ʻವಿಜಯ್ ಉತ್ಸವʼ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಕ್ತಿಗೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ
ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ನಾನು ಈ ʻವಿಜಯ್‌ ಉತ್ಸವʼದ ಸ್ಫೂರ್ತಿಯೊಂದಿಗೆ ಸದನದಲ್ಲಿ ಎದ್ದು ನಿಂತಿದ್ದೇನೆ: ಪ್ರಧಾನಮಂತ್ರಿ
ʻಆಪರೇಷನ್ ಸಿಂದೂರʼ ಸ್ವಾವಲಂಬಿ ಭಾರತದ ಶಕ್ತಿಯನ್ನು ಎತ್ತಿ ತೋರಿಸಿದೆ: ಪ್ರಧಾನಮಂತ್ರಿ
ʻಆಪರೇಷನ್ ಸಿಂದೂರʼ ಸಮಯದಲ್ಲಿ, ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಯ ಒಗ್ಗಟ್ಟು ಪಾಕಿಸ್ತಾನವನ್ನು ನಡುಗಿಸಿತು: ಪ್ರಧಾನಮಂತ್ರಿ
ಭಯೋತ್ಪಾದನೆಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ, ಪರಮಾಣು ಬ್ಲ್ಯಾಕ್ಮೇಲ್ ಅನ್ನು ಸಹಿಸುವುದಿಲ್ಲ ಮತ್ತು ಭಯೋತ್ಪಾದಕ ಪ್ರಾಯೋಜಕರು ಮತ್ತು ಮಾಸ್ಟರ್ ಮೈಂಡ್‌ಗಳನ್ನು ಸಮಾನವಾಗಿ ಪರಿಗಣಿಸುತ್ತೇವೆ ಎಂದು ಭಾರತ ಸ್ಪಷ್ಟಪಡಿಸಿದೆ: ಪ್ರಧಾನಮಂತ್ರಿ
ʻಆಪರೇಷನ್ ಸಿಂದೂರʼ ಸಮಯದಲ್ಲಿ, ಭಾರತವು ವ್ಯಾಪಕ ಜಾಗತಿಕ ಬೆಂಬಲವನ್ನು ಗಳಿಸಿತು: ಪ್ರಧಾನಮಂತ್ರಿ
ʻಆಪರೇಷನ್ ಸಿಂಧೂರʼ ಮುಂದುವರಿದಿದೆ, ಪಾಕಿಸ್ತಾನದ ಯಾವುದೇ ಅಜಾಗರೂಕ ಕ್ರಮವನ್ನು ದಿಟ್ಟ ಪ್ರತಿಕ್ರಿಯೆಯೊಂದಿಗೆ ಎದುರಿಸಲಾಗುವುದು: ಪ್ರಧಾನಮಂತ್ರಿ
ಗಡಿಯಲ್ಲಿ ಬಲವಾದ ಮಿಲಿಟರಿಯು ಸದೃಢ ಮತ್ತು ಸುರಕ್ಷಿತ ಪ್ರಜಾಪ್ರಭುತ್ವವನ್ನು ಖಚಿತಪಡಿಸುತ್ತದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ ಭಾರತದ ಸಶಸ್ತ್ರ ಪಡೆಗಳ ಶಕ್ತಿ ವರ್ಧನೆಗೆ ʻಆಪರೇಷನ್ ಸಿಂದೂರʼ ಸ್ಪಷ್ಟ ಪುರಾವೆಯಾಗಿದೆ: ಪ್ರಧಾನಮಂತ್ರಿ
ಭಾರತವು ಬುದ್ಧನ ಭೂಮಿಯೇ ಹೊರತು ಯುದ್ಧಭೂಮಿಯೊಲ್ಲ, ಶಕ್ತಿಯ ಮೂಲಕ ಶಾಶ್ವತ ಶಾಂತಿಯು ನೆಲೆಸುತ್ತದೆ ಎಂದು ನಂಬಿರುವ ನಾವು ಸಮೃದ್ಧಿ ಮತ್ತು ಸಾಮರಸ್ಯಕ್ಕಾಗಿ ಶ್ರಮಿಸುತ್ತೇವೆ: ಪ್ರಧಾನಮಂತ್ರಿ
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ: ಪ್ರಧಾನಮಂತ್ರಿ

ಗೌರವಾನ್ವಿತ ಸ್ಪೀಕರ್ ಸರ್,

ಈ ಅಧಿವೇಶನದ ಆರಂಭದಲ್ಲೇ ನಾನು ಮಾಧ್ಯಮ ಮಿತ್ರರೊಂದಿಗೆ ಮಾತನಾಡುವಾಗ, ಎಲ್ಲಾ ಸಂಸದರಿಗೂ ಒಂದು ಮನವಿ ಮಾಡಿದ್ದೆ. ಈ ಅಧಿವೇಶನವು ಭಾರತದ ವಿಜಯಗಳ ಆಚರಣೆಯಾಗಿದೆ ಎಂದು ನಾನು ಹೇಳಿದ್ದೆ. ಈ ಸಂಸತ್ತಿನ ಅಧಿವೇಶನವು ಭಾರತದ ಕೀರ್ತಿಯನ್ನು ಬಣ್ಣಿಸುವ ಅಧಿವೇಶನವಾಗಿದೆ.

ಸನ್ಮಾನ್ಯ ಸ್ಪೀಕರ್ ಸರ್,

ನಾನು 'ವಿಜಯೋತ್ಸವ'ದ ಬಗ್ಗೆ ಮಾತನಾಡುವಾಗ, ಅದು ಭಯೋತ್ಪಾದಕರ ಪ್ರಧಾನ ಕಚೇರಿಯನ್ನು ಧೂಳಾಗಿ ಪರಿವರ್ತಿಸಿದ ಆಚರಣೆ ಎಂದು ನಾನು ಹೇಳಲು ಬಯಸುತ್ತೇನೆ. ನಾನು 'ವಿಜಯೋತ್ಸವ' ಎಂದು ಹೇಳುವಾಗ, ಅದು 'ಸಿಂದೂರ' ಸಂಕಲ್ಪವನ್ನು ಪೂರೈಸುವ ಬಗ್ಗೆ ಆಗಿದೆ. ನಾನು 'ವಿಜಯೋತ್ಸವ' ಎಂದು ಹೇಳುವಾಗ, ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಕ್ತಿಯ ಬಗ್ಗೆ ಮಾತನಾಡುತ್ತೇನೆ. ನಾನು 'ವಿಜಯೋತ್ಸವ' ಎಂದು ಹೇಳುವಾಗ, ನಾನು 140 ಕೋಟಿ ಭಾರತೀಯರ ಏಕತೆ,  ಸಂಕಲ್ಪ ಮತ್ತು ಆ ಸಾಮೂಹಿಕ ಇಚ್ಛಾಶಕ್ತಿಯ ವಿಜಯವನ್ನು ಉಲ್ಲೇಖಿಸುತ್ತೇನೆ.

ಸನ್ಮಾನ್ಯ ಸ್ಪೀಕರ್ ಸರ್,

ಈ ಗೆಲುವಿನ ಉತ್ಸಾಹದೊಂದಿಗೆ, ನಾನು ಈ ಸದನದಲ್ಲಿ ಭಾರತದ ಸ್ಥಾನಮಾನವನ್ನು ಪ್ರತಿನಿಧಿಸಲು ನಿಂತಿದ್ದೇನೆ, ಭಾರತದ ದೃಷ್ಟಿಕೋನವನ್ನು ನೋಡಲು ವಿಫಲರಾದವರಿಗೆ, ನಾನು ಅವರಿಗೆ ಕನ್ನಡಿ ಹಿಡಿದು ನಿಂತಿದ್ದೇನೆ.

ಸನ್ಮಾನ್ಯ ಸ್ಪೀಕರ್ ಸರ್,

ದೇಶದ 140 ಕೋಟಿ ನಾಗರಿಕರ ಭಾವನೆಗಳಿಗೆ ನನ್ನ ಧ್ವನಿ ಸೇರಿಸಲು ನಾನು ಇಲ್ಲಿದ್ದೇನೆ. ಈ ಸದನದಲ್ಲಿ ಪ್ರತಿಧ್ವನಿಸಿದ ಆ ಭಾವನೆಗಳ ಪ್ರತಿಧ್ವನಿ - ಅದಕ್ಕೆ ನನ್ನ ಧ್ವನಿಯನ್ನು ಸಹ ನೀಡಲು ನಾನು ಇಲ್ಲಿ ನಿಂತಿದ್ದೇನೆ.

ಸನ್ಮಾನ್ಯ ಸ್ಪೀಕರ್ ಸರ್,

ಆಪರೇಷನ್ ಸಿಂದೂರ್ ಸಮಯದಲ್ಲಿ ಈ ದೇಶದ ಜನರು ನನ್ನೊಂದಿಗೆ ನಿಂತ ರೀತಿ, ನನ್ನನ್ನು ಆಶೀರ್ವದಿಸಿದ ರೀತಿಗೆ, ನಾನು ಅವರಿಗೆ ಋಣಿಯಾಗಿದ್ದೇನೆ. ದೇಶದ ನಾಗರಿಕರಿಗೆ ನಾನು ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ, ನಾನು ಅವರಿಗೆ ನಮಸ್ಕರಿಸುತ್ತೇನೆ.

ಮಾನ್ಯ ಸ್ಪೀಕರ್ ಸರ್,

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ಘಟನೆ, ಭಯೋತ್ಪಾದಕರು ಧರ್ಮವನ್ನು ಕೇಳಿದ ನಂತರ ಅಮಾಯಕ ಜನರಿಗೆ ಗುಂಡು ಹಾರಿಸಿದರು, ಇದು ಕ್ರೌರ್ಯದ ಪರಮಾವಧಿ. ಇದು ಭಾರತವನ್ನು ಹಿಂಸಾಚಾರದ ಜ್ವಾಲೆಯಲ್ಲಿ ಮುಳುಗಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿತ್ತು. ಇದು ದೇಶದಲ್ಲಿ ಗಲಭೆ ಪ್ರಚೋದಿಸುವ ಪಿತೂರಿಯಾಗಿತ್ತು. ಇಂದು ರಾಷ್ಟ್ರವು ಒಗ್ಗಟ್ಟಿನಿಂದ ಆ ಪಿತೂರಿಯನ್ನು ವಿಫಲಗೊಳಿಸಿದ್ದಕ್ಕಾಗಿ ನಾನು ದೇಶದ ಜನರಿಗೆ ಧನ್ಯವಾದ ಹೇಳುತ್ತೇನೆ.

ಮಾನ್ಯ ಸ್ಪೀಕರ್ ಸರ್,

ಏಪ್ರಿಲ್ 22ರ ನಂತರ, ನಾನು ಸಾರ್ವಜನಿಕ ಹೇಳಿಕೆ ನೀಡಿದ್ದೇನೆ. ಜಗತ್ತು ಅರ್ಥ ಮಾಡಿಕೊಳ್ಳುವುದನ್ನು ಖಚಿತಪಡಿಸಲು, ನಾನು ಇಂಗ್ಲಿಷ್‌ನಲ್ಲಿ ಕೆಲವು ವಾಕ್ಯಗಳನ್ನು ಬಳಸಿದ್ದೇನೆ. ಇದು ನಮ್ಮ ಸಂಕಲ್ಪ ಎಂದು ನಾನು ಹೇಳಿದೆ, ನಾವು ಭಯೋತ್ಪಾದಕರನ್ನು ಧೂಳಾಗಿ ಪರಿವರ್ತಿಸುತ್ತೇವೆ ಮತ್ತು ಅವರ ಸೂತ್ರಧಾರಿಗಳಿಗೂ ಸಹ ಶಿಕ್ಷೆಯಾಗುತ್ತದೆ, ಕಲ್ಪನೆಗೂ ಮೀರಿದ ಶಿಕ್ಷೆ ನೀಡಲಾಗುವುದು ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ.

ಏಪ್ರಿಲ್ 22 ರಂದು ನಾನು ವಿದೇಶದಲ್ಲಿದ್ದೆ. ನಾನು ತಕ್ಷಣ ಹಿಂತಿರುಗಿ ಬಂದ ಕೂಡಲೇ ಸಭೆ ಕರೆದಿದ್ದೇನೆ. ಆ ಸಭೆಯಲ್ಲಿ, ಸ್ಪಷ್ಟ ಸೂಚನೆಗಳನ್ನು ನೀಡಲಾಯಿತು: ಭಯೋತ್ಪಾದನೆಗೆ ನಿರ್ಣಾಯಕವಾಗಿ ಉತ್ತರ ನೀಡಬೇಕು, ಇದು ನಮ್ಮ ರಾಷ್ಟ್ರೀಯ ಸಂಕಲ್ಪ ಎಂದು ಸೂಚನೆ ನೀಡಿದ್ದೆ.

ಸನ್ಮಾನ್ಯ ಸ್ಪೀಕರ್ ಸರ್,

ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯಗಳಲ್ಲಿ, ಅವರ ಶಕ್ತಿ ಮತ್ತು ಧೈರ್ಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವಿದೆ. ಯಾವಾಗ, ಎಲ್ಲಿ, ಹೇಗೆ ಮತ್ತು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರದೊಂದಿಗೆ, ಕ್ರಮ ತೆಗೆದುಕೊಳ್ಳಲು ಸೇನೆಗೆ ಮುಕ್ತ ಅಧಿಕಾರ ನೀಡಲಾಯಿತು. ಇದೆಲ್ಲವನ್ನೂ ಆ ಸಭೆಯಲ್ಲೇ ಸ್ಪಷ್ಟವಾಗಿ ತಿಳಿಸಲಾಯಿತು, ಅದರಲ್ಲಿ ಕೆಲವನ್ನು ಮಾಧ್ಯಮಗಳಲ್ಲೂ ವರದಿ ಮಾಡಲಾಯಿತು. ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಲಾಗಿದೆ ಎಂಬ ಬಗ್ಗೆ ನಮಗೆ ಹೆಮ್ಮೆಯಿದೆ, ಇಂದಿಗೂ ಭಯೋತ್ಪಾದನೆಯ ಸೂತ್ರಧಾರಿಗಳು ನಿದ್ರೆ ಕಳೆದುಕೊಳ್ಳುತ್ತಿದ್ದಾರೆ.

ಸನ್ಮಾನ್ಯ ಸ್ಪೀಕರ್ ಸರ್,

ನಮ್ಮ ಸೇನೆಯ ಯಶಸ್ಸಿನ ಹಿಂದೆ ಭಾರತದ ದೃಷ್ಟಿಕೋನವನ್ನು ಸದನ ಮತ್ತು ಭಾರತದ ಜನರ ಮುಂದೆ ಪ್ರಸ್ತುತಪಡಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ಪಹಲ್ಗಾಮ್ ದಾಳಿಯ ನಂತರ ಭಾರತವು ಪ್ರಮುಖ ಕ್ರಮ ಕೈಗೊಳ್ಳುತ್ತದೆ ಎಂದು ಪಾಕಿಸ್ತಾನಿ ಸೇನೆಯು ಗ್ರಹಿಸಿತು. ಪಾಕಿಸ್ತಾನ ಪರಮಾಣು ಬೆದರಿಕೆಗಳನ್ನು ನೀಡಲು ಪ್ರಾರಂಭಿಸಿತು. ಆದರೂ, ಭಾರತವು ಯೋಜಿಸಿದಂತೆ ಕಾರ್ಯಾಚರಣೆ ನಡೆಸಿತು. ಮೇ 6ರ ರಾತ್ರಿ ಮತ್ತು ಮೇ 7ರ ಬೆಳಗ್ಗೆ ಪಾಕಿಸ್ತಾನವು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಕೇವಲ 22 ನಿಮಿಷಗಳಲ್ಲಿ, ನಮ್ಮ ಸೇನೆಯು ಏಪ್ರಿಲ್ 22ರ ದಾಳಿಗೆ ನಿಖರವಾದ ಗುರಿಗಳೊಂದಿಗೆ ಪ್ರತೀಕಾರ ತೀರಿಸಿಕೊಂಡಿತು. ಎರಡನೆಯದಾಗಿ, ಗೌರವಾನ್ವಿತ ಸ್ಪೀಕರ್ ಸರ್, ನಾವು ಈ ಹಿಂದೆ ಹಲವಾರು ಬಾರಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ, ಆದರೆ ಭಾರತವು ಅಂತಹ ತಂತ್ರವನ್ನು ಜಾರಿಗೆ ತಂದಿದ್ದು ಇದೇ ಮೊದಲು. ನಾವು ಹಿಂದೆಂದೂ ಕಾಣದ ಸ್ಥಳಗಳನ್ನು ತಲುಪಿದೆವು. ಪಾಕಿಸ್ತಾನದ ಉದ್ದಗಲಕ್ಕೂ ಇರುವ ಭಯೋತ್ಪಾದಕ ಶಿಬಿರಗಳನ್ನು ಬೂದಿ ಮಾಡಿದೆವು. ಬಹವಾಲ್ಪುರ್ ಮತ್ತು ಮುರಿಡ್ಕೆಯಂತಹ ಮುಟ್ಟಲಾಗದ ಸ್ಥಳಗಳನ್ನು ಸಹ ನೆಲಸಮ ಮಾಡಿದೆವು.

ಸನ್ಮಾನ್ಯ ಸ್ಪೀಕರ್ ಸರ್,

ನಮ್ಮ ಸಶಸ್ತ್ರ ಪಡೆಗಳು ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿದವು. ಮೂರನೆಯದಾಗಿ, ಪಾಕಿಸ್ತಾನದ ಪರಮಾಣು ಬೆದರಿಕೆಗಳಲ್ಲಿ ಹುರುಳಿಲ್ಲ ಎಂದು ಬಹಿರಂಗಪಡಿಸಿದ್ದೇವೆ. ಪರಮಾಣು ಬ್ಲ್ಯಾಕ್‌ಮೇಲ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ, ಭಾರತವು ಅಂತಹ ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಭಾರತ ಸಾಬೀತುಪಡಿಸಿದೆ.

ಸನ್ಮಾನ್ಯ ಸ್ಪೀಕರ್ ಸರ್,

ನಾಲ್ಕನೆಯದಾಗಿ, ಭಾರತವು ತನ್ನ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿತು. ನಾವು ಪಾಕಿಸ್ತಾನದ ಹೃದಯ ಭಾಗದಲ್ಲಿ ನಿಖರವಾದ ದಾಳಿಗಳನ್ನು ಮಾಡಿದ್ದೇವೆ. ಅವರ ವಾಯುನೆಲೆಯ ಸ್ವತ್ತುಗಳು ಬೃಹತ್ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಇಂದಿಗೂ ಅವರ ಹಲವಾರು ವಾಯುನೆಲೆಗಳು ಇನ್ನೂ ಐ.ಸಿ.ಯುನಲ್ಲಿವೆ. ಇದು ತಂತ್ರಜ್ಞಾನ-ಚಾಲಿತ ಯುದ್ಧದ ಯುಗ, ಆಪರೇಷನ್ ಸಿಂದೂರ್ ಆ ಕ್ಷೇತ್ರದಲ್ಲೂ ಯಶಸ್ವಿಯಾಗಿದೆ. ಕಳೆದ 10 ವರ್ಷಗಳಲ್ಲಿ ನಾವು ಸೇನಾ ಸಿದ್ಧತೆಗಳನ್ನು ಮಾಡದಿದ್ದರೆ, ಈ ತಂತ್ರಜ್ಞಾನ ಯುಗದಲ್ಲಿ ಭಾರತ ಅನುಭವಿಸಬಹುದಾದ ಹಾನಿ ಊಹಿಸಲೂ ಸಾಧ್ಯವಿಲ್ಲ. ಐದನೆಯದಾಗಿ, ಆಪರೇಷನ್ ಸಿಂದೂರ್ ಸಮಯದಲ್ಲಿ ಮೊದಲ ಬಾರಿಗೆ, ಜಗತ್ತು 'ಆತ್ಮನಿರ್ಭರ್ ಭಾರತ'(ಸ್ವಾವಲಂಬಿ ಭಾರತ)ದ ಶಕ್ತಿಯನ್ನು ಗುರುತಿಸಿತು. ಭಾರತದಲ್ಲಿ ತಯಾರಿಸಿದ ಡ್ರೋನ್‌ಗಳು ಮತ್ತು ಭಾರತದಲ್ಲಿ ತಯಾರಿಸಿದ ಕ್ಷಿಪಣಿಗಳು ಪಾಕಿಸ್ತಾನದ ಸಂಪೂರ್ಣ ರಕ್ಷಣಾ ವ್ಯವಸ್ಥೆಯ ದೌರ್ಬಲ್ಯಗಳನ್ನು ಬಹಿರಂಗಪಡಿಸಿದವು.

ಸನ್ಮಾನ್ಯ ಸ್ಪೀಕರ್ ಸರ್,

ಮತ್ತೊಂದು ಪ್ರಮುಖ ಅಂಶವೆಂದರೆ, ನಾನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿ.ಡಿ.ಎಸ್) ಹುದ್ದೆಯನ್ನು ಘೋಷಿಸಿದ ನಂತರ ಶ್ರೀ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ರಕ್ಷಣಾ ವಿಷಯಗಳನ್ನು ನಿರ್ವಹಿಸಿದ ಸಚಿವರೊಬ್ಬರು ನನ್ನನ್ನು ಭೇಟಿ ಮಾಡಲು ಬಂದರು. ಅವರು ತುಂಬಾ ಸಂತೋಷಪಟ್ಟರು ಮತ್ತು ನಿರ್ಧಾರವನ್ನು ಶ್ಲಾಘಿಸಿದರು. ಈ ಕಾರ್ಯಾಚರಣೆ ಸಮಯದಲ್ಲಿ ನೌಕಾಪಡೆ, ಭೂಸೇನೆ ಮತ್ತು ವಾಯುಪಡೆ ನಡೆಸಿದ ಜಂಟಿ ಕಾರ್ಯಾಚರಣೆ - 3 ಪಡೆಗಳ ನಡುವಿನ ಹೊಂದಾಣಿಕೆ ಮತ್ತು ಶಕ್ತಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿತು.

ಸನ್ಮಾನ್ಯ ಸ್ಪೀಕರ್ ಸರ್,

ದೇಶದಲ್ಲಿ ಹಿಂದೆಯೂ ಭಯೋತ್ಪಾದಕ ಘಟನೆಗಳು ಸಂಭವಿಸುತ್ತಿದ್ದವು. ಆದರೆ ಆಗ, ಅಂತಹ ದಾಳಿಗಳ ಸೂತ್ರಧಾರಿಗಳು ನಿರಾತಂಕರಾಗಿದ್ದರು. ಅವರು ಮುಂದಿನ ನಡೆಯನ್ನು ಯೋಜಿಸುವಲ್ಲಿ ನಿರತರಾಗಿರುತ್ತಿದ್ದರು, ಅವರಿಗೆ ಏನೂ ಆಗುವುದಿಲ್ಲ ಎಂಬ ವಿಶ್ವಾಸ ಅವರಲ್ಲಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ದಾಳಿಯ ನಂತರ, ಆ ಸೂತ್ರಧಾರಿಗಳು ರಾತ್ರಿ ಮಲಗಲು ಸಾಧ್ಯವಿಲ್ಲ. ಭಾರತ ಬರುತ್ತದೆ, ಹೊಡೆಯುತ್ತದೆ ಮತ್ತು ಹಿಂತಿರುಗುತ್ತದೆ ಎಂಬುದು ಅವರಿಗೆ ತಿಳಿದಿದೆ. ಇದು ಭಾರತ ಸ್ಥಾಪಿಸಿದ ಹೊಸ ಸಾಮಾನ್ಯ ಸ್ಥಿತಿ.

ಸನ್ಮಾನ್ಯ ಸ್ಪೀಕರ್ ಸರ್,

ಭಾರತದ ಸೇನಾ ಕಾರ್ಯಗಳ ಪ್ರಮಾಣ ಮತ್ತು ವ್ಯಾಪ್ತಿಯನ್ನು ಈಗ ಜಗತ್ತು ನೋಡಿದೆ. ಸಿಂದೂರದಿಂದ ಸಿಂಧೂವರೆಗೆ, ಭಾರತವು ಪಾಕಿಸ್ತಾನದಾದ್ಯಂತ ಕಾರ್ಯ ನಿರ್ವಹಿಸಿದೆ. ಭಾರತದಲ್ಲಿ ದಾಳಿ ನಡೆಸುವವರು ಮತ್ತು ಅವರಿಗೆ ಆಶ್ರಯ ನೀಡುವ ಪಾಕಿಸ್ತಾನ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಆಪರೇಷನ್ ಸಿಂದೂರ್ ತೋರಿಸಿದೆ. ಅವರು ಇನ್ನು ಮುಂದೆ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ಭಾರತವು 3 ತತ್ವಗಳನ್ನು ವ್ಯಾಖ್ಯಾನಿಸಿದೆ ಎಂದು ಆಪರೇಷನ್ ಸಿಂದೂರ್ ಸ್ಪಷ್ಟಪಡಿಸಿದೆ. ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ನಾವು ನಮ್ಮದೇ ಆದ ರೀತಿಯಲ್ಲಿ, ನಮ್ಮದೇ ಆದ ನಿಯಮಗಳ ಮೇಲೆ ಮತ್ತು ನಾವು ಆಯ್ಕೆ ಮಾಡಿದ ಸಮಯದಲ್ಲಿ ತಕ್ಕ ಉತ್ತರ ನೀಡುತ್ತೇವೆ. ಪರಮಾಣು ಬ್ಲ್ಯಾಕ್‌ಮೇಲ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಮೂರನೆಯದಾಗಿ, ಭಯೋತ್ಪಾದನೆಯನ್ನು ಪ್ರಾಯೋಜಿಸುವ ಸರ್ಕಾರಗಳು ಮತ್ತು ಭಯೋತ್ಪಾದನೆಯ ಸೂತ್ರಧಾರಿಗಳ ನಡುವೆ ನಾವು ವ್ಯತ್ಯಾಸವನ್ನೇ ತೋರಿಸುವುದಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ವಿದೇಶಾಂಗ ನೀತಿ ಮತ್ತು ಜಾಗತಿಕ ಬೆಂಬಲದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಇಂದು ಈ ಸದನದಲ್ಲಿ ನಾನು ವಿಷಯಗಳನ್ನು ಸ್ಪಷ್ಟಪಡಿಸುತ್ತೇನೆ. ಜಗತ್ತಿನ ಯಾವುದೇ ಒಂದು ದೇಶವು, ಭಾರತವು ತನ್ನ ಆತ್ಮರಕ್ಷಣೆಗಾಗಿ ಕಾರ್ಯ ನಿರ್ವಹಿಸುವುದನ್ನು ತಡೆಯಲಿಲ್ಲ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ, ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಕೇವಲ 3 ದೇಶಗಳು ಹೇಳಿಕೆಗಳನ್ನು ನೀಡಿವೆ – ಅದು ಕೇವಲ ಮೂರು. ಆದರೆ ಕ್ವಾಡ್(QUAD), ಬ್ರಿಕ್ಸ್(BRICS), ಫ್ರಾನ್ಸ್, ರಷ್ಯಾ, ಜರ್ಮನಿ... ಯಾವುದೇ ದೇಶವನ್ನು ಹೆಸರಿಸಿ – ಅವುಗಳಿಂದ ಭಾರತಕ್ಕೆ ಅಗಾಧವಾದ ಜಾಗತಿಕ ಬೆಂಬಲ ಸಿಕ್ಕಿತು.

ಸನ್ಮಾನ್ಯ ಸ್ಪೀಕರ್ ಸರ್,

ಭಾರತಕ್ಕೆ ವಿಶ್ವದ ಬೆಂಬಲ, ಜಾಗತಿಕ ಶಕ್ತಿಗಳ ಬೆಂಬಲ ಸಿಕ್ಕಿತು, ಆದರೆ ದುಃಖಕರವೆಂದರೆ, ಭಾರತದ ಧೈರ್ಯಶಾಲಿ ಸೈನಿಕರಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಸಿಗಲಿಲ್ಲ. ಏಪ್ರಿಲ್ 22ರ ಭಯೋತ್ಪಾದಕ ದಾಳಿಯಾದ ಕೇವಲ 3-4 ದಿನಗಳ ನಂತರ, ಕಾಂಗ್ರೆಸ್ ನಾಯಕರು "56 ಇಂಚಿನ ಎದೆ ಎಲ್ಲಿದೆ?" "ಮೋದಿ ಎಲ್ಲಿಗೆ ಹೋಗಿದ್ದಾರೆ?" "ಮೋದಿ ವಿಫಲರಾಗಿದ್ದಾರೆ" ಎಂದು ಅಣಕಿಸಿ ಅಪಹಾಸ್ಯ ಮಾಡಿದರು. ಅವರು ಅದನ್ನು ಆನಂದಿಸಿದಂತೆ ತೋರುತ್ತಿತ್ತು, ಅವರು ರಾಜಕೀಯ ಪಾಯಿಂಟ್ ಗಳಿಸಿದಂತೆ. ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ಹತ್ಯೆಗಳ ನಡುವೆಯೂ ಅವರು ತಮ್ಮ ರಾಜಕೀಯವನ್ನು ತೀವ್ರಗೊಳಿಸಲು ಪ್ರಯತ್ನಿಸಿದರು. ಅವರು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ನನ್ನನ್ನು ಗುರಿಯಾಗಿಸಿದರು. ಆದರೆ ಅಂತಹ ಹೇಳಿಕೆಗಳು ಮತ್ತು ಅಗ್ಗದ ರಾಜಕೀಯ ದಾಳಿಗಳು ದೇಶದ ಭದ್ರತಾ ಪಡೆಗಳ ಸ್ಥೈರ್ಯ ಕುಗ್ಗಿಸಿದವು. ಕೆಲವು ಕಾಂಗ್ರೆಸ್ ನಾಯಕರು ಭಾರತದ ಸಾಮರ್ಥ್ಯಗಳಲ್ಲಿ ಅಥವಾ ಅದರ ಸಶಸ್ತ್ರ ಪಡೆಗಳಲ್ಲಿ ನಂಬಿಕೆ ಇಡುವುದಿಲ್ಲ, ಅದಕ್ಕಾಗಿಯೇ ಅವರು ಆಪರೇಷನ್ ಸಿಂದೂರ್ ಅನ್ನು ಪ್ರಶ್ನಿಸುತ್ತಲೇ ಇರುತ್ತಾರೆ. ಹೀಗೆ ಮಾಡುವುದರಿಂದ, ನೀವು ಮಾಧ್ಯಮಗಳ ಮುಖ್ಯಾಂಶಗಳಲ್ಲಿ ಸ್ಥಾನ ಪಡೆಯಬಹುದು, ಆದರೆ ನೀವು ಎಂದಿಗೂ ದೇಶದ ಜನರ ಹೃದಯದಲ್ಲಿ ಸ್ಥಾನ ಗಳಿಸುವುದಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ಮೇ 10ರಂದು, ಭಾರತ್ ಆಪರೇಷನ್ ಸಿಂದೂರ್ ಕ್ರಮಗಳನ್ನು ನಿಲ್ಲಿಸುವುದಾಗಿ ಘೋಷಿಸಿತು. ಇದರ ಬಗ್ಗೆ ಹಲವು ರೀತಿಯ ಟೀಕೆಗಳನ್ನು ಮಾಡಲಾಗಿದೆ. ಆದರೆ ಇದು ಗಡಿಯಾಚೆಯಿಂದ ಹರಡುತ್ತಿರುವ ಪ್ರಚಾರವಾಗಿದೆ. ಕೆಲವು ಜನರು ನಮ್ಮ ಸಶಸ್ತ್ರ ಪಡೆಗಳು ಹಂಚಿಕೊಂಡ ಸತ್ಯಗಳನ್ನು ಒಪ್ಪಿಕೊಳ್ಳುವುದಕ್ಕಿಂತ, ಪಾಕಿಸ್ತಾನದ ಸುಳ್ಳು ನಿರೂಪಣೆಯನ್ನು ಪ್ರಚಾರ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಆದರೆ ಭಾರತದ ನಿಲುವು ಯಾವಾಗಲೂ ಸ್ಪಷ್ಟವಾಗಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಈ ಸದನಕ್ಕೆ ಕೆಲವು ಪ್ರಮುಖ ಘಟನೆಗಳನ್ನು ನೆನಪಿಸಲು ನಾನು ಬಯಸುತ್ತೇನೆ. ಸರ್ಜಿಕಲ್ ಸ್ಟ್ರೈಕ್ ನಡೆದಾಗ, ನಮಗೆ ಸ್ಪಷ್ಟ ಉದ್ದೇಶವಿತ್ತು. ಗಡಿಯಾಚೆಗಿನ ಭಯೋತ್ಪಾದಕರ ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸುವುದು ಅದಾಗಿತ್ತು. ನಮ್ಮ ಸೈನಿಕರು ರಾತ್ರಿಯಿಡೀ ಕಾರ್ಯಾಚರಣೆ ಪೂರ್ಣಗೊಳಿಸಿ, ಸೂರ್ಯೋದಯಕ್ಕೆ ಮುಂಚೆಯೇ ಹಿಂತಿರುಗಿದರು. ಇದನ್ನು ಸಾಧಿಸುವುದು ಗುರಿಯಾಗಿತ್ತು. ಬಾಲಕೋಟ್ ವಾಯುದಾಳಿ ನಡೆಸಿದಾಗ, ಗುರಿ ಸ್ಪಷ್ಟವಾಗಿತ್ತು. ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ನಾವು ಯಶಸ್ವಿಯಾಗಿ ನಾಶಪಡಿಸಿದ್ದೇವೆ. ನಾವು ಅದನ್ನೂ ಸಾಧಿಸಿದ್ದೇವೆ. ಅದೇ ರೀತಿ, ಆಪರೇಷನ್ ಸಿಂದೂರ್ ಸಮಯದಲ್ಲಿ, ನಮಗೆ ಸ್ಪಷ್ಟವಾದ ಉದ್ದೇಶವಿತ್ತು. ಭಯೋತ್ಪಾದನೆಯ ತಾಣಗಳ ಮೇಲೆ, ಪಹಲ್ಗಾಮ್ ದಾಳಿ ಯೋಜಿಸಲಾದ ಸ್ಥಳಗಳು, ತರಬೇತಿ, ಸರಕು ಸಾರಣೆ, ನೇಮಕಾತಿ ಮತ್ತು ಹಣವನ್ನು ನಿರ್ವಹಿಸುತ್ತಿದ್ದ ಸ್ಥಳಗಳ ಮೇಲೆ ದಾಳಿ ಮಾಡುವುದು ಅದಾಗಿತ್ತು. ನಾವು ಈ ತಾಣಗಳನ್ನು ಗುರುತಿಸಿದ್ದೇವೆ, ಆಪರೇಷನ್ ಸಿಂದೂರ್ ಸಮಯದಲ್ಲಿ ಭಯೋತ್ಪಾದನೆಯ ಪ್ರಧಾನ ಕೇಂದ್ರದ ಮೇಲೆ ನೇರವಾಗಿ ದಾಳಿ ಮಾಡಿದ್ದೇವೆ.

ಸನ್ಮಾನ್ಯ ಸ್ಪೀಕರ್ ಸರ್,

ಈ ಬಾರಿಯೂ ನಮ್ಮ ಸಶಸ್ತ್ರ ಪಡೆಗಳು ತಮ್ಮ 100% ಉದ್ದೇಶಗಳನ್ನು  ಸಾಧಿಸಿದವು, ಭಾರತದ ನಿಜವಾದ ಶಕ್ತಿಯನ್ನು ಪ್ರದರ್ಶಿಸಿದವು. ಕೆಲವರು ಉದ್ದೇಶಪೂರ್ವಕವಾಗಿ ಸತ್ಯಗಳನ್ನು ಮರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ. ಆದರೆ ರಾಷ್ಟ್ರವು ಮರೆಯುವುದಿಲ್ಲ. ಮೇ 6ರ ರಾತ್ರಿ ಮತ್ತು ಮೇ 7ರ ಬೆಳಗ್ಗೆ ಈ ಕಾರ್ಯಾಚರಣೆ ನಡೆಯಿತು ಎಂಬುದನ್ನು ದೇಶ ಸ್ಮರಿಸುತ್ತದೆ. ಮೇ 7ರ ಬೆಳಗ್ಗೆ ಭಾರತೀಯ ಸೇನೆ ಪತ್ರಿಕಾಗೋಷ್ಠಿ ನಡೆಸಿ, ಭಯೋತ್ಪಾದಕರು, ಅವರ ಸೂತ್ರಧಾರಿಗಳು ಮತ್ತು ಅವರ ಮೂಲಸೌಕರ್ಯಗಳನ್ನು ನಾಶ ಮಾಡುವುದು ನಮ್ಮ ಗುರಿ ಎಂದು ಸ್ಪಷ್ಟವಾಗಿ ಹೇಳಿದೆ. ಪತ್ರಿಕಾಗೋಷ್ಠಿಯಲ್ಲೇ ನಮ್ಮ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಆದ್ದರಿಂದ, ರಾಜನಾಥ್ ಜಿ ನಿನ್ನೆ ಹೇಳಿದಂತೆ, ನಾನು ಹೆಮ್ಮೆಯಿಂದ ಪುನರಾವರ್ತಿಸುತ್ತೇನೆ. ಭಾರತದ ಸೇನೆಯು ಪಾಕಿಸ್ತಾನದ ಸೇನೆ ಮೇಲೆ ನಮ್ಮ ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಕೆಲವೇ ನಿಮಿಷಗಳಲ್ಲಿ ತಿಳಿಸಿದೆ. ನಾವು ಏನು ಮಾಡಿದ್ದೇವೆ ಎಂಬುದನ್ನು ನಿಖರವಾಗಿ ತಿಳಿಸಲು ಮತ್ತು ಅವರ ಪ್ರತಿಕ್ರಿಯೆ ಅಳೆಯುವ ಸಲುವಾಗಿ. ನಾವು ಮಾಡಲು ಹೊರಟಿದ್ದನ್ನೆಲ್ಲಾ ನಾವು ಸಾಧಿಸಿದ್ದೇವೆ. ಪಾಕಿಸ್ತಾನ ಬುದ್ಧಿವಂತಿಕೆ ತೋರಿಸಿದ್ದರೆ, ಅದು ಬಹಿರಂಗವಾಗಿ ಭಯೋತ್ಪಾದಕರ ಪರವಾಗಿ ನಿಲ್ಲುವ ಗಂಭೀರ ತಪ್ಪು ಮಾಡುತ್ತಿರಲಿಲ್ಲ. ಆದರೆ ಅವರು ನಾಚಿಕೆಯಿಲ್ಲದೆ ಅವರೊಂದಿಗೆ ನಿಲ್ಲುವುದನ್ನೇ ಆಯ್ಕೆ ಮಾಡಿಕೊಂಡರು.

ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೆವು, ಅಂತಹ ಯಾವುದೇ ಅವಕಾಶಕ್ಕಾಗಿ ಕಾಯುತ್ತಿದ್ದೆವು. ನಮ್ಮ ಏಕೈಕ ಗುರಿ ಭಯೋತ್ಪಾದನೆ, ಭಯೋತ್ಪಾದನೆಯನ್ನು ಬೆಂಬಲಿಸುವವರು ಮತ್ತು ಅದರ ಕಮಾಂಡ್ ಕೇಂದ್ರಗಳು ಎಂದು ನಾವು ಜಗತ್ತಿಗೆ ಹೇಳಿದ್ದೆವು, ನಾವು ಅದನ್ನು ಸಾಧಿಸಿದ್ದೇವೆ. ಪಾಕಿಸ್ತಾನ ಭಯೋತ್ಪಾದಕರನ್ನು ಸಕ್ರಿಯವಾಗಿ ಬೆಂಬಲಿಸಲು ನಿರ್ಧರಿಸಿ ಯುದ್ಧ ಭೂಮಿಗೆ ಪ್ರವೇಶಿಸಿದ ನಂತರ, ಭಾರತವು ಮೇ 9ರ ರಾತ್ರಿ ಮತ್ತು ಮೇ 10ರ ಬೆಳಗ್ಗೆ ನಡೆದ ಘಟನೆಗಳು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಷ್ಟು ಪ್ರಬಲವಾದ ದಾಳಿಯೊಂದಿಗೆ ತಕ್ಕ ಉತ್ತರ ನೀಡಿತು.

ನಮ್ಮ ಕ್ಷಿಪಣಿಗಳು ಪಾಕಿಸ್ತಾನದ ಮೂಲೆ ಮೂಲೆಯನ್ನೂ ಅವರು ಊಹಿಸದಷ್ಟು ಬಲವಾಗಿ ದಾಳಿ ಮಾಡಿದವು. ಪಾಕಿಸ್ತಾನವನ್ನು ಮೊಣಕಾಲೂರಿ ಕೆಡವಲಾಯಿತು. ಪಾಕಿಸ್ತಾನದಿಂದ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ನೀವು ಟಿವಿಯಲ್ಲಿ ನೋಡಿರಬೇಕು. ಒಬ್ಬರು, "ನಾನು ಈಜುಕೊಳದಲ್ಲಿ ಸ್ನಾನ ಮಾಡುತ್ತಿದ್ದೆ" ಎಂದು ಹೇಳಿದರೆ, ಮತ್ತೊಬ್ಬರು, "ನಾನು ಕಚೇರಿಗೆ ಸಿದ್ಧನಾಗುತ್ತಿದ್ದೆ. ನಾವು ಯೋಚಿಸುವ ಮೊದಲೇ, ಭಾರತ ಈಗಾಗಲೇ ದಾಳಿ ಮಾಡಿದೆ!" ಎಂದು ಹೇಳಿದರು. ಪಾಕಿಸ್ತಾನದೊಳಗಿನಿಂದ ಬಂದ ಹೇಳಿಕೆಗಳಿಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಅಂತಹ ತೀವ್ರವಾದ ಹೊಡೆತವನ್ನು ನೀಡಿದಾಗ, ಪಾಕಿಸ್ತಾನ ದಿಗ್ಭ್ರಮೆಗೊಂಡಿತು. ಆಗ ಪಾಕಿಸ್ತಾನ ನಮ್ಮ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ(ಡಿ.ಜಿ.ಎಂ.ಒ) ಕರೆ ಮಾಡಿ ಬೇಡಿಕೊಂಡಿತು: "ದಯವಿಟ್ಟು ನಿಲ್ಲಿಸಿ, ನಮಗೆ ಸಾಕಾಗಿದೆ, ನಮಗೆ ಹೆಚ್ಚಿನದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ದಾಳಿ ನಿಲ್ಲಿಸಿ." ಇದು ಪಾಕಿಸ್ತಾನದಿಂದ ಬಂದ ಡಿ.ಜಿ.ಎಂ.ಒ ಮಟ್ಟದ ಕರೆಯಾಗಿತ್ತು. ಆದರೆ ನೆನಪಿಡಿ - ಮೇ 7ರ ಪತ್ರಿಕಾಗೋಷ್ಠಿಯಲ್ಲಿ ಭಾರತವು ಈಗಾಗಲೇ ನಮ್ಮ ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಘೋಷಿಸಿತ್ತು ಯಾವುದೇ ಹೆಚ್ಚಿನ ಪ್ರಚೋದನೆಯು ಮತ್ತಷ್ಟು ದುಬಾರಿಯಾಗಲಿದೆ ಎಂದು ಎಚ್ಚರಿಸಿತ್ತು. ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ. ಇದು ಭಾರತದ ಸ್ಪಷ್ಟ, ಚೆನ್ನಾಗಿ ಯೋಚಿಸಿದ ನೀತಿಯಾಗಿದ್ದು, ಸೇನೆಯೊಂದಿಗೆ ಸಮನ್ವಯದಿಂದ ಅಭಿವೃದ್ಧಿಪಡಿಸಲಾಗಿದೆ. ಆ ನೀತಿ ಹೀಗಿತ್ತು... ನಮ್ಮ ಗುರಿ ಭಯೋತ್ಪಾದನೆ, ಅದರ ಸೂತ್ರಧಾರಿಗಳು ಮತ್ತು ಅದರ ಅಡಗು ತಾಣಗಳು. ಮೊದಲ ದಿನದಿಂದಲೇ, ನಮ್ಮ ಕ್ರಮವು ತೀವ್ರವಾಗಿರಲಿಲ್ಲ ಎಂದು ನಾವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇವೆ. ನಾವು ಘೋಷಿಸಿದಂತೆ ನಿಖರವಾಗಿ ವರ್ತಿಸಿದ್ದೇವೆ ಮತ್ತು ಅದಕ್ಕಾಗಿಯೇ ನಾವು ಆಕ್ರಮಣವನ್ನು ನಿಲ್ಲಿಸಿದ್ದೇವೆ.

ಸನ್ಮಾನ್ಯ ಸ್ಪೀಕರ್ ಸರ್,

ಆಪರೇಷನ್ ಸಿಂದೂರ್ ನಿಲ್ಲಿಸುವಂತೆ ಭಾರತಕ್ಕೆ ಯಾವುದೇ ವಿಶ್ವ ನಾಯಕರು ಹೇಳಲಿಲ್ಲ. ಮೇ 9ರ ರಾತ್ರಿ, ಅಮೆರಿಕದ ಉಪಾಧ್ಯಕ್ಷರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಸುಮಾರು 1 ಗಂಟೆ ಕಾಲ, ಅವರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ನಾನು ನನ್ನ ಸೇನೆಯ ನಾಯಕತ್ವದೊಂದಿಗೆ ಸಭೆಯಲ್ಲಿದ್ದೆ, ಆದ್ದರಿಂದ ಆ ಸಮಯದಲ್ಲಿ ನಾನು ಅವರ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಂತರ ನಾನು ಅವರಿಗೆ ಮತ್ತೆ ಕರೆ ಮಾಡಿದೆ. ನಾನು ಹೇಳಿದೆ, "ನೀವು ಹಲವಾರು ಬಾರಿ ಕರೆ ಮಾಡಲು ಪ್ರಯತ್ನಿಸಿದ್ದೀರಿ - ಏನು ವಿಷಯ? ಎಂದೆ." ಪಾಕಿಸ್ತಾನವು ದೊಡ್ಡ ದಾಳಿ ಯೋಜಿಸುತ್ತಿದೆ ಎಂದು ಅಮೆರಿಕ ಉಪಾಧ್ಯಕ್ಷರು ನನಗೆ ಫೋನ್‌ನಲ್ಲಿ ಹೇಳಿದರು. ಅದನ್ನೇ ಅವರು ನನಗೆ ತಿಳಿಸಿದರು. ಈಗ, ಅರ್ಥ ಮಾಡಿಕೊಳ್ಳಲು ಇಷ್ಟಪಡದವರಿಗೆ ಅರ್ಥವಾಗುವುದಿಲ್ಲ - ಆದರೆ ಇದು ನನ್ನ ಸ್ಪಷ್ಟ ಪ್ರತಿಕ್ರಿಯೆಯಾಗಿತ್ತು: "ಪಾಕಿಸ್ತಾನವು ದಾಳಿಯನ್ನು ಯೋಜಿಸುತ್ತಿದ್ದರೆ, ಅದು ಭಾರಿ ಬೆಲೆ ತೆರಬೇಕಾಗುತ್ತದೆ. ಪಾಕಿಸ್ತಾನವು ದಾಳಿ ಮಾಡಿದರೆ, ನಾವು ದೊಡ್ಡ ದಾಳಿಯೊಂದಿಗೆ ಪ್ರತಿಕ್ರಿಯಿಸುತ್ತೇವೆ ಎಂದೆ." "ನಾವು ಗುಂಡುಗಳಿಗೆ ಶೆಲ್‌ಗಳಿಂದ ಪ್ರತಿಕ್ರಿಯಿಸುತ್ತೇವೆ." ಇದು ಮೇ 9ರ ರಾತ್ರಿ ಮತ್ತು ಮೇ 10ರ ಬೆಳಗ್ಗೆ, ಭಾರತವು ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯವನ್ನು ಧ್ವಂಸಗೊಳಿಸಿತ್ತು. ಅದು ನಮ್ಮ ಪ್ರತಿಕ್ರಿಯೆ. ಅದು ನಮ್ಮ ದೃಢನಿಶ್ಚಯವಾಗಿತ್ತು. ಈಗ ಪಾಕಿಸ್ತಾನವು ಸಹ, ಭಾರತದ ಪ್ರತಿ ಪ್ರತಿಕ್ರಿಯೆ ಹಿಂದಿನದಕ್ಕಿಂತ ಬಲವಾಗಿರುತ್ತದೆ ಎಂದು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದೆ. ಅಂತಹ ಪರಿಸ್ಥಿತಿ ಮತ್ತೆ ಉದ್ಭವಿಸಿದರೆ, ಭಾರತವು ಅಗತ್ಯವಿರುವ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ ಇಂದು ಈ ಪ್ರಜಾಪ್ರಭುತ್ವ ದೇವಾಲಯದಿಂದ, ನಾನು ಪುನರುಚ್ಚರಿಸಲು ಬಯಸುತ್ತೇನೆ: ಆಪರೇಷನ್ ಸಿಂದೂರ್ ಇನ್ನೂ ಸಕ್ರಿಯವಾಗಿದೆ. ಮತ್ತು ಪಾಕಿಸ್ತಾನ ಮತ್ತೆ ಧೈರ್ಯ ಮಾಡಿದರೆ, ಅದಕ್ಕೆ ಹೀನಾಯ ಉತ್ತರ ಸಿಗುತ್ತದೆ.

ಸನ್ಮಾನ್ಯ ಸ್ಪೀಕರ್ ಸರ್,

ಇಂದಿನ ಭಾರತವು ಆತ್ಮವಿಶ್ವಾಸದಿಂದ ತುಂಬಿದೆ. ಅದು ಸ್ವಾವಲಂಬನೆಯ ಹಾದಿಯಲ್ಲಿ ಪೂರ್ಣ ಶಕ್ತಿ ಮತ್ತು ಹೆಚ್ಚಿನ ವೇಗದೊಂದಿಗೆ ಮುಂದುವರಿಯುತ್ತಿದೆ. ಭಾರತವು ಹೆಚ್ಚು ಹೆಚ್ಚು ಆತ್ಮನಿರ್ಭರ(ಸ್ವಾವಲಂಬಿ) ಆಗುತ್ತಿದೆ ಎಂದು ಇಡೀ ದೇಶವೇ ನೋಡಬಹುದು. ಆದರೆ ರಾಷ್ಟ್ರವು ಒಂದು ವಿಚಿತ್ರವಾದ ವ್ಯತಿರಿಕ್ತತೆಯನ್ನು ಸಹ ನೋಡುತ್ತಿದೆ. ಭಾರತವು ಸ್ವಾವಲಂಬನೆಯತ್ತ ವೇಗವಾಗಿ ಸಾಗುತ್ತಿರುವಾಗ, ರಾಜಕೀಯ ವಿಷಯಗಳಿಗಾಗಿ ಕಾಂಗ್ರೆಸ್ ಪಾಕಿಸ್ತಾನದ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ. ಇಂದು ನಾನು ಸುಮಾರು 16 ತಾಸುಗಳ ಕಾಲ ನಡೆಯುತ್ತಿರುವ ಸಂಪೂರ್ಣ ಚರ್ಚೆಯನ್ನು ನೋಡಿದೆ. ದುರದೃಷ್ಟವಶಾತ್, ಕಾಂಗ್ರೆಸ್ ತನ್ನ ಸಮಸ್ಯೆಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಂಡಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಇಂದಿನ ಯುದ್ಧದಲ್ಲಿ ಮಾಹಿತಿ ಮತ್ತು ನಿರೂಪಣೆಗಳು ದೊಡ್ಡ ಪಾತ್ರ ವಹಿಸುತ್ತವೆ. ಕೃತಕ ಬುದ್ಧಿಮತ್ತೆ(ಎ.ಐ.) ಮತ್ತು ಇತರ ಸಾಧನಗಳನ್ನು ಬಳಸಿಕೊಂಡು ನಮ್ಮ ಪಡೆಗಳ ಮನೋಬಲ ಕುಗ್ಗಿಸಲು ಮತ್ತು ಸಾರ್ವಜನಿಕರಲ್ಲಿ ಅಪನಂಬಿಕೆ ಸೃಷ್ಟಿಸಲು ನಿರೂಪಣೆಗಳನ್ನು ಮಾಡಲಾಗಿದೆ. ದುರದೃಷ್ಟವಶಾತ್, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಈ ಪ್ರಚಾರ ಯಂತ್ರದ ಮುಖವಾಣಿಯಾಗಿ ಮಾರ್ಪಟ್ಟಿವೆ.

ಸನ್ಮಾನ್ಯ ಸ್ಪೀಕರ್ ಸರ್,

ನಮ್ಮ ಸಶಸ್ತ್ರ ಪಡೆಗಳು ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ, ಕಾಂಗ್ರೆಸ್ ಏನು ಮಾಡಿತು? ಅವರು ತಕ್ಷಣ ಮಿಲಿಟರಿಯಿಂದ ಪುರಾವೆಗಳನ್ನು ಕೋರಿದರು. ಆದರೆ ಅವರು ದೇಶದ ಮನಸ್ಥಿತಿಯನ್ನು, ಜನರ ಬಲವಾದ ಭಾವನೆಯನ್ನು ನೋಡಿದಾಗ ಅವರು ತಮ್ಮ ಧ್ವನಿಯನ್ನು ಬದಲಾಯಿಸಿದರು. ಅವರು ಏನು ಹೇಳಲು ಪ್ರಾರಂಭಿಸಿದರು? ಕಾಂಗ್ರೆಸ್ ನಾಯಕರು ಹೀಗೆ ಹೇಳಲು ಪ್ರಾರಂಭಿಸಿದರು: "ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಏನು ವಿಶೇಷವಿದೆ? ನಾವು ಕೂಡ ಅದನ್ನು ಮಾಡಿದ್ದೇವೆ." ಒಬ್ಬರು ತಾವು 3 ಸರ್ಜಿಕಲ್ ಸ್ಟ್ರೈಕ್‌ಗಳನ್ನು ಮಾಡಿದ್ದೇವೆ ಎಂದು ಹೇಳಿಕೊಂಡರು. ಮತ್ತೊಬ್ಬರು ತಾವು 6 ಮಾಡಿದ್ದೇವೆ ಎಂದರು. ಮೂರನೆಯವರು 15 ಎಂದರು. ನಾಯಕರು ದೊಡ್ಡವರಾಗಿದ್ದಷ್ಟೂ, ಅವರು ಹೇಳಿಕೊಂಡ ಸಂಖ್ಯೆ ದೊಡ್ಡದಾಗಿತ್ತು.

ಸನ್ಮಾನ್ಯ ಸ್ಪೀಕರ್ ಸರ್,

ನಂತರ ಬಾಲಾಕೋಟ್ ವಾಯುದಾಳಿ ನಡೆಯಿತು. ಈ ಬಾರಿ, ಅವರು "ನಾವು ಕೂಡ ಅದನ್ನು ಮಾಡಿದ್ದೇವೆ" ಎಂದು ಹೇಳಲು ಸಾಧ್ಯವಾಗಲಿಲ್ಲ, ಏಕೆಂದರೆ ಅದು ತುಂಬಾ ಸ್ಪಷ್ಟವಾಗಿತ್ತು. ಆದರೆ, ಅವರು ಛಾಯಾಚಿತ್ರ ಪುರಾವೆಗಳನ್ನು ಕೇಳಲು ಪ್ರಾರಂಭಿಸಿದರು. "ನಮಗೆ ಫೋಟೊಗಳನ್ನು ತೋರಿಸಿ!" "ಬಾಂಬ್‌ಗಳು ಎಲ್ಲಿ ಬಿದ್ದವು?" "ಏನು ನಾಶವಾಯಿತು?" "ಎಷ್ಟು ಮಂದಿ ಕೊಲ್ಲಲ್ಪಟ್ಟರು?" ಅವರು ಕೇಳುತ್ತಲೇ ಇದ್ದರು, ಪಾಕಿಸ್ತಾನ ಕೇಳುತ್ತಿದ್ದಂತೆ. ಅವರು ಪಾಕಿಸ್ತಾನದ ಪ್ರಶ್ನೋತ್ತರ ಮಾರ್ಗವನ್ನು ಪ್ರತಿಧ್ವನಿಸುತ್ತಿದ್ದರು. ಇದು ಮಾತ್ರವಲ್ಲ...

ಸನ್ಮಾನ್ಯ ಸ್ಪೀಕರ್ ಸರ್,

ಪೈಲಟ್ ಅಭಿನಂದನ್ ಸೆರೆಹಿಡಿಯಲ್ಪಟ್ಟಾಗ, ಪಾಕಿಸ್ತಾನ ಆಚರಿಸುವುದು ಸಹಜ. ಇದಾದ ನಂತರ, ಭಾರತೀಯ ವಾಯುಪಡೆಯ ಪೈಲಟ್ ಅವರ ವಶದಲ್ಲಿದ್ದರು. ಆದರೆ ಇಲ್ಲಿ ಜನರು ಮುಚ್ಚಿದ ಬಾಗಿಲುಗಳ ಹಿಂದೆ ಪಿಸುಗುಟ್ಟುತ್ತಿದ್ದರು. "ಈಗ ಮೋದಿ ಸಿಕ್ಕಿಬಿದ್ದಿದ್ದಾರೆ!" "ಮೋದಿ ಅವರನ್ನು ಮರಳಿ ತರಬಹುದೇ ಎಂದು ನೋಡೋಣ." "ಈಗ ಮೋದಿ ಏನು ಮಾಡುತ್ತಾರೆಂದು ನೋಡೋಣ." ಆದರೆ ಹೆಮ್ಮೆಯಿಂದ, ಇದೆಲ್ಲದರ ನಡುವೆಯೂ ಅಭಿನಂದನ್ ಹಿಂತಿರುಗಿದರು ಘನತೆಯಿಂದ. ನಾವು ಅವರನ್ನು ಮರಳಿ ಕರೆತಂದೆವು. ತದನಂತರ, ಈ ಟೀಕಾಕಾರರು ಮೌನವಾದರು. ಅವರು ಅರಿತುಕೊಂಡರು. "ಈ ವ್ಯಕ್ತಿ ತುಂಬಾ ಅದೃಷ್ಟಶಾಲಿ." "ನಾವು ನಮ್ಮ ಅತ್ಯುತ್ತಮ ರಾಜಕೀಯ ಆಯುಧವನ್ನು ಕಳೆದುಕೊಂಡಿದ್ದೇವೆ ಎಂದು."

ಸನ್ಮಾನ್ಯ ಸ್ಪೀಕರ್ ಸರ್,

ಪಹಲ್ಗಾಮ್ ದಾಳಿಯ ನಂತರ, ನಮ್ಮ ಬಿ.ಎಸ್.ಎಫ್ ಸೈನಿಕರಲ್ಲಿ ಒಬ್ಬರನ್ನು ಪಾಕಿಸ್ತಾನ ಸೆರೆ ಹಿಡಿದಾಗ, ಕೆಲವರು ಒಂದು ಪ್ರಮುಖ ಸಮಸ್ಯೆ ಎದುರಿಸುತ್ತಾರೆ ಎಂದು ನಂಬಿದ್ದರು. ಈಗ ಮೋದಿ ಮೂಲೆಗುಂಪಾಗುತ್ತಾರೆ, ಇದು ಅವರಿಗೆ ಮುಜುಗರವಾಗುತ್ತದೆ. ಅವರ ಇಡೀ ಪರಿಸರ ವ್ಯವಸ್ಥೆಯು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಾ ರೀತಿಯ ನಿರೂಪಣೆಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿತು. ಬಿ.ಎಸ್.ಎಫ್ ಸೈನಿಕನಿಗೆ ಏನಾಗಬಹುದು? ಅವರ ಕುಟುಂಬದ ಬಗ್ಗೆ ಏನು? ಅವರು ಹಿಂತಿರುಗುತ್ತಾರೆಯೇ? ಯಾವಾಗ? ಹೇಗೆ? ಹಲವು ಊಹಾಪೋಹಗಳು ಹರಡಿದವು.

ಸನ್ಮಾನ್ಯ ಸ್ಪೀಕರ್ ಸರ್,

ಆ ಬಿ.ಎಸ್.ಎಫ್ ಸೈನಿಕ ಕೂಡ ಪೂರ್ಣ ಗೌರವ, ಘನತೆ ಮತ್ತು ಹೆಮ್ಮೆಯಿಂದ ಮರಳಿದರು. ಭಯೋತ್ಪಾದಕರು ಅಳುತ್ತಿದ್ದರು, ಅವರ ನಿರ್ವಾಹಕರು ಹತಾಶೆಯಲ್ಲಿದ್ದರು. ಅವರು ಅಳುವುದನ್ನು ನೋಡಿ, ಇಲ್ಲಿರುವ ಕೆಲವರು ಸಹ ಅಸಮಾಧಾನಗೊಂಡಂತೆ ತೋರುತ್ತಿತ್ತು. ಈಗ ಗಮನಿಸಿ, ಸರ್ಜಿಕಲ್ ಸ್ಟ್ರೈಕ್ ನಡೆದಾಗ, ಅವರು ಬೇರೆಯದೇ ಆಟವಾಡಲು ಪ್ರಯತ್ನಿಸಿದರು, ಅದು ಸಹ ಕೆಲಸ ಮಾಡಲಿಲ್ಲ. ವಾಯುದಾಳಿಯ ನಂತರ, ಅವರು ಮತ್ತೊಂದು ತಂತ್ರ ಪ್ರಯತ್ನಿಸಿದರು,  ಅದು ಕೂಡ ವಿಫಲವಾಯಿತು. ನಂತರ ಆಪರೇಷನ್ ಸಿಂದೂರ್ ಬಂದಾಗಲೂ ಅವರು ಹೊಸ ತಂತ್ರ ಪ್ರಾರಂಭಿಸಿದರು. ಅವರು ಏನು ಹೇಳಲು ಪ್ರಾರಂಭಿಸಿದರು? "ಅದನ್ನು ಏಕೆ ನಿಲ್ಲಿಸಲಾಯಿತು?" ಮೊದಲಿಗೆ, ಯಾವುದೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಒಪ್ಪಿಕೊಳ್ಳಲಿಲ್ಲ. ಈಗ ಅವರು "ನೀವು ಅದನ್ನು ಏಕೆ ನಿಲ್ಲಿಸಿದ್ದೀರಿ?" ಎಂದು ಕೇಳುತ್ತಾರೆ, ಎಂತಹ ವಿರೋಧಾಭಾಸ! ಹೇಳಿಕೆಗಳನ್ನು ನೀಡುವಲ್ಲಿ ಈ ಸ್ವಯಂ ಘೋಷಿತ ತಜ್ಞರ ಬಗ್ಗೆ ಏನು ಹೇಳಬಹುದು? ವಿರೋಧಿಸಲು ನಿಮಗೆ ಒಂದು ನೆಪ ಬೇಕು, ಅದಕ್ಕಾಗಿಯೇ ನಾನು ಮಾತ್ರವಲ್ಲದೆ ಇಡೀ ದೇಶವು ನಿಮ್ಮನ್ನು ನೋಡಿ ನಗುತ್ತಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಸಶಸ್ತ್ರ ಪಡೆಗಳನ್ನು ವಿರೋಧಿಸುವ ಈ ಮನೋಭಾವ, ಅವರ ಕಡೆಗೆ ಈ ನಿರಂತರ ನಕಾರಾತ್ಮಕತೆಯು ಬಹಳ ಹಿಂದಿನಿಂದಲೂ ಕಾಂಗ್ರೆಸ್‌ನ ರಾಜಕೀಯ ವಿಧಾನವಾಗಿದೆ. ರಾಷ್ಟ್ರವು ಕಾರ್ಗಿಲ್ ವಿಜಯ್ ದಿವಸ್ ಆಚರಿಸಿದೆ, ಆದರೆ ಅವರ ಅಧಿಕಾರಾವಧಿಯಲ್ಲಿ ಮತ್ತು ಇಲ್ಲಿಯವರೆಗೆ, ಕಾಂಗ್ರೆಸ್ ಕಾರ್ಗಿಲ್‌ನಲ್ಲಿ ವಿಜಯವನ್ನು ಸ್ವೀಕರಿಸಿಲ್ಲ ಅಥವಾ ಆಚರಿಸಿಲ್ಲ ಎಂದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅವರು ಅದಕ್ಕೆ ಅರ್ಹವಾದ ಗೌರವವನ್ನು ಎಂದಿಗೂ ನೀಡಿಲ್ಲ. ಸನ್ಮಾನ್ಯ ಸ್ಪೀಕರ್ ಸರ್, ನಮ್ಮ ಸೇನೆ  ಡೋಕ್ಲಾಮ್‌ನಲ್ಲಿ ತನ್ನ ಶೌರ್ಯ ಪ್ರದರ್ಶಿಸುತ್ತಿದ್ದಾಗ, ಕಾಂಗ್ರೆಸ್ ನಾಯಕರು ಕೆಲವು ಜನರಿಂದ ರಹಸ್ಯವಾಗಿ ಮಾಹಿತಿಗಳನ್ನು ಪಡೆಯುತ್ತಿದ್ದರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ, ಈಗ ಇಡೀ ಜಗತ್ತಿಗೆ ಅದರ ಬಗ್ಗೆ ತಿಳಿದಿದೆ. ಪಾಕಿಸ್ತಾನದಲ್ಲಿ ಮಾಡಿದ ಹೇಳಿಕೆಗಳನ್ನು ತೆಗೆದುಕೊಂಡು ಅವುಗಳನ್ನು ಇಲ್ಲಿ ನಮ್ಮನ್ನು ವಿರೋಧಿಸುವವರ ಹೇಳಿಕೆಗಳೊಂದಿಗೆ ಹೋಲಿಕೆ ಮಾಡಿ, ಅವು ಹೊಂದಿಕೆಯಾಗುತ್ತವೆ, ಅಲ್ಪವಿರಾಮಕ್ಕೆ ಅಲ್ಪವಿರಾಮ, ಪೂರ್ಣ ವಿರಾಮಕ್ಕೆ ಪೂರ್ಣ ವಿರಾಮ. ಅದಕ್ಕೆ ಒಬ್ಬರು ಏನು ಹೇಳಬಹುದು? ಹೌದು, ನಾವು ಸತ್ಯವನ್ನು ಮಾತನಾಡುವಾಗ ಅದು ನೋವುಂಟು ಮಾಡುತ್ತದೆ! ಅವರ ಧ್ವನಿಗಳು ಪಾಕಿಸ್ತಾನದ ಧ್ವನಿಯೊಂದಿಗೆ ಪರಿಪೂರ್ಣ ಸಾಮರಸ್ಯ ಹೊಂದಿದ್ದವು.

ಸನ್ಮಾನ್ಯ ಶ್ರೀ ಸ್ಪೀಕರ್ ಸರ್,

ಕಾಂಗ್ರೆಸ್ ಪಾಕಿಸ್ತಾನಕ್ಕೆ ಪರಿಣಾಮಕಾರಿಯಾಗಿ ಕ್ಲೀನ್ ಚಿಟ್ ನೀಡಿರುವುದನ್ನು ನೋಡಿ ದೇಶವೇ ಬೆರಗಾಗಿದೆ. ಈ ಪಕ್ಷದ ವರ್ತನೆ, ಅವರ ಅಭ್ಯಾಸಗಳು ಇನ್ನೂ ಬದಲಾಗಿಲ್ಲ. ಪಹಲ್ಗಾಮ್ ಭಯೋತ್ಪಾದಕರು ಪಾಕಿಸ್ತಾನಿಗಳಾಗಿದ್ದರು ಎಂಬುದಕ್ಕೆ ಪುರಾವೆ ಒದಗಿಸಿ ಎಂದು ಅವರು ಹೇಳಲು ಧೈರ್ಯ ಮಾಡಿದರು. ಅವರು ಏನು ಹೇಳುತ್ತಿದ್ದಾರೆ? ಇದು ಯಾವ ರೀತಿಯ ವಿಧಾನ? ಪಾಕಿಸ್ತಾನವು ಸಹ ಅದೇ ಬೇಡಿಕೆಯನ್ನು ಮುಂದಿಡುತ್ತಿದೆ - ಕಾಂಗ್ರೆಸ್ ಕೇಳುತ್ತಿರುವುದು ಪಾಕಿಸ್ತಾನ ಕೇಳುತ್ತಿರುವುದು ನಿಖರವಾಗಿ ಅದೇ ವಿಷಯ.

ಸನ್ಮಾನ್ಯ ಶ್ರೀ ಸ್ಪೀಕರ್ ಸರ್,

ಇಂದು ಪುರಾವೆಗಳ ಕೊರತೆಯಿಲ್ಲದಿದ್ದಾಗ, ಎಲ್ಲವೂ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುತ್ತಿರುವಾಗ, ಅವರ ನಿಲುವು ಹೀಗಿರುವಾಗ ಅಂತಹ ಪುರಾವೆಗಳು ಲಭ್ಯವಿಲ್ಲದಿದ್ದರೆ ಅವರು ಏನು ಮಾಡುತ್ತಿದ್ದರು ಎಂದು ಊಹಿಸಿ.

ಸನ್ಮಾನ್ಯ ಶ್ರೀ ಸ್ಪೀಕರ್ ಸರ್,

ಆಪರೇಷನ್ ಸಿಂದೂರ್‌ನ ಒಂದು ಭಾಗಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ, ಅದನ್ನು ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಆದರೆ ರಾಷ್ಟ್ರಕ್ಕಾಗಿ ಕೆಲವು ಅದ್ಭುತ ಕ್ಷಣಗಳು, ಬಲ ಪ್ರದರ್ಶನಗಳು ಇವೆ, ಅವು ನಮ್ಮ ಗಮನ ಮತ್ತು ಮೆಚ್ಚುಗೆಗೆ ಅರ್ಹವಾಗಿವೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತುಂಡುಗಳಾಗಿ ಚೂರು ಚೂರು ಮಾಡಿದೆ.

ಸನ್ಮಾನ್ಯ ಶ್ರೀ ಸ್ಪೀಕರ್ ಸರ್,

ಇಂದು ಇಡೀ ರಾಷ್ಟ್ರವನ್ನು ಹೆಮ್ಮೆಯಿಂದ ತುಂಬುವ ಒಂದು ಸಂಗತಿಯನ್ನು ನಾನು ಪ್ರಸ್ತುತಪಡಿಸಲು ಬಯಸುತ್ತೇನೆ. ಕೆಲವು ಜನರು ಏನು ಭಾವಿಸಬಹುದು, ನನಗೆ ತಿಳಿದಿಲ್ಲ, ಆದರೆ ಇಡೀ ದೇಶವು ಅಪಾರ ಹೆಮ್ಮೆ ಅನುಭವಿಸುತ್ತದೆ. ಮೇ 9ರಂದು, ಪಾಕಿಸ್ತಾನವು ಸುಮಾರು 1,000 ಕ್ಷಿಪಣಿಗಳು ಮತ್ತು ಸಶಸ್ತ್ರ ಡ್ರೋನ್‌ಗಳೊಂದಿಗೆ ಭಾರತದ ಮೇಲೆ ಬೃಹತ್ ದಾಳಿ ಮಾಡಲು ಪ್ರಯತ್ನಿಸಿತು. ಹೌದು, 1 ಸಾವಿರ. ಈ ಕ್ಷಿಪಣಿಗಳು ಭಾರತದ ಯಾವುದೇ ಭಾಗದ ಮೇಲೆ ಬಿದ್ದಿದ್ದರೆ, ಊಹಿಸಲಾಗದ ವಿನಾಶ ಸಂಭವಿಸುತ್ತಿತ್ತು. ಆದರೆ ಭಾರತವು ಎಲ್ಲಾ 1,000 ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಆಗಸದಲ್ಲೇ ನಾಶಪಡಿಸಿತು. ಪ್ರತಿಯೊಬ್ಬ ನಾಗರಿಕನು ಇದರ ಬಗ್ಗೆ ಹೆಮ್ಮೆಪಡುತ್ತಾನೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ಬಹುತೇಕ ಏನಾದರೂ ತಪ್ಪಾಗುತ್ತದೆ ಎಂದು ಆಶಿಸುತ್ತಾ ಕಾಯುತ್ತಿದ್ದರು. ಮೋದಿ ಎಲ್ಲೋ ವಿಫಲರಾಗುತ್ತಾರೆ. ಅವರು ಸಿಕ್ಕಿ ಬೀಳುತ್ತಾರೆ. ಪಾಕಿಸ್ತಾನವು ಆದಂಪುರ ವಾಯುನೆಲೆಯ ಮೇಲೆ ದಾಳಿ ಮಾಡಿದ್ದೇವೆ ಎಂಬ ಸುಳ್ಳು ಹೇಳಿಕೆ ಹರಡಿತು. ಅವರು ತಮ್ಮ ಎಲ್ಲಾ ಶಕ್ತಿಯನ್ನು ಬಳಸಿಕೊಂಡು ಆ ಸುಳ್ಳನ್ನು ಮಾರಾಟ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ನಾನು ಮರುದಿನವೇ ಆದಂಪುರಕ್ಕೆ ಭೇಟಿ ನೀಡಿ ಆ ಸುಳ್ಳನ್ನು ಬಹಿರಂಗಪಡಿಸಿದೆ. ಆಗ ಮಾತ್ರ ಅಂತಹ ಸುಳ್ಳುಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಅವರಿಗೆ ಅರಿವಾಯಿತು.

ಸನ್ಮಾನ್ಯ ಶ್ರೀ ಸ್ಪೀಕರ್ ಸರ್,

ರಾಜಕೀಯಕ್ಕೆ ಹೊಸಬರಾಗಿರುವ ಮತ್ತು ಆಡಳಿತದ ಹಿಡಿತ ಸಾಧಿಸದ ನಮ್ಮ ಸಣ್ಣ ಪಕ್ಷಗಳ ಸಹೋದ್ಯೋಗಿಗಳಿಂದ ಹೇಳಿಕೆಗಳು ಬಂದಾಗ ನನಗೆ ಅರ್ಥವಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷವು ದಶಕಗಳಿಂದ ಈ ದೇಶವನ್ನು ಆಳಿದೆ. ಅವರಿಗೆ ಆಡಳಿತ ವ್ಯವಸ್ಥೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರು ಆ ವ್ಯವಸ್ಥೆಗಳಿಂದ ಹೊರಬಂದಿದ್ದಾರೆ. ಆಡಳಿತ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅವರು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅವರಿಗೆ ಅನುಭವವಿದೆ. ಆದರೂ ವಿದೇಶಾಂಗ ಸಚಿವಾಲಯವು ತಕ್ಷಣ ಪ್ರತಿಕ್ರಿಯಿಸಿದಾಗ, ಅವರು ಅದನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ವಿದೇಶಾಂಗ ಸಚಿವರು ಸಂದರ್ಶನಗಳನ್ನು ನೀಡುತ್ತಾರೆ, ಪದೇಪದೆ ಮಾತನಾಡುತ್ತಾರೆ - ಆದರೆ ಅವರು ಅದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಗೃಹ ಸಚಿವರು ಮಾತನಾಡುತ್ತಾರೆ, ರಕ್ಷಣಾ ಸಚಿವರು ಮಾತನಾಡುತ್ತಾರೆ, ಆದರೂ ಅವರು ಯಾರನ್ನೂ ನಂಬುವುದಿಲ್ಲ. ಹಲವು ವರ್ಷಗಳ ಕಾಲ ಆಳಿದ ಪಕ್ಷವು ಇನ್ನು ಮುಂದೆ ದೇಶದ ವ್ಯವಸ್ಥೆಗಳನ್ನು ನಂಬದಿದ್ದರೆ, ಒಬ್ಬರು ಆಶ್ಚರ್ಯಪಡಬೇಕಾಗುತ್ತದೆ - ಅವರಿಗೆ ಏನಾಯಿತು ಅಂತಾ?

ಸನ್ಮಾನ್ಯ ಸ್ಪೀಕರ್ ಸರ್,

ಈಗ ಕಾಂಗ್ರೆಸ್ಸಿನ ಟ್ರಸ್ಟ್ ಪಾಕಿಸ್ತಾನದ ರಿಮೋಟ್ ಕಂಟ್ರೋಲ್ ಮೂಲಕ ರೂಪುಗೊಂಡಿದೆ ಎಂದು ತೋರುತ್ತದೆ.

ಸನ್ಮಾನ್ಯ ಸ್ಪೀಕರ್ ಸರ್,

ಕಾಂಗ್ರೆಸ್ಸಿನ ಹೊಸ ಸದಸ್ಯರಲ್ಲಿ ಒಬ್ಬರು - ಅವರು ಹೊಸಬರು ಸರಿ, ನಾವು ಅವರನ್ನು ಕ್ಷಮಿಸಬಹುದು, ಆದರೆ ಕಾಂಗ್ರೆಸ್ ಹೈಕಮಾಂಡ್ ಅವರಿಗಾಗಿ ಹೇಳಿಕೆಗಳನ್ನು ಬರೆಯುತ್ತದೆ ಮತ್ತು ಅವುಗಳನ್ನು ಓದಿಸುತ್ತದೆ, ಏಕೆಂದರೆ ಅವರಿಗೆ ಅದನ್ನು ಸ್ವತಃ ಹೇಳಲು ಧೈರ್ಯವಿಲ್ಲ. ಆಪರೇಷನ್ ಸಿಂದೂರ್ ಒಂದು ನಾಟಕ ಎಂದು ಅವರು ಹೇಳಿದ್ದರು. ಭಯೋತ್ಪಾದಕರು ನಡೆಸಿದ 26 ಜನರ ಬರ್ಬರ ಹತ್ಯೆಗೆ ಆಮ್ಲ ಸುರಿಯುವುದಕ್ಕಿಂತ ಇದು ಕಡಿಮೆಯಿಲ್ಲ. ಇದನ್ನು 'ನಾಟಕ' ಎಂದು ಕರೆಯುತ್ತಾರೆ - ಅದು ನಿಮ್ಮ ಅಭಿಪ್ರಾಯ ಹೇಗೆ? ಇವು ಕಾಂಗ್ರೆಸ್ ನಾಯಕರು ಇತರರನ್ನು ಗಟ್ಟಿಯಾಗಿ ಓದುವಂತೆ ಮಾಡುವ ಹೇಳಿಕೆಗಳಾಗಿವೆ.

ಸನ್ಮಾನ್ಯ ಸ್ಪೀಕರ್ ಸರ್,

ನಿನ್ನೆ ನಮ್ಮ ಭದ್ರತಾ ಪಡೆಗಳು ಆಪರೇಷನ್ ಮಹಾದೇವ್‌ನಲ್ಲಿ ಪಹಲ್ಗಾಮ್ ದಾಳಿಕೋರರನ್ನು ಕಟಕಟೆಗೆ ತಂದವು. ಆದರೆ ಯಾರೋ ಜೋರಾಗಿ ನಕ್ಕರು "ಇದನ್ನು ನಿನ್ನೆಯೇ ಏಕೆ ಮಾಡಲಾಯಿತು?" ಎಂದು ಕೇಳಿದಾಗ ನನಗೆ ಆಘಾತವಾಯಿತು. ಈ ಜನರಿಗೆ ಏನಾಗುತ್ತಿದೆ? ಕಾರ್ಯಾಚರಣೆಯನ್ನು ಶ್ರಾವಣ ಮಾಸದ ಯಾವುದೋ ಪವಿತ್ರ ಸೋಮವಾರದಂದು ಯೋಜಿಸಲಾಗಿದೆಯೇ? ಅವರಿಗೆ ಏನಾಯಿತು? ಅವರು ತುಂಬಾ ಹತಾಶರಾಗಿದ್ದಾರೆ. ವಿಪರ್ಯಾಸವೆಂದರೆ, ಕಳೆದ ಹಲವಾರು ವಾರಗಳಿಂದ ಅವರು ಕೇಳುತ್ತಿದ್ದರು: "ಸರಿ, ನೀವು ಆಪರೇಷನ್ ಸಿಂದೂರ್ ಮಾಡಿದ್ದೀರಿ, ಆದರೆ ಪಹಲ್ಗಾಮ್ ಭಯೋತ್ಪಾದಕರ ಬಗ್ಗೆ ಏನು?" ಈಗ ಆ ಭಯೋತ್ಪಾದಕರನ್ನು ಕಟಕಟೆಗೆ ತಂದ ನಂತರ, ಅವರು ಕೇಳುತ್ತಾರೆ: "ಈಗ ಏಕೆ?" ಅವರಿಗೆ ಏನಾಗುತ್ತಿದೆ?

ಸನ್ಮಾನ್ಯ ಸ್ಪೀಕರ್ ಸರ್,

ನಮ್ಮ ಧರ್ಮಗ್ರಂಥಗಳು ಹೇಳುತ್ತವೆ:

"ಶಸ್ತ್ರೇಣ ರಕ್ಷಿತೆ ರಾಷ್ಟೇ ಶಾಸ್ತ್ರ ಚಿಂತಾ ಪ್ರವರ್ತತೇ" ಇದರ ಅರ್ಥ: ಒಂದು ರಾಷ್ಟ್ರವು ಶಸ್ತ್ರಾಸ್ತ್ರಗಳಿಂದ ರಕ್ಷಿಸಲ್ಪಟ್ಟಾಗ, ಜ್ಞಾನ ಮತ್ತು ಪ್ರವಚನವು ಅಭಿವೃದ್ಧಿ ಹೊಂದುತ್ತದೆ. ನಮ್ಮ ಗಡಿಗಳು ಬಲಿಷ್ಠವಾಗಿದ್ದರೆ ಮತ್ತು ನಮ್ಮ ಪಡೆಗಳು ಜಾಗರೂಕವಾಗಿದ್ದರೆ, ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದಲು ಸಾಧ್ಯ.

ಸನ್ಮಾನ್ಯ ಸ್ಪೀಕರ್ ಸರ್,

ಕಳೆದ ದಶಕದಲ್ಲಿ ಭಾರತದ ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಪರೇಷನ್ ಸಿಂದೂರ್ ನೇರ ಸಾಕ್ಷಿಯಾಗಿದೆ. ಆದರೆ ಕಾಂಗ್ರೆಸ್ ಆಳ್ವಿಕೆಯಲ್ಲಿ, ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಚಿಂತನೆ ಎಂದಿಗೂ ಹುಟ್ಟಿಕೊಂಡಿಲ್ಲ. ಇಂದಿಗೂ ಸಹ, "ಸ್ವಾವಲಂಬಿ" ಎಂಬ ಪದವನ್ನು ಅಪಹಾಸ್ಯ ಮಾಡಲಾಗುತ್ತದೆ, ಆದರೂ ಅದು ಮಹಾತ್ಮ ಗಾಂಧಿ ಅವರಿಂದ ಹುಟ್ಟಿಕೊಂಡಿದೆ. ಪ್ರತಿಯೊಂದು ರಕ್ಷಣಾ ಒಪ್ಪಂದವನ್ನು ಕಾಂಗ್ರೆಸ್ ಲಾಭದ ಅವಕಾಶವೆಂದು ಪರಿಗಣಿಸುತ್ತಿತ್ತು. ಸಣ್ಣ ಶಸ್ತ್ರಾಸ್ತ್ರಗಳಿಗೂ ಸಹ, ಭಾರತವು ತನ್ನ ಅಧಿಕಾರಾವಧಿಯಲ್ಲಿ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಗುಂಡು ನಿರೋಧಕ ಜಾಕೆಟ್‌ಗಳು ಮತ್ತು ರಾತ್ರಿ ದೃಷ್ಟಿ ಕ್ಯಾಮೆರಾಗಳು ಸಹ ಲಭ್ಯವಿಲ್ಲದ ಸಮಯಗಳಿದ್ದವು. ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗುತ್ತದೆ - ಜೀಪ್‌ಗಳಿಂದ ಹಿಡಿದು ಬೋಫೋರ್ಸ್‌ವರೆಗೆ, ಹೆಲಿಕಾಪ್ಟರ್‌ಗಳವರೆಗೆ - ಪ್ರತಿಯೊಂದು ಒಪ್ಪಂದವು ಹಗರಣಗಳಿಂದ ಹಾನಿಗೊಳಗಾಯಿತು.

ಸನ್ಮಾನ್ಯ ಸ್ಪೀಕರ್ ಸರ್,

ನಮ್ಮ ಸಶಸ್ತ್ರ ಪಡೆಗಳು ಆಧುನಿಕ ಶಸ್ತ್ರಾಸ್ತ್ರಗಳಿಗಾಗಿ ದಶಕಗಳ ಕಾಲ ಕಾಯಬೇಕಾಯಿತು. ಸ್ವಾತಂತ್ರ್ಯದ ಮೊದಲು ಮತ್ತು ಇತಿಹಾಸವೇ ಇದಕ್ಕೆ ಸಾಕ್ಷಿಯಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಧ್ವನಿ ಬಲವಾಗಿದ್ದ ಸಮಯವಿತ್ತು. ಕತ್ತಿಗಳ ಯುಗದಲ್ಲಿಯೂ ಸಹ, ಭಾರತೀಯ ಕತ್ತಿಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗಿತ್ತು. ನಾವು ರಕ್ಷಣಾ ಉಪಕರಣಗಳಲ್ಲಿ ಮುಂದಿದ್ದೆವು. ಆದರೆ ಸ್ವಾತಂತ್ರ್ಯದ ನಂತರ, ನಮ್ಮ ದೃಢವಾದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕೆಡವಲಾಯಿತು. ಸಂಶೋಧನೆ ಮತ್ತು ಉತ್ಪಾದನೆಗೆ ಮಾರ್ಗಗಳನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಲಾಯಿತು. ನಾವು ಆ ಹಾದಿಯಲ್ಲಿ ಮುಂದುವರಿದಿದ್ದರೆ, 21ನೇ ಶತಮಾನದಲ್ಲಿ ಆಪರೇಷನ್ ಸಿಂದೂರ್‌ನಂತಹದ್ದನ್ನು ಭಾರತ ಕನಸು ಕಾಣಲು ಸಹ ಸಾಧ್ಯವಾಗುತ್ತಿರಲಿಲ್ಲ. ಅವರು ದೇಶವನ್ನು ಅಂತಹ ಸ್ಥಿತಿಗೆ ತಂದಿಟ್ಟಿದ್ದರು. ನಾವು ಅವರ ಮಾತು ಕೇಳಬೇಕಾಗಿತ್ತು. ನಾವು ಕಾರ್ಯ ನಿರ್ವಹಿಸಲು ಆರಂಭಿಸಿದಾಗ, ನಾವು ಎಲ್ಲಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತೇವೆ? ನಾವು ಸಂಪನ್ಮೂಲಗಳನ್ನು ಎಲ್ಲಿಂದ ಪಡೆಯುತ್ತೇವೆ? ಮದ್ದುಗುಂಡುಗಳು ಸಮಯಕ್ಕೆ ಸರಿಯಾಗಿ ಬರುತ್ತವೆಯೇ? ಪೂರೈಕೆ ಮಧ್ಯದಲ್ಲಿಯೇ ಸ್ಥಗಿತಗೊಳ್ಳುತ್ತದೆಯೇ? ನಾವು ಈ ಆತಂಕದೊಂದಿಗೆ ಬದುಕಬೇಕಾಯಿತು.

ಸನ್ಮಾನ್ಯ ಸ್ಪೀಕರ್ ಸರ್,

ಕಳೆದ ದಶಕದಲ್ಲಿ, ಮೇಕ್ ಇನ್ ಇಂಡಿಯಾ ಅಡಿ ತಯಾರಿಸಿದ ಶಸ್ತ್ರಾಸ್ತ್ರಗಳು ಈ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಸನ್ಮಾನ್ಯ ಸ್ಪೀಕರ್ ಸರ್,

ಒಂದು ದಶಕದ ಹಿಂದೆ, ಭಾರತದ ಜನರು ಸಂಕಲ್ಪ ತೊಟ್ಟರು: ನಮ್ಮ ದೇಶವು ಬಲಿಷ್ಠ, ಸ್ವಾವಲಂಬಿ ಮತ್ತು ಆಧುನಿಕವಾಗಲಿದೆ. ರಕ್ಷಣೆ ಮತ್ತು ಭದ್ರತೆಯ ಸುಧಾರಣೆಗಳಿಗಾಗಿ ಒಂದರ ನಂತರ ಒಂದರಂತೆ ಸಂಕೀರ್ಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ, ಈ ದಶಕದಲ್ಲಿ ಮಿಲಿಟರಿಯಲ್ಲಿ ಮಾಡಲಾದ ರೀತಿಯ ಸುಧಾರಣೆಗಳು - ಇವು ಸ್ವಾತಂತ್ರ್ಯದ ನಂತರ ಮೊದಲನೆಯದು. ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರ(ಸಿ.ಡಿ.ಎಸ್) ನೇಮಕವು ಹೊಸ ಕಲ್ಪನೆಯಾಗಿರಲಿಲ್ಲ. ವಿಶ್ವಾದ್ಯಂತ ಪ್ರಯೋಗಗಳನ್ನು ಮಾಡಲಾಗುತ್ತಿತ್ತು, ಆದರೆ ಭಾರತದಲ್ಲಿ ಎಂದಿಗೂ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಲಿಲ್ಲ. ನಾವು ಆ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ಈ ವ್ಯವಸ್ಥೆಯನ್ನು ಅಳವಡಿಸಿಕೊಂಡು ಅದನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಕ್ಕಾಗಿ ನಮ್ಮ 3 ಸಶಸ್ತ್ರ ಪಡೆಗಳನ್ನು ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ. ಇಂದಿನ ದೊಡ್ಡ ಶಕ್ತಿ ನಮ್ಮ ಪಡೆಗಳ ಜಂಟಿ ಮತ್ತು ಏಕೀಕರಣ. ಅದು ನೌಕಾಪಡೆಯಾಗಿರಲಿ, ವಾಯುಪಡೆಯಾಗಿರಲಿ ಅಥವಾ ಭೂಸೇನೆಯಾಗಿರಲಿ - ಈ ಜಂಟಿ ಮತ್ತು ಏಕೀಕರಣವು ನಮ್ಮ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿದೆ. ಫಲಿತಾಂಶಗಳು ಎಲ್ಲರಿಗೂ ಗೋಚರಿಸುತ್ತಿವೆ - ನಾವು ಇದನ್ನು ಪ್ರದರ್ಶಿಸಿದ್ದೇವೆ. ಸಾರ್ವಜನಿಕ ವಲಯದ ರಕ್ಷಣಾ ಉತ್ಪಾದನಾ ಕಂಪನಿಗಳಲ್ಲಿಯೂ ನಾವು ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಆರಂಭದಲ್ಲಿ, ಬೆಂಕಿ, ಪ್ರತಿಭಟನೆ ಮತ್ತು ಮುಷ್ಕರಗಳನ್ನು ಪ್ರಚೋದಿಸುವ ಪ್ರಯತ್ನಗಳು ನಡೆದವು. ಇವು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಆದರೆ ಈ ರಕ್ಷಣಾ ಕೈಗಾರಿಕೆಗಳಲ್ಲಿರುವ ಜನರು, ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಮುಖವೆಂದು ಗುರುತಿಸಿ, ಸುಧಾರಣೆಗಳನ್ನು ಒಪ್ಪಿಕೊಂಡರು, ಅವರು ಈಗ ಹೆಚ್ಚು ಉತ್ಪಾದಕರಾಗಿದ್ದಾರೆ. ಅಷ್ಟೇ ಅಲ್ಲ, ನಾವು ರಕ್ಷಣಾ ವಲಯವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದ್ದೇವೆ. ಇಂದು ಭಾರತದ ಖಾಸಗಿ ವಲಯವು ಮುಂದೆ ಬರುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಯುವಕರು 27-30 ವರ್ಷ ವಯಸ್ಸಿನವರು, 2ನೇ ಮತ್ತು 3ನೇ ಶ್ರೇಣಿಯ ನಗರಗಳಿಂದ ಬಂದವರು. ರಕ್ಷಣಾ ವಲಯದಲ್ಲಿ ಅನೇಕ ಸ್ಟಾರ್ಟಪ್‌(ನವೋದ್ಯಮ)ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಅನೇಕ ಸಂದರ್ಭಗಳಲ್ಲಿ, ಯುವತಿಯರು ಈ ಸ್ಟಾರ್ಟಪ್‌ಗಳನ್ನು ಮುನ್ನಡೆಸುತ್ತಿದ್ದಾರೆ. ಇಂದು, ನೂರಾರು ಸ್ಟಾರ್ಟಪ್‌ಗಳು ರಕ್ಷಣಾ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಡ್ರೋನ್‌ಗಳ ವಿಷಯಕ್ಕೆ ಬಂದರೆ - ಭಾರತದಲ್ಲಿ ನಡೆಯುತ್ತಿರುವ ಹೆಚ್ಚಿನ ಡ್ರೋನ್-ಸಂಬಂಧಿತ ಚಟುವಟಿಕೆಯನ್ನು ಯುವ ಜನರು ನಡೆಸುತ್ತಿದ್ದಾರೆ, ಬಹುಶಃ ಸರಾಸರಿ 30–35 ವರ್ಷ ವಯಸ್ಸಿನವರು ಎಂದು ನಾನು ಹೇಳುತ್ತೇನೆ. ನೂರಾರು ಜನರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಅವರ ಕೊಡುಗೆಗಳ ಬಲವನ್ನು ಸ್ಪಷ್ಟವಾಗಿ ಅನುಭವಿಸಲಾಯಿತು. ನಾನು ಅವರ ಎಲ್ಲಾ ಪ್ರಯತ್ನಗಳನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ, ನಾನು ಅವರಿಗೆ ಭರವಸೆ ನೀಡುತ್ತೇನೆ: ಮುಂದುವರಿಯಿರಿ - ದೇಶವು ಇನ್ನೂ ನಿಲ್ಲುವುದಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ರಕ್ಷಣಾ ವಲಯದಲ್ಲಿ ಮೇಕ್ ಇನ್ ಇಂಡಿಯಾ ಕೇವಲ ಘೋಷಣೆಯಾಗಿರಲಿಲ್ಲ. ನಾವು ಬಜೆಟ್ ನಿಬಂಧನೆಗಳನ್ನು ಮಾಡಿದ್ದೇವೆ, ನೀತಿಗಳನ್ನು ಬದಲಾಯಿಸಿದ್ದೇವೆ ಮತ್ತು ಅಗತ್ಯವಿರುವಲ್ಲೆಲ್ಲಾ ಹೊಸ ಉಪಕ್ರಮಗಳನ್ನು ಪರಿಚಯಿಸಿದ್ದೇವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ನಾವು ಸ್ಪಷ್ಟ ದೂರದೃಷ್ಟಿಯೊಂದಿಗೆ ಮುಂದುವರೆದಿದ್ದೇವೆ. ಇಂದು ಭಾರತವು ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿ ರಕ್ಷಣಾ ವಲಯದಲ್ಲಿ ವೇಗವಾಗಿ ಮುಂದುವರಿಯುತ್ತಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಕಳೆದ ದಶಕದಲ್ಲಿ, ರಕ್ಷಣಾ ಬಜೆಟ್ ಸುಮಾರು 3 ಪಟ್ಟು ಹೆಚ್ಚಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಸುಮಾರು 250% ಹೆಚ್ಚಳವಾಗಿದೆ. ಕಳೆದ 11 ವರ್ಷಗಳಲ್ಲಿ, ರಕ್ಷಣಾ ರಫ್ತು 30 ಪಟ್ಟು ಹೆಚ್ಚಾಗಿದೆ. ಇಂದು ನಮ್ಮ ರಕ್ಷಣಾ ರಫ್ತುಗಳು ಪ್ರಪಂಚದಾದ್ಯಂತ ಸುಮಾರು 100 ದೇಶಗಳನ್ನು ತಲುಪಿವೆ.

ಸನ್ಮಾನ್ಯ ಸ್ಪೀಕರ್ ಸರ್,

ಇತಿಹಾಸದ ಮೇಲೆ ಆಳವಾದ ಪ್ರಭಾವ ಬೀರುವ ಕೆಲವು ಘಟನೆಗಳಿವೆ. ಆಪರೇಷನ್ ಸಿಂದೂರ್ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ ಧ್ವಜವನ್ನು ಸದೃಢವಾಗಿ ನೆಟ್ಟಿದೆ. ಭಾರತೀಯ ಶಸ್ತ್ರಾಸ್ತ್ರಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇದು ದೇಶೀಯ ಕೈಗಾರಿಕೆಗಳನ್ನು, ವಿಶೇಷವಾಗಿ ಎಂಎಸ್ಎಂಇಗಳನ್ನು ಸಹ ಉತ್ತೇಜಿಸುತ್ತದೆ. ಇದು ನಮ್ಮ ಯುವಕರಿಗೆ ಉದ್ಯೋಗ ಒದಗಿಸುತ್ತಿದೆ, ಯುವ ಭಾರತೀಯರು ಈಗ ತಮ್ಮದೇ ಆದ ನಾವೀನ್ಯತೆಗಳ ಮೂಲಕ ತಮ್ಮ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಲು ಸಾಧ್ಯವಾಗುತ್ತಿದೆ, ಇದು ಈಗ ವಾಸ್ತವವಾಗುತ್ತಿದೆ. ರಕ್ಷಣೆಯಲ್ಲಿ ಸ್ವಾವಲಂಬನೆಯತ್ತ ನಾವು ತೆಗೆದುಕೊಳ್ಳುತ್ತಿರುವ ಹೆಜ್ಜೆಗಳನ್ನು ನಾನು ನೋಡುತ್ತಿದ್ದೇವೆ. ಕೆಲವು ಜನರು ಇನ್ನೂ ತೊಂದರೆಗೀಡಾಗಿದ್ದಾರೆಂಬುದನ್ನು ತಿಳಿದು ನನಗೆ ಆಶ್ಚರ್ಯವಾಗಿದೆ, ಅವರ ನಿಧಿಯನ್ನು ಲೂಟಿ ಮಾಡಲಾಗಿದೆ ಎಂಬಂತೆ. ಇದು ಯಾವ ರೀತಿಯ ಮನಸ್ಥಿತಿ? ದೇಶವು ಅಂತಹ ಜನರನ್ನು ಗುರುತಿಸಬೇಕಾಗಿದೆ.

ಸನ್ಮಾನ್ಯ ಸ್ಪೀಕರ್ ಸರ್,

ನಾನು ಇದನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸುತ್ತೇನೆ. ಭಾರತವು ರಕ್ಷಣೆಯಲ್ಲಿ ಸ್ವಾವಲಂಬಿಯಾಗುವುದು ನಮಗೆ ಮುಖ್ಯವಲ್ಲ, ಆದರೆ ಜಾಗತಿಕ ಶಾಂತಿಯೂ ನಿರ್ಣಾಯಕವಾಗಿದೆ, ವಿಶೇಷವಾಗಿ ಈ ಶಸ್ತ್ರಾಸ್ತ್ರ ಸ್ಪರ್ಧೆಯ ಯುಗದಲ್ಲಿ. ನಾನು ಮೊದಲೇ ಹೇಳಿದ್ದೇನೆ. ಭಾರತವು ಯುದ್ಧ ಭೂಮಿಯಲ್ಲ, ಬುದ್ಧನ ಭೂಮಿ. ನಾವು ಸಮೃದ್ಧಿ ಮತ್ತು ಶಾಂತಿಯನ್ನು ಬಯಸುತ್ತೇವೆ, ಆದರೆ ನಾವು ಎಂದಿಗೂ ಮರೆಯಬಾರದು - ಸಮೃದ್ಧಿ ಮತ್ತು ಶಾಂತಿಯ ಹಾದಿಯು ಶಕ್ತಿಯ ಮೂಲಕ ಹಾದುಹೋಗುತ್ತದೆ.

ಸನ್ಮಾನ್ಯ ಸ್ಪೀಕರ್ ಸರ್,

ನಮ್ಮ ಭಾರತವು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಜ ರಂಜಿತ್ ಸಿಂಗ್, ರಾಜೇಂದ್ರ ಚೋಳ, ಮಹಾರಾಣಾ ಪ್ರತಾಪ್, ಲಚಿತ್ ಬೋರ್ಫುಕನ್ ಮತ್ತು ಮಹಾರಾಜ ಸುಹೇಲ್ದೇವ್ ಅವರ ನಾಡಾಗಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಅಭಿವೃದ್ಧಿ ಮತ್ತು ಶಾಂತಿಗಾಗಿ, ನಾವು ಕಾರ್ಯತಂತ್ರ ಸಾಮರ್ಥ್ಯದ ಮೇಲೂ ಗಮನ ಹರಿಸುತ್ತೇವೆ.

ಸನ್ಮಾನ್ಯ ಸ್ಪೀಕರ್ ಸರ್,

ರಾಷ್ಟ್ರೀಯ ಭದ್ರತೆ ಬಗ್ಗೆ ಕಾಂಗ್ರೆಸ್ ಎಂದಿಗೂ ದೃಷ್ಟಿಕೋನ ಹೊಂದಿರಲಿಲ್ಲ, ಹಿಂದೆಯೂ ಇಲ್ಲ ಮತ್ತು ಈಗಲೂ ಇಲ್ಲ. ರಾಷ್ಟ್ರೀಯ ಭದ್ರತೆಯ ಬಗ್ಗೆ ಕಾಂಗ್ರೆಸ್ ಯಾವಾಗಲೂ ರಾಜಿ ಮಾಡಿಕೊಂಡಿದೆ. ಇಂದು, ಕೆಲವರು ಪಿ.ಒ.ಕೆ(ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಅನ್ನು ಏಕೆ ಹಿಂದಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಕೇಳುತ್ತಾರೆ. ಸರಿ, ಆ ಪ್ರಶ್ನೆಯನ್ನು ಬೇರೆ ಯಾರಿಗೂ ಅಲ್ಲ, ನನಗೆ ಮಾತ್ರ ಕೇಳಬಹುದು. ಆದರೆ ಅದನ್ನು ಕೇಳುವ ಮೊದಲು, ಆ ಜನರು ಉತ್ತರಿಸಬೇಕು. ಪಾಕಿಸ್ತಾನವು ಪಿಒಕೆ ಆಕ್ರಮಿಸಿಕೊಳ್ಳಲು ಯಾರ ಸರ್ಕಾರ ಮೊದಲು ಅವಕಾಶ ಮಾಡಿಕೊಟ್ಟಿತು? ಉತ್ತರ ಸ್ಪಷ್ಟವಾಗಿದೆ. ನಾನು ನೆಹರೂ ಜಿ ಅವರನ್ನು ಉಲ್ಲೇಖಿಸಿದಾಗಲೆಲ್ಲಾ, ಕಾಂಗ್ರೆಸ್ ಮತ್ತು ಅದರ ಸಂಪೂರ್ಣ ಪರಿಸರ ವ್ಯವಸ್ಥೆಯು ಉದ್ರೇಕಗೊಳ್ಳುತ್ತದೆ,  ಏಕೆಂದು ನನಗೆ ತಿಳಿದಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ನಾನು ಪರಿಣತಿಯನ್ನು ಹೇಳಿಕೊಳ್ಳದಿದ್ದರೂ - ಒಂದು ದ್ವಿಪದಿ ಹೇಳುತ್ತದೆ: "ಲಮ್ಹೋನ್ ನೆ ಖತಾ ಕಿ, ಸದಿಯೋನ್ ನೆ ಸಜಾ ಪಾಯಿ." ("ಒಂದು ಕ್ಷಣದ ತಪ್ಪು ಶತಮಾನಗಳ ಶಿಕ್ಷೆಗೆ ಕಾರಣವಾಯಿತು.") ಸ್ವಾತಂತ್ರ್ಯದ ನಂತರ ತೆಗೆದುಕೊಂಡ ನಿರ್ಧಾರಗಳು - ದೇಶವು ಇನ್ನೂ ಅದರಿಂದ ಬಳಲುತ್ತಿದೆ. ಇದನ್ನು ಹಲವಾರು ಬಾರಿ ಉಲ್ಲೇಖಿಸಲಾಗಿದೆ, ನಾನು ಅದನ್ನೇ ಮತ್ತೆ ಪುನರಾವರ್ತಿಸುತ್ತೇನೆ: ಅಕ್ಸಾಯ್ ಚಿನ್, ಆ ಇಡೀ ಪ್ರದೇಶವನ್ನು ಬಂಜರು ಭೂಮಿ ಎಂದು ಘೋಷಿಸಲಾಯಿತು. ಅದರಿಂದಾಗಿ, ನಾವು 38,000 ಚದರ ಕಿಲೋಮೀಟರ್ ಭೂಮಿ ಕಳೆದುಕೊಂಡಿದ್ದೇವೆ.

ಸನ್ಮಾನ್ಯ ಸ್ಪೀಕರ್ ಸರ್,

ನನ್ನ ಕೆಲವು ಹೇಳಿಕೆಗಳು ಕುಟುಕಬಹುದು ಎಂದು ನನಗೆ ತಿಳಿದಿದೆ. ಆದರೆ 1962 ಮತ್ತು 1963ರ ನಡುವೆ, ಕಾಂಗ್ರೆಸ್ ನಾಯಕರು ವಾಸ್ತವವಾಗಿ ಪೂಂಚ್, ಉರಿ, ನೀಲಂ ಕಣಿವೆ ಮತ್ತು ಕಿಶನ್‌ಗಂಗಾ - ಭಾರತೀಯ ಪ್ರದೇಶಗಳನ್ನು ಬಿಟ್ಟುಕೊಡಲು ಪ್ರಸ್ತಾಪಿಸುತ್ತಿದ್ದರು.

ಸನ್ಮಾನ್ಯ ಸ್ಪೀಕರ್ ಸರ್,

ಅದೆಲ್ಲವನ್ನೂ ಶಾಂತಿ ರೇಖೆಯ ಹೆಸರಿನಲ್ಲಿ ಮಾಡಲಾಗುತ್ತಿತ್ತು. 1966ರಲ್ಲಿ, ರಾನ್ ಆಫ್ ಕಚ್ ಸಂಘರ್ಷದ ಸಮಯದಲ್ಲಿ, ಅವರು ವಿದೇಶಿ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡರು. ಅದು ಅವರ "ರಾಷ್ಟ್ರೀಯ ಭದ್ರತಾ ದೃಷ್ಟಿಕೋನ"ವಾಗಿತ್ತು. ಪರಿಣಾಮವಾಗಿ, ಭಾರತವು ಪಾಕಿಸ್ತಾನಕ್ಕೆ ಸುಮಾರು 800 ಚದರ ಕಿಲೋಮೀಟರ್ ಭೂಮಿ ಬಿಟ್ಟುಕೊಡಬೇಕಾಯಿತು. 1965ರ ಯುದ್ಧದಲ್ಲಿ ನಮ್ಮ ಸೈನ್ಯವು ಹಾಜಿ ಪಿರ್ ಪಾಸ್ ಅನ್ನು ಮರಳಿ ವಶಪಡಿಸಿಕೊಂಡಿತು. ಆದರೆ ಕಾಂಗ್ರೆಸ್ ಅದನ್ನು ಹಿಂತಿರುಗಿಸಿತು. 1971ರಲ್ಲಿ, ನಮ್ಮ ವಶದಲ್ಲಿ 93,000 ಪಾಕಿಸ್ತಾನಿ ಸೈನಿಕರಿದ್ದರು, ಸಾವಿರಾರು ಚದರ ಕಿಲೋಮೀಟರ್ ಪಾಕಿಸ್ತಾನದ ಭೂಮಿ ನಮ್ಮ ನಿಯಂತ್ರಣದಲ್ಲಿತ್ತು. ನಾವು ಬಹಳಷ್ಟು ಮಾಡಬಹುದಿತ್ತು. ನಾವು ವಿಜಯದ ಸ್ಥಾನದಲ್ಲಿದ್ದೆವು. ಸ್ವಲ್ಪ ಹೆಚ್ಚು ಬುದ್ಧಿವಂತಿಕೆ ಅಥವಾ ಇಚ್ಛಾಶಕ್ತಿ ಇದ್ದಿದ್ದರೆ, ನಾವು ಪಿಒಕೆಯನ್ನು ವಾಪಸ್ ಪಡೆಯಬಹುದಿತ್ತು. ಅದು ಆ ಕ್ಷಣವಾಗಿತ್ತು, ಆದರೆ ಅದು ವ್ಯರ್ಥವಾಯಿತು. ಅಷ್ಟೇ ಅಲ್ಲ, ಮಾತುಕತೆಯ ಮೇಜಿನ ಮೇಲೆ ಇಷ್ಟೊಂದು ಹಣವಿದ್ದರೂ, ಅವರು ಕರ್ತಾರ್‌ಪುರ್ ಸಾಹಿಬ್ ಅನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ! 1974ರಲ್ಲಿ, ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಉಡುಗೊರೆಯಾಗಿ ನೀಡಿತು. ಇಂದಿಗೂ, ನಮ್ಮ ಮೀನುಗಾರರು ಅದರಿಂದ ಬಳಲುತ್ತಿದ್ದಾರೆ, ಅವರ ಜೀವಗಳು ಅಪಾಯದಲ್ಲಿವೆ. ತಮಿಳುನಾಡಿನ ಮೀನುಗಾರರು ಯಾವ ಅಪರಾಧ ಮಾಡಿದರು, ನೀವು ಅವರ ಹಕ್ಕುಗಳನ್ನು ಕಸಿದುಕೊಂಡು ಭೂಮಿಯನ್ನು ಬಿಟ್ಟುಕೊಟ್ಟಿದ್ದೀರಿ? ದಶಕಗಳಿಂದ ಕಾಂಗ್ರೆಸ್ ಸಿಯಾಚಿನ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಆಲೋಚನೆಯೊಂದಿಗೆ ಆಟವಾಡುತ್ತಿದೆ.

ಸನ್ಮಾನ್ಯ ಸ್ಪೀಕರ್ ಸರ್,

2014ರಲ್ಲಿ ದೇಶವು ಅವರಿಗೆ ಅವಕಾಶ ನೀಡಿದ್ದರೆ, ಇಂದು ಸಿಯಾಚಿನ್ ನಮ್ಮೊಂದಿಗೆ ಇರುತ್ತಿರಲಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ಈಗ, ಅದೇ ಕಾಂಗ್ರೆಸ್ ಜನರು ನಮಗೆ ರಾಜತಾಂತ್ರಿಕತೆಯ ಬಗ್ಗೆ ಉಪನ್ಯಾಸ ನೀಡಲು ಬಯಸುತ್ತಿದ್ದಾರೆಯೇ? ನಾನು ಅವರಿಗೆ ಅವರ ಸ್ವಂತ ರಾಜತಾಂತ್ರಿಕತೆ ನೆನಪಿಸುತ್ತೇನೆ. 26/11ರ ಭಯಾನಕ ಮುಂಬೈ ದಾಳಿಯ ನಂತರ, ಅಂತಹ ಬೃಹತ್ ಭಯೋತ್ಪಾದಕ ದಾಳಿಯು ಸಹ ಪಾಕಿಸ್ತಾನದ ಮೇಲಿನ ಅವರ ಪ್ರೀತಿಯನ್ನು ಕೊನೆಗೊಳಿಸಲಿಲ್ಲ. ದಾಳಿಯ ಕೆಲವೇ ವಾರಗಳ ನಂತರ, ವಿದೇಶಿ ಒತ್ತಡದಲ್ಲಿ, ಕಾಂಗ್ರೆಸ್ ಸರ್ಕಾರವು ಪಾಕಿಸ್ತಾನದೊಂದಿಗೆ ಮಾತುಕತೆ ಪುನರಾರಂಭಿಸಿತು.

ಸನ್ಮಾನ್ಯ ಸ್ಪೀಕರ್ ಸರ್,

26/11ರ ಭೀಕರತೆಯ ಹೊರತಾಗಿಯೂ, ಕಾಂಗ್ರೆಸ್ ಸರ್ಕಾರವು ಒಬ್ಬ ಪಾಕಿಸ್ತಾನಿ ರಾಜತಾಂತ್ರಿಕನನ್ನು ಹೊರಹಾಕಲಿಲ್ಲ. ಅದಿರಲಿ, ಅವರು ಒಂದೇ ಒಂದು ವೀಸಾವನ್ನು ಸಹ ರದ್ದುಗೊಳಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗಳು ಮುಂದುವರಿದಂತೆ, ಯುಪಿಎ ಸರ್ಕಾರವು ಇನ್ನೂ ಪಾಕಿಸ್ತಾನವನ್ನು "ಅತ್ಯಂತ ಅನುಕೂಲಕರ ರಾಷ್ಟ್ರ" ಎಂದು ಗೊತ್ತುಪಡಿಸಿತು. ಅವರು ಆ ಸ್ಥಾನಮಾನವನ್ನು ಎಂದಿಗೂ ರದ್ದುಗೊಳಿಸಲಿಲ್ಲ. ಒಂದೆಡೆ, ಇಡೀ ದೇಶವೇ ಮುಂಬೈ ದಾಳಿಗೆ ನ್ಯಾಯ ಕೋರುತ್ತಿತ್ತು. ಮತ್ತೊಂದೆಡೆ, ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ವ್ಯಾಪಾರದ ಮೇಲೆಗಮನ ಕೇಂದ್ರೀಕರಿಸಿತ್ತು. ಪಾಕಿಸ್ತಾನ ನಮ್ಮ ನೆಲದಲ್ಲಿ ರಕ್ತ ಹರಿಸಲು ಭಯೋತ್ಪಾದಕರನ್ನು ಕಳುಹಿಸುತ್ತಲೇ ಇದ್ದಾಗ, ಕಾಂಗ್ರೆಸ್ ಸ್ನೇಹಕ್ಕಾಗಿ ಆಶಿಸುತ್ತಾ "ಶಾಂತಿ ಕಾವ್ಯ ಸಭೆಗಳು" - ಮುಷೈರಾಗಳನ್ನು ನಡೆಸುವಲ್ಲಿ ನಿರತವಾಗಿತ್ತು. ನಾವು ಭಯೋತ್ಪಾದನೆಯ ಏಕಮುಖ ಸಂಚಾರವನ್ನು ಕೊನೆಗೊಳಿಸಿದ್ದೇವೆ ಮತ್ತು ಶಾಂತಿ ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ಪಾಕಿಸ್ತಾನದ ಅತ್ಯಂತ ಅನುಕೂಲಕರ ರಾಷ್ಟ್ರ(ಎಂಎಫ್ಎನ್)ದ ಸ್ಥಾನಮಾನ ರದ್ದುಗೊಳಿಸಿದ್ದೇವೆ, ವೀಸಾಗಳನ್ನು ರದ್ದುಗೊಳಿಸಿದ್ದೇವೆ ಮತ್ತು ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚಿದ್ದೇವೆ.

ಸನ್ಮಾನ್ಯ ಸ್ಪೀಕರ್ ಸರ್,

ಭಾರತದ ಹಿತಾಸಕ್ತಿಗಳನ್ನು ಅಡವಿಡುವುದು ಕಾಂಗ್ರೆಸ್ ಪಕ್ಷಕ್ಕೆ ಹಿಂದಿನಿಂದಲೂ ಬಂದ ರೂಢಿಯಾಗಿದೆ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಸಿಂಧೂ ಜಲ ಒಪ್ಪಂದ. ಸಿಂಧೂ ಜಲ ಒಪ್ಪಂದಕ್ಕೆ ಯಾರು ಸಹಿ ಹಾಕಿದರು? ಅದು ನೆಹರೂ ಜಿ. ವಿಷಯವೇನೆಂದರೆ? ಇದು ಭಾರತದಿಂದ ಹುಟ್ಟುವ ನದಿಗಳ ಬಗ್ಗೆ, ನಮ್ಮದೇ ನದಿಗಳ ನೀರಿನ ಬಗ್ಗೆ. ಈ ನದಿಗಳು ಸಾವಿರಾರು ವರ್ಷಗಳಿಂದ ಭಾರತದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಅವು ಭಾರತದ ಜೀವ ಶಕ್ತಿಯಾಗಿವೆ, ಭಾರತವನ್ನು ಸಮೃದ್ಧ ಮತ್ತು ಫಲವತ್ತಾಗಿಸಲು ಹೆಚ್ಚಿನ ಕೊಡುಗೆ ನೀಡಿವೆ. ಶತಮಾನಗಳಿಂದ ಭಾರತದ ಗುರುತಾಗಿದ್ದ ಸಿಂಧೂ ನದಿ - ಭಾರತವು ಅದರ ಮೂಲಕ ಪರಿಚಿತವಾಗಿತ್ತು. ಆದರೆ ನೆಹರೂ ಜಿ ಮತ್ತು ಕಾಂಗ್ರೆಸ್ ಸಿಂಧೂ ಮತ್ತು ಝೀಲಂ ನದಿಗಳ ವಿವಾದವನ್ನು ಯಾರಿಗೆ ಹಸ್ತಾಂತರಿಸಿದರು? ವಿಶ್ವಬ್ಯಾಂಕ್‌ಗೆ. ಏನು ಮಾಡಬೇಕೆಂದು ಅವರು ವಿಶ್ವಬ್ಯಾಂಕ್‌ಗೆ ಕೇಳಿದರು? ನಮ್ಮ ನದಿಗಳು, ನಮ್ಮದೇ ನೀರು. ಸಿಂಧೂ ಜಲ ಒಪ್ಪಂದವು ಭಾರತದ ಗುರುತು ಮತ್ತು ಸ್ವಾಭಿಮಾನಕ್ಕೆ ನೇರ ಮತ್ತು ಗಂಭೀರ ದ್ರೋಹವಾಗಿತ್ತು.

ಸನ್ಮಾನ್ಯ ಸ್ಪೀಕರ್ ಸರ್,

ಇಂದಿನ ಯುವಕರು ಇದನ್ನು ಕೇಳಿದಾಗ, ನಮ್ಮ ದೇಶ ಮುನ್ನಡೆಸಲು ಅಂತಹ ಜನರು ಜವಾಬ್ದಾರರು ಎಂದು ತಿಳಿದು ಅವರು ಆಘಾತಕ್ಕೊಳಗಾಗಬೇಕು. ನೆಹರೂ ಜಿ ಕಾರ್ಯತಂತ್ರದಿಂದ ಬೇರೆ ಏನು ಮಾಡಿದರು? ಭಾರತದಿಂದ ಹರಿಯುವ ನೀರು, ಆ ನೀರಿನ 80% ಅನ್ನು ಪಾಕಿಸ್ತಾನಕ್ಕೆ ನೀಡಲು ಅವರು ಒಪ್ಪಿಕೊಂಡರು. ಈ ವಿಶಾಲವಾದ ಭಾರತ ದೇಶವು ಕೇವಲ 20% ನೀರನ್ನು ಮಾತ್ರ ಹೊಂದಿತ್ತು. ಯಾರಾದರೂ ದಯವಿಟ್ಟು ನನಗೆ ವಿವರಿಸಿ. ಇದು ಯಾವ ರೀತಿಯ ಬುದ್ಧಿವಂತಿಕೆ? ಯಾವ ರಾಷ್ಟ್ರೀಯ ಹಿತಾಸಕ್ತಿ ಪೂರೈಸಲಾಗುತ್ತಿತ್ತು? ಇದು ಯಾವ ರೀತಿಯ ರಾಜತಾಂತ್ರಿಕತೆಯಾಗಿತ್ತು? ಅವರು ದೇಶವನ್ನು ಯಾವ ಸ್ಥಿತಿಗೆ ಬಿಟ್ಟರು? ನಮ್ಮ ಸ್ವಂತ ಭೂಮಿಯಿಂದ ಹುಟ್ಟುವ ನದಿಗಳನ್ನು ಹೊಂದಿರುವ - ಮತ್ತು ಕೇವಲ 20% ನೀರನ್ನು ನಮಗಾಗಿ ಹೊಂದಿರುವ - ಇಷ್ಟು ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದೇಶ? ಭಾರತವನ್ನು ತನ್ನ ಶತ್ರು ಎಂದು ಬಹಿರಂಗವಾಗಿ ಘೋಷಿಸುವ, ಭಾರತವನ್ನು ತನ್ನ ಶತ್ರು ಎಂದು ಪದೇಪದೆ ಕರೆಯುವ ದೇಶಕ್ಕೆ 80% ನೀರನ್ನು ನೀಡಲಾಯಿತು. ಆ ನೀರಿನ ಮೇಲೆ ಯಾರಿಗೆ ಸರಿಯಾದ ಹಕ್ಕು ಇದೆ? ನಮ್ಮ ದೇಶದ ರೈತರು, ನಮ್ಮ ನಾಗರಿಕರು. ನಮ್ಮ ಪಂಜಾಬ್, ನಮ್ಮ ಜಮ್ಮು ಮತ್ತು ಕಾಶ್ಮೀರ. ಈ ಒಂದು ನಿರ್ಧಾರದಿಂದಾಗಿ ದೇಶದ ಹೆಚ್ಚಿನ ಭಾಗವು ನೀರಿನ ಬಿಕ್ಕಟ್ಟಿಗೆ ಸಿಲುಕಿತು. ರಾಜ್ಯಗಳ ಒಳಗೆಯೂ ಸಹ, ಇದು ನೀರಿನ ಮೇಲೆ ಸಂಘರ್ಷ ಮತ್ತು ಸ್ಪರ್ಧೆಗೆ ಕಾರಣವಾಯಿತು. ಪಾಕಿಸ್ತಾನವು ನಮಗೆ ನ್ಯಾಯಯುತವಾಗಿ ಸೇರಿದ್ದರ ಪ್ರಯೋಜನಗಳನ್ನು ಅನುಭವಿಸುತ್ತಲೇ ಇತ್ತು. ಆದರೆ ಈ ಜನರು ರಾಜತಾಂತ್ರಿಕತೆಯ ಬಗ್ಗೆ ಜಗತ್ತಿಗೆ ಉಪನ್ಯಾಸ ನೀಡುತ್ತಲೇ ಇದ್ದರು.

ಸನ್ಮಾನ್ಯ ಸ್ಪೀಕರ್ ಸರ್,

ಈ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಪಶ್ಚಿಮ ನದಿಗಳಲ್ಲಿ ಹಲವಾರು ದೊಡ್ಡ ಯೋಜನೆಗಳನ್ನು ಅಭಿವೃದ್ಧಿಪಡಿಸಬಹುದಿತ್ತು. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯ ರೈತರಿಗೆ ಸಾಕಷ್ಟು ನೀರು ಸಿಗುತ್ತಿತ್ತು. ಕುಡಿಯುವ ನೀರು ಪಡೆಯಲು ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಭಾರತವು ಕೈಗಾರಿಕಾ ಅಭಿವೃದ್ಧಿಗಾಗಿ ವಿದ್ಯುತ್ ಉತ್ಪಾದಿಸಬಹುದಿತ್ತು. ಅಷ್ಟೇ ಅಲ್ಲ, ಪಾಕಿಸ್ತಾನ ಕಾಲುವೆಗಳನ್ನು ನಿರ್ಮಿಸಲು ನೆಹರೂ ಜಿ ನಂತರ ಕೋಟ್ಯಂತರ ರೂಪಾಯಿಗಳನ್ನು ಸಹ ನೀಡಿದರು.

ಮಾನ್ಯ ಶ್ರೀ ಸ್ಪೀಕರ್ ಸರ್,

ಇನ್ನೂ ಆಘಾತಕಾರಿ ಮತ್ತು ರಾಷ್ಟ್ರವನ್ನು ಆಶ್ಚರ್ಯಗೊಳಿಸುವ ಈ ವಸ್ತುಗಳನ್ನು ಮರೆಮಾಡಲಾಗಿದೆ ಮತ್ತು ನಿಗ್ರಹಿಸಲಾಗಿದೆ. ಅಣೆಕಟ್ಟು ನಿರ್ಮಿಸಿದಾಗಲೆಲ್ಲಾ, ಹೂಳು, ಕಳೆಗಳು ಮತ್ತು ಇತರ ಶಿಲಾಖಂಡ ರಾಶಿಗಳು ಸಂಗ್ರಹವಾಗುತ್ತವೆ, ಅಣೆಕಟ್ಟಿನ ಸಾಮರ್ಥ್ಯ ಕಡಿಮೆ ಮಾಡುವುದರಿಂದ ಅದನ್ನು ಸ್ವಚ್ಛಗೊಳಿಸಲು, ಹೂಳು ತೆಗೆಯಲು,  ಅಂತರ್ನಿರ್ಮಿತ ಕಾರ್ಯವಿಧಾನವಿರುತ್ತದೆ. ಆದ್ದರಿಂದ ಹೂಳು ತೆಗೆಯುವ ವ್ಯವಸ್ಥೆಯನ್ನು ಸಾಮಾನ್ಯವಾಗಿ ಸಂಯೋಜಿಸಲಾಗುತ್ತದೆ. ಆದರೆ ನೆಹರೂ ಜಿ, ಪಾಕಿಸ್ತಾನದ ಒತ್ತಾಯದ ಮೇರೆಗೆ, ಅಣೆಕಟ್ಟಿನಲ್ಲಿ ಸಂಗ್ರಹವಾದ ಹೂಳು ಮತ್ತು ತ್ಯಾಜ್ಯವನ್ನು ತೆಗೆದುಹಾಕಲಾಗುವುದಿಲ್ಲ ಎಂಬ ಷರತ್ತನ್ನು ಒಪ್ಪಿಕೊಂಡರು. ಹೂಳು ತೆಗೆಯಲು ಅನುಮತಿ ಇರಲಿಲ್ಲ. ಅಣೆಕಟ್ಟು ನಮ್ಮ ಭೂಮಿಯಲ್ಲಿದೆ, ನೀರು ನಮ್ಮದು, ಆದರೆ ನಿರ್ಧಾರ ಪಾಕಿಸ್ತಾನದ ಮೇಲಿದೆ. ಹೂಳು ತೆಗೆಯಲು ಅವಕಾಶವಿಲ್ಲ ಎಂದು ನೀವು ನಂಬಬಲ್ಲಿರಾ? ಅಷ್ಟೇ ಅಲ್ಲ, ನಾನು ಇದನ್ನು ವಿವರವಾಗಿ ಅಧ್ಯಯನ ಮಾಡಿದಾಗ, ಒಂದು ಅಣೆಕಟ್ಟಿನಲ್ಲಿ ಹೂಳು ತೆಗೆಯಲು ಬಳಸಲಾದ ಗೇಟ್ ಅನ್ನು ವಾಸ್ತವವಾಗಿ ಬೆಸುಗೆ ಹಾಕಲಾಗಿದೆ ಎಂದು ನಾನು ಕಂಡುಕೊಂಡೆ, ಆದ್ದರಿಂದ ಯಾರೂ ಆಕಸ್ಮಿಕವಾಗಿ ಅದನ್ನು ತೆರೆದು ಹೂಳು ತೆಗೆಯಲು ಸಾಧ್ಯವಿಲ್ಲ. ಪಾಕಿಸ್ತಾನವು ನೆಹರೂ ಜಿ ಅವರಿಗೆ, ಪಾಕಿಸ್ತಾನದ ಅನುಮತಿಯಿಲ್ಲದೆ ಭಾರತವು ತನ್ನ ಅಣೆಕಟ್ಟುಗಳನ್ನು ಸ್ವಚ್ಛಗೊಳಿಸುವಂತಿಲ್ಲ, ನಿರ್ಜಲೀಕರಣ ಮಾಡುವಂತಿಲ್ಲ ಎಂದು ಬರೆದಿತ್ತು. ಈ ಒಪ್ಪಂದವು ದೇಶದ ಹಿತಾಸಕ್ತಿಗೆ ವಿರುದ್ಧವಾಗಿತ್ತು. ಅಂತಿಮವಾಗಿ, ನೆಹರೂ ಜಿ ಸ್ವತಃ ಈ ತಪ್ಪನ್ನು ಒಪ್ಪಿಕೊಳ್ಳಬೇಕಾಯಿತು. ನಿರಂಜನ್ ದಾಸ್ ಗುಲಾಟಿ ಎಂಬ ಸಂಭಾವಿತ ವ್ಯಕ್ತಿ ಈ ಒಪ್ಪಂದದಲ್ಲಿ ಭಾಗಿಯಾಗಿದ್ದರು. ಅವರು ಒಂದು ಪುಸ್ತಕ ಬರೆದರು, ಅದರಲ್ಲಿ ಅವರು 1961 ಫೆಬ್ರವರಿಯಲ್ಲಿ ನೆಹರೂ ಅವರಿಗೆ, "ಗುಲಾಟಿ, ಈ ಒಪ್ಪಂದವು ಇತರ ಸಮಸ್ಯೆಗಳನ್ನು ಪರಿಹರಿಸುವ ಹಾದಿಯನ್ನು ತೆರೆಯುತ್ತದೆ ಎಂದು ನಾನು ಭಾವಿಸಿದ್ದೆ, ಆದರೆ ನಾವು ಇನ್ನೂ ಪ್ರಾರಂಭಿಸಿದ ಸ್ಥಳದಲ್ಲೇ ಇದ್ದೇವೆ" ಎಂದು ಹೇಳಿದರು. ನೆಹರೂ ಜಿ ಹೇಳಿದ್ದು ಇದನ್ನೇ. ನೆಹರೂ ಜಿ ತಕ್ಷಣದ ಪರಿಣಾಮವನ್ನು ಮಾತ್ರ ನೋಡಬಲ್ಲರು. ಅದಕ್ಕಾಗಿಯೇ ನಾವು ಇದ್ದ ಸ್ಥಳದಲ್ಲೇ ಇದ್ದೇವೆ ಎಂದು ಅವರು ಹೇಳಿದರು. ಆದರೆ ಸತ್ಯವೆಂದರೆ, ಈ ಒಪ್ಪಂದದಿಂದಾಗಿ, ರಾಷ್ಟ್ರವು ಗಮನಾರ್ಹವಾಗಿ ಹಿನ್ನಡೆ ಅನುಭವಿಸಿತು. ದೇಶವು ದೊಡ್ಡ ನಷ್ಟ ಅನುಭವಿಸಿತು, ನಮ್ಮ ರೈತರಿಗೆ ಹಾನಿಯಾಯಿತು, ನಮ್ಮ ಕೃಷಿಗೆ ಹಾನಿಯಾಯಿತು. ರೈತನಿಗೆ ಯಾವುದೇ ಸ್ಥಾನವಿಲ್ಲ, ಯಾವುದೇ ಪ್ರಾಮುಖ್ಯತೆ ಇಲ್ಲದ ರಾಜತಾಂತ್ರಿಕತೆಯನ್ನು ನೆಹರೂ ಜಿ ಮಾತ್ರ ಅರ್ಥ ಮಾಡಿಕೊಂಡರು. ಇದು ಅವರು ನಮಗೆ ಬಿಟ್ಟುಹೋಗಿರುವ ಪರಿಸ್ಥಿತಿ.

ಸನ್ಮಾನ್ಯ ಸ್ಪೀಕರ್ ಸರ್,

ಪಾಕಿಸ್ತಾನವು ದಶಕಗಳಿಂದ ಭಾರತದ ವಿರುದ್ಧ ಯುದ್ಧ ಮತ್ತು ಭಯೋತ್ಪಾದನೆ(ಪ್ರಾಕ್ಸಿ) ಯುದ್ಧವನ್ನು ಮುಂದುವರೆಸಿದೆ. ಆದರೆ ಅದರ ನಂತರವೂ, ಕಾಂಗ್ರೆಸ್ ಸರ್ಕಾರಗಳು ಸಿಂಧೂ ಜಲ ಒಪ್ಪಂದವನ್ನು ಎಂದಿಗೂ ಮರುಪರಿಶೀಲಿಸಲಿಲ್ಲ, ನೆಹರೂ ಜಿ ಮಾಡಿದ ಗಂಭೀರ ತಪ್ಪನ್ನು ಸರಿಪಡಿಸಲಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ಆದರೆ ಈಗ, ಭಾರತವು ಆ ಹಳೆಯ ತಪ್ಪನ್ನು ಸರಿಪಡಿಸಿ, ದೃಢ ನಿರ್ಧಾರ ತೆಗೆದುಕೊಂಡಿದೆ. ನೆಹರೂ ಜಿ ಮಾಡಿದ ಬೃಹತ್ ಪ್ರಮಾದ - ಸಿಂಧೂ ಜಲ ಒಪ್ಪಂದ - ರಾಷ್ಟ್ರೀಯ ಹಿತಾಸಕ್ತಿ ಮತ್ತು ನಮ್ಮ ರೈತರ ಹಿತಾಸಕ್ತಿಗಾಗಿ ಸ್ಥಗಿತಗೊಳಿಸಲಾಗಿದೆ. ದೇಶದ ಕಲ್ಯಾಣಕ್ಕೆ ವಿರುದ್ಧವಾಗಿದ್ದ ಈ ಒಪ್ಪಂದವು ಅದರ ಪ್ರಸ್ತುತ ರೂಪದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಭಾರತವು ಹೀಗೆ ಸ್ಪಷ್ಟಪಡಿಸಿದೆ: ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ಇಲ್ಲಿ ಕುಳಿತಿರುವ ಸದಸ್ಯರು ಭಯೋತ್ಪಾದನೆಯ ಬಗ್ಗೆ ದೀರ್ಘವಾಗಿ ಮಾತನಾಡುತ್ತಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ, ಅವರಿಗೆ ಆಡಳಿತ ನಡೆಸಲು ಅವಕಾಶ ಸಿಕ್ಕಾಗ, ದೇಶದ ಸ್ಥಿತಿ ಹೇಗಿತ್ತು - ಇಂದಿಗೂ ಜನರು ಮರೆತಿಲ್ಲ. 2014ಕ್ಕಿಂತ ಮೊದಲು ದೇಶದಲ್ಲಿ ಇದ್ದ ಅಭದ್ರತೆಯ ವಾತಾವರಣ - ಜನರು ಈಗ ಅದನ್ನು ನೆನಪಿಸಿಕೊಂಡರೂ, ಅವರು ಇನ್ನೂ ನಡುಗುತ್ತಾರೆ.

ಸನ್ಮಾನ್ಯ ಸ್ಪೀಕರ್ ಸರ್,

ನಮಗೆಲ್ಲರಿಗೂ ಅದು ನೆನಪಿದೆ - ಯುವ ಪೀಳಿಗೆಗೆ ತಿಳಿದಿಲ್ಲದಿರಬಹುದು - ಆದರೆ ನಮಗೆ ಅದು ಚೆನ್ನಾಗಿ ನೆನಪಿದೆ. ಎಲ್ಲೆಡೆ ಘೋಷಣೆಗಳು ಇದ್ದವು. ನೀವು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಮಾರುಕಟ್ಟೆ, ದೇವಾಲಯ ಅಥವಾ ಯಾವುದೇ ಜನದಟ್ಟಣೆಯ ಸ್ಥಳಕ್ಕೆ ಹೋಗಿದ್ದರೂ, ಘೋಷಣೆ ಒಂದೇ ಆಗಿರುತ್ತದೆ - "ನೀವು ಗಮನಿಸದ ವಸ್ತುವನ್ನು ನೋಡಿದರೆ, ಅದನ್ನು ಮುಟ್ಟಬೇಡಿ, ತಕ್ಷಣ ಪೊಲೀಸರಿಗೆ ತಿಳಿಸಿ. ಅದು ಬಾಂಬ್ ಆಗಿರಬಹುದು." 2014ರ ವರೆಗೆ ನಾವು ಇದನ್ನು ಕೇಳುತ್ತಲೇ ಇದ್ದೆವು. ದೇಶದ ಸ್ಥಿತಿ ಹೀಗಿತ್ತು. ರಾಷ್ಟ್ರದ ಪ್ರತಿಯೊಂದು ಮೂಲೆಯಲ್ಲೂ, ಪ್ರತಿ ಹಂತದಲ್ಲೂ ಬಾಂಬ್‌ಗಳನ್ನು ಇರಿಸಿದಂತೆ ಭಾಸವಾಗಿತ್ತು, ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಬಿಟ್ಟು ಬಿಡಲಾಯಿತು. ಅಧಿಕಾರಿಗಳು ತಮ್ಮ ಕೈಗಳನ್ನು ಮೇಲಕ್ಕೆತ್ತಿ ಸಾರ್ವಜನಿಕ ಪ್ರಕಟಣೆಗಳ ಮೂಲಕ ಪ್ರಾಯೋಗಿಕವಾಗಿ ಅದನ್ನೇ ಘೋಷಿಸಿದ್ದರು.

ಸನ್ಮಾನ್ಯ ಸ್ಪೀಕರ್ ಸರ್,

ಕಾಂಗ್ರೆಸ್ಸಿನ ದುರ್ಬಲ ಸರ್ಕಾರಗಳಿಂದಾಗಿ, ದೇಶವು ಹಲವು ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ನಾವು ನಮ್ಮ ಸ್ವಂತ ಜನರನ್ನು ಕಳೆದುಕೊಳ್ಳಬೇಕಾಯಿತು.

ಸನ್ಮಾನ್ಯ ಸ್ಪೀಕರ್ ಸರ್,

ಭಯೋತ್ಪಾದನೆಯನ್ನು ನಿಗ್ರಹಿಸಬಹುದಿತ್ತು. ನಮ್ಮ ಸರ್ಕಾರವು ಕಳೆದ 11 ವರ್ಷಗಳಲ್ಲಿ ಇದನ್ನು ಪ್ರದರ್ಶಿಸಿದೆ - ಅದಕ್ಕೆ ಬಲವಾದ ಪುರಾವೆಗಳಿವೆ. 2004 ಮತ್ತು 2014ರ ನಡುವೆ ಸಂಭವಿಸುತ್ತಿದ್ದ ಭಯೋತ್ಪಾದಕ ಘಟನೆಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಅದಕ್ಕಾಗಿಯೇ ರಾಷ್ಟ್ರವು ಸಹ ತಿಳಿದುಕೊಳ್ಳಲು ಬಯಸುತ್ತದೆ. ನಮ್ಮ ಸರ್ಕಾರವು ಭಯೋತ್ಪಾದನೆ ನಿಯಂತ್ರಿಸಲು ಸಾಧ್ಯವಾದರೆ, ಭಯೋತ್ಪಾದನೆಯನ್ನು ಅನಿಯಂತ್ರಿತವಾಗಿ ಬೆಳೆಯಲು ಕಾಂಗ್ರೆಸ್ ಸರ್ಕಾರಗಳು ಯಾವ ಬಲವಂತವನ್ನು ಹೊಂದಿದ್ದವು?

ಸನ್ಮಾನ್ಯ ಸ್ಪೀಕರ್ ಸರ್,

ಕಾಂಗ್ರೆಸ್ ಆಳ್ವಿಕೆಯಲ್ಲಿ ಭಯೋತ್ಪಾದನೆ ಪ್ರವರ್ಧಮಾನಕ್ಕೆ ಬಂದಿದ್ದರೆ, ಒಂದು ಪ್ರಮುಖ ಕಾರಣವೆಂದರೆ ಅದು ಅವರ ತುಷ್ಟೀಕರಣ ರಾಜಕೀಯ, ಅವರ ಮತ ಬ್ಯಾಂಕ್ ರಾಜಕೀಯ. ದೆಹಲಿಯಲ್ಲಿ ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆದಾಗ, ಹಿರಿಯ ಕಾಂಗ್ರೆಸ್ ನಾಯಕಿಯೊಬ್ಬರ ಕಣ್ಣಲ್ಲಿ ನೀರು ಬಂತು, ಏಕೆಂದರೆ ಭಯೋತ್ಪಾದಕರು ಕೊಲ್ಲಲ್ಪಟ್ಟರು. ಈ ಸಂದೇಶವನ್ನು ನಂತರ ದೇಶದ ಮೂಲೆ ಮೂಲೆಯಲ್ಲಿ ಮತಗಳನ್ನು ಗಳಿಸಲು ಹರಡಲಾಯಿತು.

ಸನ್ಮಾನ್ಯ ಸ್ಪೀಕರ್ ಸರ್,

2001ರಲ್ಲಿ ದೇಶದ ಸಂಸತ್ತಿನ ಮೇಲೆ ದಾಳಿ ನಡೆದಾಗ, ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಅಫ್ಜಲ್ ಗುರುವಿಗೆ ಅನುಕೂಲ ಮಾಡುವ ಬಗ್ಗೆ ಮಾತನಾಡಿದ್ದರು.

ಸನ್ಮಾನ್ಯ ಸ್ಪೀಕರ್ ಸರ್,

26/11 ಮುಂಬೈ ಭಯೋತ್ಪಾದಕ ದಾಳಿ ನಡೆದಾಗ, ಪಾಕಿಸ್ತಾನದ ಭಯೋತ್ಪಾದಕನೊಬ್ಬ ಜೀವಂತವಾಗಿ ಸಿಕ್ಕಿಬಿದ್ದ. ಪಾಕಿಸ್ತಾನದ ಸ್ವಂತ ಮಾಧ್ಯಮ ಮತ್ತು ಜಗತ್ತು ಸಹ ಅವನು ನಿಜವಾಗಿಯೂ ಪಾಕಿಸ್ತಾನಿ ಎಂದು ಒಪ್ಪಿಕೊಂಡಿತು. ಆದರೆ ಪಾಕಿಸ್ತಾನದ ಇಂತಹ ಭೀಕರ ಭಯೋತ್ಪಾದಕ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಪಕ್ಷ ಏನು ಮಾಡುತ್ತಿತ್ತು? ಮತ ಬ್ಯಾಂಕ್ ರಾಜಕೀಯಕ್ಕಾಗಿ ಅವರು ಯಾವ ಆಟಗಳನ್ನು ಆಡುತ್ತಿದ್ದರು? ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡುವ ಬದಲು, ಕಾಂಗ್ರೆಸ್ ಪಕ್ಷವು ಅದನ್ನು "ಕೇಸರಿ ಭಯೋತ್ಪಾದನೆ" ಎಂದು ರೂಪಿಸಲು ಪ್ರಯತ್ನಿಸುತ್ತಿತ್ತು. ಕಾಂಗ್ರೆಸ್ ಹಿಂದೂ ಭಯೋತ್ಪಾದನೆಯ ಸಿದ್ಧಾಂತವನ್ನು ಜಗತ್ತಿಗೆ ಮಾರಾಟ ಮಾಡುವಲ್ಲಿ ನಿರತವಾಗಿತ್ತು. ಒಬ್ಬ ಕಾಂಗ್ರೆಸ್ ನಾಯಕರು ಅಮೆರಿಕದ ಉನ್ನತ ರಾಜತಾಂತ್ರಿಕರಿಗೆ ಭಾರತದಲ್ಲಿರುವ ಹಿಂದೂ ಗುಂಪುಗಳು ಲಷ್ಕರ್-ಎ-ತೋಯ್ಬಾಕ್ಕಿಂತ ದೊಡ್ಡ ಬೆದರಿಕೆ ಎಂದು ಹೇಳಿದರು. ಇದನ್ನು ವಾಸ್ತವವಾಗಿ ಹೇಳಲಾಗಿತ್ತು. ಸಮಾಧಾನಪಡಿಸುವ ಸಲುವಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವನ್ನು ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣವಾಗಿ ಜಾರಿಗೆ ತರದಂತೆ ಕಾಂಗ್ರೆಸ್ ತಡೆಯಿತು. ಅವರು ಅದನ್ನು ಹೊರಗೆ ಇಟ್ಟರು. ಕಾಂಗ್ರೆಸ್ ಪದೇಪದೆ ರಾಷ್ಟ್ರೀಯ ಭದ್ರತೆಯನ್ನು ತುಷ್ಟೀಕರಣ ಮತ್ತು ಮತ ಬ್ಯಾಂಕ್ ರಾಜಕೀಯದ ಬಲಿಪೀಠಕ್ಕಾಗಿ ತ್ಯಾಗ ಮಾಡಿತು.

ಸನ್ಮಾನ್ಯ ಸ್ಪೀಕರ್ ಸರ್,

ಕಾಂಗ್ರೆಸ್ ಭಯೋತ್ಪಾದನೆಗೆ ಸಂಬಂಧಿಸಿದ ಕಾನೂನುಗಳನ್ನು ದುರ್ಬಲಗೊಳಿಸಿದ್ದು ಸಮಾಧಾನಕ್ಕಾಗಿಯೇ. ಇಂದು ಸದನದ ಮುಂದೆ ಗೌರವಾನ್ವಿತ ಗೃಹ ಸಚಿವರು ಇದರ ಬಗ್ಗೆ ವಿವರವಾಗಿ ವಿವರಿಸಿದ್ದಾರೆ, ಆದ್ದರಿಂದ ನಾನು ಅದನ್ನು ಪುನರಾವರ್ತಿಸಲು ಬಯಸುವುದಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

ಈ ಅಧಿವೇಶನದ ಆರಂಭದಲ್ಲಿ, ನಾನು ಮನವಿ ಮಾಡಿದ್ದೆ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಎಂದು ಹೇಳಿದ್ದೆ - ಪಕ್ಷದ ಹಿತಾಸಕ್ತಿಗಳ ಬಗ್ಗೆ ನಮ್ಮ ಅಭಿಪ್ರಾಯಗಳು ಭಿನ್ನವಾಗಿದ್ದರೂ ಸಹ ರಾಷ್ಟ್ರೀಯ ಹಿತಾಸಕ್ತಿಯ ವಿಷಯಕ್ಕೆ ಬಂದಾಗ ನಮ್ಮ ಮನಸ್ಸುಗಳು ಒಂದಾಗಬೇಕು. ಪಹಲ್ಗಾಮ್‌ನ ಭೀಕರ ದುರಂತವು ಆಳವಾದ ಗಾಯಗಳನ್ನು ಬಿಟ್ಟಿದೆ. ಅದು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನಾವು ಆಪರೇಷನ್ ಸಿಂದೂರ್ ಪ್ರಾರಂಭಿಸಿದ್ದೇವೆ. ನಮ್ಮ ಪಡೆಗಳ ಧೈರ್ಯವು ನಮ್ಮ ಸ್ವಾವಲಂಬನೆಯ ಅಭಿಯಾನದೊಂದಿಗೆ ರಾಷ್ಟ್ರದಾದ್ಯಂತ "ಸಿಂದೂರ್ ಚೈತನ್ಯ"ವನ್ನು ಸೃಷ್ಟಿಸಿದೆ. ನಮ್ಮ ನಿಯೋಗಗಳು ಭಾರತವನ್ನು ಪ್ರತಿನಿಧಿಸಲು ಪ್ರಪಂಚದಾದ್ಯಂತ ಹೋದಾಗ ನಾವು ಈ ಸಿಂದೂರ್ ಚೈತನ್ಯವನ್ನು ಮತ್ತೆ ನೋಡಿದ್ದೇವೆ. ನಾನು ಆ ಎಲ್ಲಾ ಸಹೋದ್ಯೋಗಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನೀವು ಭಾರತದ ನಿಲುವನ್ನು ಪ್ರಬಲ ಮತ್ತು ಕ್ಷಮೆ ಯಾಚಿಸದ ರೀತಿಯಲ್ಲಿ ಜಗತ್ತಿಗೆ ಪ್ರಸ್ತುತಪಡಿಸಿದ್ದೀರಿ. ಆದರೆ ಹಿರಿಯ ಕಾಂಗ್ರೆಸ್ ನಾಯಕರು ಎಂದು ಪರಿಗಣಿಸುವ ಕೆಲವರು ಭಾರತದ ನಿಲುವನ್ನು ಜಾಗತಿಕವಾಗಿ ಪ್ರಸ್ತುತಪಡಿಸಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂಬುದು ನನಗೆ ದುಃಖವಾಗಿದೆ ಮತ್ತು ಆಶ್ಚರ್ಯವಾಗಿದೆ. ಕೆಲವು ನಾಯಕರಿಗೆ ಸದನದಲ್ಲಿ ಮಾತನಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ತೋರುತ್ತಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಈ ಮನಸ್ಥಿತಿಯಿಂದ ಹೊರಬರುವ ಸಮಯ ಬಂದಿದೆ. ಕೆಲವು ಸಾಲುಗಳು ನನ್ನ ಮನಸ್ಸಿಗೆ ಬರುತ್ತವೆ, ನಾನು ಅವುಗಳ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ:

ಚರ್ಚೆ ನಡೆಸಿ, ತುಂಬಾ ಚರ್ಚೆ ನಡೆಸಿ,

ಶತ್ರು ಭಯಭೀತನಾಗಲಿ, ಶತ್ರು ಭಯಭೀತನಾಗಲಿ,

ಇಷ್ಟನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಳ್ಳಿ, ಇಷ್ಟನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಳ್ಳಿ,

ಪ್ರಶ್ನೆಗಳಲ್ಲಿಯೂ ಸಹ ಗೌರವ, ಸಿಂದೂರ ಮತ್ತು ಸೈನ್ಯವು ಸದೃಢವಾಗಿರಬೇಕು.

ಭಾರತ ಮಾತೆಯ ಮೇಲೆ ದಾಳಿ ನಡೆದರೆ, ಉಗ್ರ ದಾಳಿ ನಡೆಸಬೇಕಾಗುತ್ತದೆ,

ಶತ್ರು ಎಲ್ಲೇ ಕುಳಿತಿದ್ದರೂ, ನಾವು ಭಾರತಕ್ಕಾಗಿ ಬದುಕಬೇಕಾಗುತ್ತದೆ.

ನನ್ನ ಕಾಂಗ್ರೆಸ್ ಸಹೋದ್ಯೋಗಿಗಳಲ್ಲಿ ನಾನು ಮನವಿ ಮಾಡುತ್ತೇನೆ: ಒಂದೇ ಕುಟುಂಬದ ಒತ್ತಡದಲ್ಲಿ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುವುದನ್ನು ನಿಲ್ಲಿಸಿ. ಭಾರತದ ಈ ವಿಜಯೋತ್ಸವದ ಕ್ಷಣವನ್ನು ರಾಷ್ಟ್ರೀಯ ಅಪಹಾಸ್ಯದ ಕ್ಷಣವನ್ನಾಗಿ ಪರಿವರ್ತಿಸಬೇಡಿ. ಕಾಂಗ್ರೆಸ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಇಂದು ನಾನು ಈ ಸದನದಲ್ಲಿ ಸಂಪೂರ್ಣವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ. ಭಾರತವು ಈಗ ತಮ್ಮ ನರ್ಸರಿಗಳಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುತ್ತದೆ. ಪಾಕಿಸ್ತಾನವು ಭಾರತದ ಭವಿಷ್ಯದೊಂದಿಗೆ ಆಟವಾಡಲು ನಾವು ಬಿಡುವುದಿಲ್ಲ. ಆಪರೇಷನ್ ಸಿಂದೂರ್ ಮುಗಿದಿಲ್ಲ, ಇದು ಮುಂದುವರಿಯುತ್ತದೆ. ಇದು ಪಾಕಿಸ್ತಾನಕ್ಕೆ ಒಂದು ಸೂಚನೆಯೂ ಆಗಿದೆ. ಅವರು ಭಾರತದ ವಿರುದ್ಧ ಭಯೋತ್ಪಾದನೆಯ ಹಾದಿ ನಿಲ್ಲಿಸುವವರೆಗೆ, ಭಾರತವು ನಿರ್ಣಾಯಕ ಕ್ರಮ ಕೈಗೊಳ್ಳುತ್ತಲೇ ಇರುತ್ತದೆ. ಭಾರತದ ಭವಿಷ್ಯ ಸುರಕ್ಷಿತ ಮತ್ತು ಸಮೃದ್ಧವಾಗಿರುತ್ತದೆ, ಇದು ನಮ್ಮ ಗಂಭೀರ ಸಂಕಲ್ಪ. ಈ ಮನೋಭಾವದಿಂದ, ಅರ್ಥಪೂರ್ಣ ಚರ್ಚೆಗಾಗಿ ನಾನು ಮತ್ತೊಮ್ಮೆ ಎಲ್ಲಾ ಸದಸ್ಯರಿಗೆ ಧನ್ಯವಾದ ಹೇಳುತ್ತೇನೆ.

ಗೌರವಾನ್ವಿತ ಸ್ಪೀಕರ್ ಸರ್,

ನಾನು ಭಾರತದ ನಿಲುವನ್ನು ಮಂಡಿಸಿದ್ದೇನೆ, ಭಾರತದ ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ನಾನು ಮತ್ತೊಮ್ಮೆ ಈ ಸದನಕ್ಕೆ ನನ್ನ ಕೃತಜ್ಞಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How PLI schemes, design in India and manufacturing excellence are transforming the architectural lighting industry

Media Coverage

How PLI schemes, design in India and manufacturing excellence are transforming the architectural lighting industry
NM on the go

Nm on the go

Always be the first to hear from the PM. Get the App Now!
...
Prime Minister Narendra Modi Chairs Second High-Level Meeting with Secretaries of Government of India
July 28, 2026
Sectors discussed: Finance and Economy, Commerce and Industry, and Technology
PM emphasises the need to break both horizontal and vertical silos within the Government
PM emphasises the importance of technological self-reliance and building domestic capabilities in critical sectors
PM encourages greater participation of young innovators and entrepreneurs in cybersecurity ecosystem
PM Stresses Proactive Outreach on Strategic Sectors to Counter Misinformation
PM says Govt must always remain youthful, dynamic and forward-looking, continuously adapting to new challenges and opportunities with agility and innovation
Secretaries share experiences and perspectives on key initiatives, emerging opportunities and implementation challenges

Prime Minister Shri Narendra Modi chaired the second high-level meeting with Secretaries to the Government of India at his residence at 7, Lok Kalyan Marg earlier today. He reviewed the future action agenda of Ministries and Departments dealing with Finance and Economy, Commerce and Industry, and Technology sectors. The meeting focused on accelerating progress towards the goals of Viksit Bharat.

Prime Minister called for a strong focus on team building across Ministries and Departments, urging officers to work with a shared sense of purpose. He emphasised the need to break both horizontal and vertical silos within the Government so that departments function in close coordination and deliver integrated outcomes.

Highlighting the importance of citizen-centric governance, Prime Minister said that the people of India must remain at the centre of governance. He reminded that every decision and policy should be guided by the interests and aspirations of the common citizen.

Prime Minister stressed that while India is making significant investments in infrastructure, equal priority must be given to developing indigenous technologies. He underscored the importance of technological self-reliance and building domestic capabilities in critical sectors.

Prime Minister underlined that energy security is closely linked with national security, economic stability and citizens’ welfare. Prime Minister said India must achieve self-reliance in the energy sector through innovation, diversification and accelerated capacity creation.

Emphasising that reforms are not merely a fashionable term but a continuous necessity for effective governance, Prime Minister stressed the need to reform processes, improve work culture and strengthen institutional efficiency.

Prime Minister said that growing use of technology must be accompanied by a strong focus on cybersecurity to safeguard digital systems and infrastructure. He stressed the need for constant vigilance against emerging cyber threats. He called for encouraging greater participation of young innovators and entrepreneurs in the cybersecurity ecosystem and emphasised that it should evolve into a nationwide movement.

Prime Minister also emphasised the importance of proactive communication on strategic sectors where the country is undertaking major initiatives, to counter misinformation and unfounded fears surrounding such efforts.

Prime Minister says that new academic courses should be planned in partnership with industry to equip the workforce with skills required by emerging and future industries. He also observed that a government must always remain youthful, dynamic and forward-looking, continuously adapting to new challenges and opportunities with agility and innovation.

The meeting featured detailed discussions by Secretaries on the progress, priorities and implementation issues across their respective domains. The meeting was attended by the Cabinet Secretary, Secretaries of key Ministries and Departments, and senior officials from the Prime Minister’s Office.