಾನ್ಯ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ.  ಈ ವರ್ಷವೇ, 3 ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಅವು ನೇರವಾಗಿ ಈಶಾನ್ಯಕ್ಕೆ ಅಥವಾ ಅವು ಈಶಾನ್ಯಕ್ಕೆ ಹೆಚ್ಚು ಪ್ರಯೋಜನವನ್ನು ನೀಡಲಿವೆ.  ಪರ್ವತ್‌ಮಾಲಾ ಯೋಜನೆಯಡಿ ರೋಪ್ ವೇ ಜಾಲ ನಿರ್ಮಿಸಲಾಗುತ್ತಿದೆ.  ಇದು ಈಶಾನ್ಯದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಅನುಕೂಲವನ್ನು ಹೆಚ್ಚಿಸುತ್ತದೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೂ ಕಾರಣವಾಗುತ್ತದೆ.  PM DEVINE (ಪಿಎಂ‌ಡಿವೈನ್) ಯೋಜನೆಯು ಈಶಾನ್ಯದ ಅಭಿವೃದ್ಧಿಗೆ ಹೊಸ ಪ್ರಚೋದನೆಯನ್ನು ನೀಡಲಿದೆ.  ಈ ಯೋಜನೆಯೊಂದಿಗೆ, ಈಶಾನ್ಯಕ್ಕೆ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚು ಸುಲಭವಾಗಿ ಅನುಮೋದಿಸಲಾಗುತ್ತದೆ.  ಇಲ್ಲಿ ಮಹಿಳೆಯರು ಮತ್ತು ಯುವಕರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲಾಗುವುದು.  ಪಿಎಂ-ಡಿವೈನ್ ಅಡಿಯಲ್ಲಿ ಮುಂಬರುವ 3-4 ವರ್ಷಗಳವರೆಗೆ 6 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ...

ದೀರ್ಘಕಾಲ ಸರ್ಕಾರದಲ್ಲಿದ್ದ ಪಕ್ಷಗಳು ಈಶಾನ್ಯಕ್ಕೆ ವಿಭಜನೆಯ ಕಲ್ಪನೆಯನ್ನು ಹೊಂದಿದ್ದವು ಮತ್ತು ನಾವು DEVINE (ಡಿವೈನ್) ಕಲ್ಪನೆಯೊಂದಿಗೆ ಬಂದಿದ್ದೇವೆ.  ಬೇರೆ ಬೇರೆ ಸಮುದಾಯಗಳಿರಲೀ, ಅಥವಾ ಬೇರೆಬೇರೆ ಪ್ರದೇಶಗಳಿರಲೀ ,ಅಲ್ಲಿ ನಾವು ಎಲ್ಲಾ ರೀತಿಯ ವಿಭಜನೆಗಳನ್ನು ತೆಗೆದುಹಾಕುತ್ತಿದ್ದೇವೆ.  ಇಂದು, ಈಶಾನ್ಯದಲ್ಲಿ‌ ನಾವು ವಿವಾದಗಳ ಗಡಿಗಳನ್ನು ಮಾಡುತ್ತಿಲ್ಲ.ಬದಲಿಗೆ ನಾವು ಅಭಿವೃದ್ಧಿ ಕಾರಿಡಾರ್‌ಗಳನ್ನು ಮಾಡುತ್ತಿದ್ದೇವೆ.  ನಾವು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ.  ಕಳೆದ 8 ವರ್ಷಗಳಲ್ಲಿ ಹಲವು ಸಂಘಟನೆಗಳು ಹಿಂಸೆಯ ಹಾದಿ ಬಿಟ್ಟು ಶಾಶ್ವತ ಶಾಂತಿಯ ಹಾದಿ ಹಿಡಿದಿವೆ.  ಈಶಾನ್ಯದಲ್ಲಿ, AFSPA ಸಶಸ್ತ್ರ ಪಡೆಗಳು (ವಿಶೇಷ ಅಧಿಕಾರಗಳು) ಕಾಯಿದೆ (AFSPA) ಅಗತ್ಯವಿಲ್ಲ. ಇದಕ್ಕಾಗಿ, ರಾಜ್ಯ ಸರ್ಕಾರಗಳ ಸಹಾಯದಿಂದ ನಿರಂತರವಾಗಿ ಪರಿಸ್ಥಿತಿಗಳನ್ನು ಸುಧಾರಿಸಲಾಗುತ್ತಿದೆ.  ಇಷ್ಟೇ ಅಲ್ಲ, ರಾಜ್ಯಗಳ ನಡುವೆ ದಶಕಗಳಿಂದ ನಡೆಯುತ್ತಿದ್ದ ಗಡಿ ವಿವಾದಗಳೂ  ಬಗೆಹರಿಯುತ್ತಿವೆ.

ಸ್ನೇಹಿತರೇ...

 ನಮಗೆ ಈಶಾನ್ಯ, ನಮ್ಮ ಗಡಿ ಪ್ರದೇಶಗಳು ಅಂತಿಮ ಬಿಂದು.  ಆದರೆ ಇದು ಭದ್ರತೆ ಮತ್ತು ಸಮೃದ್ಧಿಯ ಹೆಬ್ಬಾಗಿಲು.  ರಾಷ್ಟ್ರದ ಭದ್ರತೆಯೂ ಇಲ್ಲಿಂದಲೇ ಖಾತ್ರಿಯಾಗುತ್ತದೆ ಮತ್ತು ಇತರ ದೇಶಗಳೊಂದಿಗೆ  ವ್ಯಾಪಾರ ಸಂಪರ್ಕವೂ ಇಲ್ಲಿಂದಲೇ ನಡೆಯುತ್ತದೆ.  ಅದಕ್ಕಾಗಿಯೇ ಮತ್ತೊಂದು ಪ್ರಮುಖ ಯೋಜನೆ ಇದೆ, ಇದು ಈಶಾನ್ಯ ರಾಜ್ಯಗಳಿಗೆ ಪ್ರಯೋಜನಕಾರಿಯಾಗಿದೆ.  ರೋಮಾಂಚಕ ಗಡಿ ಗ್ರಾಮವನ್ನಾಗಿಸುವ ಯೋಜನೆ ಇದಾಗಿದೆ.  ಇದರ ಅಡಿಯಲ್ಲಿ ಗಡಿ ಗ್ರಾಮಗಳಲ್ಲಿ ಉತ್ತಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.  ಗಡಿ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ಸಂಪರ್ಕ ಹೆಚ್ಚಿದರೆ ಶತ್ರುಗಳಿಗೆ ಲಾಭ ಎಂಬುದನ್ನು ಹಿಂದೆ ಹೇಳಲಾಗುತ್ತಿತ್ತು.ಆದರೆ  ನಾನು ಇದನ್ನು ಊಹಿಸಲೂ ಸಾಧ್ಯವೂ ಇಲ್ಲ.   ಹಿಂದಿನ ಸರ್ಕಾರದ ಈ ಚಿಂತನೆಯಿಂದಾಗಿ ಈಶಾನ್ಯ ಸೇರಿದಂತೆ ದೇಶದ ಎಲ್ಲ ಗಡಿ ಪ್ರದೇಶಗಳಲ್ಲಿ ಸಂಪರ್ಕ ಸುಧಾರಣೆ ಸಾಧ್ಯವಾಗಿಲ್ಲ.  ಆದರೆ ಇಂದು ಕ್ಷಣಮಾತ್ರದಲ್ಲಿ ಹೊಸ ರಸ್ತೆಗಳು, ಹೊಸ ಸುರಂಗಗಳು, ಹೊಸ ಸೇತುವೆಗಳು, ಹೊಸ ರೈಲು ಮಾರ್ಗಗಳು, ಹೊಸ ಏರ್‌ಸ್ಟ್ರಿಪ್‌ಗಳು, ಅಗತ್ಯವಿದ್ದಲ್ಲಿ ಒಂದರ ಹಿಂದೆ ಒಂದರಂತೆ ನಿರ್ಮಾಣ ಕಾರ್ಯಗಳು ವೇಗವಾಗಿ ನಡೆಯುತ್ತಿವೆ.  ಒಂದು ಕಾಲದಲ್ಲಿ ನಿರ್ಜನವಾಗಿದ್ದ ಗಡಿ ಗ್ರಾಮಗಳನ್ನು ಜೀವಂತಗೊಳಿಸುವ ಕಾರ್ಯದಲ್ಲಿ ತೊಡಗಿದ್ದೇವೆ.  ನಮ್ಮ ನಗರಗಳಿಗೆ ಮುಖ್ಯವಾದ ವೇಗ.  ನಮ್ಮ ಗಡಿಗಳಲ್ಲಿಯೂ ಅದೇ ವೇಗವನ್ನು ಹೊಂದಿರುವುದು ಅವಶ್ಯಕ.  ಇದರಿಂದ ಇಲ್ಲಿ ಪ್ರವಾಸೋದ್ಯಮವೂ ಹೆಚ್ಚಲಿದ್ದು, ಊರು ಬಿಟ್ಟವರು ಸಹ ಹಿಂದಿರುಗಿ ಬರಲಿದ್ದಾರೆ.

ಸ್ನೇಹಿತರೇ...

 ಕಳೆದ ವರ್ಷ ನಾನು ವ್ಯಾಟಿಕನ್ ಸಿಟಿಗೆ ಭೇಟಿ ನೀಡುವ ಅವಕಾಶವನ್ನು ಹೊಂದಿದ್ದಾಗ ಅಲ್ಲಿ ನಾನು ಅವರ ಹೋಲಿನೆಸ್ ಪೋಪ್ ಅವರನ್ನು ಭೇಟಿಯಾಗಿದ್ದೆ.  ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದೇನೆ.  ಈ ಸಭೆಯು ನನ್ನ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿತ್ತು.  ಇಡೀ ಮನುಕುಲ ಇಂದು ಎದುರಿಸುತ್ತಿರುವ ಸವಾಲುಗಳ ಕುರಿತು ನಾವಿಬ್ಬರೂ ಚರ್ಚಿಸಿದ್ದೇವೆ.  ಏಕತೆ ಮತ್ತು ಸೌಹಾರ್ದತೆಯ ಮನೋಭಾವದಿಂದ ಎಲ್ಲರೂ ಹೇಗೆ ಪ್ರಯೋಜನ ಪಡೆಯಬಹುದು ಎಂಬುದರ ಕುರಿತು ಒಮ್ಮತದ ಪ್ರಯತ್ನಗಳಿಗಾಗಿ ಒಮ್ಮತ ತೀರ್ಮಾನವನ್ನು ಮಾಡಲಾಯಿತು. ಇಂತಹ ಏಕತೆ ಸೌಜಹಾರ್ದತೆಯ ಮನೋಭಾವನೆಯನ್ನು ನಾವು ಬಲಪಡಿಸಬೇಕು.

ಸ್ನೇಹಿತರೇ...,

ನಮ್ಮ ಬುಡಕಟ್ಟು ಸಮಾಜವು ಶಾಂತಿ ಮತ್ತು ಅಭಿವೃದ್ಧಿಯ ರಾಜಕೀಯದಿಂದ ಹೆಚ್ಚು ಪ್ರಯೋಜನ ಪಡೆದಿದೆ.  ಬುಡಕಟ್ಟು ಸಮಾಜದ ಸಂಪ್ರದಾಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.  ಅದಕ್ಕಾಗಿಯೇ ನಾವು ಬಿದಿರು ಕಟಾವು ನಿಷೇಧವನ್ನು ತೆಗೆದುಹಾಕಿದ್ದೇವೆ.  ಇದು ಬಿದಿರಿಗೆ ಸಂಬಂಧಿಸಿದ ಬುಡಕಟ್ಟು ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿತು. ಅರಣ್ಯದಿಂದ ಪಡೆದ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಈಶಾನ್ಯದಲ್ಲಿ 850 ವನ್ ಧನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಅನೇಕ ಸ್ವ-ಸಹಾಯ ಗುಂಪುಗಳು ಅವರೊಂದಿಗೆ ಸಂಬಂಧ ಹೊಂದಿವೆ. ಇದರಲ್ಲಿ ನಮ್ಮ ಅನೇಕ ತಾಯಂದಿರು ಮತ್ತು ಸಹೋದರಿಯರು ಕೆಲಸ ಮಾಡುತ್ತಿದ್ದಾರೆ.  ಅಷ್ಟೇ ಅಲ್ಲ, ಸಾಮಾಜಿಕ ಮೂಲಸೌಕರ್ಯಗಳಾದ ಮನೆ, ನೀರು, ವಿದ್ಯುತ್, ಗ್ಯಾಸ್ ಕೂಡ ಈಶಾನ್ಯಕ್ಕೆ ಹೆಚ್ಚು ಪ್ರಯೋಜನವನ್ನು ನೀಡಿದೆ.  ಕಳೆದ ವರ್ಷಗಳಲ್ಲಿ, ಮೇಘಾಲಯದಲ್ಲಿ ಮೊದಲ ಬಾರಿಗೆ 2 ಲಕ್ಷ ಮನೆಗಳಿಗೆ ವಿದ್ಯುತ್ ತಲುಪಿದೆ.  ಬಡವರಿಗಾಗಿ ಸುಮಾರು 70 ಸಾವಿರ ಮನೆಗಳು ಮಂಜೂರಾಗಿವೆ.  ಸುಮಾರು ಮೂರು ಲಕ್ಷ ಕುಟುಂಬಗಳು ಪ್ರಥಮ ಬಾರಿಗೆ ನಲ್ಲಿ ನೀರಿನ ಸೌಲಭ್ಯ ಪಡೆದಿವೆ.  ಇಂತಹ ಸೌಲಭ್ಯಗಳ ದೊಡ್ಡ ಫಲಾನುಭವಿಗಳು ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರಾಗಿದ್ದಾರೆ.

ಸ್ನೇಹಿತರೇ...,

ಈಶಾನ್ಯದಲ್ಲಿ ಈ ಕ್ಷಿಪ್ರ ಅಭಿವೃದ್ಧಿಯ ನದಿ‌ಹೀಗೆ ಹರಿಯಲು ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿಯಾಗಿದೆ.  ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್ ಹಬ್ಬ ಬರಲಿದೆ. ಇಂದು, ನಾನು ಈಶಾನ್ಯಕ್ಕೆ ಬಂದಿದ್ದು, ಈ ದೇಶದ ಎಲ್ಲಾ ದೇಶವಾಸಿಗಳಿಗೆ, ಈಶಾನ್ಯದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಮುಂಬರುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.  ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.  
ಖುಬ್ಲೇಇ ಶಿಬೋನ್ ‌! (ಖಾಸಿ ಔರ್ ಜಯಂತಿಯಾ ಮೇ ಧನ್ಯವಾದ್)ಮಿತೆಲಾ ..! (ಗಾರೋ ಮೇ ಧನ್ಯವಾದ್)

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
New Parliament building imbibes spirit of Ek Bharat Shreshtha Bharat

Media Coverage

New Parliament building imbibes spirit of Ek Bharat Shreshtha Bharat
...

Nm on the go

Always be the first to hear from the PM. Get the App Now!
...
Tamil Nadu has been a bastion of Indian nationalism: PM Modi
May 27, 2023
ಶೇರ್
 
Comments
“Tamil Nadu has been a bastion of Indian nationalism”
“Under the guidance of Adheenam and Raja Ji we found a blessed path from our sacred ancient Tamil Culture - the path of transfer of power through the medium of Sengol”
“In 1947 Thiruvaduthurai Adheenam created a special Sengol. Today, pictures from that era are reminding us about the deep emotional bond between Tamil culture and India's destiny as a modern democracy”
“Sengol of Adheenam was the beginning of freeing India of every symbol of hundreds of years of slavery”
“it was the Sengol which conjoined free India to the era of the nation that existed before slavery”
“The Sengol is getting its deserved place in the temple of democracy”

नअनैवरुक्कुम् वणक्कम्

ऊँ नम: शिवाय, शिवाय नम:!

हर हर महादेव!

सबसे पहले, विभिन्न आदीनम् से जुड़े आप सभी पूज्य संतों का मैं शीश झुकाकर अभिनंदन करता हूं। आज मेरे निवास स्थान पर आपके चरण पड़े हैं, ये मेरे लिए बहुत सौभाग्य की बात है। ये भगवान शिव की कृपा है जिसकी वजह से मुझे एक साथ आप सभी शिव भक्तों के दर्शन करने का मौका मिला है। मुझे इस बात की भी बहुत खुशी है कि कल नए संसद भवन के लोकार्पण के समय आप सभी वहां साक्षात आकर के आशीर्वाद देने वाले हैं।

पूज्य संतगण,

हम सभी जानते हैं कि हमारे स्वतंत्रता संग्राम में तमिलनाडु की कितनी महत्वपूर्ण भूमिका रही है। वीरमंगई वेलु नाचियार से लेकर मरुदु भाइयों तक, सुब्रह्मण्य भारती से लेकर नेताजी सुभाष चंद्र बोस के साथ जुड़ने वाले अनेकों तमिल लोगों तक, हर युग में तमिलनाडु, भारतीय राष्ट्रवाद का गढ़ रहा है। तमिल लोगों के दिल में हमेशा से मां भारती की सेवा की, भारत के कल्याण की भावना रही है। बावजूद इसके, ये बहुत दुर्भाग्यपूर्ण है कि भारत की आजादी में तमिल लोगों के योगदान को वो महत्व नहीं दिया गया, जो दिया जाना चाहिए था। अब बीजेपी ने इस विषय को प्रमुखता से उठाना शुरू किया है। अब देश के लोगों को भी पता चल रहा है कि महान तमिल परंपरा और राष्ट्रभक्ति के प्रतीक तमिलनाडु के साथ क्या व्यवहार हुआ था।

जब आजादी का समय आया, तब सत्ता के हस्तांतरण के प्रतीक को लेकर प्रश्न उठा था। इसके लिए हमारे देश में अलग-अलग परंपराएं रही हैं। अलग-अलग रीति-रिवाज भी रहे हैं। लेकिन उस समय राजाजी और आदीनम् के मार्गदर्शन में हमें अपनी प्राचीन तमिल संस्कृति से एक पुण्य मार्ग मिला था। ये मार्ग था- सेंगोल के माध्यम से सत्ता हस्तांतरण का। तमिल परंपरा में, शासन चलाने वाले को सेंगोल दिया जाता था। सेंगोल इस बात का प्रतीक था कि उसे धारण करने वाले व्यक्ति पर देश के कल्याण की जिम्मेदारी है और वो कभी कर्तव्य के मार्ग से विचलित नहीं होगा। सत्ता हस्तांतरण के प्रतीक के तौर पर तब 1947 में पवित्र तिरुवावडुतुरै आदीनम् द्वारा एक विशेष सेंगोल तैयार किया गया था। आज उस दौर की तस्वीरें हमें याद दिला रही हैं कि तमिल संस्कृति और आधुनिक लोकतंत्र के रूप में भारत की नियति के बीच कितना भावुक और आत्मीय संबंध रहा है। आज उन गहरे संबंधों की गाथा इतिहास के दबे हुए पन्नों से बाहर निकलकर एक बार फिर जीवंत हो उठी है। इससे उस समय की घटनाओं को समझने का सही दृष्टिकोण भी मिलता है। और इसके साथ ही, हमें ये भी पता चलता है कि सत्ता के हस्तांतरण के इस सबसे बड़े प्रतीक के साथ क्या किया गया।

मेरे देशवासियों,

आज मैं राजाजी और विभिन्न आदीनम् की दूरदर्शिता को भी विशेष तौर पर नमन करूंगा। आदीनम के एक सेंगोल ने, भारत को सैकड़ों वर्षों की गुलामी के हर प्रतीक से मुक्ति दिलाने की शुरुआत कर दी थी। जब भारत की आजादी का प्रथम पल आया, आजादी का प्रथम पल, वो क्षण आया, तो ये सेंगोल ही था, जिसने गुलामी से पहले वाले कालखंड और स्वतंत्र भारत के उस पहले पल को आपस में जोड़ दिया था। इसलिए, इस पवित्र सेंगोल का महत्व सिर्फ इतना ही नहीं है कि ये 1947 में सत्ता हस्तांतरण का प्रतीक बना था। इस सेंगोल का महत्व इसलिए भी है क्योंकि इसने गुलामी के पहले वाले गौरवशाली भारत से, उसकी परंपराओं से, स्वतंत्र भारत के भविष्य को कनेक्ट कर दिया था। अच्छा होता कि आजादी के बाद इस पूज्य सेंगोल को पर्याप्त मान-सम्मान दिया जाता, इसे गौरवमयी स्थान दिया जाता। लेकिन ये सेंगोल, प्रयागराज में, आनंद भवन में, Walking Stick यानि पैदल चलने पर सहारा देने वाली छड़ी कहकर, प्रदर्शनी के लिए रख दिया गया था। आपका ये सेवक और हमारी सरकार, अब उस सेंगोल को आनंद भवन से निकालकर लाई है। आज आजादी के उस प्रथम पल को नए संसद भवन में सेंगोल की स्थापना के समय हमें फिर से पुनर्जीवित करने का मौका मिला है। लोकतंत्र के मंदिर में आज सेंगोल को उसका उचित स्थान मिल रहा है। मुझे खुशी है कि अब भारत की महान परंपरा के प्रतीक उसी सेंगोल को नए संसद भवन में स्थापित किया जाएगा। ये सेंगोल इस बात की याद दिलाता रहेगा कि हमें कर्तव्य पथ पर चलना है, जनता-जनार्दन के प्रति जवाबदेह बने रहना है।

पूज्य संतगण,

आदीनम की महान प्रेरक परंपरा, साक्षात सात्विक ऊर्जा का प्रतीक है। आप सभी संत शैव परंपरा के अनुयायी हैं। आपके दर्शन में जो एक भारत श्रेष्ठ भारत की भावना है, वो स्वयं भारत की एकता और अखंडता का प्रतिबिंब है। आपके कई आदीनम् के नामों में ही इसकी झलक मिल जाती है। आपके कुछ आदीनम् के नाम में कैलाश का उल्लेख है। ये पवित्र पर्वत, तमिलनाडु से बहुत दूर हिमालय में है, फिर भी ये आपके हृदय के करीब है। शैव सिद्धांत के प्रसिद्ध संतों में से एक तिरुमूलर् के बारे में कहा जाता है कि वो कैलाश पर्वत से शिव भक्ति का प्रसार करने के लिए तमिलनाडु आए थे। आज भी, उनकी रचना तिरुमन्दिरम् के श्लोकों का पाठ भगवान शिव की स्मृति में किया जाता है। अप्पर्, सम्बन्दर्, सुन्दरर् और माणिक्का वासगर् जैसे कई महान संतों ने उज्जैन, केदारनाथ और गौरीकुंड का उल्लेख किया है। जनता जनार्दन के आशीर्वाद से आज मैं महादेव की नगरी काशी का सांसद हूं, तो आपको काशी की बात भी बताऊंगा। धर्मपुरम आदीनम् के स्वामी कुमारगुरुपरा तमिलनाडु से काशी गए थे। उन्होंने बनारस के केदार घाट पर केदारेश्वर मंदिर की स्थापना की थी। तमिलनाडु के तिरुप्पनन्दाळ् में काशी मठ का नाम भी काशी पर रखा गया है। इस मठ के बारे में एक दिलचस्प जानकारी भी मुझे पता चली है। कहा जाता है कि तिरुप्पनन्दाळ् का काशी मठ, तीर्थयात्रियों को बैकिंग सेवाएं उपलब्ध कराता था। कोई तीर्थयात्री तमिलनाडु के काशी मठ में पैसे जमा करने के बाद काशी में प्रमाणपत्र दिखाकर वो पैसे निकाल सकता था। इस तरह, शैव सिद्धांत के अनुयायियों ने सिर्फ शिव भक्ति का प्रसार ही नहीं किया बल्कि हमें एक दूसरे के करीब लाने का कार्य भी किया।

पूज्य संतगण,

सैकड़ों वर्षों की गुलामी के बाद भी तमिलनाडु की संस्कृति आज भी जीवंत और समृद्ध है, तो इसमें आदीनम् जैसी महान और दिव्य परंपरा की भी बड़ी भूमिका है। इस परंपरा को जीवित रखने का दायित्व संतजनों ने तो निभाया ही है, साथ ही इसका श्रेय पीड़ित-शोषित-वंचित सभी को जाता है कि उन्होंने इसकी रक्षा की, उसे आगे बढ़ाया। राष्ट्र के लिए योगदान के मामले में आपकी सभी संस्थाओं का इतिहास बहुत गौरवशाली रहा है। अब उस अतीत को आगे बढ़ाने, उससे प्रेरित होने और आने वाली पीढ़ियों के लिए काम करने का समय है।

पूज्य संतगण,

देश ने अगले 25 वर्षों के लिए कुछ लक्ष्य तय किए हैं। हमारा लक्ष्य है कि आजादी के 100 साल पूरे होने तक एक मजबूत, आत्मनिर्भर और समावेशी विकसित भारत का निर्माण हो। 1947 में आपकी महत्वपूर्ण भूमिका से कोटि-कोटि देशवासी पुन: परिचित हुए हैं। आज जब देश 2047 के बड़े लक्ष्यों को लेकर आगे बढ़ रहा है तब आपकी भूमिका और महत्वपूर्ण हो गई है। आपकी संस्थाओं ने हमेशा सेवा के मूल्यों को साकार किया है। आपने लोगों को एक-दूसरे से जोड़ने का, उनमें समानता का भाव पैदा करने का बड़ा उदाहरण पेश किया है। भारत जितना एकजुट होगा, उतना ही मजबूत होगा। इसलिए हमारी प्रगति के रास्ते में रुकावटें पैदा करने वाले तरह-तरह की चुनौतियां खड़ी करेंगे। जिन्हें भारत की उन्नति खटकती है, वो सबसे पहले हमारी एकता को ही तोड़ने की कोशिश करेंगे। लेकिन मुझे विश्वास है कि देश को आपकी संस्थाओं से आध्यात्मिकता और सामाजिकता की जो शक्ति मिल रही है, उससे हम हर चुनौती का सामना कर लेंगे। मैं फिर एक बार, आप मेरे यहां पधारे, आप सबने आशीर्वाद दिये, ये मेरा सौभाग्य है, मैं फिर एक बार आप सबका हृदय से आभार व्यक्त करता हूँ, आप सबको प्रणाम करता हूँ। नए संसद भवन के लोकार्पण के अवसर पर आप सब यहां आए और हमें आशीर्वाद दिया। इससे बड़ा सौभाग्य कोई हो नहीं सकता है और इसलिए मैं जितना धन्यवाद करूँ, उतना कम है। फिर एक बार आप सबको प्रणाम करता हूँ।

ऊँ नम: शिवाय!

वणक्कम!