ಈ ವರ್ಷದ ಕೇಂದ್ರ ಬಜೆಟ್ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವ ಮತ್ತು ಬಲಪಡಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ: ಪ್ರಧಾನಮಂತ್ರಿ
ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ, ನಮ್ಮ ಸಂಕಲ್ಪ ಸ್ಪಷ್ಟವಾಗಿದೆ; ಹೆಚ್ಚು ನಿರ್ಮಿಸಿ, ಹೆಚ್ಚು ಉತ್ಪಾದಿಸಿ, ಹೆಚ್ಚು ಸಂಪರ್ಕಿಸಿ ಮತ್ತು ಹೆಚ್ಚು ರಫ್ತು ಮಾಡಿ: ಪ್ರಧಾನಮಂತ್ರಿ
ಜಗತ್ತು ಇಂದು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿರುವ ಉತ್ಪಾದನಾ ಪಾಲುದಾರರನ್ನು ಹುಡುಕುತ್ತಿದೆ ಮತ್ತು ಇಂದು ಭಾರತಕ್ಕೆ ಈ ಪಾತ್ರವನ್ನು ದೃಢವಾಗಿ ನಿರ್ವಹಿಸುವ ಅವಕಾಶವಿದೆ: ಪ್ರಧಾನಮಂತ್ರಿ
ಭಾರತವು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTAs) ಸಹಿ ಹಾಕಿದೆ, ಇದು ನಮಗೆ ಅವಕಾಶಗಳ ಬೃಹತ್ ಬಾಗಿಲನ್ನು ತೆರೆದಿದೆ; ಇಂತಹ ಸಂದರ್ಭದಲ್ಲಿ ಗುಣಮಟ್ಟದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದಿರುವುದು ನಮ್ಮ ಜವಾಬ್ದಾರಿಯಾಗಿದೆ: ಪ್ರಧಾನಮಂತ್ರಿ
'ಕಾರ್ಬನ್ ಕ್ಯಾಪ್ಚರ್, ಯುಟಿಲೈಸೇಶನ್ ಅಂಡ್ ಸ್ಟೋರೇಜ್ ಮಿಷನ್' ಒಂದು ಪ್ರಮುಖ ಉಪಕ್ರಮವಾಗಿದ್ದು, ಸುಸ್ಥಿರತೆಯನ್ನು ಪ್ರಮುಖ ವ್ಯವಹಾರ ಕಾರ್ಯತಂತ್ರದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ: ಪ್ರಧಾನಮಂತ್ರಿ
ಸಕಾಲದಲ್ಲಿ ಶುದ್ಧ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳು ಮುಂಬರುವ ವರ್ಷಗಳಲ್ಲಿ ಹೊಸ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ: ಪ್ರಧಾನಮಂತ್ರಿ
ಇಂದು ಜಾಗತಿಕ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸುತ್ತಿದೆ, ಏಕೆಂದರೆ ಮಾರುಕಟ್ಟೆಗಳು ಈಗ ಕೇವಲ ವೆಚ್ಚವನ್ನಷ್ಟೇ ಅಲ್ಲದೆ ಸುಸ್ಥಿರತೆಯನ್ನೂ ಗಮನಿಸುತ್ತಿವೆ: ಪ್ರಧಾನಮಂತ್ರಿ

ನಮಸ್ಕಾರ!

ಕಳೆದ ವಾರ, ಬಜೆಟ್ ವೆಬಿನಾರ್ ಸರಣಿಯ ಮೊದಲ ವೆಬಿನಾರ್ ಆಯೋಜಿಸಲಾಗಿತ್ತು, ಅದು ತುಂಬಾ ಯಶಸ್ವಿಯಾಗಿದೆ ಎಂದು ನನಗೆ ತಿಳಿದಿದೆ. ಬಜೆಟ್ ಪ್ರಸ್ತಾವನೆಗಳ ಅನುಷ್ಠಾನ ಕುರಿತು ಎಲ್ಲರೂ ಅತ್ಯುತ್ತಮ ಸಲಹೆಗಳನ್ನು ನೀಡಿದರು, ಎಲ್ಲರ ಸಕ್ರಿಯ ಭಾಗವಹಿಸುವಿಕೆಯನ್ನು ನಾನು ಸ್ವಾಗತಿಸುತ್ತೇನೆ. ಇಂದು ಈ ಸರಣಿಯ 2ನೇ ವೆಬಿನಾರ್ ನಡೆಯುತ್ತಿದೆ. ಇಂದು ಸಾವಿರಾರು ಜನರು ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಲೆಕ್ಕವಿಲ್ಲದಷ್ಟು ಸಲಹೆಗಳನ್ನು ನೀಡಲಿದ್ದಾರೆ, ವಿಷಯ ತಜ್ಞರು ಸಹ ನಮ್ಮೊಂದಿಗೆ ಸೇರಲಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಬಜೆಟ್ ಕುರಿತು ಇಷ್ಟು ದೊಡ್ಡ ಪ್ರಮಾಣದ ಚರ್ಚೆಯು ಸ್ವತಃ ಅತ್ಯಂತ ಯಶಸ್ವಿ ಪ್ರಯೋಗವಾಗಿದೆ. ಈ ವೆಬಿನಾರ್‌ನಲ್ಲಿ ಸೇರಲು ನಿಮ್ಮ ಅತ್ಯಮೂಲ್ಯ ಸಮಯ ಮೀಸಲಿಟ್ಟಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ವೆಬಿನಾರ್‌ನ ವಿಷಯವು ದೇಶದ ಆರ್ಥಿಕ ಬೆಳವಣಿಗೆಯನ್ನು ನಿರಂತರವಾಗಿ ಬಲಪಡಿಸುವುದಕ್ಕೆ ಸಂಬಂಧ ಹೊಂದಿದೆ. ಇಂದು ಭಾರತವು ತನ್ನ ಬಲವಾದ ಆರ್ಥಿಕತೆಯೊಂದಿಗೆ ಜಗತ್ತಿಗೆ ಭರವಸೆಯ ಮೂಲವಾಗಿದೆ. ಜಾಗತಿಕ ಪೂರೈಕೆ ಸರಪಳಿಯನ್ನು ಮರುರೂಪಿಸುತ್ತಿರುವಾಗ, ತ್ವರಿತ ಆರ್ಥಿಕ ಪ್ರಗತಿಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರಮುಖ ಅಡಿಪಾಯವಾಗಿದೆ. ನಮ್ಮ ನಿರ್ದೇಶನ ಸ್ಪಷ್ಟವಾಗಿದೆ, ನಮ್ಮ ಸಂಕಲ್ಪ ಸ್ಪಷ್ಟವಾಗಿದೆ. ಹೆಚ್ಚಿನದನ್ನು ಸೃಜಿಸಿ, ಹೆಚ್ಚಿನದನ್ನು ಉತ್ಪಾದಿಸಿ, ಹೆಚ್ಚಿನದನ್ನು ಸಂಪರ್ಕಿಸಬೇಕಿದೆ, ಈಗ ಹೆಚ್ಚಿನದನ್ನು ರಫ್ತು ಮಾಡುವುದು ಅಗತ್ಯವಾಗಿದೆ. ಖಂಡಿತವಾಗಿಯೂ, ಇಂದು ನಿಮ್ಮಲ್ಲಿ ನಡೆಯುವ ಚರ್ಚೆ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಸ್ನೇಹಿತರೆ,

ಉತ್ಪಾದನೆ, ಸರಕು ಸಾಗಣೆ, ನಮ್ಮ ಎಂಎಸ್ಎಂಇಗಳು, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ನಮ್ಮ ಸಣ್ಣ ಮತ್ತು ದೊಡ್ಡ ನಗರಗಳು - ಅವು ವಿಭಿನ್ನವಾಗಿ ಕಂಡುಬಂದರೂ - ಇವೆಲ್ಲವೂ ಆರ್ಥಿಕತೆಗೆ ಪರಸ್ಪರ ಸಂಬಂಧ ಹೊಂದಿರುವ ಆಧಾರಸ್ತಂಭಗಳಾಗಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಉದಾಹರಣೆಗೆ, ಬಲಿಷ್ಠವಾದ ಉತ್ಪಾದನೆಯು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಇದು ರಫ್ತುಗಳನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಎಂಎಸ್ಎಂಇಗಳು ಚೇತರಿಕೆ(ನಮ್ಯತೆ) ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತವೆ. ಉತ್ತಮ ಸರಕು ಸಾಗಣೆ ವ್ಯವಸ್ಥೆಯು ವೆಚ್ಚವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಯೋಜಿಸಲಾದ ನಗರಗಳು ಹೂಡಿಕೆ ಮತ್ತು ಪ್ರತಿಭೆ ಎರಡನ್ನೂ ಆಕರ್ಷಿಸುತ್ತವೆ. ಈ ವರ್ಷದ ಬಜೆಟ್ ಈ ಎಲ್ಲಾ ಆಧಾರಸ್ತಂಭಗಳಿಗೆ ಹೆಚ್ಚಿನ ಶಕ್ತಿ ನೀಡಿದೆ.

 

ಆದರೆ ಸ್ನೇಹಿತರೆ,

ಯಾವುದೇ ನಿರ್ದೇಶನವು ಸ್ವಯಂಚಾಲಿತವಾಗಿ ಫಲಿತಾಂಶಗಳನ್ನು ನೀಡುತ್ತದೆ. ಉದ್ಯಮ, ಹಣಕಾಸು ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಅದನ್ನು ವಾಸ್ತವಗೊಳಿಸಲು ಒಟ್ಟಾಗಿ ಕೆಲಸ ಮಾಡಿದಾಗ ನಿಜವಾದ ಬದಲಾವಣೆ ಸಂಭವಿಸುತ್ತದೆ. ಈ ವೆಬಿನಾರ್‌ನಲ್ಲಿ, ಉತ್ಪಾದನೆ ಮತ್ತು ತಯಾರಿಕೆಯನ್ನು ಹೇಗೆ ಹೆಚ್ಚಿಸಬಹುದು, ವೆಚ್ಚದ ರಚನೆಗಳನ್ನು ಹೇಗೆ ಹೆಚ್ಚು ಸ್ಪರ್ಧಾತ್ಮಕವಾಗಿಸಬಹುದು, ಹೂಡಿಕೆಯ ಹರಿವನ್ನು ಹೇಗೆ ವೇಗಗೊಳಿಸಬಹುದು ಮತ್ತು ಅಭಿವೃದ್ಧಿಯು ದೇಶದ ಪ್ರತಿಯೊಂದು ಮೂಲೆಯನ್ನು ಹೇಗೆ ತಲುಪಬಹುದು ಎಂಬಂತಹ ಕೆಲವು ವಿಷಯಗಳಿಗೆ ನೀವು ಆದ್ಯತೆ ನೀಡುತ್ತೀರಿ ಎಂಬುದು ನನ್ನ ನಿರೀಕ್ಷೆಯಾಗಿದೆ. ಈ ದಿಕ್ಕಿನಲ್ಲಿ ನಿಮ್ಮ ಸಲಹೆಗಳು ಬಹಳ ಮುಖ್ಯವಾಗುತ್ತವೆ.

ಸ್ನೇಹಿತರೆ,

ಉತ್ಪಾದನಾ ಕ್ಷೇತ್ರದಲ್ಲಿ ದೇಶವು ಇಂದು ತನ್ನ ಪ್ರಮುಖ ಕೈಗಾರಿಕಾ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ಈ ಹಾದಿಯಲ್ಲಿರುವ ಸವಾಲುಗಳನ್ನು ಸಹ ಪರಿಹರಿಸಲಾಗುತ್ತಿದೆ. ಅಪರೂಪದ ಸಮರ್ಪಿತ ಭೂಮಿ ಕಾರಿಡಾರ್‌ಗಳು ಮತ್ತು ಕಂಟೇನರ್ ಉತ್ಪಾದನೆಯಂತಹ ವಲಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ನಾವು ನಮ್ಮ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದೇವೆ. ಬಯೋಫಾರ್ಮಾ ಶಕ್ತಿ ಮಿಷನ್ ಅನ್ನು ಸಹ ಬಜೆಟ್ ನಲ್ಲಿ ಘೋಷಿಸಲಾಗಿದೆ.. ಈ ಮಿಷನ್‌ನ ಉದ್ದೇಶ ಭಾರತವನ್ನು ಜೈವಿಕ ಮತ್ತು ಮುಂದಿನ ಪೀಳಿಗೆಯ ಚಿಕಿತ್ಸೆಗಳಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡುವುದಾಗಿದೆ. ಮುಂದುವರಿದ ಬಯೋಫಾರ್ಮಾ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ನಾಯಕತ್ವದತ್ತ ಸಾಗಲು ನಾವು ಬಯಸುತ್ತೇವೆ.

ಸ್ನೇಹಿತರೆ,

ಇಂದು ಜಗತ್ತು ವಿಶ್ವಾಸಾರ್ಹ ಮತ್ತು ಚೇತರಿಕೆಯ ಉತ್ಪಾದನಾ ಪಾಲುದಾರರನ್ನು ಹುಡುಕುತ್ತಿದೆ. ಭಾರತವು ಈ ಪಾತ್ರವನ್ನು ಬಲವಾಗಿ ನಿರ್ವಹಿಸುವ ಅವಕಾಶ ಹೊಂದಿದೆ. ಇದಕ್ಕಾಗಿ, ಎಲ್ಲಾ ಪಾಲುದಾರರು ಹೆಚ್ಚಿನ ವಿಶ್ವಾಸದಿಂದ ಹೂಡಿಕೆ ಮಾಡಬೇಕು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸಂಶೋಧನೆಯಲ್ಲಿ ಜಿಪುಣತನದ ಯುಗ ಹೋಗಿದೆ - ಈಗ ನಾವು ಸಂಶೋಧನೆಯಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಬೇಕು. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟವನ್ನು ನಾವು ಖಚಿತಪಡಿಸಿಕೊಳ್ಳಬೇಕು. ಅವಕಾಶಗಳು ನಮ್ಮ ದಾರಿಗೆ ಬರುತ್ತಿದ್ದಂತೆ, ನಮ್ಮ ಏಕೈಕ ಮಂತ್ರ ಹೀಗಿರಬೇಕು ಎಂದು ನಾನು ಪದೇಪದೆ ಹೇಳುತ್ತೇನೆ: ಗುಣಮಟ್ಟ, ಗುಣಮಟ್ಟ, ಗುಣಮಟ್ಟ.

 

ಸ್ನೇಹಿತರೆ,

ಭಾರತವು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ನಮಗೆ ಅವಕಾಶಗಳ ದೊಡ್ಡ ಬಾಗಿಲು ತೆರೆದಿದೆ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಜವಾಬ್ದಾರಿ ಗುಣಮಟ್ಟದ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳದಿರುವುದಾಗಿದೆ. ನಾವು ಒಂದು ವಿಷಯದಲ್ಲಿ ಹೆಚ್ಚಿನ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರಯತ್ನವನ್ನು ಹಾಕಬೇಕಾದರೆ, ಅದು ಗುಣಮಟ್ಟವಾಗಿರಬೇಕು. ನಮ್ಮ ಉತ್ಪನ್ನಗಳ ಗುಣಮಟ್ಟವು ಜಾಗತಿಕ ಮಾನದಂಡಗಳನ್ನು ಪೂರೈಸುವುದಲ್ಲದೆ ಅವುಗಳನ್ನು ಮೀರಬೇಕು. ಇದಕ್ಕಾಗಿ, ನಾವು ಇತರೆ ದೇಶಗಳ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಅಧ್ಯಯನ ಮಾಡಬೇಕು, ಸಂಶೋಧನೆ ನಡೆಸಬೇಕು ಮತ್ತು ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಇತರೆ ದೇಶಗಳ ಜನರ ಆದ್ಯತೆಗಳು ಮತ್ತು ಸೌಕರ್ಯವನ್ನು ಅಧ್ಯಯನ ಮಾಡಬೇಕು - ಇದು ಅತ್ಯಂತ ದೊಡ್ಡ ಅವಶ್ಯಕತೆಯಾಗಿದೆ, ಅದರ ಮೇಲೆ ಸಂಶೋಧನೆ ಮಾಡಬೇಕು. ಯಾರಾದರೂ ಸಣ್ಣ ಬಿಡಿಭಾಗಗಳನ್ನು ಕೇಳುತ್ತಾರೆ, ಅವರು ದೊಡ್ಡ ಹಡಗನ್ನು ನಿರ್ಮಿಸುತ್ತಿದ್ದಾರೆ ಎಂದು ಭಾವಿಸೋಣ. ನಾವು ನಿರಾತಂಕವಾಗಿ ಆ ಬಿಡಿಭಾಗವನ್ನು ಕಳುಹಿಸಿದರೆ, ಅದನ್ನು ಯಾರು ಸ್ವೀಕರಿಸುತ್ತಾರೆ? ನಮಗೆ, ಅದು ಒಂದು ಸಣ್ಣ ಬಿಡಿಭಾಗವಾಗಿರಬಹುದು, ಆದರೆ ಅವರ ದೊಡ್ಡ ಉತ್ಪಾದನಾ ಘಟಕದಲ್ಲಿ, ಅದು ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತದೆ. ಅದಕ್ಕಾಗಿಯೇ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಗುಣಮಟ್ಟವು ನಮಗೆ ಸುವರ್ಣ ಅವಕಾಶಗಳನ್ನು ಸೃಷ್ಟಿಸುತ್ತದೆ. ನಾವು ಅವುಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಬಳಕೆದಾರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಬೇಕು. ಆಗ ಮಾತ್ರ ನಾವು ಈ ಅವಕಾಶಗಳ ಲಾಭ ಪಡೆಯಬಹುದು. ಮುಕ್ತ ವ್ಯಾಪಾರ ಒಪ್ಪಂದಗಳು ಸಿದ್ಧವಾಗಿ, ಈಗ ಅಭಿವೃದ್ಧಿಯ ಹೆದ್ದಾರಿ ನಿಮಗಾಗಿ ಸಿದ್ಧವಾಗಿದೆ. ಈ ವೆಬಿನಾರ್‌ನಲ್ಲಿ, ನೀವು ನಿಮ್ಮ ಚರ್ಚೆಗಳಲ್ಲಿ ಈ ವಿಷಯದ ಬಗ್ಗೆಯೂ ಗಮನ ಹರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

ನಾವು ಎಂಎಸ್ಎಂಇ ವರ್ಗೀಕರಣದಲ್ಲಿ ಮಾಡಿದ ಸುಧಾರಣೆಗಳು ವ್ಯಾಪಕ ಪರಿಣಾಮಗಳನ್ನು ತೋರಿಸುತ್ತಿವೆ. ಉದ್ಯಮಗಳು ಇನ್ನು ಮುಂದೆ ವಿಸ್ತರಿಸಿದರೆ, ಸರ್ಕಾರ ಒದಗಿಸುವ ಪ್ರಯೋಜನಗಳನ್ನು ಕಳೆದುಕೊಳ್ಳುತ್ತವೆ ಎಂದು ಭಯ ಪಡಬೇಕಿಲ್ಲ. ಎಂಎಸ್ಎಂಇಗಳಿಗೆ ಸಾಲವನ್ನು ಸುಲಭವಾಗಿ ಪಡೆಯಲು, ತಂತ್ರಜ್ಞಾನ ಪರಿಷ್ಕರಣೆ ಉತ್ತೇಜಿಸಲು ಮತ್ತು ಸಾಮರ್ಥ್ಯ ವೃದ್ಧಿ  ಉತ್ತೇಜಿಸಲು ಪ್ರಯತ್ನಗಳನ್ನು ಮಾಡಲಾಗಿದೆ.

ಆದರೆ ಸ್ನೇಹಿತರೆ,

ಈ ಎಲ್ಲಾ ಪ್ರಯತ್ನಗಳು ಫಲಿತಾಂಶಗಳನ್ನು ತೋರಿಸುತ್ತವೆ, ಎಂಎಸ್ಎಂಇಗಳು ಗೆಲುವಿನ ಗುರಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಪ್ರವೇಶಿಸಿದಾಗ ಮಾತ್ರ ಅದು ಸಾಧ್ಯವಾಗಲಿದೆ. ಎಂಎಸ್ಎಂಇಗಳು ತಮ್ಮ ಉತ್ಪಾದಕತೆ ಹೆಚ್ಚಿಸಿಕೊಳ್ಳಲು, ಗುಣಮಟ್ಟದ ಮಾನದಂಡಗಳನ್ನು ಹೆಚ್ಚಿಸಲು, ಡಿಜಿಟಲ್ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಮತ್ತು ಬಲವಾದ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಸಾಧಿಸಲು ಈಗ ಸುಸಮಯ. ಈ ದಿಕ್ಕಿನಲ್ಲಿ, ಈ ವೆಬಿನಾರ್‌ನಲ್ಲಿ ನಿಮ್ಮ ಸಲಹೆಗಳು ಬಹಳ ಮುಖ್ಯವಾಗುತ್ತವೆ.

 

ಸ್ನೇಹಿತರೆ,

ಮೂಲಸೌಕರ್ಯ ಮತ್ತು ಸರಕು ಸಾಗಣೆ ನಮ್ಮ ಬೆಳವಣಿಗೆ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭಗಳಾಗಿವೆ. ಈ ವರ್ಷದ ಬಜೆಟ್ ದಾಖಲೆಯ ಬಂಡವಾಳ ವೆಚ್ಚವನ್ನು ಪ್ರಸ್ತಾಪಿಸಿದೆ. ಹೆಚ್ಚಿನ ಸಾಮರ್ಥ್ಯದ ಸಾರಿಗೆ ವ್ಯವಸ್ಥೆಗಳನ್ನು ನಿರ್ಮಿಸುವುದು, ರೈಲ್ವೆಗಳು, ಹೆದ್ದಾರಿಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಜಲಮಾರ್ಗಗಳ ನಡುವೆ ಉತ್ತಮ ಸಮನ್ವಯ ಸಾಧಿಸುವುದು, ವಿವಿಧ ಸರಕು ಕಾರಿಡಾರ್‌ಗಳ ವಿಸ್ತರಣೆ ಮತ್ತು ಬಹುಮಾದರಿ ಸಂಪರ್ಕ - ಈ ಎಲ್ಲಾ ಹಂತಗಳು ವೆಚ್ಚವನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಸುಧಾರಿಸಲು ಅವಶ್ಯಕ. ಆದ್ದರಿಂದ, ಹೊಸ ಜಲಮಾರ್ಗಗಳು, ಹಡಗು ದುರಸ್ತಿ ಸೌಲಭ್ಯಗಳು ಮತ್ತು ಪ್ರಾದೇಶಿಕ ಶ್ರೇಷ್ಠತೆಯ ಕೇಂದ್ರಗಳು ನಮ್ಮ ಸರಕು ಸಾಗಣೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತವೆ. 7 ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು ಬೆಳವಣಿಗೆಯ ಸಂಪರ್ಕಸಾಧುಗಳಾಗಲಿವೆ. ಆದರೆ ಕೈಗಾರಿಕೆಗಳು ಮತ್ತು ಹೂಡಿಕೆದಾರರು ತಮ್ಮ ಕಾರ್ಯತಂತ್ರಗಳನ್ನು ಈ ದೃಷ್ಟಿಕೋನದೊಂದಿಗೆ ಜೋಡಿಸಿದಾಗ ಮಾತ್ರ ಈ ಮೂಲಸೌಕರ್ಯದ ನಿಜವಾದ ಪ್ರಯೋಜನ ಬರುತ್ತದೆ ಎಂಬುದು ನಿಮಗೆ ತಿಳಿದಿದೆ. ಆ ಕಾರ್ಯತಂತ್ರಗಳು ಯಾವುವು ಎಂಬುದನ್ನು ನೀವು ವಿವರವಾಗಿ ಚರ್ಚಿಸಬೇಕು, ನೀವೆಲ್ಲಾ ಈ ವಿಷಯಗಳಿಗೆ ಗಮನ ಕೊಡುತ್ತೀರಿ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ನಗರೀಕರಣವು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಭಾರತದ ಭವಿಷ್ಯದ ಬೆಳವಣಿಗೆಯು ನಾವು ನಮ್ಮ ನಗರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಯೋಜಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ 2 ಮತ್ತು 3ನೇ ಶ್ರೇಣಿಯ ನಗರಗಳು ಹೇಗೆ ಹೊಸ ಬೆಳವಣಿಗೆಯ ಆಧಾರಸ್ತಂಭಗಳಾಗುತ್ತವೆ.  ಈ ಬಜೆಟ್ ವೆಬಿನಾರ್‌ನಲ್ಲಿ ನಿಮ್ಮ ಸಲಹೆಗಳು ಇದಕ್ಕೆ ಬಹಳ ಮುಖ್ಯವಾಗುತ್ತವೆ.

ಸ್ನೇಹಿತರೆ,

ಇಂದು ವಿಶ್ವ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪರಿವರ್ತನೆ ನಡೆಯುತ್ತಿದೆ. ಮಾರುಕಟ್ಟೆಗಳು ಇನ್ನು ಮುಂದೆ ವೆಚ್ಚವನ್ನು ಮಾತ್ರ ನೋಡುವುದಿಲ್ಲ; ಅವು ಸುಸ್ಥಿರತೆಯನ್ನು ಸಹ ನೋಡುತ್ತವೆ. ಈ ದಿಕ್ಕಿನಲ್ಲಿ, ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ ಮಿಷನ್ ಒಂದು ಪ್ರಮುಖ ಉಪಕ್ರಮವಾಗಿದೆ. ಈಗ ಸುಸ್ಥಿರತೆಯು ನಿಮ್ಮ ಪ್ರಮುಖ ವ್ಯವಹಾರ ಕಾರ್ಯತಂತ್ರದ ಭಾಗವಾಗಬೇಕು. ಸಮಯಕ್ಕೆ ಸರಿಯಾಗಿ ಶುದ್ಧ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳು ಮುಂಬರುವ ವರ್ಷಗಳಲ್ಲಿ ಹೊಸ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶ ಪಡೆಯುತ್ತವೆ. ಈ ವರ್ಷದ ಬಜೆಟ್ ಹೊಸ ದಿಕ್ಕು ನೀಡಿದೆ. ಕೈಗಾರಿಕೆಗಳು, ಹೂಡಿಕೆದಾರರು ಮತ್ತು ಸಂಸ್ಥೆಗಳು ಇದರಲ್ಲಿ ಒಟ್ಟಾಗಿ ಮುಂದುವರಿಯಬೇಕು ಎಂಬುದು ನನ್ನ ಮನವಿ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಮೂಹಿಕ ಮಾಲೀಕತ್ವದ ಮೂಲಕ ಮಾತ್ರ ಸಾಧಿಸಬಹುದು. ಈ ಬಜೆಟ್ ವೆಬಿನಾರ್ ಕೇವಲ ಚರ್ಚೆಗೆ ಅಥವಾ ಜ್ಞಾನ ಸಂಗ್ರಹಿಸುವ ವೇದಿಕೆಯಾಗಿ ಉಳಿಯಬಾರದು. ಇದು ಸಾಮೂಹಿಕ ಮಾಲೀಕತ್ವವನ್ನು ತೋರಿಸಬೇಕು - ಅದು ಬಹಳ ಅವಶ್ಯಕ. ಬಜೆಟ್ ಒಂದು ಮಾರ್ಗಸೂಚಿಯನ್ನು ಒದಗಿಸಿದೆ. ಈಗ ನೀವು ಒಟ್ಟುಗೂಡಿ ಆವೇಗ  ಸೃಷ್ಟಿಸಬೇಕು. ನೀವು ನಮ್ಮ ಪ್ರಯತ್ನಗಳಲ್ಲಿ ನಿರಂತರ ಭಾಗವಹಿಸುವವರಾಗಬೇಕು. ನಿಮ್ಮ ಪ್ರತಿಯೊಂದು ಸಲಹೆ, ನಿಮ್ಮ ಪ್ರತಿಯೊಂದು ಅನುಭವವು ನೆಲದ ಮೇಲೆ ಅತ್ಯುತ್ತಮ ಫಲಿತಾಂಶಗಳನ್ನು ತರುವ ಸಾಮರ್ಥ್ಯ ಹೊಂದಿದೆ. ನಿಮ್ಮ ಸಲಹೆಗಳು ದೇಶದ ಪ್ರಗತಿಯಲ್ಲಿ ಮೈಲಿಗಲ್ಲುಗಳಾಗಲಿ - ಈ ನಂಬಿಕೆಯೊಂದಿಗೆ, ನಾನು ನಿಮಗೆ ತುಂಬು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನಮಸ್ಕಾರ!

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s Defence Exports Explode: ₹40,000 Crore Milestone Signals a New Manufacturing Era

Media Coverage

India’s Defence Exports Explode: ₹40,000 Crore Milestone Signals a New Manufacturing Era
NM on the go

Nm on the go

Always be the first to hear from the PM. Get the App Now!
...
Text of PM’s remarks during inauguration of Swaminarayan Hindu Temple in Paris
September 06, 2026

पूज्य महंत स्वामी, फ्रांस सरकार के सम्मानित प्रतिनिधिगण, उपस्थित अतिथिगण, इंडियन कम्युनिटी के मेरे साथी, देश दुनिया से जुड़े सभी हरि भक्त, देवियों और सज्जनों, जय स्वामीनारायण!

आज फ्रांस की राजधानी पेरिस में भव्य स्वामीनारायण मंदिर का लोकार्पण हो रहा है। यह लोकार्पण भारत और फ्रांस के सांस्कृतिक संबंधों का नया युग स्तंभ है। पूज्य संत जनों और सनातन परंपरा के श्रेष्ठ जनों के आशीर्वाद के साथ आज इस लोकार्पण का मंच ‘वसुधैव कुटुम्बकम’ के भाव का मंच बन गया है। भगवान स्वामीनारायण की कृपा और हमारे संतों का स्नेह, संतों का आशीर्वाद, मेरा सौभाग्य है कि मुझे ऐसे पुण्य अवसरों से जुड़ने का अवसर हमेशा मिलता रहता है। आज भी मैं भले ही पेरिस में आप सबके बीच उपस्थित नहीं हूं, लेकिन मन से और हृदय से, मैं स्वयं को आपके बीच ही अनुभव कर रहा हूं।

साथियों,

आज इस अवसर पर मैं परम पूज्य प्रमुख स्वामी जी महाराज का भी श्रद्धापूर्वक स्मरण करता हूं। प्राचीन काल में भारत का जो सांस्कृतिक आध्यात्मिक वैभव था, उन्होंने उसके पुनर्जागरण का एक अभियान शुरू किया था। आज उसका प्रकाश यूरोप समेत पूरी दुनिया में फैल रहा है। 2024 में अबू धाबी में भव्य मंदिर का लोकार्पण हुआ था। आज वहां हजारों लोग दर्शन करने जाते हैं और अब यहां पेरिस में स्वामीनारायण मंदिर का निर्माण सृजन की यह निरंतरता, यह संतों की संकल्प शक्ति का ही प्रमाण है। मैं पुनीत कार्य के लिए पूज्य महंत स्वामी का आभार प्रकट करता हूं, मैं उनके चरणों में प्रणाम करता हूं। मैं BAPS स्वामीनारायण संस्था को और करोड़ों हरि भक्तों को इस अवसर पर हृदय की गहराई से बधाई देता हूं।

साथियों,

BAPS के माध्यम से जब अलग-अलग देश में मंदिरों की प्राण प्रतिष्ठा होती है, तो वहां भारत के प्राचीन विचार और मानवीय मूल्य भी साथ-साथ ही जाते हैं और भारत का विचार कहता है ‘समानं मनः सह चित्तमेषाम्’ अर्थात हमारे मन समान हो, हमारे हृदय साथ जुड़े। इसलिए आज जब फ्रांस में इतना भव्य मंदिर बनकर तैयार हुआ है, यह फ्रांस की विविधता को तो समृद्ध करेगा ही, इससे भारत और फ्रांस के सांस्कृतिक संबंधों को भी ऊर्जा मिलेगी।

साथियों,

बीते वर्षों में भारत और फ्रांस के संबंध नई ऊंचाइयों तक पहुंचे हैं। मेरे मित्र, प्रेसिडेंट मैक्रों के साथ मिलकर दोनों देश एक Special Global Strategic Partnership बना रहे हैं। Technology, AI और Defence से लेकर Space और Climate Action तक हम एक नई गति और नई ऊर्जा के साथ मिलकर के आगे बढ़ रहे हैं। हम 2026 को India-France Year of Innovation के रूप में भी सेलिब्रेट कर रहे हैं। भारत-फ्रांस की ये Strategic Partnership इसलिए भी खास है, क्योंकि ये हमारे पुराने सांस्कृतिक-राजनैतिक सम्बन्धों की मजबूत बुनियाद पर टिकी है। इतिहास गवाह है, फ्रांस में भारतीय सैनिकों के बलिदान का इतिहास आज भी मन-मंदिर में जीवित है। भाषा से जुड़े विषयों में रुचि रखने वाले लोग यह भी जानते हैं कि फ्रेंच स्कॉलर्स ने संस्कृत को लोकप्रिय बनाने में कितनी अहम भूमिका निभाई है। रामकृष्ण परमहंस और स्वामी विवेकानंद पर रोमाँ रोलाँ की की लेखनी हमारी सोसाइटीज़ को और करीब लाई है। पेरिस से पुडुचेरी के अरबिंदो आश्रम तक 'The mother' की spiritual journey, उसने कितने ही भारतीय और फ्रेंच साधकों को inspire किया है।

साथियों,

दशकों पहले श्रील प्रभुपाद स्वामी भी फ्रांस आए थे। इस्कॉन के जरिए भारत फ्रांस के बीच आध्यात्मिक सम्बन्धों का नया अध्याय उन्होंने शुरू किया था। आज योग भी भारत-फ्रांस के people to people कनेक्ट का एक माध्यम बन चुका है। 'इंटरनेशनल योगा डे' पर एफिल टॉवर के सामने से आने वाली तस्वीरें फ्रांस में योग की लोकप्रियता का उदाहरण बनती हैं और अब BAPS के इस भव्य मंदिर के जरिए, हमारे उन सांस्कृतिक सम्बन्धों में एक नया अध्याय जुड़ रहा है।

साथियों,

इन दिनों, भारत फ्रांस Joint Ventures की संभावनाओं पर बातें होती हैं। स्वामीनारायण मंदिर ने इस संभावना में भी एक नया आयाम जोड़ा है। यह मंदिर 'मेड इन इंडिया' है और 'बिल्ट इन फ्रांस' है। इसके काफी पत्थरों को भारत में तराशा गया है। भारत की प्राचीन प्रतिभा यहाँ फ्रांस में आधुनिक इंजीनियरिंग से आकर जुड़ चुकी है। पेरिस में इस भव्य मंदिर ने आकार लिया है। इसलिए, मैं आशा करता हूँ, यह मंदिर सदियों तक भारत और फ्रांस के बीच सहयोग और संभावनाओं का भी प्रतीक बनकर उभरेगा।

साथियों,

स्वामीनारायण मंदिर हमेशा से भक्ति के साथ-साथ सेवा का माध्यम भी रहे हैं। मुझे बताया गया है, यह मंदिर भी सेवा प्रकल्पों का वैसा ही केंद्र बनेगा। मुझे विश्वास है कि यहाँ से भारतीय संस्कृति के जो स्वर निकलेंगे, उनका लाभ पूरे यूरोप में लोगों को मिलेगा। भविष्य में मुझे जब भी समय मिलेगा, मैं इस मंदिर में दर्शन करने का प्रयास अवश्य करूंगा। इन्हीं शब्दों के साथ, एक बार फिर आज के इस लोकार्पण समारोह में सम्मिलित सभी अतिथिगणों को, सभी परिवारों को, सभी हरि भक्तों को और पूरी Indian Diaspora को मेरी ओर से इस शुभारंभ पर्व की ढेरों शुभकामनाएं!

बहुत-बहुत धन्यवाद!

मर्सी बोकू!

जय स्वामीनारायण!